ಮುಂಗಾರು ಮಳೆ ಹೀರೋ ಕೊಡಗು ಹುಡುಗಿಯನ್ನು ಏಕೆ ಮದುವೆಯಾಗಲಿಲ್ಲ..?

1962ರಲ್ಲಿ ಬಿಡುಗಡೆಯಾದ ಕಿತ್ತೂರು ಚೆನ್ನಮ್ಮ ಚಿತ್ರ ಹೆಸರೇ ಹೇಳುವಂತೆ ಬೆಳವಾಗಿ ಭಾಗದ ಕಿತ್ತೂರಿನ ರಾಣಿ ಚೆನ್ನಮ್ಮನ ಸಾಹಸಗಾಥೆ ಹೇಳುವ ಚಿತ್ರ. ಆ ಚಿತ್ರದಲ್ಲಿ ಚೆನ್ನಮ್ಮ ಪಾತ್ರಧಾರಿ ಮಾತನಾಡುವುದು ಹಳೇ ಮೈಸೂರು ಭಾಗದ ಕನ್ನಡವನ್ನು. ಆದರೆ ಚೆನ್ನಮ್ಮನಿಗೆ ಮೋಸ ಮಾಡಿ ಬ್ರಿಟಿಷರಿಗೆ ನೆರವು ನೀಡುವ ಮಂತ್ರಿಗಳ ಪಾತ್ರಧಾರಿಗಳದು ಬೆಳಗಾವಿ ಕನ್ನಡ.

ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರ ವಿಮರ್ಶಕ ಎಂ.ಕೆ ರಾಘವೇಂದ್ರ ಕನ್ನಡ ಸಿನಿಮಾಗಳ ಟಾರ್ಗೆಟ್ ಆಡಿಯನ್ಸ್ ಕೇವಲ ಹಳೇ ಮೈಸೂರು ಭಾಗದ ಜನರಷ್ಟೇ ಪ್ರೇಕ್ಷಕರು ಎಂದು ವಿಶ್ಲೇಷಿಸುವಾಗ ಈ ಮೇಲಿನ ಉದಾಹರಣೆ ನೀಡುತ್ತಾರೆ.

ಹಳೇ ಮೈಸೂರು ಅಂದರೆ – ಬೆಂಗಳೂರು, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಮತ್ತು ಶಿವಮೊಗ್ಗ. ಕನ್ನಡ ಸಿನಿಮಾ ಹಿರೋಗಳೆಲ್ಲ ಸಾಮಾನ್ಯವಾಗಿ ಇದೇ ಭಾಗದವರಾಗಿರುತ್ತಾರೆ. ಅವರ ಜೊತೆಗಾತಿಯರೂ ಸಹಜವಾಗಿ ಇದೇ ಭಾಗಕ್ಕೆ ಸೇರಿದವರು. ಹಳೇ ಮೈಸೂರು ಭಾಗದ ಹೀರೋಗೆ ರಾಯಚೂರು ಅಥವಾ ಬೆಳಗಾವಿಯ ಹುಡುಗಿ ಜೊತೆ ಸರಸ ಸಾಧ್ಯವಿಲ್ಲ.

ಮುಂಗಾರು ಮಳೆ ಹಿರೋ ಕೊಡಗು ಮೂಲದ ಹುಡುಗಿಯನ್ನು ಮದುವೆಯಾಗದಿರಲು ಇದೇ ಕಾರಣಕ್ಕೆ. ಮುಂದುವರೆದು ರಂಗದೇ ಬಸಂತಿ ಚಿತ್ರದಲ್ಲಿ ಅಮೀರ್ ಖಾನ್ ಕೂಡಾ ವಿದೇಶಿ ಹುಡುಗಿಯನ್ನು ಮದುವೆಯಾಗದೇ ಉಳಿಯಲು ಇಂತಹದೇ ಒಂದು ಕಾರಣಕ್ಕೆ!

ಇಂತಹದೇ ಹೊಸ ಹೊಳಹುಗಳಿಗಾಗಿ ರಾಘವೇಂದ್ರ ಅವರ ಸಂದರ್ಶನವನ್ನು Frontline ನಲ್ಲಿ ಓದಿ. ವಿಖಾರ್ ಅಹ್ಮದ್ ಸಯೀದ್ ಸಂದರ್ಶನ ನಡೆಸಿದ್ದಾರೆ. ಓದಿದ ನಂತರ ಸಿನಿಮಾ ನೋಡುವ ನಿಮ್ಮ ಬಗೆಯಲ್ಲಿ ಸ್ವಲ್ಪವಾದರೂ ಬದಲಾವಣೆ ಖಂಡಿತ.

photo courtesy – indianauteur.com

Leave a Reply

Your email address will not be published. Required fields are marked *