ಮಾನ್ಯರೆ,
“ಗಾಂಧಿ” ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ “ಗಾಂಧಿ” ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ ಹಿರಿ-ಕಿರಿಯ ಕವಿಗಳ ಕವಿತೆಯನ್ನೊಳಗೊಂಡ ಒಂದು ಪ್ರಾತಿನಿಧಿಕ ಸಂಕಲನವನ್ನು ಹೊರತರಬೇಕೆಂಬ ಇಚ್ಛೆ ಇದ್ದು ಅಂತಹ ಕವಿತೆಗಳನ್ನು ಜನವರಿ 1, 2012ರ ಒಳಗೆ ತಲುಪುವಂತೆ
ರೂಪ ಹಾಸನ,
ಪ್ರೇರಣಾ, ಉತ್ತರ ಬಡಾವಣೆ,
ಹಾಸನ-೫೭೩೨೦೧
ಅಥವಾ
rupahassan@gmail.com
ಕಳುಹಿಸಿಕೊಡಬೇಕೆಂದು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ
ಸುಬ್ಬು ಹೊಲೆಯಾರ್-೯೪೮೩೯೭೪೦೮೯ ಅಥವಾ
ರೂಪ ಹಾಸನ-೦೮೧೭೨-೨೬೩೮೮೧
ಸಂಪರ್ಕಿಸಬಹುದಾಗಿದೆ.
ರೂಪ ಹಾಸನ
ಸುಬ್ಬು ಹೊಲೆಯಾರ್