ಬಾಪೂ ನಮನ

 ಮಾನ್ಯರೆ,

“ಗಾಂಧಿ” ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ “ಗಾಂಧಿ” ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ ಹಿರಿ-ಕಿರಿಯ ಕವಿಗಳ ಕವಿತೆಯನ್ನೊಳಗೊಂಡ ಒಂದು ಪ್ರಾತಿನಿಧಿಕ ಸಂಕಲನವನ್ನು ಹೊರತರಬೇಕೆಂಬ ಇಚ್ಛೆ ಇದ್ದು ಅಂತಹ ಕವಿತೆಗಳನ್ನು ಜನವರಿ 1, 2012ರ ಒಳಗೆ ತಲುಪುವಂತೆ

ರೂಪ ಹಾಸನ,
ಪ್ರೇರಣಾ, ಉತ್ತರ ಬಡಾವಣೆ,
ಹಾಸನ-೫೭೩೨೦೧

ಅಥವಾ
rupahassan@gmail.com

ಕಳುಹಿಸಿಕೊಡಬೇಕೆಂದು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ
ಸುಬ್ಬು ಹೊಲೆಯಾರ್-೯೪೮೩೯೭೪೦೮೯ ಅಥವಾ
ರೂಪ ಹಾಸನ-೦೮೧೭೨-೨೬೩೮೮೧
ಸಂಪರ್ಕಿಸಬಹುದಾಗಿದೆ.

 ರೂಪ ಹಾಸನ
ಸುಬ್ಬು ಹೊಲೆಯಾರ್

Leave a Reply

Your email address will not be published. Required fields are marked *