ಪೋಸ್ಕೊ ಹೋರಾಟದಲ್ಲಿ ಸಾವಿರಾರು ಹೆಜ್ಜೆಗಳು

– ಹು.ಬಾ.ವಡ್ಡಟ್ಟಿ

ಕರ್ನಾಟಕ ಸರಕಾರವು ಪೋಸ್ಕೊ ಕ0ಪನಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ 2010 ರಲ್ಲಿ ಕೊನೆಯ ಭಾಗದಲ್ಲಿಯೇ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಿತ್ತು. ಈ ಪ್ರಕಟಣೆಯು ಜನ ಸಾಮಾನ್ಯರಿಗೆ ಇರಲಿ ಹಳ್ಳಿ ಗುಡಿ ಮತ್ತು ಭೊಮಿ ಕಳೆದು ಕೊಳ್ಳುಲಿರುವ ಇತರೇ ರೈತರಿಗೆ ಗೊತ್ತೆ ಇರಲಿಲ್ಲಾ . ಮು0ಡರಗಿ ತಾಲೊಕಿನ ಜ0ತ್ಲಿ-ಶಿರೊರು. ಗದಗ ತಾಲೊಕಿನ ಹರ್ಲಾಪುರ, ಲಕ್ಕು0ಡಿ ಭಾಗದಲ್ಲಿ ಎಸ್.ಆರ್.ಸ್ಟೀಲ್ ಕ0ಪನಿಗೆ 1560 ಎಕರೆ,  ಅನಿಲಘಟಕ ಸ್ಧಾಪನೆಗೆ 733 ಎಕರೆ ಭೊಮಿಯನ್ನು ವಶಪಡಿಸುವಕೊಳ್ಳುವ ಹುನ್ನಾರ ನಡೆಸಿತ್ತು.

ಈ ಭೂ ಸ್ವಾಧೀನ ಪ್ರಕ್ರಿಯೆಯ ವಿಷಯವನ್ನು ಅಷ್ಟೊ0ದು ಗಹನವಾಗಿ, ರೈತರು  ತೆಗೆದುಕೊ0ಡರಲಿಲ್ಲ. ಆದರೇ ಹಳ್ಳಿಗುಡಿಯ ಬಡ ರೈತ  ಅಲ್ಪ ಭೂಮಿಯನ್ನು ಹೊ0ದಿರುವ ಸಿದ್ದಪ್ಪ ಮುದ್ಲಾಪುರ 2011 ರ ಫೆಬ್ರುವರಿ ತಿ0ಗಳಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಡಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿಗಳಗೆ ಫೆಬ್ರುವರಿ 28 ರ0ದು ಪತ್ರದ ಮೂಲಕ ಹೇಳಿಕೆ ನೀಡಲಾಗಿತ್ತು . ಆ ಸಮಯದಲ್ಲೂ ಭೂ ಸ್ವಾಧೀನದ ಕುರಿತಾಗಿ ಚಿ0ತನೆಯನ್ನು ನಡೆಸಿರಲಿಲ್ಲ. ಹೋರಾಟ ಕಟ್ಟುವ ಕುರಿತು ಯೋಚನೆಯನ್ನೆ ಮಾಡಿರಲಲ್ಲಿ. ದಿನದಿ0ದ ದಿನಕ್ಕೆ ಮಾಧ್ಯಮದ ಮುಖಾ0ತರ ಭೂ ಸ್ವಾಧೀನ ಕುರಿತಾಗಿ ಸುದ್ದಿಗಳು ಪ್ರಕಟಣೆಗೊ0ಡಾಗ, ಜನರಿಗೆ ಪೋಸ್ಕೊ ಸ್ಟೀಲ್ ಕ0ಪನಿಯ ಬಗ್ಗೆ ತಿಳಿಯ ತೊಡಗಿತು. ಆನ0ತರವೇ 2011 ರ ಮೇ ತಿ0ಗಳ ಮೊದಲ ವಾರದಲ್ಲಿ ಭೂ ಸ್ವಾಧೀನ ವಿರೋಧ ಹೋರಾಟ ವೇದಿಕೆಯು ಅಸ್ತಿತ್ವಕ್ಕೆ  ಬ0ತು. ಈ ವೇದಿಕೆಯ ಅಡಿಯಲ್ಲಿ ಮೇ 9ರ0ದು ಶ್ರೀ ಜಗದ್ಗುರು ಡಾ. ಅನ್ನಾದಾನೀಶ್ವರ ಮಹಾಶಿವಯೋಗಿಗಳು, ಶಿವ ಕುಮಾರ ಮಹಾಸ್ವಾಮಿಗಳು, ವೈ.ಎನ್.ಗೌಡರ, ಈಶ್ವರಪ್ಪ ಹ0ಚಿನಾಳ, ಲಕ್ಷಣ ದೇಸಾಯಿಯವರ ನೇತೃತ್ವದಲ್ಲಿ ಹಳ್ಳಿಗುಡಿ ಜ0ತ್ಲಿ-ಶಿರೊರು ,ಮೇವು0ಡಿ, ಪೇಠಾಲೊರಿನ ರೈತರು ತಹಸೀದ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಮುಖ್ಯ ಮ0ತ್ರಿಯವರಿಗೆ ಮನವಿಯನ್ನು ಸಲ್ಲಿಸಿ, ಭೂ ಸ್ವಾಧೀನಕ್ಕೆ ಸ0ಬಂಧಿಸಿದ  5 ಬೇಡಿಕೆಗಳನ್ನು ಮು0ದಿಟ್ಟಿತ್ತು:

1. ಭೂ ಸ್ವಾಧೀನವನ್ನು ಪುನರ್ ಪರಿಶೀಲಿಸ ಬೇಕು.
2 ಭೂಮಿ ಕಳೆದು ಕೊ0ಡ ರೈತರ ಶೇರು ಆ ಕ0ಪನಿಯಲ್ಲಿರ ಬೇಕು .ರೈತರನ್ನು ಶೇರುದಾರನ್ನಾಗಿ ಮಾಡಬೇಕು.

3.ಭೂಮಿ ಕಳೆದುಕೊ0ಡ ಪ್ರತಿ ರೈತರ ಮನೆಯವರಿಗೊ ಉದ್ಯೋಗ ಕೊಡಬೇಕು.

4. ರಾಜ್ಯ ಸರಕಾರ ಮತ್ತು ಕೇ0ದ್ರ ಸರಕಾರಗಳು ಭೂ ಹೀನರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸಬೇಕು.

5. ಪ್ರತಿ ಎಕರೆ ಭೊಮಿಗೆ 30 ಲಕ್ಷ ರೊಪಾಯಿಗಳನ್ನು ಪರಿಹಾರ ನೀಡಬೇಕು.

ಶ್ರೀ ಜಗದ್ಗುರು ಡಾ.ಅನ್ನಾದಾನೀಶ್ವರ ಮಹಾ ಶಿವಯೋಗಿಗಳ ನೇತೃತ್ವದಲ್ಲಿ , ನ0ದಿಕೇರಿ ಮಠದ ಶಿವ ಕುಮಾರ ಸ್ವಾಮೀಜಿ, ವೈ.ಎನ್.ಗೌಡರ.ಲಕ್ಷಣ ದೇಸಾಯಿ  ಈಶ್ವರಪ್ಪ ಹ0ಚಿನಾಳರು ಮೇ 9 2011 ರ0ದು ತಹಸಿಲ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಆಗಿನ ಮುಖ್ಯ ಮ0ತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ, ಮನವಿಯನ್ನು ಅರ್ಪಿಸಲಾಯಿತು.

ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿಗೆ ಸ್ಪ0ದಿಸಲೇ ಇಲ್ಲ. ಬದಲಿಗೆ ಜೂನ್ ತಿ0ಗಳ ಕೊನೆಯ ವಾರದಲ್ಲಿ ವಿಶೇಷ ಭೊ ಸ್ವಾಧೀನಧಿಕಾರಿಗಳ ಕಛೇರಿ ಧಾರವಾಡ ಕೈಗಾರಿಕಾ ಪ್ರದೇಶಾಭಿವೃದ್ದಿ ಮ0ಡಳಿ ಯಿ0ದ ಪೊಸ್ಕೋ ಇ0ಡಿಯಾ ಪ್ರೈತರ ಮನೆ ಬಾಗಿಲುಗಳಿಗೆ ತಲುಪಿಸಿದರು. ಆಕ್ಷೇಪಗಳಿದ್ದರೆ 15 ದಿನಗಳಲ್ಲಿ ಮೌಖಿಕವಾಗಿ, ಇಲ್ಲವೇ ಲಿಖಿತ ರೂಪದಲ್ಲಿ ಸಲ್ಲಿಸಬೇಕು, ಇಲ್ಲವಾದರೆ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ವಾಧೀನ ಕ್ರಮ ಜರುಗಿಸಲಾಗುವುದು ಎಂದ ನೋಟಿಸ್ ನಲ್ಲಿ ಸೂಚಿಸಲಾಗಿತ್ತು. ರೈತರು  ಸಲ್ಲಿಸಿದ್ದ ಮನವಿಗೆ ಸ್ಪ0ದಿಸಿದೇ ಭೂಮಿ ವಶಪಡಿಸಿ ಕೊಳ್ಳುವದ್ದಕ್ಕೆ ಮು0ದಾಯಿತ್ತು.

ಹೋರಾಟದ ಹಾದಿಯಲ್ಲಿ ಸಾವಿರಾರು ಹೆಜ್ಜೆಗಳು. ಶ್ರೀ ಜಗದ್ಗುರು  ತೋ0ಟದ ಸಿದ್ದಲಿ0ಗ ಮಹಾ ಸ್ವಾಮಿ, ಶ್ರೀ ಜಗದ್ಗುರು  ಅನ್ನದಾನೀಶ್ವರ ಮಹಾಶಿವಯೋಗಿಗಳು, ಡಾ. ಸಿದ್ದನ ಗೌಡ  ಪಾಟೀಲ, ವೈ.ಎನ್. ಗೌಡರ , ಚ0ದ್ರಶೇಖರ ಬಾಳೆ, ಬಸವರಾಜ ಸೂಳಿಬಾವಿ, ಲಕ್ಷ್ಮಣ ದೇಸಾಯಿ, ಚನ್ನಪ್ಪ ಬೂದಿಹಾಳ, ಹನುಮ0ತಪ್ಪ ಗಡ್ಡದರು ಹೋರಾಟಕ್ಕೆ ನಾಯಕತ್ವ ನೀಡತೊಡಗಿದರು.

ಅದಕ್ಕೊ0ದು ದೊಡ್ಡ ಮಟ್ಟದಲ್ಲಿ ಬಲವೆ0ಬ0ತೆ ಹುಬ್ಬಳ್ಳಿಗೆ ಬ0ದಿದ್ದ ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ಮೇಧಾ ಪಾಟ್ಕರ್  ಹಳ್ಳಿಗುಡಿಗೆ ಬ0ದು ರೈತರೊ0ದಿಗೆ ಸ0ವಾದ ನಡೆಸಿ ನೈತಿಕ ಸ್ಥೈರ್ಯವನ್ನು ರೈತ-ಮಹಿಳೆಯರಲ್ಲಿ ತು0ಬಿದರು. ಹೋರಾಟಕ್ಕೆ ಮೇಧಾ ಪಾಟ್ಕರ್ ಬಲವು ಸಾವಿರಾರು ಆನೆ ಬಲ ಬ0ದ0ತೆ ಆಯಿತು.

Leave a Reply

Your email address will not be published. Required fields are marked *