Monthly Archives: November 2011

J Dey Murder: Reports of Journalist Arrested

Mumbai police have arrested journalist Jigna Vora in connection with murder of crime journalist J.Dey. According to the police she passed on information related to J.Dey to the organized crime syndicate. The information she allegedly sent reportedly played major role in the killing.
At this juncture it is curious to read what Ms.Vora, as a crime reporter attached to Asian Age, had reported about J.Dey’s murder. Here are a couple links.

Report – 1
J Dey murder: Conspiracy at bookie home
Aug 24, 2011 – Jigna Vora |
The conspiracy to murder senior journalist Jyotirmoy Dey was hatched at the lavish bungalow of bookie-turned-real estate developer Vinod Chembur, crime branch sources disclosed on Tuesday.
The meeting was reportedly held some time in March, just a few days before Dey travelled to London.
According to a senior crime branch official, Chembur spilled the beans on the details of the meeting.
“During our investigation and interrogations, we found out Chembur and a few others hatched the conspiracy to kill Dey, sometime in mid-March. It must have been just a few days before Dey went to London,” the official said.
“Chembur has spilled the beans and has given us the names of some people who were present.”

Report-2
Did UK Indian drug lord order Dey hit?
Jun 23, 2011 – Jigna Vora |
• Age Correspondent
Following weeks of exploring varied theories into the killing of veteran journalist Jyotirmoy Dey, the Mumbai police now suspects it may have been a hit ordered by an Indian drug baron based in the United Kingdom. The drug baron in question has long been on India’s list for extradition, but the Indian authorities have been unable to do so due to their failure to present a watertight case before the British authorities.
This follows claims by the Mumbai police that Dey’s personal emails had given them vital clues and a “focused” approach towards the murder case. The police is now taking a keen interest in Dey’s trips overseas and scrutinising all aspects carefully. Sources claimed that Dey, who had travelled to London last month, might have secretly met the drug lord in question and there are indications he was about to expose a major drug racket.
The officials said Dey’s emails suggested that he had met the drug baron for his story, who might have later ordered a hit on him. “While scrutinising his email account, we have come to know many details about Dey, who otherwise led a very secretive life,” a police official said.
“In May, Dey had travelled alone to London for 10 days,” said a senior crime branch official. What has flummoxed police officials are statements given by various people who were close to him. “Though Dey informed his office that he was travelling to London along with his wife, he actually went alone,” the crime branch official said.
“We are working on various angles and not ruling out anything. We are also investigating Dey’s various trips aboard,” said Himanshu Roy, joint commissioner of police (crime). Mr Roy had earlier said at a press briefing that Dey had booked his tickets through Raj Travels. “We have recorded the statement of employees of Raj Travels, who said Dey had not travelled with his wife but had only booked one ticket, for which he paid partly in cash and partly through a credit card,” said the official.
“We are attempting to establish if he was working on any investigative story against the drug baron due to which he did not disclose the real reason for his trip to the UK,” a crime branch official added.
The crime branch sleuths are mainly relying on information stored in nearly 3,000 emails and 250 drafts from his two personal email accounts. The police is also checking Dey’s personal email accounts as the journalist used these IDs to send and receive all his work mails, including all his stories. The police has also found some emails containing information that were not for his stories, but part of his correspondence with various sources.

ಕಡಿವಾಣ ಹಾಕದಷ್ಟು ನಾವೆಲ್ಲ ನಿತ್ರಾಣರಾಗಿದ್ದೇವೆಯೇ?

 ಬಿ.ಶ್ರೀಪಾದ ಭಟ್

ಈ ದೇಶದ ನಾಲ್ಕು ಸ್ತಂಭಗಳೆಂದು ಕರೆಯಿಸಿಕೊಳ್ಳುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳು ಇಂದು ಹಿಂದೆಂದಿಗಿಂತಲೂ ಸುದ್ದಿಯಲ್ಲಿವೆ, ಅದರೆ ಕೆಟ್ಟ ಕಾರಣಗಳಿಗಾಗಿ. ಶಾಸಕಾಂಗ, ಕಾರ್ಯಾಂಗಗಳು ಹಾಗೂ ಅಲ್ಲಿನ ಜನ, ಅಧಿಕಾರಿಗಳು, ರಾಜಕಾರಣಿಗಳು ಒಬ್ಬರಿಗೊಬ್ಬರು ಮಿಲಕಾಯಿಸಿಕೊಂಡು ಭ್ರಷ್ಟಾಚಾರದಲ್ಲಿ, ಜಾತೀಯತೆಯಲ್ಲಿ ಹೊಸ ಹೊಸ ಮೈಲಿಗಲ್ಲುಗಳನ್ನು ನೆಟ್ಟು ಈ ದೇಶವನ್ನು ದುರಂತದ ಅಂಚಿಗೆ ತಂದು ನಿಲ್ಲಿಸಿರುವುದು ಸೂರ್ಯ ಸ್ಪಷ್ಟ. ಇವೆರೆಡೂ ರಂಗಗಳು  ಸ್ವಾರ್ಥಕ್ಕಾಗಿ, ಸ್ವಜಾತಿ ಬಂಧುಗಳು, ಸ್ನೇಹಿತರುಗಳ ಭೋಗ ಜೀವನಕ್ಕಾಗಿ ನಡೆಸಿದ ಭ್ರಷ್ಟಾಚಾರದ ಕೃತ್ಯಗಳು ಇಂದು ಜನಸಾಮಾನ್ಯರ ಕಣ್ಣಲ್ಲಿ ತಿರಸ್ಕಾರಕ್ಕೆ, ಅಸಹಾಯಕತೆಗೆ ಕಾರಣವಾಗಿವೆ.

ಇದನ್ನು ಸ್ವಚ್ಚಗೊಳಿಸಲು ಸಲುವಾಗಿ ನ್ಯಾಯಾಂಗ ಇಂದು ತೊಡಗಿಕೊಂಡಿರುವ ರೀತಿ ಭವಿಷ್ಯದ ಬಗ್ಗೆ ಅಶಾವಾದವನ್ನು ಮೂಡಿಸುತ್ತದೆ ಹಾಗೂ ಅದರ ಕ್ರಿಯಾಶೀಲತೆ ಯ ನಡೆಗಳು ನಮ್ಮನ್ನು ಸದಾಕಾಲ ಎಚ್ಚರದಿಂದ ಇರುವಂತೆ ಮಾಡಿವೆ. ಅಲ್ಲದೆ ನಾವೆಲ್ಲ ಕೇವಲ ಮಾತಿನಲ್ಲಿ ಮನೆ ಕಟ್ಟದೆ ಸ್ವಯಂ ಪ್ರೇರಿತರಾಗಿ ಈ ಎರಡೂ ರಂಗಗಳು ತಂದಿಟ್ಟ ಅನಿಷ್ಟ ಪರಂಪರೆಯ ವಿರುದ್ಧ ಹೋರಾಡಲು ನಮಗೆಲ್ಲ ಒಂದು open space ಕಲ್ಪಿಸಿಕೊಟ್ಟಿದೆ. ಇಂತಹ ಪರಿಸ್ಥಿಯಲ್ಲಿ ಪತ್ರಿಕಾರಂಗದ ರೀತಿನೀತಿಗಳು ಕುತೂಹಲಕರವಾಗಿವೆ. ತಾವು ಟೀಕಾತೀತರು ಎನ್ನುವ ಭ್ರಮೆಯಲ್ಲಿಯೇ ವರ್ತಿಸುವ ಇಲ್ಲಿನ ಬಹುಪಾಲು ಮಂದಿ ಪದೇ ಪದೇ ತಮ್ಮ ನೈತಿಕತೆಯ, ಸಂಯಮದ ಲಕ್ಷ್ಮಣರೇಖೆಯನ್ನು ದಾಟುವ ಹುನ್ನಾರಗಳಿಂದಾಗಿ ಇಂದು ಈ ರಂಗದಲ್ಲಿಯೂ ಅನೇಕ ರೀತಿಯ ತಲ್ಲಣಗಳಿಗೆ, ತಿರಸ್ಕಾರಗಳಿಗೆ ಕಾರಣರಾಗಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ಖಟ್ಟು ಅವರು ತಮ್ಮದೇ ಆದ ಬೀಸು ಶೈಲಿಯಲ್ಲಿ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾರೆ (ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರವರು ಈ ಬಗ್ಗೆ ಅತ್ಯುತ್ತಮವಾಗಿ ಅತ್ಯಂತ ಮಾರ್ಮಿಕವಾಗಿ ಬರೆದಿದ್ದಾರೆ).

ನಮ್ಮ ರಾಜ್ಯದ ಒಂದು ಉದಾಹರಣೆಯನ್ನೇ ತೆಗೆದುಕೊಂಡರೆ ಇಂದು ಇಲ್ಲಿನ ಬಹುಪಾಲು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ತುಂಬಿಕೊಂಡಿರುವ ಅನೇಕ ಬಲಪಂಥೀಯ ಚಿಂತನೆಯ ಪತ್ರಕರ್ತರು ಪತ್ರಿಕಾ ನೀತಿ ಗಾಳಿಗೆ ತೂರಿ ಈ ಮೂಲಕ ತಮ್ಮದೇ ಆದ ಒಂದು ವಿಷಮಯ ಹಿಡನ್ ಅಜೆಂಡಾವನ್ನು ಹಬ್ಬಿಸುತ್ತಿದ್ದಾರೆ. ಉದಾಹರಣೆಗೆ ವಿಶ್ವೇಶ್ವರ ಭಟ್ ಎನ್ನುವ ಬೆಂಗಳೂರಿನ ಸುತ್ತಮುತ್ತಲು ಜಗತ್ಪ್ರಸಿದ್ದಿ ಪಡೆದ ಪತ್ರಕರ್ತರು. ತಮ್ಮ ಬಹುಪಾಲು ಸಮಾನಮನಸ್ಕ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿ ಬಸ್ ಮಾಲೀಕರ ಒಡೆತನದಲ್ಲಿ ಹೊರ ಬರುತ್ತಿದ್ದ ವಿಜಯ ಕರ್ನಾಟಕ ಎನ್ನುವ ಒಂದು ಅಮಾಯಕ ದಿನಪತ್ರಿಕೆಯನ್ನು ಕಬ್ಜಾ ಮಾಡಿಕೊಂಡು ಕಳೆದ ಏಳೆಂಟು ವರ್ಷಗಳಿಂದ ಅಕ್ಷರದ ಹೆಸರಿನಲ್ಲಿ ನಡೆಸಿದ ಅನೈತಿಕತೆ ನಡತೆಗಳು, ದ್ವೇಷಪೂರಿತ ವರದಿಗಳ ಮೂಲಕ ನಮ್ಮ ರಾಜ್ಯದ ಒಂದು ತಲೆಮಾರಿನ ಚಿಂತನೆಯನ್ನು ಅಲ್ಪ ಸಂಖ್ಯಾತರ ವಿರುದ್ಧ ರೂಪಿಸಿದ ರೀತಿ, ಅದರಿಂದಾದ ಅನಾಹುತಗಳು ಬಣ್ಣನೆಗೂ ನಿಲುಕದಷ್ಟಿವೆ.

ತಮ್ಮ ಕೆಲವು ಹಿಡನ್ ಅಜೆಂಡಗಳ ಮೂಲಕ ಪತ್ರಿಕ ರಂಗಕ್ಕೆ ಪ್ರವೇಶಿಸಿದ ಇವರು ಮಾಡಿದ ಮೊದಲ ಕೆಲಸ ದರ ಸಮರವನ್ನು ಹುಟ್ಟು ಹಾಕಿದ್ದು. ಪತ್ರಿಕೆಯೊಂದು ತಾನು ಮಂಡಿಸುವ ವಿಷಯಗಳೊಂದಿಗೆ ಸಾಧ್ಯವಾದಷ್ಟೂ ಸಮಾಜದಲ್ಲಿ ಗುರುತಿಸಿಕೊಳ್ಳುವ, ಆ ಮೂಲಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳುವ ಮೂಲಭೂತ ಸಂಪ್ರದಾಯವನ್ನೇ ಗಾಳಿಗೆ ತೂರಿ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರವನ್ನು ನಿಗದಿಪಡಿಸಿ ಪತ್ರಿಕೆಯ ಪ್ರಸಾರ ಹೆಚ್ಚಿಸಿಕೊಳ್ಳುವ ಅನೀತಿ ಸಂಪ್ರದಾಯ ಹುಟ್ಟು ಹಾಕಿದರು. ಇದರಿಂದ ಕಳೆದ 60 ವರ್ಷಗಳಿಂದ ತಮ್ಮ ಪತ್ರಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಕನ್ನಡದ ಕೆಲವು ಪ್ರಮುಖ ದಿನ ಪತ್ರಿಕೆಗಳು ಆಗ ತತ್ತರಿಸಿದ್ದು ಸರ್ವವಿಧಿತ. ಜಾತೀವಾದಿ, ಕೋಮುವಾದಿ ಚಿಂತನೆಗಳಿಗೆ ಅನುಗುಣವಾಗಿ ಪತ್ರಿಕೆಯನ್ನು ನಡೆಸಿದ ವಿ.ಭಟ್ ರು ನಂತರ ಸಂಘ ಪರಿವಾರದ ಅನೇಕ ಅನಾಹುತ, ಧ್ವಂಸ ಪ್ರವೃತ್ತಿಯ ಅನೀತಿಗಳನ್ನು ಸದರಿ ಪತ್ರಿಕೆಯ ಮೂಲಕ ಇಡೀ ಕೆಟ್ಟ ಪರಂಪರೆಯನ್ನು ಹುಟ್ಟು ಹಾಕಿದರು. ಇದಕ್ಕಾಗಿ ಇವರು ಬೆಳಸಿದ ನಕಲಿ ಸಿಂಹಗಳು, ಹುಲಿಗಳು ತಮ್ಮ ಬಾಲಿಶತನವನ್ನೇ ಗಂಭೀರ ಚಿಂತನೆಗಳೆಂದು ಬಿಂಬಿಸಿ, ಪ್ರಗತಿಪರ ಹೋರಾಟಗಾರರ ವಿರುದ್ಧ, ಅಲ್ಪ ಸಂಖ್ಯಾತರ ವಿರುದ್ಧದ ಕಪೋಲ ಕಲ್ಪಿತ ಹಸೀ ಸುಳ್ಳುಗಳನ್ನು ವ್ಯವಸ್ಥಿತವಾಗಿ ಸಮಾಜದಲ್ಲಿ ಬಿತ್ತಲೆತ್ನಿಸಿದರು.

ಇವರ ವ್ಯವಸ್ಥಿತ ಪಿತೂರಿ ಅಷ್ಟೊಂದು ತೀವ್ರವಾಗಿದ್ದರೂ ಕೂಡ ( ಸಾಹಿತಿ ಯು.ಅರ್.ಅನಂತ ಮೂರ್ತಿಯವರ ವಿರುದ್ಧ ಇವರ ಅಪ ಪ್ರಚಾರ ಅತ್ಯಂತ ಕೆಳ ಮಟ್ಟಕ್ಕೆ ತಲುಪಿತ್ತು) ನಮ್ಮ ಕನ್ನಡದ ವೈಚಾರಿಕತೆ, ಪ್ರಗತಿಪರತೆಯ ತಳಪಾಯ ಎಷ್ಟು ಗಟ್ಟಿಯಾಗಿದೆಯೆಂದರೆ ಇವೆಲ್ಲವನ್ನೂ ಮೆಟ್ಟಿನಿಂತಿತು.ಆದರೆ ಈ ಕೂಟ ಒಂದು ಯವ ತಲೆಮಾರನ್ನು ದಿಕ್ಕು ತಪ್ಪಿಸಿದ್ದಂತೂ ನಿಜ. ಇದು ನಮ್ಮಲ್ಲೆರ ಕಣ್ಣೆದುರಿಗೇ ಜರುಗಿದ್ದು ಮಾತ್ರ ನಮಗೆಲ್ಲ ಅತ್ಯಂತ ನೋವುಂಟು ಮಾಡುವ ಸಂಗತಿ.

ಪ್ರಜಾವಾಣಿ, ಕನ್ನಡ ಪ್ರಭ ದಂತಹ ಪತ್ರಿಕೆಗಳು, ತಮ್ಮ ಹಿಂದಿನ ಮೂರ್ನಾಲ್ಕು ತಲೆಮಾರಿನಿಂದ ಅತ್ಯಂತ ನ್ಯಾಯದಿಂದ, ಶ್ರಮದಿಂದ ಕಟ್ಟಿ ಬೆಳೆಸಿದ ಪತ್ರಿಕಾ ರಂಗದ ನೀತಿ ಸಂಪ್ರದಾಯಗಳನ್ನು, ಸೂಕ್ಷ್ಮತೆಗಳನ್ನು,ನೈತಿಕತೆಯನ್ನು, ಸಂಪೂರ್ಣವಾಗಿ ಧ್ವಂಸಗೊಳಿಸುವ ತಮ್ಮ ಕುಕೃತ್ಯದ ಎರಡನೇ ಇನ್ನಿಂಗ್ಸ್ ಅನ್ನು ಈ ಸದರಿ ಪತ್ರಕರ್ತರು ಹಾಗೂ ಅವರ ದುಷ್ಟಕೂಟ ಈಗ ಮತ್ತೊಮ್ಮೆ ಕೇರಳದ ಉದ್ಯಮಿಯ ಹಾಗೂ BJP ರಾಜ್ಯಸಭಾ ಸದಸ್ಯರ ಒಡೆತನದ ಪತ್ರಿಕೆಯನ್ನು ಸೇರಿಕೊಂಡು ಆ ಪತ್ರಿಕೆಯನ್ನೂ ಗಬ್ಬೆಬ್ಬಿಸುತ್ತ ಆ ಮೂಲಕ ನಮ್ಮ ನಾಡಿನ ಹೆಮ್ಮೆಯ ಪತ್ರಿಕೋದ್ಯಮದ ನೈತಿಕತೆಯ ಸೂಕ್ಷ್ಮ ಗೆರೆಯನ್ನು ಅಳಸಿಹಾಕಿ ಇಂದು ಇವರು ಅಕ್ಷರ ದೌರ್ಜ್ಯನ್ಯಗಳನ್ನು ಎಸಗುತ್ತಿದ್ದಾರೆ.

ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಯಡಿಯೂರಪ್ಪನವರು ಅತ್ಮಾವಲೋಕನ ಮಾಡಿಕೊಳ್ಳುವ ಅಪೂರ್ವ ಅವಕಾಶಗಳನ್ನೇ ಸ್ವತಃ ಕೈಯಾರೆ ಹಾಳು ಮಾಡಿಕೊಳ್ಳುತ್ತ, ಮತ್ತೆ ಮತ್ತೆ ಅಂಧಾಧುಂದಿ ರಾಜಕಾರಣದ, ಭಸ್ಮಾಸುರ ಕ್ರುತ್ಯಕ್ಕೆ ಕೈ ಹಾಕಿದ್ದಾರೆ. ತಾವೇ ಬೆಳಸಿದ ಈ ಗಣಿ ಚೋರರಾದ ರೆಡ್ಡಿ ಪಡೆಯನ್ನು ಬಳಸಿಕೊಂಡೇ ಕಳೆದ 3 ವರ್ಷ ಅಧಿಕಾರ ನಡೆಸಿದರು. ಇಲ್ಲಿನ ಸಂಪಲ್ಮೂನಗಳನ್ನು ಲೂಟಿ ಮಾಡಿ ಗಳಿಸಿದ ದುಡ್ಡಿನಿಂದ ಚುನಾವಣೆ ಗೆಲ್ಲುತ್ತಾ,ಆ ಮರೀಚಿಕೆಯನ್ನೇ ಜನರ ತೀರ್ಪು ಎಂದು ತಮ್ಮನ್ನು ತಾವೇ ಮೋಸಗೊಳಿಸುತ್ತ, ನಾಡಿನ ಜನತೆಯನ್ನು ಮರುಳುಗೊಳಿಸಿದ್ದೇವೆ ಎನ್ನುವ ಅತಾರ್ಕಿಕ ಭ್ರಮಾ ಲೋಕದಲ್ಲಿದ್ದಾರೆ ಯಡಿಯೂರಪ್ಪ.

3 ವರ್ಷಗಳ ಕಾಲ ತಾವು ಮುಖ್ಯಮಂತ್ರಿಗಳಾಗಿದ್ದ ಸಂಧರ್ಭದಲ್ಲೂ ಅಲ್ಲಿನ “ಗಣ ರಾಜ್ಯ ಬಳ್ಳಾರಿಯ” ಸರ್ವಾಧಿಕಾರಿಗಳಾದ ರೆಡ್ಡಿಗಳ ಅನುಮತಿಯಿಲ್ಲದೆ ತಾವಾಗಲಿ, ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಾಗಲಿ ಅಲ್ಲಿ ಕಾಲಿಡಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇತ್ತು. ಈಗ ಇದನ್ನು ತಮ್ಮ ಅಸಹ್ಯಯಕರ, ಅನೀತಿ ರಾಜಕಾರಣದ ಮೂಲಕ ಜನತೆಯನ್ನು ಮತ್ತೊಮ್ಮೆ ದಿಕ್ಕು ತಪ್ಪಿಸಬಹುದೆನ್ನುವ ಭ್ರಮೆಯಲ್ಲಿದ್ದಾರೆ. ಒಬ್ಬ ಯಜಮಾನನ ಅಡಿಯಲ್ಲಿ ನಡೆಯುವ ಅನ್ಯಾಯಗಳು, ಅತ್ಯಾಚಾರಗಳು, ದಬ್ಬಾಳಿಕೆಗಳಿಗೆ ಅದನ್ನು ನಡೆಸುವವರೆಷ್ಟು ಕಾರಣವೋ, ಅವರ ಅಧಿಪತಿಯೆನಿಸಿಕೊಂಡ ಯಜಮಾನ ಕೂಡ ಅಷ್ಟೇ ಜವಾಬ್ದಾರನಾಗುತ್ತಾನೆ ಎನ್ನುವುದು ಈ ನೆಲದ ನ್ಯಾಯ.

ನನ್ನ ಪ್ರಕಾರ ಅವರ ಡಿನೋಟಿಫ಼ಿಕೇಶನ್ ಹಗರಣಗಳಿಗಿಂತಲೂ ಅತ್ಯಂತ ಭ್ರಷ್ಟ ಹಗರಣ ಬಳ್ಳಾರಿಯ ದುರಂತ. ಇದರಿಂದ ಯಡಿಯೂರಪ್ಪನವರು ಎಷ್ಟೇ ತಲೆ ಕಳಗು ಮಾಡಿದರೂ ತಪ್ಪಿಸಿಕೊಳ್ಳಲಾರರು. ಈ ಪತ್ರಕರ್ತರು ಇದನ್ನು ತಮ್ಮೆಲ್ಲ ಜ್ನಾನವನ್ನು, ಅನುಭವವನ್ನು ಬಳಸಿ, ಪ್ರಾಮಾಣಿಕ ರಾಜಕೀಯ ವಿಶ್ಲೇಷಣೆಯ ಮೂಲಕ ಜನತೆಗೆ ವಸ್ತುಸ್ಥಿತಿಯನ್ನು ತೋರಿಸಿಕೊಡಬಹುದಿತ್ತು. ಆದರೆ ಇವರು ಮಾಡಿದ್ದೇನು ? ಇವರದೇ ಬಳಗಕ್ಕೆ ಸೇರಿದ ಟಿವಿ ಛಾನಲ್ ನ -ಸಂಯೋಗದೊಂದಿಗೆ ಈ ದುಷ್ಟಕೂಟ ಪತ್ರಿಕಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರಿ ಈ ರಾಜ್ಯದ ನೆಲವನ್ನು ಲೂಟಿ ಮಾಡಿದ ಭ್ರಷ್ಟಚಾರದ ಅಪಾದನೆಗೊಳಗಾಗಿರುವ ಯಡಿಯೂರಪ್ಪನವರನ್ನು ದುರಂತ ವ್ಯಕ್ತಿಯಂತೆ ಏನೋ ಸಣ್ಣ ತಪ್ಪು ಮಾಡಿದ್ದಾರಷ್ಟೇ ಎನ್ನುವಂತೆ ಬಿಂಬಿಸುವುದು, ಸಂತೋಷ ಹೆಗ್ಡೆ ಅವರ ವಿರುದ್ಧ ನಡೆಸುತ್ತಿರುವ ಪ್ರತೀಕಾರದ ಅಪಪ್ರಚಾರ,… ಇದಕ್ಕೆ ಯಡಿಯೂರಪ್ಪನವರನ್ನುdefault ಆಗಿ ಬಳಸಿಕ್ಕೊಳುತ್ತಿರುವ ರೀತಿ ಆ ಮೂಲಕ ರಾಜ್ಯದ ಹೆಮ್ಮೆಯ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ದಿಕ್ಕು ತಪ್ಪಿಸಿ ನಿಶ್ಯಕ್ತಗೊಳಿಸುವುದು, ತಮ್ಮ ದುಷ್ಟ ಕೃತ್ಯಗಳಿಗೆ ತೊಡರುಗಾಲು ಹಾಕಿದವರ ವಿರುದ್ಧ ನಡೆಸುವ ಅಪಪ್ರಚಾರಗಳು ಹಾಗೂ ತಮ್ಮ ಈ ಯಾವುದೇ ಲಂಗು ಲಗಾಮಿಲ್ಲದ ಭ್ರಷ್ಟ ನಡವಳಿಕೆಗಳಿಂದ, ತತ್ವರಹಿತ ಕೆಲಸಗಳಿಂದ ಈ ರಾಜ್ಯದ ಪ್ರಜ್ಞಾವಂತರ conscious ಗೆ ಒಂದು ಸವಾಲನ್ನು ಎಸೆದಿದ್ದಾರೆ.

ಇದನ್ನು ನೋಡಿ ನಾವೆಲ್ಲ ಕಣ್ಣು ಮುಚ್ಚಿಕೊಂಡು ಸುಮ್ಮನೆ ಗೊಣಗುತ್ತಿರುವುದು ನಿಜಕ್ಕೂ ಒಂದು ದುರಂತವೇ ಸರಿ. ಏಕೆ ಇವರಿಗೆಲ್ಲ ಕಡಿವಾಣ ಹಾಕದಷ್ಟು ನಾವೆಲ್ಲ ನಿತ್ರಾಣರಾಗಿದ್ದೇವೆಯೇ ?? ನಾವೆಲ್ಲ ಈ ಬಾರಿಯೂ ಜಾಣ ಮೌನವಹಿಸಿದ್ದೇ ಆದರೆ ನಮ್ಮ ಕಣ್ಣೆದುರಿಗೇ ಮತ್ತೊಂದು ತಲೆಮಾರನ್ನು ಕಳೆದುಕೊಳ್ಳಬೇಕಾಗುತ್ತದೆ. ಶಂಕರ್ ಹೇಳಿದಂತೆ ಈಗಾಗಲೇ “ಇಲ್ಲಿ ಅಳುವವರು ಯಾರೂ ಇಲ್ಲ”

ಊಟ ಮಾಡಿದರೆ ಕೈಯೆಲ್ಲ ಹಸಿರು!

– ಹುಲಿಕಲ್ ನಟರಾಜ್

ಕೊಪ್ಪಳದಲ್ಲಿ ನಾನು ಒಂದು ಕಾರ್ಯಕ್ರಮದಲ್ಲಿದ್ದೆ. ಪವಾಡ ಬಯಲು ಕಾರ್ಯಕ್ರಮದ ನಂತರ ಕೆಲವರು ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬರು ಬಂದು,`ಸರ್ ನಮ್ಮೂರಿನಲ್ಲಿ ಒಂದು ಹುಡುಗನಿಗೆ ಸುಮಾರು ಎರಡು ವರ್ಷದಿಂದ ಭಾನಾಮತಿ ಹಿಡಿದಿದೆ. ಅವನು ಊಟ ಮಾಡಿ ಕೈ ತೊಳೆದರೆ ಸಾಕು. ಕ್ಯೆಯಲ್ಲ ಹಸಿರಾಗುತ್ತದೆ. ಇದು 7ನೇ ಕ್ಲಾಸ್ನಿಂದ ಶುರುವಾಗಿ 9ನೇಕ್ಲಾಸ್ಗೆ ಬಂದರೂ ಸರಿಯಾಗಿಲ್ಲ. ನೀವೇನಾದರು ಮಾಡಿ. ಎಂದರು.

ನಾವು ಆ ಹುಡುಗನಿರುವ ಹಳ್ಳಿಗೆ ತಲುಪಿದೆವು. ಆ ಹುಡುಗ ನೋಡೋಕೆ ಒಂದು ರೀತಿಯಲ್ಲಿ ಅಮಾಯಕನಂತಿದ್ದ. ಓದೋದರಲ್ಲಿ ನಿಶ್ಯಕ್ತಿಯಾಗಿದ್ದ. ತಂದೆ ತಾಯಿ ಅಮಾಯಕರಂತೆ ಕಂಡು ಬಂದರು. ನಾನು ಅಲ್ಲೇ ಉ
ಳಿದೆ.

`ನೀನು ಊಟ ಮಾಡು ನಾವೂ ಊಟ ಮಾಡ್ತೀವಿ ನೋಡೋಣ ಏನಾಗುತ್ತೆ ಎಂದೆ. ಅಂದು ರಾತ್ರಿ ಮಂದ ಬೆಳಕು. ನಾವೆಲ್ಲ ಊಟ ಮಾಡಿ ಕೈ ತೊಳೆದೆವು. ಅವನೂ ತೊಳೆದ. ಅವನು ಕೈ ತೊಳೆದಂತೆ ನೀರೆಲ್ಲ ಹಸಿರಾಗಿತ್ತು. ನನಗೆ ನೋಡುತ್ತಿದ್ದಂತೆ ದಿಗ್ಭ್ರಮೆಯಾಯಿತು.

ನಾನು ಅವರ ತಂದೆಯವರ ಹತ್ತಿರ ಯಾವಾಗ ಈ ರೀತಿ ಆಗುತ್ತೆ ಎಂದು ಕೇಳಿದೆ. ದಿನಕ್ಕೆ ಎರಡು ಬಾರಿ ಬೆಳಿಗ್ಗೆ ಮತ್ತು ರಾತ್ರಿ ಆಗುತ್ತದೆ. ಒಂದೊಂದು ಸಲ ಸಂಜೆಯೂ ಆಗುತ್ತದೆ. ನಾವು ಎಲ್ಲ ಕಡೆ ತೋರಿಸಿದೆವು. ಏನೂ ಪ್ರಯೋಜನವಾಗಿಲ್ಲ. ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೆವು. ಸ್ವಲ್ಪ ಹೊತ್ತು ಚೆನ್ನಾಗಿರ್ತಾನೆ. ಆಮೇಲೆ ಅದೇ ಕಥೆ ಎಂದರು.

ಇದರ ರಹಸ್ಯ ಬಯಲು ಮಾಡಬೇಕು ಎಂದು ದೃಢ ನಿರ್ಧಾರ ಮಾಡಿ ನಾನು ಅವನೊಂದಿಗೆ ಮತ್ತೆ ಎರಡು ಬಾರಿ ತಿಂಡಿ ತಿಂದೆ. ಏನೂ ಆಗಲಿಲ್ಲ. ಮಧ್ಯಾಹ್ನ ಊಟವಾದ ನಂತರ ಕೈ ತೊಳೆದರೆ ಅದೇ ಹಸಿರು ನೀರು!

ನನಗೆ ಏನೋ ತೋಚಲಿಲ್ಲ. ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ ಹೊರಡಲು ಎದ್ದೆ. ಆಗ `ಸರ್ ದಯವಿಟ್ಟು ಹಾಗೆ ಹೇಳಬೇಡಿ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಿರಿ. ಅದಕ್ಕೆ ನೀವು ಏನು ಹೇಳಿದರೂ ನಾವು ತಯಾರು ಎಂದು ಆ ಹುಡುಗನ ತಂದೆ ಕೈ ಹಿಡಿದುಕೊಂಡರು. ಆ ಹುಡುಗನನ್ನು ನಮ್ಮ ಊರಿಗೆ ಕಳುಹಿಸಿ ಎಂದು ಹೇಳಿ ಮರಳಿದೆ.

ಒಂದು ತಿಂಗಳ ನಂತರ ಆ ಹುಡುಗನನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ನಮ್ಮ ಮನೆಯಲ್ಲಿ ಒಂದು ತಿಂಗಳು ಇದ್ದ. ಆಗ ಅವನಿಗೆ ಏನು ಆಗಲಿಲ್ಲ. ಅವನು ಊಟ ಮಾಡಿದಾಗ ಕೈಯಲ್ಲಿ ಎಂತಹ ಹಸಿರು ಬಣ್ಣವೂ ಬರಲಿಲ್ಲ. ಇದರಿಂದ ನನಗೆ ಅನುಮಾನ ಬಂದು ಆ ಹುಡುಗನನ್ನು ವಿಚಾರಿಸಿದೆ.

`ಯಾಕಪ್ಪ ಊರಲ್ಲಿ ಇದ್ದಾಗ ಮಾತ್ರ ನೀನು ಕೈ ತೊಳೆದಾಗ ಹಸಿರು ನೀರು ಬರ್ತಿತ್ತು. ಇಲ್ಲಿ ಅಂತಹದ್ದು ಏನು ಇಲ್ಲ ಎಂದು ಕೇಳಿದ್ದಕ್ಕೆ ಆತ ಏನೂ ಉತ್ತರ ಕೊಡಲಿಲ್ಲ.

ಅವನನ್ನು ಮತ್ತೆ ಊರಿಗೆ ಕರೆದುಕೊಂಡು ಹೋದೆ. ಮತ್ತೆ ಅಲ್ಲಿ ಒಟ್ಟಿಗೆ ಊಟಮಾಡಿದೆವು. ಮತ್ತೆ ಅವನ ಕೈ ಹಸಿರಾಗಿತ್ತು. ನನಗೆ ಪುನಃ ಶಾಕ್ ಆಯಿತು. ಆ ನೀರನ್ನು ಮೂಸಿದಾಗ ಇಂಕಿನ ವಾಸನೆ ಬಡಿಯಿತು. ಇಂಕ್ ಮೂಲ ಹುಡುಕುತ್ತಾ ಹೋದೆ. ಅವರ ಮನೆಯಲ್ಲಿ ಯಾರೂ ಇಂಕ್ ಬಳಸುತ್ತಿರಲಿಲ್ಲ.

ಇದು ಹುಡುಗನ ಕೃತ್ಯವೇ ಎಂದು ಸ್ಪಷ್ಟವಾಯಿತು. `ನನಗೆ ಎಲ್ಲ ಗೊತ್ತಾಯಿತು. ನಿನಗೆ ಈ ಹಸಿರು ಇಂಕ್ ಪೆನ್ನು ಹೇಗೆ ಬಂತು ಹೇಳು? ಎಂದೆ. ಅವನು ಉತ್ತರಿಸಲಿಲ್ಲ. ಅವನ ಮೇಲೆ ಜೋರು ಮಾಡಿದ ನಂತರ ಹೇಳಿದ.

ಅವನು ಬಿಚ್ಚಿಟ್ಟ ಕಥೆ ಇದು :
`ನಮ್ಮ ಮನೆಯಲ್ಲಿ ಅಪ್ಪ ಕೆಲಸ ಮಾಡು ಅಂತಾರೆ. ಕಸ ಗುಡಿಸು ಅಂತ ಬೈತಾರೆ. ಸಗಣಿ ಬಾಚು ಅಂತಾರೆ. ನನಗೆ ಕೆಲಸ ಮಾಡಕ್ಕೆ ಇಷ್ಟ ಇರಲಿಲ್ಲ. ಒಂದು ದಿವಸ ಸುಮ್ಮನೆ ಇಂಕನ್ನು ಕ್ಯೆಯಲ್ಲಿ ಹಾಕಿಕೊಂಡಿದ್ದೆ. ಆಗ ನಮ್ಮ ತಂದೆ ತಾಯಿ ಭಯ ಪಟ್ಟುಕೊಂಡು ನನ್ನನ್ನ ದೇವಸ್ಥಾನಕ್ಕೆ ಕರೆದು ಕೊಂಡು ಹೋಗಿದ್ದರು. ಆಗ ಅವರು ನನ್ನಿಂದ ಯಾವ ಕೆಲಸವನ್ನೂ ಮಾಡಿಸಲಿಲ್ಲ. ಇದನ್ನೇ ಹೀಗೆ ಮಾಡಿದರೆ ನನಗೆ ಯಾವ ಕೆಲಸ ಮಾಡಿಸೋಲ್ಲ ಅಂದುಕೊಂಡು ಮುಂದುವರೆಸಿದೆ

`ಯಾರಿಗೂ ಗೊತ್ತಿಲ್ಲದಂತೆ ಇಂಕ್ ಹಾಕಿಕೊಳ್ಳುತ್ತಿದ್ದೆ ಹೇಗೆ? ಎಂದೆ.

ನಾನು ಕುಳಿತುಕೊಳ್ಳುವ ಜಾಗದಲ್ಲಿ ನನ್ನ ಹಿಂದೆ ರಾಗಿ ಮೂಟೆ ಇತ್ತು. ಅದರ ಸಂದಿಯಲ್ಲಿ ಇಟ್ಟುಕೊಳ್ಳುತ್ತಿದ್ದೆ. ಊಟ ಮಾಡಿದ ತಕ್ಷಣ ಹತ್ತಿಯಲ್ಲಿ ಹಸಿರು ಇಂಕನ್ನು ಹಾಕಿಕೊಳ್ತಿದ್ದೆ ಎಂದ.
ಇನ್ನೆಂದೂ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಆ ಹುಡುಗನ ತಂದೆ ತಾಯಿಯರಿಗೆ ಸಮಸ್ಯೆ ನಿವಾರಣೆಯಾಗಿದೆ ಎಂಬ ಭರವಸೆ ನೀಡಿದೆ.

ಮಕ್ಕಳಲ್ಲಿರುವ ಸೋಮಾರಿತನವೂ ಇಂತಹ ಸಮಸ್ಯೆಯನ್ನು ಹುಟ್ಟುಹಾಕಬಲ್ಲುದು ಎಂದು ಅರಿವಾಯಿತು. ಆದ್ದರಿಂದ ಮಕ್ಕಳಲ್ಲಿ ಕಷ್ಟ ಸಹಿಷ್ಣುತೆ, ಶ್ರಮಜೀವನದ ಪಾಠಗಳನ್ನು ನಾವು ಕಲಿಸಬೇಕು.

ತನಿಖೆಗೆ ಆದೇಶ

– ವರ್ತಮಾನ ಬಳಗ

ಸಚಿವ ವಿ.ಸೋಮಣ್ಣ ವಿರುದ್ಧದ ಆರೋಪಗಳ ತನಿಖೆಗೆ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ. ಅಪರಾಧ ದಂಡ ಸಂಹಿತೆ 156 (3) ವಿಧಿ ಅಡಿ ನ್ಯಾಯಾಧೀಶರಿಗೆ ಪ್ರದತ್ತವಾದ ಅಧಿಕಾರದ ಅನ್ವಯ ಪ್ರಕರಣ ದಾಖಲಿಸಲು ಆದೇಶಿಸಿದೆ. ಇನ್ನು ಮುಂದೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.
ರವಿಕೃಷ್ಣಾ ರೆಡ್ಡಿ ನೀಡಿದ ದೂರಿನ ವಿಚಾರಣೆ ಆರಂಭವಾದಾಗಿನಿಂದ ಸಚಿವ ಸೋಮಣ್ಣ ಅಲ್ಲಲ್ಲಿ ಪ್ರತಿಕ್ರಿಯಿಸಿದ್ದಾರೆ. ಸುವರ್ಣ 24/7 ನ ಸಂದರ್ಶನದಲ್ಲಿ (ಟಾರ್ಗೆಟ್) ಸೋಮಣ್ಣ ತಮ್ಮನ್ನು ಸರ್ಮಥಿಸಿಕೊಳ್ಳುವ ಪ್ರಯತ್ನ ಮಾಡುವ ಭರದಲ್ಲಿ ತಪ್ಪನ್ನೂ ಒಪ್ಪಿಕೊಂಡರು. ತಾವು (ತಮ್ಮ ಪತ್ನಿ ಹೆಸರಿನಲ್ಲಿ) ಕೊಂಡ ಜಮೀನು ಡಿನೋಟಿಫೈ ಆಗಿಲ್ಲ ಎನ್ನುವ ಮಾಹಿತಿ ಅವರಿಗೆ ತಿಳಿದಿರಲಿಲ್ಲವಂತೆ. ಆ ಕಾರಣ ತಪ್ಪು ಆಗಿದ್ದರೂ ಅದು ಅವರಿಂದ ಆದದ್ದಲ್ಲ ಎನ್ನುವ ಸಮರ್ಥನೆ ಅವರದು.

ಧರ್ಮ ಸಿಂಗ್ ಅವರೇ ಡಿನೋಟಿಫೈ ಮಾಡಿದ್ದು, ನಂತರ ಅನಾವಶ್ಯಕವಾಗಿ ಯಡಿಯೂರಪ್ಪನವರ ಹೆಸರನ್ನು ತರಲಾಗಿದೆ ಎಂದು ಅವರು ಆರೋಪಿಸಿದರು. ಧರ್ಮ ಸಿಂಗ್ ಮೊದಲು ಡಿನೋಟಿಫೈಗೆ ಆದೇಶ ನೀಡಿದ್ದೇ ಆದರೆ ಅವರೂ ತಪ್ಪಿತಸ್ಥರೇ. ಪ್ರಕರಣ ವಿಚಾರಣೆ ವೇಳೆಯಲ್ಲಿ ನಿಜ ತಪ್ಪಿತಸ್ಥರ ಹೆಸರು ಬಯಲಾಗಲಿ.

ಆದೇಶ ಡಿನೋಟಿಫೈ ಆದೇಶ ಹೊರಬಂದದ್ದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ. ಅವರ ಆದೇಶದ ಅನ್ವಯ 22 ಗುಂಟೆ ಜಮೀನು ಡಿನೋಟಿಫೈ ಆಯಿತು. ಆ ಹೊತ್ತಿಗಾಗಲೇ ಸೋಮಣ್ಣ ಕುಟುಂಬದವರು ಶಾಲೆ ಕಟ್ಟಡ ಕಟ್ಟಿಯಾಗಿತ್ತು ಎನ್ನುವುದು ಗಮನಾರ್ಹ. ಒಬ್ಬ ಮಂತ್ರಿಯ ಮನೆಯವರು ಭೂಮಿಯ ಮೂಲ ದಾಖಲಾತಿಗಳನ್ನು ಗಮನಿಸದೇ ಕೊಳ್ಳುತ್ತಾರೆ ಎನ್ನುವುದು ನಂಬುವಂತಹ ಸಂಗತಿಯೆ? ಅವರು ಪ್ರಸ್ತುತ ಜಮೀನು ನೋಟಿಫೈ ಆಗಿದೆ ಎಂದು ತಿಳಿದೇ ಅದನ್ನು ಕೊಂಡದ್ದು ಮತ್ತು ಅದನ್ನು ಡಿನೋಟಿಫೈ ಮಾಡುವ ಸಾಮರ್ಥ್ಯ ಅವರಲ್ಲಿ ಇರುವ ಕಾರಣವೇ ಅಂತಹದೊಂದು ವ್ಯವಹಾರಕ್ಕೆ ಕೈ ಹಾಕಿದ್ದು ಎನ್ನುವುದನ್ನು ತಿಳಿಯಲು ಎಂಥವರಿಗೂ ಕಷ್ಟವಾಗಲಿಕ್ಕಿಲ್ಲ.

ಬಿಡಿಎ ವ್ಯಾಪ್ತಿಯಲ್ಲಿದ್ದ ಜಮೀನನ್ನು ಪರಭಾರೆ ಮಾಡಿದ್ದು ತಪ್ಪು. ಪರಭಾರೆ ಮಾಡಿಸಿಕೊಂಡದ್ದೂ ತಪ್ಪು. ಜಮೀನಿನ ಮೂಲ ಮಾಲೀಕ, ತಾನು ತನ್ನ ಜಮೀನನ್ನು ಸೋಮಣ್ಣನವರ ಕುಟುಂಬಕ್ಕೆ (ಕಾನೂನು ಬಾಹಿರವಾಗಿ) ಮಾರಾಟ ಮಾಡಿದ ಮೇಲೆ ಅದ್ಯಾವ ಆಧಾರದ ಮೇಲೆ ಡಿನೋಟಿಫೈ ಮಾಡಿ ಎಂದು ಮನವಿ ಸಲ್ಲಿಸಿದರು?

ಈಗಾಗಲೇ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ಪ್ರಕರಣ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಹಾಗಿರುವಾಗ ಕೆಲವು ಮಾಧ್ಯಮ ಸಂಸ್ಥೆಗಳು ಮಾತ್ರ ಸೋಮಣ್ಣ ನಿರಪರಾಧಿ ಎನ್ನುವ ತೀರ್ಪನ್ನು ನ್ಯಾಯಾಲಯಕ್ಕೆ ಮೊದಲೇ ನೀಡುವ ಅವಸರ ತೋರಿದ್ದಾರೆ. ಅವರು ಹೇಳುವುದು ಇದು ಹಳೇ ಪ್ರಕರಣ. ಗಾಯಗಳಿಗೆ ಸೂಕ್ತ ಚಿಕಿತ್ಸೆ ಕೊಡದೇ ಇದ್ದರೆ ಅವು ಎಷ್ಟು ಕಾಲದ ನಂತರವಾದರೂ ಮರುಕಳಿಸಿಬಹುದು. ಅಂತೆಯೇ ಇದು. ಸೋಮಣ್ಣ ತಮ್ಮ ಮಾತಿನ ಧಾಟಿಯಲ್ಲಿ ‘ಪುಡಗೋಸಿ 22 ಗುಂಟೆ’ ಜಮೀನು ಎನ್ನುತ್ತಾರೆ. ಅವರಿಗೆ ಬೆಂಗಳೂರೆಂಬ ಊರಲ್ಲಿ 22 ಗುಂಟೆ ಪುಡಗೋಸಿ! ಯಾರ ಕಿವಿ ಮೇಲೆ ಹೂ ಮುಡಿಸುವ ಪ್ರಯತ್ನವಿದು?

ಸೋಮಣ್ಣ ತಾವು ತಪ್ಪಿತಸ್ಥರೆಂದು ಸಾಬೀತಾದರೆ ರಾಜಕಾರಣವನ್ನೇ ಬಿಡುತ್ತಾರಂತೆ. ಬೆಂಗಳೂರನ್ನೇ ಬಿಟ್ಟು ಬೇರೆಡೆಗೆ ಹೋಗುವುದಾಗಿಯೂ ಹೇಳಿದರು. ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಸಾಬೀತಾದರೆ ಬೆಂಗಳೂರನ್ನು ಬಿಡುವ ಸಂದರ್ಭ ಎದುರಾಗಲಿಕ್ಕಿಲ್ಲ.

ಚಿತ್ರ: ದಿ ಹಿಂದು