-ರವಿ ಕೃಷ್ಣಾರೆಡ್ಡಿ
ಸ್ನೇಹಿತರೆ,
KGF ನ ಸಂತ್ರಸ್ತರಿಗಾಗಿ ನಾವು ಮಾಡಿಕೊಂಡ ಮನವಿಗೆ ಸ್ಪಂದಿಸಿ ಈಗಾಗಲೆ ಐದಾರು ಜನ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ನಾವು ಮನವಿ ಪ್ರಕಟಿಸಿದ ಮೊದಲ ಎರಡು ದಿನ ಹಣಸಂದಾಯ ಮಾಡುವ ವಿಚಾರಕ್ಕೆ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿದ್ದವು. ಈಗ ನೀವು ಯಾವುದೇ ರೀತಿ ಕಳುಹಿಸಬೇಕೆಂದರೂ (ಇಂಟರ್ನೆಟ್/ಎಟಿಎಮ್ ಟ್ರಾನ್ಸ್ಫರ್/ಚೆಕ್) ಸಂಪೂರ್ಣ ಮಾಹಿತಿ ಲಭ್ಯವಿದೆ.
ಇಲ್ಲಿಯವರೆಗೆ ಒಟ್ಟು ರೂ. 18,500 ಸಂಗ್ರಹವಾಗಿದೆ. ಇನ್ನೂ ಹಲವರು ಒಂದೆರಡು ದಿನದಲ್ಲಿಯೇ ಚೆಕ್ ಕಳುಹಿಸುವ, ಅಕೌಂಟಿಗೆ ಟ್ರಾನ್ಸ್ಫರ್ ಮಾಡುವ ಆಶ್ವಾಸನೆ ಇತ್ತಿದ್ದಾರೆ. ಸಹಾಯ ಮಾಡಬೇಕೆಂದಿರುವವರು ಆದಷ್ಟು ಬೇಗ ಮಾಡಿ. ಡಿಸೆಂಬರ್ 15ಕ್ಕೆ ಸಂಗ್ರಹವಾಗುವ ಒಟ್ಟು ಮೊತ್ತವನ್ನು ಪದಾರ್ಥರೂಪದಲ್ಲಿ ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಆರಂಭಿಸಲು ಅನುಕೂಲವಾಗುತ್ತದೆ. ಸರಿಯಾದ ಅಥವ ಅತ್ಯಗತ್ಯವಾದ ಸಮಯದಲ್ಲಿ ಮಾಡುವ ಸಹಾಯವೇ ಅತ್ಯುತ್ತಮ ಸಹಾಯ. ಅದನ್ನು ಮತ್ತಷ್ಟು ನಿಧಾನಗೊಳಿಸುವುದು ಬೇಡ ಎನ್ನುವುದಷ್ಟೇ ನಮ್ಮ ಆಶಯ.
ಅಂದ ಹಾಗೆ, ಇಲ್ಲಿಯವರೆಗೆ ಹಣ ಸಂದಾಯ ಮಾಡಿರುವವರ ಮತ್ತು ಚೆಕ್ ಕಳುಹಿಸಿರುವವರ ವಿವರ ಹೀಗಿದೆ:
ವರ್ತಮಾನ ಬಳಗ – 5000
ರಾಮಕೃಷ್ಣ ಎಂ. – 10000
ಮಾನಸ ನಾಗರಾಜ್ – 500
ಅನಾಮಧೇಯ-1 – 1000
ಎಸ್.ವಿಜಯ, ಮೈಸೂರು – 1000
ಸ್ವರ್ಣಕುಮಾರ್ ಬಿ.ಎ. – 1000
ಒಟ್ಟು: 18,500