ಕವಿಮನೆಯ ಬಗ್ಗೆ ಡಿ.ಎಸ್. ನಾಗಭೂಷಣ ದಂಪತಿಗಳ ಮಾತು…

-ರವಿ ಕೃಷ್ಣಾರೆಡ್ಡಿ

ಮೂರು ವರ್ಷ ಆಗುತ್ತ ಬಂತು. 2009 ರ ಮಾರ್ಚ್ 29 ರಂದು ಡಿ.ಎಸ್.ನಾಗಭೂಷಣ ದಂಪತಿಗಳು ಮತ್ತು ನಾನು ಉಡುಪಿಯಲ್ಲಿನ ಕಾರ್ಯಕ್ರಮವನ್ನು ಮುಗಿಸಿಕೊಂಡು ಶಿವಮೊಗ್ಗಕ್ಕೆ ವಾಪಸಾಗುತ್ತ ರಾತ್ರಿ ಕುಪ್ಪಳ್ಳಿಯಲ್ಲಿ ಉಳಿದುಕೊಂಡಿದ್ದೆವು. ಮಾರನೆ ದಿನ ಕವಿಮನೆ, ಕವಿಶೈಲ, ಸಿಬ್ಬಲುಗುಡ್ಡೆ, ಮತ್ತಿತರ ಕೆಲವು ಸ್ಥಳಗಳನ್ನು ಸುತ್ತಾಡಿದ್ದೆವು. ಆಗ ನಾನು ಒಂದಷ್ಟು ವಿಡಿಯೊ ತೆಗೆದಿದ್ದೆ. ಹೀಗೇ ಕಾರಣಾಂತರಗಳಿಂದ ಅವನ್ನು ಸಂಕಲಿಸಿ ಯೂಟ್ಯೂಬ್‌ಗೆ ಹಾಕಲು ಆಗಿರಲಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ವರ್ತಮಾನ.ಕಾಮ್‌ನ ಕೆಲವು ಚಟುವಟಿಕೆಗಳಿಗೆ ತೊಡಗಿಕೊಂಡ ಪರಿಣಾಮವಾಗಿ ಈ  ವಿಡಿಯೊ ಸಿದ್ದಪಡಿಸಿದೆ.

ಇನ್ನು ಮುಂದೆ ವಾರಕ್ಕೆ ಒಂದೆರಡಾದರೂ ವಿಡಿಯೋಗಳನ್ನು ವರ್ತಮಾನದ ಮೂಲಕ ಸಿದ್ದಪಡಿಸಿ ಹಾಕಬೇಕಿದೆ. ಬರಹಗಳಷ್ಟೇ ಅಲ್ಲ, ನಾವು ಬಹುಮಾಧ್ಯಮ ಸಾಧ್ಯತೆಗಳಿಗೆ ಹೊರಳಬೇಕಿದೆ. ಈ ವಿಚಾರವಾಗಿ ನಿಮ್ಮ ಸಲಹೆ-ಸೂಚನೆಗಳಿಗೆ ಸ್ವಾಗತ.

Leave a Reply

Your email address will not be published. Required fields are marked *