ಝಕಾರಿಯಾ ಕಾಪಿಮಾಡಿದ ಪ್ಯಾರಾಗ್ರಾಫ್ ಮತ್ತು ಕಿವಿ ಕಚ್ಚಿದ ಸುಶೀಲ್ ಕುಮಾರ್!

– ರಮೇಶ್ ಕುಣಿಗಲ್

“I apologize unreservedly” – ಟೈಮ್ ಮತ್ತು ಸಿಎನ್ಎನ್ ಸಂಸ್ಥೆಗಳಿಂದ ಅಮಾನತ್ತುಗೊಂಡ ನಂತರ ಫರೀದ್ ಝಕಾರಿಯಾ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ. ಸಿಎನ್ಎನ್ ಬ್ಲಾಗ್ ನಲ್ಲಿ ಕೂಡಾ ತಮ್ಮ ತಪ್ಪು ಒಪ್ಪಿಕೊಂಡು ತನ್ನ ಸಂಪಾದಕರಿಗೆ, ಓದುಗರಿಗೆ, ನೋಡುಗರಿಗೆ ಹಾಗೂ ಜಿಲ್ ಲೆಪೋರಗೆ ಕ್ಷಮೆ ಕೋರಿದ್ದಾರೆ. (ಟೈಮ್ ಅವರನ್ನು ಒಂದು ತಿಂಗಳ ಕಾಲಾವಧಿಗೆ ಅಮಾನತ್ತು ಮಾಡಿದೆ.) ಲೆಪೋರ ದಿ ನ್ಯೂಯಾರ್ಕರ್ ನ ಏಪ್ರಿಲ್ 23 ರ ಸಂಚಿಕೆಗೆ ಬರೆದ ಲೇಖನದ ಕೆಲ ಸಾಲುಗಳನ್ನು ತನ್ನ ಅಂಕಣದಲ್ಲಿ ಯಥಾವತ್ತಾಗಿ ಬಳಸಿಕೊಂಡಿದ್ದು ಮತ್ತು ಮೂಲ ಲೇಖಕಿಯ ಹೆಸರು ಹೇಳದೆ ಅವು ತನ್ನದೇ ಸಾಲುಗಳು ಎಂಬಂತೆ ಬರೆದದ್ದು ಅವರ ಮೇಲಿರುವ ಆರೋಪ.

ತನ್ನ ಟೈಮ್ (ಆಗಸ್ಟ್ 20ರ ಸಂಚಿಕೆ) ಅಂಕಣದಲ್ಲಿ ಝಕಾರಿಯಾ ಬರೆದದ್ದು:

“Adam Winkler, a professor of constitutional law at UCLA, documents the actual history in Gunfight: The Battle over the Right to Bear Arms in America. Guns were regulated in the U.S. from the earliest years of the Republic. Laws that banned the carrying of concealed weapons were passed in Kentucky and Louisiana in 1813. Other states soon followed: Indiana in 1820, Tennessee and Virginia in 1838, Alabama in 1839 and Ohio in 1859. Similar laws were passed in Texas, Florida and Oklahoma. As the governor of Texas (Texas!) explained in 1893, the “mission of the concealed deadly weapon is murder. To check it is the duty of every self-respecting, law-abiding man.”

ಲೆಪೋರ ಏಪ್ರಿಲ್ 23 ರ ನ್ಯೂಯಾರ್ಕರ್ ನಲ್ಲಿ ಬರೆದದ್ದು:

“As Adam Winkler, a constitutional-law scholar at U.C.L.A., demonstrates in a remarkably nuanced new book, “Gunfight: The Battle Over the Right to Bear Arms in America,” firearms have been regulated in the United States from the start. Laws banning the carrying of concealed weapons were passed in Kentucky and Louisiana in 1813, and other states soon followed: Indiana (1820), Tennessee and Virginia (1838), Alabama (1839), and Ohio (1859). Similar laws were passed in Texas, Florida, and Oklahoma. As the governor of Texas explained in 1893, the “mission of the concealed deadly weapon is murder. To check it is the duty of every self-respecting, law-abiding man.”

ಎರಡೂ ಬರಹಗಳನ್ನು ಅವಲೋಕಿಸಿದರೆ ಝಕಾರಿಯ ಎಡವಿದ್ದೆಲ್ಲಿ ಎನ್ನುವುದು ಗೊತ್ತಾಗುತ್ತೆ. ಲೆಪೋರ ತಮ್ಮ ಲೇಖನದಲ್ಲಿ ಆಡಮ್ ವಿಂಕ್ಲರ್ ಪುಸ್ತಕವನ್ನು ಹೆಸರಿಸುತ್ತಾ ಅಮೆರಿಕಾದ ಗನ್ ಸಂಸ್ಕೃತಿ ಬಗ್ಗೆ ಬರೆಯುತ್ತಾರೆ. ಝಕಾರಿಯಾ ತನ್ನ ಅಂಕಣದಲ್ಲಿ ಅದೇ ಮಾತುಗಳನ್ನು, ಅಲ್ಲಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ, ಬಳಸಿಕೊಳ್ಳುತ್ತಾರೆ. ಉತ್ಸಾಹಿ ಬ್ಲಾಗರ್ ಗಳು ಝಕಾರಿಯಾನ ಯಡವಟ್ಟನ್ನು ಹೊರತಂದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಝಕಾರಿಯಾನ ಸಂಪಾದಕರು/ಮಾಲೀಕರು ಅವರನ್ನು ಅಮಾನತ್ತು ಮಾಡಿದರು. ಝಕಾರಿಯಾವರನ್ನು ಅಮಾನತ್ತು ಮಾಡುವಾಗ ಟೈಮ್ ಮ್ಯಾಗಜೀನ್ ಹೇಳಿದ್ದು ‘ನಮ್ಮಲ್ಲಿ ಪ್ರಕಟವಾಗುವ ಬರಹಗಳಲ್ಲಿ ಅಂಕಿ ಅಂಶಗಳು ಪಕ್ಕಾ ಇದ್ದರಷ್ಟೇ ಸಾಲದು, ಬರವಣಿಗೆ ಕೂಡಾ ಸ್ವತಃ ಲೇಖಕರದ್ದೇ ಆಗಿರಬೇಕು’. ಝಕಾರಿಯಾ ಕೂಡ ಮರು ಮಾತಿಲ್ಲದೆ ತನ್ನಿಂದ ‘ಟೆರಿಬಲ್ ಮಿಸ್ಟೇಕ್’’ ಆಗಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಕನ್ನಡದ ಕೆಲ ಪತ್ರಿಕೆಗಳು ಸೇರಿದಂತೆ ಭಾರತದ ಬಹುತೇಕ ಪತ್ರಿಕೆಗಳಲ್ಲಿ ಝಕಾರಿಯಾರ ಸುದ್ದಿ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಯಿತು. ಟೈಮ್ ಮತ್ತು ಸಿಎನ್ಎನ್ ಸಂಸ್ಥೆಗಳಿಂದ ಅಮಾನತ್ತುಗೊಂಡ ಝಕಾರಿಯಾ ಮೂಲತಃ ಭಾರತೀಯ ಎನ್ನುವುದು ಇಷ್ಟರ ಮಟ್ಟಿಗೆ ಸುದ್ದಿಯಾಗಲು ಕಾರಣ. ಅಷ್ಟೇ ಅಲ್ಲ ಬಹುತೇಕ ಪತ್ರಕರ್ತರಿಗೆ ಝಕಾರಿಯಾನ ಕರಿಯರ್ ಆಕರ್ಷಣೀಯ. ಕೇವಲ 28 ರ ಹರೆಯಕ್ಕೆ ಅಮೆರಿಕಾದ ಮ್ಯಾಗಜೀನ್ ಫಾರಿನ್ ಅಫೇರ್ಸ್ ಸಂಪಾದಕರಾಗಿದ್ದು ಝಕಾರಿಯ.

ಮುಂಬೈನಲ್ಲಿ 1964ರಲ್ಲಿ ಹುಟ್ಟಿ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು. ನಂತರ ಹಾರ್ವರ್ಡ್ ವಿ.ವಿಯಿಂದ ಪಿಎಚ್ ಡಿ ಗಳಿಸಿದರು. ನಂತರದ ದಿನಗಳಲ್ಲಿ ಅವರ ಕರಿಯರ್ ಗ್ರಾಫ್ ಸದಾ ಏರುಗತಿಯಲ್ಲಿಯೇ. ವಿದೇಶಾಂಗ ನೀತಿ ನಿರೂಪಣೆಯಲ್ಲಿ ಪ್ರಭಾವ ಬೀರಬಲ್ಲ ಜಗತ್ತಿನ ಕೆಲವೇ ಕೆಲವು ಚಾಣಾಕ್ಷರ ಪೈಕೆ ಝಕಾರಿಯಾ ಒಬ್ಬರು. ಟೈಮ್ ನಲ್ಲಿ ಒಂದು ಕಾಲಂ. ಸಿಎನ್ಎನ್ ನಲ್ಲಿ GPS – Global Public Square ಎಂಬ ಶೋ. ನಾನಾ ದೇಶಗಳ ಅಗ್ರಗಣ್ಯ ನಾಯಕರನ್ನೆಲ್ಲಾ ಸಂದರ್ಶಿಸಿದ ಖ್ಯಾತಿ, ಅನುಭವ ಅವರದು. ಇದೇ ವರ್ಷ ಹೊರಬಂದ ದಿ ಪೋಸ್ಟ್ ಅಮೆರಿಕನ್ ವರ್ಲ್ಡ್ ಸೇರಿದಂತೆ ಇವರ ನಾಲ್ಕು ಪುಸ್ತಕಗಳು ಪ್ರಪಂಚದ ಹಲವು ಬುದ್ಧಿಜೀವಿಗಳಿಗೆ ಆಕರಗಳಾಗಿವೆ. ಭಾರತ ಸರಕಾರ ಅವರಿಗೆ ಪದ್ಮ ಭೂಷಣ ಗೌರವ ನೀಡಿದೆ.

ಇಷ್ಟೆಲ್ಲಾ ಆಗಿರುವ ಝಕಾರಿಯಾ ತನ್ನ ಲೇಖನಕ್ಕೆ ಮತ್ತೊಬ್ಬರ ಬರಹದ ಸಾಲುಗಳನ್ನು ಬಳಸಿಕೊಳ್ಳುವ ಅಗತ್ಯವೇನಿತ್ತು? ನಂತರ ಕ್ಷಮೆ ಕೋರುವ ಅನಿವಾರ್ಯತೆ ಏಕೆ ಸೃಷ್ಟಿಸಿಕೊಳ್ಳಬೇಕಿತ್ತು? ಪ್ರಪಂಚದ ಉತ್ಕೃಷ್ಟ ವಿಶ್ವವಿದ್ಯಾನಿಲಯಗಳಲ್ಲಿ ಓದಿದ, ಅಗ್ರಮಾನ್ಯ ಚಿಂತಕರಲ್ಲಿ ಒಬ್ಬರೆನಿಸಿಕೊಂಡ ಝಕಾರಿಯಾ ಒಂದೇ ಒಂದು ಪ್ಯಾರಾವನ್ನು ಮತ್ತೊಬ್ಬರಿಂದ ಎರವಲು ಪಡೆದು ಹಳ್ಳಕ್ಕೆ ಬಿದ್ದರಲ್ಲಾ…

ಬರೆಯುವ ಉಮ್ಮೇದಿಯಲ್ಲಿ, ಮತ್ತೊಬ್ಬರ ಲೇಖನವನ್ನು ರೆಫರ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೆ? ಹಾಗೂ ಆಗಿರಬಹುದು. ಆ ಲೇಖಕಿ ತನ್ನ ಲೇಖನದಲ್ಲಿ ಮತ್ತೊಬ್ಬ ಗ್ರಂಥಕರ್ತನ ಬಗ್ಗೆ ಉಲ್ಲೇಖಿಸುವಾಗ ಬಳಸಿದ ಪದಗಳನ್ನು ಅದೇ ರೀತಿ ಎರವಲು ಪಡೆದರೆ ಏನಾದೀತು, ಎಂಬ ಆ ಕ್ಷಣದ ಉಡಾಫೆಯೂ ಈ ಸಂದಿಗ್ಧಕ್ಕೆ ತಂದು ನಿಲ್ಲಿಸಿರಲಿಕ್ಕೆ ಸಾಕು. ಆದರೆ, ಈ ಒಂದು ಪ್ರಕರಣದಿಂದ ಝಕಾರಿಯಾ ಸಂಪಾದಿಸಿದ್ದ ಮನ್ನಣೆ, ಜನಪ್ರಿಯತೆಗೆ ಕಪ್ಪು ಚುಕ್ಕಿ ತಾಕಿತಲ್ಲ!

ಇದೇ ಸಂದರ್ಭದಲ್ಲಿ ಥಟ್ಟನೆ ಹೋಲಿಕೆಗೆ ನೆನಪಾಗುವುದು ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಸುಶೀಲ್ ಕುಮಾರ್ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿಯ ಕಿವಿ ಕಚ್ಚಿದ ಎನ್ನುವ ಪ್ರಸಂಗ.

ಪಂದ್ಯದ ವೇಳೆಯಲ್ಲಿಯೇ ಎದುರಾಳಿ ರೆಫ್ರಿಗೆ ದೂರು ಕೊಟ್ಟ, ಆದರೆ ರೆಫ್ರಿ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರದ ವೀಡಿಯೋ ತುಣುಕುಗಳಲ್ಲಿ ಈ ಆರೋಪ ನಿಜ ಇರಬಹುದೇ ಎಂಬ ಅನುಮಾನಕ್ಕೆ ಎಡೆಮಾಡುವ ದೃಶ್ಯಗಳಿವೆ. ಬೆಳ್ಳಿ ಗೆದ್ದ ಹುಡುಗ, ಎದುರಾಳಿಯ ಕಿವಿ ಏಕೆ ಕಚ್ಚಬೇಕಿತ್ತು? ಈ ಸಂಭ್ರಮದ ಕ್ಷಣದಲ್ಲಿ ಒಂದು ವಿಷಾದ ಹಾಗೇ ಉಳಿದು ಬಿಡುತ್ತದೆ.

ಎರಡೂ ಘಟನೆಗಳು ಮೇಲ್ನೋಟಕ್ಕೆ ಭಿನ್ನ ಎನಿಸಬಹುದು. ಆದರೆ ಒಂದಂತೂ ಸತ್ಯ. ಝಕಾರಿಯಾಗೆ ತಾವು ಮಾಡುತ್ತಿರುವ ತಪ್ಪಿನ ಅರಿವಿತ್ತು. ಅಂತೆಯೇ ಸುಶೀಲ್ ಕುಮಾರ್ ಗೂ. ಗೊತ್ತಿದ್ದೂ ಯಡವಟ್ಟು ಮಾಡಿಕೊಂಡದ್ದೇಕೆ? ಎರಡು ಪ್ರಕರಣಗಳಲ್ಲಿ ಕಂಡುಬರುವ ಸಮಾನ ಅಂಶ – ಇಬ್ಬರೂ ಆ ಒಂದು ಕ್ಷಣ ಮೈ ಮರೆತರು.

ಇಬ್ಬರ ತಪ್ಪುಗಳಿಂದ ಕಲಿಯಬೇಕಾದವರು ಬೇಕಾದಷ್ಟು ಮಂದಿ ಇದ್ದಾರೆ. ಕನ್ನಡ ಬರಹಗಾರರ ಮತ್ತು ಮಾಧ್ಯಮ ಲೋಕದಲ್ಲಿ ಒಂದು ಪ್ಯಾರಾ ಕಾಪಿ ಮಾಡಿದ್ದು ಹೋಗಲಿಬಿಡಿ, ಇಡೀ ಪುಸ್ತಕವನ್ನೇ ಬೇರೆಯವರಿಂದ ಅನುವಾದ ಮಾಡಿಸಿ ತಮ್ಮದು ಎಂದು ಪ್ರಿಂಟ್ ಮಾಡಿಸಿಕೊಂಡವರಿದ್ದಾರೆ. ಮತ್ತೊಂದೆಡೆ ತಾವೇ ಬರೆದ ಬರಹಕ್ಕೆ ಮತ್ತೊಬ್ಬರ ಹೆಸರು ಕೊಟ್ಟು ಬಾಣ ಬಿಟ್ಟವರಿದ್ದಾರೆ. ಅಮಾಯಕ ಹೆಣ್ಣು ಮಕ್ಕಳ ಮಾನವನ್ನು ಟಿಆರ್ ಪಿಗಾಗಿ ಹರಾಜಿಗಿಟ್ಟು ಮೌಲ್ಯಗಳನ್ನೇ ಹೀರಿದವರೂ ಇದ್ದಾರೆ.

(ಚಿತ್ರಕೃಪೆ: ವಿಕಿಪೀಡಿಯ)

One thought on “ಝಕಾರಿಯಾ ಕಾಪಿಮಾಡಿದ ಪ್ಯಾರಾಗ್ರಾಫ್ ಮತ್ತು ಕಿವಿ ಕಚ್ಚಿದ ಸುಶೀಲ್ ಕುಮಾರ್!

  1. Naveen

    Its just the over enthusiasm of the bloggers and twitteratti to lynch the celebs that caused this crisis. Actually Fareed Zakaria has not committed any mistake. He has referred a sentence from a book wuoting the authors name. And Lepor also did the same thing. Those sentences are not invention of the Lepor,

    If we want to quote the lines from the book written by Adam Winkler can we take permission from Lepor every time as she first quoted that.

    If you sit and anlayse this is the case. But the lynch mob mentality of the social network who take pride in finding out every minute mistakes of the celeb journos, businessmens, sportspersons etc created this controversy and subsequent apology and dismissals.

    We also have such mobs who are more interested in knowing what Rajdeeo Sardesai drinks, how Sagarika Ghose mentioned Orange instead of Saffron in color of indian flag etc.

    But the good and commendable thing is the zero tolerance shown by the Time and CNN towards the “mistake” of Farheed Zakaria. Can we expect same zero tolerance from the Indian media houses?

    Thanks,
    Naveen
    Pune

    Reply

Leave a Reply to Naveen Cancel reply

Your email address will not be published. Required fields are marked *