ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ಫಲಿತಾಂಶ ಪ್ರಕಟಣೆ

ಸ್ನೇಹಿತರೇ,

ಈ ಬಾರಿ ವರ್ತಮಾನ್.ಕಾಮ್ ಮೂಲಕ ಪ್ರಾಯೋಜಿಸಿದ್ದ ಈ ಕಥಾ ಸ್ಪರ್ಧೆಗೆ ನಾನು ವೈಯಕ್ತಿಕವಾಗಿ ಊಹಿಸಿದ್ದಕ್ಕಿಂತ ಹೆಚ್ಚು ಕತೆಗಳು ಬಂದು ಮನಸ್ಸಿಗೆ ಖುಷಿಯಾಗಿತ್ತು. ಇಂಟರ್ನೆಟ್‌ನಂತಹ ಸೀಮಿತ ವಲಯದಲ್ಲಿ ಪ್ರಕಟಿಸಿದ ಸ್ಪರ್ಧೆಯ ವಿವರಗಳಿಗೆ ಎಷ್ಟು ಕತೆಗಳು ಬರಬಹುದು ಎನ್ನುವುದು ಒಂದು ರೀತಿ ಅಸ್ಪಷ್ಟವಾಗಿತ್ತು. ಆದರೆ ನಾವು ಪ್ರೆಸ್‌ಕ್ಲಬ್ ಮೂಲಕ ಕಳುಹಿಸಿದ ಪತ್ರಿಕಾ ಪ್ರಕಟಣೆಯನ್ನು ಪ್ರಜಾವಾಣಿಯವರು ಪ್ರಕಟಿಸಿದ್ದರು. ಅವರಿಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ. ಆ ಪ್ರಕಟಣೆ ಬೇರೆ ಇನ್ಯಾವ ಪತ್ರಿಕೆಗಳಲ್ಲಿ ಬಂದಿತ್ತೊ ಗೊತ್ತಾಗಲಿಲ್ಲ.

ಒಟ್ಟಾರೆಯಾಗಿ 70 ಕ್ಕೂಹೆಚ್ಚು ಕತೆಗಳು ನಮಗೆ ಬಂದವು. ಕತೆಗಳನ್ನು ಕಳುಹಿಸಿ ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಈ ಎಲ್ಲಾ ಲೇಖಕರಿಗೂ ಹೃತ್ಫೂರ್ವಕ ಧನ್ಯವಾದಗಳು. ಅದರಲ್ಲಿ ನಮ್ಮ ಕಥಾ ಸ್ಪರ್ಧೆಯ ನಿಬಂಧನೆಗಳಿಗೆ ಒಳಪಟ್ಟಿದ್ದ ಕತೆಗಳು ಸರಿಯಾಗಿ 50. ಕಥಾಸ್ಪರ್ಧೆಗೆ ತೀಪ್ರುಗಾರರನ್ನು ಹುಡುಕುವ ಸಂದರ್ಭದಲ್ಲಿ ನಮ್ಮ ಬಳಗದ ಬಿ.ಶ್ರೀಪಾದ್ ಭಟ್ಟರು ಕನ್ನಡದ ಖ್ಯಾತ ಕತೆಗಾರ ಕೇಶವ ಮಳಗಿಯವರನ್ನು ಸಂಪರ್ಕಿಸಿ ಅವರನ್ನು ಈ ಕಥಾ ಸ್ಪರ್ಧೆಯ ತೀರ್ಪುಗಾರರಾಗಲು ಕೋರಿದ್ದರು. ಅವರ ಮನವಿಗೆ ಸ್ಪಂದಿಸಿ ಎಲ್ಲಾ ಕತೆಗಳನ್ನು ಓದಿ ತಮ್ಮ ಅಭಿಪ್ರಾಯ ಮತ್ತು ಉತ್ತಮ ಕತೆಗಳ ಪಟ್ಟಿಯನ್ನು ನೀಡಲು ಒಪ್ಪಿಕೊಂಡ ಕೇಶವ ಮಳಗಿಯವರಿಗೆ ನಾನು ವರ್ತಮಾನ ಬಳಗದ ಪರವಾಗಿ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಗಾಂಧಿ ಜಯಂತಿಗೆ ಒಂದು ವಾರದ ಮೊದಲೇ ಪಟ್ಟಿ ಸಿದ್ದಮಾಡಿ ಮತ್ತು ತಮ್ಮ “ತೀರ್ಪುಗಾರರ ಮಾತು“ಗಳನ್ನು ಬರೆದುಕೊಟ್ಟ ಕೇಶವ ಮಳಗಿಯವರ ಶಿಸ್ತನ್ನು ಅಭಿನಂದಿಸುತ್ತ, ಈ ಕಾರ್ಯಕ್ಕೆ ಅವರು ಕೊಟ್ಟ ಸಮಯಕ್ಕಾಗಿ ಅವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೇ, ಕೇಶವ ಮಳಗಿಯವರನ್ನು ಸಂಪರ್ಕಿಸುವುದರ ಜೊತೆಗೆ ಈ ಸ್ಪರ್ಧೆಯ ಒಂದಷ್ಟು ಇತರೆ ಜವಾಬ್ದಾರಿಗಳನ್ನು ಹೊತ್ತ ಬಿ.ಶ್ರೀಪಾದ್ ಭಟ್ಟರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.

ಕಥಾ ಸ್ಪರ್ಧೆಯ ಬಹುಮಾನಿತ ಕತೆಗಳ ಮತ್ತು ಲೇಖಕರ ಪಟ್ಟಿ ಹೀಗಿದೆ:

ಬಹುಮಾನಿತ ಕತೆಗಳನ್ನು ಬರೆದ ವಿಜೇತರಿಗೆ ಅಭಿನಂದನೆಗಳು. ಹಾಗೆಯೇ, ಕತೆಗಳನ್ನು ಕಳುಹಿಸಿ ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಲೇಖಕರಿಗೂ ಮತ್ತೊಮ್ಮೆ ಧನ್ಯವಾದಗಳು.

ಕೇಶವ ಮಳಗಿಯವರು ಈ ಕಥಾಸ್ಪರ್ಧೆಯ ಬಗ್ಗೆ ಮತ್ತು ತಾವು ಉತ್ತಮ ಕತೆಗಳೆಂದು ಆಯ್ಕೆ ಮಾಡಿದ ಕತೆಗಳ ಬಗ್ಗೆ “ಕಥೆಗಳಿಗೆ ಇರುವ ಆಕರ್ಷಣೆಯೇ ಅಂಥದ್ದು” ಎನ್ನುವ ಲೇಖನ ಬರೆದಿದ್ದಾರೆ. ದಯವಿಟ್ಟು ಗಮನಿಸಿ.

ಹಾಗೆಯೇ, ಈ ತಿಂಗಳಿನಲ್ಲಿ ಯಾವುದಾದರೂ ಒಂದು ದಿನ ಸಾಧ್ಯವಾದರೆ ಒಂದು ಪುಟ್ಟ ಸಭೆ ಮಾಡಿ ಕಥಾಸ್ಪರ್ಧೆಯಲ್ಲಿ ವಿಜೇತರಾದವರನ್ನೆಲ್ಲ ಅಲ್ಲಿಗೆ ಕರೆಸಿ ಅಭಿನಂದಿಸಬೇಕೆಂದು ನಮ್ಮ ಬಳಗ ಅಂದುಕೊಂಡಿದೆ. ಅಷ್ಟರೊಳಗೆ ಬಹುಮಾನಿತ ಕತೆಗಳನ್ನು ಮತ್ತು ಕಥಾ ಸ್ಪರ್ಧೆಗೆ ಬಂದಿದ್ದ ಇನ್ನೊಂದಷ್ಟು ಉತ್ತಮ ಕತೆಗಳನ್ನು ಸೇರಿಸಿ ಈ ನೆನಪಿನಲ್ಲಿ ಒಂದು ಕಥಾ-ಸಂಕಲನ ತರುವ ಯೋಜನೆ ಹಾಕಿಕೊಂಡಿದ್ದೇವೆ. ಹಾಗಾಗಿ ದಿನಾಂಕದ ಬಗ್ಗೆ ಒಂದಷ್ಟು ಅಸ್ಪಷ್ಟತೆಯಿದೆ. ಅದು ಅಂತಿಮವಾದ ತಕ್ಷಣ ಕತೆಗಾರರಿಗೆ ಮತ್ತು ನಮ್ಮ ಓದುಗರಿಗೆ ತಿಳಿಸಲಾಗುತ್ತದೆ.

ಅಂದ ಹಾಗೆ, ಮೇಲಿನ ಬಹುಮಾನಿತ ಕತೆಗಳನ್ನು ಇನ್ನು ಮುಂದೆ ವಾರಕ್ಕೊಂದು ಕತೆಯಂತೆ ಪ್ರತಿ ಶನಿವಾರ ವರ್ತಮಾನ.ಕಾಮ್‌ನಲ್ಲಿ ಪ್ರಕಟಿಸಲಾಗುವುದು.

ಎಲ್ಲರಿಗೂ ಧನ್ಯವಾದಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

3 thoughts on “ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ಫಲಿತಾಂಶ ಪ್ರಕಟಣೆ

  1. shivu k

    ವಿಜೇತರಿಗೆ ಅಭಿನಂದನೆಗಳು. ಗೆಳೆಯ ಶ್ರೀನಿಧಿ ಡಿ.ಎಸ್ ರವರಿಗೆ ಅಭಿನಂದನೆಗಳು.

    Reply

Leave a Reply

Your email address will not be published. Required fields are marked *