ಮೂರು ದಿನಗಳ ಉಪವಾಸ ಸತ್ಯಾಗ್ರಹ ಇಂದಿನಿಂದ…

ಸ್ನೇಹಿತರೇ,

ನವೀನ್ ಸೂರಿಂಜೆಯ ಮೇಲಿರುವ ಸುಳ್ಳು ಆರೋಪಗಳನ್ನು ಕೈಬಿಡಬೇಕೆಂದು ಮತ್ತು ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ” ಹಮ್ಮಿಕೊಂಡಿರುವ ಮೂರು ದಿನಗಳ ಉಪವಾಸ ಸತ್ಯಾಗ್ರಹ ಇಂದಿನಿಂದ (ಜನವರಿ 5, 2013) ಆರಂಭವಾಗಿದೆ. ಇನ್ನೊಂದೆರಡು ಗಂಟೆಗಳಲ್ಲಿ ಉಪವಾಸ ಸತ್ಯಾಗ್ರಹದ ವೇದಿಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿದ್ಧವಾಗಲಿದೆ. ಸುಮಾರು ಹತ್ತು ಗಂಟೆಯ ವೇಳೆಗ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿರುವ ಹಲವಾರು ಸಂಘಟನೆಗಳ ಕಾರ್ಯಕರ್ತರು, ಪತ್ರಕರ್ತರು, ಲೇಖಕರು, ಪ್ರಜಾಪಭುತ್ವವಾದಿಗಳು ಅಲ್ಲಿ ಸೇರಲಿದ್ದಾರೆ.

ನಾವು ಒಂದಷ್ಟು ಜನ ಮೂರೂ ದಿನಗಳ ಕಾಲ ಉಪವಾಸ ಮಾಡಲಿದ್ದೇವೆ ಮತ್ತು ಹಗಲು-ರಾತ್ರಿ ಸ್ವಾತಂತ್ರ್ಯ ಉದ್ಯಾನದ ವೇದಿಕೆಯಲ್ಲಿಯೇ ಕೂರಲಿದ್ದೇವೆ. ದಿನಪೂರ್ತಿ ಅನೇಕ ಮಂದಿ ಉಪವಾಸ ಕೂರಲಿದ್ದಾರೆ.

ಮತ್ತೊಮ್ಮೆ ಇದನ್ನು ನಮ್ಮ ಓದುಗರ ಗಮನಕ್ಕೆ ತರಬಯಸುತ್ತೇನೆ:

ಇದು ನವೀನ್ ಸೂರಿಂಜೆ ವಿರುದ್ಧ ಪೋಲಿಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿರುವ ಆರೋಪ ಪಟ್ಟಿ: ಅಕ್ರಮ ಕೂಟ (ಐಪಿಸಿ 143), ದೊಂಬಿ (147), ಮಾರಕಾಸ್ತ್ರಗಳಿಂದ ದೊಂಬಿ (148), ಅಕ್ರಮ ಪ್ರವೇಶ (447), ಮನೆ ಮೇಲೆ ದಾಳಿ (448), ಅಕ್ರಮವಾಗಿ ಮತ್ತೊಬ್ಬರನ್ನು ಹಿಡಿದು ನಿಲ್ಲಿಸುವುದು (341), ಪ್ರಚೋದನೆ ಇಲ್ಲದೆ ಮಾರಕಾಸ್ತ್ರಗಳಿಂದ ಹಲ್ಲೆ (323/324), ಬೆದರಿಕೆ (506), ಉದ್ದೇಶ ಪೂರ್ವಕ ದಾಳಿ ಮತ್ತು ಶಾಂತಿ ಭಂಗ (504), ಮಹಿಳೆ ಮೇಲೆ ದಾಳಿ (354) ಮತ್ತು ಡಕಾಯತಿ (395).

Charges against Naveen Soorinje by the police: unlawful assembly [IPC section 143], rioting [147], rioting with deadly weapons [148], criminal trespass [447], house trespass [448], wrongful restraint [341], voluntarily causing hurt by dangerous weapons or means [323/324], criminal intimidation [506], intentional insult with intent to provoke breach [504], assault or criminal force against women with intent [354] and dacoity [395].

ಅಂದ ಹಾಗೆ, ಮುಂದಿನ ಮೂರು ದಿನಗಳ ಕಾಲ ನಾನು ಬಹುಶಃ ಕಂಪ್ಯೂಟರ್‌ನಿಂದ ದೂರ ಇರುವುದರಿಂದ ನಮ್ಮ ವರ್ತಮಾನ.ಕಾಮ್‌ನಲ್ಲಿ ಈ ಮೂರು ದಿನಗಳ ಕಾಲ ಯಾವುದೇ ಲೇಖನಗಳು ಪ್ರಕಟವಾಗುವುದಿಲ್ಲ. ನವೀನ್ ಸೂರಿಂಜೆಯ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಓದುಗರಿಗೆ ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ. ನಿಮಗೆ ವಿಷಯದ ಗಾಂಭೀರ್ಯತೆ ಮತ್ತು ವಿಷಮತೆ ಅರ್ಥವಾಗಿದೆ. ಹಾಗಾಗಿ, ಬೆಂಗಳೂರಿನ ಸ್ವಾತಂತ್ಯ ಉದ್ಯಾನದಲ್ಲಿ ಕೈಗೊಂಡಿರುವ ಈ ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಬೆಂಬಲ ಮತ್ತು ಆಗಮನದ ನಿರೀಕ್ಷೆಯಲ್ಲಿ…

ರವಿ ಕೃಷ್ಣಾರೆಡ್ಡಿ


ಇಂದಿನ ಆರಂಭವಾಗಲಿರುವ ಉಪವಾಸ ಸತ್ಯಾಗ್ರಹದ ಕುರಿತು ನೆನ್ನೆ ನಡೆದ ಪತ್ರಿಕಾಗೋಷ್ಟಿಯ ಬಗ್ಗೆ ಇಂದಿನ ಪತ್ರಿಕೆಗಳಲ್ಲಿ ಬಂದಿರುವ ಕೆಲವು ವರದಿಗಳು:

One India Kannada : ಪತ್ರಕರ್ತನ ಬಿಡುಗಡೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ : ಸೂರಿಂಜೆ ಅಕ್ರಮ ಬಂಧನ: 5 ರಿಂದ ಉಪವಾಸ ಧರಣಿ
Prajavani-5-1-13

ಉದಯವಾಣಿ: ಪತ್ರಕರ್ತರ ಅಕ್ರಮ ಬಂಧನ: ಇಂದಿನಿಂದ 3 ದಿನ ಉಪವಾಸ
udayavani-5-1-13

ವಿಜಯ ಕರ್ನಾಟಕ : ಪತ್ರಕರ್ತನ ಬಂಧನ ವಿರೋಧಿಸಿ ನಿರಶನ ಇಂದಿನಿಂದ
vijaykarnataka-5-1-13

ಕನ್ನಡ ಪ್ರಭ : ಪತ್ರಕರ್ತರ ಬಂಧನ : ಇಂದಿನಿಂದ ಉಪವಾಸ
kanaadaprabha-5-1-13

ವಾರ್ತಾಭಾರತಿ : ನವೀನ್ ಸೂರಿಂಜೆ ಬಿಡುಗಡೆಗೆ ಆಗ್ರಹಿಸಿ ಇಂದಿನಿಂದ ಪತ್ರಕರ್ತರ ಉಪವಾಸ ಸತ್ಯಾಗ್ರಹ 

ವಿಜಯವಾಣಿ : ಪತ್ರಕರ್ತರ ಸೆರೆ ಖಂಡಿಸಿ ಇಂದಿನಿಂದ ಧರಣಿ
Vijayavani-5-1-13

The Hindu : Journalists to go on three-day fast seeking Naveen Soorinje’s release 

Deccah Herald : Three-day fast to demand scribe’s release 

Deccan Chronicle :

daijiworld.com : Naveen Soorinje Arrest – Bangalore Journos Go on Hunger Strike

2 thoughts on “ಮೂರು ದಿನಗಳ ಉಪವಾಸ ಸತ್ಯಾಗ್ರಹ ಇಂದಿನಿಂದ…

Leave a Reply

Your email address will not be published. Required fields are marked *