ಹರ್ಷ ಮಂದೇರ್ ಬರಹ – 1: ಹಾಜರಾತಿಪಟ್ಟಿ ಕೇಳಿದರೆ ಗಂಟುಮೂಟೆ ಕಟ್ಟಿ

ಹೊಸ ಬರಹ ಸರಣಿ:

ಕೆ. ಅಕ್ಷತಾ ಅವರ ಅಹರ್ನಿಶಿ ಪ್ರಕಾಶನ ಸದ್ಯದಲ್ಲೇ ಹರ್ಷ ಮಂದೇರ್ ಅವರ ಆಯ್ದ ಬರಹಗಳನ್ನು ಕನ್ನಡದಲ್ಲಿ ಹೊರತರುತ್ತಿದೆ. ಕನ್ನಡದ ಹಿರಿಯ ಚಿಂತಕರಾದ ಜಿ.ರಾಜಶೇಖರ್ ಮತ್ತು ಕೆ. ಫಣಿರಾಜ್ ಬರಹಗಳನ್ನು ಸಂಪಾದಿಸಿದ್ದಾರೆ. ಪುಸ್ತಕವಾಗಿ ಪ್ರಕಟವಾಗುವ ಮುನ್ನ ಕೆಲ ಲೇಖನಗಳು ವರ್ತಮಾನದಲ್ಲಿ ಪ್ರಕಟಮಾಡಲು ಪ್ರಕಾಶಕಿ ಅನುಮತಿ ನೀಡಿದ್ದಾರೆ. ವಾರಕ್ಕೊಂದು ಬರಹ ಇಲ್ಲಿ ಪ್ರಕಟವಾಗಲಿದೆ. ಮೂಲ ಲೇಖಕ ಹರ್ಷ ಮಂದೇರ್, ಕೃತಿಯ ಸಂಪಾದಕರಾದ ಜಿ.ರಾಜಶೇಖರ್, ಫಣಿರಾಜ್, ಲೇಖನಗಳ ಅನುವಾದಕರಿಗೆ ಮತ್ತು ಅಕ್ಷತಾ ಅವರಿಗೆ ವರ್ತಮಾನ ಬಳಗದ ಧನ್ಯವಾದಗಳು. ಹೊಸ ಲೇಖನ ಸರಣಿ ಆರಂಭವಾಗಿದೆ.
– ವರ್ತಮಾನ

ಹರ್ಷ ಮಂದೇರ್ ಪರಿಚಯ:Harsha Manderಹರ್ಷ ಮಂದೇರ್ ದಿ ಹಿಂದು ಪತ್ರಿಕೆ ಓದುಗರಿಗೆ ಪರಿಚಿತ ಹೆಸರು. ಎರಡು ದಶಕಗಳ ಕಾಲ ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಇವರು ಸದ್ಯ ಲೇಖಕ ಮತ್ತು ಅಭಿವೃದ್ಧಿ ಚಿಂತಕ. ಸಮಾಜದ ಒಳಿತಿಗಾಗಿ ಹಲವು ಹೋರಾಟಗಳನ್ನು ಹುಟ್ಟುಹಾಕಿದವರು. ಜಾತ್ಯತೀತ, ನೆಮ್ಮದಿಯ ಹಾಗೂ ನ್ಯಾಯಸಮ್ಮತ ಸಮಾಜಕ್ಕಾಗಿ ‘ಅಮನ್ ಬಿರ್ದಾರಿ’, ‘ನ್ಯಾಯಾಗ್ರಹ’ ಹಾಗೂ ಬೀದಿ ಮಕಳು ಮತ್ತು
ಸೂರಿಲ್ಲದವರಿಗಾಗಿ ‘ದಿಲ್ ಸೆ’ ಎಂಬ ಹೋರಾಟಗಳನ್ನು ಮುನ್ನಡೆಸಿದರು. ಅಷ್ಟೇ ಅಲ್ಲ, ದಲಿತರ, ಗುಡ್ಡಗಾಡು ಜನರ ಮತ್ತು ಅಂಗವಿಕಲರ ಒಳಿತಿಗಾಗಿ ವಿವಿಧ ಕಾರ್ಯಕ್ರಮಗಳಲ್ಲಿ
ತೊಡಗಿಸಿಕೊಂಡಿದ್ದಾರೆ. ಮಂದೇರ್ ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟೂಟ್ ಆಫ್ ಮ್ಯಾನೆಜ್ಮೆಂಟ್, ದೆಹಲಿಯ ಸೆಂಟ್ ಸ್ಟೀಫನ್ಸ್ ಕಾಲೇಜು, ಸಾನ್ ಫ್ರಾನ್ಸಿಸ್ಕೊದ ಕ್ಯಾಲಿಫೋನರ್ಿಯಾ ಇನ್ಸಿಟಿಟೂಟ್ ಆಫ್ ಇಂಟಿಗ್ರಲ್ ಸ್ಟಡೀಸ್, ಮಸ್ಸೂರಿಯ ಎಲ್ ಬಿ ಎಸ್ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೀಷನ್ ಮತ್ತು ನೆಲ್ಸನ್ ಮಂಡೇಲ ಸೆಂಟರ್ ಫರ್ ಪೀಸ್ ಅಂಡ್ ಕಾನ್ಫ್ಲಿಕ್ಟ್
ರೆಸಲೂಷನ್ ಸಂಸ್ಥೆಗಳಲ್ಲಿ ಪಾಠ ಮಾಡಿದ್ದಾರೆ.

ಅವರ ಕೃತಿಗಳು:
Unheard Voices: Stories of Forgotten Lives
Fear and Forgiveness: The Aftermath of Massacre
The Ripped Chest: Public Policy and Poor in India
Untouchability in Rural India (co-authored)

ಅನುವಾದಕರ ಪರಿಚಯ:
ವಿ.ಬಿ .ತಾರಕೇಶ್ವರ -ಹೈದರಾಬಾದ್ ನ ಇ.ಎಫ಼್.ಎಲ್ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ತಾರಕೇಶ್ವರ್ ಮೂಲತಃ ಬೆಂಗಳೂರಿನವರು . ಭಾಷಾ ಸಂಶೋಧನಾ ರಂಗದಲ್ಲಿ ಆಸಕ್ತರಾಗಿರುವ ಇವರು ಹಂಪಿ ವಿವಿಯಲ್ಲಿ ಕೆಲ ಕಾಲ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ . ‘ವಸಹಾತುಶಾಹಿ ಮತ್ತು ಭಾಷಾಂತರ’ ಇವರ ಮುಖ್ಯ ಕೃತಿ.

ಹರ್ಷ ಮಂದೇರ್ ಬರಹ – 1

ವಿ.ಬಿ .ತಾರಕೇಶ್ವರ

ವಿ.ಬಿ .ತಾರಕೇಶ್ವರ

ಹಾಜರಾತಿಪಟ್ಟಿ ಕೇಳಿದರೆ ಗಂಟುಮೂಟೆ ಕಟ್ಟಿ

ಭ್ರಷ್ಟಾಚಾರದ ವಿರುದ್ಧದ ಚಳುವಳಿಯ ಕಾವಿನ ಸಂದರ್ಭದಲ್ಲಿ, ನಾನಿಂದು ವ್ಯವಸ್ಥೆಯೊಳಗಿಂದಲೇ ಭ್ರಷ್ಟಾಚಾರವನ್ನು ತೊಲಗಿಸಲು ಪ್ರಯತ್ನಿಸಿದ ಜಿಲ್ಲಾಧಿಕಾರಿಯೊಬ್ಬರ ಕಥೆಯನ್ನು ಹೇಳಲು ಹೊರಟಿರುವೆ. ಆ ಅಧಿಕಾರಿಯು ಬಿಟ್ಟು ಹೋದ ಪ್ರಶ್ನೆಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಉತ್ತರಗಳು ಇಂದಿಗೂ ಸಿಕ್ಕಿಲ್ಲ..

ತನ್ನ ಹೊಸ ಜಿಲ್ಲೆಯ ಅಧಿಕಾರವನ್ನು  ವಹಿಸಿಕೊಂಡಾಗ ಬೇಸಿಗೆಯ ಬಿಸಿಲು ತನ್ನ ಚರಮಸೀಮೆಯನ್ನು ತಲುಪಿತ್ತು. ತಾನು ಎರಡು ವರ್ಷ ಕೆಲಸ ಮಾಡಿದ ಪಕ್ಕದ ಚಿಕ್ಕ ಜಿಲ್ಲೆಯ ಬಗೆಗಿನ ಅವರ ಪ್ರೀತಿ ಮನಸ್ಸಿನಲ್ಲಿ ಇನ್ನು ತೊನೆದಾಡುತ್ತಿತ್ತು. ಅಲ್ಲಿ ಅವರುು ಮಾಡಿದ್ದ ಕೆಲಸ ಅವನಿಗೆ ಬಹಳ ಫಲದಾಯಕವಾದದ್ದು ಎಂದೆನಿಸಿತ್ತು. ಈ ನೆನೆಪಿನಲ್ಲೇ ಅವರು ರಾಜಕೀಯವಾಗಿ ಸೂಕ್ಷ್ಮವಾದ, ಬಹಳ ದೊಡ್ಡದು ಮತ್ತು ಸಂಕೀರ್ಣವೂ ಆದ ಈ ಹೊಸ ಜವಾಬ್ದಾರಿಯ ಸವಾಲುಗಳನ್ನು ಎದುರಿಸಲು ಸನ್ನದ್ದನಾಗಿ ಕಾತುರದಿಂದ ಎದುರು ನೋಡುತ್ತಿದ್ದರು. ಹೊಸ ಜಿಲ್ಲೆಯ ಅಧಿಕಾರವನ್ನು ವಹಿಸಿಕೊಂಡ ಕೇವಲ ಎರಡೇದಿನಗಳಲ್ಲಿ ಅಧಿಕಾರಿಯು ಜಿಲ್ಲೆಯ ಜನತೆಯ ಸಮಸ್ಯೆಗಳನ್ನು ಅರಿಯಲು ಅದರ ಪರಿಚಯವನ್ನು ಮಾಡಿಕೊಳ್ಳಲು ಪ್ರವಾಸ ಕೈಗೊಂಡರು..

ಅದು ಬರಗಾಲ, ಅಭಾವದ ವರ್ಷವಾದ್ದರಿಂದ ಪರಿಹಾರ ಕಾರ್ಯ ಭರದಿಂದ ಸಾಗಿತ್ತು. ಕೆಲವೊಮ್ಮೆ ಪರಿಹಾರ ಕಾರ್ಯದಲ್ಲಿ ಕೆಲಸಕ್ಕಿದ್ದವರ ಸಂಖ್ಯೆ ಒಂದು ಲಕ್ಷವನ್ನು ದಾಟಿತ್ತು. ಅವರ ಪ್ರವಾಸದ ಬಹುಪಾಲು ವೇಳೆ ಈ ಪರಿಹಾರ ಕಾರ್ಯಗಳ ಮೇಲ್ವಿಚಾರಣೆಯನ್ನು ಗಮನಿಸುವುದರಲ್ಲೆ ಕಳೆದು ಹೋಗಿದ್ದು ಸ್ವಾಭಾವಿಕವಾಗಿತ್ತು.

ಜಿಲ್ಲಾಧಿಕಾರಿಗೆ ಪ್ರವಾಸದಲ್ಲಿ ಗೋಚರವಾದ ಕೆಲವು ಸಂಗತಿಗಳು ಅವರನ್ನು ಬಹಳ ಚಕಿತಗೊಳಿಸಿದವು. ಪ್ರತಿಯೊಂದು ಯೋಜನೆಗಳಲ್ಲಿ ಯಾವ ಎಗ್ಗೂ ಇಲ್ಲದೆ ಮಂಜೂರಾದ ಹಣದ ಬಹುಪಾಲನ್ನು ನುಂಗಲಾಗಿತ್ತು. ದಾಖಲೆಗಳಲ್ಲಿ ಇದ್ದದ್ದೇ ಒಂದಾದರೆ ಆಗಿದ್ದ ಕೆಲಸದ ಸ್ವರೂಪವೇ ಬೇರೆಯಾಗಿತ್ತು. ಕೆಲಸಗಾರರ ಹಾಜರಾತಿ, ಕೆಲಸ ನಡೆದ ದಾಖಲೆ, ಹಣ ಪಾವತಿಸಿದ ದಾಖಲೆಗಳೆಲ್ಲವೂ ಕೃತಕ ಸೃಷ್ಟಿಯಾಗಿತ್ತು. ಸುಳ್ಳು ಹೆಸರುಗಳು ಮತ್ತು ಸುಳ್ಳು ಹೆಬ್ಬೆಟ್ಟಿನ ದಾಖಲೆಗಳೇ ಎಲ್ಲೆಡೆ ಕಂಡುಬರುತ್ತಿದ್ದವು. ನಡೆಯದ ಕೆಲಸಗಳನ್ನು ತೋರಿಸಿ ಇವರೆಲ್ಲ ಅದರಲ್ಲಿ ಕೆಲಸ ಮಾಡಿದ್ದಾರೆ ಎಂದು ತೋರಿಸಲಾಗಿತ್ತು. ಹಮ್ಮಿಕೊಂಡಿದ್ದ ಬಹುತೇಕ ಕೆಲಸಗಳು ಭೂಮಿಗೆ ಸಂಬಂಧಿಸಿದ ಕೆಲಸಗಳಾಗಿದ್ದವು. ಕೆರೆಗಳ ಹೂಳುತೆಗೆಯುವಿಕೆ, ಮಣ್ಣಿನ ಕಚ್ಚಾ ರಸ್ತೆಯ ನಿಮರ್ಾಣ ಇಂತವುಗಳೇ ಆಗಿದ್ದವು. ಈ ಕೆಲಸಗಳಲ್ಲಿ ಮೊದಲ ಮಳೆಯ ನಂತರ ಕೆಲಸ ಆಗಿದೆಯೇ ಇಲ್ಲವೇ ಎಂದು ಪರಿಶೀಲಿಸುವುದೇ ಕಷ್ಟಕರವಾದದ್ದಾಗಿತ್ತು.

ವ್ಯವಸ್ಥೆಗೆ ಹೊಸಬ ಜಿಲ್ಲಾಧಿಕಾರಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದ ಕೆಳಗಿನ ಅಧಿಕಾರಿಗಳಿಗೆ ಈ ಅಧಿಕಾರಿಯ ನಡವಳಿಕೆ ಮುಜುಗರ ತಂದಿತ್ತು. ಪ್ರತಿಯೋಜನೆಯ ಬಗೆಗಿನ ವಿವರಗಳನ್ನು ಅವರು ವಿಚಾರಿಸುತ್ತಿದ್ದ ರೀತಿ, ದಾಖಲೆಗಳ ಪರಿಶೀಲನೆ, ಕೆಲಸಗಾರರೊಂದಿಗೆ ಸುಧೀರ್ಘ ಮಾತುಕತೆ ಇವೆಲ್ಲವನ್ನು ಅವರು ಜಿಲ್ಲಾಧಿಕಾರಿಯ ಅನನುಭವ ಮತ್ತು ತಾರುಣ್ಯದ ಪ್ರಭಾವ ಎಂದುಕೊಂಡರು. ಆದರೆ  ಯಾವುದನ್ನು ನೇರವಾಗಿ ಬಾಯಿಬಿಟ್ಟು ಪ್ರಸ್ತಾಪಿಸಲಿಲ್ಲ.

ಅಧಿಕಾರಿಯು ಚಕಿತನಾಗಿ ನೋಡಿದ ಸಂಗತಿಗಳನ್ನು ಆಶ್ಚರ್ಯಪಡುವಂತದ್ದೇನಲ್ಲ, ಬಹಳ ಸಹಜವಾದದ್ದು, ದಶಕಗಳಿಂದ ನಡೆದುಕೊಂಡು ಬಂದಿರುವಂತದ್ದು ಎಂದು ಉಳಿದ ಅಧಿಕಾರಿಗಳು ಬಹಳ ತಾಳ್ಮೆಯಿಂದಲೇ ವಿವರಿಸುತ್ತಿದ್ದರು. ಪ್ರತಿವರ್ಷವೂ ಮುಂಗಾರು ಮಳೆಯ ನಂತರ ಖರೀಫ್ ಬೆಳೆಯ ಕಟಾವಾದ ನಂತರ ಬೆಳೆಯ ಪ್ರಮಾಣವನ್ನು ಲೆಕ್ಕಹಾಕಬೇಕಾದರೆ ರಾಜಕೀಯವಾಗಿ ಅಭಾವದ ಪರಿಸ್ಥಿತಿಯನ್ನು ಸೃಷ್ಟಿಸಲು ಅನುವಾಗುವಂತೆ ದಾಖಲೆಗಳನ್ನು ತಿದ್ದಲಾಗುತ್ತದೆ. ಇದರ ಪರಿಣಾಮವಾಗಿ ಪರಿಹಾರ ಕಾಮಗಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಮಂಜೂರಾದ ಹಣದಲ್ಲಿನ ದೊಡ್ಡ ಪ್ರಮಾಣವನ್ನು ಕಾಮಗಾರಿ ಕೈಗೊಳ್ಳುವ ಇಲಾಖೆಯು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನುಂಗುವುದು ಅಲಿಖಿತ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಈ ರೀತಿಯಾಗಿ ನುಂಗಿದ ದುಡ್ಡನ್ನು ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಂಚಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಕಾಮಗಾರಿಗಳನ್ನು ನೇರವಾಗಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಿಂದಲೇ ಮಾಡಿಸಲಾಗುತ್ತಿದೆ. ಇದರಲ್ಲಿ ಸರಕಾರಿ ಅಧಿಕಾರಿಗಳ ಹಸ್ತಕ್ಷೇಪ ಬಹಳ ಕಡಿಮೆ ಪ್ರಮಾಣದ್ದಾಗಿದೆ. ಎಲ್ಲರೂ ಈ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗೆ ವಿವರಿಸಲಾಯಿತು. ಇಲ್ಲದಿದ್ದರೆ ಪ್ರತಿವರ್ಷವೂ ತೀವ್ರ ಬರಗಾಲವೆಂದು ಘೋಷಿಸುವುದಾದರೂ ಏಕೆ? ಈ ಅಧಿಕಾರಿ ಪಕ್ಕದ ಜಿಲ್ಲೆಯ ಅನುಭವಿ ಸಹೋದ್ಯೋಗಿಯನ್ನು ಈ ಕುರಿತು ವಿಚಾರಿಸಿದರು. ಅವರು, `ಇದನ್ನು ನೀವೇನೂ ಮಾಡಲು ಸಾಧ್ಯವಿಲ್ಲ, ನೀವು ಇದನ್ನು ತಪ್ಪೆಂದು ಭಾವಿಸಿ ದು:ಖಪಟ್ಟುಕೊಳ್ಳಬಹುದಷ್ಟೇ, ಇಲ್ಲಾ ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಬಹುದು’ ಎಂದರು. `ಯಾವುದೇ ಕಾರಣಕ್ಕೂ ಹಳೆಯ ಗೋರಿಗಳನ್ನು ಕೆದಕಬೇಡಿ’ ಎಂದರು. ಆದರೆ ಈ ಅಧಿಕಾರಿಯು ಮನಸ್ಸಿನಲ್ಲಿ ಗಟ್ಟಿ ನಿಧರ್ಾರ ಮಾಡಿದ್ದರು. ತಾನು ಅಲ್ಲಿಗೆ ಬಂದ 15 ದಿನಗಳ ಒಳಗೆಯೇ, ಅಭಾವ ಕಾಮಗಾರಿಗಳನ್ನು ಕುರಿತು ಪೂರ್ಣಪ್ರಮಾಣದ ತನಿಖೆಯನ್ನು ಆರಂಭಿಸುವುದಾಗಿ ಪ್ರಕಟಿಸಿದರು. ಮುಂಗಾರು ಆರಂಭವಾಗುವುದರೊಳಗೆ ತನಿಖೆ ಮುಗಿಯಬೇಕೆಂದೂ
ಆದೇಶಿಸಿದ್ದರು. ತನ್ನ ಆದೇಶಕ್ಕೆ ವಿರೋಧವಷ್ಟೇನೂ ಇರಲಾರದೆಂದು ಅವರು ಭಾವಿಸಿದ್ದರು.

ಆದರೆ ಎದ್ದಿದ್ದು ವಿರೋಧವಲ್ಲ ದೊಡ್ಡ ಬಿರುಗಾಳಿಯೇ ಆಗಿತ್ತು. ಜಿಲ್ಲೆಯ ಹಿರಿಯ ರಾಜಕಾರಣಿಗಳು ಈ ಆದೇಶವನ್ನು ಜನಪ್ರತಿನಿಧಿಗಳ ಗೌರವದ ಮೇಲಿನ ಹೀನಾಯವಾದ ಮತ್ತು ಹಿಂಸಾತ್ಮಕವಾದ ದಾಳಿಯೆಂದು ಕರೆದರು. ಪತ್ರಿಕೆಗಳ ಮುಖಪುಟಗಳಲ್ಲಿ ದೊಡ್ಡ ಚಚರ್ೆಯೇ ನಡೆಯಿತು. ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದು ಸ್ಥಳೀಯ ರಾಜಕಾರಣಿಗಳ ಹೇಳಿಕೆಗಳು. ಜಿಲ್ಲಾಧಿಕಾರಿಯನ್ನು ಜನ-ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ದುರಹಂಕಾರಿ ಎಂದೆಲ್ಲ ಹೀಗಳೆದು ಹೇಳಿಕೆಗಳನ್ನು ನೀಡಲಾಗಿತ್ತು. ಪತ್ರಿಕೆಗಳು ಈ ಅಧಿಕಾರಿಯ ಸಂದರ್ಶನ, ಹೇಳಿಕೆಗಳನ್ನು ಕೆಲವೊಮ್ಮೆ ಪಡೆದರೂ ಅವು ಯಾವುದೂ ಪ್ರಕಟಗೊಳ್ಳಲಿಲ್ಲ. ಕಪ್ಪು-ಬಿಳುಪಿನ ಸಂಗತಿ ಎಂದು ತಾನು ಭಾವಿಸಿದ್ದನ್ನು ಹೇಗೆಲ್ಲಾ ತಿರುಚಿ ಬರೆಯಲಾಗುತ್ತಿದೆ ಎಂದು ಅಧಿಕಾರಿಗೆ ಆಶ್ಚರ್ಯವಾಯಿತು. ಕೇವಲ ಸಂಪಾದಕೀಯ ಮತ್ತು ಸಂಪಾದಕರಿಗೆ ಬಂದ ಪತ್ರಗಳು ಮಾತ್ರ ಜಿಲ್ಲಾಧಿಕಾರಿಯ ಪರವಾಗಿದ್ದವು.  ತನಿಖೆಯ ಆದೇಶವನ್ನು ಹೊರಡಿಸಿದ ಕೆಲ ದಿನಗಳ ತರುವಾಯ ಎಲ್ಲಾ ಪಕ್ಷಗಳ ಹಿರಿಯ
ರಾಜಕಾರಣಿಗಳು, ಎಂ.ಪಿ.ಗಳು, ಎಂ.ಎಲ್.ಎ.ಗಳು, ಸರಪಂಚರು ಜಿಲ್ಲಾಧಿಕಾರಿಯು ಕಚೇರಿಗೆ ಬಂದು ತನಿಖೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಸಾರ್ವಜನಿಕರ ಹಣಬಳಕೆಯಾಗಿರುವ ಯಾವುದೇ ಕೆಲಸಗಳಲ್ಲಿ ಆ ಹಣದ ಸದ್ವಿನಿಯೋಗ ಆಗಿದೆಯೇ ಇಲ್ಲವೇ ಎಂದು ತಿಳಿಯುವುದು ಸಾರ್ವಜನಿಕರ ಕರ್ತವ್ಯ, ಲೆಕ್ಕ ತನಿಖೆಯಿಂದ ಅತ್ಯಂತ ಪ್ರಾಮಾಣಿಕ ಅಧಿಕಾರಿಯೂ ಹೊರತಲ್ಲ, ನೀವು ಈ ತನಿಖೆಯನ್ನು ಸ್ವಾಗತಿಸಬೇಕೆಂದು ಅಧಿಕಾರಿಯು ತನ್ನನ್ನು ಭೇಟಿಮಾಡಲು ಬಂದ ನಿಯೋಗಕ್ಕೆ ತಿಳಿಸಿದರು.

ತನಿಖೆಯು ತನ್ನ ವ್ಯಾಪ್ತಿಯಲ್ಲಿ ಕೇವಲ ಪಂಚಾಯಿತಿಗಳು ನಿರ್ವಹಿಸಿದ ಕಾಮಗಾರಿಯನ್ನಷ್ಟೇ ಒಳಗೊಳ್ಳದೆ ಇಲಾಖಾ ಕಾಮಗಾರಿಗಳನ್ನು ಒಳಗೊಂಡಿದೆ. ತಾನೇ ಸ್ವತ: ಖುದ್ದು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಹಣದ ದುರುಪಯೋಗ ಕಂಡುಬಂದಿದ್ದರಿಂದ ಈ ತನಿಖೆಗೆ ಆದೇಶಿಸಿದ್ದೇನೆಯೇ ಹೊರತು ಸುಮ್ಮನೆ ಅಥವಾ ಆಟಕ್ಕಾಗಿ ಅಲ್ಲ. ಮತ್ತು ಈ ತನಿಖೆಯನ್ನು ವಿರೋಧಿಸುವ ಮೂಲಕ ನೀವು ಸ್ವತ: ಆಪಾದನೆಯನ್ನು ಒಪ್ಪಿಕೊಳ್ಳುತ್ತಿದ್ದೀರಿ. ಆದ್ದರಿಂದ ಈ ತನಿಖೆಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಅವರಿಗೆ ವಿನಯದಿಂದ ಆದರೆ ದೃಢನಿಧರ್ಾರದ
ಧ್ವನಿಯಲ್ಲಿ ತಿಳಿಸಿದರು. ಅವರ ವಿರೋಧವು ಆತನ ತನಿಖೆಯ ನಿಧರ್ಾರವನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. ಹೀಗೆ ನಿಯೋಗದೊಂದಿಗಿನ ಭೇಟಿ ಗೊಂದಲದಲ್ಲಿ ಮುಗಿದಿತ್ತು.

ಜಿಲ್ಲಾಧಿಕಾರಿಯು ಹಿಂದಿನ ಚರಿತ್ರೆಯ ಕಾರಣದಿಂದಾಗಿ ಅವರ ವಿರೋಧದ ಕಾವು ಹೆಚ್ಚಾಯಿತು. ಈ ಮುಂಚೆ  ಕೆಲಸಮಾಡಿದ್ದ ಪಕ್ಕದ ಜಿಲ್ಲೆಯಲ್ಲಿ ಕೂಡ ಅಭಾವ ಕಾಮಗಾರಿ ಆರಂಭವಾದ ಒಂದೇ ತಿಂಗಳಿಗೆ ಇದೇ ರೀತಿಯ ತನಿಖೆಗೆ ಆದೇಶಿಸಿದ್ದರು. ಅದರ ಪರಿಣಾಮವಾಗಿ 40ಕ್ಕೂ ಹೆಚ್ಚು ಸರಪಂಚರು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ಕೇಸು ನಮೂದಾಗಿತ್ತು. ನಂತರ ಅವರನ್ನು ಬಂಧಿಸಿ ಕೋಟರ್್ನಲ್ಲಿ ಚಾಜರ್್ಶೀಟ್ ಹಾಕಿದ್ದರು. ಆ ಕಾರಣದಿಂದಾಗಿ ಅನುತ್ಪಾದಕವಾದ ಮತ್ತು ಪರಿಶೀಲನೆಗೆ ನಿಲುಕದ ಹೂಳೆತ್ತುವ ಮತ್ತು ಮಣ್ಣು ರಸ್ತೆಗಳನ್ನು ಮಾಡುವಂತಹ ಕೆಲಸಗಳನ್ನು ನಿರ್ಭಂದಿಸಲಾಗಿತ್ತು. ಬರಗಾಲದ ಉಳಿದ ತಿಂಗಳುಗಳಲ್ಲಿ ಹಣದ ದುರ್ಬಳಕೆ ಇದರಿಂದಾಗಿ ನಿಯಂತ್ರಣದಲ್ಲಿತ್ತು. ಮೊದಲಬಾರಿಗೆ ಅಭಾವಕಾಲದ ಕಾಮಗಾರಿಗಳು ವಾಸ್ತವ ರೂಪ ತಳೆದು ಹಲವಾರು ದೀರ್ಘಕಾಲೀನ ಉಪಯುಕ್ತ ಸಾಮುದಾಯಿಕ ಸಂಪನ್ಮೂಲಗಳನ್ನು ಹಳ್ಳಿಗಳು ಹೊಂದಿದ್ದವು. ಇವುಗಳಲ್ಲಿ 1,000 ಕೆರೆಗಳೂ ಸೇರಿದ್ದವು.

ನಿಯೋಗದೊಂದಿಗಿನ ಮಾತುಕತೆ ಮುರಿದುಹೋದ ಮೇಲೆ, ತಕ್ಷಣವೇ ಜಿಲ್ಲಾಧಿಕಾರಿ ಜಿಲ್ಲೆಯ ಅಧಿಕಾರಿಗಳನ್ನು ಹೊಂದಿದ್ದ  ತಂಡಗಳನ್ನು ತನಿಖೆಗೆ ನಿಯುಕ್ತಗೊಳಿಸಿದರು. ತನಗೆ ನಂಬಿಕೆ ಇದ್ದ ಕೆಲವೇ ಪ್ರಾಮಾಣಿಕ ಅಧಿಕಾರಿಗಳನ್ನು ಆಯ್ಕೆಮಾಡಿ, ತಾನು ಅವರು ಕೂಡಿ ತನಿಖೆಗೆ ಒಳಪಟ್ಟಿರುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ನಿರ್ಧರಿಸಿದ್ದ. ಮಳೆ ಬೀಳುವುದಕ್ಕೆ ಆರಂಭವಾಗುವ ಮುಂಚೆಯೇ ತನಿಖೆ ಪೂರ್ಣಗೊಳಿಸಲು ತನಿಖೆಯ ನೀಲಿನಕ್ಷೆಯನ್ನೂ ತಯಾರಿಸಲಾಗಿತ್ತು. ಈ ತನಿಖೆಯಲ್ಲಿ ತೊಡಗಿದ್ದ ತನ್ನೆಲ್ಲ ಸಹೋದ್ಯೋಗಿಗಳ ಸಭೆಯನ್ನು ಕರೆದು ನಿಷ್ಪಕ್ಷಪಾತವಾಗಿ ಮತ್ತು ನಿಭರ್ೀತವಾಗಿ ಕಾರ್ಯನಿರ್ವಹಿಸಲು ತಿಳಿಸಿದ್ದ. ತನಿಖೆಯು ತನ್ನ ಅಣತಿಯಂತೆ ಆರಂಭವಾಗಿದೆ ಎಂದು ಎಲ್ಲರಿಗೂ ಗೊತ್ತಿರುವುದರಿಂದ ಅದರ ಜವಾಬ್ದಾರಿಯಾಗಲಿ ಅಥವಾ ಪರಿಣಾಮವಾಗಲಿ ಅವರ ಮೇಲೆ ಆಗುವುದಿಲ್ಲ ಎಂದು ಅಭಯವನ್ನೂ ನೀಡಿದ್ದ.

ತನಿಖೆಯ ಮೊದಲ ಹಂತದಲ್ಲಿ ಎಲ್ಲಾ ಇಲಾಖೆಗಳಿಂದ ಮತ್ತು ಪಂಚಾಯತ್ಗಳಿಂದ ಹಾಜರಾತಿ ಪುಸ್ತಕಗಳನ್ನು ತರಿಸಲು ನಿರ್ಧರಿಸಿದರು. ಅಭಿವೃದ್ಧಿ ಇಲಾಖೆಯ ಅಧಿಕಾರಿಗೆ ಈ ನಿಟ್ಟಿನಲ್ಲಿ ಶೀಘ್ರವೇ ಸೂಕ್ತಕ್ರಮ ಕೈಗೊಳ್ಳಲು ನಿದರ್ೇಶಿಸಿದ್ದರು. ಎಲ್ಲಾ ಪಂಚಾಯತ್ಗಳಿಗೆ ಹಾಜರಾತಿಪುಸ್ತಕಗಳನ್ನು ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿಯು ಸುತ್ತೋಲೆಯನ್ನು ಕಳುಹಿಸಿದ್ದರು.

ಮತ್ತೊಂದು ವಿವಾದ :

ಸುತ್ತೋಲೆಯಲ್ಲಿನ ಸೀಜರ್ (ಹಿಂದಿಯಲ್ಲಿನ ಜಪ್ತಿ) ಪದದ ಬಳಕೆಯು ಮತ್ತೊಂದು ವಿವಾದದ ಬಿರುಗಾಳಿಯನ್ನು ಎಬ್ಬಿಸಿತು. ಅನೇಕ ರಾಜಕಾರಣಿಗಳ ಅಭಿಪ್ರಾಯದಲ್ಲಿ ಈ ಪದದ ಬಳಕೆಯು ಜಿಲ್ಲಾಧಿಕಾರಿಯ ದುರಹಂಕಾರ ಮತ್ತು ಉದ್ಧಟತನದ ಕುರುಹು ಆಗಿತ್ತು. ನಮ್ಮನ್ನು ತನಿಖೆಗೆ ಮುಂಚೆಯೇ ಅಪರಾಧಿಗಳನ್ನಾಗಿ ನೋಡುತ್ತಿರುವುದರ ಧ್ಯೋತಕವಿದು ಎಂಬುದು ಅವರ ಅಭಿಪ್ರಾಯವಾಗಿತ್ತು. ಜಿಲ್ಲಾಧಿಕಾರಿಯು ತಾನು ಆ ಪದದ ಬಳಕೆಯನ್ನು ಪ್ರತಿಷ್ಠೆಯ ಧ್ಯೋತಕವಾಗಿ ತೆಗೆದುಕೊಳ್ಳದೆ ‘ಜಪ್ತಿ’ಯ ಬದಲಿಗೆ ‘ತರಿಸಿಕೊಳ್ಳಲಾಗಿದೆ’ ಎಂದು
ಬದಲಾಯಿಸಲು ಸಿದ,್ಧ ಆದರೆ ಅದರಿಂದ ಸುತ್ತೋಲೆಯ ಮುಖ್ಯ ಸಾರಾಂಶವೇನು ಬದಲಾಗದು ಎಂದು ಹೇಳಿದರು. ಆದರೆ ಅದು ಅವರ ವಿರೋಧಿಗಳನ್ನು ತಣ್ಣಗಾಗಿಸಲಿಲ್ಲ. ಅವರಿಗೆ ತನಿಖೆಯ ಆದೇಶವನ್ನು ಹಿಂಪಡೆಯುವುದು ಮತ್ತು ಜಿಲ್ಲಾಧಿಕಾರಿಯ ಸಾರ್ವಜನಿಕ ಕ್ಷಮೆಯಾಚನೆ ಬೇಕಾಗಿತ್ತು.

ಕಾಲಕಳೆದಂತೆ, ರಾಜಕಾರಣಿಗಳ ಕೋಪದ ಕೂಗಿನ ಹಿಂದೆ, ಅವರನ್ನು ಎತ್ತಿಕಟ್ಟಿರುವ, ಸಂಘಟಿಸಿರುವ ಮತ್ತು ಯೋಜಿಸಿರುವ ಜಿಲ್ಲೆಯ ಸರಕಾರಿ ಅಧಿಕಾರಿಗಳಿರುವುದು ಆತನಿಗೆ ಕಂಡುಬಂತು. ಅಭಿವೃದ್ಧಿ ಅಧಿಕಾರಿಯೇ ಉದ್ಧೇಶಪೂರ್ವಕವಾಗಿ ‘ಜಪ್ತಿ’ ಪದವನ್ನು ಬಳಸಿ ಸ್ಥಳೀಯ ರಾಜಕಾರಣಿಗಳಿಗೆ ಅದರ ವಿರುದ್ಧ ತಿರುಗೇಳುವಂತೆ ಪ್ರಚೋದಿಸಿರುವುದರ ಅರಿವು ಆತನಿಗಾಗಿತ್ತ್ತು. ಹೋರಾಟದಲ್ಲಿ ಜಿಲ್ಲಾಧಿಕಾರಿ ಏಕಾಂಗಿಯಾಗಿದ್ದರು. ಸ್ವಲ್ಪ ಸಮಯದಲ್ಲೇ ಅವರ ಆಪ್ತ ಸ್ನೇಹಿತನಾಗಿದ್ದ ಯುವ ಎಸ್.ಪಿ. ಮಾತ್ರ ಈ ಬಿರುಗಾಳಿಯ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ನಿಂತಿದ್ದನು.

ಎರಡೇ ವಾರಗಳಲ್ಲಿ ತನಿಖೆ ತೀವ್ರಗೊಳ್ಳುತ್ತಿದ್ದಂತೆ ನಾಟಕೀಯ ಪರಿಣಾಮಗಳು ಕಾಣಿಸಿಕೊಂಡವು. ರಾಜ್ಯದಲ್ಲೇ ಸಾರ್ವಜನಿಕವಾಗಿ ಗೌರವಾನ್ವಿತ ವ್ಯಕ್ತಿ ಎನಿಸಿಕೊಂಡಿದ್ದ ಜಿಲ್ಲೆಯ ಹಿರಿಯ ಮಂತ್ರಿಯೊಬ್ಬರು ಈ ಸಮಯದಲ್ಲಿ ಜಿಲ್ಲೆಯ ಪ್ರವಾಸ ಕೈಗೊಂಡರು. ಸಾಮಾನ್ಯವಾಗಿ ರಾತ್ರಿ ಸಕ್ಯರ್ೂಟ್ಹೌಸ್ನಲ್ಲಿ ತಮ್ಮ ಎಂದಿನ ಹವ್ಯಾಸದಂತೆ ಬಹಳಷ್ಟು ಸ್ಥಳೀಯ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವಂತೆ ಹೇಳಿಕಳುಹಿಸಿದರು.

ಜಿಲ್ಲಾಧಿಕಾರಿಯವರು ರೂಮಿನೊಳಗೆ ಪ್ರವೇಶಿಸುತ್ತಿದ್ದಂತೆ ಮಿನಿಸ್ಟರ್ ಗಹನವಾದ ವ್ಯಂಗ್ಯದ ಧ್ವನಿಯಲ್ಲಿ ಎಷ್ಟು ಕೋಟಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದೀರಿ? ಎಂದು ಪ್ರಶ್ನಿಸಿದರು. ಹಠಾತ್ತನೆ ಎರಗಿದ ಈ ಪ್ರಶ್ನೆಗೆ ಅಧಿಕಾರಿಯು ತಮ್ಮ ಎಂದಿನ ಧಾಟಿಯಲ್ಲಿ ಇದುವರೆವಿಗೂ ಕೋಟಿಗಳೇನಾಗಿಲ್ಲ ಸಾರ್. ತನಿಖೆ ಮುಂದುವರೆದಿದೆ. ಆದರೆ ಪರಿಸ್ಥಿತಿ ಬಹಳ ಕೆಟ್ಟದಾಗಿರುವಂತೆ ಕಂಡುಬರುತ್ತಿದೆ ಎಂದರು.

ಇದಾದ ನಂತರ 15 ನಿಮಿಷಗಳ ಕಾಲದ ವಾಗ್ದಾಳಿ ಆರಂಭವಾಯಿತು, ಜಿಲ್ಲಾಧಿಕಾರಿಯು ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿದ್ದರು. ಒಂದು ಸಂದರ್ಭದಲ್ಲಿ ಮಾತ್ರ ತಮ್ಮ ಮೂಗುತೂರಿಸಿ ನಾನು ನನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ ಎಂದು ನೈತಿಕವಾಗಿ ಉಸುರಿದ್ದರು.

ಈ ಭೇಟಿ ಅಪರಿಪೂರ್ಣವಾಗಿಯೇ ಕೆಟ್ಟ ವಾತಾವರಣದಲ್ಲಿ ಮುಗಿಯಿತು. ಆದರೆ ಇದಾದ ಕೆಲ ದಿನಗಳ ನಂತರ ನಡೆದ ಘಟನೆಯೊಂದು ಇದಕ್ಕಿಂತ ಕೆಟ್ಟದಾಗಿ ಅವರನ್ನು ಘಾಸಿಗೊಳಿಸಿತು. ತರುಣ ಸಬ್-ಇಂಜಿಯರ್ ಒಬ್ಬ ತನ್ನ ರೂಮಿನ ಛಾವಣಿಗೆ ಹಗ್ಗಬಿಗಿದು ನೇಣುಹಾಕಿಕೊಂಡಿದ್ದ ಸುದ್ದಿ ಅದಾಗಿತ್ತು. ವಿಧವೆ ತಾಯಿಯೊಬ್ಬಳ ಏಕಮಾತ್ರ ದುಡಿಯುವ ಹಿರಿಮಗ ಆತನಾಗಿದ್ದ. ತನ್ನ ಡೆತ್ನೋಟ್ನಲ್ಲಿ ತನ್ನ ಹಿರಿಯ ಸಹೋದ್ಯೋಗಿಗಳ ಮಾರ್ಗದರ್ಶನದಲ್ಲಿ ತನ್ನ ಸುಪದರ್ಿಯ ಕಾಮಗಾರಿಗಳಲ್ಲಿ ಬಹಳಷ್ಟು ಕೆಟ್ಟದ್ದನ್ನು ಮಾಡಿರುವುದಾಗಿ ಹೇಳಿಕೊಂಡಿದ್ದ. ತನಿಖೆಯ ಅವಮಾನ, ಬಯಲಿಗೆ ಬೀಳುವ ಸಾಧ್ಯತೆ, ನೋವನ್ನು ತಾಳುವುದು ಅವನಿಗೆ ಸಾಧ್ಯವಾಗದೆ ಮತ್ತು ಬೇರೆ ಯಾವುದೇ ದಾರಿ ಕಾಣದೆ ಸಾವನ್ನು ಅಪ್ಪಿಕೊಂಡಿದ್ದ.

ಈ ಮಧ್ಯೆ ಪತ್ರಿಕೆಗಳಲ್ಲಿ ಮತ್ತಷ್ಟು ಏಕಪಕ್ಷೀಯವಾದ ವರದಿಗಳು ದೊಡ್ಡದಾಗಿ ಪ್ರಕಟಗೊಳ್ಳತೊಡಗಿದವು. ಜಿಲ್ಲಾಧಿಕಾರಿಯ ಬೆಂಬಲಕ್ಕೆ ಆಗೊಂದು ಈಗೊಂದು ಸಂಪಾದಕೀಯಗಳು ಬಂದಿದ್ದವು. ಮಿಡಲ್ಕಾಲಂನಲ್ಲಿ ಪ್ರಕಟಗೊಂಡಿದ್ದ ವಿಡಂಬನಾತ್ಮಕ ಕವನವೊಂದು ಜಿಲ್ಲಾಧಿಕಾರಿಗೆ ಖುಷಿ ಕೊಟ್ಟಿತ್ತು. ದುಡ್ಡುಮಾಡುವುದು ಅಧಿಕಾರಿಗಳು ಮತ್ತು ಆಯ್ಕೆಗೊಂಡವರ ಜನ್ಮಸಿದ್ಧಹಕ್ಕು ಮತ್ತು ಡಿಎಂ ಆ ಹಕ್ಕಿಗೆ ಚ್ಯುತಿ ತರುವುದರ ಮೂಲಕ (ತನಿಖೆ ಕೈಗೊಳ್ಳುವುದರ ಮೂಲಕ) ಪ್ರಜಾಪ್ರಭುತ್ವವನ್ನು ವಿರೋಧಿಸುತ್ತಿದ್ದಾರೆ ಎಂದು ಅದರಲ್ಲಿ ಲೇವಡಿ ಮಾಡಲಾಗಿತ್ತು. ಹಿಂದಿಯಲ್ಲಿದ್ದ ಆ ಕವನದ ಪಲ್ಲವಿ ಹೀಗಿತ್ತು:
ಮಸ್ತರ್ ರೋಲ್ ಭಾಯಿ, ಮಸ್ತರ್ ರೋಲ್! ಕರೆ ಕಲೆಕ್ಟರ್ ಬಿಸ್ತರ್ ಗೋಲ್!.
ಭಾವಾನುವಾದ:
ಹಾಜರಾತಿ ಪಟ್ಟಿ! ಹಾಜರಾತಿ ಪಟ್ಟಿ! ಕಲೆಕ್ಟರ್ ಸುತ್ಕೊಂಡೋದ ಹಾಸಿಗೆಪೆಟ್ಟಿ!
(ಹಾಜರಾತಿಪಟ್ಟಿ ಕೇಳಿದ್ರೆ ಗಂಟುಮೂಟೆ ಕಟ್ಟಿ!!)

ಕೊನೆಯಲ್ಲಿ ಪ್ರತಿಭಟನೆಯ ಅಂತಿಮ ಘಟ್ಟ ಎನ್ನುವಂತೆ ಜಿಲ್ಲೆಯ ಎಲ್ಲಾ ಪಾಟರ್ಿಯ 500ಕ್ಕೂ ಹೆಚ್ಚು ಸರಪಂಚರು ಮತ್ತು ಆಡಳಿತಾರೂಢ ಪಕ್ಷದ ಆಯ್ಕೆಯಾದ ಎಲ್ಲಾ ಎಂಎಲ್ಎಗಳು ಜಿಲ್ಲಾಧಿಕಾರಿಯ ವಿರುದ್ಧ ಘೋಷಣೆ ಕೂಗುತ್ತಾ ನಗರದಲ್ಲಿ ಮೆರವಣಿಗೆ ಮಾಡಿದರು. ಕಲೆಕ್ಟರ್ ಕಛೇರಿಗೆ ಮೆರವಣಿಗೆಯಲ್ಲಿ ಬಂದು ಡಿಎಂರವರನ್ನು ಭೇಟಿಯಾಗಬೇಕೆಂದರು. ಡಿಎಂ ಮತ್ತು ಅವರ ಸ್ನೇಹಿತ ಎಸ್ಪಿ ಇಬ್ಬರೂ ಹೊರಬರುತ್ತಿದ್ದಂತೆ ಮತ್ತೊಂದು ಸುತ್ತಿನ ಘೋಷಣೆಗಳನ್ನು ಅವರ ವಿರುದ್ಧ ಕೂಗಲಾಯಿತು. ನಂತರ ಎಲ್ಲಾ ಸರಪಂಚರ ಜಂಟಿ ರಾಜಿನಾಮೆ ಪತ್ರವನ್ನು ತನಿಖೆಯೆಂಬ ಅವಮಾನವನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ನೀಡಲಾಯಿತು. ಇದೊಂದು ನಿರೀಕ್ಷಿಸದೆ ಇದ್ದ ಬರಸಿಡಿಲಾಗಿತ್ತು. ಪ್ರತಿಯೊಂದು ಪತ್ರಿಕೆಯು ಮಾರನೆಯ ದಿನ ಬೆಳಿಗ್ಗೆ ತಮ್ಮ ಪತ್ರಿಕೆಯ ಇದನ್ನು ಮುಖಪುಟದ ಪ್ರಮುಖ ಸುದ್ದಿಯಾಗಿಸಿದ್ದಲ್ಲದೇ ಸಂಪಾದಕೀಯವನ್ನು ಬರೆದವು. ಮುಖ್ಯಮಂತ್ರಿಗಳು ತಕ್ಷಣವೇ ತನ್ನನ್ನು ರಾಜಧಾನಿಯಲ್ಲಿ ಭೇಟಿಯಾಗುವಂತೆ ಜಿಲ್ಲಾಧಿಕಾರಿಯನ್ನು ಕರೆದರು. ವಿಶೇಷ ವಿಮಾನದಲ್ಲಿ ರಾಜಧಾನಿಗೆ ಆತನು ತಕ್ಷಣವೇ ತೆರಳಿದನು.

ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೋದ ತಕ್ಷಣವೇ ಅವನಿಗೆ ಅವಕಾಶ ಕಲ್ಪಿಸಲಾಯಿತು. ವಿಮಾನದ ಪ್ರಯಾಣದುದ್ದಕ್ಕೂ ಮುಖ್ಯಮಂತ್ರಿಗಳ ಮುಂದೆ ಏನನ್ನು ಹೇಳಬೇಕೆಂದು ಆತ ಮನದಲ್ಲೇ ರಿಹರ್ಸಲ್ ಮಾಡಿಕೊಂಡಿದ್ದ. ಸಮಯವನ್ನು ವ್ಯರ್ಥಮಾಡದೆ ರಕ್ಷಣಾತ್ಮಕವಾದ ಕೋಪದ ಧ್ವನಿಯ ಛಾಯೆಯಲ್ಲಿ ಅವನಿಂತೆಂದ: ಸರ್, ನೀವು ತನಿಖೆಯನ್ನು ನಿಲ್ಲಿಸುವುದಾದರೆ ನಾನು ರಾಜಿನಾಮೆ ನೀಡಬೇಕಾಗುತ್ತದೆ.

ಆತನ ನಿರೀಕ್ಷೆ ಆಶ್ಚರ್ಯದಾಯಕವಾಗಿ ಹುಸಿಯಾಗುವಂತೆ, ಮುಖ್ಯಮಂತ್ರಿಗಳು ಸಮಾಧಾನದಿಂದ ಮತ್ತು ಬೆಂಬಲಯುತವಾಗಿ ಮಾತನಾಡಿದಾಗ ಆತ ನಿರಾಯುಧನಾಗಿದ್ದ. ಜಿಲ್ಲಾಧಿಕಾರಿಯಿಂದ
ಪೂರ್ಣ ಕಥೆಯನ್ನು ಕೇಳಿದ್ದಲ್ಲದೆ ನೀನು ಸಂಪೂರ್ಣವಾಗಿ ಸರಿಯಾದ ಕೆಲಸವನ್ನೇ ಮಾಡಿದ್ದೀಯ ಎಂದರು. ನಿನ್ನ ತತ್ವಾಧಾರಿತ ನಿಧರ್ಾರವನ್ನು ಕಾಂಪ್ರೊಮೈಸ್ ಮಾಡಿಕೊಳ್ಳುವ ಅಗತ್ಯವಿಲ್ಲ ಮತ್ತು ನಿನ್ನ ಒಪ್ಪಿಗೆಯಿಲ್ಲದೆ ನಾನು ಯಾವುದೇ ನಿಧರ್ಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಮಟ್ಟಿಗೆ ಮುಂದುವರೆದರು.

ರಾಜಕೀಯ ಒತ್ತಡಗಳು:

ಅದರೊಂದಿಗೇ ತನ್ನ ಮೇಲಿರುವ ರಾಜಕೀಯ ಒತ್ತಡಗಳನ್ನು ಮತ್ತು ಇಕ್ಕಟ್ಟುಗಳನ್ನು ವಿವರಿಸಿದರು. ಜಿಲ್ಲಾಧಿಕಾರಿಯು ಸ್ವತ: ತನಿಖೆಯ ಸ್ವಯಂನಿಧರ್ಾರ ತೆಗೆದುಕೊಂಡಿದ್ದರೂ, ತಮ್ಮ ಪಕ್ಷದಲ್ಲಿನ ತಮ್ಮ ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಮುಖ್ಯಮಂತ್ರಿಗಳು ಅವರ ಮೇಲೆ ಒತ್ತಡ ಹೇರಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದರು. ಆದ್ದರಿಂದಾಗಿ ತಾನು ತನ್ನ ವಿರೋಧಿಗಳನ್ನು ಸಮಾಧಾನಪಡಿಸುವ ಮತ್ತು ಜಿಲ್ಲಾಧಿಕಾರಿಯು ತನ್ನ ನಿಧರ್ಾರವನ್ನು ಕಾಂಪ್ರೊಮೈಸ್ ಮಾಡಿಕೊಂಡಂತೆ ಆಗದ ರೀತಿಯ ಪರಿಹಾರದ ದಾರಿ ಹುಡುಕುತ್ತಿದ್ದೇನೆ ಎಂದರು.

ಹೀಗೆ ಸುಧೀರ್ಘವಾದ ಪೀಠಕೆಯೊಡನೆ ಅವರು ಮುಂದಿಟ್ಟ ನಿಧರ್ಾರವೇನೆಂದರೆ ತನಿಖೆಯನ್ನು ಜಿಲ್ಲಾಧಿಕಾರಿಯ ಬದಲಿಗೆ ದೊಡ್ಡ ತನಿಖಾ ಆಯೋಗಕ್ಕೆ (ಕಮಿಷನ್ ಆಫ್ ಎನ್ಕ್ವೈರಿ) ವಹಿಸುವುದು. ಇದು ನಿಮಗೆ ಒಪ್ಪಿಗೆಯೇ ಎಂದು ಮುಖ್ಯಮಂತ್ರಿಗಳು ಈ ಅಧಿಕಾರಿಯನ್ನು ಕೇಳಿದರು. ಇದು ತನಿಖೆಯನ್ನು ದಾರಿತಪ್ಪಿಸುವ ಯತ್ನವಾಗಿದೆ ಎಂದು ಇವರು ಹೇಳಿದರು.

ತನಿಖೆ ಮುಂಗಾರುವಿನೊಳಗೆ ಮುಗಿಯದಂತೆ ನೋಡಿಕೊಂಡು ಇಡೀ ತನಿಖೆ ಅರ್ಥಹೀನವಾಗುವಂತೆ ನೋಡಿಕೊಳ್ಳುವವರನ್ನು ತನಿಖಾ ಆಯೋಗಕ್ಕೆ ಸೇರಿಸಬಹುದು ಎಂಬುದು ಅವರ ಭಯವಾಗಿತ್ತು. ತನಿಖಾ ಆಯೋಗಕ್ಕೆ ನಿಭರ್ೀತಿಯಿಂದ ಸ್ವತಂತ್ರವಾಗಿ ತನಿಖೆ ನಡೆಸುವವರನ್ನು ನೇಮಿಸುತ್ತೇನೆ ಮತ್ತು ಮುಂಗಾರಿಗೆ ಮುಂಚೆಯೇ ತನಿಖೆ ಮುಗಿಸುವಂತೆ ಹೇಳುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಇದಾದ ನಂತರ ಈ ಪ್ರಸ್ತಾವವನ್ನು ಒಪ್ಪದೇ ಇರಲು ಡಿಎಂಗೆ ಯಾವುದೇ ಕಾರಣಗಳಿರಲಿಲ್ಲ.

ಮುಖ್ಯಮಂತ್ರಿಗಳು ಕೊಟ್ಟ ಮಾತು ಸತ್ಯವಾಗಿತ್ತು. ತನಿಖಾ ಆಯೋಗದ ನೇಮಕವಾಯಿತು. ಸ್ಥಳೀಯ ರಾಜಕಾರಣಿಗಳು ಜಿಲ್ಲಾಧಿಕಾರಿಗಳಿಂದ ತನಿಖೆ ತಪ್ಪಿಹೋದದ್ದಕ್ಕೆ ನಿಟ್ಟುಸಿರು ಬಿಟ್ಟು ತಮ್ಮ ಜಂಟಿ ರಾಜಿನಾಮೆಯನ್ನು ಹಿಂಪಡೆದರು. ಪತ್ರಿಕೆಗಳಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಜಿಲ್ಲಾಧಿಕಾರಿಯ ವಿರುದ್ಧ ನಡೆಯುತ್ತಿದ್ದ ವಾಗ್ದಾಳಿಯೂ ನಿಂತಿತು. ತಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಜಿಲ್ಲಾಧಿಕಾರಿಯು ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಲು ಆರಂಭಿಸಿದರು.

ಹಿರಿಯ ಗೌರವಾನ್ವಿತ ಪ್ರಾಮಾಣಿಕ ಅಧಿಕಾರಿಗಳ ತಂಡವನ್ನೇ ತನಿಖಾ ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಸಮಿತಿಯು ನಂತರದ ತಿಂಗಳಲ್ಲಿ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿತು. ಅವರ ಬಳಿಯಿದ್ದ ಸಂಪನ್ಮೂಲ ಡಿಎಂರ ಬಳಿ ಇರಲಿಲ್ಲ. ಆದ್ದರಿಂದಾಗಿ ತನಿಖೆಯು ಪೂರ್ಣಪ್ರಮಾಣದಲ್ಲಿ, ಅಂದರೆ ಜಿಲ್ಲಾಧಿಕಾರಿಗಳು ನಡೆಸಿದ್ದರೆ ನಡೆಯುತ್ತಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು. ಅಧಿಕಾರಿಯು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದ ಹಾನಿ/ಭ್ರಷ್ಟಾಚಾರವನ್ನು ಆಯೋಗ ಬಿಚ್ಚಿ ಇಟ್ಟಿತು. ಕೆಲವು ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಪ್ರಮಾಣ ಶೇ. 80ನ್ನು ಮೀರಿತ್ತು. ಕಾಮಗಾರಿಗಳು ಹೆಸರಿಗಷ್ಟೇ ನಡೆದಿದ್ದವು. ಖಚರ್ುಮಾಡಲು ಮೀಸಲಿಟ್ಟಿದ್ದ 18ಕೋಟಿಗಳಲ್ಲಿ 10ಕೋಟಿಗಳಷ್ಟು ನುಂಗಣ್ಣಗಳ ಪಾಲಾಗಿತ್ತು. ಬರಗಾಲದಿಂದ ತತ್ತರಿಸುತ್ತಿದ್ದ ಹಳ್ಳಿಗಳಿಗೆ ಒಂದು ರೂಪಾಯಿಯೂ ತಲುಪಿರಲಿಲ್ಲ. ಇದರಿಂದಾಗಿ ಒಂದಿಂಚಿನಷ್ಟೂ ಸಾಮುದಾಯಿಕ ಸ್ವತ್ತು ಹಳ್ಳಿಗಳಲ್ಲಿ ಸೃಷ್ಟಿಯಾಗಿರಲಿಲ್ಲ. ತನಿಖಾವರದಿಯನ್ನು ರಾಜ್ಯದ ನ್ಯಾಯಲಯಕ್ಕೆ ಮತ್ತು ಅದರ ಪ್ರತಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗಿತ್ತು. ವರದಿಯಲ್ಲಿ ನಮೂದಾಗಿದ್ದ ಪ್ರತಿಯೊಂದು ವಿಷಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯು ತಕ್ಷಣವೇ ಸರಕಾರಿ ಅಧಿಕಾರಿಗಳು ಮತ್ತು ಸರಪಂಚರ ವಿರುದ್ಧ ಪೋಲಿಸರ ಮೂಲಕ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದರು. ಇಲ್ಲದಿದ್ದರೆ ತಡವಾಗಿದ್ದರೆ ಮಳೆಬಂದು ಸಾಕ್ಷ್ಯಗಳೆಲ್ಲವೂ ಕೊಚ್ಚಿಹೋಗುವ ಸಾಧ್ಯತೆ ಇತ್ತು.

ಕೆಲವುತಿಂಗಳ ನಂತರ: ಬೆಳಿಗ್ಗೆಯೇ ಎದ್ದು ದಿನಪತ್ರಿಕೆ ತೆರೆದು ಅದನ್ನು ಓದುತ್ತಿದ್ದಂತೆ ತಮ್ಮ ಮನೆಯ ಮುಂದಿನ ತೋಟದ ಮೂಲೆಯಲ್ಲಿ ಅರ್ಧಘಂಟೆಗಳ ಕಾಲ ಜಿಲ್ಲಾಧಿಕಾರಿಗಳು ಸುಮ್ಮನೆ ಕುಳಿತುಬಿಟ್ಟರು. ನಂತರ ತಮ್ಮ ಪತ್ನಿಯನ್ನು ಎಬ್ಬಿಸಿದರು. ಅವಳಿಗೆ ತಮ್ಮ ವಗರ್ಾವಣೆಯ ವಿಷಯವನ್ನು ತಿಳಿಸಿದರು. ಆಕೆ ಒಂದೇ ದಿನದಲ್ಲಿ ಮನೆಯ ಸಾಮಾನುಗಳನ್ನು ಗಂಟು ಮೂಟೆ ಕಟ್ಟಿದರು. ಆ ಜಿಲ್ಲೆಗೆ ವಗರ್ಾವಣೆಯಾಗಿ ಬಂದು ಕೇವಲ ಮೂರೇ ತಿಂಗಳಾಗಿತ್ತು. ಬಹಳಷ್ಟು ಜನ ಅವರನ್ನು ಕಾಣಲು ಬಂದರು. ಅವರಲ್ಲಿ ಹೆಚ್ಚಿನವರು  ಜನಸಾಮಾನ್ಯರಾಗಿದ್ದರು. ಉಳಿದಂತೆ ಈ ಹಿಂದೇ ಅವರು ಕೆಲಸ ಮಾಡಿದ್ದ ಪಕ್ಕದ ಜಿಲ್ಲೆಯ ಕೆಲ ಅಧಿಕಾರಿಗಳೂ ಬಂದಿದ್ದರು.

ಇದೆಲ್ಲಾ ಬೇಕಿತ್ತೇ?

ತನಿಖಾ ವರದಿಯು ಸಚಿವಾಲಯದಲ್ಲಿ ಧೂಳು ಕುಡಿಯುತ್ತಾ ಕೂತಿದ್ದಂತೆ ಆತನ ಸ್ನೇಹಿತರು ಇದೆಲ್ಲಾ ಬೇಕಿತ್ತೇ? ಕೊನೆಗೆ ಏನನ್ನು ಸಾಧಿಸಿದೆ? ಎಂದು ಕೇಳಲಾರಂಭಿಸಿದರು. ಅವರಿಗೆ ಏನು ಉತ್ತರಿಸಬೇಕೆಂದು ಗೊತ್ತಾಗಲಿಲ್ಲ. ತಾನು ಜಿಲ್ಲೆಗಾಗಿ ಹಮ್ಮಿಕೊಂಡಿದ್ದ ಹಲವಾರು ಯೋಜನೆಗಳು ಅಪೂರ್ಣಗೊಂಡಿದ್ದ ಸಂಗತಿ ಅವರಲ್ಲಿ ಉದ್ವೇಗ ಮತ್ತು ಕಳವಳವನ್ನು ಹುಟ್ಟಿಹಾಕಿತ್ತು.

ಆ ಜಿಲ್ಲೆಯನ್ನು ಬಿಟ್ಟ ಬಹುದಿನಗಳ ನಂತರವೂ ಹಲವಾರು ಪ್ರಶ್ನೆಗಳು ಅವರ ಮನಸ್ಸನ್ನು, ಹೃದಯವನ್ನು ಕಾಡುತ್ತಿದ್ದವು. ಭ್ರಷ್ಟಾಚಾರವು ನಮ್ಮ ವ್ಯವಸ್ಥೆಯಲ್ಲಿ ಅನಿವಾರ್ಯವೇ? ಅದನ್ನು ವಿರೋಧಿಸುವ ಪ್ರಯತ್ನವು ವ್ಯರ್ಥವೇ? ನಮ್ಮ ಸುತ್ತಮುತ್ತಲಿನ ಭ್ರಷ್ಟಾಚಾರವನ್ನು ನಿಯಂತ್ರಿಸದೇ ನಾವಷ್ಟೇ ಸರಿಯಿದ್ದರೆ ಸಾಕೇ? ಹಿರಿಯ ಅಧಿಕಾರಿಗಳು ಹೇಳಿದ್ದಂತೆ ಹಿಂದಿನ ಗೋರಿಗಳನ್ನು ಕೆದಕದೆ ತನ್ನ ಅವಧಿಯಲ್ಲಿ ಮಾತ್ರ ಭ್ರಷ್ಟಾಚಾರವಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕಿತ್ತೇ? ಸ್ಥಳೀಯ ಅಧಿಕಾರವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ತನ್ನ ವಿರುದ್ಧ ತಿರುಗಿಬಿದ್ದದು ಏಕೆ? ಅಷ್ಟೊಂದು ಜನರು ತನ್ನ ಬೆಂಬಲಕ್ಕಿದ್ದರೂ ಅವರ ಬೆಂಬಲ ಸಕ್ರಿಯಾತ್ಮಕವಾಗಿರಲಿಲ್ಲವೇಕೆ? ತಾನು ಬೇರೆ ರೀತಿ ವತರ್ಿಸಿದ್ದರೆ ತನ್ನ ಉದ್ಧೇಶ ಯಶಸ್ವಿಯಾಗುತ್ತಿತ್ತೇ? ಕಾಯಂ ಆಗಿ ಭ್ರಷ್ಟಾಚಾರವನ್ನು ತೊಡೆದುಹಾಕಿ ಬಡವರಿಗೆ ನ್ಯಾಯ ಒದಗಿಸಲು ಏನಾದರು ಮಾಡಲು ಸಾಧ್ಯವೇ? ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟ, ಏಕೆ ಏಕಾಂಗಿ ಹೋರಾಟವಾಗುತ್ತದೆ?

ಇರಿಯುವಂತಹ ಈ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿರಲಿಲ್ಲ. ಆದರೆ ಅವರಿಗೆ ಒಂದು ವಿಷಯದ ಬಗೆಗೆ ಖಚಿತತೆ ಇತ್ತು. ಮತ್ತೊಮ್ಮೆ ಕಾಲದಲ್ಲಿ ಹಿಂದಕ್ಕೆ ಹೋಗಲು ಸಾಧ್ಯವಿದ್ದರೆ ಅವರು ಮತ್ತೆ ಅದೇ ರೀತಿ ವತರ್ಿಸುತ್ತಿದ್ದರು, ಖಂಡಿತವಾಗಿ ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುವುದಾಗಲಿ ಅಥವಾ ಆಳುವ ಶಕ್ತಿಗಳೊಂದಿಗೆ ರಾಜಿ/ಒಪ್ಪಂದಕ್ಕೆ ಮುಂದಾಗುತ್ತಿರಲಿಲ್ಲ.

ಅನುವಾದ: ವಿ.ಬಿ. ತಾರಕೇಶ್ವರ

2 thoughts on “ಹರ್ಷ ಮಂದೇರ್ ಬರಹ – 1: ಹಾಜರಾತಿಪಟ್ಟಿ ಕೇಳಿದರೆ ಗಂಟುಮೂಟೆ ಕಟ್ಟಿ

Leave a Reply

Your email address will not be published. Required fields are marked *