ಹಾಸನದಲ್ಲಿ ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕುರಿತ ವಿಚಾರಸಂಕಿರಣ

ಸ್ನೇಹಿತರೇ,

’ವರ್ತಮಾನ.ಕಾಮ್’ ಮತ್ತು ಹಾಸನದ ’ಸಹಮತ ವೇದಿಕೆ’ಯವರು ಕಳೆದ ಶನಿವಾರ ಹಾಸನದಲ್ಲಿ ಏರ್ಪಡಿಸಿದ್ದ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರಸಂಕಿರಣಕ್ಕೆ ದೊರೆತ ಸ್ಪಂದನೆ ಸಮಾಧಾನಕರವಾಗಿತ್ತು. ಬೆಂಗಳೂರಿನಿಂದ ಬಂದಿದ್ದ ಎಲ್.ಹನುಮಂತಯ್ಯ, ರಾಜಾ ನಾಯಕ್, ಮತ್ತು vartamaana-sahamata-invitationಸಿ.ಜಿ.ಶ್ರೀನಿವಾಸನ್‌ರವರು ದಲಿತರು ಉದ್ಯಮಿಗಳಾಗಬೇಕಾದ ಅಗತ್ಯ, ಮತ್ತು ಉದ್ಯಮವಲಯದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಅವರಿಗಿರುವ ಅವಕಾಶಗಳು, ಮತ್ತಿತರ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇಂತಹ ವಿಷಯಗಳ ಬಗ್ಗೆ ಪೂರಕವಾಗಿ ಸ್ಪಂದಿಸುವ ಹಾಸನದಲ್ಲಿರುವ ಪ್ರಖ್ಯಾತ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್‌ರವರು ಅಧ್ಯಕ್ಷತೆ ವಹಿಸಿ ದಲಿತರು ಎದುರಿಸಬಹುದಾದ ಸವಾಲುಗಳ ಬಗ್ಗೆ ಮಾತನಾಡಿದರು. ಹಾಸನದ ಪತ್ರಕರ್ತ ನಾಗರಾಜ್ ಹೆತ್ತೂರ್ ಕಾರ್ಯಕ್ರಮ ನಿರೂಪಿಸಿದರು. ಒಂದೂವರೆ ತಾಸಿನಲ್ಲಿ ಮುಗಿಯುತ್ತದೆ ಎಂದುಕೊಂಡ ಕಾರ್ಯಕ್ರಮ ಸಭಿಕರ ಪ್ರಶ್ನೆ, ಸಂವಾದ, ಆಸಕ್ತಿಯ ಕಾರಣವಾಗಿ ಎರಡೂವರೆ ತಾಸಿಗೂ ಹೆಚ್ಚಿಗೆ ನಡೆಯಿತು. ಲೇಖಕಿ ರೂಪ ಹಾಸನ, ಜೆ.ವಿ.ಕಾರ್‍ಲೊ, ಮುಂತಾದ ಹಲವು ಬರಹಗಾರರು ಮತ್ತು ಪ್ರಗತಿಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಟಿಪ್ಪಟಿಯನ್ನು ನಾನು ಈ ಮೊದಲೇ ಇಲ್ಲಿ ಬರೆಯಬೇಕಿತ್ತು. ಆದರೆ ನನ್ನ ಇತರೆ ಕೆಲವು ವೈಯಕ್ತಿಕ ಕೆಲಸಗಳ ಕಾರಣವಾಗಿ ಮಾಡಲಾಗಿರಲಿಲ್ಲ. ಕ್ಷಮೆ ಇರಲಿ. ಈ ಕಾರ್ಯಕ್ರಮದಲ್ಲಿ ಬಹಳ ಸವಿಸ್ತಾರವಾಗಿ ಮಾತನಾಡಿದ ಸಾಹಿತಿ, ರಾಜಕಾರಣಿ, ಮತ್ತು ಚಿಂತಕ ಎಲ್.ಹನುಮಂತಯ್ಯನವರ ಭಾಷಣದ ಧ್ವನಿಮುದ್ರಿಕೆಯನ್ನು ವರ್ತಮಾನ.ಕಾಮ್‌ನಲ್ಲಿ ಪಾಡ್‌ಕ್ಯಾಸ್ಟ್ ರೂಪದಲ್ಲಿ ಪ್ರಕಟಿಸುವ ಆಲೋಚನೆ ಇದೆ. ಒಂದಿಷ್ಟು ತಾಂತ್ರಿಕ ಕೆಲಸಗಳ ಕಾರಣದಿಂದಾಗಿ ಅದು ತಡವಾಗಿದೆ. ಇಷ್ಟರಲ್ಲೇ ಅದನ್ನು ಪ್ರಕಟಿಸುವ ಕೆಲಸ ಮಾಡಲಾಗುವುದು.

ಕಾರ್ಯಕ್ರಮ ಕುರಿತ ವರದಿಗಳು ಪ್ರಜಾವಾಣಿಯ ಸ್ಥಳೀಯ ಆವೃತ್ತಿಯಲ್ಲಿ, ಹಾಸನದ ಜನತಾ ಮಾಧ್ಯಮ ಪತ್ರಿಕೆಯಲ್ಲಿ, ಮತ್ತು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವನ್ನು ಇಲ್ಲಿ ಕೆಳಗೆ ಲಗತ್ತಿಸಲಾಗಿದೆ. ಹಾಗೆಯೇ ಹತ್ತಾರು ಚಿತ್ರಗಳನ್ನು ಹಾಸನದ ಐವಾನ್ ಡಿಸಿಲ್ವರು ತೆಗೆದಿದ್ದು ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ. ಇನ್ನೂ ಹೆಚ್ಚಿನ ಚಿತ್ರಗಳು ಡಿಸಿಲ್ವರ ಫೇಸ್‌ಬುಕ್ ಪೇಜ್‌ನಲ್ಲಿ ಇವೆ.

ಈ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಸಹಮತ ವೇದಿಕೆಯ ಸ್ನೇಹಿತರಿಗೆ ನಾನು ಆಭಾರಿ. ಹಾಗೆಯೇ, ಮೊದಲಿನಿಂದಲೂ ಈ ವಿಷಯದ ಬಗ್ಗೆ ಸ್ಪಂದಿಸುತ್ತ, ಈ ಕಾರ್ಯಕ್ರಮದ ಹಲವಾರು ಜವಾಬ್ದಾರಿಗಳನ್ನು ಹೊತ್ತು, ಬೆಂಗಳೂರಿನಿಂದ ನಮ್ಮೊಡನೆ ಬಂದಿದ್ದ ನಮ್ಮ ಬಳಗದ ಶ್ರೀಪಾದ್ ಭಟ್ಟರಿಗೂ ಸಹ ಧನ್ಯವಾದಗಳು. ಇದೇ ವಿಷಯದ ಬಗ್ಗೆ ದಕ್ಷಿಣ ಕರ್ನಾಟಕದಲ್ಲಿ ಹಲವು ಕಡೆ ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಶ್ರೀಪಾದ ಭಟ್ಟರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಊರು ಅಥವ ನಗರಗಳಲ್ಲಿ ಇದನ್ನು ಆಯೋಜಿಸಲು ಆಸಕ್ತರಾಗಿರುವ ಸ್ನೇಹಿತರು ಅವರನ್ನು ಅಥವ ನನ್ನನ್ನು ಸಂಪರ್ಕಿಸಬಹುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಪತ್ರಿಕಾ ವರದಿಗಳು:

ಪ್ರಜಾವಾಣಿ:

prajavani

 

 

ಜನತಾ ಮಾಧ್ಯಮ :

janatha-maadhyama-1

janatha-maadhyama-2

 

 

The Hindu:

the-hindu-report-hassan
ಕೆಲವು ಚಿತ್ರಗಳು:

dalit-entrepreneurship-1
dalit-entrepreneurship-2
dalit-entrepreneurship-3
dalit-entrepreneurship-4
dalit-entrepreneurship-5
dalit-entrepreneurship-6
dalit-entrepreneurship-7
dalit-entrepreneurship-10
dalit-entrepreneurship-8
dalit-entrepreneurship-9
dalit-entrepreneurship-11
dalit-entrepreneurship-12
dalit-entrepreneurship-13
dalit-entrepreneurship-14
dalit-entrepreneurship-15
dalit-entrepreneurship-16

One thought on “ಹಾಸನದಲ್ಲಿ ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕುರಿತ ವಿಚಾರಸಂಕಿರಣ

  1. ಅರುಣ್ ಜೋಳದಕೂಡ್ಲಿಗಿ

    ಇದೊಂದು ಒಳ್ಳೆಯ ಪ್ರಯತ್ನ. ಅಂತರ್ಜಾಲದಿಂದ ಹೀಗೆ ಜನಸಮುದಾಯದೊಳಗೆ ವರ್ತಮಾನ ಬೆರೆಯುವ ಬೆಸೆಯುವ ಅಗತ್ಯವಿದೆ. ಈ ನೆಲೆಯ ಚಂದ್ರಬಾನ್ ಪ್ರಸಾದ್ ಅವರ ಮುಖ್ಯ ಚಿಂತನೆಗಳನ್ನು ಸಂದರ್ಶನ ಮಾಡಿಯಾದರೂ, ಅವರ ಬರಹದ ಆಯ್ದ ಭಾಗವನ್ನಾದರೂ ಪ್ರಕಟಿಸಿರಿ.

    Reply

Leave a Reply to ಅರುಣ್ ಜೋಳದಕೂಡ್ಲಿಗಿ Cancel reply

Your email address will not be published. Required fields are marked *