ಸ್ನೇಹಿತರೆ,
ಹಾಸನದಲ್ಲಿ 07-09-2013 ರಂದು ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕಾರ್ಯಕ್ರಮದ ಬಗ್ಗೆ ನಿಮಗೆಲ್ಲ ತಿಳಿದಿದೆ. ಈಗ ಅದರ ಮುಂದುವರೆದ ಭಾಗವಾಗಿ ಎರಡನೆಯ ವಿಚಾರ ಸಂಕಿರಣ ಮತ್ತು ಸಂವಾದವನ್ನು ಇದೇ ತಿಂಗಳ 24 ರಂದು ತುಮಕೂರಿನಲ್ಲಿ ಆಯೋಜಿಸಲಾಗಿದೆ. ನಮ್ಮ ವರ್ತಮಾನ ಬಳಗದ ಶ್ರೀಪಾದ ಭಟ್ಟರು ಈ ಕಾರ್ಯಕ್ರಮವನ್ನು ಏರ್ಪಡಿಸಲು ಹಲವಾರು ದಿನಗಳಿಂದ ತೊಡಗಿಸಿಕೊಂಡಿದ್ದರು. ಈ ಸಾರಿ ನಮ್ಮ ಬಳಗದ ಜೊತೆಗೂಡಿರುವವರು ತುಮಕೂರಿನ “ಭೀಮರಾವ್ ಸಮಾಜ ಕಲ್ಯಾಣ ಸಂಸ್ಥೆ”ಯವರು. ಹೆಚ್ಚಿನ ವಿವರಗಳು ಕೆಳಗಿನ ಆಮಂತ್ರಣ ಪತ್ರದಲ್ಲಿದೆ. ದಯವಿಟ್ಟು ಸಾಧ್ಯವಾದವರೆಲ್ಲ ಭಾಗವಹಿಸಬೇಕೆಂದು ಕೋರುತ್ತೇನೆ. ಹಾಗೆಯೇ, ಈ ವಿಷಯವನ್ನು ಇತರೆ ಸಮಾನಮನಸ್ಕರ ಜೊತೆ ಮತ್ತು ಇದರ ಉಪಯೋಗ ಪಡೆಯಬಹುದಾದವರ ಜೊತೆ ಹಂಚಿಕೊಳ್ಳಬೇಕೆಂದು ವಿನಂತಿಸುತ್ತೇನೆ.
(ಹಾಸನದಲ್ಲಿ ನಾವು ಮೊದಲ ಕಾರ್ಯಕ್ರಮ ಆಯೋಜಿಸಿದಾಗ ಈ ವಿಷಯದ ಬಗ್ಗೆ ನಾನು ಬರೆದಿದ್ದ ಒಂದು ಟಿಪ್ಪಣಿ ಇಲ್ಲಿದೆ.)
ನಮಸ್ಕಾರ,
ರವಿ ಕೃಷ್ಣಾರೆಡ್ಡಿ
www.vartamaana.com