Daily Archives: December 14, 2013

“ಜನ ನುಡಿ” ಸಮಾವೇಶದಲ್ಲಿ ಸಾರಾ ಅಬೂಬಕರ್ ಮತ್ತು ಕಡಿದಾಳ್ ಶಾಮಣ್ಣ

ಕಲಾಂಗಣ (ಮಂಗಳೂರು): ಹಿರಿಯ ಲೇಖಕಿ ಸಾರಾ ಅಬೂಬಕರ್ ಉದ್ಘಾಟನಾ ಸಮಾರಂಭದಲ್ಲಿ ಆಡಿದ ಮಾತಿನ ಕೆಲ ಭಾಗಗಳು:

  • ನಾನು ಮೊದಮೊದಲು ಮುಗ್ಧವಾಗಿ ಯಾರೇ ಕರೆದರೂ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಸಂಘಟಕರ ಉದ್ದೇಶವೇನು, ಹಿನ್ನೆಲೆ ಏನು..ಏನೊಂದೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ನಾನು ಹಾಗಿಲ್ಲ.
  • ಕೋಟಿಗಟ್ಟಲೆ ಖಚರ್ು ಮಾಡಿ ನುಡಿಸಿರಿ ಸಂಭ್ರಮ ಮಾಡುವವರಿಗೆ ನಮ್ಮ ಊರಿನ ಹತ್ತಿರದಲ್ಲೇ ಎಂಡೋಸಲ್ಫಾನ್ ದುರಂತದಿಂದabhimata-page1ಇಂದಿಗೂ ನರಳುತ್ತಿರುವ ಮಕ್ಕಳು ಕಾಣುತ್ತಿಲ್ಲವೇ? ಅವರ ಆರೋಗ್ಯಕ್ಕಾಗಿ, ಸೌಖ್ಯಕ್ಕಾಗಿ ಒಂದಿಷ್ಟು ಹಣ ಖಚರ್ುಮಾಡಿದರೂ ಎಷ್ಟೋ ಉಪಯೋಗವಾಗುತ್ತಲ್ಲವಾ?
  • ಕಳೆದ ವರ್ಷ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತನೊಬ್ಬನನ್ನು ಪೊಲೀಸರು ಉಗ್ರನೆಂದು ಶಂಕಿಸಿ ಬಂಧಿಸಿದರು. ಕೆಲ ತಿಂಗಳ ನಂತರ ಅವನು ಹುಡುಗ ಅಮಾಯಕ ಎಂದು ಬಿಟ್ಟರು. ಈ ಸಂದರ್ಭದ ಹಿನ್ನೆಲೆಯಲ್ಲಿ ಒಂದು ಕತೆ ಬರೆದಿದ್ದೆ. ಅದೇ ಹೊತ್ತಿಗೆ ಪ್ರಜಾವಾಣಿಯವರು ಒಂದು ಕತೆಯನ್ನು ಕೇಳಿದ್ದರು. ನಾನು ಅದೇ ಕತೆಯನ್ನು ಕಳುಹಿಸಿದೆ. ಆದರೆ ಆ ಕತೆ ಇದುವರೆಗೂ ಆ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ. ಯಾಕೆ ಹೀಗಾಗುತ್ತೆ..?
  • ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ಮುಸ್ಲಿಂ ಮಹಿಳೆಯರ ಸಮಾವೇಶವಿತ್ತು. ಉತ್ತರ ಭಾರತದ ರಾಜ್ಯಗಳಿಂದ ಅನೇಕ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ತಮ್ಮ ರಾಜ್ಯದಲ್ಲಿ ತಾವು ಅನುಭವಿಸುತ್ತಿರುವ ಹಿಂಸೆಯನ್ನು ವಿವರಿಸಿದರು. ‘ಇನ್ನೂ ಯಾಕೆ ಈ ದೇಶದಲ್ಲಿದ್ದೀರಿ..ಪಾಕಿಸ್ತಾನಕ್ಕೆ ಹೋಗಿ..’ ಎಂದು ಅಲ್ಲಿಯ ಬಹುಸಂಖ್ಯಾತರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರಂತೆ. ಯಾಕೆ ಈ ದೇಶ ಅವರದೂ ಅಲ್ಲವೇ..?

ರೈತ ಚಳವಳಿಯ ಮುಂದಾಳು ಕಡಿದಾಳ್ ಶಾಮಣ್ಣ ಆಡಿದ ಕೆಲ ಮಾತುಗಳು:

  • ರೈತರಿಗೆ ಅವರು ಬೆಳೆಯುವ ಬೆಳೆಗೆ ದರ ನಿಗದಿ ಮಾಡುವ ಹಕ್ಕು ದೊರಕಬೇಕು.
  • ಎಲ್ಲಾ ಊರುಗಳಲ್ಲಿ ರೈತನಿಗೆ ಸೂಕ್ತ ಬೆಲೆ ಸಿಗುವ ತನಕ ತನ್ನ ಬೆಳೆಯನ್ನು ಸಂಗ್ರಹಿಸಿಡಲು ಉಗ್ರಾಣಗಳ ಅಗತ್ಯವಿದೆ.

ಮಂಗಳೂರಿನಲ್ಲಿ “ಜನನುಡಿ” ಸಮಾವೇಶ ಆರಂಭ

ಎರಡು ದಿನಗಳ “ಜನನುಡಿ” ವಿಚಾರ ಸಂಕಿರಣ ಡಾ.ಎಚ್.ಎಸ್. ಅನುಪಮ ಅವರ ಆಶಯ ಮಾತುಗಳೊಂದಿಗೆ ಕೆಲ ಹೊತ್ತಿಗೆ ಮೊದಲು ಆರಂಭವಾಯಿತು. ಅವರ ಮಾತುಗಳ ಕೆಲ ತುಣುಕುಗಳು ಇಲ್ಲಿವೆ:

  • ಬಂಡವಾಳಶಾಹಿಯ ಮೂಲಗುಣ ತನ್ನ ಇಡುಗಂಟನ್ನು ಕಾಪಿಟ್ಟುಕೊಳ್ಳುವುದು. ಇಡುಗಂಟನ್ನು ಕಾಯ್ದುಕೊಳ್ಳಲು ಯಾವುದೇ ರಾಜಿಗೂabhimata-page5 ಸಿದ್ಧವಾಗುವುದು ಅದರ ಚಾಳಿ. ಇಂದು ಅದೇ ಬಂಡವಾಳಶಾಹಿ ಸಾಹಿತ್ಯ ಕ್ಷೇತ್ರಕ್ಕೂ ಪ್ರವೇಶಿಸಿರುವುದು ಅಪಾಯಕಾರಿ. ಅರಸ, ದೇವರು ಮತ್ತು ದಾನಿಗಳ ದೃಷ್ಟಿ ಸಾಹಿತ್ಯ ಕ್ಷೇತ್ರದ ಮೇಲೆ ಬೀಳಬಾರದು. ಅಂತಹ ಬೆಳವಣಿಗೆಗಳನ್ನು ವಿರೋಧಿಸುವ ಚಾರಿತ್ರಿಕ ಕಾರಣಕ್ಕಾಗಿ ಸಮಾನ ಮನಸ್ಕ ಸಂಘಟನೆಗಳೆಲ್ಲ ಒಟ್ಟಿಗೆ ಸೇರಬೇಕಿದೆ.
  • ಜನನುಡಿ ಸಂಘಟನೆ ಹುಟ್ಟಿಕೊಳ್ಳಲು ಆಳ್ವಾಸ್ ನುಡಿಸಿರಿ ಲಾಂಚಿಗ್ ಪ್ಯಾಡ್ ಎನ್ನುವುದು ನಿಜವೇ ಆದರೂ, ಜನನುಡಿಯ ಆಶಯ, ಉದ್ದೇಶ ನುಡಿಸಿರಿಯ ಆಚಿನದ್ದು. ಬಹಳ ವಿಶಾಲವಾದದ್ದು.
  • ಈ ಕಾರ್ಯಕ್ರಮದ ಉದ್ದೇಶ ಎಲ್ಲರನ್ನು ಒಳಗೊಳ್ಳುವ ಒಂದು ಪ್ರಯತ್ನ. ಇಂತಹ ಒಂದು ಸಂಘಟನೆಯನ್ನು ಇರುವೆ ಗೂಡು ಕಟ್ಟುವ ಹಾಗೆ ಕಟ್ಟಬೇಕಿದೆ.
  • ಸತ್ಯ ಹೇಳಲು ಹಿಂಜರಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ನಮ್ಮ ಇಂತಹ ಪ್ರಯತ್ನದಿಂದ ತಮ್ಮ ಗುರುಗಳಾದ ವಿವೇಕ್ ರೈ ಅವರಿಗೆ ಅಗೌರವ ಸೂಚಿಸಿದಂತಾಗುತ್ತದೇನೋ ಎಂದು ಹಲವರು ಯೋಚಿಸುತ್ತಿದ್ದಾರೆ. ಗುರುವಿನ ಬಗ್ಗೆ ಗೌರವ ಇಟ್ಟುಕೊಂಡೇ ಅವರ ತಪ್ಪು ಹೆಜ್ಜೆ ಇಟ್ಟಾಗ ವಿಮಶರ್ಿಸುವ ಅಗತ್ಯ ಇದೆ. ಸಂಪೂರ್ಣ ಶರಣಾಗತಿ ಗುರುಭಕ್ತಿ ಅಲ್ಲ.
  • ನಾನು ವೈಯಕ್ತಿಕವಾಗಿ ಈ ವೇದಿಕೆ ಮೂಲಕ ಒಂದು ನಿರ್ಣಯ ತೆಗೆದುಕೊಳ್ಳುತ್ತಿದ್ದೇನೆ. ಎಂದಿಗೂ ಕೋಮುವಾದಿ ವ್ಯಕ್ತಿ, ಸಂಘಟನೆ ಅಥವಾ ಸರಕಾರ ನಡೆಸುವ ಕಾರ್ಯಕ್ರಮ, ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ. ಅಂತಹ ವ್ಯಕ್ತಿ, ಸಂಘಟನೆ ಮತ್ತು ಸರಕಾರ ನೀಡುವ ಪ್ರಶಸ್ತಿ ಸ್ವೀಕರಿಸುವುದಿಲ್ಲ.

ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ತಮ್ಮ ಮಾತುಗಳಿಂದ ಸಮಾವೇಶಕ್ಕೆ ಚಾಲನೆ ನೀಡಿದರು. ಅವರ ಮಾತುಗಳ ಆಯ್ದ ಭಾಗಗಳು:

  • ಕೆಲವು ವರ್ಷಗಳ ಹಿಂದೆ ನಾವು ಜಾಗತೀಕರಣ ಸೃಷ್ಟಿಸುವ ಮಾರುಕಟ್ಟೆಯಲ್ಲಿ ಕಾವ್ಯಕ್ಕೆ ಸ್ಥಾನ ಇರುವುದಿಲ್ಲ ಎಂದು ತಪ್ಪಾಗಿ ಭಾವಿಸಿದ್ದೆವು. ಆದರೆ ಈಗ ಈ ಜಾಗತೀಕರಣ ಕಾವ್ಯ, ಸಾಹಿತ್ಯಗಳೆಲ್ಲವೂ ತನ್ನ ಮನರಂಜನೆಗಾಗಿ ಅಗತ್ಯ ಎಂದು ಮುನ್ನೆಲಗೆ ತಂದು ಅವನ್ನು ಕ್ಷುಲ್ಲಕಗೊಳಿಸುತ್ತಿದೆ. (ಟ್ರಿವಿಯಲೈಸ್)
  • ಸಾಹಿತ್ಯ ಇಂದು ಅನುಸರಿಸಬೇಕಾದ್ದು ಅಂಬೇಡ್ಕರ್ ಸೂಚಿಸಿದ ಮಾರ್ಗ. ಅದು ಅವ್ಯಕ್ತ ಹಿಂಸೆಗಳನ್ನು ವ್ಯಕ್ತಪಡಿಸುವುದು.
  • ನಮ್ಮೆದುರು ನಡೆಯುವ ಘಟನೆಗಳನ್ನು ಸೂಕ್ತ ಪದಗಳಲ್ಲಿ ಗುರುತಿಸುವುದೂ ಬಹುಮುಖ್ಯ ಕರ್ತವ್ಯವಾಗಿ ಕಾಣುತ್ತಿದೆ. ಜನಾಂಗಿಯ ಕಗ್ಗೊಲೆಯಾದರೆ, ಅದನ್ನು ದೊಂಬಿ ಎಂದು ಕರೆಯದೆ ಜನಾಂಗಿಯ ಕಗ್ಗೊಲೆ ಎಂದೇ ಕರೆಯಬೇಕು.
  • ನಾವು ಇಂದು ಮಧ್ಯಮ ವರ್ಗ ಅಲ್ಲ, ಮಾಧ್ಯಮ ವರ್ಗ ಆಗಿದ್ದೇವೆ.
  • ದೇಶ ವಿಭಜನೆಯ ಕತೆಗಳನ್ನು ಕೇಳಿದ ಮೇಲೂ ಇಂದು ಅಂತಹ ಸನ್ನಿವೇಶಗಳ ಪುನರಾವರ್ತನೆಯನ್ನು ಬಯಸುವ ಅನೇಕರು ನಮ್ಮ ಸುತ್ತಲಿದ್ದಾರೆ. ಜಾಗತಿಕ ಹಿಂಸೆಗೆ ಪುರುಷ ಪ್ರಧಾನ ಸಮಾಜ ಕಾರಣ ಎಂದು ಅರಿತಿದ್ದ ಗಾಂಧಿಯ ಬಗ್ಗೆ ನಮಗೆ ಅರಿವಿದ್ದೂ, ಇಂದು ಪುರುಷರಷ್ಟೇ ಅಲ್ಲ, ಲೋಹ ಪುರುಷರ ಅಗತ್ಯವಿದೆ ಎಂದು ವಾದಿಸುತ್ತೇವೆ.
  • ಎಂತಹ ವ್ಯಕ್ತಿ ಜನಾಂಗಿಯ ಕಗ್ಗೊಲೆಗೆ ಕಾರಣನಾದನೋ, ಅವನನ್ನೇ ಮುಂದಿನ ನಾಯಕ ಎಂದು ಘೋಷಿಸುವ ಮೂಲಕ ‘they declared war against all oppressed groups.