“ಜನ ನುಡಿ” ಸಮಾವೇಶದಲ್ಲಿ ಸಾರಾ ಅಬೂಬಕರ್ ಮತ್ತು ಕಡಿದಾಳ್ ಶಾಮಣ್ಣ

ಕಲಾಂಗಣ (ಮಂಗಳೂರು): ಹಿರಿಯ ಲೇಖಕಿ ಸಾರಾ ಅಬೂಬಕರ್ ಉದ್ಘಾಟನಾ ಸಮಾರಂಭದಲ್ಲಿ ಆಡಿದ ಮಾತಿನ ಕೆಲ ಭಾಗಗಳು:

  • ನಾನು ಮೊದಮೊದಲು ಮುಗ್ಧವಾಗಿ ಯಾರೇ ಕರೆದರೂ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಸಂಘಟಕರ ಉದ್ದೇಶವೇನು, ಹಿನ್ನೆಲೆ ಏನು..ಏನೊಂದೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ನಾನು ಹಾಗಿಲ್ಲ.
  • ಕೋಟಿಗಟ್ಟಲೆ ಖಚರ್ು ಮಾಡಿ ನುಡಿಸಿರಿ ಸಂಭ್ರಮ ಮಾಡುವವರಿಗೆ ನಮ್ಮ ಊರಿನ ಹತ್ತಿರದಲ್ಲೇ ಎಂಡೋಸಲ್ಫಾನ್ ದುರಂತದಿಂದabhimata-page1ಇಂದಿಗೂ ನರಳುತ್ತಿರುವ ಮಕ್ಕಳು ಕಾಣುತ್ತಿಲ್ಲವೇ? ಅವರ ಆರೋಗ್ಯಕ್ಕಾಗಿ, ಸೌಖ್ಯಕ್ಕಾಗಿ ಒಂದಿಷ್ಟು ಹಣ ಖಚರ್ುಮಾಡಿದರೂ ಎಷ್ಟೋ ಉಪಯೋಗವಾಗುತ್ತಲ್ಲವಾ?
  • ಕಳೆದ ವರ್ಷ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತನೊಬ್ಬನನ್ನು ಪೊಲೀಸರು ಉಗ್ರನೆಂದು ಶಂಕಿಸಿ ಬಂಧಿಸಿದರು. ಕೆಲ ತಿಂಗಳ ನಂತರ ಅವನು ಹುಡುಗ ಅಮಾಯಕ ಎಂದು ಬಿಟ್ಟರು. ಈ ಸಂದರ್ಭದ ಹಿನ್ನೆಲೆಯಲ್ಲಿ ಒಂದು ಕತೆ ಬರೆದಿದ್ದೆ. ಅದೇ ಹೊತ್ತಿಗೆ ಪ್ರಜಾವಾಣಿಯವರು ಒಂದು ಕತೆಯನ್ನು ಕೇಳಿದ್ದರು. ನಾನು ಅದೇ ಕತೆಯನ್ನು ಕಳುಹಿಸಿದೆ. ಆದರೆ ಆ ಕತೆ ಇದುವರೆಗೂ ಆ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ. ಯಾಕೆ ಹೀಗಾಗುತ್ತೆ..?
  • ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ಮುಸ್ಲಿಂ ಮಹಿಳೆಯರ ಸಮಾವೇಶವಿತ್ತು. ಉತ್ತರ ಭಾರತದ ರಾಜ್ಯಗಳಿಂದ ಅನೇಕ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ತಮ್ಮ ರಾಜ್ಯದಲ್ಲಿ ತಾವು ಅನುಭವಿಸುತ್ತಿರುವ ಹಿಂಸೆಯನ್ನು ವಿವರಿಸಿದರು. ‘ಇನ್ನೂ ಯಾಕೆ ಈ ದೇಶದಲ್ಲಿದ್ದೀರಿ..ಪಾಕಿಸ್ತಾನಕ್ಕೆ ಹೋಗಿ..’ ಎಂದು ಅಲ್ಲಿಯ ಬಹುಸಂಖ್ಯಾತರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರಂತೆ. ಯಾಕೆ ಈ ದೇಶ ಅವರದೂ ಅಲ್ಲವೇ..?

ರೈತ ಚಳವಳಿಯ ಮುಂದಾಳು ಕಡಿದಾಳ್ ಶಾಮಣ್ಣ ಆಡಿದ ಕೆಲ ಮಾತುಗಳು:

  • ರೈತರಿಗೆ ಅವರು ಬೆಳೆಯುವ ಬೆಳೆಗೆ ದರ ನಿಗದಿ ಮಾಡುವ ಹಕ್ಕು ದೊರಕಬೇಕು.
  • ಎಲ್ಲಾ ಊರುಗಳಲ್ಲಿ ರೈತನಿಗೆ ಸೂಕ್ತ ಬೆಲೆ ಸಿಗುವ ತನಕ ತನ್ನ ಬೆಳೆಯನ್ನು ಸಂಗ್ರಹಿಸಿಡಲು ಉಗ್ರಾಣಗಳ ಅಗತ್ಯವಿದೆ.