“ಜನ ನುಡಿ” ಮತ್ತು “ನುಡಿಸಿರಿ”ಯಲ್ಲಿನ ಅನುಭವಗಳು

– ಸುರೇಶ್ ನಾಯಕ್
ಜರ್ನಲಿಸಂ ವಿದ್ಯಾರ್ಥಿ

ನುಡಿ, ಸಿರಿಯೂ ಹೌದು, ಬದುಕೂ ಹೌದು. ಅದರಲ್ಲಿ ಎಲ್ಲ ಸಮುದಾಯಗಳು ಪಾಲ್ಗೊಳ್ಳಬೇಕು. ದಲಿತ ಮತ್ತು ಅಲ್ಪಸಂಖ್ಯಾತರ ಶೋಷಣೆ, ಕೋಮುವಾದ, ಬಂಡವಾಳಶಾಯಿತ್ವ, ಮಹಿಳೆಯರ ಸ್ಥಿತಿಗತಿ, ಕಾರ್ಮಿಕರ ಸಮಸ್ಯೆಗಳ ವಿಷಯಗಳನ್ನು ಚರ್ಚೆ ಮಾಡಬೇಕು. ಡಿಸೆಂಬರ 14 ಮತ್ತು 15 ರವರಗೆ “ಅಭಿಮತ ಮಂಗಳೂರು” abhimatha-mangalooru-jananudiನೇತೃತ್ವದಲ್ಲಿ ನಡೆದ “ಜನ ನುಡಿ” ಮತ್ತು ಡಿಸೆಂಬರ 19 ರಿಂದ 22 ರವರಗೆ ಮೋಹನ್ ಅಳ್ವ ನೇತೃತ್ವದಲ್ಲಿ ನಡೆದ “ನುಡಿಸಿರಿ” ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆನು. ಈ ಎರಡು ಕಾರ್ಯಕ್ರಮದಲ್ಲಿ ನನಗೆ ವಿಭಿನ್ನ ಅನುಭವ ಸಿಕ್ಕಿತ್ತು. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಳ್ವಾಸ್ ನುಡಿಸಿರಿಯಲ್ಲಿ ಭರ್ಜರಿ ಚರ್ಚೆಯಾಯಿತು. ಆದರೆ ಕರಾವಳಿ ತಲ್ಲಣಗಳಾದ ಕೋಮುವಾದ, ಮಹಿಳಾ ದೌರ್ಜನ್ಯಗಳು, ಮಡೆಸ್ನಾನ ಮತ್ತು ಪಂಕ್ತಿಬೇಧ ವಿಷಯದ ಬಗ್ಗೆ ನನ್ನ ಕಿವಿಗೆ ಕೇಳಿಸಲೇ ಇಲ್ಲ. “ಜನನುಡಿ”ಯಲ್ಲಿ ಈ ಎಲ್ಲಾ ವಿಷಯಗಳ ಚರ್ಚೆಯಾಯಿತ್ತು.

ಜನನುಡಿಯಲ್ಲಿ ಸೌಜನ್ಯ ಅತ್ಯಾಚಾರ ಪ್ರಕರಣದ ನ್ಯಾಯಕ್ಕಾಗಿ ಹೋರಾಡುತ್ತಿರುವ ಅತ್ರಾಡಿ ಅಮೃತ ಶೆಟ್ಟಿ. ಪಬ್ ಮೇಲೆ ಮೂಲಭೂತವಾದಿಗಳು ದಾಳಿ ಮಾಡಿದಾಗ “ನಮ್ಮ ಮಕ್ಕಳ ಮೇಲೆ ಕೈ ಮಾಡಲು ನೀವು ಯಾರು?” ಎಂದು ಪ್ರಶ್ನಿಸಿದ್ದ ಸಬಿಹಾ ಭೂಮಿ ಗೌಡ, ಬುಡಕಟ್ಟು ಸಮುದಾಯಕ್ಕೆ ಆಗುತಿರುವ ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಜ್ಯೋತಿ ಮತ್ತು ಮಂಜುಳ, ಉತ್ತರ ಕರ್ನಾಟಕ ಭಾಗದ ಪ್ರಮುಖ ಮಹಿಳಾ ಹೋರಾಟಗಾರ್ತಿಯರಾದ ಕೆ.ನೀಲಾ, ಮೀನಾಕ್ಷಿ ಬಾಳಿ ಹಾಗೂ ಗುಲಾಬಿ ಬಿಳಿಮಲೆ, ವಸುಂಧರಾ, ಎಚ್ ಎಸ್ ಅನುಪಮಾ, ವಿಮಲಗೌಡ ಇನ್ನೂ ಮುಂತಾದ ಮಹಿಳಾ ಶಕ್ತಿಗಳು ಒಂದೆಡೆ ಸೇರಿರುವುದು ಕಾರ್ಯಕ್ರಮಕ್ಕೆ ಆನೆಬಲ ಬಂದಂತಾಗಿತ್ತು. ಇಂತಹ ಸ್ತ್ರೀಶಕ್ತಿಗಳು “ಆಳ್ವಾಸ್ ನುಡಿಸಿರಿ”ಯಲ್ಲಿ ಏಕೆ ಇರಲಿಲ್ಲ?

ನುಡಿಸಿರಿಯಲ್ಲಿ ಸುಮಾರು ಒಂಬತ್ತು ವೇದಿಕೆಗಳು ಇದ್ದರೂ ಕರಾವಳಿ ತಲ್ಲಣಗಳಾದ, ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ಒಬ್ಬರಾದರೂ ಮಾತನಾಡಲಿಲ್ಲ. ಪಬ್ ದಾಳಿಯನ್ನು ವಿರೋಧಿಸಲಿಲ್ಲ. ಹಿಂದೂತ್ವ ಹೆಸರಿನಲ್ಲಿ ನಡೆಯುವ ಕೋಮು ಸಂಘರ್ಷದ ಬಗ್ಗೆ “ಕ್ಯಾರೆ” ಅನ್ನಲಿಲ್ಲ. ಸಮಾಜದ ಕಟ್ಟಕಡೆಯ ಸಮುದಾಯವಾದ ಕೊರಗ alva-nudisiri-baraguru-bhairappaಜನಾಂಗದ ಬಗ್ಗೆ ಚರ್ಚೆಯಾಗಲಿಲ್ಲ. ಕಾರ್ಯಕ್ರಮದಲ್ಲಿ ಕೇವಲ ಸಂಗೀತ, ಸಾಹಿತ್ಯ, ಕಲೆ ಪ್ರದರ್ಶಿಸಿದರೆ ಸಾಲದು ಕಲೆಯ ಹಿಂದಿರುವ ಕಲೆಗಾರರ ನೋವುಗಳ ಬಗ್ಗೆ ಚರ್ಚೆಯಾಗಬೇಕು. ಇಂತಹ ಚರ್ಚೆ ಮೂಲಕ ಸರ್ಕಾರದ ಗಮನ ಸೆಳೆದು ಅವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಕೊರಗ ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರಲು ಪ್ರಯತ್ನ ನಡೆಯುತ್ತಿದೆ. ಆದರೂ ಮೂಲನಿವಾಸಿಗಳಾದ ಇವರಿಗೆ ಸಾಮಾಜಿಕ ಗೌರವ ಇಲ್ಲ. ಉಳುಮೆ ಮಾಡಲು ಭೂಮಿಯೂ ಇಲ್ಲ. ದೇವಸ್ಥಾನಗಳಿಗೆ ಪ್ರವೇಶವಿಲ್ಲ. ಒಟ್ಟಿನಲ್ಲಿ ಕೊರಗರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಶೈಕ್ಷಣಿಕವಾಗಿ ಮುಂದುವರೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಈ ಪರಿಸ್ಥಿತಿ ಇರುವುದು ವಿಪರ್ಯಾಸ. ಇಂತಹ ಜಾತಿ ತಾರತಮ್ಯ ನೆಡೆಯುತ್ತಿದ್ದರು, ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.

ಕರಾವಳಿ ಭಾಗದ ನಿರುದ್ಯೋಗಿ ಮೊಗವೀರ ಮತ್ತು ಬಂಟ ಸಮುದಾಯದ ಯುವಕರನ್ನು ಸಂಘ ಪರಿವಾರದವರು ಬಳಸಿಕೊಂಡು ಕೋಮುವಾದವನ್ನು ಬಿತ್ತುತಿದ್ದಾರೆ. ಈ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಚರ್ಚೆ ಮಾಡಿ, ಪರ್ಯಾಯ ಉತ್ತರ ಕಂಡುಕೊಳ್ಳಲು ಹುಟ್ಟಿಕೊಂಡಿರುವುದು “ಜನ ನುಡಿ”ಯಲ್ಲಿ ಎಂದು ನನಗೆ ಅನಿಸಿದೆ. ಪ್ರೊಫೆಸರ್ ಎಸ್.ಜಿ. ಸಿದ್ಧರಾಮಯ್ಯ “ಜನ ನುಡಿ” ಕಾರ್ಯಕ್ರಮದಲ್ಲಿ ಮಡೆಸ್ನಾನ ಬಗ್ಗೆ ಕಟುವಾಗಿ ಟೀಕಿಸುತ್ತಾ abhimata-mangaluru-jananudi“ಉರುಳಾಡುವವನಿಗೆ ಬುದ್ಧಿ ಇಲ್ಲಂದ್ರೆ, ಉಣ್ಣುವನಿಗೆ ಬುದ್ದಿ ಇಲ್ವಾ? ಅದಕ್ಕೆ ಹಿರಿಯರು ’ಹೊಟ್ಟೆಗೆ ಏನ್ ತಿನ್ನುತ್ತಿಯಾ’ ಎನ್ನುತ್ತಾರೆ. ಇಂತ ಸಂಸ್ಕೃತಿ ಬದಲಾಗಬೇಕು. ಉಳ್ಳವ ಮತ್ತು ಇಲ್ಲದವ ಎಂಬ ಬೇಧಭಾವ ತೊಲಗಿದಾಗ ಮಾತ್ರ ಸಮಾಜದಲ್ಲಿ ಎಲ್ಲ ಸಮುದಾಯಗಳು ಕೂಡಿಬಾಳಲು ಸಾದ್ಯವಾಗುತ್ತದೆ” ಎಂದರು. ಪ್ರಗತಿಪರ ಚಿಂತಕರಾದ ರಹಮತ್ ತರೀಕೇರಿ ಮಾರುಕಟ್ಟೆಯ ವ್ಯವಸ್ಥೆ ಬಗ್ಗೆ ಮಾತನಾಡಿ “ಮಾರುಕಟ್ಟೆ ಪ್ರಜಾಪ್ರಭುತ್ವವನ್ನು ನಿಯಂತ್ರಣ ಮಾಡುತ್ತಿದೆ. ಧರ್ಮ, ಸಾಹಿತ್ಯ, ಕಲೆ, ಶಿಕ್ಷಣ ಮಾರುಕಟ್ಟೆಯಾಗಿದೆ. ಭೂತಾರಾಧನೆಯಂತಹ ಆಚರಣೆಗಳು ಉಳಿಗಮಾನ್ಯ ಪದ್ಧತಿಯನ್ನು ಇನ್ನೂ ಜೀವಂತವಾಗಿ ಇಟ್ಟಿವೆ” ಎಂದರು.

ಕವಿಗೋಷ್ಠಿಯಲ್ಲಿ ಪಿಚ್ಚಳ್ಳಿ ಶ್ರೀನಿವಾಸಮೂರ್ತಿ “ಕವಿಯಾದವನು ಎಲ್ಲ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇವತ್ತಿನ ದಿನಗಳಲ್ಲಿ ಜಾಗತಿಕರಣ ಎಂಬ ಭೂತದಿಂದ ಮನೆಯಲ್ಲಿ ಕುಳಿತು ಪಿಜ್ಜಾ, ಬರ್ಗರ್, ಕೋಲಾ, ಕುಡಿಯುವಂತೆ ಮಾಡಿದೆ. ಆದರೆ ಎಳನೀರು ಮತ್ತು ಮಜ್ಜಿಗೆ ಇವುಗಳ ನಡುವೆ ಮಾಯಾವಾಗುತ್ತಿದೆ. ಸಮಾಜದಲ್ಲಿ ಮೇಲು ಕೀಳುಗಳ ಬಗ್ಗೆ ಕೈವಾರ ತಾತಯ್ಯನವರು ’ಉಚ್ಚೆ ಬರುವ ದ್ವಾರದಲ್ಲಿ ಬಂದು, ಉಚ್ಚ ನಾನೆಂದು ಮೆರೆಯುವೆಯಾ’” ಎನ್ನುವ ಸಾಲುಗಳನ್ನು ನೆನಪಿಸಿಕೊಂಡರು. ಇಂತಹ ಅನುಭವಿಗಳ ವಿಚಾರಗಳು ಜನನುಡಿಯಲ್ಲಿ ನನಗೆ ಸಿಕ್ಕಿದೆ. ಆದರೆ ನುಡಿಸಿರಿಯಲ್ಲಿ ವಾಸ್ತವಕ್ಕೆ ದೂರವಾದ ಸಾಹಿತ್ಯದ ವೈಭವದ ನುಡಿಗಳಿದ್ದವು.

ದುಡ್ಡು ಇರುವವರು ಕಲೆ, ಸಂಸ್ಕೃತಿಯನ್ನು ವ್ಯಾಪಾರಕ್ಕೆ ಬಳಸದೆ ಜನಪರ ಕಾಳಜಿಗಾಗಿ ಬಳಸಿದರೆ ಅರ್ಥಪೂರ್ಣವಾಗಿರುತ್ತದೆ. ಮೋಹನ್ ಆಳ್ವರು ಮುಂದಿನ ದಿನಗಳಲ್ಲಿ ಜನಪರ ಕಾಳಜಿಯಿಂದ ಮುನ್ನಡೆಯುತ್ತಾರೆ ಎನ್ನುವ ಭರವಸೆ ಇದೆ. ಜನರ ಭರವಸೆಯನ್ನು ಉಳಿಸಿಕೊಳ್ಳುವುದು-ಬಿಡುವುದು ಅವರಿಗೆ ಬಿಟ್ಟ ವಿಷಯ.

3 thoughts on ““ಜನ ನುಡಿ” ಮತ್ತು “ನುಡಿಸಿರಿ”ಯಲ್ಲಿನ ಅನುಭವಗಳು

  1. prasadraxidi

    ಮೋಹನ ಆಳ್ವರು ನಿಮ್ಮ ಭರವಸೆಯನ್ನು ಉಳಿಸಿಕೊಳ್ಳಲಿ ಎಂದು ಆಶಿಸೋಣ.. ಇಲ್ಲದಿದ್ದರೆ ನಮ್ಮ ದಾರಿ ನಮಗೆ… ಇಷ್ಟೆಲ್ಲ ಜಾಗತೀಕರಣದ- ಗ್ಲೋಬಲ್. ವಿಲೇಜ್ ಗಿಂತ ಪ್ರಪಂಚ ತುಂಬಾದೊಡ್ಡದು…

    Reply

Leave a Reply to prakashjaipura Cancel reply

Your email address will not be published. Required fields are marked *