Daily Archives: January 15, 2014

ಜನವರಿ 19 ರಂದು ಮೈಸೂರಿನಲ್ಲಿ “ದಲಿತರು ಮತ್ತು ಉದ್ಯಮಶೀಲತೆ” – ವಿಚಾರ ಸಂಕಿರಣ ಮತ್ತು ಸಂವಾದ

ಸ್ಣೇಹಿತರೇ,

ಇತರ ಸಮಾನಮನಸ್ಕ ಸಂಸ್ಥೆ ಮತ್ತು ಸಂಘಗಳ ಜೊತೆ ಸೇರಿ ವರ್ತಮಾನ.ಕಾಮ್ ನಡೆಸುತ್ತಿರುವ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕಿರಣ ಮತ್ತು ಸಂವಾದದ ಮೂರನೆಯ ಕಾರ್ಯಕ್ರಮ ಬರುವ ಭಾನುವಾರದಂದು (ಜನವರಿ 19, 2014) ಮೈಸೂರಿನಲ್ಲಿ ನಡೆಯಲಿದೆ. dailts-entrepreneurship-mysoreಈ ಸರಣಿಯ ಮೊದಲ ಕಾರ್ಯಕ್ರಮ ಹಾಸನದಲ್ಲಿ ನಡೆಯಿತು. ಎರಡನೆಯದನ್ನು ತುಮಕೂರಿನಲ್ಲಿ ಆಯೋಜಿಸಲಾಗಿತ್ತು. ಮೈಸೂರಿನ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ “ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ”ದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಆ ಕಾರ್ಯಕ್ರಮದ ವಿವರಗಳನ್ನು ಲಗತ್ತಿಸಲಾಗಿದೆ.

ಮೈಸೂರು ಮತ್ತು ಸುತ್ತಮುತ್ತಲಿನ ಆಸಕ್ತರು, ಲೇಖಕರು, ಉದ್ಯಮಿಗಳು, ಚಳವಳಿಯಲ್ಲಿ ಇರುವವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇವೆ.

ನಮಸ್ಕಾರ,
ಬಿ. ಶ್ರೀಪಾದ್ ಭಟ್ ಮತ್ತು ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್ ಪರವಾಗಿ