ವಿದೇಶಿ ಪ್ರವಾಸಿಗರ ನಜರಲ್ಲಿ ರೇಪಿಸ್ಥಾನ್ ಆಗದಿರಲಿ


– ಡಾ.ಎಸ್.ಬಿ. ಜೋಗುರ


 

ಕಾಮಾತುರರಿಗೆ ಕಣ್ಣಿಲ್ಲ. ಹಾಗೆಯೇ ದೇಶ ಭಾಷೆಯ ಹಂಗೂ ಇಲ್ಲ. ಇವರ ವಿಷಯ ವಾಸನೆಯ ಮುಂದೆ ದೇಶದ ಮಾನ ಸಮ್ಮಾನಗಳಂತೂ ಏನೂ ಅಲ್ಲ. ’ಅತಿಥಿ ದೇವೋಭವ’ ಎಂಬ ವಿಷಯದಲ್ಲಿ ಬೇರೆ ರಾಷ್ಟ್ರಗಳಿಗೆ ಗುರುವಿನ ಸ್ಥಾನದಲ್ಲಿರುವ ನಮ್ಮ ದೇಶ ಈಗೀಗ ಕೆಲವೇ ಕೆಲವು ಕಿರಾತಕರಿಂದ ವಿಶ್ವವ್ಯಾಪಕವಾಗಿ ಅಪಮಾನವನ್ನು ಮೂದಲಿಕೆಯ ಮಾತುಗಳನ್ನು ಅನುಭವಿಸಬೇಕಾಗಿ ಬರುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ದೇಶದ ರಾಜಧಾನಿ ಅತ್ಯಾಚಾರಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವದು ಇನ್ನೊಂದು ದೊಡ್ದ ವಿಪರ್ಯಾಸ. ಈಚೆಗೆ 51 ವರ್ಷ national-post-danish-gang-rape-delhiವಯಸ್ಸಿನ ಡೆನ್ಮಾರ್ಕ್ ಮೂಲದ ಮಹಿಳೆಯೋರ್ವಳ ಮೇಲೆ 8 ಜನ ರಕ್ಕಸರ ಹಾಗೆ ಎರಗಿ ಅವಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವುದು ಮಾತ್ರವಲ್ಲದೇ ಆಕೆಯ ಬಳಿಯಿದ್ದ ಹಣವನ್ನೆಲ್ಲ ಕಿತ್ತುಕೊಂಡು ಅವಳ ಮೊಬೈಲ್, ವಾಚ್ ಕೂಡಾ ಅಪಹರಿಸಿದ್ದಾರೆ. ಸುಮಾರು ಐದು ಘಂಟೆಗಳ ಕಾಲ ಈ ವಿಕೃತರು ಅವಳ ಮೇಲೆ ಅತ್ಯಾಚಾರ ಎಸಗಿರುವದಿದೆ. ಆ ಮಹಿಳೆ ತಾನು ಉಳಿದುಕೊಂಡ ಹೊಟೆಲ್ ಸ್ವಾಗತಕಾರನ ಬಳಿ ರಿಕ್ಷಾಗೆ ದುಡ್ದು ಬೇಡುವಂಥಾ ದೈನೇಸಿ ಸ್ಥಿತಿಯನ್ನು ನಿರ್ಮಿಸಿದ ಈ ದುರುಳರಿಗೆ ತಮ್ಮ ದೇಶದ ಘನತೆ ಗೌರವದ ಬಗ್ಗೆ ಕಿಂಚಿತ್ತೂ ಗಮನವಿಲ್ಲದಿರುವದು ಇನ್ನೊಂದು ವಿಷಾದದ ಸಂಗತಿ. ಆಕೆಯ ಕುತ್ತಿಗೆಯ ಮೇಲೆ ಚಾಕು ಇಟ್ಟು ಅತ್ಯಾಚಾರ ಎಸಗಿರುವ ಈ ಎಂಟು ಜನರು ಕೂಡಾ ನಮ್ಮ ದೇಶವನ್ನು ಪ್ರತಿನಿಧಿಸುವಂತಾದದ್ದು ದೊಡ್ಡ ದುರಂತ.

ಇನ್ನೊಂದು ಘಟನೆ ಚೆನೈನ ರೈಲು ಒಂದರಲ್ಲಿ ಬಿಹಾರ ಮೂಲದ ಕಿರಾತಕ 22 ವರ್ಷದ ಚಂದನ ಕುಮಾರ ಎನ್ನುವಾತ 18 ವರ್ಷದ ಜರ್ಮನ್ ಯುವತಿಯ ಮೆಲೆ ಅತ್ಯಾಚಾರ ಎಸಗಿದ ಸುದ್ದಿಯೊಂದು ಜನೆವರಿ 13 ನೇ ತಾರೀಕಿನಂದು ಬಯಲಾಗಿದೆ. ಈ ಎರಡೂ ಘಟನೆಗಳು ನಮ್ಮ ದೇಶದ ಪ್ರವಾಸದ್ಯೋಮ ಇಲಾಖೆಗೆ ದೊಡ್ದ ಪೆಟ್ಟನ್ನು ಹಾಕುವದಂತೂ ನಿಜ. ಈಗಾಗಲೇ ನಮ್ಮ ದೇಶಕ್ಕೆ ಹೊರಗಿನಿಂದ ಬರುವವರ ಪ್ರಮಾಣದಲ್ಲಿ ಸುಮಾರು 25 ಪ್ರತಿಶತದಷ್ಟು ಇಳಿಮುಖತೆಯಾಗಿದೆ. ಮಹಿಳೆಯರ ವಿಷಯದಲ್ಲಂತೂ ಆ ಪ್ರಮಾಣ 35 ಪ್ರತಿಶತದಷ್ಟು ಕಡಿಮೆಯಾಗಿದೆ. ಹೀಗೆ ಪ್ರವಾಸ ಮಾಡುವ ಮಹಿಳೆಯರನ್ನು ಹರಿದು ಮುಕ್ಕಲು ಕಾದು ಕುಳಿತಂತಿರುವ ಈ ದುರುಳರಿಂದಾಗಿ ಇಲ್ಲಿಗೆ ಪ್ರವಾಸ ಮಾಡಲು ಬಯಸುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಭಾರತದಂತಹ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ನೆಲದಲ್ಲಿ ಪ್ರವಾಸೋದ್ಯಮ ಒಂದು ಅತಿ ಮುಖ್ಯವಾದ ರಾಷ್ಟ್ರೀಯ ಆದಾಯವಾಗಬೇಕು. ವಿದೇಶಗಳಿಂದ ಬರುವವರೇ ಆ ದಿಶೆಯಲ್ಲಿ ಅತಿ ಮುಖ್ಯವಾದ ಆದಾಯ. ಹೀಗೆ ಮತ್ತೆ ಮತ್ತೆ ಇಂಥಾ ಕಹಿ ಘಟನೆಗಳು ಜರುಗಿದರೆ ಅದು ಇಡೀ ವಿಶ್ವದಲ್ಲಿ ಈ ದೇಶದಲ್ಲಿಯ ಪ್ರವಾಸದ ಬಗೆಗಿನ ಅಸುರಕ್ಷಿತತೆಯನ್ನು ಡಂಗುರು ಸಾರಿದಂತಾಗುತ್ತದೆ. ಅವರು ವಿದೇಶಿಯರಿರಲಿ ಇಲ್ಲವೇ ಇದೇ ದೇಶದವರಿರಲಿ ಈ ಬಗೆಯ ಕುಕೃತ್ಯಗಳನ್ನು ಎಸಗುವುದು ಸುತಾರಾಂ ಸರಿಯಲ್ಲ. ಹೀಗೆ ವಿದೇಶಿ ಪ್ರವಾಸಿಗರ ಮೆಲೆ ಲೈಂಗಿಕ ದೌರ್ಜನ್ಯ ಜರುಗಿರುವುದು ಇದೇ ಮೊದಲಂತೂ ಅಲ್ಲ. ಮಾರ್ಚ್ 2006 ರ ಸಂದರ್ಭದಲ್ಲಿ ಬಿಟಿ ಮೊಹಂತಿ ಎಂಬಾತ ಜರ್ಮನ್ ಮೂಲದ ಓರ್ವ ಯುವತಿಯನ್ನು ರಾಜಸ್ಥಾನದಲ್ಲಿ ಅತ್ಯಾಚಾರಗೈದಿದ್ದ. ಮಾರ್ಚ 2013 ರಲ್ಲಿ ಮಧ್ಯಪ್ರದೇಶದಲ್ಲಿ ಸ್ವಿಜ್ಜರಲ್ಯಾಂಡ್ ಮೂಲದ 39 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಜೂನ್ 2013 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಅಮೇರಿಕೆಯ ಓರ್ವ ಪ್ರವಾಸಿಯನ್ನು cnn-danish-woman-gangrapeಗ್ಯಾಂಗ್‌ರೇಪ್ ಮಾಡಲಾಗಿತ್ತು. 2010 ರಲಿ ಇಬ್ಬರು ಡಚ್ ಮಹಿಳೆಯರನ್ನು, 2011 ರಲ್ಲಿ ಆಸ್ಟ್ರೇಲಿಯನ್ ಮಹಿಳೆಯನ್ನು, 2012 ರಂದು ಓರ್ವ ಡಚ್ ಮಹಿಳೆಯನ್ನು, ಜೂನ್ 2013 ರಲ್ಲಿ ಉಗಾಂಡಾದ ಓರ್ವ ಯುವತಿಯನ್ನು ಅತ್ಯಾಚಾರ ಮಾಡಲಾದ ಬಗ್ಗೆ ವರದಿಯಾಗಿದೆ. [ಹಿಂದುಸ್ಥಾನ ಟೈಮ್ಸ್], ಹಾಗೆಯೇ ಅಗಷ್ಟ 2013 ರಲ್ಲಿ ಜರ್ಮನ್ ಮೂಲದ ಓರ್ವ ಯುವತಿಯನ್ನು ಅತ್ಯಚಾರ ಎಸಗಿರುವದಿದೆ. ಹೀಗೆ ಸರಣಿಯ ರೂಪದಲ್ಲಿ ಜರುಗಿದ ಈ ಅತ್ಯಾಚಾರಕ್ಕೆ ಭಾರತೀಯರಾದ ನಾವೆಲ್ಲರೂ ತಲೆತಗ್ಗಿಸಬೇಕಿದೆ.

ಅದಾಗಲೇ ಜನಾಂಗೀಯ ಬೇಧಗಳ ಹಿನ್ನೆಲೆಯಲ್ಲಿ ಅಲ್ಲಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ನಡದೇ ಇವೆ. ಅಂತಹದರಲ್ಲಿ ಹೀಗೆ ಭಾರತ ಒಂದು ರೇಪಿಸ್ಟಗಳ ನೆಲೆ ಎನ್ನುವ ಹಣೆಪಟ್ಟಿ ಅಂಟಿಕೊಳ್ಳುವ ಮೊದಲೇ ಜಾಗೃತರಾಗಬೇಕಿದೆ. ಅದರಲ್ಲೂ ವಿಶೇಷವಾಗಿ ಈ ವಿದೇಶಿ ಪ್ರವಾಸಿಗರಿಗೆ ಸಂರಕ್ಷಣೆಯನ್ನು ಒದಗಿಸುವಲ್ಲಿ ಭಾರತದ ಪ್ರವಾಸೋದ್ಯಮ ಇಲಾಖೆ ತೀವ್ರವಾದ ಕ್ರಮಗಳನ್ನು ಕೈಗೊಳ್ಳಬೇಕು. ಅತ್ಯಂತ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿರುವ ಈ ದೇಶಕ್ಕೆ ಭವಿಷ್ಯದಲ್ಲಿ ಯಾವ ಪ್ರವಾಸಿಗರೂ ಬರಲಿಕ್ಕಿಲ್ಲ. ಹಾಗೆಯೇ ವಿದೇಶಿ ಪ್ರವಾಸಿಗರು ಇಲ್ಲಿಗೆ ಬಂದಾಗ ಅವರೊಂದಿಗೆ ಅತ್ಯಂತ ಉಚಿತವಾಗಿ ನಡೆದುಕೊಳ್ಳುವ ಅವಶ್ಯಕತೆ ಇದೆ. ಅವರನ್ನು ಸುಲಿಗೆ ಮಾಡುವ, ಮೋಸ ಮಾಡುವ, ಚುಡಾಯಿಸುವಂಥಾ ಕ್ರಿಯೆಗಳಲ್ಲಿ ತೊಡಗುವುದು ಕೂಡಾ ನಮ್ಮ ದೇಶದ ಜನರ ಬಗ್ಗೆ ಪೂರ್ವಾಗ್ರಹಗಳು ಸೃಷ್ಟಿಯಾಗಲು ಕಾರಣವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು. ಇನ್ನು ಈ ಬಗೆಯ ಅತ್ಯಾಚಾರ ಮತ್ತು ಮೋಸದ ಪ್ರಕರಣಗಳಲ್ಲಿ ಹೆಚ್ಚೆಚ್ಚು ಯುವಕರೇ ತೊಡಗಿಕೊಂಡಿರುವದನ್ನು ಗಮನಿಸಿದರೆ ಭವಿಷ್ಯದ ಭಾರತದ ಬಗ್ಗೆ ಯಾರಿಗಾದರೂ ಹೆದರಿಕೆಯಾಗುತ್ತಿದೆ. ತಪ್ಪು ಸಾಮಾಜೀಕರಣದ ಪರಿಣಾಮವೇ ಇದಕ್ಕೆ ಮುಖ್ಯ ಕಾರಣ. ಈ ದಿಶೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಗಂಭೀರವಾಗಿ ಯೋಚಿಸಬೇಕಿದೆ.

One thought on “ವಿದೇಶಿ ಪ್ರವಾಸಿಗರ ನಜರಲ್ಲಿ ರೇಪಿಸ್ಥಾನ್ ಆಗದಿರಲಿ

  1. Naveen

    If a CM and his law minister don’t have right to suspend few constables and give and require to beg, demonstrate in front of union home minister who is more busy in applying balm to his god fathers n mothers than doing his duty, what we can expect from that city?
    And those till now anguishing over inability of police force n powerless helpless CM now conveniently quoting some European judges saying that police should be free for taking decision without interference. How much right duty its discharging without political interference?
    if you look at the police even who is in civil dress you get feeling that he may be a police. But a Delhi police even on uniform don’t give the feeling of a police, looks like a dull sarkari baabu.

    Arvind Kejrival wants to change this attitude n infuse activeness by giving a strong signal by suspending those four police, but just because he is spoiling Narendra Modis plan along with BJP even media loosing this opportunity to bring the change in Delhi…

    Now if a cm cant suspend few lower level police, what respect n face he will have among bureaucracies n how they listen to him.. A govt reputation n success depend upon its bureaucracy and its ability to plan n implement schemes..

    Reply

Leave a Reply

Your email address will not be published. Required fields are marked *