ಆಮ್ ಆದ್ಮಿ ಅಂದರೆ ಯಾರು?

ಇಂಗ್ಲೀಷ್ ಮೂಲ: Nissim Mannthukkaren
ಅನುವಾದ : ಬಿ.ಶ್ರೀಪಾದ ಭಟ್

As far men go, it is not what they are that interests me, but what they can become. – Jean-paul Sartre

ಕೆಲವು ವರ್ಷಗಳ ಹಿಂದೆ ಪಾರದರ್ಶಕ ಗಾಜಿನ ಷೋಕೇಶಿನಲ್ಲಿ ಪೇರಿಸಿಟ್ಟ ಸುಮಾರು 80,000 ಪಾದರಕ್ಷೆಗಳ ಕಡೆಗೆ ಬೆರಳು ತೋರಿಸುತ್ತಾ ನನ್ನ ನಾಲ್ಕು ವರ್ಷದ ಮಗಳು “ಈ ಚಿಕ್ಕ ಪಾದರಕ್ಷೆಗಳಿಗೆ ಇಲ್ಲಿ ಏನು ಕೆಲಸ?” ಎಂದು ಕೇಳಿದಳು. ಇವುಗಳಲ್ಲಿ 8000 ಪಾದರಕ್ಷೆಗಳು ಮಕ್ಕಳ ಶೂಗಳಾಗಿದ್ದವು. ಅಂದು ನಾವು ಪೋಲೆಂಡಿನ ಸರ್ಕಾರಿ ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದಂತಹ ಸಂದರ್ಭ. ಈಗಿನ ಮ್ಯೂಸಿಯಂ ಸ್ಥಳವು ಒಂದು ಕಾಲದಲ್ಲಿ ಜರ್ಮನಿಯ ನಾಜಿಗಳ ಘಾತುಕ ಯಾತನಾ ಶಿಬಿರವಾಗಿತ್ತು. ನಾನು ನನ್ನ ಮಗಳ ಪ್ರಶ್ನೆಗೆ ಉತ್ತರಿಸದೆ ದೂರದಲ್ಲಿ ದೃಷ್ಟಿ ಹಾಯಿಸಿದೆ. ನಮ್ಮಂತಹ ಸಾಮಾನ್ಯ ಜನರು ಅರ್ಥಾತ್ “ಆಮ್ ಆದ್ಮಿ” ಈ ಘಾತುಕ SCHWAB 118427ಯಾತನಾ ಶಿಬಿರಗಳ ಉಸ್ತುವಾರಿ ವಹಿಸಿಕೊಂಡಿದ್ದರು ಎನ್ನುವ ಸಾರ್ವಕಾಲಿಕ ಸತ್ಯವನ್ನು ನಾನು ನನ್ನ ನಾಲ್ಕು ವರ್ಷದ ಮಗಳಿಗೆ ಹೇಳಲಿಲ್ಲ. ಈ “ಆಮ್ ಆದ್ಮಿ”ಗಳೇ ಸಾವಿರಾರು ಇತರ ಲಕ್ಷಾಂತರ ಸಾಮಾನ್ಯ ಜನರನ್ನು ಈ ಗ್ಯಾಸ್ ಛೇಂಬರ್‌ಗೆ ತಳ್ಳಿದ್ದರು. ಈ ಆಮ್ ಆದ್ಮಿಗಳೇ ಹಿಟ್ಲರ್‌ನನ್ನು ಚುನಾಯಿಸಿ ಆತನಿಗೆ ಆಳುವ ಅಧಿಕಾರ ನೀಡಿದ್ದರು. ರ್‍ವಾಂಡಾದ ಸಾಮಾನ್ಯ ಜನರೇ ತಮ್ಮದೇ ದೇಶದ ಲಕ್ಷಾಂತರ ಸಾಮಾನ್ಯ ಜನರನ್ನು ಹತ್ಯೆಗೈದಿದ್ದರು. ಈ ಸಾಮಾನ್ಯ ಜನರೇ ನರೋಡ ಪಾಟಿಯಾದಲ್ಲಿ ಗುಂಪುಗೂಡಿ ತಮ್ಮ ನೆರೆಹೊರೆಯ ಸಾಮಾನ್ಯ ಜನರ ಮೇಲೆ ಅತ್ಯಾಚಾರ ನಡೆಸಿದ್ದರು, ಅವರ ಮನೆಗಳನ್ನು ಲೂಟಿ ಮಾಡಿ, ಸುಟ್ಟು ಹಾಕಿದ್ದರು, ತಮ್ಮ ನೆರೆಹೊರೆಯವರ ಹತ್ಯೆಗೈದಿದ್ದರು.

“ಆಮ್ ಆದ್ಮಿ” ಮತ್ತೆ ಉದಯಿಸಿದ್ದಾನೆ. ನಾವು ಈ ಬೆಳವಣಿಗೆಯನ್ನು ಸ್ವಾಗತಿಸಲೇಬೇಕು. ಆದರೆ ಆಮ್ ಆದ್ಮಿ ಅಂದರೆ ಏನು ಅರ್ಥ? 27 ಮಹಡಿಗಳ ವೈಭವೋಪೇತ ಮ್ಯಾನ್ಷನ್ ಅನ್ನು ಸುತ್ತುವರೆದ ಸಾವಿರಾರು ಸ್ಲಂಗಳಲ್ಲಿ ವಾಸಿಸುತ್ತಿರವ ಸಾಮಾನ್ಯರು ಈ ಆಮ್ ಆದ್ಮಿಯ ವರ್ತುಲದ ಒಳಗಿದ್ದಾರೆಯೇ??

ಈ ಆಮ್ ಅಥವಾ ಸಾಮಾನ್ಯ ಪದದ ವಿಶ್ಲೇಷಣೆ ನಮ್ಮಲ್ಲಿ ಸಂಧಿಗ್ಧತೆಯನ್ನು ಹುಟ್ಟುಹಾಕುತ್ತದೆ. ಯಾವ ಬಗೆಯ ಸಾಮಾನ್ಯತೆ ಅಥವಾ ಜೀವನ ಮಟ್ಟ ಈ ಸಾಮಾನ್ಯತೆಯಿಂದ ಹೊರಗಿಡುತ್ತದೆ? ಈ ಆರ್ಥಿಕ ವಿಶ್ಲೇಷಣೆಯ ಹೊರತಾಗಿಯೂ ಈ ಸಾಮಾನ್ಯತೆಯನ್ನು ನಿರ್ಧರಿಸಲು ಬಳಸಬಹುದಾದ ನೈತಿಕ ಮತ್ತು ನ್ಯಾಯವಂತಿಕೆಯ ಮಾನದಂಡಗಳಾವುವು? ಏಕೆಂದರೆ ಸಾಮಾನ್ಯ ಜನರು ಇತರೇ ಆಮ್ ಆದ್ಮಿಗೆ ಏನನ್ನಾದರೂ ಮಾಡಲು ಸಾಮರ್ಥ್ಯವಿರುವವರೆಂದು ನಾವಾಗಲೇ ಗಮನಿಸಿದ್ದೇವೆ.

ನಾವು ಕೇವಲ ಆಮ್ ಆದ್ಮಿ ಟೋಪಿ ಧರಿಸಿ, ’ಮೈ ಹೂಂ ಆಮ್ ಆದ್ಮಿ’ ಮಂತ್ರ ಜಪಿಸುತ್ತ ಇದು ಆರಂಭ ಮಾತ್ರ ಎಂದು AAP Launchಮೇಲಿನ ಪ್ರಶ್ನೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಲ್ಲಿನ ಈ ಸಾಮಾನ್ಯ ಜನರು ಕೇವಲ ಒಂದು ಸಂಕೇತವಲ್ಲ. ವಿವಿಧ ಜಾತಿಗಳು, ವರ್ಗಗಳು, ಜನಾಂಗೀಯ ಭಿನ್ನತೆಯಂತಹ ಸಂಕೀರ್ಣತೆಯನ್ನು ಒಳಗೊಳ್ಳದೆ ಏಕರೂಪಿಯಾಗಿ ಶೂನ್ಯದಲ್ಲಿ ಈ ಆಮ್ ಆದ್ಮಿ ಇರಲು ಸಾಧ್ಯವೇ ಇಲ್ಲ. ಮೇಲಿನ ವಿಪರ್ಯಾಸಗಳನ್ನು, ಸಂಧಿಗ್ಧತೆಗಳನ್ನು, ಭಿನ್ನತೆಗಳನ್ನು ಗುರುತಿಸದೆ, ಮಾನ್ಯ ಮಾಡದೆ, ಪ್ರಜಾಪ್ರಭುತ್ವದ ಮಾದರಿಗಳನ್ನು ಅನುಸರಿದೇ ಹೋದರೆ ಈ ಪ್ರಜಾಪ್ರಭತ್ವವೇ ಟೊಳ್ಳಾಗುತ್ತದೆ. ಈ ಟೊಳ್ಳುಗೊಂಡಂತಹ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಸರ್ಕಾರವೆಂದರೆ ಒಬ್ಬ ವ್ಯಕ್ತಿ ಅನೇಕರ ಮೇಲೆ ಅಧಿಕಾರ ಚಲಾಯಿಸುವುದೆಂದೇ ಅರ್ಥ. ಈ ಜನತೆ ಒಕ್ಕೂಟದಲ್ಲಿ ಒಂದಾಗುವುದೆಂದರೆ ಈ ಒಗ್ಗಟ್ಟು authoritarian ಸ್ವರೂಪ ಪಡೆದುಕೊಳ್ಳುವುದೇ ಇಲ್ಲಿನ ಬಲು ದೊಡ್ಡ ವ್ಯಂಗ. ಈ authoritarian ಸರ್ವಾಧಿಕಾರದ ರೂಪದಲ್ಲಿ ಸಾಮಾನ್ಯ ಜನರ ಮೇಳೆ ದಬ್ಬಾಳಿಕೆಯನ್ನು ನಡೆಸುವ ಸಾಮರ್ಥ್ಯ ಪಡೆದುಕೊಂಡಿರುತ್ತದೆ.

ಈ ಜನ ಸಾಮಾನ್ಯರ ಉತ್ಕರ್ಷವನ್ನು ಸಂಭ್ರಮಿಸುವುದರ ಮೂಲಕ ಈ ಜನಸಾಮಾನ್ಯರನ್ನು ಜನಪ್ರಿಯತೆಯೊಂದಿಗೆ ಸಮೀಕರಿಸುವ ಅಪಾಯಕ್ಕೆ ತಳ್ಳಲ್ಪಡುತ್ತೇವೆ. ಪ್ರಜಾಪ್ರಭುತ್ವವೆಂದರೆ ಕೇವಲ ದೂರವಾಣಿ ಲೈನ್‌ಗಳನ್ನು ಉದ್ಘಾಟಿಸುವುದು ಮಾತ್ರವಲ್ಲ, ಜನ ಸಾಮಾನ್ಯರನ್ನು ನಿನ್ನ ಅಭಿಪ್ರಾಯವನ್ನು ತಿಳಿಸಲು ವೋಟ್ ಮಾಡಿ ಎಂದು ಕೇಳುವುದು ಮಾತ್ರವಲ್ಲ. ಈ ಮಾದರಿಯ ಜನಪ್ರಿಯತೆಯ ಅಭಿಪ್ರಾಯವನ್ನೇ ನಾವು ಅಳತೆಗೋಲಾಗಿ ಪರಿಗಣಿಸಿದಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರದರ್ಶಿತವಾಗುವ “ಬಿಗ್ ಬಾಸ್” ಕಾರ್ಯಕ್ರಮಕ್ಕೂ ಇದೇ ಬಗೆಯ ಮಾನ್ಯತೆ ಕೊಡಬೇಕಾಗುತ್ತದೆ. ಏಕೆಂದರೆ ಈ “ಬಿಗ್ ಬಾಸ್”ದ ಜನಪ್ರಿಯತೆ ಸಹ ಜನಸಾಮಾನ್ಯರ ವೋಟ್‌ನ ಮೇಲೆ ಅವಲಂಬಿತವಾಗಿದೆ. ಇದರ ವೋಟ್‌ನ ಶೇಕಡಾವಾರು ಪ್ರಮಾಣ ಸಾರ್ವತ್ರಿಕ ಚುನಾವಣೆಗಿಂತಲೂ ಅಧಿಕವಿತ್ತೇ ಎನ್ನುವುದರ ಬಗೆಗೂ ಚರ್ಚೆಯಾಗಿತ್ತು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕೇವಲ ಜ್ಞಾನಯುಕ್ತ ಗುಂಪು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ನ್ಯಾಯವಂತ ಸಮುದಾಯವೂ ಹೌದು. ಹಾಗಾಗಿಯೇ ಇಲ್ಲಿ ನಾವು ಯಾವ ಮಾದರಿಯ ಆಮ್ ಆದ್ಮಿ ಆಗಿರಬೇಕೆಂಬುದೇ ಪ್ರಮುಖವಾಗಿ ನಿರ್ಧರಿಸಲ್ಪಡಬೇಕು.

ಸಾಮಾಜಿಕ, ರಾಜಕೀಯ ಹೋರಾಟಗಳು ಸಂಪೂರ್ಣ ಅಂಚಿಗೆ ತಳ್ಳಲ್ಪಟ್ಟ, ತಳಸಮುದಾಯಗಳ, ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿಯನ್ನು ಪ್ರಾತಿನಿಧಿಸಿದಾಗ ಮಾತ್ರ (ಅದು ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ಆಗಿರಲಿ) ಅದರ ಚಳುವಳಿ ತನ್ನ ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ. ಇದನ್ನು ಒಳಗೊಳ್ಳದೇ ಹೋದರೆ ಆ ಚಳುವಳಿ ತಾನು ಪ್ರಾತಿನಿಧಿಸುವ ಸಾಮಾನ್ಯತೆ ಮತ್ತು ಸರಳತೆ ಕೇವಲ ನಿರ್ವಿಕಾರವಾಗಿರುತ್ತದೆ. ಇದು ನಿರ್ವಾತದಲ್ಲಿ ಜರುಗುತ್ತಿರುತ್ತದೆ.

ಮೆಕ್ಸಿಕೋದಲ್ಲಿ ಮೂಲ ಜನಾಂಗವಾದ Zapatistas ಹಕ್ಕುಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದಿಟ್ಟ ನಾಯಕ ಮಾರ್ಕೋಸ್ ನನ್ನು ಅಲ್ಲಿನ ಪ್ರಭುತ್ವವು ಆತನನ್ನು ಗೇ ಎಂದು ಆರೋಪಿಸಿ ಕಳಂಕಗೊಳಿಸಲು ಯತ್ನಿಸಿತು. ಆಗ ಮಾರ್ಕೋಸ್ ಉತ್ತರಿಸಿದ್ದು ಹೀಗೆ: “ಹೌದು, ಮಾರ್ಕೋಸ್ ಸಾನ್ ಫ್ರಾನ್ಸಿಸ್ಕೋದಲ್ಲಿ ಗೇ ಅನ್ನುವುದು ನಿಜ, ಹಾಗೆಯೇ ದಕ್ಷಿಣ ಅಮೇರಿಕದಲ್ಲಿ ಮಾರ್ಕೋಸ್ ಕಪ್ಪುವರ್ಣೀಯ, ಯುರೋಪಿನಲ್ಲಿ ಮಾರ್ಕೋಸ್ ಏಷ್ಯಾದವನು, ಸ್ಪೇನ್‌ನಲ್ಲಿ ಅರಾಜಕತಾವಾದಿ, ಇಸ್ರೇಲ್‌ನಲ್ಲಿ ಮಾರ್ಕೋಸ್ ಪ್ಯಾಲಸ್ಟೇನಿಯನ್, ಜರ್ಮನಿಯಲ್ಲಿ ಮಾರ್ಕೋಸ್ ಯಹೂದಿ, ಪೋಲಂಡ್‌ನಲ್ಲಿ ಜಿಪ್ಸಿ, ಬೋಸ್ನಿಯಾದಲ್ಲಿ ಪೆಸಿಫಿಸ್ಟ್, ಈ ಮಾರ್ಕೋಸ್ ಮೆಟ್ರೋ ನಗರಗಳಲ್ಲಿ ರಾತ್ರಿ 10 ಘಂಟೆಗೆ ಏಕಾಂಗಿಯಾಗಿ ಸಂಚರಿಸುವ ಮಹಿಳೆ, ಈ ಮಾರ್ಕೋಸ್ ಜಮೀನಿಲ್ಲದ ರೈತ, ಸ್ಲಂನ ಸದಸ್ಯ, ನಿರುದ್ಯೋಗಿ, ಅತೃಪ್ತ ವಿದ್ಯಾರ್ಥಿ ಮತ್ತು ಬೆಟ್ಟಗುಡ್ಡಗಳಲ್ಲಿ Zapatistas.”

ಹಾಗಿದ್ದಲ್ಲಿ ನಮ್ಮ “ಆಮ್ ಆದ್ಮಿ” ಮಾರ್ಕೋಸ್‌ನಂತೆ ‘ಇನ್ನು ಸಾಕು ಮಾಡಿ ಎಂದು ಪ್ರತಿರೋಧಿಸುವ ಅಲ್ಪಸಂಖ್ಯಾತರಾಗಬಲ್ಲರೇ?’ ನಮ್ಮ “ಆಮ್ ಆದ್ಮಿ” ತಮ್ಮೆಲ್ಲ ಶಕ್ತಿಯನ್ನು ಬಳಸಿ ಮಾತನಾಡಬಲ್ಲ ಅಲ್ಪಸಂಖ್ಯಾತರು ಮತ್ತು ಶಾಂತವಾಗಿ, Aam-Aadmiಮೌನವಾಗಿ ಆಲಿಸುವ ಬಹುಸಂಖ್ಯಾತರಾಗಬಲ್ಲರೇ? ನಮ್ಮ “ಆಮ್ ಆದ್ಮಿ” ಖೈರ್ಲಾಂಜಿಯಲ್ಲಿ ದಲಿತರಾಗಬಲ್ಲರೇ? ಬಸ್ತರ್‌ನಲ್ಲಿ ಆದಿವಾಸಿಗಳಾಗಬಲ್ಲರೇ? ಮಣಿಪುರದಲ್ಲಿ ಮನೋರಮಾ?

ಆಮ್ ಆದ್ಮಿ ಈ ಕ್ಷಣದ ಅಗತ್ಯಗಳಿಗೆ ಮಾತ್ರ ಸ್ಪಂದಿಸುತ್ತಾ ಕಾಲಹರಣ ಮಾಡುವರೇ ಅಥವಾ ತಮ್ಮನ್ನು ಮೀರಿದ ಜಗತ್ತೊಂದು ಇದೆ ಎನ್ನುವ ಸಾಮಾನ್ಯ ಜ್ಞಾನದ ಪ್ರಾಪ್ತಿಗಾಗಿ ಪ್ರಯತ್ನಿಸುವರೇ? ದೇಶಾಭಿಮಾನವನ್ನು ಮೀರಿದ ಮಾನವೀಯತೆಯ ಆವರಣದ ಕಡೆಗೆ ಮುಖ ತಿರುಗಿಸುವರೇ?

ಈ ಎಲ್ಲಾ ಪ್ರಶ್ನೆಗಳಿಗೆ, ಅವುಗಳ ಪ್ರಸ್ತುತೆಯ ಕುರಿತಾಗಿ ಮಾನ್ಯತೆ, ಅಂಗೀಕಾರಗಳು ಇಲ್ಲದೇ ಹೋದರೆ, ಈ ಪ್ರಶ್ನೆಗಳಿಗೆ ಕನಿಷ್ಟ ಉತ್ತರಿಸುವ ಪ್ರಯತ್ನವನ್ನೂ ಮಾಡದೇ ಹೋದಲ್ಲಿ ಈ ಆಮ್ ಆದ್ಮಿಯಲ್ಲಿ ಆಮ್ ಅನ್ನುವಂತಾದ್ದೇನು ಇಲ್ಲವೆಂದೇ ಅರ್ಥ. ಕನಿಷ್ಟ 27 ಮ್ಯಾನ್ಷನ್ ಕಟ್ಟಡದಲ್ಲಿ ವಾಸಿಸುವ ಜನತೆ ಮೇಲಿನ ಅರ್ಥದಲ್ಲಿ ಆಮ್ ಆದ್ಮಿ ಆಗಲು ಬಯಸಿದರೆ ಅದು ಕುಟಿಲತೆ ಎಂದು ಅರ್ಥೈಸಬಾರದು. ಅದನ್ನು ಸಧೃಢವಾದ ಐಡಿಯಾಲಜಿ ಎಂದೇ ಪರಿಗಣಿತವಾಗುತ್ತದೆ.

ಬಾರ್ಬರಿಸಂ ಮತ್ತು ಪ್ರಾದೇಶಿಕ ಸಂಸ್ಕೃತಿಯ ನಡುವೆ ಸಿಲುಕಿಕೊಂಡ ಸಾಮಾನ್ಯ ಜನತೆಯೇ ಬಾಸ್ಟಿಲ್‌ನಲ್ಲಿ ರಾಜ ದರ್ಬಾರನ್ನು ಕೆಳಗಿಳಿಸಿತು, ಹೈಟಿಯಲ್ಲಿ ಗುಲಾಮಿ ಸಂಸ್ಕೃತಿಯ ವಿರುದ್ಧ ದಂಗೆಯೆದ್ದಿತು. ದ್ವಾರಪಾಲಕರಾಗಲು, ಕ್ಲರ್ಕಗಳಾಗಲು, ಗಾರ್ಡಗಳಾಗಲು, ನರೋಡಾ ಪಟಿಯಾದ, ರ್‍ವಾಂಡಾದ ಭವಿಷ್ಯದ ಮ್ಯಾನೇಜರ್‌ಗಳಾಗಲು ನಿರಾಕರಿಸುವಂತಹ “ಆಮ್ ಆದ್ಮಿ”ಗಳನ್ನು ಶೋಧಿಸೋಣ. ನಮ್ಮ “ಆಮ್ ಆದ್ಮಿ”ಗಳನ್ನು ನಾವೇ ಕಟ್ಟೋಣ.

(ಕೃಪೆ : ದ ಹಿಂದೂ, 26 ಜನವರಿ, 2014)

Leave a Reply

Your email address will not be published. Required fields are marked *