Monthly Archives: March 2014

ಉರಿಯುವ ಬೆಂಕಿಗೆ ಮೈಯೆಲ್ಲಾ ಬಾಯಿ – ನಿಲ್ಲದ ನೆತ್ತರ ದಾಹ


-ಬಿ. ಶ್ರೀಪಾದ್ ಭಟ್


 

 

ನಮ್ಮ ದೇಶದ ಸೋಕಾಲ್ಡ್ ಮೀಡಿಯಾಗಳ ಅತ್ಯುತ್ಸಾಹದ ಮಾತನ್ನೇ ನಂಬುವುದಾದರೆ, ಅವರ ಸಮೀಕ್ಷೆಗಳನ್ನೇ ಅಂತಿಮ ಎನ್ನುವುದಾದರೆ ಇನ್ನು 2014ರ ಚುನಾವಣೆಯಲ್ಲಿ ನಮೋಗೆ ಮತಗಟ್ಟೆ ಕಾಯುತ್ತಿದೆ ಅಷ್ಟೇ. ಇನ್ನೇನು ಉಳಿದಿಲ್ಲ. ಮಾಧ್ಯಮಗಳು ಉತ್ಸಾಹದ ಎಲ್ಲೆ ಮೀರಿ ಆಗಲೇ ಆಗಸ್ಟ್ 15ರಂದು ನಮೋ ಕೆಂಪುಕೋಟೆಯಿಂದ ಏನು ಭಾಷಣ ಮಾಡಬಹುದು ಎಂದು ಚರ್ಚಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ1 ರಣತಂತ್ರವನ್ನು ರೂಪಿಸುವುದು ಮಾಮೂಲಿ ವಿಚಾರ. ಆದರೆ ಇಂದು ಬಹುಪಾಲು ಮೀಡಿಯಾ ಅದರಲ್ಲೂ ದೃಶ್ಯ ಮಾಧ್ಯಮಗಳು ತಮ್ಮ ಪತ್ರಿಕಾ ಧರ್ಮವನ್ನೇ ಮರೆತು ಏಕಪಕ್ಷಿಯವಾಗಿ ನಮೋನ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮಗಳು ಅದರ ಮೌಲ್ಯಗಳ ರಕ್ಷಣೆಗಾಗಿ ತನ್ನನ್ನು ತಾನು ಕಾವಲುಗಾರನಂತೆ ರೂಪಿಸಿಕೊಳ್ಳುವುದರ ಬದಲಾಗಿ ಇಂದು ತನ್ನ ನೀತಿಗಳನ್ನು ಅಪಮೌಲ್ಯೀಕರಣಗೊಳಿಸಿಕೊಂಡು ಅನೈತಿಕತೆಯನ್ನು ಮೆರೆಯುತ್ತಿರುವುದು ಮಾತ್ರ ಆಧುನಿಕ ಇಂಡಿಯಾದ ಕರಾಳ ಅಧ್ಯಾಯವೆಂದೇ ದಾಖಲಾಗಲಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಯುದ್ಧಕ್ಕಿಂತ ಮೊದಲೇ ಸೋಲನ್ನೊಪ್ಪಿಕೊಂಡಂತೆ ವರ್ತಿಸುತ್ತಿದೆ. ಹೆಚ್ಚೂ ಕಡಿಮೆ ಮಕಾಡೆ ಮಲಗಿದಂತೆಯೇ ವರ್ತಿಸುತ್ತಿರುವ ಕಾಂಗ್ರೆಸ್ ಪಕ್ಷದ ನಕಾರಾತ್ಮಕ ನಡವಳಿಕೆ ಮಾತ್ರ ದಯನೀಯವಾಗಿದೆ. ಕಳೆದ ಒಂದು ದಶಕದುದ್ದಕ್ಕೂ ಪೊರೆದಿದ್ದ ಸೋನಿಯಾ ಗಾಂಧಿಯವರ silent ರಾಜಕಾರಣದ ಶೈಲಿಯ ಅಂತ್ಯ ಮೇಲ್ನೋಟಕ್ಕಂತೂ ಕಾಣುತ್ತಿದೆ. ಅದಕ್ಕೆ ಪ್ರತಿಯಾಗಿ ನಮೋ ಬ್ರಿಗ್ರೇಡ್ ನ rhetoric ಅಬ್ಬರದ ಶೈಲಿ ಇಂದು ದೇಶದಾದ್ಯಂತ ವ್ಯಾಪಿಸುತ್ತಿದೆ. ಸಂಘಪರಿವಾರದ ’ಏಕ್ ಧಕ್ಕ ಔರ್ ದೋ” ಮಾದರಿಯ ಮತೀಯವಾದದ ಪುಂಡಾಟಿಕೆಯ ದಿನಗಳು ಪ್ರಾಮುಖ್ಯತೆಗೆ ಮರಳುತ್ತಿವೆ.

ತಮ್ಮ ಲೇಖನವೊಂದರಲ್ಲಿ ಡಿ.ಆರ್.ನಾಗರಾಜ್ ಅವರು ಠಾಗೋರರ ಕುರಿತಾಗಿ “ಒಬ್ಬ ಸಾರ್ವಜನಿಕ ವ್ಯಕ್ತಿಗೆ ಸುತ್ತಲೂ ಜನತೆಯ ಕನ್ನಡಿ ಇರುತ್ತದೆ. ಆತ ಯಾವಾಗಲೂ ಅವರ ನಿರೀಕ್ಷೆಗೆ ತಕ್ಕಂತೆ ಇರಬೇಕು. ಠಾಗೋರರ ಕಷ್ಟ ಪ್ರಾರಂಭವಾದದ್ದು ಇಲ್ಲಿಯೇ. ಭಾಷೆ ಆತನಿಗೆ ಸಾರ್ವಜನಿಕ ದಂಧೆಯಾಗಿ ಮಾತ್ರ ಕಾಣತೊಡಗಿತು. ಎಂಥದೇ ಹೆಣ್ಣಿನ ಬಗ್ಗೆ ಬರೆದರೂ ಆಕೆ ಭಾರತ ಮಾತೆಯ ಹಾಗೆ ಕಾಣತೊಡಗಿದಳು. ಎಲ್ಲವೂ ಸಾರ್ವಜನಿಕವೇ ಆಗಿ ಬಯಲಿನಲ್ಲಿ ಬದುಕಿದ ಹಾಗೆ ಅನ್ನಿಸತೊಡಗಿತು” ಎಂದು ಬರೆಯುತ್ತಾರೆ. ಇದು ವಿಚಿತ್ರ. ಒಳ ಮನಸ್ಸು ಸೋಲೊಪ್ಪಿಕೊಂಡು ಬಾಹ್ಯ ವರ್ತನೆಯೇ ಮುಖವಾಡವಾಗಿ ಜನಪ್ರಿಯತೆ ಗಳಿಸುತ್ತಿರುವುದು ಇಂಡಿಯಾದ ಸಾರ್ವಜನಿಕ ಜೀವನ ಮರಳಿ ಊಳಿಗಮಾನ್ಯ ವ್ಯವಸ್ಥೆಗೆ ಮರಳುತ್ತಿರುವುದರ ಸೂಚನೆಯಂತೆ ಭಾಸವಾಗುತ್ತಿದೆ. ಇಂದು ಇಲ್ಲಿ ನೈತಿಕತೆ ಅತ್ಯಂತ ದುಬಾರಿ ವಸ್ತುವಾಗಿರುವುದರ ಫಲವಾಗಿ ಅಸಮಾನತೆ ಒಪ್ಪಿತ ಮೌಲ್ಯವಾಗಿ ಜಾರಿಗೊಂಡಿದೆ. ಘನತೆ ಕಳೆದುಕೊಳ್ಳುವುದು ಆತ್ಮವಂಚನೆಯ ದ್ಯೋತಕವಲ್ಲ. ಬದಲಾಗಿ ಅದು ಕತ್ತಲ ದಾರಿಯಲ್ಲಿ ಉಳಿದಿರುವ ಒಂದೇ ಒಂದು ಬೆಳಕಿನ ದಾರಿ. ಅದು ಅನಿವಾರ್ಯ ಎಂದು ನಂಬಿಸಲಾಗುತ್ತಿದೆ.

ಚಿಂತಕ ಹಸನ್ ಸುರೂರ್ ದ ಹಿಂದೂ ಪತ್ರಿಕೆ(10 ಮಾರ್ಚ 2014)ಯಲ್ಲಿ ಹೀಗೆ ಬರೆಯುತ್ತಾರೆ “ಕಳೆದ ವಾರ ದೃಶ್ಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ ಸಂಘ ಪರಿವಾರದ ಅರಣ್ ಜೇಟ್ಲಿ ’ನಿಜ, ಬಿಜೆಪಿಗೆ ಮುಸ್ಲಿಂ ತೊಂದರೆ ಇದೆ. ಆದರೆ ಇದು ಇಬ್ಬಗೆಯದಾಗಿದೆ. ಮೊದಲನೆಯದಾಗಿ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಎರಡನೆಯದಾಗಿ ನಾವು ಇದನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಇಂದು ವಾತಾವರಣ ಬದಲಾಗಿದೆ’ ಎಂದು ಹೇಳಿದರು. ಇದಕ್ಕೂ ಕೆಲವು ದಿನಗಳ ಹಿಂದೆ ಬಿಜೆಪಿಯ ಅಧ್ಯಕ್ಷ ರಾಜನಾಥ ಸಿಂಗ್ ತಮ್ಮ ಭಾಷಣವೊಂದರಲ್ಲಿ ಮುಸ್ಲಿಮರಲ್ಲಿ ಕ್ಷಮೆ ಕೇಳುವಂತಹ ಧಾಟಿಯಲ್ಲಿ ಮಾತನಾಡಿ ಬಿಜೆಪಿಗೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದರು. ಸಂಘ ಪರಿವಾರದ ಕಾರ್ಯತಂತ್ರವೇನೆಂದರೆ ತಾವಾಗಲೇ ಧಾರ್ಮಿಕ ಅಲ್ಪಸಂಖ್ಯಾತರಾದ ಸಿಖ್ಖರನ್ನು ಮತ್ತು ಕೆಲ ಕ್ರಿಶ್ಚಿಯನ್ನರನ್ನು ಗೆದ್ದಿದ್ದಾಗಿದೆ. ಇನ್ನು ಮುಸ್ಲಿಮರನ್ನು ಕೊಳ್ಳಬೇಕಾಗಿದೆ ಅಷ್ಟೇ. ಸೂಡೋ ಸೆಕ್ಯುಲರ್ ಗಳು ಹುಟ್ಟು ಹಾಕಿದ ‘ಕೋಮುವಾದದ’ ಬೋಗಿ ಮಾತ್ರ ಇದಕ್ಕೆ ಅಡ್ಡವಾಗಿದೆ. ಆದರೆ ಫ್ಯಾಸಿಸಂ ಶೈಲಿಯು ಪ್ರಚಾರಕ್ಕೆ ಬರುತ್ತಿರುವ ಇಂದಿನ ದಿನಗಳಲ್ಲಿ sense of alarmism ನ ಸ್ಥಿತಿಯಲ್ಲಿರುವ ಮುಸ್ಲಿಮರ ಈ ಭಯವನ್ನು ಉಪಯೋಗಿಸಿಕೊಂಡು ಈ ಕೋಮುವಾದದ ಬೋಗಿಯನ್ನು ಅಂಚಿಗೆ ತಳ್ಳಬಹುದೆಂಬ ವಿಶ್ವಾಸ ಬಿಜೆಪಿಯಲ್ಲಿದೆ. ಆದರೆ ವಾಸ್ತವದಲ್ಲಿ ಕೋಮುವಾದದ ಅಪಾಯವು ಕೇವಲ ಒಂದು ಬೋಗಿಯಲ್ಲ. ಇದಕ್ಕೆ ಆಧಾರಸಹಿತವಾದ ಸಾಕ್ಷಿಗಳಿವೆ. ದೇಶದೆಡೆಗೆ ಮುಸ್ಲಿಂರ ಬದ್ಧತೆಯನ್ನು ಇಂದಿಗೂ ಪ್ರಶ್ನಿಸುತ್ತಿರುವ ಸಂಘಪರಿವಾರದ ಬೆಂಕಿಯುಗುಳುವಿಕೆಯೇ ಇದಕ್ಕೆ ಪುರಾವೆ. ಹಾಗಿದ್ದರೆ ಅರುಣ್ ಜೇಟ್ಲಿ ‘ಹೇಳುವ ಮುಸ್ಲಿಮರು ಒಪ್ಪಿಕೊಳ್ಳಬೇಕು,ನಾವು ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಮಾತುಗಳ ಅರ್ಥವೇನು ?”

ಮೇಲಿನ ಸಾಲುಗಳು ಏನನ್ನು ಹೇಳುತ್ತವೆ? ಫ್ಯಾಸಿಸಂ ಶಕ್ತಿ ವರ್ಧಿಸಿಕೊಳ್ಳುತಿರುವ ಇಂದಿನ ದಿನಗಳಲ್ಲಿ ತಮ್ಮ ಡಿಎನ್ಎನಲ್ಲಿಯೇ modi_bjp_conclaveಮುಸ್ಲಿಂ ದ್ವೇಷದ ಗುಣಗಳನ್ನು ತುಂಬಿಕೊಂಡಿರುವ ಸಂಘಪರಿವಾರದ ಎದುರು ಮುಸ್ಲಿಮರು ತಮ್ಮ ಘನತೆ ಕಳೆದುಕೊಳ್ಳುವುದು ಆತ್ಮವಂಚನೆಯ ದ್ಯೋತಕವಲ್ಲ. ಬದಲಾಗಿ ಅದು ಕತ್ತಲ ದಾರಿಯಲ್ಲಿ ಉಳಿದಿರುವ ಒಂದೇ ಒಂದು ಬೆಳಕಿನ ದಾರಿ ಎಂದು ಸಂಘ ಪರಿವಾರ ತಾಕೀತು ಮಾಡುತ್ತಿದೆಯಲ್ಲವೇ? ತನ್ನ ಫ್ಯಾಸಿಸಂ ಗುಣಗಳನ್ನು ಮತ್ತೆ ಮತ್ತೆ ಬಿಚ್ಚಿಡುತ್ತಿರುವ ನರೇಂದ್ರ ಮೋದಿ ಕಾಶ್ಮೀರದಲ್ಲಿ ಭಾಷಣ ಮಾಡುತ್ತ ಮತ್ತೊಮ್ಮೆ ತನ್ನ ನೆತ್ತರ ದಾಹವನ್ನು ತೋರಿಸಿದ್ದಾನೆ. ಹಿಂದೊಮ್ಮೆ ಮೇಡಂ ಮಾರಿಯಾ, ಮಿಯಾ ಮುಶ್ರಾಫ್, ಮೈಕೆಲ್ ಲಿಂಗ್ಡೋ ಎಂದು ಅಹಂಕಾರದಿಂದ ಮಾತನಾಡಿದ್ದ ಮೋದಿ ಅತ್ಯಂತ ಕ್ರೂರವಾದ ಭಾಷೆ ಬಳಸುತ್ತಾ ತನ್ನ ರಾಜಕೀಯ ಎದುರಾಳಿಗಳನ್ನು ಕುರಿತಾಗಿ “ಎಕೆ 47, ಎಕೆ ಅಂಟೊನಿ, ಎಕೆ 49” ಎಂದು ವ್ಯಂಗವಾಡಿದ್ದಾನೆ.ಆಧುನಿಕ ಭಾರತದ ಇತಿಹಾಸದಲ್ಲಿ ರಾಜಕೀಯ ನಾಯಕನೊಬ್ಬ ಇಷ್ಟೊಂದು ಕ್ರೌರ್ಯದ ಭಾಷೆಯಲ್ಲಿ ಮಾತನಾಡಿದ್ದು ಇದೇ ಮೊದಲು. ನೆತ್ತರ ದಾಹದ ಈ ಕ್ರೌರ್ಯ ಸಾರ್ವಜನಿಕ ಸಜ್ಜನಿಕೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ. ಇದನ್ನು ಆಳವಾಗಿ ವಿಶ್ಲೇಶಿಸದೆ ಅತ್ಯಂತ ಉತ್ಸಾಹದಿಂದ ಮುಖಪುಟದಲ್ಲಿ ಪ್ರಕಟಿಸಿರುವ ಮಾಧ್ಯಮಗಳು ಮೋದಿಯ ಈ ನೆತ್ತರ ಬೇಟೆಯ ಶೈಲಿಯನ್ನು ಮರೆತಂತಿವೆ. ಮತ್ತೊಮ್ಮೆ ನಾವು ಪಾಲಿಸಬೇಕಾದ ಧರ್ಮದ ಬಗ್ಗೆ ಗುಡುಗಿರುವ ಮೋದಿಯ ಹುಸಿ ಮುಖವಾಡ ಮತ್ತೆ ಮತ್ತೆ ಕಳಚಿಕೊಳ್ಳುತ್ತಿದೆ. ಆದರೆ ಪ್ರತಿ ಬಾರಿಯೂ ಕಳಚಿದ ಮುಖವಾಡವನ್ನು ಉತ್ಸಾಹದಿಂದ ಮರಳಿ ಮೋದಿಗೆ ತೊಡಿಸುತ್ತಿರುವುದು ಸಂಘ ಪರಿವಾರವಲ್ಲ. ಬದಲಾಗಿ ಆ ಕಾರ್ಯ ಮಾಡುತ್ತಿರುವುದು ಮಾಧ್ಯಮಗಳು. ಧರ್ಮ ಮತ್ತು ರಾಜಕಾರಣ ಮತ್ತೊಮ್ಮೆ ಪರಸ್ಪರ ಬೆರೆಯಲು ಮಾಧ್ಯಮಗಳು ಕೈ ಜೋಡಿಸುತ್ತಿವೆ .

ಇಂದು ಮೋದಿಗೆ ಮತ ಹಾಕುವುದು ದೇಶಪ್ರೇಮದ ದ್ಯೋತಕ ಎಂದು ಆರೆಸ್ಸೆಸ್ ಪ್ರಚಾರ ನಡೆಸುತ್ತಿದೆ. ಕಳೆದ ದಶಕದಲ್ಲಿ ಕುಂದಿದಂತಿದ್ದ ಆರೆಸ್ಸೆಸ್ ಇಂದು ಮತ್ತೆ ಗರಿಗೆದರಿ ನಿಂತುಕೊಂಡಿದೆ. ‘ಮಿಷನ್ 272’ ಎನ್ನುವ ಘೋಷಣೆಯೊಂದಿಗೆ ತನ್ನ ಸ್ವಯಂಸೇವಕರನ್ನು ದೇಶಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿದೆ. India272-banner-image-promotion-250x250ಪ್ರಸ್ತುತ ಚುನಾವಣೆಯಲ್ಲಿ ತಾನು ಬಿಜೆಪಿಯ ಸಾರಥಿಯ ಪಟ್ಟವನ್ನು ವಹಿಸಿಕೊಂಡಿರುವುದನ್ನು ಆರೆಸ್ಸೆಸ್ ಅಲ್ಲಗೆಳೆಯುತ್ತಿಲ್ಲ. ಅದು ಹಿಂದೂ ಮೇಲ್ಜಾತಿಯ ಓಟುಗಳೊಂದಿಗೆ ಇತರೆ ಹಿಂದುಳಿದ ವರ್ಗಗಳ ಮತಗಳಿಗೆ ಕೂಡಾ ಲಗ್ಗೆಯಿಟ್ಟಿದೆ. ಇದು ಆರೆಸ್ಸೆಸ್ ಸಂಘಟನೆಯ ಕೋಮುವಾದಿ ಇತಿಹಾಸದಲ್ಲಿಯೇ ಪ್ರಥಮ. ಬೆಲೆಯೇರಿಕೆ, ಭ್ರಷ್ಟಾಚಾರದ ನೆಲೆಯಲ್ಲಿ ಮೇಲ್ಜಾತಿಗಳ ಮತಗಳನ್ನು ಮತ್ತು ಮುಸ್ಲಿಂ ವಿರೋಧಿ ನೆಲೆಗಟ್ಟಿನಲ್ಲಿ ಇತರೇ ಹಿಂದುಳಿದ ವರ್ಗಗಳ ಮತಗಳನ್ನು ಬೇಟೆಯಾಡಲು ಆರೆಸ್ಸೆಸ್ ಕಾರ್ಯತಂತ್ರ ರೂಪಿಸಿದೆ. ಔಟ್ಲುಕ್ (17ಮಾರ್ಚ 2014) ಪತ್ರಿಕೆಯಲ್ಲಿ ವರದಿಯಾಗಿರುವಂತೆ ಡೆಲ್ಲಿ ಗದ್ದುಗೆಗಾಗಿ ಆರೆಸ್ಸೆಸ್ ನ ಹಿರಿಯ ನಾಯಕರೇ ಈ ಕಾರ್ಯತಂತ್ರದ ನೇತೃತ್ವ ವಹಿಸಿದ್ದಾರೆ. ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಉತ್ತರ ಪ್ರದೇಶ,ಮಧ್ಯಪ್ರದೇಶ ಮತ್ತು ರಾಜಸ್ತಾನದ ನೇತೃತ್ವ ವಹಿಸಿದ್ದರೆ, ಸುರೇಶ್ ಭೈಯ್ಯಾ ಗುಜರಾತ್ ಹಾಗೂ ಮಹಾರಾಷ್ಟ್ರ, ದತ್ತಾತ್ರೇಯ ಹೊಸಬಾಲೆ ಕರ್ನಾಟಕ ಮತ್ತು ಬಿಹಾರ್, ಕ್ರಷ್ಣಗೋಪಾಲ್ ಅಸ್ಸಾಂ, ಸುರೇಶ್ ಸೋನಿ ಛತ್ತೀಸ್ ಗಡದ ನೇತೃತ್ವ ವಹಿಸಿದ್ದಾರೆ. ಆರೆಸ್ಸೆಸ್ ಜೊತೆಗೆ ಅದರ ಅಂಗ ಸಂಸ್ಥೆಗಳಾದ ವಿ ಎಚ್ ಪಿ, ಎಬಿವಿಪಿ, ಭಾರತೀಯ ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್ ಮತ್ತು ಇನ್ನಿತರ ಗುಂಪುಗಳು ನಿರಂತರವಾಗಿ ಶ್ರಮಿಸುತ್ತಿವೆ. ಮೋದಿ ಅಭಿವೃದ್ಧಿ ಅಥವಾ ಭಯೋತ್ಪಾದನೆಯ ಕುರಿತಾಗಿ ಮಾತನಾಡುತ್ತಾನೆಂದರೆ ಅವೆಲ್ಲ ಹಿಂದುತ್ವದೊಂದಿಗೆ ನೇರವಾಗಿ ಸಂಪರ್ಕದಲ್ಲಿವೆಯೆಂದೇ ಅರ್ಥ. ಇವುಗಳ ಕುರಿತಾಗಿ ಮಾತನಾಡಿದರೆ ಹಿಂದುತ್ವದ ಅಜೆಂಡಾ ಜಾರಿಗೊಳಿಸುತ್ತಿದ್ದೇವೆ ಎಂದೇ ಅರ್ಥ. ಶಬ್ದಗಳು ಅದಲುಬದಲಾಗಿವೆ ಅಷ್ಟೇ ಎಂದು ಹಿರಿಯ ಆರೆಸಸ್ ನಾಯಕರು ಹೇಳಿದ್ದಾರೆ. ಇಂತಹ ತಂತ್ರದ ಭಾಗವಾಗಿಯೇ ಉಮಾಭಾರತಿ ಕಾಲಕಾಲಕ್ಕೆ ಗಂಗಾ ಬಚಾವ್ ಆಂದೋಲನದ ಮಂತ್ರ ಜಪಿಸುತ್ತಿರುತ್ತಾರೆ, ವಿ ಎಚ್ ಪಿ, ‘ಹಿಂದೂ ಜಾಗೋ’ ಮಂತ್ರವನ್ನು ಇನ್ನೂ ನಿಲ್ಲಿಸಿಲ್ಲ, ಹಿಂದೂ ರಕ್ಷಾ ದಳ ‘ಕಾಶ್ಮೀರ ಬಚಾವ್’ ಆಂದೋಲನ ಕಟ್ಟುತ್ತಿದೆ. ಜೊತೆಗೆ 2002ರ ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡದ ಕುರಿತಾಗಿ ಯಾವ ಕಾರಣಕ್ಕೂ ಕ್ಷಮೆ ಕೇಳಬಾರದೆಂದು ಆರೆಸೆಸ್ ಮೋದಿ ಮತ್ತು ಬಿಜೆಪಿಗೆ ತಾಕೀತು ಮಾಡಿದೆ. ಕ್ಷಮಾಪಣೆ ಕೇಳಿದಲ್ಲಿ ಕಷ್ಟಪಟ್ಟು ಗಳಿಸಿದ ಗೆಲುವಿನ ವೇದಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ಹೆದರಿಸಿದೆ ಎಂದು ಔಟ್ಲುಕ್ ಪತ್ರಿಕೆಯಲ್ಲಿ ವರದಿಯಾಗಿದೆ.

ಉತ್ರರ ಪ್ರದೇಶದ ಮುಜಫ್ಫರ್ ನಗರದ ಕೋಮು ಗಲಭೆ ಇಂಡಿಯಾದಲ್ಲಿ ಅಭಿವೃದ್ಧಿ-ಹಿಂದುತ್ವದ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿದೆ09a671d9-189f-4b8a-893f-4833f370ce93HiRes ಎನ್ನುವ ಕ್ರೂರ ವ್ಯಂಗ್ಯ ಸತ್ಯವಾದರೆ ಅದು ದಶಕಗಳ ಕಾಲ ಪ್ರಜ್ಞಾವಂತರನ್ನು ಕಾಡಲಿದೆ. ಹಾಗಿದ್ದಲ್ಲಿ ಅಭಿವೃದ್ಧಿ-ಹಿಂದುತ್ವದ ಈ ಅಪಾಯಕಾರಿ ಕಾಂಬಿನೇಷನ್ ಎಲ್ಲಿ ಮುಟ್ಟುತ್ತದೆ ? ಸಂಘ ಪರಿವಾರದ ಹೊಸ ಮಂತ್ರವೇನೆಂದರೆ ‘ಎಲ್ಲರಿಗೂ ನ್ಯಾಯ, ಯಾರಿಗೂ ಓಲೈಕೆ ಇಲ್ಲ’. ಇದು ಇದೇ ರೀತಿಯಲ್ಲಿ ಜನಪ್ರಿಯಗೊಂಡರೆ ಸಾಚಾರ್ ಕಮಿಟಿಯಲ್ಲಿ ವರದಿಯಾದಂತಹ ಮುಸ್ಲಿಮರ ಒಟ್ಟಾರೆ ದುಸ್ಥಿತಿ, ಕುಲುಮೆಯಲ್ಲಿ ನಿರಂತರ ಬೇಯುವಿಕೆ, ಸಾಮಾಜಿಕ ಬಹಿಷ್ಕಾರದ ತೂಗುಗತ್ತಿ ಹಾಗೂ ಮೂರನೇ ದರ್ಜೆಯ ನಾಗರಿಕತೆ ಇನ್ನು ಮುಂದೆಯೂ ಮುಂದುವರೆಯಲಿದೆ. ಇದನ್ನು ಇಂದಿನ ಮುಸ್ಲಿಂ ಯುವಕರು ಅವಲೋಕಿಸಬೇಕಾಗಿದೆ. ’ಆಗಿದ್ದು ಆಗಿಹೋಗಿದೆ ನಾವು ಅಭಿವೃದ್ಧಿಯೊಂದಿಗೆ ಕೈಜೋಡಿಸೋಣ” ಎಂದು ಈ ಯುವಕರು ಬಿಜೆಪಿಯೊಂದಿಗೆ ಹೊರಟರೆ ಅವರು ತಲಪುವುದು ಮತ್ತಷ್ಟು ಕಗ್ಗತ್ತಲಿಗೆ. ಇದು ಆತ್ಮಹತ್ಯೆ ಎಂದು ಅರಿವಾಗುವಷ್ಟರಲ್ಲಿ ಹಳ್ಳಕ್ಕೆ ಬಿದ್ದಾಗಿರುತ್ತದೆ. ಏಕೆಂದರೆ ಇಂದಿನ ಫ್ಯಾಸಿಸಂ ಹಿನ್ನೆಲೆಯ sense of alarmism ನ ಸ್ಥಿತಿಯಲ್ಲಿ ಪ್ರತಿಯೊಬ್ಬ ಅಲ್ಪಸಂಖ್ಯಾತನಾದವನು ಪ್ರಬಲ ಬಹುಸಂಖ್ಯಾತ ಧರ್ಮೀಯರ ನೀತಿಗಳನ್ನು ಇದು ನನ್ನ ಮೌಲ್ಯಗಳು ಎಂದೇ ಅಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಸಂದಿಗ್ಧತೆಯಲ್ಲಿ ಸಂಘ ಪರಿವಾರದ ಹಿಂದುತ್ವದಡಿಯಲ್ಲಿ ಇತರೆ ಹಿಂದುಳಿದ ವರ್ಗಗಳು ಮತ್ತು ದಲಿತರು ಒಂದಾಗಿ ಬಾಣಗಳಾಗಿ ಸಜ್ಜುಗೊಳ್ಳುತ್ತಾರೆ. ಪ್ರಬಲ ಜಾತಿಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಈ ಬಾಣಗಳನ್ನು ಮುಸ್ಲಿಮರ ವಿರುದ್ಧ ಪ್ರಯೋಗಿಸುತ್ತಿರುತ್ತದೆ. ಎಂಬತ್ತರ ದಶಕದಲ್ಲಿ ಬಿಹಾರನ ಭಾಗಲ್ಪುರದಲ್ಲಿ, ಮಹಾರಾಷ್ಟ್ರದ ಭಿವಂಡಿಯಲ್ಲಿ, 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮೇಲಿನ ಬಾಣಗಳೇ ಸಂಪೂರ್ಣವಾಗಿ ಪ್ರಯೋಗಗೊಂಡಿದ್ದು. ಆಗಿನ್ನೂ ಫ್ಯಾಸಿಸಂ ಅಧಿಕಾರದ ಹತ್ತಿರಕ್ಕೂ ಸುಳಿದಿರಲಿಲ್ಲ. ಆದರೆ ಇಂದು? ಎಂಬತ್ತರ ದಶಕದ ಕೊನೆ ಭಾಗದಲ್ಲಿ ಮೀಸಲಾತಿ ವಿರೋಧಿ ಚಳುವಳಿಯ ನೇತೃತ್ವ ವಹಿಸಿದ್ದು ಆರೆಸ್ಸೆಸ್ ನ ಅಂಗಪಕ್ಷ ಎಬಿವಿಪಿ. ಮೇಲ್ನೋಟಕ್ಕೆ ಅದು ಹಿಂದುಳಿದ ವರ್ಗಗಳ ವಿರೋಧದಂತೆ ಕಂಡರೂ ಅವರ ಗುರಿ ದಲಿತರಾಗಿದ್ದರು. ಇವತ್ತು ಕೇರಳದ ಚುನಾವಣಾ ಪ್ರಚಾರದಲ್ಲಿ ಹಿಂದುಳಿದ ಜಾತಿಗಳ ಗುರು ಮತ್ತು ಸಮಾಜ ಸುಧಾರಕ ನಾರಾಯಣ ಗುರು ಅವರನ್ನು ಓಲೈಸುವ ಮೋದಿ ತಮಿಳುನಾಡಿನಲ್ಲಿ ದಲಿತ ಸಮುದಾಯದವರನ್ನು ಕೆರಳಿಸುತ್ತಿದ್ದಾನೆ. ತನ್ನ ಭಾಷಣಗಳಲ್ಲಿ ಮುಂದಿನ ದಶಕ ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಸೇರಿದ್ದು ಎಂದು ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾನೆ. ಮಹಾರಾಷ್ಟ್ರದಲ್ಲಿ ದಲಿತ ನಾಯಕ ರಾಮದಾಸ್ ಅಟವಳೆ ಮೋದಿಯ ತೆಕ್ಕೆಗೆ ಜಾರಿದ್ದಾಯಿತು. ಹಾಗೆಯೇ ಅಖಿಲ ಭಾರತ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಉದಿತ್ ರಾಜ್ ಕಳೆದ ವಾರ ಬಿಜೆಪಿಗೆ ಸೇರಿಕೊಂಡಿದ್ದಾರೆ.

ಒಂದು ಕಾಲದ ಮಾತಾಗಿದ್ದ ಫ್ಯೂಡಲ್ ಹಿಂಸಾಚಾರ ಅತ್ಯಂತ ತ್ವರಿತಗತಿಯಲ್ಲಿ ಮರಳಿ ತನ್ನ ಹಕ್ಕು ಸ್ಥಾಪಿಸುತ್ತಿದೆ. ಬಿಹಾರದಂತಹ ರಾಜ್ಯದಲ್ಲಿ ಪ್ಯೂಡಲ್ ಪಡೆ ರಣವೀರ ಸೇನಾ ಮತ್ತೆ ತಲೆಯತ್ತಲಿದೆ. 27 ಮಾರ್ಚ 2014ರ ಹಿಂದೂ ಪತ್ರಿಕೆಯಲ್ಲಿ “ಬಿಹಾರದ ಬಟಾನಿ ತೋಲಾದಲ್ಲಿ ರಣವೀರ ಸೇನ ಪಡೆ ದಲಿತ ಹೆಣ್ಣು ಮಕ್ಕಳು ಮತ್ತು ಮಕ್ಕಳನ್ನು, ಹಿಂದುಳಿದ ಮುಸ್ಲಿಂರನ್ನು ಕೊಚ್ಚಿ ಹಾಕಿ ಹತ್ಯೆ ಮಾಡಿತ್ತು. ತೊಂಭತ್ತರ ದಶಕದಲ್ಲಿ ರಣವೀರ ಸೇನಾ ಪಡೆ ಬಿಜೆಪಿಯ ಎಲೆಕ್ಷನ್ ಕರಪತ್ರಗಳನ್ನು ಗ್ರಾಮಗಳಲ್ಲಿ ಹಂಚಿ ಬಿಜೆಪಿಗೆ ಮತ ಹಾಕಲು ಆದೇಶಿಸಿತು. 2012ರಲ್ಲಿ ಹತ್ಯೆಗೊಂಡ ಈ ರಣವೇರ ಸೇನೆಯ ಮುಖ್ಯಸ್ಥ ಭ್ರಹ್ಮೇಶ್ವರ ಸಿಂಗ್ ತಾನು ಬಾಲ್ಯದಿಂದಲೂ ಆರೆಸ್ಸೆಸ್ ಸ್ವಯಂಸೇವಕಾನಾಗಿದ್ದೆ ಎಂದು ಒಪ್ಪಿಕೊಂಡಿದ್ದ. ಆತ ಮೋದಿ ಪ್ರಧಾನಿ ಆಗುವ ಆಸೆ ಕಂಡಿದ್ದ. ಬಿಹಾರಿನ ಬಿಜೆಪಿ ನಾಯಕ ಗಿರಿರಾಜ ಸಿಂಗ್ ಈ ಭ್ರಹ್ಮೇಂದ್ರ ಸಿಂಗ್ ಅವರನ್ನು ಬಿಹಾರದ ಗಾಂಧಿ ಎಂದು ಕರೆದಿದ್ದ. ರಣವೀರ ಸೇನೆ ಪಡೆಯ ಪಠ್ಯಗಳು ಹೆಚ್ಚೂ ಕಡಿಮೆ ಆರೆಸ್ಸೆಸ್ ಸಿದ್ಧಾಂತಗಳು. ಗೋಹತ್ಯೆ ನಿಷೇಧ, 370 ಕಲಮನ್ನು ರದ್ದುಗೊಳಿಸುವುದು, ಸ್ಯೂಡೋ ಸೆಕ್ಯುಲರ್ ಗಳ ಹುಟ್ಟಡಗಿಸುವುದು ಇವುಗಳಲ್ಲಿ ಮುಖ್ಯವಾದವು” ಎಂದು ವರದಿಯಾಗಿದೆ.

ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ರಾಜಠಾಕ್ರೆಯnarendra ಎಂಎನ್ಎಸ್, ಕರ್ನಾಟಕದ ಶ್ರೀರಾಮ ಸೇನೆ ಮತ್ತು ಭಜರಂಗ ದಳ, ಉತ್ತರ ಪ್ರದೇಶದ ಟೋಟಲ್ ಶೂದ್ರ ಶಕ್ತಿಗಳು ಹಾಗೂ ಒಡಿಸ್ಸಾದ ಹಿಂದುತ್ವದ ಪಡೆಗಳು ಇವೇ ಮೊದಲಾದ ಹೊಸ ಫ್ಯಾಸಿಸಂ ಸಾಮ್ರಾಜ್ಯದಲ್ಲಿ ಗರಿಗೆದರುವ ಸಾಧ್ಯತೆಗಳು ಮುಂದೆ ನಡೆಯಲಿರುವ ರಕ್ತದ ಓಕಳಿಯ ಅಂದಾಜು ನೀಡುತ್ತವೆ. ಇವುಗಳ ನೆತ್ತರ ದಾಹ ಶುರುವಾದರೆ ನಿಲ್ಲಿಸಲು ಕಷ್ಟಸಾಧ್ಯ. ಮುಸ್ಲಿಮರ ಮಿತ್ರ ಅರ್ಥಾತ್ ಹಿಂದೂಗಳ ಶತ್ರು ಎಂದು ಆರೋಪಿಸಿ ಗಾಂಧಿಯನ್ನು ಕೊಂದಿದ್ದು ಇದೇ ಫ್ಯಾಸಿಸ್ಟ್ ಸಂಘ ಪರಿವಾರದ ಅಂಗ ಸಂಸ್ಥೆ ಹಿಂದೂ ಮಹಾಸಭಾದ ಘೋಡ್ಸೆ. ಅಂದರೆ ಪ್ರತಿಯೊಂದು ಆರೋಪಕ್ಕೂ ಈ ಸಂಘ ಪರಿವಾರ ಪರಿಹಾರ ಕಂಡುಕೊಳ್ಳುವುದು ನೆತ್ತರ ಹರಿಸುವುದರ ಮೂಲಕವೇ. ನಾಥುರಾಮ್ ಘೋಡ್ಸೆಯ ನೆತ್ತರ ದಾಹದ ಚಿಂತನೆಗಳು ಮರಳಿ ಗೂಡು ಕಟ್ಟುತ್ತಿವೆ. ಮೋದಿಯ ಬಾಯಲ್ಲಿ ಎಕೆ 47, ಎಕೆ ಅಂಟನಿ, ಎಕೆ 49 ಎಂದು ನೆತ್ತರ ದಾಹದ ಮಾತನ್ನು ಆಡಿಸಿದ್ದೂ ಇದೇ ಘೋಡ್ಸೆಯ ಚಿಂತನೆಗಳು. ‘ಒಂದು ದೇಶ, ಒಂದು ಭಾಷೆ, ಒಂದು ಜನಾಂಗ’ ಎನ್ನುವ ಮತೀಯವಾದಿ ರಾಷ್ಟ್ರೀಯತೆಯೂ ಸಹ ನೆತ್ತರ ದಾಹದೊಂದಿಗೆ ದಾಪುಗಾಲಿಡುತ್ತಲಿದೆ. ‘ವೈವಿಧ್ಯತೆಯಲ್ಲಿ ಏಕತೆ, ಬಹುತ್ವವೇ ಸಂವಿಧಾನದ ಆಶಯ, ಬಹುರೂಪತೆ ನಮ್ಮ ಹಕ್ಕು’ ಎನ್ನುವ ಧ್ವನಿಗಳನ್ನು ಅಡಗಿಸಲಾಗುತ್ತದೆ.

ನನಗಂತೂ ಇಡೀ ಮೀಡಿಯಾದ ಹೈಪ್ ಸುಳ್ಳಾಗುತ್ತದೆಂಬ ಭರವಸೆ ಇತ್ತೀಚೆಗೆ ಬಲವಾಗುತ್ತಿದೆ. ಏಕೆಂದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಮೋಗೆ ಪ್ರತಿಯಾಗಿ ಒಬ್ಬ ಕಬೀರನಿದ್ದಾನೆ. ಈ ನಮ್ಮ ಕಬೀರನಿರುವ ಸ್ಥಳದಲ್ಲಿ ನಮೋಗೆ ಸ್ಥಾನವೇ ಇಲ್ಲ.

ಜಾಗತೀಕರಣ ಮತ್ತು ಭಾರತದ ಸಿನಿಮಾ ಜಗತ್ತು


– ಡಾ.ಎಸ್.ಬಿ. ಜೋಗುರ


 

ಜಾಗತೀಕರಣವನ್ನು ಪ್ರೊ ಎಮ್. ನಂಜುಂಡಸ್ವಾಮಿಯವರು ವಿಶ್ವ ಮಾರುಕಟ್ಟೆಯ ಕೀಲಿ ಕೈ ಎಂದು ಕರೆದಿದ್ದರು. ಈ ಪ್ರಕ್ರಿಯೆಯ ವೇಗ ವಿಶ್ವದ ಆರ್ಥಿಕ ಚಟುವಟಿಕೆಗಳಿಗೆ ಚುರುಕು ನೀಡುವ ಜೊತೆ ಜೊತೆಯಲ್ಲಿಯೇ, ಸಣ್ಣ ತ್ರಾಣದ ಆರ್ಥಿಕ ಮೂಲಗಳು ಬತ್ತಿಹೋಗುವಂತೆ ಮಾಡಿರುವುದೂ ಇದೆ. ಇದು ಕೇವಲ ಆರ್ಥಿಕ ವಲಯಕ್ಕೆ ಮಾತ್ರ ಸೀಮಿತವಾಗಿದ್ದರೆ ಜಾಗತೀಕರಣವನ್ನು ಹೀಗೆ ವಿವಿಧ ನೆಲೆಗಳಲ್ಲಿ ಚರ್ಚಿಸುವ ಅಗತ್ಯವಿರುತ್ತಿರಲಿಲ್ಲ. ಜಾಗತೀಕರಣ ನಮ್ಮ ದೈನಂದಿನ ಬದುಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಕೂಡಾ ತುಂಬಾ ಗಾಢವಾಗಿ ತಟ್ಟಿರುವುದರಿಂದಲೇ ಅದರ ಗುಣಾತ್ಮಕವಾದ ಪರಿಣಾಮಗಳನ್ನು ಕುರಿತು ಗಹನವಾಗಿ ಯೋಚಿಸಬೇಕಿದೆ.

ಸಮಾಜದ ಬಹುದೊಡ್ಡ ಸಮುದಾಯವನ್ನು ವ್ಯಾಪಕ ನೆಲೆಯಲ್ಲಿ ಪ್ರಭಾವಿಸುವ ಜನಪ್ರಿಯ ಮಾಧ್ಯಮ ಸಿನಿಮಾ. ಚಲನಚಿತ್ರ Desktopಮಾಧ್ಯಮ ಜನಸಮೂಹದ ಮೈ-ಮನಗಳ ಸುಳಿಯಲ್ಲಿ ಕುಳಿತು ಬದುಕಿನ ವಿಭಿನ್ನ ಸ್ತರಗಳಲ್ಲಿ ಬೇರೆ ಬೇರೆ ರೀತಿಯ ಪ್ರಭಾವವನ್ನು ಬೀರುತ್ತಿರುತ್ತದೆ. 1990 ರ ದಶಕದ ನಂತರ ಜಾಗತೀಕರಣದ ಪ್ರವೇಶದ ಬೆನ್ನಲ್ಲಿಯೇ ವಿಶ್ವದ ಬೇರೆ ಬೇರೆ ಭಾಷೆಯ ಚಲನಚಿತ್ರಗಳು ದೇಶದಲ್ಲಿ ವ್ಯಾಪಕವಾಗಿ ಬಿಡುಗಡೆಯಾದವು. ಅದಕ್ಕೂ ಮೊದಲು ಈ ಮಟ್ಟದ ವಿಸ್ತೃತತೆ ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ದೊರೆತದ್ದು ಅಪರೂಪ. 1997 ರ ಸಂದರ್ಭದಲ್ಲಿ ‘ಟೈಟಾನಿಕ್’ ಎನ್ನುವ ಸಿನಿಮಾ 1.8 ಬಿಲಿಯನ್ ಡಾಲರ್ ವ್ಯವಹಾರ ಮಾಡಲು ಸಾಧ್ಯವಾದದ್ದು ಈ ಜಾಗತೀಕರಣ ತೆರೆದಿಟ್ಟ ಮುಕ್ತ ಮಾರುಕಟ್ಟೆಯ ಅವಕಾಶಗಳಿಂದಲೇ. 2010 ರಲ್ಲಿ ತೆರೆಗೆ ಬಂದ ‘ಅವತಾರ್’ ಎನ್ನುವ ಇಂಗ್ಲಿಷ್ ಸಿನಿಮಾ 500 ಮಿಲಿಯನ್ ಡಾಲರ್ ವ್ಯವಹಾರ ಮಾಡುವಲ್ಲಿಯೂ ಈ ಜಾಗತೀಕರಣದ ಪಾತ್ರವಿದೆ. ಜಾಗತೀಕರಣ ಕೇವಲ ವ್ಯವಹಾರದಲ್ಲಿ ಗೆಲ್ಲುವ ಸೂತ್ರ ಮಾತ್ರವಾಗಿರದೇ ಸಹನಿರ್ಮಾಣಕ್ಕೂ ಅವಕಾಶ ಮಾಡಿಕೊಟ್ಟಿದೆ ಎಂದು ಟೈಲರ್ ಎನ್ನುವ ಚಿಂತಕರು ಹೇಳುತ್ತಾರೆ. ಮತ್ತೆ ಕೆಲವು ವಿಶ್ಲೇಷಕರು ಈ ಬಗೆಯ ಸಹ ನಿರ್ಮಾಣದ ನೆಲೆಯಲ್ಲಿ ಮೂಡಿ ಬರುವ ಚಲನಚಿತ್ರಗಳು ವಿಭಿನ್ನ ಸಂಸ್ಕೃತಿಯ ಪ್ರಸರಣಕ್ಕೆ ಕಾರಣವಾಗುವ ಜೊತೆಯಲ್ಲಿ ಹೈಬ್ರಿಡ್ ಸಂಸ್ಕೃತಿಯ ಹರಡುವಿಕೆಗೂ ಕಾರಣವಾಗಿವೆ ಎಂದಿದ್ದಾರೆ. ತೃತೀಯ ಜಗತ್ತಿನ ರಾಷ್ಟ್ರಗಳು ಸಿನಿಮಾ ಜಗತ್ತಿನಲ್ಲಿ ಸಲ್ಲುವಂತಾಗುವಲ್ಲಿಯೂ ಪರೋಕ್ಷವಾಗಿ ಜಾಗತೀಕರಣ ನೆರವಾಗಿದೆ. ಲ್ಯಾಟಿನ್ ಅಮೇರಿಕಾ ಮತ್ತು ಇರಾಕ್ ದಂತಹ ರಾಷ್ಟ್ರಗಳ ಸಿನಿಮಾಗಳ ಗುಣಮಟ್ಟ ಜಾಗತಿಕ ಮಟ್ಟದಲ್ಲಿ ಪರಿಚಯವಾಗುವಲ್ಲಿ ನೆರವಾದದ್ದು ಮುಕ್ತ ಮಾರುಕಟ್ಟೆಯ ಸೂತ್ರಗಳೇ. ಹೀಗೆ ಹೇಳುವಾಗ ಈ ಸಹನಿರ್ಮಾಣದ ಪರಿಕಲ್ಪನೆಯ ಭರಾಟೆಯಲ್ಲಿ ನಿರ್ದೇಶಕರ ಮೇಲಿನ ಸವಾರಿಯನ್ನೂ ಮರೆಯುವಂತಿಲ್ಲ. ಪರಿಣಾಮವಾಗಿ ಕೆಲ ಬಾರಿ ನಿರ್ದೇಶಕನ ನಿರೀಕ್ಷೆಯಂತೆ ಚಿತ್ರಗಳು ಮೂಡಿಬರದೇ ಸಹನಿರ್ಮಾಪಕರ ಅಣತಿಯಂತೆ ತಯಾರಾಗುತ್ತವೆ. ಹೀಗಾಗಿ ಅನೇಕ ಸಂಧರ್ಭಗಳಲ್ಲಿ ನಿರ್ದೇಶಕ  ಕೇವಲ ನೆಪ ಮಾತ್ರ ಎನ್ನುವಂಥಾ ಸ್ಥಿತಿ ನಿರ್ಮಾಣವಾಗಿದೆ.

ಹಾಗೆ ನೋಡಿದರೆ ಜಗತ್ತಿನಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುವವರ ಸಾಲಲ್ಲಿ ಭಾರತ untitledಮೊದಲ ಸ್ಥಾನದಲ್ಲಿದೆ. ಸುಮಾರು 24 ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ನಿರ್ಮಿಸುವ ಭಾರತೀಯರು ಆಯಾ ಪ್ರಾದೇಶಿಕ ಸಂಸ್ಕೃತಿ ಮತ್ತು ಪರಿಸರವನ್ನು ಆಧರಿಸಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಒಟ್ಟು ನಿರ್ಮಾಣದಲ್ಲಿ ಮೊದಲ ಸ್ಥಾನದಲ್ಲಿ ಹಿಂದಿ, ಎರಡನೆಯ ಸ್ಥಾನದಲ್ಲಿ ತೆಲುಗು, ಮೂರನೆಯ ಸ್ಥಾನದಲ್ಲಿ ತಮಿಳು ಸಿನಿಮಾಗಳಿವೆ. ನಮ್ಮಲ್ಲಿ ಮೊಟ್ಟ ಮೊದಲ ಸಿನಿಮಾ ನಿರ್ಮಾಣವಾಗಿರುವುದು 1913 ರಲ್ಲಿಯೇ. ಯಾವ ಯಾವ ರಾಷ್ಟ್ರಗಳು ಸಿನಿಮಾ ನಿರ್ಮಾಣದಲ್ಲಿ ಯಾವ ರೀತಿಯ ಶ್ರೇಣಿಯನ್ನು ಹೊಂದಿವೆ ಎನ್ನುವುದನ್ನು ಇಲ್ಲಿ ಕೊಟ್ಟಿರುವ ಪಟ್ಟಿಯಿಂದ ನಾವು ಗಮನಿಸಬಹುದಾಗಿದೆ. 2009 ರಲ್ಲಿ ಭಾರತದಲ್ಲಿ ಸುಮಾರು 1288 ಸಿನಿಮಾಗಳು ನಿರ್ಮಾಣವಾಗಿ ತೆರೆಗೆ ಬಂದಿವೆ. ಭಾರತವನ್ನು ಹೊರತು ಪಡಿಸಿದರೆ ಸಿನಿಮಾ ನಿರ್ಮಾಣದಲ್ಲಿ ಅಮೆರಿಕೆ ಎರಡನೆಯ ಸ್ಥಾನದಲ್ಲಿದೆ.

ಭಾರತ ಇಷ್ಟೊಂದು ಬೃಹತ್ ಸ್ವರೂಪದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದೆಯಾದರೂ ಇಲ್ಲಿ ಹೂಡಲಾಗುವ  ಬಂಡವಾಳದ  ಪ್ರಮಾಣ ಮಾತ್ರ ತೀರಾ ಕಡಿಮೆ. 2010 ರ ಸಂದರ್ಭದಲ್ಲಿ ದೇಶದ ಚಿತ್ರೋದ್ಯಮದಲ್ಲಿ ವಿನಿಯೋಗಿಸಲಾದ ಒಟ್ಟು ಮೊತ್ತ 195 ಮಿಲಿಯನ್ ಡಾಲರ್. ಅಮೆರಿಕಾ ಅದೇ ವರ್ಷ ತೊಡಗಿಸಿದ ಹಣ 13289 ಮಿಲಿಯನ್ ಡಾಲರ್. ಅಂದರೆ ಭಾರತದ ಸಿನಿಮಾ ನಿರ್ಮಾಣದಲ್ಲಿ ಹೂಡಲಾದ ಒಟ್ಟು ಹಣದ ಸುಮಾರು ಐದು ಪಟ್ಟು. ಇದು ಇಂಗ್ಲಿಷ ಸಿನೇಮಾಗಳು ಖರ್ಚು ಮಾಡುವ ರೀತಿ.

1990 ರ ನಂತರ ಮುಕ್ತ ಮಾರುಕಟ್ಟೆಯ ನೆಲೆಯಲ್ಲಿ ಆರಂಭವಾದ ಆರ್ಥಿಕ ವಿದ್ಯಮಾನಗಳು ಸಹ ನಿರ್ಮಾಣ ತತ್ವದ ಅಡಿಯಲ್ಲಿimages ಸಿನಿಮಾಗಳು ನಿರ್ಮಾಣಗೊಳ್ಳಲು ಕಾರಣವಾದವು. ಉದಾಹರಣೆಗೆ ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ಹೊರಬತ್ತಿರುವ ಸಿನಿಮಾಗಳು. ಅಮೇರಿಕಾದ ‘ವೈಕಾಮ್’ ಮತ್ತು ಭಾರತದ ‘ನೆಟ್ ವರ್ಕ್  18′ ಇವೆರಡರ ಸಹಯೋಗದಲ್ಲಿ ಅನೇಕ ಸಿನಿಮಾಗಳು ನಿರ್ಮಾಣಗೊಂಡಿವೆ. ಆದರೆ ಜಾಗತೀಕರಣದ ಪ್ರವ್ರತ್ತಿಗಳು ಸಿನಿಮಾ ಕ್ಷೇತ್ರದಲ್ಲಿ ಹಲವು ಗಂಭೀರ ಸ್ವರೂಪದ ನೇತ್ಯಾತ್ಮಕ ಪರಿಣಾಮಗಳನ್ನೂ ಕೂಡಾ ಕಾರಣಿಸಿವೆ. ಭಾರತದಲ್ಲಿರುವ ಸಣ್ಣ ಪುಟ್ಟ ಸ್ಟುಡಿಯೋಗಳನ್ನು ಜಾಗತೀಕರಣ ಅಳಿವಿನಂಚಿಗೆ ತಂದು ನಿಲ್ಲಿಸಿದೆ. ಡಿಜಿಟಲ್ ಸಿನಿಮಾ ಬಂದ ಮೇಲೆ ಕಿಂಡಿಯಲ್ಲಿ ಮುಖವಿಟ್ಟು ಸಿನೇಮಾ ಮೂಡಿಸುವ ಲಕ್ಷಗಟ್ಟಲೆ ಆಪರೇಟರಗಳು ನಿರುದ್ಯೋಗಿಗಳಾಗಿದ್ದಾರೆ. ಜಾಗತೀಕರಣದ ಫಲವಾಗಿ ಅನೇಕ ಕಲಾವಿದರು, ತಂತ್ರಜ್ಞರು ಜಾಗತಿಕ ಮಟ್ಟದಲ್ಲಿ ಕಾರ್ಯ ಮಾಡುವುದು ಸಾಧ್ಯವಾಗಿದೆಯಾದರೂ ಅದು ಉದ್ಯೋಗದ ನಿರಂತರತೆಯಂತೂ ಅಲ್ಲ. ಜೊತೆಗೆ ಸಣ್ಣ ಸಣ್ಣ ಕಂಪೆನಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಉದ್ಯಮದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವ ಪ್ರಯತ್ನಗಳೂ ಕೂಡಾ ನಡೆಯುತ್ತಿವೆ.’ಸೋನಿ’ ಯಂಥಾ ಬಹು ಜನಪ್ರಿಯ ವಿದೇಶಿ ಕಂಪೆನಿಯು ಚೆನೈ ಮೂಲದ  ‘ಇಮೇಜ್ ವರ್ಕ್ಸ್’ ಸಂಸ್ಥೆಯನ್ನು ನುಂಗಿ ಹಾಕಿತು. ಸಣ್ಣ ಮೀನುಗಳನ್ನು ತಿಂದು ದೊಡ್ದ ಮೀನುಗಳು ಬೆಳೆಯುವ, ಬದುಕುವ ಕ್ರಮ ವಿಕಾಸವಾದದ ಸೂತ್ರವಲ್ಲವೇ?

ಈಗೀಗ ಅನೇಕ ಅಂತರರಾಷ್ಟ್ರಿಯ ಕಂಪನಿಗಳು ಭಾರತೀಯ ಚಿತ್ರೋದ್ಯಮದಲ್ಲಿ ಹಣ ಹೂಡಲು ಉತ್ಸುಕವಾಗಿವೆ. ಕಾರಣ ಈಗಾಗಲೇ ಹಣ ಹೂಡಿ ಗೆದ್ದ ಹಲವು ಕಂಪನಿಗಳು ಅವರ ಕಣ್ಣೆದುರಲ್ಲಿ ಉದಾಹರಣೆಯಾಗಿ ಉಳಿದಿವೆ. 2007 ರ ಸಂದರ್ಭದಲ್ಲಿ ಸೋನಿ ಕಂಪನಿ ಸಂಜಯ ಲೀಲಾ ಬನ್ಸಾಲಿ ಜೊತೆಗೂಡಿ ‘ಸಾವರಿಯಾ’ ಎನ್ನುವ ಸಿನಿಮಾ ಒಂದನ್ನು ತಯಾರಿಸಿತು. ಚಿತ್ರ ತೋಪಾದರೂ ಹೂಡಿದ ಹಣಕ್ಕೆ ಮಾತ್ರ ತೊಂದರೆಯಾಗಲಿಲ್ಲ. ಆಗಲೇ ವಿದೇಶಿ ಕಂಪನಿಗಳಿಗೆ ಭಾರತದ ಚಿತ್ರೋದ್ಯಮದಲ್ಲಿ ಹಣ ಹೂಡುವ ಹವಣಿಕೆ ಆರಂಭವಾಯಿತು. ಮುಂದೆ ವಾರ್ನರ್ ಬ್ರದರ್ಸ್ ಹಾಗೂ ರಮೇಶ ಸಿಪ್ಪಿ ಜೊತೆಗೂಡಿ ‘ಚಾಂದನಿ ಚೌಕ್ ಟು ಚೈನಾ’ ಎನ್ನುವ ಸಿನಿಮಾ ತಯಾರಿಸಿದರು. ಬರೀ ಅಮೇರಿಕಾ ಒಂದರಲ್ಲಿಯೇ ಆ ಸಿನಿಮಾ 1 ಮಿಲಿಯನ್ ಡಾಲರ್ ಹಣ ಕಮಾಯಿಸಿತು. ಹೀಗೆ ಈ ಜಾಗತೀಕರಣ ವಿಶ್ವದ ಹೆಬ್ಬಾಗಿಲಾಗಿರುವುದರಿಂದ ಚಿತ್ರೋದ್ಯಮ ಈಗ ಎಲ್ಲ ಬಗೆಯಲ್ಲಿ ಕಲಸುಮೇಲೋಗರವಾಗಿಬಿಟ್ಟಿದೆ. ನಿರ್ದೇಶಕ ಭಾರತೀಯನಾಗಿದ್ದರೆ, ಸ್ಟಂಟ್ ಮನ್ ಇಂಗ್ಲೆಂಡ್ ಪ್ರಜೆ, ಮೇಕಪ್ ಮನ್ ಕೆನಡಾದವನು, ಮ್ಯುಜಿಕ್ ರಶ್ಯಾ ದೇಶದವ.  ಹೀಗೆ ಇವತ್ತು ಎಲ್ಲವೂ ಹೈಬ್ರಿಡ್ ಮಯ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರೋದ್ಯಮದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಪ್ರತಿಭೆ ಇರುವವರಿಗೆ ಸೀಮೆಗಳೇ ಇಲ್ಲ. ಅವರನ್ನು ಇಡೀ ಜಗತ್ತೇ ಕರೆಯುವಂತಾಗಿದೆ. ಭಾರತದ ಅನೇಕರು ವಿದೇಶಗಳ ಚಿತ್ರಗಳಲ್ಲಿ ಕೆಲಸ ಮಾಡಿದರೆ ಅಲ್ಲಿಯ ಕೆಲ ತಂತ್ರಜ್ಞರು ಕೂಡಾ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಡ್ಯಾನಿ ಫೈಸ್ ಎನ್ನುವ ಕಲಾವಿದ ಋತಿಕ್ ರೋಷನ್ ನಟಿಸಿರುವ ‘ಕೈಟ್’ ಸಿನೇಮಾಕ್ಕೆ ಸಾಹಸ ನಿರ್ದೇಶನ ಮಾಡಿದ. ಆ ಚಿತ್ರದ ನಟಿ ಬಾರ್ಬರಾ ಮೋರಿ ಕೂಡಾ ಈ ನೆಲದವಳಾಗಿರಲಿಲ್ಲ. ಅಕ್ಷಯಕುಮಾರ್ ನಟಿಸಿರುವ ‘ಸಿಂಗ್ ಇಜ್ ಕಿಂಗ್’ ಸಿನಿಮಾದ ಹಿನ್ನೆಲೆ ಸಂಗೀತಕ್ಕೆ ಸ್ನೂಪ್ ಡಾಗ್ ಎಂಬಾತ ಕೆಲಸ ಮಾಡಿದ್ದ. ರಜನಿಕಾಂತ್ ಅವರ ‘ರೋಬೋಟ್’ ಸಿನಿಮಾದ ಕೆಲ ಅದ್ಭುತವಾದ ಆನಿಮೇಶನ್ ದೃಶ್ಯಗಳನ್ನು ಇಂಗ್ಲಂಡನ ಸ್ಟನ್ ವಿನಸ್ಟನ್ ಸ್ಟುಡಿಯೋದಲ್ಲಿ ಶೂಟ್ ಮಾಡಲಾಯಿತು. ಆ ಸಿನಿಮಾಕ್ಕಾಗಿ ಸುಮಾರು 38 ಮಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಲಾಗಿತ್ತು. ನಮ್ಮವರೇ ಆದ ಎ.ಆರ್. ರೆಹಮಾನ್ ‘ಸ್ಲಮ್ ಡಾಗ್..’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಪ್ರಶಸ್ತಿ ಗೆದ್ದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೈದರಾಬಾದಲ್ಲಿರುವ ರಾಮೋಜಿರಾವ್ ಫಿಲ್ಮ್ ಸಿಟಿಯಂತೂ ಅನೇಕ ಇಂಗ್ಲೀಷ್ ಸಿನಿಮಾಗಳ ತಯಾರಿಕೆಯಲ್ಲೂ ಹೆಸರು ಮಾಡಿದೆ. ಹೀಗೆ ಅಲ್ಲಿಯ ಪ್ರತಿಭೆಗಳು ಇಲ್ಲಿ, ಇಲ್ಲಿಯ ಪ್ರತಿಭೆಗಳು ಅಲ್ಲಿ ಮಿಂಚುವಲ್ಲಿ ಈ ಜಾಗತೀಕರಣ ಪ್ರಕ್ರಿಯೆ ನೆರವಾಗಿದೆ.

ಮುಂಬರುವ ದಿನಗಳಲ್ಲಿ ಬಹುತೇಕವಾಗಿ ದೊಡ್ದ ಬಜೆಟ್ ನ ಸಿನಿಮಾಗಳು ವಿದೇಶಿ ಕಂಪನಿಗಳ ಸಹಯೋಗದಲ್ಲಿಯೇ ತಯಾರಾಗಿ ಬಿಡುಗಡೆಯಾಗಲಿವೆ. ambani+spielbergಆ ಮೂಲಕ ಹಾಲಿವುಡ್ ಮತ್ತು ಬಾಲಿವುಡ್ ನಡುವಿನ ಅಂತರ ಬಹುತೇಕ ಕಡಿಮೆಯಾಗಲಿವೆ. ಈಗಾಗಲೇ ಬಾಲಿವುಡ್ ಸಿನಿಮಾಗಳಲ್ಲಿ ಇದರ ಸೂಚನೆಗಳು ಕಾಣಸಿಗುತ್ತಿವೆ. ನವಂಬರ್ 2010 ರ ಸಂದರ್ಭದಲ್ಲಿ ಪ್ಯಾರಾಮೌಂಟ್ ಸ್ಟುಡಿಯೋದಲ್ಲಿ ಹಾಲಿವುಡ್-ಬಾಲಿವುಡ್ ನಡುವಿನ ಸಂಬಂಧಗಳ ವಿಸ್ತರಣೆಯ ನೆಲೆಯಲ್ಲಿ ಒಂದು ಹೊಸ ಮನ್ವಂತರ ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಒಪ್ಪಂದ ಒಂದಕ್ಕೆ ಸಹಿ ಹಾಕಲಾಗಿದೆ. ಅನೇಕ ವಿದೇಶಿ ಕಂಪನಿಗಳ ಸಹಯೋಗದೊಂದಿಗೆ ಕೈ ಜೋಡಿಸಲು ಅನಿಲ ಅಂಬಾನಿಯವರು ಮುಂದೆ ಬಂದಿರುವುದು ಹಳೆಯ ಸುದ್ದಿ. ಅದಾಗಲೇ ಡ್ರೀಮ್ ವರ್ಕ್ಸ್ ಜೊತೆ ಸೇರಿ ವರ್ಷಕ್ಕೆ 5-6 ಸಿನಿಮಾಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ಆ ಕಾರಣಕ್ಕಾಗಿಯೇ ಅವರು 550 ಮಿಲಿಯನ್ ಡಾಲರ್ ಹಣವನ್ನು ತೊಡಗಿಸಿದ್ದಾರೆ. ಭವಿಷ್ಯದಲ್ಲಿ ಭಾರತೀಯ ಸಿನಿಮಾ ಕತೆಗಳು ವಿದೇಶಿಯರ ನಿರೀಕ್ಷೆಯನ್ನು ಗಮನದಲ್ಲಿರಿಸಿ ಹೊಸೆಯುವಂತಾದರೆ ಅಚ್ಚರಿ ಪಡಬೇಕಿಲ್ಲ. ಹಾಗೆಯೇ ಅನೇಕ ವಿದೇಶಿ ಕಂಪನಿಗಳು ಭಾರತದಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಬಿಡುಗಡೆಗೊಳಿಸುವ, ಆ ಮೂಲಕ ಹಣ ಕಮಾಯಿಸುವ ಸನ್ನಾಹದಲ್ಲಿವೆ. ಚೈನಾದಂತಹ ರಾಷ್ಟ್ರ  ಒಂದು ವರ್ಷಕ್ಕೆ ಕೇವಲ 20 ರಷ್ಟು ವಿದೇಶಿ ಸಿನಿಮಾಗಳನ್ನು ಮಾತ್ರ ತನ್ನ ನೆಲದಲ್ಲಿ ಬಿಡುಗಡೆ ಮಾಡುತ್ತದೆ. ಆದರೆ ಭಾರತದಲ್ಲಿ ಮಾತ್ರ ಆ ಮಿತಿಯೇ ಇಲ್ಲ. ಹಾಗಾಗಿ ನಮ್ಮ ಸಿನಿಮಾಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಪ್ರಸರಣ ಮಾಡುವ ಜೊತೆ ಜೊತೆಯಲ್ಲಿ ‘ಊಂಡೂ ಹೋದ ಕೊಂಡೂ ಹೋದ’ ಎನ್ನುವ ಸ್ಥಿತಿ ನಿರ್ಮಾಣವಾಗುವ ಸಂದರ್ಭದಲ್ಲಿ ನಾವಿದ್ದೇವೆ. ಇಲ್ಲಿ ನಮ್ಮ ಮುಂದೆ ಆಯ್ಕೆಗಳಿಲ್ಲ. ದಕ್ಕಿದ್ದನ್ನು ಸ್ವೀಕರಿಸುವುದಷ್ಟೇ ನಮಗಿರುವ ದಾರಿ.

ಚುನಾವಣೆ ಪತ್ರಕರ್ತರಿಗೆ ಸುಗ್ಗಿಯ ಕಾಲವೇ?


-ಇರ್ಷಾದ್


 

ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ1625744_654886284570859_1165903399_n ಜೋಷಿ ‘ಚುನಾವಣೆಯ ಸಂಧರ್ಭದಲ್ಲಿ ತಮ್ಮ ಬಗ್ಗೆ ಮೃದು ಧೋರಣೆ ತಾಳುವಂತೆ ಮಾಧ್ಯಮದವರನ್ನು ಓಲೈಸಲು’ ತಮ್ಮ ನೆಚ್ಚಿನ ಬಂಟ ಈರೇಶ ಅಂಚಟಗೇರಿ ಮೂಲಕ ಪತ್ರಕರ್ತರಿಗೆ ಸುಮಾರು 2000 ರೂಪಾಯಿ ಮೌಲ್ಯದ ಒಂದು ಟೈಟಾನ್ ಕಂಪನಿಯ ವಾಚ್ ಹಾಗೂ ಅಂದಾಜು 2000 ಬೆಲೆ ಬಾಳುವ ಸಿಯಾ ರಾಮ್ಸ್ ಮಿನಿಯೇಚರ್ ಕಂಪೆನಿಯ ಶರ್ಟ್ ಮತ್ತು ಪ್ಯಾಂಟ್ ಪೀಸ್ ಇರುವ ಬ್ಯಾಗ್ ನ್ನು ಧಾರವಾಡದ ಮಾಧ್ಯಮ ಕಚೇರಿಗಳಿಗೆ ತಲುಪಿಸಿರುವ ಕುರಿತು ಪ್ರಜಾವಾಣಿ (25 ಮಾರ್ಚ್ 2014 ) ಯಲ್ಲಿ ವರದಿ ಪ್ರಕಟವಾಗಿದೆ. ಆದರೆ ಪ್ರಜಾವಾಣಿಯ ಪ್ರತಿನಿಧಿ ಮನೋಜ್ ಕುಮಾರ್ ಗುದ್ದಿ ಅವುಗಳನ್ನು ಪಡೆಯದೇ ವಾಪಾಸು ಕಳುಹಿಸಿ ವ್ರತ್ತಿ ಧರ್ಮ ಮೆರೆದಿದ್ದಾರೆ. ಅದೇ ದಿನದ  ಪ್ರಜಾವಾಣಿ ಪತ್ರಿಕೆಯಲ್ಲಿ ಅಂತಹದ್ದೇ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಔತಣ ಕೂಟ ಆಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದಾಗ ಔತಣ ಕೂಟಕ್ಕೆ ಆಗಮಿಸಿದ್ದ ಪತ್ರಕರ್ತರು ಹಾಗೂ ಆಯೋಜಕರು ಎದ್ದೂ ಬಿದ್ದು ಪರಾರಿಯಾಗಿದ್ದರು. ಕೆಲ ಪತ್ರಕರ್ತರು ಅರ್ಧಕ್ಕೇ ಊಟ ನಿಲ್ಲಿಸಿ ಕೈಯನ್ನೂ ತೊಳೆಯದೆ ಓಡಿಹೋಗಿದ್ದರಂತೆ!

paid-newsಈ ಎರಡೂ ಸುದ್ದಿಗಳು ಇಂದಿನ ಪತ್ರಿಕೋದ್ಯಮದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ರಾಜಕಾರಣಿಗಳ ಆಮಿಷಗಳಿಗೆ ಬಲಿಯಾಗದೆ ತನ್ನ ವೃತ್ತಿ ಧರ್ಮವನ್ನುಪಾಲಿಸುವ ಪತ್ರಕರ್ತರು ಒಂದೆಡೆಯಾದರೆ, ಪ್ರೆಸ್ ಮೀಟ್ ಹೆಸರಿನಲ್ಲಿ ಗುಂಡು ತುಂಡು ಪಾರ್ಟಿಗಳಿಗೆ ಹೋಗಿ  ರಾಜಕಾರಣಿಗಳು ಕೊಡುವ ಉಡುಗೊರೆಗಳನ್ನು ಅಥವಾ ನೋಟಿನ ಕಂತೆಗಳನ್ನು ಸ್ವೀಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಪತ್ರಕರ್ತರು ಅನೇಕರಿದ್ದಾರೆ. ಪ್ರತಿ ನಿತ್ಯ ದಿನ ಪತ್ರಿಕೆಗಳ ಪುಟ ತಿರುಗಿಸಿದಾಗ, ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ಗಳನ್ನು ಗಮನಿಸಿದಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಸುದ್ದಿಗಳು ರಾರಾಜಿಸುತ್ತಲೇ  ಇರುತ್ತವೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರು ಮತದಾರರನ್ನು ಓಲೈಕೆ ಮಾಡಲು ಹಂಚುವ ನೂರು, ಸಾವಿರ ರೂಪಾಯಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರಯಾಗುತ್ತಿವೆ. ಅಕ್ರಮ ಹಣ ಸಾಗಾಟ, ಮತದಾರರಿಗೆ ಸೀರೆ ಹಂಚುವುದು, ಬಾಡೂಟ ನೀಡುವ ಸುದ್ದಿಗಳು ನಿರಂತರವಾಗಿ ಬರುತ್ತಲೇ ಇವೆ. ವಿಪರ್ಯಾಸವೆಂದರೆ ಇವುಗಳನೆಲ್ಲಾ ಸುದ್ದಿ ಮಾಡುವ ಪತ್ರಕರ್ತರಿಗೇ ರಾಜಕಾರಣಿಗಳು ಅಮಿಷವೊಡ್ಡುವ ಸುದ್ದಿಗಳು ಒಂದೆರಡು ಮಾಧ್ಯಮಗಳಲ್ಲಿ ಮಾತ್ರ ಸುದ್ದಿಯಾಗುತ್ತವೆ. ಇತರ ಮಾಧ್ಯಮಗಳಿಗೆ ಇದು ಸುದ್ದಿ ಎಂದು ಅನ್ನಿಸುವುದಿಲ್ಲ. ಹಿರಿಯ ಪತ್ರಕರ್ತರೊಬ್ಬರು ಹೀಗನ್ನುತ್ತಿದ್ದರು “ ಚುನಾವಣೆ ಬಂತ್ತೆಂದರೆ ಸಾಕು, ಕೆಲ ಪತ್ರಕರ್ತರಿಗಂತೂ ಇದು ಸುಗ್ಗಿಯ ಕಾಲ. ಚುನಾವಣೆಯ ಸಂದರ್ಭದಲ್ಲಿ ಅವರ ಪಾಲಿಗೆ ಉತ್ತಮ ಮಳೆ ಬೆಳೆ ಎರಡೂ ಆಗುತ್ತದೆ”.

ಪತ್ರಕರ್ತರಿಗೆ ಅಮಿಷಗಳನ್ನೊಡ್ಡಿ ತಮ್ಮ ಪರ ಸುದ್ದಿ ಮಾಡುವಂತೆ ನೋಡಿಕೊಳ್ಳುವುದು, ಅದಕ್ಕಾಗಿ ಅವರನ್ನುuntitled ಓಲೈಸಲು ದುಬಾರಿ ಗಿಫ್ಟ್ ಗಳನ್ನು ಕೊಡುವುದು, prajavaniprajavaniಗುಂಡು ತುಂಡು ಪಾರ್ಟಿಗಳನ್ನು ಏರ್ಪಡಿಸುವುದು, ಪ್ಯಾಕೇಜ್ ಗಳನ್ನು ನೀಡಿ ತಮ್ಮ ಪರ ಸುದ್ದಿ ಪ್ರಸಾರವಾಗುವಂತೆ ನೋಡಿಕೊಳ್ಳುವುದು, ಅದು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಪಕ್ಷ ತನ್ನ ವಿರೋಧವಾಗಿ ಸುದ್ದಿ ಪ್ರಸಾರ ಆಗದಂತೆ ಪತ್ರಕರರ್ತರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಇಂದು ನಿನ್ನೆಯದಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸತೀಶ್ ಸೈಲ್ ನೀಡಿದ ದುಡ್ಡನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವ್ಯತ್ಯಾಸ ಉಂಟಾಗಿ ಮಾತಿಗೆ ಮಾತು ಬೆಳೆದು ದೃಶ್ಯ ಮಾಧ್ಯಮದ ಕೆಲ ವರದಿಗಾರರು ಪರಸ್ಪರ ಹೊಡೆದಾಟ ನಡೆಸಿದ ಘಟನೆ ಕೂಡಾ ನಡೆದಿತ್ತು. ಹಾಸನದಲ್ಲಿ ಪತ್ರಕರ್ತರ ಸಂಘ ಪಕ್ಷವೊಂದರಿಂದ ಸುದ್ದಿ ಮಾಡಲು ಪ್ಯಾಕೇಜ್ ಪಡೆದ ಆರೋಪದ ಸುದ್ದಿ ಬಯಲಾಗಿ ಅದನ್ನು ಪ್ರಶ್ಮಿಸಿದ ದಿ ಹಿಂದೂ ಪತ್ರಿಕೆಯ ವರದಿಗಾರ ಸತೀಶ್ ಶಿಲೆ ಅವರನ್ನು ಸಂಘದಿಂದ ಹೊರಗಿಟ್ಟ ಪ್ರಕರಣ ಪತ್ರಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇವಿಷ್ಟೇ ಅಲ್ಲದೆ ಪತ್ರಕರ್ತರು ತಮ್ಮ ವೃತ್ತಿಗೆ ಅವಮಾನಕಾರಿಯಾಗಿ ನಡೆದ ಇಂಥಹ ಸಾಕಷ್ಟು ನಿದರ್ಶನಗಳಿವೆ.

ಚುನಾವಣಾ ಸಂದರ್ಭಗಳಲ್ಲಿ ರಾಜಕಾರಣಿಗಳ ಆಪ್ತ ಸಹಾಯಕರ ಬಳಿ ಒಂದು ಲಿಸ್ಟೇ ಇರುತ್ತದೆ. ಯಾವ ಪತ್ರಿಕೆಯ ಪತ್ರಕರ್ತನಿಗೆ ಎಷ್ಟು ಹಣ ನೀಡಿದ್ದೇವೆ, ಯಾವ ಟಿ.ವಿಯ ವರದಿಗಾರನಿಗೆ ಎಷ್ಟು ನೀಡಬೇಕು ಎಂಬುವುದನ್ನು ಆ ಪಟ್ಟಿಯಲ್ಲಿ ಬರೆದಿಡುತ್ತಾರೆ. ಕೆಲವರು ಇವರ ಅಮಿಷಕ್ಕೆ ಬಲಿಯಾದರೆ ಇನ್ನು ಕೆಲವರು ಅದನ್ನು ತಿರಸ್ಕರಿಸಿ ತಮ್ಮತನವನ್ನು ಉಳಿಸಿಕೊಳ್ಳುತ್ತಾರೆ. ಚುನಾವಣೆಗೆ ಸಂಬಂಧಿಸಿದಂತೆ ಸಂದರ್ಶನಗಳನ್ನು ಮಾಡಲು ರಾಜಕಾರಣಿಗಳ ಬಳಿ ಹೋದಾಗ ಕಾಫಿ ಕುಡಿಯೋದಕ್ಕೆ ಇರಲಿ ಎಂದು ಕಿಸೆಗೆ ಕೈಹಾಕಿ ಒಂದಿಷ್ಟು ಹಣವನ್ನು ನೀಡುವಂತಹ ಸಾಕಷ್ಟು ಮುಜುಗರದ ಪರಿಸ್ಥಿತಿ ಅನೇಕ ಪತ್ರಕರ್ತ ಮಿತ್ರರಿಗೆ ಎದುರಾಗಿದ್ದಿರಬಹುದು. ಇದಕ್ಕೆ ರಾಜಕಾರಣಿಗಳನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಅವರ ಈ ರೀತಿಯ ನಡವಳಿಕೆಗೆ ಕೆಲ ಪತ್ರಕರ್ತರೂ ಕಾರಣರಾಗಿರುತ್ತಾರೆ.

ಪತ್ರಕರ್ತರು ಮಾಡುತ್ತಿರುವ ಭ್ರಷ್ಟಾಚಾರವನ್ನು ಬಹಿರಂಗವಾಗಿ ಖಂಡಿಸಿದ ಸಾಕಷ್ಟು ಪತ್ರಕರ್ತರು ನಮ್ಮಲ್ಲಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯ ಸಂಧರ್ಭದಲ್ಲಿ ನೀಡುತ್ತಿದ್ದ ಉಡುಗೊರೆಯನ್ನು ತಿರಸ್ಕರಿಸುವುದರ ಜೊತೆಗೆ ಬಹಿರಂಗವಾಗಿ ಗಿಫ್ಟ್ ಕೊಡುವ ಸಂಸ್ಕೃತಿಯನ್ನು ವಿರೋಧಿಸಿದ ಪತ್ರಕರ್ತರಾದ ನವೀನ್ ಸೂರಿಂಜೆ, ಅನೀಶಾ ಸೇಟ್ ಹಾಗೂ ಅವರ ಸಂಗಡಿಗರು, ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ವೇಳೆಯಲ್ಲಿ ಪತ್ರಕರ್ತರಿಗೆ ಔತಣ ಕೂಟ ಏರ್ಪಡಿಸಿದಕ್ಕೆ ಹೋಗದೇ ಇದ್ದದ್ದು ಮಾತ್ರವಲ್ಲದೆ ಔತಣ ಕೂಟದ ಮೇಲೆ ನಡೆದ ಚುನಾವಣಾಧಿಕಾರಿಗಳ ದಾಳಿಯನ್ನು ಸುದ್ದಿಯನ್ನಾಗಿ ಜನರ ಮುಂದಿಟ್ಟ ಪತ್ರಕರ್ತ ರಾಹುಲ್ ಬೆಳಗಲಿ (ಇತರ ಮಾಧ್ಯಮಗಳಲ್ಲಿ ಈ ಸುದ್ದಿ, ಸುದ್ದಿಯಾಗಿ ಪ್ರಕಟಗೊಂಡಿರುವುದು ನನ್ನ ಗಮನಕ್ಕಂತೂ ಬಂದಿಲ್ಲ), ಧಾರವಾಡದಲ್ಲಿ ಪ್ರಹ್ಲಾದ್ ಜೋಷಿ ಕೊಟ್ಟ ಉಡುಗೊರೆಯನ್ನು ವಾಪಾಸ್ ಮಾಡಿದ್ದಲ್ಲದೆ ಅದನ್ನು ಸುದ್ದಿ ಮಾಡುವುದರ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸಿದ ಮನೋಜ್ ಕುಮಾರ್ ಗುದ್ದಿ ಮೊದಲಾದ ಅನೇಕ ಹಿರಿಯ ಹಾಗೂ ಯುವ ಪತ್ರಕರ್ತರು ನಮ್ಮ ಜೊತೆಗಿದ್ದಾರೆ. ಇಂಥಹ ಪತ್ರಕರ್ತರ ಅಗತ್ಯ ಹಾಗೂ ಅನಿವಾರ್ಯತೆ ಈ ಕ್ಷೇತ್ರಕ್ಕಿದೆ. ಕೆಲ ತಿಂಗಳ ಹಿಂದೆ ಹಿರಿಯ ಪತ್ರಕರ್ತರಾದ ಕೃಷ್ಣ ರಾಜ ಎಮ್. ಮಂಜುನಾಥ್ ಅವರು ಮಾಧ್ಯಮ ವಲಯದ ಭ್ರಷ್ಟರ ಬೆತ್ತಲು ಅಭಿಯಾನಯನ್ನು ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಆ ಸಂಧರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು ನಡೆಸುತ್ತಿರುವ ಭ್ರಷ್ಟಾಚಾರಗಳ ಕುರಿತಾಗಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು.

ಇದೀಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ಮತದಾರರನ್ನು ಓಲೈಸುವ ರೀತಿಯಲ್ಲಿಯೇ ಪತ್ರಕರ್ತರನ್ನು ಓಲೈಸುವ ಪ್ರಯತ್ನ ನಡೆಯುತ್ತಿದೆ. ಮತದಾರರ ಖರೀದಿಯನ್ನು ತಡೆಗಟ್ಟಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿದೆ. ಆದರೆ ಪತ್ರಕರ್ತರ ಖರೀದಿಯು ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣಿಗೆ ಬೀಳೋದೇ ಇಲ್ಲ. ಈ ನಿಟ್ಟಿನಲ್ಲಿ Election-Commission-Of-Indiaಚುನಾವಣಾ ಆಯೋಗ ಕೆಳಕಂಡಂತೆ  ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ನಮ್ಮ ಆಗ್ರಹವೂ ಆಗಿದೆ.

  • ರಾಜಕೀಯ ಸಭೆ ಸಮಾರಂಭಗಳ ಮೇಲೆ ತನ್ನ ಹದ್ದಿನ ಕಣ್ಣಿಟ್ಟ ರೀತಿಯಲ್ಲೇ ರಾಜಕಾರಣಿಗಳು ನಡೆಸುವ ಪತ್ರಿಕಾಗೋಷ್ಠಿಗಳ ಮೇಲೂ ನಿಗಾ ವಹಿಸಬೇಕಾಗಿದೆ. ಅದರ ಸಂಪೂರ್ಣ ಚಿತ್ರೀಕರಣ ನಡೆಸಬೇಕಾಗಿದೆ.
  • ಪತ್ರಿಕಾಗೋಷ್ಠಿಗೆ ವ್ಯಯಿಸುವ ಮೊತ್ತಕ್ಕೆ ಕಡಿವಾಣ ಹಾಕಬೇಕಾಗಿದೆ.
  • ಪತ್ರಿಕಾಗೋಷ್ಠಿಯ ಹೆಸರಲ್ಲಿ ರಾತ್ರಿ ವೇಳೆಯಲ್ಲಿ ನಡೆಯುವ ಗುಂಡು ತುಂಡು ಪಾರ್ಟಿಯ ಮೇಲೆ ನಿಗಾ ಇಡಬೇಕಾಗಿದೆ.
  • ಪತ್ರಕರ್ತರಿಗೆ ಹಣದ ಹಾಗೂ ಉಡುಗೊರೆಗಳ ಆಮಿಷ ನೀಡುವ ಜನಪ್ರತಿನಿಧಿಗಳು, ಅದನ್ನು ಪಡೆಯುವ ಪತ್ರಕರ್ತರ ವಿರುದ್ಧ ನೀತಿ ಸಂಹಿತೆಯ ಉಲ್ಲಂಘನೆಯ ಅಡಿಯಲ್ಲಿ ದೂರು ದಾಖಲಿಸಬೇಕು.

ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ಮೌಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹಳ ಪ್ರಮುಖವಾದುದು. ಆಯೋಗದ ನೀತಿ ಸಂಹಿತೆಗಿಂತ ಪತ್ರಕರ್ತರು ತಮಗೆ ತಾವೇ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಬೇಕು. ದೆಹಲಿ ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರೀವಾಲ್ ಮಾಧ್ಯಮಗಳ ಕುರಿತಾಗಿ ಇತ್ತೀಚೆಗೆ ನೀಡಿದ ಹೇಳಿಕೆ ಎಲ್ಲಾ ಮಾಧ್ಯಮಗಳಲ್ಲಿ ಅತಿರೇಕ ಹಾಗೂ ಬೇಜಾವಾಬ್ದಾರಿಯುತ ಹೇಳಿಕೆ ಎಂದು ಟೀಕೆಗೆ ಕಾರಣವಾಗಿತ್ತು. ವಾಸ್ತವವಾಗಿ ಇಂದಿನ ಪತ್ರಿಕಾ ರಂಗದ ಹಾಗೂ ಕೆಲ ಪತ್ರಕರ್ತರ ಪರಿಸ್ಥಿತಿಯನ್ನು ಗಮನಿಸಿದಾಗ ಅವರ ಮಾತಿನ ಗಂಭೀರತೆಯನ್ನು ಸಾರಾಸಗಟವಾಗಿ ತಿರಸ್ಕರಿಸುವ ಹಾಗಿಲ್ಲ ಎಂಬುವುದು ನನ್ನ ಅಭಿಪ್ರಾಯ.

ಗಲಬೆಯಲ್ಲಿ ಹೆಣ ನೋಡೋ ಸಂಭ್ರಮದಲ್ಲಿ ತಂದೆಯ ಹೆಣ ಮರೆತ ಮುತಾಲಿಕ್


– ನವೀನ್ ಸೂರಿಂಜೆ


 

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿದ ಒಂದೇ ಗಂಟೆಯಲ್ಲಿ ಬಿಜೆಪಿ ಹೈಕಮಾಂಡ್ ಮುತಾಲಿಕ್ ಗೆ ಪ್ರಾಥಮಿಕ ಸದಸ್ಯತ್ವ ScreenClipನಿರಾಕರಣೆ ಮಾಡಿದ್ದರಿಂದ ತೀವ್ರ ಮುಖಭಂಗಕ್ಕೊಳಗಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರಮೋದ್ ಮುತಾಲಿಕ್ ಅಕ್ಷರಶಃ ಬಿಕ್ಕಿ ಬಿಕ್ಕಿ ಅತ್ತರು. ಅಳುತ್ತಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ “ನಾನು ಸನ್ಯಾಸಿಯಾಗಿದ್ದು ಉತ್ತಮ ಚಾರಿತ್ರ್ಯವನ್ನು ಹೊಂದಿದ್ದೇನೆ. ನನ್ನ ಇಡೀ ಜೀವನವನ್ನು ಹಿಂದುತ್ವಕ್ಕಾಗಿ ಮೀಸಲಿರಿಸಿದ್ದೇನೆ. ನಾನು ವೈಯುಕ್ತಿಕ ಬದುಕನ್ನೇ ಕಂಡಿಲ್ಲ. ನನ್ನ ತಂದೆ ತೀರಿಕೊಂಡಾಗಲೂ ನಾನು ತಂದೆಯ ಹೆಣ ಕೂಡಾ ನೋಡಲು ಹೋಗಿರಲಿಲ್ಲ. ಆಗಲೂ ನಾನು ಆರ್ ಎಸ್ ಎಸ್ ಕೆಲಸ ಮಾಡುತ್ತಿದ್ದೆ. ನನ್ನ ಸಹೋದರನ ಮದುವೆಗೂ ನಾನು ಹೋಗಿಲ್ಲ. ತಂದೆಯ ಹೆಣ, ಸಹೋದರನ ಮದುವೆಯಂತಹ ವೈಯುಕ್ತಿಕ ಜೀವನವನ್ನು ಬದಿಗೊತ್ತಿ ಆರ್ ಎಸ್ ಎಸ್ ನ ಕೆಲಸ ಮಾಡಿದ್ದ ನನಗೆ ಬಿಜೆಪಿ ಈ ರೀತಿ ಅವಮಾನ ಮಾಡಬಾರದಿತ್ತು. ನಾನು ಯಾವ ತಪ್ಪೂ ಮಾಡದಿದ್ದರೂ ನನ್ನನ್ನು ಯಾಕೆ ನೋಯಿಸುತ್ತಿದ್ದೀರಿ ? ” ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.

ಆರ್ ಎಸ್ ಎಸ್ ಕಾರ್ಯಕರ್ತನಾಗಿ, ಆರ್ ಎಸ್ ಎಸ್ ನ ಕಿಶೋರ ವಿಭಾಗದ ಮುಖ್ಯಸ್ಥನಾಗಿ, ಆರ್ ಎಸ್ ಎಸ್ ಪ್ರಚಾರಕನಾಗಿ, ಭಜರಂಗದಳದ ರಾಜ್ಯಾಧ್ಯಕ್ಷನಾಗಿ, ಭಜರಂಗದಳದ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕನಾಗಿ, ಶಿವಸೇನೆಯ ರಾಜ್ಯಾಧ್ಯಕ್ಷನಾಗಿ, ಶ್ರೀರಾಮ ಸೇನೆಯ ಸ್ಥಾಪಕನಾಗಿ ಇಡೀ ದೇಶದ ಹಿಂದೂ ಕೋಮುವಾದಿ ಯುವಕರಲ್ಲಿ ಮುಸ್ಲಿಂ ವಿರೋಧದ ಕಿಡಿ ಹಚ್ಚಿಸಿದ ದೇಶದ ಅತ್ಯಂತ ವಿವಾದಾಸ್ಪದ “ಮುಖಂಡ”ನ ಅಳುವನ್ನೂ ವಿಮರ್ಶಿಸಬೇಕಾಗುತ್ತದೆ. ನೂರಾರು ಸಿಂಹ ಘರ್ಜನೆಯ ಹಿಂದೂ ಯುವಕರನ್ನು ಸೃಷ್ಠಿಸಿದ್ದ ಮುತಾಲಿಕ್ ರ ಅಳು-ಕಣ್ಣೀರು-ಬಿಕ್ಕಳಿಸಿದ ಮಾತುಗಳನ್ನು ನಿರ್ಲಕ್ಷಿಸುವಂತಿಲ್ಲ. ಮುತಾಲಿಕ್ ಕಣ್ಣೀರಿಗೂ, ಅವರ ಬಾಯಲ್ಲಿ ಬಂದ ಮಾತುಗಳಿಗೂ ವಿಶೇಷವಾದ ಮಹತ್ವ ಇದೆ.

ಕಣ್ಣೀರು

ಆಗ ಪ್ರಮೋದ್ ಮುತಾಲಿಕ್ ಭಜರಂಗದಳದ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕ. ಹಳ್ಳಿ ಹಳ್ಳಿಗೆ ತೆರಳಿ ಭಜರಂಗದಳಕ್ಕೆ ಯುವಕರನ್ನು ಸಿದ್ದಗೊಳಿಸುತ್ತಿದ್ದರು. “ಗೋವು ನಮ್ಮ ತಾಯಿ. ಗೋವು ಸಾಗಾಟ ನಡೆಸುವ ಮತ್ತು ತಿನ್ನುವ ಮುಸ್ಲೀಮರು ಸಮಾಜದಲ್ಲಿ ಇರಲು ಅನರ್ಹರು” ಎಂಬ ರೀತಿಯಲ್ಲಿ ಕೋಮು ಪ್ರಚೋದಕ ಭಾಷಣಗಳನ್ನು ಮುತಾಲಿಕ್ ಮಾಡುತ್ತಿದ್ದರು. ಇವರ ಭಾಷಣದ ಫಲವಾಗಿ ಆದಿ ಉಡುಪಿಯಲ್ಲಿ ದನ ಸಾಗಾಟ ನಡೆಸುತ್ತಿದ್ದ ಜಾಜಬ್ಬ ಮತ್ತು ಹಸನಬ್ಬ ಎಂಬ ತಂದೆ ಮಗನನ್ನು ನಡು ರಸ್ತೆಯಲ್ಲಿ ಪೂರ್ತಿ ಬೆತ್ತಲು ಮಾಡಲಾಯಿತು. ತಂದೆಯ ಮುಂದೆ ಮಗನನ್ನು, ಮಗನ ಮುಂದೆ ತಂದೆಯನ್ನು ಸಾರ್ವಜನಿಕವಾಗಿ ಬೆತ್ತಲು ಮಾಡಿದಾಗ ಅವರಿಬ್ಬರ ವೇದನೆ ಯಾವ ರೀತಿಯದ್ದಾಗಿರಬಹುದು ಎಂದು ಆಗ ದಕ್ಷಿಣ ಪ್ರಾಂತ್ಯ ಸಂಚಾಲಕನಾಗಿದ್ದ ಪ್ರಮೋದ್ ಮುತಾಲಿಕ್ ಗೆ ಅರಿವಾಗಿಲ್ಲ. ತಂದೆ ಮತ್ತು ಮಗನ ಬೆತ್ತಲೆ ಫೋಟೋಗಳನ್ನು ಮರುದಿನ ಪತ್ರಿಕೆಯಲ್ಲಿ ನೋಡಿದ ಅವರ ಅಮ್ಮ, ಅಕ್ಕ ತಂಗಿಯರು ಅದೆಷ್ಟು ನೋವಿನಿಂದ ಅತ್ತಿರಬಹುದು, ಗೊಗೆರೆದಿದ್ದಿರಬಹುದು; ಅದೆಷ್ಟು ಕಣ್ಣಿರು ಸುರಿಸಿದ್ದಿರಬಹುದು. ಅವರ ಅಸಾಹಯಕತೆ ಅಥವಾ ವೇದನೆಯ ಬಗ್ಗೆ ಯಾವತ್ತಾದರೂ ಪ್ರಮೋದ್ ಮುತಾಲಿಕ್ ಯೋಚಿಸಿರಬಹುದೇ?

ಹೆಣ ನೋಡೋ ಸಂಭ್ರಮದಲ್ಲಿ

“ಆರ್ ಎಸ್ ಎಸ್ ಗಾಗಿ ಬದುಕನ್ನೇ ಮುಡಿಪಾಗಿಟ್ಟ ಪ್ರಮೋದ್ ಮುತಾಲಿಕ್ ಗೆ ತಂದೆಯ ಹೆಣವನ್ನೂ ನೋಡೋಕೆ ಆಗಿಲ್ಲ” ಎಂದು ಅವಲತ್ತುಕೊಂಡಿದ್ದಾರೆ. ತನ್ನ ತಂದೆ Newನಿಧನ ಹೊಂದಿದ ಸಂದರ್ಭದಲ್ಲಿ ಮುತಾಲಿಕ್ ದೇಶ ಕಾಯುವ ಸೈನ್ಯದಲ್ಲೂ ಇರಲಿಲ್ಲ. ಯುದ್ಧದಲ್ಲೂ ಭಾಗವಹಿಸಿರಲಿಲ್ಲ. ತನ್ನ ತಂದೆಯ ಹೆಣ ನೋಡಿ ಅಗ್ನಿ ಸ್ಪರ್ಶ ಮಾಡಬೇಕಾದ ಹೊತ್ತಲ್ಲಿ ಮುಸ್ಲಿಮರ ಮನೆಗಳಿಗೆ, ಅಂಗಡಿಗೆ ಕೊಳ್ಳಿ ಇಡುತ್ತಿದ್ದರು. ತಂದೆಯ ಶವವನ್ನು ನೋಡದೆ ಮುಸ್ಲೀಮರ ಶವಗಳನ್ನು ನೋಡಿ ಖುಷಿಪಡುತ್ತಿದ್ದರು. ಪ್ರಮೋದ್ ಮುತಾಲಿಕ್ ಭಜರಂಗದಳದ ರಾಜ್ಯಾಧ್ಯಕ್ಷನಾಗಿದ್ದ ವೇಳೆ ಮಂಗಳೂರಿನಲ್ಲಿ ಹಲವಾರು ಬಾರಿ ಕೋಮುಗಲಭೆಗಳು ನಡೆದಿದ್ದವು. ಉಳ್ಳಾಲ, ಸುರತ್ಕಲ್ ಪ್ರದೇಶಗಳಲ್ಲಿ ಹಲವು ಮನೆ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಾಕಲಾಯಿತು. ಹಲವು ಮುಸ್ಲೀಮರು ಶವವಾಗಿದ್ದರು. ಪ್ರಮೋದ್ ಮುತಾಲಿಕ್ ಭಜರಂಗದಳ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕನಾಗಿದ್ದ ವೇಳೆಯಲ್ಲಿ ಹಲವಾರು ಹಿಂದೂ ಸಮಾಜೋತ್ಸವಗಳನ್ನು ಸಂಘಟಿಸಿ ಮುಸ್ಲಿಂ ವಿರೋಧಿ ಪ್ರಚೋಧನಾಕಾರಿ ಭಾಷಣಗಳನ್ನು ಮಾಡಿದ್ದರು. ಹಾವೇರಿಯ ಮಾಲೆಬೆನ್ನೂರು ಎಂಬಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಮುತಾಲಿಕ್ ದಿಕ್ಸೂಚಿ ಭಾಷಣ ಮಾಡುತ್ತಾ “ಮಾಲೆಬೆನ್ನೂರಿನ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರೂ ಮುಸ್ಲೀಮರ ಅಂಗಡಿಗಳು, ಮನೆಗಳೇ ಕಾಣಸಿಗುತ್ತದೆ. ನಿಮಗೆ ರಕ್ತ ಕುದಿಯುವುದಿಲ್ಲವೇ ?” ಎಂದು ಸೂಚ್ಯವಾಗಿ ಹೇಳಿದ್ದರು. ಸಮಾವೇಶ ನಡೆದ ರಾತ್ರಿಯೇ ಮಾಲೆಬೆನ್ನೂರಿನ ಮುಸ್ಲೀಮರ ಸಣ್ಣ ಪುಟ್ಟ ಗೂಡಂಗಡಿಗಳಿಗೆ ಬೆಂಕಿ ಬಿದ್ದಿತ್ತು.

ತನಗೆ ತನ್ನ ತಂದೆಯ ಹೆಣ ನೋಡಲು ಸಾಧ್ಯವಾಗಿಲ್ಲ ಎಂದು ಮುತಾಲಿಕ್ ಈಗ ಅಳುತ್ತಿದ್ದಾರೆ. ಮಂಗಳೂರಿನ ಪಬ್ ನ ಮೇಲೆ ಮುತಾಲಿಕ್ ನೇತೃತ್ವದ ಶ್ರೀರಾಮmangalore_moral1 ಸೇನೆಯ ಕಾರ್ಯಕರ್ತರು ದಾಳಿ ನಡೆಸಿ 27 ಜನ ಬಂಧಿತರಾದರು. ಬಂಧಿತ ಒರ್ವ ಯುವಕನ ಮನೆಯಲ್ಲಿ ಸಾವು ಸಂಭವಿಸಿದ್ದರೂ ಹೆಣ ನೋಡಲೂ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲೂ ಆತನಿಗೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಇದೇ ಶ್ರೀರಾಮ ಸೇನೆಯ ಗುಂಪು ಹಿಂದೂ ಜಾಗರಣಾ ವೇದಿಕೆ ಸೇರಿಕೊಂಡು “ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ” ಮೇಲೆ ದಾಳಿ ನಡೆಸಿ 30ಕ್ಕೂ ಅಧಿಕ ಕಾರ್ಯಕರ್ತರು ಬಂಧನಕ್ಕೊಳಗಾದರು. ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಅವರು ಜೈಲಿನಲ್ಲಿದ್ದರು. ಈ ಸಂಧರ್ಭದಲ್ಲಿ ಒಬ್ಬ ಆರೋಪಿಯ ಮನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಆ ಮೂವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆತನಿಗೆ ಸಾಧ್ಯವಾಗಲಿಲ್ಲ. ಹಿಂದೂ ಸಮುದಾಯದ ಅಮಾಯಕ ಹಿಂದುಳಿದ ವರ್ಗಗಳ ಯುವಕರ ತಲೆಯಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ ಅವರು ಜೈಲಲ್ಲಿ ಕೊಳೆಯುವಂತೆ ಮಾಡಿ ಅವರಿಗೆ ತನ್ನ ಕುಟುಂಬದವರ ಅಂತ್ಯಸಂಸ್ಕಾರದಲ್ಲೂ ಭಾಗವಹಿಸದಂತಹ ಹಲವಾರು ಪರಿಸ್ಥಿತಿಗಳನ್ನು ಸೃಷ್ಠಿ ಮಾಡಿದವರೇ ಪ್ರಮೋದ್ ಮುತಾಲಿಕ್ ಮತ್ತು ಅವರಂತಹ ನಾಯಕರು.

ಅಭಿನವ ಭಾರತ್ ಸಂಘಟನೆಯು ಮಾಲೆಗಾಂವ್ ಸ್ಪೋಟ ನಡೆಸಿದಾಗ ಇದೇ ಪ್ರಮೋದ್ ಮುತಾಲಿಕ್ ಮಾಲೇಗಾಂವ್ ಸ್ಪೋಟವನ್ನು ಸಮರ್ಥಿಸಿಕೊಂಡಿದ್ದರು. 2009 ಜನವರಿ 17 ರ ಸಂಜೆ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿ ನಡೆದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಭಾಷಣ ಮಾಡಿದ್ದ ಪ್ರಮೋದ್ ಮುತಾಲಿಕ್ “ಮಾಲೆಗಾಂವ್ ಸ್ಪೋಟ malegaon_blast_site_2_060909ಒಂದು ಝಲಕ್ ಮಾತ್ರ. ಇಂತಹ ಹಲವಾರು ಘಟನೆಗಳು ನಡೆಯಲಿಕ್ಕಿದೆ” ಎಂದಿದ್ದರು. ಈ ಸಂಧರ್ಭದಲ್ಲಿ ಅಲ್ಲಿ ಸೇರಿದ್ದ ಸಂಘಟನೆಗಳ ಕಾರ್ಯಕರ್ತರು “ಹರ ಹರ ಮಹಾದೇವ್” ಎಂದು ಬೊಬ್ಬೆ ಹಾಕಿ ಮುತಾಲಿಕ್ ಭಾಷಣಕ್ಕೆ ಅನುಮೋದನೆ ನೀಡಿದ್ದರು. ಮಾಲೆಗಾಂವ್ ಸ್ಪೋಟವು ಸ್ಮಶಾನದ ಸನಿಹದಲ್ಲಿ ನಡೆದಿದ್ದು, ಈ ಘಟನೆಯಲ್ಲಿ 37 ಜನ ಸಾವನ್ನಪ್ಪಿದ್ದರು. ಈ ಮೂವತ್ತೇಳು ಜನರ ಹೆಣಗಳನ್ನು ನೋಡಿಯೂ ಪ್ರಮೋದ್ ಮುತಾಲಿಕ್ “ಇಂತಹ ಇನ್ನಷ್ಟೂ ದಾಳಿಗಳು ನಡೆಯಲಿಕ್ಕಿದೆ” ಎಂದಿದ್ದರು.  ಹೀಗೆ ಹೆಣಗಳು ಉದುರುವ ಬಾಂಬ್ ಸ್ಪೋಟಗಳನ್ನು ಸಮರ್ಥಿಸುತ್ತಾ, ಕೋಮುಗಲಭೆಗಳನ್ನು ಮಾಡಿ, ಬೆಂಕಿ ಹಚ್ಚಿ ಮುಸ್ಲೀಮರ ಶವಗಳನ್ನು ನೋಡುವ ಸಂಭ್ರಮದಲ್ಲೇ ತಲ್ಲೀನನಾಗಿದ್ದ ಪ್ರಮೋದ್ ಮುತಾಲಿಕ್  ತಂದೆ ಶವ ನೋಡಲು ಮರೆತಿದ್ದರೆ ಅದಕ್ಕೆ ಯಾರು ತಾನೆ ಜವಾಬ್ದಾರರು?

ಸಹೋದರನ ಮದುವೆಗೂ ಹೋಗದಿದ್ದ ಮುತಾಲಿಕ್

ಪ್ರಮೋದ್ ಮುತಾಲಿಕ್ ಸಹೋದರನ ಮದುವೆಗೂ ಹೋಗದೆ ಹಿಂದುತ್ವ ಪ್ರತಿಪಾದನೆಯ ಕೆಲಸದಲ್ಲಿದ್ದರು. ವೆಲೆಂಟೈನ್ ಡೇ ಸಂದರ್ಭ ದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರಮೋದ್ ಮುತಾಲಿಕ್ “ಪಾರ್ಕಿನಲ್ಲಿ ಯುವಕ ಯುವತಿಯರು ಇರುವುದನ್ನು ಕಂಡರೆ ಅಲ್ಲೇ ಅವರ ಮನೆಯವರನ್ನು ಕರೆಸಿ ನಮ್ಮ ಕಾರ್ಯಕರ್ತರು ಮದುವೆ ಮಾಡಿಸುತ್ತಾರೆ” ಎಂದು ಹೇಳಿಕೆ ನೀಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯೂ ಆಗಿತ್ತು. ಹೀಗೆ ಕಂಡ ಕಂಡ ಪ್ರೇಮಿಗಳನ್ನು ಹಿಡಿದು ಬಲವಂತವಾಗಿ ಮದುವೆ ಮಾಡಿಸೋ ಮುತಾಲಿಕ್ ಗೆ ತನ್ನ ಸ್ವಂತ ಸಹೋದರ ಮದುವೆಗೆ ಹೋಗೋಕೆ ಆಗಿಲ್ಲ ಅನ್ನುವುದದು ಆತನೇ ತಂದುಕೊಂಡ ದುರಂತವಲ್ಲದೆ ಮತ್ತೇನೂ ಅಲ್ಲ.

ಹೀಗೆ ತನ್ನ ತಂದೆಯ ಹೆಣ ನೋಡೋಕೂ, ಸಹೋದರನ ಮದುವೆಗೂ ಬರದೆ ಹಿಂದುತ್ವದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ ಎಂಬ ಪ್ರಮೋದ್ ಮುತಾಲಿಕರ ಅಳುವಿಗೆ ಬೇರಾವ ರೀತಿಯಲ್ಲೂ ವಿಮರ್ಶೆ ಸಾಧ್ಯವಿಲ್ಲ ಎನಿಸುತ್ತದೆ. ಮಂಗಳೂರೊಂದರಲ್ಲೇ ಅದೆಷ್ಟೋ ಹಿಂದೂ-ಮುಸ್ಲಿಂ ಯುವಕ ಯುವತಿಯರ ಮೇಲೆ ಸಾರ್ವಜನಿಕವಾಗಿ ದಾಳಿಗಳು ನಡೆದಿತ್ತು. ಆಗೆಲ್ಲಾ ದಾಳಿಗೊಳಗಾದ ಯುವತಿಯರು ರಸ್ತೆ ಬದಿಯಲ್ಲೇ ಸಾರ್ವಜನಿಕವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಾಲಿಗೆ ಬಿದ್ದು ಅಳುತ್ತಾ “ಬಿಟ್ಟು ಬಿಡುವಂತೆ” ಗೋಗರೆಯುತ್ತಿದ್ದರು. ಅದೆಷ್ಟೋ ಹೆಣ, ಅದೆಷ್ಟೋ ಮನೆಗಳ ಬೆಂಕಿ, ಅದೆಷ್ಟೋ ಪ್ರೇಮಿಗಳ ಆರ್ತನಾದ ಕೇಳುತ್ತಾ ಸದಾ ಖುಷಿಪಟ್ಟಿದ್ದ ಪ್ರಮೋದ್ ಮುತಾಲಿಕ್ ಕಣ್ಣಲ್ಲಿ ಪ್ರಥಮ ಬಾರಿ ಅಳು ಕಂಡಿದ್ದು ಸಂತ್ರಸ್ತರಿಗೆ ನ್ಯಾಯ ಒದಗಿದಂತೆ ಅಲ್ಲದೇ ಇದ್ದರೂ ಮುತಾಲಿಕರಿಗಾದ ಇಂತಹ ಅವಮಾನ ಮತ್ತು ನೋವುಗಳು ಅವರಿಗೊಂದು “ಅವಮಾನದ ನೋವಿನ ಪಾಠ” ಕಲಿಸುವಂತಾಗಲಿ.

“ರಾಷ್ಟ್ರಕ್ಕೆ ಮೋದಿ, ರಾಜ್ಯಕ್ಕೆ ಮುತಾಲಿಕ್”


– ನವೀನ್ ಸೂರಿಂಜೆ


 

’ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕು’ ಎಂಬ ಒಂದೇ ಉದ್ದೇಶದಿಂದ ತಾನು ಬಲವಾಗಿ ವಿರೋಧಿಸುತ್ತಿದ್ದ ಬಿಜೆಪಿಯನ್ನು ಸೇರುತ್ತಿರುವುದಾಗಿ ಹೇಳಿ ಬಿಜೆಪಿಗೆ ಸೇರ್ಪಡೆಯಾದ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್  ದಿನ ಬೆಳಗಾಗುವುದರೊಳಗೆ ಅಲ್ಲಿಂದ ಹೊರದಬ್ಬಲ್ಪಟ್ಟಿದ್ದಾರೆ. ಬಿಜೆಪಿಯು ಹಲವು ತಿಂಗಳ (2013 ಸೆಪ್ಟೆಂಬರ್  13) ಹಿಂದೆಯೇ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ ಅಂದು ಬಿಜೆಪಿಗೆmuthalik_joins bjp ಬೆಂಬಲ ನೀಡದೆ  ಆ ಪಕ್ಷವನ್ನು ನಿರಂತರವಾಗಿ  ಟೀಕಿಸುತ್ತಲೇ ಬಂದ ಪ್ರಮೋದ್ ಮುತಾಲಿಕ್  2014  ಮಾರ್ಚ್ 10 ರಂದು ರಾಜ್ಯದ ಆರು ಲೋಕಸಭಾ ಕ್ಷೇತ್ರಗಳಿಗೆ ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದ್ದರು. ಅದಾದ ಹದಿಮೂರನೆಯ ದಿನಕ್ಕೇ ”ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕು” ಎಂದು ಮುತಾಲಿಕ್ ಗೆ ಜ್ಞಾನೋದಯವಾಗಿ ತಾವೇ ಖುದ್ದು ಬಿಜೆಪಿ ಸೇರ್ಪಡೆಗೊಂಡು ಕೆಲವೇ ಕ್ಷಣಗಳಲ್ಲಿ ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪರ್ಧಿಸುತ್ತಿರುವ ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಸ್ವತಃ ತಾವೇ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಘೊಷಿಸಿದ್ದರು. ಉಳಿದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಮಾಕಾಂತ ಕೊಂಡೂಸ್ಕರ, ಚಿಕ್ಕೋಡಿಗೆ ಜಯದೀಪ ದೇಸಾಯಿ,  ಬಾಗಕೋಟೆಯಲ್ಲಿ ಬಸವರಾಜ ಮಹಾಲಿಂಗೇಶ್ವರಮಠ, ಹಾವೇರಿಯಿಂದ ಕುಮಾರ ಹಕಾರಿ ಹಾಗೂ  ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿ.ಎಸ್‌. ಶಾರದಮ್ಮರವರನ್ನು ಶ್ರೀರಾಮ ಸೇನೆಯ ವತಿಯಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಾಗಿ ಪ್ರಮೋದ್ ಮುತಾಲಿಕ್ ಘೋಷಿಸಿದ್ದರು. ವಿಶೇಷವೆಂದರೆ ಈ ಪಟ್ಟಿ ಬಿಡುಗಡೆ ಮಾಡುವ ಸಂಧರ್ಭದಲ್ಲೂ  ಶ್ರೀರಾಮ ಸೇನೆಯು ರಾಜ್ಯದ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ಉದ್ದೇಶದಿಂದಲೇ ಎಂದು ನುಡಿದಿದ್ದರು. ಇದೀಗ ಅದೇ ಮುತಾಲಿಕ್  ”ಹಿಂದೂ ಮತಗಳು ಒಡೆಯಬಾರದು” ಎಂಬ ಕಾರಣ ಮುಂದಿಟ್ಟುಕೊಂಡು ಬಿಜೆಪಿ ಸೇರಿದ್ದಾರೆ. ಇನ್ನುಳಿದ ಐದು ಕ್ಷೇತ್ರಗಳಲ್ಲಿ  ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಾಡೇನು ಎಂಬುದರ ಬಗ್ಗೆ ಮುತಾಲಿಕ್ ಸ್ಪಷ್ಟನೆ ನೀಡದೆಯೇ ಬಿಜೆಪಿ ಸೇರಿದ್ದರು.

ಯಾರು ಈ ಮುತಾಲಿಕ್?

ಪ್ರಮೋದ್ ಮುತಾಲಿಕ್ ಅವರ ಪೂರ್ತಿ ಹೆಸರು ಪ್ರಮೋದ ಮುತಾಲಿಕ ದೇಸಾಯಿ. ಅವರ ತಂದೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಜಮೀನ್ದಾರರು. ಕೃಷ್ಣಾ ನದಿ ತೀರದಲ್ಲಿ ಕಬ್ಬು ಬೆಳೆದು ತಕ್ಕಮಟ್ಟಿಗೆ ಸ್ಥಿತಿವಂತ ಎನ್ನಿಸಿಕೊಂಡವರು. ಪ್ರಮೋದ್ ಅವರ ಸಂಬಂಧಿಕರಲ್ಲಿ ಅನೇಕರು ಆರ್ ಎಸ್ ಎಸ್ ಬೆಂಬಲಿಗರಾಗಿದ್ದರಿಂದ ಅವರ ಮನೆಯಲ್ಲಿ ಸಹಜವಾಗಿಯೇ ಸಂಘದ ಪ್ರಭಾವವಿತ್ತು.

ಮುತಾಲಿಕ್ ಸಣ್ಣ ವಯಸ್ಸಿನಲ್ಲಿಯೇ ಆರ್ ಎಸ್ ಎಸ್ ಸ್ವಯಂ ಸೇವಕರಾದರು. ಸಂಘದ ತತ್ವ ಸಿದ್ಧಾಂತಗಳಿಗೆ ತುಸು ಅತಿಯಾಗಿಯೇ ಒಡ್ಡಿಕೊಂಡಿದ್ದರಿಂದ ಅವರನ್ನು ಅವರ ಗೆಳೆಯರು `ಇವ ಆರು ಎಸ್ ಎಸ್ ಅಲ್ಲ, ಏಳು ಎಸ್ ಎಸ್’ ಎಂದು ಕರೆಯುತ್ತಿದ್ದರಂತೆ.  ಪದವಿ ಮುಗಿಸಿದ ನಂತರದಲ್ಲಿ ಉದ್ಯೋಗಕ್ಕೆ ಸೇರದೆ ಮದುವೆಯೂ ಆಗದೆ ನೇರವಾಗಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾದರು. ಪ್ರಚಾರಕರಾಗಿ ರಾಜ್ಯವೆಲ್ಲಾ ಸುತ್ತಿದರು. ಮುಂದೆ ಮೈಸೂರು ವಿಭಾಗದ ಪ್ರಚಾರಕರಾಗಿ ಅಲ್ಲಿ ನೆಲೆಸಿದರು. ಆ ಸಂದರ್ಭದಲ್ಲಿ ಮುತಾಲಿಕ್  ತುಂಬ ಶಾಂತ ಸ್ವಭಾವದವರು, ಸಹನೆ ಉಳ್ಳವರು ಅಂತ ಹೆಸರು ಗಳಿಸಿದ್ದರಿಂದ ಮಕ್ಕಳಿಗೆ ಕತೆ ಹೇಳುವ ಆರ್ ಎಸ್ ಎಸ್ ನ ”ಕಿಶೋರ ವಿಭಾಗ” ದ ಜವಾಬ್ದಾರಿ ನೀಡಲಾಗಿತ್ತು.

ತರುವಾಯ ಆರ್ ಎಸ್ ಎಸ್ ನಿಂದ ವಿಶ್ವ ಹಿಂದೂ ಪರಿಷತ್ ಗೆ, ಅಲ್ಲಿಂದ ಬಜರಂಗ ದಳಕ್ಕೆ ಎರವಲು ಸೇವೆಯ ಮೇಲೆ ಮುತಾಲಿಕರನ್ನು ಕಳುಹಿಸಲಾಯಿತು. ಕ್ರಮೇಣ ಮುತಾಲಿಕ್ ಮುತಾಲಿಕ್ ಜೀ ಆದರು. ನಿಧಾನವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಅವರ ಖಾರವಾದ, ಖತರನಾಕ್ ಭಾಷಣಗಳು ಆರಂಭವಾದದ್ದು ಇಲ್ಲಿಂದಲೇ. ಭಜರಂಗದಳದ ರಾಜ್ಯಾಧ್ಯಕ್ಷರಾದ ಮುತಾಲಿಕ್ ನಂತರದಲ್ಲಿ ಅದೇ ಸಂಘಟನೆಯಲ್ಲಿ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕ ಸ್ಥಾನ ಪಡೆದರು. ಮುಂದೆ ತನ್ನ ಭಾಷಣಗಳಿಂದಲೇ ಬಿಜೆಪಿ ಶಾಸಕರು ಆಯ್ಕೆಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡ ಮುತಾಲಿಕ್  ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾದರು.  ನಿಧಾನವಾಗಿ ಮುತಾಲಿಕ್ ಆರ್ ಎಸ್ ಎಸ್ ಅನ್ನು ತಾನೇ ತೊರೆಯುವಂತೆ ಮಾಡುವಲ್ಲಿ ಸಂಘದ ಹಿರಿಯ ಮುಖಂಡರು ಯಶಸ್ವಿಯಾಗಿದ್ದರು.

ಶ್ರೀರಾಮ ಸೇನೆ ಸ್ಥಾಪನೆ

ಪ್ರಮೋದ್ ಮುತಾಲಿಕ್ ಆರ್ ಎಸ್ ಎಸ್ ತೊರೆದ ನಂತರ ಶ್ರೀರಾಮ ಸೇನೆ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಆ ಸಂಧರ್ಭದಲ್ಲಿ ’ಆರ್ ಎಸ್ ಎಸ್ ಸಂಘಟನೆಯದ್ದು 20090124pub4ರಾಜಕೀಯ ಹಿಂದುತ್ವ. ನಮ್ಮದು ನೈಜ ಹಿಂದುತ್ವ” ಎಂದು ಘೋಷಿಸಿದ್ದರು. ಪ್ರಗತಿಪರ ವಿಚಾರಧಾರೆಗಳು ಮತ್ತು ಮಹಿಳಾ ಸ್ವಾತಂತ್ರ್ಯವನ್ನು ಬಲವಾಗಿ ವಿರೋಧಿಸುವ ಮೂಲಕ ಮನುವಾದವನ್ನು ಜಾರಿಗೆ ತರುವುದೇ ನಿಜವಾದ ಹಿಂದುತ್ವ ಎಂದು ಬಲವಾಗಿ ನಂಬಿದ್ದ ಮುತಾಲಿಕ್ ಅದರ ಅನುಷ್ಠಾನಕ್ಕೆ ಶ್ರೀರಾಮ ಸೇನೆ ಸಂಘಟನೆಯ ಮೂಲಕ ಶ್ರಮಿಸಿದ್ದರು. ಇದರ ಭಾಗವಾಗಿಯೇ ನಡೆದದ್ದು ಪಬ್ ನಲ್ಲಿ ಊಟ ಮಾಡುತ್ತಿದ್ದ ಯುವತಿಯರ ಮೇಲೆ ದಾಳಿ. ಮಂಗಳೂರಿನ ಅಮ್ನೇಶಿಯಾ ಪಬ್ ನಲ್ಲಿ ಯುವಕ ಯುವತಿಯರು ಒಟ್ಟಿಗೆ ಕುಳಿತು ಪಾರ್ಟಿ ಆಚರಿಸುತ್ತಿದ್ದಾರೆ ಎಂದು ತಿಳಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಅಲ್ಲಿ ದಾಳಿ ನಡೆಸಿದ್ದರು. ಯುವತಿಯರ ಮೇಲೆ ನಡೆದ ಅಮಾನುಷ ದಾಳಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಮುತಾಲಿಕ್ ಸಹಿತ ಶ್ರೀರಾಮ ಸೇನೆಯ ಹಲವು ಕಾರ್ಯಕರ್ತರು ಬಂಧಿಸಲ್ಪಟ್ಟಿದ್ದರು. ನಂತರ ಕೆಲ ದಿನ ಮುತಾಲಿಕ್ ಸುವರ್ಣಯುಗ ಆರಂಭವಾಗಿತ್ತು. ರಾಷ್ಟ್ರಮಟ್ಟದ ನಾಯಕನ ರೀತಿ ಮಿಂಚಿದ್ದ ಮುತಾಲಿಕ್ ಹೇಳಿಕೆಗಳು ಮಾಧ್ಯಮಗಳಿಗೆ ಮುಖ್ಯವಾಗಿ ಬಿಟ್ಟಿತ್ತು. ಪ್ರೇಮಿಗಳ ದಿನ, ಹೋಟೆಲ್ ನಲ್ಲಿ ಬರ್ತ್ ಡೇ ಆಚರಣೆಯನ್ನೂ ಮುತಾಲಿಕ್ ವಿರೋಧಿಸಲು ಶುರು ಮಾಡುವ ಮೂಲಕ ಭಜರಂಗದಳಕ್ಕೆ ಪರ್ಯಾಯ ಹಿಂದೂ ಸಂಘಟನೆಯಾಗಿ ಶ್ರೀರಾಮ ಸೇನೆಯನ್ನು ಬೆಳೆಸುವಲ್ಲಿ ಸಫಲರಾದರು.  ಶ್ರೀರಾಮ ಸೇನೆಯ ಕಾರ್ಯಕರ್ತರು ನಿರಂತರವಾಗಿ ಮಂಗಳೂರಿನಲ್ಲಿ ಪ್ರೇಮಿಗಳ ಮೇಲೆ  ದಾಳಿ ನಡೆಸುತ್ತಿದ್ದರು . ಇದೇ ಸಂದರ್ಭದಲ್ಲಿ ಮಂಗಳೂರಿಗೆ ಎಸ್ಪಿಯಾಗಿ ನೇಮಕಗೊಂಡು ಆಗಮಿಸಿದ ಡಾ ಎ ಸುಬ್ರಹ್ಮಣ್ಯೇಶ್ವರ ರಾವ್  ಶ್ರೀರಾಮ ಸೇನೆಯ ಆಟಾಟೋಪಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಪ್ರೇಮಿಗಳನ್ನು ಅಡ್ಡಗಟ್ಟಿ ದಾಳಿ ನಡೆಸುವ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ಅತ್ಯಾಚಾರ, ಡಕಾಯಿತಿ ಕೇಸು ಹಾಕುವಂತೆ ಪೊಲೀಸ್ ಠಾಣೆಗಳಿಗೆ ಆದೇಶ ನೀಡಿ ಅದು ಜಾರಿಯಾಗುವಂತೆ ನೋಡಿಕೊಳ್ಳುವ ಮೂಲಕ ಶ್ರೀರಾಮ ಸೇನೆಯ ಆರ್ಭಟವನ್ನು ಅಕ್ಷರಶ ನಿಲ್ಲಿಸಿದ್ದರು. ಇದರ ಮಧ್ಯದಲ್ಲಿಯೇ ಪ್ರೇಮಿಗಳ ದಿನಾಚರಣೆಯ ದಿನ ಕೆಲವು ಮಹಿಳಾ ಕಾರ್ಯಕರ್ತರು ”ಪಿಂಕ್ ಚೆಡ್ಡಿ ಅಭಿಯಾನ” ಮಾಡಿದರು. ಪಿಂಕ್ ಚೆಡ್ಡಿಗಳನ್ನು ಮುತಾಲಿಕ್ ಮನೆ ವಿಳಾಸ ಮತ್ತು ಕಚೇರಿಗಳಿಗೆ ಕೊರಿಯರ್ ಮಾಡಿ ಅವರಿಗೆ ಮುಜುಗರ ಹುಟ್ಟಿಸಿದ್ದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಬಲ ಕಳೆದುಕೊಂಡು ಮುತಾಲಿಕ್ ಮುಸ್ಲಿಂ ವಿರೋಧಿ ಭಾಷಣಕ್ಕಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದ್ದರು.

ಹಣಕ್ಕಾಗಿ ಹಿಂದುತ್ವ?

ಪ್ರಮೋದ್ ಮುತಾಲಿಕ್ ಹಣ ಸಂಪಾದನೆಯ ದೃಷ್ಠಿಯಿಂದ ಹಿಂದುತ್ವದ ಬಗ್ಗೆ ಬೊಗಳೆ ಬಿಡುತ್ತಿದ್ದಾರೆ ಎಂಬ ಆರೋಪ ಇಂದು ನಿನ್ನೆಯದ್ದಲ್ಲ. ಮಂಗಳೂರಿನ ಪಬ್ ದಾಳಿಯ ಹಿಂದೆಯೂ ಹಪ್ತಾ ಮಾಫಿಯಾ ಇದೆ ಎಂಬ ಗುಮಾನಿ ಇತ್ತು. ಮಂಗಳೂರಿನಲ್ಲಿ ಹಲವಾರು ಪಬ್ ಗಳಿದ್ದರೂ ಕೇವಲ ಅಮ್ನೇಶಿಯಾ  ಮಾತ್ರವೇ ದಾಳಿಗೆ ಗುರಿಯಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಅಮ್ನೇಶಿಯಾ ಪಬ್ ಮಾಲಕರು, ”ವಾರದ ಹಿಂದೆ ಶ್ರೀರಾಮ ಸೇನೆಯ ಕೆಲ ಯುವಕರು ಬಂದು ಪಬ್ ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಮತ್ತು ಬೌನ್ಸರ್ ಗಳ ಕಾಂಟ್ರಾಕ್ಟನ್ನು ನಮಗೇ ನೀಡಬೇಕು ಎಂದು ಕೇಳಿಕೊಂಡಿದ್ದರು. ನಾನು ಒಪ್ಪಿರಲಿಲ್ಲ. ಇಂದು ದಾಳಿಯಾಗಿದೆ” ಎಂದು ಉತ್ತರಿಸಿದ್ದರು. ನಂತರ ನಾನು ಮತ್ತು ನನ್ನ ಗೆಳೆಯರು ಇತರ ಪಬ್ ಮತ್ತು ಬಾರ್ ಗಳನ್ನು ಪರಿಶೀಲಿಸಿದಾಗ ಹಲವಾರು ಕಡೆಗಳಲ್ಲಿ ಶ್ರೀರಾಮ ಸೇನೆ ಸೆಕ್ಯೂರಿಟಿ ಕಾಂಟ್ರಾಕ್ಟ್ ಮತ್ತು ಬೌನ್ಸರ್ ಕಾಂಟ್ರಾಕ್ಟ್ ಹೊಂದಿರುವ ಸಂಗತಿ ಅರಿವಿಗೆ ಬಂತು. ಎಲ್ಲೆಲ್ಲಿ ಶ್ರೀರಾಮ ಸೇನೆ ಈ ರೀತಿ ಕಾಂಟ್ರಾಕ್ಟ್ ಗಳನ್ನು ಹೊಂದಿದೆಯೋ ಅಂತಹ ಪಬ್ ಗಳಲ್ಲಿ ಹುಡುಗ ಹುಡುಗಿಯರು ಹಿಂದುತ್ವ ಮರೆತು ಕುಡಿಯಬಹುದು ಮತ್ತು ನರ್ತಿಸಬಹುದು ಎಂಬ ಅಂಶ ಅಲ್ಲಿಗೆ ಸ್ಪಷ್ಟವಾಯಿತು.

ಇಷ್ಟೇ ಅಲ್ಲದೆ ಹಣ ನೀಡಿದರೆ ದೇಶದಲ್ಲಿ ಹಿಂಸಾಚಾರ ಮತ್ತು ಗಲಭೆ ಸೃಷ್ಟಿಸಲು ಸಿದ್ಧ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒಪ್ಪಿಕೊಂಡಿರುವ ವಿಷಯ ತೆಹಲ್ಕಾ-ಹೆಡ್‌ಲೈನ್ಸ್ ಟುಡೆ ನಡೆಸಿದ ಜಂಟಿ ಗುಪ್ತ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿತ್ತು. ಸೂಕ್ತ ಮೊತ್ತದ ಹಣ ನೀಡಿದರೆ ಯಾವುದೇ ಹಿಂಸಾಚಾರ ಅಥವಾ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಲು ತಾನು ಸಿದ್ಧನಿರುವುದಾಗಿ ಗುಪ್ತ ಕಾರ್ಯಾಚರಣೆಯ ತಂಡಕ್ಕೆ ಮುತಾಲಿಕ್ ಭರವಸೆ ನೀಡಿರುವ ವಿಷಯ ಕ್ಯಾಮರಾದಲ್ಲಿ ದಾಖಲಾಗಿತ್ತು. ಕುಟುಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪತ್ರಕರ್ತರು ಮುತಾಲಿಕ್ ಅನ್ನು ಬೇಟಿಯಾಗಿ ”ತಮ್ಮ  ವ್ಯವಹಾರ ಪ್ರಸಿದ್ದಿ ಪಡೆಯಲು ವಿನಾಕಾರಣ ವಿವಾದ ಸೃಷ್ಠಿಸಿ ಗಲಬೆ ಎಬ್ಬಿಸಬೇಕು” ಎಂದು ದೀರ್ಘ ಕಾಲ ಮಾತುಕತೆ ನಡೆಸಿದ್ದರು. ಅದಕ್ಕೆ ಮುತಾಲಿಕ್ ಒಪ್ಪಿಕೊಂಡಿದ್ದರು. ಈ ಮೂಲಕ  ಈವರೆಗೆ ಮುತಾಲಿಕ್ ನಡೆಸಿರುವ ಸಂಸ್ಕೃತಿ ರಕ್ಷಣೆಯ ದಾಳಿಗಳೆಲ್ಲಾ ಹಫ್ತಾ ಪ್ರಾಯೋಜಿತ ಎಂದು ಸಾಬೀತಾಗಿತ್ತು.

ಬಿಜೆಪಿ ಸೇರ್ಪಡೆ ಹಿಂದೆ ವ್ಯವಹಾರ?

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪರ್ಧಿಸುವ ಹುಬ್ಬಳ್ಳಿ ದಾರವಾಡ ಲೋಕಸಭಾ ಕ್ಷೇತ್ರವೂ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಪ್ರಮೋದ್ ಮುತಾಲಿಕ್ ಕೇವಲ 13 ದಿನಗಳಲ್ಲಿ ಬಿಜೆಪಿ ಜೊತೆ ವಿಲೀನವಾಗುವುದರ ಹಿಂದೆ ಭಾರೀ ಮೊತ್ತದ ಹಣಕಾಸು ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ”ಮೋದಿ ದೇಶದ ಪ್ರಧಾನಿಯಾಗಬೇಕು” ಎಂಬ ತಲೆಬರಹ ನೀಡಲಾಗುತ್ತಿದೆಯಷ್ಟೇ ಎಂಬ ಸಂಶಯ ಇದೆ. ’ಮೋದಿ ದೇಶದ ಪ್ರಧಾನಿಯಾಗಬೇಕು’ ಎಂದು ಪ್ರಮೋದ್ ಮುತಾಲಿಕ್ ಹಣಕಾಸು ವ್ಯವಹಾರ ಮಾಡುತ್ತಿರುವುದು ಇದೇ ಮೊದಲಲ್ಲ. ಮೋದಿ ಹೆಸರಲ್ಲಿ ಮುತಾಲಿಕ್ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು ಬೇರಾರೂ ಅಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಅಧ್ಯಕ್ಷ ಲಿಂಗರಾಜ್ ಪಾಟೀಲ್.

2013 ನವೆಂಬರ್ 8 ರಿಂದ ಮೂರು ದಿನಗಳ ಕಾಲ ಶ್ರೀರಾಮಸೇನೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಹಿಂದೂ ಅಧಿವೇಶನ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕಾಗಿ ”ಮೋದಿ-ಮುತಾಲಿಕ್ ಬ್ರಿಗೇಡ್ ”ಸ್ಥಾಪನೆಗೊಂಡಿದ್ದು, ”ದೇಶಕ್ಕೆ ಮೋದಿ-ರಾಜ್ಯಕ್ಕೆ ಮುತಾಲಿಕ್” ಎಂದು ಬ್ಯಾನರ್ ಬರೆದುಕೊಂಡು ಸ್ಥಳೀಯರಿಂದ 100 ರೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನವೆಂಬರ್ 09 ರಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಲಿಂಗರಾಜ್ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಹುಬ್ಬಳ್ಳಿ ದಾರವಾಡ ಮಹಾನಗರ ಬಿಜೆಪಿಯ ಅಧ್ಯಕ್ಷ ಲಿಂಗರಾಜ್ ಅವರ ಆರೋಪ ಇಷ್ಟಕ್ಕೇ ಮುಗಿದಿರಲಿಲ್ಲ. ಅವರು ಮುತಾಲಿಕ್ ರನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದ್ದರು, ” ಮೈಬಗ್ಗಿಸಿ ದುಡಿದು ಬದುಕಲು ಯೋಗ್ಯತೆಯಿಲ್ಲದ ಕಿಡಿಗೇಡಿಗಳು ದೇವರ ಹೆಸರಿನಲ್ಲಿ ಹಣ ಪೀಕುವಂತೆ ಅಥವಾ ಗೂಂಡಾಗಿರಿ ದಬ್ಬಾಳಿಕೆ ಮಾಡಿ ಹಣ ವಸೂಲಿ ಮಾಡುವಂತೆ, ಹಣ ಹೊಂದಿಸುವ ನಿಟ್ಟಿನಲ್ಲಿ ಐದಾರು ರೂಪಾಯಿ ಮೌಲ್ಯದ ಸ್ಟಿಕರೊಂದನ್ನು ಮುದ್ರಿಸಿ ಅದನ್ನು ನೂರು ರೂಪಾಯಿಗೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡುವ ಅಡ್ಡ ಕಸುಬು ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ಜನಸಾಮಾನ್ಯರಿಂದ ಹಿಡಿದು ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಸ್ಥರ ಮೇಲೂ ದಬ್ಬಾಳಿಕೆ ಪ್ರದರ್ಶಿಸುತ್ತಿರುವ ಶ್ರೀರಾಮ ಸೇನೆಯ ಕಾರ್ಯಕರ್ತರು, ತಾವು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಅಭಿಮಾನಿಗಳು ಎಂದು ಪರಿಚಯಿಸಿಕೊಂಡು ಪ್ರತೀ ಟಿಕೇಟಿಗೆ ನೂರು ರೂಪಾಯಿಯಂತೆ ಹಣ ವಸೂಲಿ ಮಾಡುತ್ತಿದ್ದಾರೆ” ಎಂದು  ಲಿಂಗರಾಜ್ ಪಾಟೀಲ್ ನೇರವಾಗಿ ಆರೋಪಿಸಿದ್ದರು.

ಇದೀಗ ಅದೇ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿ ಒದೆ ತಿಂದಿದ್ದಾರೆ. ಮತ್ತದೇ ನರೇಂದ್ರ ಮೋದಿಯ ಕಾರಣಕ್ಕಾಗಿ.