Monthly Archives: March 2014

’ಹೈವೇ’,’ ಕ್ವೀನ್’, ’ಗುಲಾಬಿ ಗ್ಯಾಂಗ್’ – ಆತ್ಮ ವಾತ್ಮ ಮಥನಿಸಿ ಅನುಭಾವ ಹುಟ್ಟಿತಯ್ಯ

– ಬಿ.ಶ್ರೀಪಾದ ಭಟ್

1) Of my land – uniform blue opens skies
Mad-artist pallets of green lands and lily filled lakes that
Mirror all – not peace or tranquil alone he shudders some
Young women near my father’s home,with a drunken husband
Who never changed;she bore his beatings everyday day until one
Stormy night,in fury,she killed him by stomping his seedbags…..
We: their daughters.
We daughters of their soil
We mostly write
2) the pot sees just another noisy child
the glass sees an eager and clumsy hand
but the teacher sees a girl breaking the rule
the school sees a potential embarrassment
– Meena kandaswamy

ಕಳೆದ ಹದಿನೈದು ದಿನಗಳಲ್ಲಿ ’ಹೈವೇ’,’ ಕ್ವೀನ್’, ’ಗುಲಾಬಿ ಗ್ಯಾಂಗ್’ ಎನ್ನುವ ಮೂರು ಪ್ರಮುಖ ಹಿಂದಿ ಚಿತ್ರಗಳು ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆದವು. ಸ್ತ್ರೀ ಪ್ರಾಧಾನ್ಯತೆಯೇ ಈ ಮೂರು ಸಿನಿಮಾಗಳ ಮುಖ್ಯ ಕತೆಯಾಗಿತ್ತು. ಚಿತ್ರಕತೆ, ನಿರೂಪಣೆಗಳಲ್ಲಿ ವಿಭಿನ್ನವಾಗಿದ್ದರೂ ಹೈವೇ ಮತ್ತು ಕ್ವೀನ್ ಸಿನಿಮಾಗಳು ನಾಯಕಿಯು ಸ್ವಚ್ಚಂದವಾಗಿ, ಏಕಾಂಗಿಯಾಗಿ, ಬಿಡುಗಡೆಯ ಮನಸ್ಥಿತಿಯಲ್ಲಿ ದೇಶಾದ್ಯಾಂತ ಅಡ್ಡಾಡುವುದನ್ನು ಮೂಲಕತೆಯನ್ನಾಗಿಟ್ಟುಕೊಂಡು ಫೆಮಿನಿಸಂನ ವಿಭಿನ್ನ ಆಯಾಮಗಳನ್ನು ಪ್ರತಿಪಾದಿಸಿದರೆ ಗುಲಾಬ್ ಗ್ಯಾಂಗ್ ಸಿನಿಮಾ ನೈಜ ಕತೆಯ ಎಳೆಯನ್ನು ಆಧಾರವಾಗಿಟ್ಟುಕೊಂಡು ಅಕ್ಟಿವಿಸಂನ ಮೂಲಕ ಸ್ತ್ರೀ ಶಕ್ತಿಯನ್ನು ಎತ್ತಿಹಿಡಿಯುತ್ತದೆ.

ಇಮ್ತಿಯಾಜ್ ಅಲಿ ನಿರ್ದೇಶನದ ’ಹೈವೇ’ ಚಿತ್ರದಲ್ಲಿ ನಾಯಕಿ ಅಲಿಯಾ ಭಟ್ (ವೀರಾ ತ್ರಿಪಾಠಿ) Highway-movieಖ್ಯಾತ ಉದ್ಯಮಪತಿಯೊಬ್ಬನ ಮಗಳು. ರಣದೀಪ್ ಹೂಡಾ (ಮಹಬೀರ್ ಭಾಟಿ) ಎನ್ನುವ ಅಪಹರಣಕಾರರ ಗ್ಯಾಂಗ್‌ನ ಮುಖ್ಯಸ್ಥ ಅಲಿಯಾ ಭಟ್ ತನ್ನ ಫಿಯಾನ್ಸಿಯೊಂದಿಗೆ ವಿಹಾರದಲ್ಲಿದ್ದ ಸಮಯದಲ್ಲಿ ಆಕೆಯನ್ನು ಅಪಹರಿಸುತ್ತಾನೆ. ನಂತರ ಇಡೀ ಸಿನಿಮಾ ರೋಡಿಗಿಳಿಯುತ್ತದೆ. ಉತ್ತರ ಭಾರತದ ವಿವಿಧ ರಾಜ್ಯಗಳ ಮೂಲಕ ಸಂಚರಿಸುವ ಈ ಸಿನಿಮಾ ನಿಧಾನವಾಗಿ ರೋಡಿನಲ್ಲಿ ತೆರೆದುಕೊಳ್ಳುತ್ತದೆ. ಆರಂಭದಲ್ಲಿ ತಲ್ಲಣದಲ್ಲಿದ್ದ ನಾಯಕಿ ಅಲಿಯಾ ನಿಧಾನವಾಗಿ ಪ್ರಕೃತಿಯ ಬಾಹುಗಳಲ್ಲಿ ಬಿಡುಗಡೆಯ ನಿಜವಾದ ಅರ್ಥಗಳನ್ನು ಕಂಡುಕೊಳ್ಳತೊಡಗುತ್ತಾಳೆ. ಭಯ, ಆತಂಕಗಳು ಕ್ರಮೇಣ ಉಲ್ಲಾಸ ಮತ್ತು ಉತ್ಸಾಹದ ಗುಣಗಳಾಗಿ ಪರಿವರ್ತನೆಗೊಂಡು ನಾಯಕಿ ಕ್ರಮೇಣ ಅಪಹರಣಕಾರ ಹೂಡನ ವ್ಯಕ್ತಿತ್ವದಲ್ಲಿ ಬೆಸೆದುಕೊಳ್ಳತೊಡಗುತ್ತಾಳೆ (ಸ್ಟಾಕ್ ಹೋಂ ಸಿಂಡ್ರೋಮ್) ಹೀಗೆ ಅಪಹರಣದ ನಾಟಕವು ಸ್ನೇಹಕ್ಕೆ ತಿರುಗುತ್ತಿರುವಂತಹ ಸಂಧರ್ಭದಲ್ಲಿ ನಾಯಕಿ ಅಲಿಯಾ ತನ್ನ ಕ್ರೌರ್ಯದ ಬಾಲ್ಯವನ್ನು ಹೂಡಾನೊಂದಿಗೆ ಹಂಚಿಕೊಳ್ಳುತ್ತಾಳೆ. ಬಾಲ್ಯದಲ್ಲಿ ಆಕೆಯ ಚಿಕ್ಕಪ್ಪ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿರುತ್ತಾನೆ. ಸಂಪೂರ್ಣ ತೊಂದರೆಗೊಳಗಾದ, ಲೈಂಗಿಕವಾಗಿ ಹಲ್ಲೆಗೊಳಗಾದ ಅಂದಿನ ಆ ಗಾಯಕ್ಕೆ ಇಂದು ತನಗೆ ಅಪಹರಣಕಾರನ ಸಂಗದಲ್ಲಿ, ಪ್ರಕೃತಿಯ ಮಡಿಲಲ್ಲಿ ಮಲಾಮು ಸಿಗುತ್ತಿದೆ ಎಂದು ನಾಯಕಿ ಬಿಡುಗಡೆಯ ಸಂಭ್ರಮವನ್ನು ಅನುಭವಿಸುತ್ತಿರುತ್ತಾಳೆ. ನಂತರ ಇದು ನಿಧಾನವಾಗಿ ಪ್ರೇಮಕ್ಕೆ ಹೊರಳಿಕೊಳ್ಳುವಷ್ಟರಲ್ಲಿ ಶೂಟೌಟ್ ನಡೆದು ಅಪಹರಣಕಾರ ಹೂಡ ಹತ್ಯೆಯಾಗುತ್ತಾನೆ. ನಾಯಕಿ ಮರಳಿ ತನ್ನ ಕುಟುಂಬದೊಂದಿಗೆ ಬದುಕಲು ತಿರಸ್ಕರಿಸಿ ಸ್ವತಂತ್ರವಾಗಿ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಪ್ರಾರಂಬಿಸುತ್ತಾಳೆ.

ಇಡೀ ಸಿನಿಮಾದ ಶಕ್ತಿ ಮತ್ತು ಮಿತಿಗಳೇನೆ ಇರಲಿ ಇದು ನಿರಂತರವಾಗಿ ಧ್ವನಿಸುವುದು ಹೆಣ್ಣಿನ ಬಿಡುಗಡೆಯ ಹೊಸದಾರಿಗಳನ್ನು. Highway-AliaBhattಅದೂ ಸಹ ದಾರಿಗಳೂ ಜಾಳುಜಾಳಾಗಿ ತೆರೆದುಕೊಳ್ಳದೆ ಅಲಿಯಾಳ ಅಂತರಂಗದ ಪಿಸುಮಾತುಗಳು, ಅವ್ಯಕ್ತ ಆಸೆಗಳು ಪ್ರಕೃತಿಯೊಂದಿಗೆ ಬಹಿರಂಗವಾಗಿ ಸಂಭಾಷಿಸುವುದರ ಮೂಲಕ ಬೆಳಕಾಗತೊಡಗುತ್ತವೆ. ಇಲ್ಲಿಯೇ ಈ ಸಿನಿಮಾದ ಗೆಲುವಿರುವುದು. ತನ್ನ ಎರಡನೇ ಸಿನಿಮಾದಲ್ಲಿಯೇ ತನ್ನ ಅದ್ಭುತವಾದ ಅಭಿನಯದ ಮೂಲಕ ಅಲಿಯಾ ಚಿತ್ರವನ್ನು ನೈತಿಕವಾಗಿ ಗೆಲ್ಲಿಸಿದ್ದಾಳೆ. ಇಲ್ಲಿ ಅಲಿಯಾ ಹುತಾತ್ಮಳಾಗಲು ನಿರಾಕರಿಸುವುದರ ಮೂಲಕ ಗೃಹಿಣಿಯರಿಗೇನಿದೆ ಮೂರು ಬಾಗಿಲು, ನಾಲ್ಕು ಕೋಣೆ ಮಾತ್ರ ಎನ್ನುವ ವ್ಯವಸ್ಥೆಯ ಅಲಿಖಿತ ಕಟ್ಟುಪಾಡನ್ನು ಯಶಸ್ವಿಯಾಗಿ ಮುರಿದು ಹಾಕುತ್ತಾಳೆ. ಅಹಲ್ಯೆಯ ತೊಡೆಯ ಮೇಲಿನ ಗೆರೆಗಳು ಇನ್ನೂ ಅಳಿದಿಲ್ಲ ಎಂದು ಕೊರಗುತ್ತಾ, ವಿಷಾದಿಸುತ್ತಾ ಕೂಡಲು ನಿರಾಕರಿಸುವ ಅಲಿಯಾ ಹುತಾತ್ಮತೆಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಇವಳ ಬಂಡಾಯ ಆಧುನಿಕ ಜೀವನದ ಹೊಸ ಹಾಡುಗಳು. ಅನೇಕ ಮಿತಿಗಳ ನಡುವೆಯೂ. (ಈ ಸಿನಿಮಾ ನೋಡುತ್ತಿರುವಾಗ ನನ್ನ ಮನದೊಳಗೆ ’ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕದ ತಾಯಿಯ ಪಾತ್ರ ಪದೇ ಪದೇ ಕಾಡುತ್ತಿತ್ತು.)

ವಿಕಾಸ್ ಬೆಹಲ್ ನಿರ್ದೇಶನದ ’ಕ್ವೀನ್’ ಈ ವಾರ ತೆರೆಕಂಡ ಮತ್ತೊಂದು ಸಿನಿಮಾ. ಇದರಲ್ಲಿ ರಾಣಿ ಮೆಹ್ರ Queen-Hindi-Movieಪಾತ್ರದಲ್ಲಿ ನಾಯಕಿಯಾಗಿ ಕಂಗನಾ ರಾವತ್ ಅಭಿನಯಿಸಿದ್ದಾಳೆ. ಈ ಚಿತ್ರದ ಕತೆಯೂ ಅಷ್ಟೇ ಸರಳ. ಆಕೆಯ ದಿನನಿತ್ಯದ ಬದುಕೆಂದರೆ ತನ್ನ ಸಹೋದರನ ಕಣ್ಗಾವಲಿನಲ್ಲಿ over protected ಮಧ್ಯಮವರ್ಗದ ಜೀವನ. ನೆರೆಹೊರೆಯವರ ಕಣ್ಣಿಗೂ ಬೀಳದಷ್ಟು ಕಟ್ಟುಪಾಡಿನ. ಸ್ವಂತ ವ್ಯಕ್ತಿತ್ವವೇ ಇಲ್ಲದ ಬದುಕು. ನಾಯಕಿ ಪರಪುಷನ ಮುಂದೆ ಮೊದಲ ಬಾರಿಗೆ ನಿಲ್ಲುವುದು ತನ್ನ ಫಿಯಾನ್ಸಿ ಎದುರು ಮಾತ್ರ. ಅದೂ ಮದುವೆಗೆ ಎರಡು ದಿನಗಳ ಮೊದಲು. ಆದರೆ ಕಾರಣಾಂತರಗಳಿಂದ ಈ ಮದುವೆ ಮುರಿದುಬೀಳುತ್ತದೆ. ಮದುಮಗ ಮದುವೆಯಾಗಲು ನಿರಾಕರಿಸುತ್ತಾನೆ. ಆ ನಂತರವೇ ರಾಣಿ ಕಂಗನಾಳ ವ್ಯಕ್ತಿತ್ವ ಬಿಚ್ಚಿಕೊಳ್ಳತೊಡಗುತ್ತದೆ. ಮನೆಯವರ ವಿರೋಧದ ನಡುವೆಯೂ ತನ್ನ ಅಜ್ಜಿಯ ಬೆಂಬಲದೊಂದಿಗೆ ಈ ಮೊದಲೇ ಕಾಯ್ದಿರಿಸಿದ್ದ ತನ್ನ ಹನಿಮೂನ್ ತಾಣಗಳಾದ ಪ್ಯಾರಿಸ್ ಮತ್ತು ಅರ್ಮಸ್ಟ್ರಾಡಮ್‌ಗೆ ಒಂಟಿಯಾಗಿ ಪ್ರಯಾಣ ಬೆಳೆಸುತ್ತಾಳೆ. ತನ್ನ ಸ್ವಂತ ಊರಲ್ಲಿ ಆಸ್ತಿತ್ವವೇ ಇಲ್ಲದಂತೆ ಬದುಕಿದ್ದ ಕಂಗನಾ ವಿದೇಶದಲ್ಲಿ ಗೆರೆಬಿಚ್ಚಿದ ಹಕ್ಕಿಯಂತಾಗುತ್ತಾಳೆ. ಯಾವುದೇ ಹುಡುಕಾಟವಿಲ್ಲದೆಯೇ ಹೊಸ ಆಸ್ತಿತ್ವ ಕಣ್ಬಿಡತೊಡಗುತ್ತದೆ. ಅಲ್ಲಿ ಅವಳಿಗೆ ಹೊಸ ಜಗತ್ತೇ ತೆರೆದುಕೊಳ್ಳುತ್ತದೆ. ಅದು bad world. ನಂತರ ಅಲ್ಲಿ ಅವಳು ಪಡೆದುಕೊಳ್ಳುವ ಹೊಸ ಗೆಳೆಯರು (ಡ್ಯಾನ್ಸರ್, ಕಲಾವಿದ, ಸಂಗೀತಗಾರ, ತ್ಸುನಾಮಿ ಸಂತ್ರಸ್ಥ), ಪಡಿಪಾಟಲುಗಳು, ಪ್ರತೀ ಹೆಜ್ಜೆಗೂ ಎಡವುತ್ತಿರುವುದು, ಮೊದಲ ಚುಂಬನ ನಮ್ಮನ್ನು ಇಡೀ ಕತೆಯೊಳಗೆ ಮುಳುಗಿಸಿಬಿಡುತ್ತವೆ. ಇದನ್ನು ಸಾಧ್ಯವಾಗಿಸಿದ್ದು queen-movie-kanganaಫರೂಕ್ ಶೇಕ್ ಮತ್ತು ಚೈತಾಲಿಯವರ ಅತ್ಯುತ್ತಮ ಚಿತ್ರಕತೆ ಮತ್ತು ರಾಣಿಯಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಕಂಗನಾಳ ಅದ್ಭುತ ಅಭಿನಯ. ಕಂಗನಾ ಈ ಮೊದಲು ಇಷ್ಟೊಂದು under rated ನಟಿಯಾಗಿದ್ದಳೇ ಅಥವಾ ನಾವೇ ಅವಳನ್ನು under rated ನಟಿಯಾಗಿಸಿದ್ದೆವಾ ಎಂದು ನಮ್ಮಲ್ಲಿ ಕೀಳರಿಮೆ ಮೂಡಿಸುವಷ್ಟು ಅಕೆಯ ನಟನೆ ಇಡೀ ಚಿತ್ರವನ್ನೇ ತನ್ನ ಹೆಗಲಿಗೇರಿಸಿಕೊಳ್ಳುತ್ತದೆ.ಅದನ್ನು ಕಂಗನಾ ಮಾತ್ರ ಯಶಸ್ವಿಯಾಗಿ ನಿಭಾಯಿಸಿದ್ದಾಳೆ.

ಹೌದು ’ಕ್ವೀನ್’ ಕೂಡ ಅಪ್ಪಟ ಸ್ತ್ರೀವಾದಿ ಸಿನಿಮಾ. ಆದರೆ ಇಲ್ಲಿ ಯಾವುದೇ ಇಸಂಗಳಿಲ್ಲ. ಘೋಷಣೆಗಳಿಲ್ಲ. ಹೈವೇನ ಅಲಿಯಾ ಮತ್ತು ರಾಣಿ ಕಂಗನಾ ನನ್ನ ಬದುಕನ್ನು ನಾನೇ ಕಟ್ಟಿಕೊಳ್ಳುತ್ತಿದ್ದೇನೆ ನೋಡಿ ಬೇಕಾದರೆ ಎನ್ನುವುದರ ಮೂಲಕ ಫೆಮಿನಿಸಂಗೆ ಹೊಸ ಆಯಾಮವನ್ನೇ ತಂದುಕೊಡುತ್ತಾರೆ. ಇವರಿಬ್ಬರೂ ಮಹಿಳೆಯ ಅತಂತ್ರತೆಯನ್ನು ಕೆಡವಿ ಹಾಕುವುದೇ ಫೆಮಿನಿಸಂನ ಗೆಲುವಾಗುತ್ತದೆ. ಮಹಿಳೆಯದು ಎಂದಿಗೂ ಮುಗಿಯದ ಬವಣೆ ಎನ್ನುವ ವಾಸ್ತವಕ್ಕೆ ಹೊಸ ರೂಪ ದಕ್ಕುವುದು ಇಲ್ಲಿನ ಫೆಮಿನಿಸಂನ ವಿಶೇಷ. ಅದು ಧನಾತ್ಮಕ ಸ್ವರೂಪ. ಹೌದು ಅನೇಕ ಮಿತಿಗಳ ನಡುವೆಯೂ ಸಹ.

ಸೌಮಿಕ್ ಸೇನ್ ನಿರ್ದೇಶನದ ಮೂರನೇಯ ಚಿತ್ರ ’ಗುಲಾಬಿ ಗ್ಯಾಂಗ್’ ಉತ್ತರ ಪ್ರದೇಶದ ಸಂಪತ್ ಪಾಲ್ ದೇವಿ ಅವರ ನೈಜ ಬದುಕಿನ ಘಟನೆಗಳ ಎಳೆಯನ್ನಾಧರಿಸಿದ ಸಿನಿಮಾ. ಚಿತ್ರದ ಕತೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಇಡೀ ಸಿನಿಮಾದ ಉಸಿರೇ gulabigang-movieಸ್ತ್ರೀವಾದ ಮತ್ತು ಸ್ತ್ರೀಶಕ್ತಿಯ ಅಭಿವ್ಯಕ್ತಿ.ಆದರೆ ಅದನ್ನು ನಿರ್ವಹಿಸುವಾಗ ನಿರ್ದೇಶಕರು ಸಂಪೂರ್ಣವಾಗಿ ಎಡವಿದ್ದಾರೆ. ಅತ್ಯಂತ ತೆಳುವಾದ, ಸೂಪರ್‌ಫೀಶಿಯಲ್ ಕತೆಗಳನ್ನೊಳಗೊಂಡ ’ಹೈವೇ’ ಮತ್ತು ’ಕ್ವೀನ್’ ಸಿನಿಮಾಗಳು ಯಾವುದೇ ಫೆಮಿನಿಸಂನ ಘೋಷಣೆಗಳಿಲ್ಲದೆ ಇಡೀ ಸ್ತ್ರೀ ವ್ಯಕ್ತಿತ್ವವನ್ನೇ ಧನಾತ್ಮಕವಾಗಿ ಕಟ್ಟಿಕೊಟ್ಟರೆ ’ಗುಲಾಬಿ ಗ್ಯಾಂಗ್’ ಶಕ್ತಿಶಾಲಿಯಾದ, ನೈಜ ಕತೆಯನ್ನೇ ತನ್ನ ಬೆನ್ನಿಗಿಟ್ಟುಕೊಂಡು ಇಡೀ ಚಿತ್ರದುದ್ದಕ್ಕೂ ಸ್ತ್ರೀವಿಮೋಚನೆಯ ಆಶಯಗಳನ್ನೇ ಹೊತ್ತುಕೊಂಡು ಅದನ್ನು ಹಿಡಿದಿಡಲಾಗದೆ ಸೋತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ನಾಯಕಿ ಮಾಧುರಿ ದೀಕ್ಷಿತ್ (ರಜ್ಜೋ) ವಿಮೋಚನೆಗೆ ಮಾರ್ಗವಾಗಿ ಹಿಂಸೆಯನ್ನು ಕೈಗೆತ್ತಿಕೊಳ್ಳುತ್ತಾಳೆ. ಅದೂ ಅಸಹಜವಾಗಿ. ಕಡೆಗೆ ಈ ಹಿಂಸಾತ್ಮಕವಾದ ಆದರೆ ನ್ಯಾಯಪರವಾದ, ಜನಪರವಾದ, ಶಕ್ತಿಶಾಲಿಯಾದ ಹೋರಾಟ ಒಂದು ನಿಜವಾದ, ನಂಬುವಂತಹ ಮೆಟಫರ್ ಕೂಡ ಅಗವುದಿಲ್ಲ. ಮೆಟಫರ್ ಕೂಡ ಆಗದಿದ್ದರೆ ಅದು ಪ್ರೇಕ್ಷಕನನ್ನು ಮುಟ್ಟುತ್ತದೆಯೇ? ಕಷ್ಟ. ಇದರ ನೈತಿಕ ಸೋಲಿಗೆ ಮತ್ತೊಂದು ಕಾರಣ ಅದರ ಮುಖ್ಯ ಪಾತ್ರಧಾರಿಗಳಾದ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಅವರ ತಮ್ಮ ಪಾತ್ರದೊಂದಿಗೆ ತಾದಾತ್ಮತೆಯನ್ನೇ ಸಾಧಿಸದ, ಸಂಪೂರ್ಣ disconnect ಆದ ಕೃತಕ ಅಭಿನಯ. ಪ್ರಸ್ತುತ ವಿದ್ಯಾಮಾನಗಳಿಗೆ ಅನುಗುಣವಾಗಿ ರೂಪುಗೊಳ್ಳಬೇಕಾದ ಚಿತ್ರಕತೆ ಅದಾಗದೆ ಈ ಸೋಲಿಗೆ ತನ್ನ ಪಾಲನ್ನು ದೇಣಿಗೆಯಾಗಿ ನೀಡಿದೆ. ಕೊನೆಗೆ ಆಶಯಗಳು ಮಾತ್ರ ಮುಖ್ಯವಲ್ಲ, ಅದನ್ನು ನಿಭಾಯಿಸುವುದೂ ಅಷ್ಟೇ ಮುಖ್ಯ ಎನ್ನುವ ಅಂದಕಾಲತ್ತಿಲ್ ನುಡಿಕಟ್ಟಿನ ಪ್ರಸ್ತುತತೆ ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಈ ಅಬ್ಬರದ, pompous, ವಾಕರಿಕೆ ಹುಟ್ಟಿಸುವಷ್ಟು ಅಸೂಕ್ಷ್ಮತೆಯ ಹಿಂದಿ ಚಿತ್ರರಂಗ ಅಚ್ಚರಿ ಮೂಡಿಸುವಷ್ಟು ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಮೂರು ಸ್ತ್ರೀ ಪ್ರಧಾನ ಸಿನಿಮಾಗಳನ್ನು ಅದರಲ್ಲೂ ಸೂಕ್ಷ್ಮ, ಸಂವೇದನಾಶೀಲ ಸಿನಿಮಾಗಳನ್ನು ಕೊಟ್ಟಿದ್ದಕ್ಕಾಗಿ ಸದ್ಯಕ್ಕೆ ಅಭಿನಂದಿಸಲೇಬೇಕು.

ಒಬ್ಬರ ಮೌನವನ್ನು ಇನ್ನೊಬ್ಬರ ಮಾತು ಮುರಿಯುವಂತೆ ಮಾಡಬಾರದು : ಅಕ್ಷತಾ ಹುಂಚದಕಟ್ಟೆ

– ಅಕ್ಷತಾ ಹುಂಚದಕಟ್ಟೆ

ನಾನು ತುಂಬಾ ಮೆಚ್ಚುವ, ಗೌರವಿಸುವ ಇಬ್ಬರು ಪತ್ರಕರ್ತರು ದಿನೇಶ ಮಟ್ಟು ಮತ್ತು ನವೀನ ಸೂರಿಂಜೆ. ಅವರಿಬ್ಬರ ನಡುವಿನ ವಾಗ್ವಾದ ಸ್ವರೂಪದ ಸಂವಾದ ಸರಣಿ ನನ್ನನ್ನು ಇದಕ್ಕೆ ಪ್ರತಿಕ್ರಿಯಿಸಲು ಹಚ್ಚಿತು.

ನವೀನ ಹೇಳುತ್ತಿರುವುದು ಜಮಾತೆ ಇಸ್ಲಾಮಿ ಹಿಂದ್ ಮುಸ್ಲಿಂ ಲೇಖಕರ ಸಂಘ ಮತ್ತು ಶಾಂತಿ dinesh-amin-mattu-2ಪ್ರಕಾಶನ ಎಲ್ಲವು ಒಂದೇ ಸಂಘಟನೆಯ ವಿವಿಧ ಕವಲುಗಳು. ಮತ್ತೆ ಈ ಎಲ್ಲ ಸಂಘಟನೆಗಳು ಮೂಲಭೂತವಾದಿಗಳಿಂದ ಕೂಡಿದ್ದು, ಅದರ ಪ್ರಸರಣೆಯಲ್ಲೂ ತೊಡಗಿವೆ ಅನ್ನೋದು. ದಿನೇಶ್ ಸರ್ ಅಂಥಹ ಪ್ರಗತಿಪರರು ಅಲ್ಲಿ ಹೋಗಿ ಮಾತಾಡುವುದರಿಂದ, ಅವರು ಇಂಥವರು ನಮ್ಮ ವೇದಿಕೆಗೆ ಬಂದು ಮಾತಾಡಿದ್ರು ಅನ್ನೋ ವಿಷಯವನ್ನೇ ತೆಗೆದುಕೊಂಡು ನಾಳೆ ತಮ್ಮ ಅಜೆಂಡಾವನ್ನು ನೆರವೇರಿಸಿ ಕೊಳ್ಳಲು ಬಳಸುತ್ತಾರೆ. ಈ ಮೂಲಕ ಯಾರು ಮೂಲಭೂತವಾದವನ್ನು ವಿರೋಧಿಸುತಿದ್ದೆವೆಯೋ ಅವರೇ ಅದರ ಬೆಳವಣಿಗೆಗೂ ಕಾರಣರಾಗುವ ಸಂಭವ ಉಂಟಾಗಬಹುದು ಎನ್ನುವುದು ನವೀನನ ಆತಂಕ…

ಇವೆಲ್ಲ ಸರಿಯೇ ಇರಬಹುದು ನವೀನ. ನಾನು ಸರ್ ವಾದ ಮಾಡಿದ ಹಾಗೆ ಜಮಾತೆಗು ಲೇಖಕರ ಸಂಘಕ್ಕೂ ಸಂಬಂಧ ಇಲ್ಲ ಅಂತಲೂ ವಾದಿಸುವುದಿಲ್ಲ. ಏಕೆಂದರೆ ಆ ಸಂಘದಲ್ಲಿ ಲೇಖಕರು ಯಾರು ಇಲ್ಲದೆ ಇರುವುದರಿಂದ (ಇಲ್ಲ ಅಲ್ಲಿರುವವರು ಲೇಖಕರೆ ಅಂತ ಅಂದರೆ ಕನ್ನಡ ಸಾಹಿತ್ಯದ ನನ್ನ ಓದು ಅಷ್ಟೇನು ಖರಾಬಿಲ್ಲ ಅಂತ ಮಾತ್ರ ಹೇಳಬಲ್ಲೆ) ಅಂಥದೊಂದು ಸಂಘ ಇಂಥ ಸಂಘಟನೆಗಳ ನೆರವು ಅಥವಾ ಸರ್ಕಾರಿ ಕೃಪಾಪೋಷಿತವಾಗಿ ಮಾತ್ರ ಇಲ್ಲಿ ಹುಟ್ಟುವುದಕ್ಕೆ ಸಾದ್ಯ. ಇದು ಯಾರಿಗಾದರು ಮೇಲ್ನೋಟಕ್ಕೆ ಕಾಣುವ ಸತ್ಯ. ನವೀನ ನೀನು jamathmlore-blogspotಸಾಕ್ಷ್ಯಾಧಾರದ ಸಮೇತ ಇಟ್ಟಿದಿಯಲ್ಲ ಶಾಂತಿ ಪ್ರಕಾಶನ ಎಂಥ ಪುಸ್ತಕಗಳನ್ನು ಪ್ರಕಟಿಸುತ್ತದೆ… ಆ ಪುಸ್ತಕಗಳ ವಸ್ತು ವಿಷಯ… ಅಲ್ಲಿರುವ ಸಾಲುಗಳು `ಮಹಿಳೆಯರು ತಮ್ಮ ಮನೆಯಲ್ಲಿರಬೇಕು. ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬಾರದು ಅಥವ `ಸ್ತ್ರೀ ಪುರುಷರು ಒಟ್ಟಿಗೆ ಸೇರಬಾರದು…’ ಅಥವಾ` ಓರ್ವ ಮುಸ್ಲಿಂ ಮಹಿಳೆ ಸೈನಿಕ ತರಬೇತಿಯಲ್ಲಾಗಲಿ, ಆಟೋಟದಲ್ಲಾಗಲಿ ಭಾಗವಹಿಸುವಂತಿಲ್ಲ. ಪೇಟೆಯಿಂದ ಪಾರ್ಲಿಮೆಂಟ್ ತನಕ ಮಹಿಳೆಯು ಪುರುಷನೊಂದಿಗೆ ಬೆರೆಯುವುದು ಇಸ್ಲಾಂ ವಿರೋಧಿಯಾಗಿದೆ….’ ಇಂಥ ಸಾಲುಗಳು ಶಾಂತಿ ಪ್ರಕಾಶನ ಅಥವಾ ಇನ್ಯಾವುದೇ ಕೋಮುವಾದಿ ಪ್ರಕಾಶನದ ಪುಸ್ತಕಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂಬುದು ನಿನ್ನ ನಂಬಿಕೆಯೇ? ಆದರೆ ಈ ಸಾಲುಗಳು ಸೂಚಿಸುವ ಮತ್ತು ಹೊಮ್ಮಿಸುವ ಮನಸ್ತಿತಿ ಇದೆಯಲ್ಲ ಅದು ಎಲ್ಲಿ ಕಂಡು ಬರುವುದಿಲ್ಲ ಎಂಬುದೇ ಹೆಣ್ಣಾಗಿ ನನ್ನನ್ನು ಕಾಡುವ ಪ್ರಶ್ನೆ… ಮತ್ತೆ ಇಂಥ ಮನಸ್ಥಿತಿ ಯಾರಲ್ಲಿ ಕಂಡು ಬರುವುದಿಲ್ಲ ಅಂತೇನಾದರೂ ಹುಡುಕುತ್ತಾ ಹೊರಟರೆ ಸಾವಿಲ್ಲದ ಮನೆಯ ಸಾಸಿವೆಯ ಹುಡುಕಾಟ ಆದೀತೆ ಎಂಬ ಅನುಮಾನವೂ ನನ್ನದು. ಮತ್ತೆ ಇಂಥ ಮನಸ್ಥಿತಿ jamate-mangaloreಎಂಥ ಹೊತ್ತಲ್ಲೂ ಉದ್ಭವಿಸಿ ಬಿಡಬಹುದೆಂಬ ಭಯವು ಜೊತೆಗೆ… ನನ್ನ ಒಂದು ಪದ್ಯದ ಎರಡು ಸಾಲು ಹೀಗಿದೆ: “ನಿಮಗೆ ಶಿಲಾಯುಗಕ್ಕೆ ದಾರಿಯಾದರೂ ಇದೆ. ನಮಗೆ ಶಿಲೆಯಾಗುವುದೇ ಉಳಿದಿದೆ”. ಹಾಗೂ ಭಯ; ರಾಮ ಬರುವ ಬದಲು ಅವನ ಸೇನೆ ಬಂದರೆ??? ನನಗಂತೂ ಈ ಮನಸ್ಥಿತಿ ಹಲವು ಹತ್ತು ವೇದಿಕೆಗಳಲ್ಲಿ ಕಂಡಿದೆ…

ತುಂಬಾ ಪ್ರಗತಿಪರ ಅಂತ ಕರೆಯೋ ಮಠಗಳು ಮತ್ತು ಮನುಷ್ಯರು ಸಹ ಹೆಣ್ಣಿನ ವಿಷಯದಲ್ಲಿ ಇ ಮನಸ್ಥಿತಿಯಿಂದಲೇ ನಡೆದುಕೊಳ್ಳುವುದು ಹಲವು ಹತ್ತು ಬಾರಿ. ತುಂಬಾ ಪ್ರಗತಿಪರ ಎಂದು ಕರೆಸಿಕೊಳ್ಳುವ ಮಠ ಒಂದಕ್ಕೆ ಪ್ರೀತಿಸಿದ ಯುವಜೋಡಿಯೊಂದು ಸಾವು ಬದುಕಿನ ಸನ್ನಿವೇಶದಲ್ಲಿ ಮದುವೆ ಮಾಡಿಸಲು ಬೇಡಿದಾಗ ಹುಡುಗ ಲಿಂಗಾಯಿತನಾದ ಕಾರಣಕ್ಕೆ ಮದುವೆ ಮಾಡಲು ಒಪ್ಪಿದ ಮಠದ ಧನಿಗಳು ಹುಡುಗಿ ಲಿಂಗ ಕಟ್ಟಿ ಲಿಂಗಾಯಿತಲಾದರೆ ಮಾತ್ರ ಎಂಬ ಅಲಿಖಿತ ನಿಯಮವನ್ನು ಮುಂದಿಟ್ಟರು. ಚೂರು ಇಷ್ಟವಿಲ್ಲದಿದ್ದರೂ ಹುಡುಗಿ ಅದಕ್ಕೆ ಒಪ್ಪಬೇಕಾಯಿತು. ಏಕೆಂದರೆ ನಮಗೆ ಬಿನ್ನ ಅಯ್ಕೆಗಳಿರುವುದಿಲ್ಲ. ಇದ್ದರು ಅವು ಒಂದಕಿಂತ ಇನ್ನೊಂದು ಭಯಂಕರವಾಗಿರುತ್ತದೆ.

ಇವೆಲ್ಲ ಇರಲಿ ಏಕೆಂದರೆ ಕೊನೆಗೂ ಇವೆಲ್ಲದರಿಂದ ಪಾರಾಗಬೇಕಾದದ್ದು ನಮ್ಮ ಪ್ರಯತ್ನಗಳಿಂದಲೇ. ಅಂತ ಮನಸ್ಥಿತಿ ಒಂದು ನಿರ್ವಾತದಲ್ಲಂತೂ ನಿರ್ಮಾಣ ಆಗುವುದಿಲ್ಲ. ನೀನು ಹೇಳುತ್ತಿರುವೆಯಲ್ಲ ಜಮಾತೆಯವರು ಎಂಥ ಮೂಲಭೂತವಾದದ ಒಂದು ಪರಿಸರ ನಿರ್ಮಾಣಕ್ಕೆ ಶ್ರಮಿಸುತಿದ್ದಾರೆ ಅಂತ… ಅದಕಿಂತ ಚೂರು ಪಾರು ಉದಾರವಗಿದ್ದರೂ ಅಂಥದ್ದೇ ಧೋರಣೆಯ ಪರಿಸರದಲ್ಲೇ ನನ್ನಂತಹ ಎಸ್ಟೋ ಹೆಣ್ಣುಮಕ್ಕಳು ಹುಟ್ಟಿ ಬೆಳೆದಿದ್ದು… ಅಂಥದೊಂದು ಕಿಟಕಿ ಬಾಗಿಲುಗಳು ಮುಚ್ಚಿದ ಪರಿಸರದಲ್ಲಿ ನಮ್ಮ ಶಾಲೆ, ಪಾಠ, ಇವೆಲ್ಲ ತುಸು ತುಸುವೇ ಬೆಳಕನ್ನು ನಮಗೆ ತೋರಿಸ್ತಿದ್ದ್ರು ಆದರೆ ಅಲ್ಲೇ ಇಂಥದರ ಜೊತೆಗೆ ನಾವೇನು ಮಾತಾಡುತಿದ್ದೆವೆಯೋ ಅಂತ ಮನಸ್ಥಿತಿಯಾ ಪೋಷಣೆ ಸಹ ನಡೆಯುತ್ತಿತ್ತು. ಮತ್ತೆ ಅದು ಹೆಣ್ಣುಮಕ್ಕಳ ಕ್ಷೇಮ ಮತ್ತು ಹಿತಚಿಂತನೆಗಾಗಿ ಎಂಬ ನಂಬಿಕೆ ಹಿಂದೆಯೂ… ಈಗಲೂ ಇರುವುದು. ಅಂಥದ್ರಲ್ಲಿ ಎಲ್ಲೋ ಸಿಕ್ಕಿದ ಲಂಕೇಶ್ ಎಂಬ ಪತ್ರಿಕೆ, ಅಲ್ಲಿನ ಬರಹಗಳು ತೂರಿದ ಬೆಳಕು ನಿಧಾನಕ್ಕೆ ನಮ್ಮನ್ನು ಬುರ್ಕಾ (ಮನಸಿಗೆ ಹಾಕಿದ್ದು) ದ ಒಳಗಿಂದ ಇಣುಕಲು ಪ್ರೇರೇಪಿಸಿತು…

ಇದನೆಲ್ಲ ನಾನು ಯಾಕೆ ಹೇಳುತಿದ್ದೆನೆಂದರೆ ದಿನೇಶ್ ಸರ್ ಆ ಕಾರ್ಯಕ್ರಮಕ್ಕೆ ಹೋಗಿದ್ರಿಂದ ಅದರ ಸಂಘಟಕರು, ಅಷ್ಟೇ ಯಾಕೆ ಅಲ್ಲಿ ಸೇರಿದ ಅಸಂಖ್ಯಾತ ಮಂದಿಯ ದೃಷ್ಟಿ ಕೋನ ಬದಲಾಗಲಾರದು ನನಗೆ ಗೊತ್ತಿದೆ . ಮತ್ತೆ ದಿನೇಶ್ ಸರ್ ಕೂಡ ಇಷ್ಟು ವರ್ಷದಲ್ಲಿ ಎಲ್ಲೂ ಯಾರ ಅಮಿಷಕ್ಕು ಸಿಲುಕದವರು ಜಮಾತೆಯವ್ರ ಆಮಿಷಕ್ಕೆ ಸಿಲುಕುವ ಸಾಧ್ಯತೆಯೇ ಇಲ್ಲ ಇದು ನಿನಗೂ ಗೊತ್ತಿದೆ. naveen-shettyಆದರೆ ನವೀನ ಅಲ್ಲಿ ಬುರ್ಖಾದಡಿ ಮುಖ ಮರೆಸಿ ಕೂತಿದ್ದರಲ್ಲ (ಅಥವಾ ಅವರನ್ನು ಹಾಗೆ ಮಾಡಿ ಕೂರಿಸಲಾಗಿತ್ತು) (ಮತ್ತೆ ಸರ್ ಬರೆದ ಮಾತುಗಳನ್ನು ಓದಿ ಜೋರು ನಗು ಬಂತು ಸಂಘಟಕರು ಹೇಳಿದರಂತೆ ಮೊದಲೆಲ್ಲ ಹೆಣ್ಣುಮಕ್ಕಳು ಎಲ್ಲೋ ಮೂಲೆಯಲ್ಲಿ ಮುಖ ಮರೆಸಿ ಕೂತಿರುತಿದ್ದರು ಈ ಹೊತ್ತು ವೇದಿಕೆಯ ಎದುರಿಗೆ ಕೂರುವ ದೈರ್ಯ ಮಾಡಿದಾರೆ ….’ ಅಲ್ಲ ದಿನೇಶ್ ಸರ್ ಅದನ್ನು ಬಹಳ ಹೆಮ್ಮೆಯಿಂದ ನೀವು ಅವರ ಮಾತುಗಳನ್ನು ಕಾಣಿಸಿದಿರಲ್ಲ ನಿಜಕ್ಕೂ ಆ ಹೆಣ್ಣುಮಕ್ಕಳೇ ಮುದುಡಿ ಕಣ್ಣಿಗೆ ಕಾಣದಂತೆ ಕೂತಿದ್ದರೆ ಅಥವಾ ಅವರನ್ನು ಹಾಗೆ ಮಾಡಲಾಗಿತ್ತೆ ? ಹೋಗಲಿ ಈಗ ಕೂಡ ಅವರಿಸ್ಟದಂತೆ ಆ ಹೆಣ್ಣುಮಕ್ಕಳು ಅಲ್ಲಿ ಇದ್ದಾರೆಂದು ನಿಮಗೆ ಅನ್ನಿಸುತ್ತದೆಯೇ? ಆದರೆ ಇಸ್ಟಾದರು ಸಾದ್ಯವಾದ್ದು ದೊಡ್ಡದೇ) ಆ ಹೆಣ್ಣು ಮಕ್ಕಳಲ್ಲಿ ಒಂದೈದಾರು ಮಂದಿಯಾದರೂ ದಿನೇಶ್ ಸರ್ ಮಾತಿನಿಂದ ಪ್ರೇರೇಪಿತರಾಗಿ ಇವರು ಬರೆದಿದ್ದನೆಲ್ಲ ಓದುವ ಕುತೂಹಲಕ್ಕೆ ಸಿಲುಕಿದರೆ ಅದು ತರುವ ಬದಲಾವಣೆ ದೊಡ್ಡದು ನವೀನ್ . ಅದಕ್ಕಾಗಿ ಸರ್ ಅಲ್ಲಿ ಹೋಗಿ ಮಾತಾಡಿದ್ದು ಇಷ್ಟಕಾದರು ಕಾರಣವಾಗಬಲ್ಲದಾದರೆ ಅದು ದೊಡ್ಡ ಬದಲಾವಣೆಯೇ ಎಂಬುದು ನನ್ನ ಸ್ಪಸ್ಟ ಅಭಿಪ್ರಾಯ. `ಮುಸ್ಲಿಂ ಲೇಖಕರ ಸಂಘ ಮತ್ತು ಜಮಾತೆ ಮತ್ತು ಶಾಂತಿ ಪ್ರಕಾಶನ ಎಲ್ಲವು ಒಂದೇ ಬೇರಿನ ಬೇರೆ ಬೇರೆ ಕವಲುಗಳು’ ಎಂದು ನವೀನ್ ಸೂರಿಂಜೆ `ಅಲ್ಲವೇ ಅಲ್ಲ. ನಾನು ಹೋಗಿದ್ದು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಅದಕ್ಕೂ ಜಮಾತೆಗು ಸಂಬಂಧವೇ ಇಲ್ಲ’ ಎಂದು ದಿನೇಶ್ ಮಟ್ಟು ಹೇಳುತಿದ್ದಾರೆ . ನವೀನ್ ಅವರೆಡರ ನಡುವಿನ ಸಂಬಂದಕ್ಕೆ ಬೇಕಾದ ಸಾಕ್ಷ್ಯಗಳನ್ನು ಇಟ್ಟಿದಾರೆ… ಆದರೆ ದಿನೇಶ್ ಸರ್ ಅವರನ್ನು ಲೇಖಕರ ಸಂಘದ ಕಾರ್ಯಕ್ರಮಕ್ಕೆ ಸಂಘಟಕರು ಕರೆದರು. ಸರ್ ಅಲ್ಲಿಗೆ ಹೋಗಿದಾರೆ ಮಾತಾಡಿ ಬಂದಿದ್ದಾರೆ… ಅಲ್ಲಿ ಜಮಾತೆಯವ್ರ ವಿಷಯ ಬಂದಿಲ್ಲದೇ ಇರೋದ್ರಿಂದ, ಸರ್ ಮುಸ್ಲಿಂ ಲೇಖಕರ ಸಂಘವನ್ನು ಉದ್ದೇಶಿಸಿ ಮಾತಾಡಿದ್ರಿಂದ ಅವರಿಗೆ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ತಾನು ಹೋಗಿದ್ದು ಅಸ್ಟೆ ಎಂಬ ನಂಬಿಕೆ ಇದೆ. ನಾವು ಈಗ ಏನೇ ಸಾಕ್ಷ್ಯಾಧಾರ ಪುರಾವೆಗಳನ್ನು ಒದಗಿಸಿ ಅವೆರಡು ಸಂಸ್ಥೆಗಳು ಒಟ್ಟಿಗಿದಾವೆ ಎಂಬುದನ್ನು ನಿರುಪಿಸಬಹುದು ಆದರೆ ಅವು ಒಂದೇ ಅಲ್ಲ ಎನ್ನುವ ನಂಬಿಕೆಯಿಂದ ದಿನೇಶ ಸರ್ ಅಲ್ಲಿಗೆ ಹೋಗಿ ಮಾತಾಡಿ ಬಂದಮೇಲು ಅದೇ ನಂಬಿಕೆ ಅವರದಾಗಿ ಉಳಿದಿದಿದ್ದರೆ… ಮತ್ತಲ್ಲಿ ಅವರಿಗೆ ಅಂತ ಯಾವ ಪುರಾವೆಗಳು ದೊರೆಯದರಿಂದ ಅವರ ನಂಬಿಕೆ ಸುಳ್ಳು ಎಂದು ನಂಬಿಸುವ ಪ್ರಯತ್ನಕಿಂತ ಅವರ ನಂಬಿಕೆಯನ್ನು ಗೌರವಿಸೋಣ. ಮತ್ತು ಅವರ ನಂಬಿಕೆಯೇ ಸತ್ಯವಾಗಲಿ ಎಂದು ಆಶಿಸೋಣ.

ತೀರ ಸಾಕ್ಷಿಗಳನ್ನು ಹಿಡಿದು ಇಲ್ಲಿ ನೋಡಿ ಇಲ್ಲಿದೆ ಸಾಕ್ಷಿ… ಅಂತೆಲ್ಲ ಮುಖಕ್ಕೆ ಹಿಡಿಯುವ ಕೆಲಸ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ… ಏನಕ್ಕೂ ಸಾಕ್ಷಿ ಕಲೆ ಹಾಕಬಹುದು ಎಂಬುದು ನಮಗೆಲ್ಲ ನೆನಪಿರಬೇಕು. ಒಬ್ರಿಗೆ ಸಾಕು ನಾನು ಹೇಳುವುದೆಲ್ಲ ಹೇಳಿಯಾಗಿದೆ ಅನಿಸಿದರೆ ಅದಕ್ಕೂ ಅವಕಾಶವಿರಬೇಕು ಮತ್ತು ಇನ್ನೊಬ್ರಿಗೆ ನಾನು ಹೇಳುವುದೇನೋ ಉಳಿದಿದೆ ಅನಿಸಿದರೆ ಅದಕ್ಕೂ ಅವಕಾಶ ಇರಬೇಕು. ಇಬ್ಬರೂ ಪ್ರಬುದ್ದರಾಗಿ ಯೋಚಿಸುವರಿದ್ದಾಗ ಒಬ್ರ ಮೌನವನ್ನು ಇನ್ನೊಬ್ಬರ ಮಾತು ಮುರಿಯುವಂತೆ ಮಾಡಬಾರದು. ಇದು ಇಬ್ಬರು ಪ್ರಬುದ್ಧರ ನಡುವಿನ ಸಂವಾದ. ಈ ಹೊತ್ತಿನ ಅತ್ಯಗತ್ಯ ಕೂಡ. ಆದರೆ ಜಾಸ್ತಿ ಎಳೆದರೆ ಮೂಲ ಉದ್ದೇಶವೇ ಮರೆಯಾಗುವ ಸಾದ್ಯತೆ ಇರುತ್ತದೆ.

ಕೊನೆಯದಾಗಿ ಸಿದ್ದಾಂತದ ಮಡಿವಂತಿಕೆ ಬಿಡಬೇಕೆ ಬೇಡವೇ ಎಂಬುದಕಿಂತ ಮುಖ್ಯವಾಗಿ ನಾವೆಲ್ಲಾ ನಂಬಿರುವ ಪ್ರಗತಿಪರ ಸಿದ್ದಾಂತದ ಪ್ರಸಾರವಾಗಲಿ ಎಂದು ಆಶಿಸುವವಳು ನಾನು. ಯಾಕೆಂದರೆ ಹೆಣ್ಣು ದನಿಯ ಅಭಿವ್ಯಕ್ತಿಗೆ ತಳಹದಿಯೇ ಅದು. ಎಲ್ಲರಿಗೂ ಮಹಿಳಾ ದಿನದ ಶುಭಾಶಯಗಳು.

ಭೈರಪ್ಪನವರ ’ಕವಲು’ ನಾನೇಕೆ ನಿರಾಕರಿಸುತ್ತೇನೆ?


– ರೂಪ ಹಾಸನ


 

[ಇಂದು ಮತ್ತೆ ಮಹಿಳಾ ದಿನಾಚರಣೆ ಬಂದಿದೆ. ಇದು ಮಹಿಳಾ ಬದುಕಿನ ಅವಲೋಕನದ ಜೊತೆಗೆ ಮಹಿಳೆಯೆಡೆಗಿನ ಪುರುಷ ಪ್ರಪಂಚದ ಧೋರಣೆಯ ಅವಲೋಕನವೂ ಆಗಿರುತ್ತದೆಂದು ನಾನು ಭಾವಿಸುತ್ತೇನೆ. ಆ ಹಿನ್ನೆಲೆಯಲ್ಲಿ ಈ ಬರಹ.]

ಕನ್ನಡದ ಹಿರಿಯ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ ’ಕವಲು’ ವಾರದೊಳಗೆ ನಾಲ್ಕನೆಯ ಮುದ್ರಣ ಕಂಡ ಹಿನ್ನೆಲೆಯಲ್ಲಿ 2010 ಜುಲೈ ಒಂದರಂದು ಪ್ರಜಾವಾಣಿಯಲ್ಲಿ ಅವರ ಕಿರು ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ಕಾದಂಬರಿಯ ಪಾತ್ರವೊಂದು ’ಓದಿದ ಗಂಡಸರೆಲ್ಲಾ ಹೆಂಗಸರಾಗ್ತಾರೆ. ಓದಿದ ಹೆಂಗಸರೆಲ್ಲಾ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು’ ಎನ್ನುತ್ತದೆ, ಅದು ಸತ್ಯವೂ ಆಗುತ್ತಿದೆ ಎಂದು ಭೈರಪ್ಪನವರು ಕಳವಳಿಸಿದ್ದರು! ಅದನ್ನು ಓದಿ ಬೆಚ್ಚಿಬಿದ್ದಿದ್ದೆ. bhyrappa-Kavaluಜೊತೆಗೆ ’ಮಹಿಳಾಪರ ಕಾನೂನುಗಳು ಶೇಕಡ 98 ರಷ್ಟು ದುರ್ಬಳಕೆ ಆಗುತ್ತಿವೆ, ಇದರಿಂದ ಇಡೀ ಭಾರತೀಯ ಕುಟುಂಬದಲ್ಲಿ ಆಗುತ್ತಿರುವ ಬದಲಾವಣೆಗಳು, ತಲ್ಲಣಗಳೇ ತಮ್ಮ ಕಾದಂಬರಿಯ ವಸ್ತು’ ಎಂದು ಅವರು ಹೇಳಿದ್ದು ಕೇಳಿ ಉಗ್ರ ಕುತೂಹಲದಿಂದ ಅಂದೇ ಕಷ್ಟಪಟ್ಟು ಪುಸ್ತಕ ಸಂಪಾದಿಸಿ ಎರಡೇ ದಿನಕ್ಕೆ ಕವಲು ಓದಿ ಮುಗಿಸಿದ್ದೆ.

ಪುಸ್ತಕ ಓದಿ ಮುಚ್ಚಿಟ್ಟ ನಂತರ, ಈ ಕಾದಂಬರಿಯಲ್ಲಿ ವಿಶೇಷವೇನಿದೆ? ಎಂದು ಪ್ರಶ್ನಿಸಿಕೊಂಡರೆ ನಿಜಕ್ಕೂ ಅಂಥದ್ದೇನೂ ವಿಶೇಷ ಕಾಣಲಿಲ್ಲ. ಭೈರಪ್ಪನವರ ಮಾಮೂಲಿ ಪುರುಷ ಮೂಲಭೂತವಾದಿ ಮನಸ್ಸಿನ ಪಾರದರ್ಶಕ ದರ್ಶನವಷ್ಟೇ! ಪುಸ್ತಕದಿಂದ ಭೈರಪ್ಪನವರ ಹೆಸರು ತೆಗೆದು ಹಾಕಿದರೆ ಅದೊಂದು ಪೂರ್ವಗ್ರಹ ಪೀಡಿತವಾದ ಮನಸ್ಸಿನ ಯಾರೂ ಬರೆಯಬಹುದಾದ ಸಾಮಾನ್ಯವಾದ ಕಾದಂಬರಿ. ಇಂತಹದ್ದೇ ವಿಷಯದ ಹಲವು ಕಾದಂಬರಿಗಳನ್ನು ಹಲವಾರು ಬರಹಗಾರರು ಈಗಾಗಲೇ ಬರೆದಿದ್ದಾರೆ. ಇಲ್ಲಿ ಭೈರಪ್ಪನವರ ಹೆಗ್ಗಳಿಕೆಯೆಂದರೆ ಮಹಿಳಾಪರ ಕಾನೂನುಗಳನ್ನು ಯಾವ ರೀತಿಯೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದೆಂಬುದರ ಅತ್ಯಂತ ಸೂಕ್ಷ್ಮ ವಿವರಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿ ತಮ್ಮ ಕಾದಂಬರಿಯಲ್ಲಿ ಚಿತ್ರಿಸಿ, ಅದರ ಅವಶ್ಯಕತೆಯಿರುವ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಿದ್ದಾರೆ! ಅದಕ್ಕೆ ಅವರಿಗೆ ಧನ್ಯವಾದ ಹೇಳಬೇಕು.

ಕಾದಂಬರಿಯಲ್ಲಿ ಅವರು ಚಿತ್ರಿಸಿರುವ ಮಹಿಳಾ ಖಳಪಾತ್ರಗಳಂಥಾ ವ್ಯಕ್ತಿಗಳು ನಮ್ಮ ಮಧ್ಯೆ ಇಲ್ಲದಿಲ್ಲ. ಆದರೆ ಅಂಥವರ ಸಂಖ್ಯೆ ಅತ್ಯಲ್ಪ. ನಮ್ಮ ಕಿರುತೆರೆ ಧಾರಾವಾಹಿಗಳಲ್ಲಿ ಭೈರಪ್ಪನವರಿಗಿಂಥಾ ಕೆಟ್ಟದಾಗಿ ಖಳನಾಯಕಿಯರ ಪಾತ್ರಗಳಲ್ಲಿ ಹೆಣ್ಣನ್ನು ಚಿತ್ರಿಸಲಾಗುತ್ತಿದೆ. ನಾವು ಸುಮ್ಮನಿದ್ದೇವೆ. ಏಕೆಂದರೆ ಅದು ಮನರಂಜನೆಗಾಗಿ ಮಾತ್ರ ಎಂಬ ರಿಯಾಯಿತಿಯಿಂದ. ಆದರೆ ’ಕಾಲ್ಪನಿಕ’ವಾದ ಈ ಕವಲು ಕಾದಂಬರಿಯ ಕಥೆ ಹಾಗೂ ಅಲ್ಲಿ ಚಿತ್ರಿತವಾಗಿರುವ ನೆಗೆಟೀವ್ ಸ್ತ್ರೀ ಪಾತ್ರಗಳು ಸುಮ್ಮನೇ ಹುಟ್ಟಿಕೊಂಡವಲ್ಲ. ಅದು ಕೇವಲ ಮನರಂಜನೆಗೆ ಬರೆದ ಕಾದಂಬರಿಯೂ ಅಲ್ಲ. ಅದರ ಹಿಂದೆ ಮಹಿಳಾ ಅರಿವಿನ ವಿಸ್ತರಣೆಯ ವಿರೋಧಿಯಾದ ಒಂದು ಮನಸ್ಸಿದೆ. alva-nudisiri-baraguru-bhairappaಅದು ಮನು ಹೇಳುವಂಥಾ ’ಹೆಣ್ಣು ಕ್ಷೇತ್ರ. ಗಂಡು ಕ್ಷೇತ್ರಾಧಿಪತಿ’ಎಂಬ ನಿಲುವನ್ನು ಅಕ್ಷರಶಃ ಒಪ್ಪಿಕೊಂಡ ಮನಸ್ಸು. ಒಟ್ಟಾರೆ ಭೈರಪ್ಪನವರ ನಿಲುವು, ಕಾದಂಬರಿಯ ಧೋರಣೆ, ಸಂದೇಶಗಳು, ಪೂರ್ವ-ಪರ ಚಿಂತನೆಯಿಲ್ಲದೇ ಆಕ್ರಮಣ ಮಾಡುವ ಸೈನಿಕ ನಿಲುವಿನಿಂದ ಕೂಡಿರುವುದೇ, ಕಾದಂಬರಿ ಕುರಿತು ಚರ್ಚೆಯನ್ನು ಹುಟ್ಟುಹಾಕುವುದಕ್ಕೆ ಮುಖ್ಯ ಕಾರಣವಾಗಿವೆ.

ಇದಕ್ಕೆಲ್ಲಾ ಮುಖ್ಯ ಹೊಣೆಗಾರರು ಭೈರಪ್ಪನವರೇ. ಏಕೆಂದರೆ, ಕಾದಂಬರಿ ಬರೆದು ಅವರು ಸುಮ್ಮನಾಗಿಬಿಡುವುದಿಲ್ಲ. [ಅಥವಾ ಭೈರಪ್ಪ ಫ್ಯಾನ್ ಮತ್ತು ಮಾಧ್ಯಮಗಳು ಅವರು ಸುಮ್ಮನಿರಲು ಬಿಡುವುದಿಲ್ಲ!] ತಮ್ಮ ಕಾದಂಬರಿಯಾಚೆಗೂ ಅವರು ಅಲ್ಲಿನ ಪಾತ್ರಗಳಿಂದ ಹೇಳಿಸಿದ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಾರೆ, ಅದನ್ನು ತಮ್ಮ ಚರ್ಚೆಗಳಲ್ಲಿ ಪುಷ್ಟಿಗೊಳಿಸುತ್ತಾರೆ, ತಮ್ಮ ಮೂಗಿನ ನೇರಕ್ಕೇ ಅಂಕಿ ಅಂಶಗಳನ್ನು ಕಲೆ ಹಾಕಿ ತಮ್ಮ ಸೈನಿಕ ಆಕ್ರಮಣದ ವಾದವನ್ನೇ ಅಂತಿಮ ಸತ್ಯವೆಂದು ಪ್ರತಿಪಾದಿಸುತ್ತಾರೆ. [ಹೀಗಾಗಿಯೇ ನಾವೂ ಅವರ ಕಾದಂಬರಿಯಾಚೆಗೆ ಹೋಗಿಯೇ ಅವರ ಇಂತಹ ಏಕಪಕ್ಷೀಯ ವಾದವನ್ನು ವಿಶ್ಲೇಷಿಸಬೇಕಾಗುತ್ತದೆ, ಚರ್ಚಿಸಬೇಕಾಗುತ್ತದೆ.] ಅವರ ಬುದ್ಧಿಪೂರ್ವಕ ಯೋಚನೆ ಹಾಗೂ ಯೋಜನೆಯಂತೆಯೇ ಕಥೆ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ, ತರ್ಕಬದ್ಧವಾಗಿ ರೂಪಿತವಾಗುತ್ತದೆ. ಮತ್ತು ಅವರು ನಂಬಿರುವ ತತ್ವಕ್ಕನುಗುಣವಾಗಿಯೇ ಅಂತ್ಯ ಕಾಣುತ್ತದೆ. ಅವರ ಕಾದಂಬರಿ ಬಿಡುಗಡೆಗೆ ಮೊದಲೇ ಮಾಧ್ಯಮಗಳು ಕಥೆಯ ವಸ್ತುವನ್ನು ಅತಿ ರಂಜಿಸಿ ಪ್ರಚಾರ ಮಾಡಿಬಿಡುತ್ತವೆ. ತಮ್ಮದೇ ಆದ ಇಂತಹ ಪ್ರಚಾರ ತಂತ್ರ, ಅದರ ಸಮರ್ಥ ನೆಟ್‌ವರ್ಕಿಂಗ್‌ನಿಂದಾಗಿ ಅವರ ಅಭಿಮಾನಿಗಳು ಕಾದಂಬರಿ ಓದಿದರೆ, ಎಲ್ಲಕ್ಕಿಂಥಾ ಮುಖ್ಯವಾಗಿ ಅವರ ಸಮಷ್ಠಿ ಬದಲಾವಣೆಯ ವಿರೋಧಿ ನಿಲುವಿನಿಂದಾಗಿ ಇಷ್ಟವಿರಲೀ ಬಿಡಲಿ, ಅವರ ಅಭಿಮಾನಿಯಿರಲೀ, ವಿರೋಧಿಸುವವರಿರಲಿ ಅವರ ಕಾದಂಬರಿಯನ್ನು ಓದಲೇಬೇಕೆಂಬ ಅನಿವಾರ್ಯ ತುರ್ತು ನನ್ನಂಥವರಿಗೆ ಹುಟ್ಟಿಬಿಡುತ್ತದೆ! [ಹುಟ್ಟಿಸಲಾಗುತ್ತದೆ.] ನಾವು ಮುಖ್ಯವಾಗಿ ವಿರೋಧಿಸಬೇಕಿರುವುದು ಸತ್ಯಕ್ಕೆ ಹಲವು ಮುಖಗಳಿರುವುದನ್ನು ಒಪ್ಪದೇ ಕಾದಂಬರಿಯಲ್ಲಿ ಪ್ರತಿಪಾದಿತವಾಗುವ ತಮ್ಮ ವೈಯಕ್ತಿಕ ನಿಲುವನ್ನೇ ಅಂತಿಮ ಸತ್ಯವೆನ್ನುವಂತೆ ವೈಭವೀಕರಿಸುವ, ಎತ್ತಿಹಿಡಿಯುವ ಭೈರಪ್ಪನವರ ಈ ಮನೋಧರ್ಮವನ್ನು.

ನಾವೂ ವಿನಾಕಾರಣ ಇಂಥಹ ಋಣಾತ್ಮಕ ನೆಲೆಯ ಕಾದಂಬರಿಯ ಕುರಿತು ಚರ್ಚಿಸಿ ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತಿದ್ದೇವೇನೋ ಎಂಬ ಆತಂಕ ನನ್ನಂತೆಯೇ ಅನೇಕರನ್ನು ಕಾಡಿರಬಹುದು. ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡಲಾರಂಭಿಸಿದ 70ರ ದಶಕದಿಂದಾ ಇಂದಿನವರೆಗೆ ನಾಲ್ಕು ದಶಕಗಳೇ ಕಳೆದಿವೆ. ಅನೇಕ ಲೇಖಕಿಯರು [ಮಾತ್ರವಲ್ಲ ಲೇಖಕರೂ] ಸ್ತ್ರೀ ಸಂವೇದನೆಯ ನೆಲೆಯಲ್ಲಿ, ಮಹಿಳೆಯ ಅನನ್ಯತೆ, ವಿಭಿನ್ನತೆಯನ್ನು ವಿವಿಧ ಪ್ರಕಾರದ ತಮ್ಮ ಅಭಿವ್ಯಕ್ತಿಯಲ್ಲಿ ಸೂಕ್ಷ್ಮವಾಗಿ, ಅಷ್ಟೇ ವಿವೇಕಯುತವಾಗಿ ಕಟ್ಟಿಕೊಡುತ್ತಾ ಬಂದಿದ್ದಾರೆ. women-gp-membersಅಂತಹ ಬರಹಗಳನ್ನು ಈ ಕವಲು ಕಾದಂಬರಿಗೆ ಮಾಡುತ್ತಿರುವಂತೆ ಸಮಗ್ರವಾಗಿ ವಿಶ್ಲೇಷಿಸಿ, ಚರ್ಚಿಸಿ ಪ್ರೋತ್ಸಾಹಿಸುವಂತಹ ಧನಾತ್ಮಕ ಕೆಲಸವನ್ನು ನಾವೆಲ್ಲಿ ಮಾಡಿದ್ದೇವೆ? ಒಟ್ಟಾರೆಯಾಗಿ ಈ ನಾಲ್ಕು ದಶಕಗಳಲ್ಲಿ ಹೆಣ್ಣಿನ ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಯತ್ನದ ಮಹಿಳಾ ಅಭಿವ್ಯಕ್ತಿಗೆ ನಾವೇ ಎಲ್ಲಿ ಮಾನ್ಯತೆ ನೀಡಿದ್ದೇವೆ? ಸಮಗ್ರವಾಗಿ ಅಂತಹುದ್ದನ್ನು ದಾಖಲಿಸುವ, ನಮ್ಮಲ್ಲಿಯೂ ಇಂಥಹ ಸಮರ್ಥ ಅಭಿವ್ಯಕ್ತಿಗಳು ಬಂದಿವೆ ಎಂದು ಸಮಾಜಕ್ಕೆ ಕಾಣುವಂತೆ ಅದರ ಎದುರು ಎಲ್ಲಿ ಎತ್ತಿಹಿಡಿದಿದ್ದೇವೆ? ಪ್ರದರ್ಶಿಸಿದ್ದೇವೆ? ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಮ್ಮ ಇಂತಹಾ ವಿಭಿನ್ನ, ಅನನ್ಯ ಅಭಿವ್ಯಕ್ತಿಗಳು ಸರಿಯಾದ ಕ್ರಮದಲ್ಲಿ ದಾಖಲಾಗದೇ ಉಳಿದುಬಿಟ್ಟವೇ? ಸಕಾರಾತ್ಮಕ ಅಭಿವ್ಯಕ್ತಿಯನ್ನು ಗುರುತಿಸುವ ಕೆಲಸಕ್ಕಿಂಥಾ ನಕಾರಾತ್ಮಕ ಅಭಿವ್ಯಕ್ತಿಯೇ ಸಮಾಜದಿಂದ ಹೆಚ್ಚು ಗುರುತಿಸಲ್ಪಡುತ್ತದೆ ಹಾಗೂ ವಿಜೃಂಭಿಸುತ್ತದೆ ಎಂಬುದು ನಿಜವೇ? ಇದು ಈ ಸಂದರ್ಭದಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆಗಳು.

’ಓದಿದ ಗಂಡಸರೆಲ್ಲಾ ಹೆಂಗಸರಾಗ್ತಿದ್ದಾರೆ, ಓದಿದ ಹೆಂಗಸರೆಲ್ಲಾ ಗಂಡಸರಾಗ್ತಿದ್ದಾರೆ. ಗಂಡಸರು ಗಂಡಸರಾಗಿ, ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಬಾರದು’ ಎಂಬ ಮಾತೇ ಅತ್ಯಂತ ರೂಕ್ಷವಾದ್ದು. ಅವರ ಇಡೀ ಕಾದಂಬರಿಗೆ ಈ ಮಾತುಗಳೇ ಮೂಲಮಂತ್ರ. ಮೂಲತಃ ಈ ಮಾತೇ ಗಂಡು-ಹೆಣ್ಣಿನ ನಡುವಿನ ಅಸಮಾನತೆಯನ್ನು ಎತ್ತಿಹಿಡಿಯುವಂತದ್ದು. ಪ್ರಕೃತಿಯಲ್ಲಿ ಗಂಡು-ಹೆಣ್ಣು ಸಮಾನಜೀವಿಗಳು. ಜೊತೆಗೆ ಸಹಜೀವಿಗಳು. ಈ ಪ್ರಾಕೃತಿಕ ಸತ್ಯವನ್ನು ಅರ್ಥಮಾಡಿಕೊಂಡು ಸಮಾಜ ನಿರ್ಮಾಣಗೊಂಡರೆ ಅಸಮಾನತೆಯ ನೆಲೆಯ ಯಾವ ಸಮಸ್ಯೆಯೂ ಬರುವುದಿಲ್ಲ. ಗಂಡು-ಹೆಣ್ಣು ಪದಗಳು ಲಿಂಗ ಸೂಚಕವೇ ಹೊರತೂ ನಮ್ಮ ಪುರುಷ ಪ್ರಧಾನ ಸಮಾಜ ನಿರ್ದೇಶಿಸುವಂತೆ ಶ್ರೇಷ್ಟತೆ-ಕನಿಷ್ಟತೆಯ ಸೂಚಕವಲ್ಲ. ಆದರೆ ಭೈರಪ್ಪನವರ ಈ ಕಾದಂಬರಿಯುದ್ದಕ್ಕೂ ಈ ಅಸಮಾನತೆಯ ನೆಲೆಯನ್ನು ವೈಭವೀಕರಿಸುವ ಹಲವಾರು ಉದಾಹರಣೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತಲೇ ಹೋಗುತ್ತದೆ. ಕುಟುಂಬ ವಿಘಟನೆಗೆ ಹೆಣ್ಣಿನ ಬೌದ್ಧಿಕತೆ, ಪ್ರಗತಿಪರತೆ, ಲೈಂಗಿಕ ಸ್ವಾತಂತ್ರ್ಯ, Indian-policewomanವೃತ್ತಿ ಔನತ್ಯದ ಕುರಿತ ದೃಢತೆ ಕಾರಣವೆಂದು ಪ್ರತಿಯೊಂದು ಪಾತ್ರದಿಂದಲೂ ಅತ್ಯಂತ ಜಾಣ್ಮೆಯಿಂದ ನಿರ್ದೇಶಿಸುತ್ತಾ ಬಂದಿದ್ದಾರೆ. ಇಂಥಹಾ ಯಾವ ವೈಚಾರಿಕತೆಯೂ ಇಲ್ಲದ ಹೆಣ್ಣುಮಕ್ಕಳು ಗಂಡಿನ ಅನುಯಾಯಿಗಳಾಗಿ, ಆದರ್ಶ ಸ್ತ್ರೀಯರಾಗಿ ಚಿತ್ರಿತವಾಗಿದ್ದಾರೆ. ಈ ಹೊತ್ತಿನಲ್ಲಿ ಸಮಾನ ಗೌರವದ ಸಮಾಜ ನಿರ್ಮಾಣದ ಕನಸು ಕಾಣುತ್ತಿರುವ ಮಹಿಳೆಯಿಂದ ಓಬೀರಾಯನ ಕಾಲದ ಯಥಾಸ್ಥಿತಿವಾದವನ್ನು ಬಯಸುವ ಪುರುಷ ಶ್ರೇಷ್ಟತೆಯ ಭ್ರಮೆಯಲ್ಲಿರುವ ಗಂಡಿನ ಮನಸ್ಥಿತಿಯೂ ಕಾದಂಬರಿಯಲ್ಲಿ ಢಾಳಾಗಿಯೇ ಅನಾವರಣಗೊಳ್ಳುತ್ತದೆ. ಇದರ ಹಿಂದಿನ ಮನೋಭಾವವು ಒಂದು ಶತಮಾನ ಮಿಕ್ಕಿ ನಡೆದ ಭಾರತ ಸಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವದ ಕಲ್ಪನೆ ನಮ್ಮ ಸಂವಿಧಾನ ಮತ್ತು ಮಹಿಳಾ ಹೋರಾಟ ನಡೆದು ಬಂದ ಹಾದಿಯಿಂದ ಒಂದು ಶತಮಾನದಷ್ಟು ಹಿಂದೆ ಸರಿದಿದೆ. ಇಷ್ಟು ಹೇಳಿದರೆ ಸಾಕು ಭೈರಪ್ಪನವರು ಇನ್ನೂ ಎಲ್ಲಿದ್ದಾರೆ ಎಂಬುದು ಅರ್ಥವಾಗಿಬಿಡುತ್ತದೆ.

ಹೆಣ್ಣನ್ನು ಸಂಗಾತಿಯೆಂದು, ಸಹಜೀವಿಯೆಂದು ಮೇಲುನೋಟಕ್ಕೆ ತೋರಿಕೆಯ ನಟನೆಯಾಡುತ್ತಾ ಒಳಗೇ ಪುರುಷ ಪ್ರಭುತ್ವದ ಸ್ಥಾಪಿತ ಮೌಲ್ಯಗಳನ್ನು ಒಪ್ಪಿಕೊಂಡಿರುವ, ಹೊಂದಾಣಿಕೆ ತನ್ನ ನೆಲೆಯಿಂದ ಸಾಧ್ಯವೇ ಇಲ್ಲವೆಂದು ಉದ್ದೇಶಿಸಿರುವ ಗಂಡು ಮನಸ್ಸಿನ ಅಹಂ ಹಾಗು ಮೇಲರಿಮೆಯನ್ನು ಪ್ರಾಮಾಣಿಕವಾಗಿ ಚಿತ್ರಿಸುತ್ತಾ ಕವಲು ಮೂಲಕ ಭೈರಪ್ಪನವರು ತಮ್ಮ ಪುರುಷ ಮೂಲಭೂತವಾದಿ ಮನಸ್ಸಿನ ದರ್ಶನ ಮಾಡಿಸುತ್ತಾರೆ. ಜೊತೆಗೇ, ಅವರು ತಾವು ನಂಬಿದಂತಾ ನಿಲುವನ್ನು ಯಾವುದೇ ಮುಖವಾಡವಿಲ್ಲದೆಯೂ ಪ್ರತಿಪಾದಿಸುತ್ತಾರಲ್ಲ! ಅದಕ್ಕಾಗಿಯಾದರೂ ಅವರನ್ನು ಅಭಿನಂದಿಸಲೇಬೇಕು.

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಆಗುತ್ತಿರುವ ಪಲ್ಲಟಗಳಿಗೆಲ್ಲಾ ಹೆಣ್ಣನ್ನೇ ಕಾರಣವಾಗಿಸಿರುವ ಮೂಲಸಂಸ್ಕೃತಿರಕ್ಷಕರಾದ ಭೈರಪ್ಪನವರಿಗೆ ನಮ್ಮ ಕುಟುಂಬ ವ್ಯವಸ್ಥೆ ನಿಂತಿರುವುದೇ ಅಸಮಾನತೆಯ ಆಧಾರದ ಮೇಲೆ ಎನ್ನುವ ಅರಿವಿಲ್ಲವೇ? ಇಲ್ಲಿ ಹೆಂಡತಿ ಗಂಡನ ಆಜ್ಞಾನುವರ್ತಿ, Indian Women Paintingsಗೃಹಕೃತ್ಯ ನೋಡಿಕೊಳ್ಳುವ ಪರಿಚಾರಕಿ, ಅವನಿಗೆ ವಿಧೇಯಳಾಗಿರಬೇಕೆಂಬುದೇ ನಿಯಮ. ಮದುವೆಯಾಗಿ ಹೆಣ್ಣು ಗಂಡನ ಮನೆಗೆ ಹೋಗಿ ಅಲ್ಲಿನ ಪರಿಸರವನ್ನೇ ತನ್ನ ಪರಿಸರವೆಂದು ನಂಬಿ ಆ ಕುಟುಂಬದ ಎಲ್ಲ ಜವಾಬ್ದಾರಿಯನ್ನೂ [ಗೃಹಕೃತ್ಯ, ಮನೆವಾರ್ತೆ, ಮಕ್ಕಳ-ವೃದ್ಧರ ಪಾಲನೆ…… ಇತ್ಯಾದಿ] ನಿರ್ವಹಿಸಬೇಕೆಂಬ ಕಟ್ಟುಪಾಡಿನಿಂದ ಮೊದಲುಗೊಳ್ಳುವ ಅಸಮಾನತೆಯ ಹಿಂದೆ ನಮ್ಮ ಪುರುಷ ನಿರ್ಮಿತ ಸಮಾಜ ಹಾಗೂ ಸಂಸ್ಕೃತಿಯ ಏಕಪಕ್ಷೀಯ ಸ್ವಾರ್ಥವಿದೆಯೆಂಬುದನ್ನು ಉದ್ದೇಶಪೂರ್ವಕವಾಗಿ ಮರೆತಿದ್ದಾರೆಯೇ? ಕುಟುಂಬ, ಸಮಾಜ, ನೈತಿಕತೆಯ ಚೌಕಟ್ಟುಗಳನ್ನು ಕಾಲದಿಂದ ಕಾಲಕ್ಕೆ ನಮ್ಮ ಪುರುಷಪ್ರಧಾನ ಸಮಾಜ ತನಗೆ ಬೇಕೆಂದಂತೆ ಬದಲಾಯಿಸಿಕೊಳ್ಳುತ್ತಾ ಹೋಗಿರುವುದು ಚರಿತ್ರೆಯ ಅಧ್ಯಯನಕಾರರೂ ಆಗಿರುವ ಭೈರಪ್ಪನವರಿಗೆ ಹೊಳೆದಿಲ್ಲವೇ? ನಮ್ಮ ಈ ಲೋಕ ರಾಜಕಾರಣವನ್ನು ಮೀರಿ ಪ್ರಕೃತಿ ಸತ್ಯಗಳು ಅತ್ಯಂತ ನಿಗೂಢವೂ, ಸಂಕೀರ್ಣವೂ ಆಗಿರುತ್ತದೆ ಅದನ್ನು ಲೈಂಗಿಕ ಸಂಬಂಧವೊಂದರಿಂದಲೇ ಅಳೆಯಲು ಬರುವುದಿಲ್ಲ. ಜೊತೆಗೆ ಬದಲಾವಣೆ ಬಾಳಿನ ನಿಯಮ. ಅದು ಸರಿಯೋ-ತಪ್ಪೋ ನದಿಯಂತೆ ತನಗೆ ಬೇಕೆಂದಂತೆ ಹರಿಯುತ್ತಾ ಹೋಗುತ್ತದೆ. ನಾವು ಹೀಗೇ ಎಷ್ಟೇ ಬಾಯಿ ಬಡಿದುಕೊಂಡರೂ ಅದರ ದಿಕ್ಕು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯದ ಬಗೆಗೆ ಭೈರಪ್ಪನವರಿಗೆ ಜಾಣಕುರುಡೇ?

ಸಾಲಂಕೃತಳಾಗದೇ ಸಹಜವಾಗಿರುವ ಹೆಣ್ಣು ಭೈರಪ್ಪನವರಿಗೆ ಸಂವೇದನೆಗಳಿಲ್ಲದ ಸೂತಕದವಳಂತೆ ಕಾಣುತ್ತಾಳೆ. ಸೂತಕ ಎಂದರೆ ಏನು? ಹೊರಗಿನ ಸೂತಕದ ಮಾತನಾಡುವ ಇವರ ಒಳ ಮನಸ್ಸೇ ನಿಜವಾಗಿ ಸೂತಕದ ಮಡು. ಅದನ್ನು ಸಮಾಜಕ್ಕೂ ಆರೋಪಿಸುತ್ತಿರುವುದು ಅವರ ನಿಂತಲ್ಲೇ ನಿಂತು ಕೊಳೆತು ಹೋಗಿರುವ ಮನಸ್ಸಿನ ಸಂಕೇತ. ಹಾಗಿದ್ದರೆ, ಸೀರೆ, ಕುಂಕುಮ, ಹೂವು, ಬಳೆ, ಸರಗಳಿಂದ ಅಲಂಕಾರ ಮಾಡಿಕೊಳ್ಳದ ವಿಶ್ವದ ಬಹು ಸಂಖ್ಯಾತ ಹೆಣ್ಣುಮಕ್ಕಳಿಗೆ, ಹೆಣ್ಣು ಪ್ರಾಣಿಗಳಿಗೆ ಲೈಂಗಿಕ ಸಂವೇದನೆಗಳು ಇರಲು ಸಾಧ್ಯವೇ ಇಲ್ಲ ಎಂದು ಇದರ ಅರ್ಥವೇ? ಭೈರಪ್ಪನವರದು ಅದೆಂಥಾ ಹಾಸ್ಯಾಸ್ಪದ ನಿಲುವು! ಹೆಣ್ಣು ಸದಾ ಪುರುಷ ನಿರ್ಮಿಸಿದ ಸಂಸ್ಕೃತಿಯ ರಕ್ಷಕಳಾಗಿರಬೇಕೇ ಹೊರತು ಅದನ್ನು ತನ್ನ ನೆಲೆಯಿಂದ ನಿರ್ಮಿಸಿದರೆ ಅಪರಾಧವೆಂಬಂಥಾ ಅಲಿಖಿತ ಕಾನೂನನ್ನು, ಇತ್ತೀಚಿನ ಎಚ್ಚೆತ್ತ ಮಹಿಳೆ ಪ್ರತಿಭಟಿಸುತ್ತಿದ್ದಾಳೆ. ಪ್ರಶ್ನಿಸುತ್ತಿದ್ದಾಳೆ. ತಾನೇ ತನ್ನ ವರ್ತಮಾನ ಕಟ್ಟಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದಾಳೆ ಎಂಬುದು ಭೈರಪ್ಪನವರಂಥಾ ಮನುವಾದಿಗಳಿಗೆ ನುಂಗಲಾರದ ತುತ್ತಾಗುತ್ತಿದೆಯೇ?

ಮಹಿಳಾಪರ ಕಾನೂನುಗಳು ಶೇಕಡ 98 ರಷ್ಟು ಪ್ರಕರಣಗಳಲ್ಲಿ ದುರ್ಬಳಕೆಯಾಗುತ್ತಿವೆ ಎಂದು ಇತ್ತೀಚೆಗಿನ ಸಂಶೋಧನಾ ವರದಿಯೊಂದನ್ನು ಉಲ್ಲೇಖಿಸಿ ಹೇಳಿರುವ ಅವರ ಮಾತು ಎಷ್ಟು ಸತ್ಯ? ಏಕೆಂದರೆ ನಮ್ಮ ದೇಶದ ಶೇಕಡ 90 ರಷ್ಟು ಮಹಿಳೆಯರಿಗೆ ಕಾನೂನಿನ ಅರಿವಿಲ್ಲದಿರುವುದೇ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಶೋಷಿತರಾಗುತ್ತಿರುವುದಕ್ಕೆ ಮುಖ್ಯಕಾರಣ ಎನ್ನುತ್ತದೆ ಮತ್ತೊಂದು ಸಂಶೋಧನಾ ವರದಿ. ಹಾಗೆ ಕಾನೂನಿನ ಅರಿವಿರುವ ಬಹಳಷ್ಟು ಮಹಿಳೆಯರೂ ಭಾರತೀಯ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಬದುಕು, ಘನತೆ, ಸಂಬಂಧಗಳ ಆಪ್ತತೆಯನ್ನು ಹರಾಜಿಗಿಟ್ಟು ಕಾನೂನಿನ ಮೊರೆ ಹೋಗುವುದು ಕಡಿಮೆಯೇ. ಬಹಳಷ್ಟು ವಿಚ್ಛೇದನ ಪ್ರಕರಣಗಳಲ್ಲಿ ಕಾನೂನಿನ ರೀತ್ಯ ಜೀವನಾಂಶ ಕೊಡಬೇಕೆಂದು ತೀರ್ಮಾನವಾಗಿದ್ದರೂ, ಕಾನೂನಿನ ಕಣ್ ತಪ್ಪಿಸಿ ಅದನ್ನು ಕೊಡದೇ ತಪ್ಪಿಸಿಕೊಳ್ಳುವ ಪ್ರಸಂಗಗಳೇ ಹೆಚ್ಚಿವೆ. ಕಾನೂನು ತಜ್ಞರು, ಮಹಿಳಾ ಕಾನೂನಿನ ದುರ್ಬಳಕೆಯ ಪ್ರಮಾಣವನ್ನು ಅಧ್ಯಯನ ಹಾಗೂ ಸಂಶೋಧನೆಗಳ ಮೂಲಕ ಸಾಬೀತು ಪಡಿಸಬೇಕಿದೆ. ತನ್ಮೂಲಕ ಭೈರಪ್ಪನವರು ಎತ್ತಿರುವ ಮೂಲಭೂತ ಆಕ್ಷೇಪಣೆಗೆ ಉತ್ತರ ಹುಡುಕುವ ಪ್ರಯತ್ನಗಳಾಗಬೇಕಿವೆ. ಆದರೆ ಇದರ ಜೊತೆಗೇ ಕಾನೂನಿನ ತೆಕ್ಕೆಗೇ ಬರದೇ ತಾರತಮ್ಯ, ಅಸಮಾನತೆ, ದೌರ್ಜನ್ಯಗಳಿಂದ ನಿತ್ಯ ನರಳುತ್ತಿರುವ ಅಸಂಖ್ಯಾತ ಹೆಣ್ಣುಜೀವಗಳ ಸಂಕಟವನ್ನೂ ಅಧ್ಯಯನ ಮಾಡಿ ಸತ್ಯಾಂಶವನ್ನು ಅರಿಯುವ ಪ್ರಯತ್ನಗಳು ನಡೆಯಬೇಕಿದೆ. ಏಕೆಂದರೆ ನಮ್ಮ ಸಂವಿಧಾನಕ್ಕೆ ಬದ್ಧವಾಗಿ ನಡೆಯುವ ಸಂಕಲ್ಪವನ್ನೇನಾದರೂ ಮಾಡಿಕೊಂಡು, ಹೆಣ್ಣಿನ ದೃಷ್ಟಿಯಿಂದ ವಿವೇಚಿಸಿದರೆ, ಆಗ ಪ್ರತಿ ಮನೆಯೂ ಸಂವಿಧಾನವನ್ನು ಉಲ್ಲಂಘಿಸುತ್ತಿರುವುದು ವೇದ್ಯವಾಗುತ್ತದೆ.

ಸಮಾನತೆಯ ಆಧಾರದಲ್ಲಿ ಇಡೀ ಸಮಾಜದ ಒಟ್ಟು ಬೆಳವಣಿಗೆಗೆ ಪೂರಕವಾದ ಆಶಯವನ್ನು ಉಳ್ಳ ವಿಚಾರಗಳು ಮಾತ್ರ ಘನತೆಯುಳ್ಳವೂ ಗೌರವಿಸಲ್ಪಡುವುವು ಆಗಿರುತ್ತವೆ. ಅದಿಲ್ಲದೇ ಅಪವಾದವೆನ್ನುವಂತಾ ಬೆರಳೆಣಿಕೆಯಷ್ಟಿರುವ, bhyrappaಕವಲು ಕಾದಂಬರಿಯಲ್ಲಿ ಪ್ರಸ್ತಾಪಿತವಾದ ಪೂರ್ವಗ್ರಹ ಪೀಡಿತ ಏಕಮುಖ ವೈಯಕ್ತಿಕ ನಿಲುವುಗಳನ್ನೇ ವೈಭವೀಕರಿಸಿದರೆ ಅದು ಸತ್ಯವಾಗಿಬಿಡುವುದಿಲ್ಲ. ಭೈರಪ್ಪನವರು ಮಹಿಳೆಯರ ಅರಿವು ಹಾಗೂ ಜ್ಞಾನಕ್ಕೆ ಹಿಡಿದಿರುವ ಬಂದೂಕಿನ ನಳಿಕೆ, ಪಕ್ಕದ ದೇಶದವರ ಶತ್ರುತ್ವಕ್ಕಿಂಥಲೂ ಅಪಾಯಕಾರಿಯಾದುದು! ಯಾವುದೇ ಪ್ರಬುದ್ಧ ಸಾಹಿತಿ-ಕಲಾವಿದನ ಮಾಗಿದ ವಯಸ್ಸು, ಪ್ರತಿಭೆ, ಕಲೆಗಾರಿಕೆ, ಕಥನ ಕೌಶಲದಿಂದ ಸಮಚಿತ್ತವಾದ, ವಿಶ್ವಾತ್ಮಕ ನಿಲುವಿನ, ಸಾಂಸ್ಕೃತಿಕ ಸೂಕ್ಷ್ಮತೆ ಹಾಗೂ ಮಾನವೀಯ ಸಂವೇದನೆಯ ಅಭಿವ್ಯಕ್ತಿಯನ್ನು ಸಮುದಾಯ ಸದಾ ನಿರೀಕ್ಷಿಸುತ್ತದೆ. ಯಾವುದೇ ಅಭಿವ್ಯಕ್ತಿ ವೈಯಕ್ತಿಕ ನೆಲೆಯದಾದರೂ ಅದಕ್ಕೊಂದು ಸಮಷ್ಟಿ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದರೆ ಅದನ್ನು ನಿರಾಕರಿಸುವ ಹಾಗೂ ತಿರಸ್ಕರಿಸುವುದಕ್ಕಿಂಥಾ ದೊಡ್ಡ ಶಿಕ್ಷೆ ಲೇಖಕನಿಗೆ ಇನ್ನೊಂದಿಲ್ಲ ಎಂಬುದು ನನ್ನ ಭಾವನೆ.

ಮುಸ್ಲಿಂ ಲೇಖಕರ ಸಂಘ – ಜಮಾತೇ ಇಸ್ಲಾಂ ಹಾಗೂ “ಮೂಲಭೂತವಾದ”

– ಇರ್ಷಾದ್

ಜಮಾತೇ ಇಸ್ಲಾಮೀ ಹಿಂದ್ ಸಂಘಟನೆಯ ಪರೋಕ್ಷ ಹಿಡಿತದಲ್ಲಿರುವ ಮುಸ್ಲಿಂ ಲೇಖಕರ ಸಂಘ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಪತ್ರಕರ್ತ ಪ್ರಗತಿಪರ ಚಿಂತಕ ಹಾಗೂ ನಮ್ಮ ಮಾರ್ಗದರ್ಶಕರಾಗಿರುವ ದಿನೇಶ್ ಅಮೀನ್ ಮಟ್ಟು ಅವರ ಭಾಷಣದ ನಿರೀಕ್ಷೆಗಳಲ್ಲಿ ಆರಂಭವಾದ ಚರ್ಚೆಯ ಹಿನ್ನಲೆಯಲ್ಲಿ ಈ ಲೇಖನ ಬರೆಯೋದು ಸಮಯೋಚಿತ ಎಂದನಿಸಿತು. ಜಮಾತೇ ಇಸ್ಲಾಮೀ ಹಿಂದ್ ಸಂಘಟನೆ ಮತ್ತು ಅದರ ಉದ್ದೇಶ ಹಾಗೂ ಆದರ್ಶಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಈ ಹಿಂದೆಯೂ ನಡೆದಿದೆ. jamatಜಾತ್ಯತೀತ ಭಾರತದಲ್ಲಿ ನಮ್ಮದು ಪ್ರಗತಿಪರ ಹಾಗೂ ವಿಶಾಲವಾದದಿಂದ ಕೂಡಿದ ಇಸ್ಲಾಂ ತತ್ವಾದರ್ಶದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯೆಂಬ ಹೆಸರಿನಲ್ಲಿ ಜಮಾತ್ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದೆ. ತಮ್ಮ ಕಾರ್ಯತಂತ್ರದಲ್ಲಿ ಅದು ಯಶಸ್ಸನ್ನೂ ಕಾಣುತ್ತಿದೆ. ಮುಸ್ಲಿಂ ಸಮಾಜದಲ್ಲಿ ಇಸ್ಲಾಂ ಸನಾತನವಾದವನ್ನು ಪ್ರತಿಪಾದಿಸುವ ಜಮಾತ್ ಹೊರವಲಯದಲ್ಲಿ ತಮ್ಮನ್ನು ಜ್ಯಾತ್ಯಾತೀತವಾದಿ ಹಾಗೂ ಪ್ರಗತಿಪರ ಎಂದು ಬಿಂಬಿಸಿಕೊಳ್ಳುತ್ತಿರುವ ರೀತಿ ನೀತಿಗಳ ಕುರಿತಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಚರ್ಚೆ ನಡೆಸಬೇಕಾದ ಅಗತ್ಯ ಇದೆ.

ಭಾರತೀಯ ಮುಸ್ಲಿಮರು ಶಾಂತಿ ಪ್ರಿಯರು. ಬಹುಸಂಸ್ಕೃತಿಗೆ ಒಗ್ಗಿಕೊಂಡು ಜೀವನ ನಡೆಸುವವರು ಎಂಬುವುದನ್ನು ನಾಡಿಗೆ ಸಾಬೀತು ಪಡಿಸಿದವರೇ ಸೂಫಿ ಸಂತರು. ಅರಬ್ ನಾಡಿನಲ್ಲಿ ಹುಟ್ಟಿದ ಇಸ್ಲಾಂ ಧರ್ಮವನ್ನು ಭಾರತಕ್ಕೆ ತಂದವರೇ ಈ ಸೂಫಿ ಸಂತರು. ಜನರ ನೋವು ನಲಿವುಗಳಿಗೆ ಸ್ಪಂದಿಸಿ ಅವರಲ್ಲಿ ತಾವೂ ಒಬ್ಬರಾಗಿ ಧರ್ಮದ ಸಾರವನ್ನು ಭಿತ್ತಿ ಎಲ್ಲಾ ಧರ್ಮ ತತ್ವಾದರ್ಶಕರುಗಳ ಜೊತೆಗೂಡಿ ಸಹಭಾಳ್ವೆ ನಡೆಸಿದವರು. ಬಾಬಾ ಬುಡನ್ ಗಿರಿ, ಬಂದೇ ನವಾಜ್, ಅಜ್ಮೀರ್ ಚಿಸ್ತಿ ಸೇರಿದಂತೆ ಭಾರತದಾದ್ಯಂತ ಇರುವ ಸಾಕಷ್ಟು ಸಂತರ ದರ್ಗಾಗಳು ಇಂದಿಗೂ ಬಹುಸಂಸ್ಕೃತಿಯ ಬೀಡಾಗಿವೆ. ಈ ದರ್ಗಾಗಳಿಗೆ ಮುಸ್ಲಿಮರು ಬರುತ್ತಾರೆ ಹಿಂದೂಗಳೂ ಬರುತ್ತಾರೆ. ಇದನ್ನು ಹಿಂದೂ ಮುಸ್ಲಿಂ ಎಂಬ ಪರಿಭಾಷೆಯಲ್ಲಿ ಕರೆಯೋದು ಸಮಂಜಸ ಅಲ್ಲ, ಯಾಕೆಂದರೆ ಇವರೆಲ್ಲಾ ಧರ್ಮ, ಜಾತಿಯ ಗಡಿಯನ್ನು ದಾಟಿ ನಿತ್ಯ ಜೀವನದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ತಮ್ಮ ಕಷ್ಟಗಳನ್ನು ಪರಿಹರಿಸಿದ ಎಂಬ ನಂಬಿಕೆ ಇಟ್ಟುಕೊಂಡು ಸಂತನ ಬಳಿಗೆ ಹೋಗಿ ಆತನನ್ನು ಗೌರವದಿಂದ ಕಾಣುತ್ತಾರೆ. ಬಹುಸಂಸ್ಕೃತಿಯ ದರ್ಗಾ ಪರಂಪರೆಯನ್ನು ಭಾರತೀಯ 90 ಶೇಕಡಕ್ಕಿಂತಲೂ ಅಧಿಕ ಮುಸ್ಲಿಮರು ಒಪ್ಪುತ್ತಾರೆ ಮತ್ತು ಅದನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ರಾಜ್ಯದ ವಿವಿಧ ಕಡೆಯಲ್ಲಿರುವ ದರ್ಗಾಗಳಿಗೆ ಭೇಟಿ ನೀಡುವಾಗ ನಮಗೆ ನೈಜ್ಯ ಜಾತ್ಯತೀತ ನಿಲುವಿನ ಅರಿವಾಗುತ್ತದೆ. ಎಲ್ಲಾ ಧರ್ಮ ಸಂಸ್ಕೃತಿಗಳ ಜನಸಾಮಾನ್ಯರು ಜೊತೆ ಜೊತೆಗೆ ಸೇರುವ ಹಾಗೂ ಸಂತನ ಸಮಾಧಿಯನ್ನು ಗೌರವಿಸುವ ಪದ್ದತಿ ನಮಗಲ್ಲಿ ಕಂಡುಬರುತ್ತದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿರುವ ಅನ್ನಿಗೇರಿ, ಮಾಲೂರು, ಚೌಡೇಶ್ವರಿ ದರ್ಗಾಗಳಿಗೆ ಇತ್ತೀಚೆಗೆ ನಾನು ಹಾಗೂ ಗೆಳೆಯರು ಭೇಟಿ ಕೊಟ್ಟಾಗ ನನಗೆ ನಿಜಕ್ಕೂ ಅಲ್ಲಿಯ ವಾತಾವರಣ ನೋಡಿ ಆಶ್ವರ್ಯವಾಯಿತು. ಎರಡೂ ಧರ್ಮ ಭಾಂಧವರು ನಡೆದುಕೊಳ್ಳುವ ಬಹುಸಂಸ್ಕೃತಿಯ Ajmer-Dargah-Sharifಬೀಡಿನಂತೆ ಅದು ಕಂಡುಬಂತು. ಈ ಎಲ್ಲಾ ದರ್ಗಾಗಳಲ್ಲಿ ಸಂತನ ಸಮಾಧಿಯನ್ನು ಗೌರವಿಸುವುರದ ಜೊತೆಗೆ ದರ್ಗಾದಲ್ಲಿರುವ ಚೌಡೇಶ್ವರಿ , ಭೂತನಾಥ ದೈವಗಳನ್ನು ಅಲ್ಲಿಗೆ ಆಗಮಿಸುವ ಹಿಂದೂ ಮುಸ್ಲಿಂ ಭಕ್ತರು ಗೌರವಿಸುತ್ತಾರೆ. ಇಲ್ಲಿ ನಮಗೆ ಗೋಚರವಾಗುತ್ತಿರುವ ಸತ್ಯ ಏನೆಂದರೆ, ಹಿಂದಿನ ಕಾಲದಲ್ಲಿ ಆ ಕ್ಷೇತ್ರದಲ್ಲಿದ್ದ ಭಾವೈಕ್ಯ . ಸೂಫಿ ಸಂತನ ಜೊತೆಯಲ್ಲಿ ಅನ್ಯ ಧರ್ಮೀಯ ಸಂತ, ಮಹಾತ್ಮರೂ ಜೊತೆ ಜೊತೆಯಾಗಿ ಸಹಬಾಳ್ವೆಯನ್ನು ನಡೆಸುತ್ತಿದ್ದರು ಎಂಬುವುದು. ಆದರೆ ಜಮಾತ್‌ ನಂತಹಾ ಸಂಘಟನೆಗಳು ಇಂಥಹಾ ಜಾತ್ಯತೀತತೆಯನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಅವರ ಪ್ರಕಾರ ಇದು ಗೊಡ್ಡು ಜಾತ್ಯಾತೀತತೆ. ಜಾತ್ಯತೀತತೆಯ ಪ್ರತೀಕವಾದ ದರ್ಗಾ ಸಂಸ್ಕೃತಿಯನ್ನು ನಾಶ ಮಾಡಲು ಪರಿಶುದ್ಧ ಇಸ್ಲಾಂಮಿನ ಹೆಸರಲ್ಲಿ ಮೌದೂದಿ ಇಸ್ಲಾಂ ಪ್ರತಿಪಾದಕರು ಪ್ರಯತ್ನ ಪಡುತ್ತಿರುವುದು ಇದೀಗ ಅಲ್ಲಲ್ಲಿ ಕಂಡುಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ದರ್ಗಾ ಸಂಸ್ಕೃತಿಯ ವಿರುದ್ಧ ಜಮಾತ್ ಸೇರಿದಂತೆ ಕೆಲವೊಂದು ಸಂಘಟನೆಗಳ ಹಿಂದಿನಿಂದಲೂ ಧ್ವನಿ ಎತ್ತುತ್ತಾ ಬಂದಿವೆ.

ಹಿಂದೂ ಪುರೋಹಿತವಾದ ವಿರುದ್ಧ ಹುಟ್ಟಿಕೊಂಡ ನಾಥ ಹಾಗೂ ದತ್ತ ಪಂಥಗಳನ್ನು ಹಿಂದೂ ಸನಾತನವಾದಿಗಳು ವಿರೋಧಿಸುವ ರೀತಿಯಲ್ಲೇ ಬಹುಸಂಸ್ಕೃತಿಯನ್ನು ಹಾಗೂ ಪ್ರಗತಿಪರ ಚಿಂತನೆಗಳ ಸಾರವನ್ನು ಬಿತ್ತುವ ಸೂಫಿ ಪಂಥವನ್ನು ಜಮಾತೇ ಇಸ್ಲಾಮ್ ಕಟುವಾಗಿ ಧಿಕ್ಕರಿಸುತ್ತಾ ಬಂದಿದೆ. ಸೂಫಿ ಸಾಹಿತ್ಯವನ್ನೂ ಮೌದೂದಿ ಸಿದ್ದಾಂತ ಖಂಡಿತಾ ಒಪ್ಪುವುದಿಲ್ಲ. ಭಾರತೀಯ ಮುಸ್ಲಿಂಮರಲ್ಲಿ ಅರಬ್ ಸಂಸ್ಕೃತಿಯ ಇಸ್ಲಾಮನ್ನು ಹೇರುವ ಪ್ರಯತ್ನ ಜಮಾತ್ ಹಾಗೂ ಅದರ ಸಹಭಾಗಿ ಸಂಘಟನೆಗಳು ನಿರಂತರ ಮಾಡಿಕೊಂಡು ಬರುತ್ತಿರುವುದು ತಿಳಿದಿರುವ ವಿಚಾರ. ಸ್ವತಂತ್ರ ಪೂರ್ವ ಭಾರತದಲ್ಲಿ ಇಂಥಹಾ ಬಹುಸಂಸ್ಕೃತಿಯನ್ನು ತಿರಸ್ಕರಿಸಿ ಪರಿಶುದ್ದ ಇಸ್ಲಾಂ ಕಲ್ಪನೆಯ ಹೆಸರಲ್ಲಿ ಮೌಲಾನಾ ಮೌದೂದಿಯವರು sio_mangaloreಜಮಾತ್ ಇಸ್ಲಾಮೀ ಸಿದ್ದಾಂತವನ್ನು ಹುಟ್ಟು ಹಾಕಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಮುಸ್ಲಿಂ ರಾಷ್ಟ್ರದ ಸ್ಥಾಪನೆಯ ನಿಲುವನ್ನು ಮೌದೂದಿ ಪ್ರತಿಪಾದಿಸಿರುವುದು ಉಲ್ಲೇಖನಾರ್ಹ. ನಂತರದಲ್ಲಿ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರದ ಪರಿಕಲ್ಪನೆಯೊಂದಿಗೆ ಸಾಗಿದರೆ ಇತ್ತ ಜಮಾತ್ ಇಸ್ಲಾಂ ರಾಷ್ಟ್ರದ ಪರಿಕಲ್ಪನೆಯನ್ನು ಹೊತ್ತು ಅದನ್ನು ಧಾರ್ಮಿಕ, ರಾಜಕೀಯ ಆಂದೋಲವನ್ನಾಗಿಸಿ ಭಾರತದಾದ್ಯಂತ ಪಸರಿಸುವ ಪ್ರಯತ್ನದಲ್ಲಿದೆ. ಮೌದೂದಿ ವಿಶ್ಲೇಷಿಸುವ ಜಮಾತೇ ಇಸ್ಲಾಮೀ ಚಿಂತನೆಯಲ್ಲಿ ಸೂಫಿಗಳಿಗೆ ಯಾವುದೇ ಸ್ಥಾನಮಾನ ಇಲ್ಲ. ಇವರ ಆಗಮನ ನಂತರ ದರ್ಗಾ ಸಂಸ್ಕೃತಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಜಮಾತ್ ಹೇಳುವ ಕಂದಾಚಾರ ದರ್ಗಾ ಸಂಸ್ಕೃತಿಯದಾಗಿದೆ. ದರ್ಗಾಗಗಳಲ್ಲಿ ಆಚರಿಸುವ ವಿಧಿ ವಿಧಾನಗಳನ್ನು ಜಮಾತ್ ಖಂಡಿಸುತ್ತಾ ಬಂದಿದೆ. ಅದು ನೈಜ್ಯ ಇಸ್ಲಾಮ್ ತತ್ವಾದರ್ಶಗಳಿಗೆ ವಿರೋಧವಾಗಿದೆ ಎಂಬುವುದು ಜಮಾತ್ ನಿಲುವು. ಈ ನಿಟ್ಟಿಲ್ಲಿ ಸೂಫಿ ಸಾಹಿತ್ಯವನ್ನು ಒಡೆಯಲು ಶಾಂತಿ ಪ್ರಕಾಶನ ಸಾಕಷ್ಟು ಸಾಹಿತ್ಯಗಳು ಪ್ರಮುಖ ಪಾತ್ರ ವಹಿಸಿದೆ. ತಮ್ಮದೇ ಆದ ಸಾಹಿತ್ಯದ ಮೂಲಕ ಜಮಾತೇ ಮೌದೂದಿ ಸಿದ್ದಾಂತವನ್ನು ಅದು ವ್ಯವಸ್ಥಿತವಾಗಿ ಪಸರಿಸುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಅದು ಮುಸ್ಲಿಂ ಲೇಖಕರ ಸಂಘದಂತಹಾ ಸಾಕಷ್ಟು ಸಾಹಿತ್ಯ ಸಂಘಟನೆಗಳನ್ನು ಭಾರತದಾದ್ಯಂತ ಹುಟ್ಟುಹಾಕಿದೆ. (ಜಮಾತ್ ಸಂಘಟನೆ ಮುಸ್ಲಿಂ ಲೇಖಕರ ಸಂಘ ತನ್ನದಲ್ಲಾ ಎಂದು ಹೇಳುತ್ತಿದ್ದರೂ ಮುಸ್ಲಿಂ ಲೇಖಕರ ಸಂಘವು ಜಮಾತ್ ಅಧೀನದಲ್ಲಿರುವುದು ಬಹಿರಂಗ ಗುಟ್ಟು ಎಂಬುವುದರಲ್ಲಿ ಸಂಶಯವಿಲ್ಲ.

ಒಂದೆಡೆಯಲ್ಲಿ ನೈಜ್ಯ ಜಾತ್ಯತೀತವಾದವನ್ನು ಬಿಂಬಿಸುವ ದರ್ಗಾ ಬಹುಸಂಸ್ಕೃತಿಯನ್ನು ಕಂದಾಚಾರ ಹಾಗೂ ಮೂಲ ಇಸ್ಲಾಂಗೆ ಸಲ್ಲದ ಸಂಸ್ಕೃತಿ ಎಂದು ವಿರೋಧಿಸುವ ಜಮಾತ್ ಸಂಘಟನೆ ಮುಸ್ಲಿಂ ವಿರುದ್ಧ ದ್ವೇಷವನ್ನು ಹರಡುವ ಹಿಂದುತ್ವವಾದಿ ಸಂಘಟನೆಗಳ jamat-mangaloreಕೆಲ ಮುಖಂಡರನ್ನು ತಮ್ಮ ಸಂಘಟನೆಯ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಮೂಲಕ ತನ್ನನ್ನು ಜಾತ್ಯತೀತವಾದಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಹಾಸ್ವಾಸ್ಪದ. ಹಿಂದೂ ಮೂಲಭೂತವಾದಕ್ಕೆ ಪ್ರತಿರೋಧವನ್ನು ವಿರೋಧಿಸುವುದು ಮಾತ್ರ ಪ್ರಗತಿಪರತೆ ಎಂದು ವ್ಯಾಖ್ಯಾನಿಸುವ ಜಮಾತ್ ಧರ್ಮ ಪಾಲನೆಯ ಆಚಾರ ವಿಚಾರಗಳ ಕುರಿತಾಗಿ ಅದರ ನಿಲುವು ಗಮನಿಸಿದಾಗ ಹಿಂದೂ ಸನಾತನವಾದಿ ಸಂಘಟನೆಗಳು ಹಾಗೂ ಜಮಾತ್ ನಡುವೆ ಯಾವುದೇ ವ್ಯತ್ಯಾಸವಿಲ್ಲದೇ ಇರುವುದು ಕಂಡುಬರುತ್ತದೆ. ಜಮಾತ್ ಅಧೀನದ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ನಾಲ್ಕು ಗೋಡೆಯೊಳಗಿದ್ದ ಮುಸ್ಲಿಂ ಮಹಿಳೆಯರನ್ನು ಪರ ಪುರುಷರೊಂದಿಗೆ ವೇದಿಕೆ ಹಂಚಿಕೊಳ್ಳುವಂತೆ ಮಾಡಿದ್ದೇವೆ ಇದು ನಮ್ಮ ಪ್ರಗತಿಪರತೆಗೆ ಸಾಕ್ಷಿ ಎಂದು ಹೇಳಿಕೊಳ್ಳುತ್ತಿರುವಾಗ ಇನ್ನೊಂದೆಡೆಯಲ್ಲಿ ಶಾಂತಿ ಪ್ರಕಾಶನದದಿಂದ ಪ್ರಕಟವಾದ ಪುಸ್ತಕಗಳಲ್ಲಿ ಮಹಿಳೆಯರನ್ನು ಮಾರುಕಟ್ಟೆಯಿಂದ ಪಾರ್ಲಿಮೆಂಟ್ ವರೆಗೂ ಜೊತೆ ಸೇರಲು ಅನುಮತಿ ನೀಡುವುದಿಲ್ಲ ಎಂದು ಬರೆಯುತ್ತಿದೆ. ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಜೊತೆ ಜಮಾತ್ ಮುಖಂಡರು ವೇದಿಕೆ ಹಂಚಿಕೊಂಡರೆ ಅದು ಮೆಚ್ಚತಕ್ಕಂತಹಾ ವಿಚಾರ ಮತ್ತು ಅದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಇನ್ನೊಂದೆಡೆ ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಸಂದರ್ಭದಲ್ಲಿ ಜಮಾತ್ ಮುಖಂಡರೊಬ್ಬರು ಮಾಧ್ಯಮಗಳಿಗೆ ಶಾಲೆಯಲ್ಲಿ ಬಾಲಕ ಬಾಲಕಿಯರ “ಕೋ-ಎಜುಕೇಷನ್” ಗೆ ವಿರೋಧ ವ್ಯಕ್ತಪಡಿಸುವ ಹೇಳಿಕೆಯನ್ನು ನೀಡುತ್ತಾರೆ.

ಇದೊಂದು ಉದಾಹರಣೆಯಷ್ಟೇ. ಜಮಾತೇ ಇಸ್ಲಾಮೀ ಹಿಂದ್ ಸಂಘಟನೆಯ ಇಂಥಹಾ ಸಾಕಷ್ಟು ನಿಲುವುಗಳು ಅದರ ಕಾರ್ಯತಂತ್ರವನ್ನು ಸಂಶಯದಿಂದ ನೋಡಲು ಕಾರಣವಾಗಿದೆ. ಬಹುಸಂಸ್ಕೃತಿಯ ಸೂಫಿಸಂ ಅನ್ನು ಕಂದಾಚಾರದ ಹೆಸರಲ್ಲಿ ತಿರಸ್ಕರಿಸಿ. ಮುಸ್ಲಿಂ ಪ್ರಗತಿಪರರನ್ನು ಶರೀಯತ್ ವಿರುದ್ಧ ಎಂಬ ನೆಪದಲ್ಲಿ ತಿರಸ್ಕರಿಸಿ, ಇತರ ಧರ್ಮಿಯರೊಂದಿಗೆ ವೇದಿಕೆ ಹಂಚಿ ಜಮಾತ್ ಸಿದ್ದಾಂತವನ್ನು ಪ್ರತಿಪಾದಿಸುವ ಮೂಲಕ ತನ್ನನ್ನು ಪ್ರಗತಿಪರ ಹಾಗೂ ನೈಜ್ಯ ಇಸ್ಲಾಂ ತತ್ವಾದರ್ಶಗಳನ್ನು ಪಾಲಿಸುವ ಸಂಘಟನೆಯೆಂದು ಬಿಂಬಿಸ ಹೊರಟಿರುವುದು ಸರಿಯಲ್ಲ. ಈ ಕಾರಣಕ್ಕಾಗಿಯೇ ಮುಸ್ಲಿಂ ಸಮುದಾಯದ ಬಹುತೇಕ ಜನರು ಜಮಾತ್‌ಗೆ ಸಾಥ್ ಕೊಟ್ಟಿಲ್ಲ ಎಂಬುವುದು ಉಲ್ಲೇಖನಾರ್ಹ ‍ಅಂಶ. ಜಮಾತ್ ಆರ್.ಎಸ್.ಎಸ್ ಸಂಘಟನೆಯ ರೀತಿಯಲ್ಲೇ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕತೆ ನಿಲುವುಗಳಲ್ಲಿ ನಂಬಿಕೆ ಇಟ್ಟಂತಹಾ ಸಂಘಟನೆ ಎಂಬುವುದರಲ್ಲಿ ಸಂಶಯವಿಲ್ಲ. jamathmlore-blogspotಆರ್.ಎಸ್.ಎಸ್ ತನ್ನ ಸಿದ್ದಾಂತವನ್ನು ಎಲ್ಲರ ಮುಂದೆ ಒಪ್ಪಿಕೊಂಡು ಕಾರ್ಯಾಚರಿಸುತ್ತಿದ್ದರೆ ಜಮಾತ್ ಅದಕ್ಕೆ ತೆರೆಮರೆಯಲ್ಲಿ ತನ್ನ ಸಿದ್ದಾಂತವನ್ನು ವಿವಿಧ ಆಯಾಮಗಳಲ್ಲಿ ಪಸರಿಸುತ್ತಿದೆ. ಈ ಕಾರಣಕ್ಕಾಗಿಯೇ ಮುಸ್ಲಿಂ ಲೇಖಕರ ಸಂಘದ ಕಾರ್ಯವೈಖರಿಯ ಕುರಿತು ಚರ್ಚೆ ಆರಂಭವಾಗಿದ್ದು. ಲೇಖಕರ ಸಂಘದ ಕೆಲವೊಂದು ಪದಾಧಿಕಾರಿಗಳು ಮುಸ್ಲಿಂ ಲೇಖಕರ ಸಂಘವು ಜಮಾತ್‌ಗೆ ಸೇರಿದ ಸಂಘಟನೆ ಅಲ್ಲ ಎಂದು ವಾದಿಸುತ್ತಿದ್ದರೂ ರಾಜ್ಯದ (ಮುಸ್ಲಿಂ) ಬರಹಗಾರರಿಗೆ, ಸಾಹಿತಿಗಳಿಗೆ, ಚಿಂತಕರಿಗೆ ಇದು ಗೊತ್ತಿರುವ ಬಹಿರಂಗ ಗುಟ್ಟು. ಸಂಘದ ಹುಟ್ಟಿಗೆ ಮೂಲ ಕಾರಣ ಜಮಾತ್ ಎಂಬುವುದನ್ನು ಜಮಾತೇ ಇಸ್ಲಾಂ ಸಂಘಟನೆಯು ಒಪ್ಪಿಕೊಳ್ಳದೇ ಇರುವುದು ವಿಪರ್ಯಾಸ. ಜಮಾತೇ ಇಸ್ಲಾಮೀ ಹಿಂದ್ ಮಂಗಳೂರು ಅದರ ಅಂತರ್ಜಾಲ ಪೇಜ್ ಒಂದಲ್ಲೂ ತನ್ನ ಸಹಭಾಗಿ ಸಂಘಟನೆಗಳ ಜೊತೆ ಮುಸ್ಲಿಮ್ ಲೇಖಕರ ಸಂಘದ ಹೆಸರನ್ನೂ ಸೇರಿಸಿಕೊಂಡಿದೆ. ಜಮಾತೇ ಇಸ್ಲಾಂ ಸಂಘಟನೆಯ ಕುರಿತು ನಮಗೆ ಯಾವುದೇ ಪೂರ್ವಾಗ್ರಹವಿಲ್ಲ. ಆದರೆ ಜಮಾತ್ ಮೂಲಭೂತವಾದಿ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಸ್ಲಿಂ ಲೇಖಕರ ಸಂಘವು ಜಮಾತೆಯ ಸಹಸಂಘಟನೆ : ಅಮಿನ್ ಮಟ್ಟುರವರಿಗೊಂದು ಪುರಾವೆ

– ನವೀನ್ ಸೂರಿಂಜೆ

ಮುಸ್ಲಿಂ ಲೇಖಕರ ಸಂಘವು ಜಮಾತೆ ಇಸ್ಲಾಮೀ ಹಿಂದ್ ಸಂಘಟನೆಗೆ ಸೇರಿದ್ದು ಎಂದು ನಾನು ದಿನೇಶ್ ಅಮಿನ್ ಮಟ್ಟುರವರಿಗೆ ಮನವರಿಕೆ ಮಾಡಲು ಹೋದರೆ ದಿನೇಶ್ ಅಮೀನ್ ಮಟ್ಟು “ಸುದ್ದಿಯನ್ನು ತಿರುಚುವ ಪತ್ರಕರ್ತ” ಎಂದು ಬರೆದು ಕೈತೊಳೆದುಕೊಂಡಿದ್ದಾರೆ. dinesh-amin-mattuನನ್ನ ಪತ್ರಿಕಾ ಬದುಕನ್ನು ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ಈ ರೀತಿಯಾಗಿ ಅನೇಕ ಬಾರಿ ಈ ಹಿಂದೆ ಹೀಯಾಳಿಸಿದ್ದಾರೆ. ಆದರೆ ನಾನು ಆದರ್ಶವಾಗಿಟ್ಟುಕೊಂಡ ದಿನೇಶ್ ಅಮೀನ್ ಮಟ್ಟು ಕೂಡಾ ನಾನು ಸುದ್ದಿ ತಿರುಚುವ ತುಂಟತನ ಮಾಡುವವನು ಮತ್ತು ಸುದ್ದಿ ಪವಿತ್ರವಾಗಿರುವಂತದ್ದಾಗಿದ್ದು ಅದನ್ನು ಅಪವಿತ್ರ ಮಾಡಬೇಡ ಎನ್ನುವ ಮೂಲಕ ನಾನು ಸುಳ್ಳು ಸುದ್ದಿ ಬರೆಯುತ್ತಿದ್ದೇನೆ ಎಂಬ ಅರ್ಥದಲ್ಲಿ ಹೇಳಿರುವುದು ನೋವು ತಂದಿದೆ.

ಅದೇನೇ ಆದರೂ ದಿನೇಶ್ ಅಮೀನ್ ಮಟ್ಟುರವರಿಗೆ ಅವರ ಮಾತನ್ನೇ ಹಿಂದಿರುಗಿಸುತ್ತೇನೆ… ಸರ್ ನಿಜವಾಗಿಯೂ ಸುದ್ದಿ ಪವಿತ್ರವಾಗಿರುವುದೇ ಆಗಿದ್ದಲ್ಲಿ ಅದರ ಬಗ್ಗೆ ಪರಾಮರ್ಶಿಸಿ ತೀರ್ಪು ಕೊಡಿ. ತಾವು ಅವರ ಸಂಘಟನೆಯಲ್ಲಿ ಭಾಗವಹಿಸಿದ್ದೀರಿ ಎಂಬ ಕಾರಣಕ್ಕೆ ಸುದ್ದಿ ಸುಳ್ಳು ಆಗುವುದಿಲ್ಲ. ಅಪವಿತ್ರವೂ ಆಗುವುದಿಲ್ಲ…

ಜಮಾತೆ ಇಸ್ಲಾಮೀ ಹಿಂದ್ ಶಾಂತಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಹೊಂದಿದೆ. ಆ ಪ್ರಕಾಶನ ಸಂಸ್ಥೆಯಲ್ಲಿ ಮಹಿಳಾ ವಿರೋಧಿ ಸಾಹಿತ್ಯವನ್ನು ಪ್ರಕಟ ಮಾಡಲಾಗುತ್ತದೆ. ಈ ರೀತಿಯ ಸಾಹಿತ್ಯ ಕೃಷಿಗಾಗಿ ಮುಸ್ಲಿಂ ಲೇಖಕರ ಸಂಘವನ್ನು ಸ್ಥಾಪಿಸಿದ್ದಾರೆ. ಅದಕ್ಕೆ ಅವರು ಕಾರ್ಯಾಚರಿಸುವ ವಿಳಾಸವೇ ಪುರಾವೆ ಒದಗಿಸುತ್ತದೆ. ಉಳಿದಂತೆ ಸಂಘದ ಕಾರ್ಯಕ್ರಮದ ಸ್ವಯಂ ಸೇವಕರು, ಆಮಂತ್ರಣ ಪತ್ರಿಕೆ ನೀಡಿದವರು, ಪತ್ರಕರ್ತರನ್ನು ಆಹ್ವಾನಿಸಿದವರೆಲ್ಲರೂ ಜಮಾತೆಯ ಕಾರ್ಯಕರ್ತರೇ ಹೊರತು ಲೇಖಕ, ಸಾಹಿತಿಗಳಲ್ಲ ಎಂದು ದಿನೇಶ್ ಅಮೀನ್ ಮಟ್ಟುಗೆ ಮನವರಿಕೆ ಮಾಡಲು ಯತ್ನಿಸಿದ್ದೆ.

ಈ ಮನವರಿಕೆ ಮಾಡುವ ಯತ್ನ ಬಹಿರಂಗವಾಗಿಯೇ ನಡೆಯುತ್ತಿತ್ತಾದರೂ ಜಮಾತೆ ಇಸ್ಲಾಮೀ ಹಿಂದ್ ಸಂಘಟನೆಯು ಮಧ್ಯ ಪ್ರವೇಶಿಸಿ “ಮುಸ್ಲಿಂ ಲೇಖಕರ ಸಂಘ ನಮ್ಮದಲ್ಲ” ಎಂದು ಹೇಳಿಲ್ಲ. 20 ವರ್ಷದ ಹಿಂದೆ ಎಸ್‌ಐ‌ಒ ಸದಸ್ಯನಾಗಿದ್ದ ಉಮ್ಮರ್ ಯು‍.ಎಚ್ ಎಂಬವರು ಮುಸ್ಲಿಂ ಲೇಖಕರ ಸಂಘದ ಕಾರ್ಯದರ್ಶಿಯಾಗಿದ್ದು ಅವರು ಜಮಾತೆ ಸದಸ್ಯರಲ್ಲ ಎನ್ನುತ್ತಾರೆ ದಿನೇಶ್ ಅಮೀನ್ ಮಟ್ಟು. ಇದು ಒಂದು ರೀರಿಯಲ್ಲಿ “ಭಜರಂಗದಳ ಸದಸ್ಯ, ಆದರೆ ಬಿಜೆಪಿ ಅಲ್ಲ” ಎನ್ನುವಂತೆ. ಇನ್ನು ಮುಸ್ಲಿಂ ಲೇಖಕರ ಸಂಘಕ್ಕೆ ಜಮಾತೆ ಸದಸ್ಯನಲ್ಲದ ಪತ್ರಕರ್ತ ಸ್ಥಾಪಕ ಸದಸ್ಯನಾಗಿದ್ದ ಎನ್ನುತ್ತಾರೆ ದಿನೇಶ್ ಅಮೀನ್ ಮಟ್ಟು. ಆದರೆ ಸ್ಥಾಪಕರು ಯಾರು ಎಂದು ಮಾತ್ರ ಪತ್ರಕರ್ತರಾಗಿ ಅವರು ಕಂಡು ಹಿಡಿಯುವುದಿಲ್ಲ. ನಿಮಗೆ ಮಾಹಿತಿ ನೀಡುವ ಉಮ್ಮರ್ ಯು.ಎಚ್ ನಿಮ್ಮನ್ನು ದಾರಿ ತಪ್ಪಿಸಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ನಾನು ಮತ್ತು ಸುದೀಪ್ತೋ ಮೊಂಡಲ್ ಮಗು ಮಾರಾಟ ಜಾಲವನ್ನು ಪತ್ತೆ ಹಚ್ಚಿದ ಸಂಧರ್ಭದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಿ ನಮ್ಮನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ನಾವು ದಾರಿ ತಪ್ಪಲಿಲ್ಲ ಎಂಬುದು ಬೇರೆ ವಿಚಾರ. ಇರಲಿ. ಇಷ್ಟೆಲ್ಲಾ ದಾಖಲೆ ನೀಡಿದ ನಂತರೂ ದಿನೇಶ್ ಅಮೀನ್ ಮಟ್ಟುಗೆ ನಮ್ಮ ವಾದ ಸುಳ್ಳು ಮತ್ತು ತುಂಟತನದ್ದು ಎಂದು ಆರೋಪಿಸಿ “ಸೂಕ್ತ ಪುರಾವೆ ನೀಡುವವರೆಗೆ ಪ್ರತಿಕ್ರಿಯಿಸುವುದಿಲ್ಲ” ಎಂದರು.

ಜಮಾತೆ ಇಸ್ಲಾಮೀ ಹಿಂದ್ ಮುಸ್ಲಿಂ ಮೂಲಭೂತವಾದಿ ಸಂಘಟನೆ. devanurಸೂಫಿ ಪರಂಪರೆಯನ್ನೇ ತನ್ನ ಸಂವಿಧಾನದಲ್ಲಿ ಮೂಢನಂಬಿಕೆ ಎನ್ನುವ ಜಮಾತೆ ಇಸ್ಲಾಮೀ ಹಿಂದ್ ದೇವನೂರು ಮಹಾದೇವ ಪ್ರಕಾರ “ಜಮಾತೆ ಇಸ್ಲಾಮೀ ಹಿಂದ್ ಮುಸ್ಲೀಂ ಮೂಲಭೂತವಾದಿಗಳಿಗೆ ಆರ್‌ಎಸ್‌ಎಸ್” ಎಂದಿದ್ದರು. ಅದರ ಸಹಭಾಗಿ ಸಂಘಟನೆಯೇ “ಮುಸ್ಲಿಂ ಲೇಖಕರ ಸಂಘ”.

ಈಗ ನಾವು ಪುರಾವೆ ನೀಡುತ್ತೇವೆ… ನಾನು “ಯಾರ ಜೊತೆ ಮಡಿವಂತಿಕೆ ಬಿಡಬೇಕು” ಎಂದು ತಮಗೆ ಬರೆದ ಪತ್ರಕ್ಕೆ ಈಗ ಉತ್ತರ ನೀಡುವಿರೆಂದು ಬಯಸುತ್ತಾ….

http://jamathmlore.blogspot.in

ಇದು ಜಮಾತೆ ಮಂಗಳೂರು ಘಟಕದ ವೆಬ್ ಸೈಟ್… ಅದರಲ್ಲಿ ಜಮಾತೆಯು 22 ಸಹ ಸಂಘನೆಗಳನ್ನು ಹೊಂದಿದೆ. ಅದರಲ್ಲಿ 9 ನೇ ಸಹ ಸಂಘಟನೆ “ಮುಸ್ಲಿಂ ಲೇಖಕರ ಸಂಘ”.

jamathmlore-blogspot

jamathe-mangalore-website