Paid News ಕುರಿತಾದ ಸಂಗತಿಗಳು

Observations/Recommendations of the Parliament Standing Committee on Information Technology.

[ಕೇರಳ ಮಾಧ್ಯಮ ಅಕಾಡೆಮಿಯ ಜರ್ನಲ್‌ನ ಆಗಸ್ಟ್ ೨೦೧೩ರ ಸಂಚಿಕೆಯಲ್ಲಿ ಪ್ರಕಟಗೊಂಡ “Issues Related to Paid News” ಎನ್ನುವ ಲೇಖನದ ಭಾವಾನುವಾದ.]

ಕನ್ನಡಕ್ಕೆ- ಬಿ. ಶ್ರೀಪಾದ ಭಟ್

ಜನರ ನೋವಿಗೆ, ಭಾವನೆಗಳಿಗೆ ಶಕ್ತಿಶಾಲಿಯಾದ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಮಾಧ್ಯಮವು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟು ಮಾತ್ರವಲ್ಲ ದೇಶದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ವಿದ್ಯಮಾನಗಳನ್ನು, ಈ ವಲಯಗಳ ಕುರಿತಾದ ಸತ್ಯನಿಷ್ಠ ವರದಿಗಳನ್ನು, ಸಂಶೋಧನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ನಾಗರಿಕ ಸಮಾಜವನ್ನು ಪ್ರಭಾವಿಗೊಳಿಸುತ್ತದೆ ಎನ್ನುವ ಕಾರಣಕ್ಕಾಗಿಯೇ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವೆಂದೇ ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿಯೇ ಕಮಿಟಿಯು (Parliament Standing Committee on Information Technology) ಮಾಧ್ಯಮದ ವಿವಿಧ ವಲಯಗಳಾದ ಮುದ್ರಣ, paid-news-indiaಟಿವಿ, ರೇಡಿಯೋ, ದಿನಪತ್ರಿಕೆಗಳು ಮೂಲಕ ಪ್ರಕಟಗೊಳ್ಳುವ ಪ್ರತಿಯೊಂದು ಸುದ್ದಿಯೂ ಬೇರೆಲ್ಲದ್ದಕ್ಕಿಂತಲೂ ಮಹತ್ವದ್ದಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ಮಾಧ್ಯಮ ವಲಯದ ಕೆಲವು ಮಾಲೀಕರು, ಗುಂಪುಗಳು, ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ವ್ಯಕ್ತಿಯೊಬ್ಬನ, ರಾಜಕಾರಣಿಯ, ಸಂಸ್ಥೆಗಳ ಪರವಾಗಿ ಏಕಪಕ್ಷೀಯ ವರದಿಗಳನ್ನು ನೀಡುತ್ತಿವೆ ಹಾಗೂ ಇದಕ್ಕಾಗಿ ಹಣವನ್ನು ಪಡೆದಿವೆ ಎನ್ನುವ, Paid News ಎಂದೇ ಕುಖ್ಯಾತಿ ಪಡೆದಿರುವ ಆರೋಪಗಳ ಕುರಿತಾಗಿ ಕಮಿಟಿಯು ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಈ ಹಗರಣವು ಷೇರು ಮಾರುಕಟ್ಟೆಯನ್ನು, ಸೆನ್ಸೆಕ್ಸ್ ಅನ್ನು, ರಿಯಲ್ ಎಸ್ಟೇಟ್ ಮಾರ್ಕೆಟ್ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವಶಾಲಿಯಾಗಿದೆ. ಅಲ್ಲದೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಣೆಗಳ ಮೇಲೆ, ಮತದಾರನ ಮೇಲೆ ಇದು influence ಮಾಡುತ್ತದೆ. ಕಮಿಟಿಯ ಆತಂಕವೇನೆಂದರೆ ಇದು ಕೇವಲ ವ್ಯಕ್ತಿಯೊಬ್ಬನ, ಪತ್ರ್ರಕರ್ತನೊಬ್ಬನ ಭ್ರಷ್ಟಾಚಾರದ ವಿಷಯ ಮಾತ್ರವಲ್ಲ, ಜೊತೆಗೆ ಈ Paid News ಹಗರಣವು ಪತ್ರಕರ್ತರು, ವ್ಯವಸ್ಥಾಪಕರು, ಮಾಧ್ಯಮಗಳ ಮಾಲೀಕರು, ಕಾರ್ಪೋರೇಟ್ಸ್, ಸಾರ್ವಜನಿಕ ಸಂಪರ್ಕ ಸಂಸ್ಥೆಗಳು, ಜಾಹಿರಾತು ಸಂಸ್ಥೆಗಳು ಮತ್ತು ರಾಜಕೀಯ ಕ್ಷೇತ್ರದ ಕೆಲವು ವಲಯಗಳೆಲ್ಲವನ್ನೂ ಒಳಗೊಂಡಿದೆ. ಇದರ ಕುರಿತಾಗಿ ತನಿಖೆಯನ್ನು ಕೈಗೆತ್ತಿಕೊಂಡ ಕಮಿಟಿಗೆ ಬೆಳಕಿಗೆ ಬಂದ ಮತ್ತೊಂದು ಅಘಾತಕಾರಿ ಸಂಗತಿಯೇನೆಂದರೆ Paid News ಹಗರಣವು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಂಡುಬರುವ ವಿದ್ಯಮಾನವಲ್ಲ, ಬದಲಾಗಿ ದಿನನಿತ್ಯದ ವಹಿವಾಟುಗಳಾದ ಹೊಸ ಉತ್ಪನ್ನಗಳ, ಕಂಪನಿಗಳ launching ಸಂದರ್ಭವಾಗಿರಬಹುದು, ಇಲ್ಲವೆ ಮಾರ್ಕೆಟಿಂಗ್ ಯೋಜನೆಗಳಾಗಿರಬಹುದು. ಒಟ್ಟಾರೆ ಸುದ್ದಿ/ಜಾಹೀರಾತು ಎನ್ನುವ ಛದ್ಮವೇಶದಲ್ಲಿ ವರ್ಷಪೂರ್ತಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತವೆ. ಅಷ್ಟೇ ಅಲ್ಲ ಇಂಡಿಯಾದ ಚುನಾವಣಾ ಕಮಿಷನ್, ಸುದ್ದಿ ಪ್ರಸಾರ ಅಸೋಶಿಯೇಶನ್ಸ್, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ವಾರ್ತಾ ಮತ್ತು ಪ್ರಚಾರ ಇಲಾಖೆ, ಎಡಿಟರ್ಸ್ ಗಿಲ್ಡ್, ಪ್ರಸಾರ ಭಾರತಿಗಳಂತಹ ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ದೇಶದ ಪ್ರಾಮಾಣಿಕ ಚಿಂತಕರು ಮತ್ತು ರಾಜಕೀಯ ವಿಶ್ಲೇಷಕರು ಈ Paid News ಹಗರಣವು ನಡೆದಿರುವುದರ ಕುರಿತಾಗಿ ಒಪ್ಪಿಕೊಂಡು ಈ ಹಗರಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಶಿಸಿದ್ದರೂ ಬಹುಪಾಲು ಮಾಧ್ಯಮಗಳು ಮಾತ್ರ ಇದರ ಕುರಿತಾಗಿ ತಳೆದಿರುವ ದಿವ್ಯ ಮೌನ ಕಮಿಟಿಯನ್ನು ಚಕಿತಗೊಳಿಸಿದೆ. ಸರ್ಕಾರವೂ ಇದರ ಕುರಿತಾಗಿ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಮೀಡಿಯಾ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ, ರೇಡಿಯೂ, ಚಲನಚಿತ್ರ, ಪಬ್ಲಿಕೇಶನ್ಸ್, ಜಾಹೀರಾತು ವಿಭಾಗಗಳ ನಡುವೆ ಒಂದು ಬಗೆಯ ಆರೋಗ್ಯಕರ ಪೈಪೋಟಿ ಇರುವಂತಹ ಸೌಹಾರ್ದಯುತ ವಾತಾವರಣ ನಿರ್ಮಿಸುವಂತಹ ಗುರುತರವಾದ ಹೊಣೆಗಾರಿಕೆಯು ವಾರ್ತಾ ಮತ್ತು ಪ್ರಚಾರ ಇಲಾಖೆಯ ಮೇಲಿದೆ ಎಂದು ಕಮಿಟಿ ಅಬಿಪ್ರಾಯ ಪಟ್ಟಿದೆ. ಸುದ್ದಿ ಪ್ರಸರಣವು ಅತ್ಯಂತ ಜವಾಬ್ದಾರಿಯುತವಾಗಿಯೂ, ಪಕ್ಷಪಾತವನ್ನು ಮಾಡದೆ ನೇರ ಮತ್ತು ದಿಟ್ಟವಾಗಿರುವಂತೆ ರೂಪಿಸುವುದು ಇಲಾಖೆಯ ಕರ್ತವ್ಯವೆಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಸರ್ಕಾರ ಇವೆರೆಡೂ ಈ Paid News ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ನೀತಿನಿಯಾಮಾವಳಿಗಳನ್ನು ಜಾರಿಗೊಳಿಸಿಲ್ಲ ಎಂದು ಕಮಿಟಿ ಹೇಳಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆಯು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವ ಅವಕಾಶಗಳಿದ್ದಾಗಲೂ ಅದನ್ನು ಹೊಣೆಗಾರಿಕೆಯಿಂದ ನಿಭಾಯಿಸಲಿಲ್ಲ ಎಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಈ ಕೂಡಲೆ ಕಾರ್ಯಪ್ರವೃತ್ತವಾಗಿ Paid News ಹಗರಣಕ್ಕೆ ಸಂಭಂದಿಸಿದಂತೆ ತನಿಖಾ ತಂಡವನ್ನು ರಚಿಸಬೇಕೆಂದೂ ಹಾಗೂ ಈ ಹಗರಣವು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಒಳಗೊಂಡಂತಹ ವರದಿಯನ್ನು ನೀಡಬೇಕೆಂದು ಕಮಿಟಿ ಆದೇಶಿಸಿದೆ. ಮತ್ತು ೬ ತಿಂಗಳುಗೊಳಗೆ ಸರ್ಕಾರವು ಈ ವರದಿಯನ್ನಾಧರಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಹ ಆದೇಶಿಸಿದೆ.

ಈ ಸಂಸದೀಯ ಕಮಿಟಿಯ Paid News ಕುರಿತಾದ Observations/Recommendations ಪ್ರಕಾರ ಸ್ವಾತಂತ್ರೋತ್ತರ ನಂತರದ ವರ್ಷಗಳಲ್ಲಿ ಈ ಮಾಧ್ಯಮಗಳು ಮತ್ತು ಅದರ ಮಾಲೀಕರು ಅತ್ಯಂತ ಆರೋಗ್ಯಕರ ಪೈಪೋಟಿಯನ್ನು ಮತ್ತು ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವರ್ಷಗಳುರುಳಿದಂತೆ ಈ ಮಾಧ್ಯಮಗಳು ಮತ್ತು ಅದರ ಮಾಲೀಕರು ಆರ್ಥಿಕವಾಗಿ ಬಲಾಢ್ಯರಾದಂತೆಲ್ಲ, ತಾನು ಜನರನ್ನು ನೇರವಾಗಿ ತಲುಪಬಲ್ಲಂತಹ ಪ್ರಭಾವಶಾಲಿ ಪರಿಣಾಮಕಾರಿ ಸಂಸ್ಥೆಯೆಂದು ಆತ್ಮವಿಶ್ವಾಸ ಮೂಡಲಾರಂಭಿಸಿದ ತಕ್ಷಣ ಇಡೀ ಪತ್ರಿಕೋದ್ಯಮದ ನೈತಿಕತೆಯೇ ಕುಸಿಯತೊಡಗಿತು. ಈ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಜಾಹೀರಾತು ಮತ್ತು ಇತರೇ ಮಾರ್ಗಗಳಿಗೆ ಮೊರೆ ಹೋಗುವುದಕ್ಕಿಂತ ಮಾಧ್ಯಮಗಳ ಮೇಲೆ ನೇರವಾದ ಪ್ರಭಾವವನ್ನು ಬೀರಿದರೆ ಹೆಚ್ಚಿನ ಅನುಕೂಲಗಳು ಮತ್ತು ಪರಿಣಾಮಕಾರಿ ಫಲಿತಾಂಶಗಳು ತಮ್ಮ ಕಡೆಗೆ ವಾಲಬಹುದೆಂದು ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮನದಟ್ಟಾಗಿತ್ತು. ಇದು malpractice ಗೆ ದಾರಿ ಮಾಡಿಕೊಟ್ಟಿತು. ಕೇಂದ್ರ ಚುನಾವಣಾ ಕಮಿಷನ್‌ಗೆ ೨೦೦೪ರಲ್ಲಿಯೇ Paid News ಹಗರಣವು ಗಮನಕ್ಕೆ ಬಂದಿತ್ತಾದರೂ ೨೦೦೯ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಮತ್ತು ನಂತರ paidmedia2ಈ Paid News ಹಗರಣವು ಅತ್ಯಂತ ಪ್ರಮುಖವಾಗಿ ಚರ್ಚಿತವಾಗತೊಡಗಿತು ಎಂದು ಕಮಿಟಿ ಅಭಿಪ್ರಾಯಪಟ್ಟಿದೆ. ಮತ್ತೂ ಮುಂದುವರೆದು ಕಮಿಟಿಯು ಕಳೆದೆರಡು ದಶಕಗಳಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಅರ್ಥಾತ್ ದೃಶ್ಯ ಮಾಧ್ಯಮವು ಜನಪ್ರಿಯತೆ ಗಳಿಸಿದಂತೆಲ್ಲಾ ಅದು ಹೆಚ್ಚು ಹೆಚ್ಚು ವಾಣಿಜ್ಯೀಕರಣಗೊಂಡು ಅದರ ಮೇಲೆ ಕಾರ್ಪೋರೇಟ್‌ನ ಪ್ರಾಬಲ್ಯ ಬಲವಾಗತೊಡಗಿತು ಎಂದು ವಿವರಿಸಿದೆ. ಅಷ್ಟೇಕೆ ಸಾಮಾನ್ಯವಾಗಿ ಸಂಪಾದಕರು ಮತ್ತು ಪ್ರಕಾಶಕರು ಕಛೇರಿಗಳು ಹೊರಪ್ರಪಂಚದಿಂದ ಸಂರಕ್ಷಿಸಲ್ಪಟ್ಟಿರುವಂತಹ ಸಾಂಪ್ರದಾಯಿಕ ವ್ಯವಸ್ಥೆಯು ಇಂದು ಬದಲಾಗಿದೆ ಮತ್ತು ಹೆಚ್ಚು ಹೆಚ್ಚು compromise ಆಗುತ್ತಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕಾರ ಕಳೆದ ಆರು ದಶಕಗಳಲ್ಲಿ ವಿವಿಧ ಸಮಾರಂಭಗಳಲ್ಲಿ ಭಾಗವಹಿಸಿ ಗಿಫ್ಟ್‌ಗಳನ್ನು ಸ್ವೀಕರಿಸುವುದರಿಂದ, ಆಗಾಗ್ಗೆ ಅಭ್ಯರ್ಥಿಗಳ ಪ್ರಾಯೋಜತ್ವದಲ್ಲಿ ವಿದೇಶಿ ಪ್ರವಾಸದಂತಹ ಘಟನೆಗಳಿಂದ ಶುರುವಾದ ಈ Paid News ನ ಪರಿಕಲ್ಪನೆ ಇಂದು ನೇರವಾಗಿ ಹಣವನ್ನು ಕೊಡುವ ಕಾಲಕ್ಕೆ ತಲುಪಿದೆ. ಇತ್ತೀಚೆಗೆ ಮಾಧ್ಯಮಗಳ ಮಾಲೀಕರು ತಮಗೆ ನಿಯಮಿತವಾಗಿ ಜಾಹೀರಾತುಗಳನ್ನು ನೀಡುತ್ತಿರುವ, ತಮ್ಮ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಳ್ಳುವ ಉದ್ದಿಮೆದಾರರು, ಉದ್ದಿಮೆ ನಡೆಸುವ ಕುಟುಂಬಗಳು ಇವರಿಗೆ ಪ್ರಶಸ್ತಿಗಳನ್ನು ಪ್ರಕಟಿಸಿ, ಅದನ್ನು ವಿತರಿಸಲು ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು ಆಯೋಜಿಸುವ ಹಂತಕ್ಕೆ ಈ Paid News ತಲುಪಿರುವುದು ಕಂಡು ಕಮಿಟಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಲವೊಮ್ಮೆ ಕಣದಲ್ಲಿರುವ ಅಭ್ಯರ್ಥಿಗೆ ಪಬ್ಲಿಸಿಟಿಯನ್ನು ಸಂಪೂರ್ಣವಾಗಿ ನಿರಾಕರಿಸಲಾಗುವುದರ ಮೂಲಕ ಪರೋಕ್ಷವಾಗಿ ಬ್ಲಾಕ್ ಮಾಡಲಾಗುತ್ತದೆ. ಇನ್ನೂ ಕೆಲವೊಮ್ಮೆ ವಯುಕ್ತಿಕ ಸಂಭಂಧದ ನೆಲೆಯಲ್ಲಿ ಅಗತ್ಯಕ್ಕಿತಂಲೂ ಹೆಚ್ಚಿನ ಪಬ್ಲಿಸಿಟಿ ನೀಡುತ್ತಾರೆ. ಈ Paid News ನ ಮತ್ತೊಂದು ಅಪಾಯಕಾರಿ ಮಗ್ಗಲೆಂದರೆ ಖಾಸಗಿ ಒಡಂಬಡಿಕೆಗಳ ಅಡಿಯಲ್ಲಿ ಮಾಧ್ಯಮ ಮತ್ತು ಕಾರ್ಪೋರೇಟ್ ವಲಯಗಳ ನಡುವೆ ಏರ್ಪಡುವ ಅನೈತಿಕ ಮೈತ್ರಿ.

ಈ Paid News ನ ಎಲ್ಲಾ ಮಗ್ಗಲುಗಳನ್ನು ಶೋಧಿಸಿ ಈಗಿನ ಮಟ್ಟದಲ್ಲಿಯೇ ನಿಯಂತ್ರಿಸದಿದ್ದರೆ ಮುಂದೆ ಇದು ದೈತ್ಯಾಕಾರ ಸ್ವರೂಪ ತಾಳುತ್ತದೆ ಎಂದು ಕಮಿಟಿ ಅಭಿಪ್ರಾಯಪಡುತ್ತದೆ. ಸುದ್ದಿ ಮತ್ತು ಸಮಾಚಾರ ಮತ್ತು ಜಾಹೀರಾತು ಇವುಗಳ ನಡುವೆ ಒಂದು ಅಥೆಂಟಿಕ್ ಆದ ಭಿನ್ನತೆಯನ್ನು ಕಾಯ್ದುಕೊಳ್ಳುವಂತೆ ಮಂತ್ರಿಮಂಡಲವು ಈ ನಿಟ್ಟಿನಲ್ಲಿ ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಹೇಳುತ್ತಾ ನಿಜಕ್ಕೂ ಜಾಹೀರಾತು ಮತ್ತು Paid News ನ ನಡುವೆ ವಸ್ತುವಿನ ವಿಷಯದಲ್ಲಿ ಯಾವುದೇ ವ್ಯತ್ಯಾಸ ಇರದಿದ್ದರೂ Paid News ಅನ್ನು ಜಾಹೀರಾತಿನಂತೆ ಬಿಂಬಿಸದೆ ಸುದ್ದಿ ಮತ್ತು ಸಮಾಚಾರದಂತೆ ಬಿಂಬಿಸಲಾಗುತ್ತದೆ. ಇವುಗಳ ನಡುವೆ ಭಿನ್ನತೆಯನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಒಂದು ವೇಳೆ Paid News ಅನ್ನು ಜಾಹೀರಾತೆಂದು ತೋರಿಸುವಾಗಲೂ ಜಾಹೀರಾತು ಎನ್ನುವ ಪದವನ್ನು ಕಣ್ಣಿಗೆ ಕಾಣದಷ್ಟು ಚಿಕ್ಕ ಅಕ್ಷರಗಳಲ್ಲಿ ಪತ್ರಿಕೆಯ ಮೂಲೆಯಲ್ಲಿ ‘Advt.’ ಎಂದು ಮುದ್ರಿಸಿರುತ್ತಾರೆ. ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ಎನ್ನುವ ಸಣ್ಣ ಪದ ನಿಂರತರವಾಗಿ scroll/ticker ಆಗುತ್ತಿರುತ್ತದೆ. ರೇಡಿಯೋದಲ್ಲಿಯಂತೂ ಪ್ರಾಯೋಜಕರ ಹೆಸರನ್ನೇ ಪ್ರಸ್ತಾಪಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕಮಿಟಿಯು ಎಲೆಕ್ಟ್ರಾನಿಕ್ ಮೀಡಿಯಗಾಗಿಯೇ ರೂಪಿಸಿದ ಕೇಬಲ್ ಟೆಲಿವಿಶನ್ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಬರುವ ರೂಲ್ ೭(೧೦)ನಲ್ಲಿ ಸಮಾಚಾರ ಮತ್ತು ಸುದ್ದಿಗಳು ಜಾಹೀರಾತಿಗಿಂತಲೂ ಸ್ಪಷ್ಟವಾಗಿಯೇ ಭಿನ್ನವಾಗಿರಬೇಕು ಮತ್ತು ಇತರೇ tv-mediaಪ್ರಾಯೋಜಿತ ಕಾರ್ಯಕ್ರಮಗಳೊಂದಿಗೆ ಹಸ್ತಕ್ಷೇಪ ಮಾಡಬಾರದೆಂದು ಹೇಳಲಾಗಿದೆ ಎಂದು ಕಮಿಟಿ ವಿವರಿಸಿದೆ. ಇದರ ಜೊತೆಗೆ ಪ್ರೋಗ್ರಾಮ್ ಕೋಡ್‌ನ ಅಡಿಯಲ್ಲಿ ಬರುವ ರೂಲ್ ೬(೧)( ಜ) ನ ಪ್ರಕಾರ ದಿನನಿತ್ಯ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ, ಪ್ರಚೋದನಕಾರಿ, ಅಶ್ಲೀಲ ಸಂಭಾಷಣೆ ಮತ್ತು ದೃಶ್ಯಗಳಿದ್ದರೆ ಅದು ಕಾನೂನುಬಾಹಿರ ಮತ್ತು ಸಂಬಂಧಪಟ್ಟವರು ಶಿಕ್ಷೆಗೊಳಗಾಗಬೇಕಾಗುತ್ತದೆ ಎಂದು ಕಮಿಟಿ ವಿವರಿಸುತ್ತದೆ.

ಹಾಲಿಯಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೀಡಿಯಾ ಹೌಸ್‌ಗಳ ಮೇಲೆ ವಾರ್ತಾ ಮತ್ತು ಪ್ರಚಾರ ಇಲಾಖೆಯು ನಿರಂತರ ಒತ್ತಡ ಹೇರಬೇಕೆಂದು, ಒಂದು ವೇಳೆ ಪಾಲಿಸದಿದ್ದರೆ ಅಂತಹ ಮಾಲೀಕರ ಮೇಲೆ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕೆಂದು ಕಮಿಟಿ ಬಯಸುತ್ತದೆ. ಮುದ್ರಣ ಮಾಧ್ಯಮಗಳ ಮೇಲೆ “ಜಾಹೀರಾತು” ಎನ್ನುವ ಪದವನ್ನು ಬೋಲ್ಡ್ ಆಗಿ ಕಣ್ಣಿಗೆ ಕಾಣುವಂತೆ ಮುದ್ರಿಸಬೇಕೆಂದು ಸರ್ಕಾರವು ಆದೇಶಿಸಬೇಕು ಮತ್ತು ಇಲ್ಲಿ Disclaimer ಪದವನ್ನು ಸೂಕ್ತವಾಗಿ ಮುದ್ರಿಸಬೇಕು. ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ಪ್ರಸಾರದ ಸಮಯದವರೆಗೂ “Advertorial”, ‘ಈ ಭಾಗವು ಜಾಹೀರಾತು’ ಎನ್ನುವ ಪದವನ್ನು, ಮೇಲ್ಭಾಗದ ಮಧ್ಯದಲ್ಲಿ ಆ ಛಾನಲ್ ಹೆಸರಿನ Font Size ನಷ್ಟೇ ದೊಡ್ಡ ಅಕ್ಷರಗಳಲ್ಲಿ ಲಗತ್ತಿಸಿರಬೇಕು. ಪ್ರತಿಯೊಂದು ಕಾರ್ಯಕ್ರಮದ ವಿರಾಮದ ಸಮಯದ ಮುಂಚೆ ಮತ್ತು ನಂತರ ಪ್ರಾಯೋಜಕರ ಹೆಸರನ್ನು ಪ್ರಕಟಿಸಬೇಕು. ರೇಡಿಯೋ ಮಾಧ್ಯಮದಲ್ಲಿ ಪ್ರತಿಯೊಂದು ವಿರಾಮದ ಮುಂಚೆ ಮತ್ತು ನಂತರ ಈ ಭಾಗದ ಪ್ರಾಯೋಜಕರ ಹೆಸರನ್ನು ಪ್ರಕಟಿಸಬೇಕು ಎಂದೂ ಕಮಿಟಿಯು ಅಭಿಪ್ರಾಯ ಪಡುತ್ತದೆ. ಮೇಲಿನ ಶಿಫಾರಸುಗಳ ಅನುಷ್ಟಾನಕ್ಕಾಗಿ ಪಾಲಿಸಿ ನಿರ್ಧಾರಗಳಿಗಾಗಿ ಕಾಯುವ ಅವಶ್ಯಕತೆ ಇಲ್ಲ, ಯಾವುದೇ ಶಾಸನದ ತಿದ್ದುಪಡಿಯ ಅವಶ್ಯಕತೆಯೂ ಇಲ್ಲ. ಸಮಯ ವ್ಯರ್ಥ ಮಾಡದೆ ಜಾರಿಗೊಳಿಸಬೇಕು ಎಂದು ಕಮಿಟಿ ಒತ್ತಾಯಿಸುತ್ತದೆ.

Paid News ಎನ್ನುವ ವಾಸ್ತವ ಸಂಗತಿಯ ಸಂಕೀರ್ಣತೆಯನ್ನು,ಕಾಲ ಕಾಲಕ್ಕೆ ಬದಲಾಗುತ್ತಿರವ ಅದರ ಸ್ವರೂಪಗಳು ಮತ್ತು ಉದ್ದೇಶಗಳನ್ನು ಮತ್ತಷ್ಟು ಸರಳವಾಗಿ ವಿವರಿಸಲು ಮತ್ತು ಯಾವ ಬಗೆಯ ನಿಯಮಗಳು ಮತ್ತು ಅಂಶಗಳು Paid News ಅನ್ನು ಸರಿಯಾಗಿ ಅರ್ಥೈಸುತ್ತವೆ ಎನ್ನುವುದರ ಕುರಿತಾಗಿಯೂ ನಾವೆಲ್ಲ ಸ್ಪಷ್ಟವಾಗಿರಬೇಕು. Corruption-in-News-Mediaಸಚಿವಾಲಯವು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಶಿಫಾರಸ್ಸುಗಳನ್ನು ಕುರುಡಾಗಿ ಒಪ್ಪಿಕೊಳ್ಳದೆ ಸಂಬಂಧಿತ ವ್ಯಕ್ತಿಗಳನ್ನೂ, ಮಾಧ್ಯಮದ ನಿಷ್ಣಾತರೊಂದಿಗೆ ಸಮಾಲೋಚಿಸಿ ಮೇಲಿನ ಎಲ್ಲಾ ಶಿಫಾರಸ್ಸುಗಳ ಅನುಷ್ಟಾನಕ್ಕೆ ಮುಂದಾಗಬೇಕೆಂದು ಕಮಿಟಿ ಒತ್ತಾಯಿಸುತ್ತದೆ.

’Paid News’ನ ಹಗರಣಗಳಲ್ಲಿ ಇಡೀ ಹಣದ ವಹಿವಾಟು ರಹಸ್ಯವಾಗಿ ನಡೆದಿರುತ್ತದೆ.ಈ ಗೌಪ್ಯ ವಹಿವಾಟನ್ನು ಬಹಿರಂಗಗೊಳಿಸುವ ಸಂಧರ್ಭದಲ್ಲಿ ಇಡೀ ಹಗರಣವನ್ನು ಸಾಕ್ಷಿ ಸಮೇತ ಸಾಬೀತುಗೊಳಿಸಲು ಕಷ್ಟವಾಗುತ್ತದೆ. ಉದಾಹರಣೆಗೆ ಚುನಾವಣೆಯ ಸಂಧರ್ಭದಲ್ಲಿ ಕಣದಲ್ಲಿರುವ ಅಭ್ಯರ್ಥಿಯೊಬ್ಬ ಸುದ್ದಿಗಾಗಿ ಹಣವನ್ನು ನೀಡಲು ನಿರಾಕರಿಸಿದರೆ ಮಾಧ್ಯಮಗಳಲ್ಲಿ ಆತನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ ಇದನ್ನು ಸಾಬೀತುಪಡಿಸಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಚುನಾವಣ ಕಮಿಷನ್‌ಗೆ ನಿಜಕ್ಕೂ ಕಷ್ಟಕರವಾಗುತ್ತದೆ. ೨೦೧೦ರಲ್ಲಿ ಬಿಡುಗಡೆಗೊಂಡ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಉಪ ಸಮಿತಿಯ ರಿಪೋರ್ಟನ ಪ್ರಕಾರ Paid News ಅನ್ನು ಮೌಖಿಕವಾಗಿ ಪುಷ್ಟೀಕರಿಸಬಹುದಾದರೂ ಅದನ್ನು ಬೆಂಬಲಿಸಲು ಅವಶ್ಯಕವಾದಂತಹ ದಾಖಲೆಗಳು ದೊರಕದೆ ಇಡೀ ಪ್ರಕರಣದ ಆರೋಪಗಳು ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ದೃಶ್ಯ ಮಾಧ್ಯಮಗಳಲ್ಲಿ ಇದರ Coverage ಅತ್ಯಂತ ಕ್ಷಣಿಕ ಮತ್ತು ಕಡಿಮೆ ಅವಧಿಯಾಗಿರುವುದರಿಂದ ಅದನ್ನು ಪತ್ತೆ ಹಚ್ಚಲೂ ಕಷ್ಟವಾಗುತ್ತದೆ. ಆಂತಹ ಸಂಧರ್ಭದಲ್ಲಿ ಆಗ ಸಾಂಧರ್ಬಿಕ ಪುರಾವೆಗಳನ್ನು (circumstantial evidence) ಆಧಾರವಾಗಿ ಪರಿಗಣಿಸಬಹುದು. ಈ ಸಾಂಧರ್ಬಿಕ ಪುರಾವೆಗಳನ್ನು ಪ್ರಮಾಣೀಕರಿಸಲು, ಪ್ರಸಾರವಾದ ಕಾರ್ಯಕ್ರಮಗಳ ದೃಶ್ಯಾವಳಿಗಳನ್ನು ಸಂಪಾದಿಸಲು ಸಚಿವಾಲಯವು ಮಾಧ್ಯಮ ನಿಪುಣರೊಂದಿಗೆ ಮತ್ತು ಪ್ರಸಾರ ಭಾರತಿಯ ಸಹಯೋಗದೊಂದಿಗೆ ಸೂಕ್ತವಾದ ಕಾನೂನನ್ನು ರೂಪಿಸಬೇಕು

ಸಂಪಾದಕೀಯ ಬಳಗ, ಜಾಹೀರಾತು ವಿಭಾಗ, ಸಾರ್ವಜನಿಕ ಸಂಪರ್ಕ ವಿಭಾಗ, Lobbying ವಿಭಾಗ ಇವೆಲ್ಲವೂ ಒಂದಾಗಿ ಪರಸ್ಪರ ಹೊಂದಾಣಿಕೆ ಮತ್ತು ಸಹಕಾರಗಳ ಮೂಲಕವೇ Paid News ಹಗರಣ ಜನ್ಮ ತಾಳುತ್ತದೆ. ಈ Paid News ಹಗರಣಕ್ಕೆ ಮತ್ತೊಂದು ಪ್ರಮುಖ ಕಾರಣ ಕುಂಠಿತಗೊಳ್ಳುತ್ತಿರವ ಸಂಪಾದಕೀಯ ಮಂಡಳಿಯ/ವರದಿಗಾರರ ಸ್ವಾತಂತ್ರ. ಸಂಪಾದಕರ ಅಧಿಕಾರ ವ್ಯಾಪ್ತಿಯಲ್ಲಿ ಅಡ್ಡಬಂದು ಪ್ರತಿಯೊಂದರಲ್ಲೂ ಮೂಗು ತೂರಿಸುವ ಮಾಲೀಕರು, ಮಾರ್ಕೆಟಿಂಗ್ ಟೀಮ್‌ಗಳು ತಮ್ಮ ಈ ವರ್ತನೆಗಳ ಮೂಲಕ, ಸಂಪಾದಕರ ವೈಯಕ್ತಿಕ ಸ್ವಾತಂತ್ರವನ್ನು,ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಮೊಟುಕುಗೊಳಿಸಲಾಗುತ್ತದೆ. paid-news-cartoonಪ್ರಾರಂಭದಲ್ಲಿ ಈ “Paid News/Advertorials” ನಂತಹ ಸಂಗತಿಗಳನ್ನು ಮಾರ್ಕೆಟಿಂಗ್ ಕಾರ್ಯತಂತ್ರವಾಗಿ ರೂಪಿಸಲಾಗುತ್ತಿತ್ತು. ಆದರೆ ಈಗ ಸಂಗತಿಗಳು ಅಭ್ಯರ್ಥಿಯ ಪರವಾಗಿ ಉಪಯುಕ್ತವಾದ Coverage ಗಳು ಮತ್ತು ವಿರೋಧಿ ಪಕ್ಷದ ಅಭ್ಯರ್ಥಿಯ ವಿರುದ್ಧವಾಗಿ ತೇಜೋವಧೆಯ ವರದಿಗಳು ಪ್ರಕಟಗೊಳ್ಳುವ ಹಂತಕ್ಕೆ ಬಂದು ತಲುಪಿದೆ.

ಈ ವರದಿಗಾರರ ಸ್ವಾತಂತ್ರ ಕುಂಠಿತಗೊಳ್ಳಲು ಚಾಲ್ತಿಯಲ್ಲಿರುವ ಕಾಂಟ್ರಾಕ್ಟ್ ಪದ್ಧತಿಯೂ ಪ್ರಮುಖವಾದ ಕಾರಣ. ಏಕೆಂದರೆ ಈ ಕಾಂಟ್ರಾಕ್ಟ್ ಪದ್ಧತಿಯಿಂದಾಗಿಯೇ ಈ ವರದಿಗಾರರ ಸ್ಥಾನಮಾನವು ಕೇವಲ ಒಬ್ಬ ಮಾರ್ಕೆಟ್ ಏಜೆಂಟರ ಮಟ್ಟಕ್ಕೆ ಕುಸಿಯುತ್ತದೆ. PCI ನ ಪ್ರಕಾರ ಸಂಬಂಧಪಟ್ಟ ಪತ್ರಿಕೆ/ಛಾನಲ್‌ನೊಂದಿಗೆ ಕಾಲಕಾಲಕ್ಕೆ ತನ್ನ ಕಾಂಟ್ರಾಕ್ಟ್ ಅನ್ನು ನವೀಕರಿಸಿಕೊಳ್ಳಲು ವರದಿಗಾರರು ನಿರಂತರವಾಗಿ ಫಲಿತಾಂಶವನ್ನು ಕೊಡುತ್ತಿರಬೇಕಾಗುತ್ತದೆ. ಈ ರೀತಿಯಾಗಿ ಕಾಂಟ್ರಾಕ್ಟ್ ಪದ್ಧತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮಾಲೀಕ ವರ್ಗ ಅನೇಕ ಬಾರಿ ವರದಿಗಾರರ ನೆತ್ತಿಯ ಮೇಲೆ ವರ್ಗಾವಣೆಯ ತೂಗುಕತ್ತಿ ನೇತಾಡಿಸುತ್ತಿರುತ್ತದೆ. ಕೆಲವು ನಗರಗಳನ್ನು ಹೊರತುಪಡಿಸಿ ಇತರೇ ಪಟ್ಟಣ ಮತ್ತು ಸಣ್ಣ ಹೋಬಳಿ ಮಟ್ಟದಲ್ಲಿ ಕೆಲಸ ಮಾಡುವ ವರದಿಗಾರರ ವೇತನ ಕನಿಷ್ಠ ಮಟ್ಟದಲ್ಲಿರುತ್ತದೆ. ಕೆಲವು ಬಾರಿ ಕಾಂಟ್ರಾಕ್ಟ್ ವರದಿಗಾರರಿಗೆ ಕಮಿಷನ್ ಪದ್ಧತಿಯಲ್ಲಿ ವೇತನವನ್ನು ನೀಡಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಸಂಬಳವನ್ನು ಕೊಡುತ್ತಾರೆ. ಕಮಿಟಿಯು ಮಾಧ್ಯಮರಂಗದಲ್ಲಿರುವ ಎಲ್ಲಾ ಪತ್ರಕರ್ತರು ಕಾರ್ಯನಿರತ ಪತ್ರಕರ್ತರ ಆಕ್ಟ್ ನ ಅಡಿಯಲ್ಲಿ ಬರುವಂತೆ ಕಾನೂನು ರೂಪಿಸಬೇಕೆಂದು ಆಶಿಸಿದೆ.

PCI ನ ಉಪಸಮಿತಿಯ ವರದಿ “Election, Coverage, Monitoring in Gujarat” ಯಲ್ಲಿ Paid News ನ ಕಾಂಟ್ರಾಕ್ಟ್ ವಹಿವಾಟನ್ನು ಮೇಲ್ಮಟ್ಟದಲ್ಲಿ ರಹಸ್ಯವಾಗಿ ಅಂತಿಮಗೊಳಿಸಲಾಗುತ್ತದೆ, ನಂತರ ಕಾಲಕಾಲಕ್ಕೆ ನಮಗೆ ಮೇಲಿನಿಂದ ನಿರ್ದಿಷ್ಟ ಸುದ್ದಿಯನ್ನು ಅಥವಾ ನಿರ್ದಿಷ್ಟ ಫೋಟೋಗಳನ್ನು ಪ್ರಕಟಿಸಬೇಕೆಂದು words_for_price_paid-newsಆದೇಶಗಳು ಬರುತ್ತವೆ ಎಂದು ಹಲವಾರು ಸಂಪಾದಕರು ಮತ್ತು ಪತ್ರಕರ್ತರು ವಿವರಿಸಿದರು ಎಂದು ವಿವರಿಸಲಾಗಿದೆ. ಆದರೆ ಪತ್ರಕರ್ತರ ನೀತಿಸಂಹಿತೆಯ ನಿಬಂಧನೆ ಪ್ಯಾರಾ ೩೭ (A) ನ ಅಡಿಯಲ್ಲಿ ಯಾವುದೇ ಸಂಧರ್ಭದಲ್ಲಿಯೂ ಮಾಧ್ಯಮದ ಮಾಲೀಕರು ತಮ್ಮ ಸಂಪಾದಕರಿಗೆ ವಯುಕ್ತಿಕ ಹಿತಾಸಕ್ತಿಗಳನ್ನು ಪಾಲಿಸುವಂತೆ ನಿರ್ದೇಶನಗಳನ್ನು ನೀಡಬಾರದೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ೨೦೧೨ರ ಗುಜಾರಾತ್ ಚುನಾವಣೆಯ ಸಂಧರ್ಭದಲ್ಲಿ ೧೨೬ Paid News ಕೇಸುಗಳನ್ನು ದಾಖಲೆ ಸಮೇತ ಮಂಡಿಸಿದೆ. ಇದರಲ್ಲಿ ಕಣದಲ್ಲಿದ್ದ ೬೧ ಅಭ್ಯರ್ಥಿಗಳು Paid News ನ ಹಗರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೇ ಸಂಧರ್ಬದಲ್ಲಿ ಜಿಲ್ಲಾ ಮಟ್ಟದ ಪ್ರಮಾಣಪತ್ರ ಮತ್ತು ಮೇಲುಸ್ತುವಾರಿ ಕಮಿಟಿಯು ೪೧೪ Paid News ಹಗರಣಗಳನ್ನು ಪತ್ತೆಹಚ್ಚಿದೆ. ಈ Paid News ನಲ್ಲಿ ಭಾಗಿಯಾಗಿರುವ ಶಂಕಿತರು ತಾವು ವಕಾಲತ್ತು ವಹಿಸುವ ಅಭ್ಯರ್ಥಿಗಳ ಪರವಾಗಿ ಕರಪತ್ರಗಳನ್ನು ಹಂಚುತ್ತಾ ಆತನ ವಿರೋಧಿಗಳ ವಿರುದ್ಧವಾಗಿ ಅಪಪ್ರಚಾರ ಮಾಡುತ್ತಿದ್ದರು ಎನ್ನುವ ಮತ್ತೊಂದು ಅಘಾತಕಾರಿ ಸಂಗತಿ ಬಯಲಾಗಿದೆ.

ಮಾಧ್ಯಮರಂಗದ ಮಾಲೀಕರು ಮತ್ತು ಕಾರ್ಪೋರೇಟ್ ಸಂಸ್ಥೆಗಳ ನಡುವೆ ಆಸ್ತಿತ್ವದಲ್ಲಿರುವ ಖಾಸಗಿ ಒಡಂಬಡಿಕೆಗಳ ಸ್ವರೂಪದ ಕುರಿತು ಮಾತನಾಡುತ್ತ ಕಮಿಟಿಯು ಈ ಖಾಸಗಿ ಒಡಂಬಡಿಕೆಗಳ ವಿಧಿವಿಧಾನಗಳೇ ಈ Paid News ನಂತಹ ವಿದ್ಯಮಾನಗಳಿಗೆ ಅಪಾಯಕಾರಿಯಾದ ಮುನ್ನುಡಿಗಳಾಗಿರುತ್ತವೆ ಎಂದು ಕಳವಳ ವ್ಯಕ್ತಪಡಿಸುತ್ತದೆ. ಈ ಖಾಸಗಿ ಒಡಂಬಡಿಕೆಗಳ ಪ್ರಕಾರ ಕಾರ್ಪೋರೇಟ್ ಸಂಸ್ಥೆಗಳು ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ, ಅನುಕೂಲಕರ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಮಾಧ್ಯಮರಂಗದ ಮಾಲೀಕತ್ವದ ಸಂಸ್ಥೆಗಳಿಗೆ ತನ್ನ ಶೇರುಗಳನ್ನು ವರ್ಗಾಯಿಸುತ್ತದೆ. ಆದರೆ ಈ ವ್ಯವಹಾರವು ಜರ್ನಲಿಸಂನ ನೀತಿನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಹಾಗೂ Paid News/Advertorials ಮಾದರಿಯ ಅನೈತಿಕ ಕಾರ್ಯವಿಧಾನಕ್ಕೆ ನಾಂದಿ ಹಾಡುತ್ತದೆ ಎಂದು ಕಮಿಟಿಯ ಅಭಿಪ್ರಾಯವಾಗಿದೆ. ಈ ಈ ಖಾಸಗಿ ಒಡಂಬಡಿಕೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕೆಂದು, ಮತ್ತು ಮಾಧ್ಯಮಗಳ ಮಾಲೀಕರು ತಮ್ಮ ಎಲ್ಲ ಫೈನಾನ್ಸ್ ವ್ಯವಹಾರಗಳು, ಶೇರ್‌ಗಳ ಒಡೆತನದ ಕುರಿತಾಗಿ ತಮ್ಮ ವೆಬ್‌ಸೈಟುಗಳಲ್ಲಿ ವಿವರವಾದ ಮಾಹಿತಿ ನೀಡಬೇಕೆನ್ನುವ ನಿಯಮವನ್ನು ರೂಪಿಸಬೇಕೆಂದು ಸಚಿವಾಲಯವನ್ನು ಕಮಿಟಿಯು ಒತ್ತಾಯಿಸುತ್ತದೆ.

ಒಂದೇ ಮಾಲೀಕತ್ವದ ಸಂಸ್ಥೆಯು ವಿವಿಧ ಮಾಧ್ಯಮಗಳ (ಮುದ್ರಣ, ದೃಶ್ಯ, ರೇಡಿಯೋ) ಒಡೆತನವನ್ನು ಹೊಂದಿರುವುದು ಮತ್ತು ಸಾರ್ವಜನಿಕವಾಗಿ ಏಕಸ್ವಾಮ್ಯವನ್ನು ಸಾಧಿಸುವುದು Paid News ನಂತಹ ವಿದ್ಯಮಾನಗಳಿಗೆ ಕಾರಣವಾಗುವಂತಹ ಮತ್ತೊಂದು ಗಹನವಾದ ಸಂಗತಿ. ಈ ಏಕಸ್ವಾಮ್ಯಕ್ಕೆ ಕಡಿವಾಣ ಹಾಕಲು ಕಾನೂನು ಇಲ್ಲದಿರುವುದರಿಂದ ಇಲ್ಲಿ ’ಬಾಡಿಗೆ ಮಾಲೀಕರು’ ಜನ್ಮ ತಳೆಯುತ್ತಾರೆ. ಈ ಎಲ್ಲಾ ಸಂಕೀರ್ಣತೆಯು ಸುದ್ದಿ ಸಮಾಚಾರಗಳು ಅಥೆಂಟಿಕ್ ಸ್ವರೂದಲ್ಲಿ ಇರುವುದೇ ಇಲ್ಲ. ಕಮಿಟಿಯು ಇದನ್ನು ಉದಾಹರಿಸುತ್ತಾ ೨೦೦೮ರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಮೇಲ್ಕಾಣಿಸಿದ ಸಂಗತಿಗಳನ್ನು TRAI ನ ಗಮನಕ್ಕೆ ತರುತ್ತಾ ಕಂಪನಿಗಳು ಬಹುಮಾಲೀಕತ್ವಕ್ಕಾಗಿ ಲೈಸೆನ್ಸ್/ಪರವಾನಗಿ ಪಡೆಯಲು, ನೋಂದಣಿ ಮಾಡಲು ಸುಲುಭವಾಗದಂತೆ, ಭ್ರಷ್ಟಾಚಾರವು ಮಿತಿಮೀರದಂತೆ ಕಡಿವಾಣ ಹಾಕುವಂತಹ ಪಾಲಿಸಿಗಳನ್ನು, ಕಟ್ಟುನಿಟ್ಟಾದ ಕಾನೂನುಗಳನ್ನು ರೂಪಿಸಬೇಕೆಂದು ಅಭಿಪ್ರಾಯಪಡುತ್ತದೆ. ನಿರಂತರ ಪರಾಮರ್ಶೆಯ ನಂತರ ಮುದ್ರಣ, ದೃಶ್ಯ, ರೇಡಿಯೋ ವಲಯಗಳಲ್ಲಿ election-paid-newsಮಾಧ್ಯಮರಂಗದ ಎಲ್ಲಾ ಮಗ್ಗಲುಗಳನ್ನು ಒಳಗೊಳ್ಳುವಂತೆ ಬಹುತ್ವದ, ವೈವಿಧ್ಯತೆಯ ವಾತಾವರಣವನ್ನು ನಿರ್ಮಿಸಬೇಕೆಂದು ಫೆಬ್ರವರಿ ೨೦೦೯ರಲ್ಲಿ TRAI ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡುತ್ತದೆ. ಎರಡು ವರ್ಷಕ್ಕೊಮ್ಮೆ ಇದನ್ನು ಪುನಃ ಪರಾಮರ್ಶಿಸಬೇಕೆಂದು ಸಹ ಶಿಫಾರಸ್ಸು ಮಾಡುತ್ತದೆ. ಇದರ ಆಧಾರದ ಮೇಲೆ ವಾರ್ತಾ ಮತ್ತು ಪ್ರಚಾರ ಇಲಾಖೆಯು Administrative Staff College of India, Hyderabad ನ ನೇತೃತ್ವದಲ್ಲಿ ಅಧ್ಯಯನವನ್ನು ಕೈಗೊಳ್ಳುತ್ತದೆ.೨೦೧೨ ರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು TRAI ಗೆ ಸಹ ಅಧ್ಯಯನವನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತದೆ. ೧೩, ಫೆಬ್ರವರಿ ೨೦೧೩ರಲ್ಲಿ TRAI ಸಂಸ್ಥೆಯು Administrative Staff College of India, Hyderabad ನ ಸಹಬಾಗಿತ್ವದಲ್ಲಿ ಪರಾಮರ್ಶೆ ವರದಿಯನ್ನು ಒಪ್ಪಿಸುತ್ತದೆ. ಇದರ ಆಧಾರದ ಮೇಲೆ ಕಮಿಟಿಯು ೨೦೧೨-೧೩ ನೇ ಸಾಲಿನ ಅನುದಾನ ಬೇಡಿಕೆಯ ಮೇಲಿನ ೩೦ ಸೆಕೆಂಡ್ ವರದಿಯಲ್ಲಿ ಶೀಘ್ರವಾಗಿ ಮಾಧ್ಯಮಗಳ ಮಾಲೀಕತ್ವದ ಏಕಸ್ವಾಮ್ಯತೆಯನ್ನು ಕೊನೆಗಾಣಿಸಬೇಕೆಂದು ಒತ್ತಾಯಿಸುತ್ತದೆ. Paid News ಅನೈತಿಕತೆಯು ಕೇವಲ ಭ್ರಷ್ಟಾಚಾರವನ್ನು ಹುಟ್ಟುಹಾಕುವುದಿಲ್ಲ, ಜೊತೆಗೆ ಓದುಗರನ್ನೂ ಮತ್ತು ವೀಕ್ಷಕರನ್ನೂ ದಾರಿ ತಪ್ಪಿಸುತ್ತದೆ, ಭ್ರಷ್ಟರನ್ನಾಗಿಸುತ್ತದೆ. ಇದು ಪ್ರಜಾಪ್ರಭುತ್ವದ ಪ್ರಕ್ರಿಯೆಗೂ ಸಹ ಕಳಂಕವನ್ನು ತರುತ್ತದೆ. PCI ನ ಉಪಸಮಿತಿಯು ೨೦೦೯ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಕುರಿತಾಗಿ ಹೇಳುತ್ತ “ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಕರೆಯಲ್ಪಡುವ ಪತ್ರಿಕಾರಂಗವು Paid News ನಂತಹ ಹಗರಣಗಳ ಮೂಲಕ ಭ್ರಷ್ಟಾಚಾರದಲ್ಲಿ ಹೂತುಹೋಗಿದೆ” ಎಂದು ಕಟುವಾಗಿ ಟೀಕಿಸುತ್ತದೆ. ಇದರಿಂದಾಗಿ ಪ್ರಜಾಪ್ರಭುತ್ವದ ಸಂರಚನೆ ದುರ್ಬಲಗೊಳ್ಳುತ್ತದೆ ಮಾತ್ರವಲ್ಲ ರಾಜಕಾರಣದಲ್ಲಿ ಅನೈತಿಕ ಹಣದ ಒಳಹರಿವು ಜಾಸ್ತಿಯಾಗುತ್ತದೆಂದು ಕಮಿಟಿಯು ಆತಂಕ ವ್ಯಕ್ತಪಡಿಸಿದೆ. ವಿಭಿನ್ನ ವಲಯಗಳಿಂದ ಬಂದ ಅಭಿಪ್ರಾಯದ ಪ್ರಕಾರ ಜನಪ್ರತಿನಿಧಿಗಳ ಅಕ್ಟ್ ೧೯೫೧ಗೆ ತಿದ್ದುಪಡಿ ತಂದು Paid News ಎನ್ನವುದು ಚುನಾವಣಾ ಅಪರಾಧ, ಶಿಕ್ಷೆಗೆ ಅರ್ಹ ಎಂದು ಉಲ್ಲೇಖಿಸಬೇಕೆಂದು ಕಮಿಟಿ ಅಭಿಪ್ರಾಯಪಡುತ್ತದೆ. ಈ ತಿದ್ದುಪಡಿಯನ್ನು ಚುನಾವಣಾ ಆಯೋಗವೂ ಸೂಚಿಸಿದೆ.

ಮತದಾನದ ದಿನಕ್ಕಿಂತ ೪೮ ಗಂಟೆಗಳ ಮೊದಲು ಚುನಾವಣಾ ಪ್ರಚಾರವನ್ನು ನಿಷೇಧಿಸಿರುವಂತಹ ಕಾನೂನನ್ನು ಮುದ್ರಣ, ದೃಶ್ಯ, ರೇಡಿಯೋ ಮಾಧ್ಯಮಗಳಿಗೂ ಅನ್ವಯಿಸಬೇಕೆಂದು ಕಮಿಟಿ ಒತ್ತಾಯಿಸುತ್ತದೆ. ಜೊತೆಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಬೇಕು. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಚುನಾವಣಾ ವೆಚ್ಚದ ಮಿತಿಯು ವಿಭಿನ್ನವಾಗಿರಬೇಕು ಮತ್ತು ಅಂತರವಿರಬೇಕು. ಈ Paid Newsನ ಕುರಿತಾದ ದೂರುಗಳನ್ನು ಸ್ವೀಕರಿಸಲು ಮತ್ತು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ಸೆಲ್ ಒಂದನ್ನು ಸ್ಥಾಪಿಸಬೇಕು. ಅಭ್ಯರ್ಥಿ ಯಾವ ಪತ್ರಿಕೆಗಳಿಗೆ, ದೃಶ್ಯ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಾರೋ, ಯಾವ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಅವರ ಕುರಿತಾದ ವಿವರಗಳು ಹೆಚ್ಚಾಗಿ ಪ್ರಕಟಗೊಳ್ಳುತ್ತವೆಯೋ ಅಂತಹ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ತಮ್ಮ ಶೇರುಗಳನ್ನು, ತಾವು ತೊಡಗಿಸಿದ ಬಾಂಡ್‌ಗಳನ್ನು ಬಹಿರಂಗಪಡಿಸಬೇಕು ಎಂದು ಕಮಿಟಿ ಆಗ್ರಹಿಸುತ್ತದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕಾನೂನು ಮತ್ತು ಸಂಸದೀಯ ವ್ಯವಹಾರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ PAID _NEWSಸಹಯೋಗದೊಂದಿಗೆ ಚುನಾವಣ ಕಮಿಷನ್‌ನ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. Paid News ನಂತಹ ಅವ್ಯವಹಾರಗಳನ್ನು ಪತ್ತೆ ಅದರ ವಿರುದ್ಧ ಹಚ್ಚಿ ಕಟ್ಟುನಿಟ್ಟಾದ ಕ್ರಮಗಳನ್ನು ಜರುಗಿಸಲು Regulatory bodies/organisations/professional bodies ಗಳಾದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಭಾರತೀಯ ಸುದ್ದಿ ಪ್ರಸಾರ ಮಂಡಳಿ, ಭಾರತೀಯ ಪ್ರಸಾರ ಫೆಡರೇಶನ್, ಭಾರತೀಯ ಜಾಹಿರಾತು ಕೌನ್ಸಿಲ್, ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಕೇಂದ್ರ, ಎಡಿಟರ್ಸ್ ಗಿಲ್ಡ್ ಇಂಡಿಯಾ ಮತ್ತು ಸಿವಿಲ್ ಸೊಸೈಟಿ, ಯೂನಿಯನ್‌ಗಳು ಇನ್ನೂ ಮುಂತಾದ ಕಾನೂಬದ್ಧ ಸಂಸ್ಥೆಗಳನ್ನು ಮತ್ತು Guidelines/Norms/Codes/Acts ಗಳಾದ ಕಾರ್ಯನಿರತ ಪತ್ರಕರ್ತರ ಸಂಘ, ಭಾರತೀಯ ಸುದ್ದಿ ಪ್ರಸಾರ ಮಂಡಳಿ ಕೋಡ್, PCI Act, ಕಮರ್ಶಿಯಲ್ ಜಾಹೀರಾತು ನಿಯಂತ್ರಣದ ದೂರದರ್ಶನ ಕೋಡ್, Press and Registration of Books and Publications Act, 1867, the Cable Television Network (Regulation) Act, 1995, the Representation of Peoples Act, 1951, Income Tax Act, 1961, the Companies Act 1956 ಗಳನ್ನು ಬಳಸಿಕೊಳ್ಳಬೇಕು. ಆದರೆ ಮೇಲೆ ತಿಳಿಸಿದ ಕಾನೂನುಬದ್ಧ ಸಂಸ್ಥೆಗಳು Paid News ನಂತಹ ಅವ್ಯವಹಾರಗಳನ್ನು ನಿಯಂತ್ರಿಸುವಷ್ಟು ಪರಿಣಾಮಕಾರಿಗಿಲ್ಲ ಎಂದು ಕಮಿಟಿ ದೂರಿದೆ. PCI ಮತ್ತು ಎಡಿಟರ್ಸ್ ಗಿಲ್ಡ್ ಇಂಡಿಯಾಗಳಂತಹ ಸಂಸ್ಥೆಗಳು ತಾವು ಸಂಬಂಧಪಟ್ಟ ಮಾಧ್ಯಮಗಳ ಮೇಲೆ ಒತ್ತಡವನ್ನು ಹೇರಬಹುದೇ ಹೊರತು ಅಧಿಕಾರ ಬಳಸಿ ಕಟ್ಟುನಿಟ್ಟಾದ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೇಳಿವೆ. ತಮ್ಮ ಸಂಸ್ಥೆಗಳು ಕಾನೂನುಬದ್ಧವಾದ ಸರ್ಕಾರಿ ಸಂಸ್ಥೆಗಳಾದರೂ ಹಲ್ಲುಗಳಿಲ್ಲದ ಅಸಹಾಯಕ ಸಂಸ್ಥೆಗಳಾಗಿವೆ ಎಂದು ಒಪ್ಪಿಕೊಳ್ಳುತ್ತಾರೆ. ಸರ್ಕಾರವೇ ನೇಮಿಸಿದ ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಕೇಂದ್ರವು ಕೇವಲ ಶಿಫಾರಸ್ಸನ್ನು ಕೊಡುವ ಸಂಸ್ಥೆಯಾಗಿದೆಯೇ ಹೊರತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಅಧಿಕಾರವೇ ಇಲ್ಲ, ೨೭೬ ಜಿಲ್ಲೆಗಳಲ್ಲಿರುವ ಜಿಲ್ಲಾ ಮಟ್ಟದ ಮತ್ತು ೧೬ ರಾಜ್ಯಗಳಲ್ಲಿರುವ ರಾಜ್ಯ ಮಟ್ಟದ ಮಾನಿಟರಿಂಗ್ ಕಮಿಟಿಗಳು ಚುನಾವಣಾ ಸಂಧರ್ಭದಲ್ಲಿ ಮಾತ್ರ Paid News ಅವ್ಯವಹಾರಗಳನ್ನು ಪರಿಶೀಲಿಸುತ್ತದೆ ಹೊರತಾಗಿ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಕಮಿಟಿಯು ಅಭಿಪ್ರಾಯಪಟ್ಟಿದೆ. ಮತ್ತೊಂದು ಕಡೆ ಮಾಧ್ಯಮಗಳು ಅವ್ಯವಹಾರಗಳನ್ನು ನಿಯಂತ್ರಿಸಲು ಸ್ವತಃ News and current affairs channels, non-news and general entertainment channels, ASCI ಗಳನ್ನು ಸ್ಥಾಪಿಸಿಕೊಂಡಿವೆ. ಆದರೆ ಇದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ಇನ್ನು News and Current Affairs Channels ೨೦೦೮ರಲ್ಲಿ ತಾನು ೧೯೮ ದೂರುಗಳನ್ನು ಸ್ವೀಕರಿಸಿದ್ದು ಅದರಲ್ಲಿ Paid News ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಒಂದು ದೂರೂ ಬಂದಿರಲಿಲ್ಲ ಎಂದು ಹೇಳಿದೆ. ಇದು ಕಣ್ಣೊರೆಸುವ ತಂತ್ರವೆನ್ನುವ ಅಪಾದನೆಯನ್ನು ಪುಷ್ಟೀಕರಿಸುತ್ತದೆ.

Paid News ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ೨೦೦೯ -೨೦೧೩ರವೆರೆಗೆ ಸುಮಾರು ೪೦ ದೂರುಗಳು ದಾಖಲಾಗಿದ್ದವು. ಇದರಲ್ಲಿ ಕಾಲುಭಾಗದಷ್ಟು ಪ್ರಕರಣಗಳು ಸೂಕ್ತ ದಾಖಲಾತಿಗಳಿಲ್ಲದೆ ಬಿದ್ದು ಹೋದವು. ೧೭ ಪ್ರಕರಣಗಳಲ್ಲಿ ಸಂಬಂಧಪಟ್ಟ ಮಾಧ್ಯಮಗಳಿಗೆ ಮೌಖಿಕ/ಲಿಖಿತ ಎಚ್ಚರಿಕೆಗಳನ್ನು ಮಾತ್ರ ನೀಡಿ ಮುಕ್ತಾಯಗೊಳಿಸಲಾಯಿತು.

ಉದಾಹರಣೆಗೆ:
ಮೆ/ಸ ಜಿಂದಾಲ್ ಸ್ಟೀಲ್ ಪವರ್ ಲಿ. ವರ್ಸಸ್ ಮೆ/ಸ. Zee ಲಿ. ನಡುವಿನ ಕೇಸ್ ಹಾಲಿಯಲ್ಲಿ ಚಾಲ್ತಿಯಲ್ಲಿರುವ ಇಡೀ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸಾಬೀತುಪಡಿಸುತ್ತದೆ. ಮೆ/ಸ. Zee ಲಿ ಗುಂಪು News Broadcasters Association and Rules framed under the Cable Television Networks (regulation) Act, 1995ರ ಅಡಿಯಲ್ಲಿ ಬರುವ ಎಲ್ಲಾ ನೀತಿನಿಯಮಗಳನ್ನು, ಹಕ್ಕುಬಾಧ್ಯತೆಗಳನ್ನು ಉಲ್ಲಂಘಿಸಿ ತಪ್ಪು ಮಾಹಿತಿಗಳನ್ನೊಳಗೊಂಡ, ಅಸತ್ಯವಾದ, ಅವಹೇಳನಕಾರಿ ಪ್ರೋಗ್ರಾಮ್‌ಗಳನ್ನು ಪ್ರಸಾರ ಮಾಡಿದೆ ಎಂದು ಮೆ/ಸ ಜಿಂದಾಲ್ ಸ್ಟೀಲ್ ಪವರ್ ಲಿ. ಗುಂಪು ಆಪಾದನೆಗಳನ್ನು ಮಾಡಿತು. ಲೈಸನ್ಸ್ ಅನ್ನು ಕೊಡುವ ಅಧಿಕಾರ ವಾರ್ತಾ ಮತ್ತು ಪ್ರಚಾರ ಸಚಿವಾಲಯಕ್ಕೆ ಇದ್ದ ಹಾಗೆಯೇ ಅಕ್ರಮಗಳು ಕಂಡುಬಂದರೆ ಲೈಸನ್ಸ್ ಅನ್ನು ಹಿಂತೆಗೆದುಕೊಳ್ಳುವ ಅಧಿಕಾರವೂ ವಾರ್ತಾ ಮತ್ತು ಪ್ರಚಾರ ಸಚಿವಾಲಯವಕ್ಕೆ ಇರುತ್ತದೆ. ಆದರೆ ಸಾಕ್ಷಾಧಾರಗಳನ್ನು ಮಂಡಿಸುವ ಸಂಧರ್ಭದಲ್ಲಿ ಇದು ಸಬ್ ಜುಡೀಸ್ ಆಗುತ್ತದೆ ಎನ್ನುವ ನೆಪವೊಡ್ಡಿ ವಾರ್ತಾ ಮತ್ತು ಪ್ರಚಾರ ಸಚಿವಾಲಯವು ತನ್ನ ದೂರಿನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಜಿಂದಾಲ್ ಗುಂಪು ಆರೋಪಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಈ ವಿಷಯವನ್ನು Inter Ministerial Committee (IMC) ಗೆ ಹಸ್ತಾಂತರಿಸುತ್ತ ಇಡೀ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ IMC ನೀಡುವ ವರದಿಯನ್ನು ನ್ಯಾಯಾಂಗದ ಪರಿಶೀಲನೆಗೆ ಕೊಡಲಾಗುವುದು ಎಂದು ವಾರ್ತಾ ಮತ್ತು ಪ್ರಚಾರ ಸಚಿವಾಲಯವು tv-mediaಕಮಿಟಿಗೆ ಸ್ಪಷ್ಟೀಕರಣ ನೀಡಿತು. ಆದರೆ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಸಬ್ ಜುಡೀಸ್‌ನ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳ ಕುರಿತಾದ ಗೊಂದಲಗಳು, ಎರಡೂ ಗುಂಪುಗಳ ನಡುವಿನ ಈ ಕಲಹ ಸಾರ್ವಜನಿಕ ಹಿತಾಸಕ್ತಿಗೆ ಒಳಪಡುತ್ತದೆಯೇ ಅಥವಾ ಕಾನೂನು ಪರಿಶೀಲನಗೆ ಒಳಪಡುತ್ತದೆಯೇ ಎಂದು ನಿರ್ಣಯಿಸುವಲ್ಲಿನ ಅನಿಶ್ಚತೆ ಮತ್ತು ಕಾನೂನುಬದ್ಧವಾದ NBSA ದಂತಹ regulatory Bodies ಗಳ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗದಂತಹ ಅಸಹಾಯಕತೆ ಇವೆಲ್ಲವನ್ನೂ ವಾರ್ತಾ ಮತ್ತು ಪ್ರಚಾರ ಸಚಿವಾಲಯವು ಕೈಗೆತ್ತಿಕೊಂಡು ಅದನ್ನು ಕ್ರಮಬದ್ಧವಾಗಿ ಸರಿಪಡಿಸಬೇಕೆಂದು ಕಮಿಟಿ ಆದೇಶಿಸಿದೆ. ಆದಷ್ಟೂ ಕಡಿಮೆ ಅವಧಿಯಲ್ಲಿ ಈ ಕಲಹಗಳನ್ನು ಮುಕ್ತಾಯಗೊಳಿಸಬೇಕೆಂದು ಒತ್ತಾಯಿಸಿದೆ. ಅಲ್ಲದೆ ಇಡೀ ವ್ಯಾಜ್ಯವು ಕೋರ್ಟಿನ ಮಟ್ಟಿಲೇರಿದ್ದರೂ ಆಡಳಿತ ವ್ಯವಸ್ಥೆಯು ಸ್ಥಗಿತಗೊಳ್ಳದಂತೆ ಎಚ್ಚರವಹಿಬೇಕೆಂದು ಕಮಿಟಿ ಅಭಿಪ್ರಾಯಪಟ್ಟಿದೆ.

ಇತರೇ ದೇಶಗಳು ಈ Paid News ನಂತಹ ಅವ್ಯವಹಾರಗಳನ್ನು ನಿಯಂತ್ರಿಸಲು ರೂಪಿಸಿದ ಕಾನೂನಗಳನ್ನು ವಾರ್ತಾ ಮತ್ತು ಪ್ರಚಾರ ಸಚಿವಾಲಯವು ಅಧ್ಯಯನ ಮಾಡಬೇಕು ಮತ್ತು ಅದನ್ನು ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು ಎಂದು ಕಮಿಟಿ ಹೇಳುತ್ತದೆ.

ಸಚಿವಾಲಯವು PCI ಗೆ ಹೆಚ್ಚಿನ ಕಾನೂಬದ್ಧ ಅಧಿಕಾರವನ್ನು ಕೊಡಬೇಕೆಂದು ಈ ಸಂಸ್ಥೆಗೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಧಿಕಾರಕ್ಕಾಗಿ ಅಕ್ಟ್‌ನಲ್ಲಿ ಸೂಕ್ತ ತಿದ್ದುಪಡಿ ತರಬೇಕೆಂದು ಕಮಿಟಿಗೆ ಮನವರಿಕೆ ಮಾಡಿಕೊಟ್ಟಿದೆ. ಆದರೆ PCI ಯನ್ನು ಬಲಪಡಿಸಲು ವಾರ್ತಾ ಮತ್ತು ಪ್ರಚಾರ ಸಚಿವಾಲಯವು ತೋರಿಸುತ್ತಿರುವ ನಿರಾಸಕ್ತಿ ಕುರಿತು ಕಳವಳ ವ್ಯಕ್ತಪಡಿಸಿದೆ. ಇದರ ಒಟ್ಟಾರೆ ಸ್ವರೂಪದ ಫಲವಾಗಿ ಈ PCIನ ಭಾಗವಾಗಿರುವ ಮುದ್ರಣ ವಲಯದ ಮಾಲೀಕರು Paid News ನಂತಹ ಅವ್ಯವಹಾರಗಳ ಕುರಿತಾದ ವರದಿಗಳನ್ನು ಸಾರ್ವಜನಿಕವಾಗಿ ಮಂಡಿಸದಂತೆ ಒತ್ತಾಯ ತರುತ್ತಿದ್ದಾರೆ ಎಂದು PCIನ ಸದಸ್ಯರೊಬ್ಬರು ಹೇಳಿಕೆಯನ್ನು ನೀಡಿದ್ದರು. ಇನ್ನೂ ಕೆಟ್ಟದಾದ್ದೆಂದರೆ ಅತ್ಯಂತ ತೆಳುವಾದ ಬಹುಮತದ ಮೂಲಕ (ಈ ಸಂದರ್ಭದಲ್ಲಿ ಕೈ ಎತ್ತುವುದರ ಮೂಲಕ) ಉಪಸಮಿತಿಯ ವರದಿಯನ್ನು ತಿರಸ್ಕರಿಸಲಾಯಿತು. ಅಲ್ಲದೆ ಈ ಬಗೆಯ ತೆಳುವಾದ ಬಹುಮತದ ಕುರಿತಾಗಿ PCIನ ಇತರೇ ಸದಸ್ಯರ ಭಿನ್ನಮತದ ಅಭಿಪ್ರಾಯ ಮಂಡನೆಗೆ ಅವಕಾಶವೇ ಸಿಗಲಿಲ್ಲ. ಹೀಗಾಗಿ PCIನ ಸಂಯೋಜನೆಯನ್ನೇ ಪುನಃ ರೂಪಿಸಬೇಕಾಗಿದೆ ಎಂದು ಕಮಿಟಿ ಅಭಿಪ್ರಾಯ ವ್ಯಕ್ತಪಡಿಸಿದೆ. ೧೯೭೮ರಲ್ಲಿ PCI ಚಾಲ್ತಿಗೆ ಬಂದಿತು. ಆಗ ಕೇವಲ ಮುದ್ರಣ ಮಾಧ್ಯಮವು ಅದರ ಭಾಗವಾಗಿತ್ತು. ಎಲೆಕ್ಟ್ರಾನಿಕ್ ಮಾಧ್ಯಮವು ಕೇಂದ್ರ ಸರ್ಕಾರದ ಹಿಡಿತದಲ್ಲಿತ್ತು. ಈ ಕಾರಣಕ್ಕಾಗಿ PCI ಗೆ ಕೇವಲ ಮುದ್ರಣ ಮಾಧ್ಯಮವನ್ನು ನಿಯಂತ್ರಿಸುವ ಅಧಿಕಾರ ಕೊಡಲಾಗಿತ್ತು. ಆದರೆ ದುರಂತವೆಂದರೆ ಕಳೆದೆರೆಡು ದಶಕಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮವು ಬೃಹದಾಕಾರವಾಗಿ ಬೆಳೆದಿದ್ದು ಬಹುಪಾಲು ಖಾಸಗಿಯವರ ಹಿಡಿತದಲ್ಲಿದೆ. ಆದರೆ ಇಂದಿಗೂ PCI ಇದನ್ನು ಸರಿಪಡಿಸಿ ಎಲೆಕ್ಟ್ರಾನಿಕ್ ಮಾಧ್ಯಮವನ್ನು ವ್ಯಾಪ್ತಿಯೊಳಗೆ ತರಬೇಕೆಂದು ಪ್ರಯತ್ನಿಸಿಲ್ಲ ಎಂದು ಕಮಿಟಿಯು ಆತಂಕ ವ್ಯಕ್ತ ಪಡಿಸಿದೆ.ಅಲ್ಲದೆ ಇದನ್ನು Cable TV Network Regulation Act, 1995 ಅಡಿಯಲ್ಲಿ Compliance of Provisions ಅನ್ವಯವಾಗುವಂತೆ ನಿಯಮಾವಳಿಗಳನ್ನು ರೂಪಿಸಿಲ್ಲ ಎಂದು ಕಮಿಟಿ ಆರೋಪಿಸಿದೆ.

PCIನ ಉಪಸಮಿತಿಯು ೨೦೦೯ರ ಚುನಾವಣೆಯ ಕುರಿತಾದ ‘Paid News: How corruption in the Indian media und ermines democracy’ Realising the dangers of ‘Paid News’ ವರದಿಯನ್ನು ೩೦ನೇ ಜುಲೈ ೨೦೧೦ರಲ್ಲಿ ಮಂಡಿಸಿತು. ಆದರೆ ಇಂದಿಗೂ PCI ಈ ವರದಿಯ ಕುರಿತಾಗಿ ತೀರ್ಮಾನ ತೆಗೆದುಕೊಳ್ಳದೆ ಮೀನಮೇಷ ಎಣಿಸುತ್ತಿರುವುದಕ್ಕೆ ಕಮಿಟಿಯು ಕಳವಳ ವ್ಯಕಪಡಿಸಿದೆ. ಆ ವರದಿಯ ವಿವರಗಳನ್ನಾದರೂ ಸಾರ್ವಜನಿಕ ಚರ್ಚೆ ನಡೆಸುವಂತೆ ಕಮಿಟಿ ಆಗ್ರಹಿಸಿದಾಗ PCI ಈ ವರದಿಯ ಸಾಧಕಬಾಧಕಗಳನ್ನು ಪರಾಮರ್ಶಿಶಲು GoM ಅನ್ನು ರಚಿಸಲಾಗಿದೆ ಎಂದು ತಿಳಿಸಿತು. ಅಲ್ಲದೆ Paid News ವಿದ್ಯಾಮಾನವು ತುಂಬಾ ಸೂಕ್ಷ್ಮ ವಿಷಯವಾದ್ದರಿಂದ ಸಂಬಂಧಪಟ್ಟ ಸಚಿವಾಲಯಗಳ ಸಹಯೋಗದೊಂದಿಗೆ ಚರ್ಚಿಸಿದ ನಂತರವಷ್ಟೇ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಸಚಿವಾಲಯವು ಈ GoM ಅನ್ನು ಪುನರೂಪಿಬೇಕೆಂದು ಕ್ಯಾಬಿನೆಟ್ ಕಮಿಟಿಯ ಮುಂದೆ ಮನವಿ ಸಲ್ಲಿಸಿದೆ ಎಂದು ತಿಳಿಸಲಾಗಿತ್ತು. ಆದರೆ GoM ನ ಶಿಫಾರಸುಗಳನ್ನು ಕ್ಯಾಬಿನೆಟ್ ಕಮಿಟಿಯ ಮುಂದೆ ಮಂಡಿಸಿ ಚರ್ಚಿಸಲೂ ಸಹ ತಡ ಮಾಡುತ್ತಿರುವುದಕ್ಕೆ ಕಮಿಟಿಯು ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದೆ.

ಆದರೆ ಈ ವರದಿಯ ಕುರಿತಾಗಿ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕಮಿಟಿಯು ಸಚಿವಾಲಯಕ್ಕೆ ಆಗ್ರಹಿಸಿದೆ. ಪದ್ಧತಿಯ ಪ್ರಕಾರ Directorate of Advertising and Visual Publicity (DAVP) ಅಡಿಯಲ್ಲಿ ಜಾಹೀರಾತುಗಳ ನಿಯಂತ್ರಣ ಕಾಯ್ದೆ ಬರುತ್ತದೆ. ಈ DAVP ಯು ಸರ್ಕಾರದ ನೋಡಲ್ ಮಲ್ಟಿಮೀಡಿಯಾ ಕೇಂದ್ರೀಕೃತ ಏಜೆನ್ಸಿ ಎಂದು ಮಾನ್ಯತೆ ಮಾಡಲಾಗಿದೆ ಮತ್ತು ಇದು ವಾರ್ತಾ ಮತ್ತು ಪ್ರಚಾರ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದರೆ ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಖಾಸಗಿ ಚಾನೆಲ್‌ಗಳನ್ನು DAVP ಸಂಸ್ಥೆಯು ನಿರ್ಲಕ್ಷಿಸುತ್ತದೆ ಮತ್ತು ಇನ್ನೂ ಮುಂದುವರೆದು ಅಂತಹ ಮಾಧ್ಯಮಗಳಿಗೆ ಜಾಹೀರಾತನ್ನೇ ನಿರಾಕರಿಸುತ್ತದೆ ಎಂದು ಕಮಿಟಿಗೆ ದೂರು ನೀಡಲಾಗಿತ್ತು. ಇದನ್ನು ಸೀರಿಯಸ್ ಆಗಿ ಪರಿಗಣಿಸಿದ ಕಮಿಟಿಯು ಈ ಜಾಹೀರಾತು ನಿಯಂತ್ರಣ ಕಮಿಟಿಯು ಸಾರ್ವಜನಿಕ ಹಿತಾಸಕ್ತಿಯಾಗಿದೆ. ಇಂಡಿಯಾದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ DAVP ಯಂತಹ ಸಂಸ್ಥೆಯು ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಇದಕ್ಕೆ ತಗಲುವ ಖರ್ಚುವೆಚ್ಚಗಳನ್ನು ಸಾರ್ವಜನಿಕ ಲೆಕ್ಕಪತ್ರ ಇಲಾಖೆಗೆ ಮಂಡಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಇದೇ ಸಂದರ್ಭದಲ್ಲಿ ಈ ಜಾಹೀರಾತಿನ ಪ್ರದರ್ಶನದಲ್ಲಿ ದೊರೆಯುವ ವಿನಾಯ್ತಿ ಮೊತ್ತವನ್ನು ಮತ್ತು ಜಾಹೀರಾತಿನಿಂದ ಬಂದ ಮೊತ್ತವನ್ನು ತಮ್ಮ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕೆಂದು ಕಮಿಟಿ ಖಾಸಗಿ ಮಾಧ್ಯಮದವರಿಗೆ ಆಗ್ರಹಿಸಿದೆ.

Paid News ನ ಅವ್ಯವಹಾರಗಳಲ್ಲಿ ಮಾಧ್ಯಮಗಳು ಭಾಗಿಯಾಗಿರುವುದು ಸಾಬೀತಾದಲ್ಲಿ ಆ ಅಪರಾಧಕ್ಕೆ ವಿಧಿಸುವ ಶಿಕ್ಷೆಯ ಪ್ರಮಾಣ ಅತ್ಯಂತ ಕ್ಷುಲ್ಲಕವಾಗಿದೆ. Cartoon-ECಮುದ್ರಣ ಮಾಧ್ಯಮಗಳಿಗೆ PCI Act ನ ಅಡಿಯಲ್ಲಿ ಷೋಕಾಸ್ ನೋಟೀಸ್ ಜಾರಿಗೊಳಿಸುವುದು, ಮಾಡಿದ ತಪ್ಪಿಗೆ ವಿವರಣೆ ಕೇಳುವುದು ಮತ್ತು ಕಡೆಗೆ ಜಾಹೀರಾತನ್ನು ರದ್ದು ಮಾಡುವುದಕ್ಕೆ ಮಾತ್ರ ಶಿಕ್ಷೆಯ ಪ್ರಮಾಣವನ್ನು ಸೀಮಿತಗೊಳಿಸಲಾಗಿದೆ. ದೃಶ್ಯ ಮಾಧ್ಯಮಗಳಿಗೆ ಲೈಸೆನ್ಸ್ ಅನ್ನು ರದ್ದು ಮಾಡುವುದಕ್ಕೆ ಮಾತ್ರ ಶಿಕ್ಷೆಯ ಪ್ರಮಾಣವನ್ನು ಸೀಮಿತಗೊಳಿಸಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಿ ಜೈಲು ಶಿಕ್ಷೆಯನ್ನೂ ಸಹ ಇದರ ವ್ಯಾಪ್ತಿಯೊಳಗೆ ಬರುವಂತೆ ಕಾನೂನು ರೂಪಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಈ ಶಿಕ್ಷೆ ನಿಗದಿಪಡಿಸುವ/ವಿಧಿಸುವ ಅಧಿಕಾರ ಯಾವ ಸಂಸ್ಥೆ/ಇಲಾಖೆಯ ವ್ಯಾಪ್ತಿಯೊಳಗೆ ಬರಬೇಕೆಂಬ ವಿಷಯದಲ್ಲಿ ಸ್ಪಷ್ಟಪಡಿಸಬೇಕೆಂದು ಕಮಿಟಿ ಆಗ್ರಹಿಸಿದೆ. ೨೦೦೯ರ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ PCI ಪತ್ತೆಹಚ್ಚಿದ Paid News ನ ಅವ್ಯವಹಾರವನ್ನು ಪರಿಶೀಲಿಸಿದ ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ಬಳಸಿಕೊಂಡು Representation of People Act, 1951 ರ ಸೆಕ್ಷನ್ ೧೦ (A)ದ ಅಡಿಯಲ್ಲಿ ಸಂಬಂಧಪಟ್ಟ ಅಭ್ಯರ್ಥಿಯ ಆಯ್ಕೆಯನ್ನು ಅಮಾನತುಗೊಳಿಸಿತು. ಆದರೆ ೨೦೦೯ರ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಪತ್ತೆಯಾದ Paid News ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಭ್ಯರ್ಥಿಯ ವಿರುದ್ಧ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲು ಮುಂದಾದಾಗ ಅದಕ್ಕೆ Representation of People Act, 1951 ರ ಸೆಕ್ಷನ್ ೧೦ (A)ದ ಅಡಿಯಲ್ಲಿ ಅಧಿಕಾರವಿದೆಯೇ ಎಂದು ಪರಿಶೀಲಿಸಬೇಕೆಂದು ಸುಪ್ರೀಂಕೋರ್ಟನಲ್ಲಿ ಅಪೀಲ್ ಸಲ್ಲಿಸಲಾಯಿತು. ಇಂತಹ ವಿಪರ್ಯಾಸಗಳನ್ನು ಸರಿಪಡಿಸಿ ಶಿಕ್ಷೆಯನ್ನು ವಿಧಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇರಬೇಕೆಂದು ಕಮಿಟಿ ಅಭಿಪ್ರಾಯ ಪಟ್ಟಿದೆ. PCI ಸುಮಾರು ೪೦ ಪ್ರಕರಣಗಳನ್ನು Paid News ನ ಅವ್ಯವಹಾರಕ್ಕೆ ಸಂಬಂಧಪಟ್ಟಿದ್ದು ಎಂದು ಪತ್ತೆ ಹಚ್ಚಿತು. ಅದರಲ್ಲಿ ೧೧ ಪ್ರಕgಣಗಳನ್ನು ಸೂಕ್ತ ಸಾಕ್ಷಾಧಾರಗಳಿಲ್ಲದೆ ಖುಲಾಸೆಗೊಳಿಸಲಾಯಿತು. ಈ ಎಲ್ಲ ಹಿನ್ನೆಲೆಯಲ್ಲಿ ಕಮಿಟಿಯು PCI ಅನ್ನು ಪುನರಚಿಸಬೇಕೆಂದು ಆ ಮೂಲಕ ಅದನ್ನು ಬಲಪಡಿಸಬೇಕೆಂದು ಶಿಫಾರಸು ಮಾಡಿದೆ.

Companies Act, ೧೯೫೬ ರ ಅಡಿಯಲ್ಲಿ ತಮ್ಮ ವ್ಯವಹಾರಗಳಿಗೆ ತೊಡಗಿಸುವ ಹಣದ ಮೂಲವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಾದ ಉತ್ತರದಾಯಿತ್ವ ಮಾಧ್ಯಮಗಳ ಮೇಲಿದೆ.

ಕಡೆಗೆ ಸಾರಾಂಶವಾಗಿ ಹೇಳಬೇಕೆಂದರೆ ವಾರ್ತಾ ಮತ್ತು ಪ್ರಚಾರ ಇಲಾಖೆ, Editors Guild of India, Securities and Exchange Board of India, Telecom Regulatory Authority of India, self regulatory bodies, research bodies, other stakeholders, etc. ಇಡೀ ಪ್ರಕರಣದ ಗಂಭೀರತೆಯನ್ನು ಅರಿತುಕೊಂಡಿವೆ. ವಾರ್ತಾ ಮತ್ತು ಪ್ರಚಾರ ಇಲಾಖೆಯು ಈ ಗಂಭೀರತೆಯನ್ನು ಅರಿತುಕೊಂಡು ಸೂಕ್ತವಾದ ಕಾನೂನುನನ್ನು ರಚಿಸಿ ತಪ್ಪಿತಸ್ಥರು ಶಿಕ್ಷೆಗೊಳಗಾಬೇಕೆಂದು ಕಮಿಟಿಯು ಒತ್ತಾಯಿಸಿದೆ.

Leave a Reply

Your email address will not be published. Required fields are marked *