Monthly Archives: January 2015

ಹೊಯ್ಸಳ ಉತ್ಸವ: ಕವಿಗೋಷ್ಟಿಯಲ್ಲಿ ಅಸ್ತ್ರಗಳಾದ ಕವಿತೆಗಳು

9hsn 15.jpg   PKPK
ಸದ್ಯ ಉತ್ಸವಗಳ ಕಾಲ. ಹಂಪಿಯಲ್ಲಿ ಹಂಪಿ ಉತ್ಸವ. ಮೂಡಬಿದ್ರೆಯಲ್ಲಿ ಆಳ್ವರ (ಉಳ್ಳವರ) ವಿರಾಸತ್. ಹಾಗೆಯೇ ಹಾಸನದಲ್ಲಿ ಹೊಯ್ಸಳ ಉತ್ಸವ. ನಾನಾ ಕಾರಣಗಳಿಂದ ಕಳೆದ ಹತ್ತು ವರ್ಷಗಳಿಂದ ಹಾಸನದಲ್ಲಿ ಹೊಯ್ಸಳ ಉತ್ಸವ ನಡೆದಿರಲಿಲ್ಲ. ಈ ಬಾರಿ ನಡೆಯುತ್ತಿದೆ. ಜನ ಸೇರಿಸುವ ಅದ್ಧೂರಿ ಕಾರ್ಯಕ್ರಮಗಳನ್ನು ಮಾಡಿದರಷ್ಟೇ ಅದು ಉತ್ಸವಗವಾಗುತ್ತೆ ಎಂಬ ಐಡಿಯಾಕ್ಕೆ ಜೋತುಬಿದ್ದ ಜಿಲ್ಲಾಡಳಿತ ನಾಲ್ಕುದಿನದ ಕಾರ್ಯಕ್ರಮದಲ್ಲಿ ಪಾಪುಲರ್ ಗಾಯಕರನ್ನು ಕರೆಸುವುದು, ಮನರಂಜನೆಗೆ ರಾಗಿ ಮುದ್ದೆ ಊಟ ಸ್ಪರ್ಧೆ ಹಾಗೂ ಜೊತೆಗೆ ಕೆಲ ಸ್ಥಳೀಯ ಕಲಾವಿದರಿಗೆ (ಜಾನಪದ, ಶಾಸ್ತ್ರೀಯ ಹಾಡುಗಾರರು) ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ.

ಮುಖ್ಯವಾಗಿ ಇದು ಹೊಯ್ಸಳರ ಹೆಸರಿನಲ್ಲಿ ನಡೆಯುತ್ತಿರುವ ಉತ್ಸವ. ಅವರ ಕಾಲದಲ್ಲಿ ಕಲೆ, ಸಾಹಿತ್ಯ, ನೃತ್ಯ ಪ್ರಕಾರಗಳಿಗೆ ಸಾಕಷ್ಟು ಮನ್ನಣೆ ದೊರಕಿದ್ದು ಎಲ್ಲರಿಗೂ ಗೊತ್ತು. ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳು ಶಿಲ್ಪಕಲೆಗೆ ಜಗತ್ತಿನಾದ್ಯಂತ ಮನ್ನಣೆ ಪಡೆದಿವೆ. ಹೊಯ್ಸಳ ಉತ್ಸವ ಸಂಘಟಕರಿಗೆ ಶಿಲ್ಪಕಲೆಗೆ ಸಂಬಂಧಿಸಿದ್ದು ಏನನ್ನಾದರೂ ಮಾಡಬೇಕು ಎನಿಸುವುದಿಲ್ಲ. ಕಲಾವಿದರನ್ನು ಕರೆಯಿಸಿ ಒಂದು ಪ್ರದರ್ಶನ ಏರ್ಪಡಿಸಬೇಕು ಎನಿಸುವುದಿಲ್ಲ. ಕವಿಗೋಷ್ಟಿಯ ಯೋಚನೆಯೂ ಕೊನೇ ವೇಳೆಯಲ್ಲಿ ಹೊಳೆದು ಶುಕ್ರವಾರ 10 ಗಂಟೆಗೆ ಕವಿಗೋಷ್ಟಿ ಎಂದಷ್ಟೇ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಸುಮ್ಮನಾದರು. ಅದರಲ್ಲಿ ಭಾಗವಹಿಸುವ ಕವಿಗಳು ಯಾರು ಎಂಬ ಹೆಸರು ಬೇಡವೆ? ಕಾರ್ಯಕ್ರಮದ ಹಿಂದಿನ ದಿನ ದೂರವಾಣಿ ಕರೆ ಮಾಡಿ ಬಂದು ಕವನ ಓದಿ ಎಂದಿದ್ದಾರೆ. ಕವಿ ಚಲಂ ಹಾಡ್ಲಹಳ್ಳಿಯವರಿಗೆ ದೂರವಾಣಿ ಮಾಡಿದ ಸಿಬ್ಬಂದಿಯೊಬ್ಬರು “ನಿಮಗೆ ಆಹ್ವಾನ ಪತ್ರಿಕೆ ಬೇಕಿದ್ದರೆ, ನಮ್ಮ ಕಚೇರಿಗೆ ಬಂದು ಕಲೆಕ್ಟ್ ಮಾಡಿಕೊಳ್ಳಿ ಎಂದರಂತೆ”.

ಕವಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ರೂಪ ಹಾಸನ ಅವರನ್ನು ಕೊನೆ ಗಳಿಗೆಯಲ್ಲಿ ಕವಿಗೋಷ್ಟಿ ಉದ್ಘಾಟನೆಗೆ ಕರೆದಿದ್ದಾರೆ. ಅವರು ಅವ್ಯವಸ್ಥೆಗೆ ಬೇಸತ್ತು ಬರುವುದಿಲ್ಲ ಎಂದಿದ್ದಾರೆ. ನಂತರ ಅಧಿಕಾರಿಗಳು ಒತ್ತಾಯ ಮಾಡಿದಾಗ, ಆಗಿರುವ ಲೋಪಗಳನ್ನು ಎಲ್ಲರ ಮುಂದಿಡಲು ಇದುವೇ ಸರಿಯಾದ ವೇದಿಕೆ ಎಂದು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಧೋರಣೆಯನ್ನು ವಿರೋಧಿಸಿ ತಾವು ಬರೆದ ಪತ್ರವನ್ನು ಉದ್ಘಾಟನಾ ಭಾಷಣವನ್ನು ಓದಿದರು. ಅದರ ಜೊತೆಗೆ ಈ ಪ್ರಸ್ತುತ ಸಂದರ್ಭಕ್ಕೆ ಸೂಕ್ತವಾಗುವ ಕುವೆಂಪು ಅವರ “ಕವಿ” ಎಂಬ ಕವನ ಓದಿದರು. ವಿಶಿಷ್ಟ ಎಂದರು, ಕುವೆಂಪು ಅವರು ಆ ಕವನವನ್ನು ಇದೇ ದಿನ, ಅಂದರೆ ಹಾಸನದಲ್ಲಿ ಕವಿಗೋಷ್ಟಿ ನಡೆದ ಜನವರಿ 9 ಕ್ಕೆ ಸರಿಯಾಗಿ 84 ವರ್ಷಗಳ ಹಿಂದೆ ಬರೆದಿದ್ದರು. ನಂತರ ಕವನ ವಾಚಿಸಿದ ಬಹುತೇಕರು ಅವರ ಧಾಟಿಯಲ್ಲಿಯೇ ಸಂಘಟಕರನ್ನು ಟೀಕಿಸಿದರು. ಚಲಂ ಹಾಗೂ ಚಿನ್ನೇನಹಳ್ಳಿ ಸ್ವಾಮಿ ಈ ಸಂದರ್ಭಕ್ಕೋಸ್ಕರವೇ ವಿಶೇಷ ಕವನಗಳನ್ನು ಬರೆದು ಓದಿದರು. ಆ ಮೂಲಕ ಕವಿತೆಗಳು ಅವರ ಆಕ್ರೋಶ ವ್ಯಕ್ತಪಡಿಸುವ ಅಸ್ತ್ರಗಳಾದವು. ಖಡ್ಗವಾಯಿತು ಕಾವ್ಯ!

ರೂಪ ಹಾಸನ ಅವರು ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.

ಇವರಿಗೆ,
ಜಿಲ್ಲಾಡಳಿತ,
ಹಾಸನ ಜಿಲ್ಲೆ
ಹಾಸನ
9.1.2015
ನಮಸ್ಕಾರ.
ಹಾಸನ ಜಿಲ್ಲೆಯಲ್ಲಿ ದಶಕದಿಂದ ನಡೆಯದೇ ಉಳಿದಿದ್ದ ಹೊಯ್ಸಳ ಮಹೋತ್ಸವವು ಜನವರಿ 8,9,10,11 ರಂದು ವೈಭವಯುತವಾಗಿ ನಡೆಯುತ್ತಿದೆ. ಹೊಯ್ಸಳರು ಆಳಿದ ಈ ನಾಡಿಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ಸರ್ವಧರ್ಮಗಳ ಸಮನ್ವಯದ ಹೊಯ್ಸಳರ 300 ವರ್ಷಗಳ ಆಳ್ವಿಕೆಯಲ್ಲಿ ಕಲೆ, ಸಾಹಿತ್ಯ, ಶಿಲ್ಪ, ನೃತ್ಯ, ಸಂಗೀತ, ಸಂಸ್ಕೃತಿಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದುದು ಐತಿಹಾಸಿಕ ದಾಖಲೆಯಾಗಿದೆ. ತಮ್ಮ ಆಳ್ವಿಕೆಯ ಅವಧಿಯಲ್ಲಿ ಹೊಯ್ಸಳರು ಶಿಲ್ಪಕಲೆಗೇ ವಿಶಿಷ್ಟವೆನಿಸುವ ಅನೇಕ ದೇಗುಲಗಳನ್ನು ಕಟ್ಟಿಸಿದ್ದಕ್ಕೆ ಸಾಕ್ಷಿ ನಮ್ಮ ಕಣ್ಣೆದುರಿಗೇ ರಾರಾಜಿಸುತ್ತಿದೆ. ಪ್ರಖ್ಯಾತ ಶಿಲ್ಪಿಗಳಿಗೆ ಅವರ ಕಾಲಮಾನದಲ್ಲಿ ದೊರಕಿದ ಮನ್ನಣೆ ಇತಿಹಾಸದಲ್ಲಿ ದಾಖಲಾಗಿದೆ. ಜೊತೆಗೆ ಹೊಯ್ಸಳರ ಆಳ್ವಿಕೆಯಲ್ಲಿ ಪ್ರಸಿದ್ಧರಾದ ಕವಿಗಳು, ವಿದ್ವಾಂಸರು, ಶಾಸ್ತ್ರಿಗಳಿದ್ದು ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದುದಕ್ಕೆ ದಾಖಲೆಗಳಿವೆ.

ಆದರೆ ಇಂದಿನ ಹೊಯ್ಸಳ ಉತ್ಸವದ ಆಹ್ವಾನಪತ್ರಿಕೆಯನ್ನು ನೋಡಿದರೆ ಈ ಉತ್ಸವ ಯಾರದ್ದು? ಯಾರಿಗಾಗಿ? ಇದು ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ, ಅವರಿಗಾಗಿಯಷ್ಟೇ ಮಾತ್ರ ನಡೆಯುತ್ತಿರುವ ಉತ್ಸವವೇ ಎಂದು ಗಾಬರಿಯಾಗುತ್ತಿದೆ. ನಾವಿಷ್ಟೂ ದಿನದಿಂದ ಬಯಸಿದ್ದು ಇದೇ ಪ್ರಭುತ್ವ ಕೇಂದ್ರಿತ ಹೊಯ್ಸಳ ಉತ್ಸವವನ್ನೇ ಎಂದು ವ್ಯಥೆಪಡುವಂತಾಗುತ್ತಿದೆ. ಈ ಉತ್ಸವದಲ್ಲಿ ಸಿನಿಮಾ ಕಲಾವಿದರನ್ನೂ ಒಳಗೊಂಡಂತೆ ಹಾಡು, ನೃತ್ಯ, ಮೋಜು, ಮಸ್ತಿಗೇ ಲಕ್ಷಾಂತರ ರೂಪಾಯಿಗಳನ್ನು ಖಚರ್ು ಮಾಡಿ ಪ್ರಾಧಾನ್ಯತೆ ನೀಡಿರುವುದು ಗೋಚರಿಸುತ್ತದೆ. ಜಿಲ್ಲೆಯ ಸಾಂಸ್ಕೃತಿಕ ಅಭಿವೃದ್ಧಿ ಕುರಿತ ಅವಲೋಕನವಾಗಲೀ, ಜಿಲ್ಲೆಯ ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಬೇಕಾದ ಮುನ್ನೋಟವನ್ನು ನೀಡುವ ವಿಚಾರ ಸಂಕಿರಣಗಳಾಗಲೀ ಇದರಲ್ಲಿ ಇಲ್ಲದಿರುವುದು ಮುಖ್ಯ ಕೊರತೆಯೆಂದು ನಾನು ಭಾವಿಸುತ್ತೇನೆ.

ನಾವು ಇಂದಿನ ಹೊಯ್ಸಳ ಉತ್ಸವವನ್ನು ನೋಡಿದರೆ ಹಾಗೂ ಹಿಂದೆ ಜಿಲ್ಲೆಯಲ್ಲಿ ನಡೆದ ಅನೇಕ ಹೊಯ್ಸಳ ಉತ್ಸವಗಳಲ್ಲಿ ಭಾಗಿಯಾದ ನೆನಪಿನಿಂದ ಹೇಳುವುದಾದರೂ ಸ್ಥಳೀಯ ಸಾಹಿತಿಗಳು, ಕವಿಗಳು, ಶಿಲ್ಪಕಲಾವಿದರೂ, ಚಿತ್ರಕಲಾವಿದರನ್ನು ಇಂದಿನ ಹೊಯ್ಸಳ ಉತ್ಸವದಲ್ಲಿ ಎಲ್ಲ ರೀತಿಯಲ್ಲಿಯೂ ಕಡೆಗಣಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ._DSC0633
ಹಾಸನದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯಮಟ್ಟದ ಚಿತ್ರಕಲಾವಿದರಿದ್ದಾರೆ. ಎರಡು ಚಿತ್ರಕಲಾ ಶಾಲೆಗಳಿದ್ದು ಅದರಿಂದ ನೂರಾರು ಭರವಸೆಯ ಚಿತ್ರಕಲಾವಿದರು ಹೊರಹೊಮ್ಮಿದ್ದಾರೆ. ದೆಹಲಿಯ ಚಿತ್ರಕಲಾ ಅಕಾಡೆಮಿಯ ಫೆಲೋಶಿಪ್ ಅನ್ನು ಚಿತ್ರಕಲೆಯಲ್ಲಿ ಪರಿಣಿತರಾದ ಹಾಸನ ಜಿಲ್ಲೆಯ 7 ಮಕ್ಕಳು ಪಡೆಯುತ್ತಿದ್ದು ಇದು ರಾಜ್ಯದಲ್ಲಿ ಅಪರೂಪದಲ್ಲಿ ಅಪರೂಪದ ಗೌರವವಾಗಿದೆ. ಇದಲ್ಲದೇ ಹಾಸನ ಜಿಲ್ಲೆಯ ಚಿತ್ರಕಲಾವಿದರು ಅನೇಕ ಅತ್ಯುನ್ನತ ಪ್ರಶಸ್ತಿ ಗೌರವಗಳನ್ನು ಪಡೆದು ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆ. ಆದರೆ ವಿಜೃಂಭಣೆಯಿಂದ ನಡೆಯುತ್ತಿರುವ ಈ ಹೊಯ್ಸಳ ಉತ್ಸವದಲ್ಲಿ, ಶಿಲ್ಪಕಲೆಯ ಈ ತವರೂರಿನಲ್ಲಿ, ಚಿತ್ರಕಲೆ, ಶಿಲ್ಪಕಲೆಗೆ ಸಂಬಂಧಿಸಿದ ಒಂದೇ ಒಂದು ಪ್ರದರ್ಶನವಾಗಲೀ, ಪ್ರಾತ್ಯಕ್ಷಿಕೆಯಾಗಲೀ ನಡೆಯದಿರುವುದು ನಮ್ಮ ಚಿತ್ರಕಲಾವಿದರು ಹಾಗೂ ಶಿಲ್ಪ ಕಲಾವಿದರನ್ನು ಅವಮಾನಿಸುತ್ತಿರುವುದರ ಸಂಕೇತವೆಂದು ನಾನು ಭಾವಿಸುತ್ತೇನೆ. ಹೊಯ್ಸಳ ಉತ್ಸವದಲ್ಲಿ ಚಿತ್ರ, ಶಿಲ್ಪಗಳ ರಚನೆಯಾಗಿದ್ದರೆ ಅವು ಶಾಶ್ವತವಾಗಿ ಉಳಿದು ಜಿಲ್ಲಾಡಳಿತದ ಆಸ್ತಿಯಾಗಬಹುದಿತ್ತು. ಅಂತಹ ಅವಕಾಶ ಈಗ ತಪ್ಪಿಹೋಗಿದೆ.

ಹಾಗೇ ನಮ್ಮ ಜಿಲ್ಲೆಯ ಅನೇಕ ಪ್ರಸಿದ್ಧ ಚಿಂತಕರು, ಕವಿ ಸಾಹಿತಿಗಳು ರಾಜ್ಯ, ಅಂತರ್ರಾಜ್ಯ ಕವಿ ಸಮ್ಮೇಳನ, ಉತ್ಸವ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿರುವಂತವರು. ಅನೇಕ ಉನ್ನತ ಪ್ರಶಸ್ತಿ ಗೌರವ ಸ್ಥಾನಮಾನಗಳನ್ನು ಪಡೆದಿರುವಂತವರು. ಅವರನ್ನು ಹೊಯ್ಸಳ ಉತ್ಸವದ ಸಲಹಾ ಸಮಿತಿಗಳಲ್ಲಿ ಭಾಗಿಗಳನ್ನಾಗಿ ಮಾಡಿಕೊಳ್ಳುವಂತಹ ಅಥವಾ ಇದೇ ಸಂದರ್ಭದಲ್ಲಿ ಹೊರತರುತ್ತಿರುವ ಸ್ಮರಣ ಸಂಚಿಕೆಯ ಸಮಿತಿಯಲ್ಲಿಯೂ ಒಳಗೊಳ್ಳುವಂತಹ ಕೆಲಸವಾಗಿಲ್ಲದಿರುವುದು ಖೇದನೀಯ. ಜಿಲ್ಲಾಡಳಿತ ಇವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.
ಪ್ರತಿ ಹೊಯ್ಸಳ ಉತ್ಸವದಲ್ಲಿ ಸ್ಥಳೀಯ ಕವಿಗಳೇ ಅಲ್ಲದೇ ರಾಜ್ಯದ ಪ್ರಖ್ಯಾತ ಕವಿಗಳನ್ನೂ ಕರೆಸಿ, ಅವರಿಂದ ಕವಿತೆ ಓದಿಸಿ, ಸನ್ಮಾನಿಸಿ ಗೌರವಿಸುವ ಪ್ರತೀತಿ ಇತ್ತು. ಈ ಬಾರಿ ಹೊರಗಿನ ಕವಿಗಳನ್ನಾರನ್ನೂ ಕವಿಗೋಷ್ಠಿಗೆ ಕರೆದಿಲ್ಲ. ಜೊತೆಗೆ ಕವಿಗೋಷ್ಠಿಯನ್ನೇ ಕಾಟಾಚಾರಕ್ಕಾಗಿ ನಡೆಸಲಾಗುತ್ತಿದೆ ಎಂಬುದಕ್ಕೆ ನಿದರ್ಶನಗಳೂ ಇವೆ. ಹೊಯ್ಸಳ ಮಹೋತ್ಸವದ ಮುಖ್ಯ ಮೊದಲದಜರ್ೆ ಆಹ್ವಾನಪತ್ರಿಕೆಯಲ್ಲಿ ಕವಿಗೋಷ್ಠಿಯ ಪ್ರಸ್ತಾಪವಿಲ್ಲ. ಅದರ ಜೊತೆಗಿಟ್ಟಿರುವ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳ ಸೂಚಿಯಾದ ಎರಡನೇದಜರ್ೆಯ ಆಹ್ವಾನಪತ್ರಿಕೆಯಲ್ಲಿ ‘ಕವಿಗೋಷ್ಠಿ-ಸ್ಥಳೀಯ ಕವಿಗಳಿಂದ ಎಂದಷ್ಟೇ ನಮೂದಾಗಿದೆ. ಕವಿಗಳ ಹೆಸರಿಲ್ಲ. ಯಾಕೆ? ನಮಗೆ ಕವಿಗಳಿಗೆ ಹೆಸರಿಲ್ಲವೇ? ಬೇರೆ ಸ್ಥಳೀಯ ಕಲಾವಿದರಿಗೆ ಎರಡನೇ ದಜರ್ೆಯ ಆಹ್ವಾನಪತ್ರಿಕೆಯಲ್ಲಿ ದೊರಕಿದಷ್ಟು ಗೌರವವೂ ಕವಿಗಳಿಗಿಲ್ಲದೇ ಹೋಯ್ತೇ? ಅಥವಾ ಕವಿಗಳಿಗೆ ಹೆಸರಿಲ್ಲ, ಗೌರವವಿಲ್ಲ, ಸ್ವಾಭಿಮಾನವೂ ಇಲ್ಲವೆಂದು ಜಿಲ್ಲಾಡಳಿತ ಭಾವಿಸಿಬಿಟ್ಟಿದೆಯೋ? ಕವಿಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಹೇಗೆ ಕರೆದರೂ ಬಂದು ಕವಿತೆ ಓದುತ್ತಾರೆ ಎಂಬ ಅಸಡ್ಡೆಯೋ? ಹೀಗಾಗೇ ನಮ್ಮ ಹೆಸರು ನಮೂದಾಗಿರುವ, ಕಂಪ್ಯೂಟರ್ನಲ್ಲಿ ಟೈಪಿಸಿದ, ನಮಗೆ…. ಎಂದರೆ ಕವಿಗಳಿಗಷ್ಟೇ ವಿತರಿಸಿದ ಮೂರನೇ ದಜರ್ೆಯ ಆಹ್ವಾನಪತ್ರಿಕೆಯ ಹೆಸರಿನ ಹಾಳೆ ನಮ್ಮನ್ನು ತಲುಪಿದೆ. ಈಗ ಸ್ಥಳೀಯ ಕವಿ ಸಾಹಿತಿ, ಚಿತ್ರಕಲಾವಿದ, ಶಿಲ್ಪಕಲಾವಿದರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿರುವ ಈ ಹೊಯ್ಸಳ ಉತ್ಸವ ಯಾರಿಗಾಗಿ? ಏತಕ್ಕಾಗಿ? ಎಂಬುದನ್ನು ದಯಮಾಡಿ ಜಿಲ್ಲಾಡಳಿತ ವಿವರಿಸಬೇಕೆಂದು ಕೇಳಿಕೊಳ್ಳುವೆ.
ಆಹ್ವಾನಪತ್ರಿಕೆ ನೋಡಿದ ನಂತರ ಇಂತಹ ಕವಿಗೋಷ್ಠಿಯ ಉದ್ಘಾಟನೆಗೆ ಬರಲು ಸುತಾರಾಂ ನನಗೆ ಇಷ್ಟವಿರಲಿಲ್ಲ. ಆದರೆ ನನ್ನ ಈ ಪ್ರತಿರೋಧವನ್ನು ದಾಖಲಿಸುವ ಸಲುವಾಗಿಯೇ ಇಲ್ಲಿಗೆ ಬಂದಿದ್ದೇನೆ. ಅತ್ಯಂತ ನೋವಿನಿಂದ ಈ ಮಾತುಗಳನ್ನಾಡುತ್ತಿದ್ದೇನೆ.
ಇನ್ನು ಮುಂದೆ ಸ್ವಾಭಿಮಾನಿಗಳಾದ ಕವಿಗಳನ್ನು ಈ ರೀತಿಯಲ್ಲಿ ಅವಮಾನಿಸುವುದಾದರೆ ಹೊಯ್ಸಳ ಮಹೋತ್ಸವದಲ್ಲಿ ಕವಿಗೋಷ್ಠಿಯನ್ನೇ ಆಯೋಜಿಸುವುದು ಬೇಡ. ಕವಿಗೋಷ್ಠಿ ಇರಲೇ ಬೇಕೆಂದಿದ್ದರೆ ಕವಿಗಳಿಗೆ ತಕ್ಕುದಾದ ಗೌರವವನ್ನು ಕೊಟ್ಟು ಕವಿಗೋಷ್ಠಿಯನ್ನು ಆಯೋಜಿಸಬೇಕೆಂ117 (4)ದು ಜಿಲ್ಲಾಡಳಿತವನ್ನು ವಿನಮ್ರವಾಗಿ ನಿವೇದಿಸುತ್ತೇನೆ.

ನಮಗೆ, ಎಂದರೆ ಕವಿಗಳಿಗೆ ರಾಷ್ಟ್ರಕವಿ ಕುವೆಂಪು ಸದಾ ಮಾದರಿ. ಹೀಗೆಂದೇ ಅವರು 84ವರ್ಷಗಳ ಹಿಂದೆ ಇದೇ ದಿನದಂದು ಅಂದರೆ 9-1-1931 ರಂದು ರಚಿಸಿದ, ಇಂದಿಗೆ, ಈ ಸಂದರ್ಭಕ್ಕೆ ಪ್ರಸ್ತುತವಾದ ‘ಕವಿ’ ಎಂಬ ಕವಿತೆಯನ್ನು ಈ ಕವಿಗೋಷ್ಠಿಯ ಸಮಾರಂಭದಲ್ಲಿ, ಜಿಲ್ಲಾಡಳಿತ ಸ್ಥಳೀಯ ಕವಿಗಳನ್ನು ನಿರ್ಲಕ್ಷಿಸಿದ ಈ ಸಂದರ್ಭದಲ್ಲಿ ಓದುವ ಮೂಲಕ ಉದ್ಘಾಟಿಸಲು ಹೆಮ್ಮೆ ಎನಿಸುತ್ತದೆ. ಈ ಮೂಲಕ ನಾವು ಕವಿಗಳು ಪ್ರಭುತ್ವದ ಅವಕಾಶಕ್ಕಾಗಿಯಾಗಲೀ, ಆಡಳಿತಶಾಹಿಯ ಕೃಪಾಕಟಾಕ್ಷಕ್ಕಾಗಿಯಾಗಲೀ ದೀನರಾಗಿ ಕಾದಿರುವವರಲ್ಲ. ಬದಲಿಗೆ, ಸ್ವಾಭಿಮಾನಿಗಳು ಎಂಬುದನ್ನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.

ವಂದನೆಗಳೊಂದಿಗೆ,
ನಿಮ್ಮ ವಿಶ್ವಾಸಿ
ರೂಪ ಹಾಸನ

*****

ಕುವೆಂಪು ಕವಿತೆ
ಕವಿ
ವಸಂತವನದಲಿ ಕೂಗುವ ಕೋಗಿಲೆ
ಬಿರುದನು ಬಯಸುವುದಿಲ್ಲ
ಹೂವಿನ ಮರದಲಿ ಜೇನುಂಬುಳಗಳು
ಮೊರೆವುದು ರಾಜನ ಭಯದಿಂದಲ್ಲ.
ವನದೇಕಾಂತದಿ ಪೆಣ್ ನವಿಲೆಡೆಯಲಿ
ಮಯೂರ ನೃತ್ಯೋನ್ಮತ್ತ ವಿಲಾಸಕೆ
ರಾಜನ ಕತ್ತಿಯ ಗಣನೆಯೆ ಇಲ್ಲ.

ನಿಧಾಘ ವ್ಯೋಮದಿ ಮೆಲ್ಲಗೆ ಮೆಲ್ಲಗೆ
ತನ್ನೊಂದಿಚ್ಛೆಗೆ ತೇಲುವ ಮೇಘದ ಆಲಸ್ಯಕೆ
ಅರಸನ ಅಳುಕಿಲ್ಲ.
ಗಾಳಿಯ ಮುತ್ತಿಗೆ
ಮೈ ಜುಮ್ಮೆನ್ನಲು
ತೆರೆತೆರೆ ತೆರೆಯುವ
ತಿಳಿಗೊಳದೆದೆಯಲಿ ಮಿನು ಮಿನು ಮಿಂಚುವ
ನುಣ್ ಬೆಳದಿಂಗಳ
ಲೀಲೆಗೆ ದೊರೆ ಮೆಚ್ಚುಗೆ ಬೇಕಿಲ್ಲ.
ಸಿಡಿಲನು ಸಿಡಿಯುತೆ
ಮೊಳಗುತೆ ನುಗ್ಗುವ
ಕಾರ್ಗಾಲದ ಕರ್ಮುಗಿಲಿಂ ಹೊಮ್ಮುವ
ಕೆಂಗಿಡಿ ಬಣ್ಣದ ಹೊಂಗೆರೆ ಮಿಂಚಿಗೆ
ಆಸ್ಥಾನದ ದಾಸ್ಯದ ಹುರುಪಿಲ್ಲ.
ಕತ್ತಲೆ ಮುತ್ತಿದ ಬಾನಲಿ ಮಿಣುಕುವ ತಾರೆಗೆ
ದೊರೆಯಾಣತಿ ತೃಣವಿಲ್ಲ
ವಿಪ್ಲವ ಮೂರ್ತಿಯ ಸಖನಾಗಿಹನೈ
ಕವಿಗರಸುಗಿರಸುಗಳ ಋಣವಿಲ್ಲ
ಅವನಗ್ನಿ ಮುಖಿ
ಪ್ರಳಯಶಿಖಿ!
ಕುವೆಂಪು
9.1.193

pk : ನಾವು ನೋಡುವುದೆಲ್ಲ ಕೇವಲ ದೃಷ್ಟಿಕೋನಗಳನ್ನು ಮಾತ್ರ, ಸತ್ಯವನ್ನಲ್ಲ


– ಬಿ. ಶ್ರೀಪಾದ ಭಟ್


ಇತ್ತೀಚೆಗೆ ಬಿಡುಗಡೆಗೊಂಡ ಅಮೀರ್ ಖಾನ್ ನಟಿಸಿದ ‘ಪಿಕೆ’ ಎನ್ನುವ ಹಿಂದಿ ಸಿನಿಮಾ ನೋಡಿದಾಗ ಕೆಲವರು ಹೇಳಿದ ಹಾಗೆ ಅದು ಒಂದು ರೀತಿ ದೂರದರ್ಶನದಲ್ಲಿ ಅಮೀರ್ ಖಾನ್ ನಿರ್ಮಿಸಿ, ಪ್ರಸ್ತುತಪಡಿಸಿದ ’ಸತ್ಯಮೇವ ಜಯತೆ’ ಧಾರವಾಹಿಯ ಮುಂದುವರೆದ ಭಾಗದಂತೆಯೇ ಇದೆ. ಸತ್ಯಮೇವ ಜಯತೆ ಸರಣಿಯಲ್ಲಿ ತುಂಬಾ ಕುತೂಹಲದಿಂದ, ಕಣ್ಣರಳಿಸಿ ನೊಂದವರ ಮಾತುಗಳನ್ನು ಕೇಳುತ್ತ ಸ್ವತಃ ತಾನು ನೋವನ್ನು ಅನುಭವಿಸುವ ಅಮೀರ್ ಖಾನ್ ಅಲ್ಲಿ ವಾಸ್ತವ ಮತ್ತು ಭ್ರಮೆಗಳ ನಡುವೆ ಜಿಗಿದಾಡುತ್ತ ಸಮಯ ಸಿಕ್ಕಾಗಲೆಲ್ಲ ಭರಪೂರು ಉಪದೇಶಗಳನ್ನು ನೀಡುತ್ತಿರುತ್ತಾನೆ. ಅದೇ ಮಾದರಿಯಲ್ಲಿ ‘ಪಿಕೆ’ ಸಿನಿಮಾದಲ್ಲಿಯೂ ಸಹ ಉಪದೇಶಗಳ ಒಂದು ಪ್ರವಾಹವೇ ಹರಿದಿದೆ. ‘ಪಿಕೆ’ ಸಿನಿಮಾದಲ್ಲಿಯೂ ವ್ಯಕ್ತಿತ್ವ ಮತ್ತು ವ್ಯಕ್ತಿ ಎಂದು ಎರಡನ್ನು pk_aamir-khanವಿಭಜಿಸುತ್ತಾ, ಕೂಡಿಸುತ್ತಾ ಜಿಗಿದಾಡುವ ಅಮೀರ್ ಖಾನ್ ಪ್ರತಿ ದೃಶ್ಯಗಳಲ್ಲಿಯೂ ರಾಜಕಪೂರ್‌ನಂತೆ ಭ್ರಮೆಗಳ ಬಣ್ಣಗಳನ್ನು ತೇಲಿ ಬಿಡುತ್ತಲೇ ಇರುತ್ತಾನೆ. ಆ ಬಣ್ಣಗಳಿಗೆ ನಿರ್ದಿಷ್ಟ ಚೌಕಟ್ಟುಗಳನ್ನು ನಿರ್ಮಿಸಲು, ವೈಚಾರಿಕತೆಯ ಲೇಪನವನ್ನು ನೀಡಲು ನಿರ್ದೇಶಕ ರಾಜಕುಮಾರ್ ಹಿರಾನಿ ನಾಯಕಿ ಅನುಷ್ಕ ಶರ್ಮಳನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾನೆ. ಪ್ರೇಕ್ಷಕರೂ ಆ ಬಣ್ಣಗಳನ್ನು, ವೈಚಾರಿಕತೆಯ ಲೇಪನವನ್ನೂ ಆನಂದಿಸಿದ್ದಾರೆ.

’ಸತ್ಯಮೇವ ಜಯತೆ’ಯನ್ನು ನಿರ್ಮಿಸುವಾಗ ಅದು ತನ್ನ ಆಕ್ಟಿವಿಸಂನ ಭಾಗವೆಂದೇ ಅಮೀರ್ ಖಾನ್ ಕರೆದುಕೊಂಡಿದ್ದ. ಜನ ಅದನ್ನು ಅನುಮೋದಿಸಿದರು. ಅದು ತುಂಬಾ ಜನಪ್ರಿಯವೂ ಆಯಿತು. ಅಲ್ಲಿ ಅಮೀರ್ ಖಾನ್ ಭಾವುಕತೆಯಿಂದ ಪ್ರಸ್ತುತಪಡಿಸಿದ ಶತಮಾನಗಳಿಂದ ಚಾಲ್ತಿಯಲ್ಲಿದ್ದ ವ್ಯವಸ್ಥೆಯ ಕ್ರೌರ್ಯಕ್ಕೆ ಇಂಡಿಯಾದ ಮಧ್ಯಮವರ್ಗ ಸಹ ಅದು ಇದುವರೆಗೂ ತಮಗೆ ಗೊತ್ತೇ ಇರಲಿಲ್ಲವೆನ್ನುವಂತೆ, ಇದೇ ಮೊದಲ ಬಾರಿಗೆ ಅಮೀರ್ ಖಾನ್‌ನ ಮೂಲಕ ತಮಗೆ ದರ್ಶನವಾಗಿದೆಯೇನೋ ಎನ್ನುವಷ್ಟು ಬಾವುಕತೆಯಿಂದ ಸಮನಾಗಿ ಕಣ್ಣೀರಿಟ್ಟರು. ಸದ್ಯದ ಸಂದರ್ಭದಲ್ಲಿ ತನ್ನನ್ನು ಇಂಡಿಯಾದ Method Actor ಎಂದೇ ಬಿಂಬಿಸಿಕೊಳ್ಳುತ್ತಿರುವ ಅಮೀರ್ ವಾಸ್ತವದಲ್ಲೂ ಅದಕ್ಕೆ ಹತ್ತಿರವಿರುವಂತಹ pk-posterಪಾತ್ರಗಳನ್ನೂ ಆಯ್ದುಕೊಳ್ಳುತ್ತಿದ್ದಾನೆ. ಆದರೆ ಆ Method Actor ಆಯ್ಕೆಯನ್ನು ನಿಭಾಯಿಸಿಲಾಗದಂತೆ ತಡೆಯೊಡ್ಡುವ ಅನೇಕ ಜನಪ್ರಿಯವಾದ ಮಿತಿಗಳಲ್ಲಿ ಸಹ ಅಮೀರ್ ಬಂಧಿಯಾಗಿದ್ದಾನೆ. ಆದರೆ ಮತ್ತೊಂದೆಡೆ ಕಮಲ್ ಹಾಸನ್ ‘ಅನ್ಬೆ ಶಿವಂ, ವಿರುಮಾಂಡಿ’ ತರಹದ ಸಿನಿಮಾಗಳ ಮೂಲಕ ಇಲ್ಲಿನ ಕಮರ್ಷಿಯಲ್ ಮಿತಿಗಳನ್ನೂ ಮೀರುತ್ತ Method Actor ನ ಮಾದರಿಗೆ ಇಂಡಿಯಾದ ಮಟ್ಟದಲ್ಲಿ ಹೊಸ ರೂಪವನ್ನು ತಂದುಕೊಟ್ಟಿದ್ದಾನೆ. ಪಂಕಜ್ ಕಪೂರ್, ನಾಸಿರುದ್ದೀನ್ ಶಾ, ಇರ್ಫಾನ್ ಖಾನ್, ನವಾಜುದ್ದೀನ್ ಸಿದ್ದಕಿ ಯಂತಹ ನಟರು ಇಂದು Method Actor ನ ಅತ್ಯುತ್ತಮವಾದ, ಪ್ರತಿಭಾವಂತ ಉದಾಹರಣೆಯಾಗಿದ್ದಾರೆ. ಇವರಿಗೆ ಸಾಧ್ಯವಾಗಿದ್ದು ಅಮೀರ್ ಖಾನ್‌ಗೆ ಸಾಧ್ಯವಾಗುತ್ತಿಲ್ಲ.

ನಿರ್ದೇಶಕ ರಾಜಕುಮಾರ್ ಹಿರಾನಿ ಪ್ರಸ್ತುತ ಸಂದರ್ಭದಲ್ಲಿ ತಾನು ಇಂಡಿಯಾದ ಯಶಸ್ವೀ Show Man ಎಂದು ಈ ‘ಪಿಕೆ’ ಸಿನಿಮಾದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಒಬ್ಬ ಯಶಸ್ವಿ Show Manಗೆ ಅತ್ಯವಶ್ಯಕವಾದ ಕತೆ ಹೇಳುವ ನೈಪುಣ್ಯತೆಯನ್ನು ಸಮರ್ಥವಾಗಿ ಮೈಗೂಡಿಸಿಕೊಂಡಿರುವ ಹಿರಾನಿ ಅದನ್ನು ಪ್ರೇಕ್ಷಕರು ತಲೆದೂಗುವಂತೆ ಫ್ರೇಮಿನಿಂದ ಫ್ರೇಮಿಗೆ ಕಟ್ಟುತ್ತಾ ಹೋಗುತ್ತಾನೆ. ಈತನ ಕಾಗಕ್ಕ, ಗುಬ್ಬಕ್ಕ ಕತೆಗಳನ್ನು ಸಿನಿಮಾದ ರೀಲುಗಳಲ್ಲಿ ಅಡಗಿಸಿಟ್ಟು ಅದಕ್ಕೆ ಬಣ್ಣಗಳನ್ನು ತುಂಬುತ್ತಾ ಪರದೆಯ ಮೇಲೆ ಹೊರ ಬಿಡುವಾಗ ಪ್ರೇಕ್ಷಕನೂ ಸಹ ಆ ಬಣ್ಣಗಳಲ್ಲಿ ಕಳೆದು ಹೋಗುವಂತಹ ಚಿತ್ರಕತೆಯನ್ನು ಹೆಣೆಯುವ ಹಿರಾನಿ, ಪ್ರತಿ ಸಿನಿಮಾದಲ್ಲೂ ಅದಕ್ಕೆ ವೈಚಾರಿಕತೆಯ, ನೈತಿಕತೆಯ, ಆದರ್ಶದ ಸ್ಲೋಗನ್‌ಗಳ ಹೊದಿಕೆಯನ್ನು ಸುತ್ತುತ್ತಾನೆ. ಹಿರಾನಿಯ ಈ ನೈತಿಕತೆಯ ಪಾಠಗಳು ಚಿಂತನೆಗೆ ಹಚ್ಚುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರೇಕ್ಷಕನನ್ನು ಮತ್ತಷ್ಟು ಉಲ್ಲಾಸಗೊಳಿಸುತ್ತವೆ. ಆತನಿಗೆ ಸಿನಿಮಾ ಭಾಷೆಯ ಮೇಲಿರುವ ಹಿಡಿತ ನಿಜಕ್ಕೂ ಬೆರಗುಗೊಳಿಸುತ್ತದೆ. ಆದರೆ ‘ಈ ನರಕ ಯಾತನೆಗೆ ಕೊನೆ ಎಂದು?’ ಎನ್ನುವ ಪ್ರಶ್ನೆಗಳನ್ನು ಹಿರಾನಿಯ ಪಾತ್ರಗಳೂ ಕೇಳುವುದಿಲ್ಲ. ಪ್ರೇಕ್ಷಕರೂ ಬಯಸುವುದಿಲ್ಲ. ಏಕೆಂದರೆ ಇಲ್ಲಿನ ಎಲ್ಲಾ ಭ್ರಷ್ಟತೆ, ಕ್ರೌರ್ಯಗಳ ನಿರೂಪಣೆಯು ಪ್ರೇಕ್ಷಕನಲ್ಲಿ ತಲ್ಲಣಗೊಳಿಸುವುದರ ಬದಲು, ನೋವನ್ನು ಉಂಟು ಮಾಡುವುದರ ಬದಲು ಅರೆ ಅದನ್ನೆಲ್ಲ ಎಷ್ಟು ಚೆಂದ ತೋರಿಸಿದ್ದಾನೆ ಈ ಹಿರಾನಿ ಎಂದು ಪ್ರೇಕ್ಷಕ ತಲೆದೂಗುವಂತೆ ಮಾಡುವದರಲ್ಲಿಯೇ rajkumar-hiraniಹಿರಾನಿಯ ನೈಪುಣ್ಯತೆ ಕರಗಿ ಹೋಗುವುದರಿಂದ ಮತ್ತು ಈ ಎಲ್ಲಾ ಪ್ರಶ್ನೆಗಳನ್ನೇ ಅನೇಕ ಬಾರಿ ಅಸಂಬದ್ಧ, ನೀವು ಸಿನಿಮಾ ನೋಡಲು ಬಂದಿದ್ದೀರಿ ಅದನ್ನು ಮಾಡಿ ಎಂದೇ ತಾಕೀತು ಮಾಡುವಂತಿರುತ್ತದೆ.

ಆದರೆ ಹಿರಾನಿ ತನ್ನ ಮೊದಲ ಸಿನಿಮಾ ‘ಮುನ್ನಾ ಭಾಯಿ ಎಂಬಿಬಿಎಸ್’ ಅನ್ನು ನಿದೇಶಿಸಿದಾಗ ಅಲ್ಲಿ ಕತೆಯ ಮೂಲಕ ಸಂದೇಶವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದ. ಆ ಸಿನಿಮಾದಲ್ಲಿ ಮಗುವಿನ ಮುಗ್ಧತೆ, ಅಂಬೆಗಾಲಿನ ಪ್ರಾಮಾಣಿಕ ನಡಿಗೆ ಪ್ರತಿ ಪ್ರೇಮಿನಲ್ಲಿ ನಮ್ಮನ್ನು ತಟ್ಟುತ್ತಿತ್ತು. ಇದಕ್ಕೆ ಮೂಲಭೂತ ಕಾರಣವೇನೆಂದರೆ ಅಲ್ಲಿ ಕತೆ ಹೇಳುತ್ತಲೇ ನ್ಶೆತಿಕತೆ, ಆದರ್ಶದ ಸಂದೇಶಗಳು ಪ್ರೇಕ್ಷಕನಿಗೆ ರವಾನೆ ಆಗುತ್ತಿದ್ದವು. ಈ ಸಂದೇಶಗಳು ತೀರಾ ಸರಳೀಕೃತ ರೂಪದಲ್ಲಿದ್ದರೂ ಸಹ ಅದರ ಪ್ರಮಾಣಿಕತೆಯಿಂದಾಗಿಯೇ ನಮ್ಮನ್ನೆಲ್ಲಾ ಗೆದ್ದುಬಿಟ್ಟಿತ್ತು. ಆದರೆ ನಂತರ ’ಲಗೇ ರಹೋ ಮುನ್ನಾಭಾಯ”, ಮತ್ತು ’ತ್ರೀ ಈಡಿಯಟ್ಸ್’ ನ ಅಭೂತಪೂರ್ವ ಯಶಸ್ಸಿನ ನಂತರ ಹಿರಾನಿಯ ಆ ಮುಗ್ಧತೆ ಮತ್ತು ಪ್ರೇಕ್ಷಕನ್ನು ತಟ್ಟುವ ಗುಣಗಳು ಈ ಪಿಕೆ ಸಿನಿಮಾದಲ್ಲಿ ಕಣ್ಮರೆಯಾಗಿ ಬೋಧನೆಯ ಸ್ವರೂಪ ಪಡೆದುಕೊಂಡಿವೆ ಮತ್ತು ಅದನ್ನು ಬೋಧಿಸುತ್ತಿರುವವರು ಪ್ರತಿ ನಾಯಕರಾದ, ನಮ್ಮ ನಡುವಿನ, ಪಕ್ಕದ ಮನೆಯ ಹುಡುಗರಾದ ಮುನ್ನಾಭಾಯಿ, ಸರ್ಕಿಟ್‌ಗಳಲ್ಲ, ಬದಲಾಗಿ ರ್‍ಯಾಂಚೋ, ಪಿಕೆ ಗಳಂತಹ ತಂತ್ರಜ್ಞಾನ ಪ್ರವೀಣರು, ಛಾಂಪಿಯನ್ನರು, ಯಾವುದೇ ಐಬಿಲ್ಲದ, ಕಲ್ಮಶಗಳಿಲ್ಲದ ಪರಿಪೂರ್ಣ ನಾಯಕರು. ಚಿತ್ರದಿಂದ ಚಿತ್ರಕ್ಕೆ ಬಲಗೊಳ್ಳುತ್ತ ಸಾಗಿದ ನಿರ್ದೆಶಕ ಹಿರಾನಿ ಆತ್ಮ ವಿಶ್ವಾಸವನ್ನು ಗಳಸಿಕೊಳ್ಳುತ್ತಾ, ಹೊಸ ನಿರ್ದೇಶನದ ಪಿಕೆ ಸಿನಿಮಾದಲ್ಲಿ ಸಂದೇಶಗಳೇ ಇಡೀ ಸಿನಿಮಾವನ್ನು ವ್ಯಾಪಿಸಿಕೊಂಡು ಪ್ರೇಕ್ಷಕ ’ಕತೆ ಎಲ್ಲಿದೆ?’ ಎಂದು ಪ್ರಶ್ನಿಸಿದಾಗ ನಿರ್ದೇಶಕ ಹಿರಾನಿ ’ನೀನೆ ನನ್ನ ಆ ಸಂದೇಶಗಳಲ್ಲಿ ಕತೆಯನ್ನು ಹುಡುಕಿಕೋ’ ಎಂದು ಉತ್ತರಿಸುತ್ತಾನೆ. ಆದರೆ ಅಲ್ಲಿ ಕತೆಯ ಹೊಳಹೂ ಸಹ ಸಿಗುವುದಿಲ್ಲ. ಮುನ್ನಾಭಾಯಿಯ ’ಒಮ್ಮೆ ನನ್ನನ್ನು ಅಪ್ಪಿಕೋ’ ಎನ್ನುವ ಮುಗ್ಧ ಸಂದೇಶ ತಂದುಕೊಟ್ಟ ಹುಮ್ಮಸ್ಸು, ಉತ್ಸಾಹ ಈ ಪಿಕೆಯ ’ರಾಂಗ್ ನಂಬರ್’ ಸಂದೇಶಕ್ಕೆ ಬಂದು ತಲುಪುವಷ್ಟರಲ್ಲಿ ಕಣ್ಮರೆಯಾಗುತ್ತವೆ.

ಹೀಗಾಗಿ ಪಿಕೆ ಸಿನಿಮಾದಲ್ಲಿ ಆದರ್ಶಗಳ ಸಂದೇಶಗಳಿವೆ, ಧಾರ್ಮಿಕ ಮೌಢ್ಯ, ಮೂಲಭೂತವಾದದ ವಿರುದ್ಧ ಪ್ರತಿಭಟನೆ ಇದೆ. pk-aamir-khan-anushka-sharmaಆಶಯಗಳ ಮಟ್ಟಿಗೆ ಈ ಸಿನಿಮಾ ನಿಜಕ್ಕೂ ಅತ್ಯುತ್ತಮ ಸಿನಿಮಾ. ಆದರೆ ಆ ಆಶಯಗಳು ಅದನ್ನು ಪ್ರೇಕ್ಷಕರಿಗೆ ರವಾನಿಸುವ ಸಂದರ್ಭದಲ್ಲಿ ಹೊಸ ಒಳನೋಟಗಳೊಂದಿಗೆ, ಮತ್ತಷ್ಟು ಆಳವಾದ ಪ್ರಶ್ನೆಗಳೊಂದಿಗೆ ಮೂಡಿ ಬರಲು ನಿರಾಕರಿಸುತ್ತವೆ. ಪಾತ್ರಗಳ ನಡುವೆ ಅತ್ಯಗತ್ಯವಾದ ಪರಸ್ಪರ ಪೂರಕವಾದ ಕೆಮಿಸ್ಟ್ರಿ ಕಣ್ಮರೆಯಾಗಿದೆ. ಹೀಗಾಗಿ ಪ್ರತಿಯೊಂದು ಪಾತ್ರವೂ ಕ್ಯಾಮಾರಾ ಕಡೆಗೆ ಮುಖ ಮಾಡಿ ನಿರ್ದೇಶಕ ಹಿರಾನಿಯ ಸಂದೇಶಗಳನ್ನು ಪ್ರೇಕ್ಷಕನಿಗೆ ಗಿಣಿಪಾಠದಂತೆ ಒಪ್ಪಿಸುತ್ತಿರುತ್ತವೆ ಅಷ್ಟೆ. ಯಾವುದೇ ಪಾತ್ರಗಳಲ್ಲಿಯೂ ಸಂಕೀರ್ಣತೆ ಕಂಡು ಬರುವುದಿಲ್ಲ. ಜಾನೇ ಭೀ ದೋ ಯಾರೋ ದಂತಹ ಅತ್ಯುತ್ತಮ ಹಾಸ್ಯ ಸಿನಿಮಾದ ಪಾತ್ರಗಳ ಸಂಕೀರ್ಣತೆಯು ಪ್ರೇಕ್ಷಕನಿಗೂ ಆಳವಾಗಿ ಮುಟ್ಟುತ್ತದೆ ಮತ್ತು ತಾನು ಹೇಳಬೇಕಾದದ್ದನ್ನು ಕೊಂಚವೂ ಅಳುಕಿಲ್ಲದೆ ನಿರೂಪಿಸುತ್ತಾ ಹೋಗುತ್ತದೆ. ಅದು ನಿಜದ ಯಶಸ್ಸು. ಕನಿಷ್ಠ ‘ಓಹ್ ಮೈ ಗಾಡ್’ ಸಿನಿಮಾದ ತಾಜಾತನವೂ ಇಲ್ಲಿ ಕಾಣಿಸುತ್ತಿಲ್ಲ. ಅಂದರೆ ನಿರ್ದೇಶಕ ಹಿರಾನಿ ತಾನು ಸ್ವತಃ ಅರಗಿಸಿಕೊಳ್ಳುವುದಕ್ಕೂ ಆಗದಷ್ಟು ಆಹಾರವನ್ನು ಅಗಿಯುತ್ತಿದ್ದಾನೆ. ಅಂದರೆ Art for the sale of art ನ ತತ್ವದಂತೆಯೇ ಪಿಕೆಯಲ್ಲಿ Messages for the sake of messages ತರಹ ತತ್ವಗಳು ರವಾನೆಯಾಗುತ್ತಿವೆ. ಈ ಸಿನಿಮಾದ ಕ್ಲೈಮಾಕ್ಸ್ ದೃಶ್ಯದಲ್ಲಿ ಡೋಂಗಿ ಬಾಬಾ ‘ತಪಸ್ವಿ’ ಮತ್ತು ‘ಪಿಕೆ’ ನಡುವಿನ ಚರ್ಚೆ ಮತ್ತು ಸಂವಾದದ ಆಶಯಗಳು ತುಂಬಾ ಮಾನವೀಯವಾಗಿದೆ. ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸುವ ಆ ಆಶಯಗಳು ಇಂದಿನ ಧಾರ್ಮಿಕ ಫೆನಟಿಸಂಗೆ ತಕ್ಕ ಉತ್ತರವಾಗಿದೆ. munna-bhai-mbbsಇದನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯಬೇಕಿದ್ದ ನಿರ್ದೇಶಕ ಹಿರಾನಿ ಆ ಇಡೀ ದೃಶ್ಯವನ್ನು ಹೈಸ್ಕೂಲ್‌ನ ಡಿಬೇಟ್ ಮಟ್ಟಕ್ಕೆ ಇಳಿಸಿದ್ದಾನೆ. ಕಡೆಗೆ ಅದು ವೀರ-ಜಾರ ಸಿನಿಮಾದ ಮಾದರಿಯಲ್ಲಿ ಅನುಷ್ಕ ಶರ್ಮ ಮತ್ತು ಅವಳ ಪಾಕಿಸ್ತಾನ ಪ್ರೇಮಿಯನ್ನು ಒಂದುಗೂಡಿಸುಲ್ಲಿಗೆ ಪರ್ಯಾವಸಾನಗೊಳ್ಳುತ್ತದೆ.

ಆದರೆ ಒಂದು ಸದುದ್ದೇಶದ, ಸೂಕ್ಷ್ಮತೆಯ, ಮೌಢ್ಯವನ್ನು ನೇರವಾಗಿ ಟೀಕಿಸುವ, ಜನಪರ ಆಶಯಗಳನ್ನುಳ್ಳ ಪಿಕೆ ಸಿನಿಮಾವನ್ನು ನೋಡಲು ಈ ಎಲ್ಲಾ ಪ್ರಶ್ನೆಗಳು ಬೇಕೆ ಸ್ವಾಮಿ ಎಂದು ಕೇಳಿದರೆ ಉತ್ತರವೂ ಇಲ್ಲ. ಏಕೆಂದರೆ ಆ ಪ್ರಶ್ನೆ ತುಂಬಾ ವಾಸ್ತವ. ಆದರೆ ಪಿಕೆ ನೋಡಿದ ನಂತರ ಮತ್ತೊಮ್ಮೆ ಗರಂ ಹವಾ, ರಾಮ್ ಕೆ ನಾಮ್, ತಣ್ಣೀರ್ ತಣ್ಣೀರ್, ಸದ್ಗತಿಯಂತಹ ಸಿನಿಮಾಗಳನ್ನು ಐದನೇ ಬಾರಿ, ಹತ್ತನೇ ಬಾರಿ ನೋಡಲು ಮನಸ್ಸು ತಹತಹಿಸುತ್ತದೆ. ಇದು ಸಹ ಅಷ್ಟೇ ಸತ್ಯ. ಆದರೆ ಸಿನಿಮಾ ಬಿಡುಗಡೆಯಾದ ಮೂರೇ ವಾರಗಳಲ್ಲಿ 300 ಕೋಟಿಗೂ ಮೇಲ್ಪಟ್ಟು ಗಳಿಸಿರುವುದೇ ಇದನ್ನೂ ಪ್ರೇಕ್ಷಕ ಸ್ವೀಕರಿಸಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ಅಷ್ಟೇಕೆ ನಿರ್ಮಾಪಕರು ಈ ಸಿನಿಮಾವನ್ನು ಮತೀಯವಾದಿ ನಾಯಕ ಎಲ್.ಕೆ. ಅದ್ವಾನಿ, ಭ್ರಷ್ಟ, ಮತೀಯವಾದಿ, ಡೋಂಗಿ ಬಾಬಾ ಶ್ರೀ ಶ್ರೀ ರವಿಶಂಕರ್‌ಗೆ ಅರ್ಪಿಸಿದ್ದಾನೆ, ಇದಕ್ಕೇನು ಮಾಡುವುದು ಎಂದಾಗ ಇಂತಹ ಕ್ಷುಲ್ಲಕ ಸಂಗತಿಗಳನ್ನು ಎತ್ತಬೇಡಿ, ಸಿನಿಮಾದ ಸಂದೇಶಗಳನ್ನು ಗಮನಿಸಿ ಎಂದು ಹೇಳಿದರೆ ????

ಹೀಗಾಗಿಯೇ ಇಂದು ಹಿಂದಿ ಸಿನಿಮಾರಂಗದಲ್ಲಿ ಒಂದು ತುದಿಯಲ್ಲಿ ಸಲ್ಮಾನ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್‌ರಂತಹ ನಟರು ಮತ್ತು ಬಹುಪಾಲು ಹಿಂದಿ ನಿರ್ದೇಶಕರು ಅತ್ಯಂತ ಕಳಪೆ, ಮೂರನೆ ದರ್ಜೆಯ ಸಿನಿಮಾಗಳನ್ನು ನೀಡುತ್ತಿರುವುದರ ಫಲವಾಗಿ ಮತ್ತೊಂದು ತುದಿಯಲ್ಲಿ ಈ ಹಿರಾನಿ ಮತ್ತು PK_poster_burning_Jammuಅಮೀರ್ ಖಾನ್ ಜೋಡಿ ನಿರ್ಮಿಸುತ್ತಿರುವ ಸಿನಿಮಾಗಳು ನಿಜಕ್ಕೂ something better ಎನ್ನುಂತೆ ರೂಪಿತಗೊಂಡಿರುವುದೂ ನಿಜ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆರೆಸ್ಸಸ್ ಸರ್ಕಾರ ಕಳೆದ ಆರು ತಿಂಗಳಿಂದ ಸಮಾಜದಲ್ಲಿ ಹಿಂದೂಯಿಸಂನ ಫೆನಟಿಸಂ ಅನ್ನು ನಿರಂತರವಾಗಿ ಹುಟ್ಟು ಹಾಕುತ್ತಿದೆ, ಮೂಲಭೂತವಾದ ಮತ್ತು ಕೋಮುವಾದದ ಸ್ವರೂಪಗಳು ಹೆಡೆ ಎತ್ತುತ್ತಿವೆ. ಮತ್ತು ಈ ‘ಪಿಕೆ’ ಸಿನಿಮಾದ ವಿರುದ್ಧ ಮತೀಯವಾದಿ ಹಿಂದೂ ಸಂಘಟನೆಗಳು ಪ್ರತಿಭಟಿಸಿ ಹಿಂಸಾತ್ಮಕವಾಗಿ ವರ್ತಿಸುತ್ತಿವೆ. ಈ ಕಾರಣಗಳಿಂದಾಗಿಯೇ ಹಿರಾನಿ-ಅಮೀರ್ ಖಾನ್ ಜೋಡಿಯ ‘ಪಿಕೆ’ ಸಿನಿಮಾಗೆ ಒಂದು ಬಗೆಯ ಸೆಕ್ಯುಲರ್ ಅಯಾಮವೇ ದೊರಕಿಬಿಟ್ಟಿದೆ. ಇಂದು ಮೂಢ ನಂಬಿಕೆಗಳ ವಿರುದ್ಧದ ಹೋರಾಟಕ್ಕೆ ಶ್ರೇಷ್ಠವಾದ ಸಂಕೇತ ಈ ಪಿಕೆ ಸಿನಿಮಾ ಎನ್ನುವುದೇ ನಿಜವಾದಲ್ಲಿ, ಪ್ರಜ್ಞಾವಂತರು, ಪ್ರಗತಿಪರರು, ಜಾತ್ಯಾತೀತರು ತಮ್ಮ ಹೊಣೆಯನ್ನು ನಿಭಾಯಿಸಲು ಸೋತು ಅ ಹೊಣೆಗಾರಿಕೆಯನ್ನು ಈ ‘ಪಿಕೆ’ ಎನ್ನುವ ಅಮಾಯಕ, ಮುಗ್ಧ, ಸರಳ ಸಿನಿಮಾದ ಹೆಗಲಿಗೆ ವರ್ಗಾಯಿಸಿದ್ದೇವೆ ಅಷ್ಟೆ. ಮತ್ತೇನಿಲ್ಲ.

ಕದ್ದ ತಲೆಮಾರುಗಳನ್ನು ಹುಡುಕುತ್ತಾ… : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-2)


– ಶ್ರೀಧರ್ ಪ್ರಭು


 

“We are all visitors to this time, this place. We are just passing through. Our purpose here is to observe, to learn, to grow, to love… and then we return home.”

– ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲಿ ಪ್ರಚಲಿತವಿರುವ ಒಂದು ನಾಣ್ಣುಡಿ

ಪ್ರಪಂಚದ ಮೊದಲ ಕಾಲಾಪಾನಿ

ಇಂಗ್ಲೆಂಡ್ ಮತ್ತು ಅಮೆರಿಕೆಯ ಔದ್ಯೋಗಿಕ ಕ್ರಾಂತಿ ಒಂದು ಕಡೆ ಪ್ರಗತಿ ಮತ್ತು ಶ್ರೀಮಂತಿಕೆ ತಂದರೆ ಇನ್ನೊಂದೆಡೆ ಅತ್ಯಂತ ಕ್ರೂರ ಅಸಮಾನತೆಯನ್ನೂ ತಂದೊಡ್ಡಿತು. ಕಾರ್ಮಿಕರ, ಅದರಲ್ಲೂ ಬಾಲ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ ಮಿತಿ ಮೀರಿತ್ತು. ಬಹುತೇಕ ಜೈಲುಗಳು ತುಂಬಿ ತುಳುಕುತ್ತಿದ್ದವು. ಇಂತಹುದ್ದರಲ್ಲಿ, ಸಾಮ್ರಾಜ್ಯಶಾಹಿಗಳು ಕಂಡು ಕೊಂಡ ಸುಲಭ ಮಾರ್ಗವೆಂದರೆ ಕೈದಿಗಳನ್ನು ದೂರದ ದ್ವೀಪಗಳಿಗೆ ಸಾಗಿಸುವುದು. ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಗ್ಗು ಬಡಿಯಲು ಅಂಡಮಾನಿನ ಕಾಲಾಪಾನಿ Australia-aborigines-artಶಿಕ್ಷೆ ಕಂಡುಕೊಂಡಂತೆ, ತಮ್ಮದೇ ದೇಶದಲ್ಲಿನ ದಂಗೆ, ಹೋರಾಟಗಳನ್ನು ಹತ್ತಿಕ್ಕಲು ಕೈದಿಗಳನ್ನು ಆಸ್ಟ್ರೇಲಿಯಾಗೆ ಸಾಗಿಸುವ ಮಾರ್ಗ ಕಂಡು ಹಿಡಿಯಲಾಯಿತು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ನಡುವಿನ ಸುಮಾರು ಎಂಬತ್ತು ವರ್ಷಗಳ ಅವಧಿಯಲ್ಲಿ ಸುಮಾರು 1,65,000 ಜನರನ್ನು ಆಸ್ಟ್ರೇಲಿಯಾಗೆ ಸಾಗಿಸಲಾಯಿತು.

ಮೂಲನಿವಾಸಿಗಳ ಮಾರಣ ಹೋಮ

ಹೀಗೆ ಕಾಲಿಟ್ಟ ಪಾಶ್ಚಿಮಾತ್ಯರು ಕೇಳಿ ಕಂಡರಿಯದ ರೋಗ ರುಜಿನಗಳನ್ನು ಮೂಲ ನಿವಾಸಿಗಳಿಗೆ ಅಂಟಿಸಿಬಿಟ್ಟರು. ನೆಗಡಿಯಿಂದ ಮೊದಲ್ಗೊಂಡು ಸೀತಾಳೆ ಸಿಡುಬು, ಕಾಲರ, ಕ್ಷಯ ರೋಗ, ಸಿಫಿಲಿಸ್ ನಂತಹ ಗುಪ್ತ ರೋಗಗಳು ಅಂಟಿಕೊಂಡು ಸಿಡ್ನಿ ಸುತ್ತಲಿನ ಅರ್ಧದಷ್ಟು ಮೂಲನಿವಾಸಿಗಳು ಸ್ವರ್ಗವಾಸಿಗಳಾದರು.

ನಲವತ್ತು ಸಾವಿರ ವರ್ಷಗಳಿಂದ ನೆಲವನ್ನು ತಬ್ಬಿ ಬದುಕಿದ ಪ್ರಾಚೀನ ಸಂಸ್ಕೃತಿಯೊಂದನ್ನು ಸಾಮ್ರಾಜ್ಯದಾಹದ ಬಿಳಿಯರು ಕೇವಲ (ಹತ್ತೊಂಬತ್ತನೇ ಶತಮಾನದ ಮೊದಲ) ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಗುರುತು ಸಿಗದಂತೆ ನಾಶಮಾಡಿಬಿಟ್ಟಿದ್ದರು.

ಬ್ರಿಟಿಷರ ಸಾಮ್ರಾಜ್ಯಶಾಹಿ ದಾಹದಲ್ಲಿ ಬೆಂದು 1901ರ ವರೆಗೂ ಒಂದು ವಸಾಹತುವಾಗಿಯೇ ಉಳಿದಿತ್ತು. ಅರ್ಥಿಕ ಅಸಮಾನತೆಯಲ್ಲಿ ಬೆಂದು ಬಂದ ಶೋಷಿತರು ಮತ್ತು ಸಾಮ್ರಾಜ್ಯ ಶಾಹಿಗಳು ಸೇರಿ ಮೂಲನಿವಾಸಿಗಳನ್ನು ಶೋಷಿಸಿದರು. ಇಂದು ಸಿಡ್ನಿ ರಾಜಧಾನಿಯಾಗಿರುವ ನ್ಯೂ ಸೌತ್ ವೇಲ್ಸ್ ನಿಂದ ಬೇರ್ಪಟ್ಟು ತಮ್ಮದೇ ಪ್ರಾಂತ್ಯ ನಿರ್ಮಿಸಿಕೊಳ್ಳಬೇಕು ಎಂಬ ಆಶಯದಿಂದ ಅಂದು ಕೇವಲ ಪೋರ್ಟ್ ಫಿಲ್ಲಿಪ್ ಒಂದು ಜಿಲ್ಲೆಯಾಗಿದ್ದ ವಿಕ್ಟೋರಿಯಾ ಪ್ರಾಂತ್ಯದ ಜನ ಹೋರಾಟ ನಡೆಸಿದರು. ಒಂದು ಪ್ರಾಂತ್ಯದ “ದೊಡ್ಡಣ್ಣನ” ವ್ಯವಹಾರ ಸಹಿಸದೆ ಹೋರಾಟಗಳು ನಡೆದವು.

ಯಾರಿಗೆ ಬಂತು ಎಲ್ಲಿಗೆ ಬಂತು?

ಆಸ್ಟ್ರೇಲಿಯಾ 1901 ರಲ್ಲಿ ಗಣರಾಜ್ಯವಾಗಿ ಉದಯಿಸಿತು. ಆದರೆ ಮೂಲನಿವಾಸಿಗಳ ಶೋಷಣೆ ಇನ್ನೂ ತೀವ್ರವಾಯಿತು. 1909 ರಿಂದ 1969 ರ ವರೆಗೆ ಸಾವಿರಾರು ಮಕ್ಕಳನ್ನು ತಮ್ಮ ತಂದೆ ತಾಯಿಯರಿಂದ ಕದ್ದು ಸರಕಾರ ಪ್ರಾಯೋಜಿಸಿದ ಹಾಸ್ಟೆಲ್ ಗಳಿಗೆ (ಒಂದು ರೀತಿಯಲ್ಲಿ ಮಕ್ಕಳ ಜೈಲುಗಳು) ಸಾಗಿಸಲಾಯಿತು. ಹೀಗಾಗಿ ಮೂಲನಿವಾಸಿಗಳನ್ನು Australia-family-aborigines“ಕದ್ದ ತಲೆಮಾರುಗಳು’ (ಸ್ಟೋಲನ್ ಜೆನರೇಶನ್ಸ್) ಎಂದು ಕೆರೆಯುವ ಪರಿಪಾಠವಿದೆ. ಇಂದಿಗೆ ಕೇವಲ ನಾಲ್ಕು ದಶಕಗಳ ಹಿಂದಿನವರೆಗೂ ಆಸ್ಟ್ರೇಲಿಯ ಸರಕಾರ ‘ಸುಸಂಸ್ಕೃತ’ ಗೊಳಿಸುವಸಲುವಾಗಿ ಕಾನೂನಿನನ್ವಯ ಮೂಲನಿವಾಸಿಗಳ ಮಕ್ಕಳನ್ನು ಅಪಹರಿಸುತ್ತಿತ್ತು.

ಹೆತ್ತವರಿಂದ ಬೇರ್ಪಟ್ಟ ಸಾವಿರಾರು ಜನರು ಕಳೆದೇ ಹೋದರು. ವ್ಯಕ್ತಿ ಗಳು ಮಾತ್ರವಲ್ಲ ಹಲವು ಜನಾಂಗಗಳೇ ಕಳೆದು ಹೋದವು

ರಕ್ತದ ಕಲೆ ತೊಳೆಯುತ್ತಾ…

ಆಸ್ಟ್ರೇಲಿಯಾಗೆ ಮೂಲನಿವಾಸಿಗಳ ರಕ್ತ ಅಂಟಿರುವುದು ಎಷ್ಟು ನಿಜವೋ ಅದನ್ನು ತೊಳೆಯಲು ನಡೆಯುತ್ತಿರುವ ಪ್ರಯತ್ನಗಳೂ ಅಷ್ಟೇ ನಿಜ. ತಾವು ಕ್ಷಮಿಸಲಾಗದ ಅಪರಾಧ ಮಾಡಿದ್ದೇವೆ ಎಂಬ ಅಪರಾಧಿ ಪ್ರಜ್ಞೆ ಬಹುತೇಕರಲ್ಲಿದೆ. ಕಳೆದ ದಶಕ ಒಂದರಲ್ಲೇ ಸರಕಾರ ಉತ್ತರ ಆಸ್ಟ್ರೇಲಿಯ ಪ್ರಾಂತದ 21% (ಹದಿಮೂರು ಲಕ್ಷ ಚದುರ ಮೀಟರ್ ನಷ್ಟು) ಭೂಮಿಯ ಒಡೆತನವನ್ನು ಮೂಲನಿವಾಸಿಗಳಿಗೆ ವಹಿಸಿ ಕೊಟ್ಟಿದೆ.

2008 ರಲ್ಲಿ ಅಂದಿನ ಪ್ರಧಾನಿ ಕೆವಿನ್ ರಡ್ ಮೂಲನಿವಾಸಿಗಳ ಬಹಿರಂಗ ಕ್ಷಮೆ ಕೇಳಿದರು. ಸರಕಾರ ಮೂಲನಿವಾಸಿಗಳ ಸಲುವಾಗಿ ಆಸ್ಟ್ರೇಲಿಯ ಸರಕಾರವೇ ಲಕ್ಷಗಟ್ಟಲೆ ಡಾಲರ್ ಖರ್ಚು ಮಾಡಿ ಮೂಲನಿವಾಸಿಗಳ ಆಶಯಗಳನ್ನು ಪ್ರತಿಪಾದಿಸುವ ಸಂವಾದ ಕಾರ್ಯಕ್ರಮಗಳನ್ನು ಸಂಯೋಜಿಸಿದೆ. ಇಂತಹ ಸಾಕಷ್ಟು ಕಾರ್ಯಕ್ರಮಗಳು ಆಸ್ಟ್ರೇಲಿಯ ದೇಶದ ಹೊರಗೂ ಜರುಗಿವೆ. ಅಂತಹ ಒಂದೆರಡು ಕಾರ್ಯಕ್ರಮಗಳು ಬೆಂಗಳೂರಿನಲ್ಲೂ ನಡೆದಿವೆ. ಸರಕಾರವೇ ಮುಂದೆ ನಿಂತು, ದುಡ್ಡು ಮತ್ತು ಅಂತರ ರಾಷ್ಟ್ರೀಯ ಮಟ್ಟದ ಪ್ರಚಾರ ಕೊಡಿಸಿ ತಾವೇ ಎಸಗಿದ ಅನ್ಯಾಯಗಳ ಖಂಡನೆ ಮಾಡುವ ಇಂತಹ ಉದಾಹರಣೆಗಳು ಅಪರೂಪ.

ನವೆಂಬರ್ 2014 ನಲ್ಲಿ ಜರುಗಿದ ಬೆಂಗಳೂರು Australia-aborigines-costumeಸಾಹಿತ್ಯ ಹಬ್ಬ (Bengaluru Literary Festival)ದಲ್ಲಿ ಕೂಡ ಅಂತಹ ಒಂದು ಸಂವಾದ ಜರುಗಿತ್ತು. ಕ್ಯಾತೀ ಕ್ರೇಗೀ, ಡೈಲನ್ ಕೋಲ್ಮನ್, ಅನೀಟ ಹೈಸ್, ಜೇರ್ಡ್ ಥಾಮಸ್, ಎಲೆನ್ ವಾನ್, ನೀರ್ವೆನ್ ಮತ್ತು ನಿಕೋಲ್ ವಾಟ್ಸನ್ ಮೊದಲಾದ ಆಸ್ಟ್ರೇಲಿಯಾದ ಜನಪರ ಲೇಖಕರು ಮತ್ತು ಹೋರಾಟಗಾರರೂ ಪಾಲ್ಗೊಂಡಿದ್ದರು. ಇಂತಹ ಆಸ್ಟ್ರೇಲಿಯದ ಅನೇಕ ಸಾಮಾಜಿಕ ಕಳಕಳಿಯ ಚಿಂತಕರು ಭಾರತದ ದಲಿತ-ಆದಿವಾಸಿ ಹೋರಾಟಗಳ ನಡುವೆ ಬಾಂಧವ್ಯ ಬೆಸೆಯುವ ಪ್ರಯತ್ನದಲ್ಲಿದ್ದಾರೆ.

ಇಂದು ಪ್ರಪಂಚದಾದ್ಯಂತ ಮೂಲನಿವಾಸಿಗಳು, ದಲಿತರು ಮತ್ತು ದಮನಿತರ ಪರ ನಡೆಯುತ್ತಿರುವ ಹೋರಾಟಗಳ ಆಶಯಗಳು ಬಹುತೇಕವಾಗಿ ಒಂದೇ. ಸಾಮ್ರ್ಯಾಜ್ಯಶಾಹಿಶೋಷಣೆಯ ವಿರುದ್ಧ ನಡೆದ ಸ್ವತಂತ್ರ ಹೋರಾಟದ ಮುಂದುವರಿದ ಭಾಗವಾಗಿ ದಲಿತ, ಶೋಷಿತ ಮತ್ತು ಮೂಲನಿವಾಸಿಗಳಿಗೆ ಸೇರಬೇಕಿರುವ ಹಕ್ಕುಗಳನ್ನು ಪಡೆಯುವ ಹೋರಾಟಗಳು ಒಂದಕ್ಕೊಂದು ಬೆಸೆದು ಒಗ್ಗಟ್ಟಿನ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.

ದೋಣಿ ಧ್ವಂಸ ಪ್ರಕರಣ: ಉತ್ತರ ಇಲ್ಲದ ಪ್ರಶ್ನೆಗಳು…

– ಶಿವರಾಜ್

ನಿಮಗೆ ನೆನಪಿರಬಹುದು. ಅಂದು ಅಕ್ಟೋಬರ್ 27, 2006. ಮೈಸೂರಿನ ಪೊಲೀಸರು ಇಬ್ಬರು ಶಂಕಿತ “ಉಗ್ರರನ್ನು” ನಾಟಕೀಯ ಸನ್ನವೇಶದಲ್ಲಿ ಬಂಧಿಸುತ್ತಾರೆ. ಅವರು ಫಹಾದ್ (24) ಮತ್ತು ಮೊಹಮ್ಮದ್ ಅಲಿ ಹುಸೇನ್ (24). ಬಂಧನ ಆಗುವಾಗ ಗುಂಡಿನ ಚಕಮಕಿ ಆಯಿತು. ಮೈಸೂರಿನ ಜನ ಭಯಭೀತರಾಗಿದ್ದರು. ಅಲ್ ಬದರ್ ಸಂಘಟನೆ ಜೊತೆ ಅವರು ಗುರುತಿಸಿಕೊಂಡಿದ್ದರು, ಕರ್ನಾಟಕದ ಹಲವೆಡೆ ದುಷ್ಕೃತ್ಯಗಳನ್ನು ನಡೆಸಲು ಸಂಚು ಹೂಡಿದ್ದರು ಎಂಬ ವರದಿಗಳು ಅಕ್ಟೋಬರ್ 27 ಹಾಗೂ 28ರ ದಿನಪತ್ರಿಕೆಗಳಲ್ಲಿ ಪ್ರಕಟವಾದವು.

ಈಗ ಎಂಟು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಲು ಕಾರಣವಿದೆ. vikrantakarnataka-nikhil-gowda-Oct2606ಆ ಘಟನೆ ನಡೆದ ಒಂದು ದಿನದ ಹಿಂದೆಯಷ್ಟೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಮಗ ನಿಖಿಲ್ ಗೌಡ ಸುದ್ದಿಯಲ್ಲಿದ್ದರು. ನಿಖಿಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೆಳಗಿನ ಜಾವ 2 ಗಂಟೆಯಲ್ಲಿ ಚರ್ಚ್ ಸ್ಟ್ರೀಟ್ ಹೊಟೇಲ್ ಒಂದಕ್ಕೆ ಹೋಗಿ ಚಿಕನ್ ಸರ್ವ್ ಮಾಡಿ ಎಂದು ಕೇಳಿದ್ದಾರೆ. ತಿನಿಸುಗಳೆಲ್ಲಾ ಖಾಲಿಯಾಗಿದೆ ಎಂದು ಹೊಟೇಲ್‌ನವರು ಹೇಳಿದ್ದ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಕೆಲ ಗ್ಲಾಸುಗಳು ಪುಡಿಪುಡಿಯಾದವು. ನಂತರ ಇದೇ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾದವು. ಅಕ್ಟೋಬರ್ 26 ರ ಬೆಳಗಿನ ಜಾವ ನಡೆದ ಘಟನೆಯಾದ್ದರಿಂದ, ಅದೇ ದಿನ ಸುದ್ದಿವಾಹಿನಿಗಳಲ್ಲಿ ಮಾತ್ರ ಅದು ಸುದ್ದಿಯಾಯಿತು. ಆಗ ವಾಹಿನಿಗಳು ಈಗಿನಷ್ಟು ಪ್ರಭಾವಿಯಾಗಿರಲಿಲ್ಲ.

ಆದರೆ ಅದೇ ದಿನ ರಾತ್ರಿ 10.30 ರ ಸುಮಾರಿಗೆ ಈ ಎನ್‌ಕೌಂಟರ್ ನಾಟಕ ಮೈಸೂರಿನಲ್ಲಿ ನಡೆಯಿತು. ನಾಟಕ ಏಕೆಂದರೆ, ಅಂದು ಗುಂಡಿನ ಚಕಮಕಿ ಮೂಲಕ ಬಂಧನವಾದ ಆ ಇಬ್ಬರು ಯುವಕರು ಆ ಹೊತ್ತಿಗಾಗಲೇ ಪೊಲೀಸರ ಅನಧಿಕೃತ ಕಸ್ಟಡಿಯಲ್ಲಿ ಇಪ್ಪತ್ತು ದಿನ ಕಳೆದಿದ್ದರು. ಬಂಧನದ ನಾಟಕದ ನಂತರ ಆ ಹುಡುಗರು ಬಾಡಿಗೆಗಿದ್ದ ಮನೆಯ TheHinduMysoreಮಾಲೀಕರೇ “ಅರೇ ಈ ಹುಡುಗ್ರಾ..20 ದಿನದ ಹಿಂದೆನೇ ಪೊಲೀಸರು ಬಂದು ಹಿಡ್ಕೊಂಡು ಹೋಗಿದ್ರು. ಈಗ ಮತ್ತೆ ಎನ್ ಕೌಂಟರ್ ಆಯ್ತಾ..?” ಎಂದು ಮಾಧ್ಯಮದವರ ಮುಂದೆ ಪ್ರಶ್ನೆ ಮಾಡಿದ್ದರು. (http://www.thehindu.com/todays-paper/albadr-terrorist-plot-unearthed/article3066969.ece)

ಇದೇ ಘಟನೆಯ ಹಿನ್ನೆಲೆಯಲ್ಲಿ ಒಂದು ಇಂಟರೆಸ್ಟಿಂಗ್ ಮಾಹಿತಿ ಇದೆ. ಅದೇ ದಿನ ಕೆಲ ಪತ್ರಕರ್ತರಿಗೂ ಮಾಹಿತಿ ಗೊತ್ತಾಗಿದೆ. ಸಿಟಿ ಎಡಿಷನ್‌ಗಾಗಿ ಸಾಧ್ಯವಾದಷ್ಟು ಸುದ್ದಿ ಕಳುಹಿಸಿದ್ದಾರೆ. ಬಹುತೇಕ ಪತ್ರಿಕೆಗಳಲ್ಲಿ ಅದು ಒಂದು ಕಾಲಂನಷ್ಟು ಮಾತ್ರ ವರದಿಯಾಗಿತ್ತು. ಹೆಚ್ಚು ವಿವರವಾಗಿ ಕಳುಹಿಸಲು ಯಾರಿಗೂ ಸಮಯ ಇರಲಿಲ್ಲ ನೋಡಿ. ಘಟನೆ ನಡೆದದ್ದೇ 10.30 ರಾತ್ರಿ ಆದರೆ, ಪತ್ರಕರ್ತರಿಗೆ ತಿಳಿಯಲು ಒಂದು ಗಂಟೆಯಾದರೂ ಬೇಕು. ಆ ನಂತರ ಖಾತ್ರಿ ಪಡಿಸಿಕೊಂಡು, ಕಚೇರಿಗೆ ಸುದ್ದಿ ಮುಟ್ಟಿಸುವಲ್ಲಿ ತುಂಬಾ ತಡವಾಗುತ್ತದೆ. ರಾತ್ರಿಯೆಲ್ಲಾ ಇದೇ ಸುದ್ದಿಯ ಹಿಂದೆ ಬಿದ್ದಿದ್ದ ಪತ್ರಕರ್ತರಿಗೆ outlook-Nov1306-nikhil-gowdaಪೊಲೀಸರು ಪತ್ರಿಕಾಗೋಷ್ಟಿ ನಡೆಸಿ ಅಧಿಕೃತವಾಗಿ ಮಾಹಿತಿ ನೀಡುವ ಹೊತ್ತಿಗೆ ಮಾರನೆಯ ದಿನ (ಅಕ್ಟೋಬರ್ 27) ಬೆಳಗಾಗಿತ್ತು. ಪತ್ರಿಕಾ ಗೋಷ್ಟಿ ಮುಗಿಸಿಕೊಂಡು ಮನೆಗೆ ಹೋದವರಿಗೆ ಅಚ್ಚರಿ ಕಾದಿತ್ತು. ಆ ಹೊತ್ತಿಗೆ ಮನೆಗೆ ಬಂದಿದ್ದ ರಾಜ್ಯ ಮಟ್ಟದ ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಅದೇ ಘಟನೆ ಲೀಡ್ ಸುದ್ದಿಯಾಗಿ ಮುಖಪುಟದಲ್ಲಿ ಸಾಕಷ್ಟು ವಿವರವಾಗಿ ಪ್ರಕಟವಾಗಿತ್ತು!

ಆಗ ಪತ್ರಿಕಾ ವಲಯದಲ್ಲಿ ದಟ್ಟವಾಗಿ ಹರಡಿದ್ದ ಮಾತುಗಳನ್ನು ನಂಬುವುದಾದರೆ, ಅಂದು ರಾತ್ರಿ ನಡೆದ ಘಟನೆ ಬಗ್ಗೆ ಆ ಪತ್ರಿಕೆಯ ಪ್ರತಿಭಾವಂತ ಸಂಪಾದಕರಿಗೆ ಆ ಮೊದಲೇ ಮಾಹಿತಿ ಇತ್ತು. ಮೈಸೂರಿನ ತಮ್ಮ ವರದಿಗಾರರಿಗೆ ಆ ಬಗ್ಗೆ ಮೊದಲೇ ಹೇಳಿ, ಇಂತಹದೊಂದು ಘಟನೆ ನಡೆಯುವುದಿದೆ. ಆ ಬಗ್ಗೆ ನಿಗಾ ಇಡಿ ಎಂದು ಸೂಚಿಸಿದ್ದರು. ಹಾಗೂ ಮುಕ್ಕಾಲು ಪಾಲು ಸುದ್ದಿಯನ್ನು ಅವರೇ ಬೆಂಗಳೂರಿನಲ್ಲಿ ಕೂತು, ಬಹುಶಃ ಘಟನೆ ನಡೆಯುವ ಹೊತ್ತಿಗಾಗಲೇ, ರೆಡಿ ಮಾಡಿದ್ದರು! ನಂತರದ ದಿನಗಳಲ್ಲಿ ಎಲ್ಲಾ ಸುದ್ದಿ ಮಾಧ್ಯಮಗಳು ಆ ಇಬ್ಬರು ಬಂಧನವಾದವರ ಹಿನ್ನೆಲೆ, ದೂರಾಲೋಚನೆಗಳನ್ನು ಹುಡುಕುತ್ತಾ ಹೊರಟರು. ಹೊಟ್ಟೆಗೆ ಕೂಳಿಲ್ಲದೆ, ಚರ್ಚ್ ಸ್ಟ್ರೀಟ್ ನಲ್ಲಿ ಅನ್ನಕ್ಕಾಗಿ ಬಡಿದಾಡಿದವರ ಸುದ್ದಿ ಮೂಲೆ ಸೇರಿತು.

ಇದೇ ಧಾಟಿಯಲ್ಲಿ ಇರುವ ಮತ್ತೊಂದು ಘಟನೆ ನೆನಪಾಗುತ್ತಿದೆ. ಅದು ನಡೆದದ್ದು 1998 ರಲ್ಲಿ.

ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ತನ್ನ ಕಚೇರಿಯಲ್ಲಿ ಯುವತಿಯೊಂದಿಗೆ ಹೊಂದಿದ್ದ ಸಂಬಂಧದ ಕಾರಣ ವಿವಾದಕ್ಕೆ ಸಿಲುಕಿರುತ್ತಾರೆ. ಕಾಂಗ್ರೆಸ್ ಆತನ ತಪ್ಪುಗಳನ್ನು ಸಾರುವ ವರದಿಯೊಂದನ್ನು ಬಿಡುಗಡೆ ಮಾಡುವ ಮುನ್ನಾ ದಿನ (ಡಿಸೆಂಬರ್ 16, 1998), ಬಿಲ್ ಕ್ಲಿಂಟನ್ ಇರಾಕ್ ರಾಷ್ಟ್ರದ ಮೇಲೆ ವಾಯುದಾಳಿಗೆ ಆದೇಶಿಸುತ್ತಾರೆ. ಕಾಂಗ್ರೆಸ್ ನ ರಿಪಬ್ಲಿಕ್ ಪಾರ್ಟಿ ಸದಸ್ಯರು ಆಗ, ಕ್ಲಿಂಟನ್ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ದಾಳಿ ನಡೆಸಿದರು ಎಂದು ಆರೋಪಿಸುತ್ತಾರೆ. ಆ ಹೊತ್ತಿಗೆ ಕ್ಲಿಂಟನ್ ವಿರುದ್ಧ ಇಂಪೀಚ್ಮೆಂಟ್ ಪ್ರಕ್ರಿಯೆ ಆರಂಭವಾಗಿರುತ್ತೆ. (http://www.politico.com/news/stories/1207/7390.html)

ಅಧಿಕಾರದಲ್ಲಿರುವವರು ಮುಜುಗರದ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಆಗಾಗ ಇಂತಹ ಪ್ರಕರಣಗಳನ್ನು ಸೃಷ್ಟಿಸುತ್ತಾರೆ. ಪೊಲೀಸರ ಭಾಷೆಯಲ್ಲಿ ಹೇಳುವುದಾದರೆ, ಇವೆಲ್ಲವೂ ‘ಅಟೆಂಷನ್ ಡೈವರ್ಶನ್ ಪ್ರಕರಣಗಳು” – ಗಮನ ಬೇರೆಡೆಗೆ ಸೆಳೆದು ಕಳುವು, ಮೋಸ ಮಾಡುವ ಕೃತ್ಯಗಳು. ಬ್ಯಾಂಕ್ ನಿಂದ ಹಣವನ್ನು ಆಗಷ್ಟೆ ಬಿಡಿಸಿ ತರುವವರ ಮೈಮೇಲೆ ಏನನ್ನೋ ಎಸೆದು, ಅವರ ಗಮನ ಅತ್ತ ಹೋದಾಗ ಕೈಯಲ್ಲಿದ್ದ ಬ್ಯಾಗನ್ನು ಎತ್ತಿಕೊಂಡ ಪ್ರಕರಣಗಳು ಗೊತ್ತಲ್ಲ. ಈ ಅಧಿಕಾರಸ್ಥರು ಇಂತಹದೇ ಪ್ರಕರಣಗಳನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಮೋಸ ಹೋಗುವವರ ಸಂಖ್ಯೆಯೂ ದೊಡ್ಡದೇ.

ಸದ್ಯ ಒಂದು ವಾರದಿಂದ ನರೇಂದ್ರ ಮೋದಿ ಸರಕಾರ ಅಲ್ಲಲ್ಲಿ ಟೀಕೆಗಳಿಗೆ ಒಳಗಾಗಿದ್ದು ಸುಗ್ರೀವಾಜ್ಞೆ ಮೂಲಕ farmer-land-acquisitionಜಾರಿಗೆ ತರಲು ಉದ್ದೇಶಿಸಿರುವ ಭೂಸ್ವಾಧೀನ ತಿದ್ದುಪಡಿ ಕಾಯಿದೆ ವಿಚಾರವಾಗಿ. ದಿನೇ ದಿನೇ ಜನ, ರಾಜಕೀಯ ಪಕ್ಷಗಳು ಈ ವಿಚಾರದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಸರಕಾರಕ್ಕೆ ರೈತರ ಕಾಳಜಿ ಇಲ್ಲ ಎನ್ನುವುದು ಸಾಬೀತಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ತೀರಾ ಇಳಿದಿದ್ದರೂ ಅದರ ಲಾಭವನ್ನು ಜನಸಾಮಾನ್ಯರಿಗೆ ನೀಡುತ್ತಿಲ್ಲ. ಬದಲಿಗೆ ಅಬಕಾರಿ ಸುಂಕವನ್ನ ಹೆಚ್ಚಿಸಿ ಮತ್ತಷ್ಟು ಕಡಿಮೆಯಾಗುವುದನ್ನು ತಡೆದಿದ್ದಾರೆ. ಇನ್ನೊಂದು ತಿಂಗಳಲ್ಲಿ ದೆಹಲಿ ಚುನಾವಣೆ ಇದೆ. ಸದ್ಯ ಆಡಳಿತದಲ್ಲಿರುವ ಪಕ್ಷ ತನ್ನ ಇತಿಹಾಸದುದ್ದಕ್ಕೂ ಮತ ಕೇಳುತ್ತಾ ಬಂದಿರುವುದು ಭಾವನೆಗಳನ್ನು ಕೆರಳಿಸಿ, ಹುಸಿ ರಾಷ್ಟ್ರಭಕ್ತಿಯನ್ನು ಪ್ರಚೋದಿಸಿ. ಈ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಲ್ಲಿ ನಡೆದ ದೋಣಿ ಸ್ಫೋಟ ಪ್ರಕರಣವನ್ನು ಹಾಗೂ ಇಂದಿರಾಗಾಂಧಿ ವಿಮಾನ ನಿಲ್ದಾಣದದಲ್ಲಿ ವಿಮಾನ ಅಪಹರಣ ಪ್ರಕರಣದ ಪ್ರಹಸನಗಳನ್ನು ನೋಡಬೇಕಾಗಿದೆ.

ಇಂಡಿಯನ್ ಎಕ್ಸ್ ಪ್ರೆಸ್ ನ ಹಿರಿಯ ಪತ್ರಕರ್ತ ಪ್ರವೀಣ್ ಸ್ವಾಮಿ ಹೊಸ ವರ್ಷ ಆರಂಭದ ಹಿಂದಿನ ದಿನ ನಡೆದ ದೋಣಿ ಸ್ಫೋಟ ಪ್ರಕರಣದ ಬಗೆಗಿನ ವರದಿಯಲ್ಲಿ ದೋಣಿಯಲ್ಲಿ ಸ್ಫೋಟಕಗಳು ಇದ್ದವು ಎಂದು ಹೇಳಲು ಯಾವುದೇ ಆಧಾರಗಳಿಲ್ಲ. ಅದರಲ್ಲಿದ್ದವರು ಭಯೋತ್ಪಾದಕರು ಆಗಿರಲಿಕ್ಕಿಲ್ಲ, ಬದಲಿಗೆ ಯಾವುದೋ ಸಾಮಾಗ್ರಿಯನ್ನು ಕದ್ದು ಸಾಗಿಸುತ್ತಿರುವವರು ಇರಬಹುದು ಎಂದಿದ್ದರು. (http://indianexpress.com/article/india/india-others/little-evidence-of-terror-link-may-have-been-petty-smugglers/) ಅಷ್ಟಕ್ಕೆ ಬಿಜೆಪಿ ಕಾರ್ಯಕರ್ತರು IndianExpressJan022015ಸೋಮವಾರ ಪತ್ರಿಕಾ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರವೀಣ್ ಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಅಷ್ಟೇ ಅಲ್ಲ ಸ್ವಾಮಿಯ ಪ್ರತಿಕೃತಿಯನ್ನೂ ದಹಿಸಿದರಂತೆ! ದೋಣಿ ಸ್ಫೋಟದ ಪ್ರಕರಣದ ಬಗ್ಗೆ ಅನೇಕ ಗೊಂದಲಗಳಿವೆ. ರಕ್ಷಣಾ ಇಲಾಖೆ ಆ ಗೊಂದಲಗಳನ್ನು ನಿವಾರಿಸುವ ಹೇಳಿಕೆ ಕೊಡಬೇಕು. ಅದು ಬಿಟ್ಟು ಅದೇ ಪಕ್ಷದ ಕಾರ್ಯಕರ್ತರನ್ನು ವರದಿಗಾರನ ವಿರುದ್ಧ ಪ್ರತಿಭಟನೆ ಮಾಡಿಸಬೇಕೆ?

ಪ್ರವೀಣ್ ಸ್ವಾಮಿ ದೇಶದ ರಕ್ಷಣಾ ಕ್ಷೇತ್ರದ ವರದಿಗಾರರ ಪೈಕಿ ಪ್ರಮುಖ ಹೆಸರು. ಆಯಕಟ್ಟಿನ ತಾಣಗಳಲ್ಲಿರುವ ಅಧಿಕಾರಿಗಳ (ಸುದ್ದಿ ಮೂಲಗಳ) ಸಂಪರ್ಕ ಹೊಂದಿರುವ ಪ್ರತಿಭಾವಂತ ಪತ್ರಕರ್ತ. ಅವರು ತಮ್ಮ ವರದಿಯಲ್ಲಿ ಈ ಘಟನೆ ಬಗ್ಗೆ ಸರಕಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹಾಗೂ ಕೆಲ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಪತ್ರಿಕಾ ಹೇಳಿಕೆ ಪ್ರಕಾರ, ಆ ದೋಣಿಯಲ್ಲಿ ಸ್ಫೋಟಕಗಳು ಇದ್ದ ಕಾರಣ, ಕರಾವಳಿ ಪಡೆ ಅದನ್ನು ಒಂದು ಗಂಟೆ ಕಾಲ ಫಾಲೋ ಮಾಡಿ ತಡೆಯಲು ಪ್ರಯತ್ನಿಸಿ ನಂತರ ದಾಳಿ ನಡೆಸಿ ಉಡಾಯಿಸಿತು. ಪ್ರವೀಣ್ ಸ್ವಾಮಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿರುವ ದೋಣಿಯ ಚಿತ್ರದಲ್ಲಿ ಸ್ಪೋಟಕಗಳು ಕಾಣುತ್ತಿಲ್ಲ. ಒಂದು ಪಕ್ಷ ಅವು ಇದ್ದವು ಎಂದುಕೊಂಡರೂ, ಬೆಂಕಿಗೆ ಆಹುತಿಯಾದಾಗ, ಅವು ಚಿಮ್ಮಿ, ದೋಣಿಯ ಭಾಗಗಳು ತುಂಡು ತುಂಡಾಗಬೇಕಿತ್ತು. ಹಾಗೂ 25 ಮೀಟರ್ ಗಿಂತ ಉದ್ದನೆಯ ದೋಣಿಗಳು 30ಹೆಚ್.ಪಿ ಎಂಜಿನ್ ಗಳಿಂದ ಓಡುತ್ತಿರುತ್ತವೆ. ಅವುಗಳನ್ನು ತಡೆಯಲು ಕರಾವಳಿ ಪಡೆಯ ಅತ್ಯಾಧುನಿಕ ಹಡಗುಗಳು ಒಂದು ಗಂಟೆಗೂ ಹೆಚ್ಚು ಕಾಲ ಅಟ್ಟಿಸಿಕೊಂಡು ಹೋಗಬೇಕಾಯಿತೆ?

ಇದುವರೆಗೂ ಆ ಘಟನೆ ಸಂಭವಿಸಿದ ಸ್ಥಳದಿಂದ ತಾಂತ್ರಿಕ ತಪಾಸಣೆಗಾಗಿ ಯಾವುದೇ ಸ್ಯಾಂಪಲ್ ಗಳನ್ನು ಸಂಗ್ರಹಿಸಿಲ್ಲ. ರಕ್ಷಣಾ ಇಲಾಖೆ ಪ್ರತಿಕೂಲ ಹವಾಮಾನ ಇರುವ ಕಾರಣ ಅದು ಸಾಧ್ಯವಾಗಿಲ್ಲ ಎಂದು ಹೇಳಿಕೆ ನೀಡುತ್ತದೆ. ಆದರೆ, ಹವಾಮಾನ ಇಲಾಖೆ ನಿಯಮಿತವಾಗಿ ತನ್ನ ವೆಬ್ ತಾಣದಲ್ಲಿ ನೀಡುವ ಮಾಹಿತಿ ಪ್ರಕಾರ ಆ ಪ್ರದೇಶದಲ್ಲಿ ಸಾಧಾರಣ ಹವಾಗುಣ ಇದೆ. ಪ್ರತಿಕೂಲ ಸನ್ನಿವೇಶ ಇಲ್ಲ. ಮೇಲಾಗಿ ಗುಜರಾತ್ ನ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಹೋಗುವ ಸಮಯವೇ ಇದು. ಹಾಗಾಗಿ ಪ್ರತಿಕೂಲ ಹವಾಮಾನದ ಪ್ರಶ್ನೆಯೇ ಇಲ್ಲ. ಇಂತಹ ಪ್ರಶ್ನೆಗಳನ್ನು ಸ್ವಾಮಿ ಎತ್ತಿದ್ದಾರೆ. ಹಾಗೂ ಈ ಎಲ್ಲಾ ಕಾರಣಗಳಿಗಾಗಿ ಈ ಪ್ರಕರಣದ ಬಗ್ಗೆ ವಿವರವಾದ ತನಿಖೆಯಾಗಬೇಕೆಂದು ತಮ್ಮ ವರದಿಯಲ್ಲಿ ಒತ್ತಾಯಿಸಿದ್ದಾರೆ. ಉತ್ತರಿಸುವ ಜವಾಬ್ದಾರಿ ಸರಕಾರದ್ದು. ಆದರೆ, ಅವರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಪ್ರವೀಣ್ ಸ್ವಾಮಿ ಬರೆದಿರುವುದು ಸುಳ್ಳೆಂದಾದರೆ, ರಕ್ಷಣಾ ಇಲಾಖೆ ಸಾಬೀತು ಮಾಡಲಿ.

ಈ ಘಟನೆಯ ಹಿನ್ನೆಲೆಯಲ್ಲಿ ಮೇಲಿನ ಕುಮಾರಸ್ವಾಮಿ ಅವಧಿಯ ಪ್ರಕರಣ ಹಾಗೂ ಬಿhotel_empire_nikhil-gowdaಲ್ ಕ್ಲಿಂಟನ್ ನೆನಪಾದರು. ಮೈಸೂರಿನಲ್ಲಿ ಬಂಧನವಾದ ಆ ಉಗ್ರರು ಈಗ ಎಲ್ಲಿದ್ದಾರೆ? ಅವರ ಬಂಧನವಾದ ಎಂಟು ವರ್ಷಗಳ ಮೇಲಾದರೂ, ಅವರ ತಪ್ಪುಗಳು ಸಾಬೀತಾದವಾ? ಶಿಕ್ಷೆಯಾಯಿತಾ? ಗಮನ ಬೇರೆಡೆಗೆ ಸೆಳೆಯಲು ಇರಾಕ್ ಮೇಲೆ ದಾಳಿ ನಡೆಸಿ ಕೆಲವರ ಸಾವಿಗೆ ಕಾರಣರಾದ ಕ್ಲಿಂಟನ್ ಗೆ ಶಿಕ್ಷೆ ಇಲ್ಲವೇ? ದೋಣಿ ಸ್ಫೋಟದಲ್ಲಿ ಸತ್ತವರು ಯಾರು? ಚರ್ಚ್‌ ಸ್ಟ್ರೀಟ್ ನಲ್ಲಿ ಚಿಕನ್ ಕೇಳಿದವರ ವಿರುದ್ಧ ಚಾರ್ಜ್ ಶೀಟ್ ದಾಖಲಾಯಿತೆ? ಹೀಗೆ ನೂರೆಂಟು ಪ್ರಶ್ನೆಗಳು ಏಳುತ್ತವೆ.

ಮೈಮನದ ಹೊಲದಲ್ಲಿ ಸುಳಿದೆಗೆದ ಬನವಾಸಿ….

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಪಂಪಭಾರತದ ಆರಂಭದಲ್ಲಿ ಅರಿಕೇಸರಿಯ ವಂಶಚರಿತ್ರೆಯನ್ನು ಅನುಸರಿಸಿ ದೇಶ ವಿಷಯವೊಂದರ ವರ್ಣನೆಯಿದೆ. ಮೈತುಂಬಿಕೊಂಡ ನೀರಗಾಲುವೆ, ಬೆಳೆದೆರಗಿದ ಕೆಯ್ವೊಲಗಳನ್ನು ಸುತ್ತುವರೆದ ಪೂಗೊಳ, ಮಿಡಿದಡೆ ರಸವೊಸರುವ ಕಬ್ಬಿನಹೊಲ, ಬಿರಿದೊಂದು ಮುಗುಳ pampaಕಂಪಲ್ಲಿಯೇ ದುಂಬಿಗಳ ಮೊಗಕಿಡಿಸುವ ಪರಿಮಳವುಕ್ಕುವ ಹೂವು, ಕೊರತೆಯಿಲ್ಲದ ಮಾವುಮಲ್ಲಿಗೆಗಳಿಂದ ತುಂಬಿ, ‘ಸಂಸಾರಸುಖದಸಾರ ಇನ್ನೇನಿದೆ?’ ಎಂದು ಪ್ರಶ್ನಿಸುವಂತಿರುವ ನಾಡೊಂದರ ಚಿತ್ರವಿದೆ. ಅದನ್ನು ನಾಡ-ಕಾಡ ಬೆಳಸಿನ ಸಮೃದ್ಧ ಕುರುಜಾಂಗಣವೆಂದೂ ಕರೆಯಲಾಗಿದೆ. ರಸದ ತೊರೆಗಳಿಂದಲೂ ಮದಕರಿಗಳೇ ತುಂಬಿದ ವನಗಳಿಂದಲೂ ಕೂಡಿದ ‘ನೆಲದಸಿರಿ’ಯಾಗಿ ಪಂಪ ಮುಂದಿಡುತ್ತಿರುವ ಅರಿಕೇಸರಿಯ ಈ ನಾಡಿಗೆ ಮಹತ್ವವಿದೆ. ಮೊದಲಿಗೆ ಅದು ಆಧುನಿಕ ಅಭಿವೃದ್ಧಿ ಮೀಮಾಂಸೆಗೆ ಬದಲಿಯಾದ ನಿಸರ್ಗಕೇಂದ್ರಿತ ಅಭಿವೃದ್ಧಿ ಮೀಮಾಂಸೆಯನ್ನು ಮುಂದಿಡುತ್ತಿದೆ. ಇಲ್ಲಿ ಸಮೃದ್ಧಿಯ ಮಾನದಂಡಗಳಾಗಿರುವುದು ಅಗಲವಾದ ರಸ್ತೆ, ಎತ್ತರದ ಕಟ್ಟಡಗಳ ಕಾರ್ಪೋರೇಟ್ ನಿರೂಪಣೆಗಳಲ್ಲ. ದೇಗುಲಕಲಶ ಹಾಗೂ ಎತ್ತರದ ಕೋಟೆಕೊತ್ತಲಗಳ ಮೇಲಿನ ಆಕಾಶಕ್ಕೆ ಮುತ್ತಿಕ್ಕುವ ಧರ್ಮ ಮತ್ತು ರಾಜಪ್ರಭುತ್ವದ ಬಾವುಟಗಳ ಸಂಭ್ರಮವೂ ಅಲ್ಲ. ಅದು ಕಾಡು-ನಾಡುಗಳ ಸಹಜ ತುಂಬುವಿಕೆಯ ಸಮೃದ್ಧಿ. ಈ ನೆಲದಸಿರಿ ಪಂಪನ ಅನುಭವಲೋಕದ ಭಾಗವಾಗಿಯೇ ಬಂದಿರಬೇಕು. ಪ್ರಾಯಶಃ ಕೆರೆಕಾಲುವೆ, ಕೆಯ್ವೊಲ, ರಸಗಬ್ಬು, ಮಾವು, ಮಲ್ಲಿಗೆಯಿಂದ ತುಂಬಿ ನಳನಳಿಸುತ್ತಿರುವ ಪಂಪನ ಆ ಕುರುಜಾಂಗಣ, ಆತನೊಳಗಿನ ತೆಂಕನಾಡಿನ ಅವತರಣಿಕೆಯೇ ಇರಬೇಕು. ಅದರದು ಬನವಾಸಿ, ತೆಂಕನಾಡೆಂಬ ನಾಮ ಸಮರ್ಥನೆಯನ್ನು ಪಡೆದಿಲ್ಲ.

ಪಂಪ ಕುರುಜಾಂಗಣದ ಮುಸುಕಲ್ಲಿ ಹೀಗೆ ಕನ್ನಡ ನೆಲವೆಂಬ ದಕ್ಷಿಣ (ತೆಂಕನಾಡ) ವನ್ನು ತಂದಿರಿಸಿ ಹೂಹಾಕಿ ಕೈಮುಗಿದಷ್ಟಕ್ಕೇ ಮುಗಿಸಿದನೇ? ಇಲ್ಲ, ಆತ ತಾನು ಈಸಿದ ‘ವ್ಯಾಸಮುನೀಂದ್ರರುಂಧ್ರ ವಚನಾಮೃತವಾರ್ದಿಯಲ್ಲಿ’ ಬನವಾಸಿಯ ಬಾವುಟವನ್ನೂ ನೆಟ್ಟಗೆ ನೆಟ್ಟಿದ್ದಾನೆ! ಅದಕ್ಕೆಂದೇ ತೀರ್ಥಯಾತ್ರೆಯ ಪಾರಮಾರ್ಥಿಕಕ್ಕೆ ಹೊರಟ ಕಥಾನಾಯಕನನ್ನು ಮೈಸುಖದ ಬನವಾಸಿಯಲ್ಲಿ ಅಲೆದಾಡಿಸಿದ್ದಾನೆ. ತೆಂಕಿನಗಾಳಿ, ಮಲ್ಲಿಗೆಯ ಕಂಪು, ಕೆಂದಲಂಪುಗಳಲ್ಲಿ ತೂಗಿತೊನೆದು ಕೆನೆಗಟ್ಟಿಸಿಕೊಂಡ ತನ್ನ ಬಾಯ್ಮಾತನ್ನು ಆ ವಿಹಾರಿಯ ಬಾಯೊಳಗೆ ತುರುಕಿದ್ದಾನೆ. ‘ತೆಂಕನಾಡ ಮರೆಯಲ್ಕೇಂ ಬನಂ ಬರ್ಕುಮೇ?’ ಎಂದು ತನ್ನನ್ನೇ ತಾನು ಕೇಳಿಕೊಂಡಿದ್ದಾನೆ! ತೀರ್ಥಯಾತ್ರೆಯ ಪುಣ್ಯಸಂಚಯನಕ್ಕೆ ಬಂದವನ ಬಾಯಲ್ಲಿಯೇ ಬನವಾಸಿಯಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್ಟಿದರೂ ಸಾಕೆಂಬ ಲೋಕಾಕರ್ಷಣೆಯ ಮಾತು ಕಟ್ಟಿದ್ದಾನೆ! ಹೀಗೆ ಭಾರತದ ಕಥಾಭಿತ್ತಿಯ ಮೇಲೆ ಬರೆದಿಟ್ಟ ‘ಸಂಸಾರ ಸಾರ ಸರ್ವಸ್ವಫಲ’ದ ಪ್ರತಿರೂಪವಾದ ಪಂಪನ ಈ ಬನವಾಸಿ ಕನ್ನಡದ ಪಾಲಿಗೊಂದು ಅದ್ಭುತವಾದ ನೆನಪಿನಶಾಸನ. ಸಹಸ್ರಮಾನಗಳ ನಂತರವೂ ಈ ಶಾಸನದಲ್ಲಿ ಅರಳಿದ ಕನ್ನಡನೆಲ ನಮ್ಮನ್ನು ಉಲ್ಲ್ಲಾಸಗೊಳಿಸುತ್ತಿದೆ. ನಿಸರ್ಗಕೇಂದ್ರಿತ ಅಭಿವೃದ್ಧಿಯ ನಿರೂಪಣೆಯ ಈ ತೆಂಕನಾಡು ಮೂರ್ತೀಕರಣದ ಗುರುತುಗಳನಳಿದು, ದೇಶ-ರಾಷ್ಟ್ರದ ನಿಲುಗನ್ನಡಿಯನ್ನು ಮೀರಿನಿಲ್ಲುವ ಸಾಂಸ್ಕೃತಿಕ ಮಹತ್ವವನ್ನೂ ಮೆರೆದ ಬೆಲೆಯುಳ್ಳ ದಾಖಲೆಯೇ ಆಗಿದೆ.

‘ನಾವೆಲ್ಲರೂ ಒಂದೇ’ ಎನ್ನುವ ಗುಂಪೊಂದರ ಅಸ್ಮಿತೆ (Identity)ಗೆ ಬೆಸೆದುಕೊಳ್ಳುವ ಮೂಲಭೂತ ಕಲ್ಪನೆಗಳಲ್ಲಿ ನಾಡು ಕೂಡ ಒಂದು. ಮೂಲತಃ ನಾಡು ಹುಟ್ಟುವುದು ನೆನಪಿನಲ್ಲಿ. ಆಯ್ದು ಜೋಡಿಸುವ ನೆನಪುಗಳೇ ಅದರ ಬೆನ್ನೆಲುಬು. ನೆನಪುಗಳ ಮಾದರಿ ಮತ್ತು ಅವುಗಳನ್ನು ಆಯ್ದು ಜೋಡಿಸುವ ಪರಿ ಆ ನಾಡ ಸ್ವರೂಪವನ್ನೂ ನಿರ್ಧರಿಸುತ್ತವೆ. ಎಲ್ಲ ನಾಡುಗಳಿಗಿರುವಂತೆ ಪಂಪನ ತೆಂಕನಾಡಿಗೂ ನೆನಪುಗಳಿವೆ. ಆದರೆ ಈ ನೆನಪುಗಳ ಆಹಾರವಾಗಿ ಮಾನವ ನಿರ್ಮಿತ ಗುರುತುಗಳಿಲ್ಲ. ಮಾನವಮಾತ್ರರ ರಚನೆಗಳಿಲ್ಲ. ಜಡಚರಿತ್ರೆಯ ಹೊರೆಯಿಲ್ಲ. ಯುದ್ಧ ವಿಜಯಗಳ ಹೆಮ್ಮೆ, ಅಪಜಯದ ಕೊರಗುಗಳಿಲ್ಲ. ಎದುರಾಳಿ ಕುರುಹು ಮತ್ತು ಆತಂಕದ ಭಯವಿಲ್ಲ. ಸಹಜ ಅನುಭವಗಳಾಚೆಗೆ ಕಲ್ಪಿತ ಪಠ್ಯಗಳಿಲ್ಲ. ಯಾರ ಅಧಿಕಾರವಿಲ್ಲ. ಆಳಿದವರ ಕುರುಹಿಲ್ಲ. ಧರ್ಮ, ಜಾತಿಯ ಕಾರಣದ ಕಿಲುಬಿಲ್ಲ. ಜೈನಪಂಪನ ಪೂರ್ವಾಶ್ರಮ ಎನ್ನಲಾದ ವೈದಿಕದ ಮಂತ್ರಘೋಷವಿಲ್ಲ. ಬಸದಿ ಚೈತ್ಯಾಲಯಗಳ ಕುರುಹಿಲ್ಲ. ಹೀಗಾಗಿ ಹಿಂದೂ, ಮುಸ್ಲಿಂಯೆಂಬ ಮತರಾಷ್ಟ್ರದ ವಿಂಗಡನೆಗೆ ಒಗ್ಗದ ಅದು ಭಾಷಾರಾಷ್ಟ್ರದ ನಕ್ಷೆಗೂ ಬಗ್ಗದು. ಯಾಕೆಂದರೆ ಅಲ್ಲಿ ಕನ್ನಡಕ್ಕೆ ಕನ್ನಡವಲ್ಲದ ಅನ್ಯದ ನಡುವಿನ ಗೆರೆಯಿಲ್ಲ. ‘ಕನ್ನಡನೆಲ’ ಎಂಬ ಪದವೂ ಇಲ್ಲ. ಹೀಗೆ ಕೇಳಿದ ಅಂತೆ, ಓದಿದ ಕಂತೆಯಲ್ಲದ ಈ ‘ತೆಂಕನಾಡು’ ಕಾರಣಗಳಲ್ಲಿ ಕಾಣಿಸಿಕೊಳ್ಳುವ ಮೆಯ್ಸುಖದ ನಾಡು. ಕವಿರಾಜಮಾರ್ಗಕಾರನ ‘ಭಾವಿಸಿದ ಜನಪದ’ದಂತೆ’, ‘ಎಲ್ಲಾದರೂ ಇದ್ದು ಎಂತಾದರೂ ಇದ್ದು ಕನ್ನಡವಾಗಬಲ್ಲ’ ಕವಿ ಕುವೆಂಪು ಕನ್ನಡದಂತೆ ಈ ಬನವಾಸಿ, ಭೂಪಟವಲ್ಲದ ಭಾವಪಟ. ಗಡಿಗಳನ್ನು ಮೀರಿದ ಈ ನಿರಂಕುಶನಾಡಲ್ಲಿ ದೇಶಭಕ್ತಿ, ರಾಷ್ಟ್ರಭಕ್ತಿಯ ಅಮಲು ಅತಿರೇಕಗಳಿಲ್ಲ. ತ್ಯಾಗಬಲಿದಾನಗಳ ಛಾಯೆಗಳೂ ಇಲ್ಲ.

ರಸಸುಖದ ನೆಲೆಯಾಗಿ ಬನವಾಸಿ

ಅರಸು ಚರಿತ್ರೆಯ ಏರಿಳಿತ, ಧರ್ಮ-ಭಾಷೆಗಳ ಮೈಲಿಗಲ್ಲುಗಳಿರದೆ ಪಂಪಭಾರತದ ಅಲೆಮಾರಿ ಅರ್ಜುನನ ಮನದೊಳಕ್ಕೆ ನೆಲೆನಿಂತ ಪಂಪನ ಆ ಬನವಾಸಿಯ ಮೊದಲನೋಟ ತೆರೆದುಕೊಳ್ಳುವುದೇ ಲೋಕಸುಖದ ಜೊತೆಗೆ,-

ಸೊಗಯಿಸಿ ಬಂದ ಮಾಮರನೆ, ತಳ್ತ ಎಲೆವಳ್ಳಿಯೆ, ಪೂತ ಜಾತಿಸಂ
ಪಗೆಯೆ, ಕುಕಿಲ್ವ ಕೋಗಿಲೆಯೆ, ಪಾಡುವ ತುಂಬಿಯೆ, ನಲ್ಲರ ಒಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ, ನೋಳ್ಪೊಡೆ ಆವ ಬೆ
ಟ್ಟುಗಳೊಳ್ ಆವ ನಂದನವನಂಗಳೊಳಂ ಬನವಾಸಿ ದೇಶದೊಳ್. (ಪಂಭಾ.4-28)

ಪಂಪ ಮಾವುಮಲ್ಲಿಗೆಯ ಕವಿ! ಅವನ ಬನವಾಸಿಯ ಸಮೃದ್ಧಿ ಚಿಗುರೊಡೆದುದೂ ಮಾಮರದ ಮೂಲಕವೇ! ಹೀಗೆ ಚಿಗುರೊಡೆದ Shringaraದೇಶವರ್ಣನೆಯಂತೆ, ಯಾವ ಬೆಟ್ಟಗಳಲ್ಲಾಗಲೀ, ಯಾವ ಉದ್ಯಾನವನದಲ್ಲಾಗಲೀ ನೋಡುವ ಪಕ್ಷದಲ್ಲಿ ಕಾಣುವುದು ಸೊಗಸಾಗಿ ಹೂಹಣ್ಣುಗಳಿಂದ ತುಂಬಿಬಂದ ಮಾಮರಗಳೇ; ದಟ್ಟವಾಗಿ ಸೇರಿಕೊಂಡ ವೀಳ್ಯದ ಎಲೆಬಳ್ಳಿಗಳೇ; ಹೂಬಿಟ್ಟ ಶ್ರೇಷ್ಠಜಾತಿಯ ಸಂಪಗೆಯೇ; ಕೂಗುವ ಕೋಗಿಲೆಗಳೇ; ಝೇಂಕರಿಸುವ ದುಂಬಿಗಳೇ; ಪರಸ್ಪರ ಮುಖಕ್ಕೆ ಮುಖತಾಗಿಸಿ ನಗುಮೊದಲ್ಲಿ ಕೂಡುವ ಪ್ರೇಮಿಗಳೇ! ಇದು ಅರ್ಜುನ ಕಂಡ ಪಂಪನ ಬನವಾಸಿ! ಪ್ರೀತಿ-ಶೃಂಗಾರದ ಉಲ್ಲಾಸದಾಯಕ ಬನವಾಸಿ. ಬೆಟ್ಟ, ಕಾಡುಗಳ ಲೋಕಜೀವಿಗಳಾದ ಕೋಗಿಲೆ, ದುಂಬಿಗಳಂತೆ ಬದುಕಿನ ಬೇಟದಲ್ಲಿ ನಿರತ ಕನ್ನಡಿಗರ ಬನವಾಸಿ! ಕೂಡುವನಲ್ಲರ ಆಡುಂಬೊಲದ ಬನವಾಸಿ!

 ಆದರೆ ವರ್ತಮಾನದ ‘ನೈತಿಕ ಪೋಲಿಸುಗಿರಿ’ (Cultural Policing) ಪ್ರತಿಪಾದಿಸುತ್ತಿರುವ ‘ಭಾರತೀಯ ಸಂಸ್ಕೃತಿ’ಯೊಳಗೆ mangalore_moral1ಪಂಪನ ಬನವಾಸಿಯನ್ನು ಎಲ್ಲಿಡಬೇಕೋ ಹೊಳೆಯುತ್ತಿಲ್ಲ. ಪ್ರೇಮಿಗಳ ದಿನಾಚರಣೆ, ಪ್ರೇಮಿಗಳ ಭೇಟಿಯೇ ಮೊದಲಾದುವುಗಳನ್ನಿಟ್ಟು ಸಂಸ್ಕೃತಿಯ ದೇಸೀ-ಪರದೇಶೀ ಆವೃತ್ತಿಗಳನ್ನು ಕಟ್ಟುತ್ತಿರುವಲ್ಲಿ, ಪಂಪನ ‘ನೆನಪಿನಶಾಸನ’ವನ್ನು ಎಲ್ಲಿ ಹೂತಿಡಬೇಕೋ ತಿಳಿಯುತ್ತಿಲ್ಲ. ಯಾಕೆಂದರೆ ನಮ್ಮದೇ ಪಂಪ ಸಾವಿರವರ್ಷದ ಹಿಂದೆ ಬನವಾಸಿಯ ಯಾವ ಬೆಟ್ಟ, ಉಪವನವನದಲ್ಲೂ ನಲ್ಲರ ಬೇಟ(ಪ್ರಣಯ)ವನ್ನೇ ಕಂಡೆ ಎಂದು ಪ್ರೇಮಶಾಸನ ನೆಟ್ಟ. ಅಷ್ಟೇ ಅಲ್ಲ, ತನ್ನ ಧಾರ್ಮಿಕಕಾವ್ಯ ಆದಿಪುರಾಣದಲ್ಲೂ ಕೌಮುದಿಮಹೋತ್ಸವದ ಬೆಳದಿಂಗಳ ಕೂಟ ಬೆಳಗಿದ. ಆದಿಪುರಾಣದ ಹನ್ನೆರಡನೇ ಆಶ್ವಾಸದಲ್ಲಿ, ಭರತನ ದಿಗ್ವಿಜಯದ ನಡುವೆ ಶರತ್ಕಾಲದ ಬೆಳದಿಂಗಳಲ್ಲಿ ಆಚರಿಸಿದ ಆ ‘ಕೌಮುದೀಮಹೋತ್ಸವ’ದ ವರ್ಣನೆ ಬನವಾಸಿಯನ್ನೂ ಮೀರುತ್ತದೆ. ‘ಕೌಮುದಿ ಮಹೋತ್ಸವ’ ಎಂದರೆ ಕಾಮೋತ್ಸವವೇ. ಅದು ಶರತ್ಕಾಲದ ಬೆಳದಿಂಗಳ ರಾತ್ರಿಯೊಂದರಲ್ಲಿ ಬೇಟಕಾರರು(ಪ್ರಣಯಿಗಳು) ಸಾಮೂಹಿಕವಾಗಿ ಹೇಗೆ ಬೇಕೋ ಹಾಗೆ ಕುಡಿದು, ಕುಪ್ಪಳಿಸಿ, ಮುತ್ತಿಕ್ಕಿ ಕುಣಿದ ‘ನರ್ತಕೀಲೀಲೆ’! ಬನವಾಸಿಯ ಬೆಟ್ಟ ಉಪವನಗಳಂತೂ ಪ್ರೀತಿ, ಉತ್ಸಾಹವೇ ಉಕ್ಕಿಹರಿವ ಮೆಯ್ಸುಖದ ನೆಲೆ. ಒಂದು ‘ವಿಕ್ರಮಾರ್ಜುನ ವಿಜಯ’ ಎಂಬ ಭಾರತದ ಕಥೆಯಲ್ಲಿದೆ, ಇನ್ನೊಂದು ಭರತನಕತೆಯಾದ ಆದಿಪುರಾಣದಲ್ಲಿದೆ. ಹೀಗಾಗಿ ಸಂಸ್ಕೃತಿಯ ಕಲ್ಪಿತ ಸಭ್ಯತೆಯನ್ನು ಮಾತನಾಡುವ ಮುನ್ನ ನಮಗೆ ನಮ್ಮದೇ ಕವಿ ಚಿತ್ರಿಸಿದ, ನಮ್ಮದೇ ಆಗಿದ್ದ ನಾಡು-ನಲಿವುಗಳ ಅರಿವಿರುವುದೊಳಿತು. ಯಾವುದು ಹೊರಗಿಂದ ಬಂತು, ಯಾವುದು ನಮ್ಮಲ್ಲಿಯೇ ಇತ್ತೆಂಬ ಪ್ರಾಮಾಣಿಕ ಆತ್ಮಾವಲೋಕನವಿರುವುದೊಳಿತು.

ಅಂಕುಸವಿಟ್ಟರೂ ನೆನೆವ ಮರಿದುಂಬಿಯ ತವರು

ಹೀಗೆ ರಸಸುಖದ ನೆಲೆಯಾಗಿ ಬನವಾಸಿಯನ್ನು ಚಿತ್ರಿಸುವ ನಡುವೆಯೇ, ಪಂಪ ಸಾರ್ಥಕ ಮನುಷ್ಯರ ಪ್ರಸ್ತಾಪವನ್ನೂ ಮಾಡುತ್ತಾನೆ. ಆತನಿಗೆ ತ್ಯಾಗ-ಭೋಗ-ವಿದ್ಯೆ-ಗಾಯನಗೋಷ್ಠಿ ಹಾಗೂ ಅಲಂಪಿನ ಇಂಪುಗಳಿಗೆ ಆಗರವೆನಿಸಿದ ರಸಿಕರಷ್ಟೇ ಮನುಷ್ಯರು. ಮನುಷ್ಯರಾಗಿ ಹುಟ್ಟುವುದಾದರೆ ಹಾಗೆ ಹುಟ್ಟಬೇಕು. ಹಾಗೆ ಹುಟ್ಟದೆ ಏನೋ ಆಗಿ ಏನು ಪ್ರಯೋಜನ? ಇದು ಪಂಪನ ಕೊರಗು. ಆದರೆ ಆತ ಈ ಕೊರಗಿಗೇ ದಿಕ್ಕೆಟ್ಟು ನಿಂತಿಲ್ಲ. ಸಾರ್ಥಕ ಪರ್ಯಾಯವನ್ನು ಆಯ್ಕೆಮಾಡಿಕೊಳ್ಳುತ್ತಾನೆ. ರಸಿಕರಾದ ಮನುಷ್ಯರಾಗಿ ಹುಟ್ಟಲಾಗದೆ ಹೋದರೆ ಚಿಂತೆಯಿಲ್ಲ, ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ’ ಬನವಾಸಿಯ ಉಪವನಗಳಲ್ಲಿ ಹುಟ್ಟಿ ವಿಹರಿಸಿದರೂ ಸಾಕು. ಪಂಪನ ನಿಶ್ಚಯದ ಮಾತಿದು. ಈ ಸಾರ್ಥಕಬದುಕಿನ ಕನಸು ಹುಡುಕುವುದೂ ರಸಿಕತೆಯ ಮಡುವನ್ನೇ. ಮಾವು-ಕೋಗಿಲೆ, ಮಲ್ಲಿಗೆ-ಮರಿದುಂಬಿಯ ಪ್ರೇಮರಾಗದ ಜೋಡಿತನವನ್ನೆ. ಈ ಕೂಡುರೂಪಕಗಳಲ್ಲೇ ಪಂಪ ಬನವಾಸಿಯನ್ನು ಹಂಬಲಿಸುತ್ತಿರುವ ಕಾರಣವಿದೆ. ಬದುಕಿನ ‘ಸಾರ’ ಯಾವುದು ಎಂಬ ಸೂಚನೆ ಇದೆ. ಹೀಗೆ ಪ್ರೀತಿಯ ಅಂಗಣವಾಗಿ, ಆತನೊಳಗೆ ಗಟ್ಟಿಯಾದ ಅನುಭವವಾಗಿ ಕೂತ ಬನವಾಸಿ ವಾಸವಿರುವಲ್ಲೇ ಒದಗುವ ಯಾವುದಾದರೊಂದು ಲಲಿತಸುಖದ ನೆವದಲ್ಲೇ ನೆನಪಾಗಿ ಎಚ್ಚರಗೊಳ್ಳುವಂಥದ್ದೂ ಆಗಿದೆ. ಹಾಗಾಗಿ ಎಲ್ಲೋ ಇದ್ದಾಗ ಬೀಸುವ ತೆಂಕಣದಗಾಳಿಯ ಸುಖಾನುಭವವೇ ಮುಂತಾಗಿ ಬನವಾಸಿಯನ್ನು ತೆರೆಯುವ ಕೀಲಿಕೈಗಳೂ ಹಲವು,-

ತೆಂಕಣ ಗಾಳಿ ಸೋಂಕಿದೊಡಂ, ಒಳ್ನುಡಿ ಕೇಳ್ದೊಡಂ, ಇಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ, ಬಿರಿದ ಮಲ್ಲಿಗೆ ಕಂಡೊಡಂ, ಆದ ಕೆಂದಲಂ
ಪಂ ಗೆಡೆಗೊಂಡೊಡಂ, ಮಧುಮಹೋತ್ಸವಂ ಆದೊಡಂ, ಏನನೆಂಬೆನ್, ಆರ್
ಅಂಕುಸ ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ, (ಪಂ.ಭಾ 4-30)

(ಎಲ್ಲೇ ಇರಲಿ)ತೆಂಕಣದ ಗಾಳಿ ಸೋಂಕಿದರೂ, ಒಳ್ಳೆಯ ಮಾತು(ನುಡಿ) ಕೇಳಿದರೂ, ಇಂಪುಳ್ಳ ಹಾಡುಗಳು ಕಿವಿಗೆ ಹೊಕ್ಕರೂ(ಕೇಳಿಸಿದರೂ), ಬಿರಿದ ಮಲ್ಲಿಗೆ ಕಂಡರೂ, ಸ್ತ್ರೀಸಂಗದ ಸುಖದೊಂದು ನಿದ್ರೆಯನ್ನು ಸವಿದರೂ, ವಸಂತಕಾಲದ ಉತ್ಸವ ನಡೆದರೂ, ಏನೆನ್ನಲಿ? ಯಾರು ಅಂಕುಶ ಇಟ್ಟು ತಿವಿದು ತಡೆದರೂ ನಿಲ್ಲದೆ ನನ್ನ ಮನಸ್ಸು ವನವಾಸಿ ದೇಶವನ್ನು ನೆನೆದೇ ತೀರುತ್ತದೆ. – ಡಿ.ಎಲ್ ನರಸಿಂಹಾಚಾರ್ ಅವರಂತೂ ಇದನ್ನು ಪಂಪನ ದೇಶಪ್ರೇಮದ ಭಾವಗೀತೆ ಎಂದೇ ಕರೆದಿದ್ದಾರೆ. ಈ ಗಾಳಿ, ಒಳ್ನುಡಿ, ಬಿರಿದಮಲ್ಲಿಗೆ, ಮಧುಮಹೋತ್ಸವಗಳು ಕ್ರಮವಾಗಿ ಚರ್ಮ, ಕಿವಿ, ಮೂಗು ಮತ್ತು ಕಣ್ಣುಗಳೆಂಬ ಇಂದ್ರಿಯ ಸಂಬಂಧಿಗಳು. ಕೆಂದಲಂಪು ಎಂಬುದಾದರೋ ಪಂಚೇಂದ್ರಿಯ ಸುಖದ ಸಮ್ಮಿಲಿತ ಸಂಗತಿ. ಎಲ್ಲವೂ ಇಂದ್ರಿಯಗಳ ಮೂಲಕ ದತ್ತವಾಗುವ ಲೋಕಸುಖಗಳೇ. ಭಾವಸತ್ಯಗಳೇ ತುಂಬಿದ ಈ ದಿಟ ಭಾವಗೀತೆಯಲ್ಲಿ ನಾಡು ನಾದವಾಗಿ, ನೋಟವಾಗಿ, ಪರಿಮಳವಾಗಿ, ಸಂತೋಷದ ಸುರತಸುಖವಾಗುತ್ತದೆ. ಅನುಭವದ ಈ ಪರಿ, ಚರಿತ್ರೆಯ ಗಾಯ ನೆಕ್ಕುತ್ತಾ ವರ್ತಮಾನದ ದ್ವೇಷ ಕೂಡಿಡುತ್ತಾ ಹೋಗುವ ಉಗ್ರರಾಷ್ಟ್ರೀಯತೆಯ ಹತ್ತಿರವೂ ಸುಳಿಯದು. ಇದು ಏರಿದ ಮಲೆ ಸಹ್ಯಾದ್ರಿ, ಕುಡಿದ ನೀರ್ ಕಾವೇರಿಯಾಗಿಸಿ, ಇರುವುದನ್ನೇ ನಾಡಾಗಿ ಸಂಭ್ರಮಿಸಬಲ್ಲ ಸಮೃದ್ಧಿಯ ದೇಶಗೀತೆ.

ಇಂತಹ ಭಾವಗೀತೆಯೊಂದನ್ನು ಕಟ್ಟಿರುವುದಕ್ಕೂ ಆತನಲ್ಲಿ ಸಮರ್ಥನೆ ಇದೆ. ಯಾಕೆಂದರೆ ಬನವಾಸಿಯಾದರೋ, ‘ಅಮೃತವನ್ನೇ ಹಿಯಾಳಿಸುವಂತಿರುವ ರತಿಕ್ರೀಡೆಯ ಇಂಪಿಂದಲೂ, ಬೆಂಬಿಡಿದು ಬರುವ ಸಂಗೀತದಿಂದಲೂ, ವಿದ್ವಾಂಸರ ಮೇಳದಿಂದಲೂ(ಬನವಾಸಿಯು ಬಹಳ ದೊಡ್ಡ ವಿದ್ಯಾಕೇಂದ್ರವಾಗಿತ್ತು), ಚತುರರ ಒಳ್ಳೆಯ ಮಾತುಗಳಿಂದಲೂ, ಶೀತದಿಂದ ತಣ್ಣಗಿರುವ ಹೂಬಳ್ಳಿಗಳ ಜೊಂಪ(ಚಪ್ಪರ)ದಿಂದಲೂ ಕೂಡಿ ಬಯಸಿದ್ದನ್ನು ಕೊಡಬಲ್ಲ ಮೆಯ್ಸುಖದ ನೆಲೆಯೆನಿಸಿತ್ತು ಮನಸೂರೆಗೊಂಡ ತೆಂಕನಾಡ ಮರೆಯಲ್ಕೇಂ ಮನಂ ಬರ್ಕುಮೇ? ಎಂಬ ಪ್ರಶ್ನೆಯಾಗಿತ್ತು. ಹೀಗೆ ಪಂಪನ ತೆಂಕನಾಡು ಒಂದು ಕಡೆಯಿಂದ ಭಾವಿತವಾದ ನಾಡಿನ ರೂಪವಾಗುವ ಜೊತೆಗೆ ಪ್ರೇಮಸುಖದ ನಾಡೆನಿಸಿದೆ. ಅದು ಫಲತುಂಬಿಕೊಂಡ ಮಾವು, ಹೂಬಿಟ್ಟ ಜಾತಿ ಸಂಪಿಗೆ, ಕುಕಿಲ್ವ ಕೋಗಿಲೆ, ಬಿರಿದ ಮಲ್ಲಿಗೆ, ಪಾಡುವ ದುಂಬಿ, ಒಳ್ಮಾತು, ನಗುಮೊಗದಲ್ಲಿ ಮುಖಕ್ಕೆ ಮುಖವಂಟಿಸಿ ಕೂಡುವ ನಲ್ಲರ ಬೇಟ(ಪ್ರಣಯ)ಗಳಿಂದಾಗಿ ಮೆಯ್ಸುಖದ ಗಣಿಯೆನಿಸಿದೆ. ಪಂಪನಾದರೋ ‘ಸಾರಂ ಅನಂಗ ಜಂಗಮ ಲತಾ ಲಲಿತಾಂಗಿಯರಿಂದಂ ಅಲ್ತೆ ಸಂಸಾರಂ’ ಎಂದವನು. ಆತನ ಈ ಹೇಳಿಕೆಗೆ ಪೂರಕವಾಗಿ ಬನವಾಸಿಯೂ ಸಂಸಾರಸುಖದ ನೆಲೆಮನೆಯಂತೆಯೇ ಇದೆ. ಅದು ಆತನ ಅಭಿಮಾನವನ್ನು ಇಮ್ಮಡಿಸಿದೆ. ಈ ಅಭಿಮಾನ ಸಂಸ್ಕೃತಿಯ ಕುರಿತಾದ ಮಡಿವಂತಿಕೆಯ ನಿರ್ವಚನಗಳನ್ನು ಗೇಲಿ ಮಾಡುವಂತಿದೆ. ಹಾಗೆಂದು ಅದು ಅನೈತಿಕವಾದುದಲ್ಲ. ಹಾಗಾಗಿ ಪಂಪನು ಎಲ್ಲಿಯೇ ಹುಟ್ಟಿ ಬೆಳೆದಿರಲಿ, ಬನವಾಸಿಯ ಮಲೆನಾಡಿನಲ್ಲಿ ಅವನ ಜೀವಮಾನದ ಸಾರವತ್ತಾದ ಭಾಗ ಕಳೆದಿರಬೇಕು. ಅಲ್ಲಿಯ ಸೊಗಸು ಅವನ ಮನಸ್ಸನ್ನು ತಿದ್ದಿ ಕವಿತಾಶಕ್ತಿಯನ್ನು ಪುಟಗೊಳಿಸಿರಬೇಕು (ಪಂಪ,ಪು.5) ಎಂಬ ತೀನಂಶ್ರೀ ಅವರ ಮಾತು ಸರಿಯಾಗಿಯೇ ಇದೆ ಎನ್ನಬೇಕು.

ಹೀಗೆ ಕುರುಹಿನ ಹಂಗಿಲ್ಲದ ಅನುಭವಗಳಲ್ಲಿ ಅರಳಿದ ಈ ನಾಡಿಗೆ ಅಪಹರಣದ ಭಯವಿಲ್ಲ,bharath-maata ವಿದ್ರೋಹಿ ಸಂಚುಕೋರರ ಆತಂಕವಿಲ್ಲ. ಇಲ್ಲಿ ಭಜನೆಯ ತಂಡವಿಲ್ಲ. ದೊಣ್ಣೆಹಿಡಿದು ದೇಶಕಾಯುವ ವರಸೆಕಾರರೂ ಇಲ್ಲ. ‘ಯಾರೂ ಮುಖ್ಯರಲ್ಲ ಯಾವುದೂ ಅಮುಖ್ಯವೂ ಅಲ್ಲದ’ ಈ ಪ್ರಭುತ್ವಶೂನ್ಯತೆಯ ನಾಡಿಗೆ ‘ರಾಷ್ಟ್ರೀಯತೆ’ಯ ನಿಲುವಂಗಿಯೂ ಹೊಂದದು. ಏಕೆಂದರೆ ‘ರಾಷ್ಟ್ರೀಯತೆ’ಗೆ ದೇಶದ್ರೋಹಿಗಳ ಸರಕಿಲ್ಲದೆ ದೇಶಪ್ರೇಮದ ಮಾತು ತಿಳಿಯದು. ಗಂಡಾಂತರದ ಕೂಗುಹಾಕಿ ಕಟ್ಟಾಳುಗಳನ್ನು ಕಲೆಹಾಕುವ ಅದಕ್ಕೆ ಅಂಕುಶವಿಟ್ಟರೂ ತಡೆಯದೆ ನೆನೆವ ಮನದಾಳದ ಅರಿವಿರದು. ಅದಕ್ಕೆ ವರ್ತಮಾನದ ಉದ್ರೇಕಕ್ಕಾಗಿ ಗತಚರಿತ್ರೆಯ ದುಃಸ್ವಪ್ನಗಳ ಮಿಠಾಯಿ ಹಂಚುವುದು ಗೊತ್ತು. ಈ ದುಃಸ್ವಪ್ನಗಳ ಮಿಠಾಯಿಯ ಮೇಲೆ ಗತಕಾಲದ ಆತಂಕದ ಅಪರಾಧಿಗಳ ವಿಳಾಸ ಬರೆದಿಡುವದು ಗೊತ್ತು. ಉನ್ಮತ್ತ ಭಾವುಕತೆಯ ಅಮಲಲ್ಲಿ ಪ್ರೀತಿಸಬೇಕಾದ ‘ತನ್ನವರು’ ಮತ್ತು ದ್ವೇಷಿಸಬೇಕಾದ ‘ಪರರರನ್ನು’ ಗೆರೆಕೊರೆದು ವಿಂಗಡಿಸಿ ಗೊತ್ತು. ಜರ್ಮನಿಯ ಹಿಟ್ಲರ್ ನ ‘ನಾಜಿ’ಗಳು, ಇಟೆಲಿಯ ಮುಸೋಲಿನಿಯ ‘ಫ್ಯಾಸಿ’ಗಳು ಹಂಚಿದ್ದು ಈ ಮಿಠಾಯಿಯನ್ನೇ. ಆದರೆ ಈ ಮರೆಯಲಾಗದ ತೆಂಕನಾಡಲ್ಲಿ ಆ ಬಗೆಯ ದುಃಸ್ವಪ್ನಗಳಿಲ್ಲ. ‘ನಾನು’ ಮತ್ತು ‘ಅವರು’ ಎಂಬ ಎದುರಾಳಿಗಳಿಲ್ಲ. ಇಲ್ಲಿ ಗತವೂ ಗತವಲ್ಲ. ದ್ವೇಷದ ತರಬೇತಿಯೂ ಇಲ್ಲ. ಇದು ಮೈಮನದ ಹೊಲದಲ್ಲಿ ಸುಳಿದೆಗೆದು ಅರಳುತ್ತಲೇ ಇರುವ ಸಾವಿಲ್ಲದ ಬನವಾಸಿ.