Monthly Archives: February 2015

ಶಿಕ್ಷಣ ಕ್ಷೇತ್ರದ ಪಂಕ್ತಿಭೇದ ವಿರುದ್ಧದ ಕೂಗು: ಸಮ್ಮೇಳನದ ಯಶಸ್ಸು

– ಸದಾನಂದ ಲಕ್ಷ್ಮೀಪುರ

ಸಮ್ಮೇಳನದ ಸಂಘಟನೆ ಬಗ್ಗೆ, ಖರ್ಚಾದ ಹಣದ ಬಗ್ಗೆ ಏನೇ ಅಸಮಾಧಾನಗಳಿದ್ದರೂ, ಒಂದಂತೂ ಸತ್ಯ. ಇತ್ತೀಚಿನ ವರ್ಷಗಳಲ್ಲಿ ನಡೆದ ಅನೇಕ ಸಮ್ಮೇಳನಗಳ ಪೈಕಿ ಕನ್ನಡ ಪ್ರಜ್ಞೆಗೆ ಕಿಡಿಹೊತ್ತಿಸುವಂತಹ ಕೆಲಸ ಆಗಿದ್ದು ಇಲ್ಲಿಯ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಕೆಲ ಬೆಳವಣಿಗೆಗಳಿಂದ ಮಾತ್ರ. ಅದು ಆರಂಭವಾಗಿದ್ದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದೇವನೂರು ಮಹದೇವ ಅವರನ್ನು ಅಧ್ಯಕ್ಷತೆಗೆ ಒಪ್ಪಿಸಲು ಮಾಡಿದ ಪ್ರಯತ್ನದಿಂದ.

ಈ ಬಗ್ಗೆ ಕೇಂದ್ರ deva ಕನ್ನಡ ಸಾಹಿತ್ಯ ಪರಿಷತ್ ಗೆ ಅಷ್ಟಾಗಿ ಉತ್ಸಾಹ ಇದ್ದಂತಿರಲಿಲ್ಲ. ಕಾರಣ, ಈ ಮೊದಲು ಅನೇಕ ಬಾರಿ ಪರಿಷತ್ ಮಹದೇವ ಅವರನ್ನು ಈ ಬಗ್ಗೆ ಸಂಪರ್ಕಿಸಿದ್ದಾಗ ಅವರು ಉತ್ಸಾಹ ತೋರಿಸಿರಲಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬ ವಿಶ್ವಾಸವೂ ಅವರಿಗಿರಲಿಲ್ಲ. “ಆದರೂ..ನೀವು ಒಮ್ಮೆ ಪ್ರಯತ್ನ ಮಾಡುವುದಾದರೆ, ಮಾಡಿ. ನಮ್ಮ ಅಭ್ಯಂತರವಿಲ್ಲ. ಒಪ್ಪಿದರೆ, ನಮಗೂ ಸಂತೋಷ’ ಎಂಬ ಸಂದೇಶ ಜಿಲ್ಲಾ ಸಾಹಿತ್ಯ ಪರಿಷತ್ ಗೆ ರವಾನೆಯಾಗಿತ್ತು. ಅದರಂತೆ, ಜಿಲ್ಲಾ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್ ತಮ್ಮ ಗೆಳೆಯರೊಂದಿಗೆ ದೇವನೂರು ಅವರನ್ನು ಭೇಟಿಯಾದರು. ಅದು ಅವರು ಹೇಳುವಂತೆ ಅನೌಪಚಾರಿಕ ಭೇಟಿ.

ಮಹದೇವ ಅವರು ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಕನ್ನಡ ಶಾಲೆಗಳು, ಕನ್ನಡ ಕಲಿಕೆ ಹಾಗೂ ಸಮಾನ ಶಿಕ್ಷಣದ ಕೂಗಿಗೆ ಒದಗಿರುವ ದು:ಸ್ಥಿತಿಗೆ ಈ ಸಂದರ್ಭದಲ್ಲಿ ಆಗಬೇಕಿರುವ ಕೆಲಸ ಬೇಕಾದಷ್ಟಿದೆ ಎಂದರು. ಈ ಉದ್ದೇಶಗಳಿಗಾಗಿ ಒಂದು ಪರ್ಯಾಯ ಸಮ್ಮೇಳನ ನಡೆಯುವುದಾದರೆ, ಬರಲು ಸಿದ್ಧ ಎಂದರು. ಹಾಗೂ ಹಿಂದೆ ಇಂತಹದೇ ಕಾರಣಕ್ಕೆ ಪರಿಷತ್ ನೀಡುವ ನೃಪತುಂಗ ಪ್ರಶಸ್ತಿಯನ್ನು ಅವರು ನಿರಾಕರಿಸಿದ್ದರು. ಆದರೆ ಈ ಭೇಟಿಯ ಸುದ್ದಿ ರಹಸ್ಯವಾಗಿ ಉಳಿಯಲಿಲ್ಲ. ಸುದ್ದಿ ಮಾಧ್ಯಮಗಳಲ್ಲಿ ವರದಿಯಾಯಿತು. ಪರಿಷತ್ ಗೆ ಒಂದಿಷ್ಟು ಮುಜುಗರವಾದರೂ, ನಾಡಿನಾದ್ಯಂತ ಮಹದೇವ ಅವರು ಎತ್ತಿರುವ ಪ್ರಶ್ನೆಗಳು ಚರ್ಚೆಯಾದವು. ಹಲವು ಲೇಖನಗಳು ಪ್ರಕಟವಾದವು. ದೇವನೂರು ಅವರು ಇದೇ ವಿಚಾರವಾಗಿ ಸಾಹಿತ್ಯ ಪರಿಷತ್ ಗೆ ಒಂದು ವಿವರವಾದ ಪತ್ರ ಬರೆದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಆ ಪತ್ರವೂ (ವರ್ತಮಾನವೂ ಸೇರಿದಂತೆ) ಹಲವೆಡೆ ಪ್ರಕಟವಾಯಿತು.

ಈ ಎಲ್ಲಾ ಬೆಳವಣಿಗೆಗಳು ಸಾಗುತ್ತಿರುವ ದಿಕ್ಕು ಶಿಕ್ಷಣ ಕ್ಷೇತ್ರದಲ್ಲಿರುವ ಪಂಕ್ತಿ ಭೇದದ ವಿರುದ್ಧದ ಸಮರಕ್ಕೆ. siddalingaiahಈ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುವುದು ಸಮಾನ ಶಿಕ್ಷಣ ಜಾರಿಯಾದಾಗ. ‘ಮುಖ್ಯಮಂತ್ರಿಯ ಮಗ, ಮಂತ್ರಿಯ ಮಗ, ಜಮೀನ್ದಾರನ ಮಗ, ಕೂಲಿಕಾರ್ಮಿಕನ ಮಗ, ಪೌರಕಾರ್ಮಿಕನ ಮಗ..ಒಂದೆಡೆ ಕೂತು ಶಿಕ್ಷಣ ಪಡೆಯುವಂತಾಗಬೇಕು..” – ಹೀಗೆಂದು ಸಮ್ಮೇಳನದ ಅಧ್ಯಕ್ಷಗಾದಿಯಿಂದ ಸಾರಿದವರು ಕವಿ ಸಿದ್ದಲಿಂಗಯ್ಯ.

ಕರ್ನಾಟಕ ಜನಶಕ್ತಿ ಹಾಗೂ ಸಮಾನ ಶಿಕ್ಷಣಕ್ಕಾಗಿ ಆಂದೋಲನದಲ್ಲಿ ತೊಡಗಿಸಿಕೊಂಡ karnataka-janashakti-protests-at-sammelanaಪ್ರಗತಿಪರ ಹೋರಾಟಕಾರರು ಸಮ್ಮೇಳನವನ್ನು ತಮ್ಮ ವಿಚಾರಗಳಿಗೆ ವೇದಿಕೆಯನ್ನಾಗಿ ಯಶಸ್ವಿಯಾಗಿ ಬಳಸಿಕೊಂಡರು. ಧಾರವಾಡದ ಜನಸಾಹಿತ್ಯ ಬಳಗದವರು ಇದೇ ಉದ್ದೇಶದ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಕರಪತ್ರ ಹಂಚಿದರು. ಸಮ್ಮೇಳನದ ಕೊನೆ ದಿನವಂತೂ ಕೆ.ಆರ್.ಪೇಟೆಯ ಸರಕಾರಿ ಶಾಲೆಯೊಂದರ ಮಕ್ಕಳು ಸ್ಥಳಕ್ಕೆ ಬಂದು ಸಮಾನ ಶಿಕ್ಷಣಕ್ಕಾಗಿ ಘೋಷಣೆ ಕೂಗಿದರು. ಪುಂಡಲೀಕ ಹಾಲಂಬಿಯವರು ಈ ಹೋರಾಟದಲ್ಲಿ ತಮ್ಮದೂ ಪಾತ್ರವಿದೆ ಎಂದು ಅವರೂ ಮಕ್ಕಳ ಜೊತೆ ಸೇರಿ ಘೋಷಣೆ ಹಾಕಿದರು. ಸಂವಿಧಾನ ಮತ್ತು ರಾಜ್ಯಭಾಷೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪ್ರೊ.ನಿರಂಜನಾರಾಧ್ಯ ಮತ್ತಿತರರು ತಮ್ಮ ಮಾತುಗಳಲ್ಲಿ ಸಮಾನ ಶಿಕ್ಷಣದ ಅಗತ್ಯತೆಯನ್ನು ಹಾಜರಿದ್ದ ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಸರಕಾರ ಅಂದಾಜು ಮಾಡಿತ್ತು ಎನಿಸುತ್ತದೆ. ಭಾಷೆ ಶಿಕ್ಷಣದ ವಿಚಾರವಾಗಿ ಏನನ್ನಾದರೂ ಮಾಡಬೇಕಾದ ಒತ್ತಡಕ್ಕೆ ಬಿದ್ದ ರಾಜ್ಯ ಸರಕಾರ ತನ್ನ ಇತಿಮಿತಿಯೊಳಗೆ ಕಾಯ್ದೆಗೆ ತಿದ್ದುಪಡಿ ತಂದು, ಮಾತೃಭಾಷೆಯ ವ್ಯಾಖ್ಯಾನವನ್ನು ಬದಲಿಸಲು ತೀರ್ಮಾನಿಸಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ಪಂಕ್ತಿಭೇದದ ವಿಚಾರವಾಗಿ ಇದುವರೆಗೆ ಗಟ್ಟಿಯಾದ ದನಿ ಸಮ್ಮೇಳನವೊಂದ ಹಿನ್ನೆಲೆಯಲ್ಲಿ ಮೂಡಿಬಂದಿದ್ದು ಇದೇ ಮೊದಲಿರಬೇಕು. ಆ ಕಾರಣಕ್ಕೆ ಇದು ಯಶಸ್ವಿ. ಆದರೆ ಈ ಯಶಸ್ಸಿಗಾಗಿ, ಏಳೆಂಟು ಕೋಟಿ ಖರ್ಚು ಮಾಡುವ ಅಗತ್ಯವಿರಲಿಲ್ಲ.

ದಿಲ್ಲಿ ಮತದಾರ ಪ್ರಬುದ್ಧನಾದ ಬಗೆ ಹೇಗೆ ಗೊತ್ತಾ…?

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

“ಇಲ್ಲಿಯೂ ಕೂಡ ಜನ ಬುದ್ಧಿವಂತರಾಗಿರಲಿಲ್ಲ. ನಾನು ದಿಲ್ಲಿಗೆ ಬಂದು ಸುಮಾರು 26 ವರ್ಷ ಕಳೆಯಿತು. ಈ ರಾಜಕಾರಣಿಗಳ ಆಶ್ವಾಸನೆಗಳು, ಸುಳ್ಳು, ಮೋಸ ಮತ್ತು ದ್ರೋಹವನ್ನು ನೋಡುತ್ತಲೇ ಬಂದಿದ್ದೆವು. ಆದರೆ, 2013ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಜನ ಎಚ್ಚರಾದರು. ಇವತ್ತು ಅವರ ಓಟನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ,” ಎಂದರು ಗೋವಿಂದ್ ಬಿಲಾಲ್. ಉತ್ತರ ಪ್ರದೇಶದಿಂದ ವಲಸೆ ಬಂದ ಅವರು ಮೊದಲು ದಿಲ್ಲಿಯ ವಿದೇಶಾಂಗ ಕಚೇರಿಯಲ್ಲಿ ಹೊರಗುತ್ತಿಗೆ ನೌಕರಾಗಿ ದುಡಿಯಲು ಶುರುಮಾಡಿದರು. ನಂತರ ಅವರನ್ನು ಅಲ್ಲಿಂದ ಕಿತ್ತುಹಾಕಲಾಯಿತು. cyclerickshaw-delhiಮುಂದೆ ನಾನಾ ಉದ್ಯೋಗಗಳನ್ನು ನಿಭಾಯಿಸಿಕೊಂಡು ಇವತ್ತು ಮಾಲ್ವಿನಗರದ ಬ್ಯಾಂಕ್‍ವೊಂದರ ಮುಂದೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ದಿಲ್ಲಿಯ ಮತದಾರರಿಗೆ ತಮ್ಮ ಹಕ್ಕನ್ನು ಚಲಾಯಿಸುವ ದಿನ. ಬೆಳಗ್ಗೆಯೇ ಎದ್ದ ಗೋವಿಂದ್ ಬಿಲಾಲ್‍ ಚಾಣಕ್ಯಪುರಿಯ ತಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸಿ ಬಂದಿದ್ದರು. ರಸ್ತೆ ಬದಿಯಲ್ಲಿ ಜನರನ್ನು ಮಾತನಾಡಿಸುತ್ತಿದ್ದ ನನನ್ನು ಸ್ವಯಂಪೂರ್ವಕವಾಗಿ ಕರೆದು ಪಕ್ಕಕ್ಕೆ ಕೂರಿಸಿಕೊಂಡರು. ಬೆಂಗಳೂರಿನಿಂದ ಬಂದಿದ್ದೇನೆ ಎಂಬುದು ಗೊತ್ತಾದ ನಂತರ ಮನಸ್ಸು ಬಿಚ್ಚಿ ಮಾತನಾಡಲು ಶುರುಮಾಡಿದರು. “ನಾನು ಕಲ್ಯಾಣ್‍ ಸಿಂಗ್‍ ಕ್ಷೇತ್ರದಿಂದ ಬಂದವನು. ಯುವಕನಾಗಿದ್ದ ವೇಳೆ ಒಮ್ಮೆ ಕಲ್ಯಾಣ್‍ ಸಿಂಗ್‍ ಮನೆಗೆ ನಮ್ಮ ಹಳ್ಳಿಯ ಯುವಕನ್ನು ಕರೆದುಕೊಂಡು ಹೋಗಿದ್ದೆ. ಅವರಿಂದ ಒಂದು ಗುರುತಿನ ಪತ್ರವನ್ನು ಪಡೆದುಕೊಳ್ಳಬೇಕಾಗಿತ್ತು. ಅವತ್ತಷ್ಟೆ ನಮ್ಮನ್ನು ನೋಡಿದ ಅವರು ಕಳೆದ ಹತ್ತು ವರ್ಷಗಳಿಂದ ಇವರನ್ನು ಬಲ್ಲೆ ಎಂದು ಪತ್ರ ಬರೆದು ಸಹಿ ಮಾಡಿ ಕೊಟ್ಟಿದ್ದರು. ನನ್ನ ಜತೆಗೆ ಬಂದವನಿಗೆ ಪೊಲೀಸ್‍ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಯಿತು. ಅವತ್ತಿಂದ ಮೊನ್ನೆ ಮೊನ್ನೆವರೆಗೂ ನಾನು ಕಾಂಗ್ರೆಸ್‍ಗೆ ಮತ ಹಾಕುತ್ತಿದ್ದೆ,” ಎಂದು ಅವರು ಗತಕಾಲದ ನೆನಪುಗಳನ್ನು ಹಂಚಿಕೊಂಡರು.

ದಿಲ್ಲಿ ಚುನಾವಣೆ, ರಾಷ್ಟ್ರೀಯ ಪಕ್ಷಗಳ ಚುನಾವಣೆ ತಂತ್ರಗಾರಿಕೆ, ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಹತ್ತಿರದಿಂದ ನೋಡುತ್ತಿರುವ ನನಗೆ ಒಂದಂತೂ ಸ್ಪಷ್ಟವಾಗುತ್ತಿದೆ. ‘ಜನ ಹಣಕ್ಕೆ, ಹೆಂಡಕ್ಕೆ ಓಟನ್ನು ಮಾರಿಕೊಳ್ಳುತ್ತಿದ್ದಾರೆ. ಅವರು ಬದಲಾಗದ ಹೊರತು,chanakya-exit-poll-delhi-2015 ಈ ಚುನಾವಣಾ ವ್ಯವಸ್ಥೆ ಬದಲಾಗದ ಹೊರತು ದೇಶದ ರಾಜಕಾರಣವನ್ನು ಬದಲಾಯಿಸುವುದು ಕಷ್ಟ’ ಎಂಬ ಮಾತುಗಳು ಸಂಪೂರ್ಣ ಸತ್ಯವಲ್ಲ ಅಂತ ಅನ್ನಿಸುತ್ತದೆ. ಜನ ಸರಿಯಿಲ್ಲ ಅಥವಾ ಅವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಮೇಲ್ನೋಟದ ಮಾತುಗಳು. ಆದರೆ ಆಳಕ್ಕಿಳಿದು, ಪ್ರಾಮಾಣಿಕವಾದ ಪರ್ಯಾಯವೊಂದನ್ನು ಅವರ ಮುಂದಿಟ್ಟರೆ, ದಿಲ್ಲಿಯ ಇವತ್ತಿನ ಮತದಾದರರು ಪ್ರದರ್ಶಿಸುತ್ತಿರುವ ಇಚ್ಚಾಶಕ್ತಿಯನ್ನು ದೇಶದ ಯಾವ ಭಾಗದಲ್ಲಾದರೂ ಖಂಡಿತಾ ನಿರೀಕ್ಷಿಸಬಹುದು. ಹೀಗಾಗಿಯೇ, ಈ ಬಾರಿಯ ದಿಲ್ಲಿ ಚುನಾವಣೆಯನ್ನು ಇತರೆ ಚುನಾವಣೆಗಳಂತೆ ಕೇವಲ ರಾಜಕೀಯ ಕದನಕ್ಕೆ ಸಮೀಕರಿಸಿ, ಸೋಲು-ಗೆಲವುಗಳ ಅಂತರದಿಂದ ಮಾತ್ರವೇ ಅಳೆಯುವ ಅಗತ್ಯವಿಲ್ಲ.

ಹಾಗಂತ ದಿಲ್ಲಿಯಲ್ಲಿ ನಡೆಯುತ್ತಿರುವ ಭಿನ್ನ ರಾಜಕೀಯ ಕದನಕ್ಕೆ ತನ್ನದೇ ಆದಂತಹ ಸಿದ್ಧತೆ ಇರುವುದು ಇಲ್ಲಿ ಕಂಡುಬರುತ್ತದೆ. anna-hazare-bhushans“ಅಣ್ಣಾ ಮುಂದಾಳತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಆರಂಭದ ದಿನಗಳಲ್ಲಿ ಆಕರ್ಷಿಸಿದ್ದು ಮದ್ಯಮ ವರ್ಗದ ಯುವ ಸಮುದಾಯವನ್ನು. ಯಾವುದೇ ಆಂದೋಲನ ಅಥವಾ ಚಳವಳಿಗೆ ತನ್ನದೇ ಆದ ಮಿತಿಗಳು ಇರುತ್ತವೆ. ಹೀಗಿರುವಾಗಲೇ ಇಡೀ ಆಂದೋಲದ ಮುಂದುವರಿದ ಭಾಗವಾಗಿ ಆಮ್‍ ಆದ್ಮಿ ಹುಟ್ಟಿಕೊಂಡಿತು. ಈ ಸಮಯದಲ್ಲೂ ಕೂಡ ರಾಜಕೀಯ ಸ್ಪಷ್ಟತೆಯ ಇರಲಿಲ್ಲ. ಉದಾಹರಣೆಗೆ ಮೀಸಲಾತಿ ವಿಚಾರದಲ್ಲಿ ಯಾವ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿತ್ತು,” ಎಂದು ಆಮ್‍ ಆದ್ಮಿ ಪಕ್ಷದ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದರು ಕಿರಣ್‍ ವಿಸ್ಸಾ. ಹಾಗೆ, ಅಸ್ಪಷ್ಟತೆಯೇ ನಡುವೆ ಚುನಾವಣೆಗೆ ಇಳಿದು, ಶೀಲಾ ದೀಕ್ಷಿತ್‍ರನ್ನು ಮಣಿಸಿದ್ದ ಆಪ್‍ಗೆ ಅಧಿಕಾರವೂ ಸಿಕ್ಕಿತ್ತು. ಬಹುಶಃ ಅವತ್ತಿಗಿದ್ದ ಮೆಚ್ಯುರಿಟಿಯನ್ನು ಇಟ್ಟುಕೊಂಡೇ ಆಪ್‍ ಸರಕಾರ 49 ದಿನಗಳಲ್ಲಿ ಸ್ಪಷ್ಟವಾಗಿ ಬಡಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು.kiran-kumar-vissa-aap “ಸಿಕ್ಕ 49 ದಿನಗಳಲ್ಲಿ ನಮ್ಮ ಮನೆಯ ಕರೆಂಟು ಬಿಲ್‍ ಕಡಿಮೆಯಾಯಿತು. ಏನೇ ಆಗಲಿ, ನಾವೇ ಕಟ್ಟಿದ ಟ್ಯಾಕ್ಸ್ ದುಡ್ಡಿನಲ್ಲಿ ನಮಗೆ ಅನುಕೂಲ ಮಾಡಿಕೊಡುವ ಮೊದಲ ಸರಕಾರವನ್ನು ನಾವು ನೋಡಿದ್ದೆವು. ಆದರೆ, ಅಧಿಕಾರ ಬಿಟ್ಟು ಕೆಳಗೆ ಇಳಿದಾಗ ಬೇಜಾಗಿತ್ತು,” ಎಂದರು ಗೋವಿಂದ್ ಬಿಲಾಲ್‍. ಇದು ದಿಲ್ಲಿಯಲ್ಲಿ ಆಪ್‍ ಪರವಾಗಿ ಮಾತನಾಡುವವರೂ ವ್ಯಕ್ತಪಡಿಸುವ ಸಾಮಾನ್ಯ ಭಿನ್ನಾಭಿಪ್ರಾಯ. ಆದರೆ, ಅವತ್ತಿಗಿನ್ನೂ ಮಧ್ಯಮ ವರ್ಗದ ಸ್ವಯಂ ಸೇವಕರು, ಕಾರ್ಯಕರ್ತರು ಮತ್ತು ಪಕ್ಷದ ಸ್ಥರದ ನಾಯಕತ್ವವನ್ನು ಹೊಂದಿದ್ದ ಆಪ್‍, ಸರಕಾರ ನಡೆಸುವ ವಿಚಾರ ಬಂದಾಗ ಹೇಗೆ ಸ್ಪಷ್ಟವಾಗಿ ಬಡ ಜನರ ಸಂಕಷ್ಟಗಳಿಗೆ ಸ್ಪಂದಿಸಿತು ಎಂಬುದೇ ಒಂದು ಸೋಜಿಗ.

ಅಲ್ಲಿಂದ ಮುಂದೆ ಆಮ್‍ ಆದ್ಮಿ ಪಕ್ಷದ ಒಡನಾಟ ನಿಜವಾದ ಜನ ಸಾಮಾನ್ಯ ಜನರ ಜತೆಗೆ ಹೆಚ್ಚಾಯಿತು. “ಒಂದು ಹಂತ ಕಳೆದ ನಂತರ, ವಿಶೇಷವಾಗಿ ಲೋಕಸಭಾ ಚುನಾವಣೆ ನಂತರ ನಾವು ಯಾರಿಗಾಗಿ ರಾಜಕೀಯ ಪಕ್ಷ ನಡೆಸಬೇಕು ಮತ್ತು ಅದರ ಉದ್ದೇಶಗಳು ಏನಿರಬೇಕು ಎಂಬುದು ಸ್ಪಷ್ಟವಾಯಿತು. ಆ ನಂತರ ಮತ್ತೆ ಮೀಸಲಾತಿ ವಿಚಾರದಲ್ಲಿ ಹೆಚ್ಚಿನ ಚರ್ಚೆ ನಡೆಯಲಿಲ್ಲ,” ಎಂದು ಕಿರಣ್‍ ವಿಸ್ಸಾ ವಿವರಿಸಿದ್ದರು. ಇವತ್ತು ದಿಲ್ಲಿಯಲ್ಲಿ ಆಮ್‍ ಆದ್ಮಿ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಮತ್ತು ಅದಕ್ಕೆ ಸಿಕ್ಕಿರುವ ಜನವರ್ಗದ ಬೆಂಬಲವನ್ನು ಗಮನಿಸಿದರೆ ಕಿರಣ್‍ ಅವರ ಮಾತುಗಳಲ್ಲಿನ ಸ್ಪಷ್ಟತೆ ಅರಿವಿಗೆ ಬರುತ್ತದೆ.

ಒಂದು ಕಡೆ ಆಪ್‍ನ ವೈಚಾರಿಕ ಸ್ಪಷ್ಟತೆ ರೂಪ ಪಡೆದುಕೊಳ್ಳುತ್ತಿರುವ ಹೊತ್ತಿಗೇ, ಚುನಾವಣೆ ರಾಜಕಾರಣದ ತಂತ್ರಗಳು ಪಕ್ಷದ ನಾಯಕತ್ವಕ್ಕೆ ಪಾಠ ಕಲಿಸುತ್ತ ಹೋದವು. ಅದರ ಕುರಿತು ಇನ್ನಷ್ಟು ಆಳವಾಗಿ ಮುಂದೆ ಯಾವಾಗಾದರೂ ಬರೆಯವುದು ಸೂಕ್ತ. ಇಲ್ಲೀಗ, ಮತದಾನದ ಭರಾಟೆ ಅಂತ್ಯವಾಗಿದೆ. ನಿನ್ನೆಯಷ್ಟೆ ಬೆಂಗಳೂರಿನಿಂದ ಕರೆ ಮಾಡಿದ್ದ ದೊಡ್ಡಿಪಾಳ್ಯ ನರಹಿಂಹಮೂರ್ತಿ, “ಬಿಜೆಪಿಯವರು ಕೊನೆಯ ಕ್ಷಣದಲ್ಲಿ ವೋಟಿಂಗ್‍ ಮಷೀನ್‍ಗಳನ್ನು ಬಿಜೆಪಿ ಪರವಾಗಿ ಬದಲಾಯಿಸಿದರೆ ಕತೆ ಏನು? ಪ್ರತಿ ಐದನೇ ಅಥವಾ ಆರನೇ ಮತ ಬಿಜೆಪಿಗೇ ಬೀಳುವಂತೆ ಮಾಡುವ ಸಾಧ್ಯತೆ ಇದೆಯಂತೆ,” aap-war-room-2015-delhiಎಂದು ಕಾಳಜಿ ಮತ್ತು ಆತಂಕವನ್ನು ವ್ಯಕ್ತಪಡಿಸಿದರು. ಬಹುಶಃ ಇವತ್ತು ಪರ್ಯಾಯದ ರಾಜಕಾರಣವನ್ನು ಮಾಡಬೇಕು ಎಂದರೆ, ಕೊನೆಯ ಹಂತದ ಇಂತಹ ಸಾಧ್ಯತೆಗಳ ಕುರಿತು ಗಮನಹರಿಸಬೇಕಿದೆ. ಹೀಗೊಂದು ಅಭಿಪ್ರಾಯವನ್ನು ಆಪ್‍ನ ಕಾರ್ಯಕರ್ತ ಚಂದನ್‍ ಮುಂದಿಟ್ಟರೆ, “ಈ ಬಗ್ಗೆ ನಮಗೂ ದೂರುಗಳು ಬಂದಿದ್ದವು. ಹೀಗಾಗಿ ಮತದಾನದ ದಿನ ಪಟೇಲ್‍ನಗರದ ಆಪ್‍ ಕಚೇರಿಯಲ್ಲಿ ‘ವಾರ್ ರೂಂ’ನ್ನು ಸ್ಥಾಪಿಸಿದ್ದೇವೆ. ದಿಲ್ಲಿಯ ಸೂಕ್ಷ್ಮ ಮತಗಟ್ಟೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಅಮೆರಿಕಾ, ಲಂಡನ್‍, ಬೆಂಗಳೂರು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಕುಳಿದ ಆಪ್‍ ಕಾರ್ಯಕರ್ತರು ವೀಕ್ಷಿಸುತ್ತಿದ್ದರು. ಅವರಿಂದ ಬರುವ ದೂರುಗಳನ್ನು ವರ್ಗೀಕರಿಸಿ ಎಲೆಕ್ಷನ್‍ ಕಮಿಷನ್‍ಗೆ ಕಳುಹಿಸಿದ್ದೇವೆ,” ಎಂದರು. ಏನೇ ಆಗಲಿ, ದಿಲ್ಲಿಯ ಮತದಾರರ ಮನಸ್ಸಿನಲ್ಲಿ ಏನಿದೆ ಎಂಬುದು ಫೆ. 10 ಬೆಳಗ್ಗೆ ಹನ್ನೊಂದರ ವೇಳೆಗೆ ಸ್ಪಷ್ಟವಾಗುತ್ತದೆ. ಅಲ್ಲೀವರೆಗೂ ಕಾಯದೆ ಬೇರೆ ವಿಧಿ ಇಲ್ಲ.

ಸಾಹಿತ್ಯ ಸಮ್ಮೇಳನ = ಊಟ + ವಸತಿ!!

– ಸದಾನಂದ ಲಕ್ಷ್ಮೀಪುರ

ಶ್ರವಣಬೆಳಗೊಳದಲ್ಲಿ ನಡೆದದ್ದು ಅದ್ಧೂರಿ ಸಾಹಿತ್ಯ ಸಮ್ಮೇಳನ. ಸಾಹಿತ್ಯ ಪರಿಷತ್, ಜೈನ ಮಠದ ಸ್ವಾಮೀಜಿ ಹಾಗೂ ಸಮ್ಮೇಳನದ ವ್ಯವಸ್ಥೆಗೆ ಓಡಾಡಿದ ಎಲ್ಲರಿಗೂ ಅನ್ನಿಸಿದೆ – ಇದೊಂದು ಯಶಸ್ವಿ ಸಮ್ಮೇಳನ. hassan-sahitya-sammelana-2ಹಾಗಾದರೆ, ಅವರು ಕಂಡ ಯಶಸ್ಸು ಯಾವುದು..? ಅವರ ಮಾತುಗಳಿಂದ ಗ್ರಹಿಸಬಹುದಾದ್ದೆಂದರೆ, ಊಟಕ್ಕಾಗಿ ಗದ್ದಲವಾಗಲಿಲ್ಲ. ಸರಕಾರಿ ನೌಕರರು ಓಓಡಿಗಾಗಿ ಬಟ್ಟೆ ಹರಿದುಕೊಳ್ಳಲಿಲ್ಲ. ವಸತಿ ಸಮಸ್ಯೆ ಸರಿಯಿಲ್ಲ ಎಂಬ ಕೂಗಾಟಗಳಿರಲಿಲ್ಲ. ಮುಖ್ಯವಾಗಿ ಈ ತೆರೆನ ಸುದ್ದಿಗಳಾವುವೂ ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ ಎಂಬ ಕಾರಣಕ್ಕೆ, ಅವರು ‘ಯಶಸ್ವಿ’ ಪದ ಪ್ರಯೋಗ ಮಾಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದೆಂದರೆ, ‘ವ್ಯವಸ್ಥೆ’ ಮಾಡುವುದು ಎಂಬ ಅರ್ಥಕ್ಕೆ ಸೀಮಿತವಾಗಿರುವುದೇ ಇಷ್ಟಕ್ಕೆಲ್ಲಾ ಕಾರಣ. ಸಮ್ಮೇಳನಕ್ಕೆ ಸಂಬಂಧಿಸಿದಂತೆ, ಹಾಸನದಲ್ಲಿ ನಡೆದ ಬಹುತೇಕ ಸಭೆಗಳಲ್ಲಿ ವ್ಯಕ್ತವಾಗಿದ್ದು ಊಟ, ವಸತಿ, ವೇದಿಕೆ ವಿಚಾರಗಳು. ಬಂದವರಿಗೆಲ್ಲಾ ಇರಲು ವ್ಯವಸ್ಥೆ ಮಾಡಿ, ಹೊತ್ತಿಗೆ ಸರಿಯಾಗಿ ಊಟ ಹಾಕಿದರೆ ಸಮ್ಮೇಳನ ಖಂಡಿತ ‘ಯಶಸ್ವಿ’ ಎಂದೇ ಅನೇಕರ ಅಭಿಪ್ರಾಯ. ಈ ಬಾರಿ ವೇದಿಕೆಗೆ ಆದ ಖರ್ಚು ಬರೋಬ್ಬರಿ 1.88 ಕೋಟಿ ರೂ. ಅದರಲ್ಲಿ ರಾಜ್ ಎಂಟರ್ ಪ್ರೈಸಸ್ ನವರಿಗೆ 1.70 ಕೋಟಿ ರೂ. ಉಳಿದ ಹದಿನೆಂಟು ಲಕ್ಷ ಖರ್ಚಾದದ್ದು, ಆಯ್ಕೆ ಮಾಡಿಕೊಂಡಿದ್ದ ಜಾಗೆಯ ಸಮತಟ್ಟು ಮಾಡಲು. ವಿಚಿತ್ರ ಎಂದರೆ, ಸಮತಟ್ಟು ಮಾಡುವ ಕಾಮಗಾರಿಗೆ ಮೊದಲು ಲೋಕೋಪಯೋಗಿ ಇಲಾಖೆ 42 ಲಕ್ಷ ರೂಗಳ ಅಂದಾಜು ಸಿದ್ಧಪಡಿಸುತ್ತದೆ. ನಂತರ ಭೂ ಸೇನಾ ನಿಗಮದವರಿಗೆ ಆ ಕೆಲಸ ಒಪ್ಪಿಸಿ 18 ಲಕ್ಷ ರೂಗಳಿಗೆ ಮಾಡಲು ಒಪ್ಪಿಸಲಾಗುತ್ತದೆ. ನಿಜಕ್ಕೂ 42 ಲಕ್ಷ ರೂ ಮೌಲ್ಯದ ಕೆಲಸವನ್ನು 18 ಲಕ್ಷಕ್ಕೆ ಮಾಡಲು ಸಾಧ್ಯವೇ..? ಅಥವಾ 42 ಲಕ್ಷದ ಅಂದಾಜು ಸಿದ್ಧಪಡಿಸಿದವರು, ಎಂಜಿನಿಯರಿಂಗ್ ಓದದವರೇ?

ವೇದಿಕೆ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿತ್ತು. ರಾಜ್ ಎಂಟರ್ ಪ್ರೈಸಸ್ ನವರು 2.28 ಕೋಟಿರೂಗಳನ್ನು ನಮೂದಿಸಿದ್ದರು. ಅದುವೇ ಅತೀ ಕಡಿಮೆ. ನಂತರ ಜಿಲ್ಲಾಡಳಿತ, ಹಣಕಾಸು ಸಮಿತಿ, ಸಾಹಿತ್ಯ ಪರಿಷತ್ತು ರಾಜ್ ಎಂಟರ್ ಪ್ರೈಸಸ್ ನವರೊಂದಿಗೆ ಮಾತುಕತೆ ಮಾಡಿ, ಆ ಕೆಲಸವನ್ನು 1.70 ಕೋಟಿಗೆ ಒಪ್ಪಿಸಿದರು! ಆ ಮೂಲಕ 58 ಲಕ್ಷರೂಗಳಷ್ಟು ವೆಚ್ಚ ಕಡಿಮೆಯಾಯಿತು. ವೇದಿಕೆ ನಿರ್ಮಾಣ ವೆಂದರೆ, ಅದರಲ್ಲಿ ಪುಸ್ತಕ ಮಳಿಗೆಗಳು, hassana-sahitya-sammelana-1ಊಟದ ಹಾಲ್ ಗಳು, ಮೀಡಿಯಾ ಸೆಂಟರ್, ಏಳೆಂಟು ಸಾವಿರ ಹಾಸಿಗೆ ಒದಗಿಸುವುದು, 200 ರಷ್ಟು ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸುವುದು..ಹೀಗೆ ಸಮ್ಮೇಳನಕ್ಕೆ ಬೇಕಾಗುವ ಎಲ್ಲಾ ತಾತ್ಕಾಲಿಕ ಕಟ್ಟಡಗಳ ನಿರ್ಮಾಣ ಸೇರಿಕೊಳ್ಳುತ್ತದೆ. ಮೂರು ದಿನದ ಸಂಭ್ರಮಕ್ಕಾಗಿ ನೂರಾರು ಕಾರ್ಮಿಕರು 20 ದಿನಗಳಿಗೂ ಹೆಚ್ಚುಕಾಲ ಶ್ರಮಪಟ್ಟು ವೇದಿಕೆ ನಿರ್ಮಿಸಿದ್ದಾರೆ.

ಈ ದುಬಾರಿ ವೆಚ್ಚದ ಅದ್ಧೂರಿತನ ಬೇಕಿತ್ತೆ? ಇದುವರೆಗೆ ನಡೆದ ಯಾವುದೇ ಸಮ್ಮೇಳನದಲ್ಲಿ ವೇದಿಕೆಗಾಗಿ ಈ ಪಾಟಿ ಖರ್ಚಾಗಿರಲಿಲ್ಲ. ಹಿಂದಿನ ವರ್ಷ ಮಡಿಕೇರಿಯಲ್ಲಿ ನಡೆದಾಗ ವೇದಿಕೆ ನಿರ್ಮಾಣಕ್ಕೆ ಆದ ಖರ್ಚು 1.31 ಕೋಟಿ ರೂ. ಅಲ್ಲಿ ಊಟ, ವಸತಿ, ಗೋಷ್ಟಿಗಳು ಎಲ್ಲದರ ಒಟ್ಟು ವೆಚ್ಚ 3.31 ಕೋಟಿ ರೂ. ಆದರೆ ಈ ಬಾರಿ ಒಟ್ಟು ವೆಚ್ಚ ಹಿಂದಿನದ್ದಕ್ಕಿಂತ ಎರಡು ಪಟ್ಟು ಹೆಚ್ಚಾದರೂ ಅಚ್ಚರಿ ಇಲ್ಲ. ಸಾಹಿತ್ಯ ಪರಿಷತ್ ಲೆಕ್ಕ ಹಾಕಿರುವಂತೆ ಒಟ್ಟು ಅಗತ್ಯವಾದ ಹಣ 4.8 ಕೋಟಿ ರೂ. ಅದರಲ್ಲಿ ಶ್ರವಣಬೆಳಗೊಳ ಮಠ ವಹಿಸಿಕೊಂಡಿರುವ ಊಟದ ಖರ್ಚು ಸೇರಿಕೊಂಡಿಲ್ಲ.

ಸಮ್ಮೇಳನವನ್ನು ‘ಯಶಸ್ವಿ’ ಎಂದು ಘೋಷಿಸುವವರ ಮನಸ್ಸಿನಲ್ಲಿ ಈ ಪಾಟಿ ದುಡ್ಡು ಮಹತ್ವವಾದ ಕಾರ್ಯವೊಂದಕ್ಕೆ ಖರ್ಚಾಗಿದೆ ಎಂಬ ಭಾವನೆ ಇದ್ದಂತಿದೆ. ಊಟ ಮಾಡಿದವರು ವ್ಯವಸ್ಥೆ ಚೆನ್ನಾಗಿತ್ತು ಎಂದಿದ್ದಾರೆ. ಉಳಿದುಕೊಂಡವರು ವಸತಿ ವ್ಯವಸ್ಥೆ ಪರವಾಗಿಲ್ಲ ಎಂದರು. ಹಲವರು ಸಾಂಸ್ಕೃತಿಕ ಕಾರ್ಯಕ್ರಮಗಳು ಮನೆಸೆಳೆದವು ಎಂದು ಹೇಳುವವರು ಅನೇಕರಿದ್ದಾರೆ. ಹಾಗಾದರೆ ಸಮ್ಮೇಳನ ನಡೆಸುವುದು ಈ ಕಾರಣಗಳಿಗಾಗಿ ಮಾತ್ರವಾ..?

ಸಮ್ಮೇಳನ = ಊಟ + ಅದ್ಧೂರಿ ವೇದಿಕೆ + ವಸತಿ!!

ಶ್ರವಣಬೆಳಗೊಳದಲ್ಲಿ ನಡೆದದ್ದು ಅದ್ಧೂರಿ ಸಾಹಿತ್ಯ ಸಮ್ಮೇಳನ. ಸಾಹಿತ್ಯ ಪರಿಷತ್, ಜೈನ ಮಠದ ಸ್ವಾಮೀಜಿ ಹಾಗೂ ಸಮ್ಮೇಳನದ ವ್ಯವಸ್ಥೆಗೆ ಓಡಾಡಿದ ಎಲ್ಲರಿಗೂ ಅನ್ನಿಸಿದೆ – ಇದೊಂದು ಯಶಸ್ವಿ ಸಮ್ಮೇಳನ. ಹಾಗಾದರೆ, ಅವರು ಕಂಡ ಯಶಸ್ಸು ಯಾವುದು..? ಅವರ ಮಾತುಗಳಿಂದ ಗ್ರಹಿಸಬಹುsammelana-2 ದಾದ್ದೆಂದರೆ, ಊಟಕ್ಕಾಗಿ ಗದ್ದಲವಾಗಲಿಲ್ಲ. ಸರಕಾರಿ ನೌಕರರು ಓಓಡಿಗಾಗಿ ಬಟ್ಟೆ ಹರಿದುಕೊಳ್ಳಲಿಲ್ಲ. ವಸತಿ ಸಮಸ್ಯೆ ಸರಿಯಿಲ್ಲ ಎಂಬ ಕೂಗಾಟಗಳಿರಲಿಲ್ಲ. ಮುಖ್ಯವಾಗಿ ಈ ತೆರೆನ ಸುದ್ದಿಗಳಾವುವೂ ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ ಎಂಬ ಕಾರಣಕ್ಕೆ, ಅವರು ‘ಯಶಸ್ವಿ’ ಪದ ಪ್ರಯೋಗ ಮಾಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದೆಂದರೆ, ‘ವ್ಯವಸ್ಥೆ’ ಮಾಡುವುದು ಎಂಬ ಅರ್ಥಕ್ಕೆ ಸೀಮಿತವಾಗಿರುವುದೇ ಇಷ್ಟಕ್ಕೆಲ್ಲಾ ಕಾರಣ. ಸಮ್ಮೇಳನಕ್ಕೆ ಸಂಬಂಧಿಸಿದಂತೆ, ಹಾಸನದಲ್ಲಿ ನಡೆದ ಬಹುತೇಕ ಸಭೆಗಳಲ್ಲಿ ವ್ಯಕ್ತವಾಗಿದ್ದು ಊಟ, ವಸತಿ, ವೇದಿಕೆ ವಿಚಾರಗಳು. ಬಂದವರಿಗೆಲ್ಲಾ ಇರಲು ವ್ಯವಸ್ಥೆ ಮಾಡಿ, ಹೊತ್ತಿಗೆ ಸರಿಯಾಗಿ ಊಟ ಹಾಕಿದರೆ ಸಮ್ಮೇಳನ ಖಂಡಿತ ‘ಯಶಸ್ವಿ’ ಎಂದೇ ಅನೇಕರ ಅಭಿಪ್ರಾಯ. ಈ ಬಾರಿ ವೇದಿಕೆಗೆ ಆದ ಖರ್ಚು ಬರೋಬ್ಬರಿ 1.88 ಕೋಟಿ ರೂ. ಅದರಲ್ಲಿ ರಾಜ್ ಎಂಟರ್ ಪ್ರೈಸಸ್ ನವರಿಗೆ 1.70 ಕೋಟಿ ರೂ. ಉಳಿದ ಹದಿನೆಂಟು ಲಕ್ಷ ಖರ್ಚಾದದ್ದು, ಆಯ್ಕೆ ಮಾಡಿಕೊಂಡಿದ್ದ ಜಾಗೆಯ ಸಮತಟ್ಟು ಮಾಡಲು.

ವಿಚಿತ್ರ ಎಂದರೆ, ಸಮತಟ್ಟು ಮಾಡುವ ಕಾಮಗಾರಿಗೆ ಮೊದಲು ಲೋಕೋಪಯೋಗಿ ಇಲಾಖೆ 42 ಲಕ್ಷ ರೂಗಳ ಅಂದಾಜು ಸಿದ್ಧಪಡಿಸುತ್ತದೆ. ನಂತರ ಭೂ ಸೇನಾ ನಿಗಮದವರಿಗೆ ಆ ಕೆಲಸ ಒಪ್ಪಿಸಿ 18 ಲಕ್ಷ ರೂಗಳಿಗೆ ಮಾಡಲು ಒಪ್ಪಿಸಲಾಗುತ್ತದೆ. ನಿಜಕ್ಕೂ 42 ಲಕ್ಷ ರೂ ಮೌಲ್ಯದ ಕೆಲಸವನ್ನು 18 ಲಕ್ಷಕ್ಕೆ ಮಾಡಲು ಸಾಧ್ಯವೇ..? ಅಥವಾ 42 ಲಕ್ಷದ ಅಂದಾಜು ಸಿದ್ಧಪಡಿಸಿದವರು, ಎಂಜಿನಿಯರಿಂಗ್ ಓದದವರೇ?

ವೇದಿಕೆ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿತ್ತು. ರಾಜ್ ಎಂಟರ್ ಪ್ರೈಸಸ್ ನವರು 2.28 ಕೋಟಿರೂಗಳನ್ನು ನಮೂದಿಸಿದ್ದರು. ಅದುವೇ ಅತೀ ಕಡಿಮೆ. ನಂತರ ಜಿಲ್ಲಾಡಳಿತ, ಹಣಕಾಸು ಸಮಿತಿ, ಸಾಹಿತ್ಯ ಪರಿಷತ್ತು ರಾಜ್ ಎಂಟರ್ ಪ್ರೈಸಸ್ ನವರೊಂದಿಗೆ ಮಾತುಕತೆ ಮಾಡಿ, ಆ ಕೆಲಸವನ್ನು 1.70 ಕೋಟಿಗೆ ಒಪ್ಪಿಸಿದರು! ಆ ಮೂಲಕ 58 ಲಕ್ಷರೂಗಳಷ್ಟು ವೆಚ್ಚ ಕಡಿಮೆಯಾಯಿತು. ವೇದಿಕೆ ನಿರ್ಮಾಣ ವೆಂದರೆ, ಅದರಲ್ಲಿ ಪುಸ್ತಕ ಮಳಿಗೆಗಳು, ಊಟದ ಹಾಲ್ ಗಳು, ಮೀಡಿಯಾ ಸೆಂಟರ್, ಏಳೆಂಟು ಸಾವಿರ ಹಾಸಿಗೆ ಒದಗಿಸುವುದು, 200 ರಷ್ಟು ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸುವುದು..ಹೀಗೆ ಸಮ್ಮೇಳನಕ್ಕೆ ಬೇಕಾಗುವ ಎಲ್ಲಾ ತಾತ್ಕಾಲಿಕ ಕಟ್ಟಡಗಳ ನಿರ್ಮಾಣ ಸೇರಿಕೊಳ್ಳುತ್ತದೆ. ಮೂರು ದಿನದ ಸಂಭ್ರಮಕ್ಕಾಗಿ ನೂರಾರು ಕಾರ್ಮಿಕರು 20 ದಿನಗಳಿಗೂ ಹೆಚ್ಚುಕಾಲ ಶ್ರಮಪಟ್ಟು ವೇದಿಕೆ ನಿರ್ಮಿಸಿದ್ದಾರೆ.

ಈ ದುಬಾರಿ ವೆಚ್ಚದ ಅದ್ಧೂರಿತನ ಬೇಕಿತ್ತೆ? ಇದುವರೆಗೆ ನಡೆದ ಯಾವುದೇ ಸಮ್ಮೇಳನದಲ್ಲಿ ವೇದಿಕೆಗಾಗಿ ಈ ಪಾಟಿ ಖರ್ಚಾಗಿರಲಿಲ್ಲ. ಹಿಂದಿನ ವರ್ಷ ಮಡಿಕೇರಿಯಲ್ಲಿ ನಡೆದಾಗ ವೇದಿಕೆ ನಿರ್ಮಾಣಕ್ಕೆ ಆದ ಖರ್ಚು 1.31 ಕೋಟಿ ರೂ. ಅಲ್ಲಿ ಊಟ, ವಸತಿ, ಗೋಷ್ಟಿಗಳು ಎಲ್ಲದರ ಒಟ್ಟು ವೆಚ್ಚ 3.31 ಕೋಟಿ ರೂ. ಆದರೆ ಈsammelana ಬಾರಿ ಒಟ್ಟು ವೆಚ್ಚ ಹಿಂದಿನದ್ದಕ್ಕಿಂತ ಎರಡು ಪಟ್ಟಿಗಿಂತ ಹೆಚ್ಚಾದರೂ ಅಚ್ಚರಿ ಇಲ್ಲ. ಸಾಹಿತ್ಯ ಪರಿಷತ್ ಲೆಕ್ಕ ಹಾಕಿರುವಂತೆ ಒಟ್ಟು ಅಗತ್ಯವಾದ ಹಣ 4.8 ಕೋಟಿ ರೂ. ಅದರಲ್ಲಿ ಶ್ರವಣಬೆಳಗೊಳ ಮಠ ವಹಿಸಿಕೊಂಡಿರುವ ಊಟದ ಖರ್ಚು ಸೇರಿಕೊಂಡಿಲ್ಲ.

ಸಮ್ಮೇಳನವನ್ನು ‘ಯಶಸ್ವಿ’ ಎಂದು ಘೋಷಿಸುವವರ ಮನಸ್ಸಿನಲ್ಲಿ ಈ ಪಾಟಿ ದುಡ್ಡು ಮಹತ್ವವಾದ ಕಾರ್ಯವೊಂದಕ್ಕೆ ಖರ್ಚಾಗಿದೆ ಎಂಬ ಭಾವನೆ ಇದ್ದಂತಿದೆ. ಊಟ ಮಾಡಿದವರು ವ್ಯವಸ್ಥೆ ಚೆನ್ನಾಗಿತ್ತು ಎಂದಿದ್ದಾರೆ. ಉಳಿದುಕೊಂಡವರು ವಸತಿ ವ್ಯವಸ್ಥೆ ಪರವಾಗಿಲ್ಲ ಎಂದರು. ಹಲವರು ಸಾಂಸ್ಕೃತಿ ಕಾರ್ಯಕ್ರಮಗಳು ಮನೆಸೆಳೆದವು ಎಂದು ಹೇಳುವವರು ಅನೇಕರಿದ್ದಾರೆ. ಹಾಗಾದರೆ ಸಮ್ಮೇಳನ ನಡೆಸುವುದು ಈ ಕಾರಣಗಳಿಗಾಗಿ ಮಾತ್ರವಾ..?

 

ಸಮ್ಮೇಳನ-2: ಆದರೂ..ಸಮ್ಮೇಳನ ಯಶಸ್ವಿಯಾಯಿತು…ಹೇಗೆ ಗೊತ್ತಾ..?

ದಿಲ್ಲಿಯ ಅಂತರಾಳದಲ್ಲಿ ಪರ್ಯಾಯ ರಾಜಕಾರಣದ ಹುಡುಕಾಟ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ಬೆಂಗಳೂರಿನ ಜನಜಂಗುಳಿಯ ಚಿಕ್ಕಪೇಟೆಯಂತಹ ಬೀದಿ ಇದು; ಪಹಾರ್‍ಗಂಜ್. Pahar_Ganj_Streetಸಂಜೆಯಾಗುತ್ತಲೇ ಬೀದಿ ಬದಿಯ ವ್ಯಾಪಾರ ಇಲ್ಲಿ ರಂಗುಪಡೆದುಕೊಳ್ಳುತ್ತದೆ. ದೇಶ ವಿದೇಶಗಳ ಪ್ರವಾಸಿಗರು ತಮ್ಮ ದಿನದ ಸುತ್ತಾಟವನ್ನು ಮುಗಿಸಿ ವಾಪಾಸ್‍ ಬರುವ ಸಮಯವದು. ಮೊಟ್ಟೆ, ಕೋಳಿ, ಕುರಿ ಮಾಂಸದ ಅದ್ಭುತ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಬೇಯಿಸಿದ ಮೊಟ್ಟೆಗೂ ವಿಭಿನ್ನ ರುಚಿ ಇರುತ್ತದೆ ಎಂಬುದನ್ನು ಇಲ್ಲಿನ ವ್ಯಾಪಾರಿಗಳು ಪರಿಚಯಿಸುತ್ತಾರೆ. ಹಾಗೆ ಕೊಂಚ ಮುಂದೆ ಬಂದರೆ ರಸ್ತೆಯ ಬದಿಯಲ್ಲಿ ಕೊಂಚ ಆಳದ ತಳಹೊಂದಿರುವ, ದೊಡ್ಡ ದೋಸೆ ಕಾವಲಿಯಂತಹ ಪಾತ್ರೆಯಲ್ಲಿ ಕೆನೆಭರಿತ ಹಾಲು ಕುದಿಯುವುದು ಕಾಣಿಸುತ್ತದೆ. ಕಾಲು ಲೀಟರ್‍ ಗಟ್ಟಿ ಹಾಲಿಗೆ 20 ರೂಪಾಯಿ. ಎರಡು ಜಗ್ಗುಗಳಲ್ಲಿ ಆ ಕಡೆಯಿಂದ ಈ ಕಡೆಗೆ ಎತ್ತಿ ಸುರಿದು, ಅದಕ್ಕೆ ಸಕ್ಕರೆ ಬೆರೆಸಿ ಮತ್ತೊಂದು ಲೋಟಕ್ಕೆ ಸುರಿದು ನಿಮ್ಮ ಕೈಗಿಡುತ್ತಾರೆ. delhi-paharganj-milkಬಾಯಿಗಿಟ್ಟರೆ ಹಾಲಿಗೆ ಯಾಕೆ ಅಮೃತ ಎನ್ನುತ್ತಾರೆ ಎಂಬುದನ್ನು ನಾಲಿಗೆ ಸವಿಯೇ ಅರ್ಥಪಡಿಸುತ್ತದೆ. ದಿಲ್ಲಿಯ ಆಹಾರ ಉದ್ಯಮದ ಮನಸ್ಥಿತಿಗೆ ಪ್ರತಿಬಿಂಬಗಳು ಇವು.

ಒಂದು ಕಡೆ ಹೊಸದಿಲ್ಲಿಯಂತಹ ದುಬಾರಿ ಪ್ರದೇಶದಲ್ಲಿ ಪಂಚತಾರ ಹೋಟೆಲ್‍ಗಳು ಹೇರಳವಾಗಿ ಸಿಗುತ್ತವೆ. ಇಲ್ಲಿನ ವೆಚ್ಚವನ್ನು ಭರಿಸಲಾಗದವರಿಗೆ ಹಳೆಯ ದಿಲ್ಲಿಯ, ಪಹಾರ್‍ಗಂಜ್‍ನಂತಹ ಇಕ್ಕಟ್ಟಾದ ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ರುಚಿಕಟ್ಟಾದ ತಿಂಡಿ ತಿನಿಸುಗಳು ಸಿಗುತ್ತವೆ. ಕೊಟ್ಟ ಹಣಕ್ಕೆ ಮೋಸವಿಲ್ಲದ ಗುಣಮಟ್ಟದ ಆಹಾರಗಳವು. ನಮ್ಮಲ್ಲಿ ಹದಿನೈದು ರೂಪಾಯಿಯ ಪಾನಿಪೂರಿ ನೀಡುವ ವ್ಯಾಪಾರಿ ಹಿಂಡಿ ಹಿಂಡಿ ಚಪ್ಪಟೆಯಾಗಿ ಹೋದ ಲಿಂಬೆಹಣ್ಣನ್ನೇ ಮತ್ತೊಮ್ಮೆ ಹಿಂಡಿ ಶಾಸ್ತ್ರ ಪೂರೈಸುತ್ತಾನೆ. ಆದರೆ ದಿಲ್ಲಿಯ ಬೀದಿ ಬದಿಯಲ್ಲಿ ಹತ್ತು ರೂಪಾಯಿ ಒಂದು ಗೆಣಸಿನ ಪೀಸನ್ನು ಕಟ್‍ ಮಾಡಿಕೊಡುವ ವ್ಯಾಪಾರಿ, ನಗುಮುಖದಿಂದಲೇ ಅರ್ಧ ಲಿಂಬೆ ಹಣ್ಣನ್ನು ಹಿಂಡಿ ಬಾಯಲ್ಲಿ ನೀರೂರಿಸುತ್ತಾರೆ. ಇಲ್ಲಿನ ದುಡಿಮೆಗೂ ಒಂದು ಉದ್ದೇಶ ಇರುವಂತೆ ಜನ ಬದುಕುತ್ತಾರೆ. ಪಡೆಯುವ ಹಣಕ್ಕೆ ತಕ್ಕ ಗುಣಮಟ್ಟವನ್ನು ನೀಡಬೇಕು ಎಂಬ ಕಾಮನ್‍ಸೆನ್ಸ್ ಇಲ್ಲಿನ ಅಂತರಾಳದಲ್ಲಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ನಮ್ಮ ದರ್ಶಿನಿಗಳನ್ನು ನಡೆಸುತ್ತಿರುವ ವರ್ಗದವರನ್ನು ಇಲ್ಲಿನ ಬೀದಿ ವ್ಯಾಪಾರಿಗಳ ಜತೆ ಸಮೀಕರಿಸಿ ನೋಡಿದರೆ, ದಿಲ್ಲಿಯಲ್ಲಿ ಯಾಕೆ ಆಮ್‍ ಆದ್ಮಿಯಂತಹ delhi food stallಬದಲಾವಣೆ ಬಯಸುವ ಪಕ್ಷ ತನ್ನೆಲ್ಲಾ ಮಿತಿಗಳ ಆಚೆಗೂ ಅಧಿಕಾರ ಕೇಂದ್ರದ ಹತ್ತಿರಕ್ಕೆ ಬಂದು ನಿಂತಿದೆ ಎಂಬುದು ಅರ್ಥವಾಗುತ್ತದೆ.

ಮೊನ್ನೆ ವೈಶಾಲಿ ಮಾರ್ಗದ ಮೆಟ್ರೊದಲ್ಲಿ ಸಿಕ್ಕ ದಿಲ್ಲಿ ಯೂನಿವರ್ಸಿಟಿಯ ರಾಜಕೀಯ ಶಾಸ್ತ್ರದ ವಿದ್ಯಾರ್ಥಿ ಸಂಹಿತಾ ಸೇಟ್‍ ಜತೆ ಈ ಕುರಿತು ಅಭಿಪ್ರಾಯವನ್ನು ಹಂಚಿಕೊಂಡೆ. “ಹೌದಾ, ನಾವು ಈ ಬಗ್ಗೆ ಗಮನಿಸಿಯೇ ಇರಲಿಲ್ಲ ನೋಡಿ,’’ ಎಂದು ಅಚ್ಚರಿ ವ್ಯಕ್ತಪಡಿಸಿದ ಅವರು, “ದಿಲ್ಲಿ ಎಂದರೆ ಖುಷವಂತ್‍ ಸಿಂಗ್‍ ಬರೆದ ದಿಲ್ಲಿ ಕಾದಂಬರಿ ಎನ್ನೋ ಕಲ್ಪನೆ ಕಳೆದ ದಶಕದಲ್ಲಿ ಗಟ್ಟಿಯಾಗಿ ಬೇರೂರಿತ್ತು. ಸುಮಾರು ದಿನನೈದು ವರ್ಷ ದಿಲ್ಲಿಯನ್ನು ಆಳಿದ ಕಾಂಗ್ರೆಸ್‍ ಕೂಡ ಅಭಿವೃದ್ಧಿ ಹೆಸರಿನಲ್ಲಿ ಹಳೆಯ ದಿಲ್ಲಿಯ ಜನರನ್ನು ಮರೆತೇ ಬಿಟ್ಟಿತ್ತು. ಚುನಾವಣೆ ಸಮಯದಲ್ಲಿ ಮಾತ್ರ ಇವರು ನೆನಪಾಗುತ್ತಿದ್ದರು. ಬಿಜೆಪಿ ಕೂಡ ಹಳೆಯ ದಿಲ್ಲಿಯ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸೋತಿತು ಅನ್ನಿಸುತ್ತದೆ. ಲೋಕಸಭೆ ಚುನಾವಣೆ ನಂತರ ಪೂರ್ವ ದಿಲ್ಲಿಯಲ್ಲಿ ಕೋಮುಸಂಘರ್ಷ ನಡೆಯಿತಾದರೂ, ಅದೂ ಕೂಡ ಚುನಾವಣೆಯ ಅಸ್ತ್ರವಾಗಲಿಲ್ಲ. ಯಾಕೆಂದರೆ ದಿಲ್ಲಿಯ ಕೆಳವರ್ಗದಲ್ಲಿ ಯೂನಿಕ್‍ ಆದ ಪ್ರಾಮಾಣಿಕತೆ ಮತ್ತು ರಾಜಕೀಯ ಅರಿವು ಇರುವುದು ಕಾರಣ ಅನ್ನಿಸುತ್ತದೆ,’’ ಎಂದರು. ಪೂರ್ವ ದಿಲ್ಲಿಯ ತ್ರಿಲೋಕ್‍ಪುರಿಯಲ್ಲಿ ಕಳೆದ ಅಕ್ಟೋಬರ್‍ನಲ್ಲಿ ಕೋಮುಗಲಭೆ ನಡೆದಿತ್ತು. ಈ ಕುರಿತು ಆಟೋ ಚಾಲಕರೊಬ್ಬರು ಪ್ರಸ್ತಾಪಿಸಿದ ಕೆಲವು ಮಾತುಗಳು ಈ ಸಮಯದಲ್ಲಿ ನೆನಪಾಯಿತು. trilokpuri-clashesಅವರ ಹೆಸರು ಮರೆತುಹೋಗಿದೆ. “ನಾನು ಗಲಭೆ ನಡೆದ ಸಂದರ್ಭದಲ್ಲಿ ತ್ರಿಲೋಕ್‍ಪುರಿಯಲ್ಲೇ ಇದ್ದೆ. ಸುಖಾಸುಮ್ಮನೆ ಗಲಾಟೆ ಮಾಡಲಾಯಿತು. ಆದರೆ, ಅಲ್ಲಿರುವಷ್ಟು ಬಡತನ ಮತ್ತು ಸಮಸ್ಯೆಗಳು ಇಡೀ ದಿಲ್ಲಿಯಲ್ಲಿ ಇಲ್ಲ,’’ ಎಂದಿದ್ದರು. ಸ್ವಾತಂತ್ರ್ಯ ನಂತರ ಬಂಗಾಳದಲ್ಲಿ ನಡೆದ ಕೋಮು ಗಲಭೆಗಳನ್ನು ಪ್ರಸ್ತಾಪಿಸುತ್ತ, ‘ಕೋಮು ಸಂಘರ್ಷದ ಮೂಲ ಇರುವುದು ನಮ್ಮ ಆರ್ಥಿಕ ಸ್ಥರಗಳಲ್ಲಿನ ಭಿನ್ನತೆಯಲ್ಲಿ’ ಎಂದು ಜಯಪ್ರಕಾಶ್‍ ನಾರಾಯಣ್‍ ವ್ಯಾಖ್ಯಾನಿಸಿದ್ದರು ಎಂದು ಹಿರಿಯರೊಬ್ಬರು ಹೇಳಿದ ನೆನಪು. ಅದು ನಿಜವೇ ಆಗಿದ್ದರೆ ತ್ರಿಲೋಕ್‍ಪುರಿಯಲ್ಲಿ ಹತ್ತಿದ ಕಿಡಿ ಇಂದು ಇಡೀ ದಿಲ್ಲಿಯನ್ನೇ ವ್ಯಾಪಿಸಬೇಕಿತ್ತು. ಆದರೆ, ಇಲ್ಲಿ ಜಾತಿ ಮತ್ತು ಧರ್ಮದ ವಿಚಾರಗಳಿಗಿಂತ ಬಡತನ ಮತ್ತು ಶ್ರೀಮಂತಿಕೆ (ಬಡವ ಮತ್ತು ಶ್ರೀಮಂತ ಅಲ್ಲ)ಯಂತಹ ವರ್ಗ ತಾರತಮ್ಯದ ಅಂಶ ಚುನಾವಣೆಯ ಪ್ರಮುಖ ಅಸ್ತ್ರವಾಯಿತು. ತ್ರಿಲೋಕ್‍ಪುರಿಯಲ್ಲಿ ಕೋಮು ಗಲಭೆ ನಡೆಯುತ್ತಲೇ ಆಪ್‍ನ ಸಕಾಲಿಕ ಮಧ್ಯಪ್ರವೇಶ ಧರ್ಮಾಧಾರಿತ ರಾಜಕಾರಣದತ್ತ ಜನ ಹೋಗುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಿತು. ಗಲಭೆ ನಡೆದ ಮಾರನೇ ದಿನವೇ ನಡೆಸಿದ ಸೌಹಾರ್ಧ ನಡಿಗೆ ಮತ್ತು ಕೋಮು ಸಾಮರಸ್ಯ ಮೂಡಿಸಲು ನಡೆಸಿದ ವಿಶಿಷ್ಟ ಪ್ರಯತ್ನಕ್ಕೆ ಇಲ್ಲಿ ಬೆಲೆ ಸಿಕ್ಕಿದೆ.

ಇಲ್ಲೀಗ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಪೆ. 7ರ ಮುಂಜಾನೆಯಿಂದ ಸಂಜೆವರೆಗೆ ದಿಲ್ಲಿಯ ಸುಮಾರು 13 ಸಾವಿರ ಮತಗಟ್ಟೆಗಳಲ್ಲಿ ದಿಲ್ಲಿಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ‘ದಿಲ್ಲಿ ಕೆ ದಿಲ್‍ ಮೆ ಕ್ಯಾ ಹೇ?’ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಆದರೆ, dandi_yatra_delhiಅದು ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ ಎಂಬ ಎಚ್ಚರಿಕೆ ಎಲ್ಲರಲ್ಲೂ ಇದೆ. ಅದಕ್ಕಾಗಿ ರಾತ್ರಿ ಕಾರ್ಯಾಚರಣೆಗಳನ್ನು ತಡೆಯುವ ಕೊನೆಯ ಪ್ರಯತ್ನಗಳು ಜಾರಿಯಲ್ಲಿವೆ. ಎಲ್ಲವೂ ಸುಸೂತ್ರವಾಗಿ ನಡೆದರೆ, ನಮ್ಮೀ ಚುನಾವಣೆ ವ್ಯವಸ್ಥೆಯ ಮಿತಿಗಳ ಒಳಗಡೆಯೇ ಬದಲಾವಣೆ ಬಯಸುವ ಸಾಧ್ಯತೆಯೊಂದನ್ನು ಅನ್ವೇಷಣೆ ಮಾಡಿದಂತಾಗುತ್ತದೆ. ಹಾಗೂ ದೇಶದ ಇತರೆ ಕಡೆಗಳಲ್ಲಿ ಹೇಗೆ ರಾಜಕೀಯ ಪರ್ಯಾಯೊಂದನ್ನು ನಿರ್ಮಿಸಬಹುದು ಎಂಬುದಕ್ಕೆ ಈ ಕಾಲದ ಮಾದರಿಯೊಂದು ಸಿಕ್ಕಂತಾಗುತ್ತದೆ.