Daily Archives: March 25, 2015

ಕೇಜ್ರಿ ಕ್ರಾಂತಿ 2.0 : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

ಯುವ ಪತ್ರಕರ್ತ ಪ್ರಶಾಂತ್ ಹುಲ್ಕೋಡುprashant-hulkodu ನಮ್ಮ ವರ್ತಮಾನ.ಕಾಮ್ ಓದುಗರಿಗೆ ಪರಿಚಿತರು. ಈ ವರ್ಷದ ಅರಂಭದಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಎರಡು ವಾರ ಇದ್ದ ಅವರು ನಿಯಮಿತವಾಗಿ ಆಗ ವರ್ತಮಾನ.ಕಾಮ್‌ಗೆ ಬರೆದರು. ಆ ಚುನಾವಣೆಯ ಬಗ್ಗೆ ನಮ್ಮ ಕನ್ನಡದ ಯಾವ ಮಾಧ್ಯಮಗಳಲ್ಲೂ ಪ್ರಕಟವಾಗದೇ ಇದ್ದ ಮಾಹಿತಿಗಳನ್ನು ಆ ಲೇಖನಗಳು ನಮ್ಮ ಓದುಗರಿಗೆ ಒದಗಿಸಿದವು. ಬಹಳ ಮೆಚ್ಚುಗೆ ಪಡೆದ ಲೇಖನಗಳವು.

ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ನಂತರ ಈ ಯುವ ಪತ್ರಕರ್ತ ಮಿತ್ರ “ಕೇಜ್ರಿ ಕ್ರಾಂತಿ 2.0” ಎಂಬ ಸಾಕಷ್ಟು ದೀರ್ಘವಾದ ಪುಸ್ತಕವನ್ನೇ ಬರೆದಿದ್ದಾರೆ. ಅಣ್ಣಾ ಹಜಾರೆ ಹೋರಾಟದಿಂದ ಆರಂಭವಾಗಿ, ಆಮ್ ಆದ್ಮಿ ಪಕ್ಷದ ಉದಯ, ಅದು ಎದುರಿಸಿದ ಮೂರು ಚುನಾವಣೆಗಳು, ಆಂತರಿಕ ಮತ್ತು ಬಾಹ್ಯ ಸವಾಲುಗಳು, ಇತ್ಯಾದಿಗಳನ್ನು ಇಟ್ಟುಕೊಂಡು ಇಲ್ಲಿಯವರೆಗೆ ಹೊರಗೆ ಎಲ್ಲೂ ದಾಖಲಾಗದ ಪಕ್ಷದ ಮತ್ತು ಅದರ ಮುಖಂಡರ ಅನೇಕ ಆಂತರಿಕ kejri-kranti-2.0-invitationವಿಚಾರಗಳು ಮತ್ತು ವಿವರಗಳನ್ನು ಈ ಪುಸ್ತಕದಲ್ಲಿ ಪ್ರಶಾಂತ್ ದಾಖಲಿಸಿದ್ದಾರೆ. ನಮ್ಮ “ಮೌಲ್ಯಾಗ್ರಹ ಪ್ರಕಾಶನ”ದಿಂದ ಇದು ಪ್ರಕವಾಗುತ್ತಿದೆ. ಕನ್ನಡಕ್ಕೆ ಬಹಳ ಅಪರೂಪದ ಪುಸ್ತಕ ಇದು ಎನ್ನುವ ಹೆಮ್ಮೆಯ ಭಾವನೆ ನನ್ನದು.

ಈ ಪುಸ್ತಕ ಅಧಿಕೃತವಾಗಿ ನಾಡಿದ್ದು ಶುಕ್ರವಾರ ಸಂಜೆ 5:30 ಕ್ಕೆ ಫ್ರೀಡಂ ಪಾರ್ಕಿನಲ್ಲಿರುವ ಓವಲ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ನಮ್ಮೆಲ್ಲಾ ವರ್ತಮಾನ ಬಳಗದ ಪರವಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ಕಾರ್ಯಕ್ರಮದ ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ.

ನಿಮ್ಮ ಬರುವಿನ ನಿರೀಕ್ಷೆಯಲ್ಲಿ,
ರವಿ


kejri-kranti-2.0-coverpage