ಡಿ.ಕೆ.ರವಿ ಪ್ರಕರಣ : ಪ್ಲಾಂಟೆಡ್ ಮತ್ತು ಎಕ್ಸ್‌ಕ್ಲೂಸಿವ್ ಗಳ ಭರಾಟೆಯಲ್ಲಿ ಸತ್ಯ ಎಲ್ಲಿ?

– ಶರ್ಮಿಷ್ಠ

ಬಹು ಸಂಖ್ಯೆಯಲ್ಲಿರುವ ಮಾಧ್ಯಮಗಳು ಸತ್ಯವನ್ನೇನು ಅರುಹದೆ, ತಮ್ಮ ‘ಟಿಆರ್‌ಪಿ’ ಗಾಗಿ, ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತಪ್ಪು ತಪ್ಪಾಗಿ ಜನಾಭಿಪ್ರಾಯವನ್ನು ರೂಪಿಸುವುದು ಡಿ.ಕೆ. ರವಿ ವಿಷಯದಲ್ಲೇನು ಹೊರತಲ್ಲ. ಈ ಹಿಂದೆ ಪದ್ಮಪ್ರಿಯ ಪ್ರಕರಣದಲ್ಲೂ ಮಾಧ್ಯಮಗಳು ಹೀಗೆ ಮಾಡಿದ್ದವು. ಆದರೆ ದೊಡ್ಡ ದುರಂತವಿರುವುದು ಇವು ಮುಚ್ಚಿ ಹಾಕುವ ಸತ್ಯಾಂಶದಲ್ಲಿ. tv-mediaಇವುಗಳ ಬುದ್ಧಿ ಗೊತ್ತಿರೋ ಆಡಳಿತ ವರ್ಗ ಸತ್ಯವನ್ನು ಮುಚ್ಚಿ ಹಾಕಲು ‘ಎಕ್ಸ್‌ಕ್ಲೂಸಿವ್’ ಅನ್ನೋ ಸುಳ್ಳುಗಳ ಕಂತೆಯಿಂದ ಮೂಳೆ ತುಂಡನ್ನು ಎಸಿತಾ ಇರುತ್ತವೆ, ಮಾಧ್ಯಮದ ಮಂದಿ ಇಡೀ ದಿನ ಅದನ್ನು ಅಗಿಯುತ್ತಾ ಕೂತಿರುತ್ತಾರೆ. ಅದರಲ್ಲಿ ಕೆಲವು ಸತ್ಯದ ’ಎಕ್ಸ್‌ಕ್ಲೂಸಿವ್‌’ಗಳಿರಬಹುದು, ಆದರೆ ಸುದ್ದಿಗಳ ಅಬ್ಬರದಲ್ಲಿ ಸತ್ಯ ಮೂಲೆಗುಂಪಾಗಿರುತ್ತದೆ.

ಇಂತಹ ಸಂದರ್ಭದಲ್ಲಿ ಕೆಲವು ವೃತ್ತಿ ನಿಷ್ಠರಿಗೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅವು
೧. ಬಹುಶ: ಇದು ಸತ್ಯ ಎಂದು ವರದಿ ಮಾಡಿದರೆ, ಸ್ಟೋರಿ ‘ಪ್ಲಾಂಟ್’ ಮಾಡಿದ್ದೀರಿ ಎನ್ನೋ ಆರೋಪ
೨. ಪ್ಲಾಂಟ್ ಇರಬಹುದು ಎಂದು ಬಿಟ್ಟರೆ ನಾಳೆ ಬೇರೆ ಪತ್ರಿಕೆಯಲ್ಲಿ ಬಂದಾಗ ‘ನಮ್ಮಲ್ಲಿ ಮಿಸ್’ ಅಂಥ ಬೈಗುಳ

ನನಗೆ ಗೊತ್ತಿದ್ದ ಹಾಗೆ ಡಿಕೆ ರವಿ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಪತ್ರಿಕೆಯೊಂದು ಮಹಿಳಾ ಐಎಎಸ್ ಅಧಿಕಾರಿಯೊಬ್ಬಳು ರವಿ ಬಗ್ಗೆ ಚೀಫ್ ಸೆಕ್ರೆಟರಿಯೊಬ್ಬರಿಗೆ ಕೊಟ್ಟ ದೂರಿನ ಬಗ್ಗೆ ಬರೆಯಿತು. ಅದು ಪ್ಲಾಂಟ್ ಎಂದು ಸಾಕಷ್ಟು ಚರ್ಚೆಗಳಾದಾಗ, ಬೇಕಾದವರು ತಮಗೆ ಬೇಕಾದ ರೀತಿಯಲ್ಲಿ ಅದನ್ನು ಅರ್ಥೈಸಿದಾಗ ಆ ಪತ್ರಿಕೆಯ ಸಂಪಾದಕರು ‘ನಮ್ಮ ವರದಿಗಾರರು ಸತ್ಯವನ್ನು ಬರಿಯಲು ನಿಯೋಜಿಸಲ್ಪಟ್ಟವರು , ಅವರು ಸತ್ಯದ ನಾನಾ ಮುಖಗಳನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿದ್ದಾರೆ ಹೊರತು ಯಾರನ್ನೂ ಸಮರ್ಥಿಸುತ್ತಿಲ್ಲ’ ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆಯಿತು. ಇದು ಪತ್ರಿಕೋದ್ಯಮದ ಪ್ರಕಾರ ಸತ್ಯವೂ ಹೌದು. ಆದರೆ ಒವರ್‌ಆಲ್ ಆ ಸುದ್ದಿ ಸುಳ್ಳು ಎಂದೇ ಬಿಂಬಿಸಲ್ಪಟ್ಟಿತು.

ನನಗೆ ಗೊತ್ತಿರೋ ಪ್ರತಕರ್ತರೊಬ್ಬರು ಅದೇ ಸುದ್ದಿ ತಮಗೆ ಗೊತ್ತಿದ್ದರೂ ಸುಮ್ಮನಾದರು. ಅದನ್ನು ಬರೆಯುವುದು DKRavi_Kolar_PGಪತ್ರಿಕೋದ್ಯಮದ ಪ್ರಕಾರ ಸರಿ ಇದ್ದರೂ ತನಗಿರುವ ಸಾಮಾಜಿಕ ಜವಾಬ್ದಾರಿಯಿಂದ ಸುಮ್ಮನಾದರು. ವೈಯಕ್ತಿಕ ವಿಷಯವನ್ನು ಇಟ್ಟುಕೊಂಡು ಐಎಎಸ್ ಅಧಿಕಾರಿಯೊಬ್ಬರ ಮಾನಹಾನಿ ಮಾಡುವುದು ಸರಿ ಅಲ್ಲ ಎಂದು ಸುಮ್ಮನಾದರು. ಇದೆರಡರಲ್ಲಿ ಯಾವುದು ಸರಿ ನನಗಿನ್ನೂ ಅರ್ಥವಾಗಿಲ್ಲ. ಪತ್ರಕರ್ತರಾಗಿ ಅವರು ಸತ್ಯದ ಮಜಲನ್ನು ನೋಡಬೇಕಿತ್ತೇ ಅಥವಾ ಸಾಮಾಜಿಕ ಹೊಣೆ ಮುಖ್ಯವೇ?

ಆದರೆ ನನ್ನ ಕಾಮನ್ ಸೆನ್ಸ್ ಪ್ರಕಾರ ಕಷ್ಟಪಟ್ಟು ಓದಿ ಮೇಲೆ ಬಂದ ಬಡ ಅಧಿಕಾರಿ ಒಬ್ಬ ಅದೂ ಪ್ರಾಮಾಣಿಕ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನಾಗಿರುವುದಿಲ್ಲ. ಆದರೆ ಒಂದೊಂದು ಪತ್ರಿಕೆಗಳು ಒಂದೊಂದನ್ನು ಬರೆಯುತ್ತವೆ. ಅವರ ವರದಿಗಾರರಿಗೆ ಸಿಕ್ಕ ಸುದ್ದಿಯೇ ಸಾಮಾನ್ಯ ಓದುಗನಿಗೆ ಅಂತಿಮ ಸತ್ಯ. ಅದು ವರದಿಗಾರ ಅಥವಾ ಅವನ ಸಂಪಾದಕ ಸೃಷ್ಟಿಸಿದ ಸುದ್ದಿಯೂ ಆಗಿರಬಹುದು. ಕೊನೆಗೂ ಸಾಮಾನ್ಯ ಓದುಗನಿಗೆ ಸತ್ಯ ಸಿಗುವುದೇ ಇಲ್ಲ. ಅಥವಾ ಅದು ಅವನಿಂದ ಮರೆಮಾಚಲ್ಪಡುತ್ತದೆ. ಓದುಗನ ಗ್ರಹಿಕೆಗೆ ಸಿಕ್ಕಿದ್ದು ಮಾತ್ರ ಸತ್ಯ.

One thought on “ಡಿ.ಕೆ.ರವಿ ಪ್ರಕರಣ : ಪ್ಲಾಂಟೆಡ್ ಮತ್ತು ಎಕ್ಸ್‌ಕ್ಲೂಸಿವ್ ಗಳ ಭರಾಟೆಯಲ್ಲಿ ಸತ್ಯ ಎಲ್ಲಿ?

  1. T.M.Krishna

    ಈ ಬರಹ ಏನನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ.‘ಅತ್ತ ಹುಲಿ-ಇತ್ತ ದರಿ’ಗಳ ನಡುವೆ ತಿಣುಕಾಡಿದಂತಿದೆ.
    -ಟಿ.ಎಂ.ಕೃಷ್ಣ

    Reply

Leave a Reply

Your email address will not be published. Required fields are marked *