2014 ರ ಭೂ ಸ್ವಾಧೀನ ಮಸೂದೆ : ರೈತ ವಿರೋಧಿ ನರೇಂದ್ರ ಮೋದಿ (ಬಂಡವಾಳಶಾಹಿಗಳಿಗೆ ಅಚ್ಛೇ ದಿನ್)

– ಬಿ. ಶ್ರೀಪಾದ ಭಟ್

ಭೂಸ್ವಾದೀನ ಮಸೂದೆ 2014 ಸಂವಿಧಾನಬಾಹಿರ ಮತ್ತು ಜನವಿರೋಧಿ ಕಾಯ್ದೆಯಾಗಿದೆ. ಇದು ರೈತರ ಅಸ್ತಿತ್ವವನ್ನೇ ನಿರ್ನಾಮ ಮಾಡುತ್ತದೆ. ಕಾರ್ಪೋರೇಟ್ ಶಕ್ತಿಗಳಿಗೆ ಮಣಿದಿರುವ ಈ 56 ಇಂಚಿನ ನರೇಂದ್ರ ಮೋದಿ ಸರ್ಕಾರ ಕಾರ್ಪೋರೇಟ್ ಅಜೆಂಡಾಗಳಿಗೆ ಅನುಗುಣವಾಗುವಂತೆ 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ಸುಗ್ರೀವಾಜ್ಞೆಯ ಮೂಲಕ ಅದನ್ನು ಜಾರಿಗಳಿಸಲು ಹಠ ತೊಟ್ಟಿದೆ. modi_ambani_tata_kamathತನ್ನದೇ ಮಂತ್ರಿಮಂಡಲದೊಳಗೆ ಈ ಕರಾಳ ಮಸೂದೆಯ ಕುರಿತು ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಕೇರ್ ಮಾಡದ ಈ ನರೇಂದ್ರ ಮೋದಿ ತನ್ನ ಸಂಸದರು ಮತ್ತು ಮಂತ್ರಿಗಳಿಗೆ ಸರ್ವಾಧಿಕಾರದ ಧ್ವನಿಯಲ್ಲಿ ಜನರ ಮುಂದೆ ಹೋಗಿ ವಿವರಿಸಿ ಎಂದು ತಾಕೀತು ಮಾಡುತ್ತಿದ್ದಾರೆ. ಇದನ್ನು ವಿವರಗಳನ್ನು ಚರ್ಚಿಸುವ ಮೊದಲು 1894, 2013, ಮತ್ತು 2014ರ ತಿದ್ದುಪಡಿ ಭೂಸ್ವಾದೀನ ಮಸೂದೆಯ ಪ್ರಮುಖ ಅಂಶಗಳನ್ನು ಮೊದಲು ಪರಿಶೀಲಿಸಬೇಕು:

ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (Social Impact Assement –SIA)
1894 : ಅವಕಾಶವಿಲ್ಲ
2013 : ಪ್ರತಿಯೊಂದು ಭೂಸ್ವಾಧೀನ ಪ್ರಕ್ರಿಯೆಯ ಮೊದಲು ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (SIಂ) ಕಡ್ಡಾಯವಾಗಿರುತ್ತದೆ
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (SIA) ಅಗತ್ಯವಿಲ್ಲ. ನೇರವಾಗಿ ಜಮೀನನ್ನು ಪಡೆದುಕೊಳ್ಳಬಹುದು.

ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ
1894 : ಅವಕಾಶವಿಲ್ಲ
2013 : ಖಾಸಗಿ ಕಂಪನಿಗಳಿಗೆ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಕಂಪನಿಗಳಿಗೆ ಸಂಬಂಧಪಟ್ಟಂತೆ ಪ್ರತಿಯೊಂದು ಭೂಸ್ವಾಧೀನ ಪ್ರಕ್ರಿಯೆಯ ಮೊದಲು ಶೇಕಡಾ 80ರಷ್ಟು ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ ಕಡ್ಡಾಯವಾಗಿರುತ್ತದೆ
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ ಅವಶ್ಯಕತೆ ಇಲ್ಲ. ನೇರವಾಗಿ ಜಮೀನನ್ನು ಪಡೆದುಕೊಳ್ಳಬಹುದು.

ನೀರಾವರಿ, ಫಲವತ್ತಾದ ಭೂಮಿ (Multi Crop Land)
1984 : ಅವಕಾಶವಿಲ್ಲ
2013 : ಕಡ್ಡಾಯವಾಗಿ ಬೇರೆ ದಾರಿಯಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ (Mandatory Situation) ಇಡೀ ಜಿಲ್ಲೆಯಲ್ಲಿನ ನೀರಾವರಿ ಭೂಮಿಯಲ್ಲಿ ಶೇಕಡಾ 5ರಷ್ಟನ್ನು ಮಾತ್ರ ಸ್ವಾಧೀನ ಪಡೆಸಿಕೊಳ್ಳಬಹುದು. ಇನ್ನುಳಿದಂತೆ ಸಾಮಾನ್ಯ ಸಂದರ್ಭಗಳಲ್ಲಿ ನೀರಾವರಿ ಪ್ರದೇಶದ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವಂತಿಲ್ಲ.
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ನೀರಾವರಿ, ಫಲವತ್ತಾದ ಭೂಮಿಯನ್ನು ಸಹ ನೇರವಾಗಿ ಸ್ವಾಧೀನ ಪಡೆಸಿಕೊಳ್ಳಬಹುದು.

ಮೇಲಿನ ವಿವರಗಳನ್ನು ಗಮನಿಸಿದಾಗ ಮೋದಿ ಸರ್ಕಾರ ತಿದ್ದುಪಡಿ ಮಾಡಿದ 2014ರ ಭೂಸ್ವಾದೀನ ಮಸೂದೆಯ ಕರಾಳತೆ ಸ್ಪಷ್ಟವಾಗುತ್ತದೆ. farmer-land-acquisitionಪದೇ ಪದೇ ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು, ಈ ವಲಯಗಳ ಹೆಸರಿನಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ನಿರ್ನಾಮಗೊಳಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಂಡಿಯಾದಂತಹ ಭ್ರಷ್ಟಗೊಂಡ ದೇಶದಲ್ಲಿ ಈ ಖಾಸಗಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಏಜಂಟರು, ದಲ್ಲಾಳಿಗಳು, ಮಧ್ಯವರ್ತಿಗಳು ತಮ್ಮ ಎಲ್ಲಾ ವ್ಯಾಪಾರದ ವಹಿವಾಟುಗಳನ್ನು ಈ ಮೇಲೆ ಹೇಳಿದ 5 ವಲಯಗಳಿಗೆ ಸಂಬಂಧಪಟ್ಟಂತೆ, ಅವುಗಳ ಅಡಿಯಲ್ಲಿಯೇ ಬರುವಂತೆ ಯೋಜನೆಗಳನ್ನು ರೂಪಿಸಿ ಅನುಮೋದನೆ ಪಡೆದುಕೊಂಡುಬಿಡುತ್ತಾರೆ. ಉದಾಹರಣೆಗೆ ಗಾಲ್ಫ್ ಮೈದಾನ, ಈಜುಕೊಳ, ರೆಸಾರ್ಟಗಳಂತಹ ಮೋಜುವಾನಿ ಕೂಟಗಳು ನಿರಾಯಾಸವಾಗಿ ‘ಸಾಮಾಜಿಕ ಮೂಲಭೂತ ಸೌಲಭ್ಯ’ಗಳ ಅಡಿಯಲ್ಲಿ ಮಾನ್ಯತೆ ಪಡೆದುಕೊಂಡುಬಿಡುತ್ತವೆ. ಇದು ಒಂದು ಸಣ್ಣ ಉದಾಹರಣೆ.

ಮುಖ್ಯವಾಗಿ ಒಮ್ಮೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ ಷರತ್ತನ್ನು ಕಿತ್ತು ಹಾಕಿದ ನಂತರ ಈ ಭೂಸ್ವಾಧೀನ ಪ್ರಕ್ರಿಯೆಯ ಹೊಣೆ ಹೊತ್ತ ಅಧಿಕಾರಶಾಹಿ ಮತ್ತು ರಾಜಕಾರಣಿಗಳ ನೆಕ್ಸಸ್ ನೀತಿ-ನಿಯಮಗಳನ್ನು ತಮ್ಮ ಹಿತಾಸಕ್ತಿಗೆ ಅನುಕೂಲವಾಗುವಂತೆ ತಿರುಚಿ ಖಾಸಗಿ ಬಂಡವಾಳಶಾಹಿಗಳ ಎಲ್ಲಾ ಯೋಜನೆಗಳನ್ನು ಸಾರ್ವಜನಿಕ ಹಿತಾಸಕ್ತಿಯ ಅಡಿಯಲ್ಲಿ ಅನುಮೋದಿಸಿಬಿಡುತ್ತದೆ. ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ ಅವಶ್ಯಕತೆ ಇಲ್ಲದ ಮೇಲೆ ಅಧಿಕಾರಶಾಹಿ ಮತ್ತು ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ, ತಮ್ಮ ವೈಯುಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಪರಿಹಾರ ಮೊತ್ತವನ್ನು ಸಹ ನಿರ್ಧರಿಸಿಬಿಡುತ್ತಾರೆ. ಸಹಜವಾಗಿಯೇ ಅತ್ಯಂತ ಕನಿಷ್ಠ ಮೊತ್ತವನ್ನು ನಿಗದಿಪಡಿಸುವ ಈ ಅಧಿಕಾರ ವರ್ಗ ಭವಿಷ್ಯದಲ್ಲಿ ರೈತರನ್ನು ವಂಚಿಸುವ ದಿನಗಳನ್ನು ನೆನೆಸಿಕೊಂಡರೆ ಇನ್ನು ಇಂಡಿಯಾದಲ್ಲಿ ಕೃಷಿ ಉದ್ಯೋಗ ಮತ್ತು ರೈತಾಪಿ ಸಮುದಾಯಗಳು ಶೀಘ್ರದಲ್ಲೇ ಕಣ್ಮರೆಯಾಗುವ ದಿನಗಳು ದೂರವಿಲ್ಲ.

ಇನ್ನು ನೀರಾವರಿ, ಫಲವತ್ತಾದ ಭೂಮಿಯನ್ನೂ ಸಹ ಅಭಿವೃದ್ಧಿಯ ಹೆಸರಿನಲ್ಲಿ ಖಾಸಗಿಯವರಿಗೆ ಹಸ್ತಾಂತರಗೊಳಿಸಿದ ಮೇಲೆ ಇದರ ದುಷ್ಪರಿಣಾಮಗಳನ್ನು ಅಂದಾಜಿಸುವುದು ಕಷ್ಟಕರವಲ್ಲ.

ಮುಖ್ಯವಾಗಿ ಕಾರ್ಪೋರೇಟ್ ಶಕ್ತಿಗಳ ಮುಂದೆ ಶರಣಾಗಿರುವ ಮೋದಿ ಸರ್ಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಖಾಸಗಿ ಉದ್ಯಮಿಗಳು ಬಲು ಸುಲಭವಾಗಿ ತಮ್ಮ ಎಲ್ಲಾ ಯೋಜನೆಗಳನ್ನು ಮೇಲಿನ ವಲಯಗಳ ಅಡಿಯಲ್ಲಿ ಅನುಮೋದನೆ ಪಡೆದುಕೊಳ್ಳುತ್ತಾರೆ. ಈಗಾಗಲೇ ಈ ಕಾರ್ಪೋರೇಟ್ ಉದ್ಯಮಿಗಳಿಗೆ ರೆಡ್ ಕಾರ್ಪೆಟ್ ಹಾಸಿರುವ ಮೋದಿ ಸರ್ಕಾರ ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಲಾ ಉದ್ದಿಮೆಗಳನ್ನು ಹಸ್ತಾಂತರಿಸಲು ತುದಿಗಾಲಲ್ಲಿ ನಿಂತಿದೆ. 2013ರ ಮಸೂದೆಯಲ್ಲಿ ಒಳಗೊಂಡಿರುವ ಪೂರ್ವ ಶರತ್ತು ಎನ್ನುವ ಮುಖ್ಯವಾದ ಪ್ರಜಾತಾಂತ್ರಿಕ ಆಶಯವನ್ನು ಮೋದಿ ಸರ್ಕಾರದ 2014ರ ತಿದ್ದುಪಡಿ ಮಸೂದೆ ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ಮೂಲಕ ರಾಷ್ಟ್ರದ ಅಭಿವೃಧ್ಧಿಯ ಹೆಸರಿನಲ್ಲಿ ತನ್ನ ಕಾನೂನು, ಅಧಿಕಾರಶಾಹಿ, farmer-land-acquisition-2ನಿಷ್ಕರುಣಿ ನೀತಿಗಳನ್ನು ಬಳಸಿಕೊಂಡು ಬಲತ್ಕಾರವಾಗಿ ರೈತರಿಂದ ಜಮೀನನ್ನು ವಶಪಡೆಸಿಕೊಂಡು ಖಾಸಗಿ ಶಕ್ತಿಗಳಿಗೆ ಹಸ್ತಾಂತರಿಸುತ್ತದೆ. ದೇಶವನ್ನು 150 ವರ್ಷಗಳ ಹಿಂದಿನ ಬ್ರಿಟೀಷರ ಕಲೋನಿಯಲ್ ವ್ಯವಸ್ಥೆಗೆ ಕೊಂಡೊಯ್ದಿದೆ ಈ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಇನ್ನು ಭೂಮಿಯನ್ನು ಖಾಸಗಿ ಉದ್ಯಮಿಗಳಿಗೆ ಉಚಿತವಾಗಿ ಹಸ್ತಾಂತರಿಸಲು ಈ ಕರಾಳ 2014 ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸುತ್ತಿದೆ. ಮುಖ್ಯವಾಗಿ ಬಂಡವಾಳ ಹೂಡಿಕೆದಾರರಿಗೆ, ವಿದೇಶಿ ಕಂಪನಿಗಳಿಗೆ ಇಂಡಿಯಾ ದೇಶವು ಸದಾ ಸ್ನೇಹಮಯಿಯಾಗಿರುತ್ತದೆ ಮತ್ತು ಎಲ್ಲಾ ಬಗೆಯ ಪರ್ಮಿಟ್ ರಾಜ್ ವ್ಯವಸ್ಥೆಯನ್ನು ಕೊನೆಗೊಳಿಸಿ ಸಂಪೂರ್ಣ ಮುಕ್ತ ಮಾರ್ಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದು ತೋರಿಸಿಕೊಳ್ಳಲು ಮೋದಿ ಸರ್ಕಾರ ಈ ಜನವಿರೋಧಿ ಕೃತ್ಯಕ್ಕೆ ಕೈ ಹಾಕಿದೆ. ಇದು ಹೀಗೆ ಮಂದುವರೆದರೆ ಜನರಿಗಾಗಿ ಸರ್ಕಾರ ಎನ್ನುವ ಪ್ರಜಾಪ್ರಭುತ್ವದ ಆಶಯ ಕಣ್ಮರೆಯಾಗಿ ನಾಯಕನಿಗಾಗಿ ಸರ್ಕಾರ ಎನ್ನುವ ಫ್ಯಾಸಿಸ್ಟ್ ವ್ಯವಸ್ಥೆ ಜಾರಿಗೊಳ್ಳುತ್ತದೆ.

ಒಂದು ಉದಾಹರಣೆಯ ಮೂಲಕ ವಿವರಿಸಬಹುದಾದರೆ ಮುಂಬೈ-ದೆಹಲಿ ನಗರಗಳ ಮಧ್ಯೆ ಕೈಗಾರಿಕಾ ಕಾರಿಡಾರ್ ಅನ್ನು ನಿರ್ಮಾಣ ಮಾಡಲು ಸುಮಾರು 3,90,000 ಹೆಕ್ಟೇರ್ ಭೂಮಿಯ ಅವಶ್ಯಕತೆಯ ಇದೆ. ಇದರಲ್ಲಿ ಶೇಕಡಾ ಎಂಬತ್ತರಷ್ಟು ಕೃಷಿ ಭೂಮಿ ಸೇರಿಕೊಂಡಿದೆ. ಇನ್ನು 2014ರ ಭೂಸ್ವಾಧೀನ ಮಸೂದೆಯ ಅನುಸಾರ ಈ ಕೈಗಾರಿಕಾ ಕಾರಿಡಾರ್‌ಗೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ, ರೈತರ, ಭೂ ಮಾಲೀಕರ ಅನುಮತಿ ಮತ್ತು ನೀರಾವರಿ, ಫಲವತ್ತಾದ ಭೂಮಿಯ ಪ್ರಶ್ನೆ, ಎಲ್ಲವೂ ಕಡೆಗಣಿಸಲ್ಪಟ್ಟು ಕೇವಲ ಯೋಜನೆ ಅನುಷ್ಠಾನ ಮುಖ್ಯವಾಗಿಬಿಡುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ರೈತರು ಬೀದಿ ಪಾಲಾಗುತ್ತಾರೆ. ಇನ್ನು ದೇಶಾದ್ಯಾಂತ ನಗರಗಳ ನಡುವೆ ಕೈಗಾರಿಕಾ ಕಾರಿಡಾರ್‌ಗಳ ಯೋಜನೆಯ ದುಷ್ಪರಿಣಾಮಗಳು ಊಹೆಗೂ ನಿಲುಕುವುದಿಲ್ಲ. ಇಂತಹ ಕರಾಳ, ಪ್ರಜಾತಾಂತ್ರಿಕ ವಿರೋಧಿ ಮಸೂದೆಯ ಪರವಾಗಿ ಹಠ ತೊಟ್ಟಿರುವ ನರೇಂದ್ರ ಮೋದಿ ಒಬ್ಬ ಜನವಿರೋಧಿ ಪ್ರಧಾನ ಮಂತ್ರಿ ಎಂದು ಸಾಬೀತಾಗುತ್ತದೆ.

ಈ 2014 ಭೂಸ್ವಾಧೀನ ಮಸೂದೆಯ ಪರವಾಗಿ ವಾದಿಸುತ್ತಿರುವ ಗುಂಪು ಪರಿಹಾರ, ಪುನರ್ವಸತಿಗಳಿಗೆ ಸಂಬಂಧಪಟ್ಟಂತೆ ಸದಾಕಾಲವೂ ಜನರ ಪರವಾಗಿಯೇ ಇರುತ್ತದೆ. ಕೇವಲ ಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡುತ್ತಾರೆ. ಆದರೆ ಒಮ್ಮೆ ಭೂಮಿಯನ್ನು ಸ್ವಾಧಿನ ಪಡೆಸಿಕೊಂಡ ನಂತರ ಪರಿಹಾರ, ಪುನರ್ವಸತಿ ಎನ್ನುವುದು ಒಂದು ದೊಡ್ಡ ಮರೆಮೋಸದ ಜಾಲವಾಗಿ ಪರಿವರ್ತನೆಗೊಳ್ಳುತ್ತದೆ. ಅದು ಗಗನಕುಸುಮ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಳೆದ 60 ವರ್ಷಗಳ ಇತಿಹಾಸವೇ ನಮ್ಮ ಮುಂದಿದೆ. ಸಾವಿರಾರು ಉದಾಹರಣೆಗಳಿವೆ. ಯಾವುದೇ ಪೂರ್ವ ಶರತ್ತುಗಳಿಲ್ಲದೆ ಭೂಮಿಯನ್ನು ಹಸ್ತಾಂತರಗೊಳಿಸಿದ ನಂತರ ಯಾವ ಆಧಾರದ ಮೇಲೆ ಪರಿಹಾರವನ್ನು ಕೇಳುವುದು Industrial_Mangaloreಎನ್ನುವ ಯಕ್ಷಪ್ರಶ್ನೆಗೆ ಈ ಮೋದಿ ಮತ್ತವರ ಪಟಾಲಂ ಉತ್ತರಿಸುತ್ತಿಲ್ಲ. ಇದಿರಲಿ ವ್ಯವಸಾಯಕ್ಕೆ ಸಂಬಂಧಪಟ್ಟಂತೆ ಸಾವಿರಾರು ತೊಂದರೆಗಳಲ್ಲಿ ಮುಳುಗಿರುವ ಭಾರತದ ರೈತ ಪ್ರತಿ ಬಾರಿಯೂ ಈ ಭೂಸ್ವಾಧೀನ ಸಂದರ್ಭದಲ್ಲಿ ಅಧಿಕಾರಶಾಹಿ, ಖಾಸಗಿ ಉದ್ಯಮಿಗಳು, ರಾಜಕಾರಣಿಗಳ ಅಪವಿತ್ರ ನೆಕ್ಸಸ್ ಅನ್ನು, ಪಶುಸದೃಶ ಅಧಿಕಾರವನ್ನು ಮುಖಾಮುಖಿಯಾಗಲು ಸಾಧ್ಯವೇ ಇಲ್ಲ.

ಇಂದು ಕೃಷಿ ವಲಯವೇ ಸಂಪೂರ್ಣವಾಗಿ ಸೋತುಹೋಗಿರುವ, ದಿನನಿತ್ಯ ಆತ್ಮಹತ್ಯೆ ಅಥವಾ ನಗರದ ವಲಸೆಯಲ್ಲಿ ಸಿಲುಕಿ ನರಳುತ್ತಿರುವ ರೈತನ ಪರವಾಗಿ ವೈಜ್ಞಾನಿಕವಾಗಿ ಅಧ್ಯಯನ ಮಾಡದ, ದೂರಗಾಮಿ ಯೋಜನೆಗಳನ್ನು ರೂಪಿಸಲು ಸಹ ನಿರಾಕರಿಸುವ ಈ ಮೋದಿ ಸರ್ಕಾರ ಕೇವಲ ಪರಿಹಾರ, ಪುನರ್ವಸತಿ ಕುರಿತಾಗಿ ಮಾತನಾಡುತ್ತಿರುವುದು ಈ ಬಿಜೆಪಿ ಪಕ್ಷದ ದುರಹಂಕಾರ, ದರ್ಪ ಮತ್ತು ಬೌದ್ಧಿಕ ಭ್ರಷ್ಟತೆ ರೈತರಿಗೆ ಉರುಳಾಗುತ್ತಿರುವುದರ ಸಂಕೇತ.

2013ರ ಭೂಸ್ವಾಧೀನ ಮಸೂದೆಯ ಮತ್ತೊಂದು ಪ್ರಮುಖ ಅಂಶವೆಂದರೆ ಸ್ವಾಧೀನ ಪಡೆಸಿಕೊಂಡ ಭೂಮಿಯನ್ನು ನಿರ್ದಿಷ್ಠ ಅವಧಿಯೊಳಗೆ (5 ವರ್ಷ) ಸಂಬಂಧಪಟ್ಟ ಯೋಜನೆಯನ್ನು ಅನುಷ್ಠಾನಗೊಳಿಸದಿದ್ದರೆ ಆ ಭೂಮಿಯು ಮರಳಿ ಅದರ ಮಾಲೀಕನಿಗೆ ಅಥವಾ ಲೋಕಲ್ ಬ್ಯಾಂಕ್‌ಗೆ ಮರಳಿಸಬೇಕು ಮತ್ತು ಸಂಬಂಧಿತ ಅಧಿಕಾರಿಗಳು ಹಾಗೂ ಯೋಜನೆಯ ಅನುಷ್ಠಾನದ ಜವಬ್ದಾರಿ ಹೊತ್ತಿರುವ ಕಂಪನಿಗಳ ವಿರುದ್ಧ ತನಿಖೆಯನ್ನು ನಡೆಸಬೇಕು.

ಆದರೆ ಮೋದಿಯ 2014ರ ತಿದ್ದುಪಡಿ ಮಸೂದೆಯ ಅನುಸಾರ 5 ವರ್ಷಗಳ ಒಳಗೆ ಯೋಜನೆ ಪೂರ್ಣಗೊಳ್ಳದಿದ್ದರೆ ಭೂಮಿಯನ್ನು ಅದರ ಒಡೆಯನಿಗೆ ಮರಳಿಸುವ ಅಗತ್ಯವಿಲ್ಲ ಮತ್ತು ಸಂಬಂಧಿತ ಅಧಿಕಾರಿಗಳು ಹಾಗೂ ಯೋಜನೆಯ ಮಾಲೀಕರ ವಿರುದ್ಧ ತನಿಖೆಯನ್ನು ನಡೆಸಲು ಸರ್ಕಾರದ ಅನುಮತಿ ಪಡೆಯಬೇಕು. 2014ರ ಈ ತಿದ್ದುಪಡಿ ಮರಳಿ 1894ರ ಡ್ರಕೋನಿಯನ್ ಮಸೂದೆಗೆ ಮರಳುತ್ತದೆ. ಬ್ರಿಟೀಷ್ ಕಾಲದ ಕಲೋನಿಯಲ್ ಸಂದರ್ಭದ ದೌರ್ಜನ್ಯವನ್ನು ಮರಳಿ ಜಾರಿಗೊಳಿಸಲು ಮುಂದಾಗಿದೆ ಮೋದಿ ಸರ್ಕಾರ. ಆದರೆ ಇದರ ಒಳ ಹುನ್ನಾರವೇನೆಂದರೆ ಇಲ್ಲಿ ಒಂದು ವೇಳೆ ಯೋಜನೆ ಅನುಷ್ಠಾನಗೊಳ್ಳದಿದ್ದರೆ ಸಂಬಂಧಪಟ್ಟ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತದೆ.

2013 ಭೂಸ್ವಾಧೀನ ಮಸೂದೆಯ ಸೆಕ್ಷನ್ 105 ರ ಅಡಿಯಲ್ಲಿ ಬರುವ 13 ಕೇಂದ್ರ ಸರ್ಕಾರ ಆಕ್ಟ್‌ಗಳಿಗೆ ಐಂಖಖ, 2013 ಮಸೂದೆ ಅನ್ವಯವಾಗುವುದಿಲ್ಲ.( ಅವು – The Coal Bearing Areas Acquisition and Development Act 1957, the National Highways Act 1956, Land Acquisition (Mines) Act 1885,   Atomic Energy Act 1962, the Indian Tramways Act 1886, the Railways Act 1989, the Ancient Monuments and Archaeological Sites and Remains Act 1958, the Petroleum and Minerals Pipelines (Acquisition of Right of User in Land) Act 1962 and the Damodar Valley Corporation Act 1948. The Electricity Act 2003, Requisitioning and Acquisition of Immovable Property Act 1952, the Resettlement of Displaced Persons (Land Acquisition) Act 1948 and the Metro Railways (Construction of Works) Act 1978.)

ಡಿಸೆಂಬರ್ 2014ರ ಒಳಗೆ ಈ 13 ಆಕ್ಟ್‌ಗಳು ತಿದ್ದುಪಡಿಗೊಳ್ಳಬೇಕು, ನಂತರವಷ್ಟೇ ಹೊಸ ಭೂಸ್ವಾಧೀನ ಮಸೂದೆಯ ಪರಿಹಾರ, ಪುನರ್ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿಕ್ಕೆ ಸಾಧ್ಯವಾಗುತ್ತದೆ. ಇದನ್ನು ಉದಾಹರಿಸಿ ತನ್ನ 2014ರ ಭೂಸ್ವಾಧೀನ ಮಸೂದೆಯ ಸುಗ್ರೀವಾಜ್ಞೆಯನ್ನು ಮೋದಿ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.

ಆದರೆ 2013 ಭೂಸ್ವಾಧೀನ ಮಸೂದೆ ಸೆಕ್ಷನ್ 105 (4) ರ ತಿದ್ದುಪಡಿಯು “ಸೆಕ್ಷನ್ 105 (3) ಅಡಿಯಲ್ಲಿ ಭೂಸ್ವಾಧೀನಕ್ಕಾಗಿ ನೋಟಿಫಿಕೇಶನ್ ಅನ್ನು ಮಂಡಿಸಿದ ನಂತರ ಅದನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಬೇಕು. ಸಂತ್ತಿನ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಇದು ಚರ್ಚೆಗೆ ಬರಬೇಕು. ಎರಡೂ ಸದನಗಳಲ್ಲಿ ಬಹುಮತದಲ್ಲಿ ಈ ನೋಟಿಫಿಕೇಶನ್ ಅನ್ನು ಅನುಮೋದನೆ ಮಾಡಲು ಒಪ್ಪದೇ ಇದ್ದ ಪಕ್ಷದಲ್ಲಿ ಈ ನೋಟಿಫಿಕೇಶನ್ ಅನ್ನು ಜಾರಿಗೊಳಿಸಲು ಅವಕಾಶವಿಲ್ಲ. ಸೂಕ್ತ ತಿದ್ದುಪಡಿಯ ನಂತರ ಮತ್ತೊಮ್ಮೆ ಬಹುಮತದ ಅನುಮೋದನೆ ಪಡೆದುಕೊಂಡ ಬಳಿಕವಷ್ಟೇ ಈ ನೋಟಿಫಿಕೇಶನ್ ಅನ್ನು ಜಾರಿಗೊಳಿಸಬಹುದು” ಎಂದು ಸ್ಪಷ್ಟವಾಗಿ ವಿವರಿಸುತ್ತದೆ. ಹೀಗಾಗಿ LARR, 2013 ಮಸೂದೆಯ ಸೆಕ್ಷನ್ 105ರ ಪರಿಣಾಮಗಳು ಜನರ ಹಿತಾಸಕ್ತಿಗೆ ಮಾರಕವಾಗಿಲ್ಲವೆಂದೇ
ಹೇಳಬೇಕು

ಕಾನೂನು ಮತ್ತು ಬಡತನದ ಹಿನ್ನಲೆಯಲ್ಲಿ ಆದಿವಾಸಿ ಸಮುದಾಯಗಳ ಸಾಮಾಜಿಕ-ಆರ್ಥಿಕತೆಯ ಕುರಿತಾಗಿ ಅಧ್ಯಯನ ಮಾಡುತ್ತಿರುವ ಉಷಾ ರಾಮನಾಥನ್ ಅವರು “ಹಿಂದಿನ ಮನಮೋಹನ್ ಸಿಂಗ್ ಸರ್ಕಾರದಂತೆಯೇ ಈಗಿನ ನರೇಂದ್ರ ಮೋದಿ ಸರ್ಕಾರವೂ ಕಾಡು, ನೀರು, ಗಾಳಿ ಮತ್ತು ಬುಡಕಟ್ಟು ಸಮುದಾಯಗಳ ರಕ್ಷಣೆಗಳನ್ನು ತನ್ನ ಆರ್ಥಿಕ ಯೋಜನೆಗಳು ಮತ್ತು ಪ್ಲಾನ್‌ಗಳ ಮೂಲಕವೇ ಅರ್ಥೈಸುತ್ತದೆ. ಈ ಪ್ರಕ್ರಿಯಯಲ್ಲಿ ಬುಡಕಟ್ಟು ಸಮುದಾಯಗಳ ಬದುಕು ಮತ್ತು ಪರಿಸರದ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸುತ್ತದೆ. ತನ್ನ ಆರ್ಥಿಕ ಯೋಜನೆಗಳ ಅನುಷ್ಠಾನಕ್ಕಾಗಿ ಸುಗ್ರೀವಾಜ್ಞೆಯನ್ನು ಬಳಸಿಕೊಳ್ಳುತ್ತದೆ. ಉದಾಹರಣೆಗೆ Forest Rights Act (FRA) of 2006, ಅನುಸಾರ ಯಾವುದೇ ಬಗೆಯ ಯೋಜನೆಗಳಿಗೆ ಪೂರ್ವಭಾವಿಯಾಗಿ ಅರಣ್ಯ ಸಂರಕ್ಷಣೆಯ ನಿಯಮಗಳು ಮತ್ತು ಅದರ ಅವಲಂಬಿತರ ಹಕ್ಕುಗಳು ಉಲ್ಲಂಘನೆ ಆಗಬಾರದು. ಒಮ್ಮೆ ಆ ಹಕ್ಕುಗಳನ್ನು ಮಾನ್ಯ ಮಾಡಿ ಸೂಕ್ತ ನ್ಯಾಯ ಒದಗಿಸಿದ ನಂತರವಷ್ಟೇ ಯೋಜನೆಗಳ ಕುರಿತಾಗಿ ಚರ್ಚಿಸಬಹುದು. ಆದರೆ ಹಿಂದಿನ ಯುಪಿಎ ಸರ್ಕಾರ 2013ರಲ್ಲಿ ನೇಮಿಸಿದ ಕ್ಯಾಬಿನೆಟ್ ಕಮಿಟಿಯು ತನ್ನ ವರದಿಯಲ್ಲಿ 1000 ಕೋಟಿ ಅಥವಾ ಅದಕ್ಕಿಂತಲೂ ಅಧಿಕ ಪ್ರಮಾಣದ ಯೋಜನೆಗಳಿಗೆ ಯಾವುದೇ ಬಗೆಯ ಅರಣ್ಯ ಕಾನೂನುಗಳು, ಪರಿಸರ ರಕ್ಷಣೆಯ ಸಂಬಂದಿತ ಕಾನೂನುಗಳು, ವಾಯು ಮಾಲಿನ್ಯ ಕುರಿತಾದ ಕಾನೂನುಗಳು ಅನ್ಯವಾಗುವುದಿಲ್ಲ ಎಂದು ನಿರ್ಣಯ ನೀಡಿದೆ. ಇನ್ನೂ ಒಂದು ಹೆಜ್ಜೆ ಮುಂದುವರೆದ ಮೋದಿ ಸರ್ಕಾರ ಈ ಕಾನೂನುಗಳನ್ನೇ ನಿಷ್ಕ್ರಿಯಗೊಳಿಸಿ ಸರ್ಕಾರದ ತೀರ್ಮಾನವೇ ಅಂತಿಮ ಎಂದು ಸಾಧಿಸಲು ಹೊರಟಿದೆ. ಅರಣ್ಯಗಳ ವಿಷಯಕ್ಕೆ ಬಂದರೆ ಪರಿಶಿಷ್ಟ ವರ್ಗಗಳ ಬುಡಕಟ್ಟು ಸಮುದಾಯಗಳು ಅಧಿಕ ಜನಸಂಖ್ಯೆಯಲ್ಲಿರುವ 5ನೇ ಶೆಡ್ಯೂಲ್‌ನ ವಲಯಗಳಲ್ಲಿ ಭೂ ಹಸ್ತಾಂತರ, ambani-modiಪರಭಾರೆಗೆ ಸಂಬಂಧಪಟ್ಟಂತೆ ಬಹಳಷ್ಟು ನಿರ್ಬಂಧನೆಗಳಿವೆ ಮತ್ತು ಆದಿವಾಸಿ ಸಮುದಾಯಗಳು ಮತ್ತು ಕಾಡಿನೊಂದಿಗಿನ ಅವರ ಭಾವನಾತ್ಮಕ, ಆರ್ಥಿಕ ಸಂಬಂಧಗಳನ್ನು ರಕ್ಷಿಸುವ ವಿಷಯದಲ್ಲಿ ಆಯಾ ರಾಜ್ಯಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಆದರೆ ಈ ನಿಯಮಗಳು ಮತ್ತು ನಿರ್ಬಂಧನೆಗಳು ಈ ಅಭಿವೃದ್ಧಿಯ ಹೆಸರಿನ ಅನೇಕ ಯೋಜನೆಗಳಿಗೆ ಅಡ್ಡಗಾಲಾಗಿರುವುದರಿಂದ ಮನಮೋಹನ್ ಸಿಂಗ್ ಸರ್ಕಾರವು Forest Rights’ Act and Provisions of the Panchayats (Extension to the Scheduled Areas) Act (PESA) -1996ಗೆ ತಿದ್ದುಪಡಿ ತಂದು ರಸ್ತೆ, ಕಾಲುವೆ, ಹೈವೇ, ಬ್ರಾಡ್‌ಬಾಂಡ್, ವಿದ್ಯುತ್‌ಶಕ್ತಿ ಇತ್ಯಾದಿಗಳಂತಹ ಯೋಜನೆಗಳಿಗೆ ಈ ಮೇಲಿನ ಕಾಯ್ದೆಯಿಂದ ವಿನಾಯಿತಿ ಕೊಡಲಾಗಿದೆ. ಆದರೆ ಈಗಿನ ಮೋದಿ ಸರ್ಕಾರ ಪ್ರಜಾಪ್ರಭುತ್ವದ ವಿರೋಧಿಯಂತೆ ವರ್ತಿಸುತ್ತ ಈ ಯೋಜನೆಗಳಿಂದ ಸಂತ್ರಸ್ಥರಾಗುವ ಆದಿವಾಸಿ, ಬುಡಕಟ್ಟು ಸಮುದಾಯಗಳೊಂದಿಗೆ ಸಮಾಲೋಚಿಸುವ ಸಹನೆಯನ್ನು ಪ್ರದರ್ಶಿಸುತ್ತಿಲ್ಲ. ಇಲ್ಲಿ ನನ್ನ ಮೂಲಭೂತ ಪ್ರಶ್ನೆಯೆಂದರೆ ರಾಜ್ಯವು ಭೂಮಾಲೀಕನೇ? ಟ್ರಸ್ಟಿಯೇ?ಯಜಮಾನನೇ? ಕಾನೂನನ್ನು ಮೀರಿದ ಸಂಸ್ಥೆಯೇ? ಇಂದಿನ ಮೋದಿ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ದೊರೆಯದಿದ್ದರೂ ಅದನ್ನು ಸುಗ್ರೀವಾಜ್ಞೆಯ ಮೂಲಕ ಈ 2014ರ ಭೂ ಸ್ವಾದೀನ ಮಸೂದೆಯನ್ನು ತರಲು ಹೊರಟಿದೆ. ಆದರೆ 1986ರ ಡಿ.ಸಿ. ವಾದ್ವ ಕೇಸಿನಲ್ಲಿ ಸುಪ್ರೀಂ ಕೋರ್ಟ ಏಕಪಕ್ಷೀಯವಾಗಿ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸುವುದನ್ನು ವಂಚನೆ ಮತ್ತು ಮೋಸ (ಜಿಡಿಚಿuಜ) ಮತ್ತು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದೆ” ಎಂದು ವಿವರಿಸಿದ್ದಾರೆ.

’ಅಚ್ಛೆ ದಿನ್’, ’ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎನ್ನುವ ಬೋಗಸ್ ಸ್ಲೋಗನ್‌ಗಳನ್ನು ಮುಂದಿಟ್ಟುಕೊಂಡು ಭಾರತದ ಯುವ ಜನತೆಯನ್ನು ಮೋಸ ಮಾಡಿದ್ದ ನರೇಂದ್ರ ಮೋದಿಯ ಸರ್ವಾಧಿಕಾರಿ ಮುಖ ಇಂದು ಹಂತ ಹಂತವಾಗಿ ಬಯಲಾಗುತ್ತಿದೆ. ಕಾರ್ಪೋರೇಟ್ ಶಕ್ತಿಗಳಿಗೆ, ಬಂಡವಾಳ ಶಾಹಿಗಳಿಗೆ “ಅಚ್ಚೆ ದಿನ್” ತಂದು ಕೊಡಲು ಈ 56 ಇಂಚಿನ ಎದೆಯ ಮೋದಿ ಇಂಡಿಯಾ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕೊಲೆ ಮಾಡಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *