Monthly Archives: June 2015

ಬಾಡಿಗೆ ಮನೆ ಖಾಲಿ ಇದೆ, ಆದರೆ ಅದು ‘ಎಲ್ಲರಿಗಲ್ಲ’!!

– ಜೀವಿ.

ಮನೆ ಖಾಲಿ ಇದೆ ಎಂಬ ಬೋರ್ಡ್ ಬೀದಿ ಬೀದಿಗಳಲ್ಲಿ ನೇತಾಡುತ್ತಿವೆ. ಆದರೆ ಆದರಲ್ಲಿ ಬಹುತೇಕ ಮನೆಗಳಲ್ಲಿ ವಾಸಿಸಲು ದಲಿತರು ಅನರ್ಹರು!

ಹೌದು, ಇದು ಕಟುಸತ್ಯ. ಆದರೆ ಸುಳ್ಳು, ಈ ಪರಿಸ್ಥಿತಿ ಈಗ ಇಲ್ಲ ಎಂದು ವಾದಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ನಾನೊಬ್ಬ ದಲಿತ ಎಂದು ಹೇಳಿಕೊಂಡು ಬಾಡಿಗೆ ಮನೆ ಪಡೆಯದು ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗೇ ಗೊತ್ತು. ’ಎಷ್ಟೇ ಒಳ್ಳೆಯವರಾದರೂ ಹೊಲೆ-ಮಾದಿಗರಿಗೆ ಮನೆ ಕೊಡುವುದಿಲ್ಲ’ ಎಂದು ಕಡ್ಡಿ ತುಂಡಾದಂತೆ ಮಾಲೀಕರು ಹೇಳಿದಾಗ ಕಣ್ಣಲ್ಲಿ ನೀರು ತುಂಬಿಕೊಂಡರೂ, ಅವರಿಗೆ ಗೊತ್ತಾಗದಂತೆ ತಲೆ ತಗ್ಗಿಸಿ ವಾಪಸ್ ಬರದೆ ಬೇರೆ ದಾರಿ ಇಲ್ಲ.

ಸ್ವತಃ ನಾನು ಕಂಡು ಅನುಭವಿಸಿದ ಉದಾಹರಣೆ ಇಲ್ಲಿದೆ. ನಾನಾಗ ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ. ಹಾಸ್ಟೆಲ್‌ನಲ್ಲಿ ಹಾಸ್ಟೆಲ್ ಜೀವನದ ಏಳನೇ ವರ್ಷ. ನನ್ನ ಭಾವ ಸರ್ಕಾರಿ ಕಾಲೇಜಿನಲ್ಲಿ ಅಟೆಂಡರ್ ಆಗಿದ್ದಾರೆ. ಅಕ್ಕ ಮತ್ತು ಮೂರು ಮಕ್ಕಳು ಸೇರಿ ಐದು ಮಂದಿಯ ಕುಟುಂಬ. ರಿಂಗ್ ರಸ್ತೆ ಬಳಿಯ ಮನೆಯೊಂದರಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆ ಮನೆಯ ಮಾಲೀಕರು OLYMPUS DIGITAL CAMERAಕೂಡ ದಲಿತರೇ ಆಗಿದ್ದರು. ಅಡುಗೆ ಮನೆ, ಬಚ್ಚಲು ಮತ್ತು ಟಾಯ್ಲೆಟ್ ಅಟ್ಯಾಚ್ ಇರುವ ಹಾಗು ಒಂದು ಬೆಡ್ ರೂಮ್ ಕೂಡ ಇರದ ಸಣ್ಣ ಮನೆ. ಮೂರ‌್ನಾಲ್ಕು ವರ್ಷದ ಅದೇ ಮನೆಯಲ್ಲಿ ಜೀವನ ಸಾಗಿತ್ತು. ಬಾಡಿಗೆ ಹೆಚ್ಚಳದ ವಿಚಾರಕ್ಕೆ ಮಾಲೀಕರ ನಡುವೆ ಸಣ್ಣದೊಂದು ಮನಸ್ತಾಪ ಏರ್ಪಟ್ಟಿತ್ತು.

ಹೆಚ್ಚು ಕಡಿಮೆ ನಾಲ್ಕು ವರ್ಷ ಆಗಿದ್ದರಿಂದ ಬೇರೆ ಮನೆ ಹುಡುಕುವ ಆಲೋಚನೆಯನ್ನು ಭಾವ ಮಾಡಿದ್ದರು. ಹುಡುಕಾಟ ಮುಂದುವರೆದಿತ್ತು, ಎಷ್ಟೋ ದಿನಗಳ ನಂತರ ಭಾವನ ಸ್ನೇಹಿತರೊಬ್ಬರು ಪಕ್ಕದ ಬಡಾವಣೆಯಲ್ಲಿ ಮನೆಯೊಂದನ್ನು ಹುಡುಕಿಕೊಟ್ಟರು. ನಾಲ್ಕು ಮನೆಗಳು ಸಾಲಾಗಿರುವ ಹೆಂಚಿನ ಮನೆ, ಅದರಲ್ಲಿ ಒಂದು ಮಾತ್ರ ಖಾಲಿ ಇತ್ತು. ಉಳಿದ ಮೂರು ಮನೆ ಭರ್ತಿಯಾಗಿದ್ದವು. ಒಂದರಲ್ಲಿ ಮನೆ ಮಾಲೀಕರು ಕೂಡ ವಾಸವಿದ್ದರು.

ಅಕ್ಕಳನ್ನು ಕರೆದೊಯ್ದು ಮನೆ ನೋಡಿಕೊಂಡ ಬಂದ ಭಾವ, ಒಪ್ಪಂದದ ಮಾತುಕತೆಗೆ ತಮ್ಮ ಸ್ನೇಹಿತನೊಂದಿಗೆ ತೆರಳಿದರು.
’ಜಾತಿ ವಿಚಾರ ಹೇಳಿದ್ದೀಯ’ ಎಂದು ಭಾವ ತನ್ನ ಸ್ನೇಹಿತನ ಕಿವಿಯಲ್ಲಿ ಕೇಳಿದರು. ’ಓನರ್ ತುಂಬಾ ಒಳ್ಳೆಯವರು ನನಗೆ ಸಾಕಷ್ಟು ವರ್ಷದಿಂದ ಗೊತ್ತಿರುವವವರು. ಜಾತಿಬೇಧ ಮಾಡುವ ಜನ ಅಲ್ಲ ನೀನು ಸುಮ್ಮನಿರು’ ಎಂದು ಭಾವನ ಸ್ನೇಹಿತ ಹೇಳಿದವರೇ ಮಾಸಿಕ ಬಾಡಿಗೆ ಫಿಕ್ಸ್ ಮಾಡಿಸಿ ಅಡ್ವಾನ್ಸ್ ಕೊಡಿಸಿದರು.

ನಂತರದ ಭಾನುವಾರ ಮನೆ ಶಿಫ್ಟ್ ಮಾಡುವ ದಿನ ನಿಗದಿಯಾಯಿತು. ಎರಡು ದಿನ ಮುನ್ನವೇ ಗಂಟು ಮೂಟೆ ಕಟ್ಟುವ ಕೆಲಸದಲ್ಲಿ ಅಕ್ಕ ನಿರತಳಾಗಿದ್ದಳು. ಭಾನುವಾರ ಬಂದೇ ಬಿಟ್ಟಿತು, ನಾನು ಕೂಡ ಮೂವರು ಸ್ನೇಹಿತರೊಂದಿಗೆ ಹೋಗಿದ್ದೆ.
ಸಾಮಾನು-ಸರಂಜಾಮುಗಳನ್ನು ಮೂಟೆ ಕಟ್ಟಿ ಗಾಡಿಯೊಂದರಲ್ಲಿ ತುಂಬಿಕೊಂಡು ಹೊಸ ಮನೆ ತಲುಪಿದೆವು. ಅಕ್ಕ ಸಡಗರದಿಂದ ಹೊಸ ಮನೆಯಲ್ಲಿ ಹಾಲು ಉಕ್ಕಿಸುವ ಪೂಜೆ ಮಾಡಲು ಸಜ್ಜಾದಳು. ನಾಲ್ಕು ಮನೆಗೆ ಒಂದೇ ಸಂಪಿನಿಂದ(ಟ್ಯಾಂಕ್) ನೀರು ಪಡೆಯಬೇಕಿತ್ತು. ನೀರು ತಂದು ಮನೆ ತೊಳೆದು, ಸಿಂಗಾರ ಮಾಡುವ ಕೆಲಸದಲ್ಲಿ ಅಕ್ಕ ಮತ್ತು ನಾನು ನಿರತರಾದೆವು.
ನೀರು ತರಲು ಹೋದ ಸಂದರ್ಭದಲ್ಲೇ ಅಕ್ಕನಿಗೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಹಿಳೆ ಪರಿಚ ಮಾಡಿಕೊಂಡರು. ’ಇದಕ್ಕೂ ಮೊದಲು ಎಲ್ಲಿ ವಾಸಿವಿದ್ದಿರಿ?, ನಿಮ್ಮ ಎಜಮಾನ್ರು ಕೆಲಸ ಏನು? ಎಂದು ಪ್ರಶ್ನೆ ಮಾಡಿದ ಆ ಮಹಿಳೆ, ಕೊನೆಯದಾಗಿ ಜಾತಿ ಕೇಳುವುದನ್ನು ಮರೆಯಲಿಲ್ಲ. ಎಲ್ಲವನ್ನು ನೇರವಾಗಿ ಉತ್ತರಿಸಿದ ಅಕ್ಕ, ಜಾತಿ ವಿಷಯ ಬಂದಾಗ ಕೊಂಚ ಮುಜುಗರದಿಂದ ಸಣ್ಣ ಧ್ವನಿಯಲ್ಲಿ ’ಎಸ್ಸಿ’ ಎಂದು ಉತ್ತರ ಕೊಟ್ಟಳು.

ಮನೆಯೊಳಗೆ ಬಂದೊಡನೆ ಭಾವನ ಬಳಿ ವಿಷಯ ಹೇಳಿದಳು. ’ನೀನೇನು ಸುಳ್ಳು ಹೇಳಿಲ್ಲ ತಾನೇ, ಒಂದು ಬಾರಿ ಜಾತಿ ಸುಳ್ಳು ಹೇಳಿದರೆ, ಅದನ್ನು ಮರೆಮಾಚಲು ನೂರು ಸುಳ್ಳು ಹೇಳಬೇಕಾಗುತ್ತದೆ’ ಎಂದು ಭಾವ ಎಚ್ಚರಿಸಿದರು. ಅದಕ್ಕೆ ಅಕ್ಕ, ಇಲ್ಲ ನಾನು ನಿಜ ಹೇಳಿದ್ದೀನಿ ಎಂದಳು.

ಅಕ್ಕ ಸ್ಟವ್ ಹಚ್ಚಿ, ಹಾಲು ಉಕ್ಕಿಸಿ ಸಕ್ಕರೆ ಬೆರೆಸಿ ಎಲ್ಲರಿಗು ಕೊಟ್ಟಳು. ಹಾಲು ಕುಡಿದ ನಂತರ ವಸ್ತುಗಳನ್ನು ಜೋಡಿಸಲು ನಾನು ಮrentತ್ತು ನನ್ನ ಸ್ನೇಹಿತರು ತಯಾರಾದೆವು. ಅಷ್ಟರಲ್ಲಿ ಮನೆಯ ಮಾಲೀಕರ ಪತ್ನಿ ಒಳ ಬಂದಳು.

ಸ್ವಲ್ಪ ತಡಿಯಪ್ಪ, ಚೀಲಗಳನ್ನು ಬಿಚ್ಚಬೇಡ ಎಂದು ಆಜ್ಞೆ ಮಾಡಿದರು. ನಾನು ಭಾವನ ಮುಖ ನೋಡಿದೆ. ’ಯಾಕೆ ಮೇಡಂ, ಏನಾಯ್ತು’ ಎಂದು ಭಾವ ಗೌರವದಿಂದಲೇ ಪ್ರಶ್ನೆ ಮಾಡಿದರು. ಅದಕ್ಕೆ ದರ್ಪದಿಂದ ಉತ್ತರ ನೀಡಿದ ಮನೆಯ ಮಾಲೀಕನ ಪತ್ನಿ, ’ನಿಮಗೆ ಈ ಮನೆ ಕೊಡಲ್ಲ, ಬೇರೆ ಮನೆ ನೋಡ್ಕೊಳ್ಳಿ, ನೀವು ಹೊಲೆರಂತೆ’ ಎಂದು ಮರು ಪ್ರಶ್ನೆ ಮಾಡಿದರು.
ಹೌದು, ಎಂದು ಉತ್ತರ ನೀಡಿ ಸಮಾಜಾಯಿಷಿ ನೀಡಲು ಭಾವ ಪ್ರಯತ್ನ ಮಾಡಿದರು. ಅದಕ್ಕೆ ಅವಕಾಶ ನೀಡದ ಆಕೆ ’ಅಲ್ಲರಿ ಮನೆ ಬಾಡಿಗೆಗೆ ಪಡೆಯುವ ಮುನ್ನ ಜಾತಿ ವಿಷಯ ಹೇಳಬೇಕು ಅಂತ ಗೊತ್ತಾಗಲ್ವ?, ಸುಳ್ಳು ಹೇಳಿಕೊಂಡು ಮನೆ ಸೇರಿಕೊಳ್ತೀರಲ್ಲ, ನಾಚಿಕೆ ಆಗಲ್ವಾ? ಎಂದು ಗಧರಿಸಿದರು. ಮಾಡಬಾರದ ಅಪರಾಧ ಮಾಡಿಬಿಟ್ಟಿದ್ದೇವೆ ಎಂಬಂತೆ ಬಾಯಿಗೆ ಬಂದಂತೆ ನಿಂದಿಸಿಬಿಟ್ಟಳು.

ಮನೆ ಮಾಲೀಕನ ಪತ್ನಿಯ ಈ ಆಕ್ರೋಶದಿಂದ ತತ್ತಿಸಿಸಿ ಹೋದ ಭಾವ ಅಪರಾಧಿಯಂತೆ ತಲೆ ತಗ್ಗಿಸಿದರು. ಅಕ್ಕನ ಕಣ್ಣಲ್ಲಿ ಅದಾಗಲೇ ನೀರು ಧಾರಾಕಾರವಾಗಿ ಹರಿದಿತ್ತು.
’ಮೊದಲೇ ಜಾತಿ ವಿಷಯ ಹೇಳಬೇಕು ತಾನೇ? ಈಗ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಬೇರೆ ಮನೆ ನೋಡಿಕೊಳ್ಳಿ, ಇಲ್ಲಿ ಜಾಗ ಇಲ್ಲ’ ಎಂದು ಮುಲಾಜಿಲ್ಲದೆ ಹೇಳಿ ಹೋದಳು. ಅಕ್ಕ ಬಿಕ್ಕಿ-ಬಿಕ್ಕಿ ಅಳಲಾರಂಭಿಸಿದಳು, ಆಗ ತಾನೆ ಹಾಲು ಕುಡಿದು ನಿಂತಿದ್ದ ನಾನು ಹಾಗು ನನ್ನ ಸ್ನೇಹಿತರ ಕಣ್ಣುಗಳಲ್ಲೂ ನೀರು ತುಂಬಿಕೊಂಡವು.

ಮುಂದೆ ಏನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಅಷ್ಟೆರಲ್ಲಿ ಆ ಮಹಿಳೆ ಮತ್ತೆ ಬಂದವಳೆ ಅಡ್ವಾನ್ಸ್ ಹಣ ವಾಪಸ್ ಕೊಟ್ಟಳು. ’ಮೇಡಂ ಯಜಮಾನ್ರು ಮನೆಲಿ ಇಲ್ವಾ’ ಎಂದು ಭಾವ ಕೇಳಿದರು, ’ಇದ್ದಾರೆ ಅವರೇ ಅಡ್ವಾನ್ಸ್ ವಾಪಸ್ ಕೊಟ್ಟಿರೊದು. ಅವರಿಗೆ ಹೇಳಲು ಮುಜುಗರವಂತೆ, ಅದಕ್ಕೆ ನಾನೇ ಹೇಳ್ತಿದ್ದೀನಿ. ಅವರ ಒಪ್ಪಿದರೂ, ನಾನು ಒಪ್ಪುವುದಿಲ್ಲ. ನಾಲ್ಕು ಮನೆಗೆ ಕುಡಿಯುವ ನೀರಿಗೆ ಒಂದೇ ಒಂದು ಟ್ಯಾಂಕ್ ಇದೆ. ನಿಮ್ಮ ಮನೆ ಬಿಂದಿಗೆ ಹಾಕಿ ನೀರು ಮಗೆದುಕೊಂಡ ಟ್ಯಾಂಕ್‌ನಲ್ಲೇ ನಾವೂ ನೀರು ತಗೊಳೊಕೆ ಆಗುತ್ತಾ?’ ಎಂದು ಪ್ರಶ್ನೆ ಮಾಡಿದರು. ಬಾಡಿಗೆ ಇರುವವರು ಕೂಡ ಒಪ್ಪುವುದಿಲ್ಲ. ಈಗಲೇ ಖಾಲಿ ಮಾಡಿ ಎಂದುಬಿಟ್ಟಳು.’ ಇದರಿಂದಾಗಿ ಮನೆಯ ಮಾಲೀಕರೊಂದಿಗೆ ಮಾತನಾಡಬಹುದು ಎಂದುಕೊಂಡಿದ್ದ ಭಾವನ ಭರವಸೆ ಇಂಗಿ ಹೋಯಿತು. ’ಒಂದು ವಾರ ಕಾಲಾವಕಾಶ ಕೊಡಿ ಬೇರೆ ಮನೆ ನೋಡಿಕೊಳ್ಳುತ್ತೇವೆ’ ಎಂದು ಭಾವ ಅಂಗಲಾಚಿದರು. ಆದಕ್ಕೂ ಸಮ್ಮತಿಸದ ಮಹಿಳೆ, ’ಈಗಲೇ ಜಾಗ ಖಾಲಿ ಮಾಡಬೇಕು’ ಎಂದು ಆಜ್ಞೆ ಮಾಡಿಬಿಟ್ಟಳು.

ಅಕ್ಕ ಜೋರಾಗಿಯೇ ಅಳುವುದಕ್ಕೆ ಶುರು ಮಾಡಿದಳು. ಅಳು ಬಂದರೂ ನುಂಗಿಕೊಂಡ ಭಾವ ಮತ್ತು ನಾನು ಸಮಾಧಾನಪಡಿಸಿದೆವು. ಈಗ ಖಾಲಿ ಮಾಡಿಕೊಂಡು ಬಂದಿರುವ ಮನೆಗೆ ಮತ್ತೆ ವಾಪಸ್ ಹೋಗುವುದು ಅಸಾಧ್ಯದ ಮಾತು. ಮುಂದೇನು ಮಾಡಬೇಕು ಎಂಬುದು ತಿಳಿಯಲಿಲ್ಲ. ಓನರ್ ತುಂಬಾ ಒಳ್ಳೆಯವರು ಎಂದು ಹೇಳಿದ್ದ ಸ್ನೇಹಿತನನ್ನು ನೆನೆದು ಭಾವ ಶಪಿಸಿದರು.

ಆ ತನಕ ಸುಮ್ಮನಿದ್ದ ನನ್ನ ಸ್ನೇಹಿತರು, ’ಅಕ್ಕ ಅಳೋದು ನಿಲ್ಲಿಸಿ, ಬೇರೆ ಮನೆ ಹುಡುಕೊಣ’ ಎಂದು ಸಮಾಧಾನ ಮಾಡಿದರು. ಭಾವನದೆ ಒಂದು ಸೈಕಲ್ ಇತ್ತು. ಅದನ್ನು ಹತ್ತಿ ಹಾಸ್ಟೆಲ್‌ಗೆ ಹೋದ ಸ್ನೇಹಿತನೊಬ್ಬ, ನಾಲ್ಕೈದು ಮಂದಿ ಗೆಳೆಯರಿಗೆ ನಡೆದ ವಿಷಯ ತಿಳಿಸಿದ. ಮತ್ತೆ ಐದು ಮಂದಿಯನ್ನು ಹಾಸ್ಟೆಲ್‌ನಿಂದ ಕರೆತಂದ.
ಎಲ್ಲರು ಬೀದಿ-ಬೀದಿ ಸುತ್ತಿ ಮನೆಗಾಗಿ ಹುಡುಕಾಟ ಶುರು ಮಾಡಿದೆವು. ಹೋಗುವ ಮುನ್ನ ಭಾವ ’ಜಾತಿ ವಿಷಯ ಮೊದಲೇ ಹೇಳಬೇಕು’ ಎಂದು ಸೂಚನೆ ನೀಡಿದ್ದರು.

ಸಂಜೆ 5 ಗಂಟೆಯಾದರೂ ಖಾಲಿ ಇರುವ ಒಂದು ಮನೆಯೂ ಸಿಗಲಿಲ್ಲ. ಎಲ್ಲರು ಒಬ್ಬೊಬ್ಬರಾಗಿ ವಾಪಸ್ ಬಂದು ನಿಂತಿವು. ಇನ್ನು ಒಂದಿಬ್ಬರು ಮಾತ್ರ ಬರಬೇಕಿತ್ತು. ಅವರು ಕೂಡ ಪೇಚು ಮೋರೆಯಲ್ಲೇ ಬಂದರು. ಅದರಲ್ಲೊಬ್ಬ ಪಕ್ಕದ ಬೀದಿಯಲ್ಲಿ ಹಾಳು ಮನೆಯಂತಿರುವ ಸಣ್ಣದೊಂದು ಶೆಡ್ ಇದೆ ಎಂದು ಹೇಳಿದ.

ನಾನು ಮತ್ತು ಉಳಿದ ಸ್ನೇಹಿತರು ಹೋಗಿ ನೋಡಿದೆವು. ನಾಲ್ಕೈದು ವರ್ಷದಿಂದ ಆ ಶೆಡ್‌ನಂತ ಮನೆಯಲ್ಲಿ ಯಾರು ವಾಸ ಮಾಡಿರಲಿಲ್ಲ. ಪಾಳು ಬಿದ್ದಂತೆ ಇತ್ತು. ಮನೆ ನೋಡಿದ ಭಾವ, ಬೇರೆ ದಾರಿ ಇಲ್ಲ. ಸದ್ಯಕ್ಕೆ ಇದೇ ಮನೆಯಲ್ಲಿ ಇರೋಣ ಎಂದು ನಿರ್ಧಾರ ಮಾಡಿದರು. ವಿಧಿ ಇಲ್ಲದೆ ಅಕ್ಕ ಕೂಡ ಇಪ್ಪಿಕೊಂಡಳು. ಮೇಲ್ಜಾತಿಯವರ ಕೊಟ್ಟಿಗೆಯಲ್ಲಿ ಉಂಡು-ಮಲಗಿ ಅಭ್ಯಾಸ ಇದ್ದ ಕಾರಣದಿಂದ ಈ ಮನೆಯಲ್ಲಿ ವಾಸ ಮಾಡುವುದು ಅಷ್ಟೇನು ಕಷ್ಟ ಎನ್ನಿಸಲಿಲ್ಲ.

ಓನರ್ ಜೊತೆ ಮಾತನಾಡಿದೆವು, ಯಾವ ಜಾತಿಗಾದ್ರು ಕೊಡುತ್ತೇವೆ. ಆದರೆ, ಆ ಮನೆ ವಾಸ ಮಾಡಲು ಯೋಗ್ಯವಾಗಿಲ್ಲ ಬೇಡ ಎಂದರು. ಆದರೂ ಪರವಾಗಿಲ್ಲ, ಸದ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ ಮನವೊಲಿಸಿದೆವು. ಬೇರೆ ಮನೆ ಸಿಗುವ ತನಕ ಮಾತ್ರ ಇರುತ್ತೇವೆ, ಅವಕಾಶ ಮಾಡಿಕೊಡಿ ಎಂದು ಭಾವ ಮನವಿ ಮಾಡಿದರು.

’ಅಡ್ವಾನ್ಸ್ ಏನು ಬೇಡ, ಈ ಮನೆಯನ್ನು ಬಾಡಿಗೆಗೆ ಕೊಡುವ ಆಲೋಚನೆ ಇರಲಿಲ್ಲ. ಪಾಪ ತೊಂದರೆಲಿ ಇದ್ದೀರಿ ನಿಮಗೆ ಬೇರೆ ಮನೆ ಸಿಗುವ ತನಕ ಇಲ್ಲೇ ಇರಿ, ಒಂದಿಷ್ಟು ಬಾಡಿಗೆ ಅಂತ ಕೊಡಿ ಸಾಕು’ ಎಂದು ಮಾಲೀಕರು ಒಪ್ಪಿಗೆ ಸೂಚಿಸಿದರು. ಬೀದಿಯಲ್ಲಿ ಬಿದ್ದಿದ್ದಾಗ ಮನೆ ಕೊಟ್ಟ ಮಾಲೀಕರಿಗೆ ಎಲ್ಲರು ಕೃತಜ್ಞತೆ ಸಲ್ಲಿಸಿದೆವು. ಬಂದಿದ್ದ ಎಲ್ಲಾ ಸ್ನೇಹಿತರು ಸೇರಿ ಸಾಮಾನು-ಸರಂಜಾಮು ಹೊತ್ತು ತಂದೆವು. ಎಲ್ಲರು ಸೇರಿ ಪುಟ್ಟ ಮನೆಯನ್ನು ಕ್ಲೀನ್ ಮಾಡಿದೆವು. ಅಕ್ಕ ಮತ್ತೊಮ್ಮೆ ಹಾಲು ಉಕ್ಕಿಸುವ ಪೂಜೆ ಮಾಡಿದಳು. ಬಂದಿದ್ದ ಎಲ್ಲ ಸ್ನೇಹಿತರಿಗೂ ಪಾಯಿಸ ಮಾಡಿ ಊಟಕ್ಕೆ ಬಡಿಸಿದಳು.

ಕಷ್ಟದಲ್ಲಿ ಆಶ್ರಯ ನೀಡಿದ ಕಾರಣಕ್ಕೆ ಅದೇ ಮನೆಯಲ್ಲಿ ಸಾಕಷ್ಟು ದಿನ ಜೀವನ ಮಾಡಿದರು. ಈಗ ಮೊದಲೇ ಜಾತಿ ತಿಳಿಸಿ ಬೇರೊಂದು ಮನೆಯಲ್ಲಿ ವಾಸವಿದ್ದಾರೆ. ಮನೆ ಹುಡುಕುವ ಸಂದರ್ಭದಲ್ಲಿ ಆ ದಿನ ನೆನಪಿಗೆ ಬರೆದ ಉಳಿಯುವುದಿಲ್ಲ. ಹಾಗಿಯೇ ಮೊದಲು ಜಾತಿ ತಿಳಿಸಿ ಮಾಲೀಕರು ಒಪ್ಪಿದರೆ ಮಾತ್ರ ಮನೆ ಕೊಡಿ ಎಂದು ಕೇಳುವುದನ್ನು ನಾನು ಮರೆಯುವುದಿಲ್ಲ.

ದಲಿತರಿಗೆ ಮೇಲ್ಜಾತಿಯವರು ಮನೆ ಸಿಗುತ್ತಿಲ್ಲ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುವುದನ್ನೂ ಸಹಿಸದೆ ’ಹಾಗದರೆ ದಲಿತರೆಲ್ಲ ಈಗ ಬೀದಿಯಲ್ಲಿದ್ದಾರಯೇ?’ ಎಂದು ಪ್ರಶ್ನೆ ಕೇಳುವ ಜನ ಇದ್ದಾರೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಎಸ್ಸಿ ಎಂಬ ಪದ ಕೇಳಿದ ಕೂಡಲೇ ಮುಖ ಸಿಂಡರಿಸಿಕೊಂಡು ನಮ್ಮನ್ನು ಅಪರಾಧಿಯಂತೆ ನೋಡುವ ಮನೆ ಮಾಲೀಕರು ಸಾಕಷ್ಟಿದ್ದಾರೆ. ಈಗ್ಗೆ ಆರು ತಿಂಗಳ ಹಿಂದೆ ನಾನು ಬಾಡಿಗೆ ಮನೆ ಬದಲಿಸುವ ಸಂದರ್ಭ ಬಂದಾಗ ಮೊದಲೆ ಜಾತಿ ಹೇಳಿದ ಕಾರಣಕ್ಕೆ ನಾಲ್ಕು ಮನೆಯ ಒಪ್ಪಂದ ಮುರಿದು ಹೋದವು. ಕೊನೆಗೂ ಸ್ವಜಾತಿಯವರದೇ ಮನೆಯಲ್ಲಿ ಬಾಡಿಗೆ ಇದ್ದೇನೆ. ಇದೇ ಕಾರಣಕ್ಕೆ ಹಲವರು ಜಾತಿ ಸುಳ್ಳು ಹೇಳಿಕೊಂಡು ಬಾಡಿಗೆ ಮನೆ ಪಡೆದು ಜೀವನ ನಡೆಸುತ್ತಿದ್ದಾರೆ. ನಿಜ ಜಾತಿ ಗೊತ್ತಾದ ನಂತರ ಮುಜುಗರ ಅನುಭವಿಸುತ್ತಿದ್ದಾರೆ. ಹಾಗಾಗಿ ದಲಿತರು ಬಾಡಿಗೆ ಮನೆ ಪಡೆಯುವುದು ಅಷ್ಟು ಸುಲಭವಲ್ಲ.

ಚಿತ್ರಗಳು: ಸಾಂದರ್ಭಿಕ

ಅಡ್ವಾಣಿಯವರ “ತುರ್ತು ಪರಿಸ್ಥಿತಿ”


– ಶ್ರೀಧರ್ ಪ್ರಭು


ಕೆಲ ದಿನಗಳ ಹಿಂದೆ ಒಂದು ಪುಟ್ಟ ಕಥಾನಕವನ್ನು ಓದುತ್ತಿದ್ದೆ.

ಇಬ್ಬರು ಭಿಕ್ಷುಕರು ವ್ಯಾಟಿಕನ್ ನಗರದ ದೊಡ್ಡ ಚರ್ಚೊಂದರ ಬಳಿ ಭಿಕ್ಷೆಗೆ ಕುಳಿತಿದ್ದರಂತೆ. ಒಬ್ಬನ ಹಿಂದೆ ಕ್ರಿಸ್ತನನ್ನು ಶಿಲುಬೆಗೆ ಏರಿಸಿ ಮೊಳೆ ಹೊಡೆಯುತ್ತಿದ್ದ ಕರುಣಾಮಯ ಚಿತ್ರ, ಇನ್ನೊಬ್ಬನ ಹಿಂದೆ ಒಂದು ಹಿಂದೂ ದೇವರ ಪಟ. ಇಗರ್ಜಿಗೆ ಬಂದ ಭಕ್ತರೆಲ್ಲ ಸಹಜವಾಗಿ ಕ್ರಿಸ್ತನ ಚಿತ್ರವಿರುವ ಭಿಕ್ಷುಕನಿಗೇ ಹಣ ನೀಡುತ್ತಿದ್ದರು. ಇನ್ನೊಬ್ಬ ಭಿಕ್ಷುಕನ ಪಾತ್ರೆಯಲ್ಲಿ ಅಷ್ಟಿಷ್ಟು ಚಿಲ್ಲರೆ ಕಾಸು ಮಾತ್ರ. ಇದನ್ನು ನೋಡಿದ ಭಾರತೀಯ ಪ್ರವಾಸಿ ಒಬ್ಬರು ಹಿಂದೂ ದೇವರ ಪಟ ಹೊಂದಿದ ಭಿಕ್ಷುಕನನ್ನು ಕೇಳಿದರಂತೆ “ಅಲ್ಲಯ್ಯ, ನಿನ್ನನ್ನು ನೋಡಿದರೆ ತೀರ ಮೂರ್ಖನಂತೆ ಕಾಣಿಸುತ್ತಿಲ್ಲ. ನೀನು ಈ ಕ್ರೈಸ್ತ ಧರ್ಮದ ಮುಖ್ಯ ಸ್ಥಾನದಲ್ಲಿ ಕುಳಿತು ಹಿಂದೂ ದೇವರ ಚಿತ್ರ ಹಾಕಿಕೊಂಡು ಕೂತರೆ ಏನು ಸಂಪಾದನೆಯಾದೀತು?” ಭಿಕ್ಷುಕ ನಕ್ಕು ಸುಮ್ಮನಾದನಂತೆ. ನಂತರದಲ್ಲಿ, ಸ್ಥಳೀಯ ಪ್ರವಾಸಿ ಗೈಡ್ ಒಬ್ಬ ಭಾರತೀಯ ಪ್ರವಾಸಿಯನ್ನು ಕಂಡು ನಸು ನಕ್ಕು ಹೇಳಿದನಂತೆ “ಸ್ವಾಮಿ, ಅವರಿಬ್ಬರೂ ಅಣ್ಣ ತಮ್ಮಂದಿರು; ಅವರ ವ್ಯಾಪಾರೀ ತಂತ್ರ ನಿಮಗೆ ಅರ್ಥವಾಗಲಿಲ್ಲ ಎಂದುಕೊಳ್ಳುತ್ತೇನೆ.”

ಅಡ್ವಾಣಿಯವರು ತುರ್ತು ಪರಿಸ್ಥಿತಿ ಮತ್ತೊಮ್ಮೆ ಬಂದೆರಗಲಿರುವ ಬಗ್ಗೆ ಭವಿಷ್ಯ ನುಡಿದಾಗ ಈ ಅಣ್ಣ ತಮ್ಮಂದಿರು ಯಾಕೋ ನೆನಪಾದರು.

ಅಂದ ಹಾಗೆ, ಈ ಭವಿಷ್ಯ ಹೇಳಿದ ಕೆಲವೇ ಗಂಟೆಗಳಲ್ಲಿ ಅಡ್ವಾಣಿಯವರಿಗೆ ಅವರು ಕಲ್ಪಿಸಿಕೊಳ್ಳಲೂ advani-sushma-jaitleyಸಾಧ್ಯವಾಗದ ಕಡೆಗಳಿಂದ ಹೂಗುಚ್ಛಗಳು ಬರತೊಡಗಿವೆ. ಬಹುತೇಕ ಪ್ರಮುಖ ಪತ್ರಿಕೆಗಳ ಸಂಪಾದಕೀಯಗಳು ಅಡ್ವಾಣಿಯವರು ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಳೆದ ದಯನೀಯ ಹದಿನೆಂಟು ತಿಂಗಳುಗಳ ತುರಂಗವಾಸದ ನೆನಪು ಮಾಡಿ ಕೊಟ್ಟಿವೆ. ಅನೇಕ ಬುದ್ಧಿಜೀವಿಗಳು, ಹೇಗೆ ಮೂಲಭೂತವಾಗಿ ಅಡ್ವಾಣಿಯವರು ಒಬ್ಬ ಪ್ರಜಾಪ್ರಭುತ್ವವಾದಿ ಮತ್ತು ಸಂವಿಧಾನದ ಮೂಲಭೂತ ಮೌಲ್ಯಗಳ ಬಗ್ಗೆ ಅತೀವ ಕಾಳಜಿ ಹೊಂದಿದವರು ಎಂಬ ಬಗ್ಗೆ ಅಧಾರ ಸಮೇತವಾಗಿ ತೆರೆದಿಟ್ಟಿದ್ದಾರೆ.

ಮೋದಿಯವರಂಥಯ ಒಬ್ಬ ಮೂಲಭೂತವಾದಿ ಕಟ್ಟರ್ ನಾಯಕನ ಮುಂದೆ ಅಡ್ವಾಣಿಯವರು ಶಿಲುಬೆಗೇರಿದ ದೈವ ಮಾನವನಂತೆ ಕಾಣಿಸತೊಡಗಿದ್ದಾರೆ.

ಅದೇನೇ ಇರಲಿ, ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಅಡ್ವಾಣಿಯವರ ಪಾತ್ರದ ಬಗ್ಗೆ ಚರ್ಚೆಯಾಗಬೇಕಾದ ಸಂದರ್ಭವಂತೂ ಒದಗಿ ಬಂದಿದೆ.

ನವೆಂಬರ್ ೮, ೧೯೨೭ ರಲ್ಲಿ ಕರಾಚಿಯಲ್ಲಿ ಜನಿಸಿದ ಅದ್ವಾನಿಯಯರು ಓದಿದ್ದು ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದ ಸಂತ ಪ್ಯಾಟ್ರಿಕ್ ಶಾಲೆಯಲ್ಲಿ. ೧೯೪೨ ರಲ್ಲಿ ದೇಶದಾದ್ಯಂತ “ಕ್ವಿಟ್ ಇಂಡಿಯ” ಚಳುವಳಿಯ ಸಂದರ್ಭವಿದ್ದಾಗ ಅಡ್ವಾಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸೇರಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಅವರು ಜೈಲು ಸೇರಿದ ಅಥಾವ ಯಾವುದೇ ತೀವ್ರತಮ ಹೋರಾಟ ನಡೆಸಿದ ದಾಖಲೆಗಳೇನೂ ಇದ್ದಂತಿಲ್ಲ. ೧೯೪೩ ರಲ್ಲಿ ಅಹ್ಮದಾಬಾದ್ ಮತ್ತು ನಾಗಪುರಗಳಲ್ಲಿ RSS ನ ಆಫೀಸರ್ಸ್ ಟ್ರೇನಿಂಗ ಕ್ಯಾಂಪ್ (OTC) ತರಬೇತಿ ಮುಗಿಸಿ ಪ್ರಚಾರಕರಾಗಿ ತಮ್ಮ ಸಾರ್ವಜನಿಕ ಜೀವನ ಪ್ರಾರಂಭಿಸಿದರು. ೧೯೪೭ ರ ದೇಶ ವಿಭಜನೆಯ ಸಂದರ್ಭದಲ್ಲಿ ಅಡ್ವಾಣಿ RSS ನ ಕರಾಚಿಯ ನಗರ ಕಾರ್ಯದರ್ಶಿಯಾಗಿದ್ದರು.

ನಂತರದಲ್ಲಿ ೧೯೫೧ ರಲ್ಲಿ ಜನಸಂಘವನ್ನು ಸೇರಿದ ಅಡ್ವಾಣಿ ೧೯೭೩ ರಲ್ಲಿ ಕಾನಪುರದಲ್ಲಿ ನಡೆದ ಜನ ಸಂಘದ ರಾಷ್ಟ್ರೀಯ Advani-Rath-Yatraಅಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು. ಅಧ್ಯಕ್ಷರಾಗಿ ನೇಮಕಗೊಂಡ ಹೊಸ್ತಿಲಲ್ಲಿ ಅಡ್ವಾಣಿ ಮಾಡಿದ ಮೊಟ್ಟ ಮೊದಲ ಕೆಲಸ ಪಾರ್ಟಿಯ ಆಗ್ರ ನೇತಾರರಾದ ಬಲರಾಜ್ ಮಧೋಕ್ ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದು. ಈ ಬಲರಾಜ್ ಮಧೋಕ್ ೧೯೬೬ ರಲ್ಲಿ ಜನ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು.ಅಷ್ಟೇ ಅಲ್ಲ, ೧೯೫೧ ರಲ್ಲಿ ಜನ ಸಂಘ ಸ್ಥಾಪನೆಯಾದಾಗ ಅದರ ಮೊದಲ ಸಂವಿಧಾನವನ್ನು ಬರೆದದ್ದೇ ಈ ಮಧೋಕ್. ಅಲ್ಲೊಂದು ಇಲ್ಲೊಂದು ಸೀಟು ಗೆಲ್ಲುತ್ತಿದ್ದ ಜನಸಂಘವನ್ನು ಕಟ್ಟಿ ಬೆಳೆಸಿ ೧೯೬೭ರ ಚುನಾವಣೆಯಲ್ಲಿ (ಕಾಂಗ್ರೆಸ್ ಉಚ್ಹ್ರಾಯ ಸ್ಥಿತಿಯಲ್ಲಿದ್ದಾಗ) ೩೫ ಲೋಕಸಭಾ ಸ್ಥಾನ ಗಳಿಸಿ ಕೊಟ್ಟವರು ಮಧೊಕ್. ಅಂದಿನ ಜನ ಸಂಘದ ಉನ್ನತ ನಾಯಕತ್ವ,ಅದರಲ್ಲೂ ವಾಜಪೇಯಿಯವರು, ಇಂದಿರಾ ಗಾಂಧಿಯವರ ಬಗ್ಗೆ ತೋರುತ್ತಿದ್ದ ಮೃದು ಧೋರಣೆ (ಬಾಂಗ್ಲಾದೇಶದ ಯುದ್ಧದ ಸಂದರ್ಭದಲ್ಲಿ ಇಂದಿರಾರನ್ನು ವಾಜಪೇಯಿ ಯವರು ದುರ್ಗೆ ಎಂದು ಸ್ತುತಿಸಿದ್ದು ನೆನಪಿಸಿಕೊಳ್ಳಿ) ಯನ್ನು ಕಟುವಾಗಿ ಟೀಕಿಸಿದ್ದ ಮಧೋಕ್ ರನ್ನು ಹೊರಹಾಕಲು ಅತೀ ಕಾತುರವಾಗಿದ್ದ ಅಡ್ವಾಣಿ – ವಾಜಪೇಯಿ ಬಣ ಅದನ್ನು ಸಮರ್ಥವಾಗಿ ಸಾಧಿಸಿತು. ಸುಮಾರು ತೊಂಬತ್ತೈದರ ಪ್ರಾಯದ ಬಲರಾಜ್ ಮಧೋಕ್ ಇಂದಿಗೂ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇಂದು ಅಡ್ವಾಣಿಯವರಿಗೆ ಒದಗಿ ಬಂದ ಪರಿಸ್ಥಿತಿಯನ್ನು ನೋಡಿ ಮಧೋಕ್ ಏನೆಂದು ಕೊಳ್ಳುತ್ತಿದ್ದಾರೋ ನೀವೇ ಊಹಿಸಿ.

೧೯೭೫ ರಲ್ಲಿ ತುರ್ತು ಪರಿಸ್ಥಿತಿಯ ಘೋಷಿತವಾದಾಗ ಜೈಲು ಸೇರಿದ ಅಗ್ರ ನಾಯಕರಲ್ಲಿ ಅಡ್ವಾಣಿ ಒಬ್ಬರು. ನಂತರದಲ್ಲಿ, ೧೯೭೭ರಲ್ಲಿ ಜನತಾ ಪಾರ್ಟಿ ಪ್ರಾರಂಭವಾದಾಗ ಅದರ ಸ್ಥಾಪಕ ಸದಸ್ಯರಷ್ಟೇ ಅಲ್ಲ, ಅದರ ಮೊದಲ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಯಾದವರು ಅಡ್ವಾಣಿ. ಜನತಾ ಪಾರ್ಟಿ ಸರಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವರಾದ ಅಡ್ವಾಣಿಯವರಿಗೆ ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಳ್ಳುವ ಬಹು ದೊಡ್ಡ ಸಂದರ್ಭ ಬಂದಿತ್ತು. “ದ್ವಿ ಸದಸ್ಯತ್ವದ” ಪ್ರಶ್ನೆ ಎದುರಾದಾಗ. ಚೀಟಿ ಬರೆದು ಪ್ರಮುಖರನ್ನು ಆಯ್ಕೆಯ ಮಾಡುವ advani-kanchi-seerವಿಧಾನ ಹೊಂದಿದ್ದ RSS ಸದಸ್ಯತ್ವ ಒಂದು ಕಡೆ, ಪ್ರಜಾತಂತ್ರ ವಿಧಾನದಿಂದ ಜನರ ಮುಖೇನ ಆಯ್ಕೆಯಾದ ಜನತಾ ಪಾರ್ಟಿಯ ನಾಯಕನ ಜವಾಬ್ದಾರಿ ಇನ್ನೊಂದೆಡೆ, ಎಂದಾದಾಗ, ಅಡ್ವಾಣಿ ಅಯ್ದುಕೊಂಡಿದ್ದು RSS ನ್ನು. ಅರ್ ಎಸ್ ಎಸ್ ಕೇವಲ ಸಾಂಸ್ಕೃತಿಕ ಸಂಘಟನೆ ಎಂಬ ವಾದ ಮಂಡಿಸುವವರು ಈ ರಾಜಕೀಯ ಬೆಳವಣಿಗೆಗಳನ್ನು ಮರೆತು ಬಿಟ್ಟಿರಬೇಕು.

ಅಡ್ವಾಣಿ ಸ್ಪಷ್ಟವಾಗಿ ಪ್ರಜಾಪ್ರಭುತ್ವದ ಹಾದಿಯನ್ನು ಅರಿಸಿಕೊಂಡಿದ್ದರೆ ಪ್ರಜಾಪ್ರಭುತ್ವ ಗೆಲ್ಲುತ್ತಿತ್ತು. ತುರ್ತು ಪರಿಸ್ಥಿತಿ ಹೇರಿ ಜನರ ಹಕ್ಕನ್ನು ಕಸಿದುಕೊಂಡ ಇಂದಿರಾ ಸರಕಾರ ಅಥವಾ ಇನ್ಯಾವುದೇ ಜನತಂತ್ರ ವಿರೋಧಿ ಸರಕಾರ ದೇಶದಲ್ಲಿ ಜನತಂತ್ರವನ್ನು ಕೊಲ್ಲುವ ಭವಿಷ್ಯದಲ್ಲಿ ಯೋಚನೆ ಕೂಡ ಮಾಡುತ್ತಿರಲಿಲ್ಲ. ಆದರೆ, ವಾಜಪೇಯಿ ಮತ್ತು ಅಡ್ವಾಣಿ ಜನತಾ ಸರಕಾರಕ್ಕೆ ರಾಜಿನಾಮೆ ಕೊಟ್ಟು ‘ಚೀಟಿ’ ರಾಜಕೀಯಕ್ಕೆ ಜೈ ಎಂದರು. ಕಾಂಗ್ರೆಸ್ ನ ಹೈ ಕಮಾಂಡ್ ರಾಜಕಾರಣ ಮತ್ತು RSS ನ ರಿಮೋಟ್ ಕಂಟ್ರೋಲ್ ರಾಜಕಾರಣ ಎರಡೂ ಒಂದೇ ಎಂದು ಜನ ಅಂದೇ ತೀರ್ಮಾನಿಸಿದರು. ಈ ರೀತಿ, ತುರ್ತು ಪರಿಸ್ಥಿತಿಯನ್ನು ಕಂಡು ನೊಂದ ಜನತೆ ಕಟ್ಟಿದ ಪ್ರಜಾತಂತ್ರದ ಕೋಟೆಯನ್ನು ಒಳಗಿನಿಂದಲೇ ಒಡೆಯುವ ಕೆಲಸ ಶುರು ಮಾಡಿದ್ದು ಅಡ್ವಾಣಿ ಯವರು.

೧೯೮೦ ದಶಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮೂರು ಮಹಾ ಕೋಮುಪಾತಕ ಗಳಿಗೆ ಸಾಕ್ಷಿಯಾಯಿತು. indira-gandhiಮೊದಲು, ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಅಸ್ಸಾಂನ “ನೆಲ್ಲಿ ಕಗ್ಗೊಲೆಗಳು”, ಇಂದಿರಾ ಹತ್ಯೆಯ ನಂತರದ “ಸಿಖ್ ದೌರ್ಜನ್ಯ” ಮತ್ತು ೧೯೮೯ ರ ಭಾಗಲ್ಪುರ್ ಕೋಮು ದುರಂತ. ಇದಕ್ಕೆ ಸಾಥ್ ಕೊಡುವಂತೆ ರಾಜೀವ್ ಸರಕಾರ ಶಾಹ್ ಬಾನೋ ಪ್ರಕರಣದಲ್ಲಿ ಮುಸ್ಲಿಂ ಮೂಲಭೂತವಾದದ ಪರ ನಿಂತಿತು; ಅಲ್ಲದೆ ರಕ್ತವನ್ನು ರಕ್ತದಿಂದ ತೊಳೆಯಲು ಬಾಬರಿ ಮಸೀದಿಯ ಬೀಗದ ಕೈ ತೆಗೆಸಿತು.

ಹಿಂದೆ ೭೦ರ ದಶಕದಲ್ಲಿ ಪ್ರಜಾಪ್ರಭುತ್ವವನ್ನು ಆಯ್ದು ಕೊಂಡಿದ್ದಿದ್ದರೆ, ಈ ಕೋಮು ದ್ವೇಷದ ಸಂದರ್ಭದಲ್ಲಿ, ಅಡ್ವಾಣಿಯವರು ನೈಜ ಧರ್ಮ ನಿರಪೇಕ್ಷತೆಯನ್ನು ಉದ್ದೀಪಿಸುವ ಹೊಸ ರಾಜಕೀಯ ಕ್ರಾಂತಿಯ ಪ್ರವರ್ತಕರಾಗಬಹುದಿತ್ತು . ಆದರೆ, ರಾಜಕೀಯದಲ್ಲಿ ಧರ್ಮ ಬೆರೆಸಿ ಚೀಟಿ ರಾಜಕಾರಣ ಮಾಡುವ ಕಡೆ ಅವರು ಬಹು ಹಿಂದೆಯೇ ವಾಲಿದ್ದರಿಂದ, ದೇಶ ಒಂದು ಕಣ್ಣು ಕಳೆದುಕೊಂಡ ಸಂದರ್ಭದಲ್ಲಿ ಅಡ್ವಾಣಿ ರಥಯಾತ್ರೆ ಹೊರಟು ಇನ್ನೊಂದು ಕಣ್ಣು ಕಿತ್ತುವ ಕೆಲಸಕ್ಕೆ ಕೈ ಹಾಕಿದರು. ರಾಜೀವ್ ಬರಿ ಬೀಗ ತೆಗೆಸಿದರೆ ಅಡ್ವಾಣಿ ಮಸೀದಿಯನ್ನೇ ನೆಲಸಮ ಮಾಡಿದರು. ಅಂದು ಧ್ವಂಸಗೊಂಡಿದ್ದು ಮಸೀದಿ ಅಥವಾ ಮಂದಿರವಲ್ಲ, ನಮ್ಮ ದೇಶದ ಸಂವಿಧಾನ.

ಗುಜರಾತ್ ಗಲಭೆಯ ಸಂದರ್ಭದಲಿ ವಾಜಪೇಯಿಯವರು ರಾಜಧರ್ಮವನ್ನು ನೆನಪಿಸಿದ್ದು ಕೇವಲ ಮೊದಿಯವರಿಗಲ್ಲ; Bush_Vajpayee_Oval_Officeಅಡ್ವಾಣಿಯವರಿಗೆ ಕೂಡ. ಅಂದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಳ್ಳುವ ಕೊನೆಯ ಅವಕಾಶ ಅಡ್ವಾಣಿಯವರಿಗೆ ಒದಗಿ ಬಂದಿತ್ತು. ಅಡ್ವಾಣಿ ರಾಜಧರ್ಮವನ್ನು ರಕ್ಷಿಸುವ ಬದಲು ರಾಜನನ್ನು ರಕ್ಷಿಸುವುದೇ ಧರ್ಮವನ್ನಾಗಿ ಮಾಡಿ ಕೊಂಡರು.

ತುರ್ತು ಪರಿಸ್ಥಿತಿ ನಮ್ಮ ದೇಶದಲ್ಲಿ ಮತ್ತೆ ಬರುವ ಬಗ್ಗೆ ಭವಿಷ್ಯ ಹೇಳುವ ಅಡ್ವಾಣಿಯವರು, ಅಯೋಧ್ಯ ಮಾದರಿಯ ಅಥವಾ ಗುಜರಾತ್ ಮಾಡೆಲ್ ನ ಇನ್ನೊಂದು ದೊಡ್ಡ ಕೋಮು ದಳ್ಳುರಿ ನಡೆಯಬಹುದೇ ಎಂಬ ಬಗ್ಗೆಯೂ ಶಕುನ ಹೇಳಬಹುದಿತ್ತು.

ಭಾರತದಲ್ಲಿ ಕೆಲವೇ ವರ್ಷವಿದ್ದ ತುರ್ತು ಪರಿಸ್ಥಿತಿ ಮತ್ತು ಕೋಮು ದಳ್ಳುರಿಯ ವಾತಾವರಣ ಪಾಕಿಸ್ತಾನದಲ್ಲಿ ಇಂದು ಎಲ್ಲ ದಿನವೂ ಇರುತ್ತದೆ. ಈ ಮೂಲ (ಭೂತ) ವ್ಯಾಧಿಗೆ ಕಾರಣವಾದ ಭಾರತ ಉಪಖಂಡ ಕಂಡ ಅತ್ಯಂತ ಹೇಯ ಕೋಮುವಾದಿ, ಸಮಯ ಸಾಧಕ ಜಿನ್ನಾ ಅಡ್ವಾಣಿಯವರ ಆದರ್ಶ. ದಶಕಗಳ ಸ್ವಾತಂತ್ರ್ಯ ಹೋರಾಟದ ಕಾವಿನ ಫಲವಾಗಿ ಪ್ರಜಾಪ್ರಭುತ್ವದ ನೆಲೆಗೆ ಮೆಲ್ಲನೆ ಹೊರಳುತ್ತಿದ್ದ ಮುಸ್ಲಿಂ ಜನಮಾನಸದಲ್ಲಿ ವಿಷ ಬೀಜ ಬಿತ್ತಿದ್ದು ಜಿನ್ನಾ. ಇಂದು ಮೂಲಭೂತವಾದಿಗಳ ಕಪಿ ಮುಷ್ಠಿಯಲ್ಲಿ ಸಿಕ್ಕು ನರಳುತ್ತಿರುವ ಪಾಕಿಸ್ತಾನದಲ್ಲೇ, ಪ್ರತಿ ಜಾಗೃತ ಪ್ರಜೆಯೂ ಶಪಿಸುವ ಜಿನ್ನಾರಂಥಹವರನ್ನು ಹಾಡಿ ಹೊಗಳಿದ ಅಡ್ವಾಣಿ ಮನಸ್ಥಿತಿ ಎಂಥಹದ್ದು? ಜಿನ್ನಾ ಹೊಗಳಿಕೆಯಿಂದ ಪಾಕಿಸ್ತಾನ ರಚನೆಯ ಉದ್ದೇಶಕ್ಕೆ ಪಾವಿತ್ರ್ಯ ತಂದು ಕೊಟ್ಟಂತೆ ಆಗಲಿಲ್ಲವೇ?

ಈ ಘಟನೆಯಾದ ನಂತರ ಅಡ್ವಾಣಿಯವರ ಪಟ್ಟ ಶಿಷ್ಯ ಜಸ್ವಂತ್ ಸಿಂಗ್ ಪಾಕಿಸ್ತಾನದ ನಿರ್ಮಾಣಕ್ಕೆ ನಮ್ಮ ಜನರೇ ಕಾರಣ, Advaniಜಿನ್ನಾ ಏನೂ ತಪ್ಪು ಮಾಡಲಿಲ್ಲ ಎಂಬಂತೆ ಪುಸ್ತಕ ಬರೆದರು. ಈ ಪುಸ್ತಕದ ಮುನ್ನುಡಿಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಗ್ರಂಥಾಲಯದ ಮುಖ್ಯಸ್ಥರನ್ನು ಮನಸೋ ಇಚ್ಛೆ ಸ್ಮರಿಸಿ ಜಿನ್ನಾ ಬಗೆಗಿನ ಪಾಕಿಸ್ತಾನದಲ್ಲಿರುವ ‘ಆಕರ ಸಾಮಗ್ರಿ’ ಕೊಟ್ಟು ಉಪಕರಿಸಿದ ಬಗ್ಗೆ ವಂದನೆ ಬೇರೆ ಸಲ್ಲಿಸುತ್ತಾರೆ! ಈ ಪುಸ್ತಕ ಬರೆದದ್ದಕ್ಕೆ ಭಾರತೀಯ ಜನತಾ ಪಾರ್ಟಿಯಿಂದ ಹೊರದೂಡಲ್ಪಟ್ಟ ಜಸ್ವಂತ್ ರನ್ನು ಪ್ರೀತಿಯಿಂದ ಆಲಂಗಿಸಿ ಮತ್ತೆ ಕರೆ ತಂದದ್ದು ಅಡ್ವಾಣಿ ಯವರು.

೨೦೧೩ ರಲ್ಲಿ ತಮ್ಮ ರಥಯಾತ್ರೆಯ ಸಂಪೂರ್ಣ ಸಂಯೋಜಕ ಮತ್ತು ಪ್ರೀತಿಯ ಶಿಷ್ಯ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜಿನಾಮೆ ಕೊಟ್ಟಿದ್ದು ಪ್ರಜಾತಂತ್ರದ ರಕ್ಷಣೆಗೋ ಅಥವಾ ತಮ್ಮ ಸ್ವಾರ್ಥ ಸಾಧನೆಗೋ ಎಂಬುದು ಎಲ್ಲರಿಗಿಂತ ಹೆಚ್ಚು ಅಡ್ವಾಣಿಯವರಿಗೇ ಗೊತ್ತಿದೆ. ಇಂದು ಕೂಡ, ತಮ್ಮ ಹಲವು ಶಿಷ್ಯೋತ್ತಮರನ್ನು ಲಲಿತ್ ಮೋದಿ ಹಗರಣದಲ್ಲಿ ಸಿಲುಕಿಸಲು ಸರಕಾರ ಮತ್ತು ಪಕ್ಷದ ಒಳಗಿನಿಂದಲೇ ಪ್ರಯತ್ನ ನಡೆಯುತ್ತಿರುವ ಬಗ್ಗೆ ಹತಾಶರಾಗಿರುವ ಅಡ್ವಾಣಿಯವರಿಗೆ ಏಕಾ ಏಕಿ ತುರ್ತು ಪರಿಸ್ಥಿತಿ ನೆನಪಾಗುತ್ತಿವೆ.

ಇಂದು ಸಂಘ ಪರಿವಾರಕ್ಕೆ ಅಡ್ವಾಣಿ “ನಮ್ಮವರಲ್ಲ” ಮತ್ತು ಒಂದು ರೀತಿಯಲ್ಲಿ “ತಟಸ್ಥ ಮುತ್ಸದ್ದಿ” ಎಂದು ಬಿಂಬಿಸಿ, ನಾಳೆಗೆ ರಾಷ್ಟ್ರಪತಿ ಹುದ್ದೆಗೇರಿಸುವ ಹಾದಿಯನ್ನು ಸುಗಮಗೊಳಿಸುವ ಅಗತ್ಯತೆ ಇದೆ. ಹೇಗೆ ವಾಜಪೇಯಿಯವರನ್ನು “ಸರ್ವ ಸಂಗ ಪರಿತ್ಯಾಗಿ – ತಟಸ್ಥ” ಇತ್ಯಾದಿ ಯಾಗಿ ಬಿಂಬಿಸಿ, ಹೊಂದಾಣಿಕೆ ರಾಜಕಾರಣದಲ್ಲಿ ಜಾರ್ಜ್, ಮಮತಾ, ಫಾರೂಕ್ ಅಬ್ದುಲ್ಲಾ ಮತ್ತು ನಿತೀಶ್ ರನ್ನು ಸೆಳೆಯಲಾಯಿತೋ, ಹಾಗೆಯೇ ಇಂದು ಅಡ್ವಾಣಿಯವರಿಗೆ ಒಂದು ಮುತ್ಸದ್ದಿ ಪಟ್ಟ ಕಟ್ಟಿ ಸರ್ವಾನುಮತ ಕೊಡಿಸುವ ಅನಿವಾರ್ಯತೆ ಸಂಘ ಪರಿವಾರಕ್ಕಿದೆ.

ಒಂದು ನಾಟಕ ಕಂಪನಿಯವರು ದರ್ಮರಾಜ, ಕೃಷ್ಣ, ಮತ್ತು ವಿರೋಧಿ ಪಾಳಯದ ದುರ್ಯೋಧನ ಭೀಷ್ಮ ಮತ್ತು ದ್ರೋಣ ಮತ್ತಿತರನ್ನೂ ತಮ್ಮ ಕಂಪನಿಯ ಪಾತ್ರಧಾರಿ ವರ್ಗದಿಂದಲೇ ಅರಿಸುತ್ತಾರೆಯೇ ವಿನಃ ತಮ್ಮ ಪ್ರತಿ ಸ್ಪರ್ಧಿ ನಾಟಕ ಮಂಡಳಿಗಳ ಬಳಿ ಹೋಗುವುದಿಲ್ಲ. ಭಾರತೀಯ ಜನತಾ ಪಾರ್ಟಿ ಈ ಪಾಠವನ್ನು ಕಲಿತದ್ದು ಕಾಂಗ್ರೆಸ್ ನಿಂದ. ಒಂದು ಕಡೆ ಕರಣ್ ಸಿಂಗ್ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ರಾಗಿದ್ದು ಕೊಂಡೆ ಕಾಂಗ್ರೆಸ್ ನಲ್ಲೂ ಇದ್ದರೋ ಹಾಗೆ ಮಣಿಶಂಕರ್ ಅಯ್ಯರ್, ಏ. ಕೆ. ಅಂತೋನಿ ತರಹದ ‘ಎಡ’ ಗಡೆ ವಾಲುವವರೂ ಜತೆಯಲ್ಲೇ ಇದ್ದರು. ಸಾಕ್ಷಿ ಮಹಾರಾಜ್, ಯೋಗಿ ಅಡಿತ್ಯನಾಥ್ ರಂಥವರ ಕಟ್ಟರ್ ಹಿಂದುತ್ವವನ್ನು ಮರೆಮಾಚಲು ತಮ್ಮದೇ ನಾಯಕರು ಭಿನ್ನ ರಾಗ ಹಾಡಿ ತಮ್ಮ ಪಕ್ಷದ ಸಮರ್ಥಕರ ಇನ್ನೊಂದು ವಿಭಾಗದವನ್ನು ರಂಜಿಸುವುದೂ ಒಂದು ರೀತಿಯಲ್ಲಿ ಅನಿವಾರ್ಯ. ಸಹಕರಿಸ ಬೇಕಾಗಿರುವುದು ಅಡ್ವಾಣಿ ಯವರ ‘ತುರ್ತು ಪರಿಸ್ಥಿತಿ’ ಕೂಡ.

ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ಕೇವಲ ಭಾರತದ ಮಟ್ಟಿಗೆ ಮಾತ್ರವಲ್ಲ ಇಡೀ ಪ್ರಪಂಚದ ಪ್ರಜಾತಂತ್ರದ ಅಳಿವು-ಅಳಿವುಗಳ ಮಧ್ಯದ ಹೋರಾಟವಾಗಿತ್ತು. ನಲವತ್ತು ವರ್ಷಗಳ ನಂತರವಷ್ಟೇ ಅಲ್ಲ ಶತಮಾನಗಳ ನಂತರವೂ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ನಡೆದ ಈ ಜನಪರ ಹೋರಾಟದ ನೆನಪು ನಮ್ಮಲ್ಲಿ ಹಸಿರಾಗಿ ಉಳಿಯುತ್ತದೆ. ಹಾಗೆಯೇ, ನಂತರದ ದಿನಗಳಲ್ಲಿ, narender_modi_rssನಮ್ಮ ದೇಶದ ಸಾಮಾನ್ಯ ಜನತೆ ಒಟ್ಟಾಗಿ ಮತ್ತು ಪರ್ಯಾಯವಾಗಿ ಕಟ್ಟಿದ ಜನತಾ ಕೋಟೆ ಯನ್ನು ಒಳಗಿಂದಲೇ ಯಾರು ಕೆಡವಿದರು, ಯಾರು ಯಾವ ರಾಜಕಾರಣವನ್ನು ಆಯ್ಕೆ ಮಾಡಿಕೊಂಡರು ಎಂಬುದು ಕೂಡ ಸುಲಭಕ್ಕೆ ಮರೆಯುವಂತಹದ್ದಲ್ಲ.

ಎಲ್ಲಿಯ ತನಕ ಈ ದೇಶದಲ್ಲಿ ಸಿದ್ಧಾಂತ ಆಧಾರಿತ ರಾಜಕಾರಣದ ಬದಲು ವ್ಯಕ್ತಿ ಪೂಜೆ ಇರುತ್ತದೋ, ಧರ್ಮವನ್ನು ಅಸ್ತ್ರವಾಗಿ ಬಳಸಿ ಒಡೆದು ಆಳುವ ರಾಜಕಾರಣ ಇರುತ್ತದೋ, ನಮ್ಮದೇ ಜನರ ನೆರಳು ಬಿದ್ದರೇ ಸಾಕು ಕೊಂದು ಬಿಡುವ ಮನಸ್ಥಿತಿ ಇರುತ್ತದೋ, ಅಲ್ಲಿಯವರೆಗೆ ತುರ್ತು ಪರಿಸ್ಥಿತಿಯ ಭೀತಿ ತಪ್ಪಿದ್ದಲ್ಲ.

ಈ ಸತ್ಯ ಎಲ್ಲರಿಗಿಂತ ಚೆನ್ನಾಗಿ ಅಡ್ವಾಣಿಯವರಿ ಗೇ ಅನುಭವ ವೇದ್ಯ.

ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು

– ಜೀವಿ

ದೋ.. ಎಂದು ಸುರಿಯುತ್ತಿದ್ದ ಮಳೆ, ಮಧ್ಯರಾತ್ರಿ ದಾಟಿದರೂ ಎದ್ದೇಳೋ ಬೂದಿ, ಕಾಳ, ಕರಿಯ, ಕುನಾರಿ ಎಂಬ ಸದ್ದು ಕೇಳಲಿಲ್ಲ. ಮಳೆ ಕಾರಣದಿಂದ ಊಟಕ್ಕೆ ಕರೆಯಲು ಯಾರು ಬರಲಾರರೇನೋ ಎಂದುಕೊಂಡು ಅತ್ತಿತ್ತ ಹೊರಳಾಡಿದೆ. ಮಳೆಯಾದರೂ ನಿಲ್ಲಬಾರದೆ ಎಂದು ಮನದಲ್ಲೆ ಶಪಿಸಿ
hunger04-061ಕೊಂಡು ಕಣ್ಮುಚ್ಚಿದೆ. ಆದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮಳೆ ಕಡಿಮೆಯಾಯಿತು. ಕೊನೆಗೂ ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಲೋ ಬೂದಿ ಎಂಬ ಧ್ವನಿ ಕೇಳಿ ಕತ್ತಲಲ್ಲೆ ಕಣ್ಣರಳಿತು. ಎರಡು ಬಾರಿ ಕೂಗಿದ ನಂತರ ಕೆಮ್ಮುತ್ತಾ ಏನು ಗೌಡ್ರೆ ಎಂದ ನನ್ನ ಎದುರಿನ ಮನೆಯಲ್ಲಿದ್ದ ಬೂದಿ ಜವರಪ್ಪ. ಎದ್ದು ಮಕ್ಕಳ ಕರ್ಕೊಂಡು ಊಟಕ್ಕೆ ಬನ್ರೋ, ಹೆಂಗಸ್ರಿಗೂ ಕುಕ್ಕೆ ತಗೊಂಡ್ ಬರೋಕೆ ಹೇಳು ಎಂದು ಹೇಳಿ ಹೋದ.(ಎಲ್ಲರ ಮನೆಗೆ ಖುದ್ದು ಬಾಗಿಲು ತಟ್ಟಿ ಕರೆಯಬೇಕೆಂದೇನು ಇರಲಿಲ್ಲ. ಕೇರಿಯಲ್ಲಿ ನಿಂತು ಒಂದಿಬ್ಬರಿಗೆ ವಿಷಯ ಮುಟ್ಟಿಸಿದ್ದರೆ ಸಾಕಿತ್ತು.) ಆತ ಹೋಗಿ ಐದಾರು ನಿಮಿಷ ಆದರೂ ನಿಶ್ಯಬ್ಧ ಮುಂದುವರಿಯಿತು. ಬೂದಿ ಜವರಪ್ಪ ಮತ್ತೆ ನಿದ್ರೆಗೆ ಹೋದನೇನೋ, ಎಲ್ಲರು ಮಲಗಿದ್ದಾರೆ, ಯಾರೂ ಊಟಕ್ಕೆ ಹೋಗಲಾರರೇನೋ ಎಂದುಕೊಂಡು ಮಲಗದ್ದಲ್ಲೆ ಚಟಪಟಿಸಿದೆ.

ನಂತರ ಮೂಲೆ ಮನೆಯಿಂದ ಲಕ್ಕಜ್ಜ ಕೈಯಲ್ಲೊಂದು ಊರುಗೋಲು ಹಿಡಿದು ಮಕ್ಕಳೊಂದಿಗೆ ಹೆಜ್ಜೆ ಹಾಕಿದ. ಅವನು ಕೋಲು ಊರಿ ಬರುತ್ತಿದ್ದ ಶಬ್ದ ಕೇಳಿ ಜೀವ ಬಂದಂತಾಯಿತು. 10 ನಿಮಿಷದಲ್ಲಿ ನಿಶ್ಯಬ್ಧ ಮಾಯವಾಯಿತು. ಹೆಂಗಸರು-ಗಂಡಸರು ಮತ್ತು ಮಕ್ಕಳು ಮಾತನಾಡುವ ಸದ್ದು ಹೆಚ್ಚಾಯಿತು. ಒಬ್ಬೊಬ್ಬರಾಗಿ ಎದ್ದು ಚೆಂಬು-ಲೋಟ ಹಿಡಿದು ಮನೆಯಿಂದ ಹೊರ ಬಂದರು. ಆವರೆಗೆ ನೀರವ ಮೌನ ಆವರಿಸಿದ್ದ ಕೇರಿಯಲ್ಲಿ ಮಕ್ಕಳು-ಮಹಿಳೆಯರ ಉತ್ಸಾಹದ ಸದ್ದು ಜೋರಾಯಿತು.

ಅನ್ನದ ಮೇಲಿನ ಆಸೆಗೆ ನನಗೆ ನಿದ್ರೆ ಬಂದಿಲ್ಲ ಎಂಬುದು ನನ್ನವ್ವನಿಗೂ ಗೊತ್ತಿತ್ತು. ದೀಪ ಹಚ್ಚಿ ಊಟಕ್ಕೆ ಹೋಗ್ತಿಯಾ ಮಗನೇ ಎಂದು ಮೆಲು ಧ್ವನಿಯಲ್ಲೆ ಕೇಳಿದಳು. ಹೂಂ ಎಂದವನೆ ಎದ್ದು ಹೊರಟೆ, ಪಕ್ಕದಲ್ಲೆ ಮಲಗಿದ್ದ ನನ್ನಕ್ಕ, ಅಣ್ಣ, ಅಪ್ಪ ಎಲ್ಲರು ಎದ್ದರು. ನಾನೊಬ್ಬನಿಗೆ ಮಾತ್ರ ನಿದ್ರೆ ಬಂದಿಲ್ಲ ಎಂದುಕೊಂಡಿದ್ದ ನನಗೆ ಇಡೀ ಕೇರಿಯ ಜನರಿಗೆ ನಿದ್ರೆ ಬಂದಿಲ್ಲ, ಅನ್ನಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಅರ್ಥವಾಯಿತು. ಅವ್ವ ಕೂಡ ಬಿದಿರ ಕುಕ್ಕೆಗೆ ಬಿಳಿ ಪಂಚೆ ಹರುಕು ಹಾಸಿ, ಸಾಂಬಾರಿಗೊಂದು ಪಾತ್ರೆ, ಪಾಯ್ಸಕ್ಕೊಂದು ಪಾತ್ರೆ ಸಿದ್ದ ಮಾಡಿಕೊಂಡಳು. Streetchildrenಗಂಡಸರು ಮತ್ತು ಮಕ್ಕಳು ಮಾತ್ರ ಮೇಲ್ಜಾತಿಯ ಕೇರಿಯಲ್ಲಿ ಅಥವಾ ಕೊಟ್ಟಿಗೆಯಲ್ಲೀ ಊಟ ಮಾಡಲು ಅವಕಾಶ ಇತ್ತು. ಹೆಂಗಸರು ಅಲ್ಲಿ ಊಟ ಮಾಡುವಂತಿರಲಿಲ್ಲ. ಕುಕ್ಕೆಗೆ ಅವರು ಹಾಕಿಕೊಟ್ಟ ಊಟ ತಂದು ಮನೆಯಲ್ಲಿ ತಿನ್ನಬೇಕಿತ್ತು. ಅದಕ್ಕಾಗಿ ಅವ್ವ ಕುಕ್ಕೆ ಸಿದ್ದ ಮಾಡಿಕೊಂಡಳು. ಅದನ್ನು ಹೊತ್ತು ಸಂಭ್ರಮದಿಂದ ಹೊರಟು ಮೇಲ್ಜಾತಿಯ ಕೇರಿ ಸೇರಿದೆವು.

ಮೇಲ್ಜಾತಿಯ ಎಲ್ಲರೂ ಊಟ ಮಾಡಿದ ನಂತರ ಏನಾದರೂ ಉಳಿದರೆ ನಮ್ಮನ್ನು ಕರೆಯುವ ಪರಿಪಾಟಲಿತ್ತು. ಹೋಗಿ ಮದುವೆ ಮನೆಯ ಮುಂದೆ ನಿಂತ ನಮನ್ನು ಎಲ್ಲಿ ಊಟಕ್ಕೆ ಕೂರಿಸಬೇಕು ಎಂಬ ಚರ್ಚೆ ನಡೆಯಿತು. ಮಳೆ ಬಂದಿದ್ದರಿಂದ ಬೀದಿಯಲ್ಲಿ ಕೂತು ಊಟ ಮಾಡುವ ಅವಕಾಶ ಇರಲಿಲ್ಲ. ಸ್ವಜಾತಿಯವರೆಲ್ಲ ಮನೆಯ ಒಳಗೇ ಕೂತು ಊಟ ಮಾಡಿ ಹೋಗಿದ್ದರು. ಎಲ್ಲರ ಮನೆಯ ಕೊಟ್ಟಿಗೆಯಲ್ಲೂ ದನಕರುಗಳಿದ್ದವು. ಮದುವೆ ಮನೆಯವರ ಕೊಟ್ಟಿಗೆಯಲ್ಲಿ ಸಾಮಾನು ಸರಂಜಾಮು ತುಂಬಿದ್ದವು. ಅಕ್ಕ-ಪಕ್ಕದ ಯಾರೂ ದನಕರುಗಳನ್ನು ಆಚೆಗೆ ಕಟ್ಟಿ ಊಟಕ್ಕೆ ಅವಕಾಶ ಮಾಡಿಕೊಡಲು ಸಿದ್ದರಿರಲಿಲ್ಲ. ಊಟಕ್ಕೆಂದು ಕಾದು ನಿಂತವರಲ್ಲಿ ಲಕ್ಕಜ್ಜ ಹಾಗೆ ಕೈಗೆ ಕೊಡಿ ಸ್ವಾಮಿ ತಿನ್ಕೊಂಡು ಹೋಗ್ತಿವಿ ಎಂದ. ಅದನ್ನು ಒಪ್ಪದ ಮದುವೆ ಮನೆ ಯಜಮಾನ, ಹೇಗೋ ಮನವೊಲಿಸಿ ಒಂದು ಕೊಟ್ಟಿಗೆ ಖಾಲಿ ಮಾಡಿಸಿದ.

ಕೊಟ್ಟಿಗೆಯಲ್ಲಿ ಹುಲ್ಲು ಹಾಸಿಕೊಂಡು ಊಟಕ್ಕೆ ಕುಳಿತೆವು. ಅಳಿದುಳಿದ ಊಟಕ್ಕೆ ಬಂದಿದ್ದ ನಮಗೆ ಮದುವೆ ಮನೆ ಯಜಮಾನ, ಅನ್ನ-ಪಾಯ್ಸ ಎಲ್ಲಾ ಖಾಲಿ ಆಯ್ತು ಮುದ್ದೆ ಮಾತ್ರ ಇದೆ. ಹೊಟ್ಟೆ ತುಂಬ ಊಟ ಮಾಡಿ ಎಂದ. ನನನ್ನು ಸೇರಿ ಊಟಕ್ಕೆ ಬಂದಿದ್ದ ಮಕ್ಕಳಿಗೆ ಎದೆ ಜಲ್ ಎಂದಂತಾಯಿತು. ಲಕ್ಕಜ್ಜ ಮಕ್ಕಳಿಗಾದರೂ ಸಾಕಾಗುವಷ್ಟು ಇದೆಯಾ ನೋಡಿ ಸ್ವಾಮಿ ಎಂದು ದಯನೀಯವಾಗಿ ಕೇಳಿದ. ಅನ್ನ ಬಸಿದಿದ್ದ ಮಂಕ್ರಿ ಮತ್ತು ಪಾತ್ರೆ ತಳ ಎಲ್ಲವನ್ನು ಕೆರೆದು ಕೊನೆಗೂ ಒಂದಿಷ್ಟು ಅನ್ನ ತಂದ ಯಜಮಾನ. ನನ್ನನ್ನು ಸೇರಿ ಮಕ್ಕಳನ್ನು ಮಾತ್ರ ಗುರುತಿಸಿ ಕೋಸಂಬರಿ ಹಾಕುವಂತೆ ತಟ್ಟೆಗೆ ಅನ್ನ ಉದುರಿಸಿದ. ಕಡಿಮೆಯಾದರೂ ಚಿಂತೆಯಿಲ್ಲ ಅನ್ನದ ರುಚಿ ಅನುಭವಿಸಿದ ಸಮಾಧಾನವಾಯಿತು.

ಹಬ್ಬ-ಹರಿದಿನಗಳಲ್ಲಿ ಮಾತ್ರ ಸಿಗುತ್ತಿದ್ದ ಕಾರಣಕ್ಕೆ ಅನ್ನ ಅಂದು ಅಮೃತಕ್ಕೂ ಮಿಗಿಲಾದ ರುಚಿ ಹೊಂದಿತ್ತು. ಸಿಕ್ಕಿದ್ದೆ ಸೀರುಂಡೆ ಎಂದು ಉಂಡ ಎಲೆ ಎತ್ತಿಕೊಂಡು ಹೊರಟೆವು. ಅವ್ವ ಹಿಡಿದಿದ್ದ ಕುಕ್ಕೆಗೆ ಮುದ್ದೆ ಮತ್ತು ಸಾಂಬಾರ್ ಮಾತ್ರ ಗತಿಯಾಯಿತು. ಅದು ಗಂಡಿನ ಮದುವೆ ಆಗಿದ್ದರಿಂದ ರಾತ್ರಿ ಚಪ್ಪರದ ಊಟ ಮಾತ್ರ ಇತ್ತು. ಮದುವೆ ಊಟಕ್ಕೆ ಹೆಣ್ಣಿನ ಮನೆಗೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಹೋಗುವ ಅವಕಾಶ ಇರಲಿಲ್ಲ.

ನನಗಾಗಿ ಕಾದಿದ್ದಳು ಅವ್ವ:

ಹೀಗೆ ಅನ್ನದೊಂದಿಗೆ ತಳುಕುಹಾಕಿಕೊಂಡಿರುವ ಅನೇಕ ಘಟನೆಗಳು ನನ್ನನ್ನು ಪದೇ ಪದೇ ಕಾಡುವುದುಂಟು. ಮನೆಯಲ್ಲಿ ಅನ್ನದ ಮಡಿಕೆ ಅಥವಾ ಪಾತ್ರೆ ಉಪಯೋಗಕ್ಕೆ ಬರುತ್ತಿದ್ದು ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ. ಹಾಗಾಗಿ ಮೇಲ್ಜಾತಿಯವರ ಕೃಷಿ ಜಮೀನಿಗೆ ಕೂಲಿ ಹೋದರೆ ಅವ್ವ ಮಧ್ಯಾಹ್ನದ ವೇಳೆಗೆ ಅಲ್ಲಿಗೆ ಬರುವಂತೆ ಹೇಳಿ ಹೋಗುವುದನ್ನು ಮರೆಯುತ್ತಿರಲಿಲ್ಲ.

ಅದೊಂದು ದಿನ ಅವ್ವ ಕೂಲಿಗೆ ಹೋಗುವ ಮುನ್ನ ಊರ ಸಮೀಪವೇ ಇರುವ ಗೌಡರ ಮನೆಯ ಹೊಲದ ಅಡ್ರೆಸ್ ಹೇಳಿದ್ದಳು. ಶಾಲೆಯಲ್ಲಿ ಊಟಕ್ಕೆ ಬಿಟ್ಟ ಕೂಡಲೇ ಓಡೋಡಿ ಹೋದೆ ಅಲ್ಲಿ ಅವ್ವ ಹಾಗೂ ಇನ್ನಾರು ಇರಲಿಲ್ಲ. ಆ ಹೊಲದಲ್ಲಿ ಕೆಲಸ ಮುಗಿದು ಊರಿನಿಂದ ಸುಮಾರು 2 ಕಿಮೀಯಷ್ಟು ದೂರವಿರುವ ಇನ್ನೊಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಿತು.

ಅಲ್ಲಿ ಓಡಲು ಆರಂಭಿhunger-2ಸಿ ನಿಂತಿದ್ದು ಅವ್ವನ ಮುಂದೆಯೇ. ಆದಾಗಲೇ ಎಲ್ಲರೂ ಊಟ ಮುಗಿಸುವ ಹಂತಕ್ಕೆ ಬಂದಿದ್ದರು. ಆದರೆ ನನ್ನವ್ವ ಇನ್ನೂ ಮುದ್ದೆ ಮುಗಿಸದೆ ದಾರಿ ನೋಡುತ್ತಿದ್ದಳು. ಕೂಡಲೇ ಕೈ ತೊಳೆಯುವ ಗೋಜಿಗೂ ಹೋಗದೆ ಅವ್ವನ ತಟ್ಟೆಯಲ್ಲೇ ಊಟಕ್ಕೆ ಕುಳಿತೆ. ಊಟ ಮುಗಿದಿಲ್ಲ ಎಂಬ ಸಂತಸ ನನಗಾದರೆ, ಅವ್ವನ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಅತ್ತ ಗಮನವನ್ನೂ ಹರಿಸದ ನಾನು ಅನ್ನ ಊಟ ಮಾಡುವ ಸಂಭ್ರಮದಲ್ಲಿದ್ದೆ. ಕೂಲಿಗೆ ಕರೆದಿದ್ದ ಮೇಲ್ಜಾತಿಯವರು ಕೂಡ ಅಕ್ಕಿ ಖರೀದಿ ಮಾಡಿ ತಂದು ತಿನ್ನಬೇಕಿತ್ತು. ಹಾಗಾಗಿ ಹೊಟ್ಟೆ ತುಂಬ ಮುದ್ದೆ, ಅದರ ಮೇಲೆ ಸ್ವಲ್ಪ ಅನ್ನ ಬಡಿಸುತ್ತಿದ್ದರು. ಎಲೆಗೆ ಹಾಕಿದ್ದ ಅನ್ನದಲ್ಲಿ ಒಂದು ಅಗುಳನ್ನು ಅವ್ವ ಮುಟ್ಟಲಿಲ್ಲ. ನನಗೆ ಅನ್ನ ಊಟ ಮಾಡಿಸಿದ ತೃಪ್ತಿ ಅವ್ವನಿಗಾಗಿತ್ತು. ಪರಮಾನಂದಿಂದ ಮತ್ತೆ ಶಾಲೆಯತ್ತ ಓಡಿದೆ.

ಸ್ವಾಮಿ ಮಾಸ್ಟರ್ ಕೊಟ್ಟ ಅನ್ನ:

ಸರ್ಕಾರಿ ಶಾಲೆಯಲ್ಲಿ ಈಗಿನಂತೆ ಬಿಸಿಯೂಟವಿರಲಿಲ್ಲ. ಸಮೀಪದ ಪಟ್ಟಣದಿಂದ ಬರುತ್ತಿದ್ದ ಸ್ವಾಮಿ ಮಾಸ್ಟರ್ ಟಿಫನ್ ಬಾಕ್ಸ್ನಲ್ಲಿ ಅನ್ನ ತಂದು ಮಧ್ಯಾಹ್ನದ ಊಟ ಮಾಡುತ್ತಿದ್ದರು. ಓದಿನಲ್ಲಿ ಸ್ವಲ್ಪ ಮುಂದಿರುವ ಹುಡುಗರೆಂದರೆ ಅವರಿಗೆ ಅಚ್ಚುಮೆಚ್ಚು. ನನಗೋ ಅವರ ಅನ್ನದ ಬಾಕ್ಸ್ ಎಂದರೆ ಅಚ್ಚುಮೆಚ್ಚು. ಮಧ್ಯಾಹ್ನ 1ಕ್ಕೆ ಊಟದ ಗಂಟೆ ಬಾರಿಸಿದ ಕೂಡಲೇ ಮನೆಗೋಗಿ ಬೆಳಗ್ಗೆಯೇ ಮಾಡಿಟ್ಟಿದ್ದ ಮುದ್ದೆಯಲ್ಲಿ ಅರ್ಧದಷ್ಟ ತಿಂದು ಹತ್ತೇ ನಿಮಿಷದಲ್ಲಿ ವಾಪಸ್ ಬರುತ್ತಿದೆ. ನಾನು ಬರುವಷ್ಟರಲ್ಲಿ ಸ್ವಾಮಿ ಮಾಸ್ಟರ್ ಬಾಕ್ಸ್ ಖಾಲಿಯಾಗದಿರಲಿ ಎಂದು ಊರ ದೇವರು ಬಸವಣ್ಣನಿಗೊಂದು ಕೈಮುಗಿದು ಹೋಗುತ್ತಿದ್ದೆ. ನನ್ನಂತೆ ಮೂರ್ನಾಲ್ಕು ಮಂದಿಗೆ ಆ ಬಾಕ್ಸ್ ಮೇಲೆ ಕಣ್ಣಿತ್ತು. ಅವರು ಊಟ ಮಾಡಿದ ಬಾಕ್ಸ್ ತೊಳೆದಿಡುವ ಪುಣ್ಯ ನಮ್ಮದಾದರೆ ಸಾಕು ಎಂದುಕೊಳ್ಳುತ್ತಿದ್ದೆವು. ಅವರು ಕೂಡ ಕೆಳ ಜಾತಿಯವರೇ ಆಗಿದ್ದರಿಂದ ಮೇಲ್ಜಾತಿ ಮಕ್ಕಳಿಗೆ ಅವರು ತಂದಿದ್ದ ಅನ್ನ ಕೊಡುವ ಸಾಹಸವನ್ನು ಅವರು ಮಾಡುತ್ತಿರಲಿಲ್ಲ. ಹಾಗಾಗಿ ಮೂರ್ನಾಲ್ಕು ಮಂದಿಗೆ ಅದರ ಅವಕಾಶ ಸಿಗುತ್ತಿತ್ತು.

ಮನೆಯಿಂದ ಬೇಗ ಬಂದವನೇ ಕೊಠಡಿಯೊಂದರಲ್ಲಿ ಊಟ ಮಾಡುತ್ತಿದ್ದ ಸ್ವಾಮಿ ಮಾಸ್ಟರ್ಗೆ ಕಾಣಿಸುವಂತೆ ಕಿಟಕಿಯ ಸಮೀಪ ಓಡಾಡುತ್ತಿದೆ. ಕಣ್ಣಿಗೆ ಕಂಡ ಕೂಡಲೇ ಒಳ ಕರೆದು ಬಾಕ್ಸ್ನಲ್ಲಿ ಸ್ವಲ್ಪ ಮಿಗಿಸಿದ್ದ ಅನ್ನ ಊಟ ಮಾಡಲು ಹೇಳುತ್ತಿದ್ದರು. ಊಟ ಮಾಡಿ ಬಾಕ್ಸ್ ತೊಳೆದಿಡುವುದು ಸಂತಸದ ಕ್ಷಣವಾಗುತ್ತಿತ್ತು. ಕೆಲವೊಮ್ಮೆ ನಾನು ಬರುವಷ್ಟರಲ್ಲಿ ಅವರ ಊಟ ಮುಗಿದು ಬೇರಾರೋ ಬಾಕ್ಸ್ ತೊಳೆಯುತ್ತಿದ್ದರು. ಅಂದು ನಿರಾಸೆಯೇ ಗತಿಯಾಗುತ್ತಿತ್ತು.

ಮೂರು ಮಡಿಕೆ:

‘ನಾಗಾ…. ಅವ್ವಾರ ಮನೇಲಿ ಮೂರು ಮಡಿಕೆ ಬಾರೋ…’ ಎಂದು ಊರಿಗೆಲ್ಲ ಕೇಳುವಂತೆ ಕೂಗುತ್ತಿದ್ದ ನನ್ನ ಗೆಳೆಯ ಮಹೇಶ. ಅವನ ತಮ್ಮ ನಾಗರಾಜನೋ ಎದ್ದು ಬಿದ್ದ ಓಡಿ ಹೋಗುತ್ತಿದ್ದ. ಆಗಾಗ ಹೀಗೆ ಕೂಗುತ್ತಿದ್ದ ಕಾರಣಕ್ಕೆ ಈವರೆಗೆ ಅವನಿಗೆ ‘ಮಡಿಕೆ’ ಎಂಬ ಅಡ್ಡ ಹೆಸರು ಅಂಟಿಕೊಂಡಿದೆ. ಮಹೇಶನ ಮೂರು ಮಡಿಕೆ ಸೂತ್ರದಲ್ಲಿ ದೊಡ್ಡದೊಂದು ಅನ್ನದ ಕಥೆಯಿದೆ. ಹಬ್ಬ-ಜಾತ್ರೆಯಲ್ಲಿ ಅನ್ನ ಕಾಣುತ್ತಿದ್ದ ಕಾಲದಲ್ಲಿ ಮನೆಯಲ್ಲಿ ಮೂರು ಮಡಿಕೆ ಬಿಸಿಯಾಗಿದ್ದರೆ ಅದು ನಮಗೆ ಸಂಭ್ರಮದ ದಿನ.

ಪ್ರತಿನಿತ್ಯ ಒಂದು ಮುದ್ದೆ ಮತ್ತೊಂದು ಸಾಂಬಾರ್ ಸೇರಿ ಎರಡು ಮಡಿಕೆ ಬಿಸಿಯಾಗುವುದು ಸಾಮಾನ್ಯ. ಆದರೆ ಮೂರನೇ ಮಡಿಕೆ ಬಿಸಿಯಾಗಿದ್ದರೆ ಅದು ಅನ್ನವೇ ಎಂಬುದು ಖಾತ್ರಿಯಾಗುತ್ತಿತ್ತು. ಮಡಿಕೆಗಳ ಮುಚ್ಚಳ ತೆಗೆದು ನೋಡುವುದು ತಡವಾಗುತ್ತದೆಂದು ಮಡಿಕೆಗಳನ್ನು ಹೊರಗಿನಿಂದಲೇ ಮುಟ್ಟಿ ಮನೆಯಲ್ಲಿ ಅನ್ನ ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದ ಮಹೇಶ.

ನಮ್ಮ ಮನೆಯ ಎಡ ಭಾಗಕ್ಕೆ ಅವನ ಮನೆಯಾದರೆ, ಬಲಭಾಗಕ್ಕೆ ಅವರ ಅಜ್ಜಿಯ ಮನೆ ಇತ್ತು. india-poverty-hungerಎರಡು ಮನೆಯ ಮಧ್ಯದಲ್ಲಿ ನಮ್ಮ ಮನೆಯಿತ್ತು. ಸಾಮಾನ್ಯವಾಗಿ ಅಜ್ಜಿ ಮನೆಯಲ್ಲಿ ಹೆಚ್ಚು ಬಾರಿ ಮೂರು ಮಡಿಕೆ ಬಿಸಿಯಾಗಿರುತ್ತಿದ್ದವು. ಎಲ್ಲೋ ಆಟವಾಡುತ್ತಿದ್ದಾಗ ಊಟಕ್ಕೆ ಕರೆದರೆ ಕೂಡಲೇ ಓಡಿ ಬಂದು ಮಡಿಕೆಗಳನ್ನು ಮುಟ್ಟಿ ನೋಡುತ್ತಿದ್ದ. ಮೂರು ಮಡಿಕೆ ಬಿಸಿಯಾಗಿವೆ ಎಂಬುದು ಗೊತ್ತಾದ ಕೂಡಲೇ ಊರಿಗೆಲ್ಲ ಕೇಳುವಂತೆ ತಮ್ಮ ನಾಗರಾಜನನ್ನು ’ನಾಗಾ… ಅವ್ವಾರ ಮನೇಲಿ ಮೂರು ಮಡಿಕೆ ಬಾರೋ….’ ಎಂದು ಕೂಗುತ್ತಿದ್ದ. ನಾಗನೋ ಓಡಿ ಹೋಗಿ ಊಟಕ್ಕೆ ಕೂರುತ್ತಿದ್ದ. ಅದು ನನಗೆ ಅಜ್ಜಿ ಮನೆ ಅಲ್ಲದಿದ್ದರೂ, ಆಗೊಮ್ಮೆ ಈಗೊಮ್ಮೆ ಸ್ನೇಹಿತನೊಂದಿಗೆ ಅನ್ನ ಊಟ ಮಾಡುವ ಅವಕಾಶ ಸಿಗುತ್ತಿತ್ತು. ಈ ಕಾರಣಕ್ಕೆ ಮಹೇಶ ಇಂದಿಗೂ ‘ಮಡಿಕೆ’. ಇಂದಿಗೂ ಅವನ ಮೊಬೈಲ್ ನಂಬ ರ್ ನನ್ನ ಮೊಬೈಲ್ನಲ್ಲಿ ಮಡಿಕೆ ಎಂದೇ ಸೇವ್ ಆಗಿದೆ(ಆದರೆ ಇತ್ತೀಚೆಗಷ್ಟೆ ನಮ್ಮಿಂದ ದೂರವಾದ). ಅವನನ್ನು ಛೇಡಿಸಲು ಅಡ್ಡ ಹೆಸರಿಂದ ಕರೆಯುತ್ತಿದ್ದರೂ ಆ ಮೂರು ಮಡಿಕೆ ಸೂತ್ರದಲ್ಲಿ ಅನ್ನ ಮತ್ತು ಹಸಿವಿಗೆ ಇರುವ ಬೆಲೆ ಅರ್ಥವಾಗುತ್ತದೆ.

ಹಸಿವನ್ನೇ ಕಾಣದವರಿಗೆ, ಹುಟ್ಟಿನಿಂದಲೇ ಮನೆಯಲ್ಲಿ ನಿತ್ಯ ಮೂರು ಮಡಿಕೆ ಬಿಸಿ ಮಾಡಿಕೊಂಡು ಉಂಡವರಿಗೆ ಅನ್ನದ ಮಹತ್ವ ಅರ್ಥವಾಗುವುದು ಕಷ್ಟ. ವಾರಾನ್ನ ಉಂಡವರಿಗೆ ತಿಂಗಳುಗಟ್ಟಲೆ ಅನ್ನವನ್ನೇ ಕಾಣದವರ ನೋವು ಗೊತ್ತಾಗುವುದಿಲ್ಲ. ಇಲ್ಲಿಯ ನಾನು ಅನುಭವಿಸಿದ ಘಟನೆಗಳು ಕೇವಲ ಹತ್ತು-ಹದಿನೈದು ವರ್ಷ ಹಿಂದಿನವು. ಇಂದಿಗೂ ಬಡತನ ನಮ್ಮ ಊರಲ್ಲಿ ಹೆಚ್ಚು-ಕಮ್ಮಿ ಅಷ್ಟೇ ಇದೆ.

ಭೈರಪ್ಪ ಮತ್ತು ಅನ್ನಭಾಗ್ಯ : ಒಂದು ಹಿಡಿ ಅಕ್ಕಿಯ ಕಥೆ


– ಶ್ರೀಧರ್ ಪ್ರಭು


ಕಲ್ಕತ್ತೆಯ ಬೇಲೂರು ಮಠದ ನಿರ್ಮಾಣ ಕೊನೆಯ ಹಂತದಲ್ಲಿತ್ತು. ಅಲ್ಲಿ ಹೆಚ್ಚಿನ ಕಟ್ಟಡ ಕಾರ್ಮಿಕರೆಲ್ಲರೂ ಬಂಗಾಳ ಬಿಹಾರ ಗಡಿ ಭಾಗದ ಸಂಥಾಲ್ ಆದಿವಾಸಿಗಳು. ಎರಡು ತುತ್ತು ಅನ್ನ ಕೊಟ್ಟರೆ ಸಾಕು ಬಂಗಾಳದ ಹಳ್ಳಿಗಳಲ್ಲಿ ಕೃಷಿ ಕೂಲಿ ಕೆಲಸ ಮತ್ತು ನಗರ ಭಾಗಗಳಲ್ಲಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಕೊಂಡು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದ ಈ ಕಷ್ಟ ಜೀವಿಗಳ ಮಧ್ಯೆ ತುಂಬು ಆತ್ಮೀಯತೆಯಿಂದ ಬೆರೆತು ಹೋಗುತ್ತಿದ್ದ ವಿವೇಕಾನಂದರಿಗೆ ಬಹು ಬೇಗ ಕ್ಷೀಣಿಸುತ್ತಿದ್ದ ತಮ್ಮ ಅರೋಗ್ಯದ ಪರಿವೆ ಎಲ್ಲವೂ ಮರೆಯುತ್ತಿತ್ತು. ಒಂದು ದಿನ ವಿವೇಕಾನಂದರು ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಒಬ್ಬ ಶಿಷ್ಯರಿಗೆ ಹೇಳುತ್ತಾರೆ ” ನನ್ನ ಕೊನೆಯ ಆಸೆ ಏನು ಗೊತ್ತೇ? Vivekanandaಯುರೋಪ್ ಮತ್ತು ಅಮೇರಿಕೆಯಲ್ಲಿ ಜರುಗುವ ನಮ್ಮ ವೇದಾಂತ ಕಾರ್ಯಕ್ರಮಗಳ ಸಂಪಾದನೆಯನ್ನು ಸಂಪೂರ್ಣವಾಗಿ ವ್ಯಯಿಸಿದರೂ ಚಿಂತೆಯಿಲ್ಲ, ಈ ನನ್ನ ಜನಕ್ಕೆ ದಿನವೂ ಹೊಟ್ಟೆ ತುಂಬಾ ಅನ್ನ ಬಡಿಸಬೇಕು. ಎಷ್ಟೊಂದು ಅನ್ನ ಗೊತ್ತೇ? ಈ ಅನ್ನಕ್ಕೆ ಬೇಕಿರುವ ಅಕ್ಕಿಯನ್ನು ಬಸಿದು ಚೆಲ್ಲಿದ ನೀರಿನಿಂದ ಗಂಗೆಯ ಮಡಿಲೆಲ್ಲವೂ ಬೆಳ್ಳಗಾಗಿ ಬಿಡಬೇಕು!”

ಇದೆಲ್ಲ ಕಳೆದು ಸುಮಾರು ನೂರಾ ಹದಿನೈದು ವರ್ಷಗಳು ಸಂದರೂ ಗಂಗೆ, ಯಮುನೆ, ತುಂಗೆ, ಭಾಗೀರತಿಗಳ ನೀರು ಇನ್ನೂ ಬೆಳ್ಳಗಾಗಿಲ್ಲ.

ಮೇ ೨೦೧೫ ರಲ್ಲಿ ವಿಶ್ವ ಸಂಸ್ಥೆಯ “ಆಹಾರ ಮತ್ತು ಕೃಷಿ ಸಂಘಟನೆ” (FAO) ಪ್ರಕಟಿಸಿದ “ವಿಶ್ವ ಆಹಾರ ಸುರಕ್ಷತಾ “ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ೧೯೪.೬ ಮಿಲಿಯನ್ (ಹತ್ತೊಂಬತ್ತುವರೆ ಕೋಟಿ) ಜನ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲೂ ಸಾಕಷ್ಟಿದೆ.

೨೦೧೧ ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿನ “ವಿಮೋಚನಾ” ಸಂಘಟನೆಯ ಅಧ್ಯಕ್ಷರು ಅಂದಿನ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಕರ್ನಾಟಕದಲ್ಲಿ ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳ ಬಗ್ಗೆ india-poverty-hungerಒಂದು ಸವಿಸ್ತಾರವಾದ ಪತ್ರ ಬರೆದು ಕರ್ನಾಟಕದ ನ್ಯಾಯಾಂಗ ಈ ಬಗ್ಗೆ ಗಮನ ಹರಿಸಲು ಕೋರುತ್ತಾರೆ. ಮಾನ್ಯ ಉಚ್ಚ ನ್ಯಾಯಾಲಯವು ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆಯೆಂದು (W. P. No. 381571 / 2011) ದಾಖಲಿಸಿಕೊಂಡು, ಅಕ್ಟೋಬರ್ ೨೦೧೧ ರಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಒಂದು ವಿವರವಾದ ವರದಿ ನೀಡಲು ನಿರ್ದೇಶನ ನೀಡುತ್ತಾರೆ. ಆಗಸ್ಟ್ ೨೦೧೨ ರಲ್ಲಿ ಸೇವಾ ಪ್ರಾಧಿಕಾರ, ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎನ್. ಕೆ. ಪಾಟೀಲ್ ನೇತೃತ್ವದ ಸಮಿತಿ ರಚಿಸಿ ತನ್ನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ವರದಿಯಲ್ಲಿನ ಕೆಲವು ವಿವರಗಳನ್ನು ಗಮನಿಸಿ:

  1. ಪ್ರತಿ ಸಾವಿರ ಶಿಶುಗಳಲ್ಲಿ ಕರ್ನಾಟಕದಲ್ಲಿ ಆಹಾರ ಕೊರತೆಯಿಂದಾಗಿ ಒಂದು ವರ್ಷಕ್ಕೂ ಮಿಕ್ಕದ ೪೩ ಶಿಶುಗಳು ಅಸು ನೀಗುತ್ತವೆ.
  2. ಐದು ವರ್ಷಗಳ ಒಳಗಿನ ಪ್ರತಿ ಸಾವಿರ ಶಿಶುಗಳಲ್ಲಿ ಸುಮಾರು ೫೫ ಶಿಶುಗಳು ಆಹಾರ ಕೊರತೆಯಿಂದ ಸಾವನ್ನಪ್ಪುತ್ತವೆ.
  3. ೨೦೧೨ ರ ಅಂಕಿ ಅಂಶ ಗಳ ಪ್ರಕಾರ ICDS ಯೋಜನೆಯಲ್ಲಿ ಕರ್ನಾಟಕದಲ್ಲಿ ದಾಖಲಾದ ೩೫,೯೯, ೪೮೪ ಮಕ್ಕಳಲ್ಲಿ ಸುಮಾರು ೧೧,೩೯,೪೫೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ, ಸುಮಾರು ೬೩,೨೭೩ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.
  4. ೨೦೧೨ ರಲ್ಲಿ ಸುಮಾರು ೧೬,೧೨,೧೬೩ ಮಕ್ಕಳಿಗೆ ICDS ಯೋಜನೆಯ ಲಾಭವೇ ದಕ್ಕುತ್ತಿಲ್ಲ. ಇವರಲ್ಲಿ ೨,೧೭,೮೮೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದರೆ, ೨೧,೧೫೧ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.

ಇದೆಲ್ಲ ನಾಲ್ಕು ವರ್ಷಗಳ ಹಿಂದಿನ ಕಥೆ. ಮತ್ತು ಇವೆಲ್ಲವೂ ಸರಕಾರಿ ಅಂಕಿ ಅಂಶಗಳಲ್ಲಿ ಹಿಡಿದಿಟ್ಟ ವಿವರಗಳು; ಇನ್ನು ಇಂದಿನ ಸತ್ಯಾಂಶ ಇನ್ನೆಷ್ಟು ಭೀಕರವೋ?

ನಮ್ಮ ಸಂವಿಧಾನದ ೩೯ (ಎಫ್ ) ವಿಧಿಯ ಪ್ರಕಾರ ಮಕ್ಕಳು ಆರೋಗ್ಯವಂತರಾಗಿ ಬದುಕಲು ಬೇಕಾದ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರಭುತ್ವಕ್ಕಿದೆ. ವಿಪರ್ಯಾಸವೆಂದರೆ, ನಲವತ್ತೇಳರ ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಏಳು ದಶಕಗಳು ಸಂದ ನಂತರ ಸ್ವತಂತ್ರ ಭಾರತದಲ್ಲಿ ಜನಿಸಿದ ಒಂದು ಶಿಶುವಿಗೆ ಕನಿಷ್ಠ ಬದುಕಲು ಬೇಕಿರುವಷ್ಟು ಆಹಾರ ಕೊಡದಷ್ಟು ದಾರಿದ್ರ್ಯವಿರುವ ಸಮಾಜದಲ್ಲಿ ನಾವಿದ್ದೇವೆ. ೨೦೦೫ ಮತ್ತು ೨೦೧೩ ರ ಮಧ್ಯೆ FCI ಗೋದಾಮುಗಳಲ್ಲಿ ಸುಮಾರು 1.94 ಲಕ್ಷ ಮೆಟ್ರಿಕ್ ಟನ್ ಗಳಷ್ಟು (೧೯೪೦೦೦೦೦೦೦೦೦೦೦ ಕಿಲೊ) ಆಹಾರ ಸಾಮಗ್ರಿ ಮಣ್ಣು ಪಾಲಾಗಿದೆ. ಇದರ ಸಾವಿರದ ಒಂದು ಅಂಶ ಆಹಾರ ಶಿಶುಗಳ ಹಸಿದ ಹೊಟ್ಟೆ ಸೇರಿದ್ದರೆ ಎಷ್ಟು ಲಕ್ಷ ಮಕ್ಕಳನ್ನು ಬದುಕಿಸಬಹುದಿತ್ತೋ?

ಪ್ರಸಕ್ತದಲ್ಲಿ ಅನ್ನವನ್ನು ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಡವರಿಗೆ ಅಕ್ಕಿಕೊಡುವದರಿಂದ ಮೊದಲ್ಗೊಂಡು, Siddaramaiah-annyabhagyaಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವದನ್ನು ಕೂಡ ವಿರೋಧಿಸಲಾಗುತ್ತಿದೆ. ಒಂದು ಕಡೆ, ಭಾರತವನ್ನೇ ತಮ್ಮ ಮನೆ ಮಾಡಿಕೊಂಡು ಬಡವರ ಮಧ್ಯೆ ಗುಡಿಸಲು ಕಟ್ಟಿಕೊಂಡು ಬಡಜನರನ್ನು ಸಂಘಟಿಸುತ್ತಿರುವ ವಿಶ್ವ ಮಾನ್ಯ ಅರ್ಥ ಶಾಸ್ತ್ರಜ್ಞ್ಯ ಜೀನ್ ಡ್ರೀಜ್ ರಂಥವರು ಬಡವರ ಆಹಾರದ ಹಕ್ಕಿನ ಪರ ಧ್ವನಿ ಎತ್ತಿದ್ದಾರೆ. ಆದರೆ ಭಾರತವನ್ನು ‘ಮಾತೃಭೂಮಿ’ ಎನ್ನುವ “ಬುದ್ಧಿವಂತ” ಜಾತಿಗಳ ಸಾಹಿತಿಗಳು ಇದನ್ನು ವಿರೋಧಿಸಿದ್ದಾರೆ. ಮಾತು ಮಾತಿಗೆ ವೇದ ಉಪನಿಷತ್ತು ಉಲ್ಲೇಖಿಸಿ ಮಾತನಾಡುವವರು “ಅನ್ನಂ ಬ್ರಹ್ಮೇತಿ ವ್ಯಜಾನತ್” ಎಂಬ ತೈತ್ತಿರೀಯ ಉಪನಿಷತ್ತಿನ ವಾಕ್ಯವನ್ನು ಕೇವಲ ತಮ್ಮ ಚಿತ್ತ ಭಿತ್ತಿಯಲ್ಲಿ ಮೂಡಿಸಿಕೊಳ್ಳದೆ ಭಾವಕೋಶದಲ್ಲಿಳಿಸಿಕೊಂಡು ನೋಡಿದರೆ ಹಸಿವಿನ ಭೀಕರತೆ ಕಾಣಿಸೀತು. ಶಾಸ್ತ್ರಗಳನ್ನೇ ಶಸ್ತ್ರ ಮಾಡಿಕೊಂಡು ಸಮಾಜದ ಬಹುಜನರನ್ನು ಅಕ್ಷರದಿಂದ ವಂಚಿಸಿದ ಶಕ್ತಿಗಳೇ ಇಂದು ಬಡವರಿಗೆ ಅನ್ನದಿಂದ ವಂಚಿಸುವ ಹುನ್ನಾರದಲ್ಲಿ ಒಂದಾಗಿದ್ದಾರೆ.

ಮಧ್ಯಮವರ್ಗಕ್ಕೂ ಸಾಕಷ್ಟು ಗೊಂದಲಗಳಿವೆ. ಇಂದು ಸರಕಾರ ಸಬ್ಸಿಡಿ ಹಣ ನೀಡದಿದ್ದರೆ ಇಂದು ಪ್ರತಿ ಮನೆಗೂ ಒಂದೂವರೆ ಪಟ್ಟು ವಿದ್ಯುತ್ ಮತ್ತು ಅಡುಗೆ ಗ್ಯಾಸ್ ದರ ತೆರಬೇಕು. ಒಂದೇ ಒಂದು ವರ್ಷ ಸಬ್ಸಿಡಿ ನೀಡದಿದ್ದರೆ ದೇಶದ ಅರವತ್ತು ಶೇಕಡಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸತ್ತು ಹೋಗುತ್ತವೆ. IITಯ ವಿವೇಕಾನಂದ ಅಧ್ಯಯನ ಕೇಂದ್ರದಲ್ಲಿ ದೇಶಭಕ್ತಿ ಪ್ರದರ್ಶಿಸಿ ಬೇಜಾರಾದ ನಂತರ ನಂತರ ಅಮೇರಿಕ ಕೈ ಬೀಸಿ ಕರೆಯುತ್ತದೆ. ಮಧ್ಯಮ ವರ್ಗಕ್ಕೆ ಇವೆಲ್ಲವೂ ಪ್ರಕೃತಿ ಸಹಜ; ಆದರೆ ಬಡವರಿಗೆ ಅಕ್ಕಿ ಕೊಟ್ಟರೆ ಅದು ದೇಶ ದ್ರೋಹ!

ಹತ್ತಾರು ಸಾವಿರ ಕೋಟಿ ಕೈಗಾರಿಗಾ ಸಹಾಯ ಧನ ಮತ್ತು ಪುಗಸಟ್ಟೆ ಸರಕಾರಿ ಜಮೀನು ಪಡೆದು ಕೊಂಡು ಹತ್ತೂವರೆ ಸಾವಿರ ಕಾರ್ಮಿಕರನ್ನು ದುಡಿಸಿಕೊಂಡು ಕೇವಲ ಎರಡೂವರೆ ದಶಕಗಳಲ್ಲಿ ಹದಿನೇಳು ಸಾವಿರದ ಐನೂರು ಬಿಲಿಯನ್ ಡಾಲರ್ (ರೂಪಾಯಿ ಅಲ್ಲ ಅಮೆರಿಕನ್ ಡಾಲರ್, ಗಮನಿಸಿ) ಸಂಪತ್ತು ಸಂಗ್ರಹಿಸಿರುವ ಗೌತಮ್ ಅದಾನಿಯವರಿಗೇ ಸುಸ್ತಾಗಿಲ್ಲ, ಇನ್ನು ಸಾಕು ಎನಿಸಿಲ್ಲ; ಇನ್ನು ತಿಂಗಳಿಗೆ ಹತ್ತು-ಹದಿನೈದು ಕೆಜಿ ಅಕ್ಕಿ ಪಡೆದುಕೊಂಡ ಬಡವನಿಗೆ ಸೋಮಾರಿತನ ಬರುತ್ತದೆಯೇ?

ಇಂದು ಬಡವರ ಜೀವನಕ್ಕೆ ಅಕ್ಕಿ ಬಂದು ಅವರ ಪ್ರಾಥಮಿಕ ಅಗತ್ಯತೆಗಳಿಗೆ ಹರಸಾಹಸ ಮಾಡುವ ಪ್ರಮೇಯ ಕೊಂಚ ಮಟ್ಟಿಗೆ ತಗ್ಗಿದೆ. ಎರಡು ಮುಷ್ಟಿ ಅಕ್ಕಿಗೆ ಜೀತದಂತೆ ದುಡಿಸಿಕೊಳ್ಳುವವರ ಸೊಲ್ಲು ಸ್ವಲ್ಪ ಅಡಗಿದೆ. ಮನೆ ಕೆಲಸದವರಿಂದ ಮೊದಲ್ಗೊಂಡು ಕಟ್ಟಡ ಕಾರ್ಮಿಕರ ತನಕ ಅಸಂಖ್ಯ ಅಸಂಘಟಿತರಿಗೆ ಮಾನವ ಘನತೆಗೆ ಸಲ್ಲಬೇಕಾದ ವೇತನ ಕೊಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೊಲದಲ್ಲಿ ದುಡಿಯುವ ಕೃಷಿ ಕಾರ್ಮಿಕ, ನಮ್ಮ ಕೊಳೆ ತೊಳೆಯುವ ಪೌರ ಕಾರ್ಮಿಕರಿಗೆ ಚಿಲ್ಲರೆ ಕಾಸು ಕೊಟ್ಟು ದುಡಿಸಿಕೊಳ್ಳುವ ಕಾಲ ಮರೆಯಾಗುತ್ತಿದೆ.

ಇಂದು ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬುದ್ಧಿಶಕ್ತಿಯಿಂದ ಮತ್ತು ಶ್ರಮಶಕ್ತಿಯಿಂದ ಕೆಲಸ ಮಾಡುವ ಕಾರ್ಮಿಕರ ವೇತನಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅದು ಇರಲೂ ಕೂಡದು. ನಿಜವಾಗಿ ನೋಡಿದರೆ ಶ್ರಮ ಶಕ್ತಿಯ ಕಾರ್ಮಿಕರಿಗೆ ಹೆಚ್ಚಿನ ಆಹಾರ ಮತ್ತು ಅರ್ಥಿಕ ಸುರಕ್ಷತೆಯ ಅಗತ್ಯವಿದೆ.

ನಿಮಗೆ ಗೊತ್ತಿರಲಿ, ಸಬ್ಸಿಡಿಯನ್ನು ಹಿಗ್ಗಾ ಮುಗ್ಗಾ ವಿರೋಧಿಸುವ ಅಮೇರಿಕ ವರ್ಷವೊಂದಕ್ಕೆ ತನ್ನ ಕೃಷಿ ಕ್ಷೇತ್ರಕ್ಕೆ ೨೦ ಬಿಲಿಯನ್ ಡಾಲರ್ ಗಳಷ್ಟು “ಸಹಾಯ ಧನ” ನೀಡುತ್ತದೆ. ಯೋಚಿಸಿ ನೋಡಿ, ಎಲ್ಲವನ್ನು ಮಾರುಕಟ್ಟೆಯೇ ನಿರ್ಧರಿಸಲಿ ಎಂದು ಬಗ್ಗೆ ಜಗತ್ತಿಗೆಲ್ಲ ಪಾಠ ಹೇಳುವ ಅಮೇರಿಕ ಯಾಕೆ ಸಹಾಯ ಧನ ಕೊಡಬೇಕು? ಯಾಕೆಂದರೆ ಜಾಗತಿಕ ಕೃಷಿ ಬಿಕ್ಕಟ್ಟು ಎಷ್ಟು ಭೀಕರವಾಗಿದೆಯೆಂದು ಎಲ್ಲರಿಗಿಂತ ಚೆನ್ನಾಗಿ ಅಮೆರಿಕೆಗೇ ಗೊತ್ತಿದೆ. ಬಂಡವಾಳ ಆಕರ್ಷಿಸುವ ನೆಪದಲ್ಲಿ ಇದ್ದ ಅರಣ್ಯ ಮತ್ತು ಕೃಷಿ ಭೂಮಿಯನ್ನು ಕಸಿಯುತ್ತಿರುವ ಸರಕಾರಗಳು ಕೃಷಿಯನ್ನು ಅಷ್ಟಿಷ್ಟು ಕೂಡ ಪೋಷಿಸದಿದ್ದರೆ ಇನ್ನು ಒಂದೆರಡು ದಶಕಗಳಲ್ಲೇ ಹೊಟ್ಟೆಗೆ ಸಿಮೆಂಟ್ ತಿನ್ನುವ ಪ್ರಮೇಯ ಬಂದೀತು. ಅಕ್ಕಿ ದವಸ ಧಾನ್ಯಗಳನ್ನು ವಿತರಿಸುವ ಅನಿವಾರ್ಯತೆ ಇದ್ದ ಕಡೆ ಅವುಗಳನ್ನು ಖರೀದಿಸುವ ಅನಿವಾರ್ಯತೆ ಕೂಡ ಇರುತ್ತದೆ. ಹಾಗೆಂದೇ, ರೈತರ ಬೆಳೆಗಳಿಗೆ ತಕ್ಕ ಬೆಲೆಯೂ ದಕ್ಕುತ್ತದೆ.

ಕಾಲೇಜ್ ಮತ್ತು ವಿಶ್ವ ವಿದ್ಯಾಲಯ ಪ್ರಾಧ್ಯಾಪಕರೂ ಸೇರಿದಂತೆ, ಇಂದು ಸಂಘಟಿತವಲಯದಲ್ಲಿರುವ ಕಾರ್ಮಿಕ ವರ್ಗ (ಮಧ್ಯಮ ವರ್ಗ), ಬ್ಯಾಂಕ್, ಸರಕಾರಿ ವಲಯ, ವಿಮಾ ನೌಕರರು ಇತ್ಯಾದಿ ESI, PF, PPF, ಪೆನ್ಷನ್ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. india-middle-classಆದಾಯ ತೆರಿಗೆ ಕಟ್ಟುವ ಈ ದೇಶದ ತೆರಿಗೆದಾರ ಈ ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ಯಾಕೆ ಹಣ ಕೊಡಬೇಕು? ಈ ಹಣವನ್ನು ಬಂಡವಾಳವಾಗಿ ವಿನಿಯೋಗಿಸಿದರೆ ಇನ್ನಷ್ಟು ಲಾಭ ಬರುವದಿಲ್ಲವೆ? ಈ ಪ್ರಶ್ನೆಗೆ ಮಧ್ಯಮ ವರ್ಗ ಉತ್ತರಿಸುವುದೇ?

ಅದು ಹೋಗಲಿ, ನಮ್ಮ ಖಾತೆಯ ಮಂತ್ರಿಗಳಿಗೆ ವಯಸ್ಸು ಜಾಸ್ತಿಯಾಯಿತು, ಅವರು ಸೂಟು ಬೂಟು ಧರಿಸಿ ಇಂಗ್ಲೀಷ್ ಮಾತಾಡುವುದಿಲ್ಲ ಹಾಗಾಗಿ ಅವರನ್ನು ಬದಲಾಯಿಸಿ ಎಂದು ಪಟ್ಟು ಹಿಡಿದ IT, ITES, BT, BPO ವಲಯ, ಸರಕಾರದ ಸಹಾಯಧನ ಪಡೆದು ಸಾಮಾನ್ಯ ವಾಣಿಜ್ಯ ಬಳಕೆಯ ವಿದ್ಯುತ್ ದರಕ್ಕಿಂತ ಶೇಕಡಾ ೨೫ ರಷ್ಟು ಕಡಿಮೆ ವಿದ್ಯುತ್ ದರ ಪಾವತಿ ಮಾಡುತ್ತಿದೆ ಎಂಬುದು ಎಷ್ಟು ಜನಕ್ಕೆ ಗೊತ್ತಿದೆ? ಈ ವಿನಾಯತಿ ಸುಮಾರು ಹದಿನೈದು ವರ್ಷಗಳಿಂದ ಜಾರಿಯಲ್ಲಿದೆ. ಈ ವಿನಾಯತಿ ಹಣವನ್ನು ವಿನಿಯೋಗಿಸಿದ್ದರೆ ಇಂದು ಕರ್ನಾಟಕದಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತಿರಲಿಲ್ಲವೇ? ಇದು ಪರವಾಗಿಲ್ಲ; ಆದರೆ ಅಕ್ಕಿ ಕೊಟ್ಟರೆ ಅದು ಅರ್ಥಿಕ ವಿಕೃತಿ? ಅಲ್ಲವೇ?

ಅನ್ನಭಾಗ್ಯವನ್ನು ವಿರೋಧಿಸುವವರಲ್ಲಿ ಬಹುತೇಕರು ಹೇಳುವುದು ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದು. ಇಂದು ಕೈಗಾರಿಕಾ ಶೆಡ್ ಗಳು, ಸರಕಾರೀ ಬಂಗಲೆಗಳು, BDA ನಿವೇಶನಗಳು, ಬಿಟ್ಟರೆ, ಪ್ರಶಸ್ತಿ, ಬಿರುದು ಬಾವಲಿಗಳನ್ನೂ ಮಾರಿಕೊಂಡವರಿದ್ದಾರೆ. ಸರಕಾರಿ ಉದ್ಯೋಗದಲ್ಲಿದ್ದು ಕೊಂಡೇ ಖಾಸಗಿ ಕೆಲಸ ಮಾಡುವ ವೈದ್ಯರು, ಶಿಕ್ಷಕರು, ಯಾವುದಕ್ಕೂ ಬರವಿಲ್ಲ. ಅಸಮತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಮಾಜದಲ್ಲಿ ಅಂತಹ ವಿಕೃತಿಗಳು ಎಲ್ಲಾ ಹಂತಗಳಲ್ಲೂ, ಎಲ್ಲಾ ವರ್ಗ ವಿಭಾಗಗಳಲ್ಲೂ ಸಹಜವಾಗಿ ನುಸುಳಿವೆ. ಈ ವಿಕೃತಿಗಳನ್ನು ಖಂಡಿತ ತಡೆಯಬೇಕು; ಅಂತೆಯೇ, ಮೇಲಿನ ಸ್ಥರದಿಂದ ಮೊದಲ್ಗೊಂಡು ಈ ಪ್ರಯತ್ನವಾಗಬೇಕೇ ವಿನಃ ನಿರ್ಗತಿಕರಿಂದ ಅನ್ನ ಕಸಿಯುವ ಮೂಲಕ ಅಲ್ಲ. ಸರಕಾರೀ ಆಸ್ಪತ್ರೆಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪತ್ರೆಯನ್ನೇ ಮುಚ್ಚುವುದು ಹೇಗೆ ಮದ್ದಲ್ಲವೋ ಹಾಗೆಯೇ ಅನ್ನಭಾಗ್ಯದ ದುರುಪಯೋಗಕ್ಕೆ ಅನ್ನವನ್ನೇ ಕಸಿಯುವುದೂ ಮದ್ದಲ್ಲ.

ಇಂದು ಎಲ್ಲೆಂದರಲ್ಲಿ ತಲೆ ಎತ್ತಿರುವ ವಿಶೇಷ ವಿತ್ತ ವಲಯಗಳನ್ನು (SEZ) ನೋಡಿ. ಈ ವಲಯಗಳಿಗೆ ಭಾರತದ ಯಾವ ಕಾನೂನು ಕೂಡ ಅನ್ವಯಿಸುವುದಿಲ್ಲ. ನಿಜವಾಗಿ ನೋಡಿದರೆ ಕಾನೂನಿನ ಪ್ರಕಾರ SEZಗಳು ಭಾರತದ ಸ್ವಾಧೀನತೆಗೆ ಒಳಪಡುವುದಿಲ್ಲ. ಕರ್ನಾಟಕ ಒಂದರಲ್ಲೇ ಸುಮಾರು ಒಂದು ನೂರರಷ್ಟು SEZ ಗಳು ತಲೆ ಎತ್ತಿವೆ. ಇಂದು ಒಬ್ಬ ಸಾಮಾನ್ಯ ವಲಯದ ದೊಡ್ಡ ಕೈಗಾರಿಕೊದ್ಯಮಿಗೆ ಕನಸಲ್ಲೂ ದಕ್ಕದ ಸವಲತ್ತುಗಳು SEZ ವಲಯಕ್ಕೆ ದಕ್ಕಿವೆ. ತೆರಿಗೆ ವಿನಾಯತಿ, ಸ್ಟ್ಯಾಂಪ್ ಮೊತ್ತದ ವಿನಾಯತಿ, ವಿದ್ಯುತ್ ದರದಲ್ಲಿ ಕಡಿತ ಇತ್ಯಾದಿ ಸವಲತ್ತುಗಳು ದೊರೆಯುವ ಈ SEZ ಗಳ Streetchildrenಬಗ್ಗೆ ಯಾವ ಕೈಗಾರಿಕಾ ದಿಗ್ಗಜನೂ ಸೊಲ್ಲೆತ್ತುವುದಿಲ್ಲ. ಅವರ ಸಿಟ್ಟು ಏನಿದ್ದರೂ ಅಕ್ಕಿಯ ಮೇಲೆ.

ಅದು ಹೋಗಲಿ ನಿಮ್ಮ ಮನೆಯಲ್ಲಿ ಮೇಲೆ ಸೌರ ಶಕ್ತಿ ಚಾಲಿತ ಹೀಟರ್ ಅಳವಡಿಸಿದರೆ ಒಂದು ವಿದ್ಯುತ್ ಯೂನಿಟ್ ಗೆ ಐವತ್ತು ಪೈಸೆ ವಿನಾಯತಿಯಿದೆ. ಇದಕ್ಕೆ ಕೊಡುವ ಸಮರ್ಥನೆ ಏನು ಗೊತ್ತೇ ಅಷ್ಟರ ಮಟ್ಟಿಗೆ ಉಷ್ಣ ಸ್ಥಾವರದ ಕಲ್ಲಿದ್ದಲು ಉಳಿತಾಯ ಮತ್ತು ಇದು ಪರಸರ ಸ್ನೇಹಿ. ಅದೇ ಒಬ್ಬ ಬಡವ ತನ್ನ ಮನೆಯ ಭೂಸ ಇಲ್ಲವೇ ಸೆಗಣಿ ಶೇಖರಿಸಿ ನೀರು ಬಿಸಿ ಮಾಡಿದರೆ, ಇಲ್ಲಾ ತಣ್ಣೀರು ಸ್ನಾನ ಮಾಡಿದರೆ ಯಾವ ವಿದ್ಯುತ್ ವಿನಾಯತಿ ಇದೆ?

ಸಮಾಜದ ಹೆಚ್ಚಿನ ಸವಲತ್ತು ಸಹಾಯ ಧನಗಳು ಯಾವತ್ತೂ ಅಪಾತ್ರರಿಗೇ ಮೀಸಲು. ತಳವರ್ಗ ಸ್ವಲ್ಪ ಮಟ್ಟಿನ ತುಂಡು ತುಣುಕು ಏನಾದರೂ ಕೇಳಲು ಬಂದರೆ ಗದರಿ ಕಳಿಸುವ ವ್ಯವಸ್ಥೆ ನಮ್ಮದು.

ಒಂದು ಹಿಡಿ ಅಕ್ಕಿ, ಒಂದು ಮೊಟ್ಟೆ ತಿಂದು ಯಾವ ಬಡವನೂ ಕೈಗಾರಿಕಾ ಸಾಮ್ರಾಜ್ಯ ಕಟ್ಟುವುದಿಲ್ಲ. ಹಾಗೆಯೇ, ಸರಕಾರದ ಸೌಕರ್ಯ, ವಿನಾಯತಿ, ಸವಲತ್ತು ಪಡೆದು ನಡೆಸುವ ಯಾವ ಕೈಗಾರಿಕೆಗಳೂ ಬಡವರು ಒಂದು ಹೊತ್ತಿನ ಅನ್ನ ತಿಂದ ಮಾತ್ರಕ್ಕೆ ಸತ್ತು ಹೋಗುವುದಿಲ್ಲ. ಯಾರಿಗೆ ಏನೇ ಆಗಲಿ, ಯಾವ (ರಾಷ್ಟ್ರೀಯ) ಪ್ರಾಧ್ಯಾಪಕರ ಸಂಬಳ ಸವಲತ್ತಿಗೂ ಬಡವನ ಅಕ್ಕಿಯಿಂದ ಕತ್ತರಿ ಬೀಳುವುದಿಲ್ಲ.

ಒಂದು ಕೊನೆಯ ಮಾತು. ಕೈಗಾರಿಕೆಗಳು, ಉದ್ದಿಮೆದಾರರು, ರಾಜಕಾರಣಿಗಳು, ಅರ್ಥ ಶಾಸ್ತ್ರಜ್ಞರು ವ್ಯಕ್ತಪಡಿಸುತ್ತಿರುವ ವಿರೋಧವನ್ನು ಅರ್ಥೈಸಿಕೊಳ್ಳಬಹುದು. ಆದರೆ ಜೀವನದ ದಯನೀಯ ಮಜಲುಗಳನ್ನು ಕಂಡಿರುವ ಒಬ್ಬ ಸಾಹಿತಿBhyrappa ಅನ್ನ ವಿರೋಧಿಯಾದರೆ ತುಂಬಾ ಸಂಕಟವೆನಿಸುತ್ತದೆ. ಭೈರಪ್ಪನವರನ್ನು ಸೈದ್ಧಾಂತಿಕ ಕಾರಣಗಳಿಗಾಗಿ ವಿರೋಧಿಸುವವರೂ ಕೂಡ ಅವರ ಸಂಘರ್ಷಮಯ ಜೀವನವನ್ನು ಗೌರವಿಸುತ್ತಿದ್ದರು. ಆದರೆ ವಿಪರ್ಯಾಸವೆಂದರೆ, ಹಸಿವಿನ ಸಂಕಟವನ್ನು ಇನ್ನಿಲ್ಲದಂತೆ ಅನುಭವಿಸಿ, ಅವಿರ್ಭಾವಿಸಿ ಪಕ್ವವಾಗಬೇಕಿದ್ದ, ಹಸಿವಿನ ಕುರಿತು ಜಾಗೃತಿ ಮೂಡಿಸಿ ಹೋರಾಟ ನಿರೂಪಿಸುವದರಲ್ಲಿ ಮುಂಚೂಣಿಯಲ್ಲಿರ ಬೇಕಿದ್ದ ನಾಡಿನ ಹಿರಿಯ ಜೀವವೊಂದು ಅನ್ನವನ್ನು ವಿರೋಧಿಸುತ್ತಿರುವುದು ಅತ್ಯಂತ ಕ್ರೂರ ವಿಪರ್ಯಾಸ.

ಮಾರುಕಟ್ಟೆಯ ಮಂತ್ರವಾದಿಗಳ ಅಕ್ಷಮ್ಯ ಅನಾಚಾರಗಳ ಬಗ್ಗೆ ಸೊಲ್ಲೇ ಎತ್ತದ ಭೈರಪ್ಪನವರು, ತಮ್ಮ ಎಲ್ಲ ಬಾಣ ಬಿರುಸು ಗಳನ್ನೂ ಒಂದು ತುತ್ತು ಅನ್ನದ ಮೇಲೆ ಹೂಡುತ್ತಿದ್ದಾರೆ. ಶಾಸಕರ ಕುದುರೆ ವ್ಯಾಪಾರ, ರೆಸಾರ್ಟ್ ರಾಜಕೀಯ, ಗಣಿ ಅಟ್ಟಹಾಸಗಳಿಂದ ತುಂಬಿದ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಕರ್ನಾಟಕದ ಜನ ಸಮುದಾಯ ಒಟ್ಟು ಗೂಡಿ ತಿರಸ್ಕರಿಸಿದಾಗ ಜನ ಸಮುದಾಯಕ್ಕೆ ನೇತೃತ್ವ ಕೊಡಲು ಬಾರದ ಈ ಜಾಗೃತಿ ಅನ್ನವನ್ನು ಹಂಚಲು ಹೊರಟಾಗ ಹೇಗೆ ಜಾಗೃತವಾಯಿತೋ ಅವರೇ ಹೇಳಬೇಕು.

‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡಲು ನಿರಾಕರಿಸುತ್ತಿರುವ ಸಂಗೀತಪ್ರೇಮಿ ಹಾಡುಗಾರನ ಅಳಲು

ನಾನೇಕೆ ‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡುತ್ತಿಲ್ಲ…

 – ಟಿ.ಎಂ.ಕೃಷ್ಣ
ಕನ್ನಡಕ್ಕೆ: ಶ್ರೀಮತೀ ದೇವಿ.ಪಿ

ಮದರಾಸಿನ ಸಂಗೀತ ಸೀಸನ್

ಇದು ಮದರಾಸಿನಲ್ಲಿ ಪ್ರತಿವರ್ಷ ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ನಡೆಯುವ ಸಂಗೀತ ಹಬ್ಬ. ಸುಮಾರು ಆರು ವಾರಗಳ ಕಾಲ ನಡೆಯುವ ಇದರಲ್ಲಿ ಹಾಡುವುದು, ನುಡಿಸುವುದು ಸಂಗೀತಗಾರರಿಗೆ ಪ್ರತಿಷ್ಠೆಯ ವಿಷಯ. ದೇಶವಿದೇಶಗಳ ಸಂಗೀತ ಪ್ರೇಮಿಗಳು ತಮ್ಮ ನೆಚ್ಚಿನ ಸಂಗೀತಗಾರರ ಸಂಗೀತ ಕೇಳಲು ಮುಗಿಬಿದ್ದರೆ ಈಗ ತಾನೇ ತಲೆಯೆತ್ತುತ್ತಿರುವ ಕಲಾವಿದರು ಹಾಡುವ ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾರೆ. ಚೆನ್ನೈನ ವಿವಿಧ ಸಭಾಗಳು ಪೈಪೋಟಿಯ ಮೇಲೆ ಸ್ಟಾರ್ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅವಕಾಶಕ್ಕಾಗಿ ಲಾಬಿ, ಸ್ಟಾರ್ ಸಂಗೀತಗಾರರ ಮೇಲಾಟ, ಜನಪ್ರಿಯತೆಯೇ ಮುನ್ನೆಲೆಗೆ ಬರುತ್ತಿರುವುದು, ಭಿನ್ನ ಸಮುದಾಯಗಳನ್ನು ಒಳಗೊಳ್ಳದಿರುವುದು ಹೀಗೆ ಈ ಸಂಗೀತ ಹಬ್ಬ ಸಂಗೀತೇತರ ಕಾರಣಗಳಿಗೂ ಚರ್ಚೆಗೆ ಒಳಗಾಗುತ್ತಿರುವುದು chennai-music-seasonಅಲ್ಲಲ್ಲಿ ನಡೆದೇ ಇದ್ದರೂ ಈ ಬಗ್ಗೆ ದೊಡ್ಡದನಿ ಎತ್ತುವ ಕೆಲಸ ನಡೆದಿರಲಿಲ್ಲ. ಟಿ.ಎಂ.ಕೃಷ್ಣ ತಾವು ಇನ್ನು ಮುಂದೆ ಸೀಸನ್ನಲ್ಲಿ ಹಾಡುವುದಿಲ್ಲ ಎನ್ನುವುದರ ಮೂಲಕ ಕಲಾವಿದರು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳನ್ನು ಎತ್ತುತ್ತಾ ವಾಗ್ವಾದಕ್ಕೆ ಮುನ್ನುಡಿ ಬರೆದಿದ್ದಾರೆ.

ಚೆನ್ನೈಯ ಮ್ಯೂಸಿಕ್ ಸೀಸನ್ (ಡಿಸೆಂಬರ್) ನಲ್ಲಿ ಇನ್ನು ಮುಂದೆ ನಾನು ಹಾಡುವುದಿಲ್ಲ ಎಂಬ ನನ್ನ ತೀರ್ಮಾನ, ಏಕಾಏಕಿಯಾದದ್ದಲ್ಲ ಹಾಗೂ ಯಾವುದೇ ಒಂದು ನಿರ್ದಿಷ್ಟ ಘಟನೆಯಿಂದ ಹುಟ್ಟಿದ್ದಲ್ಲ. ಕಳೆದ ೪-೫ ವರ್ಷಗಳಿಂದ ನಾನು ಈ ಬಗ್ಗೆ ತುಂಬಾ ಆಲೋಚಿಸಿದ್ದೇನೆ. ಮ್ಯೂಸಿಕ್ ಸೀಸನ್‌ನೊಂದಿಗಿನ ನನ್ನ ಸಂಬಂಧವೇನು, ಇದರ ಮೂಲಕ ಸಂಗೀತಕ್ಕೆ ನಾವೇನನ್ನು ಕೊಡಲು ಹೊರಟಿದ್ದೇವೆ, ಹಾಗೂ ಈಗ ಈ ಸೀಸನ್ ಎಂಬುದು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳನ್ನು ನನಗೆ ನಾನೇ ಹಲವಾರು ಬಾರಿ ಕೇಳಿಕೊಂಡಿದ್ದೇನೆ.

ಚಿಕ್ಕಂದಿನಿಂದಲೂ ನಾನು, ಈ ಮ್ಯೂಸಿಕ್ ಸೀಸನ್ನಿನ ಕಛೇರಿಗಳನ್ನು ಕೇಳುತ್ತಾ ಬೆಳೆದಿದ್ದೇನೆ ಹಾಗೂ ಇವುಗಳಿಂದ ತುಂಬಾ ಕಲಿತಿದ್ದೇನೆ. ಸಂಗೀತ ಕ್ಷೇತ್ರದಲ್ಲಿನ ನನ್ನ ಪ್ರಗತಿಯೂ ಈ ’ಸಂಗೀತ ಹಬ್ಬ’ದೊಂದಿಗೇ ನಡೆದಿದೆ. ಆದ್ದರಿಂದ ಕಲಾತ್ಮಕವಾಗಿಯೂ, ವ್ಯವಸಾಯದಲ್ಲೂ ನನ್ನ ಬೆಳವಣಿಗೆಗೆ ಕಾರಣವಾದ ಸಂಗೀತ ಸೀಸನ್‌ಗೆ ಕೃತಜ್ನತೆ ಸಲ್ಲಿಸಲು ಮರೆತರೆ ಅದು ದೊಡ್ಡ ತಪ್ಪಾಗುತ್ತದೆ. ಆದರೆ, ಇತ್ತೀಚಿಗಿನ ಸಂಗೀತ ಸೀಸನ್, ಸಂಗೀತದಿಂದಲೇ ದೂರ ಹೋಗುತ್ತಿರುವಂತೆ ನನಗೆ ಕಾಣುತ್ತಿದೆ. ಇಲ್ಲಿ ಸಂಗೀತದ ಒಳಗಿನ ಹಾಗೂ ಸಂಗೀತದ ಆಚೆಗಿನ ಗಲಾಟೆ(ಶಬ್ದ) ನೋಡಿದರೆ, ಸಂಗೀತವೇ ಇಲ್ಲಿಂದ ಓಡಿ ಹೋಗುತ್ತಿದೆಯೆಂದು ಹೇಳುವುದೇ ಸೂಕ್ತವೇನೋ…

ಕಳೆದ ಎರಡು ದಶಕಗಳಿಂದ, ಚೆನ್ನೈನಲ್ಲಿ ಅದರಲ್ಲೂ ಮುಖ್ಯವಾಗಿ ಸಂಗೀತ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಸ್ಪರ್ಧಾತ್ಮಕವಾದ ಸಂಗೀತ ಆಯೋಜಕರು ಇರುವುದನ್ನು ನೋಡುತ್ತಿದ್ದೇವೆ. ಇಲ್ಲಿನ ಕಛೇರಿಗಳಲ್ಲೂ ವೈರುಧ್ಯವಿದೆ. ಇವುಗಳು ಎರಡು ವಿರುದ್ಧ ಧ್ರುವಕ್ಕೆ ಸೇರಿದಂಥವು. ಒಂದು ಕಡೆ ಇಲ್ಲಿ ಕೇವಲ ಬೆರೆಳೆಣಿಕೆಯಷ್ಟು ಜನ ಮಾತ್ರ ಸಂಗೀತ ಕೇಳಲು ಸೇರಿದ್ದರೆ, ಇನ್ನೊಂದೆಡೆ ’ಸೂಪರ್ ಸ್ಟಾರ್’ಗ:ಅ ಕಛೇರಿಗೆ ತಡೆಯಲಾಗದಷ್ಟು ಜನ ಸಂದಣಿ. tm-krishna-singerಇದು ಇವತ್ತು ಬಹುದೊಡ್ಡ ಸಮಸ್ಯೆ ಎನಿಸುವವರೆಗೆ ಸಾಗಿದೆ. ಜನರು ’ಸ್ಟಾರ್’ ಸಂಗೀತಗಾರರ ಸಂಗೀತ ಕೇಳಲು ಮುಗಿಬೀಳುವುದರಲ್ಲಿ ಯಾವುದೇ ಆಶ್ಚರ್ಯಪಡುವ ಸಂಗತಿ ಇಲ್ಲ ಎಂಬುದು ನನಗೆ ತಿಳಿದಿದ್ದರೂ, ಎಲ್ಲೋ ಒಂದು ಕಡೆ ಇಡೀ ಜನಸಮೂಹವೇ ಈ ’ಜನಪ್ರಿಯತೆ’ಯ ಕಡೆ ವಾಲುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ಇದು ನಮ್ಮಲ್ಲಿನ ಒಂದು ’ಕಲಾತ್ಮಕತೆಯ ಸಮಸ್ಯೆ’ಯೇ ಎಂದು ನನಗನಿಸುತ್ತದೆ. ಹಾಗೂ ಇದೇ ಸಮಸ್ಯೆಯನ್ನು ನಾವು ಮ್ಯೂಸಿಕ್ ಸೀಸನ್ ನಲ್ಲಿ ಕಾಣುತ್ತಿರುವುದು. ಈ ಭ್ರಮೆಯಿಂದಾಗಿ ನಮ್ಮಲ್ಲಿನ ಎಷ್ಟೋ ಅದ್ಭುತವಾದ ಸಂಗೀತಗಾರರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.

ಯಾವುದೇ ಕಲಾಪ್ರಕಾರ ತನ್ನೊಳಗಿರುವ ಕಲೆಯ ವೈವಿಧ್ಯತೆಯನ್ನು ಅರಿತುಕೊಂಡು, ಪ್ರಸಿದ್ಧರಾದ ಕೆಲವು ಗಾಯಕರು ಈ ವೈವಿಧ್ಯತೆಯೆ ’ಮುಖ’ ಹಾಗೂ ಉಳಿದೆಲ್ಲಾ ಕಲಾವಿದರು ಈ ಕಲೆಯ ಶ್ರೀಮಂತಿಕೆಗೆ ಕಾರಣರಾದ ದಾನಿಗಳು, ಪೋಷಕರು ಎಂದು ಗುರುತಿಸಲ್ಪಡುವ ವ್ಯವಸ್ಥೆ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ಆದರೆ, ಇವತ್ತು ನಮ್ಮಲ್ಲಿ ಈ ಉಳಿದ ಸಂಗೀತಗಾರರು ಗಣನೆಗೇ ಇಲ್ಲದವರಾಗಿದ್ದಾರೆ. ಈ ಪರಿಸ್ಥಿಗೆ ನಾನೂ ಒಬ್ಬ ಕಾರಣಕರ್ತನಾಗಿರುವುದರಿಂದ ಈ ವಿಚಾರ ನನ್ನನ್ನು ತುಂಬಾ ಕಾಡುತ್ತದೆ.

ಕನಸುಗಳನ್ನು ಹೊತ್ತ ಯುವ ಸಂಗೀತಗಾರರಿಗಂತೂ ನಿರಾಶಾದಾಯಕವಾದ ಸನ್ನಿವೇಶವೇ ಇಲ್ಲಿದೆ. ಒಂದು ಕಡೆ ಕಛೇರಿ ಪಡೆಯಲು ’ಹಣ’ ಡೊನೇಷನ್ ಹೆಸರಿನಲ್ಲಿ ಓಡಾಡುತ್ತಿದ್ದರೆ ಇನ್ನೊಂದೆಡೆ ಮಧ್ಯವರ್ತಿಗಳ ಕಸರತ್ತು. ’ಡಾಲರ್’ನ ಮಹಾತ್ಮೆಯಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವೆಲ್ಲದರ ನಡುವೆಯೂ ಕೇವಲ ತಮ್ಮ ಪ್ರತಿಭೆಯಿಂದ ಗುರುತಿಸಲ್ಪಟ್ಟ ಯುವಮಿತ್ರರ ಬಗ್ಗೆ ನನಗೆ ತುಂಬಾ ಹೆಮ್ಮೆಯೆನಿಸುತ್ತದೆ. ಆದರೆ, ಈ ಎಲ್ಲಾ ’ಆಟ’ ಗಳನ್ನು ಮಾಡಲಾಗದೇ ಇರುವ, ಅವಕಾಶ ವಂಚಿತರಾಗಿ ಹಿಂದೆ ಉಳಿದ ಅನೇಕ ಸಂಗೀತಗಾರರು ಇನ್ನೂ ನಮ್ಮಲ್ಲಿದ್ದಾರೆ. ೯೦ರ ದಶಕದ ಆರಂಭದಲ್ಲಿ ಪರಿಸ್ಥಿತಿ ಇಷ್ಟು ಕೆಟ್ಟದಾಗಿತ್ತೆಂದು ನನಗನಿಸುವುದಿಲ್ಲ.

ಚೆನ್ನೈನ ಮ್ಯೂಸಿಕ್ ಸೀಸನ್ ಎಂಬುದು ಹೆಚ್ಚು ಕಡಿಮೆ ’NRI ಕೃಪಾಪೋಷಿತ’ ಸೀಸನ್ ಆಗಿಬಿಟ್ಟಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅನೇಕ ಸಂಗೀತ ವಿದ್ಯಾರ್ಥಿಗಳು ಡೆಸೆಂಬರ್‌ನಲ್ಲಿ ಅಲ್ಲಿಂದ ಇಲ್ಲಿ ಬಂದು ಕಛೇರಿ ಮಾಡುವುದು ಸಾಮಾನ್ಯವೆನಿಸಿಬಿಟ್ಟಿದೆ. ಸ್ವಲ್ಪ ಸಮಯದ ಹಿಂದೆ ಇದು ಸೀಸನ್ನಿನ ಒಂದು ಭಾಗ ಮಾತ್ರವಾಗಿದ್ದರೆ ಇವತ್ತು ಹೆಚ್ಚಿನ ಎಲ್ಲಾ ಜೂನಿಯರ್ ಸ್ಲಾಟ್‌ಗಳು NRI ಯುವಕರ ಪಾಲಾಗುತ್ತಿದೆ. ಅಲ್ಲೂ-ಇಲ್ಲೂ ಹೆಸರಾದ ದೊಡ್ಡ ಕಲಾವಿದರುಗಳೇ ತಮ್ಮ NRI ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಮಾಡಿಸಿ ಕೊಡುವ ಹೊಣೆ ಹೊತ್ತವರಂತೆ ವರ್ತಿಸುತ್ತಿದ್ದಾರೆ. ‘ಹಣ’ದ ಕೆಲಸ ಇಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತದೆ. ಪತ್ರಿಕೆಗಳಲ್ಲಿ ಇವರ ಬಗ್ಗೆ ಲೇಖನಗಳನ್ನು ಬರೆಯಿಸಲಾಗುತ್ತದೆ. ಸಂಗೀತಗಾರರನ್ನು ‘ತಯಾರು’ ಮಾಡಲಾಗುತ್ತದೆ. ಇವೆಲ್ಲವೂ ಮುಚ್ಚಿದ ಬಾಗಿಲಿನ ಹಿಂದೆ ನಡೆಯುವ ಕೆಲಸವಾದದ್ದರಿಂದ ಯಾವ ಸಾಕ್ಷಿಯೂ ದೊರೆಯುವುದಿಲ್ಲ. ಇದರಿಂದಾಗಿ ನಮ್ಮಲ್ಲಿನ ಕಲಾವಿದರಿಗೆ ಮೋಸವಾಗುತ್ತಿರುವುದು ಮಾತ್ರವಲ್ಲದೇ, ನಿಜವಾಗಿ ಸತ್ವವುಳ್ಳ NRI ಕಲಾವಿದನಿಗೆ ತಾನು ಅಂಥವನಲ್ಲ ಎಂಬುದನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಕರ್ನಾಟಕ ಸಂಗೀತವೆಂಬ ಪುಟ್ಟ ಪ್ರಪಂಚಕ್ಕೆ ಸೇರಿದ ಹಾಗೂ ಸಂಗೀತ ಸೀಸನ್ನಿನ ಭಾಗಿಗಳಾದ ನಾವು ಈ ಸಣ್ಣ ಪ್ರಪಂಚದಿಂದ tm-krishna-singer2ಆಚೆಗೆ ಸಂಗೀತಕ್ಕೆ ಸಂಬಂಧಿಸಿದ ಕೆಲಸವನ್ನೇನಾದರೂ ಮಾಡಿದ್ದೇವೆಯೇ? ಸೀಸನ್‌ನಲ್ಲಿ ಪಾಲ್ಗೊಳ್ಳಲು, ಸಂಗೀತ ಕೇಳಲು ಸಮಾಜದಲ್ಲಿನ ಬೇರೆ ಕೇಳುಗರನ್ನೇನಾದರೂ ಬರುವಂತೆ ಮಾಡಿದ್ದೇವೆಯೇ? ಆ ಬಗ್ಗೆ ಎನಾದರೂ ಪ್ರಯತ್ನ ಮಾಡಿದ್ದೇವೆಯೇ ಅಥವಾ ನಮ್ಮ ಸಂಗೀತವನ್ನು ಒಯ್ದು ಸಮಾಜದ ಉಳಿದ ಸ್ಥರಗಳಿಗೆ ಪರಿಚಯಿಸುವ ಬಗ್ಗೆ ಚಿಂತಿಸಿದ್ದೇವೆಯೇ? ಎಲ್ಲೋ ಒಂದಿಬ್ಬರ ವೈಯಕ್ತಿಕ ಪ್ರಯತ್ನಗಳನ್ನು ಕಾಣಬಹುದಷ್ಟೇ. ಉಳಿದಂತೆ ನಮಗೆ ಸಮಾಜದ ಇತರರ ಬಗ್ಗೆ ಗಮನವೇ ಇಲ್ಲ. ಹಾಗೂ ಬಹು ಮುಖವಾಗಿ ನಮಗೆ ನಮ್ಮ ಸಂಗೀತವನ್ನು ಡೆಮೊಕ್ರಟೈಸ್ (ಎಲ್ಲರಿಗೂ ದೊರಕುವಂತೆ) ಮಾಡಬೇಕೆಂಬ ಯಾವ ಇಚ್ಛೆಯೂ ಇಲ್ಲ.

ಈ ರೀತಿಯಾಗಿ ಪ್ರತ್ಯೇಕ ವರ್ಗವನ್ನು ನಿರ್ಮಿಸಿಕೊಂಡು ಒಂದು ದ್ವೀಪದಂತೆ ಇರುವ ಕರ್ನಾಟಕಿ ಸಂಗೀತ, ತನ್ನ ನಾಳೆಯನ್ನು ತಾನೇ ಹಾಳುಮಾಡಿಕೊಳ್ಳುತ್ತಿದೆ ಎಂಬುದು ನನ್ನ ಬಲವಾದ ಅಭಿಪ್ರಾಯ. ಸಂಕುಚಿತತೆ, ಮಡಿವಂತಿಕೆಗಳನ್ನು ಬಿಟ್ಟು ’ಮುಕ್ತ’ವಾಗುವ ಅವಶ್ಯಕತೆ ಇಂದು ಕರ್ನಾಟಕಿ ಸಂಗೀತಕ್ಕಿದೆ.

ನನ್ನಂಥಹ ’ಪವರ್‌ಫುಲ್’ ಸಂಗೀತಗಾರರು ತಮ್ಮ-ತಮ್ಮ ವೈಯಕ್ತಿಕ ಲಾಭವನ್ನು ಬಿಟ್ಟು ಈ ಕಾರ್ಯಕ್ಕಾಗಿ ಜೊತೆಗೆ ಕೈ ಜೋಡಿಸಲು ಮುಂದೆ ಬರುತ್ತಿಲ್ಲ. ನಮ್ಮ ಜೊತೆಗೇ ವೇದಿಕೆಯೇರುವ ಮೃದಂಗ, ವಯೋಲಿನ್, ಘಟ ವಾದಕರಿಗೆ ಕೊಡಲಾಗುವ ಸಂಭಾವನೆಯ ಬಗ್ಗೆ ಮಾತನಾಡಲೂ ನಾವು ಅಸಮರ್ಥರಾಗಿದ್ದೇವೆ.

ಈಗ ಈ ’ಸಂಗೀತ ಸೀಸನ್ನಿನ ಹುಚ್ಚುತನ’ ಎಂಬುದು ತಂತ್ರಜ್ಞಾನದ ಮಾಯಾಲೋಕದೊಂದಿಗೆ ಸೇರಿಬಿಟ್ಟಿದೆ. ಇಂಥಹ ಪರಿಸ್ಥಿತಿಯಲ್ಲಿ ಶಾಂತವಾಗಿರಲು ಹಾಗೂ ಹಾಡಲು ನನಗೆ ಸಾಧ್ಯವಾಗುತ್ತಿಲ್ಲ. ಇದು ನನ್ನದೇ ಅಸಮರ್ಥತತೆಯೇನೋ….

ಈ ಎಲ್ಲಾ ಕಾರಣಗಳಿಂದ ಹಾಡದೇ ಇರುವುದೇ ಉತ್ತಮ ಎಂದು ನನಗನಿಸಿದೆ. ಕಳೆದ ೫ ವರ್ಷಗಳಲ್ಲಿ ಈ ಸೀಸನ್ನಿನ ಒಳಗಿದ್ದುಕೊಂಡೇ ಈ ಬಗ್ಗೆ ಏನಾದರೂ ಮಾಡಬೇಕೆಂದು ಟಿಕೆಟ್ ಇಲ್ಲದೆ ಕಛೇರಿ ಮಾಡುವುದು ಮುಂತಾದ ಹಲವು ರೀತಿಗಳಲ್ಲಿ ಪ್ರಯತ್ನಿಸಿದ್ದೇನೆ. ಆದರೆ ಇಡೀ ವಾತಾವರಣವೇ ಎಷ್ಟು ವ್ಯವಹಾರಾತ್ಮಕವಾಗಿದೆಯೆಂದರೆ, ಸಂಗೀತವನ್ನು ಕೇಳುವುದು ಎಂಬುದೇ ಇಲ್ಲವಾದಂತಾಗಿದೆ.

ಚೆನ್ನೈನ ಕರ್ನಾಟಕಿ ಸಂಗೀತವೆಂಬುದು ’ಸಂಗೀತ’ಕ್ಕಿಂತ ಹೆಚ್ಚಾಗಿ ’ಸೀಸನ್’ ಮಾತ್ರವೇ ಆಗಿಬಿಟ್ಟಿದೆ. ಇದು ಕಲೆಗೆ ಮಾರಕವಾದದ್ದು. ಇಲ್ಲಿ ನಾವು ಕಲೆ, ಅದರ ಸ್ವರೂಪ, ಕಲೆಯ ದೊರಕುವಿಕೆ ಹಾಗೂ ಅದರ ಒಟ್ಟಂದದ ಕಡೆಗಿನ ಆತ್ಮಾವಲೋಕನದ ಕೊರತೆಯನ್ನು ಕಾಣುತ್ತಿದ್ದೇವೆ. ಆದರೆ ಇವೆಲ್ಲದರ ನಡುವೆಯೂ ತಮ್ಮ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಿರುವ ಕೆಲವು ವ್ಯಕ್ತಿಗಳು, ಕೆಲವು ಆಯೋಜಕರು, ಸಂಗೀತಗಾರರು ಹಾಗೂ ಬೆರಳೆಣಿಕೆಯಷ್ಟು ಶೋತೃಗಳು ಇರುವುದನ್ನು ನಾವು ಮರೆಯುವಂತಿಲ್ಲ.

ಹಳೆಯದೆಲ್ಲವೂ ಚೆನ್ನಾಗಿತ್ತು ಎಂದೇನು ನಾನು ಹೇಳ ಹೊರಟಿಲ್ಲ. ಆದರೆ, ಇಂದಿನ ಚೆನ್ನೈನ ಸಂಗೀತ ಸೀಸನ್ ಮಾತ್ರ ’ರಸಹೀನವಾದ ಬಹು ದೊಡ್ಡ ಬದಲಾವಣೆಗೆ ಈಡಾದ ಘಟ್ಟ’ವೊಂದನ್ನು ತಲುಪಿದೆ ಎಂದು ನನಗೆ ಖೇದವಾಗುತ್ತದೆ. ಅಥವಾ ಇದು ಮೊದಲಿನಿಂದಲೂ ಹೀಗೆಯೇ ಇದ್ದು, ನನಗೆ ಕಾಣಿಸಿದ್ದು ಮಾತ್ರ ಈಗವೇ ಎಂಬುದು ಅರ್ಥವಾಗುತ್ತಿಲ್ಲ. ಆದರೆ ಈಗ ಎಲ್ಲಾ ತಿಳಿದ ಮೇಲೂ ಇದರ ’ಕೇವಲ ಪಾಲುದಾರ’ನಾಗಲು ನನಗೆ ಸಾಧ್ಯವಾಗುತ್ತಿಲ್ಲ.