ಒಳ್ಳೆಯ ಮುಸ್ಲಿಂ ಅಂದರೆ ಏನು?

ಇಂಗ್ಲೀಷ್ : ಸಾಬಾ ನಕ್ವಿ
ಅನುವಾದ : ಬಿ.ಶ್ರೀಪಾದ ಭಟ್

ಜುಲೈ 30 ರಂದು ಎರಡು ದೇಹಗಳನ್ನು ಮುಸ್ಲಿಂರ ಶವ ಸಂಸ್ಕಾರಕ್ಕೆ ಬಳಸುವ ಸಡಿಲವಾದ ಹೊದಿಕೆಗಳಿಂದ ಸುತ್ತಲಾಗಿತ್ತು. ಇವರಲ್ಲಿ ಒಬ್ಬರನ್ನು ರಾಷ್ಟ್ರೀಯ ಹೀರೋ ಎಂದು ಕರೆಯಲಾಗಿತ್ತು ಮತ್ತು ಅವರ ದೇಹವನ್ನು ರಾಷ್ಟ್ರೀಯ ಧ್ಜಜದಿಂದ ಸುತ್ತಲಾಗಿತ್ತು, ಮತ್ತೊಬ್ಬರನ್ನು ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಗಿತ್ತು. ನಮ್ಮ ಕಣ್ಣ ಮುಂದೆ ಒಳಿತು ಕೆಡಕುಗಳ ನೈತಿಕತೆಯ ನೃತ್ಯ ನಡೆಯುತ್ತಿರುವಾಗ ಈ ಎರಡು ಸಾವುಗಳು ವಿಭಿನ್ನ ಕಾರಣಗಳಿಗಾಗಿ, ವಿಭಿನ್ನ ರೀತಿಗಳಿಗಾಗಿ ರಾಷ್ಟ್ರೀಯ ರಸಾನುಭವಗಳನ್ನು ತಂದುಕೊಡುತ್ತಿರುವಂತಿವೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಬಾಂಬೆ apj-kalamಸ್ಪೋಟದ ಅಪರಾಧಿ ಯಾಕುಬ್ ಮೆನನ್ ಇವರಿಬ್ಬರನ್ನೂ ಒಂದೇ ದಿನದಂದು ಶವ ಸಂಸ್ಕಾರ ಮಾಡುತ್ತಿರುವುದು ಒಂದು ಕಾಕತಾಳೀಯ.

ಆದರೆ ಜಗತ್ತಿನ ಅತಿ ದೊಡ್ಡ ದೇಶದಲ್ಲಿ, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಜಗತ್ತಿನ ಮೂರನೇ ದೇಶದಲ್ಲಿ ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ರೂಢಿಬದ್ಧ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ನುಡಿಕಟ್ಟನ್ನು ಅಮೇರಿಕಾದ ಮಾಜಿ ಅಧ್ಯಕ್ಷ ಜಾರ್ಜ ಬುಶ್ ಅದನ್ನು 9/11 ಸಂದರ್ಭದಲ್ಲಿ ಬಳಸಿದ್ದರು. ಇದನ್ನೇ ಬಳಸಿಕೊಂಡು ಮೊಹಮ್ಮದ್ ಮಂದಾನಿ ಅವರು “Good Muslim, Bad Muslim: America, the Cold War, and the Roots of Terror” ಎನ್ನುವ ಪುಸ್ತಕವನ್ನು ಸಹ ಬರೆದಿದ್ದರು. ಈ ಪುಸ್ತಕದಲ್ಲಿ ‘ಒಳ್ಳೆಯ’ ಮತ್ತು ‘ಕೆಟ್ಟ’ ಎನ್ನುವ ಪದಬಳಕೆಯನ್ನು ಆ ಧರ್ಮದ ಪಾವಿತ್ರ್ಯತೆ ಅಥವಾ ಅದರ ಕೊರತೆಯನ್ನು ಆಧರಿಸಿ ಹೇಳಿದ್ದಲ್ಲ. ಬದಲಾಗಿ ಅಮೇರಿಕಾದ ವಿದೇಶಾಂಗ ನೀತಿಯು ತನ್ನ ಉಪಯುಕ್ತತೆಗೆ ಅನುಕೂಲವಾಗುವಂತೆ ನಿರ್ಧರಿಸುವ ತೀರ್ಪಿನ ಆಧಾರದ ಮೇಲೆ ಬಳಸಾಗುತ್ತದೆ. ಯಾವ ಇಮೇಜ್ ಅನ್ನು ಅವರು ನಿರ್ಮಿಸುತ್ತಾರೆಯೋ ಅದರ ಮೇಲೆ ಸಹ ನಿರ್ಧಾರವಾಗುತ್ತದೆ

ಆಕಸ್ಮಿಕವೋ ಎಂಬಂತೆ ಮುಸ್ಲಿಂ ಧರ್ಮದವರಾಗಿದ್ದ ಅಬ್ದುಲ್ ಕಲಾಂ ಇಂಡಿಯಾದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿರುವಷ್ಟರ ಮಟ್ಟಿಗೆ ಮೇರು ವ್ಯಕ್ತಿತ್ವದವರಾಗಿದ್ದರೆ? ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳು ಏನೇ ಇರಲಿ (ಅದರ ಕುರಿತಾಗಿಯೂ ತಕರಾರುಗಳಿವೆ) ಕಲಾಂ ಅವರನ್ನು ಮತ್ತು ಅವರ ಜನಪ್ರಿಯತೆಯನ್ನು ಸಮಾಜ ಮತ್ತು ರಾಜಕೀಯ-ಮಿಲಿಟರಿಯ ಸಂಕೀರ್ಣತೆಯು ರೂಪಿಸಿತ್ತು. ಭವಿಷ್ಯದಲ್ಲಿ ಇಂಡಿಯಾ ದೇಶವು ಮಿಲಿಟರಿಯಲ್ಲಿ ಸೂಪರ್ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಕಲಾಂ ಅವರ ದರ್ಶನವಾಗಿತ್ತು. ಕಾಣ್ಕೆಯಾಗಿತ್ತು. ಅವರು ಒಬ್ಬ ಸರಳವಾದ “ಮಿಸೈಲ್ ಮನುಷ್ಯ”ರಾಗಿದ್ದರು ಮತ್ತು ಅವರ ಪುಸ್ತಕಗಳು ಬೇರೆ ಲೇಖಕರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು, ಅವರ ಭಾಷಣದ ಸಭಾಂಗಣಗಳು ಸದಾಕಾಲ ಹೌಸ್‍ಫುಲ್ ಆಗಿರುತ್ತಿದ್ದವು. ಅವರನ್ನು ಮಕ್ಕಳು ಆರಾಧಿಸುತ್ತಿದ್ದರು. ಅವರ ಸರಳತೆ ಮಕ್ಕಳನ್ನು ಸೆಳೆಯುತ್ತಿತ್ತು

ಮತ್ತು ಅವರು ಇಂಡಿಯಾ ದೇಶ ಬಯಸುವಂತಹ ಒಬ್ಬ ಪರಿಪೂರ್ಣ ಮುಸ್ಲಿಂ ಆಗಿದ್ದರು. ತಮ್ಮ ಎದೆಯ ಮೇಲೆ ಧರ್ಮವನ್ನು ಛಾಪಿಸಿಕೊಳ್ಳದ, ಸಾಧಾರಣ ಹಿನ್ನೆಲೆಯಿಂದ ಬಂದಂದತಹ, ಸ್ವಪರಿಶ್ರಮದಿಂದ ಮೇಲಕ್ಕೇರಿದ ವ್ಯಕ್ತಿ. ಗಡ್ಡಧಾರಿಯಾದ, ಸದಾ ಅವ್ಯವಸ್ಥೆಯ ghetto ಗಳಲ್ಲಿ ಬದುಕುವ ಪೀಡಕನಂತೆ ಕಂಗೊಳಿಸುವ ರೂಢಿಗತ ಮುಸ್ಲಿಂರ ಪರಿಕಲ್ಪನೆಗಿಂತ ಸಂಪೂರ್ಣ ಭಿನ್ನವಾಗಿದ್ದರು. ಮುಖ್ಯವಾಗಿ ಕಲಾಂ ಎಂದಿಗೂ ವ್ಯವಸ್ಥೆಯನ್ನು ವಿರೋಧಿಸಿರಲಿಲ್ಲ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸಿರಲಿಲ್ಲ. ಇದಕ್ಕೆ ಬದಲಾಗಿ ಅವರು ಪ್ರಭುತ್ವದ ವ್ಯವಸ್ಥೆಯನ್ನು ಮತ್ತು ಅದರ ಮಿಲಿಟರಿ-ಕೈಗಾರಿಕಾ ಸಂಕೀರ್ಣತೆಯನ್ನು ವೈಭವೀಕರಿಸಿದ್ದರು. ಬಲಪಂಥೀಯರು ಸದಾ ಕರೆದುಕೊಳ್ಳುವ ಬಲಪಂಥೀಯ ಐಡಿಯಾಲಜಿಯ ಶೈಲಿಯ ‘ದೇಶವನ್ನು ಕಟ್ಟುವ’ ಮಾದರಿಗೆ ಉಪಯುಕ್ತರಾಗಿದ್ದರು. ಅಷ್ಟಕ್ಕೂ ರಾಷ್ಟ್ರಪತಿ ಹುದ್ದೆಗೆ ಅವರ ಹೆಸರನ್ನು ಸೂಚಿಸಿದ್ದು ಬಿಜೆಪಿ ಪಕ್ಷದ ನಾಯಕ ಎ.ಬಿ.ವಾಜಪೇಯಿ.The Prime Minister Shri Atal Bihari Vajpayee calls on the President Dr. A.P.J. Abdul Kalam in New Delhi on July 25, 2002 (Thursday) ಆರೆಸ್ಸಸ್‍ನ ಮುಖವಾಣಿ ‘ಪಾಂಚಜನ್ಯ’ದ ಆಗಿನ ಸಂಪಾದಕರಾಗಿದ್ದ ತರುಣ್ ವಿಜಯ್ ಅವರು 2002ರಲ್ಲಿ ಔಟ್‍ಲುಕ್ ವಾರಪತ್ರಿಕೆಗೆ ಬರೆದ ಅಂಕಣದಲ್ಲಿ “ಭಾರತೀಕರಣವೆಂದರೆ ಹಿಂದುತ್ವ. ಇದರ ಅರ್ಥ ಮುಸ್ಲಿಂರು ಹಿಂದೂಯಿಸಂಗೆ ಮತಾಂತರವಾಗಬೇಕು ಅಂತಲ್ಲ, ಅಥವಾ ಕ್ರಿಶ್ಚಿಯನ್ನರು ದೇವಸ್ಥಾನಗಳಿಗೆ ಭೇಟಿ ಕೊಡಬೇಕಂತಲೂ ಅಲ್ಲ. ಬದಲಾಗಿ ನೀನು ಏನು ಆಗಬೇಕೆಂದುಕೊಳ್ಳುತ್ತೀಯಾ ಅದೇ ಅದರ ಅರ್ಥ. ಡಾ.ಅಬ್ದುಲ್ ಕಲಾಂ ಅವರ ಕಾಣ್ಕೆಯಂತೆ” ಎಂದು ಬರೆದಿದ್ದರು ಮತ್ತು ಇಸ್ರೋದಲ್ಲಿ ಕಲಾಂ ಅವರ ಸಹೋದ್ಯೋಗಿಗಳು ಅವರನ್ನು ಕಲಾಂ ಐಯ್ಯರ್ ಎಂದು ಕರೆಯುತ್ತಿದ್ದರು ಎಂದು ಹೆಮ್ಮಯಿಂದ ಬರೆದಿದ್ದರು. ಕಲಾಂ ಅವರ ಈ ನಾಮಕರಣಕ್ಕೆ ಅವರು ಸಸ್ಯಾಹಾರಿಯಾಗಿದ್ದರು, ಅವರು ಸಂಸ್ಕೃತದಲ್ಲಿ ಪರಿಣಿತರಾಗಿದ್ದರು, ಭಗವದ್ಗೀತವನ್ನು ಓದಿಕೊಂಡಿದ್ದರು ಮತ್ತು ವೀಣೆಯನ್ನು ನುಡಿಸುತ್ತಿದ್ದರು ಎನ್ನುವ ಗುಣಗಳೂ ಕಾರಣವಾಗಿದ್ದವು.

ದಿನನಿತ್ಯ ಯೋಗ, ಸೂರ್ಯ ನಮಸ್ಕಾರ ಮಾಡುವ, ಗೀತೆಯ ಭಾಗಗಳನ್ನು ಓದಲು ಪ್ರಯತ್ನಿಸುವ ಅನೇಕರು ಕಲಾಂರ ಮೇಲಿನ ಗುಣಗಳು ಅವರನ್ನು ಮುಸ್ಲಿಂ ಎನ್ನುವ ಅಂಶವನ್ನು ತೆಳುಗೊಳಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ನಾನು ಇದನ್ನು ಸಂದೇಹಿಸುತ್ತೇನೆ. ದೆಹಲಿಯ ಲುಟ್ಯೇನ್ ಪ್ರದೇಶದಲ್ಲಿರುವ ಔರಂಗಜೇಬ್ ರಸ್ತೆಯನ್ನು ಮರು ನಾಮಕರಣ ಮಾಡಿ ಅದಕ್ಕೆ ಕಲಾಂ ಅವರ ಹೆಸರಿಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವವರೊಂದಿಗೆ ನನ್ನ ಸಹಮತವಿಲ್ಲ. ನನ್ನ ಒಂದು ಸಲಹೆ ಈ ಔರಂಗಜೇಬ್ ರಸ್ತೆಗೆ ದಾರಾ ಶಿಖೋವ ಅವರ ಹೆಸರನ್ನು ಇಡಬೇಕು. ಇತಿಹಾಸ ಗೊತ್ತಿಲ್ಲದವರಿಗೆ ಈ ದಾರಾ ಶಿಖೋವನನ್ನು ಶಹಜಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು ಮತ್ತು ಈತನನ್ನು ಔರಂಗಜೇಬ್ ಸಾಯಿಸಿದ್ದ. ಈ ದಾರಾ ಶಿಖೋವ ಬಹುರೂಪಿ ಸಂಸ್ಕೃತಿಯ ವಕ್ತಾರನಾಗಿದ್ದ. ಕೋಮು ಸೌಹಾರ್ದತೆಗೆ ತುಡಿಯುತ್ತಿದ್ದ. ಸಂಸ್ಕೃತದಿಂದ 50 ಉಪನಿಷದ್‍ಗಳನ್ನು ಪರ್ಷಿಯನ್‍ಗೆ ಅನುವಾದ ಮಾಡಿದ್ದ.

ಯಾಕುಬ್ ಮೆಮನ್‍ಗೆ ಮೇಲಿನ ಯಾವುದೇ ಛಾಯೆಗಳಿರಲಿಲ್ಲ. ಆತ ಕೇವಲ ಕೆಟ್ಟ ಮುಸ್ಲಿಂನಾಗಿದ್ದ. ವ್ಯಾಪಕವಾದ ಭಯೋತ್ಪಾದನೆಯ ಸಂಚಿಗೆ ಸೆಳೆಯಲ್ಪಟ್ಟ ಸುಶಿಕ್ಷಿತ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ. ಅಷ್ಟಕ್ಕೂ ಮುಸ್ಲಿಂ ಎಂದರೆ ಭಯೋತ್ಪಾದಕ ಎನ್ನುವ ಪ್ರಚಲಿತ ನಿರ್ಮಿತಿಯನ್ನು ಇಡೀ ಜಗತ್ತು ಒಕ್ಕೊರಲಿನಿಂದ ಒಪ್ಪಿಕೊಂಡಿದೆ. ಯಾಕೂಬ್ ಅನಾಯಾಸವಾಗಿ ಈ ಚೌಕಟ್ಟಿನಲ್ಲಿ ತುಂಬಿಕೊಳ್ಳುತ್ತಾನೆ. ಆದರೆ ಯಾಕೂಬ್‍ನ ಕತೆಗಳಲ್ಲಿ ತುಂಬಾ ಸೂಕ್ಷ್ಮ ವ್ಯತ್ಯಾಸಗಳಿವೆ. ಮತ್ತು ಈ ಸೂಕ್ಷ್ಮ ವ್ಯತ್ಯಾಸಗಳನ್ನು ವ್ಯವಸ್ಥೆಯು ಅನುಕಂಪದ ಮನಸ್ಥಿತಿಯಿಂದ ಅರ್ಥ ಮಾಡಿಕೊಳ್ಳುವುದೂ ಇಲ್ಲ. ಇವರೆಲ್ಲಾ ಪ್ರಶ್ನೆಗಳನ್ನು ಎತ್ತುತ್ತಲೇ ಜೊತೆಗೆ ಸಾಧ್ಯತೆಗಳನ್ನೂ ಸೂಚಿಸುತ್ತಾರೆ. ಯಾಕೂಬ್ ತಾನು ಮಾಡಿದ ಕೃತ್ಯಕ್ಕೆ ಕ್ಷಮೆ ಕೇಳುತ್ತಾನೆಯೇ? ಆತನಿಗೆ ಪ್ರಾಯಶ್ಚಿತವಾಗಿದೆಯೇ? ಆತ ಭಾರತದ ಏಜೆನ್ಸಿಗಳೊಂದಿಗೆ ಡೀಲ್ ಮಾಡಿಕೊಂಡಿದ್ದಾನೆಯೇ? ಅದರ ಅನುಸಾರ ಆತನ ಕುಟುಂಬವನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರುವುದರ ಕುರಿತಾಗಿ ಒಪ್ಪಂದವಾಗಿದೆಯೇ? ಶಿಕ್ಷೆಯನ್ನು ನಿರೀಕ್ಷಿಸುತ್ತಾನೆಯೇ? ಆದರೆ ವ್ಯವಸ್ಥೆಯಿಂದ ನ್ಯಾಯವನ್ನೂ ಬಯಸುತ್ತಾನೆಯೇ?

ಆತನ ಸಾವಿನಲ್ಲಿ ಯಾಕೂಬ್‍ನನ್ನು ಮಿತಿ ಮೀರಿದ ವ್ಯಕ್ತಿಯನ್ನಾಗಿ ನೋಡುತ್ತಿರುವ ಇಂದಿನ ಸಂದರ್ಭದಲ್ಲಿ ಈ ಎಲ್ಲಾ ಪ್ರಶ್ನೆಗಳು ಗಾಳಿಯಲ್ಲಿ ತೇಲುತ್ತಿವೆ. ಒಂದು ವೇಳೆ ಆತ ಬದುಕಿದ್ದರೆ ಜೀವಾವಧಿ ಶಿಕ್ಷೆಗೊಳಗಾಗಿರುವ ಇತರೇ ಖೈದಿಗಳಂತೆ ಆತನೂ ಜೈಲಿನಲ್ಲಿ ಮರೆತು ಹೋಗುತ್ತಿದ್ದ. ಆದರೆ ಆತನ ಸಾವನ್ನು ಅಷ್ಟು ಸುಲುಭವಾಗಿ ಮಣ್ಣು ಮಾಡಲಾಗುವುದಿಲ್ಲ. ಅಪಾಯವೇನೆಂದರೆ ಯಾಕೂಬ್‍ನನ್ನು ಹುತಾತ್ಮನನ್ನಾಗಿ ಮಾಡುವುದರಿಂದ ದೇಶ ವಿರೋಧಿ ಶಕ್ತಿಗಳಿಗೆ ಹೆಚ್ಚಿನ ಲಾಭವಿದೆ

ತನ್ನ ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ಪುಸ್ತಕದಲ್ಲಿ goodmuslimbadmuslimಮಂದಾನಿ ‘ವಿಸ್ತೃತವಾದಕ್ಕೆ ನೈತಿಕ ಮೇಲುಹೊದಿಕೆಯಾಗಿ ನಿಯೋಜಿಸಲ್ಪಡುವ, ಬಳಸಲ್ಪಡುವ ಮುಸ್ಲಿಂ ಮತ್ತು ಇಸ್ಲಾಂ ಕ್ಯಾರಿಕೇಚರ್’ ಅನ್ನು ತೆರೆದಿಡುತ್ತಾನೆ. ಭಯೋತ್ಪಾದನೆಯ ವಿಶ್ಲೇಷಣೆಯನ್ನು ವ್ಯವಸ್ಥೆಯೊಳಗಿನ ಹುಳುಕುಗಳನ್ನು ತೋರಿಸುವುದಕ್ಕೆ ಬಳಸಿಕೊಳ್ಳವುದಿಲ್ಲ, ಬದಲಾಗಿ ರಾಜ್ಯದ ನೀತಿಯನ್ನಾಗಿ ಬಳಸಿಕೊಳ್ಳತ್ತಾರೆ ಎಂದು ಹೇಳುತ್ತಾನೆ. ಆ ಭಯೋತ್ಪಾದನೆಯ ಕೃತ್ಯಗಳಿಗೆ ಕಾರಣಗಳನ್ನು ಪರೀಕ್ಷಿಸುವುದೇ ಭಯೋತ್ಪಾದನೆಗೆ ಸಮರ್ಥನೆಯಾಗುತ್ತದೆ ಮತ್ತು ಇದು ದೇಶದ ಹಿತಕ್ಕೆ ಮಾರಕವಾಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ಬೋಧಿಸಲಾಗುತ್ತದೆ ಮತ್ತು ಇದು ಯಾಕೂಬ್ ಮೆಮನ್ ವಿಚಾರದಲ್ಲಿಯೂ ಸತ್ಯ.. ಮತೊಂದು ಮಗ್ಗುಲಿನಿಂದ ಹೇಳಬೇಕೆಂದರೆ ಪ್ರಧಾನ ಧಾರೆಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆ ಮತ್ತು ವಿವರಣೆಗಳಲ್ಲಿ ಈ ಬಾಂಬೆ ಬಾಂಬ್ ಸ್ಪೋಟಕ್ಕೆ ಕಾರಣವಾದ ಬಾಂಬೆಯಲ್ಲಿ ನಡೆದ ಹತ್ಯೆ ಮತ್ತು ಕೋಮು ಗಲಭೆಗಳ ಕುರಿತಾಗಿ ಕೈಗೆತ್ತಿಕೊಳ್ಳುವುದೂ ಇಲ್ಲ. ಅದರ ನೆನಪನ್ನೂ ಮಾಡಿಕೊಳ್ಳುವುದಿಲ್ಲ ಅಥವಾ ಈ ಬಾಂಬೆ ಗಲಭೆಗಳು ನಂತರದ ಬಾಂಬೆ ಬಾಂಬ್ ಸ್ಪೋಟಕ್ಕೆ ಮೂಲ ಕಾರಣವಾದ ಬಾಬರಿ ಮಸೀದಿ ಧ್ವಂಸದ ದುಷ್ಕೃತ್ಯಗಳು ಸ್ವಲ್ಪವೂ ಚರ್ಚೆಗೆ ಒಳಪಡುವುದಿಲ್ಲ. ಈ ಬಾಂಬೆ ಕೋಮು ಗಲಭೆಗಳಿಗೆ, ಬಾಬರಿ ಮಸೀದಿ ಧ್ವಂಸಕ್ಕೆ ಕಾರಣಕರ್ತರು ಇಂದಿಗೂ ಶಿಕ್ಷೆಗೆ ಒಳಗಾಗಿಲ್ಲ. ಆದರೆ ನಾವು ಭಯೋತ್ಪಾದನೆಯು ಸಾಮಾಜಿಕ-ರಾಜಕೀಯ ನೆಲೆಯ ಒಂದು ರೋಗಪರಿಶೋಧಕ ಗೂಡಿಗೆ ತಳ್ಳಲ್ಪಟ್ಟಿರುವುದನ್ನು ಕುರಿತಾಗಿ ಚರ್ಚಿಸುತ್ತೇವೆ

ಆದರೆ ಈ ದೇಶದ ವಿಶೇಷವೇನೆಂದರೆ ಇಲ್ಲಿ ಪರ್ಯಾಯ ಚರ್ಚೆಗಳಿಗೆ ಅವಕಾಶಗಳಿವೆ. ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆಯಂದ ವಿನಾಯಿತಿ ಕೊಡಿಸಲು ಕಡೆಗಳಿಗೆವರೆಗೂ ಅಪೀಲು ಮಾಡಿದ ಫ್ರೊಫೆಸರ್‌ಗಳು, ಚಿಂತಕರು, ಹೋರಾಟಗಾರರು, ವಕೀಲರು ಮತ್ತು ಕೆಲ ಎಡಪಂಥೀಯ ಪಕ್ಷಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಪೋಲೀಸರು, ನ್ಯಾಯಾಂಗ ಮತ್ತು ಕಾರ್ಯಾಂಗದೊಂದಿಗೆ ಮುಖಾಮುಖಿಯಾದಾಗ ಸದಾ ಬಲಿಪಶುಗಳಾಗುವ ಇಂಡಿಯಾದ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳಿಗಾಗಿ ಕೆಲಸ ಮಾಡುವ ಒಂದು ಸಹನೀಯ ವ್ಯವಸ್ಥೆಯನ್ನು ಕಲ್ಪಿಸುವುದು ಇವರೆಲ್ಲರ ಆಶಯಗಳಾಗಿತ್ತು.

ರಾಷ್ಟ್ರಪತಿಗಳಾಗಿ ಕಲಾಂ ಅವರು ಮರಣದಂಡನೆ ಶಿಕ್ಷೆಯನ್ನು ವಿರೋಧಿಸಿದ್ದರು. ಇವರು ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆ ವಿಧಿಸುತ್ತಿದ್ದರೆ ಅಥವಾ ಅನುಕಂಪೆ ತೋರಿಸುತ್ತಿದ್ದರೆ? ಇಂದಿಗೂ ನಮಗೆ ಇದು ಆಶ್ಚರ್ಯವೇ.

Leave a Reply

Your email address will not be published. Required fields are marked *