ಭಾರತದ ಕುಲತಿಲಕರ ಪರಾಮರ್ಶೆ : ಭಾಗ 2


– ಶ್ರೀಧರ್ ಪ್ರಭು


 

‘ಸ್ವರಾಜ್ಯ’ ದಲ್ಲೇ ಶಾಹು ಮಹಾರಾಜರಿಗೆ ‘ಸತ್ಕಾರ’

೧೮೯೪ ರಲ್ಲಿ ಪಟ್ಟಾಭಿಷೇಕವಾಗಿ ರಾಜರ್ಷಿ ಶಾಹು ಮಹಾರಾಜರು ಕೊಲ್ಹಾಪುರದ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು. ೧೯೦೧ ರ ಶ್ರಾವಣ ಮಾಸದಲ್ಲಿ ಶಾಹು ಮಹಾರಾಜರು ಪಂಚಗಂಗಾ ನದಿ ಸ್ನಾನಕ್ಕೆ ಹೋದಾಗ ಒಂದು ಮಹತ್ತರ ಘಟನೆ ನಡೆಯಿತು. ರೂಢಿಯಂತೆ ಮಹಾರಾಜರು ಶ್ರಾವಣ ಮಾಸದಲ್ಲಿ ನದಿ ಸ್ನಾನ ಮಾಡುವಾಗ ಆಸ್ಥಾನ ಪುರೋಹಿತರು ಮಂತ್ರೋಚ್ಚಾರಣೆ ಮಾಡುತ್ತಾರೆ. ಹಾಗೆ ಕೊಲ್ಹಾಪುರದ ಆಸ್ಥಾನ ಪುರೋಹಿತ ನಾರಾಯಣ ರಾಜ್ಯೋಪಧ್ಯಾಯನಿಗೆ ಬುಲಾವು ಹೋಯಿತು. ಆ ಹೊತ್ತಿಗೆ ಈ ವೈದಿಕ ಮಹಾಶಯರು ತಮ್ಮ ವೇಶ್ಯೆಯ ಮನೆಯಲ್ಲಿದ್ದರಂತೆ. ಹಾಗಾಗಿ ಸ್ನಾನ ಸಂಧ್ಯಾವಂದನೆ ಏನೂ ಆಗಿರಲಿಲ್ಲ. ಅದರೂ ಈ ರಾಜ ಪುರೋಹಿತರು ಸೀದಾ ನದೀ ತೀರಕ್ಕೆ ಬಂದು ಮಂತ್ರೋಚ್ಚಾರಣೆ ಶುರು ಮಾಡಿದರು. ಅಷ್ಟು ಹೊತ್ತಿಗೆ ಅಲ್ಲಿದ್ದ ಇನ್ನೊಬ್ಬ ಪುರೋಹಿತ ರಾಜಾರಾಮ ಶಾಸ್ತ್ತ್ರಿ ಪುರೋಹಿತರು ಈ ಮಂತ್ರೋಚ್ಚಾರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ತಕರಾರು ತೆಗೆದರು. bal-gangadhar-tilakಆಗ ಈ ನಾರಾಯಣ ರಾಜ್ಯೋಪಾಧ್ಯಾಯ ಯಾವುದೇ ಅಂಜಿಕೆ ಅಳುಕಿಲ್ಲದೇ:

‘ನೋಡಿ ಸ್ವಾಮಿ, ನಿಮ್ಮ ಈ ಮಹಾರಾಜರು ಶೂದ್ರ ವರ್ಣಕ್ಕೆ ಸೇರಿದ ಕುಣಬಿ ಜಾತಿಯವರು. ಇಂತಹ ಕೀಳು ಜಾತಿಯ ಜನರ ಸಮ್ಮುಖದಲ್ಲಿ ಸ್ನಾನವನ್ನು ಮಾಡಿ ಹೇಳುವ ವೇದೋಕ್ತ ಮಂತ್ರಗಳನ್ನು ಪಠಿಸಬೇಕಿಲ್ಲ. ನಾನು ಪುರಾಣೊಕ್ತ ಮಂತ್ರಗಳನ್ನಷ್ಟೇ ಹೇಳಲು ಸಾಧ್ಯ. ನೀವು ಏನಾದರೂ ಮಾಡಿಕೊಳ್ಳಿ’ ಎಂದು ಮಹಾರಾಜರ ಸಮ್ಮುಖದಲ್ಲೇ ಧಮಕಿ ಹಾಕಿದ.

ಸಹಜವಾಗಿ ಮಹಾರಾಜರು ರಾಜನಿಂದೆಯ ಆರೋಪದ ಮೇಲೆ ಇವನನ್ನು ಗಲ್ಲಿಗೆರಿಸಬಹುದಿತ್ತು. ಆದರೆ ಶಾಹು ಮಹಾರಾಜರದ್ದು ರಾಜರ್ಷಿ ಸ್ವರೂಪದ ವ್ಯಕ್ತಿತ್ವ. ವಿಶೇಷವೆಂದರೆ ಮಹಾರಾಜರು ತಮ್ಮರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಸಂಘ ಗಳನ್ನು ಕಟ್ಟಿಕೊಳ್ಳಲು ಅನುಮತಿ ನೀಡಿದ್ದರಲ್ಲದೇ, ಅತ್ಯಂತ ಪ್ರಗತಿಪರ ಕಾರ್ಮಿಕ ಕಾನೂನುಗಳನ್ನೂ ಸಹ ಜಾರಿಮಾಡಿ ದ್ದರು. ಮಹಾರಾಜರಲ್ಲಿನ ಅಪಾರ ಅನುಕಂಪ ಜಾಗೃತವಾಗಿ, ಈ ‘ಪೊಂಗ’ ಪಂಡಿತನಿಗೆ ಮೂರು ತಿಂಗಳ ಸಮಯಾವಕಾಶ ನೀಡಿ ವೇದೋಕ್ತ ಮಂತ್ರೋಚ್ಚಾರಣೆ ಮಾಡುವ ರಾಜಾಜ್ಞೆ ಹೊರಡಿಸಿದರು. ಮೂರು ತಿಂಗಳು ಎಂದು ರಾಜಾಜ್ಞೆ ಇದ್ದರೂ ಮೂರು ತಿಂಗಳ ನಂತರವೂ ಮಹಾರಾಜರು ಈ ‘ಪಂಡಿತ’ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕೆಲಸದಿಂದ ವಜಾ ಕೂಡ ಮಾಡಲಿಲ್ಲ. ಒಂಭತ್ತು ತಿಂಗಳು ಕಳೆದವು, ಈ ಪುರೋಹಿತ ಬಗ್ಗಲಿಲ್ಲವೆಂದರೆ ಅವನ ದುರಹಂಕಾರ ಯಾವ ಮಟ್ಟದಲ್ಲಿತ್ತು ಗಮನಿಸಿ!

೭ ನವೆಂಬೆರ್, ೧೯೦೧, ೮ ನವೆಂಬರ್, ೧೯೦೧ ಮತ್ತು ಕೊನೆಯದಾಗಿ ೧ ಮೇ, ೨೦೦೨ ಹೀಗೆ ಮೂರು ಕಾರಣ ಕೇಳಿ ನೋಟಿಸು ಜಾರಿ ಮಾದಲಾದವು. ಈ ಪಂಡಿತ ಅವ್ಯಾವ ನೋಟಿಸುಗಳಿಗೂ ಜಗ್ಗಲಿಲ್ಲ. ಕೊನೆಗೆ ಕಾಟಾಚಾರಕ್ಕೆಂದು ಒಂದು ಉತ್ತರ ರವಾನಿಸಿದ “ನೀವು ಕ್ಷತ್ರಿಯರೇ ಅಲ್ಲ; ಆದ್ದರಿಂದ ನಿಮ್ಮ ಸಮ್ಮುಖದಲ್ಲಿ ನಾನು ವೇದಮಂತ್ರ ಗಳನ್ನ ಪಠಿಸಲಾರೆ.”

ಸಹಜವಾಗಿಯೇ ಎಲ್ಲ ಸ್ವಾಭಾವಿಕ ನ್ಯಾಯದ (natural justice) ನ ಪ್ರಕಾರ ಸುಧಾರಣೆಗೆ ಸಾಕಷ್ಟು ಅವಕಾಶ ಕೊಟ್ಟಿದ್ದರೂ ಸುಧಾರಿಸದೆ ಮತ್ತು ರಾಜರನ್ನೇ ಜಾತಿಯ ಹೆಸರಿನಲ್ಲಿ ಅಪಮಾನಿಸಿದ ಪಂಡಿತನಿಗೆ ಕೆಲಸದಿಂದ ವಜಾ ಆಯಿತು. ಲೆಕ್ಕಕ್ಕೆ ಸೆರೆಮನೆಗೆ ಕಳುಹಿಸಬೇಕಿತ್ತು. ಆದರೆ ಮಹಾರಾಜರು ತಮ್ಮ ಅಪಾರ ಅನುಕಂಪದ ಮೇರೆಗೆ ಇಂತಹ ಕ್ರಮ ಕೈಗೊಳ್ಳಲಿಲ್ಲ.

ಬ್ರಹ್ಮಾಂಡ ಅಸಂತುಷ್ಟಿಯ ಜನಕ

ಆಗ ಶುರುವಾಯಿತು ನೋಡಿ ಬ್ರಾಹ್ಮಣರ ಮುಕ್ತ ವಿದ್ರೋಹ!

ಈ ಮುಕ್ತ ವಿದ್ರೋಹಕ್ಕೆ ಕಿಚ್ಚು ಹಚ್ಚಿದ್ದು ತಿಲಕರು ಕೇಸರಿಯಲ್ಲಿ ೨೬ ನೇ ಅಕ್ಟೋಬರ್ ೧೯೦೨ ಮತ್ತು ೩೦ ನೆ ಅಕ್ಟೋಬರ್ ೧೯೦೨ ರಲ್ಲಿ ಬರೆದ ‘ವೇದೋಕ್ತ ಮತ್ತು ಮರಾಠಿಗರ ಕರ್ಮ’ ವೆಂಬ ಒಕ್ಕಣೆಯ ಸರಣಿ ಸಂಪಾದಕೀಯ ಲೇಖನಗಳು. ಈ ಸಂಪಾದಕೀಯಗಳಲ್ಲಿ ಟಿಳಕರು ಹೇಳುತ್ತಾರೆ: ‘ಅಂಗ್ಲ ಶಿಕ್ಷಣದಿಂದ ಪ್ರಭಾವದಿಂದ ಈ ಮರಾಠರ ತಲೆಗಳೆಲ್ಲ ಕೆಟ್ಟು ಹೋಗಿವೆ. ಈ ವೇದೋಕ್ತ ಮಂತ್ರಗಳು ಅಬ್ರಾಹ್ಮಣರ ಸಮಕ್ಷಮದಲ್ಲಿ ಉಚ್ಚರಿಸುವುದು ಅಕ್ಷಮ್ಯ ಅಪರಾಧ. lokmanya-tilakಈ ಶಿವಾಜಿ ಮಹಾರಾಜ ಗೋ-ಬ್ರಾಹ್ಮಣರ ಸೇವೆ ಮಾಡಿದಕ್ಕೋಸ್ಕರ ರಿಯಾಯತಿ ತೋರಿಸಿ ಬ್ರಾಹ್ಮಣರು ಮಂತ್ರೋಚ್ಚಾರ ಮಾಡಿದ್ದ ಮಾತ್ರಕ್ಕೆ ಇವರ ಜಾತಿ ಹೋಗುತ್ತದೆಯೇ? ಇನ್ನು ಬ್ರಾಹ್ಮಣರು ಶಿವಾಜಿಗೆ ಮಾಡಿದ ಉಪಕಾರವೇನು ಕಡಿಮೆಯೇ? ಶುದ್ರನಾದ ಶಿವಾಜಿಗೆ ಬ್ರಾಹ್ಮಣರು ಛತ್ರಪತಿ ಎಂದು ಪಟ್ಟ ಕಟ್ಟಿ ಕ್ಷತ್ರಿಯ ಪದವಿ ಕೊಡಿಸಿದರು. ಆದರೆ ಈಗಿನ ತಲೆ ತಿರುಗಿದ ಮರಾಠರು ಈ ಉಪಕಾರಕ್ಕೆಲ್ಲ ಅಪಾತ್ರರು’.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ತಿಲಕರು ಈ ಲೇಖನ ಬರೆದಾಗ ರಾಜ್ಯೋಪಾಧ್ಯಾಯ ವಜಾ ಆಗಿರಲಿಲ್ಲ (ಮೇಲಿನ ದಿನಾಂಕ ಗಳನ್ನು ಗಮನಿಸಿ). ಕೇವಲ ನೋಟಿಸು ಕೊಡಲಾಗಿತ್ತು. ಹೀಗಿದ್ದೂ ತಿಲಕರು ಶಿವಾಜಿಯ ವಂಶದವರನ್ನು ಮತ್ತು ಮಹಾರಾಜರನ್ನು ತಲೆ ಕೆಟ್ಟವರು ಎಂದು ಸಂಪಾದಕೀಯ ಬರೆದರು ಸಮಾಜದಲ್ಲಿ ಒಡಕು ಮೂಡಿಸಿದರು. ಈಗ ಹೇಳಿ ಯಾರು ಭಾರತದಲ್ಲಿ ಜಾತಿವಾದದ ಬೀಜ ನೆಟ್ಟಿದ್ದು?

ನೀವು ನಂಬಲಿಕ್ಕಿಲ್ಲ, ಈ ಪ್ರತಿಭಟನೆಯ ಕಾವು ಇಲ್ಲಿವರೆಗೂ ಇತ್ತೆಂದರೆ, ಶಾಹು ಮಹಾರಾಜರಿಗೆ ಕೊಲೆ ಬೆದರಿಕೆಗಳು ಬರತೊಡಗಿದವು!

ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್ ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ) ದ ಬಗ್ಗೆ ಚಾಡಿ ಚುಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್ ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನುಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್ ವರೆಗೂ ಹೊಗಿತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ ೧೯ ಫೆಬ್ರವರಿ ೧೯೦೩ ರಂದು ಅರ್ಜಿ ತಿರಸ್ಕರಿಸುತ್ತಾರೆ.

ಬ್ರಿಟಿಷರ ಚಾಡಿ ಸೇವೆ

ಟಿಳಕರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್ ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ) ದ ಬಗ್ಗೆ ಚಾಡಿ ಚುಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್ ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನುಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್ ವರೆಗೂ ಹೊಗಿತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ ೧೯ ಫೆಬ್ರವರಿ ೧೯೦೩ ರಂದು ಅರ್ಜಿ ತಿರಸ್ಕರಿಸುತ್ತಾರೆ.

ಅದರೂ ಸ್ವರಾಜ್ಯ ಸಾಧನೆಯ ದೇಶಭಕ್ತರ ಸಿಟ್ಟು ತಣಿಯಲಿಲ್ಲ!

೧೯೦೫ ರಲ್ಲಿ ಒಟ್ಟು ಮೂರು ಅರ್ಜಿಗಳನ್ನು ಬ್ರಿಟಿಷ್ ಪ್ರಭುತ್ವದ ಪರಮೋಚ್ಛ ಅಧಿಕಾರಿ ಲಾರ್ಡ್ ಕರ್ಜನ್ ಗೆ ಕಳುಹಿಸುತ್ತಾರೆ. ಅಲ್ಲೂ ೫ ಜನವರಿ ೧೯೦೫ ರಲ್ಲಿ ಕ.ಬು. ಸೇವೆ ಯಾದ ಮೇಲೆ ತಿಲಕರಿಗೆ ಅಭಾವ ವೈರಾಗ್ಯ ಬಂದು ಕೊನೆಗೆ ಟಿಳಕರು ಈ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಬೇಕು ಎಂದು ಅಪ್ಪಣೆ ಕೊಡಿಸುತ್ತಾರೆ. ನಂತರವೇ ಬ್ರಾಹ್ಮಣರು ಬೇರೆ ಗತ್ಯಂತರವಿಲ್ಲದೆ ಮಹಾರಾಜರ ಪಟ್ಟಾಭಿಷೇಕ ಮಾಡಲು ೧೯೦೫ ರಲ್ಲಿ ಅಣಿಯಾದರು. ಮಹಾರಾಜರು ಎಲ್ಲವನ್ನೂ ಕ್ಷಮಿಸಿ ಹೊಸ ಅಧ್ಯಾಯ ಬರೆಯಲು ತಯಾರಾದರು.

ಇಂದು ಇಂದಿಗೆ ನಾಳೆ ನಾಳೆಗೆ – ತ್ರಿಕಾಲ ಜ್ಞಾನಿ ತಿಲಕರು

ಆಗ ಮಹಾರಾಜರ ಆಸ್ಥಾನದಲ್ಲಿ ಒಬ್ಬ ಚತುರ ಅಧಿಕಾರಿ ಮತ್ತು ಸತ್ಯಶೋಧಕ ಸಮಾಜದ ನೇತಾರ ಭಾಸ್ಕರ ಜಾಧವರು ಈ ದೇಶದ ಶೂದ್ರ ಮತ್ತು ದಲಿತರ ಪರವಾಗಿ ಬ್ರಾಹ್ಮಣರ ಪರ ಕ್ರಾಂತಿಯ ಕಹಳೆ ಊದುತ್ತಿದ್ದ ರೂವಾರಿ ತಿಲಕರಿಗೆ ಒಂದು ಪ್ರಶ್ನೆ ಕೇಳಿದರು:

“ದೇಶದ ಅಂತಿಮ ಅಧಿಕಾರಿಯ ತೀರ್ಪು ಬಂದ ಮೇಲೆ ಮಹಾರಾಜರನ್ನು ಕ್ಷತ್ರಿಯರು ಎಂದು ಒಪ್ಪಿಕೊಳ್ಳುವುದರಲ್ಲಿ ಯಾರಿಗೂ ತಕರಾರು ಇರಲು ಸಾಧ್ಯವೇ ಇಲ್ಲ. ಶಾಹು ಮಹಾರಾಜರು ಕ್ಷತ್ರಿಯರು ಎಂದ ಮೇಲೆ ಮಹಾರಾಜರ ಸಹೋದರ ಬಾಪುಸಾಹೇಬ್ ಮಹಾರಾಜರನ್ನು ಕ್ಷತ್ರಿಯ ಎಂದು ನೀವು ಪರಿಗಣಿಸುತ್ತೀರಿ ತಾನೆ?’ ಎಂದು.

ಆಗ ಕೇಸರಿ ಪತ್ರಿಕೆಯ ತಮ್ಮ ಅಗ್ರ ಲೇಖನದಲ್ಲಿ ಮತ್ತೊಮ್ಮೆ ಬ್ರಹ್ಮ ಸಿಂಹ ತಿಲಕರು ಗುಡಿಗಿದರು: “ಮಹಾರಾಜರ ಸಹೋದರ ಬಾಪುಸಾಹೇಬ್ ಎಂದಿಗೂ ಶೂದ್ರನೆ! ಮಹಾರಾಜರನ್ನು ನಾವು ಕ್ಷತ್ರಿಯ ಎಂದು ಒಪ್ಪಿಕೊಂಡಿರುವುದು ಸಧ್ಯ ಅವರ ಪಟ್ಟಾಭಿಷೇಕ ನಡೆಯುತ್ತಿರುವ ಕಾರಣಕ್ಕಾಗಿ”

ಆಗ ಜಾಧವ್ ಒಂದು ಸರಳ ಪ್ರಶ್ನೆ ಕೇಳಿದರು ‘ ಸ್ವಾಮಿ ಲೊಕಮಾನ್ಯರೇ, ದೇಶ ಅಳುವವನು ಕ್ಷತ್ರಿಯ ಎಂದಾದರೆ, ನೂರಾರು ವರ್ಷ ನಮ್ಮ ದೇಶವನ್ನಾಳಿದ ಮುಸಲ್ಮಾನರು ಕ್ಷತ್ರಿಯರು ಎಂದು ನೀವು ಒಪ್ಪಿಕೊಳ್ಳುತ್ತೀರಾ? ಹಾಗೆಯೇ ಮುಂದೆ ಒಂದು ದಿನ ಒಬ್ಬ ಮುಸಲ್ಮಾನನಿಗೆ ಪಟ್ಟಾಭಿಷೇಕ ವಾದರೆ ಅವನೂ ನಿಮ್ಮ ಪ್ರಕಾರ ಕ್ಷತ್ರಿಯನೇ. ಆದರೆ ಬಾಪು ಸಾಹೇಬ್ ಮಹಾರಾಜ ಮಾತ್ರ ಕ್ಷತ್ರಿಯರಲ್ಲ, ಅಲ್ಲವೇ?”

ಆಗ ತ್ರಿಕಾಲ ಜ್ಞಾನಿ ತಿಲಕರು ಹೇಳುತ್ತಾರೆ: ‘ಹಿಂದಿನದು ಮುಗಿದ ಕಥೆ. ಅದನ್ನು ನೀವು ಅಂದು ಇದ್ದ ಬ್ರಾಹ್ಮಣರನ್ನು ಕೇಳಿ. ಮುಂದೆ ಎಂದಾದರು ಅಂಥಹ ಸಂದರ್ಭ ಬಂದರೆ ಆಗಿನ ಬ್ರಾಹ್ಮಣರು ಆಗ ಉತ್ತರ ನೀಡುತ್ತಾರೆ. ನಾವು ಇಂದಿನ ಪ್ರಶ್ನೆಗೆ ಮಾತ್ರ ಉತ್ತರಿಸಿದ್ದೇವೆ’

ನಂತರದ ದಿನಗಳಲ್ಲಿ ಕಾಂಗ್ರೆಸ್ ಅಧಿವೇಶನಗಳಲ್ಲಿ ಎಂದಿಗೂ ಅಸ್ಪ್ರುಶ್ಯತೆ ಬಗ್ಗೆ ಚರ್ಚಿಸಲು ತಿಲಕರು ಅವಕಾಶ ಮಾಡಿಕೊಡಲಿಲ್ಲ. ಸಾಮಾಜಿಕ ಪರಿವರ್ತನೆ ಪ್ರಶ್ನೆಯನ್ನು ಸಂಪೂರ್ಣವಾಗಿ ಕಾಂಗ್ರೆಸ್ ತ್ಯಾಗ ಮಾಡಿದ ಶ್ರೇಯ ತಿಳಕರಿಗೆ ಸಲ್ಲಬೇಕು. ಇಂಥಹ ಮಹಾಪುರುಷರ ಸಾರಥ್ಯದ ಕಾಂಗ್ರೆಸ್ ಒಂದು ಪಕ್ಕಾ ಅಗ್ರಹಾರವಾಗಿತ್ತು. ತಿಳಕರ ಕಲ್ಪನೆಯ ಸ್ವರಾಜ್ಯ ಕೇವಲ ಸವರ್ಣೀಯ ಹಿಂದೂಗಳ, ಅದರಲ್ಲೂ ವೈದಿಕರ ಸ್ವರಾಜ್ಯವಾಗಿತ್ತು. ಅದರಲ್ಲಿ ದಲಿತ ಶೂದ್ರರಿಗೆ ಸವರ್ಣೀಯರ ಸೇವೆಯೇ ಮುಕ್ತಿಯಾಗಿತ್ತು.

ತಂದೆಗೆ ‘ತಕ್ಕನಲ್ಲದ’ ಮಗ

ಒಂದು ಕೊನೆಯ ಮಾತು. ತಿಳಕರ ಮಗ ಶ್ರೀಧರ ತಿಲಕ್ ತಮ್ಮ ತಂದೆಯ ಹಾದಿ ಹಿಡಿಯಲಿಲ್ಲ. ಅವರು ಬಾಬಾ ಸಾಹೇಬರನ್ನು ತಮ್ಮ ಸ್ವಂತ ಸೋದರನಂತೆ ಕಂಡರು. ಬಾಬಾ ಸಾಹೇಬರನ್ನು ದಲಿತರೇ ಸಂಪೂರ್ಣವಾಗಿ ಒಪ್ಪಿಕೊಂಡು ಸಾಮಾಜಿಕ ಚಳುವಳಿಗೆ ಬರದಿದ್ದ ದಿನಗಳಲ್ಲಿ ಪುಣೆಯ ಸಂಪ್ರದಾಯಸ್ಥರ ವಿರೋಧ ಕಟ್ಟಿಕೊಂಡು ಶ್ರೀಧರ ತಿಲಕರು ಅಂಬೇಡ್ಕರ್ ಜೊತೆ ಗುರುತಿಸಿ ಕೊಂಡರು.

ಶ್ರೀಧರ ತಿಲಕ ಒಬ್ಬ ಅಪ್ಪಟ ಸಾಮಾಜಿಕ ಸಮಾನತೆಯ ಕಾಳಜಿ ಇದ್ದ ವ್ಯಕ್ತಿ ಯಾಗಿದ್ದರು. ಬಾಬಾ ಸಾಹೇಬರು ಸಮತಾ ಸೈನಿಕ ದಳ ವನ್ನು ಪ್ರಾರಂಭಿಸಲು ತಮ್ಮ ಸ್ವಂತ ಮನೆ ತಿಳಕ ವಾಡಾ ವನ್ನು ಈ ಶ್ರೀಧರ ತಿಲಕರು ಧಾರೆ ಎರೆದು ಅಂಬೇಡ್ಕರ್ ರಿಗೆ ಕೊಟ್ಟರು.

ವಯಕ್ತಿಕ ಕಾರಣಗಳಿಂದ ಶ್ರೀಧರ ತಿಲಕ್ ಆತ್ಮಹತ್ಯೆ ಮಾಡಿಕೊಂಡಾಗ ತಮ್ಮ ಆತ್ಮಹತ್ಯೆಯ ಚೀಟಿಯ ಒಂದು ಪ್ರತಿಯನ್ನು ಪುಣೆಯ ಜಿಲ್ಲಾಧಿಕಾರಿಗೆ ಕಳಿಸಿದ್ದರೆ ಇನ್ನೊಂದು ಪ್ರತಿಯನ್ನು ಶ್ರೀಧರ ತಿಲಕರು ಬಾಬಾ ಸಾಹೇಬರಿಗೆ ಕಳುಹಿಸಿ ಕೊಡುತ್ತಾರೆ. ತಿಳಕರ ಸಂಕುಚಿತತೆ ಮತ್ತು ಅವರ ಮಗನ ಉದಾತ್ತತೆ – ಎರಡನ್ನೂ ಇಂದು ಚರಿತ್ರೆ ಮರೆತು ಬಿಟ್ಟಿದೆ.

ಚಿತ್ರಾವತಿಗೆ ಮುನ್ನ

ಶಾಹು ಮಹಾರಾಜರನ್ನೇ ಕೋರ್ಟ್ ಕಚೇರಿಗೆ ಅಲೆಯಿಸಿದ ಬ್ರಹ್ಮ ಶಕ್ತಿ ಮತ್ತು ದೇಶ ಭಕ್ತಿ ಶಕ್ತಿ ಎಷ್ಟಿದ್ದೀತು ಲೆಕ್ಕ ಹಾಕಿ. ತಿಲಕರ ಬ್ರಿಟಿಷ್ ವಿರೋಧಕ್ಕೆ ಪ್ರಮುಖ ಕಾರಣ ಬ್ರಿಟಿಷರು ಸಾಮಾಜಿಕ ಸಮಾನತೆಗೆ ಒತ್ತು ಕೊಟ್ಟಿದ್ದೂ ಆಗಿತ್ತು.

ಅಂಬೇಡ್ಕರ್ ರನ್ನು ಬ್ರಿಟಿಷರ ಏಜೆಂಟ್ ಎಂದು ನಿಂದಿಸುವ ಶೌರಿ ತಿಲಕರ ಬಗ್ಗೆ ಏನನ್ನೂ ಹೇಳುವುದಿಲ್ಲ. ಅದಕ್ಕಿಂತ ಹೆಚ್ಚಿನ ಸಂಕಟವಾಗುವುದು ಇತರ ತಥಾಕಥಿತ ಎಡ ಮತ್ತು ಪ್ರಗತಿಪರ ಇತಿಹಾಸಕಾರರೂ ತಿಳಕರ ಇನ್ನೊಂದು ಮುಖದ ಬಗ್ಗೆ ಮಾತನಾಡುವುದಿಲ್ಲ. ತಿಳಕರ ಮಹಿಳಾ ವಿರೋಧಿ ನಿಲುವುಗಳ ಬಗ್ಗೆ ಸ್ವತಹ ಒಬ್ಬ ಮಹಿಳೆ ಮತ್ತು ಅಭೂತಪೂರ್ವ ಇತಿಹಾಸಜ್ಞೆ ರೋಮಿಲ ಥಾಪರ್ ಬರೆಯಬೇಕಿತ್ತು. ತಾಯಿ ಸಾವಿತ್ರಿಯನ್ನೇ ಮರೆತ ನಾವು ತಿಳಕರ ಪೂಜೆ ಮಾಡುವುದರಲ್ಲಿ ವಿಶೇಷವೆನಿಲ್ಲ. ಆದರೆ ಡಾ.ಪರಿಮಳಾ ರಾವ್ ಎಂಬ ಯುವ ಚಿಂತಕಿ ‘Tilak`s Approach to Women`s Education and Emancipation’ ಎಂಬ ಅದ್ಭುತ ಪುಸ್ತಕ ಬರೆದು ತಿಳಕರ ನೈಜ ‘ಸಾಮಾಜಿಕ’ ನಿಲುಮೆಗಳನ್ನು ಸಾಕ್ಷಿ ಸಮೇತ ಹೊರಹಾಕಿದ್ದಾರೆ.

ಒಟ್ಟಿನಲ್ಲಿ, ದಲಿತ ಬಹುಜನರ ತಟ್ಟೆಯಲ್ಲಿ ನೊಣ ಹಾಕಿ ಅನ್ನ ಕಸಿಯುವ ಶೌರಿಗಳು (ತಾವು ಚಿತ್ರಾವತಿ ಬಿಡುವ ಮುನ್ನ), ತಮ್ಮ ತಟ್ಟೆಯಲ್ಲಿ ದೊಡ್ಡದೇನೋ ಬಿದ್ದಿರುವದನ್ನು ನೋಡಿಕೊಂಡು ಎತ್ತಿ ಪಕ್ಕಕ್ಕಿಟ್ಟರೆ ದೇಶಕ್ಕೆ ಮಹದುಪಕಾರವಾದೀತು.

(ಮುಂದುವರೆಯುತ್ತದೆ…)

5 thoughts on “ಭಾರತದ ಕುಲತಿಲಕರ ಪರಾಮರ್ಶೆ : ಭಾಗ 2

  1. Ananda Prasad

    ತಿಲಕರ ಮನೋಸ್ಥಿತಿಯ ಜನ ಇಂದು ಕೂಡ (ಸುಮಾರು ಒಂದು ಶತಮಾನ ಕಾಲಾವಧಿ ನಂತರ) ನಮ್ಮ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಲ್ಲಿ ತುಂಬಿರುವ ಕಾರಣವೇ ಇಂದು ಈ ದೇಶದಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಕಂಡುಬರುತ್ತಿರುವುದು. ಒಂದು ವೇಳೆ ಬ್ರಿಟಿಷರು ಭಾರತಕ್ಕೆ ಬಾರದೆ ಇರುತ್ತಿದ್ದರೆ ಹಾಗೂ ಇಂಗ್ಲೀಷ್ ವಿದ್ಯಾಭ್ಯಾಸ ಇಲ್ಲಿ ಬೆಳೆಯದೆ ಇರುತ್ತಿದ್ದರೆ ಇಂದು ನಮ್ಮ ದೇಶ ಯಾವ ಸ್ಥಿತಿಯಲ್ಲಿ ಇರುತ್ತಿತ್ತು ಎಂದು ಊಹಿಸಿಕೊಂಡರೆ ಭಯವಾಗುತ್ತದೆ.

    Reply
    1. ವೆಂಕಟೇಶ್ ಪ್ರಸಾದ್

      “ಒಂದು ವೇಳೆ ಬ್ರಿಟಿಷರು ಭಾರತಕ್ಕೆ ಬಾರದೆ ಇರುತ್ತಿದ್ದರೆ ಹಾಗೂ ಇಂಗ್ಲೀಷ್ ವಿದ್ಯಾಭ್ಯಾಸ ಇಲ್ಲಿ ಬೆಳೆಯದೆ ಇರುತ್ತಿದ್ದರೆ ಇಂದು ನಮ್ಮ ದೇಶ ಯಾವ ಸ್ಥಿತಿಯಲ್ಲಿ ಇರುತ್ತಿತ್ತು?”

      ಆನಂದ ಪ್ರಸಾದರಂತೆ ಯೋಚಿಸುವ ಮೂರ್ಖರ ಸಂಖ್ಯೆ ಕಡಿಮೆಯಿರುತಿತ್ತು

      Reply
      1. Ananda Prasad

        ವೈಯಕ್ತಿಕ ನಿಂದನೆಯಿಂದ ಏನೂ ಪ್ರಯೋಜನ ಇಲ್ಲ. ವೈಯಕ್ತಿಕ ನಿಂದನೆಯಲ್ಲಿ ನನಗೆ ವಿಶ್ವಾಸ ಇಲ್ಲ. ಹೀಗಾಗಿ ಇಂಥ ವೈಯಕ್ತಿಕ ನಿಂದನೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮಾತಿನಿಂದಲೇ ಒಬ್ಬ ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದು. ಭಿನ್ನ ಅಭಿಪ್ರಾಯಗಳಿದ್ದಾಗ್ಯೂ ಅದನ್ನು ಸೌಜನ್ಯಪೂರಿತವಾಗಿ ತಿಳಿಸುವುದು ನಾಗರಿಕರ ಹಾಗೂ ಸುಸಂಸ್ಕೃತರ ಲಕ್ಷಣ.

        Reply
        1. ವೆಂಕಟೇಶ್ ಪ್ರಸಾದ್

          ನಿಂದಿಸಿದೆನಾ! ಅಯ್ಯೋ ಚನ್ನಾಮಲ್ಲಿಕಾರ್ಜುನ.ನಿಮ್ಮಂತೆ ಯೋಚಿಸುವವರ ಸಂಖ್ಯೆ ಕಡಿಮೆಯಿರುತಿತ್ತು ಎಂದೆನಪ್ಪಾ.ಬ್ರಿಟಿಷರು ಬರುವ ಮೊದಲು ಭಾರತ ಹೇಗಿತ್ತು ತಿಳಿಯಪಡಿಸುವಿರೇನು?

          Reply
  2. bhatmahesht

    ಆನಂದ ಪ್ರಸಾದರವರೇ, ಆರಂಭದಲ್ಲಿ ಬಂದ ಬ್ರಿಟಿಷರು ಯಾವ ಸುಧಾರಣೆಯನ್ನೂ ಮಾಡಲಿಲ್ಲ. ಆದರೆ ನಂತರದ ದಿನಗಳಲ್ಲಿ ಬ್ರಿಟನ್ ಮತ್ತು ಯುರೋಪ್ ಗಳಲ್ಲಿ ತೀವ್ರಮಟ್ಟದ ವೈಚಾರಿಕ ಹಾಗೂ ವೈಜ್ಞಾನಿಕ ಕ್ರಾಂತಿಗಳಾದ ಬಳಿಕ ಅವರು ತಮ್ಮ ದೇಶಗಳಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೊಳಿಸಿದರು ಮತ್ತು ಅವುಗಳಲ್ಲಿ ಕೆಲವನ್ನು ಭಾರತದಲ್ಲೂ ಜಾರಿಗೊಳಿಸುವ ಪ್ರಯತ್ನ ಮಾಡಿದರು.

    Reply

Leave a Reply to Ananda Prasad Cancel reply

Your email address will not be published. Required fields are marked *