ಗೋಪಾಲ್ ಬಿ.
ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ಒಂದು ವಾರ ಅಪರೂಪದ ಸಂಗತಿಯೊಂದು ನಡೆಯಿತು. ಪ್ರಜಾವಾಣಿ ಪತ್ರಿಕೆಗೆ ಹೊಸ ದಿಕ್ಕು ಹಾಗೂ ಕರ್ನಾಟಕದ ಚಿಂತನಾವಲಯಕ್ಕೆ ಹೊಸದೊಂದು ದೆಸೆ ತೋರಿಸಿದ್ದ ಕೆ.ಎನ್.ಹರಿಕುಮಾರ್ ಅವರ ದೀರ್ಘ ಲೇಖನವೊಂದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು. ಬರಹದ ಮೊದಲ ಕಂತು ಪ್ರಕಟವಾದಾಗ ಅನೇಕರಿಗೆ ಅಚ್ಚರಿಯಾದದ್ದಂತೂ ಸತ್ಯ. ಅದು ಅನಿರೀಕ್ಷಿತ.
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಇತ್ತೀಚೆಗೆ ಮಾತನಾಡುತ್ತಾ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಮತ್ತೆ ಬಂದೀತೇನೋ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆ ಮಾತಿನ ಎಳೆಯೊಂದಿಗೆ ಆರಂಭವಾಗುವ ಹರಿಕುಮಾರ್ ಅವರ ಮಾತುಗಳು, ಈ ಹೊತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ
ದ್ದಾರೆ. ತುರ್ತು ಪರಿಸ್ಥಿತಿ ಹೇರಿಕೆ ತಂದುಕೊಡಬಹುದಾದ ಅಪಾಯಗಳನ್ನು ಮನಗಂಡು, ಕೇವಲ ಪ್ರಜಾಪ್ರಭುತ್ವದ ಮೇಲ್ಮೈ ರೂಪುರೇಷೆಗಳನ್ನು ಹಾಗೇ ಉಳಿಸಿಕೊಂಡು, ಇದೇ ವ್ಯವಸ್ಥೆ ಜನವಿರೋಧಿಯಾಗುವ ಅಪಾಯ ಇದೆ ಎಂದು ಎಚ್ಚರಿಸುವ ಹರಿಕುಮಾರ್ ಅವರು “ನಮ್ಮ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಹತ್ತಿಕ್ಕುವ, ಕಬಳಿಸುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲು, ಸಾಮಾಜಿಕ ಅಭಿಪ್ರಾಯ ರೂಪಿಸುವ ಹಾಗೂ ಸಾಮಾಜಿಕ ಹೋರಾಟ ಕಟ್ಟುವ ಮೂಲಕ ಮಾತ್ರ ಸಾಧ್ಯ” – ಎಂದು ಸಲಹೆ ನೀಡುತ್ತಾರೆ.
ಅವರ ಈ ಲೇಖನ ಪ್ರಕಟವಾಗುವ ಕೆಲವು ವಾರಗಳ ಹಿಂದಷ್ಟೇ ಫೇಸ್ ಬುಕ್ ನಲ್ಲಿ ಹರಿಕುಮಾರ್ ಅವರು ಸಕ್ರಿಯ ಪತ್ರಿಕೋದ್ಯಮ ಹಾಗೂ ಸಾ ಮಾಜಿಕ ಹೋರಾಟಗಳಿಂದ ದೂರ ಉಳಿದಿರುವ ಬಗ್ಗೆ ಚರ್ಚೆಯಾಗಿತ್ತು. ಈ ನಾಡಿನ ಆಸ್ತಿಗಳೇ ಎನ್ನಬಹುದಾದ ಕೆಲ ಹಿರಿಯ ಪ ತ್ರಕರ್ತರು (ಜಗದೀಶ್ ಕೊಪ್ಪ, ದಿನೇಶ್ ಅಮಿನ್ ಮಟ್ಟು, ನಾಗೇಶ್ ಹೆಗಡೆ…ಇನ್ನೂ ಹಲವರು) ಆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಹರಿಕುಮಾರ್ ಮತ್ತೆ ಚಾಲ್ತಿಗೆ ಬರಬೇಕು. ಅವರು ಮಾತನಾಡಬೇಕು, ಬರೆಯಬೇಕು – ಎನ್ನುವ ಅಭಿಪ್ರಾಯ ಅಲ್ಲಿ ವ್ಯಕ್ತವಾಗಿತ್ತು. ಬಹುಶಃ ಆ ಚರ್ಚೆಯ ವಿವರಗಳು ಅವರಿಗೆ ಸಾಮಾಜಿಕ ತಾಣದ ಮೂಲಕ ತಲುಪಿದ್ದವೇನೋ, ಆ ಕಾರಣದಿಂದ ಅವರು ಸುದೀರ್ಘ ಲೇಖನವೊಂದನ್ನು ಬರೆದು ಕನ್ನಡ ಪ್ರಭಕ್ಕೆ ಕಳುಹಿಸಿದರೆ… ಗೊತ್ತಿಲ್ಲ.
ಆದರೆ, ಈ ಬೆಳವಣಿಗೆ ಆಶಾದಾಯಕ. ಕನ್ನಡಪ್ರಭ ನವೆಂಬರ್ 1 ರಂದು ಕರ್ನಾಟಕದ 60 ಮಹನಿಯರನ್ನು ಆಯ್ಕೆ ಮಾಡುವಾಗ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹರಿಕುಮಾರ್ ಅವರನ್ನು ಗುರುತಿಸಿದ್ದರು. ಅದಾದ ಬಳಿಕೆ ಕೆಲವೇ ದಿನಗಳಲ್ಲಿ ಲೇಖನ ಸರಣಿ ಆರಂಭವಾಯಿತು. ಇಂತಹದೊಂದು ಅಪರೂಪದ ಬೆಳವಣಿಗೆ ಘಟಿಸಲು ಕಾರಣರಾದ ಹರಿಕುಮಾರ್ ಹಾಗೂ ಕನ್ನಡಪ್ರಭ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಅಭಿನಂದನಾರ್ಹರು.
prajavanige bareya bahudittalla
ಪ್ರಜಾವಾಣಿ ಒಮ್ಮೆ ಹಳಿತಪ್ಪಿತೋ ಎಂದು ಸಂಶಯಿಸಲ್ಪಡುವಂಥಾ ಒಂದು ಸಂದರ್ಭದಲ್ಲಿ ಅದನ್ನು ದ್ರಢವಾಗಿ ನಿಲ್ಲಿಸಿದ ಶ್ರೀ ಹರಿಕುಮಾರರವರ, ಈ ಲೇಖನ ಓದಿದಾಗ ಮನಸ್ಸು ಮುದಗೊಂಡಿತು !ಈ ನನ್ನ ದೇಶದಲ್ಲಿ ಪ್ರಜಾಪ್ರಬುತ್ವ ಭದ್ರ ಎಂದು .