Daily Archives: December 12, 2015

ಡಾ. ಬರಗೂರು ರಾಮಚಂದ್ರಪ್ಪರಿಗೆ ಬಹಿರಂಗ ಪತ್ರ – ಎಸ್.ಐ.ಒ. ಇಸ್ಲಾಂ ಬ್ರಾಹ್ಮಣ್ಯದ ನಿಜವಾದ ಗುರಿ ಸೂಫಿ ಸಂತರ ಪಠ್ಯ

– ಇರ್ಷಾದ್ ಉಪ್ಪಿನಂಗಡಿ

ಪ್ರಾಥಮಿಕ ಮತ್ತು ಪ್ರೌಢಶಾಲಾ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾದ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ,
ಪಠ್ಯ ಕೇಸರಿಕರಣದ ವಿರುದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ ಬರಗೂರು ರಾಮಚಂದ್ರಪ್ಪಗೆ ಮನವಿ ಸಲ್ಲಿಸಿರುವ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆ ಮೂಲಕ ಪಠ್ಯದಲ್ಲಿ ಇಸ್ಲಾಂ ಬ್ರಾಹ್ಮಣ್ಯವನ್ನು ಹೇರಲು ಒತ್ತಾಯ ಪಡಿಸಿದೆ.
ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೆಷನ್ (ಎಸ್.ಐ.ಓ) ಜಮಾತೇ-ಇಸ್ಲಾಮೀ-ಹಿಂದ್ ಮೂಲಭೂತವಾದಿ ಸಂಘಟನೆಯ ವಿದ್ಯಾರ್ಥಿ ಘಟಕ. ಕೇಸರೀಕರಣಗೊಂಡಿರುವ ಪಠ್ಯ ಪರಿಷ್ಕರಣೆಯಾಗಬೇಕು ಎಂಬುದು ನಿಜ. ಆದರೆ ಈ ಪರಿಷ್ಕರಣೆಗೆ ಆಗ್ರಹಿಸುವವರು ಯಾರು ? ಮತ್ತು ಅವರ ಹಿಡನ್ ಅಜೆಂಡಾಗಳು ಏನು ಎಂಬುದರ ಮೇಲೆ ಆಗ್ರಹದ ಸಾಧಕ ಭಾದಕಗಳು ಚರ್ಚೆಗೊಳಪಡಬೇಕು. ಪಠ್ಯದಲ್ಲಿ ಕೇಸರೀಕರಣದ ಕೆಲವೊಂದು ಉದಾಹರಣೆಗಳನ್ನು ಮುಂದಿಟ್ಟುಕೊಂಡು ಎಸ್ ಐ ಒ ತಮ್ಮ ಮೂಲಭೂತವಾದಿ ಸಿದ್ಧಾಂತಕ್ಕೆ ಪಠ್ಯದಲ್ಲಿ ಸ್ಥಾನದೊರಕಿಸಿಕೊಡಲು ಯತ್ನ ನಡೆಸಿದೆ. ಅದಕ್ಕಾಗಿ ಕೆಲವೊಂದು ಪ್ರಗತಿಪರರು ಎತ್ತಬಹುದಾದ ವಿಷಯಗಳBaraguruನ್ನು ಮೊದಲಿಗೆ ಎತ್ತಿ ತೋರಿಸಿ ನಂತರ ತನ್ನ ಸಿದ್ಧಾಂತವನ್ನು ಪಠ್ಯದಲ್ಲಿ ಸೇರಿಸಲು ಆಗ್ರಹಿಸುವ ಪ್ರಯತ್ನ ನಡೆಸಿದೆ.

 

ಐದನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ಯಕ್ಷ ಪ್ರಶ್ನೆ ಎಂಬ ಪಾಠವಿದೆ. ಅದರಲ್ಲಿ ಯಕ್ಷ ಮತ್ತು ಧರ್ಮರಾಯನ ಸಂಭಾಷಣೆ ನೀಡಲಾಗಿದೆ. ಸಂಭಾಷಣೆಯಲ್ಲಿ ಮಾನವನಿಗೆ ತಾಯಿ ರೂಪಿ ಯಾರು ? ಎಂಬ ಪ್ರಶ್ನೆಗೆ ಗೋವು ಎಂಬ ಉತ್ತರವನ್ನು ಧರ್ಮರಾಯ ನೀಡುತ್ತಾನೆ. ಈ ಮೂಲಕ ಪರೋಕ್ಷವಾಗಿ ನಿಮ್ಮ ತಾಯಿಯ ಹತ್ಯೆ ಮಾಡುತ್ತಿದ್ದೀರಿ ಎಂದು ಮುಸ್ಲಿಮರಿಗೆ ಹೇಳುವಂತಿದೆ. ಎಂಟನೇ ತರಗತಿಯ ದ್ವಿತೀಯ ಭಾಷೆ ತಿಳಿಕನ್ನಡದ 10 ನೇ ಪಾಠ ಕರಾಳ ರಾತ್ರಿಯಲ್ಲಿ, ಜಿಹಾದಿಗಳು ಜನರನ್ನೇಕೆ ಕೊಲ್ಲುತ್ತಾರೆ ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ಜಿಹಾದಿ ಎನ್ನುವುದು ಉಗ್ರಗಾಮಿ ಸಂಘಟನೆ. ಇವರದ್ದು ಮತೀಯ ಸಂಘಟನೆ. ಬೇರೆ ಧರ್ಮದವರನ್ನು ಕೊಂದರೆ ನಮ್ಮ ದೇವರಿಗೆ ಪ್ರೀತಿ ಎಂದು ನಂಬಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಇದು ಇಸ್ಲಾಂ ಧರ್ಮವನ್ನು ಅವಮಾನಿಸುವ ಉದ್ದೇಶದಿಂದಲೇ ಹೀಗೆ ಬರೆಯಲಾಗಿದೆ ಅನ್ನೋದು ಎಸ್.ಐ.ಓ ಆಕ್ಷೇಪವಾಗಿದೆ. ಆದರೆ ಎಸ್ ಐ ಒ ಮನವಿಯ ಉದ್ದೇಶ ಕೇಸರಿಕರಣವನ್ನು ವಿರೋಧಿಸುವುದಕ್ಕಿಂತಲೂ ತಮ್ಮ ಮೂಲಭೂತವಾದಿ ಅಜೆಂಡಾವನ್ನು ಪಠ್ಯದಲ್ಲಿ ತೂರಿಸುವುದಾಗಿದೆ.

 

ಶಾಲಾ ಪಠ್ಯ ಪುಸ್ತಕಗಳು ಕೇಸರಿಕರಣಗೊಳಿಸುವ ಸಂಘಪರಿವಾರದ ಪ್ರಯತ್ನದ ಭಾಗವಾಗಿ ಈಗಾಗಲೇ ಪಠ್ಯಗಳಲ್ಲಿ ಇಂಥ ಅನೇಕ ಬದಲಾವಣೆಗಳಾಗಿವೆ. ಪಾಠಗಳ ಮೂಲಕ ಮಕ್ಕಳ ಎಳೆಯ ಏನು ಅರಿಯದೆ ಅಗ ತಾನೆ ಕಲಿಯಲು ಬಂದಂಥ ಮುಗ್ಧ ಮನಸ್ಸಿನಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತ ಸಮುದಾಯಗಳ ಕುರಿತಾಗಿ ವಿಷ ಬೀಜ ಬಿತ್ತುವ ಕಾರ್ಯವನ್ನು ಸಂಘಪರಿವಾರ ವ್ಯವಸ್ಥಿತವಾಗಿ ನಡೆಸುತ್ತಲೇ ಬಂದಿದೆ.

 

ಎಸ್.ಐ.ಓ ವ್ಯಕ್ತಪಡಿಸಿರುವ ಆಕ್ಷೇಪಗಳು ಹೊಸ ವಿಚಾರವೇನಲ್ಲ. ಈ ಹಿಂದಿನಿಂದಲೂ ಕೂಡ ಅನೇಕ ಪ್ರಗತಿಪರರು ಶಿಕ್ಷಣ ಕೇಸರೀಕರಣದ ಕುರಿತಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಶಾಲಾ ಪಠ್ಯಪುಸ್ತಕಗಳನ್ನು ಸಂಘಪರಿವಾರ ಕೇಸರಿಕರಣಗೊಳಿಸುತ್ತಿರುವುದು, ಪಠ್ಯ ಪುಸ್ತಕದಲ್ಲಿ ಏಕ ಸಂಸ್ಕೃತಿಯನ್ನು ಹೇರಲಾಗ್ತಿರೋದು ಹಾಗೂ ಹಿಂದೂIrshad-2 ಧರ್ಮದ ಸಂಸ್ಕೃತಿ ಆಚರಣೆಗಳಿಗೆ ಸಂಬಂಧಪಟ್ಟ ಪಾಠಗಳನ್ನೇ ಹೆಚ್ಚು ಅಳವಡಿಸಲಾಗುತ್ತಿರುವುದು ಆತಂಕಕಾರಿ ಹಾಗೂ ಖಂಡನೀಯ. ಪ್ರಾಥಮಿಕ ಮತ್ತು ಪ್ರೌಢಶಾಲಾ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆದರೆ ಅದನ್ನು ಮುಸ್ಲಿಂ ಮೂಲಭೂತವಾದಿ, ಕೋಮುವಾದಿ ವಿದ್ಯಾರ್ಥಿ ಸಂಘಟನೆಗೆ ಆಗ್ರಹಿಸುವ ನೈತಿಕತೆ ಇಲ್ಲ.
ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆಯ ಮನವಿಗಳಲ್ಲಿ ಪಠ್ಯ ಕೇಸರೀಕರಣದ ಆರೋಪಗಳ ಜೊತೆಗೆ ಇನ್ನೂ ಕೆಲವೊಂದು ಪ್ರಮುಖ ಅಂಶಗಳಿವೆ. 9 ನೇ ತರಗತಿಯ ದ್ವಿತೀಯ ಭಾಷೆ ಕನ್ನಡದ ಪ್ರೊ.ಕರೀಮುದ್ದೀನ್ ಸಾಬ್ ಪಾಠದಲ್ಲಿ ರಾಜ್ಯ ಭತ್ಯೆ ನೀಡುವುದಕ್ಕಿಂತ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಮತ್ತು ಹೈದರಾಲಿ ಸಮಾಧಿಗಳಿಗೆ ಸೇವೆ ಸಲ್ಲಿಸೋದೇ ಮೇಲು ಎಂಬ ಸಾಲು ಬರುತ್ತದೆ. ಇದೇ ಪಠ್ಯದಲ್ಲಿ ಬುಡ್ಡು ಸಾಹೇಬರು, ಬೆಟ್ಟ ಹತ್ತಿದರು ಎಂಬ ಪಾಠದಲ್ಲಿ ದರ್ಗಾ ಎಂಬುವುದು ಮುಹಮ್ಮದೀಯರ, ಸಾಧು-ಸಂತರ ಸಮಾಧಿ ಸ್ಥಳ, ಅದು ಪವಿತ್ರ ಸ್ಥಳವಾಗಿದೆ ಎಂದಿದೆ. ಬಹುಸಂಸ್ಕೃತಿ ಪರವಾಗಿ ಪಠ್ಯ ಕೇಸರಿಕರ ಣವನ್ನು ವಿರೋಧಿಸುವ ಎಸ್.ಐ.ಓ, ಅದೇ ಮನವಿಯಲ್ಲಿ ಬಹುಸಂಸ್ಕೃತಿಯ ಪ್ರಬಲ ಪ್ರತಿಪಾದಕರಾಗಿರುವ ಸೂಫಿ ಸಂತರ ಕಲ್ಪನೆಯೇ ಇಸ್ಲಾಂನಲ್ಲಿ ಇಲ್ಲ. ದರ್ಗಾ ಸಂಸ್ಕೃತಿ ಅನ್ನೋದು ಇಸ್ಲಾಂ ಬಗ್ಗೆ ನೈಜ ತಿಳುವಳಿಕೆ ಇಲ್ಲದವರು ಮಾಡಿಕೊಂಡ ಆರಾಧನೆ ಎಂದು ಜರಿದಿದೆ. ದರ್ಗಾ ಹಾಗೂ ಸೂಫಿ ಚಿಂತನೆ ಇಸ್ಲಾಂ ಸಿದ್ಧಾಂತಕ್ಕೆ ವಿರುದ್ಧ. ಹಾಗಾಗಿ ಇದನ್ನು ಪಠ್ಯದಿಂದ ತೆಗೆದುಹಾಕಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಒತ್ತಾಯಿಸಿದೆ.

 

ಪಠ್ಯ ಕೇಸರಿಕರಣ ಬಹುಸಂಸ್ಕೃತಿಗೆ ಹೇಗೆ ಮಾರಕವೋ ಅಷ್ಟೇ ಮಾರಕವಾಗಿರೋದು, ಸೂಫಿ ಸಂತರ ಬಗ್ಗೆ ಬೆಳಕು ಚೆಲ್ಲುವ ವಿಚಾರವನ್ನು ಪಠ್ಯದಿಂದ ಕೈ ಬಿಡಬೇಕೆಂಬ ಎಸ್.ಐ.ಓ ವಾದ. ಈ ನಾಡಿನ ಬಹುಸಂಸ್ಕೃತಿ ಹಾಗೂ ಧಾರ್ಮಿಕ ಸೌಹಾರ್ದತೆಗೆ ಅಪಾರ ಕೊಡುಗೆ ಸಲ್ಲಿಸಿದವರು ಸೂಫಿಗಳು. ಸರ್ವಧರ್ಮ, ಸಮಭಾವ, ಜೀವಪರತೆ, ಸ್ನೇಹ-ಪ್ರೀತಿ-ಮಮತೆಯನ್ನು ಜನಸಮೂಹದಲ್ಲಿ ಬಿತ್ತುವ ಮೂಲಕ ಧರ್ಮ ಪರಿಪಾಲನೆ ಮಾಡುತ್ತಾ ಶಾಂತಿಯ ಸಂದೇಶವನ್ನು ಸಾರುತ್ತಾ ಬಂದವರು ಇವರು. ಈ ಸೂಫಿಗಳು ನಡೆದ ಹಾದಿಯ ಮೇಲೆ ಸಾಗುವ ಅಗತ್ಯತೆ ಪ್ರಸಕ್ತ ಮುಸ್ಲಿಮ್ ಸಮುದಾಯಕ್ಕಿದೆ. ಭ್ರಾತೃತ್ವ ಸಂದೇಶ ಸಾರಿದ, ಎಲ್ಲರನ್ನು ಸಮಾನವಾಗಿ ಕಂಡ, ಪ್ರತಿಯೊಬ್ಬರನ್ನು ಪ್ರೀತಿಸಿ, ಪೋಷಿಸಿದ , ಅಹಿಂಸಾತ್ಮಕವಾಗಿ ನಡೆದ ಸೂಫಿಗಳ ಚಿಂತನೆಯನ್ನು ನಾಶ ಮಾಡೋ ಪ್ರಯತ್ನ ಇಸ್ಲಾಂ ಮೂಲಭೂತವಾದಿಗಳಿಂದ ಇಂದು ನಡೆಯುತ್ತಿರೋದು ಆತಂಕಕಾರಿ. ಈ ವಿಷವರ್ತುಲ ಬೀಜವನ್ನು ಬಿತ್ತುವಂತಹ ಕೆಲಸ ವಹಾಬಿವಾದಿಗಳು ಹಾಗೂ ಜಮಾತೇ-ಇಸ್ಲಾಮೀ-ಹಿಂದ್ನಂಥ ಮೂಲಭೂತವಾದಿಗಳು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ.

 

ದರ್ಗಾ ಹಾಗೂ ಸೂಫಿ ಸಂಸ್ಕೃತಿಯನ್ನು ಮೂಢನಂಬಿಕೆ ಎಂದು ಬಿಂಬಿಸೋ ಈ ಮೂಲಭೂತವಾದಿಗಳು, ವಹಾಬಿ ಹಾಗೂ ಮೌದೂದಿಯ ಅಪಾಯಕಾರಿ-ಅಸಹಿಷ್ಣುತ ಸಿದ್ಧಾಂತವೇ ನೈಜ ಇಸ್ಲಾಮ್ ಎನ್ನೋದು ಇವIrshad-3ರ ವಾದ ಹಾಗೂ ಈ ಮೂಲಕ ಭಾರತೀಯ ಮುಸ್ಲಿಮರನ್ನು ಸೂಫಿಸಂನಿಂದ ವಿಮುಖರನ್ನಾಗಿಸುವುದೇ ಇದರ ಹಿಂದಿರೋ ಉದ್ದೇಶ. ದರ್ಗಾ ಸೂಫಿಸಂನ್ನು ಮೌಢ್ಯ ಎಂದು ವಾದಿಸುವ ಜಮಾತೇ ಇಸ್ಲಾಮೀಗಳು ಈ ಮೂಲಕ ಇಸ್ಲಾಂ ಬ್ರಾಹ್ಮಣ್ಯವನ್ನು ಹೇರುತ್ತಿದ್ದಾರೆ. ಈ ಪ್ರಯತ್ನದ ಮುಂದುವರಿದ ಭಾಗವಾಗಿ ಪಠ್ಯ ಪುಸ್ತಕಗಳಲ್ಲಿ ಸೂಫಿ ಸಂತರ ಹಾಗೂ ಅವರ ದರ್ಗಾಗಳ ಕುರಿತಾದ ಉಲ್ಲೇಖಗಳನ್ನು ನಾಶಪಡಿಸೋಕೆ ಮುಂದಾಗಿದ್ದಾರೆ. ಇದು ತೀರಾ ಅಪಾಯಕಾರಿ ಬೆಳವಣಿಗೆ.
ಪ್ರಸಕ್ತ ಸಮಯದಲ್ಲಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಂಘ ಪರಿವಾರದ ಹಿಂದೂತ್ವವಾಗಲೀ, ವಹಾಬಿ-ಜಮಾತೇ-ಇಸ್ಲಾಮಿಯಾಗಲೀ ಅಥವಾ ತಬ್ಲೀಗಿಗಳ ಮೂಲಭೂತವಾದಿ ಇಸ್ಲಾಂ ಆಗಲೀ ಅಗತ್ಯವಿಲ್ಲ. ಆ ಮನಸ್ಸುಗಳಿಗೆ ಬೇಕಾಗಿರೋದು, ಎಲ್ಲರೊಂದಿಗೆ ಬೆರೆತು ಬಾಳುವ ಸಮಾನತೆ, ಮನುಷ್ಯ ಪ್ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವ ಸಂದೇಶ, ಸಹಿಷ್ಣುತೆ ಸಾರುವ ಮನೋಭಾವ. ಇಂತಹ ಬುನಾದಿ ಕಟ್ಟಿಕೊಳ್ಳಲು ಸಮಾಜಕ್ಕೆ ಇವೆಲ್ಲವನ್ನು ತೋರಿಸಿಕೊಟ್ಟ, ಸಾಮರಸ್ಯದ ಇತಿಹಾಸ ಹೊಂದಿರುವ ಸೂಫಿ ಸಂತರು, ದಾಸರು, ವಚನಕಾರರು ಸೇರಿದಂತೆ ಸಮಾಜ ಸುಧಾರಣೆಗೆ ಮುಂದಾದ ಮಹಾನ್ ಆದರ್ಶಗಳ ಸಂದೇಶದ ಕುರಿತಾದ ಪಠ್ಯ ಅತ್ಯಗತ್ಯ.

 

ಈ ನಿಟ್ಟಿನಲ್ಲಿ ಪಠ್ಯ ಪುಸ್ತಕದಲ್ಲಿ ಸೂಫಿಸಂ-ದರ್ಗಾ ಸಂಸ್ಕೃತಿಯ ಕುರಿತಾದ ಪಾಠವನ್ನು ಕೈಬಿಡಬೇಕೆಂದ ಜಮಾತೇ ಇಸ್ಲಾಮಿ-ಹಿಂದ್ ಸಂಘಟನೆಯ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಮನವಿಯನ್ನು ಪರಿಗಣಿಸಬಾರದೆಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾದ ಡಾ ಬರಗೂರು ರಾಮಚಂದ್ರಪ್ಪ ಅವರಲ್ಲಿ ನಮ್ಮ ಕಳಕಳಿಯ ವಿನಂತಿ.