Author Archives: admin1

ರಾಜಕೀಯ ದ್ವೇಷ ಸಾಧನೆಗೆ ಖಾಸಗಿ ದೂರು-ಕನ್ನಡಪ್ರಭ

-ರವಿ ಕೃಷ್ಣಾರೆಡ್ಡಿ

ಇದು ಖಂಡಿತವಾಗಿ ಅನಿರೀಕ್ಷಿತವಲ್ಲ. ಊಹಿಸಿದ್ದದ್ದೆ. ಬರೆಸಿದವರ ಮತ್ತು ಬರೆದವರ ಮಧ್ಯೆ ಹೊಂದಾಣಿಕೆ ಆಗಿಲ್ಲ. ಅವರ ನಿರೀಕ್ಷೆಯನ್ನು ಇವರು ಮುಟ್ಟಿಲ್ಲ. ನಿಜಕ್ಕೂ ಬರೆದವರು ನನ್ನ ಬಗ್ಗೆ ಅಂದುಕೊಂಡಿದ್ದಕ್ಕಿಂತ ಉದಾರವಾಗಿದ್ದಾರೆ.

 

 

 

 

 

 

ಚಿತ್ರಕೃಪೆ: ಕನ್ನಡಪ್ರಭ

ಬಿಎಸ್ ವೈ, ಸೋಮಣ್ಣ ವಿರುದ್ಧ ದೂರು

ಗುರುವಾರ ಲೋಕಾಯುಕ್ತ ಕೋರ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸೋಮಣ್ಣ ವಿರುದ್ಧ ಭೂಹಗರಣದ ದೂರು ದಾಖಲಾಯಿತು. ವರ್ತಮಾನ ಬಳಗದ ರವಿಕೃಷ್ಣಾರೆಡ್ಡಿ ಖಾಸಗಿ ದೂರನ್ನು ದಾಖಲಿಸಿದ್ದಾರೆ. ಕೆಂಗೇರಿ ಸಮೀಪ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವ ದಾಖಲೆಗಳು ಲಭ್ಯವಾಗಿವೆ.  ತೀವ್ರ ಅನಾರೋಗ್ಯದ ಕಾರಣ ರವಿಕೃಷ್ಣಾ ರೆಡ್ಡಿ ಅವರಿಗೆ ಇಲ್ಲಿ ವಿಸ್ತೃತ ಲೇಖನ ಬರೆಯಲು ಸಾಧ್ಯವಾಗಿಲ್ಲ. ಆದ್ದರಿಂದ ದೂರು ದಾಖಲಾದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನ ಇಲ್ಲಿ ನೀಡಿದ್ದೇವೆ.

 

 

 

 

 

 

ಚಿತ್ರಕೃಪೆ: ಪ್ರಜಾವಾಣಿ, ಉದಯವಾಣಿ, ವಿಜಯ ಕರ್ನಾಟಕ

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

– ಡಾ. ಎನ್ ಜಗದೀಶ್ ಕೊಪ್ಪ.

ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸಿದ್ಧ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಬಳಗದ ಇಂಗ್ಲೀಷ್ ಛಾನಲ್ ಟೈಮ್ಸ್ ನೌ ಅವಸರಕ್ಕೆ ಬಲಿ ಬಿದ್ದು ಮಾಡಿದ ಒಂದು ಸಣ್ಣ ಪ್ರಮಾದಕ್ಕೆ ಈಗ ತೆರಬೇಕಾಗಿರುವ ದಂಡ ಸಾಮಾನ್ಯವಾದುದಲ್ಲ. ಬರೋಬ್ಬರಿ ನೂರು ಕೋಟಿ ರೂಪಾಯಿಗಳು.

ಸುದ್ಧಿ ಚಾನಲ್ ಗಳ ಸ್ಪರ್ಧೆಯ ನಡುವೆ ಎಲ್ಲರಿಗಿಂತ ಮುಂಚಿತವಾಗಿ ಸುದ್ಧಿ ತಲುಪಿಸುವ ಭರದಲ್ಲಿ ಅದರ ಖಚಿತತೆ, ಔಚಿತ್ಯ, ಸುದ್ಧಿಮೂಲಗಳ ಪ್ರಾಮಾಣಿಕತೆ ಇವೆಲ್ಲವನ್ನು ಮರೆತು ಅವಸರವಾಗಿ ತಪ್ಪು ಮಾಹಿತಿಗಳನ್ನು ಸುದ್ಧಿಯ ನೆಪದಲ್ಲಿ ಭಿತ್ತರಿಸುವುದು ಇವತ್ತು ಭಾರತದ ಎಲ್ಲಾ ಭಾಷೆಗಳ ಛಾನಲ್ ಗಳ ಕೆಟ್ಟ ಛಾಳಿಯಾಗಿದೆ.

ಇಂತಹದೆ ತಪ್ಪನ್ನು ಟೈಮ್ಸ್ ನೌ ಕೂಡ ಮಾಡಿತು.

2008ರಲ್ಲಿ ಗಾಜಿಯಾಬಾದ್ ನ್ಯಾಯಾಲಯದ ನೌಕರರ ಭವಿಷ್ಯ ನಿಧಿಹಣ ದುರುಪಯೋಗವಾದ ಹಗರಣದಲ್ಲಿ ನ್ಯಾಯಾಧೀಶ ಪಿ.ಕೆ. ಸಮಂತ್ ಅವರ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ 2008ರ ಸೆಪ್ಟೆಂಬರ್ 10 ರಂದು ಟೈಮ್ಸ್ ನೌ ಚಾನಲ್ ಸುದ್ಧಿ ಬಿತ್ತರಿಸುತ್ತಾ ಸಮಂತರ ಭಾವಚಿತ್ರ ಎಂದು ಭಾವಿಸಿ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪುಣೆ ಮೂಲದ ಸಾವಂತ್ ರವರ ಭಾವಚಿತ್ರ ಪ್ರಕಟಿಸಿ ಪ್ರಮಾದ ಎಸಗಿತು.

ಇದರಿಂದ ಆಕ್ರೋಶಗೊಂಡ ಸಾವಂತರು ಪುಣೆಯ ಸ್ಥಳೀಯ ನ್ಯಾಯಾಲಯದಲ್ಲಿ ನೂರು ಕೋಟಿ ರೂ.ಗಳಿಗೆ ಪರಿಹಾರ ಕೋರಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದರು. ನ್ಯಾಯಲಯ ಅವರ ಮನವಿಯನ್ನು ಎತ್ತಿ ಹಿಡಿದು ಪರಿಹಾರ ನೀಡುವಂತೆ ಆದೇಶ ನೀಡಿತು. ಟೈಮ್ಸ್ ನೌ ಛಾನಲ್ ಇದರ ವಿರುದ್ಧ ಬಾಂಬೆ ಹೈಕೋರ್ಟ್  ಮೊರೆ ಹೊಕ್ಕಾಗ  ಹೈಕೋರ್ಟ್  ಸಹ ಸಾವಂತರ ಪರ ತೀರ್ಪು  ನೀಡಿ ನ್ಯಾಯಾಲಯದಲ್ಲಿ 20 ಕೋಟಿ ಠೇವಣಿ ಹಾಗೂ 80 ಕೋಟಿ ರೂ ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸೂಚಿಸಿತು.

ಅಂತಿಮವಾಗಿ ಟೈಮ್ಸ್ ಸಂಸ್ಥೆ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋದರೆ, ದ್ವಿಸದಸ್ಯ ಪೀಠದ ನ್ಯಾಯಮೂ ರ್ತಿಗಳಾದ ಜಿ. ಎಸ್. ಸಿಂಘ್ವಿ ಹಾಗು ಎಸ್. ಜೆ. ಮುಖ್ಯೋಪಾಧ್ಯಾಯ ಚಾನಲ್ನ ಅಜರ್ಿಯನ್ನು ತಿರಸ್ಕರಿಸಿ, ಹೈಕೋರ್ಟ್  ಆದೇಶಕ್ಕೆ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿತ್ತರು.

ಇಲ್ಲಿನ ಇಡೀ ಪ್ರಕ್ರಿಯೆಯಲ್ಲಿ ಒಂದು ಸೂಕ್ಷ್ಮ ಸಂಗತಿಯನ್ನು ಗಮನಿಸಬೇಕು. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾನ ನಷ್ಟಕ್ಕೆ ಒಳಗಾದರೆ, ಅವನು ನ್ಯಾಯಾಲಯದ ಮೂಲಕ ಕೋರುವ ಪರಿಹಾರ ಮೊತ್ತದ ಶೇ.10 ರಷ್ಟು ಹಣವನ್ನು ಮೊಕದ್ದಮೆ ದಾಖಲಿಸುವಾಗ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಒಂದು ವೇಳೆ ಅವನು ಮಾನಹಾನಿಯ ಬಗ್ಗೆ ಸಾಬೀತು ಪಡಿಸಲು ವಿಫಲನಾದರೆ, ಹಣವನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡು ಎದುರಾಳಿಯ ನ್ಯಾಯಲಯದ ವೆಚ್ಚವನ್ನು ಭರಿಸಲು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

ಹಾಗಾದರೆ, ನಿವೃತ್ತ ನ್ಯಾಯಾಧೀಶರಾದ ಸಾವಂತರಿಗೆ 100 ಕೋಟಿ ಪರಿಹಾರ ಕೇಳಲು 10 ಕೋಟಿ ಹಣ ಠೇವಣಿ ಇಡಲು ಎಲ್ಲಿಂದ ಬಂತು? ಇಲ್ಲೇ ಇರುವುದು ಕಾನೂನಿನ ಸಡಿಲವಾದ ಅಂಶ. ಠೇವಣಿ ಕುರಿತಂತೆ ಕಾನೂನಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಿಗೆ ನಿಯಮವನ್ನು ಸಡಿಲಿಸುವ ಕುರಿತಂತೆ ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ನ್ಯಾಯ ನೀಡುವಲ್ಲಿ ಎಲ್ಲಾ ಹಂತದಲ್ಲಿ ಕೂಡ ಪಕ್ಷಪಾತ ಧೋರಣೆ ಅನುಸರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಬ್ಬ ನಿವೃತ್ತ ನ್ಯಾಯಾದೀಶನ ಮರ್ಯಾದೆ ನೂರು ಕೋಟಿ ಬೆಲೆ ಬಾಳಲು ಹೇಗೆ ಸಾಧ್ಯ? ಅಂದ ಮಾತ್ರಕ್ಕೆ ನಾನು ಮಾಧ್ಯಮದ ಒಂದು ಭಾಗವಾಗಿದ್ದರೂ ಕೂಡ ಇಂದಿನ ಮಾಧ್ಯಮಗಳ ವರ್ತನೆಯನ್ನು ಸಮರ್ಥಿಸಲು ಸಿದ್ಧನಿಲ್ಲ.

ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲಿ ವರದಿಯನ್ನ ಜಾಹಿರಾತು ರೂಪಕ್ಕೆ ಇಳಿಸಿದ ನೀಚವೃತ್ತಿಯ ಕಳಂಕ ಅಂಟಿ ಕೊಂಡಿರುವುದು ಟೈಮ್ಸ್ ಆಫ್ ಇಂಡಿಯಾ ಬಳಗಕ್ಕೆ. ಸ್ವಾತಂತ್ರ ಪೂರ್ವದ ಮುನ್ನ ಬ್ರಿಟೀಷರಿಂದ ಪ್ರಾರಂಭವಾದ ಈ ಪತ್ರಿಕೆ ನಂತರದ ದಿನಗಳಲ್ಲಿ ಮಾರ್ವಾ  ಮನೆತನವಾದ ಜೈನ್ ಕುಟುಂಬಕ್ಕೆ ಸೇರಿದ್ದು, ಆನಂತರ ಲಾಭಕೋರತನವನ್ನು ಗುರಿಯಾಗಿರಿಸಿಕೊಂಡು ಪತ್ರಿಕೆಯಲ್ಲಿ ಪೇಜ್ ತ್ರೀ ಎಂಬ ಮೂರನೇ ದರ್ಜೆಯ ಸಂಸ್ಕೃತಿಯ ವರದಿಯನ್ನ ಪರಿಚಯಿಸಿದ ಹೀನ ಇತಿಹಾಸ ಈ ಪತ್ರಿಕೆ ಜೊತೆ ತಳಕು ಹಾಕಿಕೊಂಡಿದೆ.

ಭಾರತದ ಪತ್ರಿಕೋದ್ಯಮ ಇಂದು ಎಂತಹ ಮಾನಗೆಟ್ಟ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಕೇವಲ ಆರು ತಿಂಗಳ ಹಿಂದೆ ದೆಹಲಿ ಮೂಲದ ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಹೊಸ ಆವೃತ್ತಿ ಪ್ರಾರಂಭಿಸಿತು. ಮೊದಲ ಸಂಚಿಕೆಯ ವರದಿ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತು.

ವರದಿಯ ಸಾರಾಂಶವೇನೆಂದರೆ, ಇಂದೋರ್ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ ಲಿಂಗ ಪರಿವರ್ತನೆ ಮಾಡಲಾಗುತ್ತದೆ ಎಂಬ ವಿಷಯ.

ಇಂತಹ ಅವೈಜ್ಞಾನಿಕ ವರದಿಯನ್ನ ಗಮನಿಸಿದ ಹಿಂದೂ ದಿನಪತ್ರಿಕೆ ಈ ಕುರಿತಂತೆ ಭಾರತದ ಮಕ್ಕಳ ತಜ್ಞರೂ ಸೇರಿದಂತೆ, ಲಂಡನ್, ನ್ಯೂಯಾರ್ಕ್ ನಗರದ ವೈದ್ಯರನ್ನು ಸಂದರ್ಶನ ಮಾಡಿ ಇದೊಂದು ಅವಿವೇಕದ, ಅವೈಜ್ಞಾನಿಕ ವರದಿ ಎಂದು ವಿಶೇಷ ವರದಿ ಪ್ರಕಟಿಸಿತು. ಜೊತೆಗೆ ಒಂದು ಅರ್ಥಪೂರ್ಣ ಟಿಪ್ಪಣಿಯನ್ನು ವರದಿಯ ಕೆಳಭಾಗದಲ್ಲಿ ಪ್ರಕಟಿಸಿತು. ಆ ಟಿಪ್ಪಣಿಯ ಸಾರಾಂಶ ಹೀಗಿತ್ತು:
ಪ್ರಿಯ ಓದುಗರೆ? ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪತ್ರಿಕೆಯ ಪ್ರತಿ ಸ್ಪರ್ಧೆ  ನಿಜ, ಆದರೆ ಈ ಪತ್ರಿಕೆ ಪ್ರಕಟಿಸಿರುವ ಒಂದು ಅವೈಜ್ಞಾನಿಕ ವರದಿಗೆ ವಿವರಣೆ ನೀಡುವುದು ನಮಗೆ ಅನಿವಾರ್ಯ. ಈ ಕಾರಣದಿಂದ ವಾಸ್ತವಿಕ ಸತ್ಯವನ್ನು ಆಧರಿಸಿದ ಈ ವರದಿನ್ನು ಪ್ರಕಟಿಸುತಿದ್ದೇವೆ.

ಕೇಂದ್ರ ಸಕರ್ಾರ ಕೂಡ ವರದಿಯಿಂದ ಬೆಚ್ಚಿ ಬಿದ್ದು ತನಿಖೆಗೆ ತಜ್ಷರ ಸಮಿತಿಯೊಂದನ್ನು ನೇಮಕಮಾಡಿತ್ತು. ಆ ಸಮಿತಿ ಇಂದೋರ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಜನಿಸಿದ ಮಕ್ಕಳ ದಿನಾಂಕ, ವೇಳೆ, ಲಿಂಗ ಇವುಗಳನ್ನು ಆಧಾರವಾಗಿಟ್ಟುಕೊಂಡು ಆ ಮಕ್ಕಳ ಪೋಷಕರನ್ನು ಪತ್ತೆ ಮಾಡಿ ತನಿಖೆ ಮಾಡಿದಾಗ ಇದೊಂದು ಕಟ್ಟು ಕಥೆಯೆಂಬುದು ಬೆಳಕಿಗೆ ಬಂತು. ಆನಂತರ ಪತ್ರಿಕೆ ಸಾರ್ವಜನಿಕರ ಕ್ಷಮೆ ಯಾಚಿಸಿ, ಈ ಬಗ್ಗೆ ವರದಿ ಮಾಡಿದ ವರದಿಗಾರ್ತಿ ಮತ್ತು ಈ ಸುದ್ಧಿ ಪ್ರಕಟಿಸಿದ ಸ್ಥಾನಿಕ ಸಂಪಾದಕನನ್ನು ಕಿತ್ತು ಹಾಕಿತು.

ಇದು ವ್ಯಕ್ತಿಯೊಬ್ಬ ತಾನು ಮಾಡಿದ ವಾಂತಿಯನ್ನು ತಾನೇ ತಿನ್ನಬೇಕಾದ ಅನಿವಾರ್ಯದ ಸ್ಥಿತಿ. ಇಂತಹ ದಯನೀಯವಾದ ಸ್ಥಿತಿ ನಮ್ಮ ಮಾಧ್ಯಮಗಳಿಗೆ ಬೇಕೆ? ಇದು ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುವವರ ಆತ್ಮಸಾಕ್ಷಿಯ ಪ್ರಶ್ನೆ.

ನಮ್ಮ ಮಾಧ್ಯಮಕ್ಕೆ ತನ್ನ ವೃತ್ತಿಯ ಬಗ್ಗೆ ಘನತೆ, ಗಂಭೀರತೆ ಎಂಬುದು ಇದ್ದಿದ್ದರೆ, ನ್ಯಾಯಾಂಗದ ಕೈಯಲ್ಲಿ ಈ ರೀತಿ ಕಪಾಳ ಮೋಕ್ಷವಾಗುತ್ತಿರಲಿಲ್ಲ.

ಇಂತಹ ಕಪಾಳ ಮೋಕ್ಷದ ಬಿಸಿ ನಮ್ಮ ಕನ್ನಡದ ಸುದ್ಧಿ ಚಾನಲ್ ಗಳಿಗೂ ಮುಟ್ಟಬೇಕಾಗಿದೆ.

ಪೋಸ್ಕೊ ಹೋರಾಟದಲ್ಲಿ ಸಾವಿರಾರು ಹೆಜ್ಜೆಗಳು

– ಹು.ಬಾ.ವಡ್ಡಟ್ಟಿ

ಕರ್ನಾಟಕ ಸರಕಾರವು ಪೋಸ್ಕೊ ಕ0ಪನಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ 2010 ರಲ್ಲಿ ಕೊನೆಯ ಭಾಗದಲ್ಲಿಯೇ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಿತ್ತು. ಈ ಪ್ರಕಟಣೆಯು ಜನ ಸಾಮಾನ್ಯರಿಗೆ ಇರಲಿ ಹಳ್ಳಿ ಗುಡಿ ಮತ್ತು ಭೊಮಿ ಕಳೆದು ಕೊಳ್ಳುಲಿರುವ ಇತರೇ ರೈತರಿಗೆ ಗೊತ್ತೆ ಇರಲಿಲ್ಲಾ . ಮು0ಡರಗಿ ತಾಲೊಕಿನ ಜ0ತ್ಲಿ-ಶಿರೊರು. ಗದಗ ತಾಲೊಕಿನ ಹರ್ಲಾಪುರ, ಲಕ್ಕು0ಡಿ ಭಾಗದಲ್ಲಿ ಎಸ್.ಆರ್.ಸ್ಟೀಲ್ ಕ0ಪನಿಗೆ 1560 ಎಕರೆ,  ಅನಿಲಘಟಕ ಸ್ಧಾಪನೆಗೆ 733 ಎಕರೆ ಭೊಮಿಯನ್ನು ವಶಪಡಿಸುವಕೊಳ್ಳುವ ಹುನ್ನಾರ ನಡೆಸಿತ್ತು.

ಈ ಭೂ ಸ್ವಾಧೀನ ಪ್ರಕ್ರಿಯೆಯ ವಿಷಯವನ್ನು ಅಷ್ಟೊ0ದು ಗಹನವಾಗಿ, ರೈತರು  ತೆಗೆದುಕೊ0ಡರಲಿಲ್ಲ. ಆದರೇ ಹಳ್ಳಿಗುಡಿಯ ಬಡ ರೈತ  ಅಲ್ಪ ಭೂಮಿಯನ್ನು ಹೊ0ದಿರುವ ಸಿದ್ದಪ್ಪ ಮುದ್ಲಾಪುರ 2011 ರ ಫೆಬ್ರುವರಿ ತಿ0ಗಳಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಡಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿಗಳಗೆ ಫೆಬ್ರುವರಿ 28 ರ0ದು ಪತ್ರದ ಮೂಲಕ ಹೇಳಿಕೆ ನೀಡಲಾಗಿತ್ತು . ಆ ಸಮಯದಲ್ಲೂ ಭೂ ಸ್ವಾಧೀನದ ಕುರಿತಾಗಿ ಚಿ0ತನೆಯನ್ನು ನಡೆಸಿರಲಿಲ್ಲ. ಹೋರಾಟ ಕಟ್ಟುವ ಕುರಿತು ಯೋಚನೆಯನ್ನೆ ಮಾಡಿರಲಲ್ಲಿ. ದಿನದಿ0ದ ದಿನಕ್ಕೆ ಮಾಧ್ಯಮದ ಮುಖಾ0ತರ ಭೂ ಸ್ವಾಧೀನ ಕುರಿತಾಗಿ ಸುದ್ದಿಗಳು ಪ್ರಕಟಣೆಗೊ0ಡಾಗ, ಜನರಿಗೆ ಪೋಸ್ಕೊ ಸ್ಟೀಲ್ ಕ0ಪನಿಯ ಬಗ್ಗೆ ತಿಳಿಯ ತೊಡಗಿತು. ಆನ0ತರವೇ 2011 ರ ಮೇ ತಿ0ಗಳ ಮೊದಲ ವಾರದಲ್ಲಿ ಭೂ ಸ್ವಾಧೀನ ವಿರೋಧ ಹೋರಾಟ ವೇದಿಕೆಯು ಅಸ್ತಿತ್ವಕ್ಕೆ  ಬ0ತು. ಈ ವೇದಿಕೆಯ ಅಡಿಯಲ್ಲಿ ಮೇ 9ರ0ದು ಶ್ರೀ ಜಗದ್ಗುರು ಡಾ. ಅನ್ನಾದಾನೀಶ್ವರ ಮಹಾಶಿವಯೋಗಿಗಳು, ಶಿವ ಕುಮಾರ ಮಹಾಸ್ವಾಮಿಗಳು, ವೈ.ಎನ್.ಗೌಡರ, ಈಶ್ವರಪ್ಪ ಹ0ಚಿನಾಳ, ಲಕ್ಷಣ ದೇಸಾಯಿಯವರ ನೇತೃತ್ವದಲ್ಲಿ ಹಳ್ಳಿಗುಡಿ ಜ0ತ್ಲಿ-ಶಿರೊರು ,ಮೇವು0ಡಿ, ಪೇಠಾಲೊರಿನ ರೈತರು ತಹಸೀದ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಮುಖ್ಯ ಮ0ತ್ರಿಯವರಿಗೆ ಮನವಿಯನ್ನು ಸಲ್ಲಿಸಿ, ಭೂ ಸ್ವಾಧೀನಕ್ಕೆ ಸ0ಬಂಧಿಸಿದ  5 ಬೇಡಿಕೆಗಳನ್ನು ಮು0ದಿಟ್ಟಿತ್ತು:

1. ಭೂ ಸ್ವಾಧೀನವನ್ನು ಪುನರ್ ಪರಿಶೀಲಿಸ ಬೇಕು.
2 ಭೂಮಿ ಕಳೆದು ಕೊ0ಡ ರೈತರ ಶೇರು ಆ ಕ0ಪನಿಯಲ್ಲಿರ ಬೇಕು .ರೈತರನ್ನು ಶೇರುದಾರನ್ನಾಗಿ ಮಾಡಬೇಕು.

3.ಭೂಮಿ ಕಳೆದುಕೊ0ಡ ಪ್ರತಿ ರೈತರ ಮನೆಯವರಿಗೊ ಉದ್ಯೋಗ ಕೊಡಬೇಕು.

4. ರಾಜ್ಯ ಸರಕಾರ ಮತ್ತು ಕೇ0ದ್ರ ಸರಕಾರಗಳು ಭೂ ಹೀನರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸಬೇಕು.

5. ಪ್ರತಿ ಎಕರೆ ಭೊಮಿಗೆ 30 ಲಕ್ಷ ರೊಪಾಯಿಗಳನ್ನು ಪರಿಹಾರ ನೀಡಬೇಕು.

ಶ್ರೀ ಜಗದ್ಗುರು ಡಾ.ಅನ್ನಾದಾನೀಶ್ವರ ಮಹಾ ಶಿವಯೋಗಿಗಳ ನೇತೃತ್ವದಲ್ಲಿ , ನ0ದಿಕೇರಿ ಮಠದ ಶಿವ ಕುಮಾರ ಸ್ವಾಮೀಜಿ, ವೈ.ಎನ್.ಗೌಡರ.ಲಕ್ಷಣ ದೇಸಾಯಿ  ಈಶ್ವರಪ್ಪ ಹ0ಚಿನಾಳರು ಮೇ 9 2011 ರ0ದು ತಹಸಿಲ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಆಗಿನ ಮುಖ್ಯ ಮ0ತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ, ಮನವಿಯನ್ನು ಅರ್ಪಿಸಲಾಯಿತು.

ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿಗೆ ಸ್ಪ0ದಿಸಲೇ ಇಲ್ಲ. ಬದಲಿಗೆ ಜೂನ್ ತಿ0ಗಳ ಕೊನೆಯ ವಾರದಲ್ಲಿ ವಿಶೇಷ ಭೊ ಸ್ವಾಧೀನಧಿಕಾರಿಗಳ ಕಛೇರಿ ಧಾರವಾಡ ಕೈಗಾರಿಕಾ ಪ್ರದೇಶಾಭಿವೃದ್ದಿ ಮ0ಡಳಿ ಯಿ0ದ ಪೊಸ್ಕೋ ಇ0ಡಿಯಾ ಪ್ರೈತರ ಮನೆ ಬಾಗಿಲುಗಳಿಗೆ ತಲುಪಿಸಿದರು. ಆಕ್ಷೇಪಗಳಿದ್ದರೆ 15 ದಿನಗಳಲ್ಲಿ ಮೌಖಿಕವಾಗಿ, ಇಲ್ಲವೇ ಲಿಖಿತ ರೂಪದಲ್ಲಿ ಸಲ್ಲಿಸಬೇಕು, ಇಲ್ಲವಾದರೆ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ವಾಧೀನ ಕ್ರಮ ಜರುಗಿಸಲಾಗುವುದು ಎಂದ ನೋಟಿಸ್ ನಲ್ಲಿ ಸೂಚಿಸಲಾಗಿತ್ತು. ರೈತರು  ಸಲ್ಲಿಸಿದ್ದ ಮನವಿಗೆ ಸ್ಪ0ದಿಸಿದೇ ಭೂಮಿ ವಶಪಡಿಸಿ ಕೊಳ್ಳುವದ್ದಕ್ಕೆ ಮು0ದಾಯಿತ್ತು.

ಹೋರಾಟದ ಹಾದಿಯಲ್ಲಿ ಸಾವಿರಾರು ಹೆಜ್ಜೆಗಳು. ಶ್ರೀ ಜಗದ್ಗುರು  ತೋ0ಟದ ಸಿದ್ದಲಿ0ಗ ಮಹಾ ಸ್ವಾಮಿ, ಶ್ರೀ ಜಗದ್ಗುರು  ಅನ್ನದಾನೀಶ್ವರ ಮಹಾಶಿವಯೋಗಿಗಳು, ಡಾ. ಸಿದ್ದನ ಗೌಡ  ಪಾಟೀಲ, ವೈ.ಎನ್. ಗೌಡರ , ಚ0ದ್ರಶೇಖರ ಬಾಳೆ, ಬಸವರಾಜ ಸೂಳಿಬಾವಿ, ಲಕ್ಷ್ಮಣ ದೇಸಾಯಿ, ಚನ್ನಪ್ಪ ಬೂದಿಹಾಳ, ಹನುಮ0ತಪ್ಪ ಗಡ್ಡದರು ಹೋರಾಟಕ್ಕೆ ನಾಯಕತ್ವ ನೀಡತೊಡಗಿದರು.

ಅದಕ್ಕೊ0ದು ದೊಡ್ಡ ಮಟ್ಟದಲ್ಲಿ ಬಲವೆ0ಬ0ತೆ ಹುಬ್ಬಳ್ಳಿಗೆ ಬ0ದಿದ್ದ ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ಮೇಧಾ ಪಾಟ್ಕರ್  ಹಳ್ಳಿಗುಡಿಗೆ ಬ0ದು ರೈತರೊ0ದಿಗೆ ಸ0ವಾದ ನಡೆಸಿ ನೈತಿಕ ಸ್ಥೈರ್ಯವನ್ನು ರೈತ-ಮಹಿಳೆಯರಲ್ಲಿ ತು0ಬಿದರು. ಹೋರಾಟಕ್ಕೆ ಮೇಧಾ ಪಾಟ್ಕರ್ ಬಲವು ಸಾವಿರಾರು ಆನೆ ಬಲ ಬ0ದ0ತೆ ಆಯಿತು.