Category Archives: ರವಿ ಕೃಷ್ಣಾರೆಡ್ಡಿ

ಮಧುಕರ ಶೆಟ್ಟಿ ಮತ್ತವರ ಆದರ್ಶ ದುಷ್ಟಕೂಟಗಳ ದಾಳಗಳಾಗದಿರಲಿ…

– ರವಿ ಕೃಷ್ಣಾರೆಡ್ಡಿ

ಮಧುಕರ ಶೆಟ್ಟರು ಲೋಕಾಯುಕ್ತದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು—ಅದೂ ಈ ರೀತಿ, ವ್ಯಕ್ತಪಡಿಸುವ ಸಂದರ್ಭ ಇದಾಗಿರಲಿಲ್ಲ.

ಅವರು ಕರ್ನಾಟಕದ ದುಷ್ಟ ರಾಜಕಾರಣದ ಮತ್ತು ಮಾಧ್ಯಮದೊಂದಿಗಿನ ಅದರ ಅನೈತಿಕ ಸಂಬಂಧದ ದುಷ್ಟಕೂಟದ ಕೈಯಲ್ಲಿನ ದಾಳಗಳಾಗಿ ಉಪಯೋಗಿಸಲ್ಪಟ್ಟಿದ್ದಾರೆ.

ಯಾವ ಸಂದರ್ಭವೊಂದನ್ನು ಸಂಸ್ಥೆಯೊಂದನ್ನು ಇನ್ನೂ ಗಟ್ಟಿಗೊಳಿಸುವುದಕ್ಕಾಗಿ, ಕ್ರಿಯಾಶೀಲವಾಗಿ ಮಾಡುವುದಕ್ಕಾಗಿ, ಅಲ್ಲಿನ ಕಲ್ಮಶಗಳನ್ನು ತೆಗೆಯುವುದಕ್ಕಾಗಿ ಬಳಸಿಕೊಳ್ಳಬೇಕಿತ್ತೊ, ಅದನ್ನು ಈ ಮಹಾದುಷ್ಟಕೂಟ ತನ್ನ ಸ್ವಾರ್ಥಸಾಧನೆಗೆ ಬಳಸಿಕೊಳ್ಳುತ್ತಿದೆ. ಲೋಕಾಯುಕ್ತದ ಗತಿ ಏನಾಗುತ್ತದೆ ಎಂದು ಪ್ರಜ್ಞಾವಂತರು ಕಕಮಕರಾಗಿರುವಾಗ ಇದು ಖಂಡಿತವಾಗಿ ಅನಗತ್ಯವಾಗಿತ್ತು.

ಕಳೆದ ಆರೇಳು ತಿಂಗಳಿನಿಂದ ಮಧುಕರ ಶೆಟ್ಟರೊಡನೆ ಆಪ್ತವಾಗಿ ಕುಳಿತು ಮಾತನಾಡಿರಬಹುದಾದ ಯಾರಿಗೂ ಅವರು ಸಂದರ್ಶನದಲ್ಲಿ ಹೇಳಿರುವ ಮಾತುಗಳು ಬಹುಶಃ ಹೊಸದೇನೂ ಅಲ್ಲ. ಅವರು ಅಮೆರಿಕಕ್ಕೆ ಹೊರಡುವ ಒಂದೆರಡು ತಿಂಗಳಿನ ಹಿಂದೆ ಶೆಟ್ಟರನ್ನು ಭೇಟಿಯಾಗುವ ಸಂದರ್ಭ ಒದಗಿತ್ತು. ಸ್ನೇಹಿತರೊಬ್ಬರು ಅವರನ್ನು ಭೇಟಿ ಮಾಡುವವರಿದ್ದರು. ಜೊತೆಗೆ ನಾನೂ ಹೋಗಿದ್ದೆ. ಹಾಗಾಗಿ ಈ ಸಂದರ್ಶನದಲ್ಲಿ ಹೇಳಿದ ಎಲ್ಲವನ್ನೂ ಅಂದು ಅವರು ನಮ್ಮೊಡನೆ ಹಂಚಿಕೊಂಡಿದ್ದರು. ಹಾಗಾಗಿ ಈ ಸಂದರ್ಶನದಲ್ಲಿ ಪ್ರಸ್ತಾಪಿತವಾಗಿರುವ ಒಂದು ವಿಷಯ (ಅವರ ಮದುವೆ ಮತ್ತು ಅವರ ತಂದೆಯವರ ವಿರೋಧ) ಬಿಟ್ಟು ಮಿಕ್ಕೆಲ್ಲವೂ ನನಗೆ ಮೊದಲೇ ತಿಳಿದವಾಗಿದ್ದವು.

ಆದರೆ, ಈಗ ಆವರ ಈ ಮಾತುಗಳು ಸಂದರ್ಶನ ರೂಪದಲ್ಲಿ ಬಂದಿರುವುದು, ಅದನ್ನು ಆ ಪತ್ರಿಕೆ ಪ್ರಸ್ತುತ ಪಡಿಸಿರುವ ರೀತಿ ಮತ್ತು ಅದರ ಸಂದರ್ಭ, ಇವು ಯಾವುವೂ ಲೋಕಾಯುಕ್ತ ಸಂಸ್ಥೆಗಾಗಲಿ, ಕರ್ನಾಟಕದ ಜನತೆಗಾಗಲಿ ಒಳ್ಳೆಯದು ಮಾಡುವ ಹಾಗೆ ಕಾಣುತ್ತಿಲ್ಲ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಸಂದರ್ಶನ ನೀಡುವುದೇ ಅಪಾಯಕಾರಿ. ಅದೂ ಇಲ್ಲಿ ಮಾಧ್ಯಮಗಳು ಮತ್ತು ರಾಜಕಾರಣಿಗಳು ಸಮಾನ ಪಿತೂರಿಕೋರರಾಗಿರುವಾಗ.

ಇಷ್ಟಕ್ಕೂ ಮಧುಕರ ಶೆಟ್ಟರ ಅಂತಿಮ ಗುರಿ ಏನು? ಅದು ತಾವು ಈ ಹಿಂದೆ ದುಡಿದ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಜನಪರವಾಗಿ, ಪ್ರಜಾಸತ್ತೆಯ ಪರವಾಗಿ ಬಲಪಡಿಸುವುದಾಗಿತ್ತೆ ಅಥವ ಅದನ್ನು ದುರ್ಬಲಗೊಳಿಸುವುದಾಗಿತ್ತೆ? ಅವರದು ಖಂಡಿತವಾಗಿ ಮೊದಲನೆಯದೇ ಆಗಿರಬೇಕು. ಆದರೆ ಅವರು ಅದನ್ನು ಒಂದು ಲೇಖನವಾಗಿ ತಮ್ಮೆಲ್ಲಾ ವಿಚಾರಗಳನ್ನು ತರ್ಕಬದ್ಧವಾಗಿ ಒಂದು ಕಡೆಯಿಂದ ಮಂಡಿಸುತ್ತ ನಿರೂಪಿಸಿ, ಬರೆದು, ಪ್ರಕಟಿಸಬೇಕಿತ್ತೇ ಹೊರತು, ಸಂದರ್ಶನವಾಗಿ ಅಲ್ಲ. ಹಾಗೆ ಮಾಡದೇ ಹೋದದ್ದರ ಪರಿಣಾಮಗಳನ್ನು ಈಶ್ವರಪ್ಪನವರಂತಹ ಕಿಡಿಗೇಡಿ, ಸಂಕುಚಿತ ದೃಷ್ಟಿಯ, ಸಣ್ಣತನದ ರಾಜಕಾರಣಿಗಳ ಹೇಳಿಕೆಗಳಲ್ಲಿ ನೋಡುತ್ತಿದ್ದೇವೆ. ಕುಮಾರಸ್ವಾಮಿಯವರು ಸಂತೋಷ ಹೆಗ್ಡೆಯವರ ವಿರುದ್ಧ ತಮ್ಮ ವೈಯಕ್ತಿಕ ದ್ವೇಷ ಕಾರಿಕೊಳ್ಳಲು ಬಳಕೆಯಾಗಿದೆ. ಯಡಿಯೂರಪ್ಪ ಸಹ ಇಂದು ತಮ್ಮ ವಿರುದ್ಧದ ಆರೋಪಗಳಿಗೆ ಶೆಟ್ಟರ ಹೇಳಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರೆ ಅವರ ಹೇಳಿಕೆ ಇಲ್ಲಿ ಯಾವ ಮಟ್ಟದ ಹಾನಿ ಮಾಡಿದೆ ಮತ್ತು ಭ್ರಷ್ಟರಿಗೆ ಮಧುಕರ ಶೆಟ್ಟಿ ಯಾವ ಪರಿ ಅನುಕೂಲಕರವಾಗಿ ಪರಿಣಮಿಸಿದ್ದಾರೆ ಎಂದು ಗೊತ್ತಾಗುತ್ತದೆ. ಇಂದು ಕರ್ನಾಟಕದ ಭ್ರಷ್ಟರೆಲ್ಲ ಒಂದೇ ಮಾತುಗಳನ್ನು ಆಡುತ್ತಿದ್ದಾರೆ.

ಇಷ್ಟಕ್ಕೂ ಮಧುಕರ ಶೆಟ್ಟರು ಮತ್ತು ಆ ಸಂದರ್ಶನ ಓದಿದವರು ಒಂದು ವಿಚಾರವನ್ನು ಗಮನಿಸಬೇಕು: ಲೋಕಾಯುಕ್ತ ಸಂಸ್ಥೆಯಿಂದಾಗಿ ಭ್ರಷ್ಟಾಚಾರ ಹುಟ್ಟಿಲ್ಲ. ಭ್ರಷ್ಟಾಚಾರ ಇದ್ದಿದ್ದರಿಂದಾಗಿ ಮತ್ತು ಅದನ್ನು ತಡೆಗಟ್ಟುವ ನಿಮಿತ್ತವಾಗಿ ಜನಪ್ರತಿನಿಧಿಗಳ ಸರ್ಕಾರ ಲೋಕಾಯುಕ್ತವನ್ನು ಸ್ಥಾಪಿಸಿರುವುದು. ಲೋಕಾಯುಕ್ತದಲ್ಲೂ ಭ್ರಷ್ಟರಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತ ಹೋಗಬೇಕೆ ಹೊರತು ಅದನ್ನು ಮತ್ತಷ್ಟು ದುರ್ಬಲಗೊಳಿಸುವುದು ತರವಲ್ಲ.

ನಾನು ಹೆಚ್ಚುಕಮ್ಮಿ ವ್ಯವಸ್ಥೆಯ ಹೊರಗಿದ್ದು ಮಾತನಾಡುವವನು. ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಆದಷ್ಟೂ ಅದರ ಸಂಪರ್ಕದಿಂದ ಹೊರಗೇ ಇರುವ ರೀತಿ ವರ್ತಿಸುತ್ತೇನೆ. ಇದು ನಾನು ನನ್ನನ್ನು ಅವಮಾನ-ಸೋಲುಗಳಿಂದ ದೂರ ಇಟ್ಟುಕೊಳ್ಳುವ ರೀತಿ. ಈ ವ್ಯವಸ್ಥೆಯ ಭಾಗವಾದರೆ ನಾನೂ ಭ್ರಷ್ಟನಾಗುತ್ತೇನೆ ಎನ್ನುವ ಭಯ ನನಗಿಲ್ಲ. ಆದರೆ ಸೋಲು-ಅವಮಾನಗಳು ಖಂಡಿತ ಆಗುತ್ತವೆ. ಆಗಿವೆ. ಹಾಗಾಗಿಯೆ ಅವುಗಳ ಅವಶ್ಯಕತೆಯಿಲ್ಲ ಎಂದು ದೂರ ಇರುತ್ತೇನೆ.  ಕೆಲವೊಮ್ಮೆ ಸೋಲುವುದು ನೈತಿಕವಾಗಿ ತಪ್ಪೇನೂ ಅಲ್ಲ, ಮತ್ತು ಆ ಪ್ರಯತ್ನ ನಾವು ನಂಬಿಕೊಂಡ ಆದರ್ಶದ ಕ್ರಿಯಾರೂಪ ಎಂದಾದಾಗ, ಅಂತಹ ಕೆಲಸಗಳನ್ನು ಮಾಡಲು ಮುಂದಾಗುತ್ತೇನೆ. ಅಲ್ಲಿ ಸೋಲುವುದು ಶತ:ಸಿದ್ಧವಾಗಿದ್ದರೂ. ಮಾತುಗಳೂ ಅಷ್ಟೆ. ಕೆಲವೊಂದು ವೇದಿಕೆಗಳಲ್ಲಿ ತುಂಬಾ ಆದರ್ಶದ, ಅವಾಸ್ತವಿಕ ಎನ್ನಬಹುದಾದ ಮಾತುಗಳನ್ನು ಆಡುತ್ತೇನೆ. ಅದು ಈ ಹೊತ್ತಿನಲ್ಲಿ ಅವಾಸ್ತವ ಎಂದು ಗೊತ್ತಿದ್ದರೂ. ಆದರೆ ಅವು ಎಂದೂ ಸಾಧ್ಯವಾಗದ ಮಾತುಗಳೇನೂ ಅಲ್ಲ. ಪ್ರಪಂಚದ ಯಾವುದೋ ಭಾಗದಲ್ಲಿ ಒಂದಲ್ಲ ಒಂದು ಸಲ ಅವು ಸಾಧಿಸಿ ತೋರಿಸಲ್ಪಟ್ಟಿವೆ, ಇಲ್ಲವೇ ಸಾಧಿಸಲ್ಪಡುತ್ತವೆ. ನನ್ನ ಇಂತಹ ಆಚಾರ-ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲವರು ನಾನೊಬ್ಬ ಹುಚ್ಚ, ಪೆದ್ದ, ತಿಕ್ಕಲು, ಎಂದೆಲ್ಲಾ ಅಂದಿದ್ದಾರೆ. ಅದು ಅವರ ವೈಯಕ್ತಿಕ ದ್ವೇಷ ಕಾರಿಕೊಳ್ಳುವ ತೆವಲಿಗಾಗಿಯೇ ಹೊರತು ಅಲ್ಲಿ ಬೇರೇನೂ ಇರಲು ಸಾಧ್ಯವಿಲ್ಲ.

ಇದನ್ನೆಲ್ಲಾ ಹೇಳಬಯಸಿದ್ದು ಮಧುಕರ ಶೆಟ್ಟರು ವ್ಯಕ್ತಪಡಿಸಿರುವ ಕೆಲವು ಆದರ್ಶಪ್ರಾಯದ ಅಭಿಪ್ರಾಯಗಳಿಗೆ ಭಿನ್ನಾಭಿಪ್ರಾಯ ಸೂಚಿಸಲು ಮತ್ತು ಅವು ಅವರಂತಹವರು ಆಡುವ ಮಾತುಗಳಲ್ಲ ಮತ್ತು ಇದು ಸಂದರ್ಭವೂ ಅಲ್ಲ ಎಂದು ಹೇಳಲು. ಅವರು ವ್ಯವಸ್ಥೆಯ ಭಾಗವಾಗಿದ್ದವರು. ಆದರೆ ಅತೀ ಎನ್ನಿಸುವಷ್ಟು ಆದರ್ಶದ ಮಾತುಗಳನ್ನು ಆಡಿದ್ದಾರೆ. ನನ್ನಂತಹ ‘ಪೆದ್ದ’ನೇ ಆಶ್ಚರ್ಯಪಡುವಷ್ಟು. ಒಂದು, ಅಧಿಕಾರಿಯ ಮರಣದ ವಿಷಯವಾಗಿದ್ದರೆ, ಮತ್ತೊಂದು “ವೈಯಕ್ತಿಕ ವರ್ಚಸ್ಸು ಮತ್ತು ನೈತಿಕತೆ ವೃದ್ಧಿ ಗೀಳಿಗೆ ಬಿದ್ದ ವ್ಯಕ್ತಿಯಿಂದ ಆತ ಪ್ರತಿನಿಧಿಸುವ ಸಂಸ್ಥೆ ಹಾಳಾಗುತ್ತದೆ. ಪ್ರಾಮಾಣೀಕನೆಂಬ ಬಿರುದು-ಬಾವಲಿಗಳ ಬೆನ್ನತ್ತಿದವನು ಸಂಸ್ಥೆಯ ಮಾರ್ಯಾದೆ ಮತ್ತು ಗೌರವ ಉಪೇಕ್ಷಿಸುತ್ತಾನೆ. ಇಂಥವರು ಭ್ರಷ್ಟರಿಗಿಂತಲೂ ಅಪಾಯಕಾರಿ. ಇಷ್ಟಕ್ಕೂ ಒಬ್ಬ ವ್ಯಕ್ತಿ, ಅಧಿಕಾರಿ, ವ್ಯವಸ್ಥೆಯ ಮುಖ್ಯಸ್ಥನನ್ನು ಪ್ರಾಮಾಣಿಕ ಎಂದು ಕರೆಯುವುದೇ ಹಾಸ್ಯಾಸ್ಪದ.” ಎನ್ನುವ ಮಾತುಗಳು. ಇದನ್ನು ಶೆಟ್ಟರು ಸಹಜವಾಗಿ ಇಡೀ ಸಮಾಜವನ್ನು, ಎಲ್ಲಾ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು, ಆದರ್ಶದ ನೆಲೆಯಲ್ಲಿ ಹೇಳಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ಕುಮಾರಸ್ವಾಮಿಯವರು ಮಾತ್ರ ಇದನ್ನು ನೇರ ಸಂತೋಷ ಹೆಗ್ಡೆಯವರಿಗೆ ತಿರುಗಿಸಿದ್ದಾರೆ.

ಅವರಂತಹ ವ್ಯಕ್ತಿ, ವ್ಯವಸ್ಥೆಯ ಭಾಗವಾಗಿದ್ದವರು, ಅದನ್ನು ಸುಧಾರಿಸಲು ಸಹಕರಿಸಬೇಕೇ ಹೊರತು (ಅದನ್ನು ಅವರ ಅಧಿಕಾರವಧಿಯುದ್ದಕ್ಕೂ ಮಾಡಿದ್ದಾರೆ ಎಂದು ನಾನು ಖಂಡಿತ ನಂಬುತ್ತೇನೆ. ಅದನ್ನು ಗೌರವಿಸುತ್ತೇನೆ ಕೂಡಾ.) ಆದರ್ಶದ ನೆಲೆಯಲ್ಲಿ ಮಾತನಾಡುತ್ತ ಅದನ್ನು undermine ಮಾಡಬಾರದು. ಈ ವಿಚಾರಗಳನ್ನು ಎತ್ತುವುದಕ್ಕೆ, ಪ್ರಸ್ತುತಗೊಳಿಸುವುದಕ್ಕೆ ಬೇರೆಯದೇ ಆದ ವೇದಿಕೆಗಳಿವೆ, ರೀತಿಗಳಿವೆ. ಅದನ್ನು ಅವರು ಗಮನಿಸಬೇಕಿತ್ತು.

ಒಬ್ಬ ಪೋಲಿಸ್ ಅಧಿಕಾರಿ ಸಾಮಾಜಿಕವಾಗಿ ಎಂತಹ ಜೀವನ ನಡೆಸಬೇಕು, ಯಾರೊಂದಿಗೆ ಎಷ್ಟು ಬೆರೆಯಬೇಕು, ಬೆರೆಯಬಾರದು, ಎನ್ನುವುದರ ಬಗ್ಗೆ ಶೆಟ್ಟರು ಅವರ ವೃತ್ತಿಯಲ್ಲಿರುವ ಯಾರಿಗೇ ಆದರೂ ಆದರ್ಶಪ್ರಾಯರಾಗುವ ವ್ಯಕ್ತಿ. ಅವರೇ ಹೇಳಿಕೊಂಡಂತೆ ಬೆಂಗಳೂರಿನಲ್ಲಿ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಳೆಯರಿಲ್ಲ. ಪಾರ್ಟಿಗಳಿಗೆ ಹೋಗುವುದಿಲ್ಲ. ಹೀಗಾಗಿ ಯಾರೂ ತಮ್ಮನ್ನು ಸ್ನೇಹ, ನೆಂಟಸ್ತಿಕೆಯ ಮೂಲಕ ದುರುಪಯೋಗಪಡಿಸಿಕೊಳ್ಳಲು ಬಿಡುವುದಿಲ್ಲ. ನ್ಯಾಯಾಧೀಶರೆಲ್ಲ ಎಂತೆಂತವರ ಜೊತೆಯೆಲ್ಲಾ ವೇದಿಕೆ ಹಂಚಿಕೊಳ್ಳಲು, ಸಭೆಸಮಾರಂಭಗಳಲ್ಲಿ ಪಾಲ್ಗೊಳ್ಳಲು ಔಚಿತ್ಯವಿಲ್ಲದೆ ಸಿದ್ಧರಾಗಿ ನಿಂತಿರುವ ಸಂದರ್ಭ ಇದು. ಇಂತಹ ಸಂದರ್ಭದಲ್ಲಿ ಹೆಂಡತಿ ಮತ್ತು ಮಗಳು ದೇಶದ ಹೊರಗಿದ್ದಾಗಲೂ ಇಲ್ಲಿ ಪೊಲಿಸ್ ಅಧಿಕಾರಿ ಇರಬೇಕಾದ ರೀತಿಯಲ್ಲಿ ವಿನಾಕಾರಣ ಸಮಾಜದ ಎಲ್ಲರೊಂದಿಗೂ ಗುರುತಿಸಿಕೊಳ್ಳದೆ ನಿಷ್ಟುರ ಜೀವನ ನಡೆಸಿದವರು ಮಧುಕರ್ ಶೆಟ್ಟರು. ಅವರು ಅನವಶ್ಯಕವಾಗಿ ದುರುಳರ ದಾಳಗಳಾಗುವುದು,  ಅದೂ ಪ್ರಾಮಾಣಿಕತೆ ಮತ್ತು ನೈತಿಕತೆಯ ಹೆಸರಿನಲ್ಲಿ, ಖಂಡಿತ ಬೇಸರದ ಸಂಗತಿ.

ಬಹುಶ: ಈ ಲೇಖನವನ್ನು ಮಧುಕರ ಶೆಟ್ಟರು ಓದಿದರೂ ಓದಬಹುದು. ಹಾಗಾದ ಪಕ್ಷದಲ್ಲಿ ಅವರಲ್ಲಿ ನನ್ನ ಒಂದು ವಿನಂತಿ ಏನೆಂದರೆ, “ದಯವಿಟ್ಟು ನಿಮ್ಮ ಸಂದರ್ಶನ ಮತ್ತು ಅದರ ಮೂಲಕ ನೀವು ನಿಜಕ್ಕೂ ಹೇಳಬಯಸಿದ್ದು ಏನು, ಲೋಕಾಯುಕ್ತದಲ್ಲಿರುವ ಸಮಸ್ಯೆಗಳೇನು, ಅದನ್ನು ದೋಷಮುಕ್ತ ಮಾಡಲು ಮತ್ತು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಮಾಡಬೇಕಿರುವ ಕೆಲಸಗಳೇನು, ಇತ್ಯಾದಿಯೆಲ್ಲ  ವಿಸ್ತೃತವಾಗಿ ಬರೆಯಿರಿ. ಅದನ್ನು ಒಂದಲ್ಲ, ಕರ್ನಾಟಕದ ಎಲ್ಲಾ ಪ್ರಮುಖ ಕನ್ನಡ-ಇಂಗ್ಲಿಷ್ ಪತ್ರಿಕೆಗಳಿಗೂ ಕಳುಹಿಸಿಕೊಡಿ. ನಿಮ್ಮ ಸಂದರ್ಶನವನ್ನು ಸ್ವಾರ್ಥಸಾಧನೆಗೆ ಬಳಸಿಕೊಳ್ಳುತ್ತಿರುವವರಿಗೆ ಅದು ಎಚ್ಚರವೂ ಆಗಲಿ.”

advt-details-from-news-information-dept-to-various-dailies

ಮಾಧ್ಯಮ ಫಲಾನುಭವಿಗಳು – ಕೆಲವು ದಾಖಲೆಗಳು…

 -ರವಿ ಕೃಷ್ಣಾರೆಡ್ಡಿ

ನಮ್ಮಲ್ಲಿ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಸ್ವಾತಂತ್ರ್ಯವಿದೆ. ಆದರೆ ಅವು ಸ್ವತಂತ್ರವಾಗಿಲ್ಲ.

ನಾನು ಕಳೆದ ವಾರ ಬರೆದ ಪತ್ರಕ್ಕೆ ಉತ್ತರವಾಗಿ ಸಂಪಾದಕೀಯ ಬಳಗ ಒಂದು ಪತ್ರ ಬರೆದಿತ್ತು. ಅದರಲ್ಲಿ “ಹೊಸ ದಿಗಂತ” ಪತ್ರಿಕೆಯ ಕುರಿತು ಹೀಗೆ ಬರೆಯಲಾಗಿತ್ತು:

“ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?”

ಇಂದು ಯಡ್ಡ್‌ಯೂರಪ್ಪನವರಿಗೆ ಜಾಮೀನು ಸಿಕ್ಕರೂ ಸಿಗಬಹುದು. ನಾಳೆ ಯಾವಯಾವ ಪತ್ರಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೊ? ಇಂದು ಕನ್ನಡ ಪತ್ರಿಕೆಗಳನ್ನು ಸುದ್ದಿಗಾಗಿ ಓದುವುದಕ್ಕಿಂತ ಅವುಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ಪ್ರಾಮಾಣಿಕತೆ/ಅಪ್ರಾಮಾಣಿಕತೆಯನ್ನು ಅಳೆಯಲು ಅವುಗಳ ಪತ್ರಿಕೆಗಳ ಪುಟ ತಿರುವಬೇಕಿದೆ.

ತೆಹಲ್ಕಾದಲ್ಲಿ ಬಂದಿರುವ ಲೇಖನವೊಂದರ ಬಗ್ಗೆ ನಮ್ಮಲ್ಲಿ ನೆನ್ನೆ ಒಂದು ಸಣ್ಣ “ದುರಾಡಳಿತದ ಲಾಭ ಪಡೆದವರು” ಲೇಖನ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿ ನಮಗೆ ಕೆಲವು ದಾಖಲೆಗಳು ಲಭ್ಯವಾಗಿದ್ದು ಅವನ್ನು ಇಲ್ಲಿ ಕೊಡಲಾಗುತ್ತಿದೆ.

ಆದರೆ, ಇಷ್ಟಕ್ಕೂ ಇದರಿಂದ ಏನಾಗುತ್ತದೆ? ಸರ್ಕಾರದ ಭ್ರಷ್ಟತೆಯನ್ನು ಮತ್ತು ಅನೀತಿಯನ್ನು ಹುಡುಕಿ, ವಿಚಾರಣೆಗೆ ಕೋರ್ಟಿಗೆಳೆಯುವ ಒಂದು ಸರ್ಕಾರಿ ಸಂಸ್ಥೆ ನಮ್ಮಲ್ಲಿ ಇಲ್ಲ. ಲೋಕಾಯುಕ್ತವೂ ಸಹ ದೂರು ಕೊಟ್ಟರೆ ವಿಚಾರಣೆ ಎಂಬ ಹಂತದಲ್ಲಿದೆ. ಸ್ವತಂತ್ರ ಆಂತರಿಕ ವಿಚಾರಣಾ ಸಂಸ್ಠೆಯೊಂದು ಇಂದು ತೀರಾ ಅಗತ್ಯವಿದೆ. ಇಲ್ಲದಿದ್ದರೆ, ಇಂತಹ ಕರ್ಮಕಾಂಡಗಳು ಜನರಿಗೆ ಗೊತ್ತಾಗುತ್ತದೆ. ಆದರೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಫಲಾನುಭವಿಗಳು ವಿಚಾರಣೆಗೊಳಪಡುವುದಿಲ್ಲ. ಸುಳ್ಳು ದಾಖಲೆ ಕೊಟ್ಟ ತಪ್ಪಿತಸ್ಥರಿಗೆ, ಅದರ ಮೇಲೆ ತೀರ್ಮಾನ ಕೈಗೊಳುವ ಸ್ವಜನಪಕ್ಷಪಾತಿಗಳಿಗೆ ಶಿಕ್ಷೆಯಾಗುವುದಿಲ್ಲ. ಎಂದು ನಾವು ಇದನ್ನು ಮೀರುವುದು?

ಆದರೂ…

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

 

objection-to-yeddyurappa's-approval-for-statewide-paper-page1

objection-to-yeddyurappa's-approval-for-statewide-paper-page1

 

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

 

objection-to-yeddyurappa's-approval-for-statewide-paper-page3

objection-to-yeddyurappa's-approval-for-statewide-paper-page3

 

hosadiganta-requesting-industrial-shed-yeddyurappas-approval

hosadiganta-requesting-industrial-shed-yeddyurappas-approval

 

industrial-shed-approval-letter-to-hosadiganta

industrial-shed-approval-letter-to-hosadiganta

 

advt-details-from-news-information-dept-to-various-dailies

advt-details-from-news-information-dept-to-various-dailies

 

20-lakhs-advt-in-2months-to-hosadiganta

 

ಸಂಪಾದಕೀಯ ಬಳಗದ ಪತ್ರ ಮತ್ತು ಇನ್ನೊಂದಷ್ಟು ಅಸಹ್ಯ/ಅಸಹನೀಯ ವಿಷಯಗಳು…

-ರವಿ ಕೃಷ್ಣಾರೆಡ್ಡಿ

ಕಳೆದ ವಾರ ಬರೆದ “ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ“ಕ್ಕೆ “ಸಂಪಾದಕೀಯ ಬಳಗ“ದವರು ಶನಿವಾರದಂದು ಪತ್ರವೊಂದನ್ನು ಬರೆದು ಅದನ್ನು ಅವರ ಬ್ಲಾಗಿನಲ್ಲೂ ಪ್ರಕಟಿಸಿದ್ದರು. ಕಳೆದ ನಾಲ್ಕೈದು ದಿನದಿಂದ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದುದ್ದರಿಂದ ಮತ್ತು ಕೆಲವು ತಾಂತ್ರಿಕ ಅಡಚಣೆಗಳಿಂದಾಗಿ ಅದನ್ನು ಇಲ್ಲಿ ಪ್ರಕಟಿಸುವುದಾಗಲಿ, ಪ್ರತಿಕ್ರಿಯಿಸುವುದಾಗಲಿ ಸಾಧ್ಯವಾಗಿರಲಿಲ್ಲ. ಈಗಲೂ ಆ ಸಮಸ್ಯೆಗಳು ಮುಂದುವರೆಯುತ್ತಿದ್ದರೂ ಇನ್ನೂ ತಡ ಮಾಡುವುದು ಬೇಡ ಎಂದು ಒಂದು ಪುಟ್ಟ ಟಿಪ್ಪಣಿಯೊಂದಿಗೆ ಅದನ್ನು ಇಲ್ಲಿ ಕೊಡುತ್ತಿದ್ದೇನೆ.

ನಮ್ಮ ರಾಜಕಾರಣ, ಸಮಾಜ, ಸಾಂಸ್ಕೃತಿಕ ಲೋಕ, ಮಾಧ್ಯಮ ರಂಗ, ಎಲ್ಲವೂ ಅಧಃಪತನದತ್ತ ದೌಡಾಯಿಸುತ್ತಲೇ ಇವೆ. ಇದು ನಿರಾಶೆಯಿಂದ ಹುಟ್ಟಿರುವ ಮಾತಲ್ಲ. ವಾಸ್ತವ. ರಾಜ್ಯದ ಬಿ.ಜೆ.ಪಿ. ಸರ್ಕಾರ ಮತ್ತು ಅದನ್ನು ನಿಯಂತ್ರಿಸುವ ಕೈಗಳು ಒಂದು ಸಮಾಜದಲ್ಲಿ ಯಾವುದು ಇದಕ್ಕಿಂತಲೂ ಕನಿಷ್ಟಮಟ್ಟಕ್ಕೆ ಹೋಗಲು ಸಾಧ್ಯ ಎಲ್ಲ ಎನ್ನುವ ಗೆರೆ ಇರುತ್ತದೊ ಅದನ್ನು ಪ್ರತಿ ಬಾರಿಯೂ ಇಳಿಸುತ್ತಲೇ ಹೋಗುತ್ತಿದೆ. ಸಮಾಜದ ವಿವಿಧ ರಂಗಗಳಿಗೂ ಅದರ ಪ್ರಭಾವ ವಿಸ್ತರಿಸುತ್ತಿದೆ. ಸಂಪಾದಕೀಯದವರ ಪತ್ರವಂತೂ ಮಾಧ್ಯಮವಲಯದದ ಇನ್ನಷ್ಟು ಅಸಹ್ಯಗಳನ್ನು ಪ್ರಸ್ತಾಪಿಸಿದೆ. ಇದೊಂದು ಆತ್ಮವಂಚಕರು, ದುಷ್ಟರು, ನಯವಂಚಕರು, ಸಮಾಜದ ಆಯಕಟ್ಟಿನ ಜಾಗಗಳಲ್ಲಿ ಕುಳಿತು ನಿಯಂತಿಸುತ್ತಿರುವ ಸಂದರ್ಭ. ಇದು ಮನುಷ್ಯ ಅಥವ ಸಮುದಾಯ ಪ್ರಯತ್ನದಿಂದ ಬದಲಾಗುತ್ತದೆ ಎನ್ನುವ ಆಸೆ ನನ್ನಲ್ಲಿಲ್ಲ. ಪ್ರಕೃತಿಯೇ ಸರಿ ಮಾಡಬೇಕೆನೊ? ಬಹುಸಂಖ್ಯಾತರಿಗೆ ಇಲ್ಲಿನ ಮೌಲ್ಯಗಳ ಅಧೋಗತಿ ಬಾಧಿಸುತ್ತಿರುವುದಿರಲಿಲಿ, ಅದೊಂದು ಗಮನಹರಿಸಬೇಕಾದ ವಿಷಯ ಎಂತಲೂ ಅನ್ನಿಸುತ್ತಿಲ್ಲ. ಅದಕ್ಕೆ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಿಗುತ್ತಿರುವ ಪರ-ವಿರೋಧ ಪ್ರತಿಕ್ರಿಯೆಗಳೇ ಸಾಕ್ಷಿ.

ನಾನು “ವರ್ತಮಾನ”ದಲ್ಲಿ ಬರೆದ ಪತ್ರಕ್ಕೆ ಮೊದಲೇ ಊಹಿಸಿದಂತೆ ಪ್ರತಿಕ್ರಿಯಿಸಬೇಕಾದವರ್ಯಾರೂ ಪ್ರತಿಕ್ರಿಯಿಸಿಲ್ಲ. ಅದನ್ನು ಬಹಳ ಜನ ನೋಡಿಲ್ಲ ಎಂದು ಹೇಳುವ ಹಾಗಿಲ್ಲ. ಅದನ್ನು ಗಣನೀಯ ಸಂಖ್ಯೆಯಲ್ಲಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹುಶ: ಬೆಂಗಳೂರಿನ ಪತ್ರಕರ್ತರ ವಲಯದಲ್ಲಿ ನೋಡಬೇಕಾದವರೆಲ್ಲ ನೋಡಿದ್ದಾರೆ. ಆದರೆ, ಮೊದಲೇ ಹೇಳಿದಂತೆ ಇಂತಹ ವಿಷಯಗಳು ಇವತ್ತಿನ ಬಹುತೇಕ ಪತ್ರಕರ್ತರಿಗೆ ಪ್ರಮುಖ ವಿಷಯಗಳೇ ಅಲ್ಲ. ಸ್ವಾರ್ಥಸಾಧನೆಗೆ ಸಂಬಂಧ ಪಡದ ಎಲ್ಲವೂ ಅಮುಖ್ಯವೆ. ಆದರೆ “ಸಂಪಾದಕೀಯ ಬಳಗ” ಸುದೀರ್ಘ ಎನ್ನಬಹುದಾದ ಲೇಖನವನ್ನೇ ಬರೆದಿದ್ದಾರೆ. ಅವರಿಗೆ ಧನ್ಯವಾದ ಎನ್ನಲೇ? ಗೊತ್ತಾಗುತ್ತಿಲ್ಲ. ಅವರ ಕರ್ತವ್ಯವನ್ನು ಮತ್ತು ವೈಯಕ್ತಿಕ ಪ್ರಾಮಾಣಿಕತೆಯನ್ನು, ಅನಾಮಿಕವಾಗಿಯಾದರೂ ಸರಿ, ನಿರ್ವಹಿಸಿದ್ದಾರೆ, ಅಲ್ಲವೆ?. ಇಂತಹ ಧ್ವನಿಗಳು ಹೆಚ್ಚಲಿ ಎನ್ನುವುದರ ಜೊತೆಜೊತೆಗೇ, ಇದನ್ನು ಬಹಿರಂಗ ವೇದಿಕೆಗಳಲ್ಲಿ ನೇರಾನೇರವಾಗಿ ಪ್ರಸ್ತಾಪಿಸುವವರು ಮತ್ತು ಅಂತಹ ಸತ್ಯಕ್ಕಾಗಿ ಹೋರಾಡುವವರು ಬರಲಿ ಎಂದಷ್ಟೇ ಆಶಿಸುತ್ತೇನೆ. ಆದರೂ, ಸಂಪಾದಕೀಯ ಬಳಗ ಇಂತಹುದೊಂದು ಚರ್ಚೆಯನ್ನು ಮುಂದುವರೆಸುತ್ತಿರುವುದರಿಂದ ಅವರಿಗೆ ನನ್ನ ಅಭಿನಂದನೆಗಳು.

ಸಂಪಾದಕೀಯ ಬ್ಲಾಗ್‌ನಲ್ಲಿರುವ ಅವರ ಪತ್ರದ ಕೊಂಡಿ ಇದು. ಅಲ್ಲಿ ಕೆಲವು ಕಾಮೆಂಟ್‌ಗಳೂ ಇವೆ.

ಆ ಪತ್ರದ ಪೂರ್ಣ ಪಾಠ ಇದು:

ಮಾಧ್ಯಮ ನಿಸ್ಪೃಹತೆ: ರವಿಕೃಷ್ಣಾರೆಡ್ಡಿ ಬರೆದ ಪತ್ರಕ್ಕೆ ಒಂದು ಉತ್ತರ

ಕೆಲವು ದಿನಗಳ ಹಿಂದೆ ವರ್ತಮಾನದಲ್ಲಿ ರವಿಕೃಷ್ಣಾರೆಡ್ಡಿಯವರು ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ ಎಂಬ ಲೇಖನ ಬರೆದಿದ್ದರು. ಪತ್ರಕರ್ತರಿಗೆ ಹಲವು ಪ್ರಶ್ನೆಗಳನ್ನು ಅವರು ಒಡ್ಡಿದ್ದರು, ಯಾರಾದರೂ ಉತ್ತರಿಸಬಹುದೆಂಬ ನಿರೀಕ್ಷೆಯಲ್ಲಿ. ಯಾರೂ ಉತ್ತರಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಆ ಜವಾಬ್ದಾರಿಯನ್ನು ನಾವೇ ಹೊತ್ತು ಈ ಮಾರುತ್ತರವನ್ನು ಬರೆದಿದ್ದೇವೆ. ರವಿಕೃಷ್ಣಾರೆಡ್ಡಿಯವರು ಎತ್ತಿರುವ ಪ್ರಶ್ನೆಗಳು ಗಂಭೀರವಾದವೂ, ಚರ್ಚಾಯೋಗ್ಯವೂ, ಈ ಕ್ಷಣದ ಅಗತ್ಯವೂ ಆಗಿರುವುದರಿಂದ ಅವೆಲ್ಲ ಚರ್ಚೆಯೇ ಆಗದೇ ಉಳಿಯಬಾರದು ಎಂಬುದು ನಮ್ಮ ಕಾಳಜಿ. ಎಂದಿನಂತೆ ನಮ್ಮ ಓದುಗರ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇವೆ.

ಪ್ರಿಯ ರವಿಕೃಷ್ಣಾ ರೆಡ್ಡಿಯವರೇ,

ನಮಸ್ಕಾರ,
ನೀವು ಎತ್ತಿರುವ ಪ್ರಶ್ನೆಗಳು ಸಕಾಲಿಕವಾಗಿವೆ, ಸರಳವಾಗಿವೆ. ನಿಮ್ಮ ಪತ್ರದ ಮೊದಲ ಭಾಗದಲ್ಲಿ ಎತ್ತಿರುವ ಪ್ರಶ್ನೆ ಇವತ್ತಿನ ಮಾಧ್ಯಮ ಸಂಸ್ಥೆಗಳನ್ನು ಆಳುತ್ತಿರುವವರು ಯಾರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಲೇಖನದಲ್ಲಿ ಉಲ್ಲೇಖಿಸಿದ ಆಲಂ ಪಾಷ ವಿರುದ್ಧ ಸಮಯ ಟಿವಿಯಲ್ಲಿ ಮಾತ್ರವೇಕೆ ಸುದ್ದಿ ಬರುತ್ತೆ ಎಂದು ನೀವು ಕೇಳುತ್ತೀರಿ. ಮುರುಗೇಶ್ ನಿರಾಣಿಯವರ ಪಾಲುದಾರಿಕೆ ಇರುವ ಸಮಯ ಟಿವಿಯಲ್ಲದೆ ಬೇರೆಲ್ಲಿ ಬರಲು ಸಾಧ್ಯ ಎಂಬುದು ಸ್ಪಷ್ಟ ಉತ್ತರ. ಮಾಧ್ಯಮ ಸಂಸ್ಥೆಗಳು ಈಗೀಗ ಹಲವರ ಕೈಗಳ ದಾಳವಾಗಿವೆ. ಇಲ್ಲೂ ಅದೇ ಆಗಿದೆ.

ನೀವು ಕಸ್ತೂರಿ ಟಿವಿಯ ಸುದ್ದಿಗಳನ್ನು ನೋಡಿರಬಹುದು. ಅಲ್ಲೂ ಹಾಗೇನೇ. ಅಲ್ಲಿ ಕುಮಾರಸ್ವಾಮಿ ವಿರುದ್ಧ ಯಾರ‍್ಯಾರು ಇದ್ದಾರೋ ಅವರೆಲ್ಲರೂ ಟಾರ್ಗೆಟ್ ಆಗುತ್ತಾರೆ. ಕುಮಾರಸ್ವಾಮಿ ಒಂದು ಪತ್ರಿಕಾಗೋಷ್ಠಿ ನಡೆಸಿದರೆ ಗಂಟೆಗಟ್ಟಲೆ ಆ ಗೋಷ್ಠಿಯನ್ನು ಅದು ಪ್ರಸಾರ ಮಾಡುತ್ತದೆ. ತೀರಾ ಜೆಡಿಎಸ್ ಕಾರ್ಯಕರ್ತರೇ ಈ ಭಟ್ಟಂಗಿ ಚಾನಲ್‌ನ ನ್ಯೂಸ್‌ಗಳನ್ನು ನೋಡುತ್ತಾರೋ ಇಲ್ಲವೋ ಅದು ಅನುಮಾನ.

ಇತ್ತೀಚಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭಗಳಲ್ಲಿ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಯಡಿಯೂರಪ್ಪ ಆರೋಪಿಯಾಗಿ ಜೈಲಿಗೆ ಹೋಗಿದ್ದಾರೆ, ಇದು ಅವಮಾನಕರ ಎಂಬುದು ನಿಜ. ಆದರೆ ಇಡೀ ಪುಟದಲ್ಲಿ ಯಡಿಯೂರಪ್ಪ ಸರಳುಗಳ ಹಿಂದೆ ಕುಳಿತಿರುವ ಚಿತ್ರ ಪ್ರಕಟಿಸುವ ಅಗತ್ಯವಿತ್ತಾ? ಈ ಎರಡು ಮೀಡಿಯಾ ಸಂಸ್ಥೆಗಳು ಯಡಿಯೂರಪ್ಪ ಅವರನ್ನು ಗಲ್ಲಿಗೆ ಹಾಕುವ ಆತುರದಲ್ಲಿ ಇದ್ದಂತೆ ಬಹಳ ಸ್ಪಷ್ಟವಾಗಿ ತೋರುತ್ತದೆ. ಯಾಕೆ ಹೀಗೆ? ಇದಕ್ಕೇನು ಕಾರಣ? ಒಂದು ವೇಳೆ ಯಡಿಯೂರಪ್ಪ ಬದಲಾಗಿ ಅನಂತಕುಮಾರ್ ಹುಡ್ಕೋ ಹಗರಣದ ವಿಷಯದಲ್ಲೋ, ಇನ್ನೊಂದರಲ್ಲೋ ಜೈಲಿಗೆ ಹೋಗಿದ್ದರೆ ಇದೇ ರೀತಿ ಅಪಮಾನಕಾರಿಯಾದ ವರದಿಗಳನ್ನು ಈ ಮಾಧ್ಮಮ ಸಂಸ್ಥೆಗಳು ಪ್ರಕಟಿಸುತ್ತಿದ್ದವೇ?

ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಕಥೆ ಇದೆ, ನೋಡಿ. ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?

ಇವತ್ತು ಮಾಧ್ಯಮಸಂಸ್ಥೆಗಳನ್ನು ನಿಯಂತ್ರಿಸುತ್ತಿರುವವರು ರಾಜಕಾರಣಿಗಳು. ಹಿಂದೆಲ್ಲ ರಾಜಕಾರಣಿಗಳು ಬರೇ ರಾಜಕಾರಣಿಗಳಾಗಿದ್ದರು. ಈಗ ಅವರು ಪಾರ್ಟ್‌ಟೈಮ್ ಉದ್ಯಮಿಗಳು, ಪಾರ್ಟ್‌ಟೈಮ್ ರಾಜಕಾರಣಿಗಳು. ಮಾಧ್ಯಮ ಸಂಸ್ಥೆಗಳನ್ನು ಹಿಡಿತಕ್ಕೆ ತಂದುಕೊಂಡು ತಮ್ಮ ರಾಜಕಾರಣ ಮತ್ತು ಉದ್ಯಮ ಎರಡನ್ನೂ ರಕ್ಷಣೆ ಮಾಡಿಕೊಳ್ಳೋದು ಅವರ ಉದ್ದೇಶ. ಆಲಂಪಾಷ ವಿಷಯದಲ್ಲಿ ನಡೆದಿರುವುದು ಅದೇ.

ಇನ್ನು ಈ ವಿದ್ಯಮಾನವನ್ನು ಬೇರೆ ಮಾಧ್ಯಮಗಳೇಕೆ ವರದಿ ಮಾಡಲಿಲ್ಲವೆಂಬ ನಿಮ್ಮ ಪ್ರಶ್ನೆಗೆ ಉತ್ತರವೂ ಇಲ್ಲೇ ಇದೆ. ಎಲ್ಲರದೂ ಒಂದಲ್ಲ ಒಂದು ಹುಳುಕು. ಒಬ್ಬರ ಹುಳುಕನ್ನು ಮತ್ತೊಬ್ಬರು ಜಾಹೀರು ಮಾಡಿದರೆ ಆ ಒಬ್ಬರು ಸುಮ್ಮನಿರಲು ಹೇಗೆ ಸಾಧ್ಯ? ಅವರು ಇವರದನ್ನು ಬಯಲು ಮಾಡುತ್ತಾರೆ, ಅಲ್ಲವೇ? ಎಲ್ಲೋ ಪ್ರಜಾವಾಣಿಯಂಥ ಪತ್ರಿಕೆ ಆಗಲೋ ಈಗಲೋ ಸಣ್ಣ ಪ್ರಮಾಣದ ಧ್ವನಿಯನ್ನು ಪ್ರತ್ಯಕ್ಷವಾಗೋ ಪರೋಕ್ಷವಾಗೋ ಎತ್ತುವುದನ್ನು ಬಿಟ್ಟರೆ ನೀವು ಬೇರೆ ಸಂಸ್ಥೆಗಳಿಂದ ಇಂಥ ಒಳಬಂಡಾಯವನ್ನು ಹೇಗೆ ಕಾಣಲು ಸಾಧ್ಯ?

ಇನ್ನು ನಿಮ್ಮ ಪತ್ರದ ಎರಡನೇ ಭಾಗಕ್ಕೆ ಬರುವುದಾದರೆ ಅಲ್ಲೂ ನಿಮಗೆ ನಿರಾಶಾದಾಯಕ ಉತ್ತರಗಳೇ ಲಭಿಸುತ್ತವೆ. ಸಹ ಪತ್ರಕರ್ತನಿಗೆ ಅನ್ಯಾಯವಾದಾಗ ಯಾಕೆ ಯಾರೂ ಧ್ವನಿ ಎತ್ತುವುದಿಲ್ಲ ಎನ್ನುತ್ತೀರಿ ನೀವು. ಯಾರು ಧ್ವನಿ ಎತ್ತಬೇಕು? ಧ್ವನಿ ಎತ್ತಬಹುದಾದ ಸಂಸ್ಥೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಅದನ್ನು ಹಲವರು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಗೇಲಿ ಮಾಡುವುದೂ ಉಂಟು. ಮುಖ್ಯವಾಹಿನಿಯ ಪತ್ರಕರ್ತರ ಪೈಕಿ ಬಹುತೇಕರು ಇಲ್ಲಿ ಸದಸ್ಯರೇ ಆಗಿಲ್ಲ ಎಂದರೆ ನೀವು ನಂಬಲೇಬೇಕು. ಹೆಸರೇ ಇಲ್ಲದ ಅಥವಾ ಇಲ್ಲವೇ ಇಲ್ಲದ ಪತ್ರಿಕೆಗಳವರೇ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು. ಜಿಲ್ಲಾ ಮಟ್ಟದಲ್ಲಿ ಈ ಸಂಘಟನೆ ಅಲ್ಪಸ್ವಲ್ಪ ಕ್ರಿಯಾಶೀಲವಾಗಿದೆ, ಆದರೆ ರಾಜ್ಯಮಟ್ಟದಲ್ಲಿ ಕ್ರಿಯಾಶೀಲವಾಗಿದ್ದನ್ನು ಕಂಡವರು ಇಲ್ಲ. ಎಲ್ಲೋ ಯಾರೋ ಪತ್ರಕರ್ತನ ಕೊಲೆಯಾದರೆ ಒಂದು ಸಾಂಕೇತಿಕ ಪ್ರತಿಭಟನೆ, ವಿಧಾನಸೌಧಕ್ಕೆ ಪ್ರವೇಶಪತ್ರ ಕೊಡಲಿಲ್ಲವೆಂದರೆ ಒಂದು ಪ್ರತಿಭಟನೆ, ಬಸ್ ಪಾಸ್ ಕೊಡಿ ಎಂದು ಒಂದು ಪ್ರತಿಭಟನೆ… ಇಂಥವುಗಳನ್ನು ಬಿಟ್ಟು ಯೂನಿಯನ್ ಬೇರೆ ಏನನ್ನೂ ಮಾಡಿದ್ದನ್ನು ಯಾರೂ ಕಂಡಿಲ್ಲ.

ನೀವು ಮಾನಸ ಪುದುವೆಟ್ಟು ಕೆಲಸ ಕಳೆದುಕೊಂಡ ವೃತ್ತಾಂತ ಬರೆದಿದ್ದೀರಿ. ಗಂಡ ಬರೆದ ಸುದ್ದಿಗೆ ಹೆಂಡತಿಯ ತಲೆದಂಡವಾಗುವುದು ಎಷ್ಟು ಕ್ರೂರ ಮತ್ತು ಅಮಾನವೀಯ ಎಂದು ಈ ಯೂನಿಯನ್‌ನ ಪದಾಧಿಕಾರಿಗಳಿಗೆ, ಅದರಲ್ಲೂ ಗಂಗಾಧರ ಮೊದಲಿಯಾರ್‌ರಂಥ ಹಿರಿಯರಿಗೆ ಅನಿಸುವುದೇ ಇಲ್ಲ. ಪ್ರತಿಭಟನೆ ಬೇಡ, ಯಾಕೆ ಹೀಗೆ ಮಾಡಿದ್ರಿ ಎಂದು ಸಮಯದ ಮ್ಯಾನೇಜ್‌ಮೆಂಟನ್ನು ಕೇಳಲಾರದಷ್ಟು ಇವರ ಬಾಯಿ ಸತ್ತಿದೆ. ಯೂನಿಯನ್ ಇರೋದು ಮತ್ತೆ ಯಾವ ಪುರುಷಾರ್ಥಕ್ಕೆ ಅಂತ ನೀವು ಕೇಳಬಹುದು. ಕೆಜಿ ರಸ್ತೆಯಲ್ಲಿದ್ದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯೂನಿಯನ್‌ನವರಿಗೆ ಸಾಧ್ಯವಾಗಲಿಲ್ಲ. ಪ್ರತಿಯೊಂದಕ್ಕೂ ಕೋರ್ಟಿಗೇರುವ, ಸಣ್ಣಪುಟ್ಟದಕ್ಕೂ ಜಗಳ ಮಾಡಿಕೊಂಡು ಕೂರುವ ಯೂನಿಯನ್‌ನವರಿಗೆ ಮಾನಸ ಅವರ ಸಮಸ್ಯೆ ಬಗೆಹರಿಸುವ ಸಮಯವಾದರೂ ಎಲ್ಲಿದೆ ಹೇಳಿ?

ಮಾನಸ ವಿಷಯ ಪ್ರಸ್ತಾಪಿಸುವ ಸಂದರ್ಭದಲ್ಲೇ ನಿಮಗೆ ಸೋಮಶೇಖರ ಪಡುಕೆರೆ ಎಂಬ ಪತ್ರಕರ್ತರ ವಿಷಯ ಹೇಳಬೇಕು. ಕ್ರೀಡಾ ವರದಿಗಾರಿಕೆಯಲ್ಲಿ ಪಳಗಿದ್ದವರು ಸೋಮಶೇಖರ್. ಕನ್ನಡಪ್ರಭದಲ್ಲಿ ಸರಿಸುಮಾರು ದಶಕದ ಅನುಭವವಿದೆ. ಸಹಪತ್ರಕರ್ತರ ನಡುವೆ ಒಳ್ಳೆಯ ಹೆಸರು ಪಡೆದವರು. ಇತ್ತೀಚಿಗೆ ಏಕಾಏಕಿ ಅವರಿಂದ ರಾಜೀನಾಮೆ ಪಡೆಯಲಾಯಿತು. ಕಾರಣಕ್ಕಾಗಿ ಹುಡುಕುವ ಅಗತ್ಯವೂ ಇಲ್ಲ. ಹೀಗೆ ಪತ್ರಕರ್ತರನ್ನು ಬಲಿ ತೆಗೆದುಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿ ಇರುತ್ತದೆ. ನಿನ್ನೆ ಮಾನಸ, ಇವತ್ತು ಸೋಮಶೇಖರ್, ನಾಳೆ ಇನ್ಯಾರೋ? ಹೀಗೆ ಮಾಧ್ಯಮಗಳಿಂದ ದೂರವಾಗಿ ಬೇರೆ ಕ್ಷೇತ್ರಗಳಿಗೆ ವಲಸೆ ಹೋದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಹೋಗುವವರು ಹೋಗುತ್ತಲೇ ಇದ್ದಾರೆ, ಕೇಳುವವರು ಯಾರೂ ಇಲ್ಲ. ತೀರಾ ಹೀಗೆ ಮಾಧ್ಯಮ ಬಿಟ್ಟು ಹೋದವರನ್ನೂ ಗೇಲಿ ಮಾಡುವ ಬಾಣಗಳನ್ನು ಹೊಡೆಯುವ ಕ್ರೂರ ಮನಸ್ಸು ಘನತೆವೆತ್ತ ಪತ್ರಕರ್ತರಿಗೇ ಇರುವಾಗ ಬೇರೇನು ಹೇಳೋದು? ಸೋಮಶೇಖರ್‌ರಂಥವರಿಗೆ ಬಕೆಟ್ ಹಿಡಿದು ನಿಂತು ಅಭ್ಯಾಸವಿಲ್ಲ. ಬಕೆಟ್ ಹಿಡಿಯದವರನ್ನು ಮ್ಯಾನೇಜ್‌ಮೆಂಟುಗಳು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.

ರೆಡ್ಡಿಯವರೇ, ಎಲ್ಲ ಪತ್ರಕರ್ತರೂ ಈಗ ಕಾಂಟ್ರಾಕ್ಟ್ ಕೂಲಿಯಾಳುಗಳು. ಬಾಡಿಗೆ ಮನೆಗಳಿಗೆ ಕರಾರು ಒಪ್ಪಂದ ಮಾಡಿಕೊಳ್ಳುವಂತೆ ೧೧ ತಿಂಗಳ ಕಾಂಟ್ರಾಕ್ಟು ಕೂಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಕೆಲಸ ಖಾಯಂ ಆದರೂ ಸಂಭ್ರಮಿಸಬೇಕಾದ ಅಗತ್ಯವಿಲ್ಲ. ಸಂಸ್ಥೆಯಿಂದ ಹೊರಗೆ ಎಸೆಯಲು ಮ್ಯಾನೇಜ್‌ಮೆಂಟುಗಳಿಗೆ ಏನೇನೂ ಕಷ್ಟವಿಲ್ಲ. ಒಳಗೇ ಸಣ್ಣಪ್ರಮಾಣದಲ್ಲಿ ಕಿರುಕುಳ ಶುರು ಮಾಡಿದರೆ ತಾವೇ ತಾವಾಗಿ ಪತ್ರಕರ್ತರು ಹೊರಹೋಗುತ್ತಾರೆ. ಹಠ ಹಿಡಿದು ಕುಳಿತವರಿಗೆ ಡಿಸ್‌ಮಿಸ್ ಮಾಡುವ ಬೆದರಿಕೆ ಒಡ್ಡಿ ರಾಜೀನಾಮೆ ಪಡೆಯಲಾಗುತ್ತದೆ. ಒನ್ಸ್ ಎಗೇನ್, ಇಂಥ ಪತ್ರಕರ್ತರ ಸಹಾಯಕ್ಕೆ ಯಾವ ಯೂನಿಯನ್ ಕೂಡ ಬರೋದಿಲ್ಲ.

ನೀವು ಬೆಂಗಳೂರು ವರದಿಗಾರರ ಕೂಟದ ಹೆಸರು ಕೇಳಿರಬಹುದು. ಸಖತ್ತು ಬಲಶಾಲಿ ಸಂಘಟನೆ ಅದು. ಎಷ್ಟು ಬಲಶಾಲಿ ಎಂದರೆ ತನ್ನ ಸದಸ್ಯರೆಲ್ಲರಿಗೂ ಕೆಎಚ್‌ಬಿ ಸೈಟು ಕೊಡಿಸುವಷ್ಟು ಬಲಶಾಲಿ. ಆದರೆ ಪತ್ರಕರ್ತರಿಗೆ ಅನ್ಯಾಯವಾದಾಗ ಈ ಸಂಘಟನೆಯೂ ಧ್ವನಿ ಎತ್ತಿದ್ದನ್ನು ಯಾರೂ ಕಂಡಿಲ್ಲ. ಇದು ಕೇವಲ ವರದಿಗಾರರ ಕೂಟ. ಇಲ್ಲಿ ವರದಿಗಾರರಿಗೆ ಮಾತ್ರ ಸದಸ್ಯತ್ವ, ಉಪಸಂಪಾದಕರಿಗೂ ಸದಸ್ಯತ್ವ ಕೊಡಲಾಗುವುದಿಲ್ಲ. ಒಂದುವೇಳೆ ವರದಿಗಾರನಿಗೆ ಡೆಸ್ಕ್‌ಗೆ ವರ್ಗಾವಣೆಯಾದರೆ ಆತನ ಸದಸ್ಯತ್ವವೇ ಅನರ್ಹಗೊಳ್ಳುತ್ತದಂತೆ. ಹೀಗೆ ತನ್ನ ಸದಸ್ಯರೊಂದಿಗೇ ಅಮಾನವೀಯವಾಗಿ ನಡೆದುಕೊಳ್ಳಬಹುದಾದ ಬೈಲಾ ಇರುವ ಸಂಘಟನೆ, ಸದಸ್ಯರ ಸಮಸ್ಯೆಗಳನ್ನು ಅಡ್ರೆಸ್ ಮಾಡಲು ಸಾಧ್ಯವಾ? ಇದು ಪ್ರಶ್ನೆ. ಇನ್ನು ಬೆಂಗಳೂರು ಪ್ರೆಸ್ ಕ್ಲಬ್ ತಾನಿರುವುದೇ ಪತ್ರಕರ್ತರ ಮನರಂಜನೆಗೆ, ಹೀಗಾಗಿ ಬೇರೆ ಉಸಾಬರಿ ನಮಗೆ ಬೇಕಿಲ್ಲ ಎಂದು ಮಾತಿಗೇ ಮೊದಲೇ ಹೇಳುವುದರಿಂದ ಅದರಿಂದಲೂ ನ್ಯಾಯ ದೊರಕೀತೆಂಬ ನಂಬಿಕೆ ಇಲ್ಲ.

ಪತ್ರಿಕಾರಂಗದಲ್ಲಿ ಯಾಕೆ ಅನರ್ಹರು, ಅಸಮರ್ಥರು, ಭ್ರಷ್ಟರು ಮುನ್ನೆಲೆಗೆ ಬರುತ್ತಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರಿಸಲು ಇಷ್ಟು ಹೇಳಬೇಕಾಯಿತು. ಒಂದು ವಾಸ್ತವ ಏನೆಂದರೆ ಪತ್ರಕರ್ತರು ಈಗೀಗ ಕೂಲಿಯಾಳುಗಳ, ಜೀತದಾಳುಗಳ ಸ್ವರೂಪದಲ್ಲಿ ಬಳಕೆಯಾಗುತ್ತಿದ್ದಾರೆ. ಮೀಡಿಯ ಅನ್ನೋದು ಬಿಜಿನೆಸ್ಸಾಗಿ ಬಹಳ ಕಾಲವೇ ಆಯಿತು. ಆದರೆ ಈಗ ಅದು ಧನದಾಹಿ ರಾಜಕಾರಣದ ಒಂದು ಭಾಗ. ಹೀಗಾಗಿ ಸತ್ಯವಷ್ಟೆ ಸುದ್ದಿಯಾಗಬೇಕು ಎಂದೇನೂ ಇಲ್ಲ. ಈ ಕಟುಸತ್ಯ ಗೊತ್ತಿರುವ ಯಾವ ಪತ್ರಕರ್ತನೂ ಸ್ವಂತ ಬುದ್ಧಿಯಿಂದ ಸುದ್ದಿ ಮಾಡಲಾರ, ನಿಷ್ಠುರವಾದಿಯಾಗಿ ಇಲ್ಲಿ ಉಳಿದುಕೊಳ್ಳಲಾರ.

ಕ್ಷಮಿಸಿ, ನಿಮಗೆ ಉತ್ತರ ಬರೆಯುವ ಭರದಲ್ಲಿ ಈ ಪತ್ರ ಇನ್ನೊಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದಂತೆ ಅನಿಸುತ್ತಿದೆ.

ವಂದನೆಗಳೊಂದಿಗೆ

-ಸಂಪಾದಕೀಯ ಬಳಗ

ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ…

ಸ್ನೇಹಿತರೆ,

ಕರ್ನಾಟಕದ ಮುಖ್ಯವಾಹಿನಿ ಮಾಧ್ಯಮದಲ್ಲಿ ಅಸಹನೀಯವಾದ ವಾತಾವರಣ ಸೃಷ್ಟಿಯಾಗಿರುವುದು ಈ ರಂಗದಲ್ಲಿರುವವರಿಗೆ ಮತ್ತು ಅದನ್ನು ಗಮನಿಸುತ್ತಿರುವವರಿಗೆ ತಿಳಿದಿರುವ ವಿಚಾರವಷ್ಟೆ. ಇಂತಹ ಪರಿಸ್ಥಿತಿಯಲ್ಲಿ ಈ ರಂಗದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು ಮತ್ತು ಹಿರಿಯ ಪತ್ರಕರ್ತರು ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸುವ ಮೂಲಕ ಆ ಬಗೆಗಿನ ವಿಚಾರವನ್ನು ಚರ್ಚೆಗೊಡ್ಡೋಣ ಎಂದು ಈ ಪತ್ರ ಬರೆಯುತ್ತಿದ್ದೇನೆ.

byraghavendra-affidavit

ನಾನು ಮೂರ್ನಾಲ್ಕು ದಿನಗಳ ಹಿಂದೆ “Third-rate frauds in politics” ಎಂಬ ಈ ಲೇಖನ ಬರೆಯುವ ಸಂದರ್ಭದಲ್ಲಿ ಅಲಂ ಪಾಷ ಅವರನ್ನು ಕೇಳಿ ಖಚಿತಪಡಿಸಿಕೊಂಡೇ ಒಂದು ವಿಚಾರ ಬರೆದಿದ್ದೆ. ಅದರಲ್ಲಿ ಸಚಿವ ನಿರಾಣಿ ಮೀಟಿಂಗ್ ಒಂದರಲ್ಲಿ ಅವರ ಮೇಲೆ ಈಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಪಾಷ ಅವರಿಗೆ, “ನಾನು ಸಮಯ ಚಾನೆಲ್ಲಿನ ಮಾಲಿಕ. ನಿನ್ನ ಬಗ್ಗೆ ಅಲ್ಲಿ ಕವರ್ ಮಾಡಿಸಬಲ್ಲೆ. ನಿನ್ನ ಹಗರಣಗಳನ್ನೂ ಬಯಲಿಗೆ ಎಳೆಯಬಲ್ಲೆ,” ಎಂದು ಎಚ್ಚರಿಕೆ ಕೊಟ್ಟಿದ್ದರು. ಪಾಷಾ ಅವರಿಂದ ಈ ಮಾತನ್ನು ನಾನು ಕೋಟ್ ಮಾಡಬಹುದು ಎಂದು ಒಪ್ಪಿಗೆ ಪಡೆದುಕೊಂಡೇ ಅಲ್ಲಿ ಪ್ರಸ್ತಾಪಿಸಿದ್ದೆ.

ನೆನ್ನೆ ನಾನು ಬೆಳಗ್ಗೆ ಏಳಕ್ಕೆ ಬೆಂಗಳೂರಿನಿಂದ ಹಿರಿಯೂರಿಗೆ ಹೋಗುವ ಕೆಲಸ ಇತ್ತು. ಬಂದಿದ್ದು ರಾತ್ರಿ. ಬಂದ ಮೇಲೆ ಸ್ನೇಹಿತರಿಂದ ವಿಚಾರ ತಿಳಿಯಿತು. ಏನೆಂದರೆ, ಸಮಯ ಚಾನಲ್‌ನಲ್ಲಿ ನಿರಾಣಿ ಎಚ್ಚರ ಕೊಟ್ಟಿದ್ದಕ್ಕೆ ಪೂರಕವಾಗಿ ಅಲಂ ಪಾಷಾ ವಿರುದ್ಧ ಕಾರ್ಯಕ್ರಮ ಪ್ರಸಾರವಾಯಿತೆಂದು.

ಇಲ್ಲಿ ನಾನು ಪಾಷಾರವರ ಪರವಹಿಸಿಕೊಂಡು ಮಾತನಾಡಲಾರೆ. ಪಾಷಾ ಸಹ ಈ ಹಿಂದೆ ಭ್ರಷ್ಟ ಮಾರ್ಗ ಹಿಡಿದಿದ್ದರೆ ಅವರ ವಿಚಾರಣೆಯಾಗಿ ಶಿಕ್ಷೆಯಾಗಲಿ. ಅದಕ್ಕೆ ಯಾವ ರೀತಿಯಿಂದಲೂ ನನ್ನ ಅಕ್ಷೇಪಣೆ ಇಲ್ಲ.

ಆದರೆ, ಈ ಒಂದು ಸಂದರ್ಭದಲ್ಲಿ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳು ಏನು ಮಾಡುತ್ತಿವೆ, ಎನ್ನುವುದು ನನ್ನ ಎದುರಿರುವ ಪ್ರಶ್ನೆ.

ಸಚಿವ ನಿರಾಣಿ ಹೀಗೆ ಮೀಟಿಂಗ್ ಒಂದರಲ್ಲಿ ಹೇಳಿದ್ದು, ಅದಾದ ಕೆಲ ದಿನಗಳಲ್ಲಿ ಪಾಷಾ ವಿರುದ್ಧ ಕಾರ್ಯಕ್ರಮ ಬರುವುದು, ಇಲ್ಲಿರುವ ವಿವಿಧ ಆಯಾಮಗಳೇನು, ಕೋನಗಳೇನು, ಸಮಯ ಚಾನಲ್‌ನಲ್ಲಿ ಮಾತ್ರ ಯಾಕೆ ಈ ಕಾರ್ಯಕ್ರಮ ಬರುತ್ತದೆ, ಬೇರೆಯದರಲ್ಲಿ ಯಾಕೆ ಬರುವುದಿಲ್ಲ, ಅಲ್ಲಿ ಬಹುಶಃ ಅಧಿಕೃತವಾಗಿ ಯಾವುದೇ ಮಾಲಿಕತ್ವ ಹೊಂದಿರದ ನಿರಾಣಿ ಹೇಗೆ ಆ ಚಾನಲ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ,.. ಇವೆಲ್ಲವನ್ನು ಯಾಕೆ ನಮ್ಮ ರಾಜ್ಯಮಟ್ಟದ ದಿನಪತ್ರಿಕೆಗಳು ಕೈಗೆತ್ತಿಕೊಳ್ಳುವುದಿಲ್ಲ? ಒಂದು ಮಾಧ್ಯಮ ಸಂಸ್ಥೆ ಇನ್ನೊಂದು ಮಾಧ್ಯಮ ಸಂಸ್ಥೆಯನ್ನು ವಿಮರ್ಶಿಸಬಾರದು ಎನ್ನುವುದು ಅದೆಂತಹ ಘನ ಮೌಲ್ಯ? ನಮ್ಮ ಹುಳುಕುಗಳನ್ನು ಅವರು ಎತ್ತುವುದಿಲ್ಲ, ಅವರ ಹುಳುಕುಗಳನ್ನು ನಾವು ಎತ್ತುವುದಿಲ್ಲ ಎನ್ನುವ ಅಲಿಖಿತ ನಿಯಮ ನಿಮಗೆ ಅದೆಂತಹ ನೈತಿಕತೆ ಕೊಡುತ್ತದೆ?

ನೀವು ಅದನ್ನು ಟ್ಯಾಬ್ಲಾಯ್ಡ್ ಪತ್ರಿಕೆಗಳ ರೀತಿಯೇ ಬರೆಯಬೇಕಿಲ್ಲ. ಗಂಭೀರವಾಗಿ, ಪ್ರಬುದ್ಧವಾಗಿಯೇ ಬರೆಯಬಹುದಲ್ಲ? ಯಾಕೀ ವೃತ್ತಿಮೋಸ?

ಇಲ್ಲಿ ಮಾಧ್ಯಮ ಸಂಸ್ಥೆಗಳಷ್ಟೇ ಅಲ್ಲ, ಪತ್ರಕರ್ತರು, ಪ್ರೆಸ್‌ಕ್ಲಬ್, ಪತ್ರಕರ್ತರ ಸಂಘಗಳು, ಇವೆಲ್ಲರೂ/ವೂ ಒಂದು ರೀತಿಯ ಬೇಜವಾಬ್ದಾರಿತನದಲ್ಲಿ ಇಲ್ಲವೆ ಪುಕ್ಕಲುತನದಲ್ಲಿ ವರ್ತಿಸುತ್ತಿದ್ದಾರೆ. ವಿಶೇಷವಾಗಿ, ತಮ್ಮದೇ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಅನ್ಯಾಯವಾದಾಗ ಅವರಿಗೆ ಬೆಂಬಲ ಕೊಡುವುದು, ಅವರ ಪರ ಹೋರಾಡುವುದು, ಅಂತಹ ವ್ಯವಸ್ಥಿತ ವ್ಯವಸ್ಥೆ/ಸಂಸ್ಥೆಯೊಂದನ್ನು ಕಟ್ಟಿಕೊಳ್ಳುವುದು ಇವರ ಕೈಯ್ಯಲ್ಲಿ ಸಾಧ್ಯವೇ ಆಗಿಲ್ಲ. ಜೊತೆಗೆ ಮೌಲ್ಯ, ಆದರ್ಶ, ನಿಷ್ಠುರತೆ ಇರುವಂತಹವರು ಅಲ್ಲಿ ಮುಖ್ಯಸ್ಥಾನಗಳಲ್ಲಿ ಇದ್ದಂತೆಯೂ ಕಾಣಿಸುತ್ತಿಲ್ಲ. ಅಧಿಕಾರಕ್ಕಾಗಿ ಮತ್ತು ಭ್ರಷ್ಟಾಚಾರಕ್ಕಾಗಿ ಹಪಹಪಿಸುವ ಜನರೆ ಅಲ್ಲಿಯೂ ತುಂಬಿದ್ದಾರೆ ಎನಿಸುತ್ತದೆ. ಇದನ್ನು ಆಪಾದನೆ ಎಂದುಕೊಂಡರೂ ಸರಿಯೇ, ಕನ್ನಡದ/ಕರ್ನಾಟಕದ ಮಿತ್ರರು ನನ್ನ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಆಶಿಸುತ್ತೇನೆ.

ಮೇಲಿನ ಮಾತಿಗೆ ಫೂರಕವಾಗಿ ನಾನು ಇಲ್ಲಿ ಪುದುವೆಟ್ಟುರವರ ಸಂಗತಿ ಪ್ರಸ್ತಾಪಿಸುತ್ತೇನೆ. ನಾವು ವರ್ತಮಾನದಲ್ಲಿ ದಾಖಲೆ ಸಮೇತ ಪ್ರಕಟಿಸಿದ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…” ಲೇಖನದಲ್ಲಿನ ವಿಚಾರವನ್ನು ತಿಂಗಳ ಹಿಂದೆಯೇ ಸುರೇಶ್ ಪುದುವೆಟ್ಟು ಎನ್ನುವ ಪತ್ರಕರ್ತರು ಉದಯವಾಣಿಯಲ್ಲಿ ಬರೆದಿದ್ದರು. ಆ ಸಮಯದಲ್ಲಿ ಸುರೇಶ್ ಪುದುವೆಟ್ಟುರವರ ಪತ್ನಿ ಮಾನಸ ಪುದುವೆಟ್ಟು ಸಮಯ ಟಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಲೇಖನ ಪ್ರಕಟವಾದ ತಕ್ಷಣ ಮಾನಸರವರಿಗೆ ಸಮಯ ಟಿವಿಯಲ್ಲಿ “ಹೀಗೆಲ್ಲ ಮಾಡಬಾರದು,” ಎನ್ನುವ ಎಚ್ಚರಿಕೆ ಕೊಟ್ಟು ದೂರದ ಗುಲ್ಬರ್ಗಕ್ಕೆ ವರ್ಗ ಮಾಡಿದರು. ಆ ಶಿಕ್ಷೆ ಭರಿಸಲಾಗದೆ ಮಾನಸ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಇಲ್ಲಿ ಮತ್ತೊಮ್ಮೆ ಗಮನಿಸಬೇಕಾದ ಅಂಶ, ಮಾನಸರವರ ಗಂಡ ಬೇರೆ ಪತ್ರಿಕೆಯಲ್ಲಿ ನಿರಾಣಿ ವಿರುದ್ಧ ಬರೆದಿದ್ದಕ್ಕೆ ಇಲ್ಲಿ ಇವರಿಗೆ ಶಿಕ್ಷೆ. ಇದು ಯಾವ ನಿಯಮ, ನೈತಿಕತೆ, ವೃತ್ತಿಮೌಲ್ಯ? ಈ ವಿಷಯವನ್ನು ನಾನು ಊಹಾಪೋಹಗಳ ಆಧಾರದ ಮೇಲೆ ಬರೆಯಲಿಲ್ಲ. ಸುರೇಶ್ ಪುದುವೆಟ್ಟುರವರಿಗೆ ಪೋನ್ ಮಾಡಿ ವಿಷಯ ಖಚಿತಪಡಿಸಿಕೊಂಡೇ ಬರೆದೆ. ಈ ವಿಷಯವನ್ನು ಪತ್ರಕರ್ತರು ಯಾಕೆ ಕೈಗೆತ್ತಿಕೊಳ್ಳಲಿಲ್ಲ? ಇದೊಂದು ಸಹಿಸಬಾರದ ವಿದ್ಯಮಾನ ಎಂದು ಯಾಕೆ ಎಂದುಕೊಳ್ಳಲಿಲ್ಲ? ಇಲ್ಲಿರುವ ಎಲ್ಲರೂ ಕೇವಲ ಜೀವನೋಪಾಯಕ್ಕೆ ದುಡಿಯುತ್ತಿರುವ ಕೂಲಿಗಳೇ, ಅಥವ ಅವರಿಗೂ ಸ್ವತಂತ್ರ ಆಲೋಚನೆ ಮತ್ತು ತಮ್ಮ ವೃತ್ತಿಬಾಂಧವರಿಗೆ ಅನ್ಯಾಯವಾದಾಗ ಅವರ ಪರ ನಿಲ್ಲಬೇಕು ಎನ್ನುವ ನಿಷ್ಠೆ ಇದೆಯೆ?

ಮತ್ತು, ತಮ್ಮದೇ ರಂಗ ಅವ್ಯವಹಾರ ಮತ್ತು ಅನೀತಿಯುಕ್ತ ಚಟುವಟಿಕೆಯಲ್ಲಿ ತೊಡಗಿಕೊಂಡಾಗ, ಅದನ್ನು ವಿಮರ್ಶಿಸಬಾರದು ಎನ್ನುವಷ್ಟು ಬೌದ್ಧಿಕ ದಿವಾಳಿತನ ಇಲ್ಲಿದೆಯೆ? Shameful.

ನಿಜಕ್ಕೂ ಇಲ್ಲಿ ಒಂದು ಹೊತ್ತಿನ ತುತ್ತಿಗೆ ಪರದಾಡುತ್ತಿರುವವರು ಮಾತ್ರವೇ ದುಡಿಯುತ್ತಿದ್ದಾರೆಯೆ? ನಿಮಗೆ ಅಷ್ಟು ಬಡತನವೆ ಅಥವ ಅದು ಇನ್ನೊಂದು ತರಹದ ದಾರಿದ್ತ್ರವೆ? ಏನದು?

ಇಲ್ಲಿ ಇನ್ನೊಂದು ವಿಷಯ. ನಾನು ಪತ್ರಕರ್ತ ಅಲ್ಲ. ಈಗಲೂ ನಾನು ಜೀವನೋಪಾಯಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿಯೇ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ, ಇದನ್ನು ನಾನು ನನ್ನ ವೃತ್ತಿಬಾಂಧವರ ಪರ ಎತ್ತಬೇಕಿರುವ ವಿಷಯ ಎಂದು ಎತ್ತುತ್ತಿಲ್ಲ. ಇಲ್ಲಿ, ಪತ್ರಿಕಾರಂಗದಲ್ಲಿ, ಒಂದಷ್ಟು ಕೊಳೆತು ನಾರುತ್ತಿದೆ, ಅಸಮರ್ಥರು, ಅನರ್ಹರು ಈ ರಂಗದಲ್ಲೂ ಮುಂಚೂಣಿಗೆ ಬಂದಿದ್ದಾರೆ, ಮತ್ತು ಅವರಲ್ಲಿ ಅಂತಹ ಹೇಳಿಕೊಳ್ಳುವ ಮೌಲ್ಯಗಳಾಗಲಿ, ಅನ್ಯಾಯದ ವಿರುದ್ಧ ಹೋರಾಡಲೇಬೇಕೆಂಬ ಬದ್ಧತೆಯಾಗಲಿ, ಬಹಳಷ್ಟು ಜನರಿಗೆ ಇಲ್ಲ ಎಂದು ಪ್ರಸ್ತಾಪಿಸುವುದಕ್ಕೆ ಎತ್ತುತ್ತಿದ್ದೇನೆ. ನಮ್ಮ ಮಾಧ್ಯಮ ರಂಗವೇ ಭ್ರಷ್ಟವಾಗುತ್ತಿರುವಾಗ ಅದು ಸಮಾಜದಲ್ಲಿ ಸೃಷ್ಟಿಸುವ ಅಭಿಪ್ರಾಯಗಳಿಗೆ ಯಾವ ಮೌಲ್ಯಗಳಿರುತ್ತವೆ, ಮತ್ತು ಅದು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎನ್ನುವುದೇ ನನ್ನ ಭಯ. ಇದನ್ನು ಒಬ್ಬ ಬಾಧ್ಯಸ್ಥ ಪ್ರಜೆಯಾಗಿ, ಸಮುದಾಯದ ಹಿತದೃಷ್ಟಿಯಿಂದ ಪ್ರಸ್ತಾಪಿಸುತ್ತಿದ್ದೇನೆ—ಇತರೆ ಸಮಾಜಸಂಬಂಧಿ ವಿಷಯಗಳ ಬಗ್ಗೆ ಬರೆಯುವಂತೆ. ಇದನ್ನು ಎತ್ತುವ ಮೂಲಕ ವ್ಯವಸ್ಥೆಯೂ ಸರಿಹೋಗುತ್ತ ಹೋಗಬಹುದು ಎನ್ನುವ ಆಸೆ.

ಈ ಲೇಖನವನ್ನು ಇನ್ನೂ ವಿಸ್ತಾರವಾಗಿ ಅಥವ ಇನ್ನೂ ಹೆಚ್ಚು ತರ್ಕಬದ್ಧವಾಗಿ ಬರೆಯಬೇಕಿತ್ತು. ಆದರೆ, ಮುಂದಿನ ನಾಲ್ಕೈದು ದಿನ ನಾನು ಊರಿನಲ್ಲಿ ಇರದೇ ಇರುವುದರಿಂದ ಮತ್ತು ಅಂತರ್ಜಾಲದಿಂದ ದೂರ ಇರುವುದರಿಂದ ಈ ವಿಷಯವನ್ನು ಕೂಡಲೆ ಪ್ರಸ್ತಾಪಿಸೋಣ ಎಂದು  ಬರೆದಿದ್ದೇನೆ. ಇತರೆ ಪತ್ರಕರ್ತ ಸ್ನೇಹಿತರು ಈ ವಿಷಯವನ್ನು ಇಟ್ಟುಕೊಂಡು ಚರ್ಚೆ ಮುಂದುವರೆಸುತ್ತಾರೆ ಎಂದು ಬಯಸುತ್ತೇನೆ.

ಬಯಸುತ್ತೇನೆ, ಅಷ್ಟೇ. ಅದು ಆಗುತ್ತದೆ ಎನ್ನುವ ನಂಬಿಕೆ ನನಗಿಲ್ಲ. ಅದು ಉಳಿದಿಲ್ಲ. ಕ್ಷಮಿಸಿ.

ಆದರೂ…

ನಮಸ್ಕಾರ,
ರವಿ ಕೃಷ್ಣಾ ರೆಡ್ಡಿ

Third-rate frauds in politics

-Ravi Krishna Reddy

It is truly a sad state of politics in Karnataka. Third-rate frauds with no desirable qualifications required in  a good and matured democracy have taken over the polity in Karnataka in general and the ruling BJP in particular. Fraudulent actions like forging the documents, providing false affidavits for swindling the state and public’s money have become the hallmark of the ruling party ministers, MLAs and MPs. As you have seen in the case of Nirani and his ministry (as detailed here) and in the case in which Yeddyurappa and Krishnaih Setty are in judicial custody (reported here, by Prajavani), the ministers and people who are in power have thrown all laws to the wind at this age of RTI and behaved like full-time professional cons.

Yes, professional con men have enetered the public offices in Karnataka, en masse. Our elected representatives and their families are putting Frank Abagnale Jr. to shame.

The sad state of BJP does not end with its senior ministers and career politicians. It extends to some imbecile politicians like B.Y. Raghavendra, Janardhana Swamy, etc. Instead of steering and shaping the party’s long-term policies and the fortune, they rushed to secure their personal fortunes as soon as they become MPs. These people were granted 50×80 ft BDA sites worth Rs. 3-4 crores for a meagre sum of Rs. 8 lacs within months after taking the oath in the Parliament. As it was demonstrated here and here, it seems these young politicians did not show any signs of restraint and rushed to provide false affidavits that carried lies in some cases and misleading information in some other.

byraghavendra-affidavit

In this time of cons and self-serving politicians governing our state, it is immature to ask what were their contributions that made qualified enough to be granted with BDA sites at lesser price. And in the case of MPs, why would they need a place here, in Bangalore city, which neither falls under their constituency, nor it is Delhi, where they should spend some decent amount of time in shaping the laws and policies of our country? I know these are not the questions to be asked at this time of treachery and day-robbery.

It may be true that the politicians are the true reflection of our society. It is not just the politics that went wrong here in Karnataka. Supporting the family’s corruption and protecting the sons and son-in-laws is prevalent in our society. A well known Kannada writer, the man who translated Tolstoy to Kannada and one time disciple of Kuvempu, D. Javare Gowda, the former VC of Mysore University, an octogenarian, went onto fast to save his son from the corruption charges. As it is noted in the previous sentence, his son is not a child. He himself is probably a grandfather, who is in his late sixties, made his father go on fasting to influence and threaten the state to scuttle the ongoing investigation on the irregularities he has committed while he was the Vice Chancellor of the same Univeristy that his father served. A father going to jail for his and his sons crimes and a the son making use of the fathers influence and power to stay out of the jail says that something is truly rotten here. Everyone supports corrupt practices of their family. I know “everyone” is not the right word here, but “majority” is also not a right word as it may imply 49.9% not supporting corruption in their families, as it is not true in this context.

Are these journalists too dumb, or are they simply dishonest?

And, majority of our  journalists are no different. I happened to visit Mudhol couple of weeks back, where Murugesh Nirani’s sugar factory and residence are located. I was shocked to see a palatial bungalow on the outskirts of Mudhol. This bungalow belongs to Murugesh Nirani. I am not qualified to assess monetary worth of this palace, but it is spread over acres, and people over there were saying it has lifts inside the house. It may be worth half a billion rupees, if not a billion. The work and expansion of the sugar factory was in full swing. I don’t think you can make some filthy money in a highly competetive sector like sugar industry. And, incidentally, I went with my friend to Nirani Sugars as he was not paid for his sugar cane for the last 6 months. So this factory has dues, but the expansion work and the bungalow next door tells the money is flowing. Where is this money coming from? What are our journalists doing? “Follow the money,” was the word Deep Throat said to Bob Woodword.  May be not many of our journalists know who Woodward is.

And, can a minister or an elected representative like MLAs and MPs, run a private business or occupy an office-of-profit, when they are serving a public office? I think the laws in our country are vague on this subject. But, why did Nandan Nilekani resign from all the posts of Infosy Technologies when he took UID position? Why shouldn’t it be applied to our elected representatives? It has become easier for our politicians to make money by corrupt means and show this ill-gotten money as the income from their private companies. Why our journalists not raising this issue?

Also, the media in Karnataka, especially the TV media is controlled by politicians. 4 out of the 5 news channels in Kannada are owned by active politicans. As said in a meeting with Alam Pasha by himself, Nirani also owns a channel, and he does not like bad press.

Alam Pasha has gone on record saying that Nirani threatened him by saying “I am the owner of Samaya Channel. I can give bad  publicity to you and expose you.”

The reason why I am bringing this up here is, the journalists of Kannada media do not have a systematic support for their fellow journalists when someone in the family writes something critical of an active politican or a media owner. There was an incident reported in some blogs recently that a lady journalist was indirectly forced to resign from Samaya TV, beacuse her spouse wrote something in Udayavani paper criticising Murugesh Nirani.

Suresh Puduvettu covered the same story that we published here at Vartamaana.com, a month back in Udayavani, a Kannada daily . His wife, Manasa Puduvettu, was incidentally employed by Samaya TV. As soon as the report appeared in Udayavani, Mrs. Puduvettu was warned and tarnsferred to Gulbarga as a punishement which eventually forced her to resign. But no journalists or journalists association of the state supported her for this ill-treatment.

I believe this is high time that the honest and senior journalists of Kannada media to come out and expose these and support their colleagues and save their profession from the clutches of corruption and fear. Recently we have seen Advani saying “his party can’t win the confidence of the people if its own house is bedevilled with similar weaknesses,” and the journalists merrily reported it. Now is the time for journalists in Karnataka to rid their house of corruption, fear, injustice and insecurity. In that process may be the cheaters and frauds in the disguise of public representatives would also be controlled and be brought to justice.

But, will our journalists act?

(Prajavani image courtesy: prajavaniepaper.com)