Category Archives: ಸಿನೆಮಾ

ಸಿನೆಮಾ-ಕಿರುತೆರೆಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ರಾಜಕಾರಣ – ರಜೆಕಾಲದಲ್ಲಿ ಹೋಗಿ ಬರುವ ರಮ್ಯ ತಾಣವಲ್ಲ!

-ಭೂಮಿ ಬಾನು

ಚಿತ್ರ ನಟಿ ರಮ್ಯ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಕಾಂಗ್ರೆಸ್ನ ಕೆಲ ನಾಯಕರಿಗೆ ಇದು ಅರಗಿಸಿಕೊಳ್ಳಲಾಗದ ಬೆಳವಣಿಗೆ. ಅವರು ತಮ್ಮ ಅಸಹನೆಯನ್ನು ಅಲ್ಲಲ್ಲಿ ಹೊರಹಾಕಿದ್ದಾರೆ. ಸಂಸದ ಹೆಚ್.ವಿಶ್ವನಾಥ್ ಲಘುವಾಗಿ ಕಮೆಂಟ್ ಪಾಸ್ ಮಾಡಿದರೆ, ಉಗ್ರಪ್ಪ ತುಸು ಗಂಭೀರವಾಗಿಯೇ ಅಸಮಾಧಾನ ತೆರೆದಿಟ್ಟಿದ್ದಾರೆ.

ಅಸಹನೆ, ಅಸಮಾಧಾನಕ್ಕೆ ಮುಖ್ಯ ಕಾರಣ ರಮ್ಯ ಎಲ್ಲಿಂದಲೋ ಬಂದವರು ಎನ್ನುವ ಕಾರಣಕ್ಕೆ. ಸಿನಿಮಾಗಳಿಂದ ಪಡೆದ ಪಾಪುಲಾರಿಟಿಯ ಲಾಭ ಪಡೆದು ತನ್ನ ರಾಜಕೀಯ ಪ್ರವೇಶವನ್ನು ಕಾಂಗ್ರೆಸ್ ಮಟ್ಟಿಗೆ ಬಹು ಮುಖ್ಯ ಘಟನೆಯೇನೋ ಎನ್ನುವಂತೆ ಮಾಧ್ಯಮಗಳ ಮೂಲಕ ಬಿಂಬಿಸುವಲ್ಲಿ ರಮ್ಯ ಯಶಸ್ವಿಯಾದರು. ಅವರ ಹಿಂದೆ ಟಿವಿ ಸಂದರ್ಶಕಿಯಾದ ತೇಜಸ್ವಿನಿಯನ್ನು ಚುನಾವಣೆಗೆ ನಿಲ್ಲಿಸಿ ದೇವೇಗೌಡರಂತಹ ಪ್ರಬಲ ಸ್ಪರ್ಧಿಯನ್ನು ಸೋಲಿಸಲು ಕಾರಣಕರ್ತರಾಗಿದ್ದ ಡಿ.ಕೆ.ಶಿವಕುಮಾರ್ ಇದ್ದರು ಎನ್ನುವುದೂ ಪಕ್ಷದ ಇತರೆ ನಾಯಕರ ಅಸಮಾಧಾನಕ್ಕೆ ಕಾರಣ. ಕಾಲ ಕ್ರಮೇಣ ಚಿತ್ರನಟಿಗೆ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನಗಳು ಸಿಕ್ಕಬಹುದು. ಹಾಗೆಲ್ಲ ಆದರೆ, ಎಷ್ಟೋ ವರ್ಷಗಳಿಂದ ಊರಿನ ಹಿರಿಯರಿಗೆ ವೃದ್ಧಾಪ್ಯ ವೇತನ ಮಾಡಿಸಿ, ಗಂಗಾ-ಕಲ್ಯಾಣ ಯೋಜನೆ ಅಡಿ ಬೋರ್ ಕೊರೆಸಿ ಕರೆಂಟು ಕೊಡಿಸಲು ಓಡಾಡಿ, ಚುನಾವಣೆ ಬಂದಾಗ ಬ್ಯಾನರ್ ಕಟ್ಟಿ, ಬಾವುಟ ಹಿಡಿದು ಊರೂರು ಅಲೆದವರ ಪಾಡೇನು ಎನ್ನುವುದು ಸಹಜವಾಗಿಯೇ ಏಳುವ ಪ್ರಶ್ನೆ. ಇದೇ ಪ್ರಶ್ನೆ ಅಪ್ಪ, ಅಜ್ಜ ಮಾಡಿದ ಹೆಸರಿನ ಬಲದ ಮೇಲೆ ಪಕ್ಷ ಸೇರಿ, ಟಿಕೆಟ್ ಗಿಟ್ಟಿಸುವ ಸಂಬರ್ಭಗಳು ಬಂದಾಗೆಲ್ಲಾ ಎದುರಾಗಿದೆ.

ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಸಿನಿಮಾ ಪಾಪುಲಾರಿಟಿ ಅಥವಾ ನಾಮ ಬಲದಿಂದ ಪಕ್ಷ ರಾಜಕಾರಣದಲ್ಲಿ ಮನ್ನಣೆಗಳಿಸಿದವರಿಗೆ ಇರುವ ವ್ಯತ್ಯಾಸಗಳೆಲ್ಲಾ ಅವರು ಎದುರಿಸುವ ಮೊದಲ ಚುನಾವಣೆ ನಂತರ ಮುರಿದು ಬೀಳುತ್ತವೆ. ಮೊದಲ ಚುನಾವಣೆಯಲ್ಲಿ ಅವರು ಇತರೆ ಸಾಮಾನ್ಯ ಕಾರ್ಯಕರ್ತರಂತೆ ಪರಿಚಯಿಸಿಕೊಳ್ಳುವ ಅಗತ್ಯ ಬೀಳದೆ ಇರಬಹುದು. ಆದರೆ ನಂತರದ ಚುನಾವಣೆಗಳಲ್ಲಿ ಆತ ಅಥವಾ ಆಕೆ ಕೇವಲ ರಾಜಕಾರಣಿ. ಸಿನಿಮಾ ಖ್ಯಾತಿ, ಟಿವಿ ಆಂಕರ್ ಖ್ಯಾತಿ ಯಾವುದೂ ಲಾಭಕ್ಕೆ ಬರುವುದಿಲ್ಲ. ಅಧಿಕಾರಾವಧಿಯಲ್ಲಿ ಅವರ ನಡೆ, ನುಡಿ ಅಷ್ಟೇ ಮುಖ್ಯ.ಪಕ್ಷ ಅಥವಾ ಆಡಳಿತದಲ್ಲಿ ಮೇಲೇರಲು ಕೂಡಾ ಸಿನಿಮಾ ಜಗತ್ತಿನ ಜನಪ್ರಿಯತೆ ಸಹಾಯಕ್ಕೆ ಬರುವುದಿಲ್ಲ. ಉದಾಹರಣೆಗೆ ಅಂಬರೀಷ್ ಅಥವಾ ಸಿ.ಪಿ ಯೋಗೇಶ್ವರ ಮಂತ್ರಿ ಸ್ಥಾನ ಪಡೆದದ್ದು ಅವರು ಚಿತ್ರನಟರೆಂದಲ್ಲ. ಅದಕ್ಕೆ ಅವರ ಸೀನಿಯಾರಿಟಿ (ಅಂಬರೀಷ್) ಮತ್ತು ಪಕ್ಷಾಂತರ (ಯೋಗೇಶ್ವರ) ಕಾರಣಗಳಿದ್ದವು.

ಕರ್ನಾಟಕದಲ್ಲಿ ಚಿತ್ರನಟರು ಆಗಾಗ ರಾಜಕಾರಣ ಪ್ರವೇಶಿಸಿದ್ದುಂಟು. ಆದರೆ ಪಕ್ಕದ ರಾಜ್ಯಗಳಲ್ಲಿ ನಡೆದಿರುವಂತೆ ಯಾರೊಬ್ಬರೂ ಬಹುಕಾಲ ಅಧಿಕಾರದಲ್ಲಿಲ್ಲ. ಹಾಗೆ ಚುನಾವಣೆ ಎದುರಿಸಿ ಅಧಿಕಾರ ಹಿಡಿದವರು ತಮ್ಮ ಕ್ಷೇತ್ರದಲ್ಲಿ, ತಮಗೆ ಕೊಟ್ಟ ಜವಾಬ್ದಾರಿಯನ್ನು ಶಿಸ್ತಿನಿಂದ ಪೂರೈಸಿದವರೂ ಅಲ್ಲ. ಉದಾಹರಣೆಗೆ ಅಂಬರೀಷ್. ತಾನು ಹಿರಿಯ, ಜನಪ್ರಿಯ ನಾಯಕ ಆದರೂ ಕೇಂದ್ರದಲ್ಲಿ ಮಂತ್ರಿ ಪಟ್ಟ ಕೊಟ್ಟಿಲ್ಲ ಎಂದು ಅಸಮಾಧಾನ ಪಟ್ಟುಕೊಂಡೇ ಇದ್ದವರು, ಮಂತ್ರಿಯಾದಾಗ ಮಾಡಿದ್ದೇನು – ರಾಜೀನಾಮೆಯ ನಾಟಕ. ಅವರು ಆ ಸಂದರ್ಭದಲ್ಲಿ ತಮ್ಮ ನಡೆ ನಾಟಕ ಅಲ್ಲ ಎಂದು ಎಷ್ಟು ಬಾರಿ ಹೇಳಿದರೂ ಅದು ನಾಟಕವೇ ಆಗಿತ್ತು ಎನ್ನಲು ಕಾರಣವೆಂದರೆ ಅವರು ರಾಜೀನಾಮೆಯನ್ನು ಅಂಗೀಕರಣವಾಗುವಂತೆ ನೋಡಿಕೊಳ್ಳಲೇ ಇಲ್ಲ. ತಾಂತ್ರಿಕವಾಗಿ ಮಂತ್ರಿ ಸ್ಥಾನದಲ್ಲಿ, ಸಂಸದರಾಗಿ ಮುಂದುವರಿದರು. ಯಾರಾದರೂ ಕೇಳಿದರೆ ನಾನಾಗಲೇ ರಾಜೀನಾಮೆ ಕೊಟ್ಟಾಗಿದೆ ಎನ್ನುತ್ತಿದ್ದರು. ಆದರೆ ಅದೇ ಸಂದರ್ಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮತ ಹಾಕಲು ಬಂದರು. ನೀವು ರಾಜೀನಾಮೆ ನೀಡಿದ್ದೀರಲ್ಲ ಎಂದು ಪತ್ರಕರ್ತರು ಕೇಳಿದಾಗ ಒಂದಿಷ್ಟೂ ಭಿಡೆ ಇಲ್ಲದೆ ‘ನಾನಿನ್ನೂ ಸದಸ್ಯ, ಇಲ್ಲಿದೆ ನೋಡಿ ಐಡೆಂಟಿಟಿ ಕಾರ್ಡ್’ ಎಂದು ಕೆಮರಾ ಮುಂದೆ ಕೈ ತೋರಿದರು.

ಬಹಳ ಕಾಲ ರಾಜಕಾರಣದಲ್ಲಿ ಬೇರು ಮಟ್ಟದಿಂದ ಕೆಲಸ ಮಾಡಿದವರಿಗೆ ಇಂತಹ ನಡೆವಳಿಕೆಗಳು ಬೇಸರ ಹುಟ್ಟಿಸುತ್ತವೆ. ಸಿನಿಮಾದವರು ಸೀರಿಯಸ್ಸಾಗಿ ರಾಜಕಾರಣ ಮಾಡುವುದು ಯಾವಾಗ? ಮತ್ತೊಬ್ಬ ನಟ ಶಶಿಕುಮಾರ್ ದೂ ಇದೇ ನಡವಳಿಕೆ. ಒಂದು ಚಿತ್ರದ ಶೂಟಿಂಗ್ ಗೆಂದು ಚಿತ್ರದುರ್ಗದ ಹತ್ತಿರ ಬಂದಿದ್ದ ಸಮಯದಲ್ಲಿಯೇ ಜೆ.ಎಚ್ ಪಟೇಲರು ಫೋನ್ ಮಾಡಿ ನೀನು ಚಿತ್ರದುರ್ಗ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸು ಎಂದರು. ಶಶಿಕುಮಾರ್ ನಾಮಪತ್ರ ಸಲ್ಲಿಸದರು. ಗೆದ್ದೂ ಬಿಟ್ಟರು. ಅಲ್ಲಿವರೆಗೆ ಆ ನಟ ಜೆಡಿ(ಯು) ಸೇರಿರಲಿಲ್ಲ. ಚಿತ್ರನಟನೆಂಬ ಖ್ಯಾತಿ ಮತ್ತು ಮೂರು ಬಾರಿ ಒಂದೇ ವ್ಯಕ್ತಿಯನ್ನು ಆರಿಸಿದ್ದ ಮತದಾರರು ಹೊಸಮುಖಕ್ಕೆ ಮಣೆ ಹಾಕಿದರು. ಮೇಲಾಗಿ ಜಾತಿಬೆಂಬಲವೂ ಇತ್ತು. ಆದರೆ ನಂತರದ ದಿನಗಳಲ್ಲಿ ಈ ಚಿತ್ರನಟನಿಗೆ ಅದೇ ಖ್ಯಾತಿ ಉಳಿಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತರು. ಸಂಸದರಾಗಿದ್ದ ವೇಳೆ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಖರ್ಚು ಮಾಡಿ ಅಲ್ಲಲ್ಲಿ ಸಮುದಾಯ ಭವನ ಕಟ್ಟಿಸಿ ಕಮಿಷನ್ ಪಡೆದರು ಎಂಬ ಆರೋಪಗಳಿವೆ. ಆದರೆ ಅವರೆಂದೂ ಚಿತ್ರದುರ್ಗದ ಜನತೆ ಅನುಭವಿಸುತ್ತಿರುವ ನೀರಾವರಿ ಸಮಸ್ಯೆ ಬಗ್ಗೆ ಗಂಭೀರವಾಗಿ ಮಾತನಾಡಲೇ ಇಲ್ಲ.

ಇನ್ನು ಜಗ್ಗೇಶ್. ಕಾಡಿಬೇಡಿ ಕಾಂಗ್ರೆಸ್ ಟಿಕೆಟ್ ಪಡೆದವರು, ಬೇಡಿ-ಕಾಡಿ ಗೆದ್ದರು. ಆದರೆ ಈ ಕಾಮಿಡಿ ನಟನಿಗೆ ಮತದಾರನ ಬಗ್ಗೆ ಗೌರವ ಇರಲಿಲ್ಲ. ಯಡಿಯೂರಪ್ಪ, ಅಶೋಕ್ ತಮ್ಮ ಕ್ಷೇತ್ರ ಉದ್ಧಾರ ಮಾಡ್ತಾರೆ ಅಂದ್ರು ಎನ್ನುವ ಕಾರಣಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಇಂತಹವರಿಂದ ಜನರು ತಾನೇ ಏನು ನಿರೀಕ್ಷಿಸಿಯಾರು? ಈಗ ರಮ್ಯ ರಾಜಕೀಯ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಒಂದು ಪಕ್ಷದ ಕಾರ್ಯಕರ್ತೆ ಎಂದರೆ, ನಾಯಕಿ ಆದರೆ ಅಥವಾ ಜನಪ್ರತಿನಿಧಿ ಯಾದರೆ ದಿನದ ಬಹುಕಾಲ ಜನರ ಮಧ್ಯೆ ಇರಬೇಕು. ಹಿರಿಯ ನಾಯಕರ ಜೊತೆ ಸಭೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕ್ಷೇತ್ರದಲ್ಲಿ ಪಕ್ಷ ಸೋತರೆ ಹೊಣೆ ಹೊರಬೇಕು. ಮಗನ ಸ್ಕೂಲ್ ಅಡ್ಮಿಷನ್ ಶಿಫಾರಸ್ಸು ಕೇಳುವವರಿಂದ ಹಿಡಿದು, ರಸ್ತೆ ಮೂಲೆಯಲ್ಲಿ ಕಸದ ಗುಂಡಿ ಕ್ಲೀನ್ ಮಾಡಿಲ್ಲ ಎಂದು ದೂರುವವರನ್ನೂ ತಾಳ್ಮೆಯಿಂದ ಕೇಳಬೇಕು. ಏಕೆಂದರೆ ಡಿ.ಕೆ.ಶಿವಕುಮಾರ್ ಈಗಾಗಲೇ ಸೂಚನೆ ಕೊಟ್ಟಿದ್ದಾರೆ, ಅವರು ರಮ್ಯ ಅವರನ್ನು ಒಕ್ಕಲಿಗ ಡಾಮಿನೆಂಟ್ ಕ್ಷೇತ್ರದಲ್ಲಿ ಲೋಕಸಭೆಗೆ ನಿಲ್ಲಿಸುತ್ತಾರಂತೆ. ಬೆಂಗಳೂರಿನ ಯಾವುದೋ ಒಂದು ಕ್ಷೇತ್ರದಲ್ಲಿ ಮುಂದೆ ನಿಂತರೆ ಅಚ್ಚರಿಯೇನಿಲ್ಲ. (ಅವರು ಸದ್ಯ ಶಾಂತಿನಗರ ಬ್ಲಾಕ್ ಸದಸ್ಯೆ).

ರಾಜಕಾರಣ ರಜೆಕಾಲದಲ್ಲಿ ಹೋಗಿ ಬರುವ ರಮ್ಯತಾಣವಲ್ಲ. ಅದು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಅಪೇಕ್ಷಿಸುವ ಕ್ಷೇತ್ರ. ರಮ್ಯ ಅವರಾದರೂ ಗಂಭೀರ ರಾಜಕಾರಣಿಯಾಗಲಿ.

Smoke rising from vehicle set ablaze during the riots around the viewing of Rajkumar.

Rajkumar’s fans were mostly Bangalore’s underclass – Wikileaks

This is what Chennai Consulate of United States thought and reported to their bosses in the US when Rajkumar died and violence errupted in Bangalore:

SUBJECT: VIOLENCE IN BANGALORE FOLLOWS FILM STAR’S DEATH

1. (U) SUMMARY: Street violence rocked Bangalore on April 12 and 13, following the death of Kannada language film superstar Rajkumar. Widespread street riots left eight persons dead and more than 150 injured. The city’s famed information technology industry was forced to shut down operations and now fears a loss of customer confidence.
END SUMMARY

—————————–
ACTOR’S DEATH SPARKS VIOLENCE
—————————–

2. (U) Kannada movie star Rajkumar, aged 77, died at 1:50 PM on April 12, 2006 following a cardiac arrest. The actor, who had appeared in over 200 Kannada movies and was known as a champion of the Kannada language, had a fan following drawn mostly from Bangalore’s underclass. As news of Rajkumar’s death spread, his emotional fans hit the streets, forcing shops and business establishments to draw their shutters. As the afternoon progressed, the mourners became more emotional and began stoning state-owned Bangalore Municipal Transport Corporation buses as well as private cars and some shops and office buildings. City police adopted a low profile which encouraged the violence that left scores injured. The state government closed schools and announced a two day mourning period. Bangalore’s famed information technology industry shut down operations early on April 12 and declared April 13, 2006 a holiday.

——————————————— —-
FUNERAL PROCESSION LEAVES DESTRUCTION IN ITS WAKE
——————————————— —-

3. (SBU) Violence continued following the actor’s funeral procession on April 13 as fans attempted to get close to the cortege. Unlike on the previous day, police reacted aggressively. “We opened fire on 12 occasions,” Mr. Subash Bharani, Additional Director General of Police Law and Order, told Post. A total of eight persons including a training constable died in the violence and 47 police officers received injuries that required hospitalization. In addition, 10 police vehicles were destroyed. Bharani estimated that beyond the injured police officers, 120 members of the general public sustained injuries.

——————————–
VIOLENCE DENTS BANGALORE’S IMAGE
——————————–

4. (U) The overall cost to Bangalore of the violence is estimated at $160 million, according to newspaper reports. None of Bangalore’s information technology companies reported any physical damage but all were forced to shut down their operations during the violence. Infosys CFO T.V. Mohandas Pai estimated that the city’s software firms lost $40 million in revenues during the shutdown as well as some of the luster from their image. “Bangalore’s image took a beating,” Mr. Ashok Soota, CEO, MindTree Consulting and former President of the Confederation of Indian Industry told Post. He believes that customers may begin asking companies to have backup establishments in other locations, a requirement that would hurt profitability.

———————————-
NEW CHIEF MINISTER WAS SLOW TO ACT
———————————-

5. (SBU) New Karnataka Chief Minister Kumarasamy’s administration, caught on the wrong foot by the violence, responded belatedly to the crisis and appears not to have communicated effectively with the police leaders. “There clearly was a breakdown in communication between the police and the political executive,” R.V. Deshpande, Congress leader and former state Industries Minister, told Post.

—————————–
IMPACT ON BANGALORE”S FUTURE?
—————————–

6. (SBU) COMMENT: Already beset by infrastructure growing pains which are causing some companies to think twice about expansion in the city, Bangalore now faces another blow to its image. How the state government and industry leaders react will be important determiners of Bangalore’s future as India’s information technology capital. END COMMENT

(Courtesy: wikileaks.org)

ಕನ್ನಡ ಚಿತ್ರರಂಗದ ‘ಒಳ ಮನಸ್ಸು’ ಅನಾವರಣಗೊಂಡಿದೆ

ಭೂಮಿ-ಭಾನು

ಕನ್ನಡ ಚಿತ್ರರಂಗ ಪುರುಷ ಪ್ರಾಧಾನ್ಯ ಕ್ಷೇತ್ರ ಎನ್ನುವುದನ್ನು ಕನ್ನಡ ನಿರ್ಮಾಪಕರು ನಿರೂಪಿಸಿದ್ದಾರೆ. ವಿಜಯಲಕ್ಷ್ಮಿ ಆರೋಪ ಆಧಾರದ ಮೇಲೆ ನಿರ್ಮಾಪಕರ ಸಂಘ ನಟಿ ನಿಖಿತಾ ಅವರನ್ನು ಮೂರು ವರ್ಷಗಳ ಕಾಲ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸಲು ಅವಕಾಶ ನೀಡಬಾರದೆಂದು ನಿರ್ಧಿರಿಸಿದೆ. ದರ್ಶನ್ ಕುಟುಂಬ ಕಲಹಕ್ಕೆ ಆತನಿಗೆ ನಟಿ ನಿಖಿತಾ ಜೊತೆ ‘ಸಖ್ಯ’ (?) ಕಾರಣ ಎಂದು ಕೇಳಿ ಬರುತ್ತಿದ್ದ ಗುಸುಗುಸುಗೆ ಈಗ ನಿರ್ಮಾಪಕ ಸಂಘದ ನಿರ್ಧಾರದಿಂದ ‘ಹುಸಿ ಅಧಿಕೃತತೆ’ ಸಿಕ್ಕಿಬಿಟ್ಟಿದೆ. ಇನ್ನುಮುಂದೆ ಯಾರು ಬೇಕಾದರೂ ನಿಖಿತ ಬಗ್ಗೆ ಕೇವಲವಾಗಿ ಮಾತನಾಡಬಹುದು!

ಕನ್ನಡ ಚಿತ್ರರಂಗ ಎಂತಹ ಮೂಲಭೂತವಾದಿ, ಅಜ್ಷಾನಿ, ದುಷ್ಟ, ಕ್ರೂರ ನಿರ್ಮಾಪಕರ ಕೈಯಲ್ಲಿ ಬಳಲುತ್ತಿದೆ ಎನ್ನವುದಕ್ಕೆ ಇದು ಸಣ್ಣ ಉದಾಹರಣೆ.

ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ ಟಿವಿ ವಾಹಿನಿ ಚರ್ಚೆಯೊಂದರಲ್ಲಿ ಮಾತನಾಡುತ್ತ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ವಿಚಿತ್ರ ನೋಡಿ, ಅದೇ ದೂರನ್ನು ಮಾನ್ಯ ವಿಜಯಲಕ್ಷ್ಮಿಯವರು ಅದೇ ಸಂಜೆ ಹೊತ್ತಿಗೆ ಹಿಂಪಡೆದರು. ತಾವು ಬಾತ್ ರೂಂನಲ್ಲಿ ಬಿದ್ದದ್ದು ಎಂದು ನ್ಯಾಯಾಧೀಶರ ಮುಂದೆ ಹೇಳಿದರು. ಹಾಗಾದರೆ ವಿಜಯಲಕ್ಷ್ಮಿ ಬಾತ್ ರೂಂನಲ್ಲಿ ಬೀಳುವುದಕ್ಕೂ, ನಿಖಿತ ಕಾರಣವಾ?

ಮುನಿರತ್ನ ಮುಂದುವರೆದು ಮಾತನಾಡುತ್ತ ದರ್ಶನ್ ತುಂಬಾ ಒಳ್ಳೆಯವರು. ಅವರ ಜೊತೆ ಚಿತ್ರ ಮಾಡುವಾಗ ನಮಗೆ ಯಾವುದೇ ಕಿರಿಕಿರಿ ಇರುವುದಿಲ್ಲ ಎಂದು ದರ್ಶನ್ ಗೆ ಪ್ರಶಂಸ ಪತ್ರ ನೀಡಿದರು. ಸಿಗರೇಟಿನಿಂದ ಹೆಂಡತಿಯನ್ನು ಸುಟ್ಟ ನಟ, ಕುಡಿದು ಹೆಂಡತಿಯನ್ನು ಹೊಡೆಯುವ ನಟ (ಪೊಲೀಸ್ ಗೆ ನೀಡಿದ ಹೇಳಿಕೆಯಲ್ಲಿ ದರ್ಶನ್ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ) ಇವರಿಗೆ ಒಳ್ಳೆಯವನು.

ಮತ್ತೊಬ್ಬ ನಿರ್ಮಾಪಕ ಸೂರಪ್ಪ ಬಾಬು ಸಂಘದ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ ‘ನಮ್ಮ ಮನೆಯ ಹೆಣ್ಣು ಮಗಳ ಹಿತ ಮುಖ್ಯ’ ಎನ್ನುತ್ತಾರೆ. ಅವರು ‘ನಮ್ಮ ಮಗಳ ಹೆಣ್ಣು ಮಗಳು’ ಎನ್ನುತ್ತಿರುವುದು ವಿಜಯಲಕ್ಷ್ಮಿ ಬಗ್ಗೆ. ಅವರು ಮಾತು ಮುಂದುವರೆಸುತ್ತ ‘ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಾಗ ಅನೇಕರು ಟೀಕೆ ಮಾಡುವುದು ಸಹಜ. ಕೆಲವು ಬಹಿರಂಗ ಪಡಿಸಲಾಗದ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದರು.

ಇದೇ ಚರ್ಚೆಯಲ್ಲಿ ನಟಿ ಸುಷ್ಮಾ ಒಂದು ಸೂಕ್ತ ಪ್ರಶ್ನೆ ಎತ್ತಿದರು. ನಿಖಿತ ಏನು ದರ್ಶನ್ ನ್ನು ರೇಪ್ ಮಾಡಿಲ್ಲ. ದರ್ಶನ್ ಏನು ಸಣ್ಣ ಹುಡುಗನಲ್ಲ. ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣ ಆತನೇ. ಆದರೆ ಶಿಕ್ಷೆ ಬೇರೆಯವರಿಗೆ ಕೊಡ್ತೀರಲ್ಲ? ನಿರ್ಮಾಪಕರಿಂದ ಈ ಪ್ರಶ್ನೆಗೆ ಉತ್ತರ ಇಲ್ಲ.

ವಿಜಯಲಕ್ಷ್ಮಿ ಮೊದಲು ಗಂಡ ಹೊಡೆದ, ಸಿಗರೇಟಿನಿಂದ ಸುಟ್ಟ, ಗನ್ ತೋರಿಸಿ ಹೆದರಿಸಿದ ಎಂದೆಲ್ಲಾ ದೂರು ಕೊಟ್ಟರು. ಅವಲ್ಲಿ ಕೆಲವನ್ನು ಮಾಡಿದ್ದಾಗಿ ದರ್ಶನ್ ಒಪ್ಪಿಕೊಂಡದ್ದೂ ಆಗಿದೆ (ವರದಿಗಳ ಪ್ರಕಾರ). ಆದರೆ ಆತನಿಗೆ ಶಿಕ್ಷೆ ಆಗದಂತೆ ತಡೆಯಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಅಂಬರೀಷ್ ಸೇರಿದಂತೆ ಅನೇಕರು ಮಾಧ್ಯಮದ ಎದುರು ಮಾತನಾಡುತ್ತಾ ‘ಗಂಡ-ಹೆಂಡತಿ ಮನಸ್ತಾಪ ಎಲ್ಲಾ ಮನೆಗಳಲ್ಲೂ ಕಾಮನ್’ ಎಂದರು. ಹೌದಾ, ಹೀಗೆ ಹೇಳಿಕೆ ನೀಡಿದವರೆಲ್ಲರ ಮನೆಯಲ್ಲೂ ಹೀಗೆ ನಡೆಯುತ್ತಿದೆಯಾ? ಅವರೆಲ್ಲಾ ಹೆಂಡತಿಗೆ ಸಿಗರೇಟಿನಿಂದ ಸುಡುತ್ತಾರಾ? ಕಿವಿ ಹರಿಯುತ್ತಾರ? ಅಥವಾ ಆಗಾಗ ಅವರ ಹೆಂಡತಿಯರು ಬಚ್ಚಲು ಮನೆಯಲ್ಲಿ ಬೀಳುತ್ತಿರುತ್ತಾರ?

ಕನ್ನಡ ಚಿತ್ರರಂಗದ ಒಳ ಮನಸ್ಸು ಈ ಘಟನೆಯಿಂದ ಅನಾವರಣಗೊಳ್ಳುತ್ತಿದೆ.

ಆರಕ್ಷಣ್ ಸಿನಿಮಾ ಮತ್ತು ಶಿಕ್ಷಕರ ದಿನ

“ಇನ್ನುಮುಂದೆ ನೀನು ಶಿಕ್ಷಣ ಕ್ಷೇತ್ರದಿಂದ ಹೊರಗೆ. You will remain a zero” – ಎಂಬರ್ಥದ ಟೀಕೆಗಳಿಂದ ಬೇಸತ್ತ ಪ್ರಿನ್ಸಿಪಾಲ್ ಉಚಿತವಾಗಿ ಬಡ ಮತ್ತು ದಲಿತ ಮಕ್ಕಳಿಗೆ ಪಾಠ ಹೇಳಲು ಆರಂಭಿಸುತ್ತಾರೆ. ಅವರ ಪ್ರಯತ್ನ ಬೃಹತ್ ಪ್ರಮಾಣದ ಯಶಸ್ಸು ನೀಡುತ್ತದೆ. ಸಾವಿರಾರು ರೂಗಳನ್ನು ತೆತ್ತು ಕೋಚಿಂಗ್ ಪಡೆಯಲಾಗದ ನೂರಾರು ವಿದ್ಯಾರ್ಥಿಗಳು ಇವರ ಪ್ರಯತ್ನದ ಸದುಪಯೋಗ ಪಡೆಯುತ್ತಾರೆ. ಇದು ಆರಕ್ಷಣ ಸಿನಿಮಾದ ಕತೆ.

ಅದು ಮೇಲ್ನೋಟಕ್ಕೆ ತಿಳಿಯುವಂತೆ ‘highly cinematic’ ಎಂದು ಹೇಳಿಬಿಡಬಹುದಾದರೂ, ಈ ನೆಲದ ಶಿಕ್ಷಕರಿಗೆ ಉತ್ತಮ ಸಂದೇಶ, ಪ್ರೇರಣೆ ಇಲ್ಲಿದೆ ಎನ್ನುವುದನ್ನು ಒಪ್ಪಲೇಬೇಕು. ಸೋಮವಾರ (ಸೆ.5) ಶಿಕ್ಷಕರ ದಿನ. ಆ ಕಾರಣ ಆ ಸಂದೇಶಕ್ಕೆ ಮಹತ್ವ ಇದೆ. ಈ ಚಿತ್ರದಲ್ಲಿ ಪ್ರಿನ್ಸಿಪಾಲ್ (ಅಮಿತಾಬ್ ಬಚ್ಚನ್) ಚೇಂಬರ್ ನಲ್ಲಿ ಶಿಕ್ಷಕರ ದಿನಾಚರಣೆಗೆ ಕಾರಣರಾದ ಸರ್ವೆಪಲ್ಲಿ ರಾಧಾಕೃಷ್ಣ ರ ಚಿತ್ರಪಟ ಇದೆ ಅಮಿತಾಬ್ ಬಚ್ಚನ್ ಮಾತನಾಡುವ ದೃಶ್ಯಗಳಲ್ಲಿ ಹಿನ್ನೆಲೆಯಲ್ಲಿ ರಾಧಾಕೃಷ್ಣರ ಚಿತ್ರಪಟ ಮತ್ತೆ ಮತ್ತೆ ಕಾಣುತ್ತದೆ. ಚಿತ್ರ ನಿರ್ದೇಶಕರು ಆ ಚಿತ್ರಪಟದ ಮೂಲಕ ಶಿಕ್ಷಕ-ವೀಕ್ಷಕರಿಗೆ ಏನನ್ನೋ ಹೇಳಲು ಬಯಸುತ್ತಾರೆ ಎನ್ನುವುದು ಸ್ಪಷ್ಟ.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಸರಕಾರಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಉತ್ತಮ ಸಂಬಳ ಪಡೆಯುತ್ತಿದ್ದಾರೆ. (ಆಫ್ಕೋರ್ಸ್ ‘ಉತ್ತಮ’ ಎನ್ನುವುದು ಸಾಪೇಕ್ಷ). ಆದರೆ ಜನರ ಮಧ್ಯೆ ಚಾಲ್ತಿಯಲ್ಲಿರುವ ಒಂದು ಮಾತು ಶಿಕ್ಷಕರು, ಅದರಲ್ಲೂ ಪ್ರಥಮ ದರ್ಜೆ ಕಾಲೇಜುಗಳ ಬಹುತೇಕ ಉಪನ್ಯಾಸಕರು, ತಮ್ಮ ಪಗಾರಕ್ಕೆ ನ್ಯಾಯ ಒದಗಿಸುವುದಿಲ್ಲ. ಕೊಳ್ಳೇಗಾಲ, ಹುಮ್ನಾಬಾದ್, ಕೊರಟಗೆರೆ – ಇಂತಹ ಸಣ್ಣ ಊರುಗಳಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹತ್ತಿರಹತ್ತಿರ ಒಂದು ಲಕ್ಷ ರೂ ಸಂಬಳ ಪಡೆಯುತ್ತಾರೆ ಎಂದರೆ ಬೇರೆಯವರು ಕಣ್ಣು ಕುಕ್ಕುವುದು ಸಹಜ. ಆದರೆ ಅದೇ ಐಐಟಿ ಅಥವಾ ಐಸೆಕ್ ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರ ಬಗ್ಗೆ ಇಂತಹ ಧೋರಣೆ ಕಡಿಮೆ.

ಅಷ್ಟು ಸಂಬಳ ಪಡೆದರೂ ದಿನಕ್ಕೆ ಎರಡೋ-ಮೂರೋ ಗಂಟೆ ಪಾಠ ಮಾಡುತ್ತಾರಷ್ಟೆ. ಅವರ ಓದು, ಅಧ್ಯಯನ ಸದೃಢ ಯುವ ಶಕ್ತಿಯನ್ನು ನಿರ್ಮಿಸುವಲ್ಲಿ ಸೋತಿದೆ ಎನ್ನುವ ಆರೋಪಗಳು ಆಗಾಗ್ಗೆ ಕೇಳಿ ಬರುತ್ತವೆ. ಹಾಗಾದರೆ ಶಿಕ್ಷಕರು ಏನು ಮಾಡಬೇಕು? ಈ ಪ್ರಶ್ನೆಗೆ ‘ಆರಕ್ಷಣ’ ಚಿತ್ರದಲ್ಲಿ ಒಂದು ಸಲಹೆ ಇದೆ. ಕಲಿಕೆಯಲ್ಲಿ ಹಿಂದುಳಿದ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬಹುದು.

ಕೊನೆಮಾತು: ಇತ್ತೀಚೆಗೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮನೆ ಕಟ್ಟಿದರು. ಕಾರನ್ನೂ ಕೊಂಡರು. ಕೊಲೀಗ್ ಒಬ್ಬರು ‘ನೀವ್ಯಾಕೆ ಕಂಪೂಟರ್ ತಗೋಬಾರದು? ನಿಮ್ಮ ಅಧ್ಯಯನಕ್ಕೂ, ಮಕ್ಕಳಿಗೂ ಉಪಯೋಗ ಆಗುತ್ತೆ. ‘ ಎಂದರು.  ಇದಕ್ಕೆ ಉತ್ತರಿಸಿದ ಪ್ರಾಧ್ಯಾಪಕರು, “ಮಕ್ಕಳ ಕಣ್ಣಿಗೆ ಕಂಪ್ಯೂಟರಿಂದ ತೊಂದರೆ ಆಗುತ್ತೆ ಅದಕ್ಕೆ ಲೇಟ್ ಮಾಡಿದೆ” ಎಂದರು. ನಗಬೇಕೋ, ಅಳಬೇಕೋ ನೀವೇ ಹೇಳಿ.

ಮುಂಗಾರು ಮಳೆ ಹೀರೋ ಕೊಡಗು ಹುಡುಗಿಯನ್ನು ಏಕೆ ಮದುವೆಯಾಗಲಿಲ್ಲ..?

1962ರಲ್ಲಿ ಬಿಡುಗಡೆಯಾದ ಕಿತ್ತೂರು ಚೆನ್ನಮ್ಮ ಚಿತ್ರ ಹೆಸರೇ ಹೇಳುವಂತೆ ಬೆಳವಾಗಿ ಭಾಗದ ಕಿತ್ತೂರಿನ ರಾಣಿ ಚೆನ್ನಮ್ಮನ ಸಾಹಸಗಾಥೆ ಹೇಳುವ ಚಿತ್ರ. ಆ ಚಿತ್ರದಲ್ಲಿ ಚೆನ್ನಮ್ಮ ಪಾತ್ರಧಾರಿ ಮಾತನಾಡುವುದು ಹಳೇ ಮೈಸೂರು ಭಾಗದ ಕನ್ನಡವನ್ನು. ಆದರೆ ಚೆನ್ನಮ್ಮನಿಗೆ ಮೋಸ ಮಾಡಿ ಬ್ರಿಟಿಷರಿಗೆ ನೆರವು ನೀಡುವ ಮಂತ್ರಿಗಳ ಪಾತ್ರಧಾರಿಗಳದು ಬೆಳಗಾವಿ ಕನ್ನಡ.

ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರ ವಿಮರ್ಶಕ ಎಂ.ಕೆ ರಾಘವೇಂದ್ರ ಕನ್ನಡ ಸಿನಿಮಾಗಳ ಟಾರ್ಗೆಟ್ ಆಡಿಯನ್ಸ್ ಕೇವಲ ಹಳೇ ಮೈಸೂರು ಭಾಗದ ಜನರಷ್ಟೇ ಪ್ರೇಕ್ಷಕರು ಎಂದು ವಿಶ್ಲೇಷಿಸುವಾಗ ಈ ಮೇಲಿನ ಉದಾಹರಣೆ ನೀಡುತ್ತಾರೆ.

ಹಳೇ ಮೈಸೂರು ಅಂದರೆ – ಬೆಂಗಳೂರು, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಮತ್ತು ಶಿವಮೊಗ್ಗ. ಕನ್ನಡ ಸಿನಿಮಾ ಹಿರೋಗಳೆಲ್ಲ ಸಾಮಾನ್ಯವಾಗಿ ಇದೇ ಭಾಗದವರಾಗಿರುತ್ತಾರೆ. ಅವರ ಜೊತೆಗಾತಿಯರೂ ಸಹಜವಾಗಿ ಇದೇ ಭಾಗಕ್ಕೆ ಸೇರಿದವರು. ಹಳೇ ಮೈಸೂರು ಭಾಗದ ಹೀರೋಗೆ ರಾಯಚೂರು ಅಥವಾ ಬೆಳಗಾವಿಯ ಹುಡುಗಿ ಜೊತೆ ಸರಸ ಸಾಧ್ಯವಿಲ್ಲ.

ಮುಂಗಾರು ಮಳೆ ಹಿರೋ ಕೊಡಗು ಮೂಲದ ಹುಡುಗಿಯನ್ನು ಮದುವೆಯಾಗದಿರಲು ಇದೇ ಕಾರಣಕ್ಕೆ. ಮುಂದುವರೆದು ರಂಗದೇ ಬಸಂತಿ ಚಿತ್ರದಲ್ಲಿ ಅಮೀರ್ ಖಾನ್ ಕೂಡಾ ವಿದೇಶಿ ಹುಡುಗಿಯನ್ನು ಮದುವೆಯಾಗದೇ ಉಳಿಯಲು ಇಂತಹದೇ ಒಂದು ಕಾರಣಕ್ಕೆ!

ಇಂತಹದೇ ಹೊಸ ಹೊಳಹುಗಳಿಗಾಗಿ ರಾಘವೇಂದ್ರ ಅವರ ಸಂದರ್ಶನವನ್ನು Frontline ನಲ್ಲಿ ಓದಿ. ವಿಖಾರ್ ಅಹ್ಮದ್ ಸಯೀದ್ ಸಂದರ್ಶನ ನಡೆಸಿದ್ದಾರೆ. ಓದಿದ ನಂತರ ಸಿನಿಮಾ ನೋಡುವ ನಿಮ್ಮ ಬಗೆಯಲ್ಲಿ ಸ್ವಲ್ಪವಾದರೂ ಬದಲಾವಣೆ ಖಂಡಿತ.

photo courtesy – indianauteur.com