Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಅತಿಯಾದ ಮೊಬೈಲ್ ಬಳಕೆ ನಮ್ಮ ಗ್ರಹಿಕೆಗಳನ್ನು ಕೊಲ್ಲುತ್ತದೆ..


– ಡಾ.ಎಸ್.ಬಿ. ಜೋಗುರ


ಬಾಲ್ಯದಲ್ಲಿ ನಮ್ಮ ಇಡೀ ಊರಲ್ಲಿ ಹತ್ತು ದೂರವಾಣಿ ಸಂಪರ್ಕಗಳಿರುವ ಮನೆಗಳಿದ್ದರೆ ಹೆಚ್ಚಿತ್ತು. ನಮ್ಮೂರು ಬಿಜಾಪುರ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದರೂ ಪರಿಸ್ಥಿತಿ ಹಾಗಿತ್ತು. ಯಾವುದಾದರೂ ಅರ್ಜಂಟ್ ಸುದ್ಧಿಗಳನ್ನು ತಲುಪಿಸಬೇಕಿದ್ದರೆ ಒಂದೋ ಟೆಲಿಗ್ರಾಮ್ ಕಳುಹಿಸಬೇಕು, ಇಲ್ಲವೇ ನಮ್ಮ ಒಣಿಯಲ್ಲಿರುವ ಯಾರದೋ ಒಂದು ಶ್ರೀಮಂತ ಕುಟುಂಬದ ದೂರವಾಣಿ ಸಂಖ್ಯೆಯನ್ನು ಅವಲಂಬಿಸಬೇಕಿತ್ತು. ಆ ಶ್ರೀಮಂತ ಕುಟುಂಬ ಹತ್ತಾರು ಕಾರಣಗಳಿಗಾಗಿ ಓಣಿಯವರಿಗೆ ಬೇಡವಾಗಿದ್ದರೂ ಅವರ ಮನೆಯಲ್ಲಿ ದೂರವಾಣಿ ಇದೆ ಎನ್ನುವ ಕಾರಣಕ್ಕೆ ಆತ ಬೇಕಿರುತ್ತಿದ್ದ. ಯಾವುದೋ ಒಂದು ಕರೆ ಬಂದರೆ ಅವರು ನಮ್ಮ ಮನೆಗಳಿಗೆ ಹೇಳಿ ಕಳುಹಿಸುತ್ತಿದ್ದರು. ನಮ್ಮ ಮನೆಯವರು ಅಲ್ಲಿ ಹೋಗಿ ಮತ್ತೆ ಬರುವ ರಿಂಗಣಕ್ಕಾಗಿ ಕಾದು ಕುಳಿತುಕೊಳ್ಳಬೇಕಿತ್ತು. ಅದಾಗಲೇ ಫೋನ್‌ನಲ್ಲಿ ಮಾತಾಡಲು ಬಂದವರು ಅರ್ಧ ಹೈರಾಣಾಗಿ ಹೋಗಿರುತ್ತಿದ್ದರು. ಆಗ ಫೋನ್ ಮಾಡುವದೆಂದರೆ ಏನಾದರೂ ಆಪತ್ತಿನ ವಿಷಯಗಳನ್ನು ತಿಳಿಸಲೆಂದೇ ಹಾಗೆ ಕರೆ ಮಾಡಲಾಗುತ್ತಿತ್ತು. ಕೊನೆಗೂ ನಡುಗುವ ಕೈಯಲ್ಲಿಯೇ ಫೋನನ್ನು ಎತ್ತಿ ಮಾತನಾಡಿ ಆ ಮನೆಯವರಿಗೆ ‘ನಿಮಗೆ ತೊಂದರೆ ಕೊಟ್ಟಿವಿ’ ಎನ್ನುತ್ತಲೇ ನಡೆಯುವದಿತ್ತು. ಕಾಲ ಬದಲಾಗುತ್ತಾ ಬಂತು ಮನೆಗೊಂದು ದೂರವಾಣಿ ಸಂಪರ್ಕ ಬಂತು, ಕಿಸೆಗೊಂದು ಮೊಬೈಲ್ ಬಂತು. ಒಂದೇ ಮೊಬೈಲ್ ಲ್ಲಿ ಎರಡೆರಡು, ಮೂರ್ಮೂರು ಸಿಮ್ ಹಾಕಿ ವ್ಯವಹರಿಸುವ ಮೊಬೈಲ್ ಗಳು ಬಂದವು. ನೀವು ತೀರಾ ಖಾಸಗಿಯಾಗಿರುವ ಕೆಲಸದಲ್ಲಿರುವಾಗಲೂ.. ಸ್ಥಳದಲ್ಲಿರುವಾಗಲೂ.. ಮಲಗಿ ನಿದ್ರಿಸುವಾಗಲೂ ಮೊಬೈಲ್ ರಿಂಗಣಿಸುವುದು ತಪ್ಪುವದಿಲ್ಲ. ಯಾವುದಾದರೂ ಕಾರ್ಯಕ್ರಮಗಳಲ್ಲಿ ಮೊಬೈಲ್ ರಿಂಗಣಿಸಿದರೆ ಸಾಕು ಆ ಇಡೀ ಸಭೆಯಲ್ಲಿರುವವರೆಲ್ಲಾ ಅವನೆಡೆಗೆ ಹೊರಳಿ ಮನಸಿನಲ್ಲಿಯೇ ‘ಸೈಲೆಂಟ್ ಇಡಬಾರದೇನೋ ಅಜ್ಞಾನಿ’ ಎಂದು ಬೈಯುವಂತೆ ಮುಖ ಸಿಂಡರಿಸಿ ನೋಡುತ್ತಾರೆ. ನನ್ನ ಬಳಿ ಮೊಬೈಲ್ ಇದೆ ಎನ್ನುವುದು ಈಗ ಅದು ನನ್ನ ಪಾಲಿಗೆ ಮಾತ್ರ ಕಿರಿಕಿರಿಯಾಗಿರದೇ ನನ್ನ ಸುತ್ತಮುತ್ತಲೂ ಇರುವವರಿಗೂ ಕಿರಕಿರಿಯಾಗಿರುತ್ತದೆ ಎನ್ನುವದಂತೂ ಸತ್ಯ.

ಈ ಮೊಬೈಲ್ ಎನ್ನುವ ಪುಟ್ಟ ಉಪಕರಣದೊಳಗೆ ಕಳೆದುಹೋಗುವವರಿಗೆ ಈಗಂತೂ ಲೆಕ್ಕವಿಲ್ಲ. ಜೊತೆಗಿರುವವರನ್ನೂ ಗಮನಿಸದೇ ಸದಾ ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಾಡಿಸುವ, ಕೈಯಾಡಿಸುವವರಿಗೆ ಒಂದು ಆತಂಕದ ಸುದ್ಧಿಯಂತೂ ಹೊರಬಂದಿದೆ. mobile-phones-touchscreensಹೀಗೆ ಯಾರು ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ಮತ್ತೆ ಮೊಬೈಲ್ ಬಳಸುವ, ಇಂಟರನೆಟ್ ಮೂಲಕ ಫೇಸ್‌ಬುಕ್, ವಾಟ್ಸ್ಯಾಪ್, ಟ್ವಿಟರ್ ಎಂದು ವ್ಯವಹರಿಸುವವರು ಹೆಚ್ಚಾಗಿ ತಮ್ಮ ಕಾಗ್ನಿಟಿವ್ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಸಂಶೋಧನೆಯೊಂದು ಪ್ರಕಟಿಸಿದೆ. ಕಾಗ್ನಿಟಿವ್ ಅಂದರೆ ಅರಿವು ಮತ್ತು ಗ್ರಹಿಕೆಯ ಸಾಮರ್ಥ್ಯದಲ್ಲಿ ಕುಂಠಿತತೆ ಆರಂಭವಾಗುತ್ತದೆ ಎನ್ನಲಾಗುತ್ತದೆ. ಸುಮಾರು ವಾರಕ್ಕೆ 22 ಘಂಟೆಗಳಿಂತಲೂ ಹೆಚ್ಚು ಕಾಲ ಡಿಜಿಟಲ್ ಜಗತ್ತಿನಲ್ಲಿ ವ್ಯವಹರಿಸುವ 18 ರಿಂದ 65 ವರ್ಷ ವಯೋಮಿತಿಯಲ್ಲಿರುವ, ಸುಮಾರು 210 ಜನರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು ಅವರು ತಮ್ಮ ಸಂವೇದನೆ ಮತ್ತು ಗ್ರಹಿಕೆಗಳು ದುರ್ಬಲಗೊಂಡಿರುವ ಬಗ್ಗೆ ಹೇಳಿರುವ ಬಗ್ಗೆ ತಿಳಿದುಬಂದಿದೆ. ಅನೇಕ ಬಾರಿ ಅತಿಯಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಸುವವರು ಸದಾ ತಮ್ಮದೇ ಲೋಕದಲ್ಲಿ ಮುಳುಗಿ ತಮ್ಮ ಸುತ್ತಮುತ್ತಲೂ ಏನು ನಡೆದಿದೆ ಎನ್ನುವ ಬಗ್ಗೆಯೂ ಅವರು ಮರೆತು ವ್ಯವಹರಿಸುವಂತಿರುತ್ತದೆ. ಜೊತೆಗಿರುವವರನ್ನು ಅಲ್ಲಿಯೇ ಬಿಟ್ಟು ಮಾತಡ್ತಾ ಹಾಗೇ ಮುಂದೆ ಹೋದವದರೂ ಇದ್ದಾರೆ. ಹಾಗೆ ಮಾತಾಡ್ತಾ ಹೋಗಿ ತಾನು ಬಂದು ತಲುಪಿದ ಸ್ಥಳದ ಬಗ್ಗೆ ಗೊಂದಲವಾಗಿ ಮತ್ತೆ ಹಿಂತಿರುಗಿದ ಉದಾಹರಣೆಗಳೂ ಇವೆ. ಕಿವಿಗೆ ಬ್ಲೂ‌ಟೂಥ್ ಉಪಕರಣ ಧರಿಸಿ ಮಾತನಾಡುತ್ತಾ ಹೋಗುವವರನ್ನು ಕಂಡು ನಾನೇ ಖುದ್ದಾಗಿ ಹೆದರಿರುವದಿದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟೆಯಲ್ಲಿ ಎಲ್ಲೆಂದರಲ್ಲಿ ರಾರಾಜಿಸುವ 3ಜಿ ಮತ್ತು 4 ಜಿ ನೆಟ್‍ವರ್ಕ್ ಮತ್ತು ಅದು ಹೊರಸೂಸಬಹುದಾದ ಫ್ರೀಕ್ವೆನ್ಸಿಯ ವೇಗವನ್ನು ಗಮನಿಸಿದರೆ ಖಂಡಿತ ಅದು ನಮ್ಮ ಮೆದುಳಿನ ಸೂಕ್ಷ್ಮ ಭಾಗಗಳ ಮೇಲೆ ಪ್ರಭಾವ ಬೀರುವದರಲ್ಲಿ ಎರಡು ಮಾತಿಲ್ಲ. ಇದನ್ನು ಹೇಳಲು ಸಂಶೋಧನೆಯ ಅಗತ್ಯವಿಲ್ಲ. ನಮ್ಮ ಸುತ್ತಮುತ್ತಲೂ ಅದರಲ್ಲೂ ನಗರ ಪ್ರದೇಶಗಳಿಲ್ಲಿ ರೋಬೊಟ್ ಥರಾ ಬದುಕುತ್ತಿರುವ ಜನಜೀವನವನ್ನು ನೋಡಿದಾಗ ಈ ಮೊಬೈಲ್ ಮತ್ತು ಇಂಟರನೆಟ್ ಜಗತ್ತು ನಮ್ಮನ್ನು ಭಾವಶೂನ್ಯರನಾಗಿ, ಸಂವೇದನಾರಹಿತ ಜೀವಿಗಳನ್ನಾಗಿ ರೂಪಿಸುತ್ತಿದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಯಾವುದೇ ತಂತ್ರಜ್ಞಾನವಿರಲಿ ಅದರ ಬಳಕೆಯ ಪ್ರಮಾಣ ಮತ್ತು ಔಚಿತ್ಯತೆಯ ಮೇಲೆ ಅದರ ಗುಣಾವಗುಣಗಳು ನಿಂತಿರುತ್ತವೆ. ಊಟ ಮಾಡುವಾಗ, ಮಲಗುವಾಗ, ಟೀ ಕುಡಿಯುವಾಗ, ಕೆಲಸ ಮಾಡುವಾಗ ಎಲ್ಲ ಸಂದರ್ಭಗಳಲ್ಲಿ ಯತಾರ್ಥವಾಗಿ ಮೊಬೈಲ್ ಸ್ಕ್ರೀನ್ ಮೇಲೆ ಹರಿದಾಡುವ ಬೆರಳುಗಳು ಕೂಡಾ ಸಂವೇದನಾಶೀಲತೆಯನ್ನು ಕಳೆದುಕೊಂಡಂತೆ ತೋರುತ್ತವೆ.ಈಗಾಗಲೇ ಈ ಮೊಬೈಲ್ ಮತ್ತು ಇಂಟರನೆಟ್ ಸಹವಾಸಕ್ಕೆ ಬರದೇ ಇದ್ದರೂ ಅದಾಗಲೇ ಮರೆಗುಳಿಗಳ ಪಟ್ಟಿಯಲ್ಲಿದ್ದರೆ ಅಂಥವರ ಮೇಲಂತೂ ಹೀಗೆ ಯರ್ರಾ ಬಿರ್ರಿಯಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಕೆಯ ಪ್ರಮಾಣ ತೀವ್ರವಾದ ಅಡ್ಡ ಪರಿಣಾಮಗಳನ್ನು ಬೀರುವದಂತೂ ಗ್ಯಾರಂಟಿ. ಕೆಲವು ಮುಂದುವರೆದ ರಾಷ್ಟ್ರಗಳು ಅದಾಗಲೇ ಶಾಲಾ ವಿದ್ಯಾರ್ಥಿಗಳ ಮೊಬೈಲ್‍ನ್ನು ಬಹುತೇಕವಾಗಿ ನಿಷೇಧಿಸಿದ ಪರಿಣಾಮವಾಗಿ ಆ ಶಾಲೆಗಳು ಉತ್ತಮ ಫಲಿತಾಂಶವನ್ನು ಸಾಧಿಸಿರುವ ಉದಾಹರಣೆಗಳೂ ಇವೆ. ಹದಿಹರೆಯದ ವಯಸು, ಹುಚ್ಚ ಖೋಡಿ ಮನಸುಗಳ ಕೈಯಲ್ಲಿರುವ ಮೊಬೈಲು ಖಂಡಿತವಾಗಿಯೂ ಚಂಚಲತೆಗೆ ಕಾರಣವಾಗುತ್ತದೆ. ಇನ್ನು ಈ ಮೊಬೈಲ್ ಬಿಟ್ಟು ಬದುಕಲು mobile-phonesಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯನ್ನು ನಿರ್ಮಿಸಿದ ಆಧುನಿಕ ತಂತ್ರಜ್ಞಾನ ಬದಲಾವಣೆ ಮತ್ತು ಸುಧಾರಣೆಯ ಜತೆಜತೆಗೆ ಅಡ್ಡ ಪರಿಣಾಮಗಳನ್ನು ತಂದಿರುವದಿದೆ. ಮೊಬೈಲ್ ಮತ್ತು ಇಂಟರನೆಟ್ ನ ಅತಿಯಾದ ಬಳಕೆ ವಾಹನ ಚಾಲಕರ ಮೇಲೆ ಇನ್ನಷ್ಟು ಅಡ್ಡ ಪರಿಣಾಮಗಳನ್ನು ಬೀರುತ್ತವೆ. ರಸ್ತೆಯಲ್ಲಿ ವಾಹನ ಚಾಲನೆಯಲ್ಲಿ ನಡೆಯುವ ಅಪಘಾತಗಳು ಮತ್ತು ಸಾವು ನೋವುಗಳಲ್ಲಿ ಈ ಬಗೆಯ ಮೊಬೈಲ್ ಮಾತುಕತೆಯೂ ಮುಖ್ಯ ಕಾರಣವಾಗಿರುತ್ತದೆ. ಅತಿಯಾದ ಮೊಬೈಲ್ ಮತ್ತು ಇಂಟರನೆಟ್ ಗೀಳು ಒಳಗೊಳಗೆ ವ್ಯಕ್ತಿಯನ್ನು ಕಾಗ್ನಿಟಿವ್ ಸಾಮಥ್ರ್ಯದಿಂದ ದೂರಸರಿಸುತ್ತದೆ. ಈ ಕುರಿತು ಡಾ ಹ್ಯಾಡಲಿಂಗಟನ್ ಎನ್ನುವವರು ನಾವು ದೈನಂದಿನ ಜೀವನದಲ್ಲಿ ಹೆಚ್ಚೆಚ್ಚು ತಾಂತ್ರಿಕತೆಯನ್ನು ಬಳಸುವದಿದೆ ಆದರೆ ಹಾಗೆ ಮಿತಿ ಮೀರಿ ಬಳಸುವಾಗಲೂ ಅದರ ಅಡ್ಡ ಪರಿಣಾಮಗಳು ನಮ್ಮ ಮೇಲೆ ಎಷ್ಟರ ಮಟ್ಟಿಗೆ ಆಗುವದಿದೆ ಎನ್ನುವ ಬಗ್ಗೆ ಗಂಭೀರವಾಗಿ ಯೋಚಿಸುವದಿಲ್ಲ ಎನ್ನುತ್ತಾರೆ. ಯೋಚಿಸಲು ಆರಂಭಿಸುವ ವೇಳೆಗಾಗಲೇ ತುಂಬಾ ದೂರ ಸಾಗಿ ಬಂದಾಗಿರುತ್ತದೆ. ವಿಶ್ವವಿದ್ಯಾಲಯವೊಂದು ಮಾಡಲಾದ ಅಧ್ಯಯನ ಮತ್ತು ಸಂಶೋಧನೆಯ ಪ್ರಕಾರ ಅತಿಯಾದ ಮೊಬೈಲ್ ಮತ್ತು ಇಂಟರನೆಟ್ ಬಳಕೆ ನಮ್ಮಲ್ಲಿರುವ ಸಂವೇದನೆಗಳನ್ನು ಮತ್ತು ಗ್ರಹಿಕಾ ಸಾಮಥ್ರ್ಯವನ್ನು ಕೊಲ್ಲುತ್ತದೆ ಎಂದಿರುವದಿದೆ. ಮೂಲಭೂತವಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಕೆ ಎನ್ನುವುದೇ ಒಂದು ಸಮಸ್ಯೆಯಲ್ಲ… ಅವುಗಳ ಅತಿಯಾದ ಬಳಕೆ ಮತ್ತು ಅವುಗಳ ಬಗೆಗಿನ ಗೀಳು ಮಾತ್ರ ಅಪಾಯಕಾರಿ. ಎಲ್ಲ ವೇಳೆಯಲ್ಲಿಯೂ ಮೊಬೈಲ್ ಮತ್ತು ಇಂಟರನೆಟ್ ಜೊತೆಗೆ ವ್ಯವಹರಿಸುವದರಿಂದ ನೀವೂ ಕೂಡಾ ಕ್ರಮೇಣವಾಗಿ ಒಂದು ಉಪಕರಣವಾಗಿಯೇ ಮಾರ್ಪಾಡು ಹೊಂದುವ ಅಪಾಯಗಳಂತೂ ಖಂಡಿತ ಇವೆ. ಅತಿಯಾದರೆ ಎಲ್ಲವೂ ವಿಷ ಎನ್ನುವ ಸಾಮಾನ್ಯ ತಿಳುವಳಿಕೆಯಂತೂ ಎಲ್ಲರಿಗೂ ಇದ್ದೇ ಇದೆ. ಅದೇ ನಮ್ಮ ಮಾನವ ಜನಾಂಗವನ್ನು ಕಾಯಬೇಕಿದೆ.

ಅಕ್ಕನ ಮದುವೆ ಮಾಡಲು ಜೀತಕ್ಕೆ ಸೇರಿದ ಅಪ್ಪ 5 ರೂ.ಗಾಗಿ ತಡಕಾಡಿದಾಗ…!

                                                                                                                              – ಸೂರಿ

1995ರಲ್ಲಿ ನನ್ನಕ್ಕನ ಮದುವೆ ನಿಶ್ಚಯವಾಯಿತು. ಇದು ಎಲ್ಲರಂತೆ ನಮಗೆ ಸಂಭ್ರಮದ ವಿಷಯ ಆಗಿರಲಿಲ್ಲ. ಏಕೆಂದರೆ ಕೂಲಿಯನ್ನೇ ನಂಬಿ ಇಡೀ ಕುಟುಂಬಕ್ಕೆ ಅಕ್ಕನ ಮದುವೆ ಒಂದು ರೀತಿಯ ಭಾರವಾಗಿತ್ತು.

ಮದುವೆಗೆ ಬೇಕಿದ್ದ ಹಣ ಹೊಂದಿಸುವುದು ನನ್ನಪ್ಪನಿಗೆ ಬಲು ಕಷ್ಟದ ಕೆಲಸವಾಗಿತ್ತು. ಬಂಜರು ಭೂಮಿಯಂತಿರುವ ತುಂಡು ಭೂಮಿಯಲ್ಲಿ ಬೆಳೆ ತೆಗೆಯುವುದು ಸಾಧ್ಯವಿಲ್ಲದ ಮಾತಾಗಿತ್ತು. ಹಾಗಾಗಿ ಜೀವನಕ್ಕೆ ಕೂಲಿಯೇ ಆಧಾರವಾಗಿತ್ತು. ಅಪ್ಪ ಒಂದು ಮನೆಗೆ ಕೆಲಸಕ್ಕೆ ಹೋದರೆ, ಅವ್ವ ಮತ್ತು ಅಕ್ಕ ಇನ್ನೊಂದು ಮನೆ ಕೆಲಸಕ್ಕೆ ಹೋಗುತ್ತಿದ್ದರು.

ನಮ್ಮ ಕಷ್ಟ ಏನೇ ಇರಲಿ, ಮಗಳ ಮದುವೆ ನಿಶ್ಚಯವಾಯಿತು ಎಂದು ಅವ್ವ-ಅಪ್ಪ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. 26 ವರ್ಷ ಕಳೆದರೂ ಮದುವೆ ನಿಶ್ಚಯವಾಗಿರಲಿಲ್ಲ. ಮುದಿ ಮೋರೆ ಬಿದ್ದಿದೆ, ಇವಳನ್ನು ಯಾರು ಮದುವೆಯಾಗುತ್ತಾರೆ? ಎಂಬ ಚುಚ್ಚು ಮಾತು ಅವ್ವ ಮತ್ತು ಅಕ್ಕನ ಕಣ್ಣಲ್ಲಿ ಆಗಾಗ ನೀರು ತರಿಸುತ್ತಿದ್ದವು. ಹೆದರಬೇMigrant workers travel atop a truck in Mumbaiಡ ನಾನಿದ್ದೇನೆ ಎಂದು ಅಕ್ಕನಿಗೆ ಸಮಾಧಾನ ಮಾಡಿದ್ದೆ. ಸದ್ಯ ಅದಾದ ಕೆಲವೇ ದಿನಗಳಲ್ಲಿ ಅಕ್ಕನ ಮದುವೆ ದಿನಾಂಕವೂ ನಿಗದಿಯಾಯಿತು.

ಹಳೆಯದಾದ ಹುಲ್ಲು ಮನೆಯಲ್ಲಿ ಜೀವನ ಪಯಣ ಮುಂದುವರಿದಿತ್ತು. ಮದುವೆ ಖರ್ಚಿಗೆ ನಯಾ ಪೈಸೆಯೂ ಇರಲಿಲ್ಲ. ಶಾಲೆ ಮೆಟ್ಟಿಲೇರದ ಅಕ್ಕ, ಚಿಕ್ಕ ವಯಸ್ಸಿನಿಂದಲೇ ದುಡಿಮೆಗೆ ಇಳಿದಿದ್ದಳು. ಸರ್ಕಾರಿ ಶಾಲೆ-ಕಾಲೇಜಿನಲ್ಲಿ ಓದುತ್ತಿದ್ದ ನಾನು ಮತ್ತು ತಮ್ಮ ರಜೆ ದಿನದಲ್ಲಿ ಕೂಲಿಗೆ ಹೋಗಿ ಬಂದ ಪುಡಿಗಾಸನ್ನೂ ಕೂಡಿ ಹಾಕಿಕೊಂಡು ಓದು ಮುಂದುವರೆಸಿದ್ದೆವು.

ಈ ಸ್ಥಿತಿಯಲ್ಲಿರುವ ಕುಟುಂಬಕ್ಕೆ ಅಕ್ಕನ ಮದುವೆಗೆ ಹಣ ಹೊಂದಿಸುವುದು ಸಾಧಿವಿಲ್ಲದ ಮಾತಾಗಿತ್ತು. ಮದುವೆ ಖಚರ್ಿನ ಜೊತೆಗೆ 6 ಸಾವಿರ ರೂ. ವರದಕ್ಷಿಣೆ ಕೂಡ ಕೊಡಬೇಕಿತ್ತು. ಅಕ್ಕನ ಮದುವೆ ಮಾಡಲು ಊರಿನ ಅನೇಕರ ಬಳಿ ಅಪ್ಪ ಸಾಲ ಕೇಳಿದರು. ಆದರೆ ದೊಡ್ಡ ಮೊತ್ತದ ಹಣ ಯಾರಿಂದಲೂ ಸಿಗಲಿಲ್ಲ. ಪರಿಚಯಸ್ಧರೊಬ್ಬರ ಮೂಲಕ ನನ್ನೂರಿಂದ ಸುಮಾರು 18 ಕಿಲೋ ಮೀಟರ್ ದೂರ ಇರುವ ಗ್ರಾಮದ ಮೇಲ್ಜಾತಿಯೊಬ್ಬರ ಮನೆಯಲ್ಲಿ 15 ಸಾವಿರ ರೂ. ಸಾಲ ತಂದರು.
ಸಾಲ ತೀರಿಸಲು ಕುಟುಂಬದಲ್ಲಿ ಯಾರಾದರೊಬ್ಬರು 2 ವರ್ಷ ಜೀತ ಮಾಡಬೇಕಿತ್ತು. 2 ವರ್ಷಕ್ಕೆ 15 ಸಾವಿರ ಸಾಲ ಹಣ ತೀರಿ ಹೋಗುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜೀತಕ್ಕೆ ಸೇರಲು ಸಿದ್ದವಾಗಿದ್ದ ಅಪ್ಪ 15 ಸಾವಿರ ಹಣ ತಂದು, ಅಕ್ಕನ ಮದುವೆ ಮಾಡಿ ಮುಗಿಸಿದರು.

ಮನೆಯ ಸ್ಥಿತಿ ಗೊತ್ತಿದ್ದರಿಂದ ಚೆನ್ನಾಗಿ ಓದಿ ಸರ್ಕಾರಿ ಕೆಲಸ ಹಿಡಿಯಬೇಕು ಎಂಬ ಛಲ ಮನದೊಳಗೆ ಮನೆ ಮಾಡಿತ್ತು. ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾಗಿದ್ದ ಕಾರಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಗೆ ಸುಲಭವಾಗಿ ಸೀಟು ಸಿಕ್ಕಿತ್ತು.

ಆದರೆ ಕಾಲೇಜಿಗೆ ಹೋಗುವ ಬದಲು ಅಕ್ಕನ ಮದುವೆ ಮಾಡಿ ಜೀತಕ್ಕೆ ಸೇರಿರುವ ಅಪ್ಪನನ್ನು ಆ ಸೆರೆಯಿಂದ ಬಿಡಿಸಿಕೊಂಡು ಬರಬೇಕು ಎಂಬ ಆಲೋಚನೆ ಮೂಡಿತು. ಕಾಲೇಜಿಗೆ ಹೋಗದೆ ಅಪ್ಪನ ಬದಲು ಜೀತಕ್ಕೆ ಸೇರಿಕೊಳ್ಳುವ ಕೈಗೊಂಡಿದ್ದ ತೀರ್ಮಾನವನ್ನು ಅವ್ವನ ಬಳಿ ಹೇಳಿಕೊಂಡೆ. ಅದಕ್ಕೊಪ್ಪದ ಅವ್ವ ನಾವು ಅನುಭವಿಸಿರುವ ಕಷ್ಟವೇ ಸಾಕು ಮಗನೇ, ಓದೊ ಮಗನ್ನ ಜೀತಕ್ಕೆ ಸೇರಿಸೋಕೆ ಒಪ್ಪಲಾರೆ ಎಂದು ಕಣ್ಣೀರಿಟ್ಟಳು.

ಅವ್ವನ ಆಸೆಯಂತೆ ಮೈಸೂರಿನಲ್ಲಿ ಪ್ರಥಮ ವರ್ಷದ ಬಿಎಗೆ ಸೇರಿಕೊಂಡು ಹಾಸ್ಟೆಲ್ನಲ್ಲಿ ಜೀವನ ಮುಂದುವರಿಯಿತು. ಅಲ್ಲಿ ಹೊಟ್ಟೆ ತುಂಬ ಊಟ ತಿಂದರೂ ಅಪ್ಪ ಜೀತದಾಳಾಗಿ ದುಡಿಯುತ್ತಿರುವುದನ್ನು ನೆನೆದು ಸುರಿದ ಕಣ್ಣೀರಿಗೆ ಅಳತೆ ಇರಲಿಲ್ಲ. ದಸರಾ ರಜೆ ಸಿಕ್ಕಿ ಊರಿನ ಹಾದಿ ಹಿಡಿದ ನಾನು, ಮರು ದಿನವೇ ಅಪ್ಪ ಜೀತ ಮಾಡುತ್ತಿದ್ದ ಮನೆ ಮುಂದೆ ಹೋಗಿ ನಿಂತೆ. ಅಪ್ಪನ ಕಷ್ಟದಲ್ಲಿ ನನಗೂ ಪಾಲು ಪಡೆಯಬೇಕು ಎಂಬ ಕಾರಣಕ್ಕೆ ರಜೆ ಮುಗಿಯುವ ತನಕ ಜೀತದಾಳಾಗಿ ನಾನೇ ದುಡಿಯುವ ಇಚ್ಛೆ ಪ್ರಕಟಿಸಿದೆ.

ಮೊದಲು ಒಪ್ಪದ ಅಪ್ಪನ ಮನವೊಲಿಸುವಲ್ಲಿ ಯಶಸ್ವಿಯಾಗಿ ಜೀತದಾಳಾಗಿ ಸೇರಿಕೊಂಡೆ. ಕೊಟ್ಟಿಯಲ್ಲಿ ಅಪ್ಪ ಇಟ್ಟುಕೊಂಡಿದ್ದ ಚಾಪೆ, ದಿಂಬಿನೊಂದಿಗೆ ಹೊಸ ಜೀವನ ಆರಂಭವಾಯಿತು. ರಾತ್ರಿ ಎಷ್ಟೊತ್ತಿಗೆ ಮಲಗಿದರೂ ಮುಂಜಾನೆ 4ಕ್ಕೆ ದುಡಿಮೆ ಆರಂಭಿಸಬೇಕಿತ್ತು. ರಾತ್ರಿ ಮೂರ್ನಾಲ್ಕು ಗಂಟೆ ನಿದ್ರೆ ಹೊರತುಪಡಿಸಿದರೆ ಬಿಡುವೇ ಇಲ್ಲದ ದುಡಿಮೆಗೆ ಒಗ್ಗಿಕೊಳ್ಳುವುದು ಕಷ್ಟವಾಯಿತು. ಆದರೂ ಅಪ್ಪನ ಕಷ್ಟಕ್ಕೆ ಸ್ವಲ್ಪ ದಿನವಾದರೂ ಹೆಗಲು ಕೊಡಬೇಕೆಂಬ ನಿರ್ಧಾರ ಕೈಗೊಂಡಿದ್ದ ಕಾರಣ ಕೆಲಸದ ಹೊರೆ ಸಹಿಸಿಕೊಂಡೆ.

ರಾತ್ರಿ ವೇಳೆ ಸತ್ತಂತೆ ನಿದ್ರೆ ಬರುತ್ತಿದ್ದವು, ಬೆಳಕಾಗುವುದೇ ಗೊತ್ತಾಗುತ್ತಿರಲಿಲ್ಲ. ಹೊಟ್ಟೆ ತುಂಬ ಊಟ ಸಿಗುತ್ತಿರುವ ತೃಪ್ತಿ ಒಂದೆಡೆಯಾದರೆ ನಿದ್ರೆ ವಿಷಯದಲ್ಲಿ ಮಾತ್ರ ಅತೃಪ್ತಿ. ಬೆಳಗ್ಗೆ 4ಕ್ಕೆ ಎದ್ದು ದನ-ಕರುಗಳನ್ನು ಆಚೆಗೆ ಕಟ್ಟಿ ಸಗಣಿ ಬಾಚುವುದರಿಂದ ಕೆಲಸ ಆರಂಭವಾದರೆ, ಅವುಗಳ ಮೈ ತೊಳೆಯುವ ಹೊತ್ತಿಗೆ 6 ಗಂಟೆ ದಾಟುತ್ತಿತ್ತು.

ಮುಖ, ಕೈಕಾಳು ಕಾಲು ತೊಳೆದುಕೊಂBBBB-2ಡು ನಮಗೆ ಖಾಯಂ ಆಗಿ ನೀಡಿದ್ದ ಲೋಟ-ತಟ್ಟೆ ತೊಳೆದುಕೊಂಡು ಬಾಗಿಲಿಂದ ಆಚೆ ಕುಳಿತು ಊಟ ಮಾಡಿ ಗದ್ದೆಗೆ ಇಳಿದರೆ ಸಂಜೆ ತನಕ ಮೈ ಮುರಿಯುವಷ್ಟು ಕೆಲಸ. ಗದ್ದೆ ಉಳುಮೆ ಮಾಡಿ ಎತ್ತುಗಳು ಸುಸ್ತಾದರೆ ಅವುಗಳಿಗೆ ವಿಶ್ರಾಂತಿ ನೀಡುವುದು. ಆ ಸಂದರ್ಭದಲ್ಲಿ ಬದು ಹಾಕುವುದು, ತೆಂಗಿನ ಕಾಯಿ ಕೀತ್ತು ಚೀಲಕಟ್ಟಿ ಗಾಡಿಗೆ ಲೋಡ್ ಮಾಡುವುದು. ಕಬ್ಬಿ ಗದ್ದೆಗೆ ನೀರು ಹಾಯಿಸೋದು ಹೀಗೆ ಒಂದರ ಮೇಲೋಂದು ಬಿಡುವಿಲ್ಲದೆ ಕೆಲಸ.

ಯುವಕನಾಗಿದ್ದ ನಾನೇ ಈ ಕೆಲಸ ಮಾಡಲು ತಿಣಕಾಡಬೇಕಿದ್ದೆ. ಆಗಲೇ 60 ದಾಟಿರುವ ಅಪ್ಪನ ಕಷ್ಟ ನೆನದು ಎಷ್ಟೋ ರಾತ್ರಿಗಳು ನಿದ್ರೆಗೂ ಅವಕಾಶ ನೀಡದೆ ಕಣ್ಣೀರು ಸುರಿದಿವೆ. ಒಂದು ತಿಂಗಳು ಮುಗಿದೇ ಹೋಯಿತು. ಜೀತದಿಂದ ಮುಕ್ತಿ ನೀಡಲು ಬಂದ ಅಪ್ಪನೊಂದಿಗೆ ಕೊಟ್ಟಿಗೆಯಲ್ಲೇ ಮಲಗಿ ಇಡೀ ರಾತ್ರಿ ಅತ್ತೆವು. ಅಳೋದು ಬಿಟ್ಟು ಬೇರೇನೂ ಮಾಡಲಾಗದ ಅಸಹಾಯಕ ಸ್ಥಿತಿಯೊಳಗೆ ಜೀವನ ಸಿಲುಕಿಕೊಂಡಿತ್ತು.

ಬೆಳಗ್ಗೆ ಕೊಟ್ಟಿಗೆ ಕಸ ಬಾಚಿದ ನಂತರ ಮನೆಯೊಡತಿ ಟೀ ಕೊಟ್ಟಳು. ನಮಗೆ ಮೀಸಲಿಟ್ಟಿದ್ದ ಲೋಟ ಒಂದೇ ಆಗಿದ್ದರಿಂದ ಅಪ್ಪ ಕುಡಿದ ನಂತರ ನಾನು ಕುಡಿದು ತೊಳೆದಿಟ್ಟೆ.

ಬಸ್ ನಿಲ್ದಾಣದ ತನಕ ಕಳಿಸಿಕೊಡಲು ಬಂದ ಅಪ್ಪ ನನ್ನ ಖರ್ಚಿಗೆ ಕೊಡಲು 5 ರೂ. ನೋಟು ತಂದಿದ್ದರು. ಬಸ್ ನಿಲ್ದಾಣದ ಬಳಿ ಆ ಹಣ ಕೊಡಲು ಚೆಡ್ಡಿ ಜೀಬಿಗೆ ಕೈ ಹಾಕಿದರೆ 5 ರೂ. ನೋಟು ಇರಲೇ ಇಲ್ಲ. ಬಂದ ದಾರಿಯಿಂದ ಹಿಡಿದು ಬಸ್ ನಿಲ್ದಾಣದ ಅಕ್ಕ-ಪಕ್ಕ ಇದ್ದ ಗಿಡಗಂಟೆಗಳ ನಡುವೆ ಬಿದ್ದು ಒದ್ದಾಡಿದವರಂತೆ ಅಪ್ಪ ಆ ಹಣಕ್ಕಾಗಿ ಹುಡುಕಾಡಿದ. ಅಲ್ಲಿದ್ದ ಧೂಳೆಲ್ಲೆ ಮೈ ತುಂಬಾ ಆವರಿಸಿಕೊಂಡರೂ ಬಿಡದೆ ತಡಕಾಡಿದ. ಕೊನೆಗೂ 5 ರೂ.ನ ನೋಟು ಸಿಗಲಿಲ್ಲ.

ಮಗನಿಗೆ ಕೊಡಲು ತಂದಿದ್ದ ಹBBBB-3ಣ ಕಳೆದುಕೊಂಡ ಅಪ್ಪ, ಧಾರಾಕಾರವಾಗಿ ಕಣ್ಣೀರು ಸುರಿಸಿದ. ಉಮ್ಮಳಿಸಿ ಬಂದ ದುಃಖ ತಡೆದುಕೊಂಡ ನಾನು ‘ಬಸ್ ಚಾರ್ಜಗೆ ಹಣ ಇದೆ ಬಿಡಪ್ಪ’ ಎಂದು ಸಮಾಧಾನ ಮಾಡಿದೆ. ಬಸ್ ಹತ್ತಿದರೂ ಮರೆಯಾಗುವ ತನಕ ಅಪ್ಪನನ್ನೇ ನೋಡಿ ಅಳುತ್ತಲೆ ಮನೆಗೆ ಬಂದೆ. 5 ರೂಪಾಯಿ ಎಂದರೆ ಪುಡಿಗಾಸು ಎನ್ನುವ ಕಾಲದಲ್ಲಿ 5 ರೂ.ಗಾಗಿ ಅಪ್ಪು ಹುಡುಕಾಡಿದ ಪರಿ ಅದರ ಮಹತ್ವ ಎಷ್ಟು ಎಂಬುದಕ್ಕೆ ಸಾಕ್ಷಿಯಾಗಿದೆ. ಈಗ 100, 1000 ರೂ. ಅಷ್ಟೇ ಏಕೆ ಲಕ್ಷ ಲಕ್ಷ ಹಣವೂ ಲೆಕ್ಕಕ್ಕಿಲ್ಲ ಎನ್ನುವವರಿದ್ದಾರೆ. ಆದರೆ ಮೈಮೇಲೆ ಧೂಳೆರಚಿಕೊಂಡು 5 ರೂಪಾಯಿ ಹುಡುಕಿದ ಆ ಸಂದರ್ಭವನ್ನು ನಾನೆಂದೂ ಮರೆಯಲಾರೆ.

ಚಿತ್ರಗಳು: ಸಾಂದರ್ಭಿಕ

ಕೊಳ್ಳಿದೆವ್ವ ಮತ್ತು ವರಮಹಾಲಕ್ಷ್ಮೀ ಎಂಬ ಸಮೂಹ ಸನ್ನಿ…

                                                                                                                                                -ಜೀವಿ

ನನಗಾಗ ಹತ್ತು-ಹನ್ನೊಂದು ವರ್ಷ ವಯಸ್ಸು. ಶಾಲೆಗೆ ರಜೆ ಇದ್ದರೆ ದನಕರುಗಳೊಂದಿಗೆ ಬೆಟ್ಟ ಹತ್ತುವ ಕೆಲಸ ಕಾಯಂ. ವಾರವಿಡಿ ಶಾಲೆಯಲ್ಲಿ ಬೆರೆಯುತ್ತಿದ್ದ ಗೆಳೆಯರು ರಜೆ ದಿನ ಆಡು, ಕುರಿ, ದನ ಮತ್ತು ಎಮ್ಮೆಯೊಂದಿಗೆ ಬೆಟ್ಟ ಸೇರುತ್ತಿದ್ದೆವು. ತೋಳ, ಕಿರುಬನ ಕಾಟದ ನಡುವೆ ದನ-ಕರುಗKollidevvaಳನ್ನು ಜೋಪಾನ ಮಾಡುವ ಜತೆಗೆ ಆಡಿ-ನಲಿದು ತಲೆಗೊಂದು ಹೊರೆಯಷ್ಟು ಪುಳ್ಳೆ ಸೌದೆಯೊಂದಿಗೆ ಮನೆ ಸೇರುವುದು ರಜೆ ಕಾಲದ ದಿನಚರಿ.

ಅದೊಂದು ರಜೆ ದಿನದ ದಿನಚರಿ ಮುಗಿದು ಇಳಿಹೊತ್ತಿಗೆ ಬೆಟ್ಟ ಇಳಿದು ದನಕರುಗಳೊಂದಿಗೆ ಸೌದೆ ಹೊತ್ತು ಮನೆ ಮುಟ್ಟುವಷ್ಟರಲ್ಲಿ ನಸುಗತ್ತಲು ಆವರಿಸಿತ್ತು. ಮನೆ ಹಿಂದಿನ ಹಿತ್ತಲಿಗೆ ಸೌದೆ ಹಾಕಿ ಕೊಟ್ಟಿಗೆಗೆ ದನಕರುಗಳನ್ನು ಕಟ್ಟಿ ಮನೆಗೆ ಬಂದು ಕೈಕಾಲು ತೊಳೆದು ಬೆಳಗ್ಗೆ ಉಳಿದಿದ್ದ ರೊಟ್ಟಿ ಚೂರು ತಿಂದು ಬೀದಿಗೆ ಬಂದೆ.

ಅಷ್ಟರಲ್ಲಿ ಎಲ್ಲರು ಕೋಟೆ ಕಡೆಗೆ ಓಡುತ್ತಿದ್ದರು. ಕೋಟೆ ಎಂದರೆ ಚಿತ್ರದುರ್ಗದಂತ ದೊಡ್ಡ ಕೋಟೆ ಅಲ್ಲ. ಸುಮಾರು ಒಂದೂವರೆ ಗುಂಟೆಯಷ್ಟು ಜಾಗಕ್ಕೆ ಕಲ್ಲಿನಲ್ಲಿ ಕಟ್ಟಿದ ಕಾಂಪೌಡ್ನ ಒಳಭಾಗಕ್ಕೆ ಮಣ್ಣು ತುಂಬಿಸಿ ನಾಲ್ಕೈದು ಅಡಿ ಎತ್ತರ ಮಾಡಲಾಗಿದೆ. ಅದರ ಮೇಲೆ ಚಿಕ್ಕದೊಂದು ಗುಡಿ ಇದೆ. ಅದನ್ನೇ ಹಿಂದಿನಿಂದ ಕೋಟೆ ಎಂದು ಕರೆಯಲಾಗುತ್ತಿದೆ.

ಕೋಟೆ ಕಡೆಗೆ ಓಡುತ್ತಿದ್ದ ಊರಿನವರನ್ನು ನಾನೂ ಹಿಂಬಾಲಿಸಿದೆ. ಅದಾಗಲೇ ಸೇರಿದ್ದ ಜನ ಬೆಟ್ಟದ ಕಡೆಗೆ ಮುಖ ಮಾಡಿದ್ದರು. ಅವರ ಹಿಂಭಾಗ ಮಾತ್ರ ಕಾಣುತ್ತಿತ್ತು. ಮುಂದೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗಲಿಲ್ಲ. ನನ್ನೊಂದಿಗೆ ಮಹೇಶ, ರಾಜ, ಮಂಜ, ರವಿ, ಗೋವಿಂದ, ಪಾಪಕ್ಕ, ಮಂಜಿ, ಚಂದ್ರ, ಹೇಮಾ, ನಾಗ ಎಲ್ಲರು ಏನೂ ಕಾಣದೆ ನೋಡಲು ಎಗರುತ್ತಿದ್ದರು. ಜನರ ಮಧ್ಯ ನುಸುಳಿ ಯತ್ನಿಸಿದ ನನಗೆ ಜವರಣ್ಣ ತಲೆಗೆ ಬಾರಿಸಿ ಮಕ್ಕಳು ನೋಡಬಾರದು ಹೋಗು ಎಂದು ಗದರಿಸಿದ.

’ಕೊಳ್ಳಿ ದೆವ್ವ ಕುಣಿತೈತೆ ಮಕ್ಕಳೆಲ್ಲ ಮನೆಗೆ ಹೋಗಿ, ಬಂದ್ಬಿಟ್ರು ದೊಡ್ಡ ಮನುಷ್ಯರು’ ಎಂದು ಕರಿಯಣ್ಣ ಕೋಲು ಹಿಡಿದು ಅಬ್ಬರಿಸಿದ. ಚದುರಿದಂತೆ ಎದ್ದು ಬಿದ್ದು ಓಡಿದೆವು. ಕುತೂಹಲ ತಡೆಯಲಾಗದೆ ಮಕ್ಕಳ ಪೈಕಿ ನಾನು, ರಾಜ ಇಬ್ಬರು ಮತ್ತೊಮ್ಮೆ ಒಳ ನುಗ್ಗಲು ಯತ್ನಿಸಿದೆವು. ಹೇಗೋ ಕಷ್ಟಪಟ್ಟು ನಾನಂತೂ ಮುಂದೆ ನುಗ್ಗಿದೆ. ರಾಜನಿಂದ ಅದು ಸಾಧ್ಯವಾಗಲಿಲ್ಲ.
ಲಕ್ಕಜ್ಜನ ಹೆಂಡ್ತಿ ಪುಟ್ಟಕ್ಕೆ ಬೆಟ್ಟದ ಕಡೆಗೆ ಕೈ ತೋರಿಸಿ ಕೊಳ್ಳಿದೆವ್ವ ತೋರಿಸುತ್ತಿದ್ದಳು. ಕೆಲವರಿಗೆ ಇನ್ನೂ ಅದು ಕಂಡಿರಲಿಲ್ಲ, ನನ್ನ ಕೈ ನೇರದಲ್ಲಿ ನೋಡು ಎಂದು ಕಾಣದೆ ಪರದಾಡುತ್ತಿದ್ದವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ತೊರಿಸುತ್ತಿದ್ದಳು. ನಾನೇ ಮೊದಲು ನೋಡಿ ಎಲ್ಲರನ್ನು ಕರೆದು ತೋರಿಸಿದೆ ಎಂದು ಬೀಗುತ್ತಿದ್ದಳು. ದೂರಕ್ಕೆ ಕಾಣದಿದ್ದರೂ ಎಲ್ಲರೂ ನೆಟ್ಟಿದ್ದ ದೃಷ್ಟಿ ಗಮನಿಸಿ ನಾನು ದೃಷ್ಟಿ ನೆಟ್ಟೆ. ಬೆಟ್ಟದ ಒಂದು ಭಾಗದಲ್ಲಿ ದೀಪದಂತೆ ಬೆಂಕಿ ಉರಿಯುತ್ತಿತ್ತು. ಅದು ಅತ್ತಿತ್ತ ಕುಣಿದಂತೆ ಕಾಣಿಸುತ್ತಿತ್ತು.

ಆ ತನಕ ಕೊಳ್ಳಿ ದೆವ್ವದ ಕುಣಿತದ ಬಗ್ಗೆ ಕೇಳಿದ್ದ ನಾನೂ ಅದನ್ನು ಕಣ್ತುಂಬಿಕೊಂಡೆ. ಯಾಲಕ್ಕಿಗೌಡರ ಹೊಲದ ಬಳಿಯೇ ಕುಣಿತಾ ಇದೆ ನೋಡಿ, ಗೌಡನಿಗೆ ಏನೋ ರಾವು ಕಾದೈತೆ ಎಂದಳು ಪುಟ್ಟಕ್ಕ. ಆ ತನಕ ಕೊಳ್ಳಿದೆವ್ವವೇ ಎಂದು ನಂಬಿದ್ದ ನಾನು. ಯಾಲಕ್ಕಿಗೌಡನ ಹೊಲದಲ್ಲಿದೆಯೇ? ಎಂದು ಪುಟ್ಟಕ್ಕನನ್ನು ಕೇಳಿದೆ. ಆವರೆಗೆ ನಾನು ಮುಂದೆ ಬಂದು ಕೊಳ್ಳಿದೆವ್ವ ನೋಡುತ್ತಿದ್ದನ್ನು ದೊಡ್ಡವರ್ಯಾರೂ ಗಮನಿಸಿರಲಿಲ್ಲ. ನೀನ್ಯಾವಗ್ ಮುಂದೆ ಬಂದೆ ಎಂದ ಸಿಂಗಾಪುರದ ಚೌಡಿ, ಜುಟ್ಟು ಹಿಡಿದು ಹಿಂದಕ್ಕೆ ಎಳೆದು ತಲೆಗೊಮ್ಮೆ ಮೊಟಕಿ ಹೋಗಲೇ ಮನೆಗೆ ಎಂದು ಗದರಿಸಿ ಮತ್ತೆ ಮುಂದೆ ಹೋಗಿ ನಿಂತಳು.

ಅಯ್ಯೋ ಅದು ಕೊಳ್ಳಿದೆವ್ವ ಅಲ್ಲ, ಯಾಲಕ್ಕಿಗೌಡರ ಹೊಲದಲ್ಲಿ ಮಂದೆ ಕುರಿಯವರು ಕ್ಯಾಂಪ್ ಹಾಕಿದ್ದಾರೆ. ಅವರೆKollidevva-1ಲ್ಲೋ ಬೆಂಕಿ ಹಾಕಿಕೊಂಡಿರಬೇಕು ಎಂದೆ. ಏಕೆಂದರೆ ಯಾಲಕ್ಕಿಗೌಡರ ಹೊಲದಲ್ಲಿ ಮಂದೆ ಕುರಿ ಬೀಡು ಬಿಟ್ಟಿರುವುದು ನನಗೆ ಖಾತ್ರಿ ಇತ್ತು.

ಅಂದು ಸಂಜೆ ಸೌದೆ ಹೊತ್ತು ನಾನು ಬೆಟ್ಟದಿಂದ ಇಳಿಮುಖವಾಗಿದ್ದರೆ, ಬೆಟ್ಟದ ಕಡೆಗೆ ಕುರಿಗಳ ಹಿಂಡು ಮೇಲ್ಮುಖವಾಗಿ ಹೊರಟಿತ್ತು. ಬರಿಗಾಲಲ್ಲಿ ನೆತ್ತಿ ಉರಿ ಬರುವಷ್ಟು ಹೊರೆಭಾರದ ಸೌದೆ ಹೊತ್ತಿದ್ದರೂ ನನಗೆ ಕುತೂಹಲ ಕಾಡಿತು. ಸಂಜೆ ಮನೆ ಕಡೆಗೆ ಹೊರಡುವ ಬದಲು ಬೆಟ್ಟದ ಕಡೆಗೆ ಮುಖ ಮಾಡಿರುವ ಕಾರಣ ತಿಳಿದುಕೊಳ್ಳಲು ಸೌದೆ ಹೊತ್ತುಕೊಂಡೆ ನಮ್ಮೂರಿನವರಲ್ಲದ ಕುರಿಗಳ ಮಾಲೀಕರನ್ನು ಮಾತನಾಡಿಸಿ ಸಮಾಚಾರ ವಿಚಾರಿಸಿದೆ.

ನಾವು ತುಮಕೂರಿನ ಕಡಿಯವರು ಮಂದೆ ಕುರಿಯೊಂದಿಗೆ ಬಂದಿದ್ದೇವೆ. ಬೆಟ್ಟದ ಮೇಲಿರುವ ಯಲಕ್ಕಿಗೌಡರ ಹೊಲದಲ್ಲಿ ಮಂದೆ ಬಿಡಲು ಹೊರಟಿದ್ದೇವೆ ಎಂದು ಹೇಳಿದರು. ಮಂದೆ ಕುರಿ ಎಂದರೆ ಇಡೀ ರಾತ್ರಿ ರೈತರ ಹೊಲದಲ್ಲಿ ಕುರಿಗಳನ್ನು ಕೂಡಿ ಹಾಕಿ ಹೊಲದ ಮಾಲೀಕರಿಂದ ಇಂತಿಷ್ಟು ಹಣ ಪಡೆಯುತ್ತಾರೆ. ಕುರಿಗೊಬ್ಬರ ಬಿದ್ದರೆ ಹೊಲದಲ್ಲಿ ಪೈರು ಕಚ್ಚಲಿದೆ ಎಂಬ ಕಾರಣಕ್ಕೆ ಬೇಸಿಗೆಯಲ್ಲಿ ರೈತರು ಹೊಲಗಳಲ್ಲಿ ಮಂದೆ ಕುರಿಗಳನ್ನು ಒಂದು ರಾತ್ರಿ ಕೂಡಿ ಹಾಕಿಸುವುದು ಸಾಮಾನ್ಯ. ಗೊಂದಲ ಪರಿಹರಿಸಿಕೊಂಡ ನಾನು ಮನೆ ಕಡಿ ಹೆಜ್ಜೆ ಹಾಕಿದ್ದೆ. ಹಾಗಾಗಿ ನನಗೆ ಕೊಳ್ಳಿದೆವ್ವ ಅಲ್ಲ ಎಂಬುದು ಖಚಿತವಾಗಿ ಗೊತ್ತಿತ್ತು.

ಕುರಿಗಳನ್ನು ಮಧ್ಯಕ್ಕೆ ಕೂಡಿ ಹಾಕಿ ಎರಡು ಕಡೆ ಸಣ್ಣಗೆ ಬೆಂಕಿ ಹಾಕಿದ್ದರಿಂದ ಅಲ್ಲೊಮ್ಮೆ ಇಲ್ಲೊಮ್ಮೆ ಬೆಂಕಿ ಕಾಣಿಸಿಕೊಂಡು ಅತ್ತಿತ್ತ ಅಡ್ಡಾಡಿದಂತೆ ಕಾಣುತ್ತಿತ್ತು. ನಾನು ಏನು ಹೇಳಿದರೂ ಕೇಳಿಸಿಕೊಳ್ಳದ ಜನ ಕೊಳ್ಳಿದೆವ್ವವೇ ಎಂದು ವಾದಿಸಿದರು. ಸಮೂಹ ಸನ್ನಿಗೆ ಒಳಗಾಗಿದ್ದ ಜನ ನಾನು ಹೇಳಿದ ಸತ್ಯ ಕೇಳಿಸಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ಏನಾದ್ರು ಮಾಡಿಕೊಳ್ಳಿ ಎಂದು ಮನೆ ಹಾದಿ ಹಿಡಿದೆ. ಇಡೀ ಊರಿಗೆ ಕೊಳ್ಳಿದೆವ್ವ ತೋರಿಸಿದ ಕೀರ್ತಿಗೆ ಪುಟ್ಟಕ್ಕ ಪಾತ್ರಳಾದಳು.

ಆದೇ ರೀತಿಯ ಸಮೂಹ ಸನ್ನಿ ಈಗ ವರಮಹಾಲಕ್ಷ್ಮಿ ಹಬ್ಬದ ಕಡೆಗೆ ತಿರುಗಿದೆ. ಕೇವಲ ಹತ್ತು ವರ್ಷದ ಹಿಂದೆ ಒಂದೆರಡು ಜಾತಿಗೆ ಸೀಮಿತವಾಗಿದ್ದ ಈ ಹಬ್ಬ ಇಂದು ಯಾವ ಕೇರಿಯನ್ನು ಬಿಟ್ಟಿಲ್ಲ. ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಕ್ಕೂ ವಿಸ್ತಾರಗೊಂಡಿದೆ. ಪೈಪೋಟಿಯ ನಡುವೆ ಲಕ್ಷ್ಮಿ ಎಂದುಕೊಂಡಿರು ಕಳಸವನ್ನು ಅಲಂಕರಿಸಿ ಆರಾಧಿಸುತ್ತಿದ್ದಾರೆ. ಹಬ್ಬ ಆಚರಿಸದಿದ್ದರೆ ಅವಮಾನ ಆಗಲಿದೆ ಎನ್ನುವಷ್ಟರ ಮಟ್ಟಿಗೆ ಫ್ಯಾಷನ್ ರೂಪ ಪಡೆದುKollidevva-2ಕೊಂಡಿದೆ.

ಕಲ್ಲು, ಮರ, ಕಂಚು, ತಾಮ್ರ, ಹಿತ್ತಾಳೆಯಲ್ಲಿ ಮಾಡಿದ ವಿಗ್ರಹವನ್ನು ದೇವರೆಂದು ನಂಬಿ ಪೂಜಿಸಿದ ಜನ ಈ ಹಬ್ಬದ ಮೂಲಕ ಕಾಗದದ ತುಂಡಿನ ನೋಟನ್ನೂ ದೇವರು ಎಂದು ಪೂಜಿಸಲು ಶುರು ಮಾಡಿದ್ದಾರೆ. ಹಣದ ಬಗ್ಗೆ ಇರುವ ಜನರ ಹಪಾಹಪಿ ಎಷ್ಟೆಂಬುದಕ್ಕೆ ಈ ಹಬ್ಬ ಕಣ್ಣೆದುರು ವಿಸ್ತರಣೆಗೊಂಡಿರುವುದೇ ಸಾಕ್ಷಿ. ಕೊಳ್ಳಿದೆವ್ವ ನೋಡಲು ನಮ್ಮೂರಿನ ಜನ ಮುಗಿಬಿದ್ದಂತೆ ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಎಲ್ಲರೂ ಮುಗಿಬಿದ್ದಿದ್ದಾರೆ. ಕಾಯಕ ಮಾಡಿಯೋ, ಮಾಡದೆಯೋ ಲಕ್ಷ್ಮಿಯ ವರದಿಂದ ಹಣ ಸಂಪಾದನೆ ಆದರೆ ಸಾಕು ಎಂಬ ಮನಸ್ಥಿತಿ ಹೆಚ್ಚುತ್ತಿದೆ. ಇದು ಅಪಾಯಕಾರಿ!.

ಸಾಮಾಜಿಕ ನ್ಯಾಯದ ಸಮಾಧಿ ಕಟ್ಟಲು “ಹಾರ್ದಿಕ” ಸ್ವಾಗತ

                                                                                                                                                       – ಶ್ರೀಧರ್ ಪ್ರಭು

ಕಾಲವೆಂಬ ಪ್ರವಾದಿ

ಅನೇಕ ಬಾರಿ ಕಾಲವೇ ಒಂದು ಪ್ರವಾದಿಯ ಹಾಗೆ ಮುಂಬರುವ ಅಪಾಯಕಾರಿ ಭವಿಷ್ಯದ ಮುನ್ಸೂಚನೆ ನೀಡುತ್ತಿರುತ್ತದೆ. ಇಂದಿಗೆ ಸರಿಯಾಗಿ ಎರಡೂವರೆ ದಶಕಗಳ ಹಿಂದೆ (ಆಗಸ್ಟ್ – ಸೆಪ್ಟೆಂಬರ್ ೧೯೯೦) ನಡೆದ ಎರಡು ಘಟನೆಗಳು ಬರಲಿರುವ ಭವಿಷ್ಯದ ಬಗ್ಗೆ ಸ್ಪಷ್ಟ ಮುನ್ಸೂಚನೆ ನೀಡಿದ್ದವು. ಆದರೆ ಗಮನಿಸಬೇಕಾದವರು ಇವುಗಳನ್ನು ಗಮನಿಸಲೇ ಇಲ್ಲ. ಹೀಗಾಗಿ ಇವು ಅತ್ಯಂತ ಶಾಂತವಾಗಿ ಕಾಲದ ಗರ್ಭಕ್ಕೆ ಸೇರಿ ಮರೆಯಾಗಿ ಹೋದವು.

ಮೊದಲ ಘಟನೆ ನಡೆದದ್ದು ೨೬ ನೆ ಆಗಸ್ಟ್, ೧೯೯೦ ರಂದು ಸಂಘ ಪರಿವಾರದ ಮುಖವಾಣಿ “ಓರ್ಗನೈಸರ್” ಅಂದು ತನ್ನ ಮುಖಪುಟದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ಹೀಗೆ ಬರೆಯಿತು:
“The havoc the politics of reservation is playing with the social fabric is unimaginable. It provides a premium for mediocrity, encourages brain-drain and sharpens caste-divide”

(ಮೀಸಲಾತಿ ರಾಜಕಾರಣ ನಮ್ಮ ಸಮಾಜದ ಅಡಿಪಾಯವನ್ನು ನಾವು ಊಹಿಸಲಾಗದಷ್ಟು ಘಾಸಿಗೊಳಿಸುತ್ತಿದೆ. ಮೀಸಲಾತಿ ಅಯೋಗ್ಯತನವನ್ನು ಉತ್ತೇಜಿಸಿ, ಪ್ರತಿಭಾ ಪಲಾಯನಕ್ಕೆ ಕಾರಣವಾಗುವುದಲ್ಲದೇ, ಜಾತಿಯ ಕಂದರವನ್ನು ಮತ್ತಷ್ಟು ಆಳಗೊಳಿಸುತ್ತದೆ).

ಎರಡನೇ ಘಟನೆ ನಡೆದದ್ದು ಇದಾದ ಒಂದು ತಿಂಗಳ ನಂತರ, ೨೮ ಸೆಪ್ಟೆಂಬರ್, ೧೯೯೦ ರಲ್ಲಿ.
ಅಂದಿನ ಗುಜರಾತ್ ನಲ್ಲಿ ಅಧಿಕಾರದಲ್ಲಿದ್ದ ಚಿಮಣ್ ಭಾಯಿ ಪಟೇಲ್ ನೇತೃತ್ವದ ಜನತಾ ದಳ ಸರಕಾರ ಒಂದು ಅಧಿಕೃತ ಹೇಳಿಕೆ ನೀಡಿತು

Hardik-2
“ನಾವು ನಮ್ಮ ರಾಜ್ಯದಲ್ಲಿ ಜಾರಿಯಲ್ಲಿರುವ ೩೧% ಮೀಸಲಾತಿಯನ್ನೇ (೧೦% ಒಬಿಸಿ ಮತ್ತು ೨೧% ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ) ಸರಿಯಾಗಿ ಜಾರಿಗೊಳಿಸದೆ ಎಷ್ಟೋ ಹುದ್ದೆಗಳು ಖಾಲಿ ಉಳಿದಿವೆ. ಹೀಗಾಗಿ ನಾವು ಮಂಡಲ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸುವುದಿಲ್ಲ.”
ಇದಾದ ನಂತರ ಗುಜರಾತ್ ನಲ್ಲೊಂದು ದಿವ್ಯ ಮೌನ ಆವರಿಸಿತು. ದಲಿತ ಮತ್ತು ಹಿಂದುಳಿದ ವರ್ಗಗಳು ತಮ್ಮ ಪೂರ್ವ ಜನ್ಮದ ಪ್ರಾರಬ್ಧವಿದು ಎಂದುಕೊಂಡು ಸುಮ್ಮನಾದರೆ, ಮೇಲ್ವರ್ಗಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟವು. ಹೀಗೆ ಗುಜರಾತ್ ಎಂದಿಗೂ ಎಂದೆಂದಿಗೂ ಮುಂಬರುವ ಭವಿಷ್ಯದ ಮುನ್ಸೂಚನೆ ನೀಡುತ್ತಲೇ ಬಂದಿದೆ. ಗಮನಿಸಬೇಕಾದವರು ಗಮನಿಸಿಲ್ಲ.
ಇಂದು ಗುಜರಾತ್ ನಲ್ಲಿ ಪರಿಶಿಷ್ಟ ಜಾತಿಗಳಿಗೆ ೭%, ಪರಿಶಿಷ್ಟ ಪಂಗಡಗಳಿಗೆ ೧೨% ಮತ್ತು ಹಿಂದುಳಿದ ವರ್ಗಗಳಿಗೆ ೨೭% ಮೀಸಲಾತಿ ಜಾರಿಯಲ್ಲಿದೆ.

ನಿಸರ್ಗವೂ ಪಟೇಲನದೇ

ಇದೆಲ್ಲ ನಡೆದಾಗ, ಇಂದು ಲಕ್ಷಾನುಗಟ್ಟಲೆ ಪಟಿದಾರರನ್ನು ಸಂಘಟಿಸಿ ಗುಜರಾತನ್ನು ಸ್ಥಬ್ದಗೊಳಿಸುತ್ತಿರುವ ಹಾರ್ದಿಕ ಪಟೇಲ್ ಎಂಬ ಇಪ್ಪತ್ತೊಂದರ ಎಳಸು ಇನ್ನೂ ಹುಟ್ಟೇ ಇರಲಿಲ್ಲ.
ಇತ್ತೀಚಿಗೆ ಒಬ್ಬ ಪತ್ರಕರ್ತರು ಈ ಹಾರ್ದಿಕ ಪಟೇಲನನ್ನು ವಿಚಾರಿಸಿದರು “ನೀವುಗಳು ಸಭೆ ಸೇರುವ ಮುಂಚೆ ಪೋಲೀಸರ ಅನುಮತಿ ಪಡೆಯಲಿಲ್ಲವೇಕೆ?”
ಈ ಹುಡುಗ ಹೇಳುವುದು “ಭಯೋತ್ಪಾದಕರು ದೇಶದೊಳಗೆ ಬರಲು ಅನುಮತಿ ಪಡೆದು ಬರುತ್ತಾರೆಯೇ?”

ಹೀಗೆ ತನ್ನನ್ನು ಭಯೋತ್ಪಾದಕರಿಗೆ ಹೋಲಿಸಿಕೊಳ್ಳುವ ಈ ಹುಡುಗ ಇಂದು ಗುಜರಾತಿನಲ್ಲಿ ಪ್ರಚಲಿತವಿರುವ ಒಂದು ಗಾದೆಯನ್ನು ನೆನಪಿಸುವಂತಿದ್ದಾನೆ: “ಇದು ನಿನ್ನದಲ್ಲದಿದ್ದರೆ ಪಟೇಲನದು”.

ಮನುಷ್ಯರ ವಿಷಯ ಹೋಗಲಿ, ನಿಸರ್ಗವೂ ಪಟೇಲನದೇ. ಆಕಾಶ, ಪಾತಾಳ, ಸಮುದ್ರ ನದಿ ಗಳ ಮೇಲೆಲ್ಲಾ ಪಟೇಲನದೇ ಹಕ್ಕು. ಒಟ್ಟು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯ ಪಟೇಲ್ ಸಮುದಾಯದವರೇ ಬಹುತೇಕ ಬಾರಿ ಮುಖ್ಯಮಂತ್ರಿಗಳು. ೧೯೬೦ ರಲ್ಲಿ ಹಿಂದಿನ ಮುಂಬೈ ಪ್ರಾಂತ್ಯದಿಂದ ಬೇರ್ಪಟ್ಟು ನಿರ್ಮಾಣವಾದ ಗುಜರಾತ್ ಪ್ರಥಮ ಮುಖ್ಯ ಮಂತ್ರಿಗಳು ಗಾಂಧೀಜಿಯವರ ವೈದ್ಯರಾಗಿದ್ದ ಡಾ. ಜೀವರಾಜ್ ಮೆಹತ. ನಂತರದಲ್ಲಿ ೧೯೭೩ ರ ತನಕ ಪಟೇಲರಿಗೆ ರಾಜ್ಯಾಧಿಕಾರ ದೊರೆತಿರಲಿಲ್ಲ. ಅಂದು ಕಾಂಗ್ರೆಸ್ ನಲ್ಲಿದ್ದ ಚಿಮನ್ ಭಾಯಿ ಪಟೇಲ್ ಗುಜರಾತ್ ನ ಮೊದಲ ಪಟೇಲ್ ಮುಖ್ಯ ಮಂತ್ರಿ.
ಇದಕ್ಕೆ ಮೊದಲು ಮತ್ತು ನಂತರದಲ್ಲಿ ಬಹುತೇಕ ಮಂತ್ರಿಮಂಡಲಗಳು ಪಟೇಲರ ಪ್ರಾತಿನಿಧ್ಯ ಕಂಡವು. ಸೋಳಂಕಿಯವರ ಮಂತ್ರಿ ಮಂಡಲ ಬಿಟ್ಟರೆ ಬೇರೆಲ್ಲ ಮಂತ್ರಿ ಮಂಡಲಗಳಲ್ಲಿ ಪಟೇಲರು ಪ್ರಮುಖ ಖಾತೆ ಗಳನ್ನೇ ಪಡೆದಿದ್ದರು. ಗುಜರಾತ್ ರಾಜ್ಯದ ಅಧಿಕಾರದ ಚುಕ್ಕಾಣಿಯ ಕಾಲವನ್ನು ಬಿಡಿ ಬಿಡಿಯಾಗಿ ಲೆಕ್ಕ ಹಾಕಿದರೆ ಒಟ್ಟು ಹದಿನೈದು ವರ್ಷ ಮುಖ್ಯ ಮಂತ್ರಿಗಳಾಗಿದ್ದು ಪಟೇಲರೇ.
ನಬಾರ್ಡ್ ನ ಪೂರ್ವ ಅಧ್ಯಕ್ಷರಾಗಿದ್ದ ಡಾ. ಪ್ರಕಾಶ್ ಬಕ್ಷಿ ಆಯೋಗದ ಶಿಫಾರಸ್ಸಿನ ಮೇರೆಗೆ ೧೯೮೧ ರಲ್ಲಿ ಮೂರು ಹಂತಗಳ ಮೀಸಲಾತಿ ವ್ಯವಸ್ಥೆ ಜಾರಿ ಮಾಡಲು ಮುಂದಾದ ಮಧವಸಿನ್ಹ್ ಸೋಲಂಕಿ ಸರಕಾರ ೧೯೮೫ ರಲ್ಲಿ ರಾಜಿನಾಮೆ ಕೊಡಬೇಕಾಯಿತು. ಆದರೆ ೧೯೮೫ ರಲ್ಲಿ ನಡೆದ ಚುನಾವಣೆಗಳಲ್ಲಿ ಸೊಲಂಕಿ ಭರ್ಜರಿ ಬಹುಮತದೊಂದಿಗೆ (೧೪೯/೧೮೨) ಆಯ್ಕೆ ಯಾದರು. ಇದರಿಂದ ಹತಾಶರಾದ ಪಟೇಲರು ಕಾಂಗ್ರೆಸ್ಸನ್ನು ತೊರೆದರು. ನಂತರ ಈ ಕಡೆ ತಿರುಗಲೇ ಇಲ್ಲ.

ಇತ್ತ ಜುಲೈ ೧೯೭೩ ರಲ್ಲಿ ತಮ್ಮದೇ ಪಕ್ಷದ ಅಂದಿನ ಮುಖ್ಯ ಮಂತ್ರಿ ಘನಶ್ಯಾಮ್ ಓಜ್ಹ ರನ್ನು ಪದಚ್ಯುತ ಗೊಳಿಸಿ ಮುಖ್ಯ ಮಂತ್ರಿಯಾದ ಚಿಮಣ್ ಭಾಯಿ ಪಟೇಲ್ ೧೯೭೪ ರಲ್ಲಿ ಬ್ರಷ್ಟಾಚಾರ ಆರೋಪ ಹೊತ್ತು ಗದ್ದುಗೆ ಬಿಡಬೇಕಾಯಿತು. ಅಷ್ಟು ಹೊತ್ತಿಗೆ ಪಟೇಲರು ಕಾಂಗ್ರೆಸ್ ನಿಂದ ನಾನಾ ಕಾರಣಗಳಿಗೆ ದೂರವಾಗಿಬಿಟ್ಟಿದ್ದರು. ಹಾಗೆಯೇ ಚಿಮಣ್ ಭಾಯಿ ಕೂಡ ಜನತಾ ಪರಿವಾರಕ್ಕೆ ಸೇರಿ ವಿ ಪಿ ಸಿಂಗ್ ಸರಕಾರ ಕೇಂದ್ರದಲ್ಲಿ ಬಂದಾಗ ೧೯೯೦ ರ ಹೊತ್ತಿಗೆ ಗುಜರಾತ್ ನ ಜನತಾ ಪರಿವಾರದ ಪಾಳಯದಿಂದ ಮುಖ್ಯಮಂತ್ರಿಯಾದರು.

ಆಗ ಅಧಿಕಾರ ಗದ್ದುಗೆ ಕಸಿದ ಪಟೇಲರ ಪಾಳಯ ಪಕ್ಷಾತೀತವಾಗಿ ತಮ್ಮ ಜನಾಂಗದ ಕಪಿಮುಷ್ಟಿ ಯನ್ನು ಸಡಿಲಿಸಲೇ ಇಲ್ಲ.
ಆದರೆ ಇದಕ್ಕೆ ತಡೆ ಉಂಟಾಗಿದ್ದು ೨೦೦೧ ರಲ್ಲಿ. ಆ ವರ್ಷ ಗಾಂಧಿ ಜಯಂತಿಯ ದಿವಸವೇ, ವ್ಯಾಪಕ ಬ್ರಷ್ಟಾಚಾರ, ಭೀಕರ ಭೂಕಂಪ ಪರಿಹಾರ ಕಾರ್ಯವನ್ನು ವನ್ನು ಸರಿಯಾಗಿ ನಿಭಾಯಿಸದ ಆರೋಪ ಮತ್ತು ಕರ್ತವ್ಯಲೋಪದ ಆರೋಪಗಳು ಬಂದು ಕೇಶುಭಾಯಿ ಪಟೇಲ್ ರಾಜಿನಾಮೆ ನೀಡಿದ್ದರು. ಹೀಗೆ ಅಚಾನಕ್ಕಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಅದೊಂದು ಬಹುಮತವಿಲ್ಲದ ಸರಕಾರವಾಗಿತ್ತು ಮತ್ತು ಅವರ ಸಂಪೂರ್ಣ ಹಿಡಿತ ಪಟೇಲರ ಕೈಯಲ್ಲಿತ್ತು ಮತ್ತು ಪಟೇಲರಿಗೆ ಅತೀವ ಅಸಮಾಧಾನವೂ ಇತ್ತು. ಅಲ್ಲಿಗೆ ಸರಿಯಾಗಿ ಗೋಧ್ರ ಮತ್ತು ಗೋಧ್ರೋತ್ತರ ಗಲಭೆ ಗಳಿಂದಾಗಿ ಮೋದಿ ಸ್ಥಾನ ಗಟ್ಟಿ ಗೊಂಡಿತು. ಮೋದಿ ಸ್ಥಾನ ಗಟ್ಟಿಯಾದಷ್ಟು ಪಟೇಲರ ಸಿಟ್ಟೂ ಬಲಗೊಂಡಿತ್ತು.

ಗೋಧ್ರ ಕಾಂಡದ ವೇಳೆಗೆ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾಗಿದ್ದ ಪ್ರವೀಣ್ ತೊಗಡಿಯ ಒಬ್ಬ ಗುಜರಾತಿ ಪಟೇಲ್; ಹಾಗೆಯೇ ಗುಜರಾತ್ ವಿ.ಎಚ್. ಪಿ ನ ಅಧ್ಯಕ್ಷರು ಕೂಡ ಡಾ. ಜೈದೀಪ ಪಟೇಲ್. ಗೋಧ್ರಾ ಕಾಂಡದ ಬಾಬು ಬಜರಂಗಿ ಅಲಿಯಾಸ್ ಬಾಬು ಪಟೇಲ್ ಕೂಡ ಒಬ್ಬ ಪಟೇಲ್ ಎಂಬ ಸತ್ಯ ನಮಗೆ ಗೊತ್ತಿರಲಿ. ಮೋದಿ ಕ್ಯಾಬಿನೆಟ್ ನಲ್ಲಿ ಪಟೇಲರು ಇದ್ದರಾದರೂ ಇವರೆಲ್ಲ ಆನಂದಿ ಬೆನ್ ಮಾದರಿಯ ಮೋದಿಗೆ ಜೈ ಹೇಳುವ “ನಿರುಪದ್ರವಿ” ಪಟೇಲರು. ಕೇಶುಭಾಯಿ ರಂಥಹ ಬಲಾಢ್ಯರನ್ನು ಮೋದಿ ವಸ್ತುಶಃ ತುಳಿದು ಬಿಟ್ಟಿದ್ದರು. ನಿಮಗೆ ಗೊತ್ತಿರಲಿ, ಮುಖ್ಯ ಮಂತ್ರಿಯಾಗಿ ನಿರಂಕುಶ ಅಧಿಕಾರ ಚಲಾಯಿಸಿದ ಕೇಶುಭಾಯಿ ಯಾವುದೋ ಒಂದು ದೇವಸ್ಥಾನದ ಟ್ರಸ್ಟಿ ಯಾಗಲು ಚುನಾವಣೆಗೆ ನಿಂತಾಗ ಅವರ ವಿರುದ್ಧ ಮೋದಿ ಪ್ರಚಾರಕ್ಕೆ ನಿಂತು ಸೋಲಿಸಿ ಬಿಟ್ಟಿದ್ದರು. ಹಿಂದೂ ಕೋಮುವಾದ ಬೆಳೆಸಲು ಅದಕ್ಕೆ ಸೀಮೆಯೆಣ್ಣೆ ಸುರಿಯಲು ತಮ್ಮ ಜನ ಬೇಕು ಆದರೆ ಅಧಿಕಾರ ಮಾತ್ರ ಮೋದಿಗೆ ಎಂಬ ಬಗ್ಗೆ ಪಟೇಲ್ ಸಮುದಾಯಕ್ಕೆ ತುಂಬಾ ಹಿಂಸೆ ಕೊಟ್ಟಿತ್ತು. ಅದರೂ ಏನೂ ಮಾಡುವಂತಿರಲಿಲ್ಲ.

ಹೀಗಾಗಿ ೨೦೦೭ ರ ವಿಧಾನಸಭಾ ಚುನಾHardik-3ವಣೆಯಲ್ಲಿ ಕೇಶುಭಾಯಿ ಪಟೇಲ್ ಭಾರತೀಯ ಜನತಾ ಪಾರ್ಟಿಯಲ್ಲಿದ್ದರೂ ಬಹಿರಂಗವಾಗಿಯೇ ಕಾಂಗ್ರೆಸ್ ಗೆ ಬೆಂಬಲ ನೀಡಿದರು. ಆದರೂ ಕೇಶುಭಾಯಿ ಪಟೇಲರನ್ನು ಪಕ್ಷ ಬಿಟ್ಟು ಹೊರಹಾಕಲಿಲ್ಲ. ಏಕೆಂದರೆ ಇಡೀ ಪಟೇಲ್ ಸಮುದಾಯ ತಿರುಗಿ ಬೀಳುವ ಅಪಾಯವಿತ್ತು. ಇದರಿಂದ ಹತಾಶರಾದ ಕೇಶುಭಾಯಿ ೨೦೧೨ ರಲ್ಲಿ ಗುಜರಾತ್ ವಿಕಾಸ ಪಕ್ಷ ಕಟ್ಟಿದರು. ಇದು ಸಂಘ ಪರಿವಾರದ ಮೇಲೆ ಪಟೇಲರ ಮೊದಲ ಬಹಿರಂಗ ವಿದ್ರೋಹ. ಇಡೀ ಪಟೇಲ್ ಸಮುದಾಯ ತನ್ನ ಹಣಬಲವನ್ನು ಪಣಕಿಟ್ಟು ಬಿಟ್ಟಿದ್ದರೂ ಎರಡೇ ಸ್ಥಾನಕ್ಕೆ ಕೇಶುಭಾಯಿ ಪಕ್ಷ ತೃಪ್ತಿ ಪಡಬೇಕಾಯಿತು. ಪಟೇಲರು ಈಗ ಹಲ್ಲುಕಿತ್ತ ಹಾವಾಗಿದ್ದರು. ಒಮ್ಮೆ ಮೋದಿ ಪ್ರಧಾನಿಯೆಂದು ಬಿಂಬಿತ ಗೊಂಡ ಮೇಲೆ ಪಟೇಲರ ಸಿಟ್ಟು ದವಡೆಗೆ ಮೂಲವಾಗಿಬಿಟ್ಟಿತ್ತು.
ಹೀಗಿದ್ದೂ ಪಟೇಲರು ಎಂದಿಗೂ ದಮನಿತ ವರ್ಗವಾಗಿರಲೇ ಇಲ್ಲ. ಇವರೇ ತಮ್ಮ ಜನಾಂಗದ ಬಗ್ಗೆ ಹೇಳಿಕೊಳ್ಳುವಂತೆ ಇವರದ್ದು ಕ್ಷತ್ರೀಯ ವಂಶವಂತೆ. ಕಾಲಾಂತರದಲ್ಲಿ ಗ್ರಾಮಗಳ ಮತ್ತು ದೊಡ್ಡ ಜಹಗೀರುಗಳ ಮಾಲೀಕರಾದರು. ಇಂದು ಭಾರತ ಮತ್ತು ವಿದೇಶಗಳ ಔಷಧಿ ಉದ್ಯಮ ಪಟೇಲರ ಕೈಯಲ್ಲಿದೆ. ಅಮೆರಿಕೆಯ ಸುಮಾರು ೨೨೦೦೦ ಹೋಟೆಲ್ ಗಳ ಸಿಂಹ ಪಾಲು ಪಟೇಲ ರದ್ದೇ. ಇಂದಿನ ಮುಖ್ಯ ಮಂತ್ರಿ ಮತ್ತು ಮೋದಿ ಪ್ರತಿನಿಧಿ ಆನಂದಿ ಬೆನ್ ಪಟೇಲರ ಮಂತ್ರಿಮಂಡಲದಲ್ಲಿ ಏಳು ಜನ ಪಟೇಲರಿದ್ದಾರೆ; ಹಾಗೇ ಗುಜರಾತ್ ನ ವಿಧಾನ ಸಭೆಯಲ್ಲಿ ಒಟ್ಟು ೧೨೦ ಜನ ಶಾಸಕರು ಕೂಡ ಪಟೇಲರೇ.
ಇದೆಲ್ಲ ಇತಿಹಾಸದ ವಿಷಯ. ವರ್ತಮಾನದಲ್ಲಿ ನಡೆಯುತ್ತಿರುವ ಮೀಸಲಾತಿ (ವಿರೋಧಿ) ಅಂದೋಲನಕ್ಕೆ ಮೂರು ಮುಖ್ಯ ಕಾರಣಗಳು ಮತ್ತು ಆಯಾಮಗಳಿವೆ.

ಪ್ರಯೋಗ ಶಾಲೆಯಲ್ಲಿ ಪಟೇಲರೆಂಬ ಬಲಿಪಶುಗಳು
ಮೊದಲನೇದ್ದು, ಗುಜರಾತ್ ಎಂಬ ಪ್ರಯೋಗ ಶಾಲೆಯಲ್ಲಿ ಪಟೇಲರೆಂಬ ಬಲಿಪಶುಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಕೊಚ್ಚಿ ಹಾಕುವ ಮೊದಲ ಪ್ರಯತ್ನ. ಇಂದು ಯಾವ ಸಾಮಾಜಿಕ ಅಥವಾ ರಾಜಕೀಯ ಪ್ರಯೋಗವನ್ನು ಮೊದಲು ಪರಿವಾರಕ್ಕೆ ಮೊದಲ ಸುರಕ್ಷಿತ ಪ್ರಯೋಗ ಶಾಲೆ ಗುಜರಾತ್ ಎಂಬುದು ನಿರ್ವಿವಾದಿತ.

ಹಾಗಾಗಿಯೇ, ಇದೇ ಸಮುದಾಯ ನಿಯಂತ್ರಿಸುವ ವಿಶ್ವ ಹಿಂದೂ ಪರಿಷತ್ತು ಮೀಸಲಾತಿ ಯನ್ನು ಕೊನೆಗೊಳಿಸಬೇಕು ಎಂದು ಖಚಿತ ಸ್ವರದಲ್ಲಿ ಹೇಳುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ಎರಡನೇ ಸಾರಿ ಸಾಕಷ್ಟು ಪಟೇಲರ ಸಮುದಾಯದ ಕೈಯಲ್ಲಿದ್ದ ವಿಶ್ವ ಹಿಂದೂ ಪರಿಷತ್ತಿನ ನೇತೃತ್ವವನ್ನು ತುಳಿದರು. ಹೀಗೆ ಇದು ಒಟ್ಟಾರೆ ಕೋಮುವಾದಿ ನೇತೃತ್ವ ಯಾರ ಕೈಗಿರಬೇಕು ಎಂದು ನಿರ್ಧರಿಸಲು ಎರಡು ಬಣಗಳ ನಡುವಿನ ಹೋರಾಟ.

ಗುಜರಾತಿನ ದಲಿತ ಮತ್ತು ಹಿಂದುಳಿದ ಸಮುದಾಯ ಹೇಗೂ ಕೋಮು ವಿಷದಲ್ಲಿ ನೆಂದು ತೊಪ್ಪೆಯಾಗಿದೆ. ಹೀಗಾಗಿ ಇಲ್ಲಿ ಇಂಥಹ ಪ್ರಯೋಗಗಳು ಸುಲಭ ಸಾಧ್ಯ. ಸಂವಿಧಾನವನ್ನು ನಾಶಮಾಡಲು ಅತ್ಯಂತ ಸುಲಭದ ಮಾರ್ಗ ಮೀಸಲಾತಿ ವಿರೋಧ ಎಂಬುದು ಇವರಿಗೆ ಮನದಟ್ಟಾಗಿದೆ. ಮೊದಲ ಕೆಲ ದಿವಸ “ತಮ್ಮದೇ” ಆದ ಆನಂದಿ ಬೆನ್ ಸರಕಾರದಿಂದ ಪಟೇಲರ ಸಂಘಟನೆ ಮತ್ತು ರಾಲಿಗಳಿಗೆ ಬಹಿರಂಗವಾಗಿಯೇ ಬೆಂಬಲ ಸಿಕ್ಕಿತು. ಚಳುವಳಿಕಾರರ ಲಕ್ಷಾಂತರ ವಾಹನಗಳಿಗೆ ಟೋಲ್ ಕೂಡ ಮಾಫಿ ಮಾಡಲಾಗಿದ್ದು ಪಬ್ಲಿಕ್ ಗ್ರೌಂಡ್ ನಂತಹ ನಗರ ನಡು ಮಧ್ಯದ ಮೈದಾನವನ್ನು ಹೆಚ್ಚು ಕಡಿಮೆ ಪುಗಸಟ್ಟೆಯಾಗಿಯೇ ನೀಡಲಾಗಿತ್ತು. ಹೀಗೆ ಅಧಿಕಾರದಲ್ಲಿರುವ ಪಕ್ಷ ಮತ್ತು ಪರಿವಾರದ ಬೆಂಬಲವಿಲ್ಲದೆ ಒಬ್ಬ ಮೀಸೆ ಸರಿಯಾಗಿ ಬಾರದ ಹುಡುಗ ಐದು ಲಕ್ಷ ಜನರನ್ನು ಸಂಘಟಿಸುವುದು ಸಾಧ್ಯವೇ? .

ಗುಜರಾತ್ ಮಾದರಿ

ಎರಡನೇ ಆಯಾಮ ಗುಜರಾತ್ ನ ಒಟ್ಟಾರೆ ಅರ್ಥಿಕ ದುರ್ಗತಿ. ಗುಜರಾತ್ ಅಭಿವೃದ್ಧಿಯ ಮಾದರಿ ಎಂಬ ‘ಗೊಬೆಲ್ಸ್ ಸತ್ಯ’ ವನ್ನು ಎಷ್ಟು ಬಾರಿ ಕೂಗಿ ಹೇಳಿದರೂ “ತಮ್ಮ ದೇವರ ಸತ್ಯ” ಪಟೇಲರಿಗೆ ತಿಳಿದೇ ಇದೆ. ತಮ್ಮ ವ್ಯಾಪಾರ ವಹಿವಾಟುಗಳು ನಿಧಾನದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿರುವುದು ಪಟೇಲರಿಗೆ ಮಾತ್ರವಲ್ಲ ಗುಜರಾತಿನ ಎಲ್ಲ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ತರಿಗೆ ಸ್ಪಷ್ಟವಾಗಿ ಗೋಚರವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅದಾಣಿ, ಅಂಬಾನಿ ಮಾದರಿಯ ಕೆಲವೇ ಕೆಲವು ಬೆರಳೆಣಿಕೆಯ ಮಂದಿಗೆ ಮಣೆ ಹಾಕುವುದು ನೋಡಿ ಪಟೇಲ ಸಮುದಾಯ ತಮ್ಮ ಮಕ್ಕಳ ಕತ್ತಲೆ ಭವಿಷ್ಯ ವನ್ನು ಈಗಾಗಲೇ ಗ್ರಹಿಸಿದ್ದಾರೆ. ಕೇವಲ ದುಡ್ಡು ಲೇವಾದೇವಿ ವ್ಯವಹಾರ ಮಾಡಿ ದುಡ್ಡು ಮಾಡುತ್ತಿದ್ದವರಿಗೆ ಈಗ ಯಾವ ಸರಕಾರೀ ನೌಕರಿ ಅಥವಾ ಖಾಸಗಿ ನೌಕರಿಯೂ ಸಿಕ್ಕುತ್ತಿಲ್ಲ. ಅನೇಕ ದೇಶಗಳು ಪಟೇಲರ ಹೆಸರು ಕಂಡ ಕೂಡಲೇ ವೀಸ ಕೂಡ ನೀಡುತ್ತಿಲ್ಲ. ಈ ಸಮುದಾಯದ ಯುವ ಜನ ಒಟ್ಟಾರೆಯಾಗಿ ಪುಡಿ ರಾಜಕಾರಣ, ವ್ಯಾಪಾರ ವ್ಯವಹಾರ ಮಾಡಿ ಅದರಲ್ಲೇ ಎಷ್ಟು ಮುಳುಗಿ ಬಿಟ್ಟಿದ್ದಾರೆ ಎಂದರೆ ಹೆಚ್ಚಿನ ಜನ ಜನ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗುವುದು ಹೋಗಲಿ, ನೆಪಕ್ಕೆ ಬರೆಯುವಷ್ಟು ಸಾಮರ್ಥ್ಯ ಕೂಡ ಕಳೆದುಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಒಬ್ಬ ಸಮರ್ಥ ಸಾಹಿತಿ, ಕವಿ, ವಿಜ್ಞಾನಿ ಹೀಗೆ ಯಾವುದೇ ಅಕ್ಷರಕ್ಕೆ ನಂಟಿರುವ ಯಾವ ಕಸುಬನ್ನೂ ಹತ್ತಿರ ಸೇರಿಸಿಕೊಂಡಿಲ್ಲ. ಒಂದು ಸಮಾಜ ಕೋಮು ವಿಷವನ್ನು ಸೇವಿಸಿ ಬಿಟ್ಟರೆ ಎಷ್ಟೊಂದು ಹಾನಿ ಯಾಗುತ್ತದೆ ಎಂಬುದಕ್ಕೆ ಇದೇ ಜೀವಂತ ಉದಾಹರಣೆ.

ಕೋಲು ಯಾರದೋ ಅವರದ್ದೇ ಎಮ್ಮೆ

ಮೂರನೇ ಆಯಾಮ ಒಟ್ಟಾರೆ ಕಾನೂನು ವ್ಯವಸ್ಥೆಯ ಕುಸಿತದ್ದು. ಗುಜರಾತಿನಲ್ಲಿ ಕಾನೂನು ಎಂಬುದು ಒಂದು ಕೋಲು ಇದ್ದ ಹಾಗೆ. ಕೋಲು ಯಾರದೋ ಅವರದ್ದೇ ಎಮ್ಮೆ ಎಂಬ ಗಾದೆಯ ಹಾಗೆ. ಬಹು ಸಂಖ್ಯೆಯಲ್ಲಿರುವ ತಾವು ಳಾಠಿ ಬೀಸಿದರೆ ಎಟುಕದ ವಸ್ತುವೇ ಇಲ್ಲ ಎಂಬ ಗರ್ವ. ಏಕೆಂದರೆ ಪಟೇಲರು ಕ್ಷತ್ರಿಯರಂತೆ ರಾಜ್ಯವಾಳಿದ ವರ್ಗ; ಹಾಗಾಗಿ ಇತಿಹಾಸದುದ್ದಕ್ಕೂ ಅಕ್ಷರದಿಂದ ವಂಚಿತರಾದ ದಲಿತ ಮತ್ತು ಹಿಂHardik-1ದುಳಿದವರಂತಲ್ಲ. ರಸ್ತೆಗಿಳಿದು ಹೋರಾಟ ಮಾಡಿದ ಜಾಟರ ಮಾದರಿಯಲ್ಲೇ ಹೆಜ್ಜೆ ಇಟ್ಟರೆ ಇಂದಲ್ಲ ನಾಳೆ ನೌಕರಿಯಲ್ಲಿ ಅಲ್ಲದಿದ್ದರೂ ಇನ್ನೂ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಖಚಿತ ಎಂಬುದು ಇವರಿಗೆ ತಿಳಿದಿದೆ. ಈ ಹೋರಾಟದ ಸಂದಿನಲ್ಲಿ ಆನಂದಿ ಬೆನ್ ತರಹದ ಡಮ್ಮಿ ಮುಖ್ಯಮಂತ್ರಿ ನಡೆಯದು, ಮೋದಿಯನ್ನು ಅವಲಂಬಿಸದ ನಿಜವಾದ ಪ್ರಾತಿನಿಧ್ಯ ಕೊಡಿ ಎಂಬ ಬೇಡಿಕೆ ಇವರದ್ದು.

ಸಾರ್ವತ್ರಿಕ ವ್ಯಾಧಿಯ ಸ್ವರೂಪ
ಇಂದು ಪಟೇಲರ ಹೋರಾಟ ದೇಶವ್ಯಾಪಿ ಪಡೆದು ಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಇಂದು ಹಾರ್ದಿಕ ಪಟೇಲ್ ಗುಜರಾತಿಯಲ್ಲಿ ಮಾತನಾಡುತ್ತಿಲ್ಲ ಪ್ರಜ್ಞಾಪೂರ್ವಕವಾಗಿ ಹಿಂದಿಯಲ್ಲಿ ಮಾತನಾಡುತ್ತಿದ್ದಾನೆ. ಇದು ಮೋದಿ ಕಿವಿಗೆ ಕೇಳಿಸಲೆಂದು ಮಾತ್ರವಲ್ಲ ಇನ್ನಿತರ ಬಲಾಢ್ಯ ಜಾತಿಗಳನ್ನು ಒಟ್ಟು ಗೂಡಿಸಿಕೊಳ್ಳುವ ಹುನ್ನಾರ. ಇವನು ಹೇಳುತ್ತಿರುವುದು: ಬಿಹಾರದ ಕೂರ್ಮಿ ಜನಾಂಗ ಮತ್ತು ಆಂಧ್ರದ ಕಮ್ಮ ಜನಾಂಗ ನಮ್ಮವರೇ. ನಾವು ಅವರೆಲ್ಲರೂ ಕ್ಷತ್ರೀಯರೇ! ಹೀಗೆ ಪೂರ್ವ ಮತ್ತು ಉತ್ತರದ ಕೊಂಡಿ ಬಿಹಾರದ ಚುನಾವಣಾ ಮತ್ತು ದಕ್ಷಿಣಕ್ಕೆ ಹೆಬ್ಬಾಗಿಲು ಆಂಧ್ರ / ತೆಲಂಗಾಣಗಳ ಬಲಿಷ್ಟರ ಜಾತಿ ಪ್ರಜ್ಞೆ ಕೆರಳಿಸಲು ಏನೆಲ್ಲಾ ಸಾಧ್ಯವೋ ಅದೆಲ್ಲ ಮಾಡಲಾಗುತ್ತಿದೆ.

ಮೋದಿಯವರ ಜಾತಿಗೇ ತೊಂದರೆ!

ಪಟೇಲರು ಮೀಸಲಾತಿ ಕೇಳುತ್ತಿರುವುದು ಒಬಿಸಿ ವರ್ಗದಲ್ಲಿ. ಹೀಗಾಗಿ, ಈ ಎಲ್ಲ ಪ್ರಹಸನದಲ್ಲಿ ಪಾಠವಿರುವುದು ದಲಿತರಿಗಲ್ಲ, ಪರಿವಾರದ ಬೆನ್ನೆಲುಬಾಗಿರುವ ಓ ಬಿ ಸಿ ಗಳಿಗೆ. ಒಂದು ವೇಳೆ ಬಲಾಢ್ಯ ಪಟೇಲರಿಗೆ “ಸೂಕ್ತ” ಪ್ರಾತಿನಿಧ್ಯ ಸಿಕ್ಕರೆ ಇಂದು ಮೋದಿಯವರಂಥ (ಘಂಚಿ – ಗಾಣಿಗ) ಸಣ್ಣ ಪುಟ್ಟ ಸಮುದಾಯ ಗಳು ಒಬಿಸಿ ಪಟ್ಟಿಯಿಂದ ಕಣ್ಮರೆ ಯಾಗುತ್ತವೆ. ಇಂದು ಹಿಂದುಳಿದವರು ಬುದ್ಧ ಬಸವ ಫುಲೆ ಮತ್ತು ಅಂಬೇಡ್ಕರ್ ಪರಂಪರೆಗೆ ಬರದಿದ್ದರೆ ಈ ಪ್ರಯೋಗದ ಮೊಟ್ಟ ಮೊದಲ ಬಲಿಪಶುಗಳಾಗಿ ಬಿಡುತ್ತಾರೆ. ಆದ್ದರಿಂದ ಸಂವಿಧಾನವನ್ನೇ ತಮ್ಮ ಧರ್ಮ ಗ್ರಂಥ ಮತ್ತು ಅಂಬೇಡ್ಕರ್ ಚಿಂತನೆಯೇ ತಮ್ಮ ಅಸ್ತಿತ್ವ ಮತ್ತು ಹೋರಾಟದ ಮೂಲ ದ್ರವ್ಯವಾಗಿಸದಿದ್ದರೆ ಹಿಂದುಳಿದ ವರ್ಗಗಳು ಈ ಪ್ರಯೋಗಶಾಲೆ ಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗುವುದು ಖಚಿತ.
ನಂತರ ಸರದಿ ದಲಿತರದ್ದು. ಅಂಬೇಡ್ಕರ್ ವಿಚಾರಧಾರೆಯನ್ನು ತಮ್ಮ ಪೇಟೆಂಟ್ ಎಂದುಕೊಳ್ಳದೆ ವಿಶ್ವಮಾನ್ಯ ಪ್ರವಾದಿ ಸ್ವರೂಪದ ಅಂಬೇಡ್ಕರ್ ವಾದವನ್ನು ಸರ್ವತ್ರೀಕರಣಗೊಳಿಸುವ ಎಲ್ಲ ದಮನಿತ ವರ್ಗಗಳಿಗೂ ಔಷಧಿ ಮಾದರಿಯಲ್ಲಿ ಒದಗಿಸುವ ಐತಿಹಾಸಿಕ ಜವಾಬ್ದಾರಿ ದಲಿತರ ಮೇಲಿದೆ.

ಆರ್. ಎಲ್. ಜಾಲಪ್ಪಗೆ ‘ಅರಸು ಪ್ರಶಸ್ತಿ’ ಎಂಬ ವ್ಯಂಗ್ಯ

                                                                                                       ಬೆಳಚಿಕ್ಕನಹಳ್ಳಿ ಶ್ರೀನಾಥ್

ಆರ್.ಎಲ್.ಜಾಲಪ್ಪ… ರಾಜಕಾರಣದಲ್ಲಿರುವವರು ಹಾಗೂ ರಾಜ್ಯದ ಜನ ಈ ಹೆಸರನ್ನು ಬಹುತೇಕ ಮರೆತೇಹೋಗಿದ್ದಾರೆ. ಈಗ ಕರ್ನಾಟಕ ಸರ್ಕಾರ 2015ನೇ ಸಾಲಿನ ದೇವರಾಜ ಅರಸು ಪ್ರಶಸ್ತಿಯನ್ನು ಜಾಲಪ್ಪನವರಿಗೆ ನೀಡಿದೆ. ಜಾಲಪ್ಪ ಅವರ ರಾಜಕೀಯ ಶೈಲಿ ಹಾಗೂ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಇವರು ಮೂಡಿಸಿದ ಹೆಜ್ಜೆ ಗುರುತುಗಳೇನು ಎನ್ನುವ ಬಗ್ಗೆ ಇದು ಹೊಸ ಚರ್ಚೆಗೆ ಕಾರಣವಾಗಿದೆ.

ಆರ್.ಎಲ್.ಜಾಲಪ್ಪ ಮೂಲತಃ ಬೆಂಗಳೂರಿಗೆ ಅಂಟಿಕೊಂಡಂತಿರುವ ದೊಡ್ಡಬಳ್ಳಾಪುರ ತಾಲ್ಲೂಕಿನವರು; ಕ್ರಾಂತಿರಂಗದ ಮೂಲಕ ರಾಜಕಾರಣ ಆರಂಭಿಸಿದರೂ ಅಲ್ಪಕಾಲದಲ್ಲಿಯೇ ಜನತಾ ಪಕ್ಷಕ್ಕೆ ನೆಗೆದರು. ನಂತರ ಜನತಾ ದಳದ ಜೊತೆ ಗುರುತಿಸಿಕೊಂಡರು. ಅಲ್ಲಿಯೂ ನಿಲ್ಲದೇ ಕಾಂಗ್ರೆಸ್ ಸೇರಿದರು. ಈ ಎಲ್ಲ ಪಕ್ಷಗಳಿಂದಲೂ ಶಾಸಕರಾಗಿ, ಮಂತ್ರಿಯಾRLJಗಿ ಅಧಿಕಾರ ಅನುಭವಿಸಿದರು. ಸತತ ನಾಲ್ಕು ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ರಾಜ್ಯದಲ್ಲಿ ಸಹಕಾರ, ಕಂದಾಯ ಹಾಗೂ ಗೃಹ ಸಚಿವರಾಗಿ; ಕೇಂದ್ರದಲ್ಲಿ ದೇವೇಗೌಡ ಹಾಗೂ ಗುಜ್ರಾಲ್ ಸಂಪುಟಗಳಲ್ಲಿ ಜವಳಿ ಸಚಿವರಾಗಿ ಕೆಲಸ ಮಾಡಿದವರು ಜಾಲಪ್ಪ.

ಒಂದು ಕಾಲದಲ್ಲಿ ರಾಜ್ಯ ರಾಜಕಾರಣದ ‘ಶಕ್ತಿ ಮೂಲ’ ಆಗಿದ್ದದ್ದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು. ಈ ಟ್ರೆಂಡ್ ಅನ್ನು ಅತ್ಯಂತ ಕ್ಷಿಪ್ರವಾಗಿ ಗ್ರಹಿಸಿದ ಜಾಲಪ್ಪ ರಾಜ್ಯದ ಪ್ರಮುಖ ಕ್ಯಾಪಿಟೇಷನ್ ಕುಳವಾದರು; ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿದರು. ದಶಕಗಳ ಕಾಲ ಅವಿಭಜಿತ ಕೋಲಾರ ಜಿಲ್ಲೆಯನ್ನು ಆಳಿದರು. ಇದೆಲ್ಲದರಿಂದ ಜಾಲಪ್ಪನವರ ಸ್ವಂತದ ಅಭಿವೃದ್ಧಿಯೇನೋ ಚೆನ್ನಾಗಿಯೇ ಆಗಿದೆ. ಕೋಲಾರ, ದೊಡ್ಡಬಳ್ಳಾಪುರ ಮುಂತಾದೆಡೆ ಇವರ ಒಡೆತನದ ವೃತ್ತಿಪರ ಕಾಲೇಜುಗಳು ತಲೆಯೆತ್ತಿವೆ. ಅಲೀಪುರ ಸೇರಿದಂತೆ ಹಲವು ಕಡೆ ಇವರ ಮಾಲೀಕತ್ವದ ಎಸ್ಟೇಟ್ಗಳಿವೆ. ಆದರೆ, ಇವರು ಪ್ರತಿನಿಧಿಸುತ್ತಿದ್ದ ಚಿಕ್ಕಬಳ್ಳಾಪುರ ಕ್ಷೇತ್ರ ಮಾತ್ರ ಇವತ್ತು ಪಾತಾಳಕ್ಕೆ ಕುಸಿದಿದೆ. ಒಂದು ಕಾಲದಲ್ಲಿ ಮಲೆನಾಡಿನಂತೆ ಹಸಿರು ಚಿಮ್ಮುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರದಂಥ ತಾಲ್ಲೂಕುಗಳು ಕೂಡ ಇವತ್ತು ಬೆಂಗಾಡಿನಂತಾಗಿಬಿಟ್ಟಿವೆ. ನೀರಾವರಿ ವ್ಯವಸ್ಥೆ ಸರ್ವನಾಶವಾಗಿದೆ. ಅಂತರ್ಜಲ ಪಾತಾಳ ಮುಟ್ಟಿದೆ. ಜಿಲ್ಲೆಯ ನೂರಾರು ಹಳ್ಳಿಗಳಿಗೆ ಟ್ಯಾಂಕರ್ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಹೈನುಗಾರಿಕೆ, ರೇಷ್ಮೆ ಕೃಷಿ ಮಾಡುವವರು ದಿಕ್ಕೆಟ್ಟಿದ್ದಾರೆ. ಜಿಲ್ಲೆಯ ರೈತರಿಗೆ ಆಸರೆಯಾಗಿದ್ದ ಗೌರಿಬಿದನೂರಿನ ಸಿರಿಗುಪ್ಪ ಸಕ್ಕರೆ ಕಾರ್ಖಾನೆಯಂಥ ಹಲವು ಉದ್ದಿಮೆಗಳು ಬಂದ್ ಆಗಿವೆ. ಅವುಗಳಿಂದ ಬರಬೇಕಿದ್ದ ಬಾಕಿಗಾಗಿ ದಶಕಗಳಿಂದಲೂ ಹೋರಾಡಿ ಹೋರಾಡಿ ರೈತರು ಹೈರಾಣಾಗಿಹೋಗಿದ್ದಾರೆ. ದೊಡ್ಡಬಳ್ಳಾಪುರದ ಕೈಮಗ್ಗ ನೇಕಾರರು ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ. ಇವೆಲ್ಲವುಗಳಲ್ಲಿ ಜಾಲಪ್ಪನವರ ದಶಕಗಳ ಅಧಿಕಾರದ ಕೊಡುಗೆಯೂ ದೊಡ್ಡದಾಗಿದೆ.

ಇನ್ನು ಸಾಮಾಜಿಕ ನ್ಯಾಯಕ್ಕೆ ಇವರು ಸಲ್ಲಿಸಿದ ಕೊಡುಗೆಯೇನು ಎನ್ನುವುದನ್ನು ನೋಡೋಣ. ಜಾಲಪ್ಪ ಹಿಂದುಳಿದ ವರ್ಗದಿಂದ ಬಂದವರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಕ್ಕಲಿಗರು ಹಾಗೂ ಬಲಿಜರು ನಿರ್ಣಾಯಕ ಮತಶಕ್ತಿ. ಆದರೆ, ಮತದಾರರು ಜಾತಿಗೀತಿ ಯಾವುದನ್ನೂ ನೋಡದೇ ಜಾಲಪ್ಪ ಅವರನ್ನು ನಿರಂತರವಾಗಿ ಗೆಲ್ಲಿಸುತ್ತಾ ಹೋದರು. ಒಕ್ಕಲಿArasu-awardಗ ಸಮುದಾಯದ ಸಿ.ಭೈರೇಗೌಡರು ಜಾಲಪ್ಪನವರ ವಿರುದ್ಧ ಸ್ಪರ್ಧಿಸಿದಾಗಲೂ ಜನ ಜಾಲಪ್ಪನವರನ್ನೇ ಗೆಲ್ಲಿಸಿ ತಮ್ಮ ಜಾತ್ಯತೀತ ಮನೋಭಾವ ತೋರಿದ್ದರು. ಹೀಗೆ ಸಾಮಾನ್ಯ ಮತದಾರರು ತೋರಿದ ಪ್ರಬುದ್ಧತೆಯನ್ನಾಗಲಿ, ಸಾಮಾಜಿಕ ನ್ಯಾಯದ ಮನೋಭಾವವನ್ನಾಗಲಿ ಜಾಲಪ್ಪ ತೋರಲಿಲ್ಲ. ಜಿಲ್ಲೆಯಲ್ಲಿ ಸಾದಗೌಡರು, ಜೈನರು, ಬಲಿಜರು, ಮುಸ್ಲಿಮರು ಹೀಗೆ ಅನೇಕ ಅವಕಾಶವಂಚಿತ ಜಾತಿಗಳಿವೆ. ಈ ಯಾವ ಜಾತಿಯ ಯಾವೊಬ್ಬ ನಾಯಕನನ್ನೂ ಜಾಲಪ್ಪನವರು ಬೆಳೆಯಗೊಡಲಿಲ್ಲ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜಾಲಪ್ಪನವರು ಬೆಳೆಸಿದ ಒಬ್ಬನೇ ಒಬ್ಬ ಹಿಂದುಳಿದ ವರ್ಗದ ಶಾಸಕ ಅಥವಾ ಸಂಸದ ಇವತ್ತು ಕಾಣಸಿಗುವುದಿಲ್ಲ.
ಇನ್ನು ತಾವು ಕಾಂಗ್ರೆಸ್ನಲ್ಲಿದ್ದುಕೊಂಡು, ತಮ್ಮ ಮಗ ನರಸಿಂಹಸ್ವಾಮಿಯನ್ನು ಬಿಜೆಪಿಗೆ ಕಳಿಸಿ ಬೃಹನ್ನಾಟಕವನ್ನು ಆಡಿದವರು ಜಾಲಪ್ಪ. ಇವರು ಹಾಗೂ ಇವರ ಮಕ್ಕಳ ಪಾಳೇಗಾರಿಕೆಯ ಕಥೆಗಳಂತೂ ಜನರ ನಡುವೆ ದಂತಕಥೆಗಳಂತೆ ಚಾಲ್ತಿಯಲ್ಲಿವೆ. ತಮ್ಮ ಸಾಮಾಜಿಕ ಜವಾಬ್ದಾರಿ ಮರೆತು ವೈಯಕ್ತಿಕ ಅಭಿವೃದ್ಧಿಯ ನಾಗಾಲೋಟದಲ್ಲಿ ತೊಡಗಿದ್ದ ಜಾಲಪ್ಪ, ವಕೀಲ ರಶೀದ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅದರಿಂದ ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿ ಬಂದದ್ದು ಕರ್ನಾಟಕ ರಾಜಕಾರಣದ ಒಂದು ಪ್ರಮುಖ ವಿದ್ಯಮಾನ.
ಈ ಯಾವುದನ್ನು ಬೇಕಾದರೂ ಕರ್ನಾಟಕದ ಜನ ಕ್ಷಮಿಸಬಲ್ಲರೇನೋ. ಆದರೆ, ದೇಶದಲ್ಲೇ ಮಾದರಿ ವ್ಯವಸ್ಥೆ ಎನಿಸಿದ್ದ ರಾಜ್ಯದ ಸಿಇಟಿ ವ್ಯವಸ್ಥೆಯನ್ನು ನಾಶ ಮಾಡಿದ್ದನ್ನು ಮಾತ್ರ ನಾಡಿನ ಜನ ಕ್ಷಮಿಸಲಾರರು. ರಾಜ್ಯದ ಬಡವರು, ಹಳ್ಳಿಗಾಡಿನ ಜನರ ಪೈಕಿ ಕೆಲವರಾದರೂ ಇಂಜಿನಿಯರ್ಗಳು, ವೈದ್ಯರು ಆಗುವುದಕ್ಕೆ ಸಾಧ್ಯವಾಗಿದ್ದು ಆಗಿನ ಸಿಐಟಿ ವ್ಯವಸ್ಥೆಯಿಂದ. ಅಂಥದ್ದರಲ್ಲಿ ಸುಪ್ರೀಂ ಕೋರ್ಟಿನ ನೆಪ ಹಿಡಿದುಕೊಂಡು ತಮ್ಮದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಿಇಟಿಗೆ ಸೆಡ್ಡು ಹೊಡೆದವರು ಜಾಲಪ್ಪ. ಅಷ್ಟೇ ಅಲ್ಲ, ಇವರ ಅಧ್ಯಕ್ಷತೆಯಲ್ಲೇ ಕಾಮೆಡ್ ಕೆ ರೂಪು ಪಡೆಯಿತು. ಮುಂದೆ ಇಡೀ ಸಿಇಟಿ ವ್ಯವಸ್ಥೆಯೇ ದಿಕ್ಕುತಪ್ಪಿತು; ಗೊಂದಲದ ಗೂಡಾಗಿ rljಪರಿವರ್ತನೆಯಾಯಿತು . ಕೊನೆಗೆ ಸಿಇಟಿಗೆ ಪರ್ಯಾಯವಾಗಿ ಕಾಮೆಡ್ ಕೆ ಕೂಡ ಪ್ರತ್ಯೇಕ ಪ್ರವೇಶ ಪ್ರಕ್ರಿಯೆಯನ್ನೇ ನಡೆಸತೊಡಗಿತು. ಅದರ ಫಲವಾಗಿ ಇವತ್ತು ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಸೀಟುಗಳಿಗೂ ಕೂಡ ವಿದ್ಯಾರ್ಥಿಗಳು ಲಕ್ಷ ಲಕ್ಷ ವ್ಯಯಿಸಬೇಕಾಗಿ ಬಂದಿದೆ. ಇನ್ನು ಸಿಇಟಿ ಸೀಟು ಸಿಕ್ಕರೂ ಮೆಡಿಕಲ್ ಓದುವುದು ಬಡವರ ಪಾಲಿಗೆ ಕನಸಿನ ಮಾತಾಗಿದೆ. ತಮ್ಮ ಸ್ವಾರ್ಥಕ್ಕಾಗಿ, ಕ್ಯಾಪಿಟೇಷನ್ ಹಣಕ್ಕಾಗಿ ಬಡವರ ಪರವಾಗಿದ್ದ ಒಂದು ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳು ಮಾಡಿದವರು ‘ಸಾಮಾಜಿಕ ನ್ಯಾಯದ ಹರಿಕಾರ’ರಾದ ಸನ್ಮಾನ್ಯ ಜಾಲಪ್ಪ.

ಹೌದು.. ಕೆಲವರು ಜಾಲಪ್ಪನವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎನ್ನುವಂತೆ ಮಾತಾಡುವುದನ್ನು ನಾನು ಕೇಳಿದ್ದೇನೆ. ಅದನ್ನು ಸಮರ್ಥಿಸುವಂತೆ ಸಿದ್ದರಾಮಯ್ಯನವರ ಸರ್ಕಾರ ಜಾಲಪ್ಪನವರಿಗೆ ಈಗ ದೇವರಾಜ ಅರಸು ಪ್ರಶ ಸ್ತಿಯನ್ನು ಘೋಷಿಸಿದೆ. ದಿವಂಗತ ದೇವರಾಜ ಅರಸು ಅವರನ್ನು ಅವರ ಸಾಮಾಜಿಕ ನ್ಯಾಯದ ಕೆಲಸಗಳಿಗಾಗಿ ನೆನಪಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ತನ್ನ ಜೀವಿತ ಕಾಲದಲ್ಲಿಯೇ ಜನರಿಂದ ವಿಸ್ಮೃತಿಗೆ ಗುರಿಯಾಗಿರುವ ರಾಜಕಾರಣಿಯೊಬ್ಬರಿಗೆ ಅವರ ಹೆಸರಿನ ಪ್ರಶಸ್ತಿ ನೀಡಿರುವುದು ದೊಡ್ಡ ವ್ಯಂಗ್ಯವೇ ಸರಿ.