Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆ ಕಳುಹಿಸಲು ಕೇವಲ ಏಳೇ ದಿನ ಬಾಕಿ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2015(ಹಿಂದಿನ ವರ್ಷವೊಂದರ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧೆ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:

ಆಗಸ್ಟ್ 31, 2015.

ಸೆಪ್ಟೆಂಬರ್ katha spardhe inside logo 2015 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:

editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ದಲಿತರು ಮದುವೆ ಮಾಡಿದರೆ, ಹೋಟೆಲಲ್ಲಿ ಊಟ ಹಾಕಬೇಕು!

 – ಜೀವಿ

ಅನ್ನದ ಮಡಿಕೆ ಹುಡುಕಾಡಿ ಮಡಿಕೆ ಎಂಬ ಅಡ್ಡ ಹೆಸರನ್ನೇ ಗಟ್ಟಿ ಮಾಡಿಕೊಂಡಿದ್ದ ಗೆಳೆಯ ಮಹೇಶನಿಗೆ ಹಸಿದವರಿಗೆ ಅನ್ನ ಕೊಡಿಸುವುದೆಂದರೆ ಇಷ್ಟದ ಕೆಲಸ. ಕಬ್ಬು ಕಡಿಯುವ ಕೆಲಸದ ಮೇಸ್ತ್ರಿಯಾಗಿದ್ದ ಆತನಿಗೆ ಜಾತಿ ರಹಿತವಾಗಿ ಸ್ನೇಹಿತರಿದ್ದರು. ಆತನ ಜೇಬು ಯಾವಾಗಲೂ ಗಟ್ಟಿಯಾಗಿರುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ಬಂದ ಆದಾಯದಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಸ್ನೇಹಿತರಿಗೆ ಕಳೆಯುತ್ತಿದ್ದ. ಒಂದು ವರ್ಷದ ಹಿಂದೆ ಅತ ಆಕಸ್ಮಿಕವಾಗಿ ಸಾವಪ್ಪಿದ.

33 ವರ್ಷ ವಯಸ್ಸಿನಲ್ಲೇ ಬಂದ ಸಾವು ಆತನನ್ನು ನಂಬಿದ್ದವರ ಬದುಕನ್ನು ಮಸುಕಾಗಿಸಿದೆ. ಮೇಲ್ಜಾತಿಯ ಹಲವರು ’ನಮಗೆ ಅದೆಷ್ಟು ದಿನ ಅನ್ನ ಹಾಕಿದ್ದ’ ಎಂದು ಸಾವಿನ ದಿನ ಕಣ್ಣೀರಿಟ್ಟರು. ಅಂತ್ಯಕ್ರಿಯೆ ಮುಗಿಸಿದ ನಂತರ ಊmealsರಿನವರು ಮತ್ತು ನೆಂಟರಿಷ್ಟರು ಸೇರಿ ತಿಥಿ ಕಾರ್ಯ ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆಗಳು ಆರಂಭಿಸಿದರು. ಬದುಕಿದ್ದಾಗ ಎಲ್ಲರಿಗೂ ಅನ್ನ ಹಾಕಿದ್ದಾನೆ. ಅವನ ತಿಥಿ ದಿನ ಇಡೀ ಊರಿಗೆ ಅನ್ನ ಹಾಕಬೇಕು ಎಂದು ಅವನ ಅಪ್ಪ, ಇಬ್ಬರು ಸಹೋದರರು ಹಾಗೂ ನಾನೂ ಸೇರಿ ಹಲವರು ಬಯಸಿದೆವು. ದಲಿತ ಕೇರಿಯ ಯಾವುದೇ ಮದುವೆ-ತಿಥಿ ನಡೆದರೂ ಮೇಲ್ಜಾತಿಯವರಿಗೆ ಊಟ ಹಾಕಿರುವ ಉದಾಹರಣೆ ಇಲ್ಲ. ಆದರೆ ಇಡೀ ಊರಿಗೆ ಊಟ ಹಾಕಬೇಕು ಎಂಬ ಆಸೆ ಆತನ ಆಪ್ತ ಬಳಗಕ್ಕೆ ಇತ್ತು. ಅಲ್ಲೆ ಇದ್ದ ನಾಲ್ಕೈದು ಮಂದಿ ಮೇಲ್ಜಾತಿಯವರು ಆಗಬಹುದು ಎಂದು ತಲೆಯಾಡಿಸಿದರು. ಆದರೆ ಊಟದ ವ್ಯವಸ್ಥೆ ಪ್ರತ್ಯೇಕವಾಗಿರಬೇಕು ಎಂದು ಷರತ್ತು ಮುಂದಿಟ್ಟರು.

ಅಕ್ಕಿ, ರಾಗಿ, ಮಾಂಸ ಸೇರಿದಂತೆ ಊಟದ ಎಲೆಯ ಸಮೇತ ಎಲ್ಲವನ್ನೂ ಕೊಡಿಸಬೇಕು. ಪ್ರತ್ಯೇಕವಾಗಿ ಅಡುಗೆ ಮಾಡಿಸಿಕೊಂಡು ನಮ್ಮ ಕೇರಿಯಲ್ಲೇ ಊಟ ಮಾಡಿಕೊಳ್ಳುತ್ತೇವೆ. ಆ ಊಟಕ್ಕೆ ನೀವು ಬರಬೇಡಿ, ನೀವು ಮಾಡಿಕೊಳ್ಳುವ ಊಟಕ್ಕೆ ನಾವು ಬರುವುದಿಲ್ಲ. ಹಾಗಿದ್ದರೆ ಮಾತ್ರ ನಾವು ಊಟ ಮಾಡುತ್ತೇವೆ. ಇಲ್ಲದಿದ್ದರೆ ಬೇಡ ಎಂದರು. ಆ ತನಕ ಸುಮ್ಮನಿದ್ದ ನಾನು ನನ್ನ ಅಭಿಪ್ರಾಯ ಮುಂದಿಟ್ಟೆ. ಮಹೇಶ ಇರುವ ತನಕ ಎಲ್ಲರಿಗೂ ಊಟ ಹಾಕಿದ್ದಾನೆ. (ಹೋಟೆಲ್‌ಗಳಲ್ಲಿ ಮಾತ್ರ, ಎಷ್ಟೇ ಸ್ನೇಹಿತರಿದ್ದರೂ ಮೇಲ್ಜಾತಿಯವರು ಅವನ ಮನೆ ಊಟ ಮಾಡಿರಲಿಲ್ಲ.) ಅವನ ಸಾವು ಎಲ್ಲರಿಗೂ ನೋವು ತಂದಿದೆ. ಊಟ ಹಾಕುವುದೆಂದರೆ ಅವನಿಗೆ ಸಂತೋಷದ ವಿಷಯ. ಅದಕ್ಕಾಗಿ ಊಟ ಬೇಡ ಎನ್ನಬೇಡಿ. ಆದರೆ ನಿಮ್ಮ ಷರತ್ತು ಒಪ್ಪಿಕೊಳ್ಳಲು ನಾವು ಸಿದ್ದರಿಲ್ಲ. ಒಂದೇ ಕಾರ್ಯಕ್ಕೆ ಪ್ರತ್ಯೇಕ ಅಡುಗೆ ಮಾಡುವುದು ಬೇಡ. ಮೇಲ್ಜಾತಿ ಅಡುಗೆ ಭಟ್ಟರನ್ನೇ ಕರೆಸಿ ನಾವೇ ಮಾಡಿಸುತ್ತೇವೆ. ಇಡೀ ಊರಿನ ಜನ ಬಂದು ಊಟ ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ಮೇಲ್ಜಾತಿ ಕೇರಿಯಲ್ಲೇ ನೀವೇ ನೇmeals-1ತೃತ್ವ ವಹಿಸಿಕೊಂಡು ಅಡುಗೆ ಮಾಡಿಸಿ ದಲಿತ ಕೇರಿಯ ಎಲ್ಲರೂ ನೆಂಟರಿಷ್ಟರೊಂದಿಗೆ ಅಲ್ಲೇ ಬಂದು ಊಟ ಮಾಡುತ್ತೇವೆ ಎಂದೆ. (ಇದು ಆಗದಿರುವ ಕೆಲಸ ಎಂಬುದು ಮೊದಲೇ ಗೊತ್ತಿದ್ದರೂ ನನ್ನ ಅಭಿಪ್ರಾಯವನ್ನು ಮಂಡಿಸಿದೆ.) ಯಾವುದೇ ಕಾರಣಕ್ಕೂ ಅದು ಆಗದಿರುವ ಕೆಲಸ. ನೀವು ಮಾಡಿಸುವ ಅಡುಗೆಯನ್ನು ನಾವು ಊಟ ಮಾಡಲು ಸಾಧ್ಯವಿಲ್ಲ. ನಾವು ಮಾಡಿಸಿದ ಜಾಗಕ್ಕೆ ನೀವೂ ಬರುವಂತಿಲ್ಲ ಎಂದು ಮೇಲ್ಜಾತಿವರು ಕಡಾ ಖಂಡಿತವಾಗಿ ಹೇಳಿದರು.

ದಲಿತರ ಮನೆಯ ಅಕ್ಕಿ, ರಾಗಿ, ಮಾಂಸ, ಮೆಣಸಿನ ಕಾಯಿ ಎಲ್ಲವನ್ನೂ ಪಡೆದು ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡು ಊಟ ಮಾಡಲು ಮೇಲ್ಜಾತಿವರು ಸಿದ್ದರಿದ್ದಾರೆ. ದಲಿತರು ಮಾಡಿದ ಅಥವಾ ಮೇಲ್ಜಾತಿ ಅಡುಗೆ ಭಟ್ಟರಿಂದ ಮಾಡಿಸಿದ ಊಟ ಮಾಡಲು ಸಿದ್ದರಿಲ್ಲ. ನೀವೇ ಮಾಡಿಸಿ ನಾವು ಬಂದು ಊಟ ಮಾಡುತ್ತೇವೆ ಎಂದರೂ ಒಪ್ಪುತ್ತಿಲ್ಲ. ದಲಿತರೊಂದಿಗೆ ಸಹಪಂಕ್ತಿ ಭೋಜನ ಮಾಡಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ. ಅಲ್ಲಿದ್ದ ನಾಲ್ಕೈದು ಮಂದಿ ಮೇಲ್ಜಾತಿವರು ಹೋಗಿ ಊರ ಮುಂದೆ ವಿಷಯ ತಿಳಿಸಿದರು. ಕೆಲವರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳಲು ಒಪ್ಪಲಿಲ್ಲ. ಕೊನೆಗೂ ಇಡೀ ಊರಿಗೆ ಊಟ ಹಾಕುವ ಮಹೇಶನ ಮನೆಯವರು ಮತ್ತು ಆಪ್ತರ ಆಸೆ ಈಡೇರಲಿಲ್ಲ.

ಇದೀಗ ಅದೇ ಮಹೇಶನ ತಮ್ಮನಿಗೊಂದು ಚಿಂತೆ ಎದುರಾಗಿದೆ. ಈ ವರ್ಷ ಮದುವೆ ಮಾಡಿಕೊಳ್ಳುವ ಸಿದ್ದತೆಯಲ್ಲಿದ್ದಾನೆ. ಈವರೆಗೆ ದಲಿತರ ಮನೆ ಮದುವೆಗಳಿಗೆ ಮೇಲ್ಜಾತಿಯವರು ಬಂದಿದ್ದರೆ, ಆದರೆ ಊಟ ಮಾತ್ರ ಮಾಡಿಲ್ಲ. ದಲಿತ ಕೇರಿಯಲ್ಲೇ ಮದುವೆ ನಡೆದರೆ ಅಲ್ಲಿ ಬಹುತೇಕ ದಲಿತರೇ ಅಡುಗೆ ಮಾಡಿರುತ್ತಾರೆ ಎಂಬ ಕಾರಣಕ್ಕೆ ಊಟ ಮಾಡುವುದಿಲ್ಲ. ಆದರೆ ಇತ್ತೀಚೆಗೆ ದಲಿತರ ಮನೆ ಮದುವೆಗಳು ಕೂಡ ನಗರ ಮತ್ತು ಪಟ್ಟಣದ ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿವೆ. ಅಲ್ಲಿ ಎಲ್ಲರಂತೆ ಊಟದ ಅಡುಗೆ ಗುತ್ತಿಗೆ ಪಡೆದವರು ಯಾವ ಜಾತಿಯವರು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಬಹುತೇಕ ಕಲ್ಯಾಣ ಮಂಟಪಗಳಲ್ಲಿ ಕ್ಲೀನಿಂಗ್ ಕೆಲಸದಲ್ಲಿ ಮಾತ್ರ ಕೆಳ ಜಾತಿಯವರಿಗೆ ಅವಕಾಶ ಸಿಗುತ್ತಿದೆ. ಅಡುಗೆ ಮಾಡುವ ಗುತ್ತಿಗೆದಾರರು ಬಹುತೇಕ ಮೇಲ್ವರ್ಗದವರೇ ಅಗಿರುತ್ತಾರೆ. ದಲಿತರ ಮದುವೆಗೆ ಬೇರೆ, ಮೇಲ್ಜಾತಿಯವರ ಮದುವೆಗೆ ಬೇರೆ ಅಡುಗೆ ಗುತ್ತಿಗೆದಾರರು ಇಲ್ಲ. ಆದರೂ ಕಲ್ಯಾಣ ಮಂಟಪದಲ್ಲಿ ನಡೆಯುವ ದಲಿತರ ಮನೆಯ ಮದುವೆ ಊಟವನ್ನು ಮೇಲ್ಜಾತಿವರು ಮಾಡಿಲ್ಲ. ಮದುವೆಗೆ ಬರುವ ಮೇಲ್ಜಾತಿವರಿಗೆ ಹೋಟೆಲ್‌ಗಳಲ್ಲಿ ಊಟ ಕೊಡಿಸುವುದು ಮMeals-2ದುವೆ ಮನೆಯವರ ಜವಾಬ್ದಾರಿ. ಮದುವೆ ಮನೆಯವರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಮಾವಿನಕೆರೆ ಬೆಟ್ಟದಲ್ಲಿ ನನ್ನೂರಿನ ದಲಿತ ಯುವತಿ ಸವಿತಾಳ ಮದುವೆ ನಡೆಯಿತು. ಬೆಂಗಳೂರು ಮೂಲದ ಮೇಲ್ಜಾತಿ ಯುವಕನೊಂದಿಗೆ ಪ್ರೀತಿ ಬೆಳೆದಿತ್ತು. ಅಪ್ಪ-ಅಮ್ಮ ಇಲ್ಲದ ಯುವಕ ದಲಿತ ಯುವತಿಯೊಂದಿಗೆ ಮದುವೆಯಾಗಲು ಒಪ್ಪಿದ್ದ. ಸಂಬಂಧಿಕರು ಸೇರಿ ಮಾವಿನಕೆರೆ ಬೆಟ್ಟದಲ್ಲಿ ಮದುವೆ ಮಾಡಿದರು. ಸವಿತಾಳ ಅಣ್ಣ ಮಂಜ ಸಮೀಪದ ಪಟ್ಟಣದಲ್ಲಿ ಊಟದ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ. ಮದುವೆ ಗಂಡಿನ ಸಂಬಂಧಿಕರು ಊಟ ಮಾಡಿದರು. ಈ ಮದುವೆಗೆ ಬಂದಿದ್ದ ನನ್ನೂರಿನ ಮೇಲ್ಜಾತಿಯ ಜನರಲ್ಲಿ ಒಬ್ಬರೂ ಊಟ ಮಾಡಲಿಲ್ಲ. ಊರಿನ ಮೇಲ್ಜಾತಿವರಿಗೆ ಹೋಟೆಲ್‌ನಲ್ಲಿ ಊಟ ಕೊಡಿಸುವುದಿಲ್ಲ ಎಂದು ಮಂಜ ಮೊದಲೇ ನಿರ್ಧಾರ ಮಾಡಿದ್ದ. ಅಡುಗೆ ಕ್ಯಾಟರಿಂಗ್ ವ್ಯವಸ್ಥೆಯನ್ನು ಬ್ರಹ್ಮಾಣರಿಗೆ ಕೊಟ್ಟಿದ್ದೇನೆ. ಅಲ್ಲೂ ಊಟ ಮಾಡಲು ನಮ್ಮೂರಿನ ಮೇಲ್ಜಾತಿಯವರು ಹಿಂಜರಿದರೆ ನನ್ನದೇನು ತಪ್ಪಿಲ್ಲ ಎಂದ. ಊಟ ಆರಂಭವಾದ ಸಂದರ್ಭದಲ್ಲಿ ನನ್ನೆದುರಿಗೆ ಸಿಕ್ಕಿದ ಪಟೇಲರಿಗೆ ಊಟ ಮಾಡಿ ಎಂದೆ, ಸುಮ್ಮನೆ ನಕ್ಕು ಹೊರಟರು. ಯಾರೊಬ್ಬರೂ ಊಟ ಮಾಡಲಿಲ್ಲ.

ಕಲ್ಯಾಣ ಮಂಟಪದಲ್ಲಿ ಅಡುಗೆ ಮಾಡುವವರು ಯಾವ ಜಾತಿಯವರು ಎಂಬುದು ಯಾರಿಗೂ ಗೊತ್ತಿಲ್ಲ. ಅಡುಗೆಯವರ ಕಾರಣಕ್ಕೆ ಮೇಲ್ಜಾತಿವರು ಊಟ ಮಾಡಲು ನಿರಾಕರಿಸುತ್ತಿಲ್ಲ. ದಲಿತರೊಂದಿಗೆ ಒಟ್ಟಿಗೆ ಕುಳಿತು ಸಹಭೋಜನ ಮಾಡಲು ಮೇಲ್ಜಾತಿ ಮನಸ್ಸುಗಳು ಒಪ್ಪುತ್ತಿಲ್ಲ.

ಒಂದೇ ಊರಿನವರು ಎಂಬ ಕಾರಣಕ್ಕೆ ಮದುವೆಗೆ ಕರೆಯುತ್ತೇವೆ. ಅವರ ಮನೆ ಮದುವೆಯಲ್ಲಿ ನಾವು ಹಾಕಿರುವ ಮುಯ್ಯಿ (ಹಣದ ರೂಪದ ಗಿಫ್ಟ್) ತೀರಿಸುವ ಸಲುವಾಗಿಯಾದರೂ ಬಂದೇ ಬರುತ್ತಾರೆ. ಅವರಿಗೆ ಪ್ರತ್ಯೇಕವಾಗಿ ಹೋಟೆಲ್‌ನಲ್ಲಿ ಊಟ ಕೊಡಿಸಲು ನಾನು ಅವಕಾಶ ಕೊಡುವುದಿಲ್ಲ ಎಂದು ಮಹೇಶನ ತಮ್ಮ ನಾಗರಾಜ ಹೇಳುತ್ತಿದ್ದಾನೆ. ಕಲ್ಯಾಣ ಮಂಟಪದಲ್ಲಿ ಮಾಡಿರುವ ಊಟ ಮಾಡಿದರೆ ಮಾಡಲಿ ಇಲ್ಲದಿದ್ದರೆ, ಹಾಗೇ ಹೋಗಲಿ ಎನ್ನುತ್ತಿದ್ದಾನೆ. ಅವನ ನಿರ್ಧಾರವನ್ನು ನಾನೂ ಒಪ್ಪುತ್ತಿದ್ದೇನೆ. ಆದರೂ ನಾಗರಾಜನ ಅಪ್ಪ ನಮಗ್ಯಾರಿಗೂ ಗೊತ್ತಾಗದಂತೆ ಹೋಟೆಲ್‌ಗೆ ಕರೆದೊಯ್ಯಬಹುದು.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆ ಕಳುಹಿಸಲು ಕೇವಲ ಎರಡು ವಾರ ಬಾಕಿ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2015(ಹಿಂದಿನ ವರ್ಷವೊಂದರ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧೆ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:

ಆಗಸ್ಟ್ 31, 2015.

ಸೆಪ್ಟೆಂಬರ್ katha spardhe inside logo 2015 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:

editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ವರ್ತಮಾನ.ಕಾಮ್‌ಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ…

ಮೊನ್ನೆ ಆಗಸ್ಟ್ 10, 2015 ಕ್ಕೆ ವರ್ತಮಾನ.ಕಾಮ್‌ಗೆ ನಾಲ್ಕು ತುಂಬಿತು. ಆದರೆ ಅದರ ಬಗ್ಗೆ ಇಲ್ಲಿಯವರೆಗೆ ಏನೊಂದೂ ಬರೆದಿರಲಿಲ್ಲ. ಕಾರಣ, ಗೊತ್ತಾಗದೇ ಹೋದದ್ದು. ಅಂದರೆ ಇದರ ಕೆಲವೊಂದು ಜವಾಬ್ದಾರಿಗಳನ್ನು ಹೊತ್ತಿರುವ ನಾನು ಅದನ್ನು ಯೋಗ್ಯವಾಗಿ ನಿಭಾಯಿಸುವಲ್ಲಿ ಈಗಾಗಲೆ ವಿಫಲವಾಗಿದ್ದೇನೆ ಎನ್ನುವುದು ಸಾಬೀತು. ಇತ್ತೀಚೆಗೆ ತಾನೆ ನಮ್ಮ ಬಳಗದ ಕೆಲವರು ಸೇರಿದ್ದಾಗ ನಾನು ಅಪ್ರಾಸ್ತವಿಕವಾಗಿ ನನ್ನ ಈಗಿನ ’ಸಂಪಾದಕ’ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿದರೆ ಹೇಗೆ ಎಂದು ಪ್ರಸ್ತಾಪಿಸಿದ್ದೆ. ಈಗ ಅದನ್ನು ಗಂಭೀರವಾಗಿ ಯೋಚಿಸಿ Vartamana 4ತೀರ್ಮಾನಿಸಬೇಕಿದೆ.

ವರ್ತಮಾನ.ಕಾಮ್‌ನಂತಹ ಯಾವುದೇ ಒಂದು ವೆಬ್‌ಸೈಟ್ ಪ್ರತಿದಿನವೂ ಒಂದಲ್ಲ ಒಂದು ಲೇಖನಗಳನ್ನು ಪ್ರಕಟಿಸದಿದ್ದರೆ ತನ್ನ ಪ್ರಸ್ತುತೆಯನ್ನು ಮತ್ತು ಓದುಗರನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಮೊದಲಿನಿಂದಲೂ ನಾವು ನಮ್ಮ ಲೇಖನ ಪ್ರಕಟವಾದ ಕೂಡಲೆ ವರ್ತಮಾನದ ಫೇಸ್‌ಬುಕ್ ಗೋಡೆಯಲ್ಲಿ ಹಂಚಿಕೊಳ್ಳುವುದರಿಂದ ಅದಕ್ಕೆ ಸ್ನೇಹಿತರಾಗಿರುವ ಒಂದಷ್ಟು ಖಾಯಂ ಓದುಗರಿಗೆ ನಮ್ಮ ಹೊಸದಾಗಿ ಪ್ರಕಟಿತ ಲೇಖನದ ಮಾಹಿತಿ ತಲುಪತ್ತದೆ. ಆ ದೃಷ್ಟಿಯಿಂದ ಯಾವುದಾದರೂ ಹೊಸ ಲೇಖನ ಪ್ರಕಟವಾಗಿದೆಯೇ ಇಲ್ಲವೋ ಎಂದು ನೋಡಲು ನಮ್ಮ ಬಹುತೇಕ ಓದುಗರು ವೆಬ್‌ಸೈಟಿಗೇ ನೇರ ಭೇಟಿ ಕೊಡುವ ಅಗತ್ಯ ಇರುವುದಿಲ್ಲ. ಆದರೆ ನೇರ ವೆಬ್‌ಸೈಟಿಗೆ ಭೇಟಿ ಕೊಟ್ಟು ಗಮನಿಸುವ ನಮ್ಮ ಖಾಯಂ ಓದುಗರಿಗೆ ಇಲ್ಲಿ ಮೂರ್ನಾಲ್ಕು ದಿನಗಳ ಕಾಲವಾದರೂ ಹೊಸ ಲೇಖನ ಪ್ರಕಟವಾಗದೇ ಇದ್ದರೆ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾರೆ.

ಇಷ್ಟಾದರೂ, ಈಗಾಗಲೆ ಹಲವು ಬಾರಿ ಪ್ರಸ್ತಾಪಿಸಿರುವಂತೆ ನಮ್ಮ ಲೇಖನಗಳ ಓದುಗರು ಕೇವಲ ಅಂತರ್ಜಾಲದಲ್ಲಿ ಓದುವವರಷ್ಟೇ ಅಲ್ಲ. ಇಡೀ ರಾಜ್ಯದಾದ್ಯಂತ ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳು ಇಲ್ಲಿಯ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬರುತ್ತಿದ್ದಾರೆ. ಆ ದೃಷ್ಟಿಯಿಂದ ನಮ್ಮ ಬಹುತೇಕ ಲೇಖನಗಳಿಗೆ ಸಾವಿರಾರು ಇಲ್ಲವೆ ಲಕ್ಷಾಂತರ ಲೆಕ್ಕದಲ್ಲಿ ಓದುಗರಿದ್ದಾರೆ. ಆ ಮಟ್ಟಿಗೆ ನಮ್ಮ ಪ್ರಸ್ತುತತೆ ಮತ್ತು ಪ್ರಭಾವ ವ್ಯಾಪಿಸಿದೆ.

ಆದರೆ, ಮುಂದಕ್ಕೆ ಇದನ್ನು ಹೇಗೆ ತೆಗೆದುಕೊಂಡು ಹೋಗುವುದು ಎನ್ನುವ ಪ್ರಶ್ನೆ ಬೆಳೆಯುತ್ತಲೇ ಬರುತ್ತಿದೆ. ಉತ್ತರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರಿಗಿಂತ ನನ್ನ ಮೇಲೆಯೇ ಹೆಚ್ಚಿದೆ ಮತ್ತು ನಾನು ಸೋಲುತ್ತಿದ್ದೇನೆ. ಅಯೋಗ್ಯತೆಯೂ ಒಂದು ರೀತಿಯಲ್ಲಿ ಅನೈತಿಕತೆ ಮತ್ತು ಭ್ರಷ್ಟಾಚಾರ ಎಂದುಕೊಂಡವನು ನಾನು. ಭ್ರಷ್ಟನಾಗುವ ಅಗತ್ಯ ಅಥವ ಅನಿವಾರ್ಯತೆ ನನಗಿಲ್ಲ. ವರ್ತಮಾನ.ಕಾಮ್ ನಿರೀಕ್ಷಿತ ಮಟ್ಟದಲ್ಲಿ ತನ್ನ ಪ್ರಭಾವ ವಲಯವನ್ನು 4th-anniversaryವಿಸ್ತರಿಸಿಕೊಳ್ಳುತ್ತಿಲ್ಲ ಮತ್ತು ಅನಿಯಮಿತವಾಗುತ್ತಿದೆ ಎನ್ನುವುದು ಬಿಟ್ಟರೆ, ಮತ್ತು ಅದು ತನ್ನ ಪಾಡಿಗೆ ಸಾವಯವವಾಗಿ ಬೆಳೆಯಲಿ ಎನ್ನುವುದೂ ಒಂದು ಉದ್ದೇಶವಾಗಿರುವ ಕಾರಣದಿಂದ, ಮತ್ತು ಅದು ಯಾರಿಗೂ ಕೇಡು ಉಂಟು ಮಾಡುತ್ತಿಲ್ಲದ ಕಾರಣದಿಂದಾಗಿ, ಅನವಶ್ಯಕವಾಗಿ ಯಾರ ಮೇಲೂ ಆರ್ಥಿಕ ದುಷ್ಪರಿಣಾಮ ಅಥವ ಹೊರೆ ಆಗದೇ ಇರುವುದರಿಂದ ಅದು ಹೇಗಿದ್ದರೂ ನಡೆದೀತು ಎನ್ನುವ ಕಾರಣಕ್ಕೇ ನಾನೂ ಅಷ್ಟು ತೀಕ್ಷ್ಣವಾಗಬಾರದು ಎಂದೆನಿಸುತ್ತದೆ. ಆದರೆ ಆಗಾಗಲಾದರೂ ನಮಗೆ ನಾವೇ ಕಠೋರವಾಗದಿದ್ದರೆ ಕ್ರಮೇಣ ಅದು ಆತ್ಮವಂಚನೆಯೂ ಆಗುತ್ತದೆ.

ನಾಲ್ಕನೇ ವರ್ಷ ತುಂಬಿದ ಈ ಸಂದರ್ಭದಲ್ಲಿ ಹಿಂದಿನ ವರ್ಷಗಳಲ್ಲಿ ಹೇಳಿಕೊಂಡ ಹಾಗೆ, ’ಹಾಗೆ ಆಗಬಹುದು, ಹೀಗೆ ಆಗಬಹುದು’ ಎನ್ನುವುದೇನನ್ನೂ ಹೇಳದೆ, ಏನಾಗುತ್ತದೆಯೋ ಅದನ್ನು ಮಾಡೋಣ ಮತ್ತು ವರ್ತಮಾನ.ಕಾಮ್ ತನಗೆ ಬರುವ ಅದರ ಮೂಲಆಶಯಕ್ಕೆ ಬದ್ಧತೆ ಇರುವ ಲೇಖಕರ ಲೇಖನಗಳನ್ನು ಅವು ಬಂದಾಗಲೆಲ್ಲೆ ಪ್ರಕಟಿಸುತ್ತ ಹೋಗುತ್ತದೆ, ಒಂದೆರಡು ದಿನಗಳ ಅವಧಿಯೊಳಗೆ ಎಂದಷ್ಟೇ ಹೇಳಬಯಸುತ್ತೇನೆ.

ನಮಸ್ಕಾರ,
ರವಿ
ವರ್ತಮಾನ.ಕಾಮ್


ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ : ಮಹಾತ್ಮ ಮತ್ತು ಮಹಾತಾಯಿ


– ಶ್ರೀಧರ್ ಪ್ರಭು


ಯಮದೂತರಂತಿದ್ದ ಅವರಿಬ್ಬರ ಅವನ ಹೆಗಲುಗಳ ಮೇಲೆ ಭಾರವಾದ ಮೂಟೆಗಳು. ಪುಣೆಯ ಗರ್ಭದಲ್ಲಿರುವ ಆ ಪುಟ್ಟ ಗಲ್ಲಿಯನ್ನು ಹುಡುಕುವಷ್ಟರಲ್ಲಿ ಇವರಿಬ್ಬರಿಗೂ ಮೈಯೆಲ್ಲಾ ಬೆವರಿ ಹೋಗಿತ್ತು. ಸುಮಾರು ಹತ್ತು ಹನ್ನೆರಡು ಹೆಣ್ಣು ಮಕ್ಕಳನ್ನು ಕೂಡಿಸಿಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಆ ತಾಯಿಗೆ ಈ ಇಬ್ಬರು ಧಡೂತಿ ಗಾತ್ರದ ಆಸಾಮಿಗಳನ್ನು ನೋಡಿ ಒಂದು ಕ್ಷಣ ಉಸಿರೇ ನಿಂತು ಹೋಯಿತು!

ನಾಲ್ಕೈದು ದಿವಸದ ಹಿಂದೆ ಮಧ್ಯ ರಾತ್ರಿಯ ವೇಳೆ ಮನೆಯ ಕಿಟಕಿ ಸರಳುಗಳನ್ನು ಮುರಿದು ಇವರಿಬ್ಬರೂ ಕೊಡಲಿ ಬಾಕು ಹಿಡಿದುಕೊಂಡು ಈ ತಾಯಿ ಮತ್ತವರ ಗಂಡನನ್ನು ಕೊಲೆ ಮಾಡಲು ಬಂದಿದ್ದರು. ತಕ್ಷಣ ಎಚ್ಹೆತ್ತುಕೊಂಡ ತನ್ನ ಪತಿ, ಅಂಥಹ ಕರಾಳ ರಾತ್ರಿ ಕೊಲೆಗಾರರನ್ನು ದಿಟ್ಟಿಸಿ ನೋಡುತ್ತಾ ತನಗೆ ಹೇಳಿದ ಮಾತುಗಳು ಅವರಿಗೆ ನೆನಪಾದವು:

“ಸಾವಿತ್ರಿ, ಇವರು ರಾಮೊಶಿಗಳು; ವೈದಿಕಶಾಹಿಯ ಅತಿ ಕ್ರೂರ ವಿಕೃತಿಗೆ ಬಲಿಯಾದ ಜನ. ಇವರದ್ದೇನೂ ತಪ್ಪಿಲ್ಲ. ಶತ ಶತಮಾನಗಳಿಂದ ಪುರೋಹಿತಶಾಹಿ ಸಮಾಜ ಇವರನ್ನು ವಿದ್ಯೆಯಿಂದ ವಂಚಿಸಿ ಬಿಡಿಗಾಸಿಗಾಗಿ ಹೇಯ ಕೃತ್ಯಗಳನ್ನು ಮಾಡಲು ದೂಡಿದೆ. ನಮ್ಮ ಕ್ರೂರ ಸಮಾಜದ ವಾಸ್ತವವೆಂದರೆ, ಇವರ ಕೈಯಲ್ಲೇ ಕೊಲೆಯಾಗಲು ಹೊರಟಿದ್ದೇನೆ. ಇಂಥಹ ದಲಿತ ದಮನಿತರ ಪರವಾಗಿ ಶ್ರಮಿಸಿ ಇವರಿಗೇ ನನ್ನ ಜೀವ ಸಮರ್ಪಿಸಲು ಸಂತೋಷವೆನಿಸುತ್ತಿದೆ. ಅದಿರಲಿ… ನಾನು ಸತ್ತ ಮೇಲೆ ಕೂಡ ನಮ್ಮ ಕೆಲಸ ನಿಲ್ಲಿಸಬೇಡ. ಇವರ ಮಕ್ಕಳನ್ನು ನಮ್ಮ ಶಾಲೆಯಲ್ಲೇ ಓದಿಸಿ ವಿದ್ಯಾವಂತರನ್ನಾಗಿ ಮಾಡು.”

ಅಷ್ಟು ಹೇಳಿದ್ದೆ ತಡ. ಈ ಕೊಲೆಗಾರರು ಕೊಡಲಿ ಕೆಳಗಿಳಿಸಿದ್ದರು.

” ಸ್ವಾಮಿ! ನೀವು ಶಾಲೆ ನಡೆಸುತ್ತಿದ್ದೀರಾ? ಅಲ್ಲಿ ನಮ್ಮ ಮಕ್ಕಳು ಓದಬಹುದೇ?”

“ನೀವು ನಿಮ್ಮ ಕೆಲಸ ಮುಗಿಸಿ. ಅದೆಲ್ಲ ನಿಮಗ್ಯಾಕೆ?” ಪತಿ ಅತ್ಯಂತ ಶಾಂತ ಚಿತ್ತರಾಗಿ ಹೇಳಿದರು.

ತಕ್ಷಣ ಕೈ ಮುಗಿದು ನಿಂತ ಇವರಿಬ್ಬರೂ ಹೇಳಿದರು “ಸ್ವಾಮಿ, ನಿಮ್ಮಿಬ್ಬರನ್ನು ಕೊಲೆ ಮಾಡಲು ನಮಗೆ ತಲಾ ಒಂದು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಸರಿಯಾಗಿ ಐದು ರೂಪಾಯಿ ಕೂಡ ಕೈಯಲ್ಲಿ ಹಿಡಿದು ನೋಡಿದ ಜನವಲ್ಲ ನಾವು…. ಆದರೆ, ನಿಮ್ಮಂತಹ ಮಹಾತ್ಮರನ್ನು ಕೊಲೆ ಮಾಡಿ ಅದೆಂತಹ ಮಹಾ ಪಾತಕ ಮಾಡುತ್ತಿದ್ದೆವು!!!”

೧೮೪೮ ರಲ್ಲಿ ಪುಣೆಯ ವೈದಿಕರು-ಸಂಪ್ರದಾಯವಾದಿಗಳು ಜ್ಯೋತಿ ರಾವ್ ಗೋವಿಂದರಾವ್ ಫುಲೆ ಮತ್ತವರ ಪತ್ನಿ ಸಾವಿತ್ರಿ ಬಾಯಿಯವರನ್ನು ಕೊಲೆ ಮಾಡಲು ಎರಡು ಸಾವಿರ ರೂಪಾಯಿಯ ಸುಪಾರಿ ನೀಡಿದ್ದರೆಂದರೆ ಈ ದಂಪತಿ ಅದೆಂತಹ ಕ್ರಾಂತಿಯ ಕಿಡಿ ಹಚ್ಚಿದ್ದರೆಂದು ಊಹಿಸಿಕೊಳ್ಳಿ!

ಮಹಾತ್ಮಾ ಫುಲೆ ಹಚ್ಚಿದ ಕ್ರಾಂತಿಯ ಕಿಡಿ ನಂತರದ ಅನೇಕ ಸಾಮಾಜಿಕ ಮತ್ತು ರಾಜಕೀಯ ಪರಿವರ್ತನೆಗಳಿಗೆ ಮೂಲ ಸ್ರೋತವಾಗಿತ್ತು. ಆದರೂ ಫುಲೆ ದಂಪತಿಯ ಸಮಾಜಪರ ಕಾರ್ಯಗಳ ಹರವು ತುಂಬಾ ವಿಸ್ತೃತ.

ಕ್ರಾಂತಿಯ ಹರಿಕಾರ

ಫುಲೆಯವರು ಮಹಾತ್ಮಾ ಫುಲೆ ಕೇವಲ ಜಾತಿ ವಿರೋಧಿ ಚಳುವಳಿ ಮಾತ್ರ ನಡೆಸಲಿಲ್ಲ; ಭಾರತದ ಶಿಕ್ಷಣ ಕ್ರಾಂತಿಯ ಹರಿಕಾರರಾಗಿದ್ದರು. ಪ್ರಖ್ಯಾತ ಶೈಕ್ಷಣಿಕ ಇತಿಹಾಸಕಾರ ಸರ್ ಹೆನ್ರಿ ಶಾರ್ಪ್ ಹೇಳುವಂತೆ:

“ಜ್ಯೋತಿಬಾ ಮಹಿಳಾ ಶಿಕ್ಷಣ ಕ್ರಾಂತಿಯ ಕಿಡಿ ಹಚ್ಚಿದಾಗ ಭಾರತದ ಮೆಲ್ವರ್ಗಗಳು ಹಾಡಿ ಹೊಗಳುವ ಸುಧಾರಕರಾದ ಮಹಾದೇವ ರಾನಡೆ ಹತ್ತು ವರ್ಷದ ಹಸುಳೆ, ಇನ್ನು ಅಗರ್ಕರ್. ಕೆ. ಕರ್ವೆ, ಪಂಡಿತಾ ರಾಮಾಬಾಯಿ, ಮೋಹನದಾಸ ಗಾಂಧಿಯವರು ಹುಟ್ಟೇ ಇರಲಿಲ್ಲ.”

೧೮೭೬ರಲ್ಲಿ ಅವರು ಪ್ರಾರಂಭಿಸಿದ “ವಿಕ್ಟೋರಿಯ ಅನಾಥಾಲಯ” ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಅನೇಕ ವಿಧವೆಯರಿಗೆ ಆಶ್ರಯ ನೀಡಿ ಅನೇಕ ವಿಧವೆಯರ ಮಕ್ಕಳು ಶಿಕ್ಷಣ ಮತ್ತು ಪಡೆಯಲು ಸಹಾಯ ಮಾಡಿತು.

ಪುಣೆಯಲ್ಲಿ ತನ್ನದೇ ಜಾತಿಯ ವಂಚಕನೊಬ್ಬನ ಬಲಿಗೆ ಬಿದ್ದ ಬ್ರಾಹ್ಮಣ ವಿಧವೆಯೋಬ್ಬಳಿಗೆ ಅಲ್ಲಿನ ಬ್ರಾಹ್ಮಣ ಸಮಾಜ ಸಾಯಿಸಲು ಹವಣಿಸುತ್ತಿತ್ತು. mahatma-jyoti-rao-phuleಫುಲೆ ದಂಪತಿ ತಮ್ಮ ಮನೆಯಲ್ಲಿ ರಕ್ಷಣೆ ನೀಡಿ ಅವಳಿಗೆ ಜನಿಸಿದ ಯಶವಂತನೆಂಬ ಬಾಲಕನನ್ನು ಫುಲೆ ದಂಪತಿಗಳು ದತ್ತು ಪಡೆದು ಸಾಕಿ ಸಲಹಿ ವೈದ್ಯನನ್ನಾಗಿ ಮಾಡುತ್ತಾರೆ.

ತಾಯಿ ಸಾವಿತ್ರಿ ಬಾಯಿಯ ತ್ಯಾಗ ಬಹು ದೊಡ್ಡದು. ಜನರ ಸೇವೆಯಲ್ಲೇ ತಮ್ಮ ಪ್ರಾಣ ವನ್ನು ಸಮರ್ಪಿಸಿದರು ಈ ಮಹಾತಾಯಿ. ಪುಟ್ಟ ಬಾಲ ವಿಧವೆಯರನ್ನು ಕೊಂದು ಹಾಕುವ ಕ್ರೂರ ಪದ್ಧತಿ ಇದ್ದ ಕಾಲದಲ್ಲಿ ಈ ತಾಯಿ “ಬಾಲ ಹತ್ಯಾ ಪ್ರತಿಬಂಧಕ ಗೃಹ” ತೆರೆದರು.

ಅಮ್ಮ ಸಾವಿತ್ರಿ, ವಿಶ್ವದ ಪ್ರಥಮ ಮಹಿಳಾ ಚಳುವಳಿಗಾರ್ತಿ ಎಂದು ವಿಶ್ವ ವಿಖ್ಯಾತ ಚಿಂತಕಿ ಟಿಫಾನಿ ವೇಯ್ನ್ ತಮ್ಮ “Feminist Writings from Ancient Times to the Modern World: A Global Sourcebook and History.” ಪುಸ್ತಕದಲ್ಲಿ ಹೇಳುತ್ತಾರೆ.

೧೮೯೭ ರಲ್ಲಿ ಭೀಕರವಾದ ಪ್ಲೇಗ್ ರೋಗ ಹರಡಿತು. ತಮ್ಮ ಅರವತ್ತಾರರ ಇಳಿ ವಯಸ್ಸಿನಲ್ಲೂ ವೈದ್ಯನಾಗಿದ್ದ ಮಗ ಯಶವಂತನ ಜತೆ ಸೇರಿ ಮಹಾಮಾತೆ ಸಾವಿತ್ರಿ ಬಾಯಿ ಸಾವಿರಾರು ರೋಗಿಗಳ ಸೇವೆ ಮಾಡಿ ಜನತೆಗೊಸ್ಕರ ತಮ್ಮ ಪ್ರಾಣ ವನ್ನೇ ಅರ್ಪಿಸಿದರು!

ತಾಯಿ ಸಾವಿತ್ರಿ ಒಬ್ಬ ಕವಿಯಿತ್ರಿ ಕೂಡ; ಎರಡು ಕವನ ಸಂಕಲನಗಳನ್ನು ಇವರ ಮರಣಾನಂತರ ಬಿಡುಗಡೆಗೊಳಿಸಲಾಯಿತು. ಎಂಥೆಂಥವರಿಗೆಲ್ಲ ಪದ್ಮ ಪ್ರಶಸ್ತಿ – ಭಾರತರತ್ನ ಕೊಡುವ ಸರಕಾರ ಈ ಮಹಾತಾಯಿಯ ಹೆಸರಿನಲ್ಲಿ ಒಂದು ಅಂಚೆ ಚೀಟಿ ಬಿಡುಗಡೆ ಮಾಡಿದ್ದೂ ಬಿಟ್ಟರೆ ಇನ್ನೇನೂ ಮಾಡಿಲ್ಲ! ಕೇವಲ ತೀರ ಇತ್ತೀಚಿಗೆ (೨೦೧೪) ಪುಣೆ ವಿಶ್ವ ವಿದ್ಯಾಲಯಕ್ಕೆ ಇವರ ಹೆಸರನ್ನು ಇಡಲಾಗಿದೆ. ಅಷ್ಟು ಬಿಟ್ಟರೆ ಈ ವಿಶ್ವವಂದ್ಯೆ ಮಹಾತಾಯಿಯ ತ್ಯಾಗವನ್ನು ಸ್ಮರಿಸುವ ಅಮರಗೊಳಿಸುವ ಯಾವ ಪ್ರಯತ್ನಗಳೂ ನಡೆದಿಲ್ಲ.

ಫುಲೆ ಮತ್ತು ಭಾರತದ ಮಾತೃ ಭಾಷಾ ಕ್ರಾಂತಿ

ಮಹಾತ್ಮಾ ಫುಲೆಯವರ ಸಾಮಾಜಿಕ ಸುಧಾರಣೆಯ ವ್ಯಕ್ತಿತ್ವದ ಮಜಲು ಬಹುಶೃತ. ಆದರೆ ಫುಲೆ ಸಾಧನೆ ಅಷ್ಟು ಮಾತ್ರಕ್ಕೆ ಸೀಮಿತವಾಗಿರಲಿಲ್ಲ.phule ನಮ್ಮ ಚರಿತ್ರೆ ಅವರಿಗೆ ಸಲ್ಲಬೇಕಾದ ಗೌರವದ ಒಂದು ಪ್ರತಿಶತ ಕೂಡ ಸಲ್ಲಿಸಿಲ್ಲ. ಫುಲೆ ದಂಪತಿಗಳು ಕೇವಲ ಒಂದು ಜಾತಿಗೆ ಸೇರಿದವರು ಎಂದು ವ್ಯವಸ್ಥಿತ ಅಪಪ್ರಚಾರ ನಡೆಸಿ ಅವರ ಮಹಾತ್ಮೆಯನ್ನು ಮುಚ್ಚಿ ಹಾಕುವ ಪ್ರಯತ್ನ ಚರಿತ್ರೆಯುದ್ದಕ್ಕೂ ನಡೆಯುತ್ತಲೇ ಬಂದಿದೆ. ಫುಲೆ ಕೇವಲ ಜಾತಿ ವಿರೋಧಿ ಹೋರಾಟಗಳ ನೇತಾರರಗಿರಲಿಲ್ಲ; ಸಂಪೂರ್ಣ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದರು.

ಫುಲೆಯವರ ಅನೇಕ ಸಾಧನೆಗಳು ಚರಿತ್ರೆಯ ಗರ್ಭದಲ್ಲಿ ಹುಡುಗಿ ಹೋಗಿವೆ. ಅವುಗಳಲ್ಲಿ ಒಂದೆರಡನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.

೧೬೭೪ ರಲ್ಲಿ ಶಿವಾಜಿಯ ಪಟ್ಟಾಭಿಷೇಕವಾದ ನಂತರ ಶುರುವಾಗಿದ್ದು “ದಕ್ಷಿಣಾ ಪದ್ಧತಿ”. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬೊಕ್ಕಸದ ಒಂದು ಬಹು ದೊಡ್ಡ ಮೊತ್ತವನ್ನು ಬ್ರಾಹ್ಮಣರಿಗೆ ದಕ್ಷಿಣೆಯ ರೂಪದಲ್ಲಿ ನೀಡಲಾಗುತ್ತಿತ್ತು. ಶಿವಾಜಿಯ ನಂತರದಲ್ಲಿ ಪೇಶ್ವೆ ಆಡಳಿತ ಶುರುವಾದ ಮೇಲಂತೂ ಈ ದಕ್ಷಿಣೆಯ ಪದ್ಧತಿ ಉಚ್ಹ್ರಾಯಕ್ಕೇರಿತು.

ಪುಣೆಯ ಅರವತ್ತು ಸಾವಿರ ಬ್ರಾಹ್ಮಣರಿಗೆ ಸುಮಾರು ಹತ್ತು ಲಕ್ಷ ರೂಪಾಯಿ ಹಂಚಲಾಯಿತು! ಹತ್ತೊಂಬತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಹಂಚಿದ (೧೮೦೦-೧೮೧೦) ವಾರ್ಷಿಕ ಮೊತ್ತ ಬರೋಬ್ಬರಿ ಹತ್ತು ಲಕ್ಷಕ್ಕೆ ಇಂದಿನ ದಿನಗಳಲ್ಲಿ ಎಷ್ಟು ಮೌಲ್ಯವೆಂದು ಅರ್ಥಶಾಸ್ತ್ರ ಬಲ್ಲವರು ಹೇಳಬೇಕು! ಒಟ್ಟಾರೆ ಎರಡನೇ ಬಾಜಿರಾಯ ವಸ್ತುಶಃ ತನ್ನ ಇಡೀ ಖಜಾನೆಯನ್ನೇ ಬ್ರಾಹ್ಮಣರ ಪಾದಕ್ಕೆ ಅರ್ಪಿಸಿದ್ದ!

ಆಂಗ್ಲರು ಮರಾಠರನ್ನು ಸೋಲಿಸಿದ ನಂತರದಲ್ಲಿ ಲಾರ್ಡ್ ಎಲ್ಫಿನ್ಸ್ಟನ್ ಈ “ದಕ್ಷಿಣಾ ಫಂಡ್” ನ ಮೊತ್ತವನ್ನು ವಾರ್ಷಿಕ ಹತ್ತು ಲಕ್ಷದಿಂದ ಇಪ್ಪತ್ತು ಸಾವಿರಕ್ಕಿಳಿಸಿದ. ಪುಣೆಯ ಕೆಲ ಸುಧಾರಣಾವಾದಿ ಬ್ರಾಹ್ಮಣರು ಈ ದಕ್ಷಿಣೆಯನ್ನು ಬ್ರಾಹ್ಮಣರ ಸಂಸ್ಕೃತ ಪಾಂಡಿತ್ಯಕ್ಕೆ ಮೀಸಲಿರಿಸುವ ಬದಲು Jyotirao Phuleಮರಾಠಿ ಭಾಷೆಯ ವಿಕಾಸಕ್ಕೆ ವಿನಿಯೋಗಿಸಬೇಕು ಎಂದು ಸಹಿ ಸಂಗ್ರಹ ಚಳುವಳಿ ಪ್ರಾರಂಭಿಸಿದರು.

ಹತ್ತಿರ ಹತ್ತಿರ ಒಂದು ಲಕ್ಷ ಸಂಖ್ಯೆಯ ಪುಣೆಯ ಬಹುಸಂಖ್ಯಾತ ಬ್ರಾಹ್ಮಣ ವರ್ಗ ಒಂದು ಕಡೆ; ಬೆರಳೆಣಿಕೆಯ ಕೆಲವೇ ಸುಧಾರಣಾವಾದಿಗಳು ಇನ್ನೊಂದೆಡೆ. ತಾವು ಅಳುತ್ತಿದ್ದ ಪ್ರಜೆಗಳಲ್ಲೇ ಅತ್ಯಂತ ಪ್ರಭಾವಿ ವರ್ಗವಾಗಿದ್ದ ಬ್ರಾಹ್ಮಣರನ್ನು ಎದುರು ಹಾಕಿಕೊಳ್ಳಲು ಬ್ರಿಟಿಷರು ಹಿಂದೆ ಮುಂದೆ ನೋಡುತ್ತಿದ್ದರು. ಸುಧಾರಣಾವಾದಿ ಬ್ರಾಹ್ಮಣರ ಒಂದು ವರ್ಗ ಫುಲೆ ಯವರನ್ನು ತಮ್ಮ ನೇತೃತ್ವ ವಹಿಸುವಂತೆ ಕೇಳಿಕೊಂಡಿತು.

ಎಷ್ಟರ ಮಟ್ಟಿಗೆ ಎಂದರೆ ಮರಾಠಿ ಭಾಷೆಗೆ ದಕ್ಷಿಣ ಫಂಡ್ ಕೊಡಬೇಕು ಎಂದು ಒತ್ತಾಯಿಸಿ ಬಗ್ಗೆ ನಡೆದ ಸಭೆಯಲ್ಲಿ ಮನವಿ ಸಲ್ಲಿಸಲು ನನ್ನ ಹೆಸರು ಬೇಡ ತನ್ನ ಹೆಸರು ಬೇಡ ಎಂದು ಬ್ರಾಹ್ಮಣರು ಗಾಬರಿ ಗೊಂಡಾಗ, ಬ್ರಾಹ್ಮಣರ ಪರವಾಗಿ ಸ್ವತಃ ಫುಲೆ ತಾವೇ ತಮ್ಮ ಹೆಸರಿನಲ್ಲೇ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕಾಯಿತು. ಯಾವಾಗ ಫುಲೆ ಯವರ ಹೆಸರು ಮುಂದಕ್ಕೆ ಬಂತೋ ಬ್ರಾಹ್ಮಣ ಸಂಪ್ರದಾಯವಾದಿಗಳು ಬಾಲವನ್ನೇ ಬಿಚ್ಚಲಿಲ್ಲ. ಫುಲೆ ಸಂಘಟಿಸಿದ ಮೆರವಣಿಗೆಗೆ ರಕ್ಷಣೆ ಕೊಡಲು ಪುಣೆಯ ಸುಮಾರು ೨೫೦ ದಲಿತ-ಶೂದ್ರ ಪೈಲ್ವಾನರು ಮುಂದೆ ಬಂದರು, ಒಂದು ಲಕ್ಷದ ಹತ್ತಿರ ಸಂಖ್ಯಾಬಲದ ವಿಪ್ರೋತ್ತಮರು ಬಾಲ ಮುದುರಿ ಲಟಿಕೆ ಮುರಿಯುತ್ತಾ ಮನೆಯಲ್ಲೇ ಕುಳಿತುಕೊಂಡರು.

ಕೇವಲ ಇಪ್ಪತ್ತು-ಇಪ್ಪಂತ್ತೊಂದು ವರ್ಷ ಪ್ರಾಯದ ಜ್ಯೋತಿಬಾ ಫುಲೆ ತಮ್ಮ ಮೂರರಷ್ಟು ಪ್ರಾಯದ ಜನರನ್ನು ಸಂಘಟಿಸಿ ಹೋರಾಟ ನಡೆಸಿ “ದಕ್ಷಿಣಾ ಫಂಡ್” ನ್ನು ಮರಾಠಿ ಭಾಷೆಯ ವಿಕಾಸಕ್ಕೆ ಬಳಸುವಂತೆ ಮಾಡಿದರು.

ಹೀಗೆ ಮರಾಠಿಯ ವಿಕಾಸನದ ಪ್ರಕ್ರಿಯೆ ಪ್ರತಿಯೊಂದು ನೆಲದ ಭಾಷೆಯ ವಿಕಸನದ ಹೋರಾಟದ ಕಿಡಿ ಹಚ್ಚಿತು!

ಕೇವಲ ಬ್ರಾಹ್ಮಣರಿಗೆ ಮೀಸಲಾಗಿದ್ದ “ಹಿಂದೂ ಕಾಲೇಜ್” ನ್ನು ಎಲ್ಲರಿಗೂ ಮುಕ್ತಗೊಳಿಸಿ ಮರಾಠಿಯ ಬೆಳವಣಿಗೆಗೆ ಮಾತ್ರವಲ್ಲ ಒಂದಿಡೀ ಜನಾಂಗ ಶಿಕ್ಷಣ ಹೊಂದಲು ಕಾರಣರಾದ ಖ್ಯಾತಿ ಕೂಡ ಮಹಾತ್ಮಾ ಫುಲೆಯವರಿಗೆ ಸಲ್ಲಬೇಕು. ಫುಲೆ ನೇತೃತ್ವದ ಜಾಗೃತ ನಾಗರೀಕರ ಹೋರಾಟಕ್ಕೆ ಮಣಿದ ಬ್ರಿಟಿಷ್ ಸರಕಾರ ದಕ್ಷಿಣಾ ಫಂಡ್ ನ್ನು ಮರಾಠಿ ಭಾಷೆಗೆ ಮೀಸಲಿಟ್ಟಿತು. ಸಂಸ್ಕೃತ ಪಾಂಡಿತ್ಯದ ನೆಪದಲ್ಲಿ ಕೇವಲ ಬ್ರಾಹ್ಮಣರ ದುಂದು ವೆಚ್ಚ ಭರಿಸಲು ಬಳಕೆಯಾಗುತ್ತಿದ್ದ ಲಕ್ಷಗಟ್ಟಲೆ ಹಣ ನೆಲದ ಭಾಷೆಯ ವಿಕಾಸಕ್ಕೆ ಬಳಕೆಯಾಗತೊಡಗಿತು. ಈ ಹೋರಾಟವೇ, ಭಾಷಾ ಚಳುವಳಿ ಮತ್ತು ಸಮ್ಮೇಳನಗಳನ್ನು ಸಂಘಟಿಸಲು ಬೇಕಾದ ಭದ್ರ ಅರ್ಥಿಕ ಬುನಾದಿಯನ್ನು ಒದಗಿಸಿತು. ಫುಲೆಯವರು ಚಾಲನೆ ಕೊಟ್ಟ ಈ ಜನರ ಭಾಷಾ ವಿಕಾಸದನ ಈ ಪ್ರಕ್ರಿಯೆಯಿಂದಾಗಿಯೇ ಭಾಷಾವಾರು ಪ್ರಾಂತಗಳ ನಿರ್ಮಾಣದ ಚಿಂತನೆಗೆ ಚಾಲನೆ ಸಿಕ್ಕಿತು.

ಆದ್ದರಿಂದಲೇ, ಕನ್ನಡ ಸೇರಿದಂತೆ ಭಾರತದ ಎಲ್ಲಾ ಭಾಷಾ ಸಮ್ಮೇಳನಗಳನ್ನು ನಡೆಸುವ ಸಂದರ್ಭಗಳಲ್ಲಿ ಮಹಾತ್ಮಾ ಫುಲೆಯವರನ್ನು ನೆನೆದು ಕೈ ಮುಗಿಯಬೇಕು.

ಭಾರತದ ಮೊಟ್ಟ ಮೊದಲ ಕಾನೂನು ನೆರವು ಕೇಂದ್ರ – ಜನ ಸಾಮಾನ್ಯರಿಗೆ ದಕ್ಕಿದ ಧಾರ್ಮಿಕ ಹಕ್ಕು

ಫುಲೆಯವರಿಗೆ ಶೂದ್ರ ದಲಿತರಿಗಿಂತ ಜಾಸ್ತಿ ಬ್ರಾಹ್ಮಣ ಸಮಾಜವೇ ಹೆಚ್ಚು ಋಣಿಯಾಗಿರಬೇಕು. ಬ್ರಾಹ್ಮಣ ವಿಧವೆಯರ ಕೇಶಮುಂಡನೆ ಮಾಡಬಾರದು Savitribai-Phuleಎಂದು ಫುಲೆ ಸವಿತಾ ಸಮಾಜಕ್ಕೆ ಕಟ್ಟಳೆ ವಿಧಿಸಿದ್ದರು!

ಅದೇ ಹೊತ್ತಿಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸಂಸ್ಥಾಪಕ ಸದಸ್ಯ, ಅಂದಿನ ಕಾಲದ ಅತ್ಯುನ್ನತ ಸಮಾಜ ಸುಧಾರಕರೆನಿಸಿಕೊಂಡಿದ್ದ ಬ್ರಾಹ್ಮಣ ಸಮಾಜದ ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆ ಏನು ಮಾಡುತ್ತಿದ್ದರು ಗೊತ್ತೇ? ರಾನಡೆ ಮಾಡಿದ ಮೊದಲ ಘನಂದಾರಿ ಕೆಲಸವೆಂದರೆ, “ಬಾಲಾಜಿ ಪಾಟೀಲ್” ಮುಕದ್ದಮೆಯಲ್ಲಿ ಬ್ರಾಹ್ಮಣರನ್ನು ಕರೆಸದೇ ನಡೆಸುವ ಮತ್ತು ಬ್ರಾಹ್ಮಣರಿಗೆ ದಕ್ಷಿಣೆ ಕೊಡದ ಮದುವೆಯೇ ಅನೂರ್ಜಿತ ಎಂದು ತೀರ್ಪು ಕೊಟ್ಟಿದ್ದು! ಈ ತೀರ್ಪನ್ನು ಸತ್ಯಶೋಧಕ ಸಮಾಜ ಮುಂಬೈ ಉಚ್ಚ ನ್ಯಾಯಾಲಯಕ್ಕೆ ಕೊಂಡು ಹೋಗಿ ಅನೂರ್ಜಿತ ಗೊಳಿಸಿಲ್ಲ ದಿದ್ದರೆ ಎನೇನು ಅನಾಹುತಗಳಾಗುತ್ತಿದ್ದವೋ! ರಾನಡೆ ಮಾಡಿದ ಎರಡನೇ ಘನಂದಾರಿ ಕೆಲಸವೆಂದರೆ, ಬಹು ದೊಡ್ಡ ಸುಧಾರಕನೆಂದು ತೋರಿಸಿಕೊಳ್ಳಲು ತಾವು ನಲವತ್ತರ ಅಂಚಿನಲ್ಲಿದ್ದಾಗ ತಮ್ಮ ಪತ್ನಿ ತೀರಿಕೊಂಡಾಗ ಕೇವಲ ಹನ್ನೊಂದು ವರ್ಷ ಪ್ರಾಯದ ಬಾಲ ವಿಧವೆಯನ್ನು ಮದುವೆಯಾಗಿದ್ದು! ಹೀಗಿದ್ದೂ ರಾನಡೆಯವರಿಗೆ ಇಂದು ಒಬ್ಬ ಸಮಾಜ ಸುಧಾರಕನ ಪಟ್ಟ ಪಟ್ಟಿದ್ದಾರೆ!

ಸೆಪ್ಟೆಂಬರ್ ೨೪, ೧೮೭೩ ರಲ್ಲಿ ಫುಲೆಯವರು ಸ್ಥಾಪಿಸಿದ “ಸತ್ಯಶೋಧಕ ಸಮಾಜ” ಮಹಾರಾಷ್ಟ್ರದ ಪ್ರತಿ ಹಳ್ಳಿಯಲ್ಲೂ ಸಾಮಾಜಿಕ ಸಂಚಲನವನ್ನು ಹುಟ್ಟು ಹಾಕಿತು. ನಮ್ಮ ಉತ್ತರ ಕರ್ನಾಟಕದಲ್ಲೂ ಜನಪ್ರೀಯವಾಗಿರುವ “ಗೀ ಗೀ ಪದಗಳ” ಮುಖಾಂತರ ಜನ ಜಾಗೃತಿ ಸಾಧಿಸಲಾಯಿತು. ಸತ್ಯಶೋಧಕ ಸಮಾಜದ ನೇತೃತ್ವದಲ್ಲಿ ಲಕ್ಷಾಂತರ ಅಬ್ರಾಹ್ಮಣರು ವೈದಿಕರ ನೆರವಿಲ್ಲದೇ ಮದುವೆ, ಅಂತ್ಯ ಕ್ರಿಯೆ, ಪುಣ್ಯ ತಿಥಿಗಳನ್ನು ಮಾಡತೊಡಗಿದರು. ಪುರೋಹಿತಶಾಹಿಗಳಿಗೆ ಮೈಯೆಲ್ಲಾ ಪರಚಿಕೊಳ್ಳುವಂತಾಯಿತು!

ಪ್ರತಿವರ್ಷವೂ ಊರಿನ ಬ್ರಾಹ್ಮಣರನ್ನು ಕರೆಸಿ ಶಾಸ್ತ್ರೋಕ್ತ ರೀತ್ಯ ದಶಪಿಂಡ ಕ್ರಿಯೆ ಮಾಡಿಸುತ್ತಿದ್ದ ಅಹಮದ್ ನಗರ ಜಿಲ್ಲೆಯ ಭಾವಡಿ ಎಂಬ ಹಳ್ಳಿಯ ಬಲವಂತ ಲಕ್ಷ್ಮಣ ಘಾಟ್ಪಂಡೆ ಎಂಬುವವರ ಶೂದ್ರ ಕುಟುಂಬ ಈ ಬಾರಿ ಬ್ರಾಹ್ಮಣರನ್ನು ಕರೆಯಿಸಲಿಲ್ಲ; ಬದಲಿಗೆ ಭಕ್ತಿಯಿಂದ ಹಿರಿಯರನ್ನು ಮನಸಾ ವಂದಿಸಿ ನದಿ ದಡದಲ್ಲಿ ಮಿಂದೆದ್ದು ಬಂದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಬಾಳ ಗಣುಜಿ ನವಲೆ ಎಂಬ ಬ್ರಾಹ್ಮಣ, ಮಹಾರಾಷ್ಟ್ರದ ನಿಖಿಲ ಬ್ರಾಹ್ಮಣ ಸಮಾಜದ ಕುಮ್ಮಕ್ಕು ಪಡೆದು ಇವರ ಮೇಲೆ ಒಂದು ಮೊಕದ್ದಮೆಯನ್ನೇ ಜಡಿದು ಬಿಟ್ಟ! ಬ್ರಾಹ್ಮಣರ ವಾದವೇನೆಂದರೆ ಬ್ರಾಹ್ಮಣ್ಯ / ಪೌರೋಹಿತ್ಯವೆಂಬುದು ಸರಕಾರೀ ಪದವಿಗೆ ಸಮಾನ. ಯಾರೇ ಆಗಲಿ ಬ್ರಾಹ್ಮಣರ ಮುಖಾಂತರವೇ ಪೂಜೆ ಮಾಡಿಸಬೇಕು, ಇಲ್ಲದಿದ್ದರೆ ಅದು ಕಾನೂನು ಬಾಹಿರ! ಆದ್ದರಿಂದ, ಜುಲ್ಮಾನೆ ಕಟ್ಟಿ ಕೊಡಬೇಕು! ಬ್ರಾಹ್ಮಣರನ್ನು ಕರೆಯಿಸದೆ ಪೂಜೆ ಪುನಸ್ಕಾರ ಮಾಡಿಸಿದರೆ ಶೂದ್ರರು ದಂಡ ಕಟ್ಟಬೇಕು!!

ತಾಲೂಕು ಮಟ್ಟದ ಕೋರ್ಟ್ ನಲ್ಲಿ ಶುರುವಾದ ಈ ಮುಕದ್ದಮೆ ಸುಮಾರು ಇಪ್ಪತ್ತು ವರ್ಷ ನಡೆದು ಬೊಂಬಾಯಿ ಉಚ್ಚ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳ ವಿಭಾಗೀಯ ಪೀಠದವರೆಗೂ ಹೋಯಿತು. ಕೊನೆಗೂ ಶೂದ್ರ ಸಮಾಜ ಗೆದ್ದಿತು!

ಘಾಟ್ಪಂಡೆಯ ಮುಕದ್ದಮೆ [(1918) 20 BOMLR 454] ಮಾತ್ರವಲ್ಲ, ಅಂದಿನ ಪ್ರತಿ ಸಾಮಾಜಿಕ ಸಂಘರ್ಷದ ಪರಿಣಾಮವಾಗಿ ಕೋರ್ಟಿನ 1998-savitribai_phule[1]ಮೆಟ್ಟಲೇರುತ್ತಿದ್ದ ಅಥವಾ ನೂಕಲ್ಪಡುತಿದ್ದ ಸಾವಿರಾರು ದಲಿತ-ಶೂದ್ರರಿಗೆ ಬೆನ್ನೆಲುಬಾಗಿ ನಿಂತಿದ್ದ “ಸತ್ಯಶೋಧಕ ಸಮಾಜ”, ಭಾರತದ ಮೊಟ್ಟ ಮೊದಲ ‘ಕಾನೂನು ನೆರವು ಕೇಂದ್ರ’ (Legal Aid Clinic) ವಾಗಿತ್ತು; ಅಷ್ಟೇ ಅಲ್ಲ, ಶತಮಾನ ಗಳ ನಂತರ ಬಂದ ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆಗಳಿಗೆ ಮೂಲ ಪ್ರೇರೇಪಣೆ.

ಸತ್ಯ ಶೋಧಕ ಸಮಾಜದ ನೆರವಿನಿಂದ ನಡೆದ ಮುಕದ್ದಮೆಗಳನ್ನು ನೂರಾರು ವಕೀಲರು ಉಚಿತವಾಗಿ ಇಲ್ಲವೇ ಅತಿ ಕಡಿಮೆ ಖರ್ಚಿಗೆ ನಡೆಸಿ ಕೊಟ್ಟರು; ಸಾಮಾಜಿಕ ಕಾರ್ಯಕರ್ತರು ತಮ್ಮ ತನು ಮನ ಧನ ಅರ್ಪಿಸಿ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿ ಕೂಡ ಸತ್ಯವನ್ನು ಗೆಲ್ಲಿಸಿದರು. ಧಾರ್ಮಿಕ ಸ್ವಾತಂತ್ರದ, ಅಷ್ಟೇ ಅಲ್ಲ, ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆ ಮತ್ತು ಕಾನೂನು ನೆರವು ಕೇಂದ್ರಗಳ ಪಿತಾಮಹ ಕೂಡ ಫುಲೆಯವರು.

ಭಾರತವನ್ನು ಕಟ್ಟಿದ್ದು ಅದಕ್ಕೆ ಕಣ್ಣು ಕೊಟ್ಟಿದ್ದು ಭಾರತದಲ್ಲಿ ಮಹೋನ್ನತ ಸಾಧನೆಗೈದ ಶೂದ್ರ ಮತ್ತು ದಲಿತರು. ಆದರೆ ಅವರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಸಮೀಕರಿಸಿ ನೋಡಲಾಗುತ್ತದೆ. ಅವರು ಒಟ್ಟಾರೆ ಸಮಾಜದ ಒಳಿತಿಗೆ ಶ್ರಮಿಸಿದ ಸಮಸ್ತ ಮಜಲುಗಳನ್ನು ಸಂಶೋಧಿಸುವ ಪ್ರಯತ್ನ ನಡೆಯಬೇಕು.

ಫುಲೆ ನೈಜ ಅರ್ಥದಲ್ಲಿ ಮಹಾತ್ಮ – ತಾಯಿ ಸಾವಿತ್ರಿಬಾಯಿಯವರು ವಿದ್ಯೆ ಕೊಟ್ಟ ಸರಸ್ವತಿ ಎಂದು ಪ್ರತಿ ಭಾರತೀಯ ಅರಿತಾಗಲೇ ಭಾರತ ನೈಜ ಅರ್ಥದಲ್ಲಿ ಸ್ವತಂತ್ರವಾಯಿತು ಎಂದುಕೊಳ್ಳಬಹುದು.