Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯೇ

– ರೂಪ ಹಾಸನ

ನಮ್ಮ ಸಮಾಜದಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗುವವರು ಮಕ್ಕಳು. ಲೈಂಗಿಕ ಕಿರುಕುಳಕ್ಕೆ-ಅತ್ಯಾಚಾರಕ್ಕೆ ಒಳಗಾಗುವ, ಪರಿತ್ಯಜಿಸಲ್ಪಡುವ, ಬಾಲಕಾರ್ಮಿಕರಾಗುವ, ಶಾಲೆಯ ಮೆಟ್ಟಿಲನ್ನೇ ಹತ್ತದ, ಕುಟುಂಬ ಮತ್ತು ಪೋಷಕರಿಂದ ದುರುಪಯೋಗಕ್ಕೆ ಒಳಗಾಗುವ, ದತ್ತು ಹೋಗುವ, ಮಕ್ಕಳ ಸಾಗಣೆಗೆ ಒಳಗಾಗುವ, ಮೋಸ ಹೋಗುವ, ಕಳೆದು ಹೋದ, ಪೊಲೀಸರಿಗೆ ಸಿಕ್ಕಿರುವ, ಮಾದಕ ವಸ್ತುಗಳಿಗೆ, ಹೆಚ್.ಐ.ವಿ, ಏಡ್ಸ್ ಮುಂತಾದ ಭೀಕರ ರೋಗಕ್ಕೆ ತುತ್ತಾಗುವ…….. ಇಂತಹ ಅಸಂಖ್ಯ ಮಕ್ಕಳನ್ನು ನಮ್ಮ ಸುತ್ತ ನೋಡುತ್ತಲೇ ಇರುತ್ತೇವೆ. ಈ ಎಲ್ಲ ವಿಷಮ ಪರಿಸ್ಥಿತಿಗೂ ಅವರ ಮುಗ್ಧತೆ ಹಾಗೂ ಅಸಹಾಯಕತೆಯೇ ಮುಖ್ಯ ಕಾರಣ. ತೀರಾ ಇತ್ತೀಚೆಗಷ್ಟೇ ನಾವು ಮಕ್ಕಳನ್ನೂ ವ್ಯಕ್ತಿಗಳಂತೆ ಕಾಣಬೇಕು, ಅವರಿಗೂ ಹಿರಿಯರಿಗಿರುವಂತೆಯೇ ಸಂವಿಧಾನಾತ್ಮಕವಾದ ಹಕ್ಕುಗಳಿವೆ ಎಂದು ಅರಿಯಲು ಪ್ರಾರಂಭಿಸಿದ್ದೇವೆ. ಬೆಳಕಿಗೇ ಬರದೇ, ಎಲ್ಲಿಯೂ ದಾಖಲಾಗದೇ ಹೋಗುತ್ತಿದ್ದ ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ಕೆಲವಾದರೂ, ಇಂದು ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲೇರುತ್ತಿವೆ. ಆದರೆ ದೊಡ್ಡವರ ಈ ಪ್ರಪಂಚದಲ್ಲಿ ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 2448 ಮಕ್ಕಳ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 714 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಮಕ್ಕಳಿಗೆ ತುರ್ತು ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಕ್ಕಳಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಇತ್ತೀಚೆಗೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. ಇದೊಂದು ಸ್ವಾಗತಾರ್ಹವಾದ ವಿಚಾರವೇ. ಸ್ಕಾಟ್‌ಲ್ಯಾಂಡ್‌ನಲ್ಲಿ 1996 ರಲ್ಲಿ ಪ್ರಥಮ ಮಕ್ಕಳ ನ್ಯಾಯಾಲಯ ಸ್ಥಾಪನೆಯಾದ ನಂತರ ಅನೇಕ ದೇಶಗಳಲ್ಲಿ ಇಂತಹ ವಿಶೇಷ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಕೇಂದ್ರ ಸರ್ಕಾರವು 2005 ರಲ್ಲೇ ಮಕ್ಕಳ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಆದರೆ ಈ ಆದೇಶವನ್ನು ಎಲ್ಲ ರಾಜ್ಯಗಳೂ ಕಳೆದ ಐದು ವರ್ಷಗಳಿಂದ ಉಲ್ಲಂಘಿಸುತ್ತಲೇ ಬಂದಿವೆ! ಹೋದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್, ತುರ್ತಾಗಿ ದೆಹಲಿಯಲ್ಲಿ ಮಕ್ಕಳ ನ್ಯಾಯಾಲಯ ಸ್ಥಾಪಿಸಲು ಆದೇಶ ನೀಡಿತ್ತು. ಅದೇನಾದರೂ ಕಾರ್ಯಗತಗೊಂಡಿದ್ದರೆ, ದೇಶದಲ್ಲೇ ಮೊದಲ ಮಕ್ಕಳ ನ್ಯಾಯಾಲಯ ಅಲ್ಲಿ ಸ್ಥಾಪನೆಯಾಗುತ್ತಿತ್ತು. ಆದರೆ ನಮ್ಮ ದೇಶಕ್ಕೇ ಹೊಸದಾಗಿರುವ ಈ ಮಕ್ಕಳ ನ್ಯಾಯಾಲಯದ ಪರಿಕಲ್ಪನೆಯ ನೀಲಿ ನಕಾಶೆಯೇ ಈವರೆಗೆ ಸಿದ್ಧಗೊಂಡಿಲ್ಲ!

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು 2011-12 ನೇ ವರ್ಷವನ್ನು ‘ಮಕ್ಕಳ ಹಕ್ಕುಗಳ ವರ್ಷ’ ಎಂದು ಘೋಷಿಸಿದೆ. Streetchildrenಈಗಾಗಲೇ ದೇಶದಲ್ಲಿ ಮಕ್ಕಳ ನ್ಯಾಯ [ಮಕ್ಕಳ ಪೋಷಣೆ ಮತ್ತು ರಕ್ಷಣೆ] ಕಾಯ್ದೆ 2000 ದಲ್ಲಿಯೇ ರಚನೆಗೊಂಡಿದೆ. ಈ ಕಾಯ್ದೆ ಕುರಿತು ಕರ್ನಾಟಕ ರಾಜ್ಯ 2002 ರಲ್ಲಿಯೇ ನಿಯಮವನ್ನು ಜಾರಿಗೆ ತಂದು, ಮಕ್ಕಳ ರಕ್ಷಣೆಗೆ ಬದ್ಧವಾಗಿರುವ ಸಂಕಲ್ಪ ಮಾಡಿದೆ. ಇದರ ಒಂದು ಭಾಗವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು 2009 ರ ಜುಲೈನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರಚಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗಗಳು ಕಾಯಿದೆ 2005 ರಡಿಯಲ್ಲಿನ ಸ್ವತಂತ್ರ ಶಾಸನಬದ್ಧ ಅಂಗಸಂಸ್ಥೆಯಾಗಿರುವ ಈ ಆಯೋಗವು ಭಾರತ ಸಂವಿಧಾನ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989 ರಲ್ಲಿ ಸ್ಪಷ್ಟಪಡಿಸಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಬೆಂಬಲ ನೀಡಲೆಂದೇ ರೂಪುಗೊಂಡಿದೆ.

ಇದರ ಜೊತೆಗೆ ಈಗಾಗಲೇ, ಮಕ್ಕಳ ಪೋಷಣೆ, ರಕ್ಷಣೆ ಮತ್ತು ಕಾನೂನಿನ ನೆರವಿನ ಹಿತದೃಷ್ಟಿಯಿಂದ ಶಾಸನಬದ್ಧವಾದ ನ್ಯಾಯವನ್ನು ಒದಗಿಸಲು ಕರ್ನಾಟಕ ಸರ್ಕಾರ ‘ಮಕ್ಕಳ ಕಲ್ಯಾಣ ಸಮಿತಿ’ಗಳನ್ನು 2003 ರಲ್ಲೇ ನೇಮಿಸಿದೆ. ಈ ಸಮಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರತಿ ಜಿಲ್ಲೆಯಲ್ಲಿಯೂ ನೇಮಕವಾಗಿದೆ. ಇದರಲ್ಲಿ 0-18 ವರ್ಷದವರೆಗಿನ ಮಕ್ಕಳು ಯಾವುದೇ ತಾರತಮ್ಯವಿಲ್ಲದಂತೆ ಪೋಷಣೆ, ರಕ್ಷಣೆ ಮತ್ತು ನ್ಯಾಯದ ನೆರವನ್ನು ಪಡೆಯುವ ಅವಕಾಶವಿದೆ. ಈ ಮಕ್ಕಳ ನ್ಯಾಯ ಮಂಡಳಿಯು ಮಕ್ಕಳ ನ್ಯಾಯ ಕಾಯ್ದೆಯ ಒಂದು ಅಂಗವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಇದರ ಮುಖ್ಯಸ್ಥರು ನ್ಯಾಯಾಧೀಶರಾಗಿದ್ದು, ಪ್ರಕರಣಗಳನ್ನು ನಡೆಸಲು ಇಬ್ಬರು ಸಮಾಜಸೇವಾ ಕಾರ್ಯಕರ್ತರಿರುತ್ತಾರೆ. ಜೊತೆಗೆ ಪದವಿ ಹೊಂದಿದ ಒಬ್ಬ ಅಧ್ಯಕ್ಷರು ಹಾಗೂ ಐದು ಜನ ಸದಸ್ಯರನ್ನೊಳಗೊಂಡ ಸಮಿತಿಯೂ ಕಾರ್ಯನಿರ್ವಹಿಸಬೇಕಿದೆ.

ಮಕ್ಕಳ ಹಿತರಕ್ಷಣೆಗಾಗಿಯೇ ಈ ಎಲ್ಲಾ ಸರ್ಕಾರಿ ಇಲಾಖೆ, ಆಯೋಗ, ಸಮಿತಿಗಳು ಇರುವಾಗ ಮತ್ತೆ ಪ್ರತ್ಯೇಕ, ವಿಶೇಷ ನ್ಯಾಯಾಲಯದ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ಹಲವರದು. ಆದರೆ ಇವುಗಳೆಲ್ಲದರ ಮಧ್ಯೆ ಕೂಡ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. childlaboursಇದಕ್ಕೆ ಒಂದು ಉದಾಹರಣೆಯನ್ನು ನೋಡುವುದಾದರೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದು 25 ವರ್ಷಗಳೇ ಆಗಿದ್ದರೂ ಕರ್ನಾಟಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಬಾಲಕಾರ್ಮಿಕರಿರುವರೆಂದು ಬೆಂಗಳೂರಿನ ‘ಬಾಲ ಕಾರ್ಮಿಕ ವಿರೋಧಿ ಆಂದೋಲನ’ದ ವರದಿ ತಿಳಿಸುತ್ತದೆ. ಆದರೆ ಕಾಯ್ದೆಯಡಿ ಇದುವರೆಗೆ ದಾಖಲಾಗಿರುವುದು ಕೇವಲ 446 ಪ್ರಕರಣಗಳು! ಅದರಲ್ಲಿ ಶಿಕ್ಷೆಗೆ ಒಳಗಾದವರು ಒಬ್ಬರು ಮಾತ್ರ! ಇದು ನಮ್ಮ ನ್ಯಾಯ ವ್ಯವಸ್ಥೆಗೆ ಹಿಡಿದ ಕನ್ನಡಿ.

ಮಕ್ಕಳ ದೌರ್ಜನ್ಯದ ಕ್ಷೇತ್ರ ಅತ್ಯಂತ ವಿಸ್ತಾರವಾದುದು. ಈ ಎಲ್ಲ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರೂಪುಗೊಂಡಿರುವ ವ್ಯವಸ್ಥೆಯ ಪರಿಧಿಯಾಚೆಗೇ ಇಂದಿಗೂ ಅಸಂಖ್ಯಾತ ಮಕ್ಕಳು ನಿತ್ಯ ಶೋಷಣೆಗೆ, ಸಂಕಷ್ಟಗಳಿಗೆ ಊಹಿಸಲೂ ಸಾಧ್ಯವಿಲ್ಲದ ರೀತಿಗಳಲ್ಲಿ ಗುರಿಯಾಗುತ್ತಲೇ ಇದ್ದಾರೆ. ಮಕ್ಕಳ ಸಂಬಂಧಿತ ಈ ಎಲ್ಲ ಸಂಸ್ಥೆಗಳು ಕ್ರಿಯಾಶೀಲವಾಗದೇ, ವಿಕೇಂದ್ರಿಕರಣಗೊಳ್ಳದೇ, ಅಧಿಕಾರಿಗಳ, ಸಿಬ್ಬಂದಿಯ ನಿರ್ಲಕ್ಷ್ಯ, ನಿಷ್ಕ್ರಿಯತೆಗೆ ಒಳಗಾಗಿ ಮತ್ತು ಎಲ್ಲಕ್ಕಿಂತಾ ಮುಖ್ಯವಾಗಿ ಮಕ್ಕಳೊಂದಿಗಿನ ನೇರ ಸಂಪರ್ಕದ ಕ್ಷೇತ್ರಕಾರ್ಯ ಮಾಡದೆ, ಮಕ್ಕಳ ಮನಸ್ಸಿನ ಸೂಕ್ಷ್ಮಗಳನ್ನರಿಯದೇ ನಿರೀಕ್ಷಿತ ಪ್ರಮಾಣದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಬಾರಿ ಜಾತಿ ಹಾಗೂ ಸ್ಥಳೀಯ ರಾಜಕಾರಣದ ಪ್ರಭಾವ ಮತ್ತು ಒತ್ತಡದಲ್ಲಿ ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ತಾರತಮ್ಯ ಹಾಗೂ ಲೋಪ ಉಂಟಾಗುತ್ತಿದೆ. ಪ್ರಕರಣ ದಾಖಲಾಗಿದ್ದರೂ, ಆಗದಿದ್ದರೂ ತೊಂದರೆಯಲ್ಲಿರುವ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ, ಅದನ್ನು ಅತ್ಯಂತ ಸೂಕ್ಷ್ಮವಾಗಿ ಇತ್ಯರ್ಥಗೊಳಿಸಿ ನ್ಯಾಯ ನೀಡುವ ವ್ಯವಸ್ಥೆಯನ್ನು ತುರ್ತಾಗಿ ಪುನರ್‌ರೂಪಿಸಬೇಕಿದೆ.

ನಿಡ್ಡೋಡಿ : ಬದುಕುವ ಹಕ್ಕು ಬೇಕು, ಪರಿಹಾರ ಬೇಡ


– ಚಿದಂಬರ ಬೈಕಂಪಾಡಿ


 

ಕರಾವಳಿಯ ಜನ ನಿಜಕ್ಕೂ ಬೆಚ್ಚಿಬೀಳುವಂಥ ಸ್ಥಿತಿ ನಿರ್ಮಾಣವಾಗಿದೆ. ನಿಡ್ಡೋಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಜನರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುತ್ತದೆ ಎನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಯಾಕೆಂದರೆ ನಂದಿಕೂರು ಸ್ಥಾವರದ ಸುತ್ತಮುತ್ತಲಿನ ಹಳ್ಳಿಗಳನ್ನು ಒಂದು ಸುತ್ತು ಹಾಕಿಬಂದರೆ ಉದ್ದೇಶಿತ ನಿಡ್ಡೋಡಿ ಸ್ಥಾವರ ಉಂಟುಮಾಡಬಹುದಾದ ಗಂಭೀರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬಹುದು. fly_ashಒಂದು ಕಾಲದಲ್ಲಿ ನಂದಿಕೂರು ಪರಿಸರದ ಹಳ್ಳಿಗಳಲ್ಲಿ ಮರಗಿಡಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದವು. ಈಗ ನೋಡಿದರೆ ಆ ಹಸಿರು ಗಿಡಗಳು ತಮ್ಮ ನಿಜ ಬಣ್ಣವನ್ನೇ ಕಳೆದುಕೊಂಡು ಕಂದು ಬಣ್ಣಕ್ಕೆ ತಿರುಗಿವೆ. ಅಲ್ಲಿನ ಹೂವುಗಳ ಮೇಲೆ ಕಣ್ಣಾಡಿಸಿದರೆ ಸಾಕು ಈ ಸ್ಥಾವರದ ಹಾರು ಬೂದಿ ಮಾಡಿರುವ ಅವಾಂತರದ ಅರಿವಾಗುತ್ತದೆ.

ಉಷ್ಣ ವಿದ್ಯುತ್ ಸ್ಥಾವರದ ಬಹುಮುಖ್ಯ ಸಮಸ್ಯೆ ಹಾರು ಬೂದಿ ಎನ್ನುವುದನ್ನು ಆಗ ಆ ಸ್ಥಾವರದ ಅಧಿಕಾರಿಗಳು ಅದೆಷ್ಟು ನಾಜೂಕಾಗಿ ನಿರಾಕರಿಸಿದ್ದರೆಂದರೆ ಅತ್ಯಾಧುನಿಕ ತಾಂತ್ರಿಕತೆ ಅಳವಡಿಸುತಿರುವುದರಿಂದ ಹಾರು ಬೂದಿ ಯಾವುದೇ ಕಾರಣಕ್ಕೂ ಸಮಸ್ಯೆ ಮಾಡುವುದಿಲ್ಲವೆಂದಿದ್ದರು. ಯಾರೂ ಕೇಳಿರದ ತಾಂತ್ರಿಕತೆಯನ್ನು ಉದಾಹರಿಸಿ ಒಂದಷ್ಟು ಸಿಡಿಗಳ ಮೂಲಕ ತಮಗೆ ಅನುಕೂಲವಾಗುವಮ್ಥ ದೃಶ್ಯ ತೋರಿಸಿ ಕಾಮೆಂಟರಿ ಹೇಳಿ ಹಾರು ಬೂದಿಯನ್ನು ತಮ್ಮ ಮಾತುಗಳಿಂದಲೇ ನಿವಾರಿಸಿಕೊಂಡಿದ್ದರು. ಈಗ ನಂದಿಕೂರು ಪರಿಸರದ ಚಿಕ್ಕ ಮಕ್ಕಳಿಗೂ ಅರಿವಾಗುತ್ತಿದೆ ಹಾರು ಬೂದಿ ಮಾಡಿರುವ ಘೋರ ಪರಿಣಾಮಗಳು.

ಹಾರು ಬೂದಿಯಿಂದ ಇಟ್ಟಿಗೆ, ಸಿಮೆಂಟ್, ಡಾಮರ ಗೆ ಬಳಕೆ, ರಸ್ತೆ ನಿರ್ಮಾಣ ಹೀಗೆ ಅನೇಕ ಉತ್ಪನ್ನಗಳಿಗಾಗಿ ಬಳಕೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ನಿಜ ಆ ಹಾರು ಬೂದಿಯನ್ನು ಅವರು ಬಳಕೆ ಮಾಡಿಕೊಳ್ಳುತ್ತಿರಬಹುದು, ಆದರೆ ಹಾರು ಬೂದಿ ಮಾಡುತ್ತಿರುವ ಮಾಲಿನ್ಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಜಲಚರಗಳಿಗೆ ತ್ಯಾಜ್ಯ ನೀರಿನಿಂದ ಯಾವುದೇ ಪರಿಣಾಮವಾಗುವುದಿಲ್ಲವೆಂದಿದ್ದರು. ಹಾಗಾದರೆ ಈ ಮಾತನ್ನು ಎಷ್ಟ್ರಮಟ್ಟಿಗೆ ನಂಬಬೇಕು. fly-ash-pollutionಸಮುದ್ರಕ್ಕೆ ಬಿಡಲಾಗುತ್ತಿರುವ ತ್ಯಾಜ್ಯ ನೀರಿನ ಪರಿಣಾಮಗಳನ್ನು ಅಧ್ಯಯನ ಮಾಡುವ ಅಥವಾ ಆ ನೀರನ್ನು ಮಾನಿಟರಿಂಗ್ ಮಾಡುವ ಯಾವ ವ್ಯವಸ್ಥೆಯಿದೆ ? ಎನ್ನುವುದು ಭವಿಷ್ಯದಲ್ಲಿ ಕೇಳುವಂಥ ಸ್ಥಿತಿ ಬರಲಿದೆ. ಬಾಹ್ಯವಾಗಿ ನಂದಿಕೂರು ಸ್ಥಾವರ ಮಾಡುತ್ತಿರುವ ಪರಿಣಾಮಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮತ್ತೊಂದು ಕೊಕ್ಕಡದಂಥ (ಎಂಡೋಸಲ್ಫಾನ್) ಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ. ಆಗ ಸರ್ಕಾರ ಅಂಥ ಸಂಕಷ್ಟಕ್ಕೆ ಒಳಗಾಗುವ ಜನರಿಗಾಗಿ ಒಂದಷ್ಟು ಪ್ಯಾಕೇಜ್ ಪ್ರಕಟಿಸಿ ಕೈತೊಳೆದುಕೊಳ್ಳಬಹುದು. ಆದರೆ ಆ ಹೊತ್ತಿಗೆ ಈಗ ಇರುವ ಹಿರಿಯರು ಇರುವುದಿಲ್ಲ. ಹೊಸ ತಲೆಮಾರಿನ ಜನ ಈ ಸ್ಥಾವರ ನಿರ್ಮಾಣಕ್ಕೆ ಕಾರಣರಾದ ಹಿರಿಯರನ್ನು ಶಪಿಸದಿರಲಾರರು ಎನ್ನುವಂತಿಲ್ಲ.

ಈಗ ಸ್ಥಾಪನೆಯಾಗಲು ಹವಣಿಸುತ್ತಿರುವ ನಿಡ್ಡೋಡಿ ಸ್ಥಾವರದ ಬಗ್ಗೆಯೂ ಒಂದಷ್ಟು ಚಿಂತನೆ ಮಾಡುವುದು ಬುದ್ಧಿವಂತಿಕೆಯಾಗಲಿದೆ. ನಂದಿಕೂರು 1200 ಮೆ.ವಾ. ಆಗಿದ್ದರೆ ನಿಡ್ಡೋಡಿ 4 ಸಾವಿರ ಮೆ.ವಾ ಸಾಮರ್ಥ್ಯದ್ದು. ಎಂ.ಆರ್.ಪಿ.ಎಲ್ ನಿಂದಾಗಿ ಪಣಂಬೂರು, ಸುರತ್ಕಲ್, ಕಾಟಿಪಳ್ಳ, ಮುಕ್ಕ, ಹಳೆಯಂಗಡಿ ಜನ ಚಿಂತಿತರಾಗಿದ್ದರೆ ಮೂಲ್ಕಿ, ಪಡುಬಿದ್ರಿ, ಬೆಳ್ಮಣ್, ನಿಟ್ಟೆ ಜನ ನಂದಿಕೂರು ಸ್ಥಾವರದಿಂದ ಸಂಕಟ ಅನುಭವಿಸುತ್ತಿದ್ದರೆ. ಉದ್ದೇಶಿತ ನಿಡ್ಡೋಡಿ ಸ್ಥಾವರ ಬಂದರೆ ಮಂಗಳೂರು, ಮೂಡುಬಿದ್ರೆ ಸಹಿತ ಕಾರ್ಕಳದವರೆಗೂ ಜನ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಡಾ.ಬಿ.ಎ.ವಿವೇಕ ರೈ ಈ ನಾಡಿನ ಹಿರಿಯ ಜಾನಪದ ವಿದ್ವಾಂಸ ಹಾಗೂ ಗ್ರಾಮೀಣ ಬದುಕನ್ನು ಹೆಚ್ಚು ಹತ್ತಿರದಿಂದ ಅಧ್ಯಯನ ಮಾಡಿದವರು. ಅವರು ನಿಡ್ಡೋಡಿ ಪರಿಸರದಲ್ಲಿ ಸುತ್ತು ಹಾಕಿ ಬಂದು ಹಾರು ಬೂದಿಯ ಬಗ್ಗೆ ವ್ಯಕ್ತಪಡಿಸಿರುವ ಆತಂಕಗಳು ಕಡೆಗಣಿಸುವಂಥವುಗಳಲ್ಲ. ಹರಿಸಿನಿಂದ ಕಂಗೊಳಿಸುತ್ತಿರುವ ಭತ್ತದ ಪೈರುಗಳನ್ನು ನೋಡಿದರೆ ದಿಲ್ಲಿಯಲ್ಲಿ ಕುಳಿತು ಈ ಯೋಜನೆಗೆ ಸಮ್ಮತಿಸಿದವರು ನಿಜಕ್ಕೂ ಮನುಷ್ಯರಾಗಿರಲು ಸಾಧ್ಯವೇ ? ಎನ್ನುವ ಪ್ರಶ್ನೆ ಮೂಡುತ್ತದೆ. ಮೂರು ಬೆಳೆ ಬೆಳೆಯುವ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಂಡು ಪರಿಹಾರ ಧನ, ವಾಸ್ತವಕ್ಕೆಂದು ಮನೆ ನಿವೇಶನ, ಮನೆಗೊಂದು ಉದ್ಯೋಗ, ಕೆಲಸ ಬೇಡವೆಂದಾದರೆ 5 ಲಕ್ಷ ರೂಪಾಯಿ ಏಕಗಂಟಿನ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತದೆ. ಸಿಕ್ಕ ಪರಿಹಾರ ಖರ್ಚು ಮಾಡಲು ಬಾರ್ ತೆರೆದು, ಮೋಜು ಮಸ್ತಿಗೆ ಅವಕಾಶ ಕಲ್ಪಿಸಿಕೊಟ್ಟು ಕೈಖಾಲಿ ಮಾಡಿಕೊಳ್ಳಲು ಸಾಧ್ಯ ಎನ್ನುವುದನ್ನು ಬಿಟ್ಟರೆ ಬೇರೇನೂ ಸಾಧ್ಯವಿಲ್ಲ.

ಈಗ ಅಲ್ಲಿ ಹರಿಯುವ ತೊರೆಗಳಾಗಲೀ, ನೀರಿನಿಂದ ತುಂಬಿ ತುಳುಕುತ್ತಿರುವ ಕೆರೆ, ಬಾವಿಗಳಾಗಲೀ ಇರಲು ಸಾಧ್ಯವಿಲ್ಲ. save-niddodiಬಾನಾಡಿಗಳು ನಿಮ್ಮ ಕಣ್ಣಿಗೆ ಕಾಣಿಸಲಾರವು, ದನ-ಕರುಗಳ ದನಿ ಕೇಳಿಸವು. ಈಗಾಗಲು ಸಾಧ್ಯವಿಲ್ಲ ಎನ್ನುವವರಿಗೆ ನಂದಿಕೂರು ಪರಿಸರದಲ್ಲಿ ಗುಬ್ಬಚ್ಚಿಗಳಿವೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ. ರಾಜಕಾರಣಿಗಳು ನಿಡ್ಡೋಡಿ ಸ್ಥಾವರದ ಬಗ್ಗೆ ನಿಖರವಾಗಿ ಮಾತನಾಡಲು ಹಿಂಜರಿಯುತ್ತಾರೆ. ಆಡಳಿತ ಪಕ್ಷದವರಿಗೆ ಮುಜುಗರವಾಗಿದ್ದರೆ, ವಿರೋಧ ಪಕ್ಷಗಳಿಗೆ ಈ ಯೋಜನೆ ಬ್ರಹ್ಮಾಸ್ತ್ರವಾಗಿದೆ. ಇದೇ ಒಂದು ಅವಕಾಶವೆಂದು ಕೆಲವರು ಸಂಘಟನೆಗೆ ಬೆಂಬಲ, ಪರವಾದ ಹೇಳಿಕೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ರಾಜಕೀಯ ರಹಿತವಾಗಿ ಇದನ್ನು ವಿರೋಧಿಸಬೇಕು ಎನ್ನುವುದು ವೈಯಕ್ತಿಕವಾದ ಅನಿಸಿಕೆ. ಹಾಗೆ ನೋಡಿದರೆ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರು ಅತ್ಯಂತ ಗಟ್ಟಿಯಾಗಿಯೇ ಈ ಯೋಜನೆಯನ್ನು ವಿರೋಧಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವುದು ಮೆಚ್ಚುವಂಥ ನಿಲುವು. ಸರ್ಕಾರ ತಮ್ಮ ಪಕ್ಷದ್ದೇ ಆಗಿದ್ದರು ಜನವಿರೋಧಿಯಾದ ಯೋಜನೆ ಬೇಕಾಗಿಲ್ಲ ಎನ್ನುವ ಅವರ ನಿಲುವನ್ನು ಬೆಂಬಲಿಸುವುದು ಈಗಿನ ಅನಿವಾರ್ಯತೆ ಕೂಡಾ.

ನಿಡ್ಡೋಡಿ ವಿದ್ಯುತ್ ಸ್ಥಾವರ ಕರಾವಳಿಗೆ ಅನಿವಾರ್ಯವಲ್ಲ. ಕರಾವಳಿಯಲ್ಲಿ ತಯಾರಾಗುವ ವಿದ್ಯುತ್ ಕರಾವಳಿಗೇ ಮೀಸಲು ಎನ್ನುವ ವಾದವೂ ಬೇಕಾಗಿಲ್ಲ. ಇಂಥಾ ವಾದಗಳನ್ನು ಹಿಂದೆಯೂ ಮಂಡಿಸಿದ್ದರು ಅತಿ ಬುದ್ಧಿವಂತರು.

ದೇಶಕ್ಕೆ ವಿದ್ಯುತ್ ಸಮಸ್ಯೆ ಇದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಹಾಗೆಯೇ ಕರಾವಳಿಯನ್ನು ತ್ಯಾಜ್ಯದ ತಿಪ್ಪಿಗುಂಡಿ ಮಾಡಿ ವಿದ್ಯುತ್ ಸ್ಥಾವರ ಸ್ಥಾಪಿಸುವುದಕ್ಕೆ ಜನರು ಅವಕಾಶ ಕೊಡಬೇಕೆನ್ನುವ ಕಟ್ಟು ಪಾಡಿಲ್ಲ. ನಮ್ಮ ಭೂಮಿ, ನಮ್ಮ ಜಲ, ನಮ್ಮ ಜೀವಚರಗಳು ಈ ಮಣ್ಣಲ್ಲಿ ಬದುಕುವ ಕನಸು ಕಟ್ಟಿಕೊಂಡಿವೆ. ತಲೆ ತಲೆಮಾರುಗಳಿಂದ ಆರಾಧಿಸಿಕೊಂಡು ಬರುತ್ತಿರುವ ಮಠ, ಮಂದಿರಗಳು, ಭೂತಾರಾಧನೆ, ನಾಗಬನಗಳಿವೆ. ಇವುಗಳನ್ನು ನಾಶಮಾಡಿ ಬೆಳಕು ಹರಿಸುವ ಅಗತ್ಯವಿಲ್ಲ. ಅಲ್ಲಲ್ಲಿ ಗೋರಿ ನಿರ್ಮಿಸಿ ಹಣತೆಗಳನ್ನು ಹಚ್ಚಿಡುವಂತೆ ಮಾಡುವ ದುಸ್ಸಾಹಸಕ್ಕೆ ಮುಂದಾಗುವುದು ಬೇಡ.

ನಮಗೆ ಬದುಕುವ ಹಕ್ಕು ಬೇಕು, ಪರಿಹಾರ ಬೇಡ ಎನ್ನುವುದು ಈ ಯೋಜನೆ ವಿರೋಧಿಸುವ ಧ್ಯೇಯ ವಾಕ್ಯವಾಗಬೇಕು. ಜನ ಮೌನ ಮುರಿಯುವುದಕ್ಕೆ ಕಾಲ ಪಕ್ವಗೊಂಡಿದೆ.

’ವರ್ತಮಾನ’ಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ…

ಸ್ನೇಹಿತರೇ,

ಇಂದಿಗೆ ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬುತ್ತದೆ. ಹೋದ ವರ್ಷಕ್ಕಿಂತ ಈ ವರ್ಷ ವರ್ತಮಾನ.ಕಾಮ್ ಹಲವು ಏರುಪೇರುಗಳನ್ನು ಕಂಡಿತು. ಸರಾಸರಿಯಾಗಿ ಲೆಕ್ಕ ಹಾಕುವುದಾದರೆ ಅತಿ ಹೆಚ್ಚು ಹಿಟ್ಸ್ (ವೆಬ್‌ಸೈಟ್ ಸಂದರ್ಶಿಸುವವರ) ಮತ್ತು ಅತಿ ಕಡಿಮೆ ಹಿಟ್ಸ್ ಪಡೆದುಕೊಂಡ ತಿಂಗಳುಗಳು ಈ ವರ್ಷದ ಅವಧಿಯಲ್ಲಿಯೇ ಇದ್ದವು. 2012 ರ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿಯಲ್ಲಿ ಈ ವೇದಿಕೆ ಅತಿ ಹೆಚ್ಚು ಸಕ್ರಿಯವಾಗಿದ್ದರೆ vartamaana-2-yearsಈ ವರ್ಷದ ಮೇ-ಜೂನ್ ತಿಂಗಳಿನಲ್ಲಿ ಅದು ಇಳಿಯುತ್ತಾ ಬಂದಿತ್ತು. ಕಳೆದ ತಿಂಗಳಿನಿಂದೀಚೆಗೆ ಮತ್ತೆ ಅದು ಏರುತ್ತಿದೆ.

ಆದರೆ, ಹಲವು ವಿಚಾರಗಳಲ್ಲಿ ವರ್ತಮಾನ.ಕಾಮ್ ಅದೇ ಅನನ್ಯತೆ ಮತ್ತು ಪರಿಣಾಮವನ್ನು ಉಳಿಸಿಕೊಂಡು ಬಂದಿದೆ ಮತ್ತು ಬೆಳೆಸಿಕೊಂಡಿಯೂ ಇದೆ. ನಾನು ರಾಜಕೀಯವಾಗಿ ಸಕ್ರಿಯವಾದ ಕಾರಣದಿಂದಾಗಿ ಹೊಸ ಲೇಖಕರನ್ನು ಈ ವೇದಿಕೆಗೆ ಕರೆದುಕೊಂಡುಬರುವ ಮತ್ತು ಪರಿಚಯಿಸುವ ಕಾರ್ಯ ಬಹಳ ಹಿನ್ನೆಲೆಗೆ ಸರಿದುಬಿಟ್ಟಿತು. ಆದರೂ ಹಲವಾರು ಲೇಖಕರು ಈ ವರ್ಷ ಮೊದಲ ಬಾರಿಗೆ ನಮಗೆ ಬರೆದರು. ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪರ “ನಕ್ಸಲ್ ಕಥನ”ದ ಎರಡನೆಯ ಭಾಗ “ಪ್ರಜಾ ಸಮರ” 19 ವಾರಗಳ ಕಾಲ ಸರಣಿಯಾಗಿ ಈ ವರ್ಷ ಪ್ರಕಟವಾಯಿತು. ಮಂಗಳೂರಿನ ಹೋಮ್‌ಸ್ಟೇ ದಾಳಿಯ ಪ್ರಕರಣದಲ್ಲಿ ನವೀನ್ ಸೂರಿಂಜೆಯವರ ಬಂಧನವಾಗಿದ್ದನ್ನು ವಿರೋಧಿಸಿ ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ನಡೆದ ಒಂದು ಮಟ್ಟಿನ ಪ್ರಯತ್ನದಲ್ಲಿ ವರ್ತಮಾನ.ಕಾಮ್‌ನ ಸಂಪೂರ್ಣ ಬಳಗ ಮತ್ತು ಓದುಗರು-ಹಿತೈಷಿಗಳು ಪಾಲ್ಗೊಂಡರು. ವರ್ತಮಾನ.ಕಾಮ್‌ನ ಓದುಗರ ಸಂಖ್ಯೆಯ ಏರಿಕೆ ಮಾತ್ರವಲ್ಲ, ಇಂತಹ ಪ್ರಯತ್ನವೊಂದರ ಬಗ್ಗೆ ಗುಣಾತ್ಮಕವಾಗಿ ಸ್ಪಂದಿಸಿ ಬೆಂಬಲಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಇನ್ನು, ನಾವು ಯಾವುದೇ ಲೇಖಕರಿಗೆ ಬಲವಂತ ಪಡಿಸದೆ ಮತ್ತು ಅವರ ಬರವಣಿಗೆಗೆ ಯಾವುದೇ ರೀತಿಯ ಸಂಭಾವನೆಯನ್ನೂ ಕೊಡದೆ ಮಾಧ್ಯಮ ವಲಯದಲ್ಲಿ ಸೀಮಿತವಾದರೂ ಒಂದು ಗುರುತಿಸಬಹುದಾದ ಅಸ್ಮಿತೆ ಸಾಧಿಸಿದ್ದೇವೆ ಎಂದರೆ ಅದು ಕಮ್ಮಿ ಅಲ್ಲ ಎಂದು ನಾನು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನಮಗೆ ಲೇಖನ ಬರೆದ ಪ್ರತಿಯೊಬ್ಬರೂ ಇದರಲ್ಲಿ ಸಮಾನ ಪಾಲುದಾರರೇ. ನಮಗೆ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿಯೇ ಕಳುಹಿಸಬೇಕಾದ ಸಂದರ್ಭದಲ್ಲಿಯೂ ಇಷ್ಟೊಂದು ಸಮಾನಮನಸ್ಕ ಮತ್ತು ಬದ್ಧತೆಯುಳ್ಳ ಲೇಖಕರು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ ಎಂದರೆ ಕರ್ನಾಟಕದಲ್ಲಿ ಪ್ರಗತಿಪರ ಮನೋಧರ್ಮದ ಚಿಂತಕ ಮತ್ತು ಲೇಖಕರ ಗುಂಪು ಎಷ್ಟು ದೊಡ್ಡದಿದೆ ಎಂದು ನಿಮಗೆ ಅರಿವಾಗುತ್ತದೆ.

ಅಂದ ಹಾಗೆ ಈ ವರ್ಷದಲ್ಲಿ ಕರ್ನಾಟಕದ ವಿಧಾನಸಭೆಗೆ ಚುನಾವಣೆಯೂ ನಡೆದು ರಾಜ್ಯದ ರಾಜಕೀಯ ಇನ್ನೊಂದು ಮಗ್ಗುಲಿಗೆ ಹೊರಳಿದೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ನಿಜಕ್ಕೂ ಅಧ್ವಾನವಾಗಿತ್ತು; ಅವಮಾನಕಾರಿಯಾಗಿತ್ತು; ಹೇಸಿಗೆ ಪಟ್ಟುಕೊಳ್ಳುವಂತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅಷ್ಟು ಕೆಳಹಂತಕ್ಕೆ ಜಾರುವುದಿಲ್ಲ ಎಂಬ ವಿಶ್ವಾಸ ಬಹುತೇಕರಲ್ಲಿದೆ. ಆದರೆ ಗುಣಾತ್ಮಕವಾದ ಬದಲಾವಣೆಗಳು ಆಗುತ್ತವೆಯೇ ಎನ್ನುವುದರ ಬಗ್ಗೆ ಗಟ್ಟಿಯಾದ ವಿಶ್ವಾಸ ಮೂಡುತ್ತಿಲ್ಲ. ಆಡಳಿತ ನಿರ್ವಹಣೆ ಉತ್ತಮವಾಗಬಹುದಾದರೂ ನಮ್ಮ ರಾಜ್ಯದ ರಾಜಕೀಯ ವಾತಾವರಣ ಉತ್ತಮಗೊಳ್ಳುತ್ತದೆ ಎನ್ನುವ ವಿಶ್ವಾಸ ನನಗಿಲ್ಲ. ಎರಡು ಲೋಕಸಭೆ ಮತ್ತು ಮೂರು ವಿಧಾನಪರಿಷತ್ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ಮತ್ತು ಅವರು ನಿಲ್ಲಿಸಿರುವ ಆಭ್ಯರ್ಥಿಗಳನ್ನು ನೋಡಿದರೆ ಈ ರಾಜಕೀಯ ವಾತಾವರಣ ಈ ಪಕ್ಷಗಳಿಂದ ಮತ್ತು ಇವುಗಳ ನಾಯಕರುಗಳಿಂದ ಒಳ್ಳೆಯದರ ಕಡೆಗೆ ಬದಲಾಗುತ್ತದೆ ಎಂದು ಹೇಳಲಾಗುತ್ತದೆಯೇ? ಹಾಗೆಯೇ ಸಾಮಾಜಿಕವಾಗಿ ಪ್ರಗತಿಪರ ವಿಚಾರಗಳಿಗೆ ಬಲ ಮತ್ತು ಬೆಂಬಲ ಸಿಗಬೇಕಿದ್ದರೆ ನಮ್ಮ ರಾಜಕಾರಣಿಗಳು ಅದರ ಬಗ್ಗೆ ಒಂದು ಸ್ಪಷ್ಟತೆ ಮತ್ತು ನಿಲುವು ಬೆಳೆಸಿಕೊಂಡು ಅದನ್ನು ಬೇರೆಬೇರೆ ವೇದಿಕೆಗಳಲ್ಲಿ ಎತ್ತಿ, ಜನರ ಬಳಿಗೆ ತೆಗೆದುಕೊಂಡು ಹೋಗದಿದ್ದಲ್ಲಿ ಕಷ್ಟವಿದೆ. ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹ ಮತ್ತು ಬದ್ಧತೆಯ ಲೇಖಕರ, ಮಾಧ್ಯಮ ಸಂಸ್ಥೆಗಳ ಮತ್ತು ವರ್ತಮಾನ.ಕಾಮ್‌ನಂಥ ಸ್ವತಂತ್ರ ವೇದಿಕೆಗಳ ಜವಾಬ್ದಾರಿ ಮತ್ತು ಅವಶ್ಯಕತೆಯೂ ಹೆಚ್ಚುತ್ತದೆ ಎಂಬ ಭಾವನೆ ನನಗಿದೆ.

ಇಡೀ ವಿಶ್ವದಲ್ಲಿ ಇಂದು ಮುದ್ರಣ ಮಾಧ್ಯಮ ನಿಧಾನವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತ ಬರುತ್ತಿದೆ. ಮುದ್ರಣ ಮಾಧ್ಯಮದ ಪರಿಣಾಮಕಾರತೆಯನ್ನು ಮತ್ತು ಜನರ ಜ್ಞಾನದ ನೆಲೆಗಳನ್ನು ವಿಸ್ತರಿಸುವ ಸಾಧ್ಯತೆಗಳನ್ನು ಟಿವಿ ಮಾಧ್ಯಮ ಪಡೆದುಕೊಳ್ಳಲು ಅಸಾಧ್ಯ. ಹಾಗಾಗಿ ಮುದ್ರಣ ಮಾಧ್ಯಮದ ಪುನರಾವತಾರ ಇಂಟರ್ನೆಟ್ ಮಾಧ್ಯಮದ ರೂಪದಲ್ಲಿ ಆಗಲಿದೆ. ಅಮೆರಿಕದಲ್ಲಿ ನಾಲ್ಕಾರು ದಶಕಗಳ ಕಾಲ ಪ್ರಭಾವಶಾಲಿಯಾಗಿದ್ದ ’ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗಿಂತ ಏಳೆಂಟು ವರ್ಷಗಳ ಹಿಂದೆ ಆರಂಭವಾದ ’ದಿ ಹಫ್ಫಿಂಗ್ಟನ್ ಪೋಸ್ಟ್’ ವೆಬ್‍ಸೈಟ್ ಇಂದು ಹೆಚ್ಚು ಪ್ರಭಾವಶಾಲಿಯೂ, ಹೆಚ್ಚು ಬೆಲೆಯುಳ್ಳದ್ದೂ, ಹೆಚ್ಚು ಲಾಭದಾಯಕವಾದದ್ದೂ ಆಗಿದೆ. ಕಳೆದ ವಾರ ಅಮೆಜಾನ್.ಕಾಮ್‌ನ ಮುಖ್ಯಸ್ಥ ಜೆಫ್ ಬೆಜೋಸ್ ನಷ್ಟದಲ್ಲಿದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯನ್ನು 25 ಕೋಟಿ ಡಾಲರ್‌ಗೆ ಕೊಂಡುಕೊಂಡ. ಆದರೆ ಏಳೆಂಟು ವರ್ಷಗಳ ಹಿಂದೆ ಆರಂಭವಾದ ‘ದಿ ಹಫ್ಫಿಂಗ್ಟನ್ ಪೋಸ್ಟ್’ ಅನ್ನು ಎರಡು ವರ್ಷಗಳ ಹಿಂದೆಯೇ AOL ಕಂಪನಿ 31.5 ಕೋಟಿ ಡಾಲರ್‌ಗೆ ಕೊಂಡುಕೊಂಡಿತ್ತು.

ಆದರೆ ಇಂತಹ ಬದಲಾವಣೆಗಳನ್ನು ಭಾರತದ ಸಂದರ್ಭದಲ್ಲಿ ನೋಡಲು ಇನ್ನೂ ಹಲವಾರು ವರ್ಷ ಕಾಯಬೇಕಿದೆ. vartamaana-2 years-verticalಭಾರತೀಯ ಭಾಷಾ ಪತ್ರಿಕೆಗಳ ವಿಚಾರಕ್ಕೆ ಬಂದರೆ ಅದು ಇನ್ನೂ ನಿಧಾನವಾಗಬಹುದು ಮತ್ತು ಅಮೆರಿಕದಲ್ಲಿ ಮುದ್ರಣ ಮಾಧ್ಯಮದಲ್ಲಿ ಆಗುತ್ತಿರುವಷ್ಟು disruptive ಆಗದೇ ಇರಬಹುದು. ಆದರೂ, ಭಾರತದ ಮಾಧ್ಯಮ ಜಗತ್ತು ಇನ್ನೊಂದು ದಶಕದೊಳಗೆ ಇಂದು ಇರುವುದಕ್ಕಿಂತ ಬಹಳ ಭಿನ್ನವಾಗಿರುತ್ತದೆ ಮತ್ತು ಆ ಬದಲಾವಣೆ ವೇಗವಾಗಿಯೂ ಇರುತ್ತದೆ. ವರ್ತಮಾನ.ಕಾಮ್ ಎಲ್ಲಿಯವರೆಗೆ ಇರುತ್ತದೆ ಎನ್ನುವುದು ಗೊತ್ತಿಲ್ಲ ಮತ್ತು ಅದು ಮುಖ್ಯವೂ ಅಲ್ಲ. ಆದರೆ, ಇಂತಹ ವೇದಿಕೆಗಳು ಮತ್ತು ಪ್ರಯತ್ನಗಳು ಬಹುಶಃ ಇನ್ನೂ ದೊಡ್ಡ ನೆಲೆಯಲ್ಲಿ ಮತ್ತು ವ್ಯವಸ್ಥಿತವಾಗಿ, ಇನ್ನೂ ಹೆಚ್ಚಿನ ಸಂಪನ್ಮೂಲಗಳೊಂದಿಗೆ ಆರಂಭವಾಗುವುದನ್ನು ನಾವು ಬರಲಿರುವ ವರ್ಷಗಳಲ್ಲಿ ನೋಡಲಿದ್ದೇವೆ.

ಅಂದ ಹಾಗೆ, ಈ ವರ್ಷ ಹೋದ ವರ್ಷ ಆದಷ್ಟು ಹಣ ವ್ಯಯವಾಗಿಲ್ಲ. ಒಬ್ಬ ಸಹಾಯಕರಿಗೆ ಕೊಟ್ಟ ಐದಾರು ತಿಂಗಳುಗಳ ಅಲ್ಪಮೊತ್ತದ ಸಂಬಳ ಮತ್ತು ವೆಬ್‌‍ಸೈಟ್‌ನ ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟ ಶುಲ್ಕ, ಎಲ್ಲವೂ ಸೇರಿ ಸುಮಾರು ರೂ. 35000 ಖರ್ಚಾಗಿರಬಹುದು. ಆದರೆ ಈ ವರ್ಷ ಅದು ಹೆಚ್ಚಾಗುತ್ತದೆ, ಹೆಚ್ಚಾಗಲೇಬೇಕು. ಆ ನಿಟ್ಟಿನಲ್ಲಿ ಕೆಲವೊಂದು ಖರ್ಚುಗಳನ್ನು ವಹಿಸಿಕೊಳ್ಳಲು ಸಮಾನಮನಸ್ಕ ಪ್ರಾಯೋಜಕರು ಮುಂದೆ ಬಂದರೆ ಅವರಿಗೆ ಖಂಡಿತ ಸ್ವಾಗತವಿದೆ.

ಮತ್ತು ಈ ವರ್ಷ ಒಂದಷ್ಟು ಸೆಮಿನಾರ್ ತರಹದ ಕಾರ್ಯಕ್ರಮಗಳನ್ನು ವರ್ತಮಾನ.ಕಾಮ್ ವತಿಯಿಂದ ಇತರ ಸಮಾನಮನಸ್ಕ ಗುಂಪು/ಸಂಸ್ಥೆಗಳ ಜೊತೆಗೂಡಿ ಆಯೋಜಿಸಬೇಕು ಎಂಬ ಯೋಜನೆಗಳಿವೆ. ಬರಹಗಾರರ ಬಳಗವನ್ನು ವಿಸ್ತರಿಸಲು ಕೆಲವೊಂದು ಸಭೆ ಮತ್ತು ಪ್ರವಾಸಗಳನ್ನು ಮಾಡಬೇಕೆಂತಲೂ ಅಂದುಕೊಳ್ಳುತ್ತಿದ್ದೇನೆ. ನನ್ನ ಹಲವು ವೈಯಕ್ತಿಕ ಅಶಿಸ್ತು ಮತ್ತು ನಿರಾಸಕ್ತಿಯ ಫಲವಾಗಿ ಹಲವಾರು ಯೋಜನೆಗಳು ಕಾರ್ಯರೂಪಕ್ಕೇ ಬರುತ್ತಿಲ್ಲ. ಕೆಲವೊಮ್ಮೆ ಮಾತನಾಡಲೇಬೇಕಾದವರ ಜೊತೆಯೂ, ಸಂಪರ್ಕದಲ್ಲಿರಬೇಕಾದವರ ಜೊತೆಯೂ ಫೋನ್ ಸಹ ಮಾಡದೆ ಇನ್ನೇತರದಲ್ಲಿಯೋ ವ್ಯಸ್ತನಾಗಿರುತ್ತೇನೆ. ಆ ವೈಯಕ್ತಿಕ ಅಶಿಸ್ತು ಮತ್ತು ದೌರ್ಬಲ್ಯಗಳನ್ನು ಕಳೆದುಕೊಂಡರೆ ವರ್ತಮಾನ.ಕಾಮ್ ಇನ್ನೂ ಸಕ್ರಿಯವಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಈ ಪ್ರಯತ್ನಕ್ಕೆ ಪೂರಕವಾಗಿರುವವರು ಮತ್ತು ನಮ್ಮ ಲೇಖಕ ಬಳಗದ ಮಿತ್ರರು–ವಿಶೇಷವಾಗಿ ನನಗಿರುವಂತಹ ದೌರ್ಬಲ್ಯಗಳಿಲ್ಲದವರು–ಹೆಚ್ಚು ಸಕ್ರಿಯರಾದರೆ ಇದು ತನ್ನಂತಾನೆ ವಿಸ್ತರಿಸಿಕೊಳ್ಳುತ್ತದೆ. ನೀವೆಲ್ಲರೂ ನಿಮ್ಮ ಸಕ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುತ್ತೀರ ಎನ್ನುವ ನಂಬುಗೆಯಲ್ಲಿ ಇದ್ದೇನೆ.

ಕೊನೆಯದಾಗಿ, ಈ ವರ್ಷದ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದವರಿಗೆ ಧನ್ಯವಾದ ಮತ್ತು ಕೃತಜ್ಞತೆ ಹೇಳಬೇಕಾಗಿರುವುದು. ಹಲವಾರು ಜನರಿದ್ದಾರೆ. ಕೆಲವರ ಹೆಸರು ತೆಗೆದುಕೊಳ್ಳಬಹುದು, ಕೆಲವರದು ಆಗದು. ಹಾಗಾಗಿ ಈ ವರ್ಷ ಅನೇಕ ಸಂದರ್ಭಗಳಲ್ಲಿ ಜೊತೆನಿಂತ, ಕೈಜೋಡಿಸಿದ ಮಿತ್ರರಾದ ಶ್ರೀಪಾದ್ ಭಟ್ಟರನ್ನು ಎಲ್ಲರಿಗೂ ಪ್ರಾತಿನಿಧಿಕವಾಗಿ ಇಟ್ಟುಕೊಂಡು ಧನ್ಯವಾದ ಅರ್ಪಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ವರ್ತಮಾನ.ಕಾಮ್ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬರೆದಿದ್ದ ಲೇಖನ : ವರ್ಷ ತುಂಬಿದ ಸಂದರ್ಭದಲ್ಲಿ ವರ್ತಮಾನದ ಪ್ರಸ್ತುತತೆ….

www.vartamaana.com 1st-anniversary

ಚೂಪು ನಾಗರಿಕತೆಯ ಪಿಚಕಾರಿಗಳು..!


– ಡಾ.ಎಸ್.ಬಿ. ಜೋಗುರ


 

ಲೂಯೀ ವರ್ಥ ಎನ್ನುವ ನಗರ ಸಮಾಜಶಾಸ್ತ್ರಜ್ಞ ಹೇಳುವ ಹಾಗೆ ನಗರ ಎಂದರೆ ನಾಗರಿಕರು ವಾಸಿಸುವ ತಾಣ. ನಾಗರಿಕರು ಎಂದರೆ ಯಾರು..? ಪೌರ ಪ್ರಜ್ಞೆಯನ್ನು ಹೊಂದಿದವರೋ ಇಲ್ಲಾ ಭೌತಿಕ ಪ್ರಪಂಚದಲ್ಲಿ ಸಂಪೂರ್ಣವಾಗಿ ಅದ್ದಿ, ಪಾಲಿಶ್ ಆದವರೋ.. ಇಲ್ಲಾ ಪಾಶ್ಚಾತ್ತೀಕರಣದ ಅಮಲಿನಲ್ಲಿರುವರೋ.. ಈ ನಾಗರಿಕರು ಎನ್ನುವ ಪದದ ಅರ್ಥ ಶಬ್ದದ ಉತ್ಪತ್ತಿಯ ಪ್ರಕಾರ ಉದಾತ್ತ ವಿಚಾರ, ನಡತೆ, ಅಭಿರುಚಿ ಎಂದಾಗುತ್ತದೆ.

ನಮ್ಮಲ್ಲಿ ಇಂದಿಗೂ ಕೆಲವರು ಈ ಅರ್ಥಪೂರ್ಣವಾದ ಉದಾತ್ತ ನಾಗರಿಕತೆಯ ಗೊಡವೆಯೇ ಬೇಡ ಎನ್ನುವಂತೆ ಅತ್ಯಂತ ಬಾರ್ಬೇರಿಯನ್ ರೀತಿಯಲ್ಲಿ ಬದುಕುವದರಲ್ಲಿಯೇ ಪರಮ ಸುಖವನ್ನು ಅನುಭವಿಸುತ್ತಾರೆ.dont-spit-here ಆ ಯುವಕ ಯಾವುದೋ ಒಂದು ಇಂಜನಿಯರಿಂಗ್ ಕೋರ್ಸ್ ಕಲಿಯುತ್ತಿರಬೇಕು. ಸಿಟಿ ಬಸ್ಸಿನಲ್ಲಿ ಅವನ ಪಕ್ಕದಲ್ಲಿ ಕುಳಿತ ಸ್ನೇಹಿತನ ಎದುರಲ್ಲಿ ತನ್ನ ಕೋರ್ಸ್ ಬಗ್ಗೆ ಏನೋ ಹರಟುತ್ತಿದ್ದ. ಅವನ ಹಿಂದಿನ ಸೀಟಿನಲ್ಲಿ ನಾನು ನನ್ನ ಬದಿ ಇನ್ನೊಬ್ಬ ಹಿರಿಯ ಮನುಷ್ಯ ಕುಳಿತಿದ್ದ. ಮುಂದೆ ಕುಳಿತ ಯುವಕ ಹೋಳಿ ಹುಣ್ಣಿವೆಯ ಬಣ್ಣದ ಪಿಚಕಾರಿಯ ಹಾಗೆ ಮತ್ತೆ ಮತ್ತೆ ಕಿಡಕಿಯ ಹೊರಗೆ ತಲೆ ಹಾಕಿ ಪಿಚಕ್ ಅಂತ ಉಗಿಯುತ್ತಿದ್ದ. ಅವನಿಗೆ ಹಿಂದೆ ಕುಳಿತವರ ಧರಕಾರೂ ಇರಲಿಲ್ಲ. ಯಾಕೆಂದರೆ ಬೃಹತ್ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿರುವ ನಾಗರಿಕ ಸಮಾಜದ ಯುವ ಪ್ರಜೆ. ಅವನಿಗೆ ಕೇಳಲಿ ಎಂದೇ ನಾನು ನಮ್ಮ ಜನರಿಗೆ ನೀವು ಬೇಕಾದಂತಹ ಬಸ್ ಸೌಕರ್ಯ ಕೊಡಿ, ಕಿಡಕಿಯಲ್ಲಿ ಕುಳಿತು ಉಗಿಯುವದನ್ನು ಮಾತ್ರ ಬಿಡುವದಿಲ್ಲ. ಅದು ಹಿಂದೆ ಕುಳಿತವರ ಮುಖಕ್ಕೆ ಸಿಡಿದರೂ ಖಬರಿಲ್ಲ. ಎಂದು ತುಸು ಜೋರಾಗಿಯೇ ಹೇಳಿದೆ. ಆತ ಹೊರಳಿ ನನ್ನನ್ನೇ ಅಪರಾಧಿಯ ಹಾಗೆ ನೋಡಿ ಮತ್ತೂ ಅಸಹ್ಯವಾಗಿ ಉಗುಳುತ್ತಲೇ ನಡೆದ. ಹಿಂದೆ ಕುಳಿತ ಆ ಹಿರಿಯ ಯಜಮಾನ ಕಿಡಕಿಯನ್ನು ಹಾಕಿಕೊಂಡರೂ ಅವನೇನು ಉಗಿಯುವದನ್ನು ಬಿಡಲಿಲ್ಲ.

ಅದರ ಹಿಂದಿನ ದಿನವೇ ಇಂಗ್ಲಂಡಲ್ಲಿ ರಸ್ತೆಯ ಮೇಲೆ ಉಗಿಯುವವರನ್ನು ಕುರಿತು ಒಂದು ಸುದ್ದಿ ಪ್ರಕಟವಾಗಿತ್ತು. ಅಂಥವರ ಮೇಲೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿರುವ ವರದಿ ಇತ್ತು. ಈಗಾಗಲೇ ಸಿಂಗಾಪೂರದಲ್ಲಿ ಯಾರಾದರೂ ರಸ್ತೆಯ ಮೇಲೆ ಹೀಗೆ ಪಿಚಕ್ ಎಂದು ಉಗಿದರೆ ಅಂಥವರ ಮೇಲೆ 500 ಸಿಂಗಾಪೂರ ಡಾಲರ್ ದಂಡ ವಿಧಿಸಲಾಗುವದು. ಹಾಗೆಯೇ ಬಾರ್ಸಿಲೋನಾದಲ್ಲಿಯೂ ರಸ್ತೆಯ ಮೇಲೆ ಉಗಿಯುವಂತಿಲ್ಲ. ಅಮೇರಿಕಾದಲ್ಲೂ ಅದನ್ನು ಸಹಿಸಿಕೊಳ್ಳುವದಿಲ್ಲ. gutka-spitಭಾರತದಲ್ಲಿ ಕೋಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೀಗೆ ಎಲ್ಲೆಂದರಲ್ಲಿ ಉಗಿಯುವವರನ್ನು ಕಂಡು ಕೆಂಡಾಮಂಡಲರಾಗಿ ಅಂಥವರ ಮೇಲೆ 200 ರೂ. ದಂಡ ವಿಧಿಸುವಂತೆ ಸೂಚಿಸಿದ್ದರೂ ಅದಿನ್ನೂ ಬಾಯ್ಮಾತಿನ ಹಂತದಲ್ಲಿಯೇ ಇದೆ. ನಮ್ಮಲ್ಲಿಯೂ ಹೀಗೆ ಉಗಿಯುವವರ ಮೇಲೆ ಕಾನೂನು ಮೂಲಕ ಕ್ರಮ ಕೈಗೊಂಡರೆ, ದಂಡ ವಿಧಿಸಿದರೆ ಸಾಕಷ್ಟು ಆದಾಯ ಬೊಕ್ಕಸಕ್ಕೆ ಹರಿದು ಬರುವದಂತೂ ಖಾತ್ರಿ. ಆದರೆ ಬಹಳ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು.

ಅವನೊಬ್ಬ ಹಿರಿಯ ನಾಗರಿಕ. ಸಂಜೆ ವಾಯುವಿಹಾರಕ್ಕೆ ಬಂದವ. ಕಿಸೆಯಲ್ಲಿ ಹಳೆಯ ಸಿನೇಮಾ ಗೀತೆಗಳನ್ನು ಗುನುಗುವ ಮೊಬೈಲ್ ಒಂದನ್ನು ಇಟ್ಟುಕೊಂಡೇ ದಿನಾಲು ವಾಕಿಂಗ್ ಬರುವ ಈತ ಪಕ್ಕಾ ನಾಗರಿಕನಂತೆ ಟೀಶರ್ಟ್ ಧರಿಸಿ ವಾಕಿಂಗ್ ಮಾಡುವ ಇವನು ಅದೊಂದು ದಿನ ತಾನು ನಡೆದಾಡುವ ರಸ್ತೆಯಲ್ಲಿಯೇ ನಿಂತು ಮುದಿ ಎತ್ತು ಉಚ್ಚೆ ಹೊಯ್ಯುವ ಹಾಗೆ ಮೂತ್ರಿ ಮಾಡುತ್ತಿದ್ದ. ಅಲ್ಲೇ ಸಮೀಪದಲ್ಲಿ ಹೆಂಗಸರು ವಾಕ್ ಮಾಡುತ್ತಿದ್ದರು. ಕ್ಯಾರೇ ಅನ್ನದೇ ತನ್ನ ಪುರುಷ ಪ್ರಾಧಾನ್ಯತೆಯನ್ನು ಮೆರೆದು ಮೂತ್ರಿ ಮಾಡಿ ತನ್ನ ಪ್ರಖರ ನಾಗರಿಕ ಪ್ರಜ್ಞೆಯನ್ನು ಮೆರೆದಿದ್ದ. ಇವನು ನಿಂತು ಮೂತ್ರಿ ಮಾಡಿದರೆ ಇವನು ತನ್ನ ಮಕ್ಕಳಿಗೆ ಓಡಾಡಿ ಮಾಡುವ ಟ್ರೆನಿಂಗ್ ನೀಡಿರಬಹುದೇ..? ನೆನೆದು ನಕ್ಕೆ..

ಇವೆರಡು ಸ್ಯಾಂಪಲ್ ಅಷ್ಟೇ.. ಬಸ್ ನಿಲ್ದಾಣಗಳಲ್ಲಿಯ ಟಾಯ್ಲೆಟ್ ಗಳು, ಪುರಾತನ ದೇಗುಲಗಳು, ವಾಸ್ತುಶಿಲ್ಪಗಳು, ಸ್ಮಾರಕಗಳು, ಕಾಲೇಜುಗಳಲ್ಲಿಯ ಬೆಂಚುಗಳು, ಗೊಡೆಗಳು ಕೂಡಾ ಇಂಥಾ ಚೂಪು ನಾಗರಿಕರಿಂದ ತಪ್ಪಿಸಿಕೊಳ್ಳಲಾಗಿಲ್ಲ. pee-in-publicಪಕ್ಕದಲ್ಲಿದ್ದವರು ಮೂಗು ಮುಚ್ಚಿದರೂ ರಾಜಾರೋಷವಾಗಿ ದಮ್ಮೆಳೆಯುವ ಇವರ ನಾಗರಿಕತೆಗೆ ಏನೆನ್ನಬೇಕು..? ಆ ದಿನ ಧಾರವಾಡದ ಚಿತ್ರಮಂದಿರ ಒಂದಕ್ಕೆ ಸಿನೇಮಾಗೆ ತೆರಳಿದ್ದೆ. ಸಾಮಾನ್ಯವಾಗಿ ಆ ಚಿತ್ರಮಂದಿರದಿಂದ ಸಿನೇಮಾ ಬದಲಾಗುವದರಲ್ಲಿದೆ ಎನ್ನುವಾಗ ನಾನು ತೆರಳುತ್ತೇನೆ. ಕಾರಣ ಸಿನೇಮಾ ಆರಂಭವಾಗುವದರಿಂದ ಹಿಡಿದು ಕೊನೆಯವರೆಗೂ ಸೀಟಿ ಹೊಡೆಯುವ ಚೂಪು ನಾಗರಿಕರ ಉಪಟಳದಿಂದ ತಪ್ಪಿಸಿಕೊಂಡು ನೆಮ್ಮದಿಯಿಂದ ನೋಡಲು. ಕಳೆದ ವರ್ಷದಲ್ಲಿ ನಾನು ಅತ್ಯಂತ ನೆಮ್ಮದಿಯಿಂದ ನೋಡಿದ ಸಿನೇಮಾ ನಾಗಾರ್ಜುನ ಅಭಿನಯದ ‘ಗಗನಂ’ ಎನ್ನುವ ತೆಲುಗು ಚಿತ್ರ. ಯಾಕೆಂದರೆ ಥೇಟರಲ್ಲಿ, ಬಾಲ್ಕನಿಯಲ್ಲಿ ಇದ್ದದ್ದೇ ಏಳು ಜನ. ಚಿತ್ರವೂ ಚೆನ್ನಾಗಿತ್ತು. ಅತ್ಯಂತ ಖುಷಿ ಎನಿಸಿತ್ತು. ಸೀಟಿ ಹೊಡೆಯುವ ಚೂಪು ನಾಗರಿಕರಿಗಿಂತಲೂ ಇನ್ನೂ ಒಂದು ಹೆಜ್ಜೆ ಮುಂದಿರುವ ತಿವಿಯುವ ನಾಗರಿಕರೆಂದರೆ ಮುಂದೆ ಕುಳಿತವರ ಸೀಟಿನ ಮೇಲೆ ಅವರ ನೆತ್ತಿಗೆ ತಾಗುವ ಹಾಗೆ ಕಾಲು ಚಾಚಿ ಸಿನೇಮಾ ನೋಡುವ ಖಾ[ಖ]ಯಿಲೆಯವರು. ಒಂದು ಹಂತದವರೆಗೂ ಸಹಿಸಿ ಹೊರಳಿ ನೋಡಿದ ಮೇಲೂ ಇವರ ನಾಗರಿಕತೆಗೆ ನಾಚಿಗೆ ಎನಿಸುವದಿಲ್ಲ. ಹೇಗೋ ಸಹಿಸಿ ಸಿನೇಮಾ ನೋಡುತ್ತಿರಲು ಮತ್ತೆ ಹಿಂದಿನಿಂದ ಪಿಚಕ್ ಅಂತ ಉಗಿಯುವ ಸದ್ದು. ಸೀಟಿನ ಕೆಳಗೆ ಬಾಗಿ ಉಗಿಯುವ ಇವರ ಪ್ರಖರ ತಿವಿಯುವ ನಾಗರಿಕತೆಗೆ ಆ ಥೇಟರ್ ಮಾಲಿಕ ಚಿತ್ರಮಂದಿರವನ್ನು ನವೀಕರಿಸಿದ್ದೇ ತಪ್ಪಾಯಿತು ಎನ್ನಬೇಕು. ಇಲ್ಲವೇ ಪಶ್ಚಾತ್ತಾಪ ಪಡಬೇಕು. ಆರಂಭದಲ್ಲಿ ಬರುವ ‘ಈ ಚಿತ್ರಮಂದಿರ ನಿಮ್ಮ ಮನರಂಜನೆಗಾಗಿ ಇದನ್ನು ಚೊಕ್ಕಟವಾಗಿಡಿ’ ಎನ್ನುವ ಸ್ಲೈಡನ್ನು ಓದುತ್ತಲೇ ಉಗಿಯುವ ಇವರ ಮನ:ಸ್ಥಿತಿಯ ನಡುವೆ ನಾಗರಿಕತೆ ಎನ್ನುವ ಪದ ವಿಲವಿಲ ಒದ್ದಾಡುತ್ತದೆ.

ಈ ಬಗೆಯ ಚೂಪು ಮತ್ತು ತಿವಿಯುವ ನಾಗರಿಕರು ಈಗೀಗ ಹೆಚ್ಚಾಗುತ್ತಿದ್ದಾರೆ. open-peeಸಾರ್ವಜನಿಕ ಪ್ರದೇಶಗಳನ್ನು ಪರಿಗಣಿಸದೇ ಎಲ್ಲೆಂದರಲ್ಲಿ ಉಗಿಯುವ, ಎಸೆಯುವ, ಸೇದುವ, ಉಚ್ಚೆ ಹೊಯ್ಯುವ, ಸಾಧ್ಯವಾದರೆ ಅದನ್ನೂ ಪಬ್ಲಿಕ್ ಪ್ಲೇಸಲ್ಲೇ ಮಾಡಿ ಮುಗಿಸುವಷ್ಟು ಕೊಳಕು ಮನ:ಸ್ಥಿತಿಗೆ ಕಾರಣವಾದರೂ ಏನು..? ಈ ದಿಶೆಯಲ್ಲಿ ನಮ್ಮಲ್ಲೂ ಒಂದು ಕಾನೂನು ಬೇಕೇ ಬೇಕು. ಎಲ್ಲೆಂದರಲ್ಲಿ ಉಗಿಯುವ, ಮೂತ್ರಿ ಮಾಡುವ, ಇನ್ನೊಬ್ಬರಿಗೆ ಕಿರಿಕಿರಿ ಮತ್ತು ಆತಂಕ ಉಂಟು ಮಾಡುವ ನಡುವಳಿಕೆಗಳನ್ನು ಶಾಸನರೀತ್ಯ ಸೆನ್ಸಾರ್ ಮಾಡುವ ಅಗತ್ಯವಿದೆ. ನಮ್ಮಂಥಾ ಅಪಾರ ಜನಸಂಖ್ಯೆ ಇರುವ ರಾಷ್ಟ್ರಗಳಲ್ಲಿ ಮಾಡಲೇಬೇಕಾದವುಗಳನ್ನೇ ಮಾಡುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ಇಂಥಾ ಪಿಚಕಾರಿಗಳಿಗೆ, ಹೊಗೆ ಉಗುಳುವ ಉಗಿಬಂಡಿಗಳಿಗೆ, ಗೂಂಡಾಗಳಂತೆ ಇತರರಿಗೆ ರೇಜಿಗೆಯಾಗುವ ಹಾಗೆ ಬದುಕುವವರ ಪಾಲಿಗೆ ವರವಾಗಿ ಚೂಪುತನದ, ಒರಟುತನದ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಶಿಕ್ಷಣ ಪಡೆಯುವವರ ಪ್ರಮಾಣದೊಂದಿಗೆನೇ ಹೆಚ್ಚುತ್ತಾ ನಡೆದಿರುವದು ಇನ್ನೊಂದು ವಿಷಾದ.

ನಾವು ಪಡೆಯುವ ಶಿಕ್ಷಣ ತುರ್ತಾಗಿ ನಮಗೆ ಎಟಿಕೇಟ್ಸ್, ಮ್ಯಾನರ್ಸ್‌ಗಳನ್ನು ಕಲಿಸಬೇಕಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗುಟಕಾ ನಿಷೇಧದ ತೀರ್ಮಾನದ ಹಾಗೆ ಇಂಥಾ ಬಾರ್ಬೇರಿಯನ್ ಬಿಹೇವಿಯರ್ಸ್‌ಗಳನ್ನು ನಿಯಂತ್ರಿಸುವ ದಿಶೆಯಲ್ಲಿ ಹೊಸ ತೀರ್ಮಾನ ತೆಗೆದುಕೊಂಡರೆ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ಇನ್ನೊಂದು ಇಟ್ಟಿಗೆಯನ್ನು ಇಟ್ಟಂತಾಗಬಹುದೇನೋ..

JDS : A secular party without a secular bone

– Sudhanshu

Now it is quite clear. No hope left for the non-Congress-non-BJP men and women in Karnataka. Of course, they started losing hopes when a big chunk of JD(S) MLAs forged an alliance with the BJP to replace the Congress-JD(S) coalition. jdsFormer Prime Minister H.D. Deve Gowda, national president of the JD(S), often updated his political ideology as ‘secular’ – a status to attract ‘likes’ from some parties at the national level.

Whenever the senior Gowda did his best to paint his party green, his son H.D.Kumaraswamy replaces it with a thick layer of saffron. Despite being the head of the Janata Dal (Secular), HDK once surprised many admitting that he had so far not found meaning of the word – secular. No person in Indian history would have become Chief Minister without understanding meaning that his party stands for.

Kumaraswamy repeated his ‘secular’ statement in the recently concluded Legislature session. kumaraswamy-yeddyHe said the words like ‘secular’ were coined by parties for their political benefits. He did not stop there. He told the House that former CM B.S. Yeddyurappa would not have lost his seat had he ‘adjusted’ with him a little. In other words Kumaraswamy would ignore any corruption or loot of public money if the offender ‘adjusts’ with him a little. And, that man holds the post of Leader of Opposition. He would probably, going by his own words, ignore all misdeeds of the Congress government if people in power ‘adjust’ with him.

While the father continues to bat for ‘secular’ tag for his party, his son is ready for an alliance with the BJP. He held talks with prominent BJP leaders not to field their candidates in the Lok Sabha by-polls. The equally shameless BJP, who had tasted JD(S)’ so called ‘Vachana Droha’ (breach of promise), are ready for an ‘understanding’. A national party aiming to rule the country in 2014 has no candidates to field in the by-polls to Lok Sabha. That too in a state, where the party ruled till recently, and sent 19 MPs to Lok Sabha in the last 2009 elections.

The state’s principal opposition party is led by an ideologically bankrupt and intellectually challenged person. kumarswamy-siddaramaiahHe has no respect for intellectuals either. During the budget session, he hit the headlines by making scathing remarks regarding the incumbent CM’s past, rather than the budget document. He has continued his earlier practice of ‘blackmailing’. Many times he had threatened leaders of opposite parties to ‘expose’ them in open. But, seldom he came out with the explosive expose. The credit of exposing BSY should go to one ‘AK’ and a section of media, not HDK. Had the AK not delivered important documents to select media houses, BSY’s misdeeds would not have come out.

Whenever there was a story in leading publications, he would hold a press conference so that other publications also carry forward the issue. Even a couple of days ago during a heated exchange of words with Siddaramaiah in the Legislative Assembly, he warned Home Minister K.J. George that he would bring out ‘truths’ about him, when the latter came in support of the CM. Where is the need to threaten someone of exposing them, if he is genuinely interested in ‘exposing’ something illegal? Should such threats be read as invitation for ‘adjustment’ from now on?

Keeping this state of the party and its leadership as background, if one jds-kumaraswamy-anita-devegowdapredicts the future of the JD(S), the result is disappointing. The party which took shape under the principles of socialism is going to be a family’s fiefdom or in the best case, a party restricted to the region dominated by a particular caste. The present leaders of the party are showing no signs of improving its status. The sad thing is, ultimately people of the state will suffer with the absence of an able, efficient Opposition to the ruling party. If the watch dogs sleep always or wag their tails to attract ‘adjustments’ with those in the ruling, the state has every chance to go to dogs.