Tag Archives: ಚಂದ್ರಶೇಖರ ಕಂಬಾರ

ಪಾಪು-ಕಂಬಾರ ಮತ್ತು ಕುವೆಂಪು-ಬೇಂದ್ರೆ

– ಡಾ.ಎನ್.ಜಗದೀಶ್ ಕೊಪ್ಪ

ಡಾ.ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಟಿತ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಪಾಟೀಲ ಪುಟ್ಟಪ್ಪನವರನ್ನು 22ರ ಬುಧವಾರ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಗೆಳೆಯರ ಜೊತೆ ಬೇಟಿ ಮಾಡಿದೆ. ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಬಗ್ಗೆ ನನಗೆ ವಿಸ್ಮಯ ಉಂಟುಮಾಡಿತು.

ಪುಟ್ಟಪ್ಪನವರ ವಾದವೆಂದರೆ, ಕಂಬಾರರು ಹಲವರ ಜಾನಪದ ಕೃತಿಯ ವಸ್ತುವನ್ನು ಕದ್ದಿದ್ದಾರೆ, ಕಂಬಾರರ ಲಕ್ಷಾಧಿಪತಿ ರಾಜನ ಕಥೆ ಮುದೆನೂರು ಸಂಗಣ್ಣ ಸಂಗ್ರಹಿದ ಜಾನಪದ ಕಥೆ. ಇದಕ್ಕೆ ಸಂಗಣ್ಣ ಬರೆದ ಪತ್ರ ಅವರಲ್ಲಿದೆಯಂತೆ. ಹಾಗಾಗಿ ಕಂಬಾರರು ಪ್ರಶಸ್ತಿಗೆ ಯೋಗ್ಯರಲ್ಲ. ಪುಟ್ಟಪ್ಪನವರ ವಾದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭ, ಸಮಯ ಅದಾಗಿರಲಿಲ್ಲ. ಏಕೆಂದರೆ, ವೈದ್ಯರು ಪಿಸಿಯೋಥೆರೆಪಿ ಚಿಕಿತ್ಸೆ ನೀಡಲು ನಾವು ಹೊರಹೋಗವುದನ್ನೇ ಕಾಯುತಿದ್ದರು.

ಪುಟ್ಟಪ್ಪನವರು ಕನ್ನಡ ನಾಡು ನುಡಿ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಾರೆ, ಅದರೆ ನಮ್ಮ ಜಾನಪದ ಕಥಾ ಪರಂಪರೆ, ಮೌಖಿಕ ಕಾವ್ಯ ಪರಂಪರೆಯ ಬಗ್ಗೆ ಏಕೆ ತಿಳಿದುಕೊಂಡಿಲ್ಲ?

ಜಾನಪದ ಕಥೆಯಾಗಲಿ, ಹಾಡಾಗಲಿ ಅವು ಯಾರೊಬ್ಬರ ಸ್ವತ್ತಲ್ಲ. ಅವುಗಳ ನಿಜ ವಾರಸುದಾರರು ನಮ್ಮ ಜನಪದರು. ಬಾಯಿಂದ ಬಾಯಿಗೆ, ಎದೆಯಿಂದ ಎದಗೆ ಹರಿದು ಬಂದ ಜಾನಪದ ಸಾಹಿತ್ಯ ಸೃಜನಶೀಲರ ಮನಸ್ಸು ಮತ್ತು  ಬಾಯಲ್ಲಿ ಹಲವು ರೂಪಗಳಲ್ಲಿ ಮೈದಾಳಿ ಇಂದು ನಮ್ಮೆದುರು ಹರಡಿಕೊಂಡಿದೆ. ಇದು ಗ್ರಾಮೀಣ ಸಂಸ್ಕೃತಿಯ ಜನರ ಸಂಪತ್ತು. ಇಂದು ನಮ್ಮೆದೆರು ಇರುವ ಮಂಟೆಸ್ವಾಮಿ ಕಾವ್ಯವಾಗಲಿ, ಮಲೆ ಮಹದೇಶ್ವೇರ ಕಾವ್ಯವಾಗಲಿ, ಜನಪದ ಮಹಾಭಾರತವಾಗಲಿ ಇವೆಲ್ಲವು ಹಲವು ರೂಪಗಳನ್ನು ದಾಟಿ ಬಂದ ಜನಪದ ಕಾವ್ಯಗಳಾಗಿವೆ.

ಕಂಬಾರರು ಸೃಷ್ಟಿಸಿದ ಸಂಗ್ಯಾ-ಬಾಳ್ಯ, ಜೋಕುಮಾರಸ್ವಾಮಿ, ಕರಿಮಾಯಿ, ಋಷ್ಯಶೃಂಗ, ಲಕ್ಷಾಧಿಪತಿರಾಜನ ಕಥೆ, ಇವೆಲ್ಲವೂ ನಮ್ಮ ಜನಪದರ ನಡುವಿನಿಂದ ಎತ್ತಿಕೊಂಡ ಕಥೆಗಳ ಹಂದರದಿಂದ ಕೂಡಿದ ನಾಟಕಗಳು. ಇದನ್ನು ಕಂಬಾರು ಎಂದೂ ಅಲ್ಲಗೆಳದಿಲ್ಲ. ನಿಜ, ಆದರೆ, ಈ ನಾಟಕಗಳ ಸೃಷ್ಟಿಯಲ್ಲಿ ಕಾರ್ಯನಿರ್ವಹಿಸಸಿರುವ ಕಂಬಾರರ ಸೃಜನ ಶೀಲತೆಯನ್ನು ನಾವು ಅಲ್ಲಗೆಳೆಯಲು ಸಾಧ್ಯವೆ?

ಇನ್ನೊಂದು ಗಮನಿಸಬೆಕಾದ ಮುಖ್ಯ ಸಂಗತಿಯಂದರೆ, ಎ.ಕೆ. ರಾಮಾನುಜನ್ ರವರು ಸಂಪಾದಿಸಿದ ದಕ್ಷಿಣ ಭಾರತದ ಜಾನಪದ ಕಥೆಗಳು ಸಂಗ್ರಹದ ಕಥೆಯೊಂದರ ತಿರುಳನ್ನು ಇಟ್ಟುಕೊಂಡು ಗಿರೀಶ್ ಕಾರ್ನಾಡ್ ನಾಗಮಂಡಲ ನಾಟಕ ರಚಿಸಿದರೆ, ಕಂಬಾರರು ಇದೇ ಕಥೆಯನ್ನಾಧರಿಸಿ ಸಿರಿಸಂಪಿಗೆ ನಾಟಕ ರಚಿಸಿದರು. ಇವುಗಳನ್ನು ರಾಮಾನುಜನ್ ಕಥೆಗಳ ಕೃತಿಚೌರ್ಯ ಎಂದು ಕರೆಯಲು ಸಾಧ್ಯವೆ? ಒಂದೇ ಕಥೆಯನ್ನ ಕನ್ನಡದ ಎರಡು ಅನನ್ಯ ಪ್ರತಿಭೆಗಳು ವಿಭಿನ್ನ ರೀತಿ ಗ್ರಹಿಸಿ ನಿರ್ವಹಿಸಿರುವುದು ಕನ್ನಡದ ರಂಗಭೂಮಿಯಲ್ಲೊಂದು ದಾಖಲೆ ಜೊತೆಗೆ  ಹೆಮ್ಮೆಯ ಸಂಗತಿ.

ಮೂಲತಃ ರಾಮಾನುಜನ್ ಕಥೆಯ ವಾರಸುದಾರರಲ್ಲದಿದ್ದರೂ ಕೂಡ, ಅವರ ಸೃಜನಶೀಲ ಮನಸ್ಸು ಇಂತಹ ಕಥೆಗಳ ಆಯ್ಕೆಯ ಹಿಂದೆ ಕೆಲಸ ಮಾಡಿದೆ

ಕಂಬಾರರ ಜನಪ್ರಿಯ ನಾಟಕ ಸಂಗ್ಯಾ ಬಾಳ್ಯ ಬಂದ ನಂತರವೂ ಅವರ ಸಹಪಾಠಿಯಾಗಿದ್ದ ಖ್ಯಾತ ಸಂಶೋಧಕರಾದ ಡಾ.ಎಂ.ಎಂ.ಕಲ್ಬುಗರ್ಿ ನಾಟಕದ ಮೂಲ ರೂಪವನ್ನು ಸಂಗ್ರಹಿಸಿ ಖರೇ ಸಂಗ್ಯಾ-ಬಾಳ್ಯ ಎಂದು ಪ್ರಕಟಿಸಿದ್ದಾರೆ. ಇಂದು ಉತ್ತರ ಕನರ್ಾಟಕದಲ್ಲಿ ಶ್ರೀ ಕೃಷ್ಣ ಪಾರಿಜಾತ ಹಾಗು ಸಂಗ್ಯಾ ಬಾಳ್ಯ ಹಲವು ರೂಪದಲ್ಲಿ ಪ್ರದಶರ್ೀತವಾಗುತ್ತಿವುದು ಪುಟ್ಟಪ್ಪನವರಿಗೆ ತಿಳಿಯದ ಸಂಗತಿಯೆನಲ್ಲ.

ಕಂಬಾರರ ಪ್ರತಿಭೆಯನ್ನು ಅವರ ನಾಟಕಗಳ ಮೂಲಕ ಅಳೆಯಲು ಹೊರಟ ಪುಟ್ಟಪ್ಪನವರಿಗೆ ಅವರ ಹೇಳತೇನ ಕೇಳ ಮುಂತಾದ ಕಾವ್ಯಗಳಾಗಲಿ, ಸಿಂಗಾರವ್ವ ಮತ್ತು ಅರಮನೆ, ಶಿಖರ ಸೂರ್ಯದಂತಹ  ಕಾದಂಬರಿಗಳೇಕೆ ಗೋಚರಿಸಲಿಲ್ಲ?

ಜ್ಙಾನಪೀಠ ಪ್ರಶಸಿ ಎಂಬುದು ಯಾವುದೇ ಸಕರ್ಾರ ಕೊಡುವಂತಹದ್ದಲ್ಲ. ಅದಕ್ಕೆ ಅದರದೇ ಆದ ಆಯ್ಕೆ ಪ್ರಕ್ರಿಯೆಗಳಿವೆ. ಜಾತಿಯ ಬೆಂಬಲ. ಮಠಾಧೀಶರ, ರಾಜಕಾರಣಿಗಳ ಕುಮ್ಮಕ್ಕಿನಿಂದ ಪಡೆಯುವ ರಾಜ್ಯೋತ್ಸವ ಪ್ರಶಸ್ತಿ ಅದಲ್ಲ. ಲಾಬಿಯ ಬಗ್ಗೆ ಮಾತನಾಡುವ ಪುಟ್ಟಪ್ಪನವರಿಗೆ ಈ ವಾಸ್ತವಗಳು ಏಕೆ ಅರ್ಥವಾಗುತ್ತಿಲ್ಲ?

ಕನ್ನಡದಲ್ಲಿ ಬೈರಪ್ಪ ಮಾತ್ರವಲ್ಲ ಜಿ.ಎಸ್. ಶಿವರುದ್ರಪ್ಪ, ಯಶವಂತಚಿತ್ತಾಲ, ಕುಂ.ವೀರಭದ್ರಪ್ಪ ಮುಂತಾದ ಶಕ್ತಿವಂತ ಲೇಖಕರು ಜ್ಙಾನಪೀಠ ಪ್ರಶಸ್ತಿಗೆ ಯೋಗ್ಯರಿದ್ದಾರೆ. ಇಂತಹ ಸಂದರ್ಭದಲ್ಲಿ ಭೈರಪ್ಪನವರ ಪರ ವಕಾಲತ್ತು ವಹಿಸಿ ಕಂಬಾರರನ್ನು ಯೋಗ್ಯರಲ್ಲ ಎಂದು ನಿಂದಿಸುವ ಅಗತ್ಯವಿರಲಿಲ್ಲ. ಕಂಬಾರರು ಈಗಾಗಲೇ ಪದ್ಮಶ್ರಿ, ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಪಡೆದು ನಾಟಕಕಾರರಾಗಿ, ಕವಿಯಾಗಿ ರಾಷ್ಟ ಮಟ್ಟದಲ್ಲಿ ಗುರುತಿಸಿಕೊಂಡವರು.

ಯಾವುದೇ ಲೇಖಕ ಎಷ್ಟೇ ದೊಡ್ಡವನಿರಲಿ ಆತನಿಗೆ ತನ್ನ ಸಮಕಾಲಿನ ಬರಹಗಾರನ ಬಗ್ಗೆ ಗೌರವ ಸೌಜನ್ಯತೆ ಇರಬೇಕು. ಇದಕ್ಕೆ ಕುವೆಂಪು ನಮ್ಮ ಮುಂದೆ ಉದಾಹರಣೆಯಾಗಿದ್ದಾರೆ.
ಅದು 1960 ದಶಕ ಡಾ. ಪ್ರಭುಶಂಕರರವರು ಕುವೆಂಪು ಮಾರ್ಗದರ್ಶನದಲ್ಲಿ ಭಾವಗೀತೆ ಕುರಿತು ಪಿ.ಹೆಚ್.ಡಿ. ಪದವಿಗಾಗಿ ಅಧ್ಯಯನ ಮಾಡುತಿದ್ದಾಗ ಬೇಂದ್ರೆಯವರ ಕವಿತೆಯೋಂದರ ಸಾಲು “ಮಲ್ಲಿಗಿ ಪಟಪಟನೆ ಬಿರಿದಾವು” ಎಂಬುದರ  ಬಗ್ಗೆ ತಮ್ಮ ಪ್ರಬಂಧದಲ್ಲಿ ಕಟುವಾಗಿ ವಿಮರ್ಶ ಮಾಡಿದ್ದರು. ಹೂವು ಅರಳುವಾಗ ಶಬ್ಧ ಮಾಡುವುದಿಲ್ಲ ಎಂಬುದು ಪ್ರಭುಶಂಕರರ ನಿಲುವಾಗಿತ್ತು. ಪ್ರಬಂಧವನ್ನು ಗಮನಿಸಿದ ಕುವೆಂಪು ಶಿಷ್ಯನನ್ನು ಕರೆದು “ಜಗತ್ತು ಕಾಣದ್ದನ್ನು, ಕೇಳದ್ದನ್ನು ಕವಿ ಕಾಣಬಲ್ಲ, ಕೇಳಬಲ್ಲ ಅದಕ್ಕಾಗಿ ಅವನನ್ನು ಕವಿ ಎಂದು ಕರೆಯುವುದು,” ಎಂದು ಬುದ್ಧಿವಾದ ಹೇಳಿ ವಿಮರ್ಶೆಯನ್ನು ತಿದ್ದುಪಡಿ ಮಾಡಿದರು.

ಇಲ್ಲಿ ಗಮನಿಸಬೇಕಾದ ವಿಶಿಷ್ಟ ಸಂಗತಿಯೆಂದರೆ, ಆ ವೇಳೆಗಾಗಲೆ ಧಾರವಾಡದಲ್ಲಿ ಗೆಳೆಯರ ಬಳಗ ಹೆಸರಿನಲ್ಲಿ ಕೆಲವರು ಬೇಂದ್ರೆ ಪರ ನಿಂತು ಕುವೆಂಪುರವರ ರಾಮಾಯಣ ದರ್ಶನಂ ನಿಂದ ಹಿಡಿದು ಅವರ ಕವಿತೆಗಳ ಮೇಲೆ ಟೀಕೆ ಮಾಡುತ್ತಾ ನಿರಂತರ ವಾಗ್ಧಾಳಿ ನಡೆಸುತಿದ್ದರು. ಈ ಕುರಿತು ಕುವೆಂಪುಗೆ ಬೇಂದ್ರೆ ಬಗ್ಗೆಯಾಗಲಿ, ಅವರ ಗೆಳೆಯರ ಬಗ್ಗೆ ಯಾವುದೇ ಅಸಮಾಧಾನವಿರಲಿಲ್ಲ. ಕುವೆಂಪು ಬೇಂದ್ರೆಯವನ್ನು ಕನ್ನಡದ ದೊಡ್ಡ ಕವಿ ಎಂದೇ ಭಾವಿಸಿದ್ದರು. ಬೇಂದ್ರೆಗೂ ಕೂಡ ಕುವೆಂಪು ಬಗ್ಗೆ ಅಪಾರ ಗೌರವವಿತ್ತು. ಇದಕ್ಕೆ ಸಾಕ್ಷಿಯೆಂದರೆ, ಕುವೆಂಪು ಕುರಿತು ಬೇಂದ್ರೆ ಬರೆದ ಕವಿತೆಯ ಸಾಲುಗಳೇ ಸಾಕು.

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣದರ್ಶನದಿಂದಲೇ ಕೈ
ಮುಗಿದ ಕವಿಗೆ-ಮಣಿಯದವರು ಆರು?

ಇದು ಕನ್ನಡದ ಇಬ್ಬರು ಮಹಾನ್ ಕವಿಗಳು ಪರಸ್ಪರ ಹೊಂದಿದ್ದ ಗೌರವ ಮತ್ತು ಸಹೃದಯತೆಯ ಭಾವನೆಗಳಿಗೆ ಸಾಕ್ಷಿ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಮೂಲಕ ಕೀರ್ತಿಯ ಕಿರೀಟಕ್ಕೆ ಮತ್ತೋಂದು ಗರಿ ಮುಡಿಸಿದ ಕಂಬಾರರ ಬಗ್ಗೆ ಕನ್ನಡಿಗರು ಸಂಭ್ರಮಿಸುತ್ತಿರುವಾಗ, ಯಜಮಾನನ ಸ್ಥಾನದಲ್ಲಿರುವ ಪಾಟೀಲ ಪುಟ್ಟಪ್ಪ ಈ ರೀತಿ ಪ್ರತಿಕ್ರಿಯಸಬಹುದೆ?

ಇದು ಸಂಕಟದಿಂದ ಕೇಳಲೇಬೇಕಾದ ಪ್ರಶ್ನೆ.

ಪಾಟೀಲ ಪುಟ್ಟಪ್ಪನವರ ಬಾಲ ಲೀಲೆಗಳು

 – ಡಾ. ಎನ್. ಜಗದೀಶ್ ಕೊಪ್ಪ

ಹುಬ್ಬಳ್ಳಿ ಧಾರವಾಡ ನಗರಕ್ಕೆ ಬಂದು ದಶಕವೇ ಕಳೆದು ಹೋಯಿತು. ಇಲ್ಲಿಗೆ ಬಂದ ಮೇಲೆ ನನಗೆ ಜಿಗುಪ್ಸೆ ಮೂಡಿಸಿದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು, ವಾಮನ ಬೇಂದ್ರೆ. ಮತ್ತೊಬ್ಬರು ಪಾಟೀಲ ಪುಟ್ಟಪ್ಪ.

ಕನ್ನಡದ ಅನನ್ಯ ಕವಿ ಬೇಂದ್ರೆಯವರ ಸಾಹಿತ್ಯವನ್ನು ಯಾರಿಗೂ ಕೊಡದೆ, ಈ ತಲೆಮಾರಿಗೆ ಬೇಂದ್ರೆಯವರ ಕವಿತೆ ಸಿಗದ ಹಾಗೆ ನೋಡಿಕೊಂಡ ಅವಿವೇಕಿ ವಾಮನ ಬೇಂದ್ರೆ.  ಬೇಂದ್ರೆಯವರ ಕವಿತೆಗಳನ್ನ ಕಲಸು ಮೆಲೋಗರ ಮಾಡಿ, ಔದಂಬರ ಗಾಥೆ ಹೆಸರಿನಲ್ಲಿ ಬೇಂದ್ರೆ ಕುಟುಂಬದ ವಂಶವೃಕ್ಷ ಸಹಿತ ಪ್ರಕಟಿಸಿ ಅದನ್ನು ಮೈಸೂರು ಒಂಟಿ ಕೊಪ್ಪಲು ಪಂಚಾಗ ಮಾಡಿದ ಪುಣ್ಯ ಪುರುಷನೀತ, ಶತಮಾನದ ಕವಿತೆಗಳ ಸಂಕಲನಕ್ಕೂ ಸಹ  ಕವಿತೆ ಕೊಡಲಿಲ್ಲ. ಅಷ್ಟೇ ಅಲ್ಲ, ನನ್ನೆದುರಿಗೆ ಹಂಪಿ ವಿ.ವಿ. ಉಪಕುಲಪತಿಯಾಗಿದ್ದ ಎಂ.ಎಂ. ಕಲುಬುರ್ಗಿ ಹಾಗು ಮಲ್ಲೇಪುರಂ ವೆಂಕಟೇಶ್ ’ಸಮಗ್ರ ಕಾವ್ಯ ತರುತ್ತೇವೆ,’ ಎಂದು ಹೇಳಿ 5 ಲಕ್ಷ ಗೌರವ ಸಂಭಾವನೆ ನೀಡಲು ಹೋದಾಗ ತಿರಸ್ಕರಿಸಿದ ಮಹಾಶಯ ಈತ.

ಇನ್ನು ಪಾಪು ಹೆಸರಿನ ಪುಟ್ಟಪ್ಪನವರದೇ ಒಂದು ದೊಡ್ಡ ವೃತ್ತಾಂತ. 1967 ರಿಂದ ಧಾರವಾಡದ ಕನ್ನಡದ ಶಕ್ತಿ ಕೇಂದ್ರವಾದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದನ್ನು 1940 ರ ದಶಕದ ತಾಲ್ಲೂಕು ಕಚೇರಿಯಂತೆ ಮಾಡಿದ ಕೀರ್ತಿ ಇವರದು. 93 ವರ್ಷವಾಗಿದ್ದರೂ, ಇನ್ನೂ ಅಧಿಕಾರ ಬಿಟ್ಟು ಕೊಟ್ಟಿಲ್ಲ. ಜೊತೆಗೆ ಹಾವೇರಿಯಲ್ಲಿರುವ ವಿ.ಕೃ. ಗೋಕಾಕ್ ಟ್ರಸ್ಟ ನ ಅಧ್ಯಕ್ಷಗಿರಿ ಬೇರೆ. ಕಳೆದ 5 ವರ್ಷದಿಂದ  ಇದುವರೆಗೆ ಹಾವೇರಿಯಲ್ಲಿ ಸಭೆ ನಡೆದಿಲ್ಲ. ಸದಸ್ಯರು, ಸಂಸ್ಕೃತಿ ಇಲಾಖೆಯ ಅಧಿಕಾರಿ ಪುಟ್ಟಪ್ಪನವರ ಮನೆಗೇ ಬಂದು ಸಭೆ ನಡೆಸಿ ಹೋಗುತ್ತಾರೆ.

ಇಂತಹ ಚರಿತ್ರೆಯ ಪುಟ್ಟಪ್ಪ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ “ಚಂದ್ರಶೇಖರ ಕಂಬಾರ ಪ್ರಶಸ್ತಿಗೆ ಯೋಗ್ಯರಲ್ಲ, ಈ ಪ್ರಶಸ್ತಿ ಬೈರಪ್ಪನವರಿಗೆ ಬರಬೇಕಾಗಿತ್ತು,” ಎಂದಿದ್ದಾರೆ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಿರಲಿ ವಯಸ್ಸಾದ ನಂತರ ತೆರೆಯ ಹಿಂದಕ್ಕೆ ಸರಿದು ತಾನು ತನ್ನ ಜೀವಿತದಲ್ಲಿ ಸಂಪಾದಿಸಿದ ಘನತೆ, ಗೌರವಗಳನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ, ಆತನ ಚಟುವಟಿಕೆಗಳನ್ನು ಬಾಲ ಲೀಲೆಗಳು ಎಂದು ಸಮಾಜ ಗುರುತಿಸಿಬಿಡುತ್ತದೆ.

ಕಳೆದ ಎರಡು ವರ್ಷದ ಹಿಂದೆ ನನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿ ಎಂದು ಬಿ.ಜೆ,ಪಿ. ಸರ್ಕಾರದ ಬೆನ್ನು ಹತ್ತಿದ್ದರು. ಕಡೆಗೆ ಇವರ ಲೇಖನಗಳ ಪ್ರಕಟನೆಗೆ 50 ಲಕ್ಷ ರೂ ನೀಡಿ ಯಡಿಯೂರಪ್ಪ ಕೈ ತೊಳೆದುಕೊಂಡರು.

ಬಹುಶ: ಇವರ ಇಂತಹ ವರ್ತನೆಗಳನ್ನು ಮುಂಜಾಗ್ರತವಾಗಿ ಗ್ರಹಿಸಿ ನಮ್ಮ ಕನ್ನಡನಾಡು ಇವರಿಗೆ ಪಾಪು ಎಂದು ಹೆಸರಿಟ್ಟಿರಬೇಕು.