Tag Archives: ಮಲಹೊರುವ ಪದ್ಧತಿ

KGF ಸಂತ್ರಸ್ತರಿಗೆ ನೆರವು : ದಯಾನಂದರ ವರದಿ…

ಟಿ.ಕೆ. ದಯಾನಂದ್

ವರ್ತಮಾನದ ಕರೆಗೆ ಓಗೊಟ್ಟ ಸಹೃದಯ ಜೀವಪರ ಬಂಧುಗಳಿಗೆ ಕೆಜಿಎಫ್‌ನ ಮಲಸಂತ್ರಸ್ಥರ ನೆನಕೆಗಳು ಸಲ್ಲುತ್ತಿವೆ. ವ್ಯವಸ್ಥೆ, ಅಧಿಕಾರ ಮತ್ತು ಸಮಕಾಲೀನ ನ್ಯಾಯ ನಿರಾಕರಣೆಯ ಅಡಕತ್ತರಿಗೆ ಸಿಕ್ಕಿಬಿದ್ದಿದ್ದ ಈ ಸಂತ್ರಸ್ಥರ ಹಸಿವಿನ ಸಂಕಷ್ಟವನ್ನು ನೀಗಲು ಜೊತೆ ನಿಲ್ಲೋಣ ಎಂಬ ವರ್ತಮಾನದ ಕರೆಗೆ ಅದೆಷ್ಟೋ ಮಂದಿ ಮುಂದೆ ಬಂದರು. ನಾವು ಒಂದು ಕ್ವಿಂಟೋಲ್, ಎರಡು ಕ್ವಿಂಟೋಲ್ ಅಕ್ಕಿ ಕೊಡಿಸುತ್ತೇವೆ ಅಂದವರು ಸುಮಾರು ಮಂದಿ. ಬ್ಯಾಂಕ್ ಅಕೌಂಟಿಗೆ ಒಬ್ಬರ ನಂತರ ಒಬ್ಬರಂತೆ ಹಣವನ್ನು ಸಂದಾಯ ಮಾಡಿದರು. ಕೆಲವರು ಚೆಕ್ ಕಳಿಸಿಕೊಟ್ಟರು, ಇನ್ನು ಹಲವು ಗೆಳೆಯರು/ಗೆಳತಿಯರು ನೇರವಾಗಿಯೇ ಬಂದು ನಮ್ಮ ಪಾಲಿದು ಎಂದು ಧನಸಹಾಯ ಮಾಡಿದರು. ಹೀಗೆ ಒಟ್ಟು ಸಂಗ್ರಹವಾದ ಹಣ 35 ಸಾವಿರ ರೂಪಾಯಿಗಳು. ಕ್ವಿಂಟೋಲ್ ಲೆಕ್ಕದ ಅಕ್ಕಿ ಮೂಟೆಗಳನ್ನು ಕೆಜಿಎಫ್ ಗೆ ಸಾಗಿಸುವುದು ತಾರ್ಕಿಕವಾಗಿ ಅಸಾಧ್ಯವಾದ ಕೆಲಸವೆಂಬ ಕಾರಣಕ್ಕೆ ಸಂಗ್ರಹಗೊಂಡ ಹಣದಲ್ಲಿಯೇ ಕೆಜಿಎಫ್‌ನಲ್ಲಿಯೇ ಒಂದಷ್ಟು ಆಹಾರ ಸಾಮಗ್ರಿಯನ್ನು ಖರೀದಿಸಿ ನೀಡುವುದೆಂದು ತೀರ್ಮಾನವಾಯಿತು. ಜೀವಪರ ನಿಲುಮೆಯ ಗೆಳೆಯ ಗೆಳತಿಯರು ಹೊಂದಿಸಿಕೊಟ್ಟ ಈ ಹಣವನ್ನು ತೆಗೆದುಕೊಂಡು ಕಳೆದ ಭಾನುವಾರ ಕೆಜಿಎಫ್‌ಗೆ ಭೇಟಿ ನೀಡಲಾಯಿತು. ಪತ್ರಕರ್ತ ಗೆಳೆಯರಾದ ದಿನೇಶ್, ಪ್ರವೀಣ್ ಸೂಡರೊಟ್ಟಿಗೆ ಮಧ್ಯಾಹ್ನದ ಹೊತ್ತಿಗೆ ಕೆಜಿಎಫ್ ತಲುಪಿದಾಗ ಅಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಕೆಜಿಎಫ್‌ನ ಮಾಜಿ ಗಣಿ ಕಾರ್ಮಿಕರೂ, ಪ್ರಸ್ತುತ ಮಲ ಹೊರುವ ವೃತ್ತಿಗೆ ಬಿದ್ದು ಜೀವಗಳನ್ನು ಅಡವಿಟ್ಟು ಬದುಕುತ್ತಿದ್ದ ಕಾರ್ಮಿಕರೂ ಆದ ವೈ.ಜೆ. ರಾಜೇಂದ್ರ, ವಕೀಲ ಪುರುಷೋತ್ತಮ್, ಸಾಮಾಜಿಕ ಕಾರ್ಯಕರ್ತೆ ಪದ್ಮ ಮತ್ತು ಕೋಲಾರದ ಎಡಪಂಥದ ಸಂಘಟನೆಗಳ ಸಮ್ಮುಖದಲ್ಲಿ ಸಭೆ ಸೇರಿದ್ದರು. ಅವರೊಟ್ಟಿಗೆಯೇ ಕುಳಿತು ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸುವಲ್ಲಿ ಭಾಗಿಯಾಗಿ ಸಭೆ ಮುಗಿಯುವಷ್ಟರಲ್ಲಿ ಕತ್ತಲಾಗತೊಡಗಿತ್ತು.
 
ಸಭೆ ಮುಗಿಸಿ ಬಂದ ಪದ್ಮಾ ಮತ್ತು ಪ್ರಭುರವರೊಟ್ಟಿಗೆ ಕೆಜಿಎಫ್‌ನ ಮಾರುಕಟ್ಟೆಗೆ ತೆರಳಿ ಅಲ್ಲಿನ 50 ಕುಟುಂಬಗಳಿಗೆ ನಮ್ಮ ಬಳಿ ಸಂಗ್ರಹವಾದ 35 ಸಾವಿರದ ಮಿತಿಯಲ್ಲಿ ಯಾವ ಬಗೆಯಲ್ಲಿ ನೆರವು ನೀಡಬಹುದೆಂದು ಕೂಡಿ ಕಳೆದು ಲೆಕ್ಕಾಚಾರ ಮಾಡಿದಾಗ ಒಟ್ಟು 50 ಕುಟುಂಬಗಳಿಗೂ ಪ್ರತೀ ಕುಟುಂಬಕ್ಕೂ 25 ಕೇಜಿ ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ನೀಡಬಹುದೆಂದು ನಿಷ್ಕರ್ಷೆಯಾಯಿತು. ಅದರಂತೆ 1250 ಕಿಲೋ ಅಕ್ಕಿಯನ್ನು 25 ಕೇಜಿ ಚೀಲದಂತೆ ಖರೀದಿಸಿ ಅಲ್ಲಿಂದ ಒಂದು ಸರಕುಸಾಗಣೆಯ ವಾಹನದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು ವಾಸಿಸುವ ಪ್ರದೇಶವಾದ ಕೆನಡೀಸ್ ಲೈನ್‌ಗೆ ಕೊಂಡೊಯ್ದೆವು. ಅಲ್ಲಿ ಒಟ್ಟು 50 ಕುಟುಂಬಗಳ ಮುಖ್ಯಸ್ಥರ ಹೆಸರನ್ನು ಪಟ್ಟಿಮಾಡಿ ಒಬ್ಬೊಬ್ಬರ ಹೆಸರನ್ನೂ ಕರೆದು ಅವರಿಗೆ ಪ್ರತೀ ಮನೆಗೆ 25 ಕೇಜಿ ಅಕ್ಕಿಯಂತೆ ವಿತರಣೆ ಮಾಡಲಾಯಿತು. ತಕ್ಷಣಕ್ಕೆ ದೊರೆತ ಈ ಬಗೆಯ ನೆರವಿನಿಂದ ಕಾರ್ಮಿಕರಲ್ಲಿ ಕೆಲವರು ಭಾವುಕರಾಗಿದ್ದರು, ಕೊಟ್ಟವರು ಯಾರೋ ಏನೋ ಗೊತ್ತಿಲ್ಲ ಅವರ ಜೀವಕ್ಕೆ ಒಳ್ಳೆಯದಾಗಲೆಂಬ ಹರಕೆ ಸಂತ್ರಸ್ಥ ಕಾರ್ಮಿಕರದ್ದಾಗಿತ್ತು. ಎಲ್ಲರ ಮುಖದಲ್ಲೂ ಹಸಿವಿನಿಂದ ತಾತ್ಕಾಲಿಕವಾಗಿಯಾದರೂ ತಪ್ಪಿಸಿಕೊಂಡೆವಲ್ಲ ಎಂಬ ಸಮಾಧಾನವಿತ್ತು. ಅಕ್ಕಿ ಖರೀದಿಗೆ 30 ಸಾವಿರ ರೂಗಳನ್ನು ವ್ಯಯಿಸಿ ಊಟ, ಕಾರಿನ ಪೆಟ್ರೋಲು, ಸರಕುಸಾಗಣೆ ವಾಹನದ ಬಾಡಿಗೆ ಎಲ್ಲವೂ ಕಳೆದು ಇನ್ನೂ ಮೂರೂವರೆ ಸಾವಿರದಷ್ಟು ಹಣ ಹಾಗೆಯೇ ಉಳಿದಿತ್ತು. ಅದರಲ್ಲಿ ಎಣ್ಣೆ ಖರೀದಿಸಿ ವಿತರಿಸುವ ಯೋಜನೆ ಹಾಕಿಕೊಂಡೆವಾದರೂ ಅದಕ್ಕೆ ಮೂರೂವರೆ ಸಾವಿರ ಕಡಿಮೆ ಬೀಳುತ್ತದೆಂಬ ಕಾರಣಕ್ಕೆ ಸುಮ್ಮನಾದೆವು. ಉಳಿದಿರುವ ಮೂರೂವರೆ ಸಾವಿರ ರೂಗಳ ಜೊತೆಗೆ ಬೆಂಗಳೂರಿನ ಕೆಲವರು ಅಕ್ಕಿ ಕೊಡಿಸುವ ಭರವಸೆ ನೀಡಿದ್ದರು, ಅದನ್ನು ಮತ್ತೆ ತೆಗೆದುಕೊಂಡು ಇದೇ ಬಗೆಯ ಸಂಕಷ್ಟಕ್ಕೆ ಸಿಲುಕಿರುವ ಕೆಜಿಎಫ್‌ನ ಬಿ. ಬ್ಲಾಕ್ ಮತ್ತು, ಬೇರ್ಶಾಪ್ ಪ್ರದೇಶಗಳಿಗೆ ತಲುಪಿಸುವ ಯೋಜನೆಯನ್ನು ಯೋಜಿಸಿದೆವು. ರಾತ್ರಿ ಹತ್ತರವರೆಗೂ ಅಕ್ಕಿ ವಿತರಣೆಯ ಕೆಲಸದಲ್ಲಿ ಮಗ್ನವಾಗಿದ್ದ ನಮ್ಮ ತಂಡ ವಿತರಣೆಯ ಜವಾಬ್ದಾರಿ ನಿರ್ವಹಿಸಿದ ಮೇಲೆ, ನಿಮ್ಮೊಟ್ಟಿಗೆ ನಾವಿದ್ದೇವೆ, ನೀವು ಒಂಟಿಯಲ್ಲ, ಬೆಂಗಳೂರಿನ ಒಂದು ಪಡೆಯೇ ನಿಮ್ಮೊಟ್ಟಿಗೆ ಇರುತ್ತದೆ, ನಿಮ್ಮ ಹೋರಾಟವನ್ನು ಮುಂದುವರೆಸಿ, ಯಶಸ್ಸು ಸಿಗಲಿ ಎಂದು ಹಾರೈಸಿ ಅಲ್ಲಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ರಾತ್ರಿ 2 ಗಂಟೆಯಾಗಿತ್ತು. ವರ್ತಮಾನದೊಟ್ಟಿಗೆ ಕೈ ಜೋಡಿಸಿದ ಎಲ್ಲರ ನೆರವಿಗೂ ಸಾರ್ಥಕತೆ ಮೂಡಿದ ಸಮಾಧಾನ ನಮಗಿತ್ತು.
 
ಖರ್ಚು ವೆಚ್ಚಗಳ ವಿವರ:
ಸಂಗ್ರಹಗೊಂಡ ಒಟ್ಟು ಮೊತ್ತ: 35 ಸಾವಿರ ರೂಗಳು.
1250 ಕಿಲೋ ಅಕ್ಕಿ ಖರೀದಿಗೆ  – 30 ಸಾವಿರ ರೂಗಳು
ಕಾರ್ ಪೆಟ್ರೋಲ್‌ಗೆ ಬಳಸಿದ್ದು   – 500 ರೂಗಳು
ನಾಲ್ಕು ಜನರ 2 ಹೊತ್ತಿನ ಊಟದ ವೆಚ್ಚ – 500 ರೂಗಳು
ಸರಕುಸಾಗಣೆ ವಾಹನದ ಬಾಡಿಗೆ  – 400 ರೂಗಳು
ಉಳಿದಿರುವ ಹಣ   – 3600 ರೂಗಳು


KGF ಸಂತ್ರಸ್ತರಿಗೆ ತಲುಪಿದ ನೆರವು…

ಗೆಳೆಯರೆ,

ಕಳೆದ ಭಾನುವಾರ ಟಿ.ಕೆ. ದಯಾನಂದ್, ದಿನೇಶ್ ಕುಮಾರ್, ಮತ್ತು ಗೆಳೆಯರು KGFಗೆ ಹೋಗಿ ಸುಮಾರು 50 ಸಂತ್ರಸ್ತ ಕುಟುಂಬಗಳಿಗೆ ನೆರವನ್ನು ನೀಡಿ ಬಂದಿದ್ದಾರೆ. ಅದರ ವಿವರಗಳನ್ನು ಒಂದೆರಡು ದಿನದಲ್ಲಿ ಪ್ರಕಟಿಸಲಿದ್ದೇವೆ. ಹಾಗೆಯೇ, ರಸೀತಿಯನ್ನೂ ಸಹ. ದಿನೇಶ್ ಕುಮಾರ್‌ರವರು ಈಗ ತಾನೆ ಅಂದಿನ ಹಂಚಿಕೆ ಕಾರ್ಯದ ಕೆಲವು ಫೋಟೋಗಳನ್ನು ಕಳುಹಿಸಿದ್ದಾರೆ. ಅವರಿಗೆ ಮತ್ತು ಇದನ್ನು ಸಾಧ್ಯ ಮಾಡಿದ ಎಲ್ಲರಿಗೂ ಮತ್ತೊಮ್ಮೆ ವರ್ತಮಾನದ ಬಳಗದ ಪರವಾಗಿ ಧನ್ಯವಾದಗಳು.

ಅಂದಹಾಗೆ, ನಮಗೆ ಭಾನುವಾರದ ತನಕವೂ ನೆರವು ಹರಿದು ಬಂದಿತ್ತು. ಒಟ್ಟು ರೂ. 35000 ಹಣಸಂಗ್ರಹವಾಗಿದ್ದು, ಅದರ ಅಂತಿಮ ವಿವರ ಹೀಗಿದೆ: ವರ್ತಮಾನ ಬಳಗ – 5000,, ರಾಮಕೃಷ್ಣ ಎಂ – 10000, ಮಾನಸ ನಾಗರಾಜ್ – 500, ಅನಾಮಧೇಯ-1 – 1000, ಎಸ್. ವಿಜಯ – 1000, ಸ್ವರ್ಣ ಕುಮಾರ್ ಬಿ.ಎ. – 1500, ಬಿ. ಶ್ರೀಪಾದ ಭಟ್ – 2000, ಅನಾಮಧೇಯ-2 – 500, ಅಕ್ಷತಾ – 1000, ಸಂದೀಪ್/ರಾಘವೇಂದ್ರ ಸಿ.ವಿ. – 2000, ಪಿ.ರಂಗನಾಥ – 2000, ತ್ರಿವೇಣಿ ಟಿ.ಸಿ. – 1000, ಅವಿನಾಶ ಕನ್ನಮ್ಮನವರ – 500, ಸತೀಶ್ ಗೌಡ ಬಿ.ಎಚ್. (ಕ.ರ.ವೇ.) – 500, ಆರ್.ಕೆ.ಕೀರ್ತಿ (ಕ.ರ.ವೇ.) – 1000, ಬಿ. ಸಣ್ಣೀರಪ್ಪ (ಕ.ರ.ವೇ.) – 500, ಸಿ.ವಿ.ದೇವರಾಜ್ (ಕ.ರ.ವೇ.) – 1000, ನಂದಿನಿ ಎ.ಡಿ. – 500, ಶಿವಕುಮಾರ್ ದಂಡಿಗೆಹಳ್ಳಿ – 2000, ಕಾರ್ತಿಕ್ ಡಿ.ಪಿ. – 1500.










KGF ನ ಸಂತ್ರಸ್ತರಿಗಾಗಿ ಇಲ್ಲಿಯವರೆಗೆ ರೂ.31,500 ಸಂಗ್ರಹ

ಗೆಳೆಯರೆ,

ಈ ಮನವಿಗೆ ಸ್ಪಂದಿಸಿದ, ಅಲ್ಲಲಿ ಪ್ರಚಾರ ಕೊಟ್ಟ, ಹಣಸಹಾಯ ಕಳುಹಿಸಿದ ಎಲ್ಲರಿಗೂ ನಮ್ಮ ಧನ್ಯತಾಪೂರ್ವಕ ಕೃತಜ್ಞತೆಗಳು. ಇಲ್ಲಿಯವರೆಗೆ ಒಟ್ಟು ರೂ.31500 ಸಂಗ್ರಹವಾಗಿದೆ. ಇನ್ನೂ ಕೆಲವರು ಇಂದೂ ಸಹ ಸಹಾಯ ಮಾಡಲಿದ್ದಾರೆ. ಹಾಗಾಗಿ ಮೊತ್ತ ಇನ್ನೂ ಸ್ವಲ್ಪ ಹೆಚ್ಚಾಗಬಹುದು.

ಇಂತಹ ಒಂದು ಕಾರ್ಯದ ಹಿಂದಿದ್ದ ಗೆಳೆಯರು ಇದೇ ಭಾನುವಾರ KGF‌ ಗೆ ಹೋಗಿ ಇದನ್ನು ಯೋಗ್ಯ ರೀತಿಯಲ್ಲಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇದರ ಕುರಿತು ಇನ್ನಷ್ಟು ವಿವರಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ಪ್ರಕಟಿಸುತ್ತೇವೆ.

ಮತ್ತೊಮ್ಮೆ, ಎಲ್ಲರಿಗೂ ನಮ್ಮ ಧನ್ಯವಾದಗಳು.

ಹಣಸಹಾಯ ಮಾಡಿದವರ ವಿವರ:

ವರ್ತಮಾನ ಬಳಗ 5000
ರಾಮಕೃಷ್ಣ ಎಂ. 10000
ಮಾನಸ ನಾಗರಾಜ್ 500
ಅನಾಮಧೇಯ-1 1000
ಎಸ್.ವಿಜಯ, ಮೈಸೂರು 1000
ಸ್ವರ್ಣಕುಮಾರ್ ಬಿ.ಎ. 1500
ಬಿ. ಶ್ರೀಪಾದ ಭಟ್ 2000
ಅನಾಮಧೇಯ -2 500
ಅಕ್ಷತಾ, ಶಿವಮೊಗ್ಗ 1000
ಸಂದೀಪ್ / ರಾಘವೇಂದ್ರ ಸಿ.ವಿ. 2000
ಪಿ.ರಂಗನಾಥ 2000
ತ್ರಿವೇಣಿ ಟಿ.ಸಿ. 1000
ಅವಿನಾಶ ಕನ್ನಮ್ಮನವರ 500
ಸತೀಶ್ ಗೌಡ ಬಿ.ಎಚ್. 500
ಆರ್.ಕೆ.ಕೀರ್ತಿ 1000
ಬಿ. ಸಣ್ಣೀರಪ್ಪ (ಕ.ರ.ವೇ.) 500
ಸಿ.ವಿ. ದೇವರಾಜ್ (ಕ.ರ.ವೇ.) 1000
ನಂದಿನಿ ಎ.ಡಿ. 500
ಒಟ್ಟು 31500

ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವವರಿಗೆ ಧನ್ಯವಾದಗಳು…

-ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

KGF ನ ಸಂತ್ರಸ್ತರಿಗಾಗಿ ನಾವು ಮಾಡಿಕೊಂಡ ಮನವಿಗೆ ಸ್ಪಂದಿಸಿ ಈಗಾಗಲೆ ಐದಾರು ಜನ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ನಾವು ಮನವಿ ಪ್ರಕಟಿಸಿದ ಮೊದಲ ಎರಡು ದಿನ ಹಣಸಂದಾಯ ಮಾಡುವ ವಿಚಾರಕ್ಕೆ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿದ್ದವು. ಈಗ ನೀವು ಯಾವುದೇ ರೀತಿ ಕಳುಹಿಸಬೇಕೆಂದರೂ (ಇಂಟರ್ನೆಟ್/ಎಟಿಎಮ್ ಟ್ರಾನ್ಸ್‌ಫರ್/ಚೆಕ್) ಸಂಪೂರ್ಣ ಮಾಹಿತಿ ಲಭ್ಯವಿದೆ.

ಇಲ್ಲಿಯವರೆಗೆ ಒಟ್ಟು ರೂ. 18,500 ಸಂಗ್ರಹವಾಗಿದೆ. ಇನ್ನೂ ಹಲವರು ಒಂದೆರಡು ದಿನದಲ್ಲಿಯೇ ಚೆಕ್ ಕಳುಹಿಸುವ, ಅಕೌಂಟಿಗೆ ಟ್ರಾನ್ಸ್‌ಫರ್ ಮಾಡುವ ಆಶ್ವಾಸನೆ ಇತ್ತಿದ್ದಾರೆ. ಸಹಾಯ ಮಾಡಬೇಕೆಂದಿರುವವರು ಆದಷ್ಟು ಬೇಗ ಮಾಡಿ. ಡಿಸೆಂಬರ್ 15ಕ್ಕೆ ಸಂಗ್ರಹವಾಗುವ ಒಟ್ಟು ಮೊತ್ತವನ್ನು ಪದಾರ್ಥರೂಪದಲ್ಲಿ ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಆರಂಭಿಸಲು ಅನುಕೂಲವಾಗುತ್ತದೆ. ಸರಿಯಾದ ಅಥವ ಅತ್ಯಗತ್ಯವಾದ ಸಮಯದಲ್ಲಿ ಮಾಡುವ ಸಹಾಯವೇ ಅತ್ಯುತ್ತಮ ಸಹಾಯ. ಅದನ್ನು ಮತ್ತಷ್ಟು ನಿಧಾನಗೊಳಿಸುವುದು ಬೇಡ ಎನ್ನುವುದಷ್ಟೇ ನಮ್ಮ ಆಶಯ.

ಅಂದ ಹಾಗೆ, ಇಲ್ಲಿಯವರೆಗೆ ಹಣ ಸಂದಾಯ ಮಾಡಿರುವವರ ಮತ್ತು ಚೆಕ್ ಕಳುಹಿಸಿರುವವರ ವಿವರ ಹೀಗಿದೆ:

ವರ್ತಮಾನ ಬಳಗ  – 5000
ರಾಮಕೃಷ್ಣ ಎಂ. – 10000
ಮಾನಸ ನಾಗರಾಜ್ – 500
ಅನಾಮಧೇಯ-1 – 1000
ಎಸ್.ವಿಜಯ, ಮೈಸೂರು – 1000
ಸ್ವರ್ಣಕುಮಾರ್ ಬಿ.ಎ. – 1000

ಒಟ್ಟು: 18,500

ವರ್ತಮಾನದ ಅಪೀಲು: ಇದು ನಮ್ಮ ಜವಾಬ್ದಾರಿ, ನೀವೂ ಪಾಲ್ಗೊಳ್ಳಿ

ಕೆಜಿಎಫ್ ದಲಿತ ಕಾಲೋನಿಗಳಲ್ಲಿ ಇತ್ತೀಚೆಗೆ ಘಟಿಸಿದ ಸಾವುಗಳು ನಿಮಗೆ ನೆನಪಿರಬಹುದು. ಕಕ್ಕಸ್ಸು ಗುಂಡಿ ಶುಚಿಗೊಳಿಸಲು ಹೋದ ಐವರು ಅಸುನೀಗಿದ್ದಾರೆ. ಇದೇ ಕೆಲಸದಿಂದಾಗಿ ಅಂಟಿಸಿಕೊಂಡ ನಾನಾ ರೋಗಗಳಿಂದ ಸತ್ತವರೆಷ್ಟೋ, ಲೆಕ್ಕ ಇಟ್ಟವರಾರು? ಇನ್ನು ಕೆಲವರು ರೋಗಗಳಿಂದ ಬಳಲುತ್ತಿದ್ದಾರೆ.

ದುಡಿವವರನ್ನು ಕಳೆದುಕೊಂಡ ಅವರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಸಾಲು ಸಾಲು ಸಾವುಗಳ ನಂತರ ಸ್ಥಳೀಯ ಸಂಸ್ಥೆ ಎಚ್ಚರಗೊಂಡು ಮಲಹೊರುವ ಪದ್ಧತಿ ನಿರ್ಮೂಲನೆಗೆ ಶತಪ್ರಯತ್ನ ಮಾಡುತ್ತಿದೆ. ಮಲದ ಗುಂಡಿಗಳನ್ನು ಶುಚಿ ಮಾಡಲು ಯಾರೂ ಇವರನ್ನು ಕರೆಯಬಾರದು ಎಂದು ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಅದೇ ಆಡಳಿತದ ಜವಾಬ್ದಾರಿಯಾಗಿದ್ದು ದುಡಿಯುವ ಕೈಗಳನ್ನು ಮತ್ತು ದುಡಿಮೆಯನ್ನು ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಕೊಡಿಸಬೇಕಾದ್ದು. ಇದುವರೆಗೂ ಅದು ಈಡೇರಿಲ್ಲ. ಭರವಸೆ ನೀಡಿದ್ದಾರೆ. ಈಡೇರುವುದು ಎಂದೋ?

ಆದರೆ ಅಲ್ಲಿಯವರೆಗೆ??

ಪಿಯುಸಿಎಲ್ ಮತ್ತಿತರ ಸಂಘಟನೆಗಳ ಸತತ ಒತ್ತಡದ ಫಲವಾಗಿ, ವೈ.ಜೆ.ರಾಜೇಂದ್ರ, ದಯಾನಂದ್, ಚಂದ್ರಶೇಖರ್, ಪದ್ಮ ಮೊದಲಾದ ಸಾಮಾಜಿಕ ಹೋರಾಟಗಾರರ ಪ್ರಯತ್ನದಿಂದಾಗಿ ಕೆಜಿಎಫ್‌ನಲ್ಲಿ ಈಗ ಮನುಷ್ಯರೇ ಮಲಹೊತ್ತುವ ಕಾರ್ಯಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿದೆ. ಇದರ ಜತೆಜತೆಗೆ ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ಜಿಲ್ಲಾಡಳಿತ ಮಾತ್ರ ನಿಧಾನಗತಿ ಅನುಸರಿಸುತ್ತಿದೆ. ಪರಿಣಾಮವಾಗಿ ಈ ಕುಟುಂಬಗಳ ಒಪ್ಪೊತ್ತಿನ ಊಟಕ್ಕೂ ಈಗ ತತ್ವಾರ.

ಸದ್ಯಕ್ಕೆ ಅವರಿಗೆ ಆದಾಯದ ಮೂಲವೇ ಇಲ್ಲ. ಪರ್ಯಾಯ ಉದ್ಯೋಗ ಕಲ್ಪಿಸುವವರೆಗಾದರೂ ಆ ಕಾಲೋನಿಯಲ್ಲಿ ಗಂಜಿ ಕೇಂದ್ರ ಸ್ಥಾಪಿಸಿ ಅನ್ನ ನೀಡಬೇಕಾದ ಜವಾಬ್ದಾರಿ ಆಡಳಿತದದ್ದು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ನಾಗರಿಕ ಸಮಾಜವೂ ಜವಾಬ್ದಾರಿ ಮರೆತರೆ? ನಮ್ಮ ಮನೆಯ ಮಲದ ಗುಂಡಿಗಳು ತುಂಬಿಕೊಂಡಾಗ, ನಗರಸಭೆ, ಪುರಸಭೆಗಳನ್ನು ನಂಬಿಕೊಳ್ಳದೆ ನಾವು ಇಂತಹವರ ಮೊರೆ ಹೋಗಿದ್ದೆವು, ಅವರನ್ನು ಗುಂಡಿಯೊಳಗೆ ಇಳಿಸಿ ಮೇಲೆ ಮೂಗು ಮುಚ್ಚಿ ನಿಂತಿದ್ದೆವು. ಅವರು ಅಂಟಿಸಿಕೊಂಡ ರೋಗಗಳಿಗೆ, ತೆತ್ತ ಜೀವಕ್ಕೆ ಸರಕಾರ ಅಷ್ಟೇ ಅಲ್ಲ, ನಾವೂ ಹೊಣೆ.

ವರ್ತಮಾನ ಬಳಗ ಹೀಗೊಂದು ಆಲೋಚನೆ ಮಾಡಿದೆ. ಒಪ್ಪತ್ತಿನ ಅನ್ನಕ್ಕಾಗಿ ಕಷ್ಟಪಡಿಸುತ್ತಿರುವವರಿಗೆ ನಾವು, ನೀವು ನೆರವಾಗೋಣ ಎಂಬುದು ನಮ್ಮ ಆಲೋಚನೆ. ಅವರಿಗೆ ಮುಖ್ಯವಾಗಿ ಈಗ ಬೇಕಿರುವುದು, ಅಕ್ಕಿ, ಬೇಳೆ ಹಾಗೂ ಅಡಿಗೆಗೆ ಬೇಕಾದ ಇತರೆ ಅಗತ್ಯ ಸಾಮಾಗ್ರಿಗಳು. ಸಂಗ್ರಹವಾಗುವ ಹಣದಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ಅವರಿಗೆ ತಲುಪಿಸುವ ಹೊಣೆ ನಮ್ಮದು. ಸಂಗ್ರಹವಾಗುವ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಅಂತೆಯೇ ನಮ್ಮ ಜೊತೆ ಕೈಜೋಡಿಸುವವರ ಹೆಸರನ್ನು ಪ್ರಕಟಿಸುತ್ತೇವೆ. ಜೊತೆಗೆ ಹಣ ನೀಡುತ್ತೇವೆ ಎಂದು ಭರವಸೆ ಕೊಡುವವರ ಹೆಸರನ್ನೂ ಮತ್ತೊಂದು ಪಟ್ಟಿಯಲ್ಲಿ ಪ್ರಕಟಿಸುತ್ತೇವೆ. ಅಂತಹವರು ತಮ್ಮ ಭರವಸೆಗಳನ್ನು ಮೇಲ್ ಮಾಡಬಹುದು (editor@vartamaana.com).

ವರ್ತಮಾನ ಬಳಗ 5,000 ರೂ.ಗಳನ್ನು ಈ ಕೆಲಸಕ್ಕಾಗಿ ವಿನಿಯೋಗಿಸುತ್ತದೆ.

ನೀವು ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆ: 64046096974 (ಟಿ.ಕೆ.ದಯಾನಂದ) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು. ಇದೇ ಡಿಸೆಂಬರ್ 15 ರ ಒಳಗೆ ತಾವು ಹಣ ಕಳುಹಿಸಬೇಕಾಗಿ ವಿನಂತಿ. ಚೆಕ್ ಕಳುಹಿಸುವವರು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಚೆಕ್ ಟಿ.ಕೆ.ದಯಾನಂದ ರ ಹೆಸರಿನಲ್ಲಿರಲಿ.

ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ನಂ. 400, 23ನೇ ಮುಖ್ಯ ರಸ್ತೆ,
ಕುವೆಂಪು ನಗರ, ಎರಡನೇ ಹಂತ
ಬೆಂಗಳೂರು – 560076

ದೂ: 080-26783329

ನಮಸ್ಕಾರ
ವರ್ತಮಾನ ಬಳಗ.


ಡಿಸೆಂಬರ್ 6, 2011 ರಂದು ಸೇರಿಸಿದ್ದು:

ನಮ್ಮ ಮನವಿಗೆ ಅನೇಕರು ಸ್ಪಂದಿಸಿದ್ದಾರೆ. ಕೆಲ ಉತ್ಸಾಹಿ ಬ್ಲಾಗ್ ಗಳು, ವೆಬ್ ಸೈಟ್ ಗಳು, ಫೇಸ್ ಬುಕ್ ಸ್ನೇಹಿತರು ನಮ್ಮ ಮನವಿಯನ್ನು ಮತ್ತಷ್ಟು ಜನರಿಗೆ ಮುಟ್ಟಿಸುವಲ್ಲಿ ತಮ್ಮ ಸಹಕಾರ ನೀಡಿದ್ದಾರೆ. ಅವರಿಗೆಲ್ಲಾ ನಮ್ಮ ಧನ್ಯವಾದಗಳು. ಅವರ ಸಹಕಾರ ಹೀಗೇ ಇರಲಿ ಎಂದು ಬಯಸುತ್ತೇವೆ. ಈ ಮಧ್ಯೆ ಕೆಲವರು ಹಣ ಕಳುಹಿಸುವುದರ ಬಗ್ಗೆ ಕೆಲವು ಮಾಹಿತಿ ಬಯಸಿದ್ದಾರೆ.

ಇಂಟರ್ ನೆಟ್ ಮೂಲಕ ಹಣ ವರ್ಗಾವಣೆ ಮಾಡ ಬಯಸುವವರಿಗೆ ಅನುಕೂಲವಾಗಬಹುದಾದ ಮಾಹಿತಿ ಇಲ್ಲಿದೆ.
ಬ್ಯಾಂಕ್ ಖಾತೆ ಸಂಖ್ಯೆ: 64046096974
ಖಾತೆ: ಉಳಿತಾಯ ಖಾತೆ
ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು.
ಐಎಫ್ ಎಸ್ ಸಿ ಕೋಡ್ (IFSC code): SBMY0040376
ಬ್ರಾಂಚ್ ಕೋಡ್ : 040376

(ಇಂಟರ್ ನೆಟ್ ಮೂಲಕ ಹಣ ವರ್ಗಾಯಿಸುವವರು, ಹಣ ಕಳುಹಿಸಿದ ನಂತರ ವರ್ತಮಾನ ಕ್ಕೆ ಇಮೇಲ್ ಮೂಲಕ ತಮ್ಮ ಹೆಸರು, ವಿಳಾಸ ಹಾಗೂ ಕಳುಹಿಸಿದ ಮೊತ್ತ ವನ್ನು ತಿಳಿಸಿದರೆ ತಮ್ಮ ಹೆಸರನ್ನು ಪ್ರಕಟಿಸಲು ಸಹಾಯವಾಗುತ್ತದೆ).

ಚೆಕ್ ಅಥವಾ ಡಿಡಿ ಕಳುಹಿಸುವವರು:

“T.K. Dayanand / ಟಿ.ಕೆ. ದಯಾನಂದ”

ಹೆಸರಿಗೆ ಚೆಕ್ ಬರೆದು
ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ನಂ. 400, 23ನೇ ಮುಖ್ಯ ರಸ್ತೆ,
ಕುವೆಂಪು ನಗರ, ಎರಡನೇ ಹಂತ
ಬೆಂಗಳೂರು – 560076

ದೂ: 080-26783329

ನಮಸ್ಕಾರ,
ವರ್ತಮಾನ ಬಳಗ.


ಡಿಸೆಂಬರ್ 10, 2011 ರಂದು ಸೇರಿಸಿದ್ದು:

-ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

KGF ನ ಸಂತ್ರಸ್ತರಿಗಾಗಿ ನಾವು ಮಾಡಿಕೊಂಡ ಮನವಿಗೆ ಸ್ಪಂದಿಸಿ ಈಗಾಗಲೆ ಐದಾರು ಜನ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ನಾವು ಮನವಿ ಪ್ರಕಟಿಸಿದ ಮೊದಲ ಎರಡು ದಿನ ಹಣಸಂದಾಯ ಮಾಡುವ ವಿಚಾರಕ್ಕೆ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿದ್ದವು. ಈಗ ನೀವು ಯಾವುದೇ ರೀತಿ ಕಳುಹಿಸಬೇಕೆಂದರೂ (ಇಂಟರ್ನೆಟ್/ಎಟಿಎಮ್ ಟ್ರಾನ್ಸ್‌ಫರ್/ಚೆಕ್) ಸಂಪೂರ್ಣ ಮಾಹಿತಿ ಲಭ್ಯವಿದೆ.

ಇಲ್ಲಿಯವರೆಗೆ ಒಟ್ಟು ರೂ. 18,500 ಸಂಗ್ರಹವಾಗಿದೆ. ಇನ್ನೂ ಹಲವರು ಒಂದೆರಡು ದಿನದಲ್ಲಿಯೇ ಚೆಕ್ ಕಳುಹಿಸುವ, ಅಕೌಂಟಿಗೆ ಟ್ರಾನ್ಸ್‌ಫರ್ ಮಾಡುವ ಆಶ್ವಾಸನೆ ಇತ್ತಿದ್ದಾರೆ. ಸಹಾಯ ಮಾಡಬೇಕೆಂದಿರುವವರು ಆದಷ್ಟು ಬೇಗ ಮಾಡಿ. ಡಿಸೆಂಬರ್ 15ಕ್ಕೆ ಸಂಗ್ರಹವಾಗುವ ಒಟ್ಟು ಮೊತ್ತವನ್ನು ಪದಾರ್ಥರೂಪದಲ್ಲಿ ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಆರಂಭಿಸಲು ಅನುಕೂಲವಾಗುತ್ತದೆ. ಸರಿಯಾದ ಅಥವ ಅತ್ಯಗತ್ಯವಾದ ಸಮಯದಲ್ಲಿ ಮಾಡುವ ಸಹಾಯವೇ ಅತ್ಯುತ್ತಮ ಸಹಾಯ. ಅದನ್ನು ಮತ್ತಷ್ಟು ನಿಧಾನಗೊಳಿಸುವುದು ಬೇಡ ಎನ್ನುವುದಷ್ಟೇ ನಮ್ಮ ಆಶಯ.

ಅಂದ ಹಾಗೆ, ಇಲ್ಲಿಯವರೆಗೆ ಹಣ ಸಂದಾಯ ಮಾಡಿರುವವರ ಮತ್ತು ಚೆಕ್ ಕಳುಹಿಸಿರುವವರ ವಿವರ ಹೀಗಿದೆ:

ವರ್ತಮಾನ ಬಳಗ – 5000
ರಾಮಕೃಷ್ಣ ಎಂ. – 10000
ಮಾನಸ ನಾಗರಾಜ್ – 500
ಅನಾಮಧೇಯ-1 – 1000
ಎಸ್.ವಿಜಯ, ಮೈಸೂರು – 1000
ಸ್ವರ್ಣಕುಮಾರ್ ಬಿ.ಎ. – 1000

ಒಟ್ಟು: 18,500


ದಿನಾಂಕ 20/12/2011 ರಂದು ಸೇರಿಸಿದ್ದು:

KGF ಸಂತ್ರಸ್ತರಿಗೆ ತಲುಪಿದ ನೆರವು…

ಗೆಳೆಯರೆ,

ಕಳೆದ ಭಾನುವಾರ ಟಿ.ಕೆ. ದಯಾನಂದ್, ದಿನೇಶ್ ಕುಮಾರ್, ಮತ್ತು ಗೆಳೆಯರು KGFಗೆ ಹೋಗಿ ಸುಮಾರು 50 ಸಂತ್ರಸ್ತ ಕುಟುಂಬಗಳಿಗೆ ನೆರವನ್ನು ನೀಡಿ ಬಂದಿದ್ದಾರೆ. ಅದರ ವಿವರಗಳನ್ನು ಒಂದೆರಡು ದಿನದಲ್ಲಿ ಪ್ರಕಟಿಸಲಿದ್ದೇವೆ. ಹಾಗೆಯೇ, ರಸೀತಿಯನ್ನೂ ಸಹ. ದಿನೇಶ್ ಕುಮಾರ್‌ರವರು ಈಗ ತಾನೆ ಅಂದಿನ ಹಂಚಿಕೆ ಕಾರ್ಯದ ಕೆಲವು ಫೋಟೋಗಳನ್ನು ಕಳುಹಿಸಿದ್ದಾರೆ. ಅವರಿಗೆ ಮತ್ತು ಇದನ್ನು ಸಾಧ್ಯ ಮಾಡಿದ ಎಲ್ಲರಿಗೂ ಮತ್ತೊಮ್ಮೆ ವರ್ತಮಾನದ ಬಳಗದ ಪರವಾಗಿ ಧನ್ಯವಾದಗಳು.

ಅಂದಹಾಗೆ, ನಮಗೆ ಭಾನುವಾರದ ತನಕವೂ ನೆರವು ಹರಿದು ಬಂದಿತ್ತು. ಒಟ್ಟು ರೂ. 35000 ಹಣಸಂಗ್ರಹವಾಗಿದ್ದು, ಅದರ ಅಂತಿಮ ವಿವರ ಹೀಗಿದೆ: ವರ್ತಮಾನ ಬಳಗ – 5000,, ರಾಮಕೃಷ್ಣ ಎಂ – 10000, ಮಾನಸ ನಾಗರಾಜ್ – 500, ಅನಾಮಧೇಯ-1 – 1000, ಎಸ್. ವಿಜಯ – 1000, ಸ್ವರ್ಣ ಕುಮಾರ್ ಬಿ.ಎ. – 1500, ಬಿ. ಶ್ರೀಪಾದ ಭಟ್ – 2000, ಅನಾಮಧೇಯ-2 – 500, ಅಕ್ಷತಾ – 1000, ಸಂದೀಪ್/ರಾಘವೇಂದ್ರ ಸಿ.ವಿ. – 2000, ಪಿ.ರಂಗನಾಥ – 2000, ತ್ರಿವೇಣಿ ಟಿ.ಸಿ. – 1000, ಅವಿನಾಶ ಕನ್ನಮ್ಮನವರ – 500, ಸತೀಶ್ ಗೌಡ ಬಿ.ಎಚ್. (ಕ.ರ.ವೇ.) – 500, ಆರ್.ಕೆ.ಕೀರ್ತಿ (ಕ.ರ.ವೇ.) – 1000, ಬಿ. ಸಣ್ಣೀರಪ್ಪ (ಕ.ರ.ವೇ.) – 500, ಸಿ.ವಿ.ದೇವರಾಜ್ (ಕ.ರ.ವೇ.) – 1000, ನಂದಿನಿ ಎ.ಡಿ. – 500, ಶಿವಕುಮಾರ್ ದಂಡಿಗೆಹಳ್ಳಿ – 2000, ಕಾರ್ತಿಕ್ ಡಿ.ಪಿ. – 1500.