Tag Archives: ಸಿಂಧಗಿ

ಸಿಂಧಗಿ ಪ್ರಕರಣ: ಮೂಲಭೂತವಾದಿ ಸಂಘಟನೆಗಳನ್ನು ನಿಯಂತ್ರಿಸಲೇಬೇಕು

 -ಭೂಮಿ ಬಾನು

ಸಿಂಧಗಿ ತಾಲೂಕು ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣದ ಮೂಲಕಮೂಲಭೂತವಾದಿಗಳ ನಿಜ ಬಣ್ಣ ಬಯಲಾಗಿದೆ. ಜಿಲ್ಲಾ ಪೊಲೀಸರು ಶ್ರೀರಾಮ ಸೇನೆ ವಿದ್ಯಾರ್ಥಿ ಘಟಕಕ್ಕೆಸೇರಿದ ಆರು ಮಂದಿಯನ್ನು ಬಂಧಿಸಿದೆ. ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಂಧಿತರು ತಮ್ಮಸೇನೆಯವರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ ಅವರೆಲ್ಲಾ ಆರ್.ಎಸ್.ಎಸ್ ನವರು ಎಂದು ದೂರಿದ್ದಾರೆ. ಬಂಧಿತವರ ಪೈಕಿ ಒಬ್ಬ ಆರ್.ಎಸ್.ಎಸ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಫೋಟೋವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ರಾಮಸೇನೆಯ ವಿದ್ಯಾರ್ಥಿ ಘಟಕವೇ ಇಲ್ಲ. ಬಂಧಿತರ ಬಳಿ ಅವರು ರಾಮಸೇನೆಯವರು ಎನ್ನಲುಇರುವ ಆಧಾರವೇನು ಎಂದು ಕೇಳಿದ್ದಾರೆ. ಆರ್.ಎಸ್.ಎಸ್ ಅಥವಾ ಶ್ರೀರಾಮ ಸೇನೆಯವರು ತಮ್ಮ ಸದಸ್ಯರಿಗೆ ಗುರುತಿನ ಚೀಟಿ ಕೊಡುವ ಪದ್ಧತಿ ಇದೆಯೇ?

ಪೊಲೀಸ್ ಅಧಿಕಾರಿಗಳು ಹೇಳಿರುವಂತೆ ಬಂಧಿತರು ಈಗಾಗಲೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರು ಇನ್ನೂ ಆರೋಪಿಗಳು. ಆರೋಪ ಸಾಬೀತಾಗಬೇಕಿರುವುದು ನ್ಯಾಯಾಲಯದಲ್ಲಿ. ಅದಿರಲಿ, ಆದರೆ ಪ್ರಮೋದ್ ಮುತಾಲಿಕ್ ಮಾತುಗಳನ್ನು ಕೇಳಿದ ನಂತರ ಗ್ರಹಿಸಬಹುದಾದ ಒಂದು ಅಂಶವೆಂದರೆ– ಈ ಕೃತ್ಯ ಹಿಂದೂ ಮೂಲಭೂತವಾದಿಗಳದ್ದೇ! ಅವರು ಶ್ರೀರಾಮ ಸೇನೆಯವರು ಇರಬಹುದು ಅಥವಾಆರ್.ಎಸ್.ಎಸ್ ನವರಾಗಿರಬಹುದು.

ವಿಚಿತ್ರ ನೋಡಿ ಪಾಕ್ ಧ್ವಜ ಹಾರಿಸಿ ಕೋಮುಭಾವನೆ ಕೆರಳಿಸುವವರೂ ಇವರೆ, ಅದನ್ನು ಖಂಡಿಸಿ ಪ್ರತಿಭಟನೆ ಮಾಡುವವರು, ಬಂದ್ ಕರೆ ನೀಡುವವರೂ ಅವರೆ. ಕೋಮುಭಾವನೆ ಕೆರಳಿಸುಮೂಲಕವಷ್ಟೇ ಅಧಿಕಾರ ಚುಕ್ಕಾಣಿ ಹಿಡಿಯುವ ಹಕೀಕತ್ತು ಈ ಘಟನೆಯ ಹಿಂದೆ ಕೆಲಸ ಮಾಡಿದೆ.

ಮೇಲ್ನೋಟಕ್ಕೆ ಯಾವುದೋ ಮುಸಲ್ಮಾನ ಸಂಘಟನೆ ಮಾಡಿರಬಹುದು ಎನ್ನುವ ಸಂಶಯಹುಟ್ಟಿಸುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಾರೆ. ಸುಖಾ ಸುಮ್ಮನೆ ಮುಸ್ಲಿಂ ಸಂಘಟನೆಗಳನ್ನು ಗುಮಾನಿಯಿಂದ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ಇತ್ತೀಚೆಗೆ ಪ್ರಮೋದ್ ಮುತಾಲಿಕ್ ಬಣ ಬೆಂಗಳೂರು ವಿಶ್ವವಿದ್ಯಾನಿಲಯ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರ ಮೇಲೆಯೂ ಹಲ್ಲೆ ನಡೆಸಿತು. ನಾಲ್ಕು ದಿನಗಳ ಹಿಂದೆಯಷ್ಟೆ ಮುತಾಲಿಕ್ ಗೆ ಇದೇ ಪ್ರಕರಣದಲ್ಲಿ ಜಾಮಿನು ಸಿಕ್ಕಿದೆ. ಈ ಹಿಂದೆಯೂ ಅನೇಕ ಕಡೆ ಕೋಮುದ್ವೇಷ ಬಿತ್ತುವ ಪ್ರಚೋದನಕಾರಿ ಭಾಷಣ ಮಾಡಿದ ಕುಖ್ಯಾತಿ ಈ ಮುತಾಲಿಕ್ ಗೆ ಇದೆ. ಆಡಳಿತದಲ್ಲಿರುವವರು ಈತನ ಪ್ರಚೋದನಾತ್ಮಕ ಮಾತುಗಳಿಗೆ ತಕ್ಕಶಾಸ್ತಿ ಮಾಡಬೇಕಿತ್ತು. ಆದರೆ ಹಾಗಾಗಲಿಲ್ಲ.

ಮುಖ್ಯವಾಗಿ ಇಂತಹ ಸಂಘಟನೆಗಳಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಗೌರವ ಇಲ್ಲ ಮತ್ತು ಜೊತೆಗೆ ಒಂಚೂರೂ ನಾಚಿಕೆ ಇಲ್ಲ! ಇಲ್ಲವಾದಲ್ಲಿ ಇಂತಹ ಕೃತ್ಯ ಮಾಡುವ ಆಲೋಚನೆಯೂ ಅವರಿಗೆ ಬರುತ್ತಿರಲಿಲ್ಲ.

ದೇಶಭಕ್ತಿ, ದೇಶಪ್ರೇಮ ಎಂದೆಲ್ಲಾ ಮಾತನಾಡುವ ಈ ಸಂಘಟನೆಗಳು ಪಾಕ್ ಧ್ವಜಹಾರಿಸುವುದನ್ನೂ ಹೇಳಿಕೊಟ್ಟರೆ? ಈ ಘಟನೆಯಿಂದ ಆದ ನಷ್ಟ ಲೆಕ್ಕಕ್ಕೆ ಸಿಗುತ್ತಿಲ್ಲ. ಬಂದ್ ನಕಾರಣ ವ್ಯಾಪಾರ ವಹಿವಾಟು ನಿಂತಿತ್ತು. ಶಾಲಾ ಕಾಲೇಜುಗಳು ಮುಚ್ಚಿದ್ದವು. ವಾಹನಗಳು ಬೆಂಕಿಗೆಆಹುತಿಯಾದವು. ಆಗಿರುವ ನಷ್ಟಕ್ಕೆಲ್ಲಾ ಯಾರು ಹೊಣೆ?

ಸರಕಾರದಲ್ಲಿರುವ ಬಹುತೇಕರು ಈ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಆ ಕಾರಣವೇ ಈ ಸಂಘಟನೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ. ಸರಕಾರ ಈಗಲಾದರೂ ಎಚ್ಚತ್ತುಕೊಳ್ಳದಿದ್ದರೆ ಮುಂದೆ ಈ ಸಂಘಟನೆಗಳಿಂದ ಮತ್ತಷ್ಟು ದುಷ್ಕೃತ್ಯಗಳು ನಡೆಯುವ ಮೊದಲು ಅವನ್ನು ನಿಯಂತ್ರಿಸಬೇಕು.