Tag Archives: RSS

RSS :ಬಾಲ್ಯವಿವಾಹ, ಮಡೆಸ್ನಾನ, ಮರ್ಯಾದಾ ಹತ್ಯೆ,… ಏನನ್ನುತ್ತಾರೆ?

-ಬಿ. ಶ್ರೀಪಾದ್ ಭಟ್

“ಆರ್.ಎಸ್.ಎಸ್. ಗಳ ದೇಶಭಕ್ತಿ ಮತ್ತು ಧರ್ಮ ಶ್ರದ್ಧೆ ಗಾಂಧೀಜಿಯಲ್ಲಿ ಶಂಕೆ ಮೂಡಿಸುತ್ತಿದ್ದವು. ಆರ್.ಎಸ್.ಎಸ್. ಗಳ ಈ ದೇಶ ಭಕ್ತಿ, ಧರ್ಮಶ್ರದ್ಧೆಯ ಇನ್ನೊಂದು ಮುಖವೇ ಅನ್ಯಧರ್ಮ ದ್ವೇಷ ಎಂದು ಗಾಂಧೀಜಿ ತಿಳಿದಿದ್ದರು. ಬರೀ ದೇವಾಲಯಗಳನ್ನು ಕಟ್ಟಿಸುವುವನು ಹೇಗೆ ಕಂದಾಚಾರದ, ಅಸಹನೆಯ ವ್ಯಕ್ತಿಯಾಗುತ್ತಾನೋ ಹಾಗೆಯೇ ಪರಂಪಾರಗತ ಧರ್ಮವನ್ನು ನಂಬಿದವನು ಜಾತಿಪದ್ಧತಿ ಮತ್ತು ಶೋಷಣೆಯನ್ನು ನೆಚ್ಚುತ್ತಾನೆ ಎಂದು ತಿಳಿದಿದ್ದರು. ಗಾಂಧೀಜಿಯ ಕಣ್ಣೆದುರಿಗೇ ಹಿಂದೂ ಧರ್ಮದ ರಕ್ಷಣೆಗೆಂದು ಹುಟ್ಟಿಕೊಂಡ, ಆರ್.ಎಸ್.ಎಸ್ ಮುಸ್ಲಿಂ ವಿರೋಧಿ ಗುಂಪಾಗಿ, ಸತ್ಯವನ್ನು ತಿರುಚಿ ಸುಳ್ಳುಗಳನ್ನು ನಂಬುವ ಫ಼್ಯಾಸಿಸ್ಟ್ ಗುಂಪಾಗಿ ಬೆಳೆದದ್ದು ಇತಿಹಾಸ.” — ಪಿ. ಲಂಕೇಶ್ ( ಟೀಕೆ ಟಿಪ್ಪಣಿ – 3 ನೇ ಸಂಪುಟ)

“ಬಡವರ ರಕ್ತ ಹೀರುವ ಬ್ರಾಹ್ಮಣರು ಮತ್ತು ಸಾಧುಗಳನ್ನು, ಹೆಣ್ಣು ಕುಲದ ಮೇಲೆ ದಬ್ಬಾಳಿಕೆ ನಡೆಸುವ ಮೇಲ್ಜಾತಿಯ ಪ್ರಭುತ್ವಕ್ಕೆ ಪ್ರತಿರೋಧ ತೋರಲು ಶೂದ್ರವರ್ಗ ತಲೆ ಎತ್ತಿ ನಿಲ್ಲುವುದು.” ಸ್ವಾಮಿ ವಿವೇಕಾನಂದ (“ಸಂಗ್ರಹ” ,  ಕಲ್ಕತ್ತ 1964)

“ದೇಶದಾದ್ಯಾಂತ ಕೋಮುಗಲಭೆಗಳು ಶೇಕಡ 65 ರಷ್ಟು ಇಳಿಮುಖವಾಗಿದ್ದರೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಕೋಮುಗಲಭೆಗಳು ಶೇಕಡ 90 ರಷ್ಟು ಜಾಸ್ತಿಯಾಗಿವೆ.” ನಿವೃತ್ತ ನ್ಯಾಯಾಧೀಶ ಸಲ್ಡಾನ ( 12.1.2012 ಡೆಕ್ಕನ್ ಹೆರಾಲ್ಡ್ ವರದಿ)

70ರ ದಶಕದಲ್ಲಿ ನಾವೆಲ್ಲ ಸರ್ಕಾರಿ ಸ್ಕೂಲಿನಲ್ಲಿ ಓದುತ್ತಿದ್ದಾಗ ಆಗ ಬೆಳಗಿನ ಹೊತ್ತಿನಲ್ಲಿ ನಮಗೆ ಶಾಲೆಯ ಆಟದ ಮೈದಾನದಲ್ಲಿ ದಿನಂಪ್ರತಿ ಕಾಣುವ ಒಂದು ಸಾಮಾನ್ಯ ದೃಶ್ಯವೆಂದರೆ ಖಾಕಿ ಚೆಡ್ಡಿ ಹಾಕಿಕೊಂಡು ಕವಾಯತು ಮಾಡುತ್ತಿದ್ದ ಸಣ್ಣ ಹುಡುಗರು ಹಾಗೂ ಯುವಕರು. ಇವರೆಲ್ಲರ ಮುಖದಲ್ಲಿ ಒಂದು ರೀತಿಯ ಕಠೋರತೆ ಇರುತಿತ್ತು. ನಮಗೆ ಆಶ್ಚರ್ಯವೆಂದರೆ ಈ ಕಠೋರತೆಗೆ ವಯಸ್ಸಿನ ಭೇದವಿರಲಿಲ್ಲ. ನಾವೆಲ್ಲ ಕುತೂಹಲದಿಂದ ಅವರ ಅಕ್ಕ ಪಕ್ಕ ಸುಳಿದಾಡುತ್ತಿದ್ದಾಗಲೆಲ್ಲ ಇವರಿಗೆಲ್ಲ ಮುಖಂಡನಾದವನು ಹೇಳುತ್ತಿದ್ದ “ಅವರೇನಾದರು ಎದುರಿಗೆ ಬಂದರೆ ನೀವು ಪ್ರತಿಯಾಗಿ ಅವರನ್ನು ದೃಷ್ಟಿಸಿ ನೋಡಿ, ಸದಾ ಕಾಲ ಕೈಯಲ್ಲಿ ಒಂದು ಕೋಲನ್ನು ಇಟ್ಟಿಕೊಳ್ಳಿ, ಏನಾದರೂ ನಿಮಗೆ ಸಂಶಯವೆನಿಸಿದರೆ ಆ ಕೋಲನ್ನು ಅವರ ಮೇಲೆ ಬೀಸಲು ಹಿಂದುಮುಂದು ನೋಡಬೇಡಿ” ಎಂಬ ಮಾತುಗಳು ನಮ್ಮ ಕಿವಿಗೆ ಬಿದ್ದು ನಮಗೆಲ್ಲ ಭಯಮಿಶ್ರಿತ ಕುತೂಹಲ. ಯಾರು ಅವರೆಂದರೆ? ಏಕೆ ಅವರ ಮೇಲೆ ದಂಡವನ್ನು ಬೀಸಬೇಕು? ಇತ್ಯಾದಿಯಾಗಿ ಆಗ ಶಾಲೆ ಹುಡುಗರಾಗಿದ್ದ ನಮ್ಮಲ್ಲಿ ಗೊಂದಲಗಳಿದ್ದವು.

ಏಳೆಂಟು ವರ್ಷಗಳ ಹಿಂದೆ ಪರಿಚಯದವರೊಬ್ಬರ ಮಗನೊಬ್ಬ ಈ ಆರ್.ಎಸ್.ಎಸ್. ನವರು ನಡೆಸುತ್ತಿದ್ದ ರೆಸಿಡೆನ್ಸಿ ಶಾಲೆಯೊಂದರಲ್ಲಿ ಓದುತ್ತಿದ್ದ. ಅವನನ್ನು “ಏನಯ್ಯ ಓದುವುದನ್ನು ಬಿಟ್ಟು ಮತ್ತೇನನ್ನು ಕಲಿಯುತ್ತಿದ್ದೀಯ” ಎಂದು ಕುತೂಹಲದಿಂದಲೇ ಕೇಳಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗ ಹೇಳಿದ್ದು” ನಮಗೆಲ್ಲ ಕವಾಯತನ್ನು, ಲಾಠೀ ಬೀಸುವುದನ್ನು, ಅವರೇನಾದರು ಎದುರಿಗೆ ಬಂದರೆ ಸರಿಯಾಗಿ ಲಾಠಿ ತಿರುಗಿಸಿ ಹೇಗೆ ಬೀಸಬೇಕು ಎಂದು ಕಲಿಯುತ್ತಿದ್ದೇನೆ.”

ಮೇಲಿನೆರೆಡು ಘಟನೆಗಳ ಅಂತರ ಸುಮಾರು 25 ರಿಂದ 27 ವರ್ಷಗಳು. ಎರಡು ತಲೆಮಾರು ಬದಲಾಗಿದೆ. ಆದರೆ ಸಂಘಟನೆ ಬದಲಾಗಿಲ್ಲ. ಆರ್.ಎಸ್.ಎಸ್. ಹಾಗೆಯೇ ಇದೆ.  ಚಿಂತನೆಗಳು ಬದಲಾಗಿಲ್ಲ. ಅಗ ಅವರೆಂದರೆ ಮುಸ್ಲಿಮರು. ಈಗಲೂ ಅವರೆಂದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು. ಇನ್ನೂ ನಾವು 20ರ ದಶಕಕ್ಕೆ ಹೋದರೂ ಕೂಡ ಅಷ್ಟೆ ಆಗ ಸಾವರ್ಕರ್ ಬರೆದ  “ಹಿಂದೂ ಅಂದರೆ ಯಾರು”?  ಎನ್ನುವ ವ್ಯಾಖ್ಯಾನದಿಂದ ಶುರುವಾದ ಇವರ ಹಿಂದೂ ಧರ್ಮದ ಮೇಲಿನ ಉಗ್ರಾಭಿಮಾನ ಹಾಗೂ ಪರಧರ್ಮದ ಬಗೆಗಿನ ಇನ್ನಿಲ್ಲದ ದ್ವೇಷದ ವಿಷವಾಹಿನಿ 80 ವರ್ಷಗಳ ನಂತರವೂ ಇಂದಿಗೂ ಹರಿಯುತ್ತಿದೆ ತಲೆಮಾರಿನಿಂದ ತಲೆಮಾರಿಗೆ. ಅಂತಹ ತೀವ್ರವಾದ ಸ್ವಾತಂತ್ರ್ಯ ಸಂಗ್ರಾಮದ ಆಂದೋಲನ ನಡುವೆಯೂ 1927 ರಲ್ಲಿ ನಾಗಪುರದಲ್ಲಿ  “ಹಿಂದೂ ಡಾಕ್ಟರ್ ಒಬ್ಬರ ಮನೆಯ ಮೇಲೆ ಯಾರೋ ಕೆಲವರು ಅಲ್ಲಾಹೋ ಅಕ್ಬರ್ ಎಂದು ಕೂಗುತ್ತಾ ಕಲ್ಲು ತೂರಾಟ ನದೆಸಿದರು” ಎಂದು ಗುಲ್ಲೆಬ್ಬಿಸಿ ಕೋಮುಗಲಭೆಯನ್ನು ಹುಟ್ಟು ಹಾಕುವುದರಿಂದ ಹಿಡಿದು 2012 ರ ಸಿಂಧಗಿಯಲ್ಲಿ ಶ್ರೀರಾಮ ಸೇನೆಯು ಪಾಕಿಸ್ತಾನ ಬಾವುಟ ಹಾರಿಸಿ ಮತ್ತೊಂದು ಕೋಮುಗಲಭೆಗಳಿಗೆ ಸಂಚು ರೂಪಿಸುವವರೆಗೂ 85 ವರ್ಷಗಳ ಇವರ ಈ ಕರ್ಮಕಾಂಡದ ಇತಿಹಾಸವಿದೆ. ತಮ್ಮ ಅನೇಕ ಚಿಂತನ ಮಂಥನ ಕಾರ್ಯಕ್ರಮಗಳಲ್ಲಿ, ಬೈಠಕ್ ಗಳಲ್ಲಿ ಇವರೆಂದೂ ಸಮಕಾಲೀನ ವಿಷಯಗಳನ್ನಾಗಲಿ, ಚಿಕಿತ್ಸಕ ದೃಷ್ಟಿಕೋನಗಳ ಸಂವಾದಗಳಾಗಲಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬಗೆಗೆ ಶಿಕ್ಷಣವಾಗಲಿ ಕಳೆದ 80 ವರ್ಷಗಳ ಆರ್.ಎಸ್.ಎಸ್. ಇತಿಹಾಸದಲ್ಲಿ ನಡೆದ ಪುರಾವೆಯೇ ಇಲ್ಲ. ಸಂಪೂರ್ಣ ಪುರುಷ ಕೇಂದ್ರಿತ ಸಂಘಟನೆಯನ್ನಾಗಿ ರೂಪಿಸಿಕೊಂಡಿರುವ ಆರ್.ಎಸ್.ಎಸ್. ಎಂದು ಪ್ರಗತಿಪರವಾಗಿ ಕ್ಷೀಣ ಧ್ವನಿಯನ್ನು ಹೊರಡಿಸುವ ಯಾವ ಅವಕಾಶವನ್ನೂ ಅದು ನೀಡಿಲ್ಲ. ಅಲ್ಲಿ ಪ್ರಶ್ನೆಗಳೇ ಇಲ್ಲ. ಇರುವುದು ಒಂದೇ ಅದು ಕೇವಲ ಹಿಂದೂಗಳನ್ನೊಳಗೊಂಡ ಆಖಂಡ ಭಾರತದ ಮಂತ್ರ ಜಪ. ಜಾತಿ ವಿನಾಶದ ಮಾತು ಬಿಡಿ ಅದು ದೂರ ಉಳಿಯಿತು, ಇಂದಿಗೂ ತಮ್ಮ ಹಿಂದೂ ಧರ್ಮದ ಅಡಿಯಲ್ಲಿ ಜರುಗುತ್ತಿರುವ ಬಾಲ್ಯ ವಿವಾಹಗಳು, ಮಡೆ ಸ್ನಾನದಂತಹ ಮೂಢ ಆಚರಣೆಯ ಬಗ್ಗೆ, ಅಂತರ್ಜಾತಿ ವಿವಾಹಿತರನ್ನು ಮರ್ಯಾದೆಯ ಹೆಸರಿನಲ್ಲಿ ಸಾಯುಸುತ್ತಿರವುದರ ಬಗೆಗೆ  ಯಾವ ಆರ್.ಎಸ್.ಎಸ್. ಸ್ವಯಂಸೇವಕರೂ, ಮುಖಂಡರೂ ಬಾಯಿಬಿಟ್ಟಿಲ್ಲ. ಟೀಕಿಸಿಲ್ಲ. ಇದು ಇವರ ಹಿಂದೂ ಧರ್ಮದ ಪುನರುತ್ಥಾನ ಪರಿ!! ಇದೇ ಜನ ಸಮಯ ಸಿಕ್ಕಾಗಲೆಲ್ಲ ಶಾಬಾನು ಪ್ರಕರಣ, ಇಸ್ಲಾಂನ ಮೌಢಾಚರಣೆಗಳು, ಅಲ್ಲಿನ ಬುರ್ಖಾ ಪದ್ಧತಿಗಳ ಬಗ್ಗೆ ಪುಂಖಾನುಪಂಖವಾಗಿ ಕೂಗುತ್ತಿರುತ್ತಾರೆ.

ಇದು ಇವರ ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೆ ಬೇರೆಯವರ ಎಲೆಯಲ್ಲಿ ನೊಣ ಓಡಿಸುವ ಶೈಲಿ. ಇದರ ಜೊತೆಗೆ  “ತಂದೆ ತಾಯಿ, ಗೌರವಿಸಿ, ಪರಂಪರೆ ಶ್ರೇಷ್ಟತೆಯನ್ನು ಮರೆಯಬೇಡಿ ಸಂಪ್ರದಾಯ ನಮ್ಮ ಬದುಕಿನ ತಳಪಾಯ” ಎನ್ನುವ ಸಿಹಿಲೇಪಿತ ಮಾತುಗಳ ಮೂಲಕ ಮುಗ್ಧ ಮೋಡಿಗೊಳಗಾದ ತಂದೆ ತಾಯಿಗಳು ಅಲ್ಲಿ ತಮ್ಮ ಮಕ್ಕಳು ಶಿಷ್ಟವಂತರಾಗಿಯೂ, ಸಹನಶೀಲರಾಗಿಯೂ ರೂಪಿತಗೊಳ್ಳುತ್ತಾರೆ ಎನ್ನುವ ಕನಸಿನೊಂದಿಗೆ ಆರ್.ಎಸ್.ಎಸ್. ಸಂಪರ್ಕಕ್ಕೆ ಬಿಡುತ್ತಾರೆ. ನಂತರ ಈ  ತಮ್ಮೆಲ್ಲ ಮೇಲಿನ ದ್ವೇಷಪೂರಿತ ಚಿಂತನೆಗಳನ್ನು ಬಹುಸಂಖ್ಯಾತ ಹಿಂದೂಗಳಲ್ಲಿ ಸದಾಕಾಲ ತುಂಬಿರುವಂತೆ ಮಾಡಲು ಇವರು ಬಳಸಿಕೊಳ್ಳುವುದು ಕಡಲಾಚೆಯಿಂದ ಬಂದ ಮೊಘಲರ ಆಕ್ರಮಣ. ಇದು ಕೇವಲ ರಾಜ್ಯ ವಿಸ್ತರಣೆ, ಅಧಿಕಾರ ಕಬಳಿಕೆಯ ಭಾಗವಾಗಿದ್ದ  ಈ ಯುದ್ದಗಳನ್ನು ಅಸಹಿಷ್ಣತೆ ಹಾಗೂ ಮುಸ್ಲಿಂ ದ್ವೇಷದ ಚಿಂತನೆಗಳನ್ನಾಗಿ ರೂಪಿಸಿರುವುದರಿಂದ ಶುರುವಾಗಿ ನಂತರ ದೇಶಾಭಿಮಾನದ ಹೆಸರಿನಲ್ಲಿ ಪಾಕಿಸ್ತಾನವನ್ನು ನೆಪ ಮಾಡಿಕೊಂಡು ಎರಡು ಧರ್ಮಗಳ ಮಧ್ಯೆ ಹುಟ್ಟು ಹಾಕಿದ ಕಂದಕಗಳು, ಕೊನೆಗೆ ಗುಜರಾತ್ ನಲ್ಲಿ ಮುಸ್ಲಿಂರ ಹತ್ಯಾಕಾಂಡಕ್ಕೆ ತಲುಪಿ ಇದರ ರೂವಾರಿ ನರೇಂದ್ರ ಮೋದಿ “ಮಿಯ್ಯಾ ಮುಶ್ರಾಫ್, ಮೇಡಮ್ ಮೇರಿಅಮ್, ಮೈಖೆಲ್ ಲಿಂಗ್ಡೋ” ಎಂದು ಅತ್ಯಂತ ಕ್ರೂರವಾಗಿ ಮಾತನಾಡುವಷ್ಟರ ಮಟ್ಟಿಗೆ ಬಂದು ತಲುಪಿದೆ.

ಈ ಆರ್.ಎಸ್.ಎಸ್. ಗುಂಪಿಗೆ ಈ ಮುಸ್ಲಿಂದ್ವೇಷದ ಮೂಲಭೂತ ಕಾರಣ ಇವರಿಗೆ ತಮ್ಮ ಹಿಂದೂ ಧರ್ಮದ ಮೇಲಿರುವ ಅತ್ಯಂತ ಅಪಾಯಕಾರಿಯಾದ, ಆತಂಕಕಾರಿಯಾದ, ಜೀವವಿರೋಧಿಯಾದ ಅತ್ಯುಗ್ರ ಅಭಿಮಾನ. ಈ ಸದರಿ ಧರ್ಮದಲ್ಲಿ ಅಂತರ್ಗತವಾಗಿರುವ ಜಾತೀಯತೆಯ ಕ್ರೌರ್ಯದ ಬಗ್ಗೆ, ತಳ ಸಮುದಾಯಗಳ ಶೋಷಣೆಯ ಬಗ್ಗೆ ಈ ಆರ್.ಎಸ್.ಎಸ್. ನವರಿಗೆ ಇರುವ ಅಪಾರ ನಂಬುಗೆ. ಪುರೋಹಿತಶಾಹಿಗಳ ಅಮಾನವೀಯ ಚಿಂತನೆಗಳ ಬಗ್ಗೆ ಇನ್ನಿಲ್ಲದ ಭಕ್ತಿ. ಸಾರ್ವಜನಿಕ ಜೀವನದಲ್ಲಿ ಧಾರ್ಮಿಕತೆಯನ್ನು ಬಳಸುವುದಕ್ಕೆ ಇನ್ನಿಲ್ಲದ ಉತ್ಸಾಹ, ಆವೇಶಗಳನ್ನು ತೋರುವ ಆರೆಸಸ್ ಅದಕ್ಕಾಗಿ ಅವರು ಆಶ್ರಯಿಸುವುದು ವೇದ,ಪುರಾಣಗಳನ್ನು, ಅಲ್ಲಿಂದ ಅವರು ಹೆಕ್ಕಿಕೊಳ್ಳುವುದು ಮನುವಾದಿ, ಸನಾತನ ಧರ್ಮದ ಹುಸಿ ಶ್ರೇಷ್ಟತೆಯನ್ನು ಸಾರುವ ಅಮಾನವೀಯ ವೈದಿಕ ಚಿಂತನೆಗಳನ್ನು. ಭ್ರಾಹ್ಮಣ ಮಠಗಳನ್ನು. ಆದರೆ  ತಮ್ಮ ಜೀವನವನ್ನೇ ಪ್ರಯೋಗವನ್ನಾಗಿ ಮಾಡಿಕೊಂಡು ಧಾರ್ಮಿಕತೆಯನ್ನು ಬಳಸಿ ಅಧ್ಯಾತ್ಮದ ವಿವಿಧ ಮಜಲುಗಳನ್ನು, ಅದೇ ಅಧ್ಯಾತ್ಮವನ್ನು ಬಳಸಿ ಸತ್ಯದ ವಿವಿಧ ಮುಖಗಳನ್ನು ನಿರಂತರವಾಗಿ ಶೋಧಿಸಿದ “ರಾಮಕೃಷ್ಣ ಪರಮಹಂಸ”ರನ್ನು ಆರ್.ಎಸ್.ಎಸ್. ನವರು ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಏಕೆಂದರೆ ಪ್ರತಿಯೊಂದು ಚಿಂತನೆಗಳೂ ಸತ್ಯಶೋಧನೆಗೊಳಪಡಲೇಬೇಕು, ನಿಕಷನಕ್ಕೆ, ಪ್ರಯೋಗಗಳಿಗೆ ಒಳಪಟ್ಟು ಆ ಪ್ರಯೋಗದಲ್ಲಿ ಬೆಂದು ಹೊರಬಂದಂತಹ ತತ್ವಮೀಮಾಂಸೆಯನ್ನು ಮಾತ್ರ ರಾಮಕೃಷ್ಣ ಪರಮಹಂಸರು ಒಪ್ಪಿಕೊಳ್ಳುತ್ತಿದ್ದರು. ಇದಕ್ಕಾಗಿಯೇ ಅಲ್ಲವೆ ಅನೇಕ ಪ್ರಯೋಗಗಳ ನಂತರ ಪರಮಹಂಸರು ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗಳನ್ನು ಕೂಡ ಆಚರಿಸುತ್ತಿದ್ದರು. ಇವರು ಹೇಳುತ್ತಿದ್ದುದು ಎಲ್ಲಾ ದೇವರು ಒಂದೇ. ಇದೆಲ್ಲ ಆರೆಸಸ್ ನವರಿಗೆ ಅರಗಿಸಿಕೊಳ್ಳಲೂ ಸಾಧ್ಯವಾಗದು. ಇವರು ಪರಮಹಂಸರ ಈ ಸಂಕೀರ್ಣತೆಯ ಆಧ್ಯಾತ್ಮವನ್ನು ಮುಟ್ಟದೆ ಪರಮಹಂಸರ ಪ್ರಿಯ ಶಿಷ್ಯರಾದ ವಿವೇಕಾನಂದರನ್ನು ಗಟ್ಟಿಯಾಗಿ ಹಿಡಿದುಕೊಂಡರು. ವಿವೇಕಾನಂದರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಸರ್ವಧರ್ಮ ಸಮಾನತೆ, ಭ್ರಾತೃತ್ವ ಮನೋಧರ್ಮಕ್ಕೆ ಸಂಘಪರಿವಾರದವರು ಸಂಪೂರ್ಣ ತಿಲಾಂಜಲಿಯನ್ನು ಕೊಟ್ಟು, ವಿವೇಕಾನಂದರು ಪ್ರತಿಪಾದಿಸಿದ ನ್ಯಾಯ,ನೀತಿಗಳನ್ನೊಳಗೊಂಡ, ಮಾನವೀಯತೆಯ ದೇಶಪ್ರೇಮವನ್ನು ಅತ್ಯಂತ ಋಣಾತ್ಮವಾಗಿ ಬಳಸಿಕೊಂಡು ವಿವೇಕಾನಂದರ ಜೀವಪರ ಚಿಂತನೆಗಳನ್ನೇ ಅಪಮೌಲ್ಯಗೊಳಸಿದರು. ಇಂದು ಬಲಪಂಥೀಯರು ಮಾನವತಾವಾದಿ ವಿವೇಕಾನಂದರನ್ನು ತಮಗೆ ಬೇಕಾದ ಹಾಗೆ ಒಗ್ಗಿಸಿಕೊಂಡ ರೀತಿನೀತಿಗಳೇ ಖಂಡನೆಗೆ, ತಿರಸ್ಕಾರಕ್ಕೆ ಅರ್ಹವಾದವುಗಳು. ಕಳೆದ ಅನೇಕ ದಶಕಗಳಿಂದ ಪ್ರಗತಿಪರ ಚಿಂತಕರು ಇದನ್ನು ಸಾಕ್ಷಿ ಸಮೇತ ಹೇಳುತ್ತಾ ಬಂದಿದ್ದಾರೆ.

ಆದರೆ ಬದಲಾದ ಕಾಲಘಟ್ಟದಲ್ಲಿ, ದೇಶ ಸ್ವಂತಂತ್ರಗೊಂಡನಂತರ ನೆಹರೂ ಹಾಗೂ ಅಂಬೇಡ್ಕರ್ ರವರು ಭಾರತ ದೇಶವನ್ನು ಜಾತ್ಯಾತೀತ, ಸೆಕ್ಯುಲರ್ ರಾಷ್ಟ್ರವನ್ನಾಗಿಯೂ, ಇಲ್ಲಿ ಸರ್ವಧರ್ಮಗಳಿಗೆ ಸಮಾನ ಅವಕಾಶವನ್ನು ನೀಡಿ ಸಂವಿಧಾನವೇ ಈ ದೇಶದ ಅಧಿಕೃತ ಕಾನೂನನ್ನಾಗಿಯೂ, ಇದಕ್ಕೆ ಸದಾಕಾಲ ಕಾವಲಾಗಿ ನ್ಯಾಯಾಂಗ ಹಾಗೂ ಶಾಸಕಾಂಗ ಇರುವಂತೆ ಶಾಸನವನ್ನು ರೂಪಿಸಿ ಭಾರತವನ್ನು ಒಂದು ಮಾದರಿ ಗಣತಂತ್ರ ದೇಶವನ್ನಾಗಿಯೂ ರೂಪಿಸಿಬಿಟ್ಟರು. ಇದು 50ರ ದಶಕದಲ್ಲಿ  ಆರ್.ಎಸ್.ಎಸ್. ಮುಂದಾಳುಗಳಿಗೆ ಇನ್ನಿಲ್ಲದ ಅಘಾತವನ್ನುಂಟುಮಾಡಿತ್ತು. ಅತ್ಯಂತ ಕುತೂಹಲದ ವಿಷಯವೆಂದರೆ ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೂ ನಡೆದ ಕೋಮುಗಲಭೆಗಳಲ್ಲಿ ಆರ್.ಎಸ್.ಎಸ್. ಎಂದೂ ಮುಂಚೂಣಿಯಲ್ಲಿ ಇರಲೇ ಇಲ್ಲ ಹಾಗೂ ಇರುತ್ತಲೂ ಇಲ್ಲ!. ತನ್ನನ್ನು ತಾನು ಸಾಂಸ್ಕ್ರತಿಕ ಸಂಘಟನೆಯಾಗಿ ಮಾತ್ರ ಐಡೆಂಟಿಟಿ ಉಳಿಸಿಕೊಂಡು ತನ್ನ ಎಲ್ಲ ಮೇಲಿನ ಕರ್ಮಠ ಚಿಂತನೆಗಳಿಗೆ,  ಬೌದ್ಧಿಕ  ಪ್ರಚಾರಕ್ಕಾಗಿ ತನ್ನ ಶಾಖಾ ಮಠಗಳನ್ನು ಬಳಸಿಕೊಂಡು ಈ ಅಸಹಿಷ್ಣುತೆಯ ಕರ್ಮಠ ಚಿಂತನೆಗಳನ್ನು ಬಹಿರಂಗವಾಗಿ ವ್ಯವಸ್ಥೆಯಲ್ಲಿ ಪ್ರಯೋಗಿಸಲು ಹಾಗೂ ತಮ್ಮ ಈ ಹಿಂಸಾತ್ಮಕ ಕಾರ್ಯಸಾಧನೆಗಾಗಿ ಇದು ಬಳಸಿಕೊಂಡಿದ್ದು ಶೂದ್ರ ಹಾಗು ಹಿಂದುಳಿದ ಸಮುದಾಯಗಳನ್ನ. ಇದಕ್ಕೆ ಸಾಕ್ಷಿಯಾಗಿ ಸ್ವತಂತ್ರ ಭಾರತದಲ್ಲಿ ಕಳೆದ 64 ವರ್ಷಗಳಲ್ಲಿ ನಡೆದ ಕೋಮುಗಲಭೆಗಳಲ್ಲಿ, ದೊಂಬಿಗಳಲ್ಲಿ ಆರ್.ಎಸ್.ಎಸ್. ಗೆ ಸೇರಿದ ಯಾವುದೇ ಸಂಘ ಪ್ರಚಾರಕನೂ, ಸ್ವಯಂಸೇವಕನೂ ಹಾಗೂ ಸದಸ್ಯನೂ ಆರೋಪಿಯಾಗಿಲ್ಲ ಹಾಗೂ ಯಾವುದೇ ರೀತಿಯ ನ್ಯಾಯಾಂಗ ವಿಚಾರಣೆಗೂ ಒಳಗಾಗಿಲ್ಲ. ಆದರೆ ಇವರ ಬೂಟಾಟಿಕೆಯ, ತಮ್ಮ ಕಾರ್ಯ ಸಾಧನೆಗಾಗಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕುತಂತ್ರಕ್ಕೆ ಬಲಿಯಾದದ್ದು  ಹಿಂದುಳಿದ, ದಲಿತ ಸಮುದಾಯ. ಇವರನ್ನು ತಮ್ಮ ಮಾತೃ ಸಂಘಟನೆ ಭ್ರಾಹ್ಮಣಶಾಹೀ ವ್ಯಕ್ತಿತ್ವದ ಆರ್.ಎಸ್.ಎಸ್. ಒಳಗೆ ಕೂಡ ಬಿಟ್ಟುಕೊಳ್ಳದೆ ಇವರಿಗೋಸ್ಕರ ವಿ.ಎಚ್.ಪಿ., ಬಜರಂಗದಳಗಳನ್ನು ಹುಟ್ಟಿಹಾಕಿ ಇವರ ಈ  ಸಂಘಟನೆಗೆ ಸೇರಿದ ಅಮಾಯಕ ಹಿಂದುಳಿದ ಸಮುದಾಯದ ಹುಡುಗರೆಲ್ಲ ಕಳೆದ 40 ವರ್ಷಗಳಿಂದ ಕೋಮು ಗಲಭೆಗಳಲ್ಲಿ, ನ್ಯಾಯಾಂಗ ವಿಚಾರಣೆಗಳಲ್ಲಿ ಸಿಲುಕಿಕೊಂಡು ನಾಶವಾಗಿದ್ದಾರೆ, ಜೀವ ತೆತ್ತಿದ್ದಾರೆ.

ಇಷ್ಟೆಲ್ಲ ಚರ್ವಿತ ಚರ್ವಣ ವಿಷಯಗಳನ್ನು ಅನಿವಾರ್ಯವಾಗಿ ಈಗಲೂ ವಿಧಿ ಇಲ್ಲದೆ ಪದೇ ಪದೇ ಹೇಳಲೇಬೇಕಾಗಿದೆ. ಏಕೆಂದರೆ:

ಮೊದಲನೆಯದಾಗಿ ಇತ್ತೀಚೆಗೆ ಕಾನೂನಿನ ಕುಣಿಕೆ ಬಲವಾಗುತ್ತಿರುವುದನ್ನು ಗಮನಿಸಿರುವ ಸಂಘ ಪರಿವಾರಕ್ಕೆ, ತಮ್ಮ ಎಂದಿನ ಪರಧರ್ಮ ಅಸಹಿಷ್ಣುತೆಯ, ಅಲ್ಪಸಂಖ್ಯಾತ ದ್ವೇಷದ ಮಾಮೂಲಿ ರಾಗಗಳು ಎಂದಿನ ಪ್ರತಿಫಲವನ್ನು ತಂದುಕೊಡುತ್ತಿಲ್ಲ ಎನ್ನುವುದು ಮನವರಿಕೆಯಾಗತೊಡಗಿದೆ. ತಮ್ಮ ಹಳೇ ಚಾಳಿಯನ್ನು ನೇರವಾಗಿಯೇ ಮುಂದುವರಿಸಿದರೆ ನ್ಯಾಯಾಲಯದ ಕಟಕಟೆ ಹತ್ತುವ ಸಾಧ್ಯತೆಗಳು ಹಿಂದೆಂದಿಗಿಂತಲೂ ಈಗ ಜಾಸ್ತಿ ಎನ್ನುವ ಜ್ನಾನೋದಯ, ಸಾವಿರಾರು ಸುಳ್ಳುಗಳನ್ನು ಹೇಳಿ ತಾವು ಅತ್ಯಂತ ಜತನದಿಂದ ಬೆಳೆಸಿದ ಮಧ್ಯಮವರ್ಗ ಹಾಗು ಅವರ ಮೃದು ಬಲಪಂಥೀಯ ನಿಲುವುಗಳು ಹಾಗೂ ಒಂದು ರೀತಿಯಲ್ಲಿ ಧರ್ಮವನ್ನು ಅಫೀಮಿನಂತೆ ಬಳಸಿ ದೇಶದ ಉದ್ದಗಲಕ್ಕೂ ಹಬ್ಬಿದ್ದ ಅದರ ಅಮಲು ಕ್ರಮೇಣ ಕ್ಷೀಣವಾಗುತ್ತಿದೆಯೇನೋ ಎನ್ನುವ ಆತಂಕ ಈ ಸಂಘ ಪರಿವಾರದ ಯಜಮಾನನಿಗೆ. ಆ ಕಾರಣಕ್ಕಾಗಿಯೇ ಇದನ್ನು ಮುಂಚಿನಂತೆ ನೇರವಾಗಿ ಹಾಡುತ್ತಿಲ್ಲ. ಬದಲಾಗಿ ತಮ್ಮ ಎಂದಿನ ಕುಖ್ಯಾತ ಗುಪ್ತ ಕಾರ್ಯಸೂಚಿಗಳಿಗೆ ಮೊರೆ ಹೋಗಿದ್ದಾರೆ. ಕೆಲವು ಉದಾಹರಣೆಗಳು:

1. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತಮ್ಮ ಕೆಲವು ಅಂಗ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದೂ ಧರ್ಮದ ಮೇಲರಿಯಮೆಯನ್ನು ಸಾರುವ ಪುಸ್ತಕಗಳನ್ನು ವಿತರಿಸಿ ವಿಧ್ಯಾರ್ಥಿಗಳನ್ನು ತಮ್ಮ ಜಾಲಕ್ಕೆ ಬಗ್ಗಿಸುವುದು. ವಿಶ್ವೇಶ್ವರ ಹೆಗಡೆ ಕಾಗೇರಿಯಂತಹ ಪರಮ ಆರ್.ಎಸ್.ಎಸ್. ಸ್ವಯಂಸೇವಕರು ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳುವಂತೆ (ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕಟ್ಟಾ ಆರ್.ಎಸ್.ಎಸ್. ಮುರುಳಿ ಮನೋಹರ ಜೋಶಿಯವರು ಶಿಕ್ಷಣ ಮಂತ್ರಿಯಾಗಿದ್ದರು) ನೋಡಿಕೊಂಡು ಈ ಕಾಗೇರಿಯಂತಹ ಸ್ವಯಂಸೇವಕರ ಕೈಯಲ್ಲಿ ಪದೇ ಪದೇ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತೇವೆ ಎನ್ನುವ ಹೇಳಿಕೆ ಕೊಡಿಸುವುದು, ಶಾಲೆಗಳಲ್ಲಿ ಯೋಗಭ್ಯಾಸವನ್ನು ಪಠ್ಯವನ್ನಾಗಿ ಅಳವಡಿಸಬೇಕೆಂದು ಪದೇ ಪದೇ ರಾಗ ಹಾಡಿಸುವುದು, ಭಗವದ್ಗೀತೆಯ ಅಭಿಯಾನ ಎನ್ನುವ ಮರೆ ಮೋಸದ ಮೂಲಕ ತಮ್ಮ ಪರಧರ್ಮ ದ್ವೇಷದ, ಪುರೋಹಿತಶಾಹಿ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವುದು. ನಂತರ ಸದಾನಂದ ಗೌಡರಂತಹ   ದುರ್ಬಲ ಮುಖ್ಯಮಂತ್ರಿಯ ಮೂಲಕ ಭಗವದ್ಗೀತೆಯ ಪಾಠವನ್ನು ಸರ್ಕಾರೀ ಶಾಲೆಗಳಲ್ಲಿ ಅಳವಡಿಸುತ್ತೇವೆ ಎಂದು ಹೇಳಿಸಿ ಅದರ ಪರಿಣಾಮಗಳನ್ನು ಕಾದು ನೋಡುವುದು, ಹಾಗೂ ಆ ಮೂಲಕ ಒಂದು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವುದು. ನಂತರ ತಮ್ಮ ರಾಷ್ಟ್ರೋತ್ಥಾನ ಪರಿಷತ್ತಿನ ಮೂಲಕ  “ತಮ್ಮ ಅಖಂಡ ಹಿಂದೂ ಧರ್ಮವನ್ನು”  ಸಾರುವ ಪುಸ್ತಕಗಳನ್ನು ಪಠ್ಯಪುಸ್ತಕಗಳನ್ನಾಗಿ ರೂಪಿಸುವುದು. ಆದರೆ ವೈಚಾರಿಕವಾಗಿ ಅತ್ಯಂತ ಗಟ್ಟಿಯಾಗಿರುವ ಕರ್ನಾಟಕದಂತಹ ನೆಲದಲ್ಲಿ ಇವರ ಈ ಗುಪ್ತ ಕಾರ್ಯಾಚರಣೆಗೆ ಅವಕಾಶವೇ ದೊರೆತಿಲ್ಲ ಹಾಗೂ ಇಲ್ಲಿನ ಪ್ರಗತಿಪರ ಸಂಘಟನೆಗಳು ಅದಕ್ಕೆ ಮುಂದೆಯೂ ಅವಕಾಶ ಕೊಡುವ ಸಾಧ್ಯತೆಗಳೂ ಕಡಿಮೆ. ಇಷ್ಟರ ಮಟ್ಟಿಗೆ ನಮ್ಮ ರಾಜ್ಯ ಇವರ ವಿಷಮಯವಾದ ರೀತಿನೀತಿಗಳಿಂದ ಮುಕ್ತವಾಗಿದೆ.

2.  ಎಂದಿನಂತೆ ಹಳೇ ಬಾಣವಾದ ಗೋಹತ್ಯೆ ನಿಷೇಧವನ್ನು ಇನ್ನಿಲ್ಲದಂತೆ ಉಗ್ರವಾಗಿ ಪ್ರತಿಪಾದಿಸುತ್ತ,(ಈಶ್ವರಪ್ಪರಂತಹ ಹುಂಬ ಶೂದ್ರರ ಮುಖಾಂತರ ಯಾರಾದರೂ ವಿರೋಧಿಸಿದರೆ ನಾಲಿಗೆ ಸೀಳಲಾಗುತ್ತದೆ ಎಂದು ಫತ್ವ ಹೊರಡಿಸುವುದು)  ಇದು ಸಮಾಜದ ಜೀವನ್ಮರಣದ ಪ್ರಶ್ನೆಯನ್ನಾಗಿಸಿ ಇನ್ನಿಲ್ಲದ ವಿಷಮಯ ವಾತಾವರಣ ನಿರ್ಮಿಸುವುದು.

3. ಮತಾಂತರದ ಬಗೆಗಿನ ಉದ್ವೇಗ, ಭಯವನ್ನು ಹುಟ್ಟಿಹಾಕಿ ಈ ಸಿಂಡ್ರೋಮ್ ಜನರಲ್ಲಿ ಸದಾಕಾಲ ನೆಲೆ ನಿಲ್ಲುವಂತೆ ಅನೇಕ ಪುಕಾರುಗಳನ್ನು ಹಬ್ಬಿಸುತ್ತಾ ನಂತರ ಅಲ್ಪ ಸಂಖ್ಯಾತರ ಮೇಲೆ ತಮ್ಮ ಅಂಗ ಸಂಸ್ಥೆಗಳ ಮೂಲಕ ದಬ್ಬಾಳಿಕೆಗಳನ್ನು ಕಾಲಕಾಲಕ್ಕೆ ನಡೆಸುತ್ತಾ ಬರುವುದು ಹಾಗೂ ಈ ಪ್ರಕ್ರಿಯೆ ನಿರಂತರವಾಗಿರುವಂತೆ ನೋಡಿಕೊಳ್ಳುವುದು.

4. ಬಲಪಂಥೀಯ ಪತ್ರಕರ್ತರ ಮೂಲಕ ಯಶಸ್ವಿಯಾಗಿ ಮಾಧ್ಯಮಗಳ ಮೂಲಕ ಹಿಂದೂಗಳ, ಹಿಂದೂ ಧರ್ಮದ ಶ್ರೇಷ್ಟತೆಯ ಹಸೀ ಹಸೀ ಸುಳ್ಳುಗಳನ್ನು ಬಿಟ್ಟೂ ಬಿಡದೆ ಕೂಗುಮಾರಿಯ ರೀತಿಯಲ್ಲಿ ಪುಂಖಾನುಪುಂಖವಾಗಿ ಬರೆಸುತ್ತಾ ಇಲ್ಲಿ ಈ ದೇಶ  ಬದುಕಿರುವುದೇ ಒಂದು ಪವಾಡದಿಂದ ಎನ್ನುವ ಭ್ರಮೆಗಳನ್ನು ಹುಟ್ಟಿಸುವುದು.

ಮೇಲಿನ ಎಲ್ಲಾ ಉದಾಹರಣೆಗಳ ಮೂಲಕ ತಮ್ಮ ಪ್ರೈಜ್ ಕ್ಯಾಚ್ ಆದಂತಹ ಮಧ್ಯಮವರ್ಗ, ಮೇಲ್ಮಧ್ಯಮವರ್ಗ, ಮೇಲ್ಜಾತಿಗಳು, ವರ್ತಕರು ಹೀಗೆ ತಮ್ಮ ಸಹಜ ಅಭಿಮಾನಿಗಳನ್ನು ಮತ್ತೆ ಟ್ರ್ಯಾಪ್ ಮಾಡುವುದು. ಆ ಮೂಲಕ ಬಿಜೆಪಿಗೆ ಮತ್ತೆ ಅಧಿಕಾರದ ಗದ್ದುಗೆಗೆ ಕುಳ್ಳಿರಿಸುವುದು.

ಇಷ್ಟೆಲ್ಲ ಪ್ರತಿಗಾಮಿ ನೀತಿಗಳನ್ನುಳ್ಳ ಆರ್.ಎಸ್.ಎಸ್. ನವರು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಂವಿಧಾನ ಬಾಹಿರವಾದ ಅಧಿಕಾರವನ್ನು ಬಳಸುತ್ತಾರೆ, ಅವರು ತಮ್ಮ ಕೇಶವಕೃಪ, ಗರ್ಭಗುಡಿಗೆ ಜನರಿಂದ, ಜನರಿಗಾಗಿ ಆಯ್ಕೆಗೊಂಡ ಶಾಸಕರನ್ನ, ಮಂತ್ರಿಗಳನ್ನ,ಮುಖ್ಯಮಂತ್ರಿಗಳನ್ನ ಕರೆಸಿಕೊಂಡು ಶಿಷ್ಯಂದಿರಂತೆ ಇವರನ್ನು ನಡೆಸಿಕೊಳ್ಳುತ್ತಾ, ಅನೇಕ ರೀತಿಯ ಸರ್ಕಾರಿ ನಿರ್ಧಾರಗಳಲ್ಲಿ ಹಸ್ತಕ್ಷೇಪಗೊಳಿಸುತ್ತಾ ಪ್ರಜಾಪ್ರಭುತ್ವದ ಮೂಲ ನೀತಿಗಳನ್ನೇ ನಿರ್ನಾಮ ಮಾಡುತ್ತಾರೆ. ನಮ್ಮ ಕರ್ನಾಟಕದಲ್ಲಿ ಈಗ ಕಳೆದ ಕೆಲವು ವರ್ಷಗಳಿಂದ ಅದರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಆರ್.ಎಸ್.ಎಸ್. ಹಲವಾರು ಬಾರಿ ಕಿಂಗ್ ಮೇಕರ್ ಪಾತ್ರ ವಹಿಸುತ್ತಿರುವುದೂ, ಅನೇಕ ವೇಳೆ ಆಡಳಿತದಲ್ಲಿ ತನ್ನ ಹಸ್ತಕ್ಷೇಪವನ್ನು ನಡೆಸುತ್ತಾ ಆ ಮೂಲಕ ತನ್ನ ಪ್ರಭಾವ ಬಳಸಿಕೊಂಡು ತನ್ನ ಅಂಗ ಸಂಸ್ಥೆಗಳು ನಡೆಸುತ್ತಿರುವ ಕೋಮುವಾದಿ ಶಿಕ್ಷಣಕ್ಕೆ ಭರಪೂರು ಅನುದಾನವನ್ನು ಪಡೆದುಕೊಳ್ಳುತ್ತಾ, ಕಳೆದ 3 ವರ್ಷಗಳಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರ ಸದಾಕಾಲ ಒಂದಿಲ್ಲೊಂದು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಾಗ ತಾನು ಸಂಧಾನಕಾರನಾಗಿಯೂ  ಭಾಗವಹಿಸುತ್ತಾ ತನ್ನ ಸುತ್ತ ಒಂದು ಪ್ರಭಾವಳಿಯನ್ನು ನಿರ್ಮಿಸಿಕೊಂಡಿರುವುದೂ, ಯಾವ ಯಾವ ಶಾಸಕರು ಮಂತ್ರಿಯಾಗಬೇಕೆಂದು ಅವಶ್ಯಕತೆ ಇದ್ದರೆ ಹೇಳುತ್ತೇನೆ ಎನ್ನುವಂತಹ ಪ್ರಭಾವಳಿಗಳ ಮೂಲಕ ತನ್ನ ಕೇಶವ ಕೃಪದಲ್ಲಿ ಆಡಳಿತದ ರೀತಿನೀತಿಗಳನ್ನು ರೂಪಿಸುತ್ತದೆ. ಈ ಮೂಲಕ ಬಿಜೆಪಿ ಸರ್ಕಾರದ, ಮಂತ್ರಿಮಂಡಲದ ಎಲ್ಲಾ ನಿರ್ಣಯಗಳೂ ತನ್ನ ಕಣ್ಣಳತೆಯಲ್ಲಿ ಜರಗುವ ಒಂದು ಸ್ವಾರ್ಥ ವ್ಯವಸ್ಥೆಯನ್ನು,ತನ್ನ ಸುತ್ತಲೂ ಇನ್ನಿಲ್ಲದ ಪ್ರಭಾವಳಿಯನ್ನು ನಿರ್ಮಿಸಿಕೊಳ್ಳುತ್ತದೆ. ಇವರು ಈ ಮೂಲಕ ಸಂವಿಧಾನದಡಿಯಲ್ಲಿ  ಆಯ್ಕೆಗೊಂಡ ಒಂದು ಪ್ರಜಾಸತ್ತಾತ್ಮಕ ಸರ್ಕಾರವನ್ನು ತಮ್ಮ ಕಿರುಬೆರಳಿನಲ್ಲಿ ಕುಣಿಸುತ್ತ ತಮ್ಮ ಸಂವಿಧಾನ ವಿರೋಧಿ ಧೋರಣೆಯನ್ನು ಯಶಸ್ವಿಯಾಗಿ ನಡೆಸಿಕೊಳ್ಳುತ್ತಾರೆ.

ಅತ್ಯಂತ ಖಂಡನಾರ್ಹವಾದ ಇಂತಹ ನಡುವಳಿಕೆಗಳು ಸಂವಿಧಾನದ ಆಶಯಗಳನ್ನೇ ನಾಶಗೊಳಿಸುತ್ತವೆ. ಇದರ ದುರಂತ ಅಧ್ಯಾಯವೇ ತಾವು ರಾಜ್ಯದ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರಿಂದ ಆಯ್ಕೆಯಾಗಿದ್ದರಿಂದ, ತಾವೂ ಉತ್ತರಿಸಬೇಕಾಗಿದ್ದರೆ ಪ್ರಜೆಗಳಿಗೆ ಮಾತ್ರ, ತಾವು ತಮ್ಮ ಭಿನ್ನಪ್ರಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳಬೇಕಾಗಿರುವುದು ಅಧಿಕಾರದಲ್ಲಿರುವ ತಮ್ಮ ಪಕ್ಷದ ಮಿತಿಯೊಳಗೆ ಎನ್ನುವ ಪ್ರಜಾಪ್ರಭುತ್ವದ ಮೂಲ ಮಂತ್ರಕ್ಕೆ ಸಂಪೂರ್ಣ ತಿಲಾಂಜಲಿಯಿಟ್ಟು  ಈ ಬಿಜೆಪಿ ಶಾಸಕರು ಹಾಗು ಮಂತ್ರಿಗಳು ಹಾಗೂ  ಮುಖ್ಯಮಂತ್ರಿಗಳು ಸೀನಿದ್ದಕ್ಕೂ, ಕೆಮ್ಮಿದ್ದಕ್ಕೆಲ್ಲ ಆರ್.ಎಸ್.ಎಸ್. ಕೇಶವಕೃಪಕ್ಕೆ ಎಡೆತಾಕುತ್ತಿರುವುದನ್ನು ನಾವೆಲ್ಲ ತೀವ್ರವಾಗಿ ವಿರೋಧಿಸಲೇಬೇಕಾಗುತ್ತದೆ. ಇವರೆಲ್ಲರ ಈ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯನ್ನು ಪ್ರಶ್ನಿಸಿಲೇಬೇಕಾಗಿದೆ.

“ಕೋಮುವಾದದ, ಕೋಮುವಾದ ರಾಜಕೀಯದ ಕಾಲ ಮುಗಿಯುತ್ತಿದೆ, ಅಥವಾ ಮುಗಿದಿದೆ”. ಹೌದೆ?

-ಬಿ. ಶ್ರೀಪಾದ ಭಟ್

ಇತ್ತೀಚೆಗೆ ಕೆಲವು ಬಲಪಂಥೀಯ ಪತ್ರಿಕೆಗಳು, ಬಹುಪಾಲು ಎಲ್ಲಾ ಎಲೆಕ್ಟ್ರಾನಿಕ್ ಮೀಡಿಯಾದವರು ಶುರು ಹಚ್ಚಿಕೊಂಡಿರುವ ಹೊಸ ವರಾತ ಎಂದರೆ “ಕೋಮುವಾದದ, ಕೋಮುವಾದ ರಾಜಕೀಯದ ಕಾಲ ಮುಗಿಯುತ್ತಿದೆ, ಅಥವಾ ಮುಗಿದಿದೆ”. ಅಂದರೆ ಇವರ ಪ್ರಕಾರ ಈ ದೇಶದಲ್ಲಿ ಇನ್ನು ಮುಂದೆಂದೂ ಕೋಮು ಗಲಭೆಗಳು ನಡೆಯುವ ಸಾಧ್ಯತೆಗಳು ತುಂಬಾ ಕಡಿಮೆ. ಇದಕ್ಕೆ ಇವರು ಕೊಡುವ ಕಾರಣಗಳು ಹಾಗೂ ಸಮರ್ಥನೆಗಳು ಹೀಗಿವೆ:

  1. ಕಳೆದ 8 ವರ್ಷಗಳಲ್ಲಿ ಇಂಡಿಯಾದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಬಿಟ್ಟರೆ ಅಂತಹ ಹೇಳಿಕೊಳ್ಳುವಂತಹ ಕೋಮು ಗಲಭೆಗಳು ನಡೆದದ್ದೇ ಇಲ್ಲ.
  2. ಇಂದಿನ ಯುವ ಜನತೆ ಸಂಪೂರ್ಣವಾಗಿ ಕೋಮುವಾದದ ಚಿಂತನೆಯನ್ನೇ ತಿರಸ್ಕರಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇವರು ಹೈಕೋರ್ಟ್‌ನ ರಾಮ ಜನ್ಮ ಭೂಮಿ ಹಾಗು ಬಾಬರಿ ಮಸೀದ್ ವಿವಾದದ ತೀರ್ಪಿನ ಸಂದರ್ಭದಲ್ಲಿ ಜನತೆ ಸಂಯಮದಿಂದ ವರ್ತಿಸಿದ್ದನ್ನು, ಆ ಮೂಲಕ ಯಾವುದೇ ಕೋಮು ಗಲಭೆಗಳಿಗೆ ಅವಕಾಶ ಕೊಡದಿದ್ದುದನ್ನು ನೆನಪಿಸುತ್ತಾರೆ.
  3. ಕೋಮುವಾದ ರಾಜಕಾರಣದ ಹರಿಕಾರರಾದ ಬಿಜೆಪಿಯರಿಗೆ ಈಗ ಸಂಪೂರ್ಣ ಜ್ಞಾನೋದಯವಾಗಿದೆಯೆಂತಲೂ, ಈ ಬಾರಿ ಅಧಿಕಾರ ಗ್ರಹಣಕ್ಕೆ ಇದರಿಂದ ತಮಗೆ ಅಂತಹ ಲಾಭಾಂಶಗಳಿಲ್ಲದ್ದರಿಂದ ಈ ಸಂಘಪರಿವಾರದವರು ಇದನ್ನು ಈ ಬಾರಿಯ ಚುಣಾವಣಾ ವಿಷಯವನಾಗಿಸಿಕೊಳ್ಳಲಾರರು.

ಹೀಗಾಗಿ ಎಲ್ಲವೂ ಸುಖಾಂತವಾಗಲಿದೆ,ನಾವೂ ನೀವೂ ಎಲ್ಲರೂ ಇನ್ನು ಆರಾಮಾಗಿ ಜೀವಿಸಲ್ಲಿಕ್ಕೆ ಯಾವ ಅಡ್ಡಿಯೂ ಇಲ್ಲ ಎಂದು ಹುಕ್ಮತ್ ಬೇರೆ ಹೊರಡಿಸುತ್ತಾರೆ!!!

ಆದರೆ ಮೇಲಿನ ಇವರ ಹಸಿಹಸಿಯಾದ, ಅಪಕ್ವವಾದ, ಬೌದ್ಧಿಕ ದಿವಾಳಿಕೋರತನದ ತರ್ಕಗಳಲ್ಲೇ ಉತ್ತರಗಳು ಅಡಗಿವೆ.

ಸ್ವತಂತ್ರ ಭಾರತದಲ್ಲಿ ಕೋಮುವಾದವನ್ನು,ಹಾಗೂ ಅದರ ಪರಿಕಲ್ಪನೆಯನ್ನು 3 ಕಾಲಘಟ್ಟಗಳಲ್ಲಿ ನೋಡಬಹುದು. ನೆಹರೂ ಕಾಲದ ಕೋಮುವಾದ. ಇಲ್ಲಿ ನಾವು ಆ ಕಾಲದ ಗೋಳ್ವಲ್ಕರ್, ಶ್ಯಾಂಪ್ರಸಾದ್ ಮುಖರ್ಜಿ, ಇವರ ಹಿಂದುತ್ವವಾದಿ, ಅಲ್ಪಸಂಖ್ಯಾತ ದ್ವೇಷದ ಚಿಂತನೆಗಳು ಅಂದಿನ ಜನಮನದಲ್ಲಿ ಬಿತ್ತುವ ಕಾಲಘಟ್ಟವೆನ್ನಬಹುದು.ಈ ಬಿತ್ತನೆಯ ಫಲವೇ ಅಟಲ್ ಬಿಹಾರಿ ವಾಜಪೇಯಿ, ಆಡ್ವಾನಿ, ಎಂ.ಎಂ. ಜೋಶಿ ತರದವರು. ನಂತರ ಕಾಂಗ್ರೆಸ್ಸೇತರ ರಾಜಕಾರಣದ ಮಹಾಮೈತ್ರಿಯಲ್ಲಿ ತೂರಿಕೊಂಡು ಜನಸಂಘ ರೂಪದಲ್ಲಿ ತನ್ನೆಲ್ಲ ರೂಪಗಳನ್ನು, ಚಿಂತನೆಗಳನ್ನು ಪ್ರಯೋಗತ್ಮಕವಾಗಿ ಪರೀಕ್ಷಿಸಿದ, ಹಲವು ಬಾರಿ ಯಶಸ್ಸು ಕಂಡ ಕಾಲಘಟ್ಟ. ಇದು 1980 ರವರೆಗೂ ಕಾಣಬಹುದು. ನಂತರ ಬಿಜೆಪಿ ರೂಪದಲ್ಲಿ ಸಂಪೂರ್ಣ, ಸಕ್ರಿಯ ರಾಜಕಾರಣದಲ್ಲಿ ಧುಮುಕಿತು. ಇಲ್ಲಿಂದ ಆಚೆಗೆ ನಡೆದ ಹಿಂಸಾಚಾರಗಳು, ಗಲಭೆಗಳು, ಹತ್ಯಾಕಾಂಡಗಳನ್ನು ಈಗ ಪದೇ ಪದೇ ವಿವರಿಸುವ ಅಗತ್ಯವೇ ಇಲ್ಲ. ಇದಕ್ಕೆ ಮುಸ್ಲಿಂ ಕಂದಚಾರಿಗಳು ತಮ್ಮ ಕೊಡುಗೆ ನೀಡಿರುವುದು ಕೂಡ ಸರ್ವವಿದಿತ. ಈ ಕಾಲಘಟ್ಟದಲ್ಲಿ ಹಿಂದೂ ಹಾಗು ಮುಸ್ಲಿಂ ಮೂಲಭೂತವಾದಗಳು ಪರಸ್ಪರ ಪೂರಕವಾಗಿ ವರ್ತಿಸಿ ಅಪಾರ ಪ್ರಾಣಹಾನಿ, ಸಂಪತ್ತುಹಾನಿಗಳಿಗೆ ಕಾರಣವಾದವು. ಆದರೆ ಈ ಸಂಘ ಪರಿವಾರದ  ಈ ಕೋಮುವಾದ ರಾಜಕಾರಣ ಇವೆಲ್ಲ ಕಾಲಘಟ್ಟಗಳನ್ನು ಮೀರಿ ಹೊಸ ನಡೆಗಳ, ತಂತ್ರಗಳ ಹುಡುಕಾಟದಲ್ಲಿದೆ. ಇಲ್ಲಿ ಇನ್ನೊಂದು ಪ್ರಮುಖವಾದ ಅಂಶವೆಂದರೆ ಕೋಮುವಾದ ರಾಜಕಾರಣವು ಕ್ರಿಯಾತ್ಮಕವಾಗಿಯೂ (ಎಂದರೆ ಸ್ವಹಿತಾಸಕ್ತಿಯಿಂದ ತಮ್ಮ ಅಚಾರ, ವಿಚಾರಗಳ ಪ್ರತಿಪಾದನೆಗಾಗಿ ಹಾಗೂ ಅವುಗಳನ್ನು ಜಾರಿಗೊಳಿಸಲಿಕ್ಕಾಗಿ ಯಾವ ಪ್ರಚೋದನೆ ಇಲ್ಲದೆ ನಡೆಯುವ ಘಟನೆಗಳು) ಮತ್ತು ಪ್ರತಿಕ್ರಿಯಾತ್ಮಕವಾಗಿಯೂ ಎರಡೂ ರೂಪದಲ್ಲಿ ನಡೆಯುತ್ತವೆ.

ಈಗ ಸಧ್ಯಕ್ಕೆ ಪ್ರತಿಕ್ರಿಯಾತ್ಮಕ ಕೋಮುವಾದದ ರಾಜಕಾರಣ ಮೇಲ್ನೋಟಕ್ಕೆ ತಣ್ಣಗಿರುವಂತೆ ಕಾಣುತ್ತದೆ, ಆದರೆ ಇದು ಸಹಜವೋ ಇಲ್ಲವೋ ಹುಸಿಯಾದದ್ದೋ ಎಂದು ಚಿಂತನೆ ನಡೆಸುವ ಸಂಶೋಧಿಸುವ ಗೋಜಿಗೇ ಹೋಗದೆ ಕೆಲವು ಪತ್ರಿಕೆಗಳು, ಬಹುಪಾಲು ಎಲ್ಲಾ ಎಲೆಕ್ಟ್ರಾನಿಕ್ ಮೀಡಿಯಾದವರು ತಾವಾಗಿಯೇ ಫರ್ಮಾನ್ ನೀಡಿಬಿಟ್ಟಿದ್ದಾರೆ. ಇವರ ಈ ಹೊಸ ಧಾಟಿಯನ್ನು ನೋಡಿದರೆ ಆದಷ್ಟು ಬೇಗ ನರೇಂದ್ರ ಮೋದಿಗೆ ಕ್ಷಮಾಪಣೆ ದೊರಕಿಸಿ ಬಿಜಿಪಿಯನ್ನು ಹೇಗಾದರೂ ಮಾಡಿ ಕೇಂದ್ರದಲ್ಲಿ ಅಧಿಕಾರದಲ್ಲಿ ಕೂಡಿಸುವ, ಆ ಮೂಲಕ ತಾವೊಬ್ಬ ಕಿಂಗ್ ಮೇಕರ್ ಆಗುವ ಎಲ್ಲಾ ಹುನ್ನಾರಗಳು ಕಾಣುತ್ತಿವೆ. ಆದರೆ ಇದಕ್ಕೆ ಪ್ರೇರಣೆಗಳೇನು?

ಆದರೆ ಇಂದಿಗೂ ಸಂಪೂರ್ಣವಾಗಿ ಚಾಲ್ತಿಯಲ್ಲಿರುವ, ನಿರಂತರವಾಗಿ ತನ್ನೆಲ್ಲ ಕರಾಳ ರೂಪವನ್ನು ತೋರಿಸುತ್ತಿರುವ ಕ್ರಿಯಾತ್ಮಕ ಕೋಮುವಾದ ಬಗ್ಗೆ ಇವರೆಲ್ಲ ಏಕೆ ಜಾಣ ಮೌನ, ಜಾಣ ಕುರುಡು ನೀತಿ??? ಇದು ದೇಶದೆಲ್ಲೆಡೆಯಲ್ಲಿ ಗುಪ್ತವಾಗಿಯೂ, ಅನೇಕ ವೇಳೆ ಬಹಿರಂಗವಾಗಿಯು ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ನಮ್ಮ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿನ ಕ್ರಿಯಾತ್ಮಕ ಕೋಮುವಾದ. ಇದಕ್ಕೆ ಯಾವ ಪ್ರಚೋದನೆಗಳು ಬೇಕಾಗಿಲ್ಲ. ತಣ್ಣಗೆ ತನ್ನ ಹತ್ತಿಕ್ಕುವ, ಆಳುವ ದಬ್ಬಾಳಿಕೆಯನ್ನು ನಡೆಸುತ್ತಿದೆ.ಇದೇ ರೀತಿ ದೇಶದಲ್ಲೆಡೆ ನಡೆಯುತ್ತಿರುತ್ತವೆ. ಇದು ಕೋಮುವಾದವಲ್ಲವೇ? ಈ ಕ್ರಿಯಾತ್ಮಕ ಕೋಮುವಾದ ಬಹಳ ಅಪಾಯಕಾರಿಯಾದದ್ದು. ಇಲ್ಲಿ ಮಗ್ಧ  ಜನರ (???) ಅಂತರ್ಗತ ಭಾವನೆಗಳಿಗೆ ಸುಪ್ತವಾಗಿ ಹುದುಗಿರುವ ಬಲಪಂಥೀಯ ಸಂವೇದನೆಗಳಿಗೆ ನಿರಂತರವಾಗಿ ನೀರು-ಗೊಬ್ಬರ ನೀಡಿ ಅದನ್ನು ಅತ್ಯುತ್ತಮ ಫಸಲಾಗಿಸುವ ಈ ವ್ಯವಸಾಯ ಸಂಘಪರಿವಾರಕ್ಕೆ ಅದರಲ್ಲೂ ಆರೆಸಸ್ಸ್ ನವರಿಗೆ ಬಹಳ ಚೆನ್ನಾಗಿ ಕರತಲಾಮಕವಾಗಿದೆ. ಇವರು ಈ ಫಸಲನ್ನು ಕಳೆದ 50 ವರ್ಷಗಳಿಂದ ಬಹಳ ಚೆನ್ನಾಗಿಯೇ ಎತ್ತಿದ್ದಾರೆ. ಈಗಲೂ ಇದಕ್ಕೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ದೇಶದೆಲ್ಲೆಡೆ ನಡೆಯುತ್ತಿವೆ. ಇದು ನೇರವಾಗಿ ಸ್ವಯಂಸೇವಕರ ರೂಪದಲ್ಲೋ, ತಮ್ಮದೇ ಆದ ಪೂರಕ ಸಂಸ್ಥೆಗಳ ಮೂಲಕವೋ, ಬಲಪಂಥೀಯ ಪತ್ರಕರ್ತರ ಮುಖಾಂತರವೋ, ಸದ್ಭಾವನೆಯ ಮುಖವಾಡಗಳನ್ನು ಹೊತ್ತು ಅಂತರಂಗದಲ್ಲಿ ಸಂಪೂರ್ಣ ಮತೀಯವಾದಿಗಳಾಗಿರುವ ಸಾಹಿತಿಗಳ ಮೂಲಕವೋ ಇವರ ಈ ಕಾರ್ಯಕ್ರಮಗಳು ನಿರರಂತರವಾಗಿ ನಡೆಯುತ್ತಿರುತ್ತವೆ. ಈ ಮೂಲಕ ಜನರನ್ನು ಸದಾಕಾಲ ಅಲ್ಪಸಂಖ್ಯಾತ ದ್ವೇಷದ ಮನಸ್ಥಿತಿಯಲ್ಲಿಟ್ಟು ತಮ್ಮ ಮೂಲ ಕಾರ್ಯಗಳನ್ನು ಪ್ರತಿಕ್ರಿಯಾತ್ಮಕ ಹಿಂಸೆಯ ಅಗತ್ಯತೆಯಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ. ಇದೆಲ್ಲಾ ಮೇಲಿನವರಿಗೆ ಗೊತ್ತಿಲ್ಲವೇ? ಗೊತ್ತಿಲ್ಲವೆಂದರೆ ಇವರು ಪತ್ರಿಕಾರಂಗದ ಮೂಲಭೂತ ಅಶಗಳನ್ನೇ ಧಿಕ್ಕರಿಸಿದ್ದಾರೆಂದು ಅರ್ಥ. ಒಂದು ವೇಳೆ ಗೊತ್ತಿದ್ದೂ ಈ ರೀತಿ ವರ್ತಿಸುತ್ತಿದ್ದಾರೆಂದರೆ ಅವರ ಆರೋಗ್ಯವಂತ ಮನಸ್ಥಿತಿಯನ್ನೇ, ಅವರ ಸೈದ್ಧಾಂತಿಕ ಬದ್ದತೆಯನ್ನೇ ಪ್ರಶ್ನಿಸಬೇಕಾಗುತ್ತದೆ.

ಕಳೆದ 8 ವರ್ಷಗಳಲ್ಲಿ ಕೋಮುಗಲಭೆಗಳು ನಡೆದಿಲ್ಲ ಎಂದರೆ ಇದರಲ್ಲಿ ಕೋಮುವಾದದ ವಿರುದ್ದದ ಕಾನೂನುಗಳು ಇಂದಿನ ದಿನಗಳಲ್ಲಿ ಬಲವಾಗಿ ಪ್ರಯೋಗಿಸಲ್ಪಡುತ್ತಿವೆ. ಅಲ್ಲದೆ ರಾಷ್ಟ್ರೀಯವಾದದೊಂದಿಗೆ ಕೋಮುವಾದವನ್ನು ಗಂಟು ಹಾಕುವ ಆ ಮೂಲಕ ದೇಶ ಪ್ರೇಮದ ಉನ್ಮಾದದಲ್ಲಿ ಅರಾಜಕತೆಯನ್ನು ಹುಟ್ಟು ಹಾಕಿ ತನ್ನ ಮೂಲಭೂತ ಹಿಂದುತ್ವವಾದಿ ಪ್ರಣಾಳಿಕೆಗಳನ್ನು ಅನುಷ್ಟಾನಕ್ಕೆ ತರುವ ಇವರ ಯೋಜನೆಗಳು ಸಂಪೂರ್ಣ ಉಲ್ಟಾ ಹೊಡೆದಿವೆ. ಹಾಗೂ 2002 ರ ಗುಜರಾತ್ ನಲ್ಲಿ ನಡೆದ ನರಮೇಧದ ಫಲವಾಗಿ ಸಂಘಪರಿವಾರಕ್ಕೆ ತಮ್ಮ ಹೆಗಲೇರಿದ ಆ ಹತ್ಯಾಕಾಂಡದ ಜವಾಬ್ದಾರಿಯನ್ನು ಇನ್ನೂ ಕಳೆದುಕೊಳ್ಳಲಾಗುತ್ತಿಲ್ಲ. ಎಷ್ಟೇ ತಿಪ್ಪರಲಾಗ ಹಾಕಿದರೂ ಆ ರಾಜ್ಯದಲ್ಲಿ ತನ್ನೆಲ್ಲ ಅಧಿಕಾರವನ್ನು ಬಳಸಿ ಪ್ರಗತಿಪರರನ್ನು, ಪ್ರತ್ಯಕ್ಷ ಸಾಕ್ಷಿಗಳನ್ನು ಹತ್ತಿಕ್ಕಿದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ತುಂಬಾ ಕಷ್ಟ. ಅದಕ್ಕೇ ಬಿಜೆಪಿಗೆ ನರೇಂದ್ರ ಮೋದಿಯ ಅತ್ಯಂತ ಹಾಸ್ಯಾಸ್ಪದ, ಕಳಂಕಿತ, ಕ್ರೂರ ವ್ಯಂಗದ ಉಪವಾಸವನ್ನೂ ಕೂಡ ಅಸಹಾಯಕತೆಯಿಂದ, ಕಂಗಾಲುತನದಿಂದ ಬೆಂಬಲಿಸಬೇಕಾಗಿ ಬಂದಿರುವುದು. ಇಲ್ಲಿನ ಕರ್ನಾಟಕದಂತೆ ಅಲ್ಲಿನ ಕಾಂಗ್ರೆಸ್ ನವರ ಸಂಪೂರ್ಣ ನಿಸ್ತೇಜತನ, ಬೇಜವಬ್ದಾರಿತನ ಕೂಡ ಇವರಿಗೆ ನೇರವಾಗಿ ಸಹಾಯ ಮಾಡುತ್ತಿದೆ. ಇನ್ನು 2008 ರಲ್ಲಿ ಜರುಗಿದ ಒರಿಸ್ಸಾದ ಕಂದಾಮಾಲ್ ಹತ್ಯಾಕಾಂಡದ ಜವಾಬ್ದಾರಿಯಿಂದ ಕೂಡ ಸಂಘಪರಿವಾರಕ್ಕೆ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಅಲ್ಲದೆ ಇಂದಿನ ಸಾಮಾಜಿಕವಾಗಿ ಬದಲಾದ ವರ್ಷಗಳಲ್ಲಿ ಮೊದಲಿನ aggressive ಕೋಮುವಾದ ರಾಜಕಾರಣ ಮಾಡಲಿಕ್ಕೆ ಹಳೇ ಹತಾರಗಳು ಉಪಯೋಗಕ್ಕೆ ಬರುತ್ತಿಲ್ಲ, ಅವು ಹೊಸ ಹತಾರಗಳ, ಸಂಚುಗಳ ಹುಡುಕಾಟದಲ್ಲಿವೆ ಅಷ್ಟೇ. ಅದಕಾಗಿ ಮೇಲ್ನೋಟಕ್ಕೆ ಎಲ್ಲಾ ಸಮಾಧಾನದಿಂದಿರುವಂತೆ ಕಾಣುತ್ತಿದೆ. UPA ಸರ್ಕಾರ ಬೇಕಾದರೆ ಇದರ credit ತಾನು ತೆಗುದುಕೊಳ್ಳಬಹುದು. ಆದರೆ ಆದರ ಸ್ಥಿತಿಯೇ ಚಿಂತಾಜನಕವಾಗಿದೆ.

ಇನ್ನು ಇಂದಿನ ಯುವ ಜನತೆ ಕೋಮುವಾದ ರಾಜಕಾರಣವನ್ನು ತಿರಸ್ಕರಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ನಿಜವೆನಿಸಬಹುದಾದರೂ ವಾಸ್ತವವಾಗಿ ಆದು ಹಾಗೆ ಇಲ್ಲ. ಏಕೆಂದರೆ ಕೋಮುವಾದವೋ ಅಥವಾ ಇನ್ಯವುದೋ ಒಟ್ಟಿನಲ್ಲಿ ಯಾವುದು ಅರ್ಥಿಕವಾಗಿ ಲಾಭದಯಕವಾಗಿಲ್ಲವೋ ಅದರ ಬಗ್ಗೆ ಇವರಿಗೆ ಯಾವುದೇ ರೀತಿಯ ವಿಶೇಷ ಆಸಕ್ತಿಗಳಾಗಲಿ, ತೀವ್ರತರವಾದ, ಭಾವನಾತ್ಮಕವಾದ ಬೆಸುಗೆಯಾಗಲಿ ಇಲ್ಲ. ಇದು ಬಿಟ್ಟು ಇನ್ನಾವುದೇ ಸೈದ್ಧಾಂತಿಕ, ವೈಚಾರಿಕ ಕಾರಣಗಳಾಗಲಿ ಇಲ್ಲಿ ಕಾಣುತ್ತಿಲ್ಲ.ಇನ್ನು ಸಂಘ ಪರಿವಾರಕ್ಕೆ ಜ್ಞಾನೋದಯವಾಗಿದೆ ಯೆನ್ನುವುದಂತು ಶುದ್ದ ಕುಹಕದ, ಬೇಜವಬ್ದಾರಿತನದ ಹೇಳಿಕೆಗಳು. ಏಕೆಂದರೆ ಸಂಘ ಪರಿವಾರದ Hidden agendaನೇ ಬೇರೆ. ಅದು ಮತ್ತೆ ಸಾವಿರಾರು ವರ್ಷಗಳ ಹಿಂದಿನ ಸನಾತನವಾದಕ್ಕೆ, ಪುರೋಹಿತಶಾಹಿ ತತ್ವಕ್ಕೆ, ಮನುವಾದಕ್ಕೆ ಮರಳುವುದು ಇವರು ಲಾಗಾಯ್ತಿನಿಂದಲೂ ಪ್ರತಿಪಾದಿಸುತ್ತಿರುವುದು, ದೃಢವಾಗಿ ನಂಬಿರುವುದು ವರ್ಣಾಶ್ರಮವೇ ಆದರ್ಶ ಸಮಾಜದ ಉತ್ತಮ ವ್ಯವಸ್ಥೆ ಎಂದು. ಇವರಿಗೆ ವೈದಿಕ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ಅಘಾತಕರ ವಿಷಯವಾಗಿದೆ. ನವ ಭ್ರಾಹ್ಮಣ್ಯಾವಾದನ್ನು ಹುಟ್ಟು ಹಾಕಲು, ಇವರನ್ನು ಶಕ್ತಿ ರಾಜಕಾರಣದ ಕೇಂದ್ರವನ್ನಾಗಿ ಮಾಡಲು ಈ ಮೂಲಕ ಭಾರತದ ತಳಸಮುದಾಯದವರನ್ನು, ಮಹಿಳೆಯನ್ನು ನಿಯಂತ್ರಿಸುವುದು ಹಾಗೂ ಇದಕ್ಕಾಗಿ ಇವರು ಸಮಯ ಮತ್ತು ಸಂಪೂರ್ಣ ಅಧಿಕಾರಕ್ಕಾಗಿ ಹೊಂಚು ಹಾಕುತ್ತಿದಾರೆ. ಅಂಬೇಡ್ಕರ್ ರವರ ಏಕಾಂಗಿ, ನಿರಂತರ ಹೋರಾಟದ ಫಲವಾಗಿ ಎಚ್ಚರಗೊಂಡ ದಲಿತರ ಪ್ರಜ್ಞೆ, ದಲಿತರ ಶಿಕ್ಷಣ, ದಲಿತರ ರಾಜಕೀಯಗಳು ನಾಗಪುರದ ಕೇಶವಕೃಪಾದ ಪುರೋಹಿತರಿಗೆ ನುಂಗಲಾರದ ತುತ್ತು. ಅಂಬೇಡ್ಕರ್ ಅವರು ತಮ್ಮೆಲ್ಲ ನಿರಂತರ ಜ್ಞಾನ, ವೈಚಾರಿಕತೆ, ಜಾತ್ಯಾತೀತತೆಯನ್ನು ಅತ್ಯಂತ ವೈಜ್ನಾನಿಕವಾಗಿ ಬಳಸಿ ರೂಪಿಸಿದ ಭಾರತದ ಇಂದಿನ ಸಂವಿಧಾನ ಸಂಘಪರಿವಾರಕ್ಕೆ ಸುತಾರಾಂ ಇಷ್ಟವಿಲ್ಲ ಹಾಗೂ ಗೌರವವಿಲ್ಲ. ಮಹಿಳೆಯರ ಸಬಲೀಕರಣವೆನ್ನುತ್ತಲೆ, ಹೌಹಾರಿ ಬೆಚ್ಚಿ ಬೀಳುತ್ತಾರೆ. ಇಂದಿನ ಪರಿಸ್ಥಿತಿಯಲ್ಲಿ ಇವೆಲ್ಲವನ್ನು ನೇರವಾಗಿ ಬಹಿರಂಗವಾಗಿ ವಿರೋಧಿಸಿದರೆ ಶಿಕ್ಷೆಗೆ ಗುರಿಯಾಗುವ, ಮೂಲಭಾತವಾದಿಗಳೆಂದು ತಿರಸ್ಕೃತರಾಗುವ ಸಾಧ್ಯತೆಗಳನ್ನು ಊಹಿಸಿಯೇ ಬಹಿರಂಗವಾಗಿ ಮುಸ್ಲಿಂ ವಿರೋಧಿ ಚಳುವಳಿಯನ್ನು ರೂಪಿಸಿ, ಜನರ ಭಾವನೆಗಳನ್ನು ಕೆರಳಿಸಿ ಗಲಭೆಗಳಲ್ಲಿ ನೇರಾವಾಗಿ ಮುಖಾಮುಖಿಯಾಗಲು ಹಿಂದುಳಿದವರನ್ನು, ದಲಿತರನ್ನು ಅಖಾಡಕ್ಕಿಳಿಸಿ, ಇವರನ್ನು ಮುಸ್ಲಿಂ ಮೂಲಭೂತವಾದದೊಂದಿಗೆ ನೇರವಾಗಿ ಕಣಕ್ಕಿಳಿಸಿ ತಾವು ಮಾತ್ರ ಹಿನ್ನೆಲೆಯಲ್ಲಿ ಗೌರವಾನ್ವಿತ ಸ್ಥಾನದಲ್ಲಿ ನಿಂತು ಅವರು ಮಾತ್ರ ಕಾನೂನಿನ ಕುಣಿಗೆ ಸಿಕ್ಕಿಕೊಂಡು ಜೈಲು ಪಾಲು ಮಾಡುವುದು ಇವರ ಮೂಲಭೂತ ಗೇಮ್ ಪ್ಲಾನ್. ಇವರಿಗೆ ಮುಸ್ಲಿಂ ಕಂದಾಚಾರಿಗಳು ತಮ್ಮ ಮೂಲಭೂತವಾದಿತ್ವದಿಂದ ಸಂಪೂರ್ಣ ಸಹಕರಿಸಿರುವುದು ಕಳೆದ 50 ವರ್ಷಗಳ ಭಾರತದ ಇತಿಹಾಸವನ್ನು ಬಲ್ಲವರಿಗೆ ಸಂಪೂರ್ಣವಾಗಿ ಗೊತ್ತಿರುತ್ತದೆ.

ಮೇಲ್ಕಾಣಿಸಿದ ವಿಷಯಗಳೆಲ್ಲ ಚರ್ವತಚರ್ಣಿತವಾದಂತಹುವುಗಳೇ. ಅಲ್ಲದೇ UPA ಸರ್ಕಾರದ ಅತ್ಮಹತ್ಯಾತ್ಮಕ, ಎಡಬಿಡಂಗಿತನದ, ಗೊತ್ತು ಗುರಿಯಿಲ್ಲದ, ಭ್ರಷ್ಟಾಚಾರ ಕಳಂಕಿತ ಗೋಜಲು ಅಧಿಕಾರ ರಾಜಕಾರಣದ ಸಂಪೂರ್ಣ ಲಾಭ ಪಡೆಯಲು ಈಗ ತುದಿಗಾಲಲ್ಲಿ ನಿಂತಿರುವ ಸಂಘಪರಿವಾರಕ್ಕೆ ಈಗ ಕೋಮುವಾದದ ಬಳಕೆ ಸದ್ಯಕ್ಕೆ ತುರ್ತಿನ ಅಗತ್ಯವಾಗಿ ಕಾಣುತ್ತಿಲ್ಲ. UPA ಸರ್ಕಾರದ ಸ್ವಯಂಕೃತ ಅಪರಾಧಗಳೇ ತಮಗೆ ಅಧಿಕಾರ ತಂದು ಕೊಡಬಲ್ಲದು ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ ಸಂಘಿಗಳು. ಇದಕ್ಕೆ ಭವಿಷ್ಯದ ರಾಜಕಾರಣ, ಅದರ ನಡೆಗಳೇ ಉತ್ತರ ನೀಡಬಲ್ಲವು.  ಆದರೆ ಈ ಎರಡೂ ಕಡೆಯ ಮಾಧ್ಯಮವರು ತೀವ್ರ ಬಲಪಂಥೀಯ ರಾಜಕಾರಣಕ್ಕೆ ಈಗೇಕೆ ಇಂತಹ ಅವಸರ, ಉನ್ಮಾದ ತೋರುತ್ತಿದ್ದಾರೆ? ನರಮೇಧದ ರೂವಾರಿ ನರೇಂದ್ರ ಮೋದಿಯಲ್ಲಿ ಇವರೇನಾದರು ಮನುಷ್ಯತ್ವ, secularism ನ ಹೊಸ ಝಳಕನ್ನೇನಾದರೂ ಕಂಡರೆ? ಅದ್ವಾನಿಯವರಲ್ಲಿ ಪರಿಪಕ್ವ ರಾಜಕಾರಣಿಯನ್ನೇನಾದರೂ ಕಂಡರೆ? ಬಿಜೆಪಿಯಲ್ಲಿ ಭಾರತದ ಭವಿಷ್ಯವನ್ನೇನಾದರೂ ಕಂಡರೆ? ಹಾಗಾದರೆ ಇವರು ಬೆಂಕಿಯ ಜೊತೆ ಸರಸವಾಡುತ್ತಿದ್ದಾರೆಂದು ನೇರವಾಗಿಯೇ ಹೇಳಿಬಿಡಬಹುದು. ಇನ್ನಾದರೂ ಎಡಪಂಥೀಯರು, ಸಮಾಜವಾದಿಗಳು ತಮ್ಮ ಇತಿಹಾಸದ ತಪ್ಪು ಹೆಜ್ಜೆಗಳನ್ನು, ಅಕಡೆಮಿಕ್ ಅಹಂ ಅನ್ನು ಬಿಟ್ಟುಕೊಡಬೇಕಾಗಿದೆ. ಇಂದಿನ ಕಾಲ ಸಂಧರ್ಭದಲ್ಲಿ  ಬಲಪಂಥೀಯರ ಚಳುವಳಿಗಳನ್ನು ಕಟ್ಟುವ, ಜನಸಂಘಟನೆಗಳನ್ನು ನಡೆಸುವ, ಇವೆಲ್ಲವನ್ನು ತಮ್ಮ ಯಶಸ್ಸಿನ ಸೋಪಾನವಾಗಿ ಮಾಡಿಕೊಳ್ಳುವ ಎಲ್ಲಾ ರೀತಿಯ activism ಎದುರಾಗಿ ಎಡಪಂಥೀಯ, ಸಮಾಜವಾದಿ ರಾಜಕಾರಣ, ಸಂಘಟನೆಗಳು ಏಕೆ ಸಂಪೂರ್ಣವಾಗಿ ಸೋತಿವೆ? ಏಕೆ ಈ ರಾಷ್ಟ್ರದ ಜನತೆ ಎಡಪಂಥೀಯ, ಸಮಾಜವಾದಿ ಚಿಂತನೆಗಳನ್ನ, activismನ್ನ ಅತ್ಯಂತ ಸಿನಿಕರಾಗಿ ನೋಡುತ್ತಾರೆ? ಏಕೆ ಈ ರಾಷ್ಟ್ರದ ಜನತೆ ಇವರೆನ್ನೆಲ್ಲಾ ಅನೇಕ ಗಾವುದ ದೂರ ಇಟ್ಟಿದೆ? ಇದು ಆತ್ಮಾವಲೋಕನದ, ಮತ್ತೊಮ್ಮೆ ತಳಮಟ್ಟದಿಂದ ಕೈಯೂರಿ ಎದ್ದೇಳುವ ಕಾಲ. ಬಹಳ ಸಮಯವಿಲ್ಲ. ನಮ್ಮೆಲ್ಲರ ಕಾಳಜಿ ಏನೆಂದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹೇಗೆ ಈ ಸಂಘಪರಿವಾರವನ್ನು ಎದುರಿಸುವುದು? ಹೇಗೆ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಗಟ್ಟವುದು? ಅದಕ್ಕಾಗಿ ನಾವೆಲ್ಲ ಯಾವ ರೀತಿಯ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕ? ಇದು ಒಂದು ದೊಡ್ಡ ಟಾಸ್ಕ್ ನಾವೆಲ್ಲ ಇದರ ಬಗ್ಗೆ ನಮ್ಮೆಲ್ಲರ ಗಮನ, ಚಿಂತನೆಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗಿದೆ.

(ಚಿತ್ರಕೃಪೆ: ವಿಕಿಪೀಡಿಯ)

Anna Movement – Dalits Have Reasons to Worry

Bhumi Banu

Dalits are worried over the way the so called movement against corruption, led by Anna Hazare is going on. Members of Dalit Sangharsha Samiti and Samata Sainik Dal staged a dharna, different from what we have been shown in TV media, in Hassan on Tuesday. They raised voice against the Anna movement and the proposed draft of the Jan Lokpal Bill. They have serious disagreements with the Team Anna for its disrespect for parliamentary process in particular and constitution in general.

The downtrodden sections of society are worried because they see people who have been against the reservation in big numbers behind Anna. They have serious doubts about Anna himself. He, despite being a Gandhian and social reformer, has not succeeded to bring in harmony between Dalits and upper castes in his own village. The Dalits have never heard Anna criticizing the massacre of Dalits at Khirlanji in his home state. They never heard him supporting reservation in the private sector. Instead, on occasions Anna had praised Bal Thackrey and Narendra Modi – undoubtedly among inhuman creatures on the earth.

Besides, as noted thinker Kancha Ilaiah pointed out in a TV debate, the draft prepared by the civic society nowhere speaks about representation to a dalit, backward classes, minorities and women. They use the words – legal luminary, eminent personalities – to mean Noble awardees, Magsaysay recipients.

The mode of struggle opted by Anna and his team is reminds Dalits the historic fast by Mahatma Gandhi in opposition to separate electorate for them. A large section of Dalits even today argued had Gandhi not opposed the separate electorate the state of Dalits would have been better by this time. Naturally, for them Anna Hazare’s fast is no different from ‘blackmail’ tactics. One of the demands put forward by protesters in Hassan is that government not heed to the ‘blackmail’ tactics of Anna Hazare.

Prof Kancha Ilaiah rightly opined that if the government heeds to the Anna’s demand it would set a bad precedence and might lead to far more critical situations in future. Naxals might come up with a draft bill and demand the government pass it as it is in parliament. They might even ‘blackmail’ the government at gun point.

The team Anna does not have a face who can remotely represent the depressed sections of society. Kiran Bedi has been on TV screen endorsing a washing powder (Ariel) occasionally. She endorses the product as the best in the market and converts the old cloth new. Any person who has used the product can easily blame that Kiran Bedi is wrong. Is it not corruption to endorse a product with blatant lies? Does a retired IPS officer, a Magsaysay awardee need to endorse a product for her survival? When she herself endorses a product for her greed for money, what moral rights she has to fight against corruption. There are hundreds of similar people who have been involved in the campaign across the country.

The larger threat the Dalits see in the whole drama is that the event might end up bringing in the BJP-led NDA in the rule at the Centre. They look at the protests as part of the BJP-RSS’ strategy to bring down the Cong-led UPA and replace it by the BJP.