Monthly Archives: January 2015

ನ್ಯಾಯಾಧೀಶರ ನಡೆ: ಹೀಗಾದರೆ ನೊಂದವರಿಗೆ ನ್ಯಾಯದಾನ ಹೇಗೆ..?

– ಮಹೇಶ್ ಸಿ.

ರಾಮಚಂದ್ರಾಪುರ ಮಠದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಕರ್ನಾಕಟಕದ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲು ಇದುವರೆಗೆ ಐದು ಮಂದಿ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಅವರಲ್ಲಿ ನ್ಯಾ.ಎಚ್.ಜಿ.ರಮೇಶ್ ಅವರು ತಾವು ಈ ಹಿಂದೆ ಆರೋಪಿ ಪರ ಹಿರಿhcಯ ವಕೀಲ ಬಿ.ವಿ.ಆಚಾರ್ಯ ಬಳಿ ಜೂನಿಯರ್ ಆಗಿ ಕೆಲಸ ಮಾಡಿದ್ದ ಕಾರಣ ನೀಡಿ ಹಿಂದೆ ಸರಿದಿದ್ದಾರೆ. ಉಳಿದವರು – ಎನ್.ಕುಮಾರ್, ಪಿ.ಬಿ.ಬಜಂತ್ರಿ, ಕೆ.ಎನ್.ಫಣೀಂದ್ರ ಹಾಗೂ ರಾಮಮೋಹನ ರೆಡ್ಡಿ – ಕಾರಣಗಳನ್ನು ಬಹಿರಂಗ ಪಡಿಸಿದಂತಿಲ್ಲ.

ನೋವುಂಡವರು ನ್ಯಾಯಾಲಯದ ಮೊರೆ ಹೋಗುವುದು ನ್ಯಾಯಕ್ಕಾಗಿ. ಪ್ರಕರಣದ ಸಂಬಂಧ ವಿಚಾರಣೆ ನಡೆಸಿ ತೀರ್ಪು ನೀಡುವುದು ನ್ಯಾಯಾಧೀಶರ ಜವಾಬ್ದಾರಿ. ಹೀಗೆ ಕೆಲ ಪ್ರಕರಣಗಳು ತಮ್ಮೆದುರು ಬಂದಾಗ, ವಿಚಾರಣೆ ನಡೆಸದೇ ಎದ್ದುಬಿಟ್ಟರೆ? ನ್ಯಾಯಾಧೀಶರಿಗೆ ಆ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿರಬಹುದು. ಆದರೆ, ಒಂದರ ಹಿಂದೆ ಒಂದೆಂಬಂತೆ, ಐದು ಮಂದಿ ಪ್ರಕರಣದಿಂದ ಹಿಂದೆ ಸರಿದರೆ ನ್ಯಾಯದಾನ ಪ್ರಕ್ರಿಯೆಗೆ ತೊಡಕಾಗುವುದಿಲ್ಲವೆ?

ತಮ್ಮ ಮುಂದೆ ಬರುವ ಪ್ರಕರಣದ ಆರೋಪಿ ಅಥವಾ ದೂರುದಾರರ ಜೊತೆ ಯಾ11-court
ವುದೇ ರೀತಿಯ ಸಂಪರ್ಕ, ಸಂಬಂಧ ಇದ್ದಂತಹ ಸಂದರ್ಭಗಳಲ್ಲಿ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುವುದು ಸಹಜ. ಆಗ ತಮ್ಮ ನ್ಯಾಯದಾನ ಪ್ರಕ್ರಿಯೆಯನ್ನು ಇತರರು ಅನುಮಾನದ ಕಣ್ಣುಗಳಿಂದ ನೋಡಬಹುದು ಎಂಬ ಕಾರಣಕ್ಕೆ ಹಾಗೆ ಮಾಡಬಹುದು. ಬಹುಶಃ ಅದೇ ಕಾರಣಕ್ಕೆ ನ್ಯಾಯಾಧೀಶರು ಎಲ್ಲರೊಂದಿಗೆ ಬೆರೆಯುವುದಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೂ ಕಡಿಮೆ. ಆದರೆ ಈ ಸ್ವಾಮೀಜಿ ಪ್ರಕರಣದಲ್ಲಿ ಐವರು ಹೀಗೆ ಹಿಂದೆ ಸರಿದಿದ್ದಕ್ಕೆ ಏನು ಕಾರಣ ಇರಬಹುದು ಎನ್ನುವುದು ಕುತೂಹಲಕಾರಿ. ಮಾಜಿ ಕಾನೂನು ಮಂತ್ರಿ ಸುರೇಶ್ ಕುಮಾರ್ ಕೂಡಾ ಈ ಬಗ್ಗೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಈ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಚರ್ಚೆಯಾಗುವ ಅಗತ್ಯವಿದೆ.

ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಅನೇಕರು ತಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರ ವಿರುದ್ಧವೇ ನಿಷ್ಪಕ್ಷಪಾತಿಯಾಗಿ ನಡೆದುಕೊಳ್ಳಬೇಕಾಗುತ್ತದೆ. ಅನೇಕ ಪೊraghweshwara_bharathi_gurujಲೀಸ್ ಅಧಿಕಾರಿಗಳು ತಮ್ಮ ವೃತ್ತಿ ಜೀವನದಲ್ಲಿ ಅಂತಹ ಸಂದರ್ಭಗಳನ್ನು ಎದುರಿಸಿ ಕರ್ತವ್ಯ ನಿರ್ವಹಿಸಿದ್ದಾರೆ. ಅನೇಕ ಪತ್ರಕರ್ತರು ಕೂಡಾ ತಮ್ಮ ಆತ್ಮೀಯರಿಗೆ ಕಹಿಯಾಗುವಂತಹ ಸುದ್ದಿಯನ್ನು ಬರೆಯುವಾಗ ಹಿಂದೆ ಮುಂದೆ ನೋಡದ ಎಷ್ಟೋ ಉದಾಹರಣೆಗಳಿವೆ. ನ್ಯಾಯಾಧೀಶರು ಕೂಡಾ, ತಮ್ಮ ಎದುರಿಗಿರುವವರು ಆರೋಪಿ, ದೂರುದಾರ ಎಂದಷ್ಟೇ ಗ್ರಹಿಸಿ ತಮ್ಮ ವಿವೇಚನೆ ಬಳಸಿ ನ್ಯಾಯದಾನ ಮಾಡಲು ಸಾಧ್ಯವಿಲ್ಲವೆ?

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಬ

download– ಬಿ.ಶ್ರೀಪಾದ ಭಟ್

“ಅಸಮಾನತೆಯು ಹಿಂದೂಯಿಸಂನ ಆತ್ಮ. ಸಾಮಾಜಿಕ ಉಪಯುಕ್ತತೆಯ ಫಲಾಫಲವನ್ನು ಪರಾಮರ್ಶಿಲು ಸೋಲುವ ಹಿಂದೂಯಿಸಂ ಫಿಲಾಸಫಿಯು ವೈಯುಕ್ತಿಕ ನ್ಯಾಯಪರತೆಯ ಫಲಾಫಲವನ್ನು ಪರಾಮರ್ಶಿಸಲು
ಸಹ ಸೋತಿದೆ.” – ಡಾ.ಬಿ.ಆರ್.ಆಂಬೇಡ್ಕರ್.

ಹತ್ತೊಂಬತ್ತನೇ ಶತಮಾನದ ಪ್ರಮುಖ ಆಧ್ಯಾತ್ಮದ ಗುರುವಾಗಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮದ ಕುರಿತಾಗಿ ವ್ಯಕ್ತಿಯೊಬ್ಬನು ತಾನು ನಂಬಿದ ಧರ್ಮದಲ್ಲಿ ಅನೇಕ ಲೋಪದೋಷಗಳಿದ್ದಲ್ಲಿ ಮತ್ತು ಆ ವ್ಯಕ್ತಿಯು ಪ್ರಾಮಾಣಿಕ ಮತ್ತು ಶ್ರದ್ಧೆಯುಳ್ಳವನಾಗಿದ್ದರೆ ಆಗ ದೇವರು ಸ್ವತಃ ಆ ಲೋಪದೋಷಗಳನ್ನು ಸರಿಪಡಿಸುತ್ತಾನೆ. ಬೇರೊಂದು ಧರ್ಮದಲ್ಲಿ ಲೋಪದೋಷಗಳಿದ್ದರೆ ಅದು ಆ ಧರ್ಮದಲ್ಲಿ ನಂಬಿಕೆಯಿಟ್ಟವರಿಗೆ ಸಂಬಂಧಪಟ್ಟಿರುತ್ತದೆ, ದೇವರು ಅದನ್ನು ಸರಿಪಡಿಸುತ್ತಾನೆ. ನಾನು ಹಿಂದೂಯಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಎಲ್ಲಾ ಧರ್ಮಗಳನ್ನು ಪಾಲಿಸಿದ್ದೇನೆ. ಈ ಧರ್ಮಗಳ ಆಚರಣೆಗಳನ್ನು ಆಳವಾಗಿ ಆಚರಿಸಿದಾಗ ನಾನು ಕಂಡುಕೊಂಡ ಸತ್ಯವೇನೆಂದರೆ ಒಂದೇ ದೇವರ ಕಡೆಗೆ ನಾವೆಲ್ಲಾ ಚಲಿಸುತ್ತಿದ್ದೇವೆ. ಆದರೆ ವಿಭಿನ್ನ ದಾರಿಗಳನ್ನು ಬಳಸುತ್ತಿದ್ದೇವೆ.

ದುರಂತವೆಂದರೆ ಧರ್ಮದ ಹೆಸರಿನಲ್ಲಿ ಹಿಂದೂಗಳು, ಮುಸ್ಲಿಂರು, ಕ್ರಿಶ್ಚಿಯನ್ನರು, ವೈಶ್ಣವ, ಶೈವ ಹೀಗೆ ಪರಸ್ಪರ ಕಚ್ಚಾಡುತ್ತಿರುವುದು. ಕ್ರಿಷ್ಣ ಎಂದು ಕರೆಯಲ್ಪಡುವ ದೇವರು ಶಿವ ಎಂದು ಕರೆಯಲ್ಪಡುತ್ತಾನೆ, ಶಿವ ಎಂದು ಕರೆಯಲ್ಪಡುವ ದೇವರು ಜೀಸಸ್ ಎಂದೂ, ಅಲ್ಲಾ ಎಂದೂ ಕರೆಯಲ್ಪಡುತ್ತಾನೆ. ಎಲ್ಲರೂ ಒಂದೇ ಆದರೆ ಈ ನಂಬಿಕೆಯನ್ನು ಜನರು ಜನರು ಸೋಲು ಗೆಲವುಗಳ ನೆಲೆಯಲ್ಲಿ ನೋಡುವ ಜನರು ತಮ್ಮ ಧರ್ಮ ಮಾತ್ರ ಸದಾ ಗೆಲವು ಸಾಧಿಸುತ್ತದೆ ಮತ್ತು ಬೇರೆಲ್ಲ ಧರ್ಮಗಳು ಸೋಲುತ್ತವೆ ಎಂದು ಚಿಂತಿಸುತ್ತಾರೆ ಎಂದು ಹೇಳುತ್ತಾರೆ. ಚಿಂತಕ ಜ್ಯೋತಿರ್ಮಯ ಶರ್ಮ ಅವರು ಸಂಶೋಧನ ಪುಸ್ತಕ Cosmic Love and Human Apathy: Swami Vivekananda’s Re-statement of Religion
ದಲ್ಲಿ ರಾಮಕ್ರಿಷ್ಣ ಮತ್ತು ಅವರ ಶಿಷ್ಯರಾದ ವಿವೇಕನಾಂದರ ಕುರಿತಾಗಿ ಹೊಸ ಚಿಂತನೆಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಾರೆ. ಆ ಪುಸ್ತಕದಲ್ಲಿ ಜ್ಯೋತಿರ್ಮಯ ಶರ್ಮ ಅವರು ಬರೆಯುತ್ತಾರೆ 1896ರಲ್ಲಿ ಅಮೇರಿಕಾ ಮತ್ತು ಲಂಡನ್ ಗೆ ಪ್ರವಾಸ ಮಾಡುವ ವಿವೇಕಾನಂದರು ಅಲ್ಲಿ ಧರ್ಮದ ಕುರಿತಾಗಿ, ತಮ್ಮ ಗುರುಗಳಾದ ರಾಮಕ್ರಿಷ್ಣರ ಕುರಿತಾಗಿ ಮಾತನಾಡುತ್ತ ರಾಮಕ್ರಿಷ್ಣ ಅವರು ಎಲ್ಲಾ ಧರ್ಮಗಳ ಕುರಿತಾದ ಸತ್ಯಗಳನ್ನು ಅರಿಯಲು ಉತ್ಸುಕರಾಗಿದ್ದರು. ಅವರು ಯಾವುದೇ ವ್ಯಕ್ತಿಯ ವೈಯುಕ್ತಿಕ ನಂಬಿಕೆಯನ್ನು ತೊಂದರೆಗೊಳಪಡಿಸಲು ಬಯಸುತ್ತಿರಲಿಲ್ಲ ಎಂದು ಭಾಷಣ ಮಾಡಿದ್ದರು. ರಾಜಕೀಯವಾಗಿ ಹಿಂದೂಯಿಸಂ ಕುರಿತಾಗಿ ಆಳವಾಗಿ ಮಾತನಾಡಿದ್ದ ವಿವೇಕಾನಂದ ಬೇರೆ ಧರ್ಮದ ಜನರ ನಂಬಿಕೆಗಳ ಕುರಿತಾಗಿ ಬಹಳಷ್ಟು ಲಿಬರಲ್ ಆಗಿ ಚಿಂತಿಸುತ್ತಿದ್ದರು.

ಎಲ್ಲಾ ಧರ್ಮಗಳ ನಂಬಿಕೆಗಳು ವಿಭಿನ್ನವಾಗಿದ್ದರೂ ಅದು ಕಡೆಗೆ ಒಂದೇ ದೇವರನ್ನು ಪ್ರಾಥಿಸುತ್ತದೆ ಎಂದು ವಿವೇಕಾನಂದ ಸಹ ನಂಬಿದ್ದರು. ತಮ್ಮ ಅನೇಕ ಸಾರ್ವಜನಿಕ ಭಾಷಣಗಳಲ್ಲಿ ವಿವೇಕಾನಂದ ಅವರು ತಮ್ಮ ಸಂದೇಶವು ಶಾಂತಿ ಮತ್ತು ಧರ್ಮದ ಒಗ್ಗಟ್ಟನ್ನು ಬೆಂಬಲಿಸುತ್ತದೆ ಮತ್ತು ಶತೃತ್ವವನ್ನು download (1)ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಸ್ವತಹ ಹಿಂದೂ ಧರ್ಮದ ಕುರಿತಾಗಿ ನಂಬಿಗೆಯನ್ನು ಹೊಂದಿದ್ದ ವಿವೇಕಾನಂದ ಪ್ರತಿಯೊಬ್ಬರೂ ತನ್ನ ಧರ್ಮದ ಕುರಿತಾದ ಇರುವ ನಂಬಿಕೆಯ ಪ್ರಮಾಣದಷ್ಟೇ ವಿವಿಧ ಧರ್ಮಗಳ ಕುರಿತಾಗಿ ಇರಬೇಕೆಂದು ಹೇಳಿದ್ದರು. ನಂಬಿಕೆಗಳು ಬಹುರೂಪಿಯಾಗಿರುತ್ತವೆಂದು ನಂಬಿದ್ದರು. ವಿವಿಧ ಧರ್ಮಗಳ ನಂಬಿಕೆಗಳ ಕುರಿತಾಗಿ ವಿವೇಕಾನಂದ ಅವರು ಜಗತ್ತಿನಲ್ಲಿರುವ ವಿವಿಧ ಪಂಥಗಳನ್ನು ನಾನು ವಿರೋಧಿಸುವುಲ್ಲ. ಪಂಥಗಳ ಸಂಖ್ಯೆ ಹೆಚ್ಚಾದಷ್ಟು ದೇವರಿಗೆ ಆಯ್ಕೆಗಾಗಿ ವಲಯಗಳು ವಿಶಾಲವಾಗುತ್ತ ಹೋಗುತ್ತವೆ. ಆದರೆ ಪ್ರತಿಯೊಂದು ಸಂದರ್ಭದಲ್ಲಿ, ಸಂಗತಿಗಳಲ್ಲಿ, ವ್ಯಾಜ್ಯಗಳಲ್ಲಿ ಒಂದೇ ಧರ್ಮವನ್ನು ಗುರಿಯಾಗಿ ದೂಷಿಸುವುದನ್ನು ನಾನು ವಿರೋಧಿಸುತ್ತೇನೆ. ಪ್ರತಿಯೊಂದು ಧರ್ಮದವರನ್ನು ನಾವು ಒಳಗೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಪ್ರತಿಪಾದಿಸಿದರು ಎಂದು ಜ್ಯೋತಿರ್ಮಯ ಶರ್ಮ ಹೇಳುತ್ತಾರೆ.

ಒಂದು ಕಡೆ ಧರ್ಮದ ವಿವಿಧ ಮಜಲುಗಳನ್ನು ಅರಿತುಕೊಳ್ಳಲು ಆಧ್ಯಾತ್ಮವನ್ನು ಬಳಸಿಕೊಂಡ ರಾಮಕ್ರಿಷ್ಣ ಹಿಂದೂ ಧರ್ಮವನ್ನು ಸನಾತನ ಧರ್ಮವೆಂದೇ ಪರಿಭಾವಿಸಿದ್ದರು. ಇವರ ಆಧ್ಯಾತ್ಮದ ಚಿಂತನೆಗಳಿಗೂ ಧರ್ಮದ ಕುರಿತಾದ ಶ್ರೇಣೀಕೃತ ವ್ಯವಸ್ಥೆಯ ಕುರಿತಾದ ಚಿಂತನೆಗಳ ನಡುವೆ ಅನೇಕ ವೈರುಧ್ಯಗಳಿದ್ದವು. ಆದರೆ ತಮ್ಮ ಗುರುಗಳಿಂದ ವಿಭಿನ್ನವಾಗಿ ಚಿಂತಿಸಿದ ವಿವೇಕಾನಂದ ಅವರು ಧರ್ಮವನ್ನು ಒಂದು ಕಡೆ ಆಧ್ಯಾತ್ಮದ ತುದಿಯಲ್ಲಿಯೂ ಮತ್ತೊಂದೆಡೆ ರಾಜಕೀಯ ನೆಲೆಯಲ್ಲಿಯೂ ನಿರ್ವಚಿಸಿದರು.
ಹೆಗೆಲ್ನ absolute idealism ಮತ್ತು Phenomenology of Spirit ನ ಫಿಲಾಸಫಿ ಚಿಂತನೆಗಳ ನಂತರ 19ನೇ ಶತಮಾದ ಎರಡು ಮತ್ತು ಮೂರನೇ ದಶಕಗಳಲ್ಲಿ ಯುರೋಪಿನಲ್ಲಿ ಸಂಸ್ಕೃತಿಗಳ ವಿಸ್ಮೃತಿ ಮತ್ತು ಬಂಡವಾಳಶಾಹಿಗಳ ಏಳಿಗೆಗಳು ಆ ಕಾಲದ ದಾರ್ಶನಿಕರಲ್ಲಿ ಚಿಂತೆಯನ್ನು ಹೆಚ್ಚಿಸಿದ್ದವು. ಬೂಜ್ರ್ವ ಶಕ್ತಿಗಳು ತಲೆಯೆತ್ತುತ್ತಿರುವುದು ಅವರಲ್ಲಿ ಆತಂಕವನ್ನುಂಟು ಮಾಡಿತು. ಕಡೆಗೆ 19ನೇ ಶತಮಾನ ಕೊನೆಯ ದಶಕದಲ್ಲಿ ಯುರೋಪ್ ರಾಷ್ಟ್ರಗಳು ಮತ್ತು ಇಂಡಿಯಾದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು, ಚೈತನ್ಯವನ್ನು ಆಧ್ಯಾತ್ಮದ ಚಿಂತನೆಗಳೊಂದಿಗೆ ಬೆಸೆಯಲಾಯಿತು. ಈ ಪ್ರಕ್ರಿಯೆಯು ಕ್ರಮೇಣ ಗಟ್ಟಿಗೊಳ್ಳುತ್ತಾ ಹೋಯಿತೇ ಹೊರತು ಕುಂಠಿತಗೊಳ್ಳಲಿಲ್ಲ. ಧರ್ಮವನ್ನು ಪುನರುಜ್ಜೀವನಗೊಳಿಸುವ ಮಾತುಗಳು ಕೇಳಿಬಂದವು. ಇಂತಹ ಕಾಲಘಟ್ಟದಲ್ಲಿ ವಿವೇಕಾನಂದ ಅವರು ಈ ಹಿಂದೂ ಧರ್ಮದ ಪುನರುಜ್ಜೀವನದ ಚಿಂತನೆಗಳಿಗೆ ಹೊಸ ತಿರುವುಗಳನ್ನು ಕೊಟ್ಟರು. ಈ ಹಿಂದೂ ಧರ್ಮಕ್ಕೆ ಪಾರಮರ್ಥಿಕ ಚಿಂತನೆಗಳ ಜೊತೆ ಜತೆಗೆ ರಾಜಕೀಯ ಪರಿಹಾರವನ್ನೂ ಬೆಸೆದವರು ವಿವೇಕಾನಂದ. ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರಂತಹವರು ಪ್ರತಿಪಾದಿಸಿದ್ದ ಸಂಕೇತಗರ್ಭಿತವಾದ, ಉದಾರವಾದಿ ನೆಲೆಗಳಲ್ಲಿದ್ದ ಧರ್ಮದ ಕುರಿತಾದ ಚಿಂತನೆಗಳನ್ನು ಅಲ್ಲಿಂದ ಬೇರ್ಪಡಿಸಿದ ವಿವೇಕಾನಂದ ಅವರು ಹಿಂದೂಯಿಸಂ ಅನ್ನು ಧಾರ್ಮಿಕ
ಸಮ್ಮೋಹಕತೆಯ ತತ್ವಗಳಿಗೆ, ಜನಸಾಮಾನ್ಯರ ರಾಜಕಾರಣಕ್ಕೆ ಹೊರಳಿಸಿದರು.

ರಾಜಕೀಯ ಹಿಂದೂಯಿಸಂಗೆ ಮೊಟ್ಟ ಮೊದಲ ಬುನಾದಿಯನ್ನು ಹಾಕಿದ್ದು ವಿವೇಕಾನಂದ ಅವರು ಎಂದು ಚಿಂತಕರು ವಿಶ್ಲೇಷಿಸುತ್ತಾರೆ. ಕಲೋನಿಯಲ್ ಆಡಳಿತದ ಸಂದರ್ಭದ 19ನೇ ಶತಮಾನದಲ್ಲಿ ಭಕ್ತಿಪಂಥದ ಚಳುವಳಿಯಿಂದ ಪ್ರೇರೇಪಿತಗೊಂಡಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮವನ್ನು ಮಾನವೀಯ ಜವಾಬ್ದಾರಿಯ ಮೂಲಕ,ರಹಸ್ಯವೆನಿಸುವ ಆಧ್ಯಾತ್ಮದ ಯೋಗದ ಮೂಲಕ ಬೋಧಿಸುತ್ತ ಮಧ್ಯಮವರ್ಗಗಳನ್ನು ಬೆರಗಾಗಿಸಿದ್ದರು. ಜ್ಯೋತಿರ್ಮಯ ಶರ್ಮ ಅವರು ಆದರೆ ರಾಮಕ್ರಿಷ್ಣ ಪರಮಹಂಸರ ಸಮಾನತಾ ಭಾವದ, ರಹಸ್ಯಾತ್ಮಕ ಆಧ್ಯಾತ್ಮಕತೆಯಿಂದ ಧರ್ಮವನ್ನು ಸಂಪೂರ್ಣವಾಗಿ ಹೊರತಂದ ವಿವೇಕಾನಂದ ಅವರು ಧರ್ಮದ ನಂಬಿಕೆಯನ್ನು ನೈತಿಕ ಮತ್ತು ದೈಹಿಕ ಶಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಿದರು ಮತ್ತು ಧರ್ಮ ಮತ್ತು ನಂಬಿಕೆಗಳ ಪರಂಪರೆಯ ಚಿಂತನೆಗಳನ್ನು ಹುಟ್ಟು ಹಾಕಿದರು ಹಾಗೂ ಯಶಸ್ವಿಯಾದರು. ಕೇವಲ ಕಾರಣಗಳ ಮಿತಿಯೊಳಗೆ ಧರ್ಮವನ್ನು ಅರಿತುಕೊಳ್ಳಬೇಕೆಂದು ಪ್ರತಿಪಾದಿಸಿದ ವಿವೇಕಾನಂದ ಹೀಗೆ ಮಾಡುವುದರ ಮೂಲಕ ಸತ್ಯವನ್ನು ವಿವಿಧ ಮಜಲುಗಳಲ್ಲಿ ಅನಾವರಣಗೊಳಿಸಬಹುದೆಂದು, ಪ್ರೀತಿ ಮತ್ತು ಮಮತೆಯನ್ನು ದೇವರನ್ನು ನೋಡುವ ಸಾಕ್ಷಾಧಾರಗಳಾದ ಸಾಮರ್ಥ್ಯಗಳು ಎಂದೂ ಚಿಂತಿಸಿದರು. ಇದರ ಫಲವಾಗಿ ಭಕ್ತಿಪಂಥವು ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದ ವಣರ್ಾಶ್ರಮದ ಸನಾತನ ಚಿಂತನೆಗಳ ಸ್ವಧರ್ಮ ಪರಿಕಲ್ಪನೆಯು ಹಿಂಬಾಗಿಲಿನಿಂದ ಪ್ರವೇಶ ಪಡೆದುಕೊಂಡಿತು. ಪೌರುಷತ್ವ, ಬಲಶಾಲಿ ಸಾಮರ್ಥತೆಗಳು ಧರ್ಮದ ಪುನರುಜ್ಜೀವನಕ್ಕೆ ಬುನಾದಿಗಳಾಗಿ ಪ್ರತಿಪಾದನೆಗೊಂಡವು. ಮಾನವೀಯತೆಯ ಪರವಾಗಿದ್ದ ವಿವೇಕಾನಂದರ ಈ ರಾಜಕೀಯ ಹಿಂದೂಯಿಸಂ ಮುಂದೆ ವಿವಿಧ ರೀತಿಯಲ್ಲಿ ಬದಲಾವಣೆಗೊಳ್ಳುತ್ತ ಕಾಲು ಶತಮಾನದ ನಂತರ ಗಾಂಧಿಯವರ ಹಿಂದ್ ಸ್ವರಾಜ್ ಆಗಿ ಹೊರ ಹೊಮ್ಮಿತು ಮdownload (2)ತ್ತು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಸ್ವರೂಪ ಪಡೆದುಕೊಂಡಿತು.

ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರ ಚಿಂತನೆಗಳ ಈ ಆಧ್ಯಾತ್ಮಕತೆಯ ಸಂಕೇತಗಭರ್ಿತ ಉದಾರವಾದಿ ಚಿಂತನೆಗಳು ಮೇಲಿನಂತೆ ಹೈಜಾಕ್ಗೊಂಡಿದ್ದನ್ನು ಕಣ್ಣಾರೆ ಕಂಡಿದ್ದ ಡಾ.ಬಿ.ಆರ್.ಆಂಬೇಡ್ಕರ್ ಅವರು ಈ ಧಾಮರ್ಿಕ ಆಧ್ಯಾತ್ಮಿಕತೆಯು ಮುಂದೊಂದು ದಿನ ವಿಕಾರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಸಿದ್ದರು. ಈ ಮಾದರಿಯ ಹಿಂದೂ ಧಾರ್ಮಿಕತೆಯ ಆಧ್ಯಾತ್ಮಕತೆಯನ್ನು ಅಂಬೇಡ್ಕರ್ರವರು ಅನೈತಿಕವಾದ,ವಿಕಾರವಾದ ಮೃಗಸದೃಶ್ಯ ಶಕ್ತಿಗೆ ಹೋಲಿಸಿ ಮುಂದೊಂದು ದಿನ ಇದು ರೂಢಿಗತಗೊಳ್ಳುವ ಹೇರುವಿಕೆಯ ಕಾನೂನಾಗಿ ಮಾರ್ಪಡುತ್ತದೆ ಎಂದು 1920ರಲ್ಲಿಯೇ ಎಚ್ಚರಿಸಿದ್ದರು.

ಇಂದು 21ನೇ ಶತಮಾನದಲ್ಲಿ ಈ ಆಧ್ಯಾತ್ಮ ಧಾರ್ಮಿಕತೆಯು ಸಂಪೂರ್ಣವಾಗಿ ವಿಕಾರಗೊಂಡು, ಕ್ರೌರ್ಯದ ಪ್ರದರ್ಶಕ್ಕೆ ಆಡೊಂಬೊಲವಾಗಿ, ಮಾನವ ವಿರೋಧಿ ತತ್ವಗಳಾಗಿ ಪರಿವರ್ತನೆಗೊಂಡು ದಿನೇ ದಿನಕ್ಕೆ ವಿರೂಪಗೊಳ್ಳುತ್ತಿದೆ ಮತ್ತು ಜಟಿಲಗೊಳ್ಳುತ್ತಿದೆ. ಜಾತೀಯತೆಯನ್ನು ವಿರೋಧಿಸಿದ ವಿವೇಕಾನಂದರನ್ನು ತನ್ನ ಮತೀಯವಾದಿ, ಜಾತಿ ಪದ್ಧತಿಯ, ಪ್ರತ್ಯೇಕತೆಯ ಹಿಂದೂ ಧರ್ಮಕ್ಕೆ appropriation ಮಾಡಿಕೊಂಡ ಸಂಘ ಪರಿವಾರ ಈ ಮತಾಂಧತೆಯನ್ನು ವಿರೋಧಿಸುವ ನಾಗರಿಕರ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ.

ಈ ಸಂಘ ಪರಿವಾರದ ಲುಂಪೆನ್ ಗುಂಪು ಮತ್ತು ಅವರನ್ನು ಕುರುಡಾಗಿ ಬೆಂಬಲಿಸುವ ಧಾರ್ಮಿಕ ಮತಾಂಧರ ಮೂಲಭೂತವಾದವನ್ನು ವಿರೋಧಿಸುವ ಜನಪರ ಚಿಂತಕರು, ಲೇಖಕರ ಮೇಲೆ ವ್ಯಕ್ತಪಡಿಸುತ್ತಿರುವ ಅಸಹನೆಗಳು ಕ್ರೌರ್ಯದ ನೆಲೆಯಲ್ಲಿ ನಡೆಸುತ್ತಿರುವ ಮಾನಸಿಕ ಹಲ್ಲೆಗಳು ಅಂಬೇಡ್ಕರ್ ಅವರ ಮೇಲಿನ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿಯಾಗಿವೆ. ತೀರಾ ಇತ್ತೀಚಿಗೆ ಪೆರುಮಾಳ್ ಮುರುಗನ್ ಅವರ ಕಾದಂಬರಿಯ ವಿರುದ್ಧ ಪ್ರತಿಭಟನೆ, ದೌರ್ಜನ್ಯವನ್ನು ನಡೆಸಿದ ಸಂಘ ಪರಿವಾರದ ಫೆನಟಿಸಂ ಮತ್ತು ಅವರ ಮತಾಂಧ ಪಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮತ್ತು ಪ್ರಮುಖ ಚಿಂತಕ ದಿನೇಶ್ ಅಮೀನ್ ಮಟ್ಟು ಅವರ ಮೇಲೆ ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ. ಮೂರು ವರ್ಷಗಳ ಹಿಂದೆ ದಿನೇಶ್ ಅವರು ವಿವೇಕಾನಂದರ ಕುರಿತಾಗಿ ಬರೆದ ವಿಶಿಷ್ಟವಾದ, ಆಕರ ಗ್ರಂಥಗಳನ್ನು ಅಧರಿಸಿ ಬರೆದ ಲೇಖನವನ್ನು ಇಂದು ಹಿಂದೂ ಮತಾಂಧರು ವಿನಾಕಾರಣವಾಗಿ, ಅಮಾನವೀಯವಾಗಿ ಉಲ್ಲೇಖಿಸಿ ಅವರ ವಿರುದ್ಧ ಕೀಳು ಮಟ್ಟದ ಭಾಷೆಯನ್ನು ಪ್ರಯೋಗಿಸುತ್ತಿದ್ದಾರೆ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸಬೇಕು,ಶತೃತ್ವವನ್ನು ನಾನು ವಿರೋಧಿಸುತ್ತೇನೆ ಎಂದು ದೃಢವಾಗಿ ಪ್ರತಿಪಾದಿಸಿದ ವಿವೇಕಾನಂದರ ಮಾನವೀಯತೆಯ ತತ್ವಗಳನ್ನು ಇಂದು ತಮ್ಮ ಮತಾಂಧತೆಗೆ ತಕ್ಕಂತೆ ತಿರುಚಿ appropriation ಮಾಡಿಕೊಂಡ ವಿದ್ಯಾವಂತ ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ದಿನೇಶ್ ಅವರ ಮೇಲೆ ಶತೃತ್ವವನ್ನು ಸಾಧಿಸುತ್ತಿದ್ದಾರೆ, ದಿನೇಶ್ ಅವರ ಚಿಂತನೆಗಳನ್ನು ಗೌರವಿಸುವ, ಪ್ರಜಾತಾಂತ್ರಿಕವಾಗಿ ಚರ್ಚಿಸುವ ಕನಿಷ್ಠ ನಾಗರಿಕತೆಯನ್ನು ಸಹ ಬೆಳೆಸಿಕೊಂಡಿಲ್ಲ.ಈ ಧಾರ್ಮಿಕ ಮತಾಂಧರನ್ನು ವಿವೇಕಾನಂದರ ಅನುಯಾಯಿಗಳು ಎಂದು ಮಾನ್ಯ ಮಾಡಲು ಸಾಧ್ಯವೇ ಇಲ್ಲ.

ಇನ್ನು ಕರ್ನಾಟಕದಲ್ಲಿ ವಿವೇಕಾನಂದರು ತನ್ನ ಆಸ್ತಿಯೆಂಬಂತೆ ವರ್ತಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಎನ್ನುವ ಮತ್ತೊಬ್ಬ ಹುಸಿ ಚಿಂತಕ, ಹಿಂದುತ್ವವಾದಿ ಪ್ರತಿಪಾದಕ ಮೂರು ವರ್ಷಗಳ ಹಿಂದೆ ದಿನೇಶ್ ರವರ ವಿವೇಕಾನಂದರ ಕುರಿತ ಲೇಖನಕ್ಕೆ ಪ್ರಜಾಪ್ರಭುತ್ವವಿರೋಧಿ ಮಾದರಿಯಲ್ಲಿ ವಿರೋಧಿಸಲು ಹೋಗಿ ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗಿದ್ದರು. ಭಾಷಣಕ್ಕೆ ನಿಂತರೆ ಹಿಂದೂಯಿಸಂ ಪರವಾಗಿ ಉನ್ಮಾದಕಾರಿಯಾಗಿ ಮಾತನಾಡುವ, ಹಿಂದುತ್ವದ ನಿರ್ದಿಷ್ಟ ವೈದಿಕಶಾಹಿಯನ್ನು ಪ್ರತಿಪಾದಿಸುವ ಈ ಸೂಲಿಬೆಲೆಯ ಮತೀಯವಾದಿ ಹಿಂದೂಯಿಸಂ ಚಿಂತನೆಗಳು ಸಂವಿಧಾನ ವಿರೋಧಿಯಾಗಿವೆ. ಪ್ರಜಾತಾಂತ್ರಿಕ ಮೌಲ್ಯಗಳನ್ನು ಧಿಕ್ಕರಿಸುತ್ತವೆ. ಚಲನಶೀಲವಾಗಬಯಸುವ ಮಾನವೀಯ ಧಾರ್ಮಿಕತೆಯನ್ನು ಸಮಾನತೆ, ಜೀವಪರತೆಯನ್ನು ವಿರೋಧಿಸುತ್ತ, ಧಾರ್ಮಿಕತೆಯನ್ನು ಕ್ಷುದ್ರತೆಯ ಮಟ್ಟಕ್ಕೆ ಇಳಿಸುವಲ್ಲಿ ಈ ಸೂಲಿಬೆಲೆಯಂತಹ ಪ್ರತಿಗಾಮಿ ಭಾಷಣಕಾರರು ಯಶಸ್ವಿಯಾಗಿದ್ದಾರೆ.

ಲಂಕೇಶ್ ಹೇಳಿದಂತೆ ಸುಳ್ಳು ನನಗೆ ಲಾಭದಾಯಕವಾಗಿದ್ದರೆ ನಾನು ಸತ್ಯವನ್ನೇಕೆ ಹೇಳಬೇಕು ಎನ್ನುವ ಮಾತಿಗೆ ಅಕ್ಷರಶಃ ಸಾಕ್ಷಿಯಂತಿರುವ ಈ ಸೂಲಿಬೆಲೆಯನ್ನು ಹಂಪಿ ಕನ್ನಡ ವಿ.ವಿ.ಯ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ ಮನಸ್ಸಾದರೂ ಎಂತಹ ಕೆಡುಕಿನದು ಎಂದು ನೆನೆಸಿಕೊಂಡರೆ ಗಾಬರಿಯಾಗುತ್ತದೆ. ಇಂತಹವರೊಂದಿಗೆ ಕೈ ಜೋಡಿಸಿರುವ ಕನ್ನಡ ಪ್ರಭ ದಿನಪತ್ರಿಕೆ ತನ್ನ ಪತ್ರಿಕೋದ್ಯಮದ ಎಲ್ಲಾ ಮೌಲ್ಯಗಳನ್ನು ಧಿಕ್ಕರಿಸಿ ವಿನಾಕಾರಣ ದಿನೇಶ್ ಅಮೀನ್ ಅವರ ಮೇಲೆ ವೈಯುಕ್ತಿಕ ದ್ವೇಷವನ್ನು ಸಾಧಿಸುತ್ತಿದೆ. ಹೀಗೆ ಕೀಳು ಮಟ್ಟದಲ್ಲಿ ಹಂಗಿಸುವ ಕನ್ನಡಪ್ರಭ ದಿನಪತ್ರಿಕೆಯ ಈ ಅನೈತಿಕ ಮನಸ್ಥಿತಿಯ ಹಿಂದಿನ ಶಕ್ತಿಗಳಾವುವೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಪತ್ರಿಕೋದ್ಯಮವನ್ನು ರೋಗ್ರಗ್ರಸ್ಥ ತಾಣವಾಗಿ, ಕೊಳೆತು ನಾರುವ ಕೊಚ್ಚೆ ಗುಂಡಿಯಾಗಿ ಪರಿವರ್ತಿಸಿದ ಪತ್ರಕರ್ತರು ಈ ದಿನಪತ್ರಿಕೆಯನ್ನು ದುರುಪಯೋಗಪಡಿಸಿಕೊಂಡು ಇಂದು ದಿನೇಶ್ ರಂತಹ ಚಿಂತಕರ ಚಾರಿತ್ರ್ಯಹರಣದಲ್ಲಿ ತೊಡಗಿದ್ದಾರೆ.

ಆರೋಗ್ಯಪೂರ್ಣ, ಸೌಹಾರ್ದಯುವಾದ ಸಂವಾದವನ್ನು ತಿರಸ್ಕರಿಸುವ ಇಂತಹ ಅಪಾಯಕಾರಿ ಮಾಧ್ಯಮಗಳು, ಪುಢಾರಿ ಪತ್ರಕರ್ತರು, ವಿದ್ಯಾವಂತ ಮತಾಂಧರು ಅಂಬೇಡ್ಕರ್ ಅವರು ವಿವರಿಸಿದಂತೆ ಅನೈತಿಕವಾದ, ವಿಕಾರವಾದ ಮೃಗಸದೃಶ್ಯ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವರ ವಿಚಾರಹೀನತೆಯ ಕುಮ್ಮುಕ್ಕಿನಿಂದಾಗಿ ಇಂದು ವ್ಯವಸ್ಥೆಯಲ್ಲಿ ದ್ವೇಷದ, ಸೇಡಿನ, ಕ್ರೌರ್ಯದ ವಾತಾವರಣ ನಿರ್ಮಾಣಗೊಂಡಿದೆ ಮತ್ತು ನಮ್ಮೆಲ್ಲರ ನಿಷ್ಕ್ರಿಯತೆ ಮತ್ತು ನಿರ್ಲಕ್ಷ ಧೋರಣೆಗಳು, ಸಿನಿಕತನ, ವಿತಂಡವಾದದ ಫಲವಾಗಿಯೇ ಕರ್ನಾಟಕದ ಮತಾಂಧರ ಲುಂಪೆನ್ ಗುಂಪು ಆಳದಲ್ಲಿ ಭಂಡತನವನ್ನು ಬೆಳೆಸಿಕೊಳ್ಳುತ್ತ ಹಿಂಸಾತ್ಮಕ ವಾತಾವರಣವನ್ನು ನಿರ್ಮಿಸಿದೆ.

ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿಕೊಂಡ ಸಂಘ ಪರಿವಾರ ಇಂದು ಅಕ್ಟೋಬರ್2 ಗಾಂಧಿ ಹುಟ್ಟಿದ ದಿನವdineshನ್ನು appropriation ಮಾಡಿಕೊಂಡು ಗೋಡ್ಸೆ ಗಾಂಧಿಯನ್ನು ಕೊಂದ ಜನವರಿ 30 ರ ದಿನದಂದು ದೇಶದ ನಾಲ್ಕು ಮೂಲೆಗಳಲ್ಲಿ ಗೋಡ್ಸೆಯ ಪ್ರತಿಮೆಗಳನ್ನು ನಿರ್ಮಿಸಲು ಹೊರಟಿದೆ. ಆ ದಿನವನ್ನು ವಿಜಯೋತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್6 ಅನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6 ಅನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6 ರಂದು ವಿಜಯೋತ್ಸವ ದಿನವಾಗಿ appropriation ಮಾಡಿಕೊಂಡಿದೆ.
ಪ್ರಜ್ಞಾವಂತರು ಸಂಸ್ಕೃತಿ ಮತ್ತು ಧರ್ಮಗಳ ಪ್ರಶ್ನೆಗಳನ್ನು ಕಡೆಗಣಿಸಿದ್ದರಿಂದ ಅವು ಉಡಾಳರ ಕೈಯಲ್ಲಿ ತ್ರಿಶೂಲಗಳಾದವು, ಅಗ್ನಿ ಭಕ್ಷಕ ರಾಜಕಾರಣಿಗಳ ಕೈಯಲ್ಲಿ ಮಾರಕಾಸ್ತ್ರಗಳಾದವು ಎಂದು ಡಿ.ಆರ್.ನಾಗರಾಜ್ ಮಾರ್ಮಿಕವಾಗಿ ಹೇಳುತ್ತಾರೆ. ಇನ್ನಾದರು ನಾವು ಮರಳಿ ಸಂಸ್ಕೃತಿಯನ್ನು ಕೈಗೆತ್ತಿಕೊಳ್ಳಬೇಕು. ವೈಚಾರಿಕವಾಗಿ, ಬಹುತ್ವದ ಪ್ರತಿಸಂಸ್ಕೃತಿಯನ್ನು ಕಟ್ಟಬೇಕು. ಧರ್ಮವನ್ನು ಈಗಿನ ಗುಲಾಮಿ ಸಂಸ್ಕೃತಿಯಿಂದ ಕಾಪಾಡಬೇಕು. ಅದಕ್ಕೆ ಬೇಕಾದ ಸೆಕ್ಯುಲರ್ ಎನ್ನುವ ಮಾಂತ್ರಿಕ ತತ್ವವನ್ನು ಕಟ್ಟಲು ತೊಡಗಬೇಕು.

ಲೇಖಕ ಪೆರುಮಾಳ್ ಮುರುಗನ್ ‘ಸಾವು’ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ

– ಶಿವರಾಮ್ ಕೆಳಗೋಟೆ.perumal

“ಪೆರುಮಾಳ್ ಮುರುಗನ್ ಎಂಬ ಲೇಖಕ ಸತ್ತಿದ್ದಾನೆ”. ಇದು ಬೇರೆ ಯಾರೋ ಹೇಳಿದ್ದಲ್ಲ; ಸ್ವತಃ ಲೇಖಕ ತನಗಾದ ನೋವಿಗೆ ಪ್ರತಿಯಾಗಿ ತನ್ನ ಸಾವನ್ನು ಘೋಷಿಸಿದ್ದು. ಸದ್ಯ ಮಾರುಕಟ್ಟೆಯಲ್ಲಿರುವ ತನ್ನ ಎಲ್ಲಾ ಕೃತಿಗಳನ್ನು ಹಿಂದಕ್ಕೆ ಪಡೆಯುತ್ತೇನೆ, ಮುಂದೆ ಏನನ್ನೂ ಬರೆಯಲಾರೆ ಎಂದಿದ್ದಾರೆ. ಈ ಲೇಖಕ ಕೇವಲ ಒಂದು ವಾರದ ಹಿಂದೆ ದಿ ಹಿಂದು ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ನಾನು ಮೊದಲು ಬರಹಗಾರ, ನಂತರ ಶಿಕ್ಷಕ. ನನ್ನೊಳಗೆ ಇನ್ನೂ ಹತ್ತು ಕಾದಂಬರಿಗಾಗುವಷ್ಟು ಸರಕು ಇದೆ ಎನಿಸುತ್ತಿದೆ ಎಂದು ಹೇಳಿದ್ದರು. ನಂತರದ ಬೆಳವಣಿಗೆಗಳಿಂದ ಬೇಸತ್ತು ಅವರು ಇಂತಹ ನಿರ್ಧಾರಕ್ಕೆ ಬಂದರು.

ವಿವಾದಕ್ಕೆ ತುತ್ತಾದದ್ದು ನಾಲ್ಕು ವರ್ಷಗಳ ಹಿಂದೆ ಅವರು ಹೊರತಂದಿದ್ದ ಮಾಧೋರುಭಾಗನ್ ಕಾದಂಬರಿ. ಇದುವರೆಗೆ ಯಾವುದೇ ವಿವಾದಗಳಿರಲಿಲ್ಲ. ಇತ್ತೀಚೆಗಷ್ಟೆ ಇಂಗ್ಲಿಷ್ ಗೂ (One Part Woman) ಅನುವಾದಗೊಂಡಿತ್ತು. ವಿಮರ್ಶಾ ವಲಯದಲ್ಲಿ ಮೆಚ್ಚುಗೆ ಗಳಿಸಿತ್ತು. ಆದರೆ ಕೆಲ ಮೂಲಭೂತವಾದಿಗಳಿಗೆ ಸರಿ ಕಾಣಲಿಲ್ಲ. ಮಕ್ಕಳಿಲ್ಲದ ಪೋಷಕರು, ನೆರೆಹೊರೆಯವರ, ನೆಂಟರಿಷ್ಟರ ಮೂದಲಿಕೆಗೆ ಗುರಿಯಾಗಿ ಮಕ್ಕಳನ್ನು ಹೊಂದುವ ಕಾರಣಕ್ಕಾಗಿ ಬಹಳ ಹಿಂದೆ ತಿರುಚೆಂಗೋಡಿನ ಅರ್ಧನಾರೀಶ್ವರ ದೇವಲಾಯದ ಆವರಣದಲ್ಲಿ ಅನುಸರಿಸುತ್ತಿದ್ದ ಕ್ರಮಗಳ ಬಗ್ಗೆ ಕಾದಂಬರಿಯಲ್ಲಿ ಬರುವ ಉಲ್ಲೇಖ ಸೋಕಾಲ್ಡ್ ಹಿಂದೂ ಧರ್ಮ ರಕ್ಷಕರ ಟೀಕೆಗೆ ಕಾರಣವಾಯ್ತು. ಟೀಕೆ ಮಾತಿಗೆ ನಿಲ್ಲಲಿಲ್ಲ. ದಾಳಿ, ಕೊಲೆ ಬೆದರಿಕೆಗಳೂ ಬಂದವು. ನಾಮಕ್ಕಲ್ ನಲ್ಲಿ ನೆಲೆಸಿರುವ ಪೆರುಮಾಳು ಮುರುಗನ್ ತಮ್ಮ ಕುಟುಂಬ ಸಮೇತ, ಪೊಲೀಸರ ಸೂಚನೆ ಮೇರೆಗೆ, ರಕ್ಷಣೆಗಾಗಿ ಬೇರೆ ಊರಿಗೆ ತಲೆಮರೆಸಿಕೊಂಡು ಹೋಗಬೇಕಾಯ್ತು.

ಹಲವು ದಿನಗಳಿಂದ ಪ್ರತಿಭಟನೆ, ವೈಯಕ್ತಿಕ ನಿಂದನೆ, ಕೃತಿಗೆ ಬೆಂಕಿ ಹಚ್ಚಿದಂತಹ ಪ್ರಕರಣಗಳಿಂದ ಬೇಸತ್ತು ಮುರುಗನ್ ತನ್ನೊಳಗಿನ ಲೇಖಕನ ಸಾವನ್ನು ಘೋಷಿಸಿದರು. ಅಲ್ಲಿಗೆ ಪ್ರತಿಭಟನಕಾರರಿಗೆ ಜಯ. ಬಿಜೆಪಿ ನಾಯಕರು ಲೇಖಕರ ನಿರ್ಧಾರವನ್ನು ಸ್ವಾಗತಿಸಿದರು. ದೇವರ ನಿರಾಕರಣೆ ಆಂದೋಲನ ಹಾಗೂ ದ್ರಾವಿಡ ಚಳವಳಿ ಹಿನ್ನೆಲೆಯಲ್ಲಿ ರೂಪುಗೊಂಡ ತಮಿಳು ನಾಡಿನ ರಾಜಕಾರಣ ಈ ಘಟನೆ ಬಗ್ಗೆ ಮೌನ ವಹಿಸಿದ್ದು ವಿಶಿಷ್ಟವಾಗಿತ್ತು. ಸದ್ಯ ಬದಲಾವಣೆ ಹಾದಿಯಲ್ಲಿರುವ ರಾಜಕಾರಣವನ್ನೂ ಅದು ಸೂಚಿಸಿತು. ತಮಿಳುನಾಡಿನಲ್ಲಿ ಬೇರೂರುವ ಪಣ ತೊಟ್ಟಿರುವ ಬಿಜೆಪಿ ಈ ಕೃತಿಯ ಮೂಲಕ ರಾಜಕಾರಣವನ್ನು ಪ್ರವೇಶಿಸಿದೆ. ಮೊದಲ ಯತ್ನದಲ್ಲಿ ಜಯಗಳಿಸಿರುವ ಕಾರಣ, ಇದೇ ಉತ್ಸಾಹದಲ್ಲಿ ಇಂತಹ ಅನೇಕ ಘಟನೆಗಳು ಹೆಚ್ಚೆಚ್ಚು ಸಂಭವಿಸಿದರೆ ಅಚ್ಚರಿಪಡಬೇಕಿಲ್ಲ.

ಶಾಂತಿ ಸಭೆಯಲ್ಲಿ ಲೇಖಕ ಕ್ಷಮೆ ಕೇಳುವಂತೆ ಮಾಡಿದ ಪ್ರತಿಭಟನಾಕಾರರು ಮತ್ತು ಜಿಲ್ಲಾಡಳಿತ ಕೊನೆಗೆ ಅವರು ಬರಹವನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬರುವಂತೆ ಮಾಡಲು ಯಶಸ್ವಿಯಾದರು. ಲೇಖಕ ಎದೆಗುಂದಬಾರದಿತ್ತು ಎನ್ನುವುದು ಸಹಜ. ಆದರೆ, ಯಾವುದೇ ಲೇಖಕ ಅಂತಹದೊಂದು ನಿರ್ಧಾರಕ್ಕೆ ಬರುವ ಮುನ್ನ ಎದುರಿಸಿದ ತಾಕಲಾಟ ಎಷ್ಟಿರಬೇಕು? ಆಡಳಿತ ವರ್ಗ ಪ್ರತಿಭಟನಾಕಾರರ ಪರವಾಗಿರುವಾಗ, ಕುಟುಂಬದ ರಕ್ಷಣೆಗೆ ನಿಲ್ಲುವವರಾರು? ಹಾಗಾಗಿ, ಮುರುಗನ್ ಬರೆಯುವುದನ್ನು ಬಿಟ್ಟು ಅಧ್ಯಾಪನಾ ವೃತ್ತಿಗೇ ಸೀಮಿತವಾಗಿರುವ ಇರಾದೆ ವ್ಯಕ್ತಪಡಿಸಿದ್ದಾರೆ. ಇದು ಎಲ್ಲಾ ಪ್ರಗತಿಪರ ಮನಸುಗಳ ಸೋಲು. ಪ್ರತಿಭಾವಂತ ಲೇಖಕ ಬೆದರಿಕೆ ಹಾಕುವವರ ಕಾರಣಕ್ಕೆ ಲೇಖನಿಯನ್ನು ಕೆಳಗಿಡುತ್ತೇನೆ ಎಂದು ನಿರ್ಧರಿಸಿದರೆ, ಈ ಸಮಾಜ ನಾಚಿಕೆ ಪಡಬೇಕು. ಆದರೆ ವಿಚಿತ್ರವೆಂದರೆ, ಈ ನಿರ್ಧಾರವನ್ನು ಮೆಚ್ಚಿ ಸ್ವಾಗತಿಸುವ ಬಿಜೆಪಿಯಂತಹ ರಾಜಕೀಯ ಪಕ್ಷಗಳಿವೆ ಇಲ್ಲಿ!

ಇದೇ ಹೊತ್ತಿಗೆ ಕರ್ನಾಟಕದಲ್ಲಿ ಒಂದು ಬೆಳವಣಿಗೆ ನಡೆದಿದೆ. ದಿನೇಶ್ ಅಮಿನ್ ಮಟ್ಟು ಮೂರು ವರ್ಷಗಳ ಹಿಂದೆ ವಿವೇಕಾನಂದರ ಕುರಿತ ಲೇಖನ ಬರೆದ ನಂತರ ಕೋಮುವಾದಿ ಶಕ್ತಿಗಳು ಹುಟ್ಟುಹಾಕಿದ್ದ ವಿವಾದವೊಂದು ಮತ್ತೆ ಜೀವ ಪಡೆದಿದೆ. ತಮ್ಮ ಮೂಗಿನ ನೇರಕ್ಕೆ ವಿವೇಕಾನಂದರನ್ನು ಅರ್ಥಮಾಡಿಕೊಂಡು, ಅವರನ್ನು ತಮ್ಮ ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದವರಿಗೆ ಆ ಲೇಖನ ಸಿಟ್ಟು ತರಿಸಿತ್ತು. ಏಕೆಂದರೆ, ಅವರಿಗೆ ವಾಸ್ತವವನ್ನು ಗ್ರಹಿಸುವ ಉತ್ಸಾಹವಾಗಲಿ, ಮುಕ್ತ ಮನಸ್ಸಾಗಲಿ ಇರಲಿಲ್ಲ. ಅದೇ ಕಾರಣಕ್ಕೆ ಅಂದು ಅವರ ಕೆಲಸ ಮಾಡುತ್ತಿದ್ದ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಅಷ್ಟೇ ಅಲ್ಲ, ಅನೇಕ ಮಂದಿ ತಮ್ಮ ಕಾಮೆಂಟುಗಳಲ್ಲಿ, ಎಸ್ ಎಂ ಎಸ್ ಗಳಲ್ಲಿ ನಾನಾ ರೀತಿಯ ಬೆದರಿಕೆ ಹಾಕಿದರು.

ಮೊನ್ನೆ ವಿವೇಕಾನಂದರ ಜನ್ಮದಿನಾಚರಣೆಯಂದು ಅದೇ ಲೇಖನ ಸಾಮಾಜಿಕ ತಾಣದಲ್ಲಿ ಹರಿದಾಡಿದಾಗ ಕೆಲವರು ಕೆಟ್ಟಾ ಕೊಳಕು ಭಾಷೆಯಲ್ಲಿ ದಿನೇಶ್ ವಿರುದ್ಧ ಕೆಂಡಕಾರಿದ್ದಾರೆ. ತಮಗೆ ಲೇಖನದ ವಿಚಾರ ಒಪ್ಪಿಗೆಯಾಗದಿದ್ದರೆ, ಸಂಯಮದ ಭಾಷೆಯಲ್ಲಿ ವಿರೋಧ ವ್ಯಕ್ತಪಡಿಸುವ ಛಾತಿ ಇರಬೇಕು. ಆದರೆ ಅಲ್ಲಿ ಕೆಲವರಿಗೆ ಅಂತಹ ಗುಣವೇ ಇದ್ದಂತಿಲ್ಲ. ಅವರ ವಿರುದ್ಧ ದೂರು ನೀಡಲಾಗುವುದು ಎಂದು ಒಂದು ಸ್ಟೇಟಸ್ ಹಾಕಿದಾಕ್ಷಣ, ಹಾಗೆ ಕೆಟ್ಟಾ ಕೊಳಕು ಭಾಷೆ ಬಳಸಿ ಕಾಮೆಂಟು ಮಾಡಿದ್ದವರು ಕ್ಷಮೆ ಕೇಳಿದ್ದಾರೆ, ಅಷ್ಟೇ ಅಲ್ಲ ತಮ್ಮ ಹೇಳಿಕೆಗಳನ್ನು ಡಿಲೀಟ್ ಮಾಡಿದ್ದಾರೆ. ಅದರರ್ಥ ಅವರಿಂದ ತಪ್ಪಾಗಿದೆ ಎಂದು ಅವರೇ ಒಪ್ಪಿಕೊಂಡಂತಾಯ್ತು.

ಅವರ ಮೇಲೆ ಕೇಸು ದಾಖಲಾಗಿದೆ. ಕೇಸು ದಾಖಲಾಗಿದ್ದನ್ನೇ ಕೆಲವರು ಪ್ಯಾರಿಸ್ ನ ಪತ್ರಿಕಾ ಕಚೇರಿ ಮೇಲೆ ನಡೆದ ದಾಳಿಗೆ ಹೋಲಿಸಿ ಅನೇಕ ಮಂದಿ ಟೀಕಿಸುತ್ತಿದ್ದಾರೆ. ನಮಗೆ ನಮ್ಮ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ ಎಂದು ವಾದಿಸುತ್ತಿದ್ದಾರೆ. ಕೇಸು ದಾಖಲಾಗಿರುವುದೂ ಇದೇ ನೆಲದ ಕಾನೂನಿನ ಅಡಿಯಲ್ಲಿ ಎನ್ನುವುದನ್ನು ಅವರು ಮರೆಯಬಾರದು. ಹಿಂದೆ ಪ್ರಗತಿಪರ ಚಿಂತಕರನ್ನು ಅತ್ಯಾಚಾರಕ್ಕೊಳಪಡಿಸುವ ವಿಕೃತ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದವರೊಬ್ಬರdinesh ಮೇಲೆಯೂ ಇಂತಹ ದೂರು ದಾಖಲಾಗಿತ್ತು. ಸಭ್ಯತೆ ಮೇರೆ ಮೀರಿ ಮಾತನಾಡುವುದು, ಮಾನಸಿಕವಾಗಿ ನೋವು ಮಾಡುವುದು ಹಾಗೂ ಕೊಲೆ, ದೈಹಿಕ ಹಲ್ಲೆ, ದಾಳಿಯಂತಹ ಧಮಕಿ ಹಾಕುವುದು ಕಾನೂನು ಪರಿಭಾಷೆಯಲ್ಲಿ ಅಪರಾಧಗಳೇ. ಅಂತಹ ಕೃತ್ಯಗಳಿಂದ ನೊಂದವರು ಪೊಲೀಸ್ ಮೊರೆ ಹೋಗಿ ದೂರು ನೀಡಬಹುದು.

ಇಲ್ಲಿ ಐಟಿ ಕಾಯಿದೆ 2000 ರ ಅಡಿಯಲ್ಲಿ ದೂರು ದಾಖಲಾಗಿದೆ. ಆದರೆ ಈ ಕಾಯಿದೆಯಲ್ಲಿ ಕೆಲವು ಅಪಾಯಗಳಿವೆ. ಎಂತಹದನ್ನೂ ಇದರಡಿ ತಂದು ದೂರು ದಾಖಲಿಸಿ ಮುಜುಗರಕ್ಕೆ, ಹಿಂಸೆಗೆ, ಅಸಹಾಯಕತೆಗೆ ತಳ್ಳಬಹುದು. ಕೋಮು ಶಕ್ತಿಗಳು ಇಂತಹ ಸಾಧನಗಳನ್ನು ಬಳಸಿಕೊಂಡು ಸಭ್ಯರನ್ನೂ ಭಯೋತ್ಪಾದಕರನ್ನಾಗಿ ಬಿಂಬಿಸುವ ಅಪಾಯವಿದೆ.  ಆ ಕಾರಣಕ್ಕೆ ಜಾಗ್ರತೆ ಬೇಕಿದೆ. ಇಂತಹ ಕಾನೂನನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾದರೆ ಅಚ್ಚರಿ ಇಲ್ಲ. ಹಿಂದೆ ಅನೇಕ ಪ್ರಗತಿಪರ ಮನಸ್ಸುಗಳನ್ನು ಈ ಕಾನೂನಿನ ಕೆಲ ಕಲಂಗಳನ್ನು ವಿರೋಧಿಸಿದ್ದಿದೆ (ಮುಖ್ಯವಾಗಿ 66A). ಸೌಹಾರ್ದ ವಾತಾವರಣ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ಇರುವ ಸಮಾಜ ನಿರ್ಮಾಣಕ್ಕೆ ಇಂತಹ ಕಾನೂನುಗಳು ತೊಡರುಗಾಲಾಗುತ್ತವೆ. ಪ್ರಬಲ ಪ್ರತಿರೋಧ ಒಡ್ಡುವಾಗ ಸಂಯಮ, ಗಾಂಭೀರ್ಯ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಎಲ್ಲರೂ ಅರಿತರೆ, ಈ ಸಮಸ್ಯೆ ಇರುವುದಿಲ್ಲ. ಆಗ ಪೆರುಮಾಳ್ ಮುರುಗನ್ ನಂತಹ ಲೇಖಕರು ಬರೆಯುವುದನ್ನು ನಿಲ್ಲಿಸುವ ಪ್ರಮೇಯವೂ ಇರುವುದಿಲ್ಲ, ಕೇಸುಗಳನ್ನು ದಾಖಲಿಸುವ ಸಂದರ್ಭವೂ ಒದಗುವುದಿಲ್ಲ.

ಹಿಂದೂಯಿಸಂನ ದೇಹಕ್ಕೆ ಅಭಿವೃದ್ಧಿಯ ತಲೆಯ ಜೋಡಣೆ : ನರೇಂದ್ರ ಮೋದಿಯ ಆಧುನಿಕ ಪ್ಲಾಸ್ಟಿಕ್ ಸರ್ಜರಿ

– ಬಿ.ಶ್ರೀಪಾದ ಭಟ್

ಫ್ಲಾಶ್‌ಬ್ಯಾಕ್ 2013 14

ಆರೆಸಸ್ ಪಕ್ಷದ ಮುಖವಾಣಿ “ತರುಣ್ ಭಾರತ್” ಪತ್ರಿಕೆಯ ಮಾಜಿ ಸಂಪಾದಕ,ಸ್ವಯಂಸೇವಕ ಸುಧೀರ್ ಪಾಠಕ್ ಅವರನ್ನು ಆರೆಸಸ್‌ನ ಪಾತ್ರ ಮತ್ತು ಬಿಜೆಪಿಯೊಂದಿಗಿನ ಅದರ ಭಾಂಧವ್ಯದ ಕುರಿತಾಗಿ ಪ್ರಶ್ನಿಸಿದಾಗ ಅವರು ಹೇಳಿದ್ದು, “ಒಂದು ವೇಳೆ ಮೋದಿ ಗೆದ್ದರೆ ಸಂಘ ಪರಿವಾರಕ್ಕೆ ಸ್ವಲ್ಪ ಅನುಕೂಲವಿದೆ. ಒಂದು ವೇಳೆ ಆತ ಸೋತು ಹೋದರೆ ಅದು ಆತನ ಸೋಲು. ಮೋದಿಗೆ ಮಾತ್ರ ಚುನಾವಣೆಯೇ ಅಂತಿಮ, ಆದರೆ ಆರೆಸಸ್‌ಗೆ ಹಿಂದೂ ರಾಷ್ಟ್ರದ ನಿರ್ಮಾಣದ ಗುರಿಯಲ್ಲಿ ಚುನಾವಣೆಯು ತಮ್ಮ ಚಿಂತನೆಗಳನ್ನು ಹಬ್ಬಿಸಲು ಇರುವಂತಹ ಒಂದು ಸಾಧನವಷ್ಟೇ. ಬಿಜೆಪಿಯ ಆಸ್ತಿತ್ವವೇ ದ್ವಿಸದಸ್ಯ ನೀತಿಯಲ್ಲಿದೆ. ಹಿಂದಿನ ದಿನಗಳಲ್ಲಿ ಪಕ್ಷವು ಆರೆಸಸ್‌ನ ಆದೇಶಗಳಿಗಾಗಿ ಕಾಯುತ್ತಿತ್ತು. ಆಗ ಅಟಲ್‌ಜೀ ಮತ್ತು ಅಡ್ವಾನೀಜಿ ಸಂಘ ಪರಿವಾರಕ್ಕೆ ಸೀನಿಯರ್ ನಾಯಕತ್ವವನ್ನು ಒದಗಿಸಿದ್ದರು. ಆಗ ಪಕ್ಷದ ಕೈ ಮೇಲಾಗಿತ್ತು. ಆದರೆ ಈಗ ಆರೆಸಸ್ ನಾಯಕರು ಮತ್ತು ಬಿಜೆಪಿಯ ನಾಯಕರು ಒಂದೇ ತಲೆಮಾರಿಗೆ ಸೇರಿದವರಾಗಿದ್ದಾರೆ. ಇವರು ಒಂದೇ ಶಾಖೆಗಳಲ್ಲಿ ತರಬೇತಿ ಪಡೆದಿದ್ದಾರೆ. ಇಂದು ಆರೆಸಸ್‌ಗೆ ಮೇಲುಗೈ ಸಾಧಿಸಿದೆ.”

ಮಹಾರಾಷ್ಟ್ರದ ಬೆಜೆಪಿಯ ಅಧ್ಯಕ್ಷರಾದ ದೇವೇಂದ್ರ ಫಡ್ನವೀಸ್ ಅವರು ಮಾತನಾಡುತ್ತ, “ಅಟಲ್‌ಜೀ ಮತ್ತು ಅಡ್ವಾನೀಜೀ ಅವರಿಗೂ ಸಹ ಆರೆಸಸ್‌ನ ಮಾತೇ ಅಂತಿಮವಾಗಿತ್ತು. ಅವರಿಗೆ ಆರೆಸಸ್‌ನ ಉದ್ದೇಶಗಳು ಸಂಪೂರ್ಣವಾಗಿ ಅರ್ಥವಾಗಿದ್ದವು ಮತ್ತು ಅದನ್ನು ಶಿರಸಾವಹಿಸಿ ಪಾಲಿಸುತ್ತಿದ್ದರು. ಆರೆಸಸ್‌ನ ಅಗ್ರ ನಾಯಕತ್ವದ ಆದೇಶವನ್ನು ಎಂದಿಗೂ ಕಡೆಗಣಿಸಲಿಲ್ಲ.” ಎಂದು ಹೇಳಿದರು

ದಿ ಹಿಂದೂ, 18ನೇ ಅಕ್ಟೋಬರ್, 2013

***

ನಾಗಪುರದಲ್ಲಿರುವ ಆರೆಸಸ್‌ನ ಹೆಡ್‌ಕ್ವಾಟ್ರಸ್‌ನಲ್ಲಿ ಕುಳಿತು ಬಿಜೆಪಿಯ ಮಾಜಿ ಕಾರ್ಯದರ್ಶಿ ಆರೆಸಸ್ ಸಂಚಾಲಕ ಸದಾನಂದ ಶಿರ್ಡಾಲೆಯವರೊಂದಿಗೆ ಮಾತನಾಡಿಸಿದಾಗ ಅವರು, “ಈಗಿನ ವ್ಯವಸ್ಥೆಯು ಮುಸ್ಲಿಂರನ್ನು ಓಲೈಸುವುದಕ್ಕಾಗಿಯೇ ಇದೆ. ಒಮ್ಮೆ ನರೇಂದ್ರ ಮೋದಿ ಚುನಾಯಿತರಾದ ಮೇಲೆ ನೋಡಿ ಎಲ್ಲವೂ ಬದಲಾಗುತ್ತದೆ. ಉದಾಹರಣೆಗೆ ಗುಜರಾತ್‌ನಲ್ಲಿ ಒಬ್ಬ ಮುಸ್ಲಿಂ ಶಾಸಕನೂ ಇಲ್ಲ. ವ್ಯವಸ್ಥೆ ಇರಬೇಕಾದದ್ದೇ ಹೀಗೆ.” ಎಂದು ಹೇಳಿದರು. ನಾವು ಒಂದುವೇಳೆ ನೀವು ಬಯಸುವ ಈ ವ್ಯವಸ್ಥೆ ಬಂದರೆ ಮುಸ್ಲಿಂರು ಹೇಗೆ ಪ್ರತಿಕ್ರಯಿಸುತ್ತಾರೆ? ಎಂದು ಪ್ರಶ್ನಿಸಿದಾಗ ಈ ಆರೆಸಸ್ ಸಂಚಾಲಕರು, “ಅವರೆಲ್ಲರೂ ಪಾಕಿಸ್ತಾನಕ್ಕೆ ಹೋಗಲು ಸಾಧ್ಯವಿಲ್ಲ. ಆದರೆ ಮುಖ್ಯವಾಗಿ ಅವರು ನಮ್ಮ ದೇಶಕ್ಕೆ ನಿಷ್ಠರಾಗಿರಬೇಕೇ ಹೊರತಾಗಿ ಬೇರೆ ದೇಶಕ್ಕಲ್ಲ” ಎಂದು ಉತ್ತರಿಸಿದರು.

ಮೇಲಿನ ಸಂಭಾಷಣೆಯ ಸಾರಾಂಶವೆಂದರೆ ಅಲ್ಪಸಂಖ್ಯಾತರ ಮೂಲಭೂತವಾಗಿ ಈ ದೇಶಕ್ಕೆ ನಿಷ್ಠರಾಗಿಲ್ಲ. ಆರೋಪವೆಂದರೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇವರಿಗೆ ಸರ್ಕಾರವು ಓಲೈಸುತ್ತದೆ. ದೇಶದ ಬಹುಸಂಖ್ಯಾತರಾದ ಹಿಂದೂಗಳು ಇಂದು ಒತ್ತಡದಲ್ಲಿದ್ದಾರೆ. ಬಿಜೆಪಿ, ಆರೆಸಸ್ ಕಾರ್ಯಕರ್ತರು ಸ್ಪಷ್ಟವಾಗಿ ಹೇಳುವುದೇನೆಂದರೆ “ಮೋದಿಯು ಹಿಂದುತ್ವದ ವಿಷಯವನ್ನು ಮಾತನಾಡುತ್ತಾರೋ ಇಲ್ಲವೋ ಅದು ಮುಖ್ಯವಲ್ಲ, ಆದರೆ ಹಿಂದುತ್ವದ ರಾಷ್ಟ್ರದ ಪರಿಕಲ್ಪನೆ ಮಾತ್ರ ಬದಲಾಗದು ಎಂಬುದು ವಾಸ್ತವ.” ಎಂಬತ್ತು ಮತ್ತು ತೊಂಬತ್ರರ ದಶಕಗಳ ಸ್ಲೋಗನ್‌ಗಳಾದ ಸ್ಯೂಡೋ ಸೆಕ್ಯುಲರಿಸಂ, ಮುಸ್ಲಿಂ ಓಲೈಸುವಿಕೆ ಮತ್ತೆ ಹಿಂದಿನಂತೆಯೇ ಚಾಲ್ತಿಗೆ ಬಂದಿವೆ.

ದಿ ಹಿಂದೂ, 18ನೇ ಅಕ್ಟೋಬರ್, 2013

***

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಕಲ್ಪ ದಿನವನ್ನಾಗಿ ಆಚರಿಸುವ ಸಲುವಾಗಿ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳಲು ಪ್ರಯತ್ನಿಸಿದ್ದ ಸುಮಾರು 2000 ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು. ಬಂಧಿತರಲ್ಲಿ ಬಿಜೆಪಿ ಪಕ್ಷದ ಸಂಸದ ಯೋಗಿ ಆದಿತ್ಯನಾಥ್ (ಗೋರಖ್‌ಪುರ), ಮಾಜಿ ಸಂಸದ ಸತ್ಯದೇವನಾಥ್, ಮತ್ತು ವಿಎಚ್‌ಪಿಯ ರಾಷ್ಟ್ರೀಯ ಕಾರ್ಯದರ್ಶಿ ಚಂಪತ್ ರಾಯ್, ಅಲ್ಲಿನ ಹನುಮ ದೇವಸ್ಥಾನದ ಮಹಂತ ಬಾಬಾ ರಾಮೇಶ್ ದಾಸ್, ರಾಜ್ಯ ಬಿಜೆಪಿಯ ಯುವ ಮೋರ್ಚದ ಅಧ್ಯಕ್ಷ ಅಶುತೋಷ್ ಪ್ರಮುಖರು.

ಬಿಜೆಪಿ ಪಕ್ಷವು ತನ್ನ ಮೂಲಭೂತ ಗುರಿಗಳನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದೆ. ಸಂಘ ಪರಿವಾರದ ಕಾರ್ಯಸೂಚಿಗಳಾದ ಕಲಮ್ 370 ಅನ್ನು ರದ್ದುಪಡಿಸುವುದು, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೊಳಿಸುವುದು, ಇವೆಲ್ಲವನ್ನೂ ತಮ್ಮ ಚುನಾವಣಾ ಪ್ರಣಾಳಿಕೆಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಬಿಜೆಪಿ ಸ್ಪಷ್ಟಪಡಿಸಿದೆ. ಬಿಜೆಪಿ ಪಕ್ಷ ರಚಿಸಿರುವ ತನ್ನ ಪ್ರಣಾಳಿಕೆ ಸಮಿತಿಯ ಛೇರ್ಮನ್ ಆಗಿ ನೇಮಕಗೊಂಡ ಮುರುಳೀ ಮನೋಹರ್ ಜೋಷಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ “ನಮ್ಮ ಪಕ್ಷವು ಚುನವಣಾ ಪ್ರಣಾಳಿಕೆಯ ಕರಡು ಪ್ರತಿಯನ್ನು ರಚಿಸಲು ಸಮಾಜದ ಎಲ್ಲಾ ಸ್ತರಗಳಿಂದಲೂ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಇದಕ್ಕಾಗಿ ಬಿಜೆಪಿಎಲೆಕ್ಷನ್‌ಮ್ಯಾನಿಫೆಷ್ಟೋ.ಕಾಮ್ ಎನ್ನುವ ವೆಬ್‌ಸೈಟ್ ಅನ್ನು ಸಹ ಶುರುಮಾಡಲಾಗಿದೆ. ಅಲ್ಲಿ ಆಸಕ್ತಿ ಇರುವಂತಹವರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಅನೇಕ ವಿಷಗಳ ಕುರಿತಾಗಿ ಮುಕ್ತವಾಗಿ ಚರ್ಚಿಸಲು ಸಿದ್ಧರಿದ್ದೇವೆ. ಆದರೆ ನಮ್ಮ ಮೂಲಭೂತ ಕಾರ್ಯ ಸೂಚಿಗಳಾದ ಕಲಮ್ 370 ಅನ್ನು ರದ್ದುಪಡಿಸುವುದು, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೊಳಿಸುವುದು, ಇವುಗಳೊಂದಿಗೆ ಮಾತ್ರ ಯಾವುದೇ ರೀತಿಯ ಸಂಧಾನವಿಲ್ಲ. ಅದರಲ್ಲೂ ರಾಮ ಜನ್ಮಭೂಮಿಯ ನಿರ್ಮಾಣ ನಮ್ಮ ಮೊದಲ ಆದ್ಯತೆ.” ಎಂದು ಹೇಳಿದರು.

ದಿ ಹಿಂದೂ, 19ನೇ ಅಕ್ಟೋಬರ್, 2013

***

ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನ ಚುನಾವಣಾ ಭಾಷಣದಲ್ಲಿ ಅಚ್ಚರಿ ಎನ್ನುವಂತೆ ನರೇಂದ್ರ ಮೋದಿಯು ರಾಮಮಂದಿರ ನಿರ್ಮಾಣದ ಕುರಿತಾಗಿ ಮಾತನಾಡದೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕೆ ಮಾತ್ರ ತಮ್ಮ ಭಾಷಣವನ್ನು ಸೀಮಿತಗೊಳಿಸಿದ್ದರು. ಅಭಿವೃದ್ಧಿ ಮಂತ್ರವನ್ನು ಮತ್ತೊಮ್ಮೆ ಜಪಿಸಿದರು. ಆದರೆ ಈ ಸಮಾವೇಶದಲ್ಲಿ ಬಿಜೆಪಿ ಹೇಳಿಕೊಳ್ಳುವಷ್ಟು ಮುಸ್ಲಿಂ ನಾಗರಿಕರ ಸಂಖ್ಯೆ ಇರಲಿಲ್ಲ. ತೀರಾ ಗೌಣವಾಗಿತ್ತು. ಬಿಜೆಪಿ ಪಕ್ಷವು ಸುಮಾರು 5000 ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಈ ಸಮಾವೇಶದಲ್ಲಿ ಭಾಗವಹಿಸಲು ವಿತರಿಸಲಾಗಿತ್ತು ಎಂದು ತಿಳಿಸಿತ್ತು. ಪೋಲಿಸ್ ಅಧಿಕಾರಿಯೊಬ್ಬರ ಪ್ರಕಾರ ಈ ಸಮಾವೇಶಕ್ಕಾಗಿ ಮುಸ್ಲಿಂರನ್ನು ಬಾಡಿಗೆ ಕರೆತಂದಿಲ್ಲವೆಂಬಂತೆ ಅಭಿಪ್ರಾಯ ಮೂಡಿಸಲು ಬಿಜೆಪಿ ಕಾರ್ಯಕರ್ತರು ಬಳಸಿದ, ಹಳೆಯದಾದ ಸ್ಕಲ್ ಟೋಪಿಯನ್ನು ಹಂಚಲು ಆದೇಶಿಸುತ್ತಿದ್ದರು.

ದಿ ಹಿಂದೂ, 20ನೇ ಅಕ್ಟೋಬರ್, 2013

2014ರ ಚುನಾವಣ ಸಂದರ್ಭದಲ್ಲಿ ನರೇಂದ್ರ ಮೋದಿ, ಅಮಿತ ಷಾ, ಸಂಘ ಪರಿವಾರದ ಲುಂಪೆನ್ ಗುಂಪಿನ ಮತೀಯವಾದಿ, ಪ್ರಚೋದನಕಾರಿ ಭಾಷಣಗಳ ಕೆಲವು ಉದಾಹರಣೆಗಳು:

ಎಪ್ರಿಲ್ 2, 2014ರಂದು ಬಿಹಾರದಲ್ಲಿ ಬಾಷಣ ಮಾಡುತ್ತ ನರೇಂದ್ರ ಮೋದಿ “ಈ ದೇಶವು ಗೋವುಗಳನ್ನು ದೇವತೆಯಂತೆ ಪೂಜಿಸುವ ದೇಶ. ಗೋ ಹತ್ಯೆ ಮಾಡುವವರನ್ನು ನೀವು ಹೇಗೆ ಬೆಂಬಲಿಸುತ್ತೀರಿ?” ಎಂದು ಯಾದವರನ್ನು ಉದ್ರೇಕಿಸುತ್ತಾರೆ

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ “ಮಿಯ್ಯಾ ಮುಶ್ರಫ್, ಮೇಡಂ ಮೇರಿ, ಮೈಖೆಲ್ ಲಿಂಗ್ಡೋ” modi_bjp_conclaveಎಂದು ಅತ್ಯಂತ ಸ್ಯಾಡಿಸ್ಟ್ ಮನಸ್ಥಿತಿಯಲ್ಲಿ ಇತರೇ ಧರ್ಮಗಳನ್ನು ಕ್ರೂರವಾಗಿ, ಅಮಾನವೀಯವಾಗಿ ಹಂಗಿಸಿದ್ದ ಈ ಮೋದಿ 2014ರಲ್ಲಿ ಮುಂದುವರೆದು ಧರ್ಮ ನಿರಪೇಕ್ಷತೆಯನ್ನು ಲೇವಡಿ ಮಾಡುತ್ತ “ಬುರ್ಖಾ ಸೆಕ್ಯುಲರಿಸಂ” ಎಂದು ಅಮಾನವೀಯವಾಗಿ ಮಾತನಾಡಿದ್ದರು. ಮತ್ತೊಂದೆಡೆ ಕಾಶ್ಮೀರದಲ್ಲಿ ಭಾಷಣ ಮಾಡುತ್ತ ಮೋದಿ ಅತ್ಯಂತ ಕ್ರೂರವಾದ ಭಾಷೆ ಬಳಸುತ್ತಾ ಎಕೆ 47, ಎಕೆ ಅಂಟೊನಿ, ಎಕೆ 49 ಎಂದು ವ್ಯಂಗವಾಡಿದ್ದರು

ರಾಹುಲ್ ಗಾಂಧಿಯವರನ್ನು “ಶೆಹಜಾದ” ಎಂದು ಸಂಬೋಧಿಸುವುದು, ಸೋನಿಯಾಗಾಂಧಿಯವರನ್ನು “ಸುಲ್ತಾನ” ಎಂದು ಸಂಬೋಧಿಸುವುದರ ಮೂಲಕ ಒಂದು ಸುಳ್ಳನ್ನು ನೂರು ಸಲ ಹೇಳುವ ಗೋಬೆಲ್ಸ್ ಸಿದ್ಧಾಂತವನ್ನು ಬಳಸಿದ ನರೇಂದ್ರ ಮೋದಿ 2002ರ ಹತ್ಯಾಕಾಂಡದ ನಂತರದಲ್ಲಿ ಸ್ಥಾಪಿಸಲ್ಪಟ್ಟ ಮುಸ್ಲಿಂ ನಿರಾಶ್ರಿತ ಶಿಬಿರಗಳನ್ನು ಉದ್ದೇಶಿಸಿ ’ಆ ಶಿಬಿರಗಳು ಮಕ್ಕಳನ್ನು ಹುಟ್ಟಿಸುವ ಶಿಬಿರಗಳೆಂದು’ ವ್ಯಂಗವಾಡಿದ್ದರು,

ತಾನು ಅಧಿಕಾರಕ್ಕೆ ಬಂದರೆ ಆಕ್ರಮ ವಲಸಿಗರನ್ನು (ಅಂದರೆ ಮುಸ್ಲಿಂರನ್ನು) ದೇಶದಿಂದ ಒದ್ದೋಡಿಸಲಾಗುವುದು ಎಂದು ತಮ್ಮ 2014ರ ಚುನಾವಣ ಭಾಷಣದಲ್ಲಿ ಮೋದಿ ಗುಡುಗಿದ್ದರು. ಬಾಂಗ್ಲಾ ದಿಂದ ಬರುವ ಆಕ್ರಮ ವಲಸಿಗರಲ್ಲಿ ದುರ್ಗಾ ಮಾತೆಯನ್ನು ಪೂಜಿಸುವ ಧರ್ಮದವರನ್ನು (ಹಿಂದೂಗಳನ್ನು) ಮಾತ್ರ ಕರೆದುಕೊಳ್ಳಲಾಗುವುದು, ಮಿಕ್ಕಂತೆ ಅನ್ಯಧರ್ಮೀಯರನ್ನು ಒದ್ದೋಡಿಸಲಾಗುವುದು ಎಂದು ಅಸ್ಸಾಂನ ಚುನಾವಣಾ ಭಾಷಣದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದರು.

ಮತ್ತೊಂದು ಕಡೆ ಇದೇ ಮೋದಿಯು ಎಪ್ರಿಲ್ 2ರಂದು ತಾನು ಪ್ರಧಾನ ಮಂತ್ರಿಯಾದ ನಂತರ “ಪಿಂಕ್ ರೆವಲ್ಯೂಷನ್” (ದನದ ಮಾಂಸದ ರಫ್ತು) ಅನ್ನು ಕೊನೆಗೊಳಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಮತ್ತೊಂದು ಕಡೆ ತಮ್ಮ ಭಾಷಣದಲ್ಲಿ “ಸಬಕಾ (ಸಮಾಜವಾದಿ, ಬಹುಜನ ಪಕ್ಷ, ಕಾಂಗ್ರೆಸ್) ದ ವಿನಾಶ ಶತಸಿದ್ಧ” ಎಂದು ಹೇಳುವ ಮೋದಿ ಮುಂದುವರೆದು “ಕಾಂಗ್ರೆಸ್ ಮುಕ್ತ ಭಾರತ್” ಗಾಗಿ ತನ್ನನ್ನು ಚುನಾಯಿಸಬೇಕೆಂದು ಕೋರಿಕೊಂಡಿದ್ದರು.

ಮತ್ತೊಂದು ಚುನಾವಣಾ ಭಾಷಣದಲ್ಲಿ ಮೋದಿಯು “ಕಷ್ಟದ ಕೆಲಸಗಳನ್ನು ನಿಭಾಯಿಸಲು ದೇವರು ಕೆಲವರನ್ನು ಆರಿಸುತ್ತಾನೆ. ಬಹುಶ ದೇವರು ನನ್ನನ್ನು ಆರಿಸಿರಬಹುದು” ಎಂದು ಹೇಳಿ ಕಟ್ಟಕಡೆಗೆ ದೇವರನ್ನು ಎಳೆದು ತಂದಿದ್ದರು.

ಇದೇ ಮೋದಿ 2014ರ ಚುನಾವಣೆಯ ಸಂದರ್ಭದಲ್ಲಿ ಬಿಹಾರ್‌ನಲ್ಲಿ ಭಾಷಣ ಮಾಡುತ್ತಾ narender_modi_rss“ಹಮ್ ಚುನ್ ಚುನ್ ಕೆ ಸಬಕ್ ಸಿಖಾಯೇಂಗೇ ( ನಾವು ಹುಡುಕಿ ಹುಡುಕಿ ಪಾಠ ಕಲಿಸುತ್ತೇವೆ)” ಎಂದು ಹೇಳಿದ್ದರು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮುಸ್ಲಿಂ ಮಹಿಳೆಯರನ್ನು, ಗರ್ಭಿಣಿಯರನ್ನು ಹುಡುಕಿ, ಹುಡಕಿ ಸಾಯಿಸಲಾಯಿತು. ಮೋದಿ ಆಡಳಿತದ ಹತ್ತು ವರ್ಷಗಳ ಗುಜರಾತ್‌ನಲ್ಲಿ ಪೋಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಹುಡುಕಿ ಹುಡುಕಿ ಹದಿಮೂರು ನಕಲಿ ಎನ್‌ಕೌಂಟರ್‌ಗಳನ್ನು ನಡೆಸಲಾಗಿದೆ. ಇಂದಿಗೂ ತನಿಖೆಗಳು ಜಾರಿಯಲ್ಲಿವೆ.

ಇನ್ನು ಬಿಹಾರನ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮೋದಿಯನ್ನು ವಿರೋಧಿಸುವವರೆಲ್ಲಾ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಗುಡುಗಿದ್ದರು. ಇನ್ನು ಪ್ರವೀಣ್ ತೊಗಾಡಿಯಾ ಮುಸ್ಲಿಂ ಮೊಹಲ್ಲಗಳನ್ನು ವರ್ಗೀಕರಿಸಿ ನಂತರ ಅವನ್ನು ಶುದ್ಧೀಕರಿಸಿ ಅದರಿಂದ ಮುಸ್ಲಿಂರನ್ನು ಪ್ರತ್ಯೇಕಿಸಿ ಹೀಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಬಿಜೆಪಿಯನ್ನು ಬೆಂಬಲಿಸಿದ ರಾಮದೇವ್ ಎನ್ನುವ ಸನ್ಯಾಸಿ ದಲಿತರ ಕುರಿತಾಗಿ ಅವಹೇಳನಕರವಾಗಿ ಮಾತನಾಡಿದ್ದರು.ಇವರ ಈ ಮಾತುಗಳನ್ನು ಸಂಘರಿವಾರ ಸಮರ್ಥಿಸಿಕೊಂಡಿತ್ತು.

ಮೋದಿಯ ಬಲಗೈ ಬಂಟ ಅಮಿತ್ ಷಾ ಉತ್ತರ ಪ್ರದೇಶದಲ್ಲಿ ಜಾಟ್ ಪಂಗಡದವರನ್ನು ಉದ್ದೇಶಿಸಿ ಮಾತನಾಡುತ್ತಾ “ಮುಜಫರ್ ನಗರದ ಗಲಭೆಗಳಿಗೆ ಪ್ರತೀಕಾರವಾಗಿ ಈ 2014ರ ಚುನಾವಣೆಗಳನ್ನು ಬಳಸಿಕೊಳ್ಳಿ” ಎಂದು ಕರೆ ನೀಡಿದರು. ಇದು ಸಹ ಮೋದಿ ಶೈಲಿಯ ನೆತ್ತರ ದಾಹದ ಭಾಷೆ. ಇದನ್ನು ಅಮಿತ್ ಷಾ ನಿರಾಕರಿಸಲೂ ಇಲ್ಲ. ಬದಲಾಗಿ ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದು ಕಡೆ “ಇನ್ನು ಮುಂದೆ ನಾನು ಪ್ರತೀಕಾರದ ನಡಾವಳಿಗಳಿಂದ ಆಡಳಿತ ನಡೆಸುವುದಿಲ್ಲ” ಎಂದು ಸ್ವತಃ ಸ್ವಯೋಪ್ರೇರಿತನಾಗಿ ಹೇಳಿಕೆ ನೀಡಿದ್ದ ಮೋದಿ ತಮ್ಮ ಬಲಗೈ ಬಂಟನ ಈ ನೆತ್ತರ ದಾಹದ ಹೇಳಿಕೆಗಳನ್ನು ಮಾತ್ರ ಇದುವರೆಗೂ ಖಂಡಿಸಿಲ್ಲ ಅಥವಾ ನಿರಾಕರಿಸಿಲ್ಲ.

ಇನ್ನೂ ಹಿಂದಕ್ಕೆ 2002ರ ಗುಜರಾತ್‌ನ ಹತ್ಯಾಕಾಂಡದ ಸಂದರ್ಭದಲ್ಲಿ ಗೋಧ್ರಾ ದುರಂತ ನಡೆದ 27, ಫೆಬ್ರವರಿ 2002ರಂದು ಪೋಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯು “ಕೋಮು ಗಲಭೆಗಳಲ್ಲಿ ಹಿಂದೂ ಮತ್ತು ಮುಸ್ಲಿಂರನ್ನು ಪ್ರತ್ಯೇಕಿಸದೆ ಶಿಕ್ಷಿಸಬೇಕಾಗುತ್ತದೆ. ಆದರೆ ಈಗ ಹಾಗೆ ಮಾಡಬೇಡಿ. ಹಿಂದೂಗಳಿಗೆ ಅವರ ಸಿಟ್ಟನ್ನು ವ್ಯಕ್ತಪಡಿಸಲು ಅವಕಾಶ ಕೊಡಿ” ಎಂದು ಆದೇಶಿಸಿದ್ದರೆಂದು ಆಗಿನ ಗುಪ್ತಚರ ವಿಭಾಗದ ಡೆಪ್ಯುಟಿ ಕಮಿಷನರ್ ಸಂಜೀವ್ ಭಟ್ ಮತ್ತು ಮಂತ್ರಿ ಹರೇನ್ ಪಾಂಡ್ಯ ತನಿಖಾ ಆಯೋಗದ ಮುಂದೆ ಸಾಕ್ಷಿ ನುಡಿದಿದ್ದರು. ಆದರೆ 26 ಮಾರ್ಚ್, 2003ರಲ್ಲಿ ಹರೇನ್ ಪಾಂಡ್ಯ ಅವರನ್ನು ಕೊಲೆಯಾಗುತ್ತದೆ.

ವರ್ತಮಾನ : 2014-15

ಕೇಂದ್ರದಲ್ಲಿ ಆರೆಸ್ಸಸ್ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಕಬ್ಜಾ ಮಾಡಿಕೊಂಡಿತು. ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತವನ್ನು ತಿರಸ್ಕರಿಸಿದ ಇಂಡಿಯಾದ ಮತದಾರ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿದ್ದ.

“ಚಿಕ್ಕದಾದ ಸರ್ಕಾರ, ವಿಶಾಲವಾದ, ಪರಮಾವಧಿಯ ಆಡಳಿತ” (minimum government, maximum governance) ಎನ್ನುವುದು ನರೇಂದ್ರ ಮೋದಿಯ ಸ್ಲೋಗನ್. ಈ ನಾಲ್ಕು ಶಬ್ದಗಳ ಈ ಸ್ಲೋಗನ್ ದೇಶವೊಂದರಿಂದ ನಾವು ಬಯಸುವಂತಹ, ನಮ್ಮ ಕಿವಿಗೆ ಸುಶ್ರಾವ್ಯವಾಗುವಂತಹದ್ದನ್ನೇ ಅರಹುತ್ತಿರುತ್ತದೆ. ಇದು ನರೇಂದ್ರ ಮೋದಿಯ ಜನಪ್ರಿಯ ಸ್ಲೋಗನ್‌ಗಳಲ್ಲೊಂದು. ಇದನ್ನೆಲ್ಲಾ ಗುಜರಾತ್ ಮಾಡೆಲ್ ಎನ್ನುವ ಸಂಘ ಪರಿವಾರದ, ಮಧ್ಯಮವರ್ಗದ ಬೈಬಲ್‌ನಿಂದ ಹೆಕ್ಕಿಕೊಳ್ಳಲಾಗಿದೆ. 2014ರ ತಮ್ಮ ಚುನಾವಣಾ ಪ್ರಚಾರದ ಭಾಷಣ ಉದ್ದಕ್ಕೂ ಈ ನರೇಂದ್ರ ಮೋದಿ ಮತ್ತು ಅಮಿತ್ ಷಾ “ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ” ಎಂದು ಪ್ರಚಾರ ಮಾಡಿದ್ದರು. ಯುಪಿಎ ಸರ್ಕಾರದ ಹತ್ತು ವರ್ಷಗಳ ಭ್ರಷ್ಟ ಆಡಳಿತವನ್ನು ಕೊನೆಗೊಳಿಸಿ ಎಂದು ದೇಶಾದ್ಯಾಂತ ಕಾಂಗ್ರೆಸ್ ವಿರುದ್ಧ ತೀವ್ರವಾದ ವಾಗ್ದಾಳಿ Modi-roadshow-varanasiನಡೆಸಿದ ನರೇಂದ್ರ ಮೋದಿ ಮತ್ತು ಸಂಘ ಪರಿವಾರ ಅತ್ಯಂತ ವ್ಯವಸ್ಥಿತವಾದ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದರು. ಬಿಜೆಪಿ ಪಕ್ಷವು ಮಾಧ್ಯಮಗಳು ಸೃಷ್ಟಿಸಿದ ಮೋದಿಯ ಅಭಿವೃದ್ಧಿಯ ಜನಪ್ರಿಯತೆಯನ್ನು ಬಳಸಿಕೊಂಡು ದೇಶದ ಮಧ್ಯಮ ಹಾಗೂ ಮೇಲ್ವರ್ಗಗಳ ಮತಗಳನ್ನು ಬೇಟೆಯಾಡಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸಿತ್ತು. ಕಳೆದ ಎರಡು ದಶಕಗಳಿಂದ ಜಾಗತೀಕರಣದ ಫಲವಾದ ಕನ್ಸೂಮರಿಸಂನ ಸೆಳೆತಕ್ಕೆ ಒಳಗಾಗಿ ಕೊಳ್ಳುಬಾಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ ಇಲ್ಲಿನ ಮಧ್ಯಮವರ್ಗ ಈ ಕೊಳ್ಳುಬಾಕ ಸಂಸ್ಕೃತಿಯನ್ನೇ ಅಭಿವೃದ್ಧಿಯೆಂದು ಭ್ರಮಿಸಿ ನರೇಂದ್ರ ಮೋದಿಯನ್ನು ತಮಗೆ ಬೇಕಾದ್ದನ್ನೆಲ್ಲ ದಯಪಾಲಿಸುವ ಹರಿಕಾರ ಎಂದು ನಂಬಿದರು. ಮೊನ್ನೆಯವರೆಗೂ ಈ ಮಧ್ಯಮ ವರ್ಗ ಮತ್ತು ಕಾರ್ಪೋರೇಟ್ ವರ್ಗಗಳಿಗೆ ಈ ಜಾಗತೀಕರಣದ ಹರಿಕಾರ ಮನಮೋಹನ್ ಸಿಂಗ್ ಡಾರ್ಲಿಂಗ್ ಆಗಿದ್ದರು. ಆದರೆ ಇಂದು ಇವರ ಪಾಲಿಗೆ ಮನಮೋಹನ್ ಸಿಂಗ್ ಖಳನಾಯಕ. ಏಕೆಂದರೆ ಇವರ ಹತ್ತು ವರ್ಷಗಳ ಆಡಳಿತದಲ್ಲಿ ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಕಷ್ಟವಾಗುತ್ತಿದೆ. ನಮ್ಮ ಮಾಧ್ಯಮಗಳ ಮತ್ತು ಮಧ್ಯಮ ವರ್ಗಗಳ ಈ ಬೌದ್ಧಿಕ ದಿವಾಳಿತನದ ಫಲವಾಗಿ ಇಂದು ಮತೀಯವಾದಿ, ಫ್ಯಾಸಿಸ್ಟ್ ಸಂಘಟನೆ ಆರೆಸ್ಸಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. “ಅಚ್ಛೇ ದಿನ್” ಎನ್ನುವ ತನ್ನ ಆವೇಶದ, ಪ್ರಚೋದನಕಾರಿ ಭಾಷಣದ ಮೂಲಕ ಇಂಡಿಯಾದ ಯುವ ಸಮೂಹವನ್ನು ಬುಟ್ಟಿಗೆ ಹಾಕಿಕೊಂಡಿದ್ದ ನರೇಂದ್ರ ಮೋದಿ ವಿದೇಶದಿಂದ ಕಪ್ಪು ಹಣವನ್ನು ಜಪ್ತಿ ಮಾಡಿ ಮರಳಿ ಇಂಡಿಯಾಗೆ ತರಬೇಕೆಂದರೆ, ತಂಟೆ ಮಾಡುವ ನೆರೆಹೊರೆ ಮುಸ್ಲಿಂ ರಾಷ್ಟ್ರಗಳಿಗೆ ಪಾಠ ಕಲಿಸಬೇಕೆಂದರೆ ಈ ದೇಶಕ್ಕೆ ನನ್ನಂತಹ 56 ಇಂಚಿನ ಎದೆಯುಳ್ಳ ನಾಯಕನ ಅವಶ್ಯಕತೆ ಇದೆ ಎಂದು ಬಹು ಸಂಖ್ಯಾತ ಹಿಂದೂಗಳಿಗೆ ಸಂದೇಶವನ್ನು ರವಾನಿಸಿದ್ದರು. ಈ ಸಂದೇಶ ತನ್ನ ಗುರಿಯನ್ನು ಸಾಧಿಸಿದರ ಫಲವಾಗಿ ಆರೆಸ್ಸಸ್ ನೇತೃತ್ವದ ಬಿಜೆಪಿ ಪಕ್ಷ ಬಹುಮತವನ್ನು ಪಡೆದು ಕೇಂದ್ರದಲ್ಲಿ ಅಧಿಕಾರವನ್ನು ಪಡೆದುಕೊಂಡಿತು. “ಎಲ್ಲರಿಗೂ ನ್ಯಾಯ, ಯಾರನ್ನೂ ಓಲೈಸುವುದಿಲ್ಲ” ಎಂದು ಜನತೆಯ ಮುಂದೆ ಪ್ರಮಾಣ ಮಾಡಿದ್ದ ಸಂಘ ಪರಿವಾರ ಇಂದು ಅಧಿಕಾರಕ್ಕೆ ಬಂದ ನಂತರ ಅಸಮಾನತೆಯ ತತ್ವಗಳನ್ನು ಜಪಿಸುತ್ತಿದೆ. ಪ್ರತ್ಯೇಕತೆಯ, ಶ್ರೇಣೀಕೃತ, ತಾರತಮ್ಯ ನೀತಿಯ ಸನಾತನ ಹಿಂದೂ ಧರ್ಮದ ಸಂಸ್ಥಾಪನೆ ತನ್ನ ಮುಖ್ಯ ಅಜೆಂಡಾಗಳಲ್ಲಿ ಒಂದು ಎಂದು ಸಂಘ ಪರಿವಾರ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುತ್ತಿದೆ ಮತ್ತು ಅದಕ್ಕೆ ಪೂರಕವಾಗಿ ವರ್ತಿಸುತ್ತಿದೆ. ಅಭಿವೃದ್ಧಿಯೊಂದೇ ನಮ್ಮ ಮೊದಲ ಧ್ಯೇಯ, “ಸಂಪೂರ್ಣ ಆಡಳಿತ, ಎಲ್ಲರ ವಿಕಾಸ” ಎಂದು ಭಾಷಣದ ಮೂಲಕ ಅಧಿಕಾರವನ್ನು ಗಳಿಸಿದ್ದ ಮೋದಿ ಇಂದು ಸಂಘ ಪರಿವಾರದ ಧಾರ್ಮಿಕ ಫೆನಟಿಸಂ ಅನ್ನು ಕುರಿತು ಯಾವುದೇmodi-GIM ಹೇಳಿಕೆಗಳನ್ನು ಕೊಡುತ್ತಿಲ್ಲ. ಈ ಸಂಘ ಪರಿವಾರದ ಸದಸ್ಯರಾದ ಪತ್ರಕರ್ತ ಅರಣ್ ಶೌರಿ ಕಳೆದ ಆರು ತಿಂಗಳ ಆರೆಸ್ಸ್‌ಸ್, ನರೇಂದ್ರ ಮೋದಿಯ ಜಂಟಿ ನೇತೃತ್ವದ ಈ ಬೆಜೆಪಿ ಸರ್ಕಾರದ ಆಡಳಿತದ ಕಾರ್ಯ ವೈಖರಿಯನ್ನು ವಿಶ್ಲೇಷಿಸುತ್ತ “ನೀವು ದೆಹಲಿಯಲ್ಲಿ ಅಭಿವೃದ್ಧಿಯ ಕುರಿತಾಗಿ ಮತ್ತು ಮುಜಫ್ಫರ್ ನಗರದಲ್ಲಿ ಲವ್ ಜಿಹಾದ್ ಕುರಿತು ಏಕಕಾಲದಲ್ಲಿ ಮಾತನಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಚಿಂತಕ ಪ್ರಣಬ್ ಬರ್ಧನ್ ಅವರು “ಸಂಘ ಪರಿವಾರ ಮತ್ತು ಮೋದಿಯ ಆಡಳಿತದ ಈ ಮಾದರಿ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಮಾದರಿಗೆ ಹತ್ತಿರವಾಗಿದೆ. ವಾಷಿಂಗ್ಟನ್‌ನಲ್ಲಿ ತೆರಿಗೆ ಕಡಿತದ ಕುರಿತಾಗಿ, ಕಾರ್ಪೋರೇಟ್ ಸುಧಾರಣೆಗಳ ಕುರಿತಾಗಿ ಮಾತನಾಡಿ ಕಾರ್ಪೋರೇಟ್ ಗುಂಪುಗಳನ್ನು ಸಂತೃಪ್ತಿಗೊಳಿಸಿದರೆ, ಉಳಿದ ಭಾಗಗಳಲ್ಲಿ ಬೈಬಲ್ ಅನ್ನು ಬಳಸಿಕೊಂಡು ಗೇ ಹಕ್ಕುಗಳನ್ನು ನಿರಾಕರಿಸುವುದು, ಗರ್ಭಪಾತವು ಬೈಬಲ್‌ನ ನೀತಿಗಳಿಗೆ ವಿರೋಧ ಎನ್ನುವ ಧಾರ್ಮಿಕ ಮೂಲಭೂತವಾದವನ್ನು ಪ್ರದರ್ಶಿಸುತ್ತದೆ. ಇಂದು ನರೇಂದ್ರ ಮೋದಿಯು ಜಾಗತೀಕರಣದ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ತನ್ನ ಕಟ್ಟಾ ಬೆಂಬಲಿಗ ಆರ್ಥಿಕ ತಜ್ಞ ’ಭಗವತಿ’ ಮತ್ತು ಮತೀಯವಾದಿ, ಆಧುನಿಕತೆಯ ವಿರೋಧಿ ಆರೆಸ್ಸಸ್‌ನ ’ಭಾಗವತ್’ ಇವರಿಬ್ಬರನ್ನೂ ಒಳಗೊಳ್ಳುವಂತಹ ದ್ವಿಮುಖ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ಹಿಂದೂ ಫೆನಟಿಸಂ ಎನ್ನುವ ದೇಹಕ್ಕೆ ಆಡಳಿತ ಮತ್ತು ಅಭಿವೃದ್ಧಿ ಎನ್ನುವ ತಲೆಯನ್ನು ಕಸಿ ಮಾಡಿರುವ ನರೇಂದ್ರ ಮೋದಿ ಗಣೇಶನಂತೆ ಪ್ರಾಚೀನ ಭಾರತದ ಸರ್ಜರಿ ಕೌಶಲ್ಯವನ್ನು ಇದನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ವಿವರಿಸುತ್ತಾರೆ.

ಪತ್ರಕರ್ತ ವಿನೋದ ಮೆಹ್ತ ಬರೆದಂತೆ ಮೋದಿಯ ಶೈಲಿಯ ಆಡಳಿತವೆಂದರೆ ಗುರಿ ಮುಟ್ಟುವುದು ಮುಖ್ಯವಾಗುತ್ತದೆಯೇ ಹೊರತು ಅದನ್ನು ತಲಪಲು ಬಳಸುವ ವಾಮಮಾರ್ಗದ, ಹಿಂಸಾಚಾರದ, ಮೂಲಭೂತವಾದದ ದಾರಿಗಳು ಅಕ್ಷೇಪಾರ್ಹವಲ್ಲವೇ ಅಲ್ಲ.

ಆರೆಸ್ಸಸ್ ಮತ್ತು ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂಘ ಪರಿವಾರದ ಮುಖಂಡ ಮೋಹನ್ ಭಾಗವತ್ ಮತ್ತು ಅದರ ಲುಂಪೆನ್ ಗುಂಪು ಮಾತನಾಡಿದ ಮತೀಯವಾದಿ, ಪ್ರಚೋದನಾತ್ಮಕ ಭಾಷಣಗಳು, ಹೇಳಿಕೆಗಳು:

ಇಂಗ್ಲೆಂಡ್‌ನ ನಿವಾಸಿಗಳು ಇಂಗ್ಲೀಷರು, ಜರ್ಮನಿಯ ನಿವಾಸಿಗಳು ಜರ್ಮನ್ನರು, ಅಮೇರಿಕಾದ ನಿವಾಸಿಗಳು ಅಮೇರಿಕನ್ನರು ಎಂದು ಒಪ್ಪಿಕೊಳ್ಳಬಹುದಾದರೆ ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೆಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು.

ಹಿಂದೂಗಳು ಇಲ್ಲಿ ಇರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಹಿಂದೂಗಳು ಇಲ್ಲದಿದ್ದರೆ ಭಾರತೀಯರೆಲ್ಲರೂ ಅಪಾಯಕ್ಕೆ ಸಿಲುಕಬೇಕಾಗುತ್ತದೆ.ಇಡೀ ವಿಶ್ವದ ಒಳಿತಿಗಾಗಿ ಬಲಾಢ್ಯ ಹಿಂದೂ ಸಮಾಜದ ನಿರ್ಮಾಣ ಅತ್ಯಗತ್ಯ.

– ಮೋಹನ್ ಭಾಗವತ್

***

ಮದರಾಸಗಳಲ್ಲಿ ಭಯೋತ್ಪಾದನೆಯ ಕುರಿತಾಗಿ ತರಬೇತಿ ನೀಡಲಾಗುತ್ತಿದೆ. ಮದರಾಸಾಗಳು ಅವರನ್ನು ಜೆಹಾದಿಗಳನ್ನಾಗಿ, ಭಯೋತ್ಪಾದಕರನ್ನಾಗಿ ತಯಾರಿಸುತ್ತಿವೆ.

ನಾಥುರಾಮ್ ಗೋಡ್ಸೆ ಸಹ ರಾಷ್ಟ್ರೀಯವಾದಿ ಮತ್ತು ಮಹಾತ್ಮ ಗಾಂಧಿ ಸಹ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಗೋಡ್ಸೆ ತುಂಬಾ ಉದ್ರೇಕಕಾರಿ ವ್ಯಕ್ತಿಯಾಗಿದ್ದ. ಅವನು ತಪ್ಪನ್ನು ಮಾಡಿರಬಹುದು. ಆದರೆ ದೇಶ ದ್ರೋಹಿ ಅಲ್ಲ. ಅವನು ದೇಶಪ್ರೇಮಿ

ಹಿಂದೂಯಿಸಂ ಅನ್ನು ರಕ್ಷಿಸಲು ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು.

– ಉತ್ತರ ಪ್ರದೇಶದ ಉನ್ನೋ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹರಾಜ್

***

ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಳೆದ ಎರಡೂವರೆ ವರ್ಷಗಳ ಸಮಾಜವಾದಿ ಪಕ್ಷದ ಆಡಳಿತದಲ್ಲಿ ಸುಮಾರು 450 ಗಲಭೆಗಳಾಗಿವೆ. ಏಕೆಂದರೆ ಒಂದು ನಿರ್ದಿಷ್ಟ ಧರ್ಮದವರ ಪ್ರಭಾವ ಹೆಚ್ಚುತ್ತಿದೆ. ಆದರೆ ಪೂರ್ವ ಉತ್ತರ ಪ್ರದೇಶದಲ್ಲಿ ಗಲಭೆಗಳು ಯಾಕಿಲ್ಲ? ನಿಮಗೆ ಸುಲುಭವಾಗಿ ಅರ್ಥವಾಗುತ್ತದೆ. ಶೇಕಡ 10-20% ಅಲ್ಪಸಂಖ್ಯಾತರಿರುವ ಸ್ಥಳಗಳಲ್ಲಿ ಸಣ್ಣ ಪುಟ್ಟ ಗಲಭೆಗಳು ನಡೆಯುತ್ತವೆ. ಶೇಕಡಾ 35% ರಷ್ಟು ಅಲ್ಪಸಂಖ್ಯಾತರಿರುವ ಸ್ಥಳಗಳಲ್ಲಿ ತೀವ್ರವಾದ ಗಲಭೆಗಳು ಜರಗುತ್ತವೆ. ಶೇಕಡಾ35% ಕ್ಕಿಂತಲೂ ಅಧಿಕ ಅಲ್ಪಸಂಖ್ಯಾತರಿರುವ ಪ್ರದೇಶಗಳಲ್ಲಿ ಹಿಂದೂಗಳಿಗೆ ಜಾಗವೇ ಇಲ್ಲ

ಅವರು ನಮ್ಮ ಒಬ್ಬ ಹಿಂದೂ ಹುಡುಗಿಯನ್ನು ಅಪಹರಿಸಿದರೆ ನಾವು 100 ಹಿಂದೂ ಹುಡುಗಿಯರನ್ನು ಅಪಹರಿಸುತ್ತೇವೆ. ಹಿಂದೂ ಹುಡುಗರು ಮುಸ್ಲಿಂ ಮಹಿಳೆಯರನ್ನು ಮದುವೆಯಾಗಿ ನಂತರ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಬೇಕು

(ಪಾರ್ಲಿಮೆಂಟಿನಲ್ಲಿ ಮಾತನಾಡುತ್ತ) ಹಿಂದೂಗಳನ್ನು ಹೆದರಿಸಿದರೆ, ಅವರು ಪ್ರತೀಕಾರ ತಿರಿಸಿಕೊಳ್ಳಲು ಸಿದ್ಧರಿರಬೇಕು.

– ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್

***

(ಪಶ್ಚಿಮ ದೆಹಲಿಯ ಶ್ಯಾಮನಗರ ಏರಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತ) ನಿಮಗೆ ರಾಮಜಾದೆ ಧರ್ಮದ ಆಡಳಿತ ಬೇಕೋ, ಹರಾಮಜಾದೆ ಧರ್ಮದ ಆಡಳಿತ ಬೇಕೋ ಎಂದು ನೀವೇ ನಿರ್ಧರಿಸಿ.

– ಬಿಜೆಪಿ ಸರ್ಕಾರದ ಮಂತ್ರಿ ನಿರಂಜನ ಜ್ಯೋತಿ

***

ನಿಮಗೆ ಹನುಮಂತ ಗೊತ್ತಲ್ಲವೇ? ನಾವೆಲ್ಲರೂ ಹನುಮಂತರು. ಮೋದಿಯ ಭಕ್ತರು. ಹನುಮಂತನು ರಾಮನಿಗೆ ನನಗೆ ಪ್ರತ್ಯೇಕ ಐಡೆಂಟಿಟಿ ಇಲ್ಲ. ನಿನ್ನ ಭಕ್ತ ಅಷ್ಟೆ ಎಂದು ಹೇಳುತ್ತಾನೆ. ಹಾಗೆ ಮೋದಿ ನಮಗೆಲ್ಲ ರಾಮನಂತೆ. ಕೇಜ್ರೀವಾಲ್ ಮಾರೀಚನಂತೆ.

– ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್

***

ಭಗವದ್ಗೀತೆಯನ್ನು ಭಾರತದ ಧರ್ಮಗ್ರಂಥವೆಂದು ಅಧಿಕೃತವಾಗಿ ಘೋಷಿಸಿ.

– ಬಿಜೆಪಿ ಸರ್ಕಾರದ ಮಂತ್ರಿ ಸುಷ್ಮಾ ಸ್ವರಾಜ್

***

ಮಹಾಭಾರತದ ಕಾಲದಲ್ಲಿ ಕರ್ಣನು ಕುಂತಿಯ ಗರ್ಭದಿಂದ ಜನಿಸಿಲ್ಲ. ಗರ್ಭದ ಹೊರಗೆ ಜನಿಸಿದ್ದಾನೆ ಎಂದು ನಾವೆಲ್ಲಾ ಓದಿದ್ದೇವೆ. ಅಂದರೆ ಇದರ ಅರ್ಥ ಪುರಾತನ ಕಾಲದಲ್ಲಿಯೇ ಭಾರತವು ಜೆನಟಿಕ್ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿತ್ತು ಎಂಬುದು ಸಾಬೀತಾಗಿದೆ. ಮತ್ತೊಂದು ಉದಾಹರಣೆ ಕೊಡುವುದಾದರೆ ನಾವು ಆನೆ ಮುಖದ ಗಣೇಶನನ್ನು ಪೂಜಿಸುತ್ತೇವೆ. ಮನುಷ್ಯನ ದೇಹಕ್ಕೆ ಆನೆಯ ಮುಖವನ್ನು ಜೋಡಿಸಿದ್ದಾರೆಂದರೆ ಆ ಕಾಲದಲ್ಲಿಯೇ ಪ್ಲಾಸ್ಟಿಕ್ ಸರ್ಜರಿಯಲ್ಲಿ ನಾವು ಪಳಗಿದ್ದೆವು ಎಂದು ಸಹ ಸಾಬೀತಾಗುತ್ತದೆ

– ಪ್ರಧಾನಿ ನರೇಂದ್ರ ಮೋದಿ

***

ಮೋದಿಯು ದೇವರ ಅವತಾರ. ಮೋದಿಯು ಗಾಂಧಿಯನ್ನು ಮೀರಿದ್ದಾರೆ. ಏಷ್ಯಾದ ಪೂರ್ವ-ದಕ್ಷಿಣ ರಾಷ್ಟ್ರಗಳನ್ನು ಮಹಾಭಾರತ ಮತ್ತು ರಾಮಾಯಣದ ಮೂಲಕ ಸಾಂಸ್ಕೃತಿಕವಾಗಿ ಬೆಸೆಯಬೇಕಾಗಿದೆ.

– ಲೋಕೇಶ ಚಂದ್ರ, Indian Council for Cultural Relations (ICCR) ನ ಮುಖ್ಯಸ್ಥ

***

“ತೀರಾ ಇತ್ತೀಚೆಗೆ ಆರೆಸಸ್ ತನ್ನ ಹಿಂದೂ ರಾಷ್ಟ್ರೀಯತೆಯನ್ನು ನವೀಕರಿಸಲು ಮತ್ತು ಈ ಸಿದ್ಧಾಂತಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿದೆ. ತನ್ನ ಎಂಬತ್ತು ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಪದ್ಧತಿಯ ಕುರಿತಾಗಿ ಮಾತನಾಡುತ್ತಿದೆ. ಈ ಜಾತಿ ಪದ್ಧತಿಯ ಹುಟ್ಟಿಗೆ ಸಂಪೂರ್ಣ ಮತೀಯವಾದದ ಚಿಂತನೆಗಳನ್ನು ಲೇಪಿಸಲು ಪೂರ್ವ ತಯಾರಿಗಳನ್ನು ನಡೆಸುತ್ತಿರುವ ಆರೆಸಸ್ ಅದಕ್ಕಾಗಿ ಮೊಟ್ಟ ಮೊದಲ ಬಾರಿಗೆ ದಲಿತರ ಇತಿಹಾಸದ ಕುರಿತಾಗಿ ಪುಸ್ತಕಗಳನ್ನು ಬರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಮೂರು ಪುಸ್ತಕಗಳಲ್ಲಿ ವಿದೇಶಿ ದಾಳಿಕೋರರು ಇಲ್ಲಿನ ಜಾತಿ ಪದ್ಧತಿಯನ್ನು ಹುಟ್ಟು ಹಾಕಿದರು ಎಂದು ಹೇಳಿದೆ. ಬಿಜೆಪಿಯ ವಕ್ತಾರರಾದ ಸೋನಂಕರ್ ಶಾಸ್ಟ್ರಿ ಬರೆದಿರುವ ’ಹಿಂದೂ ಚರ್ಮಕಾರ ಜಾತಿ, ಹಿಂದೂ ವಾಲ್ಮೀಕಿ ಜಾತಿ, ಹಿಂದೂ ಖಾತಿಕ್ ಜಾತಿ’ ಎನ್ನುವ ಮೂರು ಪುಸ್ತಕಗಳಲ್ಲಿ ದಲಿತರನ್ನು ಮತ್ತು ಹಿಂದುಳಿದ ವರ್ಗಗಳನ್ನು ಸೆಳೆಯಲು ಇಡೀ ಶ್ರೇಣೀಕೃತ ವ್ಯವಸ್ಥೆಗೆ ಮುಸ್ಲಿಂ ದಾಳೀಕೋರರೇ ಕಾರಣ ಎಂದು ಬರೆಯಲಾಗಿದೆ. ಈ ಪುಸ್ತಕಗಳನ್ನು ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್ ಬಿಡುಗಡೆಗೊಳಿಸಿದ್ದಾರೆ. ಈ ಮೂರು ಪುಸ್ತಕಗಳಿಗೂ ಆರೆಸಸ್ ಸಂಚಾಲಕರು ಮುನ್ನುಡಿಗಳನ್ನು ಬರೆದಿದ್ದಾರೆ. ಇಲ್ಲಿನ ಒಂದು ಪುಸ್ತಕದಲ್ಲಿ ಆರೆಸಸ್ ನಾಯಕ ಭೈಯ್ಯಾಜಿ ಜೋಶಿ ಬರೆದ ಮುನ್ನುಡಿಯ ಕೆಲವು ಸಾಲುಗಳು ಹೀಗಿವೆ: “ಕ್ಷತ್ರಿಯ ಹಿಂದೂಗಳ ಸ್ವಾಭಿಮಾನವನ್ನು ನಾಶಪಡಿಸಲು ವಿದೇಶದ ಅರಬರು, ದನ ತಿನ್ನುವವರು, ಮುಸ್ಲಿಂ ನಾಯಕರು ಆ ಕ್ಷತ್ರಿಯರನ್ನು ಗೋವುಗಳನ್ನು ಕೊಲ್ಲಲು ಬಲಾತ್ಕರಿಸಿದರು, ಚರ್ಮವನ್ನು ಸುಲಿದು ಅದರ ಅಸ್ಥಿಪಂಜರವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡುವಂತೆ ಒತ್ತಾಯಿಸಿದರು. ಈ ಮೂಲಕ ಈ ವಿದೇಶಿ ದಾಳಿಕೋರರು ಚರ್ಮ-ಕರ್ಮ ಎನ್ನುವ ಜಾತಿಯನ್ನು ಸೃಷ್ಟಿಸಿದರು. ವರ್ಣಾಶ್ರಮದಲ್ಲಿ ಶೂದ್ರರು ಎಲ್ಲಿಯೂ ಅಸ್ಪಶ್ಯರಾಗಿರಲಿಲ್ಲ. ವಿದೇಶಿ ದಾಳಿಕೋರರು ಅವರನ್ನು ಅಸ್ಪಶ್ಯರನ್ನಾಗಿಸಿದರು.” ಮತ್ತೊಬ್ಬ ಆರೆಸಸ್ ಮುಖಂಡ ಸುರೇಶ್ ಸೋನಿ ಅವರು “ಬ್ರಾಹ್ಮಣ ಮತ್ತು ಕ್ಷತ್ರಿಯರ ಮೇಲೆ ಮಧ್ಯಯುಗೀನ ಕಾಲದಲ್ಲಿ ಮುಸ್ಲಿಂ ದಾಳಿಕೋರರು ನಡೆಸಿದ ದೌರ್ಜನ್ಯದ ಫಲವಾಗಿ ಇಂದಿನ ಜಾತಿಗಳಾದ ವಾಲ್ಮೀಕಿ, ಸುದರ್ಶನ್, ಮೆಹಜಾಬಿ ಸಿಖ್ ಮತ್ತು ಇತರೆ 624 ಉಪಜಾತಿಗಳು ಹುಟ್ಟಿಕೊಂಡವು” ಎಂದು ಹೇಳಿದ್ದಾರೆ. ಮತ್ತೊಬ್ಬ ಆರೆಸಸ್ ಮುಖಂಡ ಕ್ರಿಷ್ಣ ಗೋಪಾಲ್ “ವೇದಗಳ ಕಾಲದಲ್ಲಿ ಖಾತಿಕ್ ಕ್ಷತ್ರಿಯರನ್ನು ಬ್ರಾಹ್ಮಣರೆಂದು ಗುರುತಿಸುತ್ತಿದ್ದರು. ದಾಳಿಕೋರರ ನಂತರ ಅವರನ್ನು ಅಸ್ಪಶ್ಯರೆಂದು ಕರೆಯತೊಡಗಿದರು” ಎಂದು ಬರೆಯುತ್ತಾರೆ.
– ಹಿಂದುಸ್ತಾನ್ ಟೈಮ್ಸ್, 22 ಸೆಪ್ಟೆಂಬರ್, 2014

CBSE ಜೂನ್30, 2014 ರಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿದೆ. ಆ ಸುತ್ತೋಲೆಯ ವಿವರ ಈ ರೀತಿ ಇದೆ: “CBSE ಗೆ ಸೇರಿದ ಎಲ್ಲಾ ಶಾಲೆಗಳು ಸಂಸ್ಕೃತ ವಾರವನ್ನು ಆಚರಿಸಬೇಕು. ಸಂಸ್ಕೃತ ಮತ್ತು ಭಾರತದ ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿವೆ. ನಮ್ಮ ಸ್ವದೇಶಿ ಜ್ಞಾನವು ಈ ಸಂಸ್ಕೃತ ಭಾಷೆಯಲ್ಲಿ ಮಾತ್ರ ಲಭ್ಯವಿದೆ.”

ಇಂಡಿಯಾದ ಶಿಕ್ಷಣ ವ್ಯವಸ್ಥೆಯನ್ನು “ಭಾರತೀಕರಣ”ಗೊಳಿಸಲು ಹೊಸ ರಾಷ್ಟ್ರೀಯ ಸ್ಕೂಲ್ ಬೋರ್ಡಗಳನ್ನು ಸ್ಥಾಪಿಸಬೇಕೆಂದು ಬಾಬಾ ರಾಮದೇವ್ ಹೇಳಿದ್ದಾರೆ. ಭಾರತದ ಸನಾತನ ಪರಂಪರೆಯನ್ನು ಹೇಳಿಕೊಡುವ muzaffarnagar-riots-tentsಈ ಶಾಲೆಗಳನ್ನು “ಸೆಕೆಂಡರಿ ಶಿಕ್ಷಣದ ಭಾರತೀಯ ಬೋರ್ಡ್” ಎಂದು ನಾಮಕರಣ ಮಾಡಬೇಕೆಂದು ಹೇಳಿದ್ದಾರೆ.

ಕಳೆದ ಆರು ತಿಂಗಳಲ್ಲಿ ಸಂಘ ಪರಿವಾರದ ವಿಎಚ್‌ಪಿ ಸಂಘಟನೆಯ ನೇತೃತ್ವದಲ್ಲಿ “ಘರ್ ವಾಪಸಿ” ಎನ್ನುವ ಅಮಾನವೀಯ ಚಿಂತನೆಯ ಅನುಸಾರ ನಡೆದ ಅನ್ಯಧರ್ಮೀಯರನ್ನು ಹಿಂದೂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸುವ ಚಟುವಟಿಕೆಗಳು :

8, ಡಿಸೆಂಬರ್, 2014ರಂದು ಆರೆಸ್ಸಸ್ ಸೇರಿದ ಹಿಂದೂ ಸಂಘಟನೆಗಳು ಸುಮಾರು 250 ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿದರು.

ಅಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು 8000 ಅಲ್ಪಸಂಖ್ಯಾತರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ. ಹೈದರಬಾದ್ ಒಂದರಲ್ಲೇ ಸುಮಾರು 1200 ಕುಟುಂಬಗಳನ್ನು ಮತಾಂತರಿಸಲಾಗಿದೆ. ಇದನ್ನು ಮತಾಂತರ ಎಂದು ನಾವು ಕರೆಯುವುದಿಲ್ಲ. ಘರ್ ವಾಪಸಿ ಎಂದು ಕರೆಯಬೇಕು ಎಂದು ವಿಎಚ್‌ಪಿ ಮುಖಂಡ ವೆಂಕಟೇಶ್ ಹೇಳಿದ್ದಾರೆ.

ಗೋವಾದಲ್ಲಿ ಪೋರ್ಚುಗೀಸರ ಸಂದರ್ಭದಲ್ಲಿ ಬಲವಂತವಾಗಿ ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರಗೊಂಡವರನ್ನು ಘರ್ ವಾಪಸಿ ಕಾರ್ಯಕ್ರಮದ ಅಡಿಯಲ್ಲಿ ಮರಳಿ ಹಿಂದೂ ಧರ್ಮಕ್ಕೆ ಕರೆತರುತ್ತೇವೆ ಎಂದು ಆರೆಸ್ಸಸ್‌ನ ಶರದ್ ಕುಂಟೆ ಹೇಳಿದ್ದಾರೆ

ಪ್ರತಿ ವರ್ಷವು 25,000-30,000 ಮುಸ್ಲಿಂರು ಹಿಂದೂಯಿಸಂಗೆ ಮರಳಿ ಬರುತ್ತಿದ್ದಾರೆ. ಪಟೇಲ್, ದೇಸಾಯಿ, ಭಟ್ ಎಲ್ಲ ಹಿಂದೂ ಹೆಸರುಗಳು. ಮುಸ್ಲಿಮರು ತಮ್ಮ ಹೆಸರಿನ ಮುಂದೆ ಈ ಹಿಂದು ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಇಲ್ಲಿ ನೂರ್ ಮಹಮದ್ ದೇಸಾಯಿ, ಅಹ್ಮದ್ ಪಟೇಲ್, ಮಕ್ಬೂಲ್ ಭಟ್ ಎನ್ನುವ ಹೆಸರುಗಳನ್ನು ಕಾಣುತ್ತೇವೆ. ಅವರ ಹಿಂದಿನವರು ಹಿಂದೂಗಳು ಎಂದು ಗುಜರಾತ್‌ನ ವಿಎಚ್‌ಪಿ ಸೆಕ್ರೆಟರಿ ರಾನಚೋಡ್ ಭಾರವಾದ್ ಹೇಳಿದ್ದಾರೆ.

ಕೇರಳದ ಅಲಪ್ಪುಜಾದಲ್ಲಿ ಸುಮಾರು 30 ದಲಿತ ಕ್ರಶ್ಚಿಯನ್ ಕುಟುಂಬಗಳ್ನ್ನು ಘರ್ ವಾಪಸಿ ಕಾರ್ಯಕ್ರಮದ ಅಡಿಯಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ. ಇನ್ನೂ 150 ಕುಟುಂಬಗಳು ಹಿಂದೂ ಧರ್ಮಕ್ಕೆ ಬರಲು ಇಚ್ಛೆ ವ್ಯಕ್ತಪಡಿಸಿವೆ ಎಂದು ವಿಎಚ್‌ಪಿ ಮುಖಂಡ ಪ್ರತಾಪ್.ವಿ.ಪಡಿಕ್ಕಲ್ ಹೇಳಿದ್ದಾರೆ.ಬಲ್ಲ ಮೂಲಗಳ ಪ್ರಕಾರ ಆರೆಸ್ಸಸ್ ಸುಮಾರು 58 ಪ್ರಚಾರಕರನ್ನು ಈ ಕಾರ್ಯಕ್ರಮಕ್ಕಾಗಿಯೇ ನಿಯೋಜಿಸಲಾಗಿದೆ

ಗುಜರಾತ್‌ನ ವಲ್ಸದ್‌ನಲ್ಲಿ ಸುಮಾರು 200 ಆದಿವಾಸಿ ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ.

ಉತ್ತರ ಪ್ರದೇಶದ ಜಾನುಪುರದಲ್ಲಿ 310 ಕ್ರಿಶ್ಷಿಯನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ.

11, ಡಿಸೆಂಬರ್ 2014 ರಂದು ಲೂಧಿಯಾನದ ಕಲವರಿ ಚರ್ಚಿನ ಮೇಳೆ ದಾಳಿ.

3 ಡಿಸೆಂಬರ್, 2014ರಲ್ಲಿ ದೆಹಲಿ ಚರ್ಚನ ಮೇಲೆ ದಾಳಿ.

ಭಿಲಾಯಿ, ಚಿತ್ರದುರ್ಗ, ದುರ್ಗ, ತ್ರಿಶ್ಯೂರ್ ಚರ್ಚಗಳ ಮೇಲೆ ದಾಳಿ.

ಮೇಲಿನ ಘಟನೆಗಳು ಸಂಘಪರಿವಾರದ ಮತೀಯವಾದಿ ಫೆನಟಿಸಂನ ಮುಖವನ್ನು ಬಯಲುಗೊಳಿಸುತ್ತವೆ. ಇನ್ನು ಇವರ ಆಡಳಿತದ, ಅಭಿವೃದ್ಧಿಯ ಮುಖದ ಲಕ್ಷಣಗಳೇನಿವೆ?

ಉದಾಹರಣೆಗೆ ಸಂಸತ್ತಿನ ಅಧಿವೇಶನದಲ್ಲೂ ಭಾಗವಹಿಸದೆ, ಭಾಗವಹಿಸಿದ ಕೆಲವೇ ದಿನಗಳಲ್ಲಿಯೂ ಒಂದೆರೆಡು ವಿವರಣೆಗಳನ್ನು ಕೊಟ್ಟಿದ್ದನ್ನು ಬಿಟ್ಟಲ್ಲಿ ಸಂಸತ್ತಿನ ಪ್ರಮುಖವಾದ ಚರ್ಚೆಗಳಲ್ಲಿ ಕಿಂಚಿತ್ತೂ ಭಾಗವಹಿಸಲಿಲ್ಲ ಪ್ರಧಾನಿ ನರೇಂದ್ರ ಮೋದಿ. ಏಕೆಂದರೆ ನರೇಂದ್ರ ಮೋದಿಗೆ ದೇಶವೆಂದರೆ ಒಂದು ಕಾರ್ಪೋರೇಟ್ ಸಂಸ್ಥೆ. ಅದರ ಪ್ರಧಾನ ಮಂತ್ರಿ ಎಂದರೆ ಕಾರ್ಪೋರೇಟ್ ಸಂಸ್ಥೆಯ ಸಿಇಓ. ಸಾಮಾನ್ಯವಾಗಿ ಈ ಸಿಇಓಗಳು ನೌಕರರೊಂದಿಗೆ ದಿನನಿತ್ಯ ಬೆರೆಯುವುದಿಲ್ಲ. ಮಾತನಾಡುವುದಿಲ್ಲ. ಈ ಸಿಇಓಗಳು ಏನಿದ್ದರೂ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಾರೆ. ಹಾಗೆಯೇ ನರೇಂದ್ರ ಮೋದಿಯೂ ಸಹ. ಸಂಸತ್ತಿಗೆ ಬರುವುದಿಲ್ಲ, ಕಲಾಪಗಳಲ್ಲಿ ಭಾಗವಹಿಸುದಿಲ್ಲ. ಎಲ್ಲವನ್ನೂ ಪ್ರಧಾನ ಮಂತ್ರಿ ಕಾರ್ಯಾಲಯದ ಮೂಲಕ ಆಡಳಿತ ನಡೆಸಲಾಗುತ್ತದೆ. ಇದು ಪರೋಕ್ಷವಾಗಿ ತುರ್ತುಪರಿಸ್ಥಿತಿಯ ಅಂಶಗಳು. ಕೇಂದ್ರೀಕೃತ ವ್ಯವಸ್ಥೆಯ ಲಕ್ಷಣಗಳು.

ತಾನು ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಲ್ಲೇ ನರೇಂದ್ರ ಮೋದಿ ಸರ್ಕಾರ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆಗೆ ಮಂಡಿಸದೆ, ಸಂಸತ್ತಿನ ಪ್ರಾಮುಖ್ಯತೆಯನ್ನು ಕಡೆಗಣಿಸಿ ಸುಗ್ರೀವಾಜ್ಞೆಗಳ ಮೂಲಕ 8 ಮಸೂದೆಗಳನ್ನು ಅಂಗೀಕರಿಸಿಕೊಂಡಿದ್ದಾರೆ. ಕನಿಷ್ಠ ಎಲ್ಲಾ ಸಂಸದರ ಅನುಮೋದನೆ ಮತ್ತು ಆಕ್ಷೇಪಣೆಗಳನ್ನು ಪರಿಗಣನೆಗೆ ತಂದುಕೊಂಡು ಆ ಮೂಲಕ ಒಂದು ಒಮ್ಮತದ ನಿರ್ಣಯದ ಮೂಲಕ ಅಥವಾ ಅದಾಗದಿದ್ದ ಪಕ್ಷದಲ್ಲಿ ಬಹುಮತದ ಮೂಲಕವಾದರೂ ಮಸೂದೆಗಳನ್ನು ಅಂಗೀಕರಿಸಬೇಕಾಗಿತ್ತು. ಆದರೆ ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ, ಸಂವಿಧಾನದ ಆಶಯಗಳಲ್ಲಿ ಕೊಂಚಿತ್ತೂ ಗೌರವವಿಲ್ಲದ ಆರೆಸ್ಸಸ್ ಮತ್ತು ನರೇಂದ್ರ ಮೋದಿ ಹಿಂದಿನ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಹೋಲಿಸಿದರೆ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸುಗ್ರೀವಾಜ್ಞೆಗಳನ್ನು ಬಳಸಿ ಅಂದರೆ ಸರಾಸರಿ 28 ದಿನಗಳಿಗೆ 1 ಸುಗ್ರೀವಾಜ್ಞೆಯನ್ನು ಬಳಸಿ ಮಸೂದೆಯನ್ನು ಅಂಗೀಕರಿಸಿಕೊಂಡಿದ್ದಾರೆ. ಇದು ಆರೆಸ್ಸಸ್ ಮತ್ತು ನರೇಂದ್ರ ಮೋದಿಯ ಸರ್ವಾಧಿಕಾರದ ಆಡಳಿತದ ಶೈಲಿ.

ನರೇಂದ್ರ ಮೋದಿಯ ;ಮೋಹನ್ ಭಾಗವತ್; ಎನ್ನುವ ಮತೀಯವಾದದ, ಫ್ಯಾಸಿಸಂನ ಮುಖದ, ಹಿಂದೂಯಿಸಂವಾದಿಯ ವ್ಯಾಖ್ಯಾನ ಮೇಲಿನಂತಿದ್ದರೆ ನರೇಂದ್ರ ಮೋದಿಗೆ ಬಹುಮತ ಗಳಿಸಲು ಕಾರಣವಾದ, ಇಡೀ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವಲಯಗಳು ಮೋದಿಯನ್ನು ಸಂಪೂರ್ಣವಾಗಿ ಬೆಂಬಲಿಸಲು ಕಾರಣವಾದ ಅಭಿವೃದ್ಧಿ, ಎಲ್ಲರ ವಿಕಾಸ, ಮುಕ್ತ ಮಾರುಕಟ್ಟೆ ಎನ್ನುವ ಮತ್ತೊಂದು ಮುಖದ ಕತೆ ಏನು ?

ಇದಕ್ಕೆ ಪುರಾವೆಗಳು ಈ ಕೆಳಗಿನಂತಿವೆ:

ಕತೆ 1 : ಯೋಜನಾ ಆಯೋಗ
65 ವರ್ಷಗಳಷ್ಟು ಹಳೆಯದಾದ ಹಣಕಾಸು ಇಲಾಖೆ,ರಿಸರ್ವ ಬ್ಯಾಂಕ್ ಆಫ್ ಇಂಡಿಯಾಗಳ ಸಹಯೋಗತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಇತರೇ ಇಲಾಖೆಗಳ ಅಭಿವೃದ್ಧಿ ಮಾನದಂಡಗಳನ್ನು ನಿರ್ಧರಿಸುತ್ತಿದ್ದ ಅತ್ಯಂತ ಪ್ರಮುಖ ಸಂಸ್ಥೆಯಾದ ಯೋಜನಾ ಆಯೋಗವನ್ನು ಈ ಮೋದಿ ತಾನು ಅಧಿಕಾರ ವಹಿಸಿಕೊಂಡು ಕೇವಲ ಆರು ತಿಂಗಳೊಳಗೆ ಅದರ ಸ್ವರೂಪವನ್ನು ಬದಲಾಯಿಸಿ ಹೊಸದಾಹಿ “ನೀತಿ ಆಯೋಗ” ಎಂದು ಮರು ನೇಮಕ ಮಾಡಲು ಇದ್ದ ಪ್ರಚೋದನೆಗಳೇನು? ಹಿತಾಸಕ್ತಿಗಳೇನು?

ಈ ಹೊಸ ಆಯೋಗಕ್ಕೆ ಬಲಪಂಥೀಯ ಆರ್ಥಿಕ ತಜ್ಞ ಅರವಿಂದ ಪನಗರಿಯಾ ಅದರ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. 19 ಜನವರಿ, 2015ರ ಔಟ್‌ಲುಕ್‌ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಈ ಪನಗರಿಯ ತಮ್ಮ ಗುರುಗಳಾದ ಮತ್ತೊಬ್ಬ ಆರ್ಥಿಕ ತಜ್ಞ ಜಗದೀಶ್ ಭಗವತಿಯವರೊಂದಿಗೆ ಜೊತೆಗೂಡಿ 2013ರಲ್ಲಿ ಎಕನಾಮಿಸ್ಟ್ ಪತ್ರಿಕೆಯಲ್ಲಿ ಗೋಧ್ರಾ ದುರಂತದ ನಂತರ ನಡೆದ ಗುಜರಾತ್ ಹತ್ಯಕಾಂಡವನ್ನು ಕೋಮು ಗಲಭೆಗಳೆಂದು ಮತ್ತು ಗಲಭೆಗಳಲ್ಲಿ ಕಾಲು ಭಾಗದಷ್ಟು ಹಿಂದೂಗಳೂ ಸಾವನ್ನಪ್ಪಿದ್ದಾರೆ ಎಂದು ಬರೆದಿದ್ದರು. ಈ ಪನಗರಿಯ ರಾಜಸ್ಥಾನದ ಹಣಕಾಸು ಸಮಿತಿಯ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಆ ರಾಜ್ಯದ ಸಾಮಾಜಿಕ-ಆರ್ಥಿಕ ಹಕ್ಕುಗಳ ಮಟ್ಟ ಸಂಪೂರ್ಣ ಕುಸಿದು ಹೋಗಿತ್ತು, ಪಡಿತರ ವ್ಯವಸ್ಥೆ ದುರ್ಬಲಗೊಂಡಿತ್ತು, ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಕಡಿತಗೊಳಿಸಲಾಗಿತ್ತು, 17000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಯಿತು, ಹಸಿವಿನಿಂದ ಆದಿವಾಸಿಗಳ ಸಾವಿನ ಪ್ರಮಾಣ ಹೆಚ್ಚಾಗಿತ್ತು ಎಂದು ಅಭಿವೃದ್ಧಿ ಆರ್ಥಿಕ ತಜ್ಞೆ ರೀತಿಕಾ ಖೇರ ಹೇಳುತ್ತಾರೆ. ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ನಿಕಿಲ್ ಡೇ ಅವರು “ಈ ಪನಗೇರಿಯಾ ಅವರು ಉದ್ಯೋಗ ಖಾತ್ರಿ ಯೋಜನೆ ನರೇಗಾವನ್ನು ಗೇಲಿ ಮಾಡುತ್ತಿದ್ದರು, ಅದನ್ನು ನಿಲ್ಲಿಸಬೇಕೆಂದು ಶಿಫಾರಸ್ಸು ಮಾಡಿದ್ದರು” ಎಂದು ಹೇಳಿದ್ದಾರೆ.

ಬಹುತೇಕ ಆಕ್ಟಿವಿಸ್ಟ್‌ಗಳಿಗೆ, ಆರ್ಥಿಕ ತಜ್ಞರಿಗೆ ಈ ಪನಗರಿಯಾ ಅವರ ಹೊಣೆಗಾರಿಕೆ ಏನು ಎನ್ನುವುದು ಅರ್ಥವಾಗುತ್ತಿಲ್ಲ. ಒಂದು ವೇಳೆ ಯೋಜನಾ ಆಯೋಗದ ಉಪಾಧ್ಯಕ್ಷನ ಹೊಣೆಗಾರಿಕೆಗಳೇ ಆಗಿದ್ದಲ್ಲಿ ಇದು ಕೇವಲ ಹೆಸರು ಬದಲಾವಣೆ ಎನ್ನಬಹುದೇ? ಒಂದು ವೇಳೆ ಹಾಗಿದ್ದ ಪಕ್ಷದಲ್ಲಿ ಈ ನೀತಿ ಆಯೋಗದ ಕುರಿತು ಇಷ್ಟೊಂದು ಸಂಭ್ರಮಗಳೇಕೆ? ಒಂದು ವೇಳೆ ಈ ನೀತಿ ಆಯೋಗಕ್ಕೆ ಸಂವಿಧಾನಾತ್ಮಕ ಅಧಿಕಾರವನ್ನು ಕೊಡದೇ ಇದ್ದಲ್ಲಿ ಈ ಆಯೋಗವು ನಿವೃತ್ತ ಅಧಿಕಾರಿಗಳ, ಸೋತ ರಾಜಕಾರಣಿಗಳ ಗೂಡಾಗುತ್ತದೆ ಎಂದು ಆರ್ಥಿಕ ತಜ್ಞರು ಕಳವಳಪಡುತ್ತಾರೆ.

19 ಜನವರಿ, 2015ರ ಔಟ್‌ಲುಕ್ ಪತ್ರಿಕೆಯಲ್ಲಿ ಇದರ ಕುರಿತಾದ ಪ್ರಕಟವಾದ ವರದಿಯಲ್ಲಿ ನೀತಿ ಆಯೋಗದ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.
1. ಪಂಚ ವಾರ್ಷಿಕ ಯೋಜನೆಯ ಭವಿಷ್ಯವೇನು? ರಾಜ್ಯಗಳು ತಮ್ಮ ಭವಿಷ್ಯದ ಯೋಜನೆಗಳನ್ನು ಚರ್ಚಿಸಲು ಸರ್ಕಾರಿ ಸಂಸ್ಥೆಗಳೇ ಇಲ್ಲದಂತಾಗುತ್ತದೆಯೇ?
2. ಕೇಂದ್ರವು ಬಿಡುಗಡೆ ಮಾಡುವ ಸ್ಕೀಮುಗಳಿಗೆ ಹಣಕಾಸಿನ ವಿತರಣೆಯ ಸ್ವರೂಪವನ್ನು ನಿರ್ಧರಿಸುವವರಾರು?
3. ಗಣರಾಜ್ಯ ವ್ಯವಸ್ಥೆಗೆ ತದ್ವಿರುದ್ಧವಾಗಿ,ಪ್ರಜಾಪ್ರಭುತ್ವದ ಆಶಯಗಳನ್ನೇ ನಿಶ್ಯಕ್ತಿಗೊಳಿಸುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಹಣಕಾಸು ಇಲಾಖೆಗಳು ಅಧಿಕಾರದ ಶಕ್ತಿಕೇಂದ್ರಗಳಾಗಿ ರೂಪಗೊಳ್ಳುತ್ತವೆಯೇ?
4. ಪಡಿತರ ವ್ಯವಸ್ಥೆ ಮತ್ತು ಜನಕಲ್ಯಾಣ ಯೋಜನೆಗಳನ್ನು ವಿರೋಧಿಸುತ್ತಿದ್ದ ಈ ಪನಗೆರಿಯ ಮತ್ತಿತರ ಬಲಪಂಥೀಯ ಆರ್ಥಿಕ ತಜ್ಞರನ್ನು ಒಳಗೊಂಡ ಈ ನೀತಿ ಆಯೋಗದ ಮುಂದೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು, ಜನ ಕಲ್ಯಾಣ ಯೋಜನೆಗಳನ್ನು ಹೇಗೆ ನಿಭಾಯಿಸುತ್ತದೆ?

ಯೋಜನಾ ಆಯೋಗದ ಕುರಿತಾಗಿ ಹಲವು ಟೀಕೆಗಳಿರಬಹುದು ಆದರೆ ಪ್ರತಿ ರಾಜ್ಯಕ್ಕೂ ಅದರ ಅಭಿವೃದ್ಧಿ ಯೋಜನೆಗಳಿಗೆ ಅವಶ್ಯಕವಾದ ಸಂಪನ್ಮೂಲಗಳನ್ನು ಕುರಿತು ನಿರ್ಧರಿಸುತ್ತಿದ್ದ ಈ ಆಯೋಗ ಆ ನಿಟ್ಟಿನಲ್ಲಿ ಅತ್ಯಂತ ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದೆ.ದೇಶವನ್ನು ಕಟ್ಟುವ ನೆಹರೂ ಅವರ ಕನಸಿಗೆ ಹೆಗಲಾಗಿ ಕಾರ್ಯ ನಿರ್ವಹಿಸಿದೆ. ಆದರೆ ಹಠಾತ್ತಾಗಿ ಅದರ ಕಾರ್ಯ ಸ್ವರೂಪವನ್ನು, ಚಹರೆಯನ್ನು ಬದಲಾಯಿಸಿ ಖಾಸಗೀಕರಣದ ಪರವಾದ, ಕಾರ್ಪೋರೇಟ್ ಶೈಲಿಗೆ ಹತ್ತಿರವಾದ ನೀತಿ ಆಯೋಗವನ್ನು ರಚಿಸುವ ಕಾರಣಗಳೇನು?

ಚುನಾವಣೆಯಲ್ಲಿ ಈ ನರೇಂದ್ರ ಮೋದಿ ಮತ್ತು ಬಿಜೆಪಿಯ ಗೆಲುವಿಗೆ ಕಾರ್ಪೋರೇಟ್ ಗುಂಪಗಳ ಪಾತ್ರ ಗುರುತರವಾಗಿದೆ. ಇಡೀ ಚುನಾವಣ ವೆಚ್ಚವನ್ನು ಭರಿಸಿದ್ದು ಕೆಲವು ಕಾರ್ಪೋರೇಟ್ ಶಕ್ತಿಗಳು. ನರೇಂದ್ರ ಮೋದಿಯೂ ಸಹ ಸಂಪೂರ್ಣ ಖಾಸಗೀಕರಣದ ಪರವಾಗಿರುವಂತಹ, ಕಾರ್ಪೋರೇಟ್ ಗುಂಪುಗಳ ವಕ್ತಾರರಾದ ರಾಜಕಾರಣಿ. ಸಾರ್ವಜನಿಕ ವ್ಯವಸ್ಥೆ, ಸರ್ಕಾರ ಆಡಳಿತ, ವಿಕೇಂದ್ರೀಕರಣ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು, ವೈವಿಧ್ಯ ಸಂಸ್ಕೃತಿ ಎನ್ನುವ ಆದರ್ಶಗಳ ಗ್ರಹಿಕೆ ಈ ನರೇಂದ್ರ ಮೋದಿಯ ವ್ಯಕ್ತಿತ್ವದಲ್ಲಿಯೂ ಇಲ್ಲ ಅವರಿಗೆ ಇದು ಬೇಕಾಗಿಯೂ ಇಲ್ಲ. ಇದನ್ನು ಇಲ್ಲಿನ ಪ್ರಜ್ಞಾವಂತರು ಮೋದಿಯ ಗುಜರಾತ್ ಆಡಳಿತದ ಶೈಲಿಯನ್ನು ಅಧ್ಯಯನ ಮಾಡಿ ವಿವರಿಸಿದ್ದರು. ಆದರೆ ಮೋದಿ ಫೋಬಿಯಾ ತಲೆಗೇರಿಸಿಕೊಂಡ ಮಂದಿಗೆ ಹಾಗಿದ್ದಲ್ಲಿ ಸಂವಿಧಾನದ ಆಶಯಗಳಾದ ವಿಕೇಂದ್ರೀಕರಣ, ರಾಷ್ಟ್ರೀಕರಣ ಮತ್ತು ಸಾರ್ವಜನಿಕ ಸಂಸ್ಥೆಗಳ ಸಬಲೀಕರಣದ ಎಲ್ಲಾ ಪ್ರಕ್ರಿಯೆಗಳು ಕ್ರಮೇಣ ಕುಂಠಿತಗೊಳ್ಳುತ್ತ ಮುಂದೊಂದು ದಿನ ಸಂಪೂರ್ಣ ಸ್ಥಗಿತಗೊಳ್ಳುತ್ತವೆ.

ಕತೆ 2 : ಆರು ತಿಂಗಳಲ್ಲಿ ಸಂಸತ್ತನ್ನು ಕಡೆಗಣಿಸಿ ಸುಗ್ರೀವಾಜ್ಞೆಗಳನ್ನು ಬಳಸಿಕೊಂಡು 8 ಮಸೂದೆಗಳನ್ನು ಅಂಗೀಕಾರ

1954ರಲ್ಲಿ ಲೋಕಸಭಾದ ಮೊದಲನೇ ಸ್ಪೀಕರ್ ಜಿ.ವಿ.ಮಾವಲಂಕರ್ ಪ್ರಧಾನಿಯ ಆಗಿದ್ದ ನೆಹರೂ ಅವರಿಗೆ ವಿಶೇಷ ಸಂದರ್ಭಗಳಲ್ಲಿ ಮತ್ತು ಜಟಿಲ ಪರಿಸ್ಥಿತಿ ಉದ್ಭವವಾಗದಂತಹ ವಿರಳ ಸಂದರ್ಭಗಳಿಗೆ, ತುರ್ತುಪರಿಸ್ಥಿಗಳಲ್ಲಿ ಮಾತ್ರ ಸುಗ್ರೀವಾಜ್ಞೆಗಳನ್ನು ಬಳಸಿಕೊಂಡು ಕಾಯಿದೆಯ ಅನುಷ್ಠಾನವನ್ನು ಸೀಮಿತಗೊಳಿಸಬೇಕು. ಸಾಮಾನ್ಯ ಸಂದರ್ಭಗಳಲ್ಲಿಯೂ ವಿವೇಚನೆ ಇಲ್ಲದೆ ವಿಶೇಷ ಶಾಸನಗಳನ್ನು ಬಳಸತೊಡಗಿದರೆ ಲೋಕಸಭೆಯು ರಬ್ಬರ್ ಸ್ಟಾಂಪ್‌ನಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ ನೆಹರೂ ಅವರನ್ನು ಒಳಗೊಂಡಂತೆ ನಂತರದ ಪ್ರಧಾನ ಮಂತ್ರಿಗಳು ಮಾವಲಂಕರ್ ಅವರ ಕಿವಿಮಾತನ್ನು ನಿರ್ಲಕ್ಷಿಸಿ ಈ ಸುಗ್ರೀವಾಜ್ಞೆಗಳನ್ನು ಸಂಸತ್ತನ್ನು ಒಳಗೊಳ್ಳದಯೇ ಶಾಸನಗಳನ್ನು ಜಾರಿಗೊಳಿಸುವ ಒಂದು ಸಮಾನಾಂತರ ಪ್ರಕ್ರಿಯೆಯನ್ನಾಗಿಯೇ ಬಳಸಿಕೊಂಡರು

ಸಂಸತ್ತಿನ ಅನುಮೋದನೆ ಪಡೆದುಕೊಳ್ಳದೆ ಸುಗ್ರೀವಾಜ್ಞೆಗಳನ್ನು ಬಳಸಿ ಅನುಮೋದನೆ ಪಡೆದುಕೊಂಡ ಪ್ರಮುಖ ಮಸೂದೆಗಳು :

ಇನ್ಸೂರೆನ್ಸ್ ಕಾಯಿದೆಗಳ (ತಿದ್ದುಪಡಿ) ಶಾಸನ 2014, ಕಲ್ಲಿದ್ದಲು ಗಣಿಗಳ (ವಿಶೇಷ ಹಂಚಿಕೆಗಳು) ಎರಡನೇ ಶಾಸನ 2014, ಭೂ ಸ್ವಾಧೀನ ಕಾಯಿದೆ ಮತ್ತು ಪುನರ್ವಸತಿ ಹಾಗೂ ಪುನಹ ಒಪ್ಪಂದ ಆಕ್ಟ್ 2013, ಮೋಟಾರು ವಾಹನ ಶಾಸನ 2015, ಹಿರಿಯ ನಾಗರಿಕರ ಶಾಸನ 2015.

ಚಳಿಗಾಲದ ಅಧಿವೇಶನ ಒಂದು ತಿಂಗಳ ಕಾಲ ನಡೆದರೂ ಸರ್ಕಾರವು ಪ್ರಮುಖ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆಗೆ ಮಂಡಿಸದೆ ಇದ್ದದ್ದು ಯಾತಕ್ಕೆ? ಈ ಚಳಿಗಾಲದ ಅಧಿವೇಶನದಲ್ಲಿ 12 ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಸಾಧ್ಯವಾಗಬಹುದಾದರೆ ಭೂಸ್ವಾಧೀನ, ಕಲ್ಲಿದ್ದಲು ಗಣಿಗಳು, ಇನ್ಸೂರೆನ್ಸ್ ಕಾಯಿದೆಗಳನ್ನು ಸಹ ಪ್ರಮುಖ ಮಸೂದೆಗಳೆಂದು ಸರ್ಕಾರವು ಪರಿಗಣಿಸಲಿಲ್ಲವೇಕೆ? ಮಾವಲಂಕರ್ ಹೇಳಿದ ಹಾಗೆ ನರೇಂದ್ರ ಮೋದಿ ಸರ್ಕಾರ ಸಂಸತ್ತನ್ನು ಒಂದು ರಬ್ಬರ್ ಸ್ಟಾಂಪ್ ಆಗಿ ಬಳಸಿಕೊಳ್ಳುತ್ತಿದೆ.

ಕತೆ 3 : ಭೂ ಸ್ವಾಧೀನ ಕಾಯಿದೆ ಮತ್ತು ಪುನರ್ವಸತಿ ಹಾಗೂ ಪುನಹ ಒಪ್ಪಂದ ಆಕ್ಟ್ 2013, ಸಂಪೂರ್ಣ ಖಾಸಗೀಕರಣ, ಕಾರ್ಪೋರೇಟ್ ಶಕ್ತಿಗಳ ಮೇಲುಗೈ, ಸಂವಿಧಾನಕ್ಕೆ ಅಪಚಾರ

ತಿದ್ದುಪಡಿಗೆ ಮೊದಲು :
ಕೇವಲ ಸೆಕ್ಷನ್ 101 ಅನ್ನು ತಿದ್ದುಪಡಿ ಮಾಡಿ ಭೂಸ್ವಾಧೀನ ಪಡಿಸಿಕೊಂಡ ಜಮೀನನ್ನು 5 ವರ್ಷಗಳೊಳಗೆ ಉದ್ದೇಶಿತ ಕಾರ್ಯಕ್ಕಾಗಿ ಬಳಸದೇ ಇದ್ದರೆ ಆ ಜಮೀನನ್ನು ಮರಳಿ ಅದರ ಮಾಲೀಕರಿಗೆ ಹಿಂದುರಿಗಿಸಬೇಕು.
ತಿದ್ದುಪಡಿಯ ನಂತರ :
ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಲು ನಿಗದಿಪಡಿಸಿದ ಕಾಲಾವಧಿ ಅಥವಾ 5 ವರ್ಷಗಳ ಅವಧಿ ಇವೆರಡರಲ್ಲಿ ಯಾವುದು ದೀರ್ಘವಾಗಿರುವುದೋ ಅದನ್ನು ಪರಿಗಣಿಸಲಾಗುವುದು. ಅಂದರೆ ಪ್ರಾಜೆಕ್ಟ್ ಅನ್ನು ಪಡೆದುಕೊಂಡ ಸಂಸ್ಥೆಯು ತನ್ನ ಉದ್ದೇಶಿತ ಯೋಜನೆಯನ್ನು 5 ವರ್ಷಗಳ ನಂತರವೂ ಪ್ರಾರಂಬಿಸದೇ ಇದ್ದರೂ ತಾನು ಕರಾರು ಪತ್ರದಲ್ಲಿ ಹೇಳಿದ ಕಾಲಾವಧಿಯವರೆಗೂ ಆ ಜಮೀನನ್ನು ತನ್ನ ಬಳಿ ಇಟ್ಟುಕೊಳ್ಳಬಹುದು

ತಿದ್ದುಪಡಿಗೆ ಮೊದಲು :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾಯಿದೆಯ ನೀತಿಯನ್ನು ಉಲ್ಲಂಘಿಸಿದಲ್ಲಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಮತ್ತು ಸಂಸ್ಥೆಯ ಮುಖ್ಯಸ್ಥರು ಹೊಣೆಗಾರರಾಗಿರುತ್ತಾರೆ.
ತಿದ್ದುಪಡಿಯ ನಂತರ :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ಸರ್ಕಾರದ ಅನುಮತಿಯನ್ನು ಪಡೆದ ನಂತರವಷ್ಟೇ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ಅಧಿನಿಯಮ 197 ಅಡಿಯಲ್ಲಿ ಅವರಿಗೆ ರಿಯಾಯಿತಿ ನೀಡಲಾಗಿದೆ. ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರು ಸಹ ಈ ಹೊಣೆಗಾರಿಕೆಗೆ ಒಳಪಡುವುದಿಲ್ಲ. ಅವರೂ ಸಹ ತನಿಖೆಗೆ ಒಳಪಡುವುದಿಲ್ಲ

ತಿದ್ದುಪಡಿಗೆ ಮೊದಲು :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ನ್ಯಾಯಾಂಗವು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರವಿದೆ.
ತಿದ್ದುಪಡಿಯ ನಂತರ :
ಈ ಕೆಳಗೆ ಸೂಚಿಸಿದ ಪ್ರಾಜೆಕ್ಟ್‌ಗಳನ್ನು ಪ್ರಾರಂಭಿಸಲು, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅದರ ಮಾಲೀಕರ, ರೈತರ ಅನುಮತಿ ಪಡೆಯುವ ಅಗತ್ಯವಿಲ್ಲ. ಸಾಮಾಜಿಕ ಹಕ್ಕುಗಳು, ಸಾಮಾಜಿಕ ನ್ಯಾಯಗಳನ್ನು ಪರಿಗಣಿಸುವ ಅಗತ್ಯವಿಲ್ಲ. ಈ ಪ್ರಾಜೆಕ್ಟ್‌ಗಳನ್ನು ಸರ್ಕಾರ, ಖಾಸಗಿ ಸಂಸ್ಥೆಗಳು, ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಜಾರಿಗೊಳಿಸಲು ಅನುಮತಿ ಕೊಡಲಾಗಿದೆ.

  • ಸಾರಿಗೆ
  • ರಸ್ತೆ ಮತ್ತು ಸೇತುವೆಗಳು
  • ಬಂದರುಗಳು
  • ಒಳನಾಡು waterways
  • ವಿಮಾನ ನಿಲ್ದಾಣಗಳು
  • ರೇಲ್ವೇ ಇಲಾಖೆಯ ಯೋಜನೆಗಳು
  • ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ
  • ಇಂಧನ
  • ವಿದ್ಯುತ್ ಉತ್ಪಾದನೆ, ಪ್ರಸರಣೆ, ವಿತರಣೆ
  • Oll Pipelines
    • ತೈಲ /ಅನಿಲ/ LPG ಸಂಗ್ರಹಣ ಸೌಲಭ್ಯಗಳು
    • ಅನಿಲ ಪೈಪ್ ಲೈನ್
  • ಜಲ ಮತ್ತು ಒಳಚರಂಡಿ
  • ಘನ ತ್ಯಾಜ್ಯ ನಿರ್ವಹಣೆ
    • ಜಲ ಸರಬರಾಜು pipelines
    • Water treatment plants
    • Sewage collection, treatment system
    • Irrigation (dams, channels, embankments)
    • Storm water drainage system
    • Water harvesting and conservation
  • ದೂರ ಸಂಪರ್ಕ ಇಲಾಖೆಯ ನೆಟ್‌ವರ್ಕ ಮತ್ತು ಟವರ್
  • ಸಾಮಾಜಿಕ ಮತ್ತು ವಾಣಿಜ್ಯ ಮೂಲಭೂತ ಸೌಕರ್ಯ
  • ಶಿಕ್ಷಣ ಸಂಸ್ಥೆಗಳು
  • ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ರೋಗ ಪರೀಕ್ಷಣ ಕೇಂದ್ರಗಳು, ಕೈಗಾರಿಕ ಪಾರ್ಕ, ಎಸ್‌ಇಜಢ್, ಪ್ರವಾಸೋದ್ಯಮ, ವ್ಯವಸಾಯ ಮಾರುಕಟ್ಟೆ
  • ರಸಗೊಬ್ಬರಗಳು
  • ಟರ್ಮಿನಲ್ ಮಾರುಕಟ್ಟೆಗಳು
  • ಮಣ್ಣು ಪರೀಕ್ಷಣ ಪ್ರಯೋಗಾಲಯಗಳು
  • ಶೈತ್ಯಾಗಾರಗಳು
  • ವ್ಯವಸಾಯ, ಡೈರಿ, ಮತ್ಸೋದ್ಯಮ, ಮಾಂಸದ ಪ್ರೊಸಸ್ ಗೆ ಮಾರುಕಟ್ಟೆ ಇನಫ್ರಾಸ್ಟ್ರಕ್ಚರ್
  • ಗಣಿಗಾರಿಕೆ ಚಟುವಟಿಕೆಗಳು, ಕೈಗಾರಿಕಾ ಕಾರಿಡಾರ್‌ಗಳು, ಕ್ರೀಡೆ, ಆರೋಗ್ಯ ವಲಯ, ಪ್ರವಾಸೋದ್ಯಮ, ಸಾರಿಗೆ, ಸ್ಪೇಸ್ ಯೋಜನೆಗಳು
  • ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಯೋಜನೆಗಳು

ನಮ್ಮಲ್ಲಿನ ಭ್ರಷ್ಟ ವ್ಯವಸ್ಥೆ, ಭ್ರಷ್ಟ ರಾಜಕೀಯ, ರಾಜಕಾರಣಿ-ಅಧಿಕಾರಿ-ಉದ್ಯಮಿ ಎನ್ನುವ ಒಂದು ನೆಕ್ಸಸ್ ಇವೆಲ್ಲವೂ ಮೇಲ್ಕಾಣಿಸಿದ ಎಲ್ಲಾ ವಲಯಗಳಲ್ಲಿ, ವರ್ಗಗಳಲ್ಲಿ ಅರ್ಹತೆ ಪಡೆದುಕೊಳ್ಳುತ್ತಾರೆ. ಪ್ರತಿಯೊಂದನ್ನೂ ಸುರಕ್ಷತೆಗೆ ಸಂಬಂಧಪಟ್ಟಿದ್ದು, ದೇಶದ ಹಿತಾಸಕ್ತಿಗೆ ಸಂಬಂಧಪಟ್ಟಿದ್ದು ಎನ್ನುವ ಹಣೆಪಟ್ಟಿಯ ಅಡಿಯಲ್ಲಿ ಅರ್ಹತೆ ಪಡೆದುಕೊಳ್ಳುತ್ತಾರೆ. ಅಡಾನಿಗಳು, ಅಂಬಾನಿಗಳು, ವೇದಾಂತಗಳು, ಮುಂತಾದ ಬಂಡವಾಳಶಾಹಿಗಳ ಒಕ್ಕೂಟ ಇಡೀ ದೇಶದ ಬಹುಪಾಲು ಯೋಜನೆಗಳನ್ನು ಪಡೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಮುಂದಿನ ವರ್ಷಗಳಲ್ಲಿ ಕ್ರಮೇಣವಾಗಿ ಇಂಡಿಯಾ ದೇಶ ಬಂಡವಾಳಶಾಹಿಗಳ ದೇಶವಾಗುತ್ತದೆ. ಇದರಲ್ಲಿ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಈ ಕರಾಳ ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಾಗಿದೆ.

ತೆ 4 : ಇನ್ಸೂರೆನ್ಸ್ ಕಾಯಿದೆಗಳ (ತಿದ್ದುಪಡಿ) ಶಾಸನ 2014, ಕಲ್ಲಿದ್ದಲು ಗಣಿಗಳ (ವಿಶೇಷ ಹಂಚಿಕೆಗಳು) ಎರಡನೇ ಶಾಸನ 2014
ಇನ್ಸೂರೆನ್ಸ್ ಕಂಪನಿಗಳಲ್ಲಿ ( ಸರ್ಕಾರಿ ಮತ್ತು ಖಾಸಗಿ) ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಶೇಕಡಾ 26 % ರಿಂದ ಶೇಕಡಾ 49 % ಏರಿಸಲಾಗಿದೆ.

ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಚಿಲ್ಲರೆ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ತೀವ್ರವಾಗಿ ಪ್ರತಿಭಟಿಸಿದ್ದ ಬಿಜೆಪಿ ಪಕ್ಷ ಆಗ ಸಂಸತ್ತಿನಲ್ಲಿ ಪದೇ ಪದೇ ಗದ್ದಲವನ್ನೆಬ್ಬಿಸುತ್ತಾ ಕಾರ್ಯ ಕಲಾಪಗಳಿಗೆ ಭಂಗವನ್ನು ಉಂಟು ಮಾಡಿತ್ತು. ಆರೆಸ್ಸಸ್ ಸದಾ ಸ್ವದೇಶಿ ಮಂತ್ರವನ್ನು ಜಪಿಸುತ್ತಾ ವಿದೇಶಿ ಬಂಡವಾಳ ಹೂಡಿಕೆಯನ್ನು ದೇಶವನ್ನು ಹಾಳು ಮಾಡುತ್ತದೆ ಹಿಂದೂ ರಾಷ್ಟ್ರದ ಪಾವಿತ್ರತೆ ನಾಶವಾಗುತ್ತದೆ ಎಂದು ಪ್ರಚೋದಿಸುತ್ತಾ ವಿದೇಶಿ ಬಂಡವಾಳ ಹೂಡಿಕೆಯನ್ನು ವೀರೋಧಿಸಿತ್ತು. ಇಂದು ಇದೇ ಸಂಘ ಪರಿವಾರ ಇನ್ಸೂರೆನ್ಸ್ ವಲಯದಲ್ಲಿ ಶೇಕಡ 49% ರಷ್ಟು ವಿದೇಶ ಬಂಡವಾಶ ಹೂಡಿಕೆಗೆ ಅನುಮೋದನೆ ನೀಡಿದೆ.

ಕತೆ 5 : ಕಾರ್ಮಿಕ ಕಾನೂನು ಮತ್ತು ರಿಲೇಷನ ಸುಧಾರಣೆಗಳು ಮತ್ತು ತಿದ್ದುಪಡಿಗಳು : ಕೇಂದ್ರದ ಕ್ಯಾಬಿನೆಟ್ ಅನುಮೋದಿಸಿದ ಶಿಫಾರಸುಗಳು

ಕೈಗಾರಿಕಾ ವ್ಯಾಜ್ಯ ಅಕ್ಟ್ 1947 :

ವರ್ತಮಾನದ ಕಾಯಿದೆ :
ಗರಿಷ್ಠ 100 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಯಾವುದೇ ಮುನ್ಸೂಚನೆ ಇಲ್ಲದೆಯೇ ತನ್ನ ಉತ್ಪಾದನೆಯನ್ನು ಅಥವಾ ಸಂಪೂರ್ಣ ಕಾರ್ಖಾನೆ/ಉದ್ಯಮವನ್ನು ಮುಚ್ಚಬಹುದು

ಸುಧಾರಣೆ / ಬದಲಾವಣೆಯ ಶಿಫಾರಸು:
ಗರಿಷ್ಠ 3000 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಯಾವುದೇ ಮುನ್ಸೂಚನೆ ಇಲ್ಲದೆಯೇ ತನ್ನ ಉತ್ಪಾದನೆಯನ್ನು ಅಥವಾ ಸಂಪೂರ್ಣ ಕಾರ್ಖಾನೆ/ಉದ್ಯಮವನ್ನು ಮುಚ್ಚಬಹುದು

ಕಾರ್ಖಾನೆ ಅಕ್ಟ್ 1948 :
ವರ್ತಮಾನದ ಕಾಯಿದೆ :
ವಿದ್ಯುತ್ ಬಳಕೆ ಇಲ್ಲದ ಗರಿಷ್ಠ 20 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಮತ್ತು ವಿದ್ಯುತ್ ಬಳಸುತ್ತಿರುವ ಗರಿಷ್ಠ 10 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಮಾತ್ರ ಫಾಕ್ಟರೀಸ್ ಆಕ್ಟ್ 1948 ಅನ್ವಯವಾಗುತ್ತದೆ

ಸುಧಾರಣೆ / ಬದಲಾವಣೆಯ ಶಿಫಾರಸು:
ವಿದ್ಯುತ್ ಬಳಕೆ ಇಲ್ಲದ ಗರಿಷ್ಠ 40 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳು ಮತ್ತು ವಿದ್ಯುತ್ ಬಳಸುತ್ತಿರುವ ಗರಿಷ್ಠ 20 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಮಾತ್ರ ಫಾಕ್ಟರೀಸ್ ಆಕ್ಟ್ 1948 ಅನ್ವಯವಾಗುತ್ತದೆ

(ಇದರ ಅನುಸಾರ 40/20 ಕ್ಕಿಂತ ಕಡಿಮೆ ನೌಕರರನ್ನು ಹೊಂದಿದ್ದ ಕಾರ್ಖಾನೆ/ಉದ್ಯಮಗಳಿಗೆ ಕಾರ್ಖಾನೆ ಅಕ್ಟ್ 1948 ಅನ್ವಯವಾಗುವುದಿಲ್ಲ. ಹೀಗಾಗಿ ಮಾಲೀಕರು ಯಾವುದೇ ಮೂಲ ಭೂತ ಸೌಕರ್ಯ, ಕನಿಷ್ಠ ಸೌಲಭ್ಯಗಳು, ವೇತನಗಳು, ಸೌಹಾರ್ದಯುತ ವಾತಾವರಣಗಳನ್ನು ಕಲ್ಪಿಸಬೇಕಾಗಿಲ್ಲ. ನೌಕರರನ್ನು ಜೀತದಾಳುಗಳಂತೆ ಬಳಸಿಕೊಳ್ಳಬಹುದು )

ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 :
ವರ್ತಮಾನದ ಕಾಯಿದೆ :
20 ಕ್ಕಿಂತಲೂ ಮೇಲ್ಪಟ್ಟ ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 ಅನ್ವಯವಾಗುತ್ತದೆ

ಸುಧಾರಣೆ / ಬದಲಾವಣೆಯ ಶಿಫಾರಸು:
50 ಕ್ಕಿಂತಲೂ ಮೇಲ್ಪಟ್ಟ ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 ಅನ್ವಯವಾಗುತ್ತದೆ.

(ಈ ಕಾಯಿದೆಯ ಅನ್ವಯ 50ಕ್ಕಿಂತಲೂ ಕಡಿಮೆ ನೌಕರರನ್ನು ಹೊಂದಿದ ಕಾರ್ಖಾನೆ/ಉದ್ಯಮಗಳ ಮಾಲೀಕರು ಕಾಂಟ್ರಾಕ್ಟ್ ಕಾರ್ಮಿಕರಿಗೆ ವೇತನವನ್ನು ತಮ್ಮ ಹಿತಾಸಕ್ತಿಗೆ ಅನುಸಾರ ನಿರ್ಧರಿಸಬಹುದು. ಕನಿಷ್ಠ ವೇತನದ ನೀತಿ ಅನ್ವವಾಗುವುದಿಲ್ಲ. ಕೆಲಸದ ಅವಧಿಯನ್ನು ಮಾಲೀಕನೇ ನಿರ್ಧರಿಸುತ್ತಾನೆ. ಹೆಚ್ಚುವರಿಯಾದ ಮಾಡಿದ ಕೆಲಸಕ್ಕೆ ವೇತನವನ್ನು ನಿರ್ಧರಿಸುವುದು ಮಾಲೀಕನೇ. ವೈದ್ಯಕೀಯ ಸೌಲಭ್ಯಗಳು, ಸುರಕ್ಷಿತ ಸೌಲಭ್ಯಗಳನ್ನು ನಿರಾಕರಿಸಲು ಮಾಲೀಕನಿಗೆ ಸ್ವಾತಂತ್ರವಿದೆ. ಒಟ್ಟಿನಲ್ಲಿ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲು ಮಾಲೀಕರಿಗೆ ಸ್ವಾತಂತ್ರ ದೊರೆತಂತಾಗುತ್ತದೆ.)

ಟ್ರೇಡ್ ಯೂನಿಯನ್ ಆಕ್ಟ್ 1926:
ವರ್ತಮಾನದ ಕಾಯಿದೆ :
ಕಾರ್ಖಾನೆಯೊಂದರ ಎಲ್ಲಾ ನೌಕರರ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 15% ನೌಕರರು ಸದಸ್ಯರಾಗಿದ್ದರೆ ಮಾತ್ರ ಅಲ್ಲಿ ಯೂನಿಯನ್ ಪ್ರಾರಂಬಿಸಲು ಅನುಮತಿ ದೊರಕುತ್ತದೆ.

ಸುಧಾರಣೆ / ಬದಲಾವಣೆಯ ಶಿಫಾರಸು:
ಕಾರ್ಖಾನೆಯೊಂದರ ಎಲ್ಲಾ ನೌಕರರ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30% ನೌಕರರು ಸದಸ್ಯರಾಗಿದ್ದರೆ ಮಾತ್ರ ಅಲ್ಲಿ ಯೂನಿಯನ್ ಪ್ರಾರಂಭಿಸಲು ಅನುಮತಿ ದೊರಕುತ್ತದೆ.

ಕಾರ್ಮಿಕರ ಬದುಕಿನ ಸುಧಾರಣೆಯೆಂದರೆ ನರೇಂದ್ರ ಮೋದಿ ಚಿಂತನೆಯ ಅನುಸಾರ ಅವರ ಬದುಕನ್ನು modi_ambani_tata_kamathಮತ್ತಷ್ಟು ದಯನೀಯವಾಗಿಸುವುದು. ಈಗ ದೊರಕುತ್ತಿರುವ ಅಲ್ಪಸ್ವಲ್ಪ ಸೌಲಭ್ಯಗಳನ್ನು ಕಡಿತಗೊಳಿಸಿ ಮರಳಿ ಪಾಳೇಗಾರಿಕೆ ಸಂಸ್ಕೃತಿಯನ್ನು ಜಾರಿಗೊಳಿಸುವುದು. ಕಾರ್ಮಿಕರನ್ನು ಜೀತಗಾರರನ್ನಾಗಿಸುವುದು. ಇದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಮೇಲಿನ ಹೊಸ ಆಕ್ಟ್‌ಗಳೇ ಮಾತನಾಡುತ್ತವೆ. ಕಾರ್ಮಿಕ ಸುಧಾರಣೆ ಶಿಫಾರಸ್ಸುಗಳನ್ನು ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ರಾಜಸ್ತಾನದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ಏಕೆಂದರೆ ಅಲ್ಲಿ ಬಿಜೆಪಿ ಆಡಳಿತವಿದೆ. ಏಕೆಂದರೆ ಅಲ್ಲಿ ಫ್ಯೂಡಲ್ ಸಮಾಜದ ಪ್ರಭಾವ ದಟ್ಟವಾಗಿದೆ. ಏಕೆಂದರೆ ಅಲ್ಲಿ ಪ್ರಬಲ ಜಾತಿಗಳ ಕೈಗೆ ಅಧಿಕಾರವನ್ನು ಹಸ್ತಾಂತರಿಸಲು ಈ ಆಕ್ಟ್‌ಗಳನ್ನು ಬಳಸಿಕೊಳ್ಳಬಹುದು.

ಹಾಗಿದ್ದಲ್ಲಿ ಸಾಮಾಜಿಕ ನ್ಯಾಯ, ವಿಕೇಂದ್ರೀಕರಣ, ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಎಲ್ಲವನ್ನೂ ಸಂಪೂರ್ಣವಾಗಿ, ನಿಶ್ಯಕ್ತಗೊಳಿಸಲಾಗುತ್ತಿದೆ. ಸಂಘ ಪರಿವಾರಕ್ಕೆ ಬೇಕಾಗಿರುವುದೂ ಇದೇ ಮಾದರಿಯ ಯಜಮಾನ್ಯ- ಬ್ರಾಹ್ಮಣ್ಯ ವ್ಯವಸ್ಥೆಯ, ತಾರತಮ್ಯ, ಪ್ರತ್ಯೇಕತೆಯ ಹಿಂದುತ್ವದ ಇಂಡಿಯಾ. ನರೇಂದ್ರ ಮೋದಿಯ ಉದ್ದೇಶವು ಇದೇ ಮಾದರಿಯ ಇಂಡಿಯಾ.

ಹಾಗಿದ್ದಲ್ಲಿ ಸಂಪೂರ್ಣ ಅಭಿವೃದ್ಧಿ ಮತ್ತು ಎಲ್ಲರ ವಿಕಾಸ ಎನ್ನುವ ತತ್ವದ ಹಿಂದಿನ ಕುತಂತ್ರವೇನು? ಅದರ ಮುಂದಿನ ಹಣೆಬರಹವೇನು? ಏಕೆಂದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಾ ಹೋಗುವುದಂತೂ ಖಾತರಿಯಾಗಿದೆ. ಅಭಿವೃದ್ಧಿಯ ಮಾದರಿಯೆಂದೇ ಬಿಂಬಿಸಲ್ಪಟ್ಟ ನರೇಂದ್ರ ಮೋದಿಯ ನೇತೃತ್ವದಲ್ಲಿ ದೇಶದ ಭವಿಷ್ಯ ನಿಜಕ್ಕೂ ಸುರಕ್ಷಿತವೇ? ಆವರನ್ನು ಬಹುಮತದಿಂದ ಗೆಲ್ಲಿಸಿದ ಅವರ ಅಭಿಮಾನಿಗಳೇ ಉತ್ತರಿಸಬೇಕು.

(ಮುಂದುವರೆಯುತ್ತದೆ…)

ನೆಲದ ಭಾಷೆ ಮತ್ತು ಕಲಿಕೆಯ ಮಾಧ್ಯಮ

– ಪ್ರಸಾದ್ ರಕ್ಷಿದಿ

ಭಾರತದ ಸರ್ವೋಚ್ಛ ನ್ಯಾಯಾಲಯ ‘ಮಕ್ಕಳಿಗೆ ಯಾವ ಭಾಷಾ ಮಾಧ್ಯಮದಲ್ಲಿ ವಿದ್ಯೆ ನೀಡಬೇಕೆನ್ನುವುದನ್ನು ನಿರ್ಧರಿಸುವ ಹಕ್ಕು ಪೋಷಕರದ್ದು’ ಎಂದು ತೀರ್ಪು ನೀಡಿದೆ. ಈ ತೀರ್ಪು ಭಾರತದ ಸಂವಿಧಾನದ ಅಡಿಯಲ್ಲಿ ಮಾತ್ರವಲ್ಲ ಯಾವುದೇ ಪ್ರಜಾಪ್ರಭುತ್ವ ದೇಶದ ನ್ಯಾಯಾಲಯ ನೀಡಬಹುದಾದ, ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಹಜವಾದ ತೀರ್ಪಿನಂತೇ ಇದೆ. Supreme Courtಆದರೆ ಇದರ ಸಾಧಕ ಭಾಧಕಗಳ ಚರ್ಚೆಯಾಗಬೇಕಾಗಿರುವುದು, ಭಾರತದಂತಹ ಬಹುಭಾಷಾ, ಬಹುಜಾತೀಯ ಮತ್ತು ಬಹು ಸಂಸ್ಕೃತಿಯ ಸಮಾಜದ ಹಿನ್ನೆಲೆಯಲ್ಲಿ.

ಇಲ್ಲಿ ಕನ್ನಡದ ಸಂದರ್ಭವನ್ನು ಮಾತ್ರ ಪರಿಗಣಿಸಿ ಈವಿಚಾರಗಳನ್ನು ಹೇಳುತ್ತಿದ್ದೇನಾದರೂ ಹಿಂದಿ ಭಾಷೆಯನ್ನಾಡುವ ಪ್ರದೇಶಗಳನ್ನುಳಿದು ಬೇರೆ ಎಲ್ಲಾ ಪ್ರಾದೇಶಿಕ ಭಾಷೆಗಳ ಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿದೆ. ಹಿಂದಿ ಭಾಷೆಯು ಕೇಂದ್ರ ಸರ್ಕಾರದಿಂದ ವಿಶೇಷ ಪೋಷಣೆಯನ್ನು ಪಡೆಯುತ್ತಿದ್ದರೂ ಸಹ ಕಲಿಕಾ ಮಾಧ್ಯಮದ ವಿಚಾರಕ್ಕೆ ಬಂದಾಗ ಇಂಗ್ಲಿಷ್‌ನೊಂದಿಗೆ ಅವರಿಗೂ ಸಮಸ್ಯೆಗಳಿವೆ.

ಸಾಮಾನ್ಯವಾಗಿ ನಾವು ಮಾತನಾಡುವಾಗ, ನಮ್ಮ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸಲು, ಸಹಜವಾಗಿ ಯೋಚಿಸಲು, ಪ್ರಪಂಚದ ಎಲ್ಲ ಅನುಭವಗಳನ್ನು ಮತ್ತು ಅದರ ಮೂಲಕ ದೊರೆಯುವ ಜ್ಞಾನವನ್ನು ಸ್ವೀಕರಿಸಿ ಗ್ರಹಿಸಲು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳುತ್ತಲೇ ಇರುತ್ತೇವೆ. ಇದಕ್ಕೊಂದು ತಮಾಷೆಯ ಉದಾಹರಣೆಯನ್ನು ನೀಡುತ್ತೇನೆ. ಸುಮಾರು ಮೂವತ್ತು ವರ್ಷಗಳಕಾಲ ಆಸ್ಟೇಲಿಯಾದಲ್ಲಿ ವಿಜ್ಞಾನಿಯಾಗಿದ್ದು ಇದೀಗ ವಾಪಸ್ ಬಂದು ಹಳ್ಳಿಯಲ್ಲಿ ನೆಲೆಸಿದವರೊಬ್ಬರು ಇತ್ತೀಚೆಗೆ ಪರಿಚಯವಾದರು. ಅವರು ಆಸ್ಟೇಲಿಯಾದಲ್ಲಿನ ಅನುಭವಗಳ ಬಗ್ಗೆ ಮಾತನಾನಾಡುತ್ತ ಒಂದು ವಿಚಾರವನ್ನು ಹೇಳಿದರು. Kavi_kannadaಅವರು ಅಲ್ಲಿದ್ದಾಗ ಯಾರಿಗಾದರೂ ಬಯ್ಯುತ್ತಿದ್ದರೆ ಮಾತು ತನ್ನಷ್ಟಕ್ಕೆ ಕನ್ನಡ ಭಾಷೆಗೆ ಹೊರಳುತ್ತಿತ್ತಂತೆ!. ಅಂದರೆ ನಾವು ಕಲಿತ ಭಾಷೆಯಲ್ಲಿ ಪೂರ್ಣ ಅಭಿವ್ಯಕ್ತಿ ಕಷ್ಟ ಎನ್ನುವುದನ್ನವರು ಪರೋಕ್ಷವಾಗಿ ತಿಳಿಸಿದರು. ಆದರೆ ನಾವು ವ್ಯಾವಹಾರಿಕ ಜಗತ್ತಿಗೆ ಬಂದಾಗ ಇಂಗ್ಲಿಷ್ ಭಾಷೆಯೇ ನಮ್ಮ ಆದ್ಯತೆಯಾಗಿಬಿಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ.

ಮಾತೃಭಾಷೆ ಎನ್ನುವ ಪದವೇ ಸ್ವಲ್ಪ ಗೊಂದಲವುಂಟುಮಾಡುವಂಥದ್ದು ಕರ್ನಾಟಕದಲ್ಲೇ, ತುಳು, ಕೊಡವ, ಮುಂತಾದ ಪ್ರಾದೇಶಿಕ ಭಾಷೆಗಳಿದ್ದ ಹಾಗೆ ಬಂಜಾರ, ಅರೆಗನ್ನಡ, ಹೈಗ, ಬೋವಿ, ಬ್ಯಾರಿ ಮುಂತಾದ ಜನಾಂಗೀಯ ಭಾಷೆಗಳಿವೆ. ತಮಿಳು, ತೆಲುಗು, ಉರ್ದು, ಕೊಂಕಣಿ. ಮಲೆಯಾಳಂ, ಭಾಷಿಕರಿದ್ದಾರೆ. ನಾವು ಮನೆಯಲ್ಲಿ ಆಡುವ ಮಾತನ್ನು ಮಾತೃಭಾಷೆ ಎಂದುಕೊಂಡರೆ, ಮಧ್ಯ ಕರ್ನಾಟಕದ ಅಚ್ಚಕನ್ನಡದ ನೆಲದಲ್ಲೂ ನಾವು ಹೊರಗೆ ಮಾತನಾಡುವ ಕನ್ನಡಕ್ಕೂ ಮನೆ ಮಾತಿಗೂ ತುಂಬ ವ್ಯತ್ಯಾಸಗಳಿವೆ. ಇವರೆಲ್ಲರಿಗೂ ತಮ್ಮ ಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಕ್ಕು ಸಂವಿಧಾನಾತ್ಮಕವಾಗಿ, ಇದೀಗ ನ್ಯಾಯಾಲಯದ ಮೂಲಕ ದೊರೆತಿದೆ. ಈಗ ಅಧಿಕೃತವಲ್ಲದ ಭಾಷೆಗಳವರೂ ತಮ್ಮ ಭಾಷೆಗಳನ್ನು ಅಧಿಕೃತಗೊಳಿಸಿ ಶಿಕ್ಷಣ ಸೌಲಭ್ಯವನ್ನು ಕೊಡಿ ಎಂದು ಕೇಳಬಹುದು. ಆದ್ದರಿಂದ ಮಾತೃಭಾಷೆಯೆಂಬ ಸುಂದರವಾದ ಪದವನ್ನು ಪಕ್ಕಕ್ಕಿಟ್ಟು, ಪರಿಸರದ ಭಾಷೆ ಅಥವಾ ಆ ರಾಜ್ಯದಲ್ಲಿ ಅಧಿಕೃತವಾಗಿ ಆಡಳಿತ- ವ್ಯವಹಾರಗಳಲ್ಲಿರುವ ಪ್ರಾದೇಶಿಕ ಭಾಷೆ ಎಂಬ ಪದವನ್ನು ಬಳಸಿದರೆ ಸ್ವಲ್ಪಮಟ್ಟಿನ ಖಚಿತತೆ ಬಂದೀತು.

ಈಗ ನಮ್ಮ ಪ್ರಾದೇಶಿಕ ಭಾಷೆಗಳಿಗೆ ನ್ಯಾಯಾಲಯದ ತೀರ್ಪಿನಿಂದ ಬಂದ ಕುತ್ತಿನ ಬಗ್ಗೆ ಚರ್ಚಿಸುವ ಮೊದಲು ಎರಡು ಉದಾಹರಣೆಗಳನ್ನು ಕೊಡುತ್ತೇನೆ.

ಕೆಲವು ವರ್ಷಗಳ ಹಿಂದೆ ನಮ್ಮೂರು ಸಕಲೇಶಪುರದಲ್ಲಿ ಒಬ್ಬರು ಶಿಕ್ಷಣಾಧಿಕಾರಿಗಳಿದ್ದರು. kannada-schoolತುಂಬ ದಕ್ಷರೆಂದೂ ಸಜ್ಜನರೆಂದೂ ಹೆಸರಾದವರು. ಆ ಕಾಲದಲ್ಲೇ ಸಕಲೇಶಪುರದಲ್ಲಿ ಎರಡು ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿದ್ದವು. ಸರ್ಕಾರಿ ಪ್ರೌಡಶಾಲೆಯಲ್ಲೂ ಇಂಗ್ಲಿಷ್ ಮಾಧ್ಯಮ ಇತ್ತು. ಸಕಲೇಶಪುರದ ಬೇರೆಲ್ಲ ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದರು. ಆದರೆ ಈ ಶಿಕ್ಷಣಾಧಿಕಾರಿಯವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದರು. ಯಾರೋ ಈಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಅವರೆಂದರು, “ನಾನೇ ಶಿಕ್ಷಣಾಧಿಕಾರಿಯಾಗಿ ನನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲೆ? ನನ್ನ ಮಕ್ಕಳು ಕನ್ನಡಲ್ಲೇ ಕಲಿತು ಒಳ್ಳೆಯವರಾಗಿ ಬಾಳಿದರೆ ಸಾಕು.” ಈ ಮಾತು ಇಂದಿಗೆ ಸ್ವಲ್ಪ ಅಪ್ರಸ್ತುತವೆನಿಸಿಕೊಳ್ಳುವ ಆದರ್ಶದ ಸ್ಥಿತಿಯೆನಿಸಿದರೂ ಇಂಥವರು ಈಗಲೂ ಇದ್ದಾರೆ. ಆದರೆ ಇಂತಹ ಉದಾಹರಣೆಯನ್ನು ಸಾರ್ವತ್ರಿಕವಾಗಿ ನಾವು ಕಾಣಲು ಸಾಧ್ಯವಿಲ್ಲ.

ಎರಡನೆಯದು; ಇತ್ತೀಚೆಗೆ ಸಕಲೇಶಪುರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಅಂದಿನ ಗೋಷ್ಟಿಯೊಂದರಲ್ಲಿ ಬ್ಯಾಂಕಿನ ಅಧಿಕಾರಿಯೊಬ್ಬರು ಮಾತನಾಡುತ್ತಾ “ನಾವು ಕನ್ನಡ ಉಳಿಯಬೇಕೆನ್ನುತ್ತೇವೆ, ಆದರೆ ಉಳಿಸುವ ಪ್ರಯತ್ನವಾಗಿ ನಮ್ಮಲ್ಲಿ ಈಗ ಇರುವ ಸೌಲಭ್ಯಗಳನ್ನೂ ಬಳಸಿಕೊಳ್ಳದಿದ್ದರೆ ಹೇಗೆ?” ಎಂದು ಹೇಳಿ “ಈಗ ಎಲ್ಲ ಎ.ಟಿ.ಎಂ.ಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದರೆ ಅದನ್ನು ಬಳಸುವವರ ತೀರ ಕಡಿಮೆ (ಗ್ರಾಹಕ ಯಾವ ಭಾಷೆಯನ್ನು ಬಳಸುತ್ತಾನೆಂಬ ಅಂಕಿ ಅಂಶವೂ ಎ.ಟಿ.ಎಂ. ಮೂಲಕವೇ ಬ್ಯಾಂಕಿಗೆ ತಿಳಿಯುತ್ತದೆ) ಕನ್ನಡ ಭಾಷಾ ಸೌಲಭ್ಯವನ್ನು ಬಳಸುವವರ ಸಂಖ್ಯೆ ಹೆಚ್ಚಾದರೆ ಇತರ ವ್ಯವಹಾರಗಳಿಗೂ ಕನ್ನಡ ಭಾಷಾ ಸೌಲಭ್ಯ ಕಲ್ಪಿಸುವುದು ಬ್ಯಾಂಕುಗಳಿಗೆ ಅನಿವಾkannada_Kuvempuರ್ಯವಾಗುತ್ತದೆ. ಅದಕ್ಕಾಗಿ ಕನ್ನಡ ತಂತ್ರಾಂಶಗಳ ನಿರ್ಮಾಣ ಮಾಡಬೇಕಾಗುತ್ತದೆ. ಕನ್ನಡ ಉದ್ಯೋಗಗಳು ಹೆಚ್ಚುತ್ತವೆ” ಎಂದರು. ಖಂಡಿತವಾಗಿಯೂ ಇದು ಅತ್ಯಂತ ಪ್ರಾಕ್ಟಿಕಲ್ ಆದಂತಹ ಆದರ್ಶ. ಸಾರ್ವತ್ರಿಕವಾಗಿ ನಾವು ಮಾಡಬಹುದಾದದ್ದು.

ಆದರೆ ಇಂಗ್ಲಿಷ್‌ ಜ್ಞಾನ ಅಷ್ಟಾಗಿ ಇಲ್ಲದೆ ಇರುವವರೂ ಸಹ ಹೆಚ್ಚಾಗಿ ಎ.ಟಿ.ಎಂ.ಗಳಲ್ಲಿ. ಬ್ಯಾಂಕಿನ ಇತರ ವ್ಯವಹಾರಗಳಲ್ಲಿ ಇಂಗ್ಲಿಷನ್ನೇ ಬಳಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಅವರಲ್ಲಿ ಅನೇಕರು (ತೀರ ಕಡಿಮೆ ಶಾಲಾವಿದ್ಯಾಭ್ಯಾಸ ಇರುವವರು) ಇಂಗ್ಲಿಷ್ ಬಳಸದಿದ್ದರೆ ಇತರರು ತಮ್ಮನ್ನು ಕೀಳಾಗಿ ಕಾಣುತ್ತಾರೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಇಂಗ್ಲಿಷ್ ಸುಲಭವೆಂದೋ ಇಲ್ಲವೇ ಆ ಮೂಲಕ ನಾವು ಇಂಗ್ಲಿಷ್ ಕಲಿಯುತ್ತಿದ್ದೇವೆಂದೋ ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಎಷ್ಟೋ ಕಡೆಗಳಲ್ಲಿ ಸರಿಯಾದ ತಂತ್ರಾಂಶ ಮತ್ತು ಭಾಷೆ ಬಳಕೆಯಾಗದೆ ಕನ್ನಡದ ವಿವರಣೆಗಳೇ ಗೊಂದಲಮಯವಾಗಿವೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಮಾನ, ಪ್ರಾದೇಶಿಕ ಭಾಷೆಗಳು ಮತ್ತು ಜನಸಾಮಾನ್ಯರ ನಡವಳಿಕೆಗಳ ಬಗ್ಗೆ ಯೋಚಿಸೋಣ.

ಎಲ್ಲ ಜನರೂ ಸಾಮಾನ್ಯರೇ. ಆದರೆ ಕಲಿತ ವಿದ್ಯೆ-ಸಂಸ್ಕಾರಗಳಿಂದ, ಜೀವನಾನುಭವದಿಂದ ಅಸಾಮಾನ್ಯರಾಗಿ ಬೆಳೆಯುತ್ತಾರೆ. ಅಂತಹವರಲ್ಲಿ ಅನೇಕ ವಿಜ್ಞಾನಿಗಳು, ಸಾಹಿತಿಗಳು, ಚಿಂತಕರು, ಜನಪರ ಹೋರಾಟಗಾರರೂ ಇರುತ್ತಾರೆ. ಇವರಲ್ಲಿ ತಮಗೆ ಮಾತ್ರವಲ್ಲ ಸಮಾಜಕ್ಕೆ ಯಾವುದು ಒಳಿತು ಎನ್ನುವುದರ ಬಗ್ಗೆ ತಮ್ಮದೇ ಆದ ಖಚಿತ ನಿಲುವು- ಅಭಿಪ್ರಾಯಗಳಿವೆ. ಹಾಗೆಯೇ ಜನಸಾಮಾನ್ಯರು ಎನಿಸಿಕೊಂಡವರಲ್ಲೂ ಹೆಚ್ಚಿನವರು ಸಜ್ಜನರೂ ತಮ್ಮ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಪ್ರೀತಿಗಳನ್ನಿಟ್ಟುಕೊಂಡವರೂ ಇದ್ದಾರೆ. ಆದರೆ ಇದರೊಂದಿಗೆ ಇವರಿಗೆ ಬದುಕು ಕಲಿಸಿಕೊಟ್ಟಂತಹ ವಿವೇಕವಿದೆ. ಪ್ರತಿಕ್ಷಣವೂ ಬದುಕಿನ ಹೋರಾಟವಿದೆ. ಇಂದು ನಾಳೆಯ ಕನಸುಗಳಿವೆ ಒಂದುಕಾಲದಲ್ಲಿ ಕನಸು ಕಾಣಲೂ ಸಾಧ್ಯವಿಲ್ಲದಿದ್ದ ಜನಾಂಗಗಳು ಇಂದು ಕನಸು ಕಾಣುವ ಮಟ್ಟಿಗಾದರೂ ಬೆಳೆದಿವೆ. ಇವೆಲ್ಲದರ ನಡುವೆ ಹಗಲುಗನಸನ್ನು ಮಾರುವ ಮಾಧ್ಯಮಗಳಿವೆ.

ಇದಕ್ಕೆ ಎರಡು ಉದಾಹರಣೆಗಳನ್ನು ನೀಡುತ್ತೇನೆ. ನಮ್ಮೂರಿನಲ್ಲಿ ಗಾರೆಕೆಲಸ ಮಾಡುತ್ತಿದ್ದವರ ಮಗನೊಬ್ಬ ಮುಂಬೈಗೆ ಹೋದ ಅಲ್ಲಿ ಅಡಿಗೆ ಕೆಲಸ ಕಲಿತು ವೆಸ್ಟ್ ಇಂಡೀಸ್‌ನ ಹಡಗೊಂದರಲ್ಲಿ ಕೆಲಸಕ್ಕೆ ಸೇರಿದ. ಅಲ್ಲೀಗ ಮುಖ್ಯ ಬಾಣಸಿಗನಾಗಿದ್ದಾನೆ. government_schoolಆಗಾಗ ಊರಿಗೂ ಬರುತ್ತಾನೆ. ಇಲ್ಲಿ ಒಳ್ಳೆಯ ಮನೆಯೊಂದನ್ನು ಕಟ್ಟಿಸಿದ್ದಾನೆ. ಆತನ ಸಂಸಾರವೂ ಇಲ್ಲೇ ನೆಲೆಸಿದೆ. ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿಯತ್ತಿದ್ದಾರೆ. ಹಲವಾರು ದೇಶ ಸುತ್ತಿರುವ ಈತ ಬಂದಾಗಲೆಲ್ಲ ಊರಿನ ಮಕ್ಕಳಿಗೆ ಇಂಗ್ಲಿಷ್ ಶಾಲೆಯಲ್ಲಿ ಓದಿ ಎಂದು ಸಲಹೆ ನೀಡುತ್ತಾನೆ. ಅವನ ಅನುಭವ ಸುಳ್ಳಲ್ಲ.

ನಮ್ಮ ತಾಲ್ಲೂಕಿನ ಹುಡುಗಿಯೊಬ್ಬಳು ಕಷ್ಟದಿಂದ ಕನ್ನಡ ಶಾಲೆಯಲ್ಲಿ ಕಲಿತು ಮುಂದೆ ಎಂ.ಎಸ್‌ಸಿ ಓದಿ ಇಲ್ಲೇ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಳು. ಇದೀಗ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಬೆಂಗಳೂರಿನ ಯಾವ ಕಾಲೇಜಿನಲ್ಲೂ ಅವಳಿಗೆ ಕೆಲಸ ಸಿಗಲಿಲ್ಲ. ಕಾರಣ ಸಂದರ್ಶನಕ್ಕೆ ಹೋದಲ್ಲೆಲ್ಲ “ನೀನು ಪಾಠವೇನೋ ಮಾಡುತ್ತೀಯಾ, ಆದರೆ ಮಾತನಾಡುವಾಗ ನಿನ್ನ ಇಂಗ್ಲಿಷ್ ಸರಿಯಾಗಿಲ್ಲ” ಎನ್ನುತ್ತಿದ್ದರಂತೆ. ಈಗ ಇಂಗ್ಲಿಷ್ ಕ್ಲಾಸಿಗೆ ಸೇರಿದ್ದಾಳೆ ಮತ್ತು ಊರಿಗೆ ಬಂದಾಗಲೆಲ್ಲ ಬೇರೆಯವರಿಗೆ ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೇ ಕಳುಹಿಸಿ ಎನ್ನುತ್ತಾಳೆ.

ಪ್ರಾದೇಶಿಕ ಭಾಷೆಗಳು ಇದುವರೆಗೂ ಉಳಿದು ಬಂದಿರುವುದು ಹಳ್ಳಿಗಳಲ್ಲಿ ಅದೂ ಸ್ಥಿತಿವಂತರಲ್ಲದ ಕೆಳವರ್ಗದ ಜನರಿಂದ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರೂ ಅವರ ಮಕ್ಕಳೇ. (ಗ್ರಾಮೀಣ ಪ್ರದೇಶದ ಮೇಲ್ವರ್ಗದ-ಶ್ರೀಮಂತರ ಮನೆಗಳಲ್ಲಿ ಈಗಾಗಲೇ ಇಂಗ್ಲಿಷ್ ಆಡುಭಾಷೆಯಾಗಿಯೇ ಪ್ರವೇಶಿಸಿದೆ.) ಪ್ರಪಂಚದ ಅನೇಕ ಮುಂದುವರೆದ ದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಇಲ್ಲ. ಹಾಗೇ ಹಲವು ದೇಶಗಳಲ್ಲಿ ಇಂಗ್ಲಿಷ್ ಇಲ್ಲವೇ ಇಲ್ಲ ಎಂದು ಯಾರೆಷ್ಟೇ ಹೇಳಿದರೂ ಸಾಮಾನ್ಯರಿಗೆ ಇಂಗ್ಲಿಷ್ ಇಂದು ಪ್ರಪಂಚದ ಹೆಬ್ಬಾಗಿಲಾಗಿಯೇ ಕಾಣುತ್ತಿದೆ. ಮತ್ತು ಆ ಮೂಲಕ ಒಳ್ಳೆಯ ಉದ್ಯೋಗಾವಕಾಶ ಮತ್ತು ಬದುಕಿನ ಕನಸನ್ನು ಕಾಣುತ್ತಿದ್ದಾರೆ. ಇಂಗ್ಲಿಷ್ ಕಲಿಯದಿದ್ದರೆ ನಾವು ಎರಡನೆ ದರ್ಜೆ ಪ್ರಜೆಗಳಾಗಿಯೇ ಉಳಿದುಬಿಡುತ್ತೇವೆನ್ನುವ ಭಯವೂ ಕೆಳವರ್ಗದ ಜನರಲ್ಲಿ ವ್ಯಾಪಕವಾಗಿದೆ.

ಆದರೆ ನಾವು ಅಸಾಮಾನ್ಯರೆಂದು ಹೇಳುವ ಅನೇಕರಲ್ಲೂ ಈ ರೀತಿಯ ಭಾವನೆ ಮತ್ತು ಸಾಮಾನ್ಯನ ಕನಸುಗಳಿವೆ. ಅವರಲ್ಲಿ ನೆಲ-ಜಲ-ಭಾಷೆಗಳಿಗೆ ಸಂಬಂಧಪಟ್ಟಂತೆ ಖಚಿತ ನಿಲುವು, ಸಿದ್ಧಾಂತ ಏನೇ ಇದ್ದರೂ ಸ್ವಂತದ ವಿಷಯಕ್ಕೆ ಬಂದಾಗ ಸಾಮಾನ್ಯನ ವಿವೇಕದ ಕಡೆಗೆ ವಾಲುತ್ತಾರೆ ಮತ್ತು ಪರಿಸ್ಥಿತಿಯೊಡನೆ ರಾಜಿ ಮಾಡಿಕೊಳ್ಳುತ್ತಾರೆ. ಆದ್ದರಿಂದಲೇ ನಾವು ಅನೇಕ ಬಾರಿ ’ಈ ಬುದ್ಧಿವಂತರು- ಹೋರಾಟಗಾರರು ನಮ್ಮ ಮಕ್ಕಳಿಗೆ ಮಾತ್ರ ಕನ್ನಡ ಶಾಲೆಯ ಉಪದೇಶಮಾಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಿದ್ದಾರೆ’ ಎಂಬ ದೂರು ಕೇಳಿಬರುತ್ತದೆ

ಈ ಎಲ್ಲ ಕಾರಣಗಳಿಂದಾಗಿ ಇಂದು ನಗರ- ಹಳ್ಳಿ ಎರಡೂ ಕಡೆಗಳಲ್ಲೂ ನಾನಾ ರೀತಿಯ ಇಂಗ್ಲಿಷ್ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಇವುಗಳ ಗುಣಮಟ್ಟದಲ್ಲಿ ಕೂಡಾ ಅಪಾರ ವೆತ್ಯಾಸಗಳಿವೆ. ಆದರೂ ಜನ ತಮ್ಮ ಅನುಕೂಲಕ್ಕೆ ತಕ್ಕಂತ ಇಂಗ್ಲಿಷ್ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ಹಳೆಯ ತಾರತಮ್ಯದ ಸಮಾಜವೇ ಹೊಸ ವೇಷದಲ್ಲಿ ಮುಂದುವರಿಯುತ್ತಿದೆ.

ಇವುಗಳ ಮಧ್ಯೆ ಕನ್ನಡವೇ ಅಥವಾ ಮಾತೃಭಾಷೆಯೇ ಎಂಬ ವಿವಾದ ಹುಟ್ಟಿಕೊಂಡಿದೆ. ಭಾಷಾ ಅಲ್ಪಸಂಖ್ಯಾತರ ಹೆಸರಿರಲಿ ಇನ್ನೇನೇ ಇರಲಿ, ಎಲ್ಲ ಶಾಲೆಗಳಲ್ಲೂ ಭಾರತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರುವುದು ಇಂಗ್ಲಿಷ್ ಭಾಷೆಯೇ. ಅನೇಕ ಉರ್ದು ಶಾಲೆಗಳೂ ಸಹ ಸರ್ಕಾರಿ ಕನ್ನಡ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿವೆ.

ನನಗೆ ಪರಿಚಯದರೊಬ್ಬರ ಮಗ ಇತ್ತೀಚೆಗೆ ಚೆನ್ನೈನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ. private-schoolಅತ್ಯಲ್ಪ ಕಾಲದಲ್ಲೇ ಭಡ್ತಿಯನ್ನೂ ಪಡೆದ. ಅವನ ಮೇಲಧಿಕಾರಿಯೊಬ್ಬರು (ಅವರು ತಮಿಳರು) ಅವನನ್ನು ಕರೆದು ’ನಿನ್ನ ಬಗ್ಗೆ ನನಗೆ ತುಂಬಾಹೆಮ್ಮೆ, ನೀನು ಇಲ್ಲಿ ಎಲ್ಲರೊಡನೆ ಬೆರೆತು ಖುಷಿಯಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಇಲ್ಲಿನ ಭಾಷೆ ನಿನಗೆ ಅರ್ಥವಾಗಬೇಕು, ಜೋಕುಗಳಿಗೆ ನಗಬೇಕು, ಇತರರು ನಿನ್ನ ಬಗ್ಗೆ ಆಡಿದ ಮಾತು ನಿನಗೆ ತಿಳಿಯಬೇಕು, ಆದ್ದರಿಂದ ನೀನು ತಮಿಳು ಕಲಿಯಬೇಕು. ಇಂದಿನಿಂದ ನಾನು ನಿನ್ನೊಡನೆ ತಮಿಳಿನಲ್ಲಿ ಮಾತ್ರ ಮಾತನಾಡುತ್ತೇನೆ’ ಎಂದು ಹೇಳಿ ಅದರಂತೆ ನಡೆದು, ಮೂರು ತಿಂಗಳಲ್ಲಿ ಆತ ತಮಿಳಿನಲ್ಲಿ ಮಾತನಾಡುವಂತೆ ಮಾಡಿದ್ದಾರೆ.

ಎಲ್ಲಿ ನಮ್ಮ ದಿನ ನಿತ್ಯದ ಬದುಕಿಗೆ ಯಾವ ಭಾಷೆ ಅನಿವಾರ್ಯವೋ ಆ ಭಾಷೆಯನ್ನು ಜನರು ಸ್ವೀಕರಿಸುತ್ತಾರೆ. ಇದಕ್ಕೆ ಉದಾಹರಣೆಯೆಂದರೆ. ಇತ್ತೀಚೆಗೆ ಕಾಫಿ ತೋಟಗಳಿಗೆ ಕೆಲಸಕ್ಕಾಗಿ ಬರುತ್ತಿರುವ ಅಸ್ಸಾಮಿಗಳೆಂದುಕೊಳ್ಳುತ್ತಿರುವ ಕೃಷಿ ಕಾರ್ಮಿಕರು, ಬಂದು ವರ್ಷವಾಗುವಷ್ಟರಲ್ಲೇ ಇವರಲ್ಲಿ ಸಾಕಷ್ಟು ಮಂದಿ ಕನ್ನಡದಲ್ಲಿ ವ್ಯವಹರಿಸುವಷ್ಟು ಕಲಿತಿದ್ದಾರೆ. ಬ್ಯಾಂಕುಗಳಲ್ಲಿರುವ ಉತ್ತರ ಬಾರತೀಯರೂ ಇಲ್ಲಿ ಬಂದು ಸಾಕಷ್ಟು ಕನ್ನಡ ಕಲಿತಿದ್ದಾರೆ. ಆದರೆ ತಲೆಮಾರುಗಳಿಂದ ಇಲ್ಲೇ ನೆಲಸಿದ್ದ ತಮಿಳು ಕಾರ್ಮಿಕರು ಇತ್ತೀಚೆಗಷ್ಟೇ ಕನ್ನಡ ಮಾತನಾಡುತ್ತಿದ್ದಾರೆ. ಈ ಬದಲಾವಣೆಗೆ ತಮಿಳರಲ್ಲ, ಕೆಲಮಟ್ಟಿಗೆ ಬದಲಾದ ಕನ್ನಡಿಗರ ಮನೋಭಾವವೂ ಕಾರಣ. ಆದರೆ ಈ ಮೇಲಿನ ಎರಡು ಸಂದರ್ಭದ ನಡವಳಿಕೆಗಳಿಂದ ಇಂಗ್ಲಿಷಿನ ವಿರುದ್ಧ ತಮಿಳಿಗಾಗಲೀ ಕನ್ನಡಕ್ಕಾಗಲೀ ಬಹಳ ದೊಡ್ಡ ಲಾಭವೇನೂ ಆಗಲಾರದು.

ಎಲ್ಲಿಯವರೆಗೆ ಯಾವುದೇ ಭಾಷೆ ಜನಪದರ ಅನ್ನ ಮತ್ತು ಅಭಿವ್ಯಕ್ತಿ ಎರಡರ ಭಾಷೆಯೂ ಆದಾಗ ಮಾತ್ರ ಅದು ಉಳಿದು ಬೆಳೆಯಬಲ್ಲದು. ಅನೇಕ ವರ್ಷಗಳ ಹಿಂದೆಯೇ ಲಂಕೇಶರು “ಆಧುನಿಕ ಸಮಸ್ಯೆಗಳನ್ನು, ಪ್ರಜ್ಞೆಯನ್ನು ಹೇಳಲಾಗದಿದ್ದರೆ ಕನ್ನಡ ಕೂಡಾ ಬೇಡವಾಗುತ್ತದೆ” ಎಂದದ್ದು ಈ ಅರ್ಥದಲ್ಲಿಯೇ.

ಈ ಎಲ್ಲ ವಿಚಾರಗಳನ್ನೂ ಗಮನಿಸಿ ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಬೇಕಾದ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವಾಗಲೀ ಕನ್ನಡ ಸಾಹಿತ್ಯ ಪರಿಷತ್ತಾಗಲೀ ಏನು ಮಾಡಬಹುದೆಂಬ ವಿಚಾರಕ್ಕೆ ಬರೋಣ. ಯಾವುದೇ ಸರ್ಕಾರವಾಗಲೀ ಜನರಿಂದ ಬಲವಾದ ಒತ್ತಡ ಬಾರದೆ ಯಾವ ಕೆಲಸವನ್ನೂ ಮಾಡಲಾರದು. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಅನಿವಾರ್ಯವಾದ್ದರಿಂದ ಮತ್ತು ಆಕಾರಣಕ್ಕಾಗಿಯೇ ಹೆಚ್ಚಿನ ಎಲ್ಲಾ ರಾಜಕಾರಣಿಗಳೂ ಎಲ್ಲವನ್ನೂ ಓಟಿನ ಸಂಖ್ಯೆಗಳಾಗಿ ನೋಡುವುದರಿಂದ ಬಲವಾದ ಚಳುವಳಿಯ ರೂಪದ ಸಂಘಟನೆಗಳ ಮೂಲಕ- ಆಂದೋಲನಗಳ ಮೂಲಕ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಮಾಡಬೇಕಾಗಿದೆ.

ಆದರೆ ಆ ರೀತಿಯ ಸಂಚಲನವನ್ನು ಉಂಟುಮಾಡಬಲ್ಲ ವ್ಯಕ್ತಿಗಳ ಬಗೆಗೇ ಜನ devanurಇಂದು ನಂಬಿಕೆ ಕಳೆದುಕೊಂಡಿದ್ದಾರೆ. ದೇವನೂರು ಮಹಾದೇವರಂತೆ, ಸುಂದರಲಾಲ್ ಬಹುಗುಣರಂತೆ, ಆದಷ್ಟೂ ನಡೆ-ನುಡಿಗೆ ಹತ್ತಿರವಾಗಿ ಬದುಕುತ್ತಿರುವವರು ಅನೇಕರು ಇಂದೂ ಇದ್ದಾರೆ. ಆದರೆ ವೈಯಕ್ತಿಕ ಪ್ರಯತ್ನಗಳು ಒಂದು ರೀತಿಯ ಸರ್ವಾಧಿಕಾರಿ ನಡೆಯತ್ತ ಚಲಿಸಬಲ್ಲುದೆಂಬ ಅರಿವೇ ಇಂದು ದೇವನೂರು ಮಹಾದೇವರಂತವರನ್ನು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗೆ, ಒಂದು ರೀತಿಯ ‘ಶಾಕ್ ಟ್ರೀಟ್‌ಮೆಂಟ್’ ನೀಡುವುದಕ್ಕೆ ಪ್ರೇರೇಪಿಸಿರಬೇಕು. ಆ ಕಾರಣಕ್ಕಾಗಿಯೇ ಅವರು “ಕನ್ನಡ ಸಾಹಿತ್ಯ ಪರಿಷತ್ತು ಪೊರೆ ಕಳಚಿ ನಿಲ್ಲಲಿ, ನಾನೂ ನಿಮ್ಮೊಡನಿರುವೆ” ಎಂದಿದ್ದಾರೆ ಎನಿಸುತ್ತದೆ.

ಇದನ್ನೇ ಇನ್ನೊಂದು ರೀತಿಯಲಿ ಹೇಳುವುದಾದರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದದ್ದೇ “ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ” ಎಂಬ ಘೋಷವಾಕ್ಯದೊಡನೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಥಿಕ ರಚನೆಯೂ ಅದಕ್ಕೆ ಅನುಗುಣವಾಗಿ ಪ್ರಜಾಸತ್ತಾತ್ಮಕವಾಗಿ ಇದೆ. ಆದರೆ ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿರುವ “ಸಾಹಿತ್ಯ” ಎಂಬುದನ್ನು ವಾಙ್ಮಯ ಸಾಹಿತ್ಯ ಎಂಬುದಕ್ಕೆ ಸೀಮಿತಗೊಳಿಸಿಕೊಂಡದ್ದರಿಂದಲೇ, ಇಂದು ಅನೇಕ ಗೊಂದಲಗಳಿಗೆ ಕಾರಣವಾಗಿದೆ ಎನಿಸುತ್ತದೆ. ಸಾಹಿತ್ಯ ಅಕಾಡೆಮಿ ಮಾಡಬಲ್ಲಂತ ಅನೇಕ ಕೆಲಸಗಳನ್ನು ಮಾಡುತ್ತ ನಿಜವಾದ ಕನ್ನಡದ ಕೆಲಸವನ್ನು ಮಾಡಬೇಕಿದ್ದ ಸಂಸ್ಥೆ ಭಾವನಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡಿದೆ. ಇದರಿಂದಲೇ ವಿಜ್ಞಾನ ಪರಿಷತ್ತು, ರಂಗಭೂಮಿ ಪರಿಷತ್ತು ಇತ್ಯಾದಿ ಹೆಸರುಗಳೂ ಇತ್ತೀಚೆಗೆ ಕೇಳಿಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಈಗಲಾದರೂ ತನ್ನ ಮೂಲ ಉದ್ದೇಶಕ್ಕೆ ಮರಳಿ ಕನ್ನಡದ ಸಮಗ್ರತೆಯನ್ನು ಕನ್ನಡ ನೆಲದ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಸಂಸ್ಥೆಯಾಗಬೇಕಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ ಅದರ ಸಾಂಸ್ಥಿಕ ನಿಯಮದಂತೆ, kannada-sahithya-sammelanaಕನ್ನಡ ಬಲ್ಲ ಅಂದರೆ ಕನ್ನಡದಲ್ಲಿ ಮಾತಾಡಬಲ್ಲ, ವ್ಯವಹರಿಸಬಲ್ಲ ಯಾರು ಬೇಕಾದರೂ ಅದರ ಸದಸ್ಯರಾಗಬಹುದು. ಅಂದರೆ ಇದು ಕೇವಲ ಸಾಹಿತಿಗಳ, ಕಲಾವಿದರ ಸಂಸ್ಥೆ ಅಲ್ಲ, ಸಮಸ್ತ ಕನ್ನಡಿಗರ ಸಂಸ್ಥೆ. (ಮನೆಮಾತು ಬೇರೆ ಯಾವುದಿದ್ದರೂ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಯಾವ ಅಡ್ಡಿಯೂ ಇಲ್ಲ, ಸಾವಿರಾರು ಜನರು ಸದಸ್ಯರಾಗಿ ಇದ್ದಾರೆ) ಇದರ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಘಟಕಗಳ ಅಧ್ಯಕ್ಷರು ನೇರವಾಗಿ ಜನರಿಂದ ಚುನಾಯಿತರಾಗಿರುತ್ತಾರೆ. ಒಂದುವೇಳೆ ಕನ್ನಡದ ನೆಲದ ಶೇ. ೪೦ ರಷ್ಟು ಜನ ಇದರ ಸದಸ್ಯರಾಗಿದ್ದರೆ ಹಾಗೂ ಇದರ ಚುನಾಯಿತ ಪದಾಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡುವಷ್ಟು ಮತ್ತು ಅದನ್ನು ಅನುಷ್ಟಾನಗೊಳಿಸುವಂತೆ ಒತ್ತಡ ತರುವಷ್ಟು ಶಕ್ತರಾದರೆ ಏನಾದರೂ ಕೆಲಸ ಆಗಬಹುದು. ಸಮಾನ ಶಿಕ್ಷಣ ವ್ಯವಸ್ಥೆಯ ಜೊತೆಗೆ, ಕನ್ನಡ ಭಾಷೆಯ ಮೂಲಕವೇ ಉದ್ಯೋಗ ಸೃಷ್ಟಿ ಮಾಡಬಲ್ಲಂತ ವಾತಾವರಣ ನಿರ್ಮಾಣವಾದರೆ ಆಗ ಕನ್ನಡ ಜನರಿಗೆ ಅಗತ್ಯದ ಭಾಷೆಯಾಗುತ್ತದೆ, ಅನಿವಾರ್ಯವಾಗುತ್ತದೆ.

ಈಗ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ (ಪ್ರಾದೇಶಿಕ ಭಾಷೆಗಳ) ಸಾಂಸ್ಕೃತಿಕ ಲೋಕ ಮಾತ್ರ ಕನ್ನಡವನ್ನೇ (ಪ್ರಾದೇಶಿಕ ಭಾಷೆಗಳನ್ನೇ) ಹಿಡಿದುಕೊಂಡಿದೆ. (ಇಲ್ಲೂ ಕೂಡಾ ಕೆಲವು ಪ್ರಾದೇಶಿಕ ಭಾಷೆಗಳ ಮೇಲೆ, ರಾಷ್ರ್ಟೀಯತೆ- ರಾಷ್ಟ್ರಭಾಷೆಯ ಹೆಸರಿನಲ್ಲಿ ಹಿಂದಿಯ ಹೇರಿಕೆಯೂ ನಡೆಯುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ರಾಷ್ಟ್ರೀಯ ನಾಟಕ ಶಾಲೆಗೆ ಪ್ರವೇಶ ಪಡೆಯಲು ಹಿಂದಿಜ್ಞಾನವನ್ನು ಕಡ್ಡಾಯಗೊಳಿಸಿರುವುದು). ಇದಕ್ಕೆ ಕಾರಣ ನಮ್ಮ ಅದು ನಮ್ಮ ಅಭಿವ್ಯಕ್ತಿಯ ಅತ್ಯಂತ ಸಹಜ ಸಾಧನವೆಂಬುದಷ್ಟೇ ಅಲ್ಲ, ಅದಕ್ಕೆ ಸಂಬಂಧಪಟ್ಟ ಎಲ್ಲ ಜ್ಞಾನವೂ ಆ ಭಾಷೆಗಳಲ್ಲಿರುವದು.

ಇದರೊಂದಿಗೆ ನಮ್ಮ ಕೃಷಿ ಮತ್ತು ಇನ್ನೂ ಉಳಿದಿರುವ ಕೃಷಿಸಂಬಂಧಿ ಕಸುಬುಗಳಾದ ಕಮ್ಮಾರಿಕೆ, ಬಡಗಿ, ಇತ್ಯಾದಿಗಳು, ಮತ್ತು ನೇಕಾರಿಕೆ, ಕುಂಭಕಲೆ, ಶಿಲ್ಪಕಲೆ, ಮುಂತಾದ ನಮ್ಮ ಅನೇಕ ಪಾರಂಪರಿಕ ವಿದ್ಯೆಗಳು. ನಾಟಿ ಮತ್ತು ಆಯುರ್ವೇದ ವೈದ್ಯ ಪದ್ಧತಿಗಳು. ಇವುಗಳ ಜ್ಞಾನವೆಲ್ಲ ಹೆಚ್ಚಾಗಿ ಅವರವರ ಮನೆಮಾತು ಮತ್ತು ಪರಿಸರದ ಭಾಷೆಗಳಲ್ಲಿ ಇದೆ. ಅವರ ಪಾರಂಪರಿಕ ಜ್ಞಾನದ ಭಾಷೆಯ ಮೂಲಕ ಈ ವಿದ್ಯೆಯನ್ನವರು ಮುಂದಿನ ಪೀಳಿಗೆಗೆ ದಾಟಿಸುತ್ತಾ ಬಂದಿದ್ದಾರೆ. ಅವರು ಅದರ ಮೂಲಕವೇ ಅನ್ನ ಗಳಿಸುತ್ತ ವ್ಯವಹಾರಕ್ಕೆ ತಕ್ಕಷ್ಟು ರಾಜ್ಯ ಭಾಷೆಯ ಜ್ಞಾನವನ್ನು ಪಡೆದಿದ್ದಾರೆ. ಆದ್ದರಿಂದ ನಮ್ಮ ಯಾವುದೇ ಪ್ರಾದೇಶಿಕ ಭಾಷೆಯೂ ಜನರಿಗೆ ಬದುಕಿಗೆ ನೆಮ್ಮದಿ ತರುವಷ್ಟು ಶಕ್ತವಾಗುವಂತೆ ಮಾಡುತ್ತಲೇ ವ್ಯವಹಾರ ಸಂಪರ್ಕಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನೋ ಇನ್ನಾವುದೇ ಭಾಷೆಯನ್ನು ಚೆನ್ನಾಗಿ ಕಲಿಯುವದು ಕಷ್ಟವಲ್ಲ. ಅದಕ್ಕಾಗಿ ಆ ಭಾಷೆಯ ಮಾಧ್ಯಮದಲ್ಲೇ ಕಲಿಯುವ ಅಗತ್ಯವೂ ಇಲ್ಲ. ಈ ವಿಚಾರ ಜನರಿಗೆ ಮನದಟ್ಟಾಗುವಂತಹ, ಅದರಲ್ಲಿ ನಂಬಿಕೆ ಬರುವಂತಹ ಕೆಲಸವನ್ನು ವ್ಯಾಪಕವಾಗಿ ಮಾಡದೆ, ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹೇಳುತ್ತ-ಚರ್ಚಿಸುತ್ತಾ ಕುಳಿತರೆ ಪ್ರಯೋಜನವಾಗಲಾರದು.

ಇದರಿಂದಲೇ ನಮ್ಮ ಬದುಕಿನ ಎಲ್ಲಾ ವಿಭಾಗಗಳ ಅಂದರೆ ಸಾಹಿತ್ಯ ಕಲೆಗಳ ಜೊತೆಯಲ್ಲಿ ವಿಜ್ಞಾನ, ಗಣಿತ, ಲೆಕ್ಕ ಪತ್ರಗಳ ವ್ಯವಹಾರಗಳು, ತಂತ್ರಜ್ಞಾನ, ಕೃಷಿ, ವೈದ್ಯಕೀಯ ಸಂಬಂಧಿತ ಎಲ್ಲ ತಿಳುವಳಿಕೆಯನ್ನು ಕನ್ನಡದಲ್ಲಿ ದೊರಕಿಸಿಕೊಡುವ ಕೆಲಸವನ್ನು ಸಾಹಿತ್ಯ ಪರಿಷತ್ತು ಸರ್ಕಾರದ ಮೂಲಕ ಮಾಡಿಸುವ ಕೆಲಸಕ್ಕೆ ತೊಡಗಿಕೊಳ್ಳಬೇಕು. ಪರಿಷತ್ತಿಗೆ ಸಮ್ಮೇಳನ, ಜಾತ್ರೆ, ಉತ್ಸವಗಳು, ಗೋಷ್ಟಿಗಳಿಗಿಂತ ಈ ಕೆಲಸಗಳು ಪ್ರಥಮ ಆದ್ಯತೆಯದ್ದಾಗಬೇಕು.

ನಮಗೆ ಇಂಗ್ಲಿಷಿನ ಮೂಲಕ ಮಾತ್ರ ಬರಬಹುದಾದ ಜ್ಞಾನದಲ್ಲಿ ಸಾಕಷ್ಟನ್ನು ಕೇವಲ ಪ್ರಾದೇಶಿಕ ಭಾಷೆಗೆ ತರ್ಜುಮೆ ಮತ್ತು ಡಬ್ಬಿಂಗ್ ಮೂಲಕ ಪಡೆಯಬಹುದಾಗಿದೆ. ಟಿ.ವಿ. ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಇದಕ್ಕೆ ವಿಪುಲ ಅವಕಾಶಗಳಿವೆ. ವಿಷಾದದ ಸಂಗತಿಯೆಂದರೆ ಕೃಷಿಯಲ್ಲಿ ನಮ್ಮ ಪಾರಂಪರಿಕ ಮತ್ತು ಆಧುನಿಕ ಜ್ಞಾನಗಳೆರಡೂ ಸಾಕಷ್ಟಿದ್ದರೂ ಕೃಷಿ ವಿದ್ಯಾಲಯಗಳೂ ಇಂಗ್ಲಿಷಿನಲ್ಲಿ ಬೋಧಿಸುತ್ತಿರುವುದು.

ಇಂಗ್ಲಿಷಿನ ಅಥವಾ ಇನ್ನಾವುದೇ ಭಾಷೆಯನ್ನು ಅಗತ್ಯವಿದ್ದಷ್ಟು ಕಲಿಯತ್ತಲೇ ಕನ್ನಡವನ್ನು ನಮ್ಮ ಸಹಜ ಅಭಿವ್ಯಕ್ತಿ ಮತ್ತು ಅನ್ನಗಳಿಕೆಯ ಭಾಷೆಯನ್ನಾಗಿಸಿ, ಅದರಿಂದ ಬರುವ ಜ್ಞಾನದಮೂಲಕ ಕಟ್ಟದಬಹುದಾದ ಬದುಕಿನ ವೈವಿದ್ಯಗಳು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡಲು. ಅದಕ್ಕಾಗಿ ನ್ಯಾಯಾಲಯದ ಯಾವುದೇ ಆದೇಶಕ್ಕೆ ವಿರುದ್ಧವಾಗದಂತೆ ಕಾರ್ಯಕ್ರಮ ರೂಪಿಸಲು ಪ್ರಜಾಪ್ರಭುತ್ವದಲ್ಲಿ ಯಾವುದೇ ಚುನಾಯಿತ ಸರ್ಕಾರಕ್ಕೆ ಸಾಧ್ಯವಿದೆ. ಸರ್ಕಾರವನ್ನು ಎಚ್ಚರಿಸುವ, ತಿದ್ದುವ, ಜನರತ್ತ ನೋಡುವಂತೆ ಮಾಡುವ ಕೆಲಸವನ್ನು, ಕನ್ನಡ ಸಾಹಿತ್ಯ ಪರಿಷತ್ತಾಗಲೀ ಇನ್ನಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ಮಾಡಲಿ ಅದರೊಂದಿಗೆ ಸೇರಿ ಕೆಲಸ ಮಾಡತೊಡಗುವುದನ್ನು ಬಿಟ್ಟು ದೇವನೂರರ ಸಾತ್ವಿಕ ಸಿಟ್ಟಿಗಾಗಲೀ, ನಮ್ಮಂತವರ ತುಡಿತಕ್ಕಾಗಲೀ ಸಧ್ಯಕ್ಕೆ ಅನ್ಯಮಾರ್ಗವಿಲ್ಲವೆನಿಸುತ್ತದೆ.