Category Archives: ಪ್ರಶಾಂತ್ ಮಿರ್ಲೆ

ಸ್ಪಷ್ಟತೆಯಿಲ್ಲದ ಕಾಫಿರೈಟ್ಸ್ ಮಸೂದೆಯ ಅನುಮೋದನೆ

– ಪ್ರಶಾಂತ್ ಮಿರ್ಲೆ
ವಕೀಲರು

ಹೆಚ್ಚಿನ ವೈಜ್ಞಾನಿಕತೆಯಿಂದ ಅಭಿವೃದ್ಧಿಗೊಳ್ಳುತ್ತಿರುವ ನಮ್ಮ ಸಮಾಜದ ವಾಹಿನಿಗಳಲ್ಲಿ, ಸಾಮಾನ್ಯರು ತಮ್ಮ ದಿನನಿತ್ಯದ ಬದುಕಿನಲ್ಲಿ ತಮಗೆ ಅರಿವಿಲ್ಲದಂತೆ ಯಾವುದಾರೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ ಕಾಯಿದೆಯನ್ನು ಉಲ್ಲಂಘಿಸುವ ಪರಿಸ್ಥಿತಿ ಎದುರಾಗುತ್ತಿದೆ. ಹಲವು ವರ್ಷಗಳ ದೀರ್ಘ ಪರಿಶ್ರಮದಿಂದ ಐತಿಹಾಸಿಕ ಹಕ್ಕುಸ್ವಾಮ್ಯ (ತಿದ್ದುಪಡಿ) ಮಸೂದೆ, 2012, ಸಂಸತ್ತಿನ ಎರಡು ಸದನದಲ್ಲಿ ಯಾವುದೇ ವಿರೋಧವಿಲ್ಲದೆ ಕಳೆದ ತಿಂಗಳು ಅನುಮೋದನೆಗೊಂಡಿದ್ದು ರಾಷ್ಟ್ರಪತಿಯವರ ಅಂಕಿತ ಪಡೆದು ಜಾರಿಯಾಗುವ ಹಂತದಲ್ಲಿರುತ್ತದೆ. ಆದರೆ, ಈ ಮಸೂದೆಯ ಮಂಡನೆ ಸಾಮಾಜಮುಖಿಯಾಗಿ ರೂಪಿಸಿರುವುದಾಗಿ ವಿಶ್ಲೇಷಿಸಿದರೂ ಕೆಲವು ವರ್ಗದ ಜನತೆಯಿಂದ ಅಷ್ಟೇ ವಿರೋಧ ವ್ಯಕ್ತವಾಗಿದೆ.

ಪ್ರಸ್ತುತ ತಿದ್ದುಪಡಿಯನ್ನು ಒಟ್ಟಾರೆ ಅವಲೋಕಿಸಿದಾಗ ಭಾರತದಲ್ಲಿನ ಹಾಲಿ ಹಕ್ಕುಸ್ವಾಮ್ಯ (ಕಾಫಿ ರೈಟ್ಸ್) ಕಾನೂನುಗಳಲ್ಲಿ ಹಲವು ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಕೆಲವು ವರ್ಗದ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಲ್ಲಿ ಸಫಲವಾಗಿರುವುದನ್ನು ಒಪ್ಪಿಕೊಳ್ಳಲೇ ಬೇಕಾಗಿರುತ್ತದೆ. ಅಂತೆಯೇ, ತಿದ್ದುಪಡಿಯ ಬಗೆಗೆ ನಮ್ಮ ಸಂಸತ್ತಿನಲ್ಲಿ ಪೂರ್ಣಪ್ರಮಾಣದ ಚರ್ಚೆಯಾಗದಿರುವುದು ವಿಷಾದಕರ ಸಂಗತಿ! ಇದಕ್ಕಾಗಿಯೇ ಈ ಲೇಖನದಲ್ಲಿ ಪ್ರಸ್ತುತ ತಿದ್ದುಪಡಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸಿದ್ದೇನೆ. ಅವುಗಳಲ್ಲಿ ಕೆಲವು ಇಂತಿವೆ.

ಅಂಗವಿಕಲರ ರಕ್ಷಣೆಗಾಗಿ ತೆಗೆದುಕೊಂಡ ಕ್ರಮಗಳು

ಪ್ರಸ್ತುತ ತಿದ್ದುಪಡಿ ಕರಡಿನಲ್ಲಿ ತೋರಿಸಿರುವಂತೆ ಅಂಧತ್ವ, ಕಿವುಡು ಅಥವಾ ಇತರ ಯಾವುದೇ ರೀತಿಯ ಅಂಗ ವೈಕಲ್ಯತೆಯನ್ನು ಹೊಂದಿರುವವರು, ಪ್ರಸ್ತುತ ತಿದ್ದುಪಡಿಯ ಕಲಮು ’51(1)(ಜಡ್ ಬಿ)’ ಮತ್ತು ’31ಬಿ’ ರ ಅಡಿಯಲ್ಲಿ ’ಯಾವುದೇ ಸಾಧನದ ಮೂಲಕ’ ಎಂಬ ವ್ಯಾಖ್ಯಾನವನ್ನು ಸೇರಿಸಲಾಗಿದೆ. ಇದರಿಂದ ಹಕ್ಕುಸ್ವಾಮ್ಯದ ಬಳಕೆಯು ಅಂಗವಿಕಲರಿಗೆ ಅನ್ವಯವಾಗುವ ಅಥವಾ ಅವರಿಗೆ ಅನುಭೋಗಿಸಲು ಅಥವಾ ಬಳಸಲು ಬೇಕಾದ ಸಾಧನಗಳ ಮೂಲಕ ಅವಕಾಶ ಕಲ್ಪಿಸಿಕೊಡುವುದರಿಂದ ಹಕ್ಕುಸ್ವಾಮ್ಯವುಳ್ಳವನು ಯಾವುದೇ ಲಾಭ ಹೊಂದುವಂತಿಲ್ಲ. ಉದಾ: ಅಂಧತ್ವವುಳ್ಳ ವ್ಯಕ್ತಿಗಳಿಗೆ ಮಾರುಕಟ್ಟೆಯಲ್ಲಿ ಬ್ರೈಲಿ ಲಿಪಿಯಲ್ಲಿ ಕಥೆ ಪುಸ್ತಕಗಳನ್ನು ಮಾರಾಟ ಮಾಡುವಾಗ ಬ್ರೈಲಿ ಲಿಪಿಯಲ್ಲಿ ಲಭ್ಯವಾಗುವಂತೆ ಮಾಡಿರುವುದಕ್ಕೆ ಯಾವುದೇ ವಿಶೇಷ ವೆಚ್ಚವನ್ನು ಪಡೆಯುವಂತಿಲ್ಲ. ಆದರೆ ಇಂತಹ ಸಾಧನಗಳ ಬಗೆಗಿನ ಪೂರೈಕೆಯನ್ನು ಕಲ್ಪಿಸುವುದು ಹಕ್ಕುಸ್ವಾಮ್ಯ ಹೊಂದಿರುವವನಷ್ಟೇ ಮಾಡಬೇಕಾಗಿರುವುದರಿಂದ ಅಂಗವಿಕಲರ ಬಳಕೆಗಾಗಿ ವಿಶೇಷ ಸಾಧನಗಳನ್ನು ಪೂರೈಸುವುದು ಹಾಸ್ಯಾಸ್ಪದವಾಗಿದೆ (ಇವುಗಳ ತಗಲುವ ವಿಶೇಷ ವೆಚ್ಚದ ಬಗೆಗೆ ಚರ್ಚೆ ಅನಗತ್ಯ ಎಂಬುವುದು ನನ್ನ ಭಾವನೆ).

ನ್ಯಾಯಸಮ್ಮತ ವ್ಯವಹಾರಗಳ ವ್ಯಾಪ್ತಿಯ ವಿಸ್ತಾರಗೊಳಿಸಿದ್ದು

ಹಳೆಯ ಕಾನೂನಿನಲ್ಲಿ ನ್ಯಾಯಸಮ್ಮತ ವ್ಯವಹಾರಗಳಲ್ಲಿ ’ಕಥೆ, ನಾಟಕ, ಸಂಗೀತ ಅಥವಾ ಕಲಾತ್ಮಕ ಕೆಲಸಗಳಿಗೆ’ ಸೀಮಿತವಾಗಿದ್ದು, ಪ್ರಸ್ತುತ ತಿದ್ದುಪಡಿಯಿಂದ ಸಾಫ್ಟ್‌ವೇರ್ ಹೊರತುಪಡಿಸಿದರು ಸೌಂಡ್ ರೆಕಾರ್ಡಿಂಗ್ ಅಥವಾ ವಿಡಿಯೋ ಚಿತ್ರೀಕರಣಕ್ಕೂ ಅನ್ವಯವಾಗುವಂತೆ ಎಲ್ಲಾ ರೀತಿಯ ಕೆಲಸಗಳಿಗೆ ವಿಸ್ತಾರವಾಗಿರುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕೆ ಅಥವಾ ವಿಶೇಷ ಅಧ್ಯಯನಕ್ಕೆ ಮತ್ತು ಅನ್ವೇಷಣೆಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದಂತೆ ಆಗಿದೆ.

ಸರಳ ರೀತಿಯಲ್ಲಿ ಈಗ ಹಕ್ಕುಸ್ವಾಮ್ಯ ಪರವಾನಗಿಯ ವರ್ಗಾವಣೆ:

ಕಲಮು 21ರ ಮೇರೆಗೆ ಹಕ್ಕುಸ್ವಾಮ್ಯ ಹೊಂದಿರುವ ಯಾವುದೇ ವ್ಯಕ್ತಿಯು ತನ್ನ ಹಕ್ಕನ್ನು ಅದರ ಭಾಗಾಂಶವನ್ನು ವರ್ಗಾಯಿಸುವ ಅಥವಾ ಬಿಟ್ಟುಕೊಡಬೇಕಾದರೆ ನಿಗದಿತ ನಮೂನೆಯಲ್ಲಿ ಹಕ್ಕುಸ್ವಾಮ್ಯ ನೋಂದಾಣಾಧಿಕಾರಿಯಲ್ಲಿ ಸಲ್ಲಿಸಬೇಕಾಗಿತ್ತು. ಪ್ರಸ್ತುತ ತಿದ್ದುಪಡಿಯಿಂದ ಅಂತಹ ವರ್ಗಾವಣೆ ಬರೀ ಸಾರ್ವಜನಿಕ ಸೂಚನೆ ನೀಡುವುದರಿಂದ ಸಾಧ್ಯವಾಗಿದೆ. ಇಷ್ಟಲ್ಲದೇ, ಕಲಮು 30ರ ಮೇರೆಗೆ ಯಾವುದೇ ಹಕ್ಕುಸ್ವಾಮ್ಯ ಪರವಾನಗಿಯು ಲಿಖಿತ ರೂಪದಲ್ಲಿದ್ದು ಸಹಿಯನ್ನು ಹೊಂದಿರಬೇಕಾಗುತ್ತದೆ ಮತ್ತು ಪರವಾನಗಿಯು ಲಿಖಿತರೂಪದಲ್ಲಿ ಮಾತ್ರ ಲಭ್ಯ. ಇದರಿಂದ ಕಲಾತ್ಮಕ ಅನ್ವೇಷಣೆಗಳು, ಜಿ.ಎನ್.ಯು. ಪಬ್ಲಿಕ್ ಲೈಸನ್ಸ್ ಮತ್ತು ಮುಕ್ತವಾದ ವಿವಿಧ ಮಾದರಿಯ ಪರವಾನಗಿಗಳ ಬಳಕೆಗಳು ಭಾರತದಲ್ಲಿ ಕಾಲಿಡುವಂತಾಗಿದೆ.

WIPO ಹಕ್ಕುಸ್ವಾಮ್ಯ ಒಪ್ಪಂದದ ಮೇರೆಗೆ ಸಾರ್ವಜನಿಕ ವಾಚನಾಲಯಗಳಲ್ಲಿ ಎರವಲು ಪಡೆಯುವ ವಸ್ತುಗಳಿಗೆ ವಾಣಿಜ್ಯ ಉದ್ದೇಶಕ್ಕಾಗಿ ನೀಡುವ ಬಾಡಿಗೆ ಎಂಬ ಅರ್ಥವ್ಯಾಪ್ತಿಯಿಂದ ಹೊರತುಪಡಿಸಲಾಗಿದ್ದು ಇದರಿಂದ ಯಾವುದೇ ಲಾಭರಹಿತವಲ್ಲದ ಉದ್ದೇಶಕ್ಕೆ ಅಂದರೆ, ಲಾಭರಹಿತವಾಗಿ ನಡೆಸುವ ವಾಚನಾಲಯ ಅಥವಾ ಅಂತರ್ಜಾಲದಲ್ಲಿ ಲಭ್ಯವಿರುವ ಮುಕ್ತ ಮಾಹಿತಿಗಳ ಬಳಕೆ ಅಥವಾ ವಿದ್ಯಾಸಂಸ್ಥೆಗಳು ಕಂಫ್ಯೂಟರ್ ಪ್ರೋಗ್ರಾಮ್ ಅಥವಾ ಸೌಂಡ್ ರೆಕಾರ್ಡಿಂಗ್ ಅಥವಾ ಸಿನಿಮಾಆಟೋಗ್ರಾಫ್ ತುಣುಕುಗಳನ್ನು ಕಾನೂನು ಬದ್ದವಾಗಿ ಬಳಸಲು ಅನುಕೂಲ ಮಾಡಿಕೊಟ್ಟಂತಾಯಿತು.

ಬಳಕೆದಾರನಿಗೆ ಅಂತರ್ಜಾಲದಲ್ಲಿ ಮಧ್ಯವರ್ತಿಗಳಾಗಿ ವರ್ತಿಸುವ ಸರ್ವಿಸ್ ಪ್ರೊವೈಡರ್‌ಗಳಿಗೆ ತಾಂತ್ರಿಕ ಕಾರ್ಯ ನಿರ್ವಹಿಸುತ್ತವೆಂದು ಅವುಗಳ ಮೂಲಕ ಯಾರು ತಪ್ಪನ್ನು ಎಸಗುತ್ತಾರೋ ಅವರು ತಮ್ಮ ಕೃತ್ಯಕ್ಕೆ ಬಾಧ್ಯರಾಗುತ್ತಾರೆ ಹೊರತು ಸರ್ವಿಸ್ ಪ್ರೊವೈಡರ್‌ಗಳಲ್ಲ ಎನ್ನುವ ವ್ಯಾಖ್ಯಾನ ಅಂತರ್ಜಾಲ ಮಧ್ಯವರ್ತಿಗಳಿಗೆ ಸಮಾಧಾನ ಸಂಗತಿಯಾದರೂ ಅಂತರ್ಜಾಲದಲ್ಲಿ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುವ ಇತರೇ ವ್ಯವಸ್ಥೆಯನ್ನು ಕಡೆಗಣಿಸಿದಂತಾಗಿದೆ. ಇದರಿಂದ ವ್ಯಾಪಕ ಚರ್ಚೆಯನ್ನು ನಿರೀಕ್ಷಿಸಬಹುದಾಗಿದೆ.

ಛಾಯಾಚಿತ್ರಗಳ ಮೇಲಿನ ಹಕ್ಕುಸ್ವಾಮ್ಯದ ಅವಧಿಯನ್ನು ಪ್ರಕಟಣೆಗೊಂಡ 60 ವರ್ಷದದಿಂದ ಹಕ್ಕುಸ್ವಾಮ್ಯದಾರನ ಮರಣದ ನಂತರದ 60 ವರ್ಷಗಳಿಗೆ ಏರಿಸಿರುವುದು ಹಲವು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಬರೀ 25 ವರ್ಷಗಳ ಮಿತಿಗೆ ಶಿಫಾರಸ್ಸು ಮಾಡಿದೆ ಮತ್ತು ತಿದ್ದುಪಡಿ ಮಾಡುವ ಸಲುವಾಗಿ ನೇಮಕವಾದ ಸಮಿತಿಯಿಂದಲೂ ಈ ವಿಷಯ ಕುರಿತು ಯಾವುದೇ ಶಿಫಾರಸ್ಸು ಆಗಿರಲಿಲ್ಲ. ಇಷ್ಟಲ್ಲದೇ, ನಮ್ಮ ಸಮಾಜದಲ್ಲಿ ಫೋಟೋಗ್ರಫಿ ಸಂಬಂಧಪಟ್ಟ ಹಕ್ಕು ಉಲ್ಲಂಘನೆಗೆ ಮತ್ತು ಅವುಗಳ ರಕ್ಷಣೆಗೆ ವಹಿಸುವ ಕ್ರಮಗಳು ಸ್ಪಷ್ಟವಾಗಿ ಇಲ್ಲದಿರುವುದರಿಂದ ಈ ತಿದ್ದುಪಡಿಯ ಪ್ರಯತ್ನ ಪ್ರಶ್ನಾರ್ಥಕವಾಗಿ ಉಳಿಯುತ್ತದೆ ಅಷ್ಟೇ!

ಪ್ರಸ್ತುತ ತಿದ್ದುಪಡಿಯಿಂದ ಮರುಮುದ್ರಣದ ಅಥವಾ ಮೂಲ ರೂಪದ ಕೆಲಸವನ್ನು ಕೈಗೊಳ್ಳುವುದಕ್ಕೆ ತುಸು ಬಿಗಿಗೊಳಿಸಿರುವ ಕ್ರಮಗಳು ಗಮನಾರ್ಹವಾಗಿವೆ:

  • ಮೂಲ ಮುದ್ರಣವನ್ನು ಅಥವಾ ಕೆಲಸವನ್ನು ಬೇರೆ ರೂಪದಲ್ಲಿ ಬದಲಾವಣೆಗೆ ಇದ್ದ 2 ವರ್ಷದ ಕಾಲಾವಧಿಯನ್ನು 5 ವರ್ಷಕ್ಕೆ ಏರಿಸಲಾಗಿದೆ.
  • ಯಾವ ಕೆಲಸವು ಮುಖ್ಯವಾಹಿಗೆ ತರಲಾಗಿರುತ್ತದೆಯೋ, ಅದರ ಮೂಲರೂಪದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವಂತಿಲ್ಲ. ಉದಾ: ಕ್ಯಾಸೆಟ್ ಮೂಲಕ ಹೊರತಂದ ಮುದ್ರಣವನ್ನು ಸಿಡಿ ಮೂಲಕ ಮತ್ತೆ ಹೊರತರುವಂತಿಲ್ಲ.
  • ಹಕ್ಕುಸ್ವಾಮ್ಯದಾರನಿಗೆ ಮುಂಗಡವಾಗಿ ಹಕ್ಕುಸ್ವಾಮ್ಯದಾರನ ಮೂಲ ಮುದ್ರಣದ 50000 ಸಂಖ್ಯೆಯ ಸಮನಾದ ಮೊತ್ತವನ್ನು ನೀಡಬೇಕು. ಆದರೆ ಮಾರುಕಟ್ಟೆಯ ಅಭಾವದಿಂದ ಕೆಲವು ಸಂದರ್ಭದಲ್ಲಿ ಹಕ್ಕುಸ್ವಾಮ್ಯ ಮಂಡಳಿಯ ಅನುಮತಿಯ ಮೇರೆಗೆ ಮುಂಗಡದಲ್ಲಿ ಮುಂಗಡವನ್ನು ಕಡಿಮೆ ಮಾಡಬಹುದಾಗಿದೆ.
  • ಯಾವುದೇ ಮುದ್ರಣದಲ್ಲಿ ಮೂಲ ಕರ್ತರಿಂದ ಅನುಮತಿ ಪಡೆದ ಬಗ್ಗೆ ಅಥವಾ ಮೂಲ ನಕಲು ಎಂಬ ವಿಷಯಗಳನ್ನು ಸೇರಿಸಿ ಗ್ರಾಹಕರಿಗೆ ತಪ್ಪು ಮಾಹಿತಿಯನ್ನು ಈಗಾಗಲೇ ನಿರ್ಬಂಧಿಸಲಾಗಿತ್ತು, ಈಗ ಸೌಂಡ್ ರೆಕಾರ್ಡಿಂಗ್ ಅಥವಾ ಚಲನ ಚಿತ್ರದ ಭಾಗಾಂಶವನ್ನಾಗಲಿ, ಎರವಲು ಪಡೆದ ಮಾಹಿತಿಯನ್ನು ಬಳಸಲು ನಿರ್ಬಂಧಿಸಲಾಗಿದೆ.
  • ಎಲ್ಲಾ ಮುದ್ರಿಕೆಗಳು ತಿರುಚುವ ಕೆಲಸ ಅವಶ್ಯವಿದ್ದಾಗ ಎಂಬ ಅಂಶವನ್ನು ತಗೆದುಹಾಕಿ ತಾಂತ್ರಿಕ ಕಾರಣಕ್ಕೆ ಎಂಬ ಬಳಸಿರುವುದು.

ಇವುಗಳನ್ನು ಗಮನಿಸಿದಾಗ ಕೊಲವರಿ ಹಾಡಿನ ಮೂಲ ಕರ್ತನ ಅನುಮತಿಯಿಲ್ಲದೆ ನಡೆದ ಹಾಡನ್ನು ತಿರುಚಿ ಹೆಚ್ಚಿನ ಪ್ರಚಾರಕ್ಕೂ ಅನುಕೂಲ ಮಾಡಿಕೊಟ್ಟ ಕ್ರಮಗಳು ಹಾಲಿ ಕಾನೂನಿನ ಪ್ರಕಾರ ಜೈಲಿಗೆ ಅಟ್ಟುವಷ್ಟು ದಂಡನಾರ್ಹ ಕೃತ್ಯವಾಗಿರುತ್ತದೆ. ಆದರೆ, ಇದರ ಬಗ್ಗೆ ಪ್ರಸ್ತುತ ಸಮಾಜ ಜಾಗರೂಕರಾಗಿರಬೇಕಾಗಿದೆ. ಹಕ್ಕುಸ್ವಾಮ್ಯ ಕಾಯಿದೆಯ ತಿದ್ದುಪಡಿಯಲ್ಲಿ ಗೀತ ರಚನೆಗಾರರ, ಸಂಗೀತ ಸಂಯೋಜಕರ ಮತ್ತು ಗಾಯಕರ ಹಕ್ಕುಗಳ ಕುರಿತು ಹೆಚ್ಚು ಚರ್ಚೆಗೆ ಒಳಪಟ್ಟ ವಿಷಯಗಳು ಮತ್ತು ಅವರ ಹಕ್ಕುಗಳನ್ನು ಎತ್ತಿಹಿಡಿಯಲು ಮಾಡಿರುವ ಪ್ರಯತ್ನದಿಂದ ನಿರ್ಮಾಪಕರು ಗಳಿಸುವ ರಾಜಧನದಲ್ಲಿ ಸಮಾನವಾಗಿ ಹೊಂದುವ ಅವಕಾಶ ಕಲ್ಪಿಸಿಕೊಟ್ಟಿದೆ.

ಆದರೆ, ರಾಜಧನವನ್ನು ಪಡೆಯುವ ಹಕ್ಕನ್ನು ಕುರಿತು ಯಾವುದೇ ವಿಶೇಷ ಹಕ್ಕಾಗಿ ಪರಿಗಣಿಸದಿರುವುದಿಲ್ಲ ಮತ್ತು ಎಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡದಿರುವುದಿಲ್ಲ. ಸಂಸತ್ತಿನಲ್ಲಿ ಈ ಕುರಿತು ಅನುಮೋದನೆ ಪಡೆಯುವಾಗ ಯಾವುದೇ ವಿಸ್ತೃತ ಚರ್ಚೆಗೂ ಒಳಪಟ್ಟಿರುವುದಿಲ್ಲ. ಹಾಗಾದರೆ ಅನಿಶ್ಚಿತ ಘಟನೆಗಳಿಗೆ ಇದರ ಉದ್ದೇಶ ಅರ್ಥೈಸುವುದು ಕಠಿಣವಾಗಿದೆ. ಉದಾ: ಗೀತ ರಚನೆಗಾರ ಮತ್ತು ಅವನ ವಾರಸುದಾರರೋಡನೆ ನಿರ್ಮಾಪಕನು ಸಂಪೂರ್ಣ ಹಕ್ಕುಸ್ವಾಮ್ಯವನ್ನು ತನ್ನ ಹೆಸರಿಗೆ ನಿಯೋಜಿಸಿಕೊಂಡರೆ ಅಥವಾ ರಾಜಧನವನ್ನು ಮತ್ತು ಅದರ ಹಕ್ಕನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಬೇಡಿಕೆ ಇಟ್ಟರೆ? ಇದಕ್ಕಾಗಿಯೇ ಸಂಸತ್ತಿನಲ್ಲಿ ಆಗುವ ಚರ್ಚೆಯು ಅನುಕೂಲವಾಗುತಿತ್ತು. ಮುಖ್ಯವಾಗಿ ಹಕ್ಕು ಸ್ವಾಮ್ಯ ಸೇವೆಗಳ ಬಳಕೆದಾರರ ಕುರಿತು ಅಂಗವಿಕಲರ ಬಗ್ಗೆ ಮಾತ್ರ ಚರ್ಚೆಗೆ ಒಳಪಟ್ಟು ಇತರೆಯವರ ಕುರಿತು ಯಾವುದೇ ಚರ್ಚೆಯಾಗದಿರುವುದು ತಿದ್ದುಪಡಿಯ ಕಾಳಜಿ ಬಗ್ಗೆ ಸಂಶಯಪಡುವಂತಾಗಿದೆ..

ಹೆಚ್ಚಿನ ವೈಜ್ಞಾನಿಕತೆಯಿಂದ ಅಭಿವೃದ್ಧಿಗೊಳ್ಳುತ್ತಿರುವ ನಮ್ಮ ಸಮಾಜದ ವಾಹಿನಿಗಳಲ್ಲಿ, ಸಾಮಾನ್ಯರು ತಮ್ಮ ದಿನನಿತ್ಯದ ಬದುಕಿನಲ್ಲಿ ತಮಗೆ ಅರಿವಿಲ್ಲದಂತೆ ಯಾವುದಾರೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ ಕಾಯಿದೆಯನ್ನು ಉಲ್ಲಂಘಿಸುವ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ವಾಸ್ತವದ ಸನ್ನಿವೇಶವನ್ನು ನಮ್ಮ ಸಂಸದರಿಗೆ ತಿಳಿಹೇಳಿ ಸೂಕ್ತ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಇಲ್ಲವಾದರೆ ಪ್ರಸ್ತುತ ತಿದ್ದುಪಡಿಯಿಂದ ಆಗುವ ಗೊಂದಲಗಳಿಗೆ ಅಥವಾ ವ್ಯಾಜ್ಯಗಳಿಗೆ ಯಾರನ್ನು ಬಾಧ್ಯರನ್ನಾಗಿಸಬೇಕು?

Who is right? Media or Police or Advocates?

Dear Ravi,

This is what I saw in the City Civil Court, Bangalore, yesterday:

First some media persons were holding tube-lights and waiting to beat advocates. Then there was fight between a group of media persons and a group of lawyers. Then police came and said lawyers should go inside the court and press should be outside.

Then the police joined with the press and pelted stones at advocates. One advocate fell due to the stone pelting by the press and when other advocates tried helping him, police started beating the advocates. Advocates were told that 3 advocates are dead and taken in 4 ambulances.

At the same time Kannada Media Channels were showing only police and media person are affected. In the mean time advocates and judges were locked inside the premises by the police and the police started firing, beating advocates and calling advocates saying “come, we will teach you a lesson today”. Then police threw stones from outside the court and the windows broke and an advocate arguing in court-hall 1 was hit by a stone either thrown by the press or the police.

I saw the Kannada news channels that were blaming the advocates and not even allowing the advocates to take part in the discussion by saying that you should not take law into your hands and you should only use your mouth to argue.

May be all three (advocates, police, media) are wrong, I do not know, but I have these questions:

  • Was this incident pre-planned and executed by the media and the police to tarnish the image of advocates and show them as despicable, uncivilized and barbaric, to the general public? Why only show advocates in such a bad light?
  • Was there collusion between the media and the police?
  • Are advocates such a vulnerable community?
  • Are the advocates wrong or are they only shown in bad light?
  • Why was media publishing provocative speeches and discussions against advocates only and not showing any of the incidents committed by its people and the police?

In the meantime some media persons were successful in getting the legal experts like Santhosh Hegde and some other senior advocates’ opinion on this  in order to downgrade the legal profession.

Further, in the late night, a Bowring Hospital doctor says on TV that approximately 30 persons were admitted to the hospital. 7-8 are policemen; 5-6 are press persons and the rest are advocates. That means 15-16 injured persons were advocates! All violence should be condemned very strongly. All injured persons may have families who may be going through a terrible pain right now. My prayers are with them.

I feel Kannada Channels are selectively showing only one-sided reports. No channel is showing how these advocates got injured. There is more to this unfortunate incident than it meets the eye. Who will show the truth about how the advocates including judges got injured and how this incident started? How is this incident connected with Mr Janardhana Reddy’s appearance in court? There should be a judicial enquiry on this incident. Meantime, let all the parties show restraint. Let the truth come out!

One more thing I would like to mention here. Hon’ble judges Mr. Shreedhar Rao, Mr. K.L.Manjunath, Mr. Govindarajulu, Mr. Nagamohandas et al, personally came and took the risk of pacifying the enraged amid such an explosive situation and even they were shocked when they saw one of the judge was hurt and had sustained injuries.  They virtually prayed for peace, despite, police autrociously vandalized.

Regards,
Prashanth Mirle
Advocate

ಕಪ್ಪು ಹಣದ ನಿಯಂತ್ರಣಕ್ಕಾಗಿ ಪವರ್ ಆಫ್ ಅಟಾರ್ನಿ ಮಾರಾಟಗಳಿಗೆ ಕಡಿವಾಣ: ಸುಪ್ರೀಮ್ ಕೋರ್ಟ್‌ನ ದಿಟ್ಟ ಹೆಜ್ಜೆ

-ಪ್ರಶಾಂತ್ ಮಿರ್ಲೆ
ವಕೀಲರು

ದೇಶವ್ಯಾಪಿ ಸ್ಥಿರಾಸ್ಥಿಗಳು ಮತ್ತು ಅವುಗಳ ಮಾಲೀಕತ್ವವವನ್ನು ವರ್ಗಾವಣೆ ಮಾಡಿಸಲು ಕಾನೂನುಬದ್ದವಾಗಿ ಗುರುತಿಸಲ್ಪಟ್ಟ ಸ್ವತ್ತು ಹಸ್ತಾಂತರ ದಸ್ತಾವೇಜುಗಳನ್ನು (ಉದಾ: ಕ್ರಯಪತ್ರ/ದಾನಪತ್ರ/ವಿನಿಮಯಪತ್ರ ಇತ್ಯಾದಿ.) ಮಾಡಿಸಿ, ನಿಗದಿ ಪಡಿಸಿದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಪಾವತಿಸುವುದರ ಮೂಲಕ ಸ್ವತ್ತಿನ ಪ್ರದೇಶವಾರು ವ್ಯಾಪ್ತಿಗೆ ಒಳಪಡುವ ನೊಂದಣಾಧಿಕಾರಿ ಕಛೇರಿಯಲ್ಲಿ ನೊಂದಾಯಿಸಲಾಗುವುದು. ಆದರೆ ಇದಕ್ಕೆ ಪ್ರತಿಯಾಗಿ ಅನ್ಯಮಾರ್ಗದ ಮೂಲಕ ಸ್ಥಿರಸ್ವತ್ತುಗಳನ್ನು ಹೊಂದಲು ದೇಶದಲ್ಲಿ ಕೆಲವು ಮಾದರಿಯ ದಸ್ತಾವೇಜುಗಳು ಬಳಕೆಯಲ್ಲಿದ್ದು ಅವುಗಳಲ್ಲಿ ಪ್ರಮುಖವಾಗಿ ಕ್ರಯದ ಕರಾರು ಮಾಡಿಕೊಂಡು ಮತ್ತು ಅದಕ್ಕೆ ಪೂರಕವಾಗಿ ಪವರ್ ಆಫ್ ಅಟಾರ್ನಿ/ಮರಣ ಶಾಸನ ದಸ್ತಾವೇಜುಗಳ (ಇವುಗಳನ್ನು ಪವರ್ ಆಫ್ ಅಟಾರ್ನಿ ಮಾರಾಟಗಳು ಎನ್ನಬಹುದು) ಮೂಲಕ ಮಾಡಲಾಗುವ ಸ್ಥಿರಾಸ್ಥಿಗಳ ಮಾರಾಟಗಳ ಕುರಿತು ಇತ್ತೀಚೆಗೆ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ (ಸೂರಜ್ ಲ್ಯಾಂಪ್ ಮತ್ತು ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ವಿರುದ್ದ ಸ್ಟೇಟ್ ಆಫ್ ಹರಿಯಾಣ ಅಂಡ್ ಅದರ್ಸ್  2009 (7) ಎಸ್ಸಿಸಿ 363) ಪ್ರಕರಣದಲ್ಲಿ ವಿಸ್ತೃತವಾಗಿ ಚರ್ಚಿಸಿ, ಇಂತಹ ಪವರ್ ಆಫ್ ಅಟಾರ್ನಿ ಮಾರಾಟಗಳ ಕಾನೂನುಬದ್ದವಾಗಿರುವುದಿಲ್ಲ ಎಂದು ಹೇಳಿದೆ. ಮತ್ತು ಸ್ಥಳೀಯ ಪ್ರಾಧಿಕಾರಗಳು ಈ ಸಂಬಂಧ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳನ್ನು ಪರಿಗಣಿಸಬಾರದು ಎಂಬ ಸ್ಪಷ್ಟ ನಿರ್ದೇಶನ ನೀಡಿದೆ.

ಪವರ್ ಆಫ್ ಅಟಾರ್ನಿ ಮಾರಾಟಗಳಿಗೆ ಕಾನೂನುಬದ್ದ ಮಾನ್ಯತೆಯಿಲ್ಲ:

ಇದರಲ್ಲಿ ಗಮನಾರ್ಹ ಸಂಗತಿಗಳೆಂದರೆ, ಸ್ಥಿರಸ್ವತ್ತುಗಳ ವರ್ಗಾವಣೆಯಲ್ಲಿ ಚಾಲ್ತಿಯಲ್ಲಿರುವ ಕೆಲವು ಪ್ರಕಾರಗಳಲ್ಲಿ ಮಾಲೀಕರಿಂದ ಖರೀದಿದಾರನು ಪವರ್ ಆಫ್ ಅಟಾರ್ನಿ (ಅಧಿಕಾರ ನಾಮೆ)  ಮಾರಾಟಗಳ ಮೂಲಕ ಸ್ಥಿರಸ್ವತ್ತಿನ ಸ್ವಾಧೀನ ಹೊಂದುವುದು, ಅಥವಾ ಸ್ವತ್ತಿನ ಮಾಲೀಕರೊಂದಿಗೆ ಕ್ರಯದ ಕರಾರು ಮಾಡಿಕೊಂಡು ಮತ್ತು ಅದಕ್ಕೆ ಪೂರಕವಾಗಿ ಪವರ್ ಆಫ್ ಅಟಾರ್ನಿಯನ್ನು ಪಡೆದುಕೊಂಡು ಸ್ಥಿರಸ್ವತ್ತಿನ ಸ್ವಾಧೀನ ಹೊಂದುವುದು ಅಥವಾ ಮಾಲೀಕರಿಂದ ಮರಣ ಶಾಸನ ಬರೆಸಿಕೊಳ್ಳುವ ಮೂಲಕ ಸ್ವತ್ತಿನ ಸ್ವಾಧೀನ ಹೊಂದುವುದು, ತದನಂತರ ತಮ್ಮ ಹೆಸರಿಗೆ (ಹೊಲ್ಡರ್) ಖಾತಾ ಮಾಡಿಸಿಕೊಂಡು ಸ್ವತ್ತನ್ನು ಅನುಭವಿಸುವುದು, ಈ ಹಸ್ತಾಂತರ ದಸ್ತಾವೇಜುಗಳ ಮೂಲಕ ಸ್ವತ್ತನ್ನು ಅನುಭವಿಸುತ್ತಾ ಇರುವವರ ಹೆಸರಿಗೆ ಯಾವುದೇ ನೋಂದಾಯಿತ ದಾಖಲೆಗಳಿರುವುದಿಲ್ಲ ಮತ್ತು ಇರುವಂತಹ ದಾಖಲೆಗಳು ಪೂರ್ವ ಮಾಲೀಕರ ಹೆಸರಿನಲ್ಲೆ ಇರುತ್ತವೆ, ಕಾರಣ ಸ್ಥಿರಾಸ್ಥಿಗಳನ್ನು ಹೊಂದಲು ಇರುವ ಪ್ರತಿಬಂದಕ ನಿಯಮಗಳಿಂದ ತಪ್ಪಿಸಿಕೊಳ್ಳಲು, ಸ್ಥಿರಸ್ವತ್ತುಗಳ ವರ್ಗಾವಣೆಯಲ್ಲಿ ಭರಿಸಬೇಕಾದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಪಾವತಿಸದಂತೆ ವಂಚಿಸಲು, ಸ್ವತ್ತಿನ ವರ್ಗಾವಣೆಯಿಂದ ಬರುವ ಆದಾಯದ ಮೇಲಿನ ಕ್ಯಾಪಿಟಲ್ ಗ್ಯೇನ್ ಪಾವತಿ ಮಾಡದಿರಲು, ಕಪ್ಪು ಹಣವನ್ನು ಬಂಡವಾಳವಾಗಿ ಪರಿವರ್ತಿಸಲು ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಸ್ವತ್ತಿನ ವರ್ಗಾವಣೆಯಿಂದ ಬರುವ ಇತರೇ ಅಭಿವೃದ್ಧಿ ಹೊರತಾದ ಶುಲ್ಕಗಳನ್ನು ಭರಿಸದಂತೆ ತಪ್ಪಿಸಿಕೊಳ್ಳಲು ಕಂಡುಕೊಂಡಿರುವ ಮಾರ್ಗಗಳಾಗಿದ್ದು. ಆದ್ದರಿಂದ ಬರೀ ಅಧಿಕಾರ ನಾಮೆಯ (ಪವರ್ ಆಫ್ ಅಟಾರ್ನಿಯ) ಪಡೆಯುವ ಮೂಲಕವಾಗಲಿ ಅಥವಾ ಕ್ರಯದ ಕರಾರು ಮತ್ತು ಅದಕ್ಕೆ ಪೂರಕವಾಗಿ ಅಧಿಕಾರ ನಾಮೆಯನ್ನು ನೀಡುವ ಮೂಲಕ ವಾಗಲಿ ಅಥವಾ ಮರಣ ಶಾಸನ ಮಾಡಿಕೊಟ್ಟರೆ, ಇದರಿಂದ ಸಂಬಂಧಪಟ್ಟ ಸ್ಥಿರಾಸ್ಥಿಗಳ ಸಂಪೂರ್ಣ ಮಾಲೀಕತ್ವ ವರ್ಗಾವಣೆ ಆಗುವುದಿಲ್ಲ ಎಂಬುದನ್ನು ನ್ಯಾಯಾಲಯ ಸ್ವಷ್ಟಪಡಿಸಿದೆ.

ಇಷ್ಟಲ್ಲದೆ, ಇಂತಹ ದಸ್ತಾವೇಜುಗಳ ಬಳಕೆಗಳಿಂದ ಉಂಟಾಗಿದ್ದ ಹಲವು ದ್ವಂದ್ವಗಳಿಗೆ ತೆರೆ ಎಳೆದು ಸ್ವಷ್ಠೀಕರಣ ನೀಡಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಗುರುತಿಸಬಹುದು :

  1. ದೆಹಲಿ ಉಚ್ಛ ನ್ಯಾಯಾಲಯವು ಆಶಾ ಎಂ. ಜೈನ್ ವಿರುದ್ದ. ಕೆನರಾ ಬ್ಯಾಂಕ್ (94 (2001) ಡಿಎಲ್ಟಿ 841) ಪ್ರಕರಣದಲ್ಲಿ ನಿರ್ಣಯಿಸಿದಂತೆ ಅಧಿಕಾರ ನಾಮೆಯಲ್ಲಿ ಅಧಿಕಾರ ಸ್ಥಾಪಿತವಾಗಿದ್ದರೆ ಅದನ್ನು ಆಸ್ತಿ ಹಸ್ತಾಂತರ ವರ್ಗಾವಣೆಯ ವಿಧಾನವಾಗಿ ಮಾನ್ಯತೆ ಇದೆ ಎಂಬುದನ್ನು ಗುರುತಿಸಿದ ಸರ್ವೋಚ್ಛ ನ್ಯಾಯಾಲಯವು ಪವರ್ ಆಫ್ ಅಟಾರ್ನಿ ಮಾರಾಟಗಳ ಮೂಲಕ ಮಾಡಲಾಗುವ ಸ್ಥಿರಾಸ್ಥಿಗಳ ವರ್ಗಾವಣೆ ಸಂಪೂರ್ಣ ಮಾಲೀಕತ್ವವನ್ನು ವರ್ಗಾಯಿಸುವ ವಿಧಾನ ಎಂದು ಪರಿಗಣಿಸಬಾರದು ಮತ್ತು ಅವುಗಳಲ್ಲಿ ಕ್ರಯದ ಕರಾರು ಬಾದ್ಯತೆಯನ್ನು ಮಾತ್ರ ಸೃಷ್ಟಿಸುತ್ತದೆ, ಎಂದು ವ್ಯಾಖ್ಯಾನಿಸಿದೆ. ಮತ್ತು ಮಾಲೀಕರು ಆ ಸ್ವತ್ತುಗಳನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಯಾವುದೇ ನಿರ್ಬಂಧಗಳಿರುವುದಿಲ್ಲ ಮತ್ತು ಅಧಿಕಾರ ನಾಮೆ ಮಾಡಿಸಿಕೊಂಡವನಿಗೆ ತಾನು ಕೊಟ್ಟ ಹಣದ ಹಿಂಪಾವತಿಗೆ ಮಾತ್ರ ನಿರ್ದಿಷ್ಟ ಅನುಷ್ಠಾನದ ದಾವಾ ಹೂಡಬಹುದು ಎಂಬುದನ್ನು ಸ್ವಷ್ಟಪಡಿಸಿದೆ.
  2. ಯಾವುದೇ ಸ್ಥಿರ ಆಸ್ತಿಗಳ ವರ್ಗಾವಣೆಯು ನೋಂದಣಿಯಾಗುವುದು ಖಡ್ಡಾಯ.
  3. ಈಗಾಗಲೇ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳ ಮೂಲಕ ಆಸ್ತಿಗಳನ್ನು ಹೊಂದಿರುವವರ ವಿರುದ್ದ ಕ್ರಮ ಕೈಗೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಬಹು ಮತ್ತು ಸಕ್ರಮಗೊಳಿಸಲು ಸೂಕ್ತ ಕಾಲಾವಕಾಶವನ್ನು ನೀಡಬೇಕಾಗುತ್ತದೆ ಎಂದು ಪರಿಗಣಿಸಿ ಪ್ರಸ್ತುತ ತೀರ್ಪು ದಿನಾಂಕ 11.10.2011ರ ನಂತರವಷ್ಟೆ ್ಜಾರಿಯಾಗುವಂತೆ ಆದೇಶಿದೆ. ಮುಖ್ಯವಾಗಿ ಈಗಾಗಲೇ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳ ಮೂಲಕ ಅಸ್ತಿಗಳನ್ನು ಹೊಂದಿರುವವರ ಬಗ್ಗೆ ಸಂಬಧಪಟ್ಟ ಪ್ರಾಧಿಕಾರಗಳು ಯಾವ ಕ್ರಮ ಕೈಗೊಳ್ಳಲು ಮುಂದಾಗಬಾರದು ಎಂದು ಸ್ವಷ್ಟವಾಗಿ ನಿರ್ದೇಶಿಸಿದೆ.
  4. ದಿನಾಂಕ 11.10.2011ರ ನಂತರ ಯಾವುದೇ ಸ್ಥಿರ ಸ್ವತ್ತುಗಳ ಮೇಲೆ ಸಂಬಂಧಪಟ್ಟ ಕಂದಾಯ ಪ್ರಾಧಿಕಾರಗಳು ಅಥವಾ ಕಾರ್ಪೊರೇಷನ್‌ಗಳು ಅಥವಾ ಮುನ್ಸಿಪಾಲಿಟಿಗಳು ಅಥವಾ ಪಂಚಾಯ್ತಿಗಳು ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತವೇಜುಗಳ ಮೂಲಕ ತಮ್ಮ ಹೆಸರಿಗೆ ಸ್ಥಿರಾಸ್ಥಿಗಳ ಖಾತಾ ವರ್ಗಾವಣೆಗೆ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಬಾರದು.
  5. ಯಾವುದೇ ಗುತ್ತಿಗೆ/ಲಿಸ್ ಹೊಲ್ಡ್ ಸ್ವತ್ತುಗಳಿಗೂ ಮತ್ತು ಅವುಗಳ ವರ್ಗಾವಣೆಗೂ ಈ ತೀರ್ಪಿನ ನಿರ್ದೇಶಿಸಿದ ತತ್ವಗಳು ಅನ್ವಯವಾಗುತ್ತದೆ. ಅಂದರೆ ಗುತ್ತಿಗೆ/ಲಿಸ್ ಹೊಲ್ಡ್ ಸ್ವತ್ತುಗಳ ಹಕ್ಕು ಹಸ್ತಾಂತರವು ನೋಂದಾಯಿತ ಅಸೈನ್ಮೆಂಟ್ ಆಫ್ ಲೀಸ್ ಮಾಡುವುದರ ಮೂಲಕವಷ್ಟೆ ಕಾನೂನುಬದ್ದವಾಗುತ್ತದೆ.
  6. ಕುಟುಂಬ ಸದಸ್ಯರಿಗೆ ನೀಡುವ ಅಧಿಕಾರ ನಾಮೆ, ಸ್ಥಿರಸ್ವತ್ತುಗಳನ್ನು ನಿವೇಶನಗಳಾಗಿ ಅಥವಾ ವಸತಿ/ವಾಣಿಜ್ಯ ಸಮುಚ್ಚಯಗಳಾಗಿ ಅಭಿವೃದ್ಧಿ ಪಡಿಸುವ ಇಚ್ಛೆಯಿಂದ ಮಾಲೀಕನು ಅಭಿವೃದ್ಧಿದಾರರೊಡನೆ ಜಂಟಿಯಾಗಿ ಅಭಿವೃದ್ಧಿ ಮಾಡುವ ನೋಂದಾಯಿತ ಒಪ್ಪಂದ ಜ್ಞಾಪನದ ಪತ್ರಗಳಿಗೆ ಮತ್ತು ಸೃಜಿಸಿದ ಅಧಿಕಾರಗಳ ಯಶಸ್ವಿ ಅನುಷ್ಠಾನಕ್ಕೆ ಮಾಲೀಕನು ಅಭಿವೃದ್ಧಿದಾರನಿಗೆ ನೀಡುವ ನೋಂದಾಯಿತ ಪವರ್ ಆಫ್ ಅಟಾರ್ನಿಯ ಮೇರೆಗೆ ಮಾಡಿಕೊಡುವ ವರ್ಗಾವಣೆಗಳನ್ನು ನೈಜ ವರ್ಗಾವಣೆಗಳೆಂದು ಪರಿಗಣಿಸಿ ಇವುಗಳಿಗೆ ಈ ತೀರ್ಪು ಅನ್ವಯವಾಗುವುದಿಲ್ಲ ಎಂದು ಹೇಳಿದೆ.

ಸರ್ಕಾರದ ಕ್ರಮ :

ಈ ಮೇಲಿನ ಅಂಶಗಳನ್ನು ಪರಿಗಣಿಸಿದಾಗ ನಮ್ಮ ರಾಜ್ಯದಲ್ಲೂ ದಶಕಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಿರಸ್ವತ್ತುಗಳನ್ನು ಖರೀದಿಸಿರುವವರಲ್ಲಿ ಈ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳನ್ನು ಮಾಡಿಸಿಕೊಂಡು ಇಂದಿಗೂ ತೊಂದರೆ ಅನುಭವಿಸುತ್ತಿರುವವರು ಸಾಕಷ್ಟು ಜನ ಕಾಣಸಿಗುತ್ತಾರೆ. ಇವರುಗಳು ಆಸ್ತಿಗಳ ಮೇಲಿನ ತಮ್ಮ ಹಕ್ಕುಗಳನ್ನು ಸಕ್ರಮಗೊಳಿಸಿಕೊಳ್ಳುವುದು ಒಳಿತು. ಪ್ರಸ್ತುತ ನಮ್ಮ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾನೂನುಗಳಿಗೆ ತಿದ್ದುಪಡಿಗಳನ್ನು ತರುವ ಮೂಲಕ ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ, ಇದರಲ್ಲಿ ಮುಖ್ಯವಾಗಿ ಅಧಿಕಾರ ನಾಮೆಯಡಿ ಸ್ಥಿರಸ್ವತ್ತಿನ ಹಸ್ತಾಂತರಣ ಕುರಿತ ಅಧಿಕಾರವನ್ನು ಪ್ರಾಪ್ತಿಸಿದ್ದರೆ ಅಂತಹ ದಸ್ತವೇಜುಗಳ ನೊಂದಣಿಯನ್ನು ಕಡ್ಡಾಯಗೊಳಿಸಿ, ಸ್ವತ್ತಿನ ಮಾರುಕಟ್ಟೆ ಮೌಲ್ಯದ ಮೇಲೆ ಅಥವಾ ಪ್ರತಿಫಲದ ಮೇಲೆ, ಇವುಗಳಲ್ಲಿ ಯಾವುದು ಹೆಚ್ಚೋ, ಅದರ ಮೇಲೆ, ಶೇ.6ರಷ್ಟು ಹಣವನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸುವುದನ್ನು ಮತ್ತು ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಅಂತೆಯೇ, ಕ್ರಯದ ಕರಾರು ಪತ್ರ ಮಾಡಿಕೊಳ್ಳುವಾಗಲು ಸ್ವತ್ತಿನ ಮಾರುಕಟ್ಟೆ ಮೌಲ್ಯ ಅಥವಾ ದಸ್ತಾವೇಜಿನಲ್ಲಿ ತೋರಿಸಿರುವ ಮೌಲ್ಯ, ಇವುಗಳಲ್ಲಿ ಯಾವ ಮೌಲ್ಯ ಹೆಚ್ಚಾಗಿರುತ್ತದೋ ಅದರ ಮೇಲೆ ನಿಗದಿ ಪಡಿಸಿದ ಮುದ್ರಾಂಕ ಶುಲ್ಕ (ಕಬ್ಜೆಯನ್ನು ನೀಡಿದ್ದರೆ ಶೇ.6ರಷ್ಟು ಅಥವಾ ಕಬ್ಜೆಯನ್ನು ನೀಡದಿದ್ದರೆ ಶೇ.0.01ರಷ್ಟು ಅಥವಾ 20,000 ರೂಪಾಯಿಗಳು, ಇದರಲ್ಲಿ ಯಾವುದು ಕಡಿಮೆಯೋ ಅದು ಅನ್ವಯ) ಪಾವತಿಸುವುದು ಕಡ್ಡಾಯ.

ನ್ಯಾಯಾಲಯದ ಆದೇಶದಿಂದ ಮುಖ್ಯವಾಗಿ ಅಧಿಕಾರ ನಾಮೆ/ಕ್ರಯದ ಕರಾರು/ಮರಣ ಶಾಸನ ಪತ್ರಗಳ ಮೂಲಕ ಮಾಲೀಕತ್ವವವನ್ನು ಹೊಂದುವುದನ್ನು ಅಸಿಂಧುಗೊಳಿಸಿರುವುದು ಸ್ಥಿರ ಆಸ್ತಿಗಳ ವಹಿವಾಟಿನಲ್ಲಿ ಸಾಮಾನ್ಯನಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚಾಗುವುದರಲ್ಲಿ ಸಂಶಯ ಇಲ್ಲ, ನ್ಯಾಯಾಲಯದ ತೀರ್ಪಿನಿಂದ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಏಕರೂಪ ನಿಯಮದಂತೆ ಅಸ್ತಿಗಳ ವರ್ಗಾವಣೆಗೆ ಸ್ವತ್ತಿನ ಮಾಲೀಕನೇ ಖುದ್ದಾಗಿ ನೋಂದಣಿ ಕಛೇರಿಯಲ್ಲಿ ಹಾಜರಾಗಬೇಕಾಗುತ್ತದೆ.

ಕಪ್ಪು ಹಣದ ನಿಯಂತ್ರಣ :

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮಾಡಿರುವ ಶಿಫಾರಸ್ಸಿನಂತೆ ನಮ್ಮ ರಾಜ್ಯ ಸರ್ಕಾರವು ಸಹಾ ಸುಧಾರಣೆಯತ್ತ ಗಮನಿಸಬೇಕಾದುದು ಮುಖ್ಯ, ರಾಜ್ಯದಲ್ಲಿ ಸ್ಥಿರಸ್ವತ್ತಿನ ಹಸ್ತಾಂತರ ದಸ್ತಾವೇಜು (ಕ್ರಯಪತ್ರ) ನೋಂದಣಿ ಸಮಯದಲ್ಲಿ ಒಟ್ಟು ಭರಿಸಬೇಕಾದ ವೆಚ್ಚ ಸ್ವತ್ತಿನ ಮಾರುಕಟ್ಟೆ ಮೌಲ್ಯ ಅಥವಾ ದಸ್ತಾವೇಜಿನಲ್ಲಿ ತೋರಿಸಿರುವ ಪ್ರತಿಫಲ, ಇವುಗಳಲ್ಲಿ ಯಾವುದು ಹೆಚ್ಚೋ, ಅದರ ಮೇಲೆ ಶೇ.7.78ರಷ್ಟು ಹಣವನ್ನು ಶುಲ್ಕದ ರೂಪದಲ್ಲಿ ಭರಿಸಬೇಕಾಗಿರುತ್ತದೆ, ಇದರಿಂದ ರಿಯಲ್ ಎಸ್ಟೇಟ್ ಉದ್ಯಮದ ಕಾರ್ಯಚಟುವಟಿಕೆಗಳು ಹೆಚ್ಚಿರುವ ನಗರ ಪ್ರದೇಶಗಳಲ್ಲಿ ನೋಂದಣಿ ಸಮಯದಲ್ಲಿ ಭರಿಸಬೇಕಾದ ಶುಲ್ಕದಿಂದ ಪಾರಾಗಲು ಹೆಚ್ಚಿನ ಮೌಲ್ಯವನ್ನು ದಸ್ತಾವೇಜುಗಳಲ್ಲಿ ಕಾಣಿಸದಂತೆ ಮಾಡುವುದು ಕಪ್ಪುಹಣದ ಬಳಕೆಗೆ ಸರ್ಕಾರವೇ ಪರೋಕ್ಷವಾಗಿ ಪ್ರೋತ್ಸಾಹಿಸಿದಂತೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳನ್ನು ಕಡಿಮೆ ಮಾಡುವುದು ಈ ಸಂದರ್ಭದಲ್ಲಿ ಸೂಕ್ತ, ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ.

ಇದರಿಂದ ಸಾರ್ವಜನಿಕರು ಅಸ್ತಿಗಳ ಖರೀದಿ ಪ್ರಕ್ರಿಯೆಗಳನ್ನು ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸಿ ಸಂಪೂರ್ಣ ಪ್ರತಿಫಲವನ್ನು ದಾಖಲಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ಮುದ್ರಾಂಕ ಪಾವತಿಯಲ್ಲಿ ಹೆಚ್ಚು ವಿವಾದಗಳಿಗೆ ಆಸ್ಪದ ಇರುವುದಿಲ್ಲ. ಯಾವಾಗ ಸಂಪೂರ್ಣ ಪ್ರತಿಫಲ ದಾಖಲಿಸಲು ಉತ್ಸುಕರಾಗುತ್ತಾರೋ ಪರೋಕ್ಷವಾಗಿ ಕಪ್ಪುಹಣದ ಬಳಕೆ ತಗ್ಗುತ್ತದೆ. ಈ ಕ್ರಮದಿಂದ ಸರ್ಕಾರಕ್ಕೆ ತಾತ್ಕಲಿಕವಾಗಿ ರಾಜಸ್ವದಲ್ಲಿ ಕಡಿಮೆಯಾದರು ಕಪ್ಪುಹಣದ ಬಳಕೆಯನ್ನು ನಿಯಂತ್ರಣಕ್ಕೆ ತರುವುದು ಶ್ರೇಷ್ಠ ಸಾಧನೆಯೆ ಸರಿ.

ಕೊಡಗಿನಲ್ಲಿ ಅಕ್ರಮ ಅರಣ್ಯ ಲೂಟಿಗೆ ಪಾಲುದಾರನಾದ ಸರ್ಕಾರ

ವಿ. ಪ್ರಶಾಂತ್ ಮಿರ್ಲೆ
ವಕೀಲರು

ರಾಜ್ಯದಲ್ಲಿ ಇರುವ 4,10,775 ಹೆಕ್ಟೆರ್ ಅರಣ್ಯಪ್ರದೇಶದಲ್ಲಿ ಸುಮಾರು 1/3 ರಷ್ಟು ಪ್ರದೇಶವ್ಯಾಪ್ತಿಯನ್ನು ಹೊಂದಿರುವ ಕೊಡಗು ಜಿಲ್ಲೆಯು, ನೆಚ್ಚಿನ ಪ್ರವಾಸತಾಣವಾಗಿ ನಿಸರ್ಗದ ರಸದೌತಣವನ್ನು ನೀಡುತ್ತಿದೆ. ಈ ಪ್ರದೇಶಗಳಲ್ಲಿ ಕಂಡುಬರುವ ಜಮ್ಮಾ ಮತ್ತು ಬಾಣೆ ಜಮೀನುಗಳು ಕೃಷಿ ಜಮೀನುಗಳಿಗೆ ಸುತ್ತುವರೆದ ಕಾಡು ಪ್ರದೇಶಗಳಾಗಿರುತ್ತವೆ. ಐತಿಹಾಸಿಕವಾಗಿ ಅವಲೋಕಿಸಿದಾಗ, ಹಿಂದಿನ ಕೊಡಗಿನ ಮಹಾರಾಜರು ಕಾಡುಗಳ ರಕ್ಷಣೆಯ ಹೊಣೆಯನ್ನು ಸಾಗುವಳಿದಾರರಿಗೆ ವಹಿಸಿಕೊಟ್ಟವುಗಳಾಗಿರುತ್ತವೆ, ಈ ಪ್ರದೇಶಗಳಲ್ಲಿ ನಿಯಮಗಳ ಅನುಸಾರವಾಗಿ ಸಾಗುವಳಿದಾರರಿಗೆ ತಮ್ಮ ಸ್ವಂತ ಅಥವಾ ಗೃಹಕೃತ್ಯಗಳಿಗಷ್ಟೇ ಉಪಯೋಗಿಸುವ ಅವಕಾಶವನ್ನು ಹೊರತುಪಡಿಸಿ ಅವುಗಳ ಮೇಲಿನ ಹಕ್ಕನ್ನು ಮಹಾರಾಜರೇ (ಅಂದರೆ ಸರ್ಕಾರವೇ) ಕಾಯ್ದಿರಿಸಿಕೊಂಡಿದ್ದರು. ಪ್ರತಿ ಸಾಗುವಳಿದಾರನ ಕೃಷಿ ಜಮೀನಿಗೆ ಒತ್ತಾಗಿ 50 ರಿಂದ 200 ಹೆಕ್ಟೆರ್‌ಗಳಷ್ಟು ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಹೊಂದಿರುತ್ತಾರೆ. ಇಮ್ದು ಇಂತಹ ಅರಣ್ಯ ಪ್ರದೇಶಗಳಲ್ಲಿ ಸುಮಾರು 30.000 ಹೆಕ್ಟೆರ್‌ಗಳಷ್ಟು ಪ್ರದೇಶವು ಕಾಫಿ ಬೆಳೆಯ ಹೆಸರಿನಲ್ಲಿ ಒತ್ತುವರಿಯಾಗಿದೆ. ಅದರಲ್ಲಿ ಸಾಕಷ್ಟು ಪ್ರದೇಶವು ಬೇರೆಯವರಿಗೆ ಪರಭಾರೆಯೂ ಆಗಿದೆ.

ಇದಕ್ಕೂ ಮಿಗಿಲಾಗಿ, ನೂರಾರು ಹೆಕ್ಟೆರ್ ಪ್ರದೇಶಗಳು ಜಮ್ಮಾ-ಬಾಣೆ ಜಮೀನಿನ ಹೆಸರಿನಲ್ಲಿ ಸಾಗುವಳಿದಾರರಿಂದಲೇ ಒತ್ತುವರಿಯಾಗಿ, ಆಸುಪಾಸಿನ ಹೇರಳ ಪ್ರಮಾಣದ ಅರಣ್ಯ ಪ್ರದೇಶವನ್ನು ಬರಿದು ಮಾಡಲು ಹೊರಟಿರುವುದು ಆಘಾತಕಾರಿ ಬೆಳವಣಿಗೆ!.

ಹಲವು ಸಂದರ್ಭಗಳಲ್ಲಿ, ಜಮ್ಮಾ-ಬಾಣೆ ಜಮೀನುಗಳ ಹಿಡುವಳಿದಾರರ ಗುಂಪಿನ ಹಕ್ಕೊತ್ತಾಯದಿಂದಾಗಿ, ಸರ್ಕಾರ ಮತ್ತು ಹಿಡುವಳಿದಾರರ ನಡುವೆ ಕಾನೂನು ಸಮರಗಳು ಏರ್ಪಟ್ಟು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಮ್ಮಾ-ಬಾಣೆ ಜಮೀನಿನ ಮೇಲಿನ ಸರ್ಕಾರದ ಹಕ್ಕನ್ನು ಧೃಡೀಕರಿಸಿವೆ. ಈ ತೀರ್ಪುಗಳ ಅನ್ವಯ ಸರ್ಕಾರ ಜಮ್ಮಾ-ಬಾಣೆ ಜಮೀನುಗಳ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಕಟ್ಟು-ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿತು. ಆದರೂ, ಹಿಡುವಳಿದಾರರು ತಮ್ಮ ರಾಜಕೀಯ ಪ್ರಭಾವ ಬೀರಿ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಪ್ರಸ್ತುತ ಸರ್ಕಾರವು ಸದರಿ ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಸಕ್ರಮಗೊಳಿಸಿ ಹಿಡುವಳಿದಾರರಿಗೆ ಹಕ್ಕನ್ನು ಪ್ರಾಪ್ತಿಮಾಡುವ ಹೊಸ ನಿಯಮವನ್ನು ಜಾರಿಗೆ ತರುವ ನಡೆ ಸಂಶಯಾಸ್ವದವಾಗಿದೆ. ಮುಖ್ಯವಾದ ಸಂಗತಿಗಳೆಂದರೆ, ರಾಜ್ಯದ ಭೂ ಸುಧಾರಣೆ ಕಾಯಿದೆಯ ಅಡಿಯಲ್ಲಿ ಸಾಮಾನ್ಯನು ಹೊಂದುವ ಗರಿಷ್ಟ ವ್ಯವಸಾಯದ ಭೂಮಿತಿಯು 54 ಎಕರೆಗಳು ; ಇದಕ್ಕಿಂತ ಹೆಚ್ಚಿನ ಭೂಮಿಯು ಸರ್ಕಾರಕ್ಕೆ ನಿಹಿತವಾಗುತ್ತದೆ. ಆದರೆ, 100 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಹೊಂದಿರುವವರನ್ನು ಭೂಪರಿಮಿತಿಯಿಂದ ವಿನಾಯ್ತಿ ನೀಡಿ ಸಕ್ರಮಗೊಳಿಸುವ ಸರ್ಕಾರದ ಪ್ರಯತ್ನ ಎಷ್ಟು ಸರಿ?. ಜಮ್ಮಾ-ಬಾಣೆ ಪ್ರದೇಶಗಳನ್ನು ಪ್ಲಾಂಟೇಶನ್ ಹೆಸರಿನಲ್ಲಿ ಸಕ್ರಮ ಮಾಡುವುದಾದರೆ ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಇದು ಸರ್ಕಾರ ಉಳ್ಳವರ ಪರವಾದ ಧೋರಣೆ ಅಲ್ಲವೇ? ಯಾವುದೇ ಅಕ್ರಮ-ಸಕ್ರಮಗೊಳಿಸುವಲ್ಲಿ ಸೂಕ್ತ ಮಾನದಂಡಗಳು, ಪರಿಸರ ಕಾಳಜಿ ನಿಯಮಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಮಾಲಿನ್ಯಕ್ಕೆ ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದಕ್ಕೆ ಸರ್ಕಾರದ ಉತ್ತರವೇನು?

ಹಿಂದಿನ ಮಹಾರಾಜರಿಂದ ಇಂದಿನ ಸರ್ಕಾರಗಳು ತಮ್ಮ ಸ್ವಾಮ್ಯಕ್ಕೆ ಒಳಪಟ್ಟ ಅರಣ್ಯ ಪ್ರದೇಶಗಳನ್ನು ಜನರ ಅವಶ್ಯಕತೆಗಳನ್ನು ಮೀರಿ ದುರ್ಬಳಕೆ ಮಾಡದಂತೆ ತಡೆಯುವುದಕ್ಕಾಗಿ ಹಲವು ನಿಯಮಗಳನ್ನು ಜಾರಿಗೆ ತಂದಿವೆ. ಪ್ರಾದೇಶಿಕವಾಗಿ ತಮ್ಮ ಕೃಷಿ ಜಮೀನುಗಳಿಗೆ ಸುತ್ತುವರೆದ ಕಾಡು ಪ್ರದೇಶಗಳನ್ನು ಗುರ್ತಿಸಿ ಸೀಮಿತ ನಿರ್ಬಂಧಿತ ಹಕ್ಕುಗಳೊಂದಿಗೆ, ಅಂದರೆ 1) ಕಂದಾಯ ಮುಕ್ತವಾಗಿ,  2) ಜಾನುವಾರುಗಳ ಮೇವಿಗಾಗಿ,, 3) ಮರಗಳಿಂದ  ಎಲೆ ಗೊಬ್ಬರವನ್ನು  ತೆಗೆದುಕೊಳ್ಳಲು, 4) ಕೃಷಿ ಉತ್ಪನ್ನ  ಮತ್ತು ಗೃಹ ಉಪಯೋಗಕ್ಕಾಗಿ ಕಟ್ಟಿಗೆ  ಮತ್ತು  ಮರ ಮುಟ್ಟುಗಳನ್ನು  ತೆಗೆದುಕೊಳ್ಳುಲು ಕೃಷಿಕರಿಗೆ ಅವಕಾಶ, ಇವನ್ನು ಹೊರತುಪಡಿಸಿ ಅವುಗಳ ಮೇಲಿನ ಹಕ್ಕನ್ನು ಸರ್ಕಾರವೇ ಕಾಯ್ದಿರಿಸಿಕೊಂಡಿರುತ್ತದೆ. ಇಂತಹ  ಅರಣ್ಯ ಪ್ರದೇಶಗಳನ್ನು ನಮ್ಮ ರಾಜ್ಯದಲ್ಲಿ  ಪ್ರಾದೇಶಿಕವಾಗಿ ಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮ್ಕಿ, ಕಾನೆ ಮತ್ತು ಬಾಣೆ ಜಮೀನುಗಳೆಂತಲು; ಉತ್ತರ ಕನ್ನಡ  ಜಿಲ್ಲೆಯಲ್ಲಿ ಹಾಡಿ ಮತ್ತು ಬೆಟ್ಟದ ಜಮೀನು  ಜಮೀನುಗಳೆಂತಲೂ; ಮೈಸೂರು ಪ್ರದೇಶದಲ್ಲಿ ಕಾನೆ ಮತ್ತು ಸೊಪ್ಪಿನ ಬೆಟ್ಟದ ಜಮೀನುಗಳೆಂತಲೂ; ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮತ್ತು ಬಾಣೆ ಜಮೀನುಗಳೆಂತಲೂ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೋತ್ಸಾಲ್ ಜಮೀನುಗಳೆಂತಲೂ ಅನ್ನುತ್ತಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ-1964ರ ಕಲಮು 79(2)ರ ಅಡಿಯಲ್ಲಿ ಈ ಅರಣ್ಯ ಪ್ರದೇಶಗಳ ಮೇಲಿನ ನಿಬಂಧಿತ ಉನ್ಮುಕ್ತಿಗಳ ಅನುಭೋಗವನ್ನು ಮಾನ್ಯಮಾಡಿದೆ.

ಪ್ರಸ್ತುತದಲ್ಲಿ, ರಾಜ್ಯದಲ್ಲಿ ಇರುವ 4,10,775 ಹೆಕ್ಟೆರ್ ಅರಣ್ಯಪ್ರದೇಶದಲ್ಲಿ ಸುಮಾರು 1/3 ರಷ್ಟು ಪ್ರದೇಶವ್ಯಾಪ್ತಿಯನ್ನು ಕೊಡಗು ಜಿಲ್ಲೆಯೇ ಹೊಂದಿದೆ. ಐತಿಹಾಸಿಕವಾಗಿ ಅವಲೋಕಿಸಿದಾಗ, ಹಿಂದಿನ ಕೊಡಗಿನ ಮಹಾರಾಜರು ಕಾಡುಗಳ ರಕ್ಷಣೆಯ ಹೊಣೆಯನ್ನು ಜಮ್ಮಾ ಸೇವಕರಿಗೆ, ಕೆಲಸದಾಳುಗಳಿಗೆ ನಂತರದ ಕಾಲದಲ್ಲಿ ಬ್ರಿಟಿಷರ ಆಡಳಿತದಲ್ಲಿ ತಮ್ಮ ಸೈನ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ದಾನವಾಗಿ ಅಥವಾ ಉಂಬಳಿಯಾಗಿ ಸಾಗು ಭೂಮಿಯನ್ನು ನೀಡಿ, ಅದರಲ್ಲೂ ಮುಖ್ಯವಾಗಿ ಸಾಗುವಳಿಗೆ (ಕೃಷಿಗೆ) ಒಳಪಟ್ಟ ಜಮೀನಿಗೆ ಒತ್ತಾಗಿ ಸುತ್ತುವರೆದಿರುವ ಕಾಡು ಪ್ರದೇಶವನ್ನು ಆಯಾ ಸಾಗುವಳಿದಾರರಿಗೆ ಮೇಲ್ವಿಚಾರಣೆ ನೀಡಿ ಆ ಪ್ರದೇಶಗಳನ್ನು ತಮ್ಮ ಸ್ವಂತ ಅಥವಾ ಗೃಹಕೃತ್ಯಗಳಿಗಷ್ಟೇ ಬಳಸಿಕೊಳ್ಳುವ ಅವಕಾಶವನ್ನು ಹೊರತುಪಡಿಸಿ ಮಿಕ್ಕ ಹಕ್ಕುಗಳನ್ನು  ಮಹಾರಾಜರೇ ಕಾಯ್ದಿರಿಸಿಕೊಂಡಿದ್ದರು. ಇಂದಿಗೂ ಸಹ ಇವುಗಳ ಹಕ್ಕುಗಳನ್ನು (ಸಾರ್ವಭೌಮಿಕೆಯನ್ನು) ಸರ್ಕಾರವೇ ಕಾಯ್ದಿರಿಸಿಕೊಂಡಿದೆ.

ಆದರೇ, ಇತ್ತೀಚಿನ ದಿನಗಳಲ್ಲಿ ಕಾಫಿ ಅಥವಾ ಕಾರ್ಡಮಾಮ್ (ಏಲಕ್ಕಿ) ಅಥವಾ ಇತರೇ ಬೆಳೆಗಳನ್ನು ಬೆಳೆಯುವ ಅತೀ ಆಸೆಯಿಂದ ತಮ್ಮ ಕೃಷಿ ಜಮೀನಿಗೆ ಸುತ್ತುವರೆದ ಜಮ್ಮಾ-ಬಾಣೆ ಪ್ರದೇಶಗಳನ್ನು ಸಾಗುವಳಿಗೆ ಪರಿವರ್ತಿಸುವ ಕಾರಣ ನೀಡಿ ಕಂದಾಯ ಇಲಾಖೆಯಿಂದ ಅಕ್ರಮವಾಗಿ ಪ್ರಮಾಣ ಪತ್ರಗಳನ್ನು (ಸಿ.ಆರ್.ಸಿ ಮತ್ತು ಸಿ.ಡಿ.ಆರ್.ಸಿ) ಪಡೆದು ಕರನಿರ್ಧರಣೆಗೆ ಒಳಪಡಿಸಿ ಕಂದಾಯ ಪಾವತಿಸುವ ಮೂಲಕ ಹಕ್ಕು ಸಾಧಿಸುವುದು ಮತ್ತು ಮಾರಾಟ ಮಾಡುವುದನ್ನು ಮಾಡಲಾಗಿದೆ. (ಕಾನೂನುಬದ್ದವಾಗಿ ಈ ಬಾಣೆ ಜಮೀನುಗಳನ್ನು ವರ್ಗಾಯಿಸುವಂತಿಲ್ಲ). ಹಲವುಬಾರಿ ಇಂತಹ ಅಕ್ರಮಗಳ ವಿರುದ್ದ ಪರಿಸರವಾದಿಗಳ ಪ್ರತಿಭಟನೆಗಳು ನಡೆದೂ ಇದ್ದವು.

ಕಾರಣ, ಜಮ್ಮಾ-ಬಾಣೆ ಜಮೀನುಗಳು ಸೇರಿದಂತೆ ಸುಮಾರು 1,34,657 ಹೆಕ್ಟೆರ್ ವಿಸ್ತೀರ್ಣದಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಜಮ್ಮಾ-ಬಾಣೆಗಳ ಹಿಡುವಳಿದಾರರಿಂದ ಸುಮಾರು 30.000 ಹೆಕ್ಟೆರ್‌ಗಳಷ್ಟು ಪ್ರದೇಶ ಅರಣ್ಯಪ್ರದೇಶದ ಕಾಫಿ ಬೆಳೆಯ ಹೆಸರಿನಲ್ಲಿ ಒತ್ತುವರಿಯಾಗಿದೆ. ಹಲವು ಸಂದರ್ಭಗಳಲ್ಲಿ, ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯ ಅಕ್ರಮ-ಸಕ್ರಮ ಮಾಡಿಸಿಕೊಳ್ಳುವ ಪ್ರಯತ್ನದಿಂದ, ಸರ್ಕಾರ ಮತ್ತು ಹಿಡುವಳಿದಾರರ ನಡುವೆ ಕಾನೂನು ಸಮರಗಳು ಏರ್ಪಟ್ಟು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಮ್ಮಾ-ಬಾಣೆ ಜಮೀನಿನ ಮೇಲಿನ ಸರ್ಕಾರದ ಹಕ್ಕನ್ನು ಧೃಡೀಕರಿಸಿವೆ. ಈ ತೀರ್ಪುಗಳ ಅನ್ವಯ ಸರ್ಕಾರ ಜಮ್ಮಾ-ಬಾಣೆ ಜಮೀನುಗಳ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಕಟ್ಟು-ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿತು. ಉದಾಹರಣೆಗೆ ದಿನಾಂಕ 31.10.2006ರಲ್ಲಿ ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಗಳು ಸುತ್ತೋಲೆಯನ್ನು ಹೊರಡಿಸಿ, “ಕೊಡಗು ಜಿಲ್ಲೆಯಲ್ಲಿನ ಬಾಣೆ  ಜಮೀನುಗಳ ಬಗ್ಗೆ ನೀಡಿರುವ ವಿಶೇಷಾಧಿಕಾರ ಸೀಮಿತವಾಗಿದ್ದು, ಈ ಜಮೀನುಗಳ ಪರಿವರ್ತನೆಗೆ ಅವಕಾಶವಿಲ್ಲ. ಆದ್ದರಿಂದ, ಈ ಜಮೀನುಗಳನ್ನು ಪರಿವರ್ತನೆಗಳನ್ನು ಕೋರಿ ಬರುವ ಪ್ರಸ್ತಾವನೆಗಳನ್ನು ಪರಿಗಣಿಸದಿರುವಂತೆ,” ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಆ ಜಿಲ್ಲೆಯ ಎಲ್ಲಾ ಸಂಬಂಧಿತ ಕಂದಾಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಬಾಣೆ ಜಮೀನುಗಳಿಗೆ ಈಗಾಗಲೇ ಅನುಮತಿಯನ್ನು ನೀಡಿದ್ದಲ್ಲಿ ಅದನ್ನು ರದ್ದುಪಡಿಸಿ ಆ ಜಮೀನುಗಳನ್ನು ಬಾಣೆ ಜಮೀನುಗಳನ್ನಾಗಿಯೆ ಮುಂದುವರೆಸಲೂ ಸಹ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದರು.

Karnataka High Court

Karnataka High Court

ಇಷ್ಟಲ್ಲದೆ, ಕರ್ನಾಟಕದ ಉಚ್ಛ ನ್ಯಾಯಾಲಯ ದಿನಾಂಕ 22-10-1993ರಂದು ನೀಡಿದ  ತೀರ್ಪನ್ನು ಉಲ್ಲೇಖಿಸುತ್ತಾ, ಜಮ್ಮಾ ಬಾಣೆ ಜಮೀನನ್ನು ಹೊದಿರುವವರು ಅದರ ಒಡೆಯರಾಗಲು ಸಾಧ್ಯವಿಲ್ಲ. ಆದ್ದರಿಂದ, ಅವರು ಬರೀ ವಿಶೇಷಾಧಿಕಾರಗಳಿಗೆ ಮಾತ್ರ ಅರ್ಹರು ಮತ್ತು ಸದರಿ ಬಾಣೆ ಜಮೀನನ್ನು ಮಾರಾಟ ಮಾಡುವ ಹಕ್ಕು ಅವರಿಗಿರುವುದಿಲ್ಲ. ಕರ್ನಾಟಕ ಭೂಕಂದಾಯ ಅಧಿನಿಯಮದ ಪರಿಛ್ಛೇದ 79 ರಲ್ಲಿಯೂ ಈ ವಿಶೇಷಾಧಿಕಾರಗಳನ್ನು ರಕ್ಷಿಸಲಾಗಿದ್ದು ಅನುಭವದಾರರು ಬಾಣೆ ಜಮೀನಿನ ಮಾಲೀಕತ್ವದ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಇದು ಕರ್ನಾಟಕದ ಉಚ್ಛ ನ್ಯಾಯಾಲಯದ ಪೂರ್ಣಪೀಠದ ತೀರ್ಪಾಗಿದ್ದು. ಇದನ್ನು ಯಾರೂ ಪ್ರಶ್ನಿಸಿಲ್ಲವಾದ್ದರಿಂದ ಇಂದಿಗೂ ನಿರ್ಣಾಯಕವಾಗಿದೆ ಎಂದು ಹೇಳಲಾಗಿತ್ತು.

ಆದರೂ, ಹಿಡುವಳಿದಾರರು ತಮ್ಮ ರಾಜಕೀಯ ಪ್ರಭಾವ ಬೀರಿ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಇದೇ ಸಮಯವನ್ನರಿತ ಕೆಲವು ಕೊಡವ ರಾಜಕಾರಣಿಗಳು ಈ ವಿಷಯವನ್ನು ರಾಜಕೀಯಗೊಳಿಸಿದರು. ಕೆಲವು ರಾಜಕಾರಣಿಗಳು ಕೊಡಗನ್ನು ಅರಣ್ಯ ಪ್ರದೇಶವಾಗಿ ಗುರ್ತಿಸಿ ಅಮೇರಿಕಾಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ ಎಂದು ತರ್ಕಕ್ಕೆ ನಿಲ್ಲದ ಹೇಳಿಕೆ ನೀಡಿ ಜನತೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರೆ, ಇನ್ನೂ ಕೆಲವರು ಪ್ರತ್ಯೇಕ ರಾಜ್ಯದ ಬೇಡಿಕೆಗಳಿಗೆ ಈ ವಿಷಯವನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸಿದರು, ಮತ್ತು ಈಗಲೂ ಪ್ರಯತ್ನಿಸುತ್ತ ಇದ್ದಾರೆ. ಇವುಗಳ ಪರಿಣಾಮವೆ ಕೊಡಗಿನಲ್ಲಿ 2006ನೇ ಇಸವಿಯ ನವೆಂಬರ್ ಒಂದರಂದು ನಡೆದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಘಟಿಸಿದ ಅನುಚಿತ ಘಟನೆಗಳು.

ಆದರೆ ಹಾಲಿ ಸರ್ಕಾರವು ಸಮಯಸಾಧಕನಂತೆ ತನ್ನ ಆಡಳಿತ ಅವಧಿಯ ಪ್ರಾರಂಭದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಜಮ್ಮಾ ಬಾಣೆಗೆ ಜಮೀನಿನ ಒಡೆತನ ಸರ್ಕಾರಕ್ಕೆ ಸೇರಿದೆ ಎಂದು ಹೊರಡಿಸಲಾಗಿರುವ ಸುತ್ತೋಲೆಯನ್ನು ರದ್ದುಗೊಳಿಸಿ ದಿನಾಂಕ 31.10.2006ಕ್ಕಿಂತ ಮುಂಚಿತವಾಗಿ ಪರಿವರ್ತಿಸಲ್ಪಟ್ಟ ಜಮೀನುಗಳಿಗೆ ಹಕ್ಕು ಪ್ರಾಪ್ತಿ ಮಾಡಿ ಸಕ್ರಮಗೊಳಿಸಿತ್ತು. ಈಗ, ಮತ್ತೂ ಮುಂದುವರಿದು ದಿನಾಂಕ 04.11.2011ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಮ್ಮಾ ಬಾಣೆ ಅರಣ್ಯ ಇಲಾಖೆಗೆ ಸೇರಿದ್ದಲ್ಲ: ಬದಲಿಗೆ ಹಿಡುವಳಿದಾರರಿಗೆ ಸೇರಿದ್ದು ಎಂದು ನಿಯಮಗಳಿಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸರ್ಕಾರದ ಈ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿಯವರು ಕೊಡಗಿನ ಬೆ.ಜೆ.ಪಿ.ಯ ಶಾಸಕರ ಮತ್ತು ಅವರ ಬೆಂಬಲಿತ ಜಮ್ಮಾ ಬಾಣೆ ಹಿಡುವಳಿದಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು, ತಮ್ಮ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ಎಳ್ಳು-ನೀರು ಬಿಟ್ಟಿದ್ದು, ಇದು ಸಂಪೂರ್ಣವಾಗಿ ಭೂಮಾಲೀಕರ ಹಿತಕಾಯುವ ವಿವೇಚನೆಯಿಲ್ಲದ ಕ್ರಮವಾಗಿದೆ. ಅರಣ್ಯ ರಕ್ಷಣೆಯ ಜವಾಬ್ದಾರಿ ಹೊತ್ತ ಸರ್ಕಾರ ಸ್ವಷ್ಟ ಕಾರಣವಿಲ್ಲದೆ ಕೇವಲ ತಮ್ಮ ಬೆಂಬಲಿತ ಮತದಾರರ ಹಿತಕಾಯುವುದು, ಅದೂ ಅಕ್ರಮವೆಂದು ತೋರಿದ ಕ್ರಮದಿಂದ, ಎಷ್ಟು ಸರಿ?

ಇಲ್ಲಿ ಈಗ ಮುಖ್ಯವಾಗಿ, ಕಂದಾಯ ದಾಖಲೆಗಳಲ್ಲಿ ತೋರಿಸಿರುವ ವಿಸ್ತೀರ್ಣಕ್ಕಿಂತ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಪ್ರದೇಶದ ಹಿಡಿತವನ್ನು ತಪ್ಪಿಸಿ, ಅದರ ದುರ್ಬಳಕೆಯನ್ನು ರಕ್ಷಿಸಬೇಕಾಗಿದೆ. ಹಾಗೂ ಮುಖ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತಿರುವ ಬಾಣೆ ಜಮೀನುಗಳನ್ನು ಅಥವಾ ಅರಣ್ಯ ಪ್ರದೇಶಗಳನ್ನು ರೆಸಾರ್ಟ್‌ಗಳಿಗಾಗಿ, ಅಪಾರ್ಟ್‌ಮೆಂಟ್‌ಗಳಿಗಾಗಿ, ನಿವೇಶನಗಳಿಗಾಗಿ ಮತ್ತು ವಿಲ್ಲಾಸ್‌ಗಳಿಗಾಗಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ಕೆಲವು ಜಾಗಗಳಲ್ಲಿ ಅಕ್ರಮವಾಗಿ ಗಣಿಗಾರಿಕೆಯನ್ನೂ ನೆಡೆಸುತ್ತಿದ್ದಾರೆ. ಇವುಗಳನ್ನು ಸಹ ನಿಯಂತ್ರಿಸಬೇಕಿದೆ.

ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ರಾಜ್ಯದಲ್ಲಿ ವ್ಯಕ್ತಿಯೊಬ್ಬ ಹೊಂದಿರಹುದಾದ ಕೃಷಿಭೂಮಿಯ ಭೂಮಿತಿಯು ಗರಿಷ್ಟ 54 ಎಕರೆಗಳನ್ನು ಮೀರುವಂತಿಲ್ಲ. ಆದರೆ, ಕೊಡಗಿನ ಪ್ರದೇಶದಲ್ಲಿ ಪ್ರತಿ ಸಾಗುವಳಿದಾರು ತನ್ನ ಕೃಷಿ ಜಮೀನಿಗೆ (ಕೃಷಿ ಜಮೀನನ್ನು ಹೊರತುಪಡಿಸಿ) ಒತ್ತಾಗಿ 50 ರಿಂದ 200 ಹೆಕ್ಟೆರ್‌ಗಳಿಗಿಂತ ಮಿಗಿಲಾಗಿ (ಅಂದರೆ 100 ರಿಂದ 500 ಎಕರೆಗಳಿಗೂ ಮಿಗಿಲಾಗಿ) ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಹೊಂದಿರುತ್ತಾರೆ. ಈ ಹಿಡುವಳಿಯನ್ನು ಕಾನೂನುಬದ್ದಗೊಳಿಸಿದಾಗ ನಿಯಮಬದ್ಧನಾಗಿ ರಾಜ್ಯದಲ್ಲಿ ಸಾಮಾನ್ಯನ ಹಿಡುವಳಿ ಹೊಂದುವ ಭೂಮಿಯ ಪ್ರಮಾಣಕ್ಕಿಂತ ಹೆಚ್ಚಾಗಿ ಇರುವುದರಿಂದ ಬಾಣೆ ಜಮೀನಿನ ಒಡೆತನ ಕಾನೂನಿಗೇ ವಿರುದ್ಢವಾಗಿರುತ್ತದೆ.

ಈ ಎಲ್ಲಾ ಕಾರಣಗಳಿಂದಲೇ, 100 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಹೊಂದಿರುವವರನ್ನು ಭೂಪರಿಮಿತಿಯಿಂದ ವಿನಾಯ್ತಿ ನೀಡಿ ಸಕ್ರಮಗೊಳಿಸುವ ಸರ್ಕಾರದ ಪ್ರಯತ್ನ ಎಷ್ಟು ಸರಿ?. ಜಮ್ಮಾ-ಬಾಣೆ ಪ್ರದೇಶಗಳನ್ನು ಪ್ಲಾಂಟೇಶನ್ ಹೆಸರಿನಲ್ಲಿ ಸಕ್ರಮ ಮಾಡುವುದಾದರೆ ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಯಾವುದೇ ಅಕ್ರಮ-ಸಕ್ರಮಗೊಳಿಸುವಲ್ಲಿ ಸೂಕ್ತ ಮಾನದಂಡಗಳನ್ನು, ನಿಯಮಗಳನ್ನು, ಪರಿಸರ ಸಂಬಂಧಿ ವಿಷಯಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಈ ಎಲ್ಲಾ ಅಕ್ರಮಗಳಿಗೆ  ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದು ಸರಿಯೇ?

(ಚಿತ್ರಕೃಪೆ: ವಿಕಿಪೀಡಿಯ)