Category Archives: ಜಗದೀಶ್ ಕೊಪ್ಪ

“ಬಿಳಿಸಾಹೇಬನ ಭಾರತ” ಪುಸ್ತಕವಾಗಿ ಬರುತ್ತಿದೆ. ಅಭಿನಂದನೆಗಳು

ಆತ್ಮೀಯರೇ,

ನಿಮಗೆಲ್ಲರಿಗೂ ತಿಳಿದಿರಬಹುದು; 2011ರ ಡಿಸೆಂಬರ್‌ನಿಂದ 2012 ರ ಜುಲೈ ತನಕ, 29 ವಾರಗಳ ಕಾಲ, ನಮ್ಮ ಪ್ರೀತಿಯ ಲೇಖಕ ಜಗದೀಶ ಕೊಪ್ಪ ವರ್ತಮಾನ.ಕಾಮ್‌ನಲ್ಲಿ “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ)”ವನ್ನು ಬರೆದರು. ವರ್ತಮಾನ.ಕಾಮ್‌ನ ಆರಂಭದ ದಿನಗಳಲ್ಲಿ ಅನೇಕ ಸರಣಿ ಲೇಖನಗಳನ್ನಷ್ಟೇ ಅಲ್ಲದೆ, ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜಗದೀಶ ಕೊಪ್ಪರು ನಿರಂತರವಾಗಿ ಬರೆದು ನಮಗೆ ಬೆನ್ನೆಲುಬಾಗಿ ನಿಂತು, ವರ್ತಮಾನ.ಕಾಮ್ ಬೇರೂರಿ ನಿಲ್ಲಲು ನೆರವಾದವರು. ಬಿಳಿ ಸಾಹೇಬನ ಭಾರತ, ನಕ್ಸಲ್ ಕಥನ, ಜೀವನದಿಗಳ ಸಾವಿನ ಕಥನ; ಈ ಮೂರು ಸರಣಿ ಲೇಖನಗಳು ಅಪಾರ ಓದುಗರನ್ನು ಗಳಿಸಿದ್ದವು. ಇದರಲ್ಲಿ ಈಗಾಗಲೆ ’ಜೀವನದಿಗಳ ಸಾವಿನ ಕಥನ’ ಮತ್ತು “ನಕ್ಸಲ್ ಕಥನ”ಗಳು ಇನ್ನೊಂದಷ್ಟು ಲೇಖನ-ಮಾಹಿತಿಗಳ ಜೊತೆಗೆ “ಜೀವನದಿಗಳ ಸಾವಿನ ಕಥನ” ಮತ್ತು “ಎಂದೂ ಮುಗಿಯದ ಯುದ್ಧ”ಗಳಾಗಿ ಪುಸ್ತಕಗಳಾಗಿಯೂ ಹೊರಬಂದಿದೆ.

ಈಗ, “ಬಿಳಿ ಸಾಹೇಬನ ಭಾರತ”ವೂ ಪುಸ್ತಕವಾಗಿ ಬರುತ್ತಿದೆ. ಈ ಸಂದರ್ಭದಲ್ಲಿ ಲೇಖಕ ಜಗದೀಶ ಕೊಪ್ಪರಿಗೆ koppa-Invitation-biLisahebaವರ್ತಮಾನ ಬಳಗದ ಪರವಾಗಿ ಧನ್ಯವಾದ, ಕೃತಜ್ಞತೆ, ಮತ್ತು ಅಭಿನಂದನೆಗಳನ್ನು ತಿಳಿಸುತ್ತೇವೆ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇದೇ ಶನಿವಾರ ಸಂಜೆ 4:30ಕ್ಕೆ ಬೆಂಗಳೂರಿನಲ್ಲಿದೆ. ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ಭಾಗವಹಿಸಿ.

ವಿಶ್ವಾಸದೊಂದಿಗೆ,
ರವಿ ಕೃಷ್ಣಾರೆಡ್ಡಿ
ವರ್ತಮಾನ ಬಳಗ



jeevanadigaLa-koppa


eMdU-mugiyada-yudda-koppa


biLisaheba-koppa

ಚುನಾವಣಾ ಪ್ರಣಾಳಿಕೆಗಳೆಂಬ ಪ್ರಹಸನ

– ಡಾ. ಎನ್. ಜಗದಿಶ್ ಕೊಪ್ಪ
ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದಂತೆ ತಮ್ಮ ತಮ್ಮ ಚುನಾವಣಿಯ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ, ಇವುಗಳನ್ನು ಗಮನಿಸಿದರೆ, ಅಥವಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಓದಿದರೆ, ಇವುಗಳನ್ನು ನಮ್ಮ ಪತ್ರಿಕೆಗಳು ‘ಹಾಸ್ಯಲೇಖನಗಳು ಎಂಬ ಶೀರ್ಶಿಷಿಕೆಯಡಿ ಪ್ರಕಟಿಸಬಹುದಾದ ಎಲ್ಲಾ ಗುಣಗಳನ್ನು ಹೊಂದಿವೆ Poverty_4C_--621x414ಎಂದು ನಿಸ್ಸಂಕೋಚವಾಗಿ ಹೇಳಬಹುದು.
ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ, ದಿನದ 24 ಗಂಟೆ ವಿದ್ಯುತ್, ನಿರಂತರ ಕುಡಿಯುವ ಯೋಜನೆ, ರಸ್ತೆ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಅಭಿವೃದ್ಧಿಗೆ ಒತ್ತು, ಹೀಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುತ್ತಿರುವ ರಾಜಕೀಯ ಪಕ್ಷಗಳಿಗೆ ತಾವು ಅಧಿಕಾರದಲ್ಲಿದ್ದಾಗ ಈ ಯೋಜನೆಗಳನ್ನು ಏಕೆ ಅನುಷ್ಟಾನಗೊಳಿಸಲಿಲ್ಲ? ಎಂದು ಯಾರೂ ಪ್ರಶ್ನಿಸಲಿಲ್ಲ, ಜೊತೆಗೆ ಪ್ರಶ್ನಿಸಲೂ ಬಾರದು ಏಕೆಂದರೆ, ಇವುಗಳು ಬಡವರನ್ನು ಬಡವರಾಗಿ ಇಡುವ ಒಂದು ವ್ಯವಸ್ಥಿತ ತಂತ್ರ ಅಷ್ಟೇ. ಇವುಗಳ ಬಗ್ಗೆ ಭಾರತದ ಮತದಾರರು ನಂಬಿಕೆಗಳನ್ನು ಕಳೆದುಕೊಂಡು ಎಷ್ಟೋ ವರ್ಷಗಳಾಗಿವೆ, ಈಗಿನ ಚುನಾವಣಾ ಪ್ರಣಾಳಿಕೆಗಳೆಂದರೆ, ಮನಸ್ಸಿಗೆ ತುಂಬಾ ಬೇಸರವಾದಾಗ ಓದಬಹುದಾದ ಹಾಸ್ಯದ ಕರಪತ್ರಗಳು ಎಂಬಂತಾಗಿವೆ.
ನಮ್ಮ ಜನಪ್ರತಿನಿಧಿಗಳು ವಾಸ್ತವ ಬದುಕಿನಿಂದ ಎಷ್ಟೊಂದು ದೂರ ಚಲಿಸಿದ್ದಾರೆ ಎಂಬುದಕ್ಕೆ, ಚುನಾವಣಾ ಪ್ರಣಾಳಿಕೆಗಳು ಸಾಕ್ಷಿಯಾಗಿವೆ.  ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಇತ್ತೀಚೆಗೆ ದೆಹಲಿ ರಸ್ತೆಗಳಲ್ಲಿ ಕಸ ಗುಡಿಸಲು, 5.400 ಹುದ್ದೆಗಳಿಗೆ, ಕೇವಲ ಐದನೇಯ ತರಗತಿ ಪಾಸಾಗಿರುವ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಿತ್ತು. ಒಟ್ಟು 18 ಸಾವಿರ ಅಜರ್ಿಗಳು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಎಸ್.ಎಸ್,ಎಲ್.ಸಿ. ಪಾಸಾದವರು ಎರಡು ಸಾವಿರ ಮಂದಿ ಇದ್ದರೆ, 50 ಮಂದಿ ಪದವೀಧರರು ಇದ್ದರು. ಉದ್ಯೋಗ ಸೃಷ್ಟಿಯ ಬಗ್ಗೆ ಬೊಗಳೆ ಬಿಡುವ ನಮ್ಮ ರಾಜಕೀಯ ಪಕ್ಷಗಳಿಗೆ ಕಪಾಳಕ್ಕೆ ಬಾರಿಸಿದಂತೆ ಇರುವ ಈ ಕಟು ವಾಸ್ತವ ಸಂಗತಿ ಅರ್ಥವಾಗುವುದು ಯಾವಾಗ?
ಕಳೆದ ವಾರ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಹಾಂಗ್ ಕಿನ್, ಜಾಗತಿಕ ಬಡತನದ ಕುರಿತಂತೆ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲಿ 120 ಕೋಟಿ ಬಡಜನರಿದ್ದು, ಭಾರತದಲ್ಲಿ ಇಲ್ಲಿನ ಜನಸಂಖ್ಯೆಯ 120 ಕೋಟಿಯಲ್ಲಿ, ಶೇಕಡ 33 ರಷ್ಟು ಬಡವರಿದ್ದಾರೆ ಎಂದು ತಿಳಿಸಿದ್ದಾರೆ. ವಿಶ್ವಬ್ಯಾಂಕ್, ಬಡತನ ಕುರಿತಂತೆ ತನ್ನ ಮಾನದಂಡವನ್ನು ಬದಲಾಯಿಸಿದೆ. ದಿನವೊಂದಕ್ಕೆ  ಒಂದು ಡಾಲರ್ ( ಸುಮಾರು 55 ರೂಪಾಯಿ) ಬದಲಾಗಿ, ಒಂದುಕಾಲು ಡಾಲರ್ ದುಡಿಯುವ ಅಂದರೆ, ಸುಮಾರು 68 ರೂಪಾಯಿ ಸಂಪಾದಿಸುವ ವ್ಯಕ್ತಿ ಬಡವನಲ್ಲ. ಆದರೆ, ಭಾರತದಲ್ಲಿ ಈ ಮಾನದಂಡವನ್ನು ದಿನವೊಂದಕ್ಕೆ 28 ರೂಪಾಯಿ ಎಂದು ನಿರ್ಧರಿಸಲಾಗಿದೆ. ಬಡತನ ಕುರಿತಂತೆ ವಿಶ್ವಬ್ಯಾಂಕ್ ನ  ಮಾನದಂಡವನ್ನು ಭಾರತಕ್ಕೆ ಅಳವಡಿಸಿದರೆ, ಬಡವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ನಮ್ಮ ರಾಜಕಾರಣಿಗಳು ಎಷ್ಟು ಅವಿವೇಕದಿಂದ ವತರ್ಿಸಬಲ್ಲರು ಎಂಬುದಕ್ಕೆ ತಿಂಗಳಿಗೆ ನಾಲ್ಕು ನೂರು ಸಂಪಾದಿಸುವ ದಂಪತಿಗಳು ರಾಜಧಾನಿ ದೆಹಲಿಯಲ್ಲಿ ಬದುಕಬಹುದೆಂದು ದೆಹಲಿಯ ಮುಖ್ಯ ಮಂತ್ರಿ ಶೀಲಾದೀಕ್ಷಿತ್ ಹೇಳಿಕೆ ನೀಡಿದ್ದರು. ಭಾರತದ ಬಡತನದ ಮಾನದಂಡವನ್ನು ನಿರ್ಧರಿಸುವ ಯೋಜನಾ ಆಯೋಗ, ಕಳೆದ ನವಂಬರ್ ತಿಂಗಳಿನಲ್ಲಿ ತನ್ನ ಕಛೇರಿಯ ಎರಡು ಶೌಚಾಲಯಗಳ ನಿಮರ್ಾಣಕ್ಕೆ ಖಚರ್ು ಮಾಡಿದ ಹಣ, ಬರೋಬ್ಬರಿ 14 ಲಕ್ಷ ರೂಪಾಯಿ. ಇದೇ ಯೋಜನಾ ಆಯೋಗ, ಒಂದು ಶೌಚಾಲಯದ ವೆಚ್ಚ ಕ್ಕೆ 20 ಸಾವಿರ ರುಪಾಯಿಗಳನ್ನು ನಿಗದಿ ಮಾಡಿದೆ. ಇದನ್ನು ವ್ಯಂಗ್ಯ ಎಂದು ಕರೆಯಬೇಕೊ? ಅಥವಾ ದುರಂತವೆನ್ನಬೇಕೊ? ತಿಳಿಯದು.
ಈ ಹಿನ್ನಲೆಯಲ್ಲಿ ಚುನಾವಣಾ ಪ್ರಣಾಳಿಕೆಗಳು, ಭರವಸೆಗಳಂತೆ ಕಾಣದೆ, ಕೇವಲ ಆಮೀಷಗಳಂತೆ ಕಾಣುತ್ತವೆ. ವಿಶ್ವ ಬ್ಯಾಂಕ್ ಸಮೀಕ್ಷೆ ಪ್ರಕಾರ, 2026 ರ ವೇಳೆಗೆ ಭಾರತದ ಜನಸಂಖ್ಯೆ 150 ಕೋಟಿಗೆ ಏರಲಿದ್ದು, ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿದೆ.  ಭಾರತದಲ್ಲಿ ಶೇಕಡ 46 ಮಂದಿಗೆ ಇಂದಿಗೂ ಶೌಚಾಲಯ ಇಲ್ಲ, ಇಂತಹ ಸ್ಥಿತಿಯಲ್ಲಿ ನಮ್ಮ ರಾಜಕೀಯ ಪಕ್ಷಗಳಿಂದ ಅಥವಾ ಸಕರ್ಾರಗಳಿಂದ ಉದ್ಯೋಗ ಸೃಷ್ಟಿ ಸಾಧ್ಯವೆ? ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ದೂರರದೃಷ್ಟಿಯ ಯೋಜನೆಗಳನ್ನು ರೂಪಿಸಿದಂತೆ ಕಾಣುವುದಿಲ್ಲ.
ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಚುನಾವಣೆ ಎಂದರೆ, ಹಣ, ಹೆಂಡ, ಮಾಂಸ, ಮತ್ತು ಆಮೀಷ ಎಂಬುದು ಜಗಜ್ಜಾಹಿರಾಗಿದೆ. ಚುನಾವಣೆ ಆಯೋಗದ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಗಾಳಿಗೆ ತೂರುವ ಕಲೆಯನ್ನು ನಮ್ಮ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿ ನಮ್ಮ ಮಹಿಳಾ ಸ್ವಸಹಾಯ ಸಂಘಗಳ ದುರ್ಬಳಕೆಯನ್ನು ಗಮನಿಸಿಬಹುದು.
ನಮ್ಮ ನೆರೆಯ ಬಂಗ್ಲಾ ದೇಶದಲ್ಲಿ 1970 ದಶಕದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಪರಿಕಲ್ಪನೆಯನ್ನು ಕೊಟ್ಟ ಡಾ. ಮಹಮ್ಮದ್ ಯೂನಸ್ ರವರ ಕನಸಿನ ಕೂಸಾದ ಮಹಿಳೆಯರ ಸ್ವ ಸಹಾಯ ಗುಂಪು ಯೋಜನೆ ಭಾರತದಲ್ಲಿ ಮತಬೇಟೆಯ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಿದೆ. ವಿಶ್ವ ಬ್ಯಾಂಕ್ ಸೇರಿದಂತೆ, ಜಗತ್ತಿನ ಎಂಬತ್ತೊಂಬತ್ತು ರಾಷ್ಟ್ರಗಳು ಈ ಯೋಜನೆಯನ್ನು ಅಳವಡಿಸಿಕೊಂಡು, ಬಡತನದ ನೇರ ಪರಿಣಾಮದ ಮೊದಲ ಬಲಿ ಪಶುವಾಗುವ ಮಹಿಳೆಯನ್ನು ಹಸಿವು ಮತ್ತು ಬಡತನದ ಕೂಪದಿಂದ ಮೇಲೆತ್ತಲು ಶ್ರಮಿಸುತ್ತಿವೆ. ಆದರೆ, ಭಾರತದಲ್ಲಿ ಚುನಾವಣಾ ಪ್ರಚಾರಕ್ಕಾಗಿ, ಮತಕ್ಕಾಗಿ ಸ್ರೀ ಸಹಾಯ ಗುಂಪುಗಳನ್ನು ಯಾವ ವಿವೇಚನೆಯಿಲ್ಲದೆ, ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅನಕ್ಷರಸ್ತ ಮುಗ್ಧ ಮಹಿಳೆಯರು ಈ ದಿನ ಐನೂರು ರೂಪಾಯಿ ಕಾಣಿಕೆಗಾಗಿ ಊರಿಗೆ ಬರುವ ರಾಜಕಾರಣಿಗಳಿಗೆ ಆರತಿ ಬೆಳಗುತ್ತಿದ್ದಾರೆ. ಮನೆಗೆ ಬಂದ ಮಗನಿಗೆ, ಅಥವಾ ಸೊಸೆಗೆ ಆರತಿ ಎತ್ತುತ್ತಿದ್ದ ಸಾಂಸ್ಕೃತಿಕ ಸಂಪ್ರದಾಯ ಈಗ ಹಣದಾಸೆಗೆ ಮುಖಹೇಡಿ ಜನಪ್ರತಿನಿಧಿಗಳಿಗೆ ಮೀಸಲಾಗಿದೆ. ಇದೊಂದು ರಾಜಕೀಯ ವ್ಯವಸ್ಥೆಯ ವ್ಯಭಿಚಾರವಲ್ಲದೆ ಮತ್ತೇನು?
ಭಾರತದಲ್ಲಿ ಪ್ರತಿ ಮುವತ್ತು ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಈವರೆಗೆ ಒಟ್ಟು 2 ಲಕ್ಷದ 56 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಗತಿ ಈ ನಾಡಿನ ದುರಂತ ಎಂದು ಪರಿಭಾವಿಸಲಾಗದ ರಾಜಕೀಯ ಪಕ್ಷಗಳು, ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ  ಪ್ರಣಾಣಿಕೆಗಳನ್ನು ಪ್ರಕಟಿಸಿದರೆ, ನಾವುಗಳು ಅವುಗಳನ್ನು  ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆಯಾ?

ಸಾತ್ವಿಕ ರಾಜಕಾರಣಿಯಯೊಬ್ಬನ ಸಿಟ್ಟು ಮತ್ತು ಪತನ

– ಡಾ. ಎನ್. ಜಗದಿಶ್ ಕೊಪ್ಪ

ಪ್ರಸಕ್ತ ರಾಜಕಾರಣ ಮತ್ತು ಚುನಾವಣೆಯ ಕುರಿತಂತೆ ಏನನ್ನೂ ಬರೆಯಬಾರದು ಮತ್ತು ಪ್ರತಿಕ್ರಿಯಸಬಾರದು ಎಂದು ನಾನೇ ಸ್ವತಃ ಹಾಕಿಕೊಂಡಿದ್ದ ಲಕ್ಷ್ಮಣ ರೇಖೆಯನ್ನು ದಾಟುತ್ತಿದ್ದೇನೆ. ಇದಕ್ಕೆ ಕಾರಣವಾದ ವಾದ ಅಂಶತವೆಂದರೆ, ನನ್ನ ಜಿಲ್ಲೆಯಾದ ಮಂಡ್ಯದ ಕೆ.ಆರ್, ಪೇಟೆ ಕೃಷ್ಣ ಅವರ ರಾಜಕೀಯ ನಿಲುವು ಮತ್ತು ಬಂಡಾಯ, ಪರೋಕ್ಷವಾಗಿ ಈ ಲೇಖನಕ್ಕೆ ಪ್ರೇರಣೆಯಾಗಿದೆ.

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಕೆ.ವಿ.ಶಂಕರಗೌಡ, ಜಿ.ಮಾದೇಗೌಡ ಇವರ ನಂತರ ನೈತಿಕತೆಯ ನೆಲೆಗಟ್ಟಿನಲ್ಲಿ ಪ್ರಾಮಾಣಿಕವಾದ ರಾಜಕೀಯ ಜೀವನ  ಮಾಡಿದವರಲ್ಲಿ  ಕೃಷ್ಣ ಕೂಡ ಒಬ್ಬರು. ವೃತ್ತಿಯಲ್ಲಿ ವಕೀಲರಾಗಿದ್ದ ಕೆ.ಆರ್. ಪೇಟೆ ಕೃಷ್ಣ, ತಮ್ಮ ಸುದೀರ್ಘ ಮೂರೂವರೆ ದಶಕದ ರಾಜಕಾರಣದಲ್ಲಿ ಎರಡು ಬಾರಿ ಲೋಕಸಭಾ ಚುನಾವಣೆ ಮತ್ತು ಆರು ವಿಧಾನಸಭಾ ಚುನಾವಣೆ ಎದುರಿಸಿದವರು. ಇದರಲ್ಲಿ ಒಂದು ಬಾರಿ ಸಂಸತ್ ಸದಸ್ಯರಾಗಿ ಮತ್ತು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರು. ಒಮ್ಮೆ ವಿಧಾನ ಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದವರು.

ಇಂತಹ ಸುಧೀರ್ಘ ಅನುಭವವುಳ್ಳ ಕೃಷ್ಣರವರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷ  ಟಿಕೇಟ್ ನಿರಾಕರಿಸಿದೆ. ಇದಕ್ಕೆ ಪ್ರಮುಖ ಕಾರಣ ಅವರ ಬಳಿ ಚುನಾವಣೆ ಎದುರಿಸಲು ಹಣವಿಲ್ಲ ಎಂಬುದು ಅವರ ಅನರ್ಹತೆಗೆ ಕಾರಣವಾಗಿದೆ. ಕೃಷ್ಣರವರ ಪಾಮ್ರಾಣಿಕವಾದ ಮತ್ತು  ಸರಳ ಬದುಕನ್ನು ಇಟ್ಟುಕೊಂಡು ಇಂದಿನ ರಾಜಕೀಯ ವಿದ್ಯಾಮಾನವನ್ನು ಗಮನಿಸಿದರೆ, ಒಂದರ್ಥದಲ್ಲಿ ಇಂತಹವರು ವರ್ತಮಾನದ ರಾಜಕಾರಣಕ್ಕೆ ಅಸಮರ್ಥರು ನಿಜ.

ಏಕೆಂದರೆ,  ಕೃಷ್ಣ ಲೋಕ ಸಭಾ ಸದಸ್ಯರಾಗಿದ್ದ  ಅವಧಿಯಲ್ಲಿ  ಸಂಸತ್ ಅಧಿವೇಶನ ಇಲ್ಲದ ದಿನಗಳಲ್ಲಿ  ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿದ್ದ ತಮ್ಮ ಕೊಠಡಿಯಲ್ಲಿ ಕುಳಿತು ಜನಸಾಮಾನ್ಯರ ಕಷ್ಟ ಸುಖಗಳನ್ನು ವಿಚಾರಿಸುತ್ತಿದ್ದರು. ಮಧ್ಯಾಹ್ನದ ವೇಳೆ ಯಾರಾದರೂ ಗೆಳೆಯರು ಕರೆದರೆ ಅವರ ಮನೆಗಳಿಗೆ ಹೋಗಿ ಊಟ ಮಾಡಿ ಬರುತ್ತಿದ್ದರು.  ಅವರ ಪತ್ನಿ ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಕಾರಣ ಪ್ರತಿ ದಿನ ಮೈಸೂರಿನಿಂದ ಮಂಡ್ಯ ನಗರಕ್ಕೆ ಸರ್ಕಾರಿ ಬK.r.pete.ಸ್ ನಲ್ಲಿ ಬಂದು ಹೋಗುತ್ತಿದ್ದರು. ಒಬ್ಬ ಸಂಸತ್ ಸದಸ್ಯ ಹೀಗೂ ಇರಬಹುದಾ? ಬದುಕಬಹುದಾ? ಎಂಬ ನನ್ನ ಜಿಜ್ಞಾಸೆಗೆ ಕಾರಣವಾದವರು ಕೃಷ್ಣ.

ಕಳೆದ ಐದು ವರ್ಷದ ವರೆಗೆ ನನ್ನ ಕುಟುಂಬ ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ವಾಸವಾಗಿದ್ದರಿಂದ ಅವರ ಬದುಕನ್ನು ಮತ್ತು ಕಾರ್ಯಚಟುವಟಿಕೆಯನ್ನು ತೀರಾ ಹತ್ತಿರದಿಂದ ನೋಡಲು ಸಾಧ್ಯವಾಯಿತು. ನನ್ನ ಮನೆಯ ಗೋಡೆಯ ಆಚೆಗಿನ ಬದಿಗಿನ ಮನೆಯಲ್ಲಿ ನನ್ನ ಸೋದರತ್ತೆಯ ಮಗ, ಬಾಲ್ಯದ ಸಹಪಾಠಿ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯನಾಗಿದ್ದ ಕೆ.ಟಿ.ಶ್ರೀಕಂಠೇಗೌಡ ವಾಸಿಸುತ್ತಿದ್ದರಿಂದ ಸಾಮಾನ್ಯವಾಗಿ ಮಧ್ಯಾಹ್ನದ ವೇಳೆಯಲ್ಲಿ ಊಟಕ್ಕೆ ಕಾಲ್ನಡಿಗೆಯಲ್ಲಿ ಅವನ ಮನೆಗೆ ಬರುತ್ತಿದ್ದರು.

ಇದೇ ಕೃಷ್ಣ ಕನರ್ಾಟಕ ವಿಧಾನಸಬೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳಲ್ಲಿ ತಮ್ಮ ಕುಟುಂಬ ಮೈಸೂರಿನಲ್ಲಿ ವಾಸವಾಗಿದ್ದ ಕಾರಣ, ಸ್ಪೀಕರ್ಗೆ ಮೀಸಲಿದ್ದ ಬಂಗಲೆಯನ್ನು ನಿರಾಕರಿಸಿ ಸಾಮಾನ್ಯ ಶಾಸಕನಂತೆ ಶಾಸಕರಭವನದ ಕೊಠಡಿಯಲ್ಲಿ ವಾಸವಾಗಿದ್ದರು. ಜನ ಸಾಮಾನರ್ಯ ಕಷ್ಟ ಸುಖಗಳಿಗೆ ಭಾಗಿಯಾಗುತ್ತಾ, ಎಂದೂ ಎಂಜಲು ಕಾಸಿಗೆ ಕೈಯೊಡ್ಡದೆ ಇವೋತ್ತಿಗೂ ಬಸ್ಸುಗಳಲ್ಲಿ ಓಡಾಡುವ ಕೃಷ್ಣರವರಿಗೆ ಚುನಾವಣೆ ಎದುರಿಸಲು ಹಣವಿಲ್ಲ ಎಂಬ ಏಕೈಕ ಕಾರಣಕ್ಕೆ ಕೆ.ಆರ್ ಪೇಟೆ ಕ್ಷೇತ್ರದಿಂದ ಜಾತ್ಯಾತಿತ ಜನತಾದಳ ಟಿಕೇಟ ನಿರಾಕರಿಸಲಾಗಿದೆ. ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಅಥವಾ ಜೀರ್ಣಿಸಿಕೊಳ್ಳಬೇಕು ತಿಳಿಯುತ್ತಿಲ್ಲ. ಒಬ್ಬ ಸಾಮಾನ್ಯ ಗ್ರಾಮ ಪಂಚಾಯಿತಿ ಸದಸ್ಯ ಈ ದಿನ ಕಾರಿನಲ್ಲಿ ಓಡಾಡುವಾಗ, ಕೃಷ್ಣರವರು ಒಂದರ್ಥದಲ್ಲಿ ವರ್ತಮಾನದ ರಾಜಕೀಯಕ್ಕೆ ಖಂಡಿತಾ ಅಸಮರ್ಥರು ಎಂದು ಸಮಾಧಾನಪಟ್ಟುಕೊಳ್ಳಬೇಕೆ? ತಿಳಿಯದು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೃಷ್ಣ, ಇಂದಿನ ಹಣ ಹೆಂಡದ ರಾಜಕೀಯದ ಹುಚ್ಚು ಹೊಳೆಯಲ್ಲಿ ಈಜಿ ಖಂಡಿತಾ ದಡ ಸೇರಲಾರರು. ಆದರೆ, ಅವರೊಳಗಿನ ಸಾತ್ವಿಕ ಸಿಟ್ಟನ್ನು ಮಾತ್ರ ನಾನು ಗೌರವಿಸದೆ ಇರಲಾರೆ.

ಕೊನೆಯ ಮಾತು- ಟಿಕೇಟ್ ನಿರಾಕರಿಸಿದ ಬಗ್ಗೆ ನಾನು ಜೆ.ಡಿ.ಎಸ್. ಪಕ್ಷದ ನಾಯಕರನ್ನು ವಿಚಾರಿಸಿದಾಗ, ಎಂಟು ಚುನಾವಣೆಯನ್ನು ಎದುರಿಸಿ, ಎಪ್ಪತ್ತು ವರ್ಷವಾದ ನಂತರವೂ ಕೃಷ್ಣರವರಿಗೆ  ಮತ್ತೇ ಟಿಕೇಟ್ ನೀಡಬೇಕೆ? ಎಂದು ಅವರು ಪ್ರಶ್ನಿಸಿದಾಗ ಈ ಪ್ರಶ್ನೆಗೂ ನನ್ನಲ್ಲಿ ಉತ್ತರವಿರಲಿಲ್ಲ.

ಕನ್ನಡಕ್ಕೆ ಬಂದ ರಾಮ್ ಗೋಪಾಲ್ ವರ್ಮ

– ಡಾ. ಎನ್. ಜಗದಿಶ್ ಕೊಪ್ಪ

ಇತ್ತೀಚೆಗಿನ ವರ್ಷಗಳ ಭಾರತೀಯ ಚಲನ ಚಿತ್ರರಂಗ ಜಗತ್ತಿನಲ್ಲಿ ರಾಮ್ ಗೋಪಾಲ್ ವರ್ಮ ಎಂಬ ಹೆಸರು ಸದಾ ಸುದ್ದಿಯಲ್ಲಿರುತ್ತದೆ. ತೆಲಗು ಚಿತ್ರರಂಗದ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟು, ನಂತರ ಬಾಲಿವುಡ್ ಚಿತ್ರ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಮ ಗೋಪಾಲ್ ವರ್ಮ ತನ್ನ ಪ್ರತಿಭೆಯಿಂದಾಗಿ ಖ್ಯಾತಿ, ಕುಖ್ಯಾತಿ ಎರಡನ್ನೂ ಒಟ್ಟಿಗೆ ಗಳಿಸಿ, ದಕ್ಕಿಸಿಕೊಂಡ ಅಪರೂಪದ ಪ್ರತಿಭಾವಂತ.

ಇದೀಗ ತನ್ನ ಮಾತೃಬಾಷೆಯಾದ ತೆಲಗು ಭಾಷೆಯಲ್ಲಿ “ನಾ ಇಷ್ಟಂ” ಹೆಸರಿನಲ್ಲಿ ತನ್ನ ಆತ್ಮ ಕಥೆಯನ್ನು ಬರೆದಿರುವ ರಾಮ್ ಗೋಪಾಲ್ ತನ್ನ ಬಿಚ್ಚು ಮನಸ್ಸಿನ ವ್ಯಕ್ತಿತ್ವದಿಂದಾಗಿ ಮತ್ತಷ್ಟು ಇಷ್ಟವಾಗುತ್ತಾನೆ. ಕನ್ನಡದ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರಾಗಿರುವ ಸೃಜನ್ ಈ ಕೃತಿಯನ್ನು “ನನ್ನಿಷ್ಟ” srujan-ramgopalvarmaಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

ತೆಲಗು ಭಾಷೆಯಿಂದ ಕನ್ನಡಕ್ಕೆ ಅನುವಾದವಾಗಿರುವ ಈ ಕೃತಿ ಅನುವಾದದ ಕೃತಿ ಎಂದು ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಸೃಜನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಹುಮುಖ ಪ್ರತಿಭೆಯ ಸೃಜನ್ ಮೂಲತಃ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ತಮ್ಮ ನಿಜ ನಾಮಧೇಯ ಶ್ರೀಕಾಂತ್ ಹೆಸರಿನಲ್ಲಿ ದಕ್ಷಿಣ ಭಾರತದ ವರ್ಣಚಿತ್ರ ಕಲಾವಿದರ ಬಗ್ಗೆ ಪರಿಚಯ ಲೇಖನಗಳನ್ನು ಬರೆದು ಲೇಖಕರಾಗಿಯೂ ಕೂಡ ಪರಿಚಿತರಾಗಿದ್ದರು. ಇದೀಗ ರಾಮ್ ಗೊಪಾಲ್ ವರ್ಮನ ಅತ್ಮ ಕಥನವನ್ನು ಕನ್ನಡಕ್ಕೆ ತರುವುದರ ಮೂಲಕ ಶ್ರೇಷ್ಠ ಅನುವಾದಕರಾಗಿ ಕೂಡ ಹೊರಹೊಮ್ಮಿದ್ದಾರೆ.

ರಾಮ್ ಗೋಪಾಲ್ ವರ್ಮ 1980 ರ ದಶಕದಲ್ಲಿ ಚಿತ್ರರಂಗದ ಯಾವುದೇ ಅನುಭವ ಇಲ್ಲದೆ, “ಶಿವ” ಎಂಬ ಚಿತ್ರವನ್ನು ನಿರ್ದೇಶನ ಮಾಡಿ, ದಾಖಲೆ ನಿರ್ಮಿಸಿ, ತೆಲಗು ಚಿತ್ರರಂಗಕ್ಕೆ ಹೊಸ ಭಾಷ್ಯವನ್ನು ಬರೆದ ಪ್ರತಿಭಾವಂತ. ನನಗಿನ್ನೂ ನೆನಪಿದೆ. 1989 ರ ನವಂಬರ್ ತಿಂಗಳಿನಲ್ಲಿ ಬೆಂಗಳೂರಿನ ಕಪಾಲಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದ ಶಿವ ಚಿತ್ರವನ್ನು ನೋಡಿ ನಾನು ಬೆರಗಾಗಿದ್ದೆ. ನಾಗಾರ್ಜುನ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ತೆಲಗು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿತ್ತು. ತೆಲಗು ಚಿತ್ರರಂಗದ ನಾಯಕರಾದ ಎನ್.ಟಿ.ಆರ್, ಎ.ನಾಗೇಶ್ವರರಾವ್, ಶೋಬನ್ ಬಾಬು, ಕೃಷ್ಣ ಮುಂತಾದ ನಟರ, ಏಕತಾನತೆಯಿಂದ ಕೂಡಿದ್ದ ಸಾಮಾಜಿಕ ಚಿತ್ರಗಳನ್ನು ನೋಡಿ ಬೇಸತ್ತಿದ್ದ ಜನಕ್ಕೆ, ವಿಜಯವಾಡ ಕಾಲೇಜಿನ ವಿದ್ಯಾರ್ಥಿಯೊಬ್ಬ ಪರಿಸ್ಥಿತಿಯ ಕೈ ಕೂಸಾಗಿ ರೌಡಿಯಾಗಿ ಬದಲಾಗುವ ತಾಜಾ ಅನುಭವವನ್ನು ವರ್ಮಾನ ಸಿನಿಮಾದಲ್ಲಿ ನೋಡಿ ಥ್ರಿಲ್ಲಾಗಿದ್ದರು.

ಅನಿರೀಕ್ಷಿತವಾಗಿ ದೊರೆತ ಯಶಸ್ಸನ್ನು ಅರ್ಥಪೂರ್ಣವಾಗಿ ಬಳಸಿಕೊಂಡ ರಾಮ್ ಗೋಪಾಲ್ ವರ್ಮ, ನಂತರ “ಕ್ಷಣ ಕ್ಷಣಂ” ಎಂಬ ಇನ್ನೊಂದು ಥ್ರಿಲ್ಲರ್ ಸಿನಿಮಾ ತೆಗೆದು ಆಂಧ್ರದಲ್ಲಿ ಯುವ ಪ್ರತಿಭಾವಂತ ನಿರ್ದೇಶಕ ಎಂದು ಹೆಸರುವಾಸಿಯಾದ.

ಈ ಎರಡು ಚಿತ್ರಗಳ ಯಶಸ್ವಿನಿಂದಾಗಿ ಮುಂಬೈನ ಬಾಲಿವುಡ್ ಜಗತ್ತಿಗೆ ಜಿಗಿದ ರಾಮ್ ಗೋಪಾಲ್ , ಅಲ್ಲಿಯೂ ಕೂಡ ರಂಗೀಲಾ ಮತ್ತು ಸತ್ಯ ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ಪ್ರತಿಬೆಯ ಮೂಲಕ ಗಮನ ಸೆಳೆದ. ಮುಂಬೈನ ಕೊಳಚೆಗೇರಿಯ ಯುವಕರು ಭೂಗತ ಜಗತ್ತಿಗೆ ಬಲಿಯಾಗು ಕಥೆಯುಳ್ಳ ಸತ್ಯ ಸಿನಿಮಾ ಇಡೀ ಭಾರತದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಅವನೊಳಗಿದ್ದ ಮಹಾತ್ವಾಂಕ್ಷೆಯ ಹಪಾ ಹಪಿ ಈದಿನ ರಾಮ್ ಗೋಪಾಲ್ ವರ್ಮನನ್ನು ಕೆಟ್ಟ ನಿರ್ದೇಶಕ ಎಂಬ ಸ್ಥಾನಕ್ಕೆ ದೂಡಿದೆ. ಭಾರತ ಚಿತ್ರ ರಂಗದ ಪ್ರತಿಭಾವಂತ ನಿದೇಶಕನಾಗುವ ಎಲ್ಲಾ ಲಕ್ಷಣಗಳಿದ್ದ ವರ್ಮ, ವ್ಯವಹಾರದ ಬೆನ್ನು ಹತ್ತಿದ ಫಲವಾಗಿ ಸಿನಿಮಾ ಎಂದರೇ ಅದೊಂದು ದೃಶ್ಯಕಾವ್ಯ ಎಂಬುದನ್ನು ಮರೆತು, ಬೀದಿ ಬದಿಯಲ್ಲಿ ಆ ಕ್ಷಣಕ್ಕೆ ಕಡಲೆ ಹಿಟ್ಟು ಕಲೆಸಿ ಮಾಡುವ ಬೊಂಡ ಎಂಬಂತೆ ತಿಂಗಳಿಗೊಂದು ಸಿನಿಮಾ ತಯಾರಿಸುತ್ತಿದ್ದಾನೆ. ಈ ಕಾರಣಕ್ಕಾಗಿ ತನ್ನ ನಿರ್ಮಾಣ ಸಮಸ್ಥೆಯ ಹೆಸರನ್ನು ಸಿನಿಮಾ ಪ್ಯಾಕ್ಟರಿ ಎಂದು ಕರೆದುಕೊಂಡಿದ್ದಾನೆ.

ವರ್ಮನ ಕುರಿತಂತೆ ನಮ್ಮ ಅಸಮಾಧಾನಗಳು ಏನೇ ಇರಲಿ, ಈವರೆಗೆ ದಕ್ಷಿಣ ಭಾರತದ ಸುಂದರ ಚೆಲುವೆಯರನ್ನು ಮಾತ್ರ (ಪದ್ಮಿನಿ, ವೈಜಯಂತಿಮಾಲಾ, ಹೇಮಾಮಾಲಿನಿ, ಶ್ರೀದೇವಿ ಇತ್ಯಾದಿ) ನಾಯಕಿರಾಗಿ ಬರಮಾಡಿಕೊಳ್ಳುತ್ತಿದ್ದ ಹಿಂದಿ ಚಿತ್ರರಂಗ, ದಕ್ಷಿಣ ಭಾರತದ ನಾಯಕರನ್ನು ಮತ್ತು ತಂತ್ರಜ್ಞರನ್ನು ಮುಕ್ತವಾಗಿ ಒಪ್ಪಿಕೊಂಡಿದ್ದು ಕಡಿಮೆ. ಇದರಲ್ಲಿ ವಿ.ಶಾಂತರಾಂ ಮತ್ತು ಗುರುದತ್‌ರವರನ್ನು ಮಾತ್ರ ಹೊರತು ಪಡಿಸಬಹುದು. ನಂತರ ಬಾಲಿವುಡ್ ನಲ್ಲಿ ವರ್ಮಾ ಉಂಟು ಮಾಡಿದ ಸಂಚಲನವನ್ನು ಮರೆಯಲಾಗದು.

ನನ್ನಿಷ್ಟ ಎನ್ನುವ ಆತ್ಮ ಕಥನದಲ್ಲಿ ಮುಕ್ತವಾಗಿ ಎಲ್ಲವನ್ನೂ ತೆರೆದುಕೊಂಡಿರುವ ರಾಮಗೋಪಾಲ್ ವರ್ಮ, ತಾನು ಸಿನಿಮಾಗಳಿಗಾಗಿ ಯಾವ ಯಾವ ದೃಶ್ಯವನ್ನು, ಮತ್ತು ಪರಿಕಲ್ಪನೆಯನ್ನು ಎಲ್ಲೆಲ್ಲಿ ಕದ್ದೆ ಎಂಬುದನ್ನು ಹೇಳಿಕೊಳ್ಳುವುದರ ಮೂಲಕ ಮತ್ತಷ್ಟು ಆತ್ಮೀಯನಾಗುತ್ತಾನೆ. ಯಾವುದೇ ಕಪಟವಿಲ್ಲದೆ ತನ್ನ ಬದುಕು, ಭಗ್ನಪ್ರೇಮ ಮತ್ತು ತಂದೆ ತಾಯಿ ಮೇಲಿನ ಪ್ರೀತಿ ಹಾಗೂ ತೆಲಗು ಸಿನಿಮಾ ರಂಗದ ಒಡನಾಟ ಎಲ್ಲವನ್ನೂ ಮುಕ್ತವಾಗಿ ತೆರೆದಿಟ್ಟಿದ್ದಾನೆ.

ಸೃಜನ್ ಅನುವಾದವಂತೂ ಓದನ್ನು ಮತ್ತಷ್ಟು ಅಪ್ತವಾಗುವಂತೆ ಮಾಡಿದೆ. ಪಲ್ಲವ ವೆಂಕಟೇಶ್ ಇವರ ಪುಸ್ತಕದ ಮೇಲಿನ ಪ್ರೀತಿ, ಈ ಕೃತಿಯ ಚಂದನೆಯ ಮುದ್ರಣದಿಂದಾಗಿ ಮತ್ತೊಮ್ಮೆ ಸಾಬೀತಾಗಿದೆ. ರಾಮ್ ಗೋಪಾಲ್ ವರ್ಮನನ್ನು ಕನ್ನಡಕ್ಕೆ ಪ್ರೀತಿಯಿಂದ ಪರಿಚಯಿಸಿರುವ ಸೃಜನ್ ಮತ್ತು ಪಲ್ಲವ ವೆಂಕಟೇಶ್ ಇವರಿಗೆ ಅಭಿನಂದನೆಗಳು.

ಬದಲಾಗುತ್ತಿರುವ ಭ್ರಷ್ಟಾಚಾರದ ವಾಖ್ಯಾನಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಜಾಗತೀಕರಣದ ವ್ಯವಸ್ಥೆಯನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ ಅಟ್ಟಕ್ಕೇರಿಸಿದವರ ಮುಖವಾಡಗಳು ಇತ್ತೀಚೆಗೆ ಒಂದೊಂದಾಗಿ ಕಳಚಿ ಬೀಳುತ್ತಿವೆ. ಭಾರತದಲ್ಲಿ ಅನಾವರಣಗೊಳ್ಳತ್ತಿರುವ ಭ್ರಷ್ಟಾಚಾರದ ಪ್ರಕರಣಗಳು ನಾವು ಈವರೆಗೆ ಕಾಣದೆ ಉಳಿದಿದ್ದ ಜಾಗತೀಕರಣದ ಮತ್ತೊಂದು ಕರಾಳ ಮುಖವನ್ನು ನಮ್ಮೆದುರು ಪ್ರದರ್ಶನಕ್ಕಿಟ್ಟಿವೆ. ಇವುಗಳ ಜೊತೆಯಲ್ಲಿಯೆ ಭ್ರಷ್ಟಾಚಾರ ಕುರಿತಂತೆ ನಮ್ಮ ವಾಖ್ಯಾನಗಳು ಕೂಡ ಬದಲಾಗುತ್ತಿವೆ. ಈ ವಾಖ್ಯಾನ್ಯಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಬೇಕಾದ ಸಾಂಸ್ಕೃತಿಕ ಜಗತ್ತು ಗರಬಡಿದಂತೆ ನಿಸ್ತೇಜನಗೊಂಡಿದೆ. ಇದರ ಹಲವು ವಾರಸುದಾರರು, ಭ್ರಷ್ಟರಾಜಕಾರಣಿಗಳ ಮತ್ತು ಅಧಿಕಾರಿಗಳ ಆಸ್ಥಾನದಲ್ಲಿ ವಿದ್ವಾಂಸರಾಗಿ ಪ್ರತಿಷ್ಟಾಪನೆಗೊಂಡು, ವಿದೂಷಕರಾಗಿ ನಾಡಿನ ಜನಕ್ಕೆ ಮನರಂಜನೆ ಒದಗಿಸುತ್ತಿದ್ದಾರೆ.

ಇತ್ತೀಚೆಗೆ ಬೆಳಕಿಗೆ ಬಂದ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಭಾರತದ ವಾಯುಪಡೆಯ helicopterಮಾಜಿ ಮುಖ್ಯಸ್ಥನೊಬ್ಬನ ಹೆಸರು ನೇರವಾಗಿ ಪ್ರಸ್ತಾಪವಾಗಿದೆ. ಇಟಲಿ ಮೂಲದ ವೆಸ್ಟ್ ಲ್ಯಾಂಡ್ ಕಂಪನಿಯ ಈ ವ್ಯವಹಾರ ನಿಜಕ್ಕೂ ಬೆಚ್ಚಿ ಬೀಳಿಸುವಂತಹದ್ದು. ಈಗಾಗಲೆ ತನಿಖೆಯಾಗಿ ಮಣ್ಣು ಸೇರಿದ ಬೋಫೋರ್ಸ್ ಪಿರಂಗಿ ಹಗರಣದಲ್ಲಿ ಕೂಡ ಇದೇ ಇಟಲಿ ಮೂಲದ ಕ್ವಟ್ರಾಚಿ ಎಂಬಾತ ಸೂತ್ರಧಾರನಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾಗದು.

ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನೀಡಲಾದ ಲಂಚವನ್ನು ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೋನಿ “ಇದೊಂದು ಉದ್ಯಮದ ಭಾಗ,” ಎಂದು ಬಣ್ಣಿಸುವುದರ ಮೂಲಕ ಜಾಗತೀಕರಣದ ವಾಹಕಗಳಾದ ಬಹುರಾಷ್ಟ್ರೀಯ ಕಂಪನಿಗಳ ಕರಾಳ ಮುಖವನ್ನು ಅನಾವರಣಗೊಳಿಸಿ, ಭ್ರಷ್ಟಾಚಾರಕ್ಕೆ ಹೊಸವಾಖ್ಯಾನ ನೀಡಿದ್ದಾರೆ.
ಚಿಲ್ಲರೆ ಮಾರುಕಟ್ಟೆಯ ದೈತ್ಯ ಕಂಪನಿಯಾದ ವಾಲ್‌ಮಾರ್ಟ್ ಈ ಭ್ರಷ್ಟಾಚಾರವನ್ನು “ಲಾಬಿ” ಎಂದು ಹೆಸರಿಸಿದೆ. ಅಮೇರಿಕಾ ಮೂಲದ ಈ ಬಹುರಾಷ್ಟ್ರೀಯ ಕಂಪನಿ ಅಲ್ಲಿನ ಸಂಸತ್ತಿಗೆ ಸಲ್ಲಿಸಿರುವ ವಿವರಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಒಳಗೊಂಡಂತೆ ಹಲವು ರಾಷ್ಟ್ರಗಳಲ್ಲಿ ಲಂಚಕ್ಕಾಗಿ 25 ದಶಲಕ್ಷ ಡಾಲರ್ ಹಣ ವಿನಿಯೋಗಿಸಿರುವುದಾಗಿ ಹೇಳಿಕೊಂಡಿದೆ.Wal-Mart ಭಾರತದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೋಜು ಮಸ್ತಿಗಾಗಿ ವರ್ಷವೊಂದಕ್ಕೆ 11,500 ಡಾಲರ್ ಖರ್ಚುಮಾಡಲಾಗಿದೆ ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದೆ.

ಇಪ್ಪತ್ತೊಂದನೇ ಶತಮಾನದ ಮಹಾನ್ ಪ್ರವಾದಿಗಳಂತೆ ಮಾತನಾಡುತ್ತಿರುವ ರಾಜಕಾರಣಿಗಳು ಮತ್ತು ಕಂಪನಿಯ ವಕ್ತಾರರ ಪ್ರಕಾರ ಲಂಚವೆಂಬುದು ಉದ್ಯಮದ ಒಂದು ಭಾಗವಾದರೆ, ವೇಶ್ಯಾವೃತ್ತಿ ಕೂಡ ವೃತ್ತಿಯ ಒಂದು ಭಾಗವಾಗುತ್ತದೆ. ತಲೆಹೊಡೆಯುವುದು, ಕೊಲೆ ಮಾಡುವುದು ದರೋಡೆಕಾರನ ವೃತ್ತಿಯ ಒಂದು ಭಾಗವಾಗುತ್ತದೆ. ಹಣ, ಹೆಂಡ ಮತ್ತು ಹೆಣ್ಣು, ಈ ಮೂರು ಅಂಶಗಳು ಆಧುನಿಕ ಜಗತ್ತು ಮತ್ತು ಸಮಾಜವನ್ನು ಮಲೀನಗೊಳಿಸುತ್ತಿರುವ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜನಬಳಕೆಯ ನಡುವೆ ಇರುವ ಮಾತುಗಳಿಗೆ ಹೊಸ ಅರ್ಥವನ್ನು ಕಂಡುಕೊಳ್ಳಬೇಕಿದೆ. ಏಕೆಂದರೆ ಇತ್ತೀಚೆಗೆ ಕಡು ಭ್ರಷ್ಟಾಚಾರ ಕುರಿತು ಮಾತನಾಡುವುದು ಅಥವಾ ವ್ಯಾಖ್ಯಾನಿಸುವುದು ಕೂಡ ಸಿನಿಕತನದ ಒಂದು ಭಾಗವೇನೊ ಎಂಬಂತಾಗಿದೆ.

ಭ್ರಷ್ಟಾಚಾರದ ಹಗರಣಗಳು ಭಾರತೀಯರಿಗೆ ಹೊಸದೇನಲ್ಲ. ಅವರು ಈಗಾಗಲೇ ಅವುಗಳ ಬಗ್ಗೆ ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹಳ್ಳ ಹಿಡಿದ ಲಾಲು ಪ್ರಸಾದ್ ಅವರ ಮೇವು ಖರೀದಿ ಹಗರಣ, ಜಯಲಲಿತ, ಮಾಯಾವತಿ, ಮುಲಾಯಂಸಿಂಗ್ ಯಾದವ್ ಮತ್ತು ಯಡಿಯೂರಪ್ಪ ಇವರ ಅಕ್ರಮ ಆಸ್ತಿ ಹಗರಣ, ಬೊಫೋರ್ಸ್ ಪಿರಂಗಿ ಖರೀದಿ ಹಗರಣ, ಮೋಬೈಲ್ ತರಾಂಗಾಂತರ ಹಂಚಿಕೆ ಹಗರಣ, ಗಣಿ ವಿವಾದ, ಇತ್ತೀಚೆಗಿನ ಹೆಲಿಕಾಪ್ಟರ್ ಹಗರಣ, ಇವೆಲ್ಲವೂ ಸಮಯಕ್ಕೆ ತಕ್ಕಂತೆ ರಾಜಕೀಯ ಚದುರಂಗದಾಟದಲ್ಲಿ ಬಳಕೆಯಾಗುವ ರಾಜ, ರಾಣಿ, ಮಂತ್ರಿ, ಕುದುರೆ, ಸಿಪಾಯಿಗಳೆಂಬ ಆಟದ ಕಾಯಿಗಳು. ಇದನ್ನು ನೋಡುವ ಮತ್ತು ಫಲಿತಾಂಶಕ್ಕಾಗಿ ಕಾಯುವ ನಾವುಗಳು ಮಾತ್ರ ನಿಜವಾದ ಅರ್ಥದಲ್ಲಿ ಮೂರ್ಖರು.

ದೆಹಲಿ ಮೂಲದ ನೀರಾ ರಾಡಿಯ ಎಂಬ ಅಸಾಮಾನ್ಯರಿಗಷ್ಟೇ ಗೊತ್ತಿದ್ದ ಮಹಿಳೆ ಅಕ್ರಮ ವ್ಯವಹಾರಗಳಿಗೆ ದಲ್ಲಾಳಿಯಾಗಿದ್ದು, nira raadiaತನ್ನ ವೃತ್ತಿಯನ್ನು ಲಾಬಿ ಎಂದು ಕರೆದುಕೊಂಡಿದ್ದಾಳೆ. ದೆಹಲಿಯ ಪ್ರತಿಷ್ಟಿತರಲ್ಲಿ ಮುಖ್ಯಳಾಗಿರುವ ಈಕೆ ಈಗ ಸಾವಿರಾರು ಕೋಟಿ ರೂಪಾಯಿಗಳ ಒಡತಿ. ದೆಹಲಿ ಹೊರವಲಯದ ತೋಟದ ಮನೆಯಲ್ಲಿ ರಾಜಕಾರಣಿಗಳು, ಕಂಪನಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ನಿತ್ಯ ಪಾರ್ಟಿ ಏರ್ಪಡಿಸುವ ಇವಳನ್ನು ನಮ್ಮ ಪರಮ ಪೂಜ್ಯ ಶ್ರಿ.ಶ್ರೀ.ಶ್ರೀ. (ಇನ್ನೊಂದಷ್ಟು ಶ್ರೀಗಳನ್ನು ಸೇರಿಸಿಕೊಳ್ಳಿ) ಪೇಜಾವರ ಸ್ವಾಮಿಗಳು ತನ್ನ ಪರಮಶಿಷ್ಯೆ ಎಂದು ಘೊಷಿಸಿಕೊಂಡಿದ್ದಾರೆ. ಇವಳು ಸಂಪಾದಿಸಿದ ಪಾಪದ ಹಣವನ್ನು ಯಾವ ಆತ್ಮ ಸಾಕ್ಷಿಯೂ ಇಲ್ಲದೆ ದೇಣಿಗೆಯಾಗಿ ಸ್ವೀಕರಿಸಿದ್ದಾರೆ. ನಮ್ಮ ಯಡಿಯೂರಪ್ಪ ತಾನು ತಿಂದ ಎಂಜಲನ್ನು ನಮ್ಮ ಮಠಾಧೀಶರ ಬಾಯಿಗೆ ಒರೆಸಲಿಲ್ಲವೆ?ಅದೇ ರೀತಿ ನೀರಾ ರಾಡಿಯ ಕೂಡ ತಾನು ಬೆಳೆಯುತ್ತಿರುವ ಪಾಪದ ಫಸಲನ್ನು ಮಠಗಳಿಗೂ ಹಂಚುತ್ತಿದ್ದಾಳೆ. ದುರಂತದ ಸಂಗತಿಯೆಂದರೆ, ವರ್ತಮಾನದ ಸಮಾಜಕ್ಕೆ ಆವರಿಸಿಕೊಳ್ಳತ್ತಿರುವ ವೈಚಾರಿಕತೆಯ ಶೂನ್ಯತೆಯಿಂದಾಗಿ ಹೊಸ ರೂಪ ಪಡೆಯುತ್ತಿರುವ ಸಾಮಾಜಿಕ ಅನಿಷ್ಟಗಳಿಗೆ ನಾವೀಗ ಸಾಕ್ಷಿಯಾಗಬೇಕಾಗಿದೆ.