Category Archives: ಗದಗ – ಪೋಸ್ಕೊ ಹೋರಾಟ

ಪೋಸ್ಕೊ ಹೋರಾಟದಲ್ಲಿ ಸಾವಿರಾರು ಹೆಜ್ಜೆಗಳು

– ಹು.ಬಾ.ವಡ್ಡಟ್ಟಿ

ಕರ್ನಾಟಕ ಸರಕಾರವು ಪೋಸ್ಕೊ ಕ0ಪನಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ 2010 ರಲ್ಲಿ ಕೊನೆಯ ಭಾಗದಲ್ಲಿಯೇ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಿತ್ತು. ಈ ಪ್ರಕಟಣೆಯು ಜನ ಸಾಮಾನ್ಯರಿಗೆ ಇರಲಿ ಹಳ್ಳಿ ಗುಡಿ ಮತ್ತು ಭೊಮಿ ಕಳೆದು ಕೊಳ್ಳುಲಿರುವ ಇತರೇ ರೈತರಿಗೆ ಗೊತ್ತೆ ಇರಲಿಲ್ಲಾ . ಮು0ಡರಗಿ ತಾಲೊಕಿನ ಜ0ತ್ಲಿ-ಶಿರೊರು. ಗದಗ ತಾಲೊಕಿನ ಹರ್ಲಾಪುರ, ಲಕ್ಕು0ಡಿ ಭಾಗದಲ್ಲಿ ಎಸ್.ಆರ್.ಸ್ಟೀಲ್ ಕ0ಪನಿಗೆ 1560 ಎಕರೆ,  ಅನಿಲಘಟಕ ಸ್ಧಾಪನೆಗೆ 733 ಎಕರೆ ಭೊಮಿಯನ್ನು ವಶಪಡಿಸುವಕೊಳ್ಳುವ ಹುನ್ನಾರ ನಡೆಸಿತ್ತು.

ಈ ಭೂ ಸ್ವಾಧೀನ ಪ್ರಕ್ರಿಯೆಯ ವಿಷಯವನ್ನು ಅಷ್ಟೊ0ದು ಗಹನವಾಗಿ, ರೈತರು  ತೆಗೆದುಕೊ0ಡರಲಿಲ್ಲ. ಆದರೇ ಹಳ್ಳಿಗುಡಿಯ ಬಡ ರೈತ  ಅಲ್ಪ ಭೂಮಿಯನ್ನು ಹೊ0ದಿರುವ ಸಿದ್ದಪ್ಪ ಮುದ್ಲಾಪುರ 2011 ರ ಫೆಬ್ರುವರಿ ತಿ0ಗಳಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಡಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿಗಳಗೆ ಫೆಬ್ರುವರಿ 28 ರ0ದು ಪತ್ರದ ಮೂಲಕ ಹೇಳಿಕೆ ನೀಡಲಾಗಿತ್ತು . ಆ ಸಮಯದಲ್ಲೂ ಭೂ ಸ್ವಾಧೀನದ ಕುರಿತಾಗಿ ಚಿ0ತನೆಯನ್ನು ನಡೆಸಿರಲಿಲ್ಲ. ಹೋರಾಟ ಕಟ್ಟುವ ಕುರಿತು ಯೋಚನೆಯನ್ನೆ ಮಾಡಿರಲಲ್ಲಿ. ದಿನದಿ0ದ ದಿನಕ್ಕೆ ಮಾಧ್ಯಮದ ಮುಖಾ0ತರ ಭೂ ಸ್ವಾಧೀನ ಕುರಿತಾಗಿ ಸುದ್ದಿಗಳು ಪ್ರಕಟಣೆಗೊ0ಡಾಗ, ಜನರಿಗೆ ಪೋಸ್ಕೊ ಸ್ಟೀಲ್ ಕ0ಪನಿಯ ಬಗ್ಗೆ ತಿಳಿಯ ತೊಡಗಿತು. ಆನ0ತರವೇ 2011 ರ ಮೇ ತಿ0ಗಳ ಮೊದಲ ವಾರದಲ್ಲಿ ಭೂ ಸ್ವಾಧೀನ ವಿರೋಧ ಹೋರಾಟ ವೇದಿಕೆಯು ಅಸ್ತಿತ್ವಕ್ಕೆ  ಬ0ತು. ಈ ವೇದಿಕೆಯ ಅಡಿಯಲ್ಲಿ ಮೇ 9ರ0ದು ಶ್ರೀ ಜಗದ್ಗುರು ಡಾ. ಅನ್ನಾದಾನೀಶ್ವರ ಮಹಾಶಿವಯೋಗಿಗಳು, ಶಿವ ಕುಮಾರ ಮಹಾಸ್ವಾಮಿಗಳು, ವೈ.ಎನ್.ಗೌಡರ, ಈಶ್ವರಪ್ಪ ಹ0ಚಿನಾಳ, ಲಕ್ಷಣ ದೇಸಾಯಿಯವರ ನೇತೃತ್ವದಲ್ಲಿ ಹಳ್ಳಿಗುಡಿ ಜ0ತ್ಲಿ-ಶಿರೊರು ,ಮೇವು0ಡಿ, ಪೇಠಾಲೊರಿನ ರೈತರು ತಹಸೀದ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಮುಖ್ಯ ಮ0ತ್ರಿಯವರಿಗೆ ಮನವಿಯನ್ನು ಸಲ್ಲಿಸಿ, ಭೂ ಸ್ವಾಧೀನಕ್ಕೆ ಸ0ಬಂಧಿಸಿದ  5 ಬೇಡಿಕೆಗಳನ್ನು ಮು0ದಿಟ್ಟಿತ್ತು:

1. ಭೂ ಸ್ವಾಧೀನವನ್ನು ಪುನರ್ ಪರಿಶೀಲಿಸ ಬೇಕು.
2 ಭೂಮಿ ಕಳೆದು ಕೊ0ಡ ರೈತರ ಶೇರು ಆ ಕ0ಪನಿಯಲ್ಲಿರ ಬೇಕು .ರೈತರನ್ನು ಶೇರುದಾರನ್ನಾಗಿ ಮಾಡಬೇಕು.

3.ಭೂಮಿ ಕಳೆದುಕೊ0ಡ ಪ್ರತಿ ರೈತರ ಮನೆಯವರಿಗೊ ಉದ್ಯೋಗ ಕೊಡಬೇಕು.

4. ರಾಜ್ಯ ಸರಕಾರ ಮತ್ತು ಕೇ0ದ್ರ ಸರಕಾರಗಳು ಭೂ ಹೀನರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸಬೇಕು.

5. ಪ್ರತಿ ಎಕರೆ ಭೊಮಿಗೆ 30 ಲಕ್ಷ ರೊಪಾಯಿಗಳನ್ನು ಪರಿಹಾರ ನೀಡಬೇಕು.

ಶ್ರೀ ಜಗದ್ಗುರು ಡಾ.ಅನ್ನಾದಾನೀಶ್ವರ ಮಹಾ ಶಿವಯೋಗಿಗಳ ನೇತೃತ್ವದಲ್ಲಿ , ನ0ದಿಕೇರಿ ಮಠದ ಶಿವ ಕುಮಾರ ಸ್ವಾಮೀಜಿ, ವೈ.ಎನ್.ಗೌಡರ.ಲಕ್ಷಣ ದೇಸಾಯಿ  ಈಶ್ವರಪ್ಪ ಹ0ಚಿನಾಳರು ಮೇ 9 2011 ರ0ದು ತಹಸಿಲ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಆಗಿನ ಮುಖ್ಯ ಮ0ತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ, ಮನವಿಯನ್ನು ಅರ್ಪಿಸಲಾಯಿತು.

ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿಗೆ ಸ್ಪ0ದಿಸಲೇ ಇಲ್ಲ. ಬದಲಿಗೆ ಜೂನ್ ತಿ0ಗಳ ಕೊನೆಯ ವಾರದಲ್ಲಿ ವಿಶೇಷ ಭೊ ಸ್ವಾಧೀನಧಿಕಾರಿಗಳ ಕಛೇರಿ ಧಾರವಾಡ ಕೈಗಾರಿಕಾ ಪ್ರದೇಶಾಭಿವೃದ್ದಿ ಮ0ಡಳಿ ಯಿ0ದ ಪೊಸ್ಕೋ ಇ0ಡಿಯಾ ಪ್ರೈತರ ಮನೆ ಬಾಗಿಲುಗಳಿಗೆ ತಲುಪಿಸಿದರು. ಆಕ್ಷೇಪಗಳಿದ್ದರೆ 15 ದಿನಗಳಲ್ಲಿ ಮೌಖಿಕವಾಗಿ, ಇಲ್ಲವೇ ಲಿಖಿತ ರೂಪದಲ್ಲಿ ಸಲ್ಲಿಸಬೇಕು, ಇಲ್ಲವಾದರೆ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ವಾಧೀನ ಕ್ರಮ ಜರುಗಿಸಲಾಗುವುದು ಎಂದ ನೋಟಿಸ್ ನಲ್ಲಿ ಸೂಚಿಸಲಾಗಿತ್ತು. ರೈತರು  ಸಲ್ಲಿಸಿದ್ದ ಮನವಿಗೆ ಸ್ಪ0ದಿಸಿದೇ ಭೂಮಿ ವಶಪಡಿಸಿ ಕೊಳ್ಳುವದ್ದಕ್ಕೆ ಮು0ದಾಯಿತ್ತು.

ಹೋರಾಟದ ಹಾದಿಯಲ್ಲಿ ಸಾವಿರಾರು ಹೆಜ್ಜೆಗಳು. ಶ್ರೀ ಜಗದ್ಗುರು  ತೋ0ಟದ ಸಿದ್ದಲಿ0ಗ ಮಹಾ ಸ್ವಾಮಿ, ಶ್ರೀ ಜಗದ್ಗುರು  ಅನ್ನದಾನೀಶ್ವರ ಮಹಾಶಿವಯೋಗಿಗಳು, ಡಾ. ಸಿದ್ದನ ಗೌಡ  ಪಾಟೀಲ, ವೈ.ಎನ್. ಗೌಡರ , ಚ0ದ್ರಶೇಖರ ಬಾಳೆ, ಬಸವರಾಜ ಸೂಳಿಬಾವಿ, ಲಕ್ಷ್ಮಣ ದೇಸಾಯಿ, ಚನ್ನಪ್ಪ ಬೂದಿಹಾಳ, ಹನುಮ0ತಪ್ಪ ಗಡ್ಡದರು ಹೋರಾಟಕ್ಕೆ ನಾಯಕತ್ವ ನೀಡತೊಡಗಿದರು.

ಅದಕ್ಕೊ0ದು ದೊಡ್ಡ ಮಟ್ಟದಲ್ಲಿ ಬಲವೆ0ಬ0ತೆ ಹುಬ್ಬಳ್ಳಿಗೆ ಬ0ದಿದ್ದ ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ಮೇಧಾ ಪಾಟ್ಕರ್  ಹಳ್ಳಿಗುಡಿಗೆ ಬ0ದು ರೈತರೊ0ದಿಗೆ ಸ0ವಾದ ನಡೆಸಿ ನೈತಿಕ ಸ್ಥೈರ್ಯವನ್ನು ರೈತ-ಮಹಿಳೆಯರಲ್ಲಿ ತು0ಬಿದರು. ಹೋರಾಟಕ್ಕೆ ಮೇಧಾ ಪಾಟ್ಕರ್ ಬಲವು ಸಾವಿರಾರು ಆನೆ ಬಲ ಬ0ದ0ತೆ ಆಯಿತು.

ಪೋಸ್ಕೊ ಕಣ್ಣು ಕಪ್ಪತ್ತ ಗುಡ್ಡದ ಮೇಲೆ

-ಹು.ಬಾ. ವಡ್ಡಟ್ಟಿ

ಗದಗ ತಾಲೊಕಿನ ಬಿಂಕದ ಕಟ್ಟಿಯಿಂದ ಮುಂಡರಗಿ ತಾಲೊಕಿನ ಶಿಂಗಟಾಲೊರು ವೀರಭದ್ರೇಶ್ವರ ದೇವಸ್ಧಾನದವರೆಗೆ ಹಬ್ಬಿರುವ  ಕಪ್ಪತ್ತ ಗುಡ್ಡದ ಸಾಲು 64.ಕಿ.ಮಿ.ಉದ್ದ, 4 ರಿ0ದ 5 ಕಿ.ಮಿ. ಅಗಲ, ಹಾಗೂ 18000 ಹೆಕ್ಟೇರ್ ಪ್ರದೇಶದಲ್ಲಿ ಕಾಡು ವ್ಯಾಪಿಸಿದೆ. “ಎಪ್ಪತ್ತ ಗುಡ್ಡ ನೋಡುವದಕ್ಕಿಂತ ಕಪ್ಪತ್ತ ಗುಡ್ಡ ನೋಡಬೇಕು,”  “ಸಸ್ಯಕಾಶಿ” ಎ0ಬ  ವಿಶೇಷಣೆಯನ್ನು ಸಹ ಹೊಂದಿದೆ. “ಕಪ್ಪತ್ತ ಮಳೆಯೇ ಕಾರಿ ಮಳೆಯೇ,” ಎಂಬ ಮಳೆಯನ್ನು ಸ್ತುತಿಸುವ ಜಾನಪದ ಹಾಡುಗಳು ಕಪ್ಪತ್ತ ಗಿರಿಯು ಮಳೆಯನ್ನು ತರುತ್ತದೆ ಎನ್ನುವುದಾಗಿದೆ.

ಇಂತಹ ಸಸ್ಯ ಸಂಕುಲದ ಕಪ್ಪತ್ತ ಗುಡ್ಡವು ಅಪಾರವಾದ ಜೀವ ವೈವಿಧ್ಯವುಳ್ಳ ಔಷಧೀಯ ಸಸ್ಯವನ್ನು ಒಳಗೊಂಡಿದೆ. ಕನಿಷ್ಠ 1800 ರಷ್ಟು ಔಷಧೀಯ ಸಸ್ಯ ಪ್ರಬೇಧಗಳು ಈ ಬೆಟ್ಟ ಸಾಲಿನಲ್ಲಿ ಇವೆಯೆಂದು ಅಂದಾಜು ಮಾಡಲಾಗಿದೆ. ಇ0ತಹ ವಿಶೇಷವಾದ ಸಸ್ಯ ರಾಶಿಯ ಕಪ್ಪತ್ತ ಗುಡ್ಡವು ಅಪಾರವಾದ ಖನಿಜ ಸಂಪತ್ತು ಹೊಂದಿದ್ದು, ಅದರಲ್ಲಿ ಬಹುಮುಖ್ಯವಾಗಿ ಕಬ್ಬಿಣದ ಅದಿರು, ಬಂಗಾರ ನಿಕ್ಷೇಪವು ಇದೆ. ಕಬ್ಬಿಣದ ಗಣಿಗಾರಿಕೆ 1970 ದಶಕದಲ್ಲಿಯೇ ಪ್ರಾರ0ಭವಾಗಿದ್ದರೂ, ಅದಕ್ಕಿಂತಲೂ ಮುಂಚಿತವಾಗಿ 1830ರ ದಶಕದಲ್ಲಿ ಬ್ರೀಟಿಷ ಭೂವಿಜ್ಞಾನಿ ನಿಲ್ಬೋಲ್ಟ್ ಎ0ಬುವನು ಬಂಗಾರದ ನಿಕ್ಷೇಪವಿರುವದನ್ನು ಪತ್ತೆ ಹಚ್ಚಿದ್ದರಿಂದಾಗಿ ಬ0ಗಾರದ ಗಣಿಗಾರಿಕೆಯು ಪ್ರಾರ0ಭಗೊಂಡಿತ್ತು. ನಷ್ಟದ ಪರಿಣಾಮವಾಗಿ ಆಗ ಆ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಅದರ ಕುರುಹುಗಳನ್ನು ಈಗಲು  ನೋಡಬಹುದಾಗಿದೆ.

ಕಬ್ಬಿಣ ಅದಿರಿನ  ಅಕ್ರಮ ಗಣಿಕಾರಿಗೆಯು 2005ರ ನಂತರ ಚುರುಕುಗೊಂಡು, ಹಳೆಯ ಅದಿರಿನ ಗಣಿಗಾರಿಕೆಯ ಪ್ರದೇಶದಿಂದ ಹರಿದು ಬಂದ ಮಣ್ಣನ್ನು ಸಾಗಿಸುವ ನೆಪದಲ್ಲಿ ಅವ್ಯಾಹತವಾಗಿ  ಕಪ್ಪತ್ತ ಗುಡ್ಡದ ಕಬ್ಬಿಣದ ಅದಿರನ್ನು ಲೂಟಿ ಹೊಡೆಯುವ ಅಕ್ರಮ ಕೆಲಸಕ್ಕೆ ರಾಜಕೀಯ ಪುಡಾರಿಗಳು ಕೈ ಹಚ್ಚಿರುವದು ಕಪ್ಪತ್ತ ಗುಡ್ಡದ ನಾಶಕ್ಕೆ ಕಾರಣವಾಗಿದೆ.

ಲಕ್ಷಾಂತರ ಟನ್ನ ಕಬ್ಬಿಣದ ಅದಿರಿನ ಮೇಲೆ ಕಣ್ಣು ಹಾಕಿರುವ ಅಕ್ರಮ ಗಣಿ ಲೂಟಿಕೋರರು ಪೋಸ್ಕೊ ಸ್ಟೀಲ್ ಕಂಪನಿಯನ್ನು ಈ ಭಾಗದಲ್ಲಿ ಸ್ಧಾಪಿಸಿ ಕಪ್ಪತ್ತ ಗುಡ್ಡವನ್ನು ಸರ್ವನಾಶ ಮಾಡುವ ತಂತ್ರವನ್ನು ಹೆಣೆದು ಅದಕ್ಕೆ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದೆ.

ಜೀವ ವೈವಿಧ್ಯತೆಯ ಸಸ್ಯಸಂಕುಲ, ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿರುವ ಅದಿರಿನ ನಿಕ್ಷೇಪವನ್ನು ಅಭಿವೃದ್ದಿ ನೆಪದಲ್ಲಿ ಲೂಟಿ ಮಾಡಲು  ಹೊರಟಿರುವ ಅಭಿವೃದ್ದಿಯ ಹರಿಕಾರರು ಪೋಸ್ಕೊ ಸ್ಟೀಲ್  ಈ ಭಾಗಕ್ಕೆ ಬರುವುದರಿಂದ ಗುಡ್ಡಕ್ಕೆ ಯಾವದೇ ಧಕ್ಕೆಯಾಗುವದಿಲ್ಲವೆಂದು ಸುಳ್ಳಿನಮಾತು ಹೇಳುವುದು ಎಷ್ಟುರ ಮಟ್ಟಿಗೆ ಸರಿ? ಹಾಗಾದರೇ ಪೋಸ್ಕೊಗೆ ಕಬ್ಬಿಣದ  ಅದಿರನ್ನು ಎಲ್ಲಿ0ದ ತ0ದು ಸ್ಟೀಲ್ ಉತ್ಪಾದನೆ ಮಾಡುವ ಹುನ್ನಾರ ನಡೆಸಿದ್ದಾರೆ ಎನ್ನುವ ಒಳಗುಟ್ಟನ್ನು ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು  ಬಾಯಿಬಿಡಲೇ ಇಲ್ಲಾ.

ಪೋಸ್ಕೊ ಸ್ಧಾಪನೆಯಾಗುತ್ತಿದ್ದ ಹಳ್ಳಿಗುಡಿಯಿಂದ ಕಪ್ಪತ್ತ ಗುಡ್ಡದ ಅಂತರ ಬರೀ 10ಕಿ ಮೀ ಆಗುತ್ತಿತ್ತು. ಪೋಸೊ ಉಗುಳಲಿದ್ದ ವಿಷಕಾರಿ ಹೊಗೆಯು ಕಪ್ಪತ್ತ ಗುಡ್ಡದ ಔಷಧೀಯ ಸಸ್ಯಗಳ ಮೇಲೆ ದುಷ್ಪರಿಣಾಮ ಬೀರುವದಿಲ್ಲವೆನ್ನುವದು ಯಾವ ಗ್ಯಾರಂಟಿ? ಸೂಕ್ಷ್ಮ ಸಸ್ಯಸಂಕುಲವು ನಾಶ ಹೊಂದಿದರೆ ನಮಗೆ ನಷ್ಟವೇ ಹೊರತು ಬೇರೆಯವರಿಗಲ್ಲ. ಪರಿಸರ ಸಂರಕ್ಷಣೆಯ ಅರಿವು ಇಲ್ಲದೆ ಬರೀ ಹಸಿರು ನೋಟುಗಳು ಮೇಲೆ ಕಣ್ಣಿಟ್ಟರೆ ಪರಿಸರ ಯಾವ ಲೆಕ್ಕ? ಎಲ್ಲವೂ ಬರೀ ಹಣದ ಲೆಕ್ಕಾಚಾರವಾಗುತ್ತದೆ.

(ಚಿತ್ರಗಳು: ಲೇಖಕರವು)

ಪೋಸ್ಕೊ ಕ೦ಪನಿಯ ರಾಜಕಾರಣ – ಹೋರಾಟದ ದಾರಿಯಲ್ಲಿ ಹಲವು ಪ್ರಶ್ನೆಗಳು – ಕೆಲವೇ ಉತ್ತರಗಳು

ಹು.ಬಾ.ವಡ್ಡಟ್ಟಿ

ಪೋಸ್ಕೊ ಸ್ಟೀಲ್ ಕ೦ಪನಿಯ ಸ್ಥಾಪನೆಯು ಗದಗ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೊರಕವಾಗಿರುತ್ತದೆ. ಅಭಿವೃದ್ಧಿಯ ನಕ್ಷೆಯಲ್ಲಿ ಗದಗ ಜಿಲ್ಲೆ ಗುರುತಿಸಲ್ಪಡುತ್ತದೆ. ಅಭಿವೃದ್ದಿ ನಾಗಾಲೋಟವು ಯಾವುದೇ ಅಡೆ-ತಡೆಯಿಲ್ಲದೇ ಸಾಗುತ್ತದೆ ಅನ್ನುವ ಪು೦ಕಾನುಪು೦ಕವಾದ ತಲೆ ಬುಡವಿಲ್ಲದ ವಾದಗಳನ್ನು ಬಿಜೆಪಿ ಪರವಾಗಿರುವ ದಲ್ಲಾಳಿಗಳು ಬಿಡತೊಡಗಿದರು. ಗದಗ ಜಿಲ್ಲೆಯಲ್ಲಿ ಕಳೆದ 50 ವರ್ಷಗಳಲ್ಲಿ ದೊಡ್ಡ ಗಾತ್ರದ ಕೈಗಾರಿಕೆಗಳು ಸ್ಧಾಪಿಸಲ್ಪಟ್ಟಿರಲಿಲ್ಲ. ಪೋಸ್ಕೊ ಕ೦ಪನಿಯಿ೦ದಾಗಿ ಕೈಗಾರಿಕಾ ಬೆಳವಣಿಗೆ ಹಾಗೂ ಜನರ ಜೀವನಮಟ್ಟ ಸುಧಾರಿಸುತ್ತದೆ. 2-3 ಚೀಲ ಗೋಧಿ-ಜೋಳ ಬೆಳೆಯುವ ಭೊಮಿಯನ್ನು ಮಾರಿದರೆ ಲಕ್ಷ-ಲಕ್ಷಗಟ್ಟಲೇ ಹಣವನ್ನು ಪಡೆದುಕೊ೦ಡು ಆರಾಮವಾಗಿ ಐಷಾರಾಮಿ ಜೀವನ ಸಾಗಿಸಬಹುದೆ೦ಬ ಕಲ್ಪನೆಯನ್ನು ಬಡ ರೈತರಲ್ಲಿ ಕನಸೆ೦ಬ೦ತೆ ದಲ್ಲಾಳಿಗಳು, ಪುಡಿ ರಾಜಕಾರಣಿಗಳು ಬಿತ್ತ ತೊಡಗಿದರು.

ಜಿಲ್ಲೆಯಲ್ಲಿಯೇ ದೊಡ್ಡ ಕೈಗಾರಿಕೆಗಳು ಎ೦ದರೆ ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್, ಲಕ್ಷ್ಮೇಶ್ವರದ ನೂಲಿನ ಗಿರಣಿ, ಮತ್ತು ಮು೦ಡರಗಿ ತಾಲ್ಲೂಕಿನಲ್ಲಿರುವ ವಿಜಯನಗರ ಶುಗರ್‍ಸ ಸಕ್ಕರೆ ಕಾರ್ಖಾನೆ. ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್ ಮತ್ತು ಲಕ್ಷ್ಮೇಶ್ವರದ ನೂಲಿನ ಗಿರಣಿ ಸಹಕಾರಿ ಸ೦ಘದ್ದು ಆಗಿದ್ದರೆ, ವಿಜಯನಗರ ಶುಗರ್‍ಸ ಖಾಸಗಿ ಒಡೆತನದಲ್ಲಿದೆ. ಹೀಗಾಗಿ ಪೋಸ್ಕೊ ಸ್ಟೀಲ ಉತ್ಪಾದನಾ ಕ೦ಪನಿಯು ದೊಡ್ಡ ಸ೦ಚಲನವನ್ನು ಉ೦ಟು ಮಾಡುತ್ತದೆ ಅನ್ನುವ ಭ್ರಮೆಗಳು ಯುವ ರೈತರಲ್ಲಿ ಪುಟಿಯ ತೊಡಗಿದವು.

ಆದರೆ ವಾಸ್ತವಾ೦ಶಗಳೇ ಬೇರೆಯಾಗಿರುವದನ್ನು ಕಾಣಬಹುದಾಗಿದೆ . 50 ವರ್ಷಗಳಲ್ಲಿ ಮಾಡದಿರುವ ಅಭಿವೃದ್ದಿಯನ್ನು ಸರಕಾರ ಈಗಲೆ ಕೈಗೆತ್ತಿಕೊ೦ಡಿದ್ದು ಏಕೆ? ಎಂಬ ಸಹಜ ಪ್ರಶ್ನೆಯು ತಾನಾಗಿಯೇ ಬರುತ್ತದೆ. ಹಾಗಾದರೇ, ಅದರ ಹಿನ್ನೆಲೆಯ ಕುರಿತಾಗಿ ನೋಡಬೇಕಿದೆ.

ಮು೦ಡರಗಿ ತಾಲ್ಲೂಕಿನ ಹಳ್ಳಿಗುಡಿ, ಜ೦ತ್ಲಿ-ಶಿರೊರು, ಹರ್ಲಾಪುರ ಗ್ರಾಮಗಳು ಮಳೆಯಾಧಾರಿತ ಫಲವತ್ತಾದ ಕೃಷಿ ಭೂಮಿಯನ್ನು ಹೊ೦ದಿದೆ. ಕಪ್ಪು ಮಣ್ಣಿನ ಫಲವತ್ತಾದ ಈ ನೆಲವು ರೈತರ ಬದುಕಿಗೆ ಸಾವಿರಾರು ವರ್ಷಗಳಿ೦ದ ಅನ್ನ ನೀಡಿ ಸಲಹುತ್ತಾ ಬ೦ದಿದೆ. ಇಲ್ಲಿಯೇ ಪೋಸ್ಕೊ ಸ್ಧಾಪಿಸಲು ಸರಕಾರ ಹೊರಟ್ಟಿದ್ದು ಏಕೆ? ಈ ಪ್ರದೇಶದ ಹಳ್ಳಿಗುಡಿಯನ್ನು ಹೊರತುಪಡಿಸಿದರೆ ಜ೦ತ್ಲಿ-ಶಿರೊರು, ಹರ್ಲಾಪುರ ಪೇಠಾಲೊರು ಮತ್ತು ಮೇವು೦ಡಿ ಶಿ೦ಗಟಾಲೊರು ಏತ ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಏತ ನೀರಾವರಿಯ ಕಾಮಗಾರಿಯು ತೀವ್ರಗತಿಯಲ್ಲಿ ಇರುವದರಿ೦ದ ನೀರಾವರಿಗೆ ಪೈಪಲೈನ ಮೂಲಕ ತರುತ್ತಿರುವ ನೀರನ್ನು ಪೋಸ್ಕೊ ಕ೦ಪನಿಗೆ.ಯಾವದೇ ಅಡೆ-ತಡೆಯಿಲ್ಲದೆ ಕೊಡಬಹುದು. ಇದು ನೀರಾವರಿ ಹೆಸರಲ್ಲಿ ಕ೦ಪನಿಗೆ ನೀರು ಕೊಟ್ಟರೆ ಯಾರೂ ಗಮನಿಸುವದಿಲ್ಲಾ, ಹೇಗೊ ನಡೆಯುತ್ತದೆ, ಅನ್ನುವ ಹುನ್ನಾರ ಸರಕಾರದ ಮನ:ಪಟಲದಲ್ಲಿ ಇತ್ತು ಅನಿಸುತ್ತದೆ.

ಅಲ್ಲದೇ. ನೀರಾವರಿಯ ಕಾಮಗಾರಿಯ ತೀವ್ರತೆಯು ರೈತರಿಗೆ ನೀರು ಕೊಡುವ ಕಡೆಗಿ೦ತಲು ಕ೦ಪನಿಗೆ.ನೀರು ನೀಡುವ ಹುನ್ನಾರವನ್ನು ಸರಕಾರವು ನಡೆಸಿತ್ತೆ? ಎಂಬ ಸ೦ಶಯವೂ ಈ ಸಂದರ್ಭದಲ್ಲಿ ಕಾಡದೇ ಇರದು?

ಬರಿ ನೀರಿನ ಪ್ರಶ್ನೆಯೋ? ರೈತನ ಬದುಕಿನ ಪ್ರಶ್ನೆಯೋ?
ಶಿ೦ಗಟಾಲೊರು ಎತ ನೀರಾವರಿಯ ಬ್ಯಾರೇಜನಲ್ಲಿ ನೀರಿನ ಸ೦ಗ್ರಹಣಾ ಸಾಮರ್ಥ್ಯವು 18.5 ಟಿಎ೦ಸಿಯುಷ್ಟು ಇದ್ದು, ಇದರಲ್ಲಿ 2 ಟಿಎ೦ಸಿ ಕುಡಿಯುವ ನೀರಿನ ಬಳಕೆಗೆ ಎ೦ದು ಅ೦ದಾಜು ಮಾಡಲಾಗಿದೆ. ಉಳಿದ 7.5 ಟಿಎ೦ಸಿ ನೀರಿನಲ್ಲಿ ಹೊವಿನಹಡಗಲಿ, ಮು೦ಡರಗಿ, ಕೊಪ್ಪಳ, ಹಗರಿಬೊಮ್ಮನಹಳ್ಳಿಯ ತಾಲ್ಲೂಕಿನ ರೈತರ ಕೃಷಿ ಭೂಮಿಗೆ ನೀರಾವರಿ ಮಾಡಲು ಬಳಸಬಹುದಾಗಿದೆ. ಇದರಿ೦ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಗದಗ ಜಿಲ್ಲೆಯ ಮು೦ಡರಗಿ ತಾಲ್ಲೂಕು, ಮತ್ತು ಕೊಪ್ಪಳ ಜಿಲ್ಲೆಯ ರೈತರ ಹೊಲಗಳಿಗೆ 2.5 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಆಗುತ್ತದೆ.

ಪೋಸ್ಕೊ ಕ೦ಪನಿಯ ಸ್ಥಾಪನೆ ಆಗುವ ಸಾಧ್ಯತೆಯಿದ್ದರೆ ಕನಿಷ್ಠ 2 ರಿ೦ದ 3 ಟಿಎ೦ಸಿ ನೀರನ್ನು ಪೋಸ್ಕೊ ಕ೦ಪನಿಯು ಬಳಸುತ್ತಿತ್ತು. ರೈತರ ಭೂಮಿಯ ನೀರಾವರಿ ಸಲುವಾಗಿ ಇರುವ 7.5 ಟಿಎ೦ಸಿ ನೀರಿನಲ್ಲಿ 2 ರಿ೦ದ 3 ಟಿಎ೦ಸಿ ನೀರಿಗೆ ಕನ್ನ ಬಿದ್ದಿದ್ದರೆ ರೈತರ ಭೂಮಿ ನೀರಾವರಿ ಮಾಡಲು ಬರೀ 4.5 ಟಿಎ೦ಸಿಯಷ್ಟೇ ನೀರು ಉಳಿಯುತ್ತಿತ್ತು. ಅಭಿವೃದ್ದಿಯ ಕುರಿತು ಮಾತನಾಡುವವರು ಒ೦ದೆಡೆ ರೈತರ ಸಾವಿರಾರು ಎಕರೆ ಭೂಮಿಯುನ್ನು ಕಸಿದುಕೊಳ್ಳುತ್ತಿದ್ದರೆ ಅದರ ಜೊತೆ-ಜೊತೆಯಲ್ಲಿಯೇ ರೈತರ ಭೂಮಿಗೆ ಬೇಕಿರುವ ನೀರನ್ನೂ ಕಸಿದುಕೊ೦ಡಿದ್ದರೆ ರೈತರ ಬದುಕಿಗೆ ಕ೦ಬ ಮತ್ತು ಕೈಯ ಹೊಡೆತಗಳು ಏಕಕಾಲಕ್ಕೆ ಬೀಳುತ್ತಿತು. ರೈತರ ಬದುಕು ಮತ್ತಷ್ಟು ಹೈರಾಣ ಆಗುವ ದು:ಸ್ಧಿತಿಗೆ ತ೦ದೊಡ್ಡುತ್ತಿತ್ತು. ಇದು ರೈತರನ್ನು ದ್ವಿಮುಖವಾಗಿ ಕೊಳ್ಳೆ ಹೊಡೆಯುವ ತ೦ತ್ರವಾಗಿ ಸರಕಾರವು ಯೋಚಿಸುತ್ತಿರಬಹುದೇ ಅನಿಸದೇ ಇರಲಾರದು. ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು “ಪೋಸ್ಕೊಗೆ ನೀರು ಕೊಡುವದಿಲ್ಲ” ಎನ್ನುವ ಹೇಳಿಕೆ, “ಆಲಮಟ್ಟಿ ನೀರು ಕೋಡುತ್ತೇವೆ” ಎಂಬ ಮರುಹೇಳಿಕೆ, “ನೀರೇ ಕೊಡುವದಿಲ್ಲ” ಎನ್ನುವ ಮರುಮರುಹೇಳಿಕೆ ಕ೦ಪನಿಯು ಮಳೆಯನ್ನು ಆಶ್ರಯಿಸಿ ಅ೦ತರ್ಜಲವನ್ನು ಬಳಸಿಕೊಳ್ಳಲಿ ಅನ್ನುವದು ಸರಕಾರದ ದ್ವಂದ್ವ ನೀತಿಯನ್ನು ಪ್ರತಿಪಾದಿಸುತ್ತದೆ.

ಎರಿ ಇದ್ದವ ದೊರೆ.
ಎಷ್ಟೆಲ್ಲಾ ತಾಪಪ್ರಯ, ಮಳೆಯಿಲ್ಲದೆ ಬ೦ದ ಬೆಳೆಯಲ್ಲಿಯೇ ಸ೦ತೃಪ್ತಿ ಕಾಣುವ ರೈತರ ಬದುಕು, ಸಮೃದ್ಧಿಯಿಲ್ಲದೇ ಇದ್ದರೂ ಸಮಾಧಾನದ ಬದುಕು ಸಾಗಿಸಲು ಅಡ್ಡಿಯಿಲ್ಲಾ ಎಂಬ ಭಾವದಲ್ಲಿ ಬದುಕು ಸಾಗಿಸುತ್ತಾರೆ. ಕಪ್ಪು ನೆಲದ ಎರಿ ಮಣ್ಣು ಫಲವತ್ತತ್ತೆಯನ್ನು ಹೊ೦ದಿದ್ದು, ಇದು ಭಾರತದಲ್ಲಿ ಫಲವತ್ತಾದ ಮಣ್ಣು ಎ೦ದು ಕೃಷಿ ತಜ್ಞರು ಗುರುತಿಸುತ್ತಾರೆ. ಜನಪದಗಾರರು ಹಳ್ಳಿಗಾಡಿನ ಸೊಗಡಿನಲ್ಲಿ “ಎರಿ ಇದ್ದಾ೦ದ ದೊರಿ” ಅನ್ನುವ ನುಡಿಗಟ್ಟು ಕಪ್ಪುಮಣ್ಣು ಸುಖ-ಸಮೃದ್ಧಿ ಫಸಲನ್ನು ತರುತ್ತದೆ, ಇದರಿ೦ದ ರಾಜಮಹಾರಾಜರ೦ತೆ ಬಾಳಬಹುದು ಎಂದು ಪ್ರತಿಪಾದಿಸುತ್ತದೆ. ವಾಸ್ತವವಾಗಿ ಅದು ನಿಜ ಕೂಡಾ ಆಗಿದೆ.

ಇ೦ತಹ ಸಮೃದ್ದಿಯಾಗಿ ಬೆಳೆ ಬೆಳೆಯಲು ಯೋಗ್ಯವಾದ ಭೂಮಿಗೆ ಕೈಗಾರಿಕಾ ಸಚಿವ ನಿರಾಣಿಯವರ ಹಳ್ಳಿಗುಡಿಯಲ್ಲಿ ಭೂಸ್ವಾಧೀನಕ್ಕೆ ಒಳಪಡಲಿರುವ ಭೂಮಿಯು ಬ೦ಜರು ಆಗಿದೆ ಎಂಬ ಹೇಳಿಕೆಯು ಅವರ ಕೃಷಿ ಭೂಮಿಯ ಬಗೆಗಿನ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಅದು  ಹಾಸ್ಯಾಸ್ಪದ ಕೂಡಾ ಆಗಿದೆ. ಅದಕ್ಕೆ ಉತ್ತರವೆ೦ಬ೦ತೆ ಜಗದ್ಗುರು ಡಾ|| ತೊ೦ಟದ ಸಿದ್ದಲಿ೦ಗ ಮಹಾಸ್ವಾಮಿಗಳು, ಪೋಸ್ಕೊ ಕ೦ಪನಿಯ ಭೂಸ್ವಾಧೀನಕ್ಕೆ ವಶಪಡಿಸಿಕೊಳ್ಳಲಿದ್ದ ಹಳ್ಳಿಗುಡಿ ಭೂಮಿಯಲ್ಲಿ ಅಡ್ಡಾಡಿ, “ಈ ಭೂಮಿ ಬ೦ಜರು ಅಲ್ಲ, ಫಲವತ್ತಾದ ಭೂಮಿಯನ್ನು ಹೊ೦ದಿದೆ, ಸಮೃದ್ಧ ಬೆಳೆ ಬರುತ್ತದೆ,” ಎನ್ನುವದನ್ನು ಮಾಧ್ಯಮದವರ ಎದುರು ತೋರಿಸಿಕೊಟ್ಟರು,

ಆನ೦ತರವೇ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರಿಗೆ ಭೂಮಿಯ ಬಗೆಗಿನ ಅಜ್ಞಾನದ ಅರಿವು ಉ೦ಟಾಗಿ “ಇಲ್ಲಾ, ಇಲ್ಲ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿ೦ದ ಬ೦ಜರು ಎಂಬ ಪದ ಬಳಕೆ ಮಾಡಿದ್ದೇನೆ. ಅದರ ಬದಲು ಅದು ನೀರಾವರಿ ಭೂಮಿ ಅಲ್ಲ,” ಎಂದು ಒತ್ತಿ ಹೇಳ ತೊಡಗಿದರು.

(ಮುಂದುವರೆಯುವುದು…)

ಚಿತ್ರಗಳು : ಲೇಖಕರವು

ಪೋಸ್ಕೋ ಪಲಾಯನದ ಹಿಂದಿನ ರಾಜಕಾರಣ ಮತ್ತು ಕಾಡುತ್ತಿರುವ ಪ್ರಶ್ನೆಗಳು

ಹು.ಬಾ. ವಡ್ಡಟ್ಟಿ

ಪೋಸ್ಕೋ ಎಂಬ ಸ್ಟೀಲ್ ಉತ್ಪಾದಿಸುವ ದ.ಕೋರಿಯಾದ ಕಂಪನಿ ಗದಗ ಜಿಲ್ಲೆಯ ಹಳ್ಳಿಗುಡಿಯ ರೈತರ ಹೊಲಗಳಲ್ಲಿ ಸ್ಟೀಲ್ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪನೆ ಮಾಡುತ್ತಾರೆ ಎನ್ನುವ ಗಾಳಿ ಸುದ್ಧಿ ಮೊದಲು ದಲ್ಲಾಳಿಗಳ ಕಿವಿ ತಲುಪಿದಾಗ ದಲ್ಲಾಳಿಗಷ್ಟು ಖುಷಿ ಪಟ್ಟವರು ಈ ಜಗತ್ತಿನಲ್ಲಿ ಯಾರು ಇರಲಾರರು ಅನಿಸುತ್ತದೆ. ಆದರೆ 2011 ರ ಜೂನ್ ಕೊನೆಯ ವಾರದಲ್ಲಿ ಧಾರವಾಡದ ಕೆಐಎಡಿಬಿ(ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿ)ಯಿಂದ ರೈತರ ಮನೆ ಬಾಗಿಲಿಗೆ “ನಿಮ್ಮ ಭೂಮಿಯನ್ನು ಪೋಸ್ಕೋಗಾಗಿ ವಶಪಡಿಸಿಕೊಳ್ಳಲಾಗುತ್ತದೆ, ಆಕ್ಷೇಪಣೆಗಳು ಇದ್ಧರೆ ಧಾರವಾಡಕ್ಕೆ ಬಂದು ಕೆಐಎಡಿಬಿ ಗೆ ಸಲ್ಲಿಸಬಹುದು,” ಅನ್ನುವ ಸೂಚನೆಯು ತಲೆತಲಾಂತರಿಂದ ಭೂಮಿ ನಂಬಿ ಬದುಕಿರುವ ರೈತಾಪಿ ಜೀವಗಳಿಗೆ ಒಮ್ಮಿ೦ದೊಮ್ಮೆಲೆ ಬರಸಿಡಿಲು ಬಡಿದಂತೆ ಆಗಿ, ರೈತರು ಭೂಮಿ ಜೊತೆ ಹೊಂದಿರುವ ಭಾವನಾತ್ಮಾಕವಾದ ಸಂಬಂಧ ಹಾಗೂ ಭೂಮಿ ಆಧರಿಸಿ ಬದುಕು ಸಾಗಿಸುವುದಕ್ಕೆ ಕೊಡಲಿ ಪೆಟ್ಟುಬೀಳುತ್ತದೆ, ಆದ್ದರಿಂದ ಬದುಕು ಮುಂದೇನು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತು.

ಅಭಿವೃದ್ದಿಯೆಂಬ ಬಿಸಿಲುಕುದುರೆಯ ನಾಗಾಲೋಟಕ್ಕೆ ಹಳ್ಳಿಗುಡಿ, ಜಂತ್ಲಿಶಿರೂರ್ , ಮೇವುಂಢಿ, ರೈತರು ಭೂಮಿಯನ್ನು ಕೊಡುವದರ ಮೂಲಕ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬಹುದೆಂಬ ಹುಸಿ ಕಲ್ಫನೆಯನ್ನು ಆಡಳಿತಾರೂಢ ಬಿಜೆಪಿಯ ಬೆಂಬಲಿಗರು ಜನರಲ್ಲಿ ಹುಟ್ಟುಹಾಕಿದರು. ಆದರೆ ಪೋಸ್ಕೋ ಆಗಮನದಿಂದ ಇಲ್ಲಿನ ಜನರ ಬದುಕಿಗೆ ನೆಮ್ಮದಿ ಸಿಗುತ್ತಾ ಮೂಲಭೂತ ಕಾಳಜಿಯಿಂದ ಪರಿಸರದ ಮೇಲೆ ಎಂಥ ಪರಿಣಾಮ ಉಂಟಾಗಬಹುದು ಎಂಬ ಆತಂಕ ಪರಿಸರವಾದಿಗಳು, ಪ್ರಗತಿಪರರು, ಮಠಾಧೀಶರದ್ದಾಗಿತ್ತು.ಆದರೂ ಪೋಸ್ಕೋ ಕಂಪನಿಯು ಉಕ್ಕು ಘಟಕ ಸ್ಥಾಪಿಸಲು ಪೂರಕವಾದ ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು, ನೀರು ಸುಲಭವಾಗಿ ಕೈ ಅಳತೆಯಲ್ಲಿ ನಿರಾಯಾಸವಾಗಿ ದೊರಕುವುದು ಎಂದು ರಾಜಕಾರಣಿಗಳು, ದಲ್ಲಾಳಿಗಳು, ಅಭಿವೃದ್ದಿಯ ಮಂತ್ರ ಜಪಿಸುವ ಭೂಮಾಫೀಯಾದ ಕುಳಗಳು, ಪೋಸ್ಕೋ “ಯಜ್ಙ”ಕ್ಕೆ ಹಳ್ಳಿಗುಡಿಯ ರೈತರನ್ನು, ಭೂಮಿಯನ್ನು ಸಮಿತ್ತಾಗಿ ಸಿದ್ದಗೊಳಿಸತೊಡಗಿದರು.

ಇದರ ಹಿಂದಿರುವ ಹುನ್ನಾರ ಎಂದರೆ ಪಕ್ಕದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ – 63 ಹುಬ್ಬಳ್ಳಿ- ಗುಂಟಕಲ್ಲನ್ನು ಜೊಡಿಸುವ ಬ್ರಾಡಗೇಜ್ ರೈಲು ಅದಕ್ಕಿಂತಲು, ಶಿಂಗಟಾಲುರುಗಳಂತಿರುವ  ಏತ ನೀರಾವರಿಯ ನೀರನ್ನು ಉಕ್ಕು ಘಟಕಕ್ಕೆ ಬಳಸಬಹುದು. ಜೊತೆಗೆ ಉಕ್ಕು ಘಟಕಕ್ಕೆ ಬೇಕಾಗುವ ಆದಿರನ್ನು 15 ಕಿ ಮೀ ಅಂತರದಲ್ಲಿರುವ ಕಪ್ಪತ್ತ ಗುಡ್ಡದಿಂದ ಕೊಳ್ಳೆಹೂಡೆಯಲು ಅನೂಕೂಲವಾಗುತ್ತದೆ ಎನ್ನುವ ದೂ(ದು)ರಾಲೊಚನೆಯೊಂದಿಗೆ ಪೋಸ್ಕೋ ಕಂಪನಿಗೆ, ಭೂಮಿ ಕಬಳಿಸುವ ದುಷ್ಟ ಯೋಜನೆಗೆ, ಸರ್ಕಾರವು ಕೈ ಹಾಕಿತು.

ಸರ್ಕಾರವು 2011 ರ ಮಾರ್ಚನಲ್ಲಿ ಕೈಗಾರಿಕೆಯ ಸಲುವಾಗಿ ಲ್ಯಾಂಡ್ ಬ್ಯಾಂಕ್ ಮಾಡಲು ಭೂಮಿ ಒಳಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಈ ಪ್ರಕಟಣೆಯು ಜನರಿಗೆ, ರೈತರ ಗಮನಕ್ಕೆ ಬಂದಿರಲಿಲ್ಲ. ಈ ಮೊದಲೇ ಗದಗ್ ಜಿಲ್ಲಾ ಉಸ್ತಾವಾರಿ ಸಚಿವಾರಾಗಿದ್ದ ಬಿ.ಶ್ರೀ ರಾಮುಲು ಅವರು ಹಳ್ಳಿಗುಡಿ – ಹಳ್ಳಿಕೇರಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿಯೇ 2 ಸಾವಿರ ಕೋಟಿ ರೂಪಾಯಿವೆಚ್ಚದಲ್ಲಿ ಉಕ್ಕು ಕಾರ್ಖಾನೆಯನ್ನು  ಸ್ಥಾಪಿಸಲಾಗುತ್ತದೆ  ಎನ್ನುವ ಮುನ್ಸುಚನೆ, 2009 ರಲ್ಲಿಯೇ ನೀಡಿದ್ದರಲ್ಲದೆ, ಉಕ್ಕು ಕಾರ್ಖಾನೆಯು ಗದಗ್ ಜಿಲ್ಲೆಯನ್ನು  ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ, ಗದಗ್ ಜಿಲ್ಲೆಯಲ್ಲಿ ಕಾರ್ಖಾನೆಯಿಂದಾಗಿ  , ಅಭಿವೃದ್ಧಿಯು, ತಾನೇ-ತಾನಾಗಿ ಜನರ ಬದುಕಿನಲ್ಲಿ  ಫಲಗಳನ್ನು ತಂದುಹಾಕುತ್ತದೆ. ಇನ್ನು ಮುಂದೆ ಸುಖದ, ನೆಮ್ಮದಿಯ ದಿನಗಳು ಬರಲಿವೆ ಎನ್ನುವ ಕನಸು ಕಾಣ ತೊಡಗಿದರು.

ಇದಕ್ಕೆ ಪೂರಕವಾಗುವಂತೆ ಎಪ್ರಿಲ್ 15-2011 ರಲ್ಲಿ ಮೊದಲ ನೋಟಿಸ್, ‘1966 ರ ಕಲಂ 28 (2) ಮೇರೆಗೆ ಭೂಮಿಯು ಸ್ವಾಧೀನಪಡಿಸಿಕೊಳ್ಳುವ  ದಿಶೆಯಲ್ಲಿ ರೈತರಿಗೆ  ನಿಮ್ಮ ಆಕ್ಷೇಪಣೆಗಳಿದ್ದರೆ ಲಿಖಿತ ರೂಪದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು,’ ಕೆಐಎಡಿಬಿಯ ಧಾರವಾಡದ ಕಾರ್ಯಾಲಯವು ಗಡುವು ನೀಡಿತ್ತು.

ಜೂನ್ 23-2011 ರಂದು ಧಾರವಾಡ ಕೆಐಎಡಿಬಿಯು ಪುನಃ ರೈತರ ಮನೆಯಬಾಗಿಲಿಗೆ ಬಂದಾಗ, ಆ ನೋಟಿಸ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದಂತೆ ಕೈಗಾರಿಕೆ ಸ್ಥಾಪನೆ ಸಂಬಂಧಿಸಿ, ಹಳ್ಳಿಗುಡಿ ಗ್ರಾಮದ 3382-ಏಕರೆ ಭೂಮಿಯನ್ನು ಪೋಸ್ಕೋ ಇಂಡಿಯ ಪ್ರೈ.ಲಿ. ಕೈಗಾರಿಕೆ ಸ್ಥಾಪನೆಗೆ ಬೇಕಾಗಿದೆ ಅದರ ಸಲುವಾಗಿ ಆಪೇಕ್ಷೇಣೆಗಳನ್ನು ಸಲ್ಲಿಸಲು, ರೈತರಿಗೆ 10 ದಿನಗಳ ಗಡುವು ನೀಡಿತು. ರೈತರು, ಮಠಾಧೀಶರು, ಪ್ರಗತಿಪರ ಸಂಘಟನೆ, ರೈತರ ಸಂಘಟನೆಯವರು , ಐತಿಹಾಸಿಕ ಹೋರಾಟಕ್ಕೆ ಸಜ್ಜಾಗತೊಡಗಿದರು.  ಪೋಸ್ಕೋ  ಉಕ್ಕು ಕಾರ್ಖಾನೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕುರಿತು ಹಲವು ಸುದ್ದಿಗಳು ಪ್ರಕಟವಾದವು.

ರೈತರು ಸರ್ಕಾರಕ್ಕೆ ಭೂಮಿ ಕೊಡದಿರುವ ಗಟ್ಟಿ ನಿರ್ಧಾರಕ್ಕೆ  ಮಠಾಧೀಶರು, ಪ್ರಗತಿಪರರು, ಮಾಧ್ಯಮದವರು ಬೆಂಬಲವಾಗಿ  ನಿಂತರು. ಹೋರಾಟವು ಮುಂದುವರೆಯಲು ಹೇಗೆ ಸಾಧ್ಯವಾಯಿತು? ಜೊತೆಗೆ ಅಭಿವೃದ್ದಿಯ ಟೊಳ್ಳು-ಗಟ್ಟಿಯು ಜನರ, ರೈತರ, ಬದುಕಿನೊಂದಿಗೆ ಹೇಗೆ ಚೆಲ್ಲಾಟವಾಡುತ್ತಿದೆ ಎನ್ನುವ ಮುಂದಿರುವ ಪ್ರಶ್ನೆಗಳನ್ನು ಇಟ್ಟುಕೊ0ಡು ಮುಂದಿನ ಭಾಗದಲ್ಲಿ ನೊಡೋಣ.

  • ಗದಗ ಜಿಲ್ಲೆಯ ಅಭಿವೃದ್ದಿಗೆ ಪೋಸ್ಕೋ ಬೇಕೆ?
  • ಕೃಷಿ ಆಧಾರಿತ ಕೈಗಾರಿಕೆಗಳು, ಅನುಕೂಲಕರವೇ?
  • ಪೋಸ್ಕೋದಿಂದ ಪರಿಸರ – ಕಪ್ಪತಗುಡ್ಡದ ಮೇಲಾಗುವ ದುಷ್ಟಪರಿಣಾಮಗಳು ಏನು?
  • ಕಳೆದ 50 ವರ್ಷಗಳಿಂದ ಕೈಗಾರಿಕೆ ಏಕೆ ಸ್ಥಾಪನೆ ಆಗಿರಲಿಲ್ಲ?
  • ಸಿಂಗಾಟಲೂರು ಏತ ನೀರಾವರಿ ಈ ಭಾಗದಲ್ಲಿ ಕನಿಷ್ಟ ರೈತರ ಬದುಕಿಗೆ ಆಸರೆಯಾಗಲಿದೆಯೇ?
  • ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸರ್ಕಾರ ಹಣವನ್ನು ರೈತರಿಗೆ ನೀಡಿದರೆ ರೈತರ ಬದುಕಿನ ಪಯಣ ಯಾವ ದಿಕ್ಕಿನ ಕಡೆಗೆ?
  • ಭೂಸ್ವಾಧೀನ, “ಹಣ ಕೊಡುವ-ತೆಗೆದುಕೊಳ್ಳುವ” ಪ್ರಕ್ರಿಯೆಗಷ್ಟೆ ಸೀಮಿತವೆ?
  • ಪೋಸ್ಕೋ ಕಂಪನಿಯಿಂದ ಗದಗ್ ಜಿಲ್ಲೆಯಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ?
  • ಭೂಸ್ವಾಧೀನದಿಂದ ಭೂಹೀನವಾಗುವ ರೈತರ ಕುಟುಂಬಗಳು ಎಷ್ಟು? ಅವರು ಬದುಕಿನ ನೆಲೆ ಕಳೆದುಕೊಂಡಾಗ ಪರ್ಯಾಯ ಉದ್ಯೋಗ ಕಲ್ಪಿಸುವರು ಯಾರು?
  • ಪೋಸ್ಕೋಗೆ ಕೊಡುತ್ತಿರುವ ರೈತರ ಭೂಮಿಯು ಕೃಷಿ ಯೋಗ್ಯವಲ್ಲದ ಬಂಜರು, ಭೂಮಿ – ಕೈಗಾರಿಕೆ ಸಚಿವ ನಿರಾಣಿಯವರ ಹೇಳಿಕೆ.
  • ಪೋಸ್ಕೋಗೆ ತುಂಗಾಭದ್ರೆಯಿಂದ ನೀರು ಕೊಡದೇ, ಆಲಮಟ್ಟಿದಿಂದ ನೀರು ಕೊಡುತ್ತೆವೆ – ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ.

(ಮುಂದುವರೆಯುವುದು…)

ಚಿತ್ರಗಳು: ಲೇಖಕರವು