Author Archives: admin1

ಸಾಯಿಸಿ, ಬದುಕಿಸುವ ಮೀಡಿಯಾ!!

ಸುದ್ದಿ ವಾಹಿನಿಗಳ ಸ್ಪರ್ಧೆ ಎಂಥ ಅವಾಂತರ ಸೃಷ್ಟಿಸುತ್ತವೆ ಎಂಬುದಕ್ಕೆ ಕಳೆದ ವಾರದಲ್ಲಿ ಆದ ಘಟನೆಗಳೇ ಸಾಕ್ಷಿ. ನಟ ದೀಪಕ್ ಚಿತ್ರೀಕರಣದ ವೇಳೆ ಅನಾಹುತಕ್ಕೆ ಗುರಿಯಾಗಿ ಸತ್ತರೆಂದು ಸುದ್ದಿಯಾಗಿದ್ದು, ನಟ ದರ್ಶನ್ ಹೆಂಡತಿಯನ್ನು ಹೊಡೆದು ಬಂಧಿತರಾಗಿದ್ದು ಈ ವಿಷಯದಲ್ಲಿ ದೃಶ್ಯ ಮಾಧ್ಯಮ ವಿಚೇಚನೆ ಇಲ್ಲದೆ ನಡಕೊಂಡಿತು. ಈ ಬಗ್ಗೆ ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತ ತುರುವೀಹಾಳ ಚಂದ್ರು ಲೇಖನ ಬರೆದಿದ್ದಾರೆ.

ಜನಪದ ವೈದ್ಯ: ಸದ್ಯ ಮತ್ತು ಮುಂದುವರಿಕೆಯ ನೆಲೆ

* ಡಾ. ಅರುಣ್ ಜೋಳದಕೂಡ್ಲಿಗಿ

ಚಳ್ಳಕೆರೆಯಲ್ಲಿ ಶ್ರೀದೇವಿ ಮೂಳೆ ಚಿಕಿತ್ಸಾಲಯವಿದೆ. ಅದು ಐದಾರು ಜನ ಇಕ್ಕಟ್ಟಿನಲ್ಲಿ ಕೂರಬಹುದಾದಷ್ಟು ಪುಟ್ಟದೊಂದು ರೂಮು. ಅಲ್ಲಿ ಮೂಳೆನೋವು, ಉಳುಕು, ಸೊಂಟನೋವು, ನರಸಮಸ್ಯೆ ಮುಂತಾದವುಗಳಿಂದ ಬಾದಿತರಾದ ರೋಗಿಗಳು ಸದಾ ಕಿಕ್ಕಿರಿದಿರುತ್ತಾರೆ. 34 ವರ್ಷದ ಯುವ ನಾಟಿ  ವೈದ್ಯ ಎನ್.ಲಕ್ಷ್ಮಣ್ ಅವರು ಮೂಳೆಗೆ ಸಂಬಂದಿಸಿದ ನೋವುಗಳಿಗೆ ಇಲ್ಲಿ ಚಿಕಿತ್ಸೆ ನೀಡುತ್ತಿರುತ್ತಾರೆ. ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಬಗೆಹರಿಯದ ಮೂಳೆ ಸಮಸ್ಯೆಗಳನ್ನು ಲಕ್ಷ್ಮಣ್ ವಾಸಿ ಮಾಡಿದ್ದಾರೆಂಬುದು ಆತನ ಬಗೆಗಿನ ಜನಾಭಿಪ್ರಾಯ. ಈ ವಿಷಯವಾಗಿ ಲಕ್ಷ್ಮಣ್ ಅವರೊಂದಿಗೆ ಮಾತನಾಡಿದಾಗ, ಆತನ ಮಾತು ಮತ್ತು ಅನುಭವದಿಂದ ಜನಪದ ವೈದ್ಯಕ್ಕೆ ಹೇಗೆ ಮರುಜೀವ ನೀಡಬಹುದು ಎನ್ನುವ ಬಗ್ಗೆ ಒಳನೋಟಗಳು ಹೊಳೆದವು.

ಲಕ್ಷ್ಮಣ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಪರುಷರಾಮಪುರದ ಹತ್ತಿರದ ಪಿ. ಮಹದೇವಪುರದವರು. ಇವರ ಅಜ್ಜ, ಅಪ್ಪ ಸಹ ಮೂಳೆಗೆ ಸಂಬಂಧಿಸಿದ ಜನಪದ ವೈದ್ಯವನ್ನು ಮಾಡುತ್ತಿದ್ದರಂತೆ, ಲಕ್ಷ್ಮಣ್ ಪಿಯುಸಿ ಪೇಲಾಗಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋದರಂತೆ, ಅಲ್ಲಿ ಆಕಸ್ಮಿಕವಾಗಿ ಅಪಘಾತವೊಂದರಲ್ಲಿ ಕಾಲುಮುರಿದುಕೊಂಡು ಮತ್ತೆ ತನ್ನ ಸ್ವಂತ ಊರಿಗೆ ಮರಳಬೇಕಾಯಿತು. ಇಲ್ಲಿ ತನ್ನ ತಂದೆಯಿಂದ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆದು ಗುಣಮುಖವಾಗುವ ಹೊತ್ತಿಗೆ ನಾನೆ ಯಾಕೆ ಅಪ್ಪನ ವಿದ್ಯೆಯನ್ನು ಕಲಿಯಬಾರದು ಅನ್ನಿಸಿದೆ. ಆಗ ಅಪ್ಪನ ಜತೆ ತಾನು ಮೂಳೆ ಚಿಕಿತ್ಸೆ ಮಾಡುವ ನಾಟಿ ವೈದ್ಯದ ವಿಧಾನಗಳನ್ನು ಕಲಿತಿದ್ದಾನೆ. ನಂತರ ಲಕ್ಷ್ಮಣ್ ಸ್ವತಃ ಮೂಳೆ ಸಂಬಂಧಿ ನೋವುಗಳಿಗೆ ಚಿಕಿತ್ಸೆ ನೀಡಲು ಶುರು ಮಾಡಿದ್ದಾರೆ.

ಪಿಯುಸಿ ಓದಿದ ಲಕ್ಷ್ಮಣ್ ತಂದೆಯಿಂದ ಕಲಿತದ್ದನ್ನಷ್ಟೆ ಅಲ್ಲದೆ, ಮೂಳೆ ನರಕ್ಕೆ ಸಂಬಂದಿಸಿದ ಪುಸ್ತಕಗಳನ್ನು ಓದಿ ತಿಳಿದಿದ್ದಾರೆ, ನಂತರ ಮೂಳೆತಜ್ಞ ನರತಜ್ಞ ಡಾಕ್ಟರುಗಳನ್ನು ಸಂಪಕರ್ಿಸಿ ಈ ಬಗ್ಗೆ ವೈಜ್ಞಾನಿಕವಾಗಿಯೂ ತಿಳಿದುಕೊಂಡಿದ್ದಾರೆ. ಅಂತೆಯೇ ಆಯುವರ್ೇದದ ಚಿಕಿತ್ಸೆಯ ಮಾದರಿಗಳನ್ನೂ ಕಲಿತಿದ್ದಾರೆ. ಹೀಗೆ ಮೂಳೆ ಸಂಬಂಧಿಯಾದ ಹಲವು ಬಗೆಯ ತಿಳುವಳಿಕೆ ಪಡೆದು ನಾಟಿ ವೈದ್ಯದಲ್ಲಿ ತನ್ನದೇ ಆದ ಒಂದು ವಿಶಿಷ್ಠ ವಿಧಾನವನ್ನು ರೂಪಿಸಿಕೊಂಡಿದ್ದಾರೆ. ತನ್ನ ತಾತ, ತಂದೆಯವರ ವೈದ್ಯದ ವ್ಯಾಪ್ತಿಯನ್ನು ಅಗಾಧವಾಗಿ ವಿಸ್ತರಿಸಿದ್ದಾರೆ. ಅಂತೆಯೇ ಜನಪದ ವೈದ್ಯದ ಬಗ್ಗೆ ಜನರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದ್ದಾರೆ.

ಹದಿಮೂರು ವರ್ಷದಿಂದ ಚಳ್ಳಕೆರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು, ಈತನಕ ಸುಮಾರು ಇಪ್ಪತ್ತೈದು  ಸಾವಿರಕ್ಕಿಂತ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದಾರೆ. ಇದು ಲಕ್ಷ್ಮಣ್ ಅವರ ಕಿರಿ ವಯಸ್ಸಿನ ಹಿರಿಯ ಸಾಧನೆ. ಆತ ಜನಸಾಮಾನ್ಯರಿಗೆ ಮೂಳೆ ನರಗಳ ಬಗ್ಗೆ ಸರಳವಾಗಿ ವಿವರಿಸಿ, ಆ ಕುರಿತು ಜಾಗೃತಿ ಮೂಡಿಸುತ್ತಾನೆ. ಈತನ ಬಳಿಗೆ ಬರುವ ರೋಗಿಗಳು ಬಹುಪಾಲು ಬಡವರು ರೈತರು ಹಳ್ಳಿಗರು. ಹಾಗಾಗಿ ಇವರು ಚಿಕಿತ್ಸೆಗೆ ಪಡೆವ ಹಣ ಕೂಡ ಜನಸಾಮಾನ್ಯರಿಗೆ ನಿಲುಕುವ ಕಡಿಮೆ ಮೊತ್ತ. ಯಾವುದೇ ಆಥರ್ೋಪೆಡಿಕ್ಸ ಡಾಕ್ಟರಿಗಿಂತ ಕಡಿಮೆ ಇಲ್ಲ ಎನ್ನುವಂತಿರುವ ಲಕ್ಷ್ಮಣ್ ಹಮ್ಮು ಬಿಮ್ಮುಗಳಿಲ್ಲದ ಸರಳ ವ್ಯಕ್ತಿ. ತನ್ನಿಂದ ಈ ರೋಗಕ್ಕೆ ಚಿಕಿತ್ಸೆ ಕೊಡಲು ಸಾದ್ಯವಿಲ್ಲ ಎಂತಾದರೆ, ಉಪಯುಕ್ತ ಮಾರ್ಗದರ್ಶನ ಮಾಡುತ್ತಾರೆ. ಇದನ್ನೆಲ್ಲಾ ನೋಡಿದರೆ ಲಕ್ಷ್ಮಣ್ ಜನಪದ ವೈದ್ಯವನ್ನು ಅರ್ಥಪೂರ್ಣವಾಗಿ ಮುಂದುವರಿಸುತ್ತಿದ್ದಾರೆ ಅನ್ನಿಸುತ್ತದೆ.

ಕನರ್ಾಟಕದ ಗ್ರಾಮೀಣ ಭಾಗದಲ್ಲಿ ಈಗಲೂ ಈ ತರಹದ ಸಾವಿರಾರು ಜನಪದ ವೈದ್ಯರಿದ್ದಾರೆ. ಅವರು ತಮ್ಮ ಸುತ್ತಮುತ್ತ ಸಿಗುವ ಗಿಡಮೂಲಿಕೆಗಳನ್ನು ಬಳಸಿ ಚಿಕಿತ್ಸೆ ಮಾಡುತ್ತಾರೆ. ಇಂದಿನ ಆಧುನಿಕ ವೈದ್ಯದ ಪ್ರಭಾವದಿಂದಾಗಿ ಜನಪದ ವೈದ್ಯರಲ್ಲಿ ನಂಬಿಕೆ ಕಡಿಮೆಯಾಗಿದೆ. ಚಿಕಿತ್ಸೆ ಪಡೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಹಿಂದೆ ನಾಟಿ ವೈದ್ಯವನ್ನು ಮಾಡುತ್ತಿದ್ದವರು ಈಗ ಕೈಬಿಟ್ಟಿದ್ದಾರೆ. ವಂಶಪಾರಂಪರ್ಯ ಮುಂದುವರಿಕೆ ಸಹ ಕುಂಟಿತವಾಗುತ್ತಿದೆ. ಕಾರಣ ಹೊಸ ತಲೆಮಾರು ತನ್ನ ತಾತ ಮುತ್ತಾತರಿಂದ ಬಂದ ವೈದ್ಯವನ್ನು ಮುಂದುವರಿಸಲು ಆಸಕ್ತಿ ತೋರದಾಗಿದ್ದಾರೆ. ಇದರಿಂದ ಗ್ರಾಮೀಣ ಭಾಗದ ರೈತರು, ಹಳ್ಳಿಗರು, ಬಡವರಿಗೆ ತೊಂದರೆಯಾಗಿದೆ. ಕಾರಣ ಇಂದು ಆಧುನಿಕ ವೈದ್ಯವನ್ನು ಕಲಿತವರು ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ಕೊಡುವ ಮನಸ್ಸು ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲಸಮಾಡಬೇಕಾಗಿರುವ ದಾದಿಯರೇ(ನರ್ಸಗಳು) ನಗರಗಳಲ್ಲಿ ಮನೆ ಮಾಡಿಕೊಂಡು ಹಳ್ಳಿಗಳಿಗೆ ವಿಮುಖರಾಗಿದ್ದಾರೆ. ಬಹುಪಾಲು ಸರಕಾರಿ ಆಸ್ಪತ್ರೆಗಳು ಸ್ವತಃ ರೋಗಿಗಳಂತೆ ನರಳುತ್ತಿವೆ. ಇನ್ನು ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳು ವಿಧಿಸುವ ಚಿಕಿತ್ಸೆಯ ದುಬಾರಿ ಮೊತ್ತವನ್ನು ಹಳ್ಳಿಗರಿಗೆ ಭರಿಸಲು ಸಾದ್ಯವಾಗುತ್ತಿಲ್ಲ. ಇದನ್ನು ನೋಡಿದರೆ ಇಂದು ಜನಪದ ವೈದ್ಯಕ್ಕೆ ಮರುಜೀವ ನೀಡುವ ಅಗತ್ಯವಿದೆ.

ಜನಪದ ವೈದ್ಯವನ್ನು ಇರುವಂತೆಯೆ ಮುಂದುವರೆಸುವುದು ಕಷ್ಟ. ಹಾಗಾಗಿ ನಾಟಿ ವೈದ್ಯದಲ್ಲಿ ಕೆಲವು ಅವಶ್ಯ ಮಾಪರ್ಾಡುಗಳನ್ನು ತರಬೇಕಿದೆ. ಈ ವೈದ್ಯದೊಂದಿಗೆ ಬೆರೆತ ಮೂಡನಂಬಿಕೆಗಳನ್ನು ಬಿಡಿಸಬೇಕಿದೆ. ದೈವಗಳೊಂದಿಗೆ ಲಗತ್ತಾಗಿರುವ  ನಂಬಿಕೆಯನ್ನು ಕಡಿಮೆ ಮಾಡಬೇಕಿದೆ. ನಾಟಿವೈದ್ಯರನ್ನು ಗುರುತಿಸಿ ಅವರಿಗೆ ವೈದ್ಯಕೀಯದ ಪ್ರಾಥಮಿಕ ತಿಳುವಳಿಕೆಯನ್ನು ನೀಡಬೇಕು. ಈ ಮೂಲಕ ಅವರ ವೈದ್ಯದಲ್ಲಿ ಕೆಲವು ಬದಲಾವಣೆಗೆ ಮಾರ್ಗದರ್ಶನ ಮಾಡಬೇಕು. ಅನುಭವಿ ನಾಟಿ ವೈದ್ಯರ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಕಮ್ಮಟಗಳನ್ನು ಮಾಡಿ, ಯುವಕರಲ್ಲಿ  ಜನಪದ ವೈದ್ಯದ ಬಗ್ಗೆ ಆಸಕ್ತಿ ಮೂಡಿಸುವಂತಾಗಬೇಕಿದೆ. ಮುಖ್ಯವಾಗಿ ನಾಟಿ ವೈದ್ಯದಲ್ಲಿ ಮತ್ತೆ ನಂಬಿಕೆ ಹುಟ್ಟುವ ರೀತಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕು.

ಕನರ್ಾಟಕ ಜಾನಪದ ಅಕಾಡೆಮಿ ಇಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ. ಸದ್ಯವೆ ಕಾರ್ಯ ಆರಂಭಿಸಲಿರುವ ಜಾನಪದ ವಿಶ್ವವಿದ್ಯಾಲಯ ಜನಪದ ವೈದ್ಯಕ್ಕೆ ಪ್ರತ್ಯೇಕ ವಿಭಾಗ ತೆರೆದು, ಜನಪದ ವೈದ್ಯರನ್ನು ತಯಾರು ಮಾಡಿ ಅಂತವರು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವಂತೆ ಪ್ರೇರೇಪಿಸಬೇಕಿದೆ. ನಾಟಿ ವೈದ್ಯ ಪದ್ದತಿಯ ಪರಿಣಿತರನ್ನು `ಜನಪದ ವೈದ್ಯ’ ಎಂಬ ಅಧಿಕೃತ ಸಟರ್ಿಪಿಕೇಟ್ ನೀಡಿ  ಅವರುಗಳು ಚಿಕಿತ್ಸಾ ಕೇಂದ್ರಗಳನ್ನು ನಡೆಸಲು ಅನುವಾಗುವಂತೆ ವ್ಯವಸ್ಥೆ ಮಾಡುವ ಅಗತ್ಯವಿದೆ. ಜನಪದ ವೈದ್ಯರನ್ನು ನಕಲಿ ವೈದ್ಯರೆಂದು ಅಪರಾದಿ ಸ್ಥಾನದಲ್ಲಿ ನಿಲ್ಲಿಸಬಲ್ಲ ಕಾನೂನುಗಳಿಗೂ ತಕ್ಕ ಬದಲಾವಣೆಯನ್ನು ತರುವ ಅಗತ್ಯವಿದೆ.


 

ಹನಿ… ಹನಿ…


ಬೆಳಗಾಯಿತು ;
ನನ್ನದಷ್ಟೇಯಲ್ಲ
ಲೋಕದ ಎಲ್ಲ
ಗಾಯಗಳು
ಬೀದಿ ತಲುಪಿದವು

ಎಷ್ಟು ನಿರಾಳವಾಗಿ ರೆಕ್ಕೆ ಬಿಚ್ಚಿದೆ
ಕನ್ಕಪ್ಪಡಿ ಇರುಳಿನಲ್ಲಿ ;
ಏನೂ ಕಾಣುವುದಿಲ್ಲವೆಂದು ಈಗಲೂ ಇರುಳನ್ನೇಕೆ
ದೂರುತ್ತಿ ..

ನಿನ್ನ ನಾಜೂಕು ಬೆರಳುಗಳಿಂದ
ನನ್ನ ಹೆಸರನ್ನ ಎದೆಯ ಮೇಲೆ ಬರೆಯಿಸಿಕೊಳ್ಳುವ
ಆಸೆ ಇನ್ನೂ ಇತ್ತು
ಬದುಕು ನಿನ್ನೆ ದಿನ
ನನ್ನ ಬೆರಳುಗಳಿಂದ ನಿನ್ನ ಹೆಸರನ್ನ
ನಿನ್ನ ಸಮಾಧಿಯ ಮೇಲೆ
ಬರೆಯಿಸಿತು ….


ನಿನ್ನ ಕಾಲು ನೋವಿನ ಸುದ್ದಿ ಈಗಷ್ಟೆ ತಲುಪಿತು
ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ನೀನು ಅಷ್ಟು ಓಡಾಡಬಾರದಿತ್ತು


ಇದೆಂಥ
ನೋಟ ಗೊತ್ತಿಲ್ಲ
ಇರುಳಿನಲಿ ಚಂದ್ರನ
ಕಂಡು
ಲೋಕ ಬೆಳಗಿನಲಿ
ಹಬ್ಬ ಆಚರಿಸುತ್ತಿದೆ
ಅದಕ್ಕೆಂದೇ
ಕರುಣಾಳು ಹಗಲು
ಕನಸ ಬಿಟ್ಟು ಬಂದವರಿಗೆ
ರೊಟ್ಟಿ ಕೊಡುತ್ತಿದೆ


ಬೆಳಕು
ಕಣ್ಣು ತೆರೆಯಿಸಿದೆಂದರು ;
ಎದ್ದು ನೋಡಿದೆ
ಬೆಳಗಿನಲಿ ಮರಕ್ಕೆ
ಜೋತು ಬಿದ್ದಿತ್ತು
ಬೆಳಕು ಕುರುಡಾಗಿಸಿದ
ಕನ್ಕಪ್ಪಡಿ ..!

೭ .
ಎಷ್ಟು ಸಾರಿ ತೊಳೆದರೂ ಕನ್ನಡಿಯನ್ನು
ಮುಖದ ಕಲೆ ಅಳಿಸಲಾಗದು.
೮ .
ಈ ಮನಸು ಕುದಿಕುದಿವ ಅವಿಶ್ರಾಂತ
ನಡುಗೆಯಲ್ಲಿದೆಯೆಂಬುದು ಸುಳ್ಳೇನಲ್ಲ
ನಿನ್ನ ಅಸಹನೆಗೆ ಕಾರಣವಿರಬಹುದು.
ಕಾದ ಬಂಡೆ ಜಂಗಮ ಕಾಲುಗಳನು
ಸ್ಥಾವರ ಮಾಡಗೊಡುವುದಿಲ್ಲ.
ಸುಡುವ ಕೆಂಡದ ಮೇಲೆ ಕಾಲೂರಿ
ನನ್ನೆಡೆಗೆ ಕೈಚಾಚುವ ಮನಸು ಹೇಳುತ್ತಿದೆ
ಪಾತರಗಿತ್ತಿ, ಹಾರಿ ಹೋಗುವ ಮುನ್ನ
ಸ್ಥಾವರಕ್ಕೂ ಜೀವತುಂಬು.
ಈ ಪ್ರೀತಿ
ಭೋರ್ಗರೆಯುವ ಜಲಧಾರೆಯಿಂದ
ಒಂದು ಹನಿಯನ್ನೂ
ಕೆನ್ನಾಲಿಗೆ ಚಾಚಿ ಪ್ರಜ್ವಲಿಸುವ ಬೆಂಕಿಯಿಂದ
ಒಂದು ಕಿಡಿಯನ್ನೂ
ನಿಗಿನಿಗಿ ಉರಿಯುವ ಸೂರ್ಯನಿಂದ
ಒಂದು ಕಣವನ್ನೂ
ಒಮ್ಮೆಲೆ ಬಂದೆರಗುವ ಬಿರುಗಾಳಿಯ ಧೂಳಿನಿಂದ
ಒಂದು ಅಣುವನ್ನೂ
ಘೀಳಿಡುವ ಆನೆ ಸದ್ದಿನಿಂದ
ಒಂದು ತುಣುಕನ್ನೂ
ಪಡೆದುಕೊಂಡಿದೆ.
ಕ್ಷಮಿಸು ಲೋಕವೆ..
ತಣ್ಣನೆಯ ಪ್ರೀತಿ ಸಾಧ್ಯವಿಲ್ಲ.
೧೦
ನೀನು
ಉಸಿರಾಡುವ ಗಾಳಿಯ ಹಾಗೆ
ಕಣ್ಣಿಗೆ ಕಾಣುವುದಿಲ್ಲ
ನಿನ್ನ ಇರುವಿಕೆ ಮಾತ್ರ
ಪ್ರತಿಕ್ಷಣ ಅರಿವಿಗೆ ಬರುತ್ತದೆ
ಏನು ಹೇಳಲಿ?
ಲೋಕ ಕಲಿಸಿದ ಪಾಠವಿದು
ಒಳಗಿರುವುದೆಲ್ಲ ಹೊರಗೆ ಕಾಣಿಸದು
೧೧
ನೀನು ಬೆಂಕಿಯಿಟ್ಟೆ
ಎಂಬುದು ನೆಪವಷ್ಟೆ
ಸುಟ್ಟ ಮೇಲಷ್ಟೆ
ಗಂಧದ ಕಡ್ಡಿಗೆ ಸುವಾಸನೆ.
೧೨ .
ದೀಪ ಹಚ್ಚಿಟ್ಟ ಮೇಲಾದರೂ
ಎದುರಿನ ಮುಖ ಕಾಣಲಿಲ್ಲವಾದರೆ
ದೋಷ ಎಲ್ಲಿಯದೆಂದು
ಈಗಲಾದರೂ ಹುಡುಕು
೧೩
ನಿನ್ನದೇನು ಮಹಾ?
ಬೆಳಕಾದವನನ್ನು ಕತ್ತಲೆಗೆ ದೂಡುವುದು
ದಿನದ ಪರಂಪರೆ.
೧೪
ಬಿದ್ದ ಮಳೆ ಒಂದೇ.
ಭೂಮಿಯ ಅನುಭವಕ್ಕೆ
ನೂರು ಬಣ್ಣ
೧೫
ಯಾರ ನೋವನ್ನೂ
ಸಹಿಸಲಾಗುವುದಿಲ್ಲ ನನಗೆ
ನನ್ನದರ ಹೊರತು
ಎಲ್ಲರ ಸಾವಿಗೂ ಕಣ್ಣೀರಾಗುವೆ
ನನ್ನದರ ಹೊರತು
೧೬
ಹೂ ಮುಡಿಗಿಡುವಾಗಿನ  ಖದರು
ಜಗುಲಿಗೆ  ಏರಿಸುವಾಗಿನ  ನೆದರು
ಗೋರಿ ಮೇಲೆ ಹರಡುವಾಗಿನ ಸದರು
ಒಂದೇ ಅಲ್ಲ
ಎಲ್ಲೆಡೆ ಇಟ್ಟಿದ್ದು
ಹೂವೇ ಆದರೂ
ಹೂವಿಟ್ಟ ಮನಸು ಘನತೆ ಪಡೆಯುವುದು
ಹೂವು ನಲುಗುವುದು.
೧೭ .
ಒಂದು ರಾತ್ರಿಯಾದರೂ
ನಾನು ಕತ್ತಲಲ್ಲಿ ಉಳಿಯದಂತೆ
ನೋಡಿಕೊಂಡೆ.
ಅದಕ್ಕೆಂದೇ
ಬೆಳಗಾಗುವ ಹೊತ್ತಿಗೆ
ನೀ ಹಚ್ಚಿಟ್ಟ ಹಣತೆಯಲ್ಲಿ
ಐಕ್ಯವಾದೆ.
೧೮
 ತುಟಿಗಳ ಬಿಸಿ ಆರುತ್ತ ನಡೆದಿದೆ
ಎದೆಯ ಕಾತರ ನಿಧಾನದ ಹಾದಿಯಲ್ಲಿದೆ
ಮಳೆಗಾಲದಲ್ಲೇ ಭೂಮಿಯ ಬಿಸಿ ಇಂಗತೊಡಗಿದೆ
ಇದು ನಿನ್ನ ಭಾಷೆಯಲ್ಲಿ ಉದಾಸೀನತೆ
ಲೋಕದ ಭಾಷೆಯಲ್ಲಿ ವೈರಾಗ್ಯ
ಎಲ್ಲ ಭಾಷೆಗಳೂ
ಬಣ್ಣದಲ್ಲಿ ಮುಳುಗೇಳುವ ಸಮಯವಿದು
ನನ್ನ ನಿನ್ನ ಎದೆಯು
ಎಚ್ಚರವಾಗಿಯೇ ಇದ್ದರೆ
ಬಿಸಿ ಆರುವ ತುಟಿಗಳಲ್ಲಿ
ಕಾತರ ಕಳೆದುಕೊಂಡ
ಎದೆಯ ಹಾದಿಯಲಿ
ಹಸಿ ಇಂಗುವ ಭೂಮಿಯಲಿ
ಸಾವು ಇಂಚಿಂಚಾಗಿ
ಬೆಳೆಯುವ ಸತ್ಯ ಗೊತ್ತಾಗುತ್ತಿತ್ತೇನೋ?
೧೯
ನಿನ್ನ ಅರ್ಥ ಮಾಡಿಕೊಳ್ಳುವುದೊಂದು ಕಸರತ್ತು
ನಾನದನ್ನು ನಿಲ್ಲಿಸಿದೆ
ಆ ಗಳಿಗೆಯಿಂದ ನಿನ್ನ ಮೌನ
ಎದೆಗೆ ತಲುಪತೊಡಗಿತು.
ಮಾತು ಕೇಳತೊಡಗಿತು
ಕೆಲವು ಸಂಗತಿಗಳಿರುತ್ತವೆ
ಬಾಯಿ ಬಿಟ್ಟು ಹೇಳಿದರೆ
ಬರೀ ಸದ್ದಷ್ಟೇ ಕೇಳುತ್ತದೆ
ಎಲ್ಲೋ ಇರುವ ಹೂ
ಅರಳಿದ್ದು ಗೊತ್ತಾಗುವ ಹಾಗೆ
ದೇಹದ ಒಳಗುಟ್ಟುಗಳು ಹೀಗಿರುತ್ತವಲ್ಲ
ಮಾತಿಲ್ಲದೆಯೂ
ಹೃದಯಕ್ಕೆ ಮುಟ್ಟುತ್ತವೆ.
೨೦ .
ನಿನ್ನ ನೋಡುವುದೆಂದರೆ
ಕಾತರದಲ್ಲಿ ಕುದಿಯುವುದಲ್ಲ
ನನ್ನ ಮುಖ ನಾನು ಕಾಣುವುದು
೨೧
ಲೋಕ ಅಂದುಕೊಳ್ಳಬಹುದೆಂದು
ನಾನು ಬದಲಾಗಲಾರೆ
ಈ ಬದುಕು
ಪ್ರೇಮದ ಆಟಕ್ಕಾಗಿಯೇ ಮೀಸಲಿದೆ
ಪ್ರೇಮವನ್ನು ಗೆಲ್ಲುತ್ತೇನೆ ಎಂದಲ್ಲ
ಈ ಆಟದಲ್ಲಿ ಸೋಲಾದರೂ ಚಿಂತೆಯಿಲ್ಲ
ಕೊನೆಗೊಮ್ಮೆ ದ್ವೇಷದ ಆಟವನ್ನು
ಆರಂಭಿಸುವುದು
ನನಗೆ ಬೇಡವೆನಿಸಿದೆ.

೨೨

ಅವನೆಂದನು
ನಿನ್ನನ್ನು ಪ್ರೀತಿಸಿದರೆ ಪ್ರೇಮಿಯಾಗುವೆ
ಲೋಕವನ್ನು ಪ್ರೀತಿಸಿದರೆ
ದೇವರಾಗುವೆ..
ಅವಳೆಂದಳು
ನನ್ನನ್ನು ಪ್ರೀತಿಸಿ ನನಗೆ ದೇವರಾಗು
ನನಗೆ ದೇವರಾದವನು
ಲೋಕಕ್ಕೂ ದೇವರಾಗುವನು
ನನ್ನನ್ನು ಪ್ರೀತಿಸದವನು
ಲೋಕವನ್ನು ಪ್ರೀತಿಸುತ್ತಾನೆಂದರೆ
ಹೇಗೆ ನಂಬುವುದು?
೨೩ .
ನನ್ನಂತೆ ನಿನ್ನಂತೆ
ಲೋಕದಲ್ಲಿ ಎಲ್ಲರೂ
ಪ್ರೀತಿಯನ್ನು ಬೇಡುತ್ತ ಹೊರಟವರೆ
ಕೊಡುವವರು ಇಲ್ಲದಾಗ
ಬೇಡುವವರ ಸಂಖ್ಯೆ
ದೊಡ್ಡದಾಗುವುದು
ಕೊಡದೇ ಹೋದ ಅರಿವು
ಪಡಕೊಂಡ ಸಮುದ್ರದ ನೀರನ್ನೂ
ಬರಿದಾಗಿಸುವುದು
ಬೇಡುವ ಬದಲು ಕೊಡುವುದನ್ನೇಕೆ
ರೂಢಿಸಿಕೊಳ್ಳಲಿಲ್ಲ?
ಹಾಗೆ ಮಾಡಿದ್ದರೆ
ಸಮುದ್ರದಲ್ಲಿದ್ದೂ
ಬಾಯಾರಿಕೆಯಿಂದ ಸಾಯುವ
ಘೋರತೆಯಿಂದ
ತಪ್ಪಿಸಿಕೊಳ್ಳಬಹುದಿತ್ತೇನೋ?

೨೪

ಬಣ್ಣದ ಚಿಟ್ಟೆ
ಕನಸಿನ ರೆಪ್ಪೆ ಪಿಳುಕಿಸುವುದು
ಹಗಲಿನಲ್ಲಲ್ಲ
೨೫ .
ನೀನು ಪ್ರೀತಿಸದೇ ಇದ್ದರೆ ಏನಾಗುತ್ತಿತ್ತು?
ಏನಿಲ್ಲ
ಎಲ್ಲವೂ ಹಾಗೆಯೇ ಇರುತ್ತಿತ್ತು..
ನಾನೂ..
ನನ್ನೊಳಗಿನ ರಾಕ್ಷಸ ವಿಲಾಸವೂ..

೨೬

ಸಂತನಾದರೇನು?
ಅವಮಾನದ ಕಟಕಟೆಯನ್ನೇರಿದಾಗ
ಅನುಮಾನ
ಎಲ್ಲ ದಿಕ್ಕಿನಿಂದಲೂ
ಎದ್ದು ಬರುವುದು
ಕುರುಡನ ಕೈಯಲ್ಲಿಯ ಕಲ್ಲು
ಯಾವ ದಿಕ್ಕಿನತ್ತ
ತಿರುಗುವುದೆಂದು
ಯಾರಿಗೂ ಗೊತ್ತಾಗುವುದಿಲ್ಲ
ಸ್ವತಃ ಕುರುಡನಿಗೂ ಸಹಾ..
೨೭.
ನಿನ್ನ ಪ್ರೀತಿಯಲ್ಲಿ
ನಾನು ಸುಟ್ಟುಕೊಂಡ ಮೇಲಷ್ಟೇ
ನಿನ್ನ ಪ್ರೀತಿಸುವುದು
ರುಜುವಾತಾಗುವುದು
ಕಳವಳಕ್ಕೆ ಕಾರಣಗಳಿಲ್ಲ
ಸುಡದ ಸುರಕ್ಷಿತ ದಾರಿಯಲ್ಲಿ
ಪ್ರೇಮ ದೊರಕದು

-ವಿಭಾವ