Author Archives: admin1

ಜೀವನದಿಗಳ ಸಾವಿನ ಕಥನ – 13

– ಜಗದೀಶ್ ಕೊಪ್ಪ

ಹರಿಯುವ ಎಲ್ಲಾ ನದಿಗಳೂ ಸ್ವಚ್ಛವಾದ ತಿಳಿನೀರನ್ನು ಒಳಗೊಂಡಿರುವುದಿಲ್ಲ. ಜಗತ್ತಿನ ಎಲ್ಲಾ ನದಿಗಳೂ ನೀರಿನ ಜೊತೆ ಹೂಳನ್ನು ಹೊತ್ತು ಹರಿಯುವುದು ಸಹಜ. ಅದರಲ್ಲೂ ಬಹುತೇಕ ನದಿಗಳ ನೀರು ಕಲ್ಮಶ ಹಾಗೂ ಮಣ್ಣಿನಿಂದ ಕೂಡಿದ್ದು, ಇವುಗಳಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟುಗಳು ನೀರು ಸಂಗ್ರಹದ ಜಲಾಶಯಗಳಾಗುವ ಬದಲು ಹೂಳು ಸಂಗ್ರಹ ಗುಂಡಿಗಳಾಗಿವೆ. ಹಾಗಾಗಿ ಜಲಾಶಯಗಳಲ್ಲಿ ಸಂಗ್ರಹವಾಗುವ ಹೂಳು ಎಲ್ಲಾ ಸರಕಾರಗಳಿಗೆ, ತಂತ್ರಜ್ಞರಿಗೆ ಇಂದಿಗೂ ದೊಡ್ಡ ಸವಾಲಾಗಿದೆ.

ಅಮೆರಿಕಾದ ಜಾರ್ಜ್  ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಖಲೀದ್ ಮಹಮದ್ ಅವರ ಪ್ರಕಾರ, ಪ್ರತಿ ವರ್ಷ ಐವತ್ತು ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಗತ್ತಿನಾದ್ಯಂತ ಜಲಾಶಯಗಳಲ್ಲಿ ಸಂಗ್ರಹವಾಗುತ್ತಿದೆ. 1990 ರಲ್ಲೇ ಜಗತ್ತಿನಾದ್ಯಂತ 1,300 ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಲಾಶಯಗಳಲ್ಲಿ ತುಂಬಿಹೋಗಿತ್ತು. ಇದೀಗ ಎರಡು ದಶಕಗಳ ನಂತರ ದುಪ್ಪಟ್ಟಾಗಿದ್ದರೂ ಆಶ್ಚರ್ಯವಿಲ್ಲ. ಬಹಳಷ್ಟು ಜಲಾಶಯಗಳ ಆಯುಷ್ಯ ಅವುಗಳ ಗಾತ್ರ, ನೀರು ಶೇಖರಿಸುವ ಸಾಮಥ್ರ್ಯಗಳಿಂದ ನಿರ್ಧಾರವಾಗುತ್ತದೆ. ಸಣ್ಣ ಜಲಾಶಯಗಳು ಎರಡು ಮೂರು ದಶಕಗಳಲ್ಲೇ ಹೂಳಿನಿಂದ ತುಂಬಿಹೋಗಿರುವ ಉದಾಹರಣೆಗಳು ಹಲವಾರಿವೆ.

ಚೀನಾದ ಹಳದಿ ನದಿ

ಸಾಮಾನ್ಯವಾಗಿ ಹರಿಯುವ ನದಿಗಳ ನೀರಿನಲ್ಲಿರುವ ಹೂಳಿನ ಪ್ರಮಾಣ ಶೇ.0.2ರಿಂದ 0.5ರವರೆಗೆ ಇದ್ದು, ಚೀನಾದ ನದಿಗಳಲ್ಲಿ ಮಾತ್ರ ಈ ಪ್ರಮಾಣ 2.3ರಷ್ಟಿದೆ. ಜಲಾಶಯದ ಹೂಳು ಮತ್ತು ನದಿನೀರಿನ ಕಲ್ಮಶ ಜಾಗತಿಕ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಗೂ ಅಡ್ಡಿಯಾಗಿದೆ. ಬಹುತೇಕ ಅಣೆಕಟ್ಟುಗಳನ್ನು ವಿದ್ಯುತ್ ಉತ್ಪಾದನೆಯನ್ನೇ ಗುರಿಯಾಗಿಸಿ ನಿರ್ಮಿಸಲಾಗಿದೆ. ಇಂತಹ ಸ್ಥಳಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಹಾಯಿಸುವ ಕೊಳವೆಗಳು, ಟರ್ಬನ್ ಇಂಜಿನ್ ಬ್ಲೇಡುಗಳು ಕೆಸರಿನಿಂದ ಕಲ್ಮಶವಾದ ನೀರಿನಿಂದಾಗಿ ತುಕ್ಕು ಹಿಡಿಯುತ್ತಿದ್ದು, ಇವುಗಳ ದುರಸ್ತಿ ವೆಚ್ಚ ವಿದ್ಯುತ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿದೆ.

ಜಗತ್ತಿನ ಅತ್ಯಂತ ಕಲ್ಮಷಯುಕ್ತ ನದಿಯೆಂದೇ ಪರಿಗಣಿಸಿರುವ ಚೀನಾದ ಹಳದಿ ನದಿ ಉತ್ತರ ಚೀನಾದಿಂದ ಹರಿದು ಬರುವಾಗ ನೀರಿಗಿಂತ ಹೆಚ್ಚಾಗಿ ಕೆಸರನ್ನೇ ತನ್ನೊಡಲೊಳಗೆ ಸಾಗಿಸುತ್ತದೆ. ಇದರ ಪ್ರಮಾಣ ಗತ್ತಿನ ಇತರೆ ನದಿಗಳಿಗಿಂತ ಶೇ.9ರಷ್ಟು ಹೆಚ್ಚಾಗಿದೆ. 1957ರಲ್ಲಿ ಅಂದಿನ ಸೋವಿಯತ್ ಸರಕಾರದ ತಾಂತ್ರಿಕ ನೆರವಿನಿಂದ ಹಳದಿನದಿಯ ಕೆಳ ಪಾತ್ರದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಮೂರು ಗೇಟಿನ ಜಾರ್ಜ್  ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಪರಿಸರ ತಜ್ಞರು, ಅತಿ ಶೀಘ್ರದಲ್ಲೇ ಹೂಳು ತುಂಬುವ ಸಂಭವ ಇದೆ ಎಂದು ಎಚ್ಚರಿಸಿದರೂ, ಸರಕಾರ ಇವರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. 1960ರಲ್ಲಿ ಅಣೆಕಟ್ಟು ಮುಕ್ತಾಯಗೊಂಡು, 1962ರ ವೇಳೆಗೆ 50 ಮಿಲಿಯನ್ ಟನ್ ಹೂಳು ಶೇಖರವಾಗಿತ್ತು. ಹೂಳು ತುಂಬಿದ ಕಾರಣ ಜಲಾಶಯದ ಹಿನ್ನೀರಿನ ವಿಸ್ತೀರ್ಣವೂ ಹೆಚ್ಚಾಯಿತು. ಆಗ ಎಚ್ಚೆತ್ತುಗೊಂಡ ಚೀನಾ ಸರಕಾರ 1962ರಿಂದ 1973ರವರೆಗೆ ಸತತವಾಗಿ, ಅಣೆಕಟ್ಟಿನ ವಿನ್ಯಾಸವನ್ನು ಬದಲಿಸಿ, ಶೇಖರವಾಗುವ ಹೂಳು ಪ್ರವಾಹ ಸಂದರ್ಭದಲ್ಲಿ ಹೊರಹೋಗುವಂತೆ ಕಾಮಗಾರಿಯನ್ನು ಮಾಡಿತು. ಪ್ರವಾಹ ನಿಯಂತ್ರಣದ ಜೊತೆಗೆ 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಆದರೆ ಹೂಳಿನ ಪರಿಣಾಮದಿಂದ ಕೇವಲ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾತ್ರ ಸಾಧ್ಯವಾಯಿತು.

ಇಂತಹದ್ದೇ ಘಟನೆ ಚೀನಾದ ಯಂಗೊಕ್ಷಿಯಾ ಎಂಬ ನದಿಗೆ 57 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸುವಾಗ  ಮತ್ತೆ ಮರುಕಳಿಸಿತು. 1967ರಲ್ಲಿ ನಿರ್ಮಿಸಲಾಗದ ಈ ಜಲಾಶಯ ಹೂಳಿನಿಂದ ತುಂಬಿಹೋಗಿ, ನೀರಿನ ಶೇಖರಣೆಗಿಂತ ಹೂಳಿನ ಶೇಖರಣೆಯೇ ಈ ಜಲಾಶಯದ ಗುರಿಯೇನೊ ಎಂಬಂತಾಗಿದೆ. ಹೂಳು ಮಿಶ್ರಿತ ನೀರು ಹರಿಯುವ ನದಿಗಳ ಸಂಗತಿ ಹೊಸದೇನಲ್ಲ. ಆದರೆ ನಮ್ಮ ಅಣೆಕಟ್ಟು ತಜ್ಞರು, ಜಗತ್ತಿನ ಎಲ್ಲಾ ನದಿಗಳೂ ಸ್ವಚ್ಛ ತಿಳಿನೀರಿನ ನದಿಗಳೆಂದೇ ಭಾವಿಸಿ ಅಣೆಕಟ್ಟು ನಿರ್ಮಾಣಕ್ಕೆ  ಮುಂದಾಗಿರುವುದೇ ಅಣೆಕಟ್ಟುಗಳ ದುರಂತಕ್ಕೆ ಕಾರಣವಾಗಿದೆ.

ಆಯಾ ಪ್ರಾದೇಶಿಕ ಹವಾಗುಣ, ಮಣ್ಣಿನ ಗುಣ, ಸವಕಲು ಮಣ್ಣಿನ ನದಿಯ ಇಕ್ಕೆಲಗಳು ನದಿಗಳು ಹೂಳು ತುಂಬಿ ಹರಿಯಲು ಕಾರಣವಾಗಿವೆ. ಹಾಗಾಗಿ ಯಾವುದೇ ನದಿಗೆ ಅಣೆಕಟ್ಟು ಕಟ್ಟುವ ಮುನ್ನ ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾದದ್ದು ಅವಶ್ಯಕ. ಜೊತೆಗೆ ಈಗಾಗಲೇ ನಿಮರ್ಿಸಿರುವ ಅಣೆಕಟ್ಟಿನಲ್ಲಿ ಶೇಖರವಾಗಿರುವ ಹೂಳಿನ ಪ್ರಮಾಣವದ ಪರಿಶೀಲಿನೆ ಅಗತ್ಯ. ಕೆಲವು ನದಿಗಳು ಮಳೆಗಾಲದ ಪ್ರವಾಹದಿಂದ ಉಕ್ಕಿ ಹರಿಯುವ ಸಂದರ್ಭದಲ್ಲಿ ಹೂಳು ತುಂಬಿದ ನೀರಿನೊಡನೆ ಹರಿದರೆ, ಹಲವು ನದಿಗಳು ವರ್ಷದ ಎಲ್ಲಾ ದಿನಗಳಲ್ಲೂ ಹೂಳಿನಿಂದ ಕೂಡಿದ ನೀರಿನಿಂದಲೇ ಹರಿಯುತ್ತವೆ.

ನದಿಗಳು ಹೂಳು ತುಂಬಿದ ನೀರಿನೊಡನೆ ಹರಿಯಲು ಕಾರಣವೆಂದರೆ, ಅಗ್ನಿಜ್ವಾಲೆ ಮತ್ತು ಪರ್ವತದ ತಪ್ಪಲಿನಲ್ಲಿ ಭೂಕಂಪನದಿಂದಾಗಿ ಉಂಟಾಗುವ ಮಣ್ಣಿನ ಕುಸಿತ. ಅಮೆರಿಕಾ, ಏಷ್ಯಾದ ಭಾರತ ಮುಂತಾದ ರಾಷ್ಟ್ರಗಳಲ್ಲಿ ಪ್ರವಾಹದಿಂದ ನದಿಗಳು ಹೂಳು ತುಂಬಿ ಹರಿದರೆ, ಚೀನಾದ ಬಹುತೇಕ ನದಿಗಳು ವರ್ಷದ ಎಲ್ಲಾ ಋತುಗಳಲ್ಲೂ ಹೂಳಿನೊಡನೆ ಹರಿಯುತ್ತವೆ. ಇಂತಹ ಯಾವುದೇ ಅಂಕಿ ಅಂಶಗಳನ್ನು ಪರಿಗಣಿಸದೇ ಜಗತ್ತಿನ ಶೇ.80ಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗಿವೆ, ಆಗುತ್ತಿವೆ. ಇದಕ್ಕೆ ಉದಾಹರಣೆಯೆಂದರೆ, 1981ರಲ್ಲಿ ನೇಪಾಳದಲ್ಲಿ ನಿರ್ಮಾಣ ವಾದ ಕುಲೇಖಾನಿ ಎಂಬ ಅಣೆಕಟ್ಟು. ಈ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಲು ಕನಿಷ್ಠ 75ರಿಂದ 100 ವರ್ಷಗಳು ಬೇಕಾಗಬಹುದೆಂದು ಅಣೆಕಟ್ಟು ತಜ್ಞರು ಊಹಿಸಿದ್ದರು. ಆದರೆ 1993ರಲ್ಲಿ ಅಣೆಕಟ್ಟಿನ ಮೇಲ್ಭಾಗದ ನದಿ ಪಾತ್ರದಲ್ಲಿ ಉಂಟಾದ ಭೂ ಕುಸಿತದಿಂದ ಕೇವಲ 30 ಗಂಟೆಗಳ ಅವಧಿಯಲ್ಲಿ ಜಲಾಶಯದ ಸಾಮರ್ಥ್ಯದ 10ನೇ ಒಂದು ಭಾಗದಷ್ಟು ಹೂಳು ತುಂಬಿತು. ಆ ನಂತರ 19 ವರ್ಷಗಳ ಅವಧಿಯಲ್ಲಿ ಅಂದರೆ 2000 ಇಸವಿಗೆ 114 ಅಡಿ ಎತ್ತರದ ಅಣೆಕಟ್ಟಿನ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಿ, ಯಾವ ಪ್ರಯೋಜನಕ್ಕೂ ಬಾರದಾಯಿತು.

ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕಾಗಿ ನಿರ್ಮಿಸಲಾಗಿದ್ದ  ಅಣೆಕಟ್ಟು ಯೋಜನೆಯಿಂದ ನೇಪಾಳ ಸರಕಾರ ವಿಶ್ವಬ್ಯಾಂಕ್ ಸಾಲದ ಸುಳಿಗೆ ಸಿಲುಕುವಂತಾಯಿತು. ಇದೇ ರೀತಿ ಜಗತ್ತಿನಾದ್ಯಂತ ವಿಶ್ವಬ್ಯಾಂಕ್ ಹಾಗೂ ಅಮೆರಿಕಾದ ಇಂಟರ್ ಅಮೇರಿಕನ್ ಬ್ಯಾಂಕಿನಿಂದ ಸಾಲಪಡೆದ ದಕ್ಷಿಣ ಅಮೆರಿಕಾದ ರಾಷ್ಟ್ರಗಳು, ಗ್ವಾಟೆಮಾಲಾ, ಹಂಡುರಾಸ್, ಕಾಸ್ಪರಿಕಾ ಮುಂತಾದ ದೇಶಗಳಲ್ಲಿ ನಿರ್ಮಾಣವಾಗಿರುವ ಅಣೆಕಟ್ಟುಗಳು ನಿಷ್ಪ್ರಯೋಜಕವಾಗಿವೆ. 1993ರಲ್ಲಿ ಅಮೆರಿಕಾದ ಆರ್ಮ್  ಕಾರ್ಪ್ಸ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ತಾಂತ್ರಿಕ ಸಲಹೆಯಿಂದ ಎಲ್ಸೆಲ್ಫಡಾರ್ನಲ್ಲಿ 135 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಉದ್ದೇಶದಿಂದ ನಿರ್ಮಾಣವಾದ   ಸೆರ್ರೆನ್ ಗ್ಯ್ರಾಂಡ್ ಎಂಬ ಅಣೆಕಟ್ಟು ಕೇವಲ 30 ವರ್ಷಗಳಲ್ಲಿ ಹೂಳು ತುಂಬಿ ಕೆಲಸಕ್ಕೆ ಬಾರದಂತಾಯಿತು. ಈ ಜಲಾಶಯದಲ್ಲಿ ಹೂಳು ತುಂಬಲು 350 ವರ್ಷಗಳು ಬೇಕು ಎಂದು ಅಮೆರಿಕ ಸಂಸ್ಥೆ ಯೋಜನಾ ವರದಿಯಲ್ಲಿ ತಿಳಿಸಿತ್ತು. ಭಾರತದ ಪರಿಸ್ಥಿತಿ ಕೂಡ ಮೇಲಿನ ರಾಷ್ಟ್ರಗಳಿಗಿಂತ ಭಿನ್ನವಾಗಿಲ್ಲ.

ಭಾರದ 11 ಜಲಾಶಯಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ಶೇಖರವಾಗುತ್ತಿದೆ. ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟು ಜಲಾಶಯದಿಂದ ಹಿಡಿದು ದಕ್ಷಿಣದ ಆಂಧ್ರದ ನಿಜಾಂಸಾಗಸ್ ಜಲಾಶಯದವರೆಗೆ ಶೇ.135ರಿಂದ ಶೇ.1650 ಪಟ್ಟು ವೇಗದಲ್ಲಿ ಹೂಳು ಶೇಖರವಾಗುತ್ತಿದೆ. ಕೇವಲ ಅಣೆಕಟ್ಟು ನಿಮರ್ಾಣವನ್ನೇ ತಮ್ಮ ಲಾಭದಾಯಕ ದಂಧೆಯನ್ನಾಗಿ ಮಾಡಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ, ಅಣೆಕಟ್ಟುಗಳ ದುರಂತದ ಬಗ್ಗೆಯಾಗಲಿ, ಭವಿಷ್ಯದ ಬಗ್ಗೆಯಾಗಲಿ ಉತ್ತರದಾಯಕತ್ವ ಇಲ್ಲದಿರುವುದು ಕೂಡ ಗಮನಾರ್ಹ ಸಂಗತಿ. ಯಾವುದೇ ನದಿಗೆ ಅಣೆಕಟ್ಟು ನಿಮರ್ಿಸುವ ಮುನ್ನ ನದಿಯ ನೀರಿನ ಹರಿವಿನ ಪ್ರಮಾಣವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅಣೆಕಟ್ಟು ನಿರ್ಮಾಣವಾಗುವ ಸ್ಥಳದ ಮೇಲ್ಭಾಗದ ನದಿಯ ಪಾತ್ರ ಹಾಗೂ ಇಕ್ಕೆಗಳ ಭೂಮಿ, ಅಲ್ಲಿನ ಮಣ್ಣಿನ ಗುಣ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ. ಮಣ್ಣು ಮರಳು ಮಿಶ್ರಿತವಾಗಿದ್ದು ಸವಕಳು ಗುಣ ಹೊಂದಿದ್ದರೆ ನದಿಯ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸುವುದರ ಜೊತೆಗೆ ಅಲ್ಲಲ್ಲಿ ಸಣ್ಣ-ಸಣ್ಣ ಬ್ಯಾರೇಜ್ಗಳನ್ನು ನಿರ್ಮಿಸಿ, ನೀರಿನಲ್ಲಿ ಹರಿಯುವ ಹೂಳನ್ನು ತಡೆಯುವ ಯೋಜನೆಗಳನ್ನು ರೂಪಿಸಬೇಕು.

ಆದರೆ ನದಿಗಳ ಸಹಜ ಹರಿಯುವಿಕೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದೊಂದನ್ನೇ ಗುರಿಯಾಗಿರಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಸಾಲ ನೀಡುವ ಏಜನ್ಸಿಗಳಿಗೆ ಈ ಬಗ್ಗೆ ಯಾವುದೇ ಕಾಳಜಿ ಇಲ್ಲ. ಏಕೆಂದರೆ ಭವಿಷ್ಯದಲ್ಲಿ ಜಲಾಶಯ ಹೂಳಿನಿಂದ ತುಂಬಿದರೆ ಈ ಸಂಸ್ಥೆಗಳಿಗೆ ಲಾಭ. ಹೂಳು ತೆಗೆಯುವ ಕಾಮಗಾರಿಯನ್ನೂ ಇವರೇ ಪಡೆಯಬಹುದು. ಸಾಮಾನ್ಯವಾಗಿ ಜಲಾಶಯಗಳಲ್ಲಿ ಶೇಖರವಾಗುವ ನೀರಿನ ಪ್ರಮಾಣವನ್ನು ಎರಡು ಹಂತಗಳಲ್ಲಿ ಗುರುತಿಸಲಾಗುತ್ತದೆ. ಒಂದು ಜೀವ ಶೇಖರಣೆ(Live storege) ಇನ್ನೊಂದು ನಿರ್ಜೀವ  ಶೇಖರಣೆ(Dead storage) ಅಂದರೆ ಮೊದಲ ಹಂತದಲ್ಲಿ ಶೇಖರವಾಗುವ ನೀರನ್ನು ನೀರಾವರಿ ಇಲ್ಲವೆ ಜಲವಿದ್ಯುತ್ ಉತ್ಪಾದನೆಗೆ ಬಳಸಬಹುದು.

ಎರಡನೇ ಹಂತದಲ್ಲಿ ಶೇಖರವಾಗುವ ನೀರು, ಅಣೆಕಟ್ಟಿನ ತೂಬು ಅಥವಾ ನೀರು ಹೊರ ಹೋಗುವ ಗೇಟ್ಗಳ ಕೆಳಹಂತದ ಮಟ್ಟದಲ್ಲಿ ಶೇಖರವಾಗುವ ನೀರು. ಇದು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಶೇಖರಣೆಯಾಗಿರುತ್ತದೆ. ಬಹುತೇಕ ಎಲ್ಲಾ ಹಂತಗಳಲ್ಲಿ ಹೂಳು ಈ ನಿಜರ್ೀವ ಶೇಖರಣೆ ಎನ್ನುವ ಜಲಾಶಯದ ತಳಮಟ್ಟದಲ್ಲಿ ಸಂಗ್ರಹವಾಗುವುದರಿಂದ, ಪ್ರವಾಹದಂತಹ ಸಂದರ್ಭದಲ್ಲೂ ಗೇಟ್ ಮೂಲಕ ಹರಿಸುವ ನೀರಿನ ಜೊತೆ ಹೂಳು ಹೊರಹೋಗುವುದಿಲ್ಲ. ನದಿಯ ಕೆಳ ಪಾತ್ರದ ಭೂಮಿಯ ವಿನ್ಯಾಸ ಕೂಡ ಈ ಸಂದರ್ಭದಲ್ಲಿ ಮುಖ್ಯ. ತೀರ ಇಳಿಜಾರಾಗಿದ್ದರೆ, ಜಲಾಶಯದ ಹೂಳು ನೀರಿನ ಜೊತೆ ಹರಿದು ಹೋಗಲು ಸಾಧ್ಯ. ಭೂಮಿ ಸಮತಟ್ಟಾಗಿದ್ದರೆ ಹೂಳು ಹರಿಯುವ ಸಾಧ್ಯತೆ ಬಹಳ ಕಡಿಮೆ.

ಇಂತಹ ಸ್ಥಿತಿಯಲ್ಲಿ  ಹೂಳೂ ತೆಗೆಯುವ ಯಂತ್ರಗಳ ಸಹಾಯದಿಂದ ತೆಗೆಸಬೇಕಾಗುತ್ತದೆ. ನೀರು ಮಿಶ್ರಿತ ಹೂಳನ್ನು ದೊಡ್ಡ ಮಟ್ಟದ ಪಂಪ್ಗಳಿಂದ ಪೈಪ್ ಮೂಲಕ ಹೊರಕ್ಕೆ ಸಾಗಿಸಲಾಗುತ್ತದೆ. ಇದು ದುಬಾರಿ ವೆಚ್ಚದ ಕೆಲಸ. ನಮ್ಮನ್ನಾಳುವ ಸರಕಾರಗಳು ಯಾವುದೇ ಒಂದು ಯೋಜನೆ ಆರಂಭಿಸುವ ಮುನ್ನ ಅದರ ಆಳ – ಅಗಲ, ಸಿಗಬಹುದಾದ ಪ್ರತಿಫಲ ಅಥವಾ ಆಗಬಹುದಾದ ನಷ್ಟ ಇವೆಲ್ಲವನ್ನೂ ಎಲ್ಲಾ ಕೋನಗಳಿಂದ ಗ್ರಹಿಸಿ ವಿಶ್ಲೇಷಿಸಬೇಕು. ಜೊತೆಗೆ ನೈಸಗರ್ಿಕವಾಗಿ, ಸಾಮಾಜಿಕವಾಗಿ, ಆಥರ್ಿಕವಾಗಿ ಉಂಟಾಗುವ ಪರಿಣಾಮಗಳನ್ನೂ ಗ್ರಹಿಸಬೇಕು. ಇವುಗಳ ವಿವೇಚನೆ ಇಲ್ಲದೆ ಜಾಗತಿಕವಾಗಿ ಕೈಗೊಳ್ಳುವ ಅನೇಕ ಬೃಹತ್ ಯೋಜನೆಗಳು ಅಭಿವೃದ್ಧಿ ಹೆಸರಿನ ಅವಘಡಗಳಾಗುತ್ತವೆ ಅಷ್ಟೆ.

( ಮುಂದುವರಿಯುವುದು)

ಕಡಿವಾಣ ಹಾಕದಷ್ಟು ನಾವೆಲ್ಲ ನಿತ್ರಾಣರಾಗಿದ್ದೇವೆಯೇ?

 ಬಿ.ಶ್ರೀಪಾದ ಭಟ್

ಈ ದೇಶದ ನಾಲ್ಕು ಸ್ತಂಭಗಳೆಂದು ಕರೆಯಿಸಿಕೊಳ್ಳುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳು ಇಂದು ಹಿಂದೆಂದಿಗಿಂತಲೂ ಸುದ್ದಿಯಲ್ಲಿವೆ, ಅದರೆ ಕೆಟ್ಟ ಕಾರಣಗಳಿಗಾಗಿ. ಶಾಸಕಾಂಗ, ಕಾರ್ಯಾಂಗಗಳು ಹಾಗೂ ಅಲ್ಲಿನ ಜನ, ಅಧಿಕಾರಿಗಳು, ರಾಜಕಾರಣಿಗಳು ಒಬ್ಬರಿಗೊಬ್ಬರು ಮಿಲಕಾಯಿಸಿಕೊಂಡು ಭ್ರಷ್ಟಾಚಾರದಲ್ಲಿ, ಜಾತೀಯತೆಯಲ್ಲಿ ಹೊಸ ಹೊಸ ಮೈಲಿಗಲ್ಲುಗಳನ್ನು ನೆಟ್ಟು ಈ ದೇಶವನ್ನು ದುರಂತದ ಅಂಚಿಗೆ ತಂದು ನಿಲ್ಲಿಸಿರುವುದು ಸೂರ್ಯ ಸ್ಪಷ್ಟ. ಇವೆರೆಡೂ ರಂಗಗಳು  ಸ್ವಾರ್ಥಕ್ಕಾಗಿ, ಸ್ವಜಾತಿ ಬಂಧುಗಳು, ಸ್ನೇಹಿತರುಗಳ ಭೋಗ ಜೀವನಕ್ಕಾಗಿ ನಡೆಸಿದ ಭ್ರಷ್ಟಾಚಾರದ ಕೃತ್ಯಗಳು ಇಂದು ಜನಸಾಮಾನ್ಯರ ಕಣ್ಣಲ್ಲಿ ತಿರಸ್ಕಾರಕ್ಕೆ, ಅಸಹಾಯಕತೆಗೆ ಕಾರಣವಾಗಿವೆ.

ಇದನ್ನು ಸ್ವಚ್ಚಗೊಳಿಸಲು ಸಲುವಾಗಿ ನ್ಯಾಯಾಂಗ ಇಂದು ತೊಡಗಿಕೊಂಡಿರುವ ರೀತಿ ಭವಿಷ್ಯದ ಬಗ್ಗೆ ಅಶಾವಾದವನ್ನು ಮೂಡಿಸುತ್ತದೆ ಹಾಗೂ ಅದರ ಕ್ರಿಯಾಶೀಲತೆ ಯ ನಡೆಗಳು ನಮ್ಮನ್ನು ಸದಾಕಾಲ ಎಚ್ಚರದಿಂದ ಇರುವಂತೆ ಮಾಡಿವೆ. ಅಲ್ಲದೆ ನಾವೆಲ್ಲ ಕೇವಲ ಮಾತಿನಲ್ಲಿ ಮನೆ ಕಟ್ಟದೆ ಸ್ವಯಂ ಪ್ರೇರಿತರಾಗಿ ಈ ಎರಡೂ ರಂಗಗಳು ತಂದಿಟ್ಟ ಅನಿಷ್ಟ ಪರಂಪರೆಯ ವಿರುದ್ಧ ಹೋರಾಡಲು ನಮಗೆಲ್ಲ ಒಂದು open space ಕಲ್ಪಿಸಿಕೊಟ್ಟಿದೆ. ಇಂತಹ ಪರಿಸ್ಥಿಯಲ್ಲಿ ಪತ್ರಿಕಾರಂಗದ ರೀತಿನೀತಿಗಳು ಕುತೂಹಲಕರವಾಗಿವೆ. ತಾವು ಟೀಕಾತೀತರು ಎನ್ನುವ ಭ್ರಮೆಯಲ್ಲಿಯೇ ವರ್ತಿಸುವ ಇಲ್ಲಿನ ಬಹುಪಾಲು ಮಂದಿ ಪದೇ ಪದೇ ತಮ್ಮ ನೈತಿಕತೆಯ, ಸಂಯಮದ ಲಕ್ಷ್ಮಣರೇಖೆಯನ್ನು ದಾಟುವ ಹುನ್ನಾರಗಳಿಂದಾಗಿ ಇಂದು ಈ ರಂಗದಲ್ಲಿಯೂ ಅನೇಕ ರೀತಿಯ ತಲ್ಲಣಗಳಿಗೆ, ತಿರಸ್ಕಾರಗಳಿಗೆ ಕಾರಣರಾಗಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ಖಟ್ಟು ಅವರು ತಮ್ಮದೇ ಆದ ಬೀಸು ಶೈಲಿಯಲ್ಲಿ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾರೆ (ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರವರು ಈ ಬಗ್ಗೆ ಅತ್ಯುತ್ತಮವಾಗಿ ಅತ್ಯಂತ ಮಾರ್ಮಿಕವಾಗಿ ಬರೆದಿದ್ದಾರೆ).

ನಮ್ಮ ರಾಜ್ಯದ ಒಂದು ಉದಾಹರಣೆಯನ್ನೇ ತೆಗೆದುಕೊಂಡರೆ ಇಂದು ಇಲ್ಲಿನ ಬಹುಪಾಲು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ತುಂಬಿಕೊಂಡಿರುವ ಅನೇಕ ಬಲಪಂಥೀಯ ಚಿಂತನೆಯ ಪತ್ರಕರ್ತರು ಪತ್ರಿಕಾ ನೀತಿ ಗಾಳಿಗೆ ತೂರಿ ಈ ಮೂಲಕ ತಮ್ಮದೇ ಆದ ಒಂದು ವಿಷಮಯ ಹಿಡನ್ ಅಜೆಂಡಾವನ್ನು ಹಬ್ಬಿಸುತ್ತಿದ್ದಾರೆ. ಉದಾಹರಣೆಗೆ ವಿಶ್ವೇಶ್ವರ ಭಟ್ ಎನ್ನುವ ಬೆಂಗಳೂರಿನ ಸುತ್ತಮುತ್ತಲು ಜಗತ್ಪ್ರಸಿದ್ದಿ ಪಡೆದ ಪತ್ರಕರ್ತರು. ತಮ್ಮ ಬಹುಪಾಲು ಸಮಾನಮನಸ್ಕ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿ ಬಸ್ ಮಾಲೀಕರ ಒಡೆತನದಲ್ಲಿ ಹೊರ ಬರುತ್ತಿದ್ದ ವಿಜಯ ಕರ್ನಾಟಕ ಎನ್ನುವ ಒಂದು ಅಮಾಯಕ ದಿನಪತ್ರಿಕೆಯನ್ನು ಕಬ್ಜಾ ಮಾಡಿಕೊಂಡು ಕಳೆದ ಏಳೆಂಟು ವರ್ಷಗಳಿಂದ ಅಕ್ಷರದ ಹೆಸರಿನಲ್ಲಿ ನಡೆಸಿದ ಅನೈತಿಕತೆ ನಡತೆಗಳು, ದ್ವೇಷಪೂರಿತ ವರದಿಗಳ ಮೂಲಕ ನಮ್ಮ ರಾಜ್ಯದ ಒಂದು ತಲೆಮಾರಿನ ಚಿಂತನೆಯನ್ನು ಅಲ್ಪ ಸಂಖ್ಯಾತರ ವಿರುದ್ಧ ರೂಪಿಸಿದ ರೀತಿ, ಅದರಿಂದಾದ ಅನಾಹುತಗಳು ಬಣ್ಣನೆಗೂ ನಿಲುಕದಷ್ಟಿವೆ.

ತಮ್ಮ ಕೆಲವು ಹಿಡನ್ ಅಜೆಂಡಗಳ ಮೂಲಕ ಪತ್ರಿಕ ರಂಗಕ್ಕೆ ಪ್ರವೇಶಿಸಿದ ಇವರು ಮಾಡಿದ ಮೊದಲ ಕೆಲಸ ದರ ಸಮರವನ್ನು ಹುಟ್ಟು ಹಾಕಿದ್ದು. ಪತ್ರಿಕೆಯೊಂದು ತಾನು ಮಂಡಿಸುವ ವಿಷಯಗಳೊಂದಿಗೆ ಸಾಧ್ಯವಾದಷ್ಟೂ ಸಮಾಜದಲ್ಲಿ ಗುರುತಿಸಿಕೊಳ್ಳುವ, ಆ ಮೂಲಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳುವ ಮೂಲಭೂತ ಸಂಪ್ರದಾಯವನ್ನೇ ಗಾಳಿಗೆ ತೂರಿ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರವನ್ನು ನಿಗದಿಪಡಿಸಿ ಪತ್ರಿಕೆಯ ಪ್ರಸಾರ ಹೆಚ್ಚಿಸಿಕೊಳ್ಳುವ ಅನೀತಿ ಸಂಪ್ರದಾಯ ಹುಟ್ಟು ಹಾಕಿದರು. ಇದರಿಂದ ಕಳೆದ 60 ವರ್ಷಗಳಿಂದ ತಮ್ಮ ಪತ್ರಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಕನ್ನಡದ ಕೆಲವು ಪ್ರಮುಖ ದಿನ ಪತ್ರಿಕೆಗಳು ಆಗ ತತ್ತರಿಸಿದ್ದು ಸರ್ವವಿಧಿತ. ಜಾತೀವಾದಿ, ಕೋಮುವಾದಿ ಚಿಂತನೆಗಳಿಗೆ ಅನುಗುಣವಾಗಿ ಪತ್ರಿಕೆಯನ್ನು ನಡೆಸಿದ ವಿ.ಭಟ್ ರು ನಂತರ ಸಂಘ ಪರಿವಾರದ ಅನೇಕ ಅನಾಹುತ, ಧ್ವಂಸ ಪ್ರವೃತ್ತಿಯ ಅನೀತಿಗಳನ್ನು ಸದರಿ ಪತ್ರಿಕೆಯ ಮೂಲಕ ಇಡೀ ಕೆಟ್ಟ ಪರಂಪರೆಯನ್ನು ಹುಟ್ಟು ಹಾಕಿದರು. ಇದಕ್ಕಾಗಿ ಇವರು ಬೆಳಸಿದ ನಕಲಿ ಸಿಂಹಗಳು, ಹುಲಿಗಳು ತಮ್ಮ ಬಾಲಿಶತನವನ್ನೇ ಗಂಭೀರ ಚಿಂತನೆಗಳೆಂದು ಬಿಂಬಿಸಿ, ಪ್ರಗತಿಪರ ಹೋರಾಟಗಾರರ ವಿರುದ್ಧ, ಅಲ್ಪ ಸಂಖ್ಯಾತರ ವಿರುದ್ಧದ ಕಪೋಲ ಕಲ್ಪಿತ ಹಸೀ ಸುಳ್ಳುಗಳನ್ನು ವ್ಯವಸ್ಥಿತವಾಗಿ ಸಮಾಜದಲ್ಲಿ ಬಿತ್ತಲೆತ್ನಿಸಿದರು.

ಇವರ ವ್ಯವಸ್ಥಿತ ಪಿತೂರಿ ಅಷ್ಟೊಂದು ತೀವ್ರವಾಗಿದ್ದರೂ ಕೂಡ ( ಸಾಹಿತಿ ಯು.ಅರ್.ಅನಂತ ಮೂರ್ತಿಯವರ ವಿರುದ್ಧ ಇವರ ಅಪ ಪ್ರಚಾರ ಅತ್ಯಂತ ಕೆಳ ಮಟ್ಟಕ್ಕೆ ತಲುಪಿತ್ತು) ನಮ್ಮ ಕನ್ನಡದ ವೈಚಾರಿಕತೆ, ಪ್ರಗತಿಪರತೆಯ ತಳಪಾಯ ಎಷ್ಟು ಗಟ್ಟಿಯಾಗಿದೆಯೆಂದರೆ ಇವೆಲ್ಲವನ್ನೂ ಮೆಟ್ಟಿನಿಂತಿತು.ಆದರೆ ಈ ಕೂಟ ಒಂದು ಯವ ತಲೆಮಾರನ್ನು ದಿಕ್ಕು ತಪ್ಪಿಸಿದ್ದಂತೂ ನಿಜ. ಇದು ನಮ್ಮಲ್ಲೆರ ಕಣ್ಣೆದುರಿಗೇ ಜರುಗಿದ್ದು ಮಾತ್ರ ನಮಗೆಲ್ಲ ಅತ್ಯಂತ ನೋವುಂಟು ಮಾಡುವ ಸಂಗತಿ.

ಪ್ರಜಾವಾಣಿ, ಕನ್ನಡ ಪ್ರಭ ದಂತಹ ಪತ್ರಿಕೆಗಳು, ತಮ್ಮ ಹಿಂದಿನ ಮೂರ್ನಾಲ್ಕು ತಲೆಮಾರಿನಿಂದ ಅತ್ಯಂತ ನ್ಯಾಯದಿಂದ, ಶ್ರಮದಿಂದ ಕಟ್ಟಿ ಬೆಳೆಸಿದ ಪತ್ರಿಕಾ ರಂಗದ ನೀತಿ ಸಂಪ್ರದಾಯಗಳನ್ನು, ಸೂಕ್ಷ್ಮತೆಗಳನ್ನು,ನೈತಿಕತೆಯನ್ನು, ಸಂಪೂರ್ಣವಾಗಿ ಧ್ವಂಸಗೊಳಿಸುವ ತಮ್ಮ ಕುಕೃತ್ಯದ ಎರಡನೇ ಇನ್ನಿಂಗ್ಸ್ ಅನ್ನು ಈ ಸದರಿ ಪತ್ರಕರ್ತರು ಹಾಗೂ ಅವರ ದುಷ್ಟಕೂಟ ಈಗ ಮತ್ತೊಮ್ಮೆ ಕೇರಳದ ಉದ್ಯಮಿಯ ಹಾಗೂ BJP ರಾಜ್ಯಸಭಾ ಸದಸ್ಯರ ಒಡೆತನದ ಪತ್ರಿಕೆಯನ್ನು ಸೇರಿಕೊಂಡು ಆ ಪತ್ರಿಕೆಯನ್ನೂ ಗಬ್ಬೆಬ್ಬಿಸುತ್ತ ಆ ಮೂಲಕ ನಮ್ಮ ನಾಡಿನ ಹೆಮ್ಮೆಯ ಪತ್ರಿಕೋದ್ಯಮದ ನೈತಿಕತೆಯ ಸೂಕ್ಷ್ಮ ಗೆರೆಯನ್ನು ಅಳಸಿಹಾಕಿ ಇಂದು ಇವರು ಅಕ್ಷರ ದೌರ್ಜ್ಯನ್ಯಗಳನ್ನು ಎಸಗುತ್ತಿದ್ದಾರೆ.

ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಯಡಿಯೂರಪ್ಪನವರು ಅತ್ಮಾವಲೋಕನ ಮಾಡಿಕೊಳ್ಳುವ ಅಪೂರ್ವ ಅವಕಾಶಗಳನ್ನೇ ಸ್ವತಃ ಕೈಯಾರೆ ಹಾಳು ಮಾಡಿಕೊಳ್ಳುತ್ತ, ಮತ್ತೆ ಮತ್ತೆ ಅಂಧಾಧುಂದಿ ರಾಜಕಾರಣದ, ಭಸ್ಮಾಸುರ ಕ್ರುತ್ಯಕ್ಕೆ ಕೈ ಹಾಕಿದ್ದಾರೆ. ತಾವೇ ಬೆಳಸಿದ ಈ ಗಣಿ ಚೋರರಾದ ರೆಡ್ಡಿ ಪಡೆಯನ್ನು ಬಳಸಿಕೊಂಡೇ ಕಳೆದ 3 ವರ್ಷ ಅಧಿಕಾರ ನಡೆಸಿದರು. ಇಲ್ಲಿನ ಸಂಪಲ್ಮೂನಗಳನ್ನು ಲೂಟಿ ಮಾಡಿ ಗಳಿಸಿದ ದುಡ್ಡಿನಿಂದ ಚುನಾವಣೆ ಗೆಲ್ಲುತ್ತಾ,ಆ ಮರೀಚಿಕೆಯನ್ನೇ ಜನರ ತೀರ್ಪು ಎಂದು ತಮ್ಮನ್ನು ತಾವೇ ಮೋಸಗೊಳಿಸುತ್ತ, ನಾಡಿನ ಜನತೆಯನ್ನು ಮರುಳುಗೊಳಿಸಿದ್ದೇವೆ ಎನ್ನುವ ಅತಾರ್ಕಿಕ ಭ್ರಮಾ ಲೋಕದಲ್ಲಿದ್ದಾರೆ ಯಡಿಯೂರಪ್ಪ.

3 ವರ್ಷಗಳ ಕಾಲ ತಾವು ಮುಖ್ಯಮಂತ್ರಿಗಳಾಗಿದ್ದ ಸಂಧರ್ಭದಲ್ಲೂ ಅಲ್ಲಿನ “ಗಣ ರಾಜ್ಯ ಬಳ್ಳಾರಿಯ” ಸರ್ವಾಧಿಕಾರಿಗಳಾದ ರೆಡ್ಡಿಗಳ ಅನುಮತಿಯಿಲ್ಲದೆ ತಾವಾಗಲಿ, ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಾಗಲಿ ಅಲ್ಲಿ ಕಾಲಿಡಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇತ್ತು. ಈಗ ಇದನ್ನು ತಮ್ಮ ಅಸಹ್ಯಯಕರ, ಅನೀತಿ ರಾಜಕಾರಣದ ಮೂಲಕ ಜನತೆಯನ್ನು ಮತ್ತೊಮ್ಮೆ ದಿಕ್ಕು ತಪ್ಪಿಸಬಹುದೆನ್ನುವ ಭ್ರಮೆಯಲ್ಲಿದ್ದಾರೆ. ಒಬ್ಬ ಯಜಮಾನನ ಅಡಿಯಲ್ಲಿ ನಡೆಯುವ ಅನ್ಯಾಯಗಳು, ಅತ್ಯಾಚಾರಗಳು, ದಬ್ಬಾಳಿಕೆಗಳಿಗೆ ಅದನ್ನು ನಡೆಸುವವರೆಷ್ಟು ಕಾರಣವೋ, ಅವರ ಅಧಿಪತಿಯೆನಿಸಿಕೊಂಡ ಯಜಮಾನ ಕೂಡ ಅಷ್ಟೇ ಜವಾಬ್ದಾರನಾಗುತ್ತಾನೆ ಎನ್ನುವುದು ಈ ನೆಲದ ನ್ಯಾಯ.

ನನ್ನ ಪ್ರಕಾರ ಅವರ ಡಿನೋಟಿಫ಼ಿಕೇಶನ್ ಹಗರಣಗಳಿಗಿಂತಲೂ ಅತ್ಯಂತ ಭ್ರಷ್ಟ ಹಗರಣ ಬಳ್ಳಾರಿಯ ದುರಂತ. ಇದರಿಂದ ಯಡಿಯೂರಪ್ಪನವರು ಎಷ್ಟೇ ತಲೆ ಕಳಗು ಮಾಡಿದರೂ ತಪ್ಪಿಸಿಕೊಳ್ಳಲಾರರು. ಈ ಪತ್ರಕರ್ತರು ಇದನ್ನು ತಮ್ಮೆಲ್ಲ ಜ್ನಾನವನ್ನು, ಅನುಭವವನ್ನು ಬಳಸಿ, ಪ್ರಾಮಾಣಿಕ ರಾಜಕೀಯ ವಿಶ್ಲೇಷಣೆಯ ಮೂಲಕ ಜನತೆಗೆ ವಸ್ತುಸ್ಥಿತಿಯನ್ನು ತೋರಿಸಿಕೊಡಬಹುದಿತ್ತು. ಆದರೆ ಇವರು ಮಾಡಿದ್ದೇನು ? ಇವರದೇ ಬಳಗಕ್ಕೆ ಸೇರಿದ ಟಿವಿ ಛಾನಲ್ ನ -ಸಂಯೋಗದೊಂದಿಗೆ ಈ ದುಷ್ಟಕೂಟ ಪತ್ರಿಕಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರಿ ಈ ರಾಜ್ಯದ ನೆಲವನ್ನು ಲೂಟಿ ಮಾಡಿದ ಭ್ರಷ್ಟಚಾರದ ಅಪಾದನೆಗೊಳಗಾಗಿರುವ ಯಡಿಯೂರಪ್ಪನವರನ್ನು ದುರಂತ ವ್ಯಕ್ತಿಯಂತೆ ಏನೋ ಸಣ್ಣ ತಪ್ಪು ಮಾಡಿದ್ದಾರಷ್ಟೇ ಎನ್ನುವಂತೆ ಬಿಂಬಿಸುವುದು, ಸಂತೋಷ ಹೆಗ್ಡೆ ಅವರ ವಿರುದ್ಧ ನಡೆಸುತ್ತಿರುವ ಪ್ರತೀಕಾರದ ಅಪಪ್ರಚಾರ,… ಇದಕ್ಕೆ ಯಡಿಯೂರಪ್ಪನವರನ್ನುdefault ಆಗಿ ಬಳಸಿಕ್ಕೊಳುತ್ತಿರುವ ರೀತಿ ಆ ಮೂಲಕ ರಾಜ್ಯದ ಹೆಮ್ಮೆಯ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ದಿಕ್ಕು ತಪ್ಪಿಸಿ ನಿಶ್ಯಕ್ತಗೊಳಿಸುವುದು, ತಮ್ಮ ದುಷ್ಟ ಕೃತ್ಯಗಳಿಗೆ ತೊಡರುಗಾಲು ಹಾಕಿದವರ ವಿರುದ್ಧ ನಡೆಸುವ ಅಪಪ್ರಚಾರಗಳು ಹಾಗೂ ತಮ್ಮ ಈ ಯಾವುದೇ ಲಂಗು ಲಗಾಮಿಲ್ಲದ ಭ್ರಷ್ಟ ನಡವಳಿಕೆಗಳಿಂದ, ತತ್ವರಹಿತ ಕೆಲಸಗಳಿಂದ ಈ ರಾಜ್ಯದ ಪ್ರಜ್ಞಾವಂತರ conscious ಗೆ ಒಂದು ಸವಾಲನ್ನು ಎಸೆದಿದ್ದಾರೆ.

ಇದನ್ನು ನೋಡಿ ನಾವೆಲ್ಲ ಕಣ್ಣು ಮುಚ್ಚಿಕೊಂಡು ಸುಮ್ಮನೆ ಗೊಣಗುತ್ತಿರುವುದು ನಿಜಕ್ಕೂ ಒಂದು ದುರಂತವೇ ಸರಿ. ಏಕೆ ಇವರಿಗೆಲ್ಲ ಕಡಿವಾಣ ಹಾಕದಷ್ಟು ನಾವೆಲ್ಲ ನಿತ್ರಾಣರಾಗಿದ್ದೇವೆಯೇ ?? ನಾವೆಲ್ಲ ಈ ಬಾರಿಯೂ ಜಾಣ ಮೌನವಹಿಸಿದ್ದೇ ಆದರೆ ನಮ್ಮ ಕಣ್ಣೆದುರಿಗೇ ಮತ್ತೊಂದು ತಲೆಮಾರನ್ನು ಕಳೆದುಕೊಳ್ಳಬೇಕಾಗುತ್ತದೆ. ಶಂಕರ್ ಹೇಳಿದಂತೆ ಈಗಾಗಲೇ “ಇಲ್ಲಿ ಅಳುವವರು ಯಾರೂ ಇಲ್ಲ”

ರವಿಕೃಷ್ಣಾರೆಡ್ಡಿ ಶೀಘ್ರ ಗುಣಮುಖರಾಗಲಿ: ವರ್ತಮಾನ ಬಳಗ

ರವಿಕೃಷ್ಣಾ ರೆಡ್ಡಿ ಅವರು ನಿನ್ನೆ ಅಸ್ಪತ್ರೆಗೆ ದಾಖಲಾಗಿದ್ದಾರೆ. ಡೆಂಗಿ ಜ್ವರ ಅವರ ಅನಾರೋಗ್ಯಕ್ಕೆ ಕಾರಣವೆಂದು ಗೊತ್ತಾಗಿದ್ದು, ಇನ್ನೂ ಎರಡು ಮೂರು ದಿನ ಆಸ್ಪತ್ರೆಯಲ್ಲೇ ಇರಬೇಕೆಂದು ವೈದ್ಯರು ತಿಳಿಸಿದ್ದಾರೆ. ಅವರು ಶೀಘ್ರ ಗುಣಮುಖ ಆಗಲೆಂದು ವರ್ತಮಾನ ಬಳಗ ಹಾರೈಸುತ್ತದೆ.

ಜೀವನದಿಗಳ ಸಾವಿನ ಕಥನ -12

– ಜಗದೀಶ್ ಕೊಪ್ಪ

ಅಣೆಕಟ್ಟುಗಳ ನಿರ್ಮಾಣದ ವಿಷಯದಲ್ಲಿ, ಜಗತ್ತಿನ ಬಹುತೇಕ ಸರಕಾರಗಳು, ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ವಾಸ್ತವಿಕ ಅಂಕಿ ಅಂಶಗಳನ್ನು ಮರೆಮಾಚುತ್ತಿರುವುದು ಕೂಡ ಹಲವಾರು ಅನಾಹುತಗಳಿಗೆ ಕಾರಣವಾಗಿದೆ. ವಾಸ್ತವವಾಗಿ ಕಾಮಗಾರಿ ವೆಚ್ಚ, ನಿರ್ಮಾಣದ ಅವಧಿ, ವಾಸ್ತವವಾಗಿ ಸಂಗ್ರಹವಾಗುವ ನೀರಿನ ಪ್ರಮಾಣ, ಕಾಮಗಾರಿ ಸ್ಥಳದ ಭೂಮಿಯ ಲಭ್ಯತೆ ಹಾಗೂ ಕಾಮಗಾರಿಗೆ ಈ ಭೂಮಿ ಸೂಕ್ತವೆ ಎಂಬ ಅಂಶ ಇವೆಲ್ಲವುಗಳಲ್ಲಿ ಸತ್ಯಕ್ಕಿಂತ ಸುಳ್ಳಿನ ಪ್ರಮಾಣ ಅಧಿಕವಾಗಿದೆ. ಹಾಗಾಗಿ ಜಗತ್ತಿನ ಯಾವೊಂದು ಅಣೆಕಟ್ಟು ತನ್ನ ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಇತಿಹಾಸವಿಲ್ಲ. ಅಷ್ಟೇ ಏಕೆ ಪೂರ್ವ ನಿಗತ ವೆಚ್ಚದೊಳಗೆ ಮುಗಿದ ಉದಾಹರಣೆಗಳಿಲ್ಲ. ಅಣೆಕಟ್ಟು ನಿರ್ಮಾಣಕ್ಕಿಂತ  ಮಿಗಿಲಾಗಿ, ಅಣೆಕಟ್ಟು ಸ್ಥಳ ಹಾಗೂ ಹಿನ್ನೀರಿನಲ್ಲಿ ಮುಳುಗುವ ಪ್ರದೇಶಗಳಿಂದ ಸಂತ್ರಸ್ತರಾಗುವ ಜನತೆಯ ಬಗ್ಗೆ ನಿಜವಾದ ಅಂಕಿ ಅಂಶಗಳನ್ನು ಮುಚ್ಚಿಡುತ್ತಾ ಬಂದಿರುವುದು, ಜಾಗತಿಕವಾಗಿ ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಈಗಾಗಲೇ ಆಯಾ ದೇಶಗಳಲ್ಲಿ ತಾಂಡವವಾಡುತ್ತಿರುವ ಬಡತನ ನಿವಾರಣೆ ಅಲ್ಲಿನ ಸರಕಾರಗಳಿಗೆ ಸವಾಲಾಗಿರುವ ಸಂದರ್ಭದಲ್ಲಿ ಹೊಸದಾಗಿ ಉದ್ಭವವಾಗುವ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಮತ್ತೊಂದು ತೊಡಕಾಗಿದೆ.

ಅಣೆಕಟ್ಟು ವಿಷಯದಲ್ಲಿ ಕೇವಲ ಲಾಭವನ್ನೇ ಗುರಿಯಾಗಿರಿಸಿಕೊಂಡ ಬಹುರಾಷ್ಟ್ರೀಯ ನಿರ್ಮಾಣ ಕಂಪನಿಗಳಿಗೆ ಉತ್ತರದಾಯಕತ್ವದ ಪ್ರಶ್ನೆಯೇ ಎದುರಾಗುವ ಸಂಭವವಿಲ್ಲದೆ ಇರುವುದರಿಂದ, ತಾಂತ್ರಿಕವಾಗಿ ಅಥವಾ ಗುಣಮಟ್ಟದಲ್ಲಿ ಕಳಪೆ ಇದ್ದರೂ ಕೂಡ, ಮುಂದೆ ಸಂಭವಿಸುವ ಅವಘಡಗಳಿಗೆ ಇವು ಹೊಣೆಹೊರುವ, ಹೊತ್ತಿರುವ ಸಂಧರ್ಭ ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ಯಾವುದೇ ಸ್ಥಳದಲ್ಲಿ ಅಣೆಕಟ್ಟುಗಳನ್ನು ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದರೂ, ಪ್ರತಿಯೊಂದು ಅಣೆಕಟ್ಟಿನ ಸ್ಥಳಕ್ಕೆ ತನ್ನದೇ ಆದ ಲಕ್ಷಣಗಳಿರುತ್ತವೆ. ಕೆಲವೊಂದು ಸ್ಥಳಗಳು ಅಣೆಕಟ್ಟು ನಿರ್ಮಾಣಕ್ಕೆ ಯೋಗ್ಯವಾಗಿರುವುದಿಲ್ಲ. ಅಲ್ಲಿನ ಭೂಮಿಯ ಗುಣಮಟ್ಟ, ಮಣ್ಣಿನ ಗುಣ, ಸಂಗ್ರಹವಾಗುವ ನೀರಿನ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಆದರೆ ಯಾವೊಂದು ಸರಕಾರ ಮತ್ತು ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ಇವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದಕ್ಕೆ ಜ್ವಲಂತ ಉದಾಹರಣೆಗಳೆಂದರೆ, 1990ರಲ್ಲಿ ವಿಶ್ವಬ್ಯಾಂಕ್ ತಾನು ಆರ್ಥಿಕ  ನೆರವು ನೀಡಿದ್ದ 49 ಅಣೆಕಟ್ಟುಗಳ ಸಮೀಕ್ಷೆ ನಡೆಸಿದಾಗ ಇವುಗಳಲ್ಲಿ 36 ಅಣೆಕಟ್ಟುಗಳು ಪ್ರಶಸ್ತವಾದ ಸ್ಥಳಗಳಲ್ಲಿ ನಿರ್ಮಾಣ ವಾಗಿರಲಿಲ್ಲ. ಅಮೇರಿಕಾದೇಶದ ಟೆಟಾನ್ ನದಿಗೆ ದಕ್ಷಿಣ ಪ್ರಾಂತ್ಯದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಯೋಜನೆಗೆ ಕಾಮಗಾರಿ ಆರಂಭಿಸಿದಾಗ ಭೂಗರ್ಭ ಶಾಸ್ತ್ರಜ್ಞರು, ಈ ಸ್ಥಳ ಅಣೆಕಟ್ಟು ಕಾಮಗಾರಿಗೆ ಯೋಗ್ಯವಲ್ಲ ಎಂದು ನೀಡಿದ್ಥೆಚ್ಚರಿಕೆಯನ್ನು ನಿರ್ಲಕ್ಷಿಸಿ, 1970ರಲ್ಲಿ 270 ಅಡಿ ಎತ್ತರದ ಅಣೆಕಟ್ಟು ನಿರ್ಮಾಣ  ಕಾರ್ಯ ಪ್ರಾರಂಭವಾಯಿತು.

1970ರಲ್ಲಿ ಆರಂಭವಾದ ಕಾಮಗಾರಿ 1976ರಲ್ಲಿ ಮುಕ್ತಾಯವಾಗಿ, ಅದೇ ಜೂನ್ ತಿಂಗಳಿನಲ್ಲಿ ಚಾಲನೆ ನೀಡಿದಾಗ, ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಒತ್ತಡದಿಂದ ಅಣೆಕಟ್ಟಿನ ಬಲಭಾಗದ ಭೂಮಿಯಲ್ಲಿ ದೊಡ್ಡ ಬಾವಿಯಾಕಾರದ ರಂಧ್ರವೊಂದು ನಿರ್ಮಾಣವಾಗಿ  ಜಲಾಶಯದ ನೀರು ಅದರೊಳಗೆ ಹರಿಯತೊಡಗಿತು. ಮರುದಿನ ಅಣೆಕಟ್ಟಿನ 270 ಅಡಿ ಎತ್ತರದ ತಡೆಗೋಡೆ ಹೊರತುಪಡಿಸಿ ಅದಕ್ಕೆ ಹೊಂದಿಕೊಂಡಿದ್ದ ಭೂಮಿ ಕೊಚ್ಚಿಹೋದ ಪರಿಣಾಮ ಸುಮಾರು 20 ಅಡಿ ಎತ್ತರದ ಅಣೆಕಟ್ಟಿನ ಗೋಡೆ ಮಗುಚಿಬಿತ್ತು.

ಇದರಿಂದ ನಾಲ್ಕುಸಾವಿರ ಮನೆಗಳು, ಮೂರು ಪಟ್ಟಣಗಳು ಈ ದುರಂತದಲ್ಲಿ ನಿರ್ನಾಮವಾದವು. ಅಪಾತವನ್ನು ಅರಿತ ಅಲ್ಲಿನ ಸರಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವ ಸಾವು ನೋವೂ ಸಂಭವಿಸಲಿಲ್ಲ. ಆದರೆ ನೂರು ಕೋಟಿ ಡಾಲರ್ ಹಣ ನೀರಿನಲ್ಲಿ ಹೋಮಮಾಡಿದಂತಾಗಿ ಸಾಲದ ಹೊರೆ ಹೊರಬೇಕಾಯ್ತು. ಇಂತಹದ್ದೇ ಇನ್ನೊಂದು ಘಟನೆ ಸಂಭವಿಸಿದ್ದು ಗ್ವಾಟೆಮಾಲಾದಲ್ಲಿ. ಭೂಕಂಪ ಪೀಡಿತ ಈ ರಾಷ್ಟ್ರದಲ್ಲಿ 1974ರಲ್ಲಿ ಜರ್ಮನ್ ಹಾಗೂ ಸ್ವಿಟ್ಜರ್ಲ್ಯಾಂಡ್ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಕೈಗೆತ್ತಿಕೊಂಡ ಚಿಕ್ಸೊಯ್ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟಿಗೆ ಗ್ವಾಟೆಮಾಲಾ ಸರಕಾರ, ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ 105 ಮಿಲಿಯನ್ ಡಾಲರ್ ಸಾಲ ಪಡೆದು ಕಾಮಗಾರಿ ಪ್ರಾರಂಭಿಸಿತು.

1976ರಲ್ಲಿ ಜಲಾಶಯದಿಂದ 26 ಕಿ.ಮೀ. ದೂರದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಹರಿಸಲು ನಿರ್ಮಿಸಿದ  ಸುರಂಗ ಕಾಲುವೆಗಳು ಭೂಕಂಪದ ಪರಿಣಾಮ ಮಣ್ಣು ಕುಸಿತದಲ್ಲಿ ಮುಚ್ಚಿಹೋದವು. ಮತ್ತೆ ಇವನ್ನು ದುರಸ್ತಿಗೊಳಿಸಿ, ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಾಗ, ಗ್ವಾಟೆಮಾಲ ಸರಕಾರ ಅಂದಾಜಿಸಿದ್ದ ನಿರ್ಮಾಣ  ವೆಚ್ಚಕ್ಕಿಂತ 375 ಪಟ್ಟು ಹಣ ಹೆಚ್ಚು ಖರ್ಚಾಯಿತ. ಆ ನಂತರವೂ ಸಂಭವಿಸಿದ ವಿವಿಧ ಅವಘಡಗಳಿಂದ 270 ಕೋಟಿ ಡಾಲರ್ ವೆಚ್ಚದಲ್ಲಿ ಮುಗಿಯಬೇಕಿದ್ದ ಅಣೆಕಟ್ಟು ನಿರ್ಮಾಣ , 1988ರಲ್ಲಿ ಅಂತಿಮಗೊಂಡಾಗ 944 ಕೋಟಿ ಡಾಲರ್ ಹಣವನ್ನು ನುಂಗಿಹಾಕಿ, ಗ್ವಾಟೆಮಾಲ ರಾಷ್ಟ್ರವನ್ನು ಅಮೆರಿಕಾದ ಶಾಶ್ವತ ಸಾಲಗಾರನನ್ನಾಗಿ ಮಾಡಿತು.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಮತ್ತೊಂದು ಹಗಲು ದರೋಡೆಯೆಂದರೆ, ನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿ ಸಲಾಗುವ ಅಣೆಕಟ್ಟಿಗೆ ಮುನ್ನ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ನೀಡುವ ತಪ್ಪು ಮಾಹಿತಿ. ಯಾವುದೇ ಬಹುರಾಷ್ಟ್ರೀಯ ನಿರ್ಮಾಣ  ಸಂಸ್ಥೆಗಳು, ನದಿಯ ಪಾತ್ರದಲ್ಲಿ ಸುರಿಯುವ ಸರಾಸರಿ ಮಳೆಯ ಪ್ರಮಾಣವನ್ನು ಹಿಂದಿನ 20-30 ವರ್ಷಗಳಿಂದ ಹಿಡಿದು ಮುಂದಿನ 50 ವರ್ಷಗಳವರೆಗೂ ಲೆಕ್ಕಾಚಾರ ಹಾಕಿ, ನಂತರ ನದಿಯ ನೀರಿನ ಪ್ರಮಾಣವನ್ನು ಅಂದಾಜು ಮಾಡಬೇಕು.ಆದರೆ ಯಾವುದೋ ಒಂದು ವರ್ಷದ ಮಳೆಯ ಪ್ರಮಾಣವನ್ನು ಹಾಗೂ ನದಿ ನೀರಿನ ಹರಿಯುವಿಕೆಯ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅಣೆಕಟ್ಟು ನಿರ್ಮಿಸಲು ಸರಕಾರಗಳನ್ನು ಪುಸಲಾಯಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇಂತಹ ತಪ್ಪು ಲೆಕ್ಕಾಚಾರಗಳಿಂದಾಗಿ ಜಗತ್ತಿನ ಬಹುತೇಕ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗುತ್ತಿಲ್ಲ.

ಜೊತೆಗೆ ವಿುದ್ಯುತ್ ಉತ್ಪಾದನೆ ಕೂಡ ಸಾಧ್ಯವಾಗಿಲ್ಲ. ಸ್ಪೇನ್ ದೇಶದಲ್ಲಿ ಗೌಡಿಯಾಲ ಮತ್ತು ಟ್ಯಾಗೂಸ್ ನದಿಗೆ 1950ರ ದಶಕದಲ್ಲಿ ಜನರಲ್ ಫ್ರಾಂಕೋಸ್ ಅಧಿಕಾರದ ಅವಧಿಯಲ್ಲಿ ನಿರ್ಮಿಸಲಾದ ಎರಡು ಅಣೆಕಟ್ಟುಗಳ ಜಲಾಶಯಗಳು 2000ದ ಇಸವಿಯವರೆಗೆ ತಮ್ಮ ಸಾಮಥ್ರ್ಯದ ಶೇ.17ರಷ್ಟು ನೀರನ್ನು ಮಾತ್ರ ಸಂಗ್ರಹಿಸಿದ್ದು, ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಿಲ್ಲ. ವಿಶ್ವ ಬ್ಯಾಂಕ್ ಸಂಗ್ರಹಿಸಿರುವ ಮಾಹಿತಿ ಪ್ರಕಾರ 2000ದ ಅಂತ್ಯದ ವೇಳೆಗೆ ತಾನು ಸಾಲ ನೀಡಿದ 25 ಬೃಹತ್ ಜಲಾಶಯಗಳು ಕೇವಲ ಅರ್ಧದಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಿರುವುದಾಗಿ ಬಹಿರಂಗಪಡಿಸಿದೆ. ಇವುಗಳಲ್ಲಿ ಥಾಯ್ಲೆಂಡ್ ದೇಶದ 7 ಅಣೆಕಟ್ಟುಗಳು, ಭಾರತದ ನರ್ಮದಾ ಸರೋವರದ ಅಣೆಕಟ್ಟು, ಅಮೆರಿಕಾದ ಕೊಲರಾಡೊ ನದಿಗೆ ನಿಮರ್ಿಸಲಾದ ಹೂವರ್ ಅಣೆಕಟ್ಟು ಸೇರಿರುವುದು ಗಮನಾರ್ಹ ಸಂಗತಿ.

(ಮುಂದುವರಿಯುವುದು)