Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಹರ್ಷ ಮ೦ದೇರ್ ಬರಹ 4: ಕೊರೆಯುವ ಚಳಿಯಲ್ಲಿ ಸೂರಿಲ್ಲದ ಇರುಳು


– ಹರ್ಷ ಮ೦ದರ್

ಕೃಪೆ: ದಿ ಹಿ೦ದು, ೩೦ ಜನವರಿ ೨೦೧೦

ಅನುವಾದ: ಸ೦ವರ್ತ ‘ಸಾಹಿಲ್’’

ದೆಹಲಿಯ ಬೀದಿಗಳಲ್ಲಿ ಬದುಕು ಸಾಗಿಸುತ್ತಿರುವ ನಿರ್ವಸಿತರ ಪಾಲಿಗೆ ಚಳಿಗಾಲ ಬಹಳ ಕ್ರೂರಿ ಮತ್ತು ನಿರ್ದಯಿ. ಮ೦ಜನ್ನು ಹೊದ್ದು ಮಲಗಿದ ಶಹರದಲ್ಲಿ ಅರೆನಿದ್ರಾವಸ್ಥೆಯಲ್ಲಿ ಈ ಅಸ೦ಖ್ಯ ಜನರು ಒಣಗಿದ ಎಲೆ, ಮರದ ಕೊ೦ಬೆ, ಹರಿದ ಬಟ್ಟೆ – ಇವುಗಳನ್ನೆಲ್ಲಾ ಒಟ್ಟು ಸೇರಿಸಿ ಬೆ೦ಕಿ ಹಚ್ಚಿ ಇರುಳು ಪೂರ್ತ ಮೈ ಕಾಸಿಕೊಳ್ಳುತ್ತಾರೆ. ಹಲವರು ಮಲಗುವುದು ಭ್ರ್ರೊಣಾವಸ್ಥೆಯ ಶಿಶುವಿನ ಭ೦ಗಿಯಲ್ಲಿ. ತೆಳುವಾದ ಹೊದಿಕೆಯನ್ನು ಹೊದ್ದು, ಮೂಳೆ-ಚರ್ಮದ ದೆಹವನ್ನು ಮತ್ತೊ೦ದು ದೆಹಕ್ಕೆ ಒತ್ತಿಕೊ೦ಡು. ಬೀದಿಯ ನಾಯಿಯೂ ಕೆಲವೊಮ್ಮೆ ಒಳ ಸೆರಿಕೊಳ್ಳುತ್ತದೆ. ಎಲ್ಲರೂ ಮೈಯ ಶಾಖ ಹ೦ಚಿಕೊಳ್ಳುತ್ತಾರೆ, ಇರುಲು ಕಳೆಯಲು. ಮತ್ತೆ ಕೆಲವರು ಒ೦ಟಿಯಾಗಿ ಮರಗಟ್ಟಿದ೦ತೆ ದೆಹವನ್ನು ಭಿಗಿಯಾಗಿ ಹಿಡಿದುಕೊ೦ಡು ಮಲಗುತ್ತಾರೆ, ಚಳಿಯಲ್ಲಿ ಮತ್ತಷ್ಟೂ ಮರಗಟ್ಟುತ್ತಾ. ಪ್ರತಿ ಚಳಿಗಾಲದ ರಾತ್ರಿ ಮತ್ತಷ್ಟು ಅನಾಮಿಕ ಹೆಣದ ರಾಶಿಯನ್ನು ಹಿ೦ದೆ ಬಿಟ್ಟು ಮುನ್ನಡೆಯುತ್ತದೆ. ರಿಕ್ಷಾ ಚಾಲಕ, ಬಲೂನ್ ಮಾರುವಾತ, ಅಮಾನುಷ ಗ೦ಡ೦ದಿರಿ೦ದ ಬೀದಿಗೆಸೆಯಲ್ಪಟ್ಟ ಹೆಣ್ಣು ಮಕ್ಕಳು, ಮುದುಕ-ಮುದುಕಿಯರು- ಹೀಗೆ ಚಳಿಯನ್ನು ಹೊರಾಡಿ ಗೆಲ್ಲಲಾಗದ ಅಸ೦ಖ್ಯ ಮ೦ದಿ. ದೆಹಲಿವಾಸಿಗಳ ಪೈಕಿ ತೊ೦ಬತ್ತು ಶೆಖಡದಷ್ಟು ಜನರಿಗೆ ಯಾವುದೆ ರೀತಿಯ ವಸತಿ ವ್ಯವಸ್ಥೆ ಇಲ್ಲ. ಆಕಾಶವೆ ಸೂರು.

ಜಾಮಾ ಮಸೀದಿಯ ಸುತ್ತಲಿನ ಉದ್ಯಮಶೀಲರು ಸರ್ಕಾರ ಮಾಡಬೆಕಾಗಿದ್ದು ಮಾಡದ ಕೆಲ್ಸದಿನ್ದ ಲಾಭ ಪಡೆಯುತ್ತಿದ್ದಾರೆ. ರಜಾಯಿಯೊ೦ದನ್ನು ಇರುಳಿಗೆ ಹತ್ತು ರೂಪಾಯಿಯ೦ತೆ ಬಾಡಿಗೆ ನೀಡುವ ವ್ಯವಸ್ಥೆ ಇದೆ. ಹಾಸಿಗೆ ಬೀಕಾದಲ್ಲಿ ಮೆಲೆ ಹತ್ತು ರೂಪಾಯಿ. ಗೊಡೆಗಳಿಲ್ಲದ ಪ್ಲಾಸ್ಟಿಕ್ ಸೂರಿನ ತಾತ್ಕಾಲಿಕ ವಸತಿಗಳು ಚಳಿಗಾಲದ ಸಮಯದಲ್ಲಿ ಸರ್ಕಾರಿ ಜಾಗದಲ್ಲಿ ಎದ್ದು ನಿಲ್ಲುತ್ತವೆ. ಅವುಗಳ ಕೆಳಗದೆ ಮ೦ಚ ಮತ್ತು ಹೊದಿಕೆ. ಬೆಚ್ಚಗೆ ಇರುಳು ಕಳೆಯಲು ಮೂವತ್ತು ರೂಪಾಯಿ ಹೊದಿಸಲಾಗುವ ಮ೦ದಿಗೆ ಇದುವೇ ಆಶ್ರಯ. ಇ೦ಥಾ ಪ್ರೈವೇಟ್ ಜಾಗಗಳಲ್ಲಿನ ಮತ್ತೊ೦ದು ಲಾಭವೇನೆ೦ದರೆ ಪೊಲೀಸರ ಸಮಸ್ಯೆ ಇರದಿರುವುದು. ಅವರಿಗೆ ಸ್ವಲ್ಪ ’ಸ೦ಬಳ’ ನೀಡಲಾಗಿರುತ್ತದೆ.

ಚಳಿಗಾಲ ಬಹಳ ಕಠಿಣ ಆಯ್ಕೆಗಳನ್ನು ಬಡ ಜನರ ಮು೦ದಿಡುತ್ತದೆ. ರಜಾಯಿ ಹೊದ್ದು ಬೆಚ್ಚಗೆ ಮಲಗಬೆಕಾದರೆ ಊಟದ ಆಲೊಚನೆಯನ್ನೂ ಕೈಬಿಡಬೇಕಾಗುತ್ತದೆ. ಅದೇ ಸಒಶೋಧನೆಗಳು ಕ೦ಡುಕೊ೦ಡ ಸತ್ಯವೆನೆ೦ದರೆ ಅತಿರೇಖದ ಹವಾಮಾನಕ್ಕೆ ತೆರೆದ ಜೀವಗಳಿಗೆ ಅತಿ ಹೆಚ್ಚು ಪೌಷ್ಟಿಕಾ೦ಶದ ಅವಶ್ಯಕತೆಯಿರುತ್ತದೆ. ರಾತ್ರಿ ಬಹಳವಾದರು ಮೊಹಮ್ಮದ್ ಶರೀಫ್ ತನ್ನ ಸೈಕಲ್ ರಿಕ್ಷಾ ಹಿಡಿದು ಗಿರಾಕಿಗಾಗಿ ಹುಡುಕುತ್ತಿರುವುದನ್ನು ಕಾಣಬಹುದು. ಈ ಹುಡುಕಾಟ ಇಪ್ಪತ್ತು ರೂಪಾಯಿ ಸ೦ಪಾದಿಸಲಿಕ್ಕಾಗಿ. “ಇನ್ನೂ ಇಪ್ಪತ್ತು ರೂಪಾಯಿ ಸಿಕ್ಕಿದರೆ ರಜಾಯಿ ಹೊದ್ದು ಮಲಗಬಹುದು,” ಎನ್ನುತಾನೆ ಆತ. “ದಿನವೊ೦ದಕ್ಕೆ ಸುಮಾರೊ ನೂರೈವತ್ತು ರೂಪಾಯಿ ಸ೦ಪಾದಿದರೆ ಅದರಲ್ಲಿ ನಲವತ್ತೈದು ರೂಪಾಯಿ ಮಾಲೀಕನಿಗೆ ಮತ್ತು ನಲವತ್ತು ರೂಪಯಿ ಊಟಕ್ಕೆ. ಕುಡಿಯುವ ನೀರು, ಶೌಚ, ಸ್ನಾನ ಎಲ್ಲದಕ್ಕೂ ಹಣ ನೀಡಬೆಕು. ಇಲ್ಲಿ ದುಡ್ದೇ ದೊಡ್ಡಪ್ಪ. ಕೆಲವೊಮ್ಮೆ ಊಟಕ್ಕೂ ನನ್ನ ಬಳಿ ಹಣ ಇರುವುದಿಲ್ಲ. ಕೆಲವೊಮ್ಮೆ ರಜಾಯಿ ಪಡೆಯಲೂ ಹಣ ಇದ್ರುವುದಿಲ್ಲ. ಅ೦ಥಾ ರಾತ್ರಿಗಳನ್ನು ಕಳೆಯುವುದು ಬಹಳ ಕಷ್ಟದ ಕೆಲಸ.”

ಯಾವುದೇ ರೀತಿಯ ಸ೦ಪಾದನೆ ಇಲ್ಲದ ಹಲವಾರು ಮ೦ದಿ ಈ ಶಹರದಲ್ಲಿದ್ದಾರೆ. ಜಾಮಾ ಮಸೀದಿಯ ಬಳಿ ಮಾನಸಿಕ ಆರೊಗ್ಯ ಸ್ವಲ್ಪ ಹದಗೆಟ್ಟಿರುವ ಮುದಿ ಹೆ೦ಗಸು ರಜಾಯಿ ಹೊದ್ದು ಮಲಗಿರುವುದನ್ನು ಕ೦ಡರೆ ಆಶ್ಚರ್ಯವಾಗಬಹುದು. ಅಲ್ಲಿ ಸುತ್ತಮುತ್ತಲಿನ ಜನರು ಹೇಳುವ ಪ್ರಕಾರ ಅಲ್ಲಿಯ ಕೆಲವು ಮ೦ದಿ ಪ್ರತಿನಿತ್ಯ ತಮ್ಮ ತಮ್ಮ ಕಿಸೆಯಿ೦ದ ಒ೦ದಿಷ್ಟು ಹಣ ಸೆರಿಸಿ ಬಾಡಿಗೆ ರಜಾಯಿ ಕೊಳ್ಳಲಾಗದ ನಿರ್ವಸಿತರಿಗೆ ಬಾಡಿಗೆ ರಜಾಯಿ ಕೊಡಿಸುತ್ತಾರೆ. ಅತ್ಯ೦ತ ಸಹಜವಾಗಿ, “ನಾವು ಇಷ್ಟೂ ಮಾಡದಿದ್ದರೆ ಅವರು ಬದುಕುಳಿಯುವುದು ಬಾರಿ ಕಷ್ಟ,” ಎ೦ದು ಅವರೆಲ್ಲಾ ಹೇಳುತ್ತಾರೆ.

ನಮ್ಮ ತ೦ಡ ಅಲ್ಲಿದ್ದ ರಾತ್ರಿ ಹೆ೦ಗಸೊಬ್ಬಳು ಬದುಕಿನ೦ಚಿನಲ್ಲಿ ಕು೦ತಿದ್ದಳು. ಬಾಡಿಗೆಯ ರಜಾಯಿಯನ್ನು ಮೂಟೆ ಬಿಚ್ಚಿದ೦ತೆ ಬಿಚ್ಚಿದರೆ ಹಸಿದ ಹೊಟ್ಟೆಯ ಹೆ೦ಗಸು. ಸಾವಿಗೆ ಸಮೀಪವಾದ೦ತೆ ಇದ್ದಳು ಆಕೆ. ಕೆಲ ದಿನಗಲ ಹಿ೦ದೆ ನೆಡೆಯಲಾಗದೆ ಆಕೆ ಕುಸಿದಾಗ ನಿತ್ಯ ಕೂಲಿ ಕಾರ್ಮಿಕರ ಅಲ್ಲಿಗೆ ಕರೆತ೦ದಿದ್ದರು. ಉಣ್ಣಿಸಿದರೂ ಆಕೆಯ ಬಾಯಿಯಿ೦ದ ಸ್ವರ ಹೊರಡುತ್ತಿರಲಿಲ್ಲ. ನಮ್ಮೊ೦ದಿಗಿದ್ದ ಸಾಮಾಜಿಕ ಕಾರ್ಯಕರ್ತ ದೀಪಕ್ ತಕ್ಷಣ ಪೋಲೀಸರಿಗೆ ಫೋನ್ ಮಾಡಿ ಆ ಹೆ೦ಗಸನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ. ಆದರೆ ದೆಹಲಿಅ ಅದೆಷ್ಟು ಗಲ್ಲಿಗಳಲ್ಲಿ ಅದೆಷ್ಟು ಜನ ಈ ಹೆ೦ಗಸಿನ೦ತೆ ಇನ್ನೇನು ಮುರಿದುಹೊಗಲಿರುವ ಉಸಿರಿನ ದಾರ ಹಿಡಿದು ಕು೦ತಿದಾರೋ!

ನಿಜಾಮುದ್ದೀನ್ ಬಳಿ ಅನಾಮಿಕ ಹೆಣಗಳನ್ನು ಠಿಕಾಣೆಗೆ ಸೆರಿಸುವ ಮಧ್ಯವಯಸ್ಕನೊಬ್ಬನನ್ನು ನಾವು ಭೇಟಿಯಾದೆವು. ಕೆಲವೊಮ್ಮೆ ಪೋಲೀಸರು ಆತನಿಗೆ ಸೂಚನೆ ನೀಡಿದರೆ ಮತ್ತೆ ಕೆಲವೊಮ್ಮೆ ಉಳಿದ ನಿರ್ವಸಿತರು ಬೀದಿಯಿ೦ದ ಹೆಣ ಎತ್ತಲು ಹೇಳುತ್ತಾರೆ. ಸತ್ತ ವ್ಯಕ್ತಿಯ ಧರ್ಮ ಪತ್ತೆ ಹಚ್ಚಲು ಆತ ಪ್ರಯತ್ನಿಸುತ್ತಾನೆ. ಹಿ೦ದು ದೇಹವಾದರೆ ಸುಡಲು, ಮುಸ್ಲಿ೦ ದೆಹವಾದರೆ ಹೂಳಲು. ಸ್ಥಳೀಯರು- ಹೆಚ್ಚಾಗಿ ನಿರ್ವಸಿತರೇ- ಹಣ ಒಟ್ಟು ಮಾಡಿ ಅ೦ತ್ಯಕ್ರಿಯೆಯ ಖರ್ಚು ನಿಭಾಯಿಸುತ್ತಾರೆ. ಅದರಲ್ಲೊ೦ದಿಷ್ಟು ಹಣ ಉಲಿದರೆ ಇವನ ತಿ೦ಡಿ ತೀರ್ಥಕ್ಕೆ. ಈ ಚಳಿಗಾಲ (೨೦೧೦) ಬಹಳ ಕ್ರೂರವಾಗಿತ್ತು ಎ೦ದು ಹೇಳುತ್ತಾ ಆತ ಒ೦ದೇ ದಿನದಲ್ಲಿ ಹತ್ತು ಹೆಣಗಳನ್ನು ಎತ್ತಿದ ಪ್ರಸ೦ಗವನ್ನು ನೆನಪಿಸಿಕೊ೦ಡ. ಪೋಸ್ಟ್ ಮಾರ್ಟಮ್ ಬಹಳ ಅಪರೂಪವಾದರೆ ಕೆಲವು ಸಾವುಗಳು ಸರಕಾರಿ ದಾಖಲೆಗಳನ್ನೂ ಸೆರುವುದಿಲ್ಲ.

ನನ್ನ ಯುವ ಸಹೋದ್ಯೋಗಿ ತಾರೀಖ್ ದಿಲ್ಲಿಯ ಗಲ್ಲಿ ಗಲ್ಲಿಗಳನ್ನು ರಾತ್ರಿಯಿಡೀ ಸುತ್ತುತ್ತಾ ನಿರಾಶ್ರಿತರಿಗೆ ಹೊದಿಕೆಗಳನ್ನು ಹ೦ಚುತ್ತಾನೆ. ತಾ ಕ೦ಡ ದೃಶ್ಯಗಳಿ೦ದ ನಡುಗಿಹೋಗಿದ್ದಾನೆ. ಬಾ೦ಗ್ಲ ಸಾಹೇಬ್ ಗುರುದ್ವಾರದ ಎದುರು ನಮಾಜ಼್ ಮಾಡುವ೦ತೆ ಬಾಗಿ ತನ್ನ ತಲೆಯನ್ನೇ ನೆಲದೊಳಗೆ ಹುಗಿಯುವ೦ತೆ ಒತ್ತುತ್ತಿರುವ ಒಬ್ಬನನ್ನು ಆತ ಕ೦ಡಿದ್ದಾನೆ, ಅವನು ಚೀರುವುದನ್ನು ಕೇಳಿದ್ದಾನೆ. ಚಿಕ್ಕವನಿದ್ದಾಗ ಚಳಿಗಾಲವನ್ನು ಇಷ್ಟ ಪಡುತ್ತಿದ್ದ ತಾರೀಖ್, “ಈಗ ಚಳಿಗಾಲ ನನ್ನಲ್ಲಿ ಭಯ ಹುಟ್ಟಿಸುತ್ತದೆ,” ಎನ್ನುತ್ತಾನೆ.

ನಮ್ಮ ಪರ್ಯಠಣೆಯಲ್ಲಿ ನಮಗೆ ತಿಳಿದು ಬ೦ದಿದ್ದೇನೆ೦ದರೆ ಹಲವಾರು ಮ೦ದಿ ನಿರಾಶ್ರಿತರಾಗಲು ಕಾರಣ ಸರಕಾರ ಅವರ ಸಣ್ಣ ಪುಟ್ಟ ಜೊಪಡಿಗಳನ್ನು ಕೆಡವಿ ಹಾಕಿ ಬದಲಿ ವ್ಯವಸ್ಥೆ ಮಾಡದೆ ಹೊದದ್ದು. ಅ೦ಥಾ ಸುಮಾರು  ಇನ್ನೂರೈವತ್ತು ಸ೦ಸಾರಗಳು ನಿಜ಼ಾಮುದ್ದೀನ್ ಪಾರ್ಕ್ನಲ್ಲಿ ಮಲಗುತ್ತವೆ. ಅಲ್ಲಿ ಕುಸುಮ್ ಸ೦ಸಾರವೂ ಒ೦ದು. ದೂರದ ಅಸ್ಸಾ೦ನಿ೦ದ ದಶಕಗಳ ಹಿ೦ದೆ ಉದ್ಯೊಗವನ್ನರಸುತ್ತಾ ದಿಲ್ಲಿ ಸೆರಿದ ಕುಸುಮ್ ತನಗಾಗಿ ಒ೦ದು ಮನೆಯ೦ಥಾ ಮನೆಯೊ೦ದನ್ನು ಕಟ್ಟಿಕೊ೦ಡಿದ್ದಳು. ಕೆಲ ವರ್ಷಗಳ ಹಿ೦ದೆ ಸರಕಾರ ಆ ಮನೆಯನ್ನು ಕೆಡವಿದ ನ೦ತರ ಆಕೆ ಇರುಳುಗಳನ್ನೆಲ್ಲಾ ಕಳೆದಿರುವುದು ಪಾರ್ಕಿನಲ್ಲೇ. ಮಳೆಗಾಲ, ಚಳಿಗಾಲ, ಸೆಖೆಗಾಲ- ಎಲ್ಲವೂ ಪಾರ್ಕಿನಲ್ಲೇ. ಒ೦ಟಿ ಹೆ೦ಗಸರಿಗೆ ಬೀದಿಯಲ್ಲಿ ಜೀವನ ನೆಡೆಸುವುದು ಸುಲಭವಲ್ಲ. ಹಾಗಾಗಿ ಅವಳು, ಬೀದಿಗೆ ಬಿದ್ದ ಬಹಳಷ್ಟು ಹೆ೦ಗಸರ೦ತೆ, ನಿರ್ವಸಿತ ಗ೦ಡಸರ ಆಶ್ರಯ ಪಡೆಯುತ್ತಾಳೆ. ಅದರಲ್ಲಿ ಕೆಲವರು ದೆಹಕ್ಕೆ ಗಾಯ ಮಾಡಿ ಹೊದರೆ ಕೆಲವರು ಆತ್ಮಸ್ಥೈರ್ಯಕ್ಕೇ ಏಟು ನೀಡಿ ಹೊದರು. ಮತ್ತೂ ಕೆಲವರು ಜೀವವೊ೦ದನ್ನು ಕೈಗಿಟ್ಟು ಹೊದರು. ಕುಸುಮ್ ಮನೆಗೆಲಸಕ್ಕೆ ಹೊದರೂ ಅದರಿ೦ದ ಅವಳಿಗೆ ಆರ್ನೂರು ರೂಪಾಯಿಗಿ೦ತ ಜಾಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ.  ಆಕೆ ತನ್ನ ಮಕ್ಕಳೊ೦ದಿಗೆ ದರ್ಗಾದ ಮು೦ದೆ ಭಿಕ್ಷೆ ಬೇಡಿ ಹೊಟ್ಟೆ ತು೦ಬಿಸಿಕೊಳ್ಳುತ್ತಾಳೆ. ಆದರೂ ತಿ೦ಗಳೊ೦ದಕ್ಕೆ ನೂರಿಪ್ಪತ್ತು ರೂಪಾಯಿ ಖರ್ಚು ಮಾಡಿ ತನ್ನ ಮಗನನ್ನು ಪ್ರೈವೇಟ್ ಶಾಲೆಯೊ೦ದಕ್ಕೆ ಕಳುಹಿಸುತ್ತಾಳೆ. ಮಗಲನ್ನೂ ಶಾಲೆಗೆ ಕಳುಹಿಸಲು ಬೆಕಾದ ತಯಾರಿ ನೆಡೆದಿದೆ.

ಮಕ್ಕಳನ್ನೂ ಒಳಗೊ೦ಡ೦ತೆ ಹಲವು ನಿರಶ್ರಿತರು ನಿರ್ದಯಿ ಚಳಿಯ ಅಟ್ಟಹಾಸ ಎದುರಿಸಲು ಮಾದಕದ್ರವ್ಯಗಳನ್ನು ಬಳಸುತ್ತಾರೆ. ಅವರ ನಿದ್ರಾಸ್ಥಿತಿಯ, ಸೊತುಹೊದ, ಗಾಜಿನ೦ಥಾ ಕಣ್ಣಿನಲ್ಲಿ ಪ್ರಕೃತಿ ಮತ್ತು ಈ ಶೆಹರದ ವಿಕೃತಿಯನ್ನು ಹೋರಾಡಿದ ಫಲವಾಗಿ, ಶತಮಾನಗಳ ಎಕಾ೦ತ ಮತ್ತು ನಾಚಿಕೆ ಕಾಣಿಸುತ್ತದೆ.

ದೆಹಲಿಯ ಯಾವ ಅತಿರೇಖದ ಹವಾಮಾನದಲ್ಲಿ ಅತ್ಯ೦ತ ಜೀವವಿರೋಧಿ ಹವಾಮಾನ ಎ೦ದು ಕೇಳಿದರೆ ಕೆಲವರು ಚಳಿಗಾಲ ಮತ್ತೆ ಕೆಲವರು ಮಳೆಗಾಲ ಎನ್ನುತ್ತಾರೆ. ಮಳೆಗಾಲದಲ್ಲಿ ರಾತ್ರಿ ಹೊತ್ತು ಮಲಗುವುದು, ಅಡುಗೆ ಮಾಡುವುದು ಎಲ್ಲ ಕಷ್ಟವಾಗುತ್ತದಲ್ಲದೆ ಅವರ ವಸ್ತುಗಳೆಲ್ಲಾ ಮಳೆಯಲ್ಲಿ ಒದ್ದೆಯಾಗುತ್ತದೆ.

ಇವೆಲ್ಲದರ ಮಧ್ಯ , ವಾಹನಗಳ ಸಾಗರದ ನಡುವೆ ದ್ವೀಪವೊ೦ದನ್ನು ಮಾಡಿಕೊ೦ಡು ಬದುಕುತ್ತಿರುವ ಹೆ೦ಗಸೊಬ್ಬಳನ್ನು ಕ೦ಡೆವು. ಕಳೆದ ಹದಿನೇಳು ವರ್ಷಗಳಿ೦ದ ಆಕೆ ಪ್ಲಾಸ್ಟಿಕ್ ಶೀಟ್ ಒ೦ದರ ಕೆಳಗಡೆ ವಾಸ ಮಾಡುತ್ತಾ ಬ೦ದಿದ್ದಾಳೆ. ಆಕೆಯ ಬದುಕು ಸಹ್ಯವಾದದ್ದು ಆಕೆ ತನ್ನ೦ತೆಯೇ ನಿರ್ಗತಿಕವಾದ ಅನಾಥ ಹುಡುಗನೊಬ್ಬನನ್ನು  ಸಾಕಲಾರ೦ಭಿಸಿದಾಗ. ಆ ಹುಡುಗ ಈಗ ಬೆಳೆದಿದ್ದಾನೆ ಮಾತ್ರವಲ್ಲದೆ ಸ್ವ೦ತ ಕರುಳಿನ೦ತೆ ಈಕೆಯನ್ನು ನೊಡಿಕೊಳ್ಳುತ್ತಾನೆ.

“ಬಡವರ ಕತೆಯೇ ಇಷ್ಟು,” ಎನ್ನುತ್ತಾನೆ ಸೈಕಲ್ ರಿಕ್ಷಾ ಚಾಲಕ ಶರೀಫ್.  “ಆದರೂ ನಾನು ಕಷ್ಟ ಪಟ್ಟು ದುಡಿಯುತ್ತೇನೆ. ಹಾಗಾಗಿ ಕಷ್ಟದ ಜೀವನವಾದರು ಆತ್ಮಗೌರವದಿ೦ದ ಬದುಕುತ್ತೇನೆ,” ಎನ್ನುತ್ತಾನೆ ಆತ.

ಅನುವಾದಕರ ಪರಿಚಯ:ಸಮೂಹ ಮಧ್ಯಮ ವಿಷಯದಲ್ಲಿ ಸ್ನಾತಕೋತ್ತರ ಪಡೆದ ಸಂವರ್ತ ಮಣಿಪಾಲದಲ್ಲಿ ಹುಟ್ಟಿ ಬೆಳೆದವರು. ಮಣಿಪಾಲ ಸಮೂಹ ಮಾಧ್ಯಮ ಸಂಸ್ಥೆಯಲ್ಲಿ ಶಿಕ್ಷಕರಾಗಿ ದಿ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತರಾಗಿ ದುಡಿದಿರುವ ಇವರು ದೆಹಲಿಯ ಜವಾಹರಲಾಲ್ ನೆಹರು ವಿ.ವಿ. ಇಂದ ಎಮ್.ಫಿಲ್ ಪದವಿ ಪಡೆದು ಸಧ್ಯ ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಚಿತ್ರಕಥಾ ಲೇಖನ ಅಧ್ಯಯನ ನಿರತರು.

ಚುನಾವಣಾ ಪ್ರಣಾಳಿಕೆಗಳೆಂಬ ಪ್ರಹಸನ

– ಡಾ. ಎನ್. ಜಗದಿಶ್ ಕೊಪ್ಪ
ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದಂತೆ ತಮ್ಮ ತಮ್ಮ ಚುನಾವಣಿಯ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ, ಇವುಗಳನ್ನು ಗಮನಿಸಿದರೆ, ಅಥವಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಓದಿದರೆ, ಇವುಗಳನ್ನು ನಮ್ಮ ಪತ್ರಿಕೆಗಳು ‘ಹಾಸ್ಯಲೇಖನಗಳು ಎಂಬ ಶೀರ್ಶಿಷಿಕೆಯಡಿ ಪ್ರಕಟಿಸಬಹುದಾದ ಎಲ್ಲಾ ಗುಣಗಳನ್ನು ಹೊಂದಿವೆ Poverty_4C_--621x414ಎಂದು ನಿಸ್ಸಂಕೋಚವಾಗಿ ಹೇಳಬಹುದು.
ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ, ದಿನದ 24 ಗಂಟೆ ವಿದ್ಯುತ್, ನಿರಂತರ ಕುಡಿಯುವ ಯೋಜನೆ, ರಸ್ತೆ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಅಭಿವೃದ್ಧಿಗೆ ಒತ್ತು, ಹೀಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುತ್ತಿರುವ ರಾಜಕೀಯ ಪಕ್ಷಗಳಿಗೆ ತಾವು ಅಧಿಕಾರದಲ್ಲಿದ್ದಾಗ ಈ ಯೋಜನೆಗಳನ್ನು ಏಕೆ ಅನುಷ್ಟಾನಗೊಳಿಸಲಿಲ್ಲ? ಎಂದು ಯಾರೂ ಪ್ರಶ್ನಿಸಲಿಲ್ಲ, ಜೊತೆಗೆ ಪ್ರಶ್ನಿಸಲೂ ಬಾರದು ಏಕೆಂದರೆ, ಇವುಗಳು ಬಡವರನ್ನು ಬಡವರಾಗಿ ಇಡುವ ಒಂದು ವ್ಯವಸ್ಥಿತ ತಂತ್ರ ಅಷ್ಟೇ. ಇವುಗಳ ಬಗ್ಗೆ ಭಾರತದ ಮತದಾರರು ನಂಬಿಕೆಗಳನ್ನು ಕಳೆದುಕೊಂಡು ಎಷ್ಟೋ ವರ್ಷಗಳಾಗಿವೆ, ಈಗಿನ ಚುನಾವಣಾ ಪ್ರಣಾಳಿಕೆಗಳೆಂದರೆ, ಮನಸ್ಸಿಗೆ ತುಂಬಾ ಬೇಸರವಾದಾಗ ಓದಬಹುದಾದ ಹಾಸ್ಯದ ಕರಪತ್ರಗಳು ಎಂಬಂತಾಗಿವೆ.
ನಮ್ಮ ಜನಪ್ರತಿನಿಧಿಗಳು ವಾಸ್ತವ ಬದುಕಿನಿಂದ ಎಷ್ಟೊಂದು ದೂರ ಚಲಿಸಿದ್ದಾರೆ ಎಂಬುದಕ್ಕೆ, ಚುನಾವಣಾ ಪ್ರಣಾಳಿಕೆಗಳು ಸಾಕ್ಷಿಯಾಗಿವೆ.  ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಇತ್ತೀಚೆಗೆ ದೆಹಲಿ ರಸ್ತೆಗಳಲ್ಲಿ ಕಸ ಗುಡಿಸಲು, 5.400 ಹುದ್ದೆಗಳಿಗೆ, ಕೇವಲ ಐದನೇಯ ತರಗತಿ ಪಾಸಾಗಿರುವ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಿತ್ತು. ಒಟ್ಟು 18 ಸಾವಿರ ಅಜರ್ಿಗಳು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಎಸ್.ಎಸ್,ಎಲ್.ಸಿ. ಪಾಸಾದವರು ಎರಡು ಸಾವಿರ ಮಂದಿ ಇದ್ದರೆ, 50 ಮಂದಿ ಪದವೀಧರರು ಇದ್ದರು. ಉದ್ಯೋಗ ಸೃಷ್ಟಿಯ ಬಗ್ಗೆ ಬೊಗಳೆ ಬಿಡುವ ನಮ್ಮ ರಾಜಕೀಯ ಪಕ್ಷಗಳಿಗೆ ಕಪಾಳಕ್ಕೆ ಬಾರಿಸಿದಂತೆ ಇರುವ ಈ ಕಟು ವಾಸ್ತವ ಸಂಗತಿ ಅರ್ಥವಾಗುವುದು ಯಾವಾಗ?
ಕಳೆದ ವಾರ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಹಾಂಗ್ ಕಿನ್, ಜಾಗತಿಕ ಬಡತನದ ಕುರಿತಂತೆ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲಿ 120 ಕೋಟಿ ಬಡಜನರಿದ್ದು, ಭಾರತದಲ್ಲಿ ಇಲ್ಲಿನ ಜನಸಂಖ್ಯೆಯ 120 ಕೋಟಿಯಲ್ಲಿ, ಶೇಕಡ 33 ರಷ್ಟು ಬಡವರಿದ್ದಾರೆ ಎಂದು ತಿಳಿಸಿದ್ದಾರೆ. ವಿಶ್ವಬ್ಯಾಂಕ್, ಬಡತನ ಕುರಿತಂತೆ ತನ್ನ ಮಾನದಂಡವನ್ನು ಬದಲಾಯಿಸಿದೆ. ದಿನವೊಂದಕ್ಕೆ  ಒಂದು ಡಾಲರ್ ( ಸುಮಾರು 55 ರೂಪಾಯಿ) ಬದಲಾಗಿ, ಒಂದುಕಾಲು ಡಾಲರ್ ದುಡಿಯುವ ಅಂದರೆ, ಸುಮಾರು 68 ರೂಪಾಯಿ ಸಂಪಾದಿಸುವ ವ್ಯಕ್ತಿ ಬಡವನಲ್ಲ. ಆದರೆ, ಭಾರತದಲ್ಲಿ ಈ ಮಾನದಂಡವನ್ನು ದಿನವೊಂದಕ್ಕೆ 28 ರೂಪಾಯಿ ಎಂದು ನಿರ್ಧರಿಸಲಾಗಿದೆ. ಬಡತನ ಕುರಿತಂತೆ ವಿಶ್ವಬ್ಯಾಂಕ್ ನ  ಮಾನದಂಡವನ್ನು ಭಾರತಕ್ಕೆ ಅಳವಡಿಸಿದರೆ, ಬಡವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ನಮ್ಮ ರಾಜಕಾರಣಿಗಳು ಎಷ್ಟು ಅವಿವೇಕದಿಂದ ವತರ್ಿಸಬಲ್ಲರು ಎಂಬುದಕ್ಕೆ ತಿಂಗಳಿಗೆ ನಾಲ್ಕು ನೂರು ಸಂಪಾದಿಸುವ ದಂಪತಿಗಳು ರಾಜಧಾನಿ ದೆಹಲಿಯಲ್ಲಿ ಬದುಕಬಹುದೆಂದು ದೆಹಲಿಯ ಮುಖ್ಯ ಮಂತ್ರಿ ಶೀಲಾದೀಕ್ಷಿತ್ ಹೇಳಿಕೆ ನೀಡಿದ್ದರು. ಭಾರತದ ಬಡತನದ ಮಾನದಂಡವನ್ನು ನಿರ್ಧರಿಸುವ ಯೋಜನಾ ಆಯೋಗ, ಕಳೆದ ನವಂಬರ್ ತಿಂಗಳಿನಲ್ಲಿ ತನ್ನ ಕಛೇರಿಯ ಎರಡು ಶೌಚಾಲಯಗಳ ನಿಮರ್ಾಣಕ್ಕೆ ಖಚರ್ು ಮಾಡಿದ ಹಣ, ಬರೋಬ್ಬರಿ 14 ಲಕ್ಷ ರೂಪಾಯಿ. ಇದೇ ಯೋಜನಾ ಆಯೋಗ, ಒಂದು ಶೌಚಾಲಯದ ವೆಚ್ಚ ಕ್ಕೆ 20 ಸಾವಿರ ರುಪಾಯಿಗಳನ್ನು ನಿಗದಿ ಮಾಡಿದೆ. ಇದನ್ನು ವ್ಯಂಗ್ಯ ಎಂದು ಕರೆಯಬೇಕೊ? ಅಥವಾ ದುರಂತವೆನ್ನಬೇಕೊ? ತಿಳಿಯದು.
ಈ ಹಿನ್ನಲೆಯಲ್ಲಿ ಚುನಾವಣಾ ಪ್ರಣಾಳಿಕೆಗಳು, ಭರವಸೆಗಳಂತೆ ಕಾಣದೆ, ಕೇವಲ ಆಮೀಷಗಳಂತೆ ಕಾಣುತ್ತವೆ. ವಿಶ್ವ ಬ್ಯಾಂಕ್ ಸಮೀಕ್ಷೆ ಪ್ರಕಾರ, 2026 ರ ವೇಳೆಗೆ ಭಾರತದ ಜನಸಂಖ್ಯೆ 150 ಕೋಟಿಗೆ ಏರಲಿದ್ದು, ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿದೆ.  ಭಾರತದಲ್ಲಿ ಶೇಕಡ 46 ಮಂದಿಗೆ ಇಂದಿಗೂ ಶೌಚಾಲಯ ಇಲ್ಲ, ಇಂತಹ ಸ್ಥಿತಿಯಲ್ಲಿ ನಮ್ಮ ರಾಜಕೀಯ ಪಕ್ಷಗಳಿಂದ ಅಥವಾ ಸಕರ್ಾರಗಳಿಂದ ಉದ್ಯೋಗ ಸೃಷ್ಟಿ ಸಾಧ್ಯವೆ? ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ದೂರರದೃಷ್ಟಿಯ ಯೋಜನೆಗಳನ್ನು ರೂಪಿಸಿದಂತೆ ಕಾಣುವುದಿಲ್ಲ.
ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಚುನಾವಣೆ ಎಂದರೆ, ಹಣ, ಹೆಂಡ, ಮಾಂಸ, ಮತ್ತು ಆಮೀಷ ಎಂಬುದು ಜಗಜ್ಜಾಹಿರಾಗಿದೆ. ಚುನಾವಣೆ ಆಯೋಗದ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಗಾಳಿಗೆ ತೂರುವ ಕಲೆಯನ್ನು ನಮ್ಮ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿ ನಮ್ಮ ಮಹಿಳಾ ಸ್ವಸಹಾಯ ಸಂಘಗಳ ದುರ್ಬಳಕೆಯನ್ನು ಗಮನಿಸಿಬಹುದು.
ನಮ್ಮ ನೆರೆಯ ಬಂಗ್ಲಾ ದೇಶದಲ್ಲಿ 1970 ದಶಕದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಪರಿಕಲ್ಪನೆಯನ್ನು ಕೊಟ್ಟ ಡಾ. ಮಹಮ್ಮದ್ ಯೂನಸ್ ರವರ ಕನಸಿನ ಕೂಸಾದ ಮಹಿಳೆಯರ ಸ್ವ ಸಹಾಯ ಗುಂಪು ಯೋಜನೆ ಭಾರತದಲ್ಲಿ ಮತಬೇಟೆಯ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಿದೆ. ವಿಶ್ವ ಬ್ಯಾಂಕ್ ಸೇರಿದಂತೆ, ಜಗತ್ತಿನ ಎಂಬತ್ತೊಂಬತ್ತು ರಾಷ್ಟ್ರಗಳು ಈ ಯೋಜನೆಯನ್ನು ಅಳವಡಿಸಿಕೊಂಡು, ಬಡತನದ ನೇರ ಪರಿಣಾಮದ ಮೊದಲ ಬಲಿ ಪಶುವಾಗುವ ಮಹಿಳೆಯನ್ನು ಹಸಿವು ಮತ್ತು ಬಡತನದ ಕೂಪದಿಂದ ಮೇಲೆತ್ತಲು ಶ್ರಮಿಸುತ್ತಿವೆ. ಆದರೆ, ಭಾರತದಲ್ಲಿ ಚುನಾವಣಾ ಪ್ರಚಾರಕ್ಕಾಗಿ, ಮತಕ್ಕಾಗಿ ಸ್ರೀ ಸಹಾಯ ಗುಂಪುಗಳನ್ನು ಯಾವ ವಿವೇಚನೆಯಿಲ್ಲದೆ, ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅನಕ್ಷರಸ್ತ ಮುಗ್ಧ ಮಹಿಳೆಯರು ಈ ದಿನ ಐನೂರು ರೂಪಾಯಿ ಕಾಣಿಕೆಗಾಗಿ ಊರಿಗೆ ಬರುವ ರಾಜಕಾರಣಿಗಳಿಗೆ ಆರತಿ ಬೆಳಗುತ್ತಿದ್ದಾರೆ. ಮನೆಗೆ ಬಂದ ಮಗನಿಗೆ, ಅಥವಾ ಸೊಸೆಗೆ ಆರತಿ ಎತ್ತುತ್ತಿದ್ದ ಸಾಂಸ್ಕೃತಿಕ ಸಂಪ್ರದಾಯ ಈಗ ಹಣದಾಸೆಗೆ ಮುಖಹೇಡಿ ಜನಪ್ರತಿನಿಧಿಗಳಿಗೆ ಮೀಸಲಾಗಿದೆ. ಇದೊಂದು ರಾಜಕೀಯ ವ್ಯವಸ್ಥೆಯ ವ್ಯಭಿಚಾರವಲ್ಲದೆ ಮತ್ತೇನು?
ಭಾರತದಲ್ಲಿ ಪ್ರತಿ ಮುವತ್ತು ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಈವರೆಗೆ ಒಟ್ಟು 2 ಲಕ್ಷದ 56 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಗತಿ ಈ ನಾಡಿನ ದುರಂತ ಎಂದು ಪರಿಭಾವಿಸಲಾಗದ ರಾಜಕೀಯ ಪಕ್ಷಗಳು, ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ  ಪ್ರಣಾಣಿಕೆಗಳನ್ನು ಪ್ರಕಟಿಸಿದರೆ, ನಾವುಗಳು ಅವುಗಳನ್ನು  ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆಯಾ?

ಹರ್ಷ ಮಂದೇರ್ ಬರಹ – 3: ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರವೇಕೆ?

– ಹರ್ಷ ಮಂದೇರ್
ಅನುವಾದ: ಅರುಣ್ ಕಾಸರಗುಪ್ಪೆHarsha Mander

ಸರ್ಕಾರಗಳು ಆಗಾಗ ಎಚ್ಚೆತ್ತುಕೊಂಡಂತೆ ಮೈಕೊಡವಿಕೊಂಡು ಮೇಲೆದ್ದು ಭಿಕ್ಷುಕರ ಮೇಲೆ ಕತ್ತಿ ಛಳಪಿಸುವುದಿದೆ. ಕೈಯೊಡ್ಡುವುದನ್ನೇ ಬದುಕನ್ನಾಗಿಸಿಕೊಂಡ, ಸಮಾಜದ ಪಾಲಿಗೆ ಮೈಲಿಗೆಯಾದ ಈ ಮಂದಿ ಎಲ್ಲಾದರೂ ಸರ್ವಶಕ್ತ ಪ್ರಭುತ್ವದ ಎದುರು ನಿಂತು ಬಡಿದಾಡುವುದುಂಟೇ? ಅವಮಾನಗಳನ್ನು ಅರಗಿಸಿಕೊಳ್ಳುತ್ತಾ, ಇಂಥ ಸಾವಿರಾರು ಪ್ರಹಾರಗಳಿಗೆ ಒಡ್ಡಿಕೊಳ್ಳುತ್ತಾ, ಅವುಗಳನ್ನೇ ನುಂಗಿಕೊಂಡು ಬಂದ ಭಿಕ್ಷುಕ ಸಮುದಾಯ ತನ್ನದೇ ಆದ ಸಾಂಪ್ರದಾಯಿಕ ರಕ್ಷಣಾ ತಂತ್ರವೊಂದನ್ನು ಅಳವಡಿಸಿಕೊಂಡಿದೆ. ಅದೆಂದರೆ, ಸರ್ಕಾರದ ಆಟಾಟೋಪ ತಿಳಿಯಾಗುವ ತನಕ ಭೂಗತವಾಗಿ ತಣ್ಣಗಿದ್ದು ಬಳಿಕ ಮತ್ತೆ ಬೀದಿಗಿಳಿಯುವುದು. ಆ ಬಳಿಕ ಸಮಾಜದ ಎದುರು ಮತ್ತದೇ ಮಾಸಿದ ಕೈಗಳು, ದಯನೀಯ ಮುಖಗಳು. ಅದನ್ನು ಬಿಟ್ಟು ಅವರ ಪಾಲಿಗಿರುವ ದಾರಿಯಾದರೂ ಯಾವುದು?

ಪ್ರಭುತ್ವದ ಇಂಥ ಈ ಪ್ರಹಾರಕ್ಕೆ ಇನ್ನಿಲ್ಲದ ಬೆಂಬಲ ನೀಡುತ್ತಿರುವುದು ಸುಶಿಕ್ಷಿತ ಮಧ್ಯಮ ವರ್ಗ. ಈ ಕಳೆಗೆಟ್ಟ ಮುಖಗಳ, ನಾರುವ ಮೈಗಳ, ಜಿಡ್ಡುಗಟ್ಟಿದ ತಲೆಗಳ, ಕೊಳಕೇ ಮೈದಳೆದಂತಿರುವ ಬೀದಿ ಭಿಕಾರಿಗಳು, ನಿಂತಲೆಲ್ಲಾ ಕರುಣಾಜನಕವಾಗಿ ಪೀಡಿಸುವ ಆ ಕೊಳಕು ಕೈಗಳು ಸುಶಿಕ್ಷಿತ ಮಧ್ಯಮ ವರ್ಗಗಳಲ್ಲಿ ಹುಟ್ಟು ಹಾಕುವ ಅಸಮಾಧಾನ, ಅಸಹನೆ ಕೂಡ ಪ್ರಭುತ್ವದ ಈ ಪ್ರಹಾರಕ್ಕೆ ನೈತಿಕ ಬೆಂಬಲ ಒದಗಿಸುತ್ತವೆ. ಚಿತ್ರಮಂದಿರಗಳು, ಟ್ರಾಫಿಕ್ ಸಿಗ್ನಲ್ಗಳು, ಶಾಪಿಂಗ್ ಆರ್ಕೆಡ್ಗಳು, ದೇವಸ್ಥಾನಗಳು, ಹೀಗೆ ಎಲ್ಲೆಂದರಲ್ಲಿ ಕಣ್ಣಿಗೆ ಬೀಳುವ, ತಮ್ಮ ಇರುವಿಕೆಯಿಂದಲೇ ಮುಜುಗರವುಂಟು ಮಾಡುವ ಭಿಕ್ಷುಕರ ಬಗ್ಗೆ ಮಧ್ಯಮ ವರ್ಗದ ಮಂದಿಗೆ ಎಂದಿಗೂ ತೀರದ ಅಸಹನೆ. ಕಣ್ಣೆದುರು ಬೆತ್ತಲೆಯಾಗಿ ನಿಲ್ಲುವ ಈ ‘ನಡೆದಾಡುವ ದಾರಿದ್ಯ್ರತನ’ ತಂದೊಡ್ಡುವ ಮುಜುಗರದ ಜೊತೆ, ಇವರೆಲ್ಲಾ ದಿನದ ಕೂಳನ್ನೂ ದುಡಿಯಲಾಗದ ಸೋಮಾರಿಗಳು ಹಾಗೂ ಮಕ್ಕಳನ್ನು ಊನಗೊಳಿಸಿ ಭಿಕ್ಷೆಗಾಗಿ ಬೀದಿಗೆ ಬಿಡುವ ದುಷ್ಟರ ಪಡೆ ಎಂಬ ಪೂರ್ವಗ್ರಹೀತವೂ ಸೇರಿ ಭಿಕ್ಷುಕರು ಎಂದರೆ “ಕರುಣೆಗೆ ಅಯೋಗ್ಯರಾದ ಜೀವಹೇಡಿಗಳು” ಎಂದೇ ನಂಬಲಾಗುತ್ತದೆ. ಇವರೆಲ್ಲಾ ಸಭ್ಯ – ಸುಶಿಕ್ಷಿತರು ಎನ್ನಿಸಿಕೊಂಡ, ಕಾನೂನು ಪರಿಪಾಲಕ ಪ್ರಜಾವರ್ಗದ ಹಿತದೃಷ್ಟಿಯಿಂದ ನಾಗರಿಕ ಸಮಾಜಕ್ಕೆ ಸೋಂಕದಂತೆ ದೂರವಿಡಬೇಕಾದ ಅನಿಷ್ಠ ಕಳೆಗಳು ಎಂಬುದು ಮಧ್ಯಮ ವರ್ಗದ ಅಂಬೋಣ. ಇಂಥ ನಂಬಿಕೆಗಳನ್ನು ಈ ನೆಲದ ಕಾನೂನುಗಳು, ಪೊಲೀಸ್ ವ್ಯವಸ್ಥೆ, ಸಮಾಜ ಕಲ್ಯಾಣ ಇಲಾಖೆಗಳು ಹಾಗೂ ಮಾಧ್ಯಮಗಳು ತಮ್ಮ ನಡಾವಳಿಗಳ ಮೂಲಕ ಬಲಪಡಿಸುತ್ತಾ ಹೋಗುತ್ತವೆ.

ಹಾಗಾದರೆ ಇವರೆಲ್ಲಾ ಕೇವಲ ತೊಡಕುಗಳೇ?

ತಲೆಮಾರುಗಳಿಂದ ಜಾರಿಯಲ್ಲಿರುವ ಈ ಸಂಘರ್ಷವನ್ನು ಇನ್ನೊಂದು ವಿಪರೀತ ಘಟ್ಟಕ್ಕೆ ತಲುಪಿಸಿರುವ ದೆಹಲಿಯ ಸಂಚಾರಿ ಪೊಲೀಸರು ಟ್ರಾಫಿಕ್ ಸಿಗ್ನಲ್ಗಳಲ್ಲಿ ಇಂಥ ಬಿಕ್ಷುಕರಿಗೆ ಕಾಸು ಹಾಕುವ ಪ್ರತಿಯೊಬ್ಬರ ಮೇಲೂ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕನಿಷ್ಠ 1000 ರುಪಾಯಿಗಳ ಜುಲ್ಮಾನೆ ವಿಧಿಸುತ್ತಿದ್ದಾರೆ. ಆಮೂಲಕ, ಸಾಮಾಜಿಕ ಹಾಗೂ ಮಾನವೀಯ ದುರಂತದ ನಿದರ್ಶನವಾಗಬೇಕಾಗಿದ್ದ ಆದರೆ ಸಮಾಜದ ಕಣ್ಣಿನಲ್ಲಿ ‘ಹೇಸಿಗೆ’ಯಾಗಿದ್ದ ಭಿಕ್ಷುಕರು ಇಂದು ಕಾನೂನು ದೃಷ್ಟಿಯಲ್ಲೂ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ ತೊಡಕುಗಳಾಗಿದ್ದಾರೆ. ಇಂಥದ್ದೊಂದು ಮನಸ್ಥಿತಿಯನ್ನು ನ್ಯಾಯಾಲಯಗಳೂ ತಮ್ಮ ತೀರ್ಪುಗಳ ಮೂಲಕ ಎತ್ತಿ ಹಿಡಿದಿವೆ. ನ್ಯಾಯವಾದಿಗಳ ಗುಂಪೊಂದು ಹೂಡಿದ “ಸಾರ್ವಜನಿಕ ಹಿತಾಸಕ್ತಿ” ಮೊಕದ್ದಮೆಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡಿರುವ ನ್ಯಾಯಪೀಠ, ದೆಹಲಿಯ ಸುಗಮ ಸಂಚಾರಿ ವ್ಯವಸ್ಥೆಗೆ ಅಡ್ಡಿಯುವುಂಟು ಮಾಡುವ ಈ ಭಿಕ್ಷುಕ ಸಮುದಾಯವನ್ನು ದೆಹಲಿಯ ಮುಖದಿಂದಲೇ ಒರೆಸಿ ಹಾಕಬೇಕು ಎಂದು ಅಭಿಪ್ರಾಯಪಟ್ಟಿತ್ತು. ಈ ತೀರ್ಪಿಗೆ ಕಾರಣವಾದ “ಸಾರ್ವಜನಿಕ ಹಿತಾಸಕ್ತಿ” ಮೊಕದ್ದಮೆಯಲ್ಲಿ ಬಳಸಲಾದ ನುಡಿಗಟ್ಟುಗಳು ಕೂಡ ಬಿಕ್ಷುಕರನ್ನು “ರಾಷ್ಟ್ರ ರಾಜ್ಯಧಾನಿಯ ಕೊಳಕು ಮುಖ” ಎಂದೇ ವ್ಯಾಖ್ಯಾನಿಸುತ್ತವೆ ಹಾಗೂ “ರಸ್ತೆ ರೇಜಿಗೆ”ಗೆ ಕಾರಣವಾಗುವ ಹಲವು ಅಂಶಗಳಲ್ಲಿ ಇದೂ ಎಂದು ಷರಾ ಹಾಕುತ್ತವೆ. ದೆಹಲಿಯ ಸಮಾಜ ಕಲ್ಯಾಣ ಇಲಾಖೆಯ ಪ್ರಕಾರ ಭಿಕ್ಷೆ ಹಾಕುವುದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗುವುದಕ್ಕಿಂತ ಇನ್ಯಾವುದೇ ಅಪರಾಧಕ್ಕಿಂತ ಹೆಚ್ಚಿನ ಗುರುತರ ಅಪರಾಧ. ಕಳೆದ ವರ್ಷ ಕೆಲವು ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡ ಜಾಹೀರಾತು ಸಮಾಜದ ಒಟ್ಟಾರೆ ದೃಷ್ಟಿಕೋನ, ಪೂರ್ವಾಗ್ರಹವೆಲ್ಲವಕ್ಕೂ ಕನ್ನಡಿ ಹಿಡಿಯುತ್ತದೆ. ಆ ಜಾಹೀರಾತು ಹೇಳುವಂತೆ, ಭಿಕ್ಷುಕರಿಗೆ ಅನುಕಂಪ ತೋರಿಸುವ ಮೂಲಕ ಸಾರ್ವಜನಿಕರು ನಗರದ ಟ್ರಾಫಿಕ್ ಜಾಮ್ಗಳು, ಅಫಘಾತಗಳು, ಅನಕ್ಷರತೆ, ಅಡಚಣೆ, ನಿರುದ್ಯೋಗ, ಬೀಡಿ, ಸಿಗರೇಟ್, ಮದ್ಯ, ಭಾಂಗ್, ಗಾಂಜಾ, ಚರಸ್, ಹೆರಾಯಿನ್…ಮ್ಯಾಂಡ್ರಾಕ್ಸ್, ರಾಬರಿ, ರೇಪ್, ಕಳ್ಳತನ, ಕೊಲೆ, ವೇಶ್ಯಾವಾಟಿಕೆ, ಅಂಗವಿಕಲತೆ, ಹೊಡೆದಾಟ, ಗೂಂಡಾಗಿರಿ” ಈ ಎಲ್ಲದಕ್ಕೂ ಕಾರಣರಾಗುತ್ತಿದ್ದಾರೆ. ಮಾತ್ರವಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಕೊಳಗೇರಿಗಳು, ಬಡತನ, ಸಾಲ, ಅಜ್ಞಾನ, ಆಕ್ರಮಣಕಾರಿ ಪ್ರವೃತ್ತಿ, ನೆಲಗಳ್ಳತನ, ಅತ್ಯಾಚಾರ, ದರೋಡೆ…” ಇವೆಲ್ಲವಕ್ಕೂ ಸಾರ್ವಜನಿಕರು ಭಿಕ್ಷುಕರೆಡೆಗೆ ಎಸೆಯುವ ಕಾಸೇ ಕಾರಣ ಎಂಬುದನ್ನು ಮನವರಿಕೆ ಮಾಡಿಕೊಡಲು ತನ್ನ ಶಕ್ತಿಮೀರಿ ಪ್ರಯತ್ನ ನಡೆಸಿತ್ತು.

ಪೂರ್ವಗ್ರಹೀತಗಳು

ಈ ಭಿಕ್ಷುಕ ಸಮುದಾಯದ ಕುರಿತು ಇರುವ ಪೂರ್ವಾಗ್ರಹಗಳು ಕೂಡ ಜನತೆಯ ಅಸಹನೆ, ತಿರಸ್ಕಾರಗಳಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತವೆ. ಅವುಗಳಲ್ಲಿ ಒಂದು ಈ ಭಿಕ್ಷುಕ ಮಾಫಿಯಾವನ್ನು ಕುರಿತದ್ದು. ಈ ಭಿಕ್ಷುಕ ಮಾಫಿಯಾಗಳು ಸಮಾಜದಲ್ಲಿ ಸಕ್ರಿಯವಾಗಿದ್ದು ಮಕ್ಕಳನ್ನು ಅಪಹರಿಸಿ, ಅವರನ್ನು ಅಂಗವಿಹೀನಗೊಳಿಸಿ ಅವರನ್ನು ಭಿಕ್ಷೆ ಬೇಡಲು ಬಳಸಿಕೊಳ್ಳುತ್ತಾರೆ ಎಂಬ ನಂಬಿಕೆ ನಮ್ಮ ಸಮಾಜದಲ್ಲಿದೆ. ಯಾರೂ ಈ ಬಗೆಯ ನಂಬಿಕೆಗಳನ್ನು ಪ್ರಶ್ನಿಸುವ ಗೊಡವೆಗೇ ಹೋಗುವುದಿಲ್ಲ ಹಾಗೂ ಇವ್ಯಾವಕ್ಕೂ ಯಾವುದೇ ಸಬೂತು ಹಾಗೂ ಪರಿಶೀಲನೆಗಳ ಅವಶ್ಯಕತೆಯೂ ಇರುವುದಿಲ್ಲ. ಹಾಗಿದ್ದೂ ಈ ಮಾಫಿಯಾಗಳ ಕುರಿತು ತನಿಖೆ ನಡೆಸುವಂತೆ ದಹೆಲಿಯ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿತ್ತು. ಹಾಗೆ ತನಿಖೆ ನಡೆಸಿದ ದೆಹಲಿಯ ಕ್ರೈಮ್ ಬ್ರಾಂಚ್ ಈ ರೀತಿಯ ಯಾವುದೇ ಮಾಫಿಯಾ ಅಸ್ಥಿತ್ವದಲ್ಲಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ವರದಿ ಒಪ್ಪಿಸಿತ್ತು. ಅಷ್ಟೆಲ್ಲಾ ವರ್ಷಗಳ ಕಾಲ ನಿರ್ಗತಿಕ ಜನರ ನಡುವೆ ಸಾಕಷ್ಟು ಓಡನಾಡಿದ ಹಾಗೂ ಕೆಲಸ ಮಾಡಿದ ನನಗೂ ಅಂಥದ್ದೊಂದು ಮಾಫಿಯಾ ಇರುವುದು ಗಮನಕ್ಕೆ ಬಂದಿಲ್ಲ. ಹಾಗೆಂದು ಬಲತ್ಕಾರವಾಗಿ ಮಕ್ಕಳನ್ನು ಈ ವೃತ್ತಿಗೆ ತಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಎಷ್ಟೋ ಬಾರಿ ತಂದೆ ತಾಯಿಯರು ತಮ್ಮ ಮಕ್ಕಳ ಹೊಟ್ಟೆ ಹೊರೆಯಲು ಸಾಧ್ಯವಾಗದೇ ಅವರನ್ನು ತಿರುಪೆ ಎತ್ತಲು ಬೀದಿಗೆ ತಳ್ಳಿದ ನಿದರ್ಶನಗಳಿಗೇನೂ ಬರವಿಲ್ಲ. ಅಷ್ಟೇ ಅಲ್ಲ, ಕಿತ್ತು ತಿನ್ನುವ ಬಡತನ, ಗಂಡನಿಂದ ದೂರವಾದ, ಸೂರಿಲ್ಲದ ತಾಯಿಯಂದಿರನ್ನು ಹೊಂದಿರುವ, ಮಾದಕ ವ್ಯಸನಿ, ರೋಗಿಷ್ಠ ಅಪ್ಪ-ಅಮ್ಮಂದಿರ ದೆಸೆಯಿಂದಾಗಿ ಅಥವಾ ಅಪ್ಪ-ಅಮ್ಮ ಇಲ್ಲದೇ ಅನಾಥರಾದ ಮಕ್ಕಳು ಹೀಗೆ ಬೀದಿಗಿಳಿದು ಭಿಕ್ಷೆ ಬೇಡಿ ಬದುಕಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ.

ಹಾಗಾದರೆ, ಇದಕ್ಕೆ ಪರಿಹಾರವೇ ಇಲ್ಲವೇ? ಇದೆ. ಬಾಲಕಾರ್ಮಿಕ ಸಮಸ್ಯೆಯ ನಿವಾರಣೆಗೆ ಸರ್ಕಾರ ಯಾವ ಹಾದಿ, ಕಾನೂನನ್ನು ಬಳಸಿಕೊಳ್ಳುತ್ತಿದೆಯೋ ಅದನ್ನೇ ಬಳಸಿಕೊಂಡು ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದೇ ವಿನಾ ಅಂಥ ಮಕ್ಕಳ ತಂದೆ ತಾಯಿಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ಏನನ್ನೂ ಸಾಧಿಸಿದಂತಾಗುವುದಿಲ್ಲ. ಹಾಗೆಯೇ, ಎಲ್ಲಾ ನಗರಗಳಲ್ಲಿರುವ ನೂರಾರು ಮುಕ್ತ ರೆಸಿಡೆನ್ಷಿಯಲ್ ಶಾಲೆಗಳ ಮುಖೇನ ಶಿಕ್ಷಣದ ಮೂಲ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದೂ ಈ ಸಮಸ್ಯೆಯಿಂದ ಹೊರಬರಲು ನಮ್ಮೆದುರು ಇರುವ ಮತ್ತೊಂದು ಹಾದಿ. ಹಾಗೊಂದು ವೇಳೆ, ಮಕ್ಕಳನ್ನು ಭಿಕ್ಷಾವೃತ್ತಿಗೆ ತಳ್ಳುವ ಮಾಫಿಯಾ ಇದೆ ಎಂದಾದಲ್ಲಿ ಅದನ್ನು ಚಿವುಟಿ ಹಾಕಲು ಹೊಸ ಕಾನೂನಿನ ಅಗತ್ಯವೇನೂ ಇಲ್ಲ. ಈಗಾಗಲೇ ಅಸ್ಥಿತ್ವದಲ್ಲಿರುವ ಇಂಡಿಯನ್ ಪಿನಲ್ ಕೋಡ್ನ ಸೆಕ್ಷನ್ 363A, ಮಕ್ಕಳ ಅಪಹರಣ ಹಾಗೂ ಅಂಗವಿಕಲಗೊಳಿಸಿ ಬಲತ್ಕಾರದಿಂದ ಭಿಕ್ಷಾವೃತ್ತಿಗೆ ತಳ್ಳುವಂಥ ಸಮಸ್ಯೆಗಳಿಗೂ ಸೂಕ್ತ ಉತ್ತರವಾಗಬಲ್ಲದು.

ಭಿಕ್ಷಾವೃತ್ತಿಯನ್ನು ಒಂದು ದೊಡ್ಡ ಅಪರಾಧ ಎಂಬಂತೆ ನೋಡಲು ಮಾಫಿಯಾಗಳ ಕುರಿತು ಸಮಾಜದಲ್ಲಿ ಪ್ರಚಲಿತದಲ್ಲಿರುವ ಉತ್ಪ್ರೇಕ್ಷಿತ ನಂಬಿಕೆಗಳು ಮಾತ್ರ ಕಾರಣವಲ್ಲ. ದುಡಿಯಲಾಗದ, ಸಮಾಜಕ್ಕೆ ಹೊರೆಯಾದ ಮೈಗಳ್ಳರ ಕಟ್ಟ ಕಡೆಯ ಸೋಗು ಎಂಬ ಕಾರಣಕ್ಕೂ ಭಿಕ್ಷಾವೃತ್ತಿಯನ್ನು ಸಾಮಾಜಿಕ ಅಪರಾಧವೆಂಬಂತೆ ನೋಡಲಾಗುತ್ತದೆ. ಮನೆ-ಮಠ ಇಲ್ಲದ ನಿರ್ಗತಿಕ ಜನ ಸಮುದಾಯ ಅತ್ಯಂತ ಸುಲಭವಾಗಿ ಕೈಗೊಳ್ಳಬಹುದಾದ ವೃತ್ತಿ ಎಂದರೆ ತಿರುಪೆ ಎತ್ತುವುದು ಎಂಬ ನಂಬಿಕೆ ಸಮಾಜದಲ್ಲಿದೆ. ಆದರೆ ಇತ್ತೀಚೆಗೆ ಈ ಕುರಿತು ಅಧ್ಯಯನ ನಡೆಸಿದ ದೆಹಲಿಯ PUCL – CSDS ಸಂಘಟನೆಯ ಗಮನಕ್ಕೆ ಬಂದ ಸಂಗತಿ ಇದಕ್ಕೆ ವ್ಯತಿರಿಕ್ತವಾಗಿತ್ತು. ಆ ಸಮೀಕ್ಷೆಯ ಪ್ರಕಾರ ನಿರ್ಗತಿಕ ಮಕ್ಕಳಲ್ಲಿ ಬಿಕ್ಷಾಪಾತ್ರೆ ಹಿಡಿಯುತ್ತಿರುವವರು ಕೇವಲ ಶೇ.9 ರಷ್ಟು ಮಕ್ಕಳು ಮಾತ್ರ. ಹಾಗೆ ನೋಡಿದರೆ, ಭಿಕ್ಷೆ ಬೇಡುವುದಕ್ಕಿಂತ ದುಡಿಮೆ ಮಾಡಲು ಇಚ್ಛಿಸುವ ಮಕ್ಕಳೇ ಹೆಚ್ಚು. ಅದು ಕಸ ಆಯುವುದಾಗಿರಬಹುದು, ಹೊಟೇಲ್ಗಳಲ್ಲಿ ಟೀ ಸರಬರಾಜು ಮಾಡುವುದಾಗಿರಬಹುದು ಹಾಗೂ ಕಾನೂನು ವಿರೋಧಿ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಾಗಿರಬಹುದು, ಒಟ್ಟಿನಲ್ಲಿ ಭಿಕ್ಷೆ ಬೇಡುವುದಕ್ಕಿಂತ ಬೆವರು ಸುರಿಸುವುದರಲ್ಲಿಯೇ ಈ ಮಕ್ಕಳಿಗೆ ನಂಬಿಕೆ ಹೆಚ್ಚು. ಅಂದರೆ, ಒಟ್ಟು ಮಕ್ಕಳಲ್ಲಿ ಶೇ.10 ರಷ್ಟು ಮಕ್ಕಳು ಮಾತ್ರ ಭಿಕ್ಷಾವೃತ್ತಿಗೆ ಮೊರೆ ಹೋಗುತ್ತಿದ್ದಾರೆ. PUCL-CSDS ಸಮೀಕ್ಷೆಯ ಸಂದರ್ಭದಲ್ಲಿ ಗಮನಕ್ಕೆ ಬಂದ ಸಂಗತಿಗಳೆಂದರೆ, ದೆಹಲಿಯಂಥ ನಗರದಲ್ಲಿ ಶೇ.23 ರಷ್ಟು ನಿರ್ಗತಿಕ ಮಕ್ಕಳು ಕೇವಲ ಹದಿನೈದು ದಿನಗಳಲ್ಲಿಯೇ ಕೆಲಸ ಹುಡುಕಿಕೊಂಡರೆ ಇನ್ನು ಶೇ.33ರಷ್ಟು ಮಕ್ಕಳು 16 ರಿಂದ 25 ದಿನಗಳಲ್ಲಿಯೇ ಕೆಲಸ ಹುಡುಕಿಕೊಳ್ಳುತ್ತಾರೆ. ಸಶಕ್ತ, ಆರೋಗ್ಯವಂತ ವ್ಯಕ್ತಿಗಳು ಭಿಕ್ಷಾವೃತ್ತಿಗಿಳಿಯುವುದು ತೀರಾ ಕಡಿಮೆ. ಈಗ ರಸ್ತೆಯಲ್ಲಿ ಕಾಣಸಿಗುವ, ಪ್ರಾಪ್ತ ವಯೋಮಾನದ ಭಿಕ್ಷುಕರಲ್ಲಿ ಬಹುತೇಕ ಮಂದಿ ಕೆಲಸ ಮಾಡಲು ಸಾಧ್ಯವಾಗದಷ್ಟು ಅಂಗವೈಕಲ್ಯ ಹಾಗೂ ಕುಷ್ಠರೋಗ, ಬುದ್ಧಿಮಾಂದ್ಯತೆಯಿಂದ ಬಳಲುವವರೇ ಆಗಿದ್ದಾರೆ. ಭಿಕ್ಷೆ ಬೇಡುವ ಯಾವುದೇ ವ್ಯಕ್ತಿಗೆ ಸೂಕ್ತ ಕೆಲಸವನ್ನು ಒದಗಿಸಿದರೆ ಖುಷಿಯಿಂದ ಆ ಕೆಲಸವನ್ನು ಒಪ್ಪಿಕೊಂಡು ಅದರಲ್ಲಿ ತೊಡಗಿಸಿಕೊಳ್ಳುವವರನ್ನು ನಾನೇ ನನ್ನ ಅನುಭವದಲ್ಲಿ ಕಂಡಿದ್ದೇನೆ.

ಭಿಕ್ಷಾವೃತ್ತಿಯನ್ನು ಅಪರಾಧದಂತೆ ಬಿಂಬಿಸುವುದರ ಹಿಂದೆ ವಸಾಹತು ಮನಸ್ಥಿತಿ ಕೆಲಸ ಮಾಡುತ್ತದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮ್ಮದೇ ಸಾಂಪ್ರದಾಯಿಕ ಸಮಾಜಗಳು ಈ ಭಿಕ್ಷಾರ್ಥಿಗಳ ಕುರಿತು ಇಷ್ಟೊಂದು ಒರಟಾಗಿ ವರ್ತಿಸಿದ್ದು ಕಂಡುಬರುವುದಿಲ್ಲ. ಅದರಲ್ಲೂ ಬೌದ್ಧ ಧರ್ಮದಲ್ಲಿ ಭಿಕ್ಷೆಗೆ ಅದರದ್ದೇ ಆದ ಸ್ಥಾನವಿತ್ತು. ಅಲ್ಲಿ ಬರುವ ಮಹಾಮಹಿಮರೆಲ್ಲಾ ‘ಭಿಕ್ಕೆ’ ಬೇಡುವುದರ ಮೂಲಕವೇ ತಮ್ಮೊಳಗಿನ ಅಹಂ ಅನ್ನು ನೀಗಿಕೊಂಡವರು, ಆಮೂಲಕವೇ ಭೌತಿಕ ಜಗತ್ತಿನೊಂದಿಗಿನ ತಮ್ಮೆಲ್ಲಾ ಕರುಳು-ಬಳ್ಳಿ ಸಂಬಂಧಗಳನ್ನೂ ಕಡಿದುಕೊಂಡವರು. ಭಿಕ್ಷಾವೃತ್ತಿಯನ್ನು ಮೊದಲ ಬಾರಿಗೆ ಅಪರಾಧ ಎಂದು ಘೋಷಿಸಲಾಗಿದ್ದು ಬ್ರಿಟೀಷ್ ಆಡಳಿತಾವಧಿಯಲ್ಲಿ, 1920 ರಲ್ಲಿ. ಬಳಿಕ ಇದನ್ನೇ ಬಾಂಬೆ ಭಿಕ್ಷಾವೃತ್ತಿ ನಿಯಂತ್ರಣ ಕಾಯಿದೆಯ ರೂಪದಲ್ಲಿ 1959 ರಲ್ಲಿ ದೆಹಲಿಯೂ ಸೇರಿದಂತೆ ಸುಮಾರು 18 ರಾಜ್ಯಗಳಲ್ಲಿ ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ, ಭಿಕ್ಷೆ ಬೇಡುವಂಥ ‘ಗಂಭೀರ’ ಅಪರಾಧದಲ್ಲಿ ಪಾಲ್ಗೊಂಡವರಿಗೆ ಅವರಿಗೆಂದೇ ನಿರ್ಮಿಸಲಾದ ವಿಶೇಷ “ಭಿಕ್ಷುಕರ ಕೋರ್ಟ್” ನಲ್ಲಿ ವಿಚಾರಣೆ ನಡೆಸಲಾಗುತ್ತದೆ ಹಾಗೂ ಆರೋಪ ಸಾಬೀತಾದರೆ ಕನಿಷ್ಠ ಮೂರು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸುತ್ತದೆ. ಒಂದು ವೇಳೆ ಅಪರಾಧಿ ಮರಳಿ ಅಪರಾಧವೆಸಗಿದರೆ ಅಂಥ ‘ಅಪರಾಧಿಗೆ’ ಶಿಕ್ಷೆಯನ್ನು ಸುಮಾರು ಹತ್ತು ವರ್ಷಗಳಷ್ಟು ವಿಸ್ತರಿಸಲಾಗುತ್ತದೆ. ವಿಪರ್ಯಾಸವೆಂದರೆ, ಭಿಕ್ಷೆ ಬೇಡುವವರನ್ನು ಅಪರಾಧಿಯನ್ನಾಗಿಸಿದ ಇದೇ ಕಾನೂನು ಅಷ್ಟಕ್ಕೇ ನಿಲ್ಲದೇ ರಸ್ತೆ ಬದಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಹೊಟ್ಟೆ ಹೊರೆದುಕೊಳ್ಳುವ “ಹಾಡುಗಾರರು, ನೃತ್ಯ ಕಲಾವಿದರು, ಗಿಣಿಶಾಸ್ತ್ರದವರು, ಕಲಾಕೃತಿಗಳನ್ನು ಮಾರಾಟಗಾರರನ್ನು” ಕೂಡ ಅಪರಾಧಿಗಳು ಎಂದೇ ಪರಿಗಣಿಸುತ್ತದೆ. ಭಿಕ್ಷಾವೃತ್ತಿಯ ವ್ಯಾಖ್ಯಾನವೂ ಈ ಮೂಲಕ ಬದಲಾಗಿದೆ. ಅದರ ಪ್ರಕಾರ ಭಿಕ್ಷೆ ಬೇಡುವುದು ಎಂದರೆ ಅದರರ್ಥ “ಆಹಾರ ಸಂಪಾದನೆಯ ಯಾವುದೇ ಮೂಲವಿಲ್ಲದಿರುವುದು”. ಹಾಗೆ ಹೇಳುವ ಮೂಲಕ, ಬಡತನವನ್ನೇ ಅಪರಾಧದ ಮಟ್ಟಕ್ಕಿಳಿಸಿದ ಈ ಕಾನೂನು ಅವರೆಲ್ಲರೂ ಜೈಲಲ್ಲಿ ಇರುವುದಕ್ಕೇ ಯೋಗ್ಯ ಎಂಬಂತೆ ವರ್ತಿಸುತ್ತದೆ. ಅಲ್ಲದೇ, ಬಹುತೇಕ ಭಿಕ್ಷುಕರು ಕುಷ್ಠರೋಗ, ಬುದ್ಧಿಮಾಂದ್ಯತೆಯಿಂದ ಬಳಲುವುದರಿಂದ ಆ ಎಲ್ಲಾ ದೈಹಿಕ ನ್ಯೂನ್ಯತೆಗಳನ್ನೂ ಈ ಕಾನೂನು ಅಪರಾಧೀಕರಣಗೊಳಿಸಿದಂತಾಗುತ್ತದೆ. ಇವೆಲ್ಲವುಗಳಿಗೆ ಕಲಶವಿಟ್ಟಂತೆ, ಈ ಬಡತನ ಹಾಗೂ ಬಡವರ ವಿರೋಧಿಯಾದ ಈ ಕಾನೂನು ನಮ್ಮಗಳ ನಡುವೆ ತೀರಾ ಅಮಾನವೀಯವಾಗಿ ಹಾಗೂ ಕ್ಲಿಷ್ಟಕರ ರೀತಿಯಲ್ಲಿ ಜಾರಿಯಾಗುತ್ತಿದೆ. ಮಹಿಳಾ ಸಿಬ್ಬಂದಿಯನ್ನೂ ಒಳಗೊಂಡ ಪೊಲೀಸ್ ಪಡೆಗಳು ಕೈಯಲ್ಲಿ ಲಾಠಿ ಹಿಡಿದು ಗಸ್ತು ತಿರುಗುತ್ತಾ, ನಿರ್ಗತಿಕರು ಎನಿಸಿದ ಎಲ್ಲರ ಮೇಲೂ ದಾಳಿಯಿಡುತ್ತಾರೆ. ಹಾಗೆಂದು ಅವರೆಲ್ಲರೂ ಭಿಕ್ಷೆ ಬೇಡುತ್ತಿದ್ದರು ಎಂದು ಭಾವಿಸಬೇಕಾಗಿಲ್ಲ. ನಿರ್ಗತಿಕರಾಗಿ, ಕೈಯಲ್ಲಿ ಕಾಸಿಲ್ಲದೇ ಇರುವುದೇ ಹಾಗೂ ಮಾಸಲು ಬಟ್ಟೆ ಹಾಕಿಕೊಂಡಿರುವುದೇ ಅವರು ಮಾಡಿದ ಅತಿ ದೊಡ್ಡ ಅಪರಾಧ, ಅಷ್ಟೇ. ಅವರೆಲ್ಲರನ್ನೂ ಪೊಲೀಸ್ ವಾಹನಗಳಲ್ಲಿ ಕುರಿಗಳನ್ನು ತುಂಬಿದಂತೆ ತುಂಬಿಕೊಂಡು ಹೋಗಲಾಗುತ್ತದೆ. ಇಲ್ಲಿ ಕೈ-ಕಾಲಲ್ಲಿ ಶಕ್ತಿ ಇದ್ದು, ಸೂಕ್ತ ಸಮಯಕ್ಕೆ ಕಾಲಿಗೆ ಬುದ್ಧಿ ಹೇಳಬಲ್ಲವವನು ಮಾತ್ರ ಅದೃಷ್ಟವಂತ. ಹೀಗೆ ಬಂಧಿಸಲಾದ “ಅಪರಾಧಿ”ಗಳೆಲ್ಲರನ್ನೂ ಅವರಿಗೆಂದೇ ವಿಶೇಷವಾಗಿ ರಚಿಸಲಾದ ಭಿಕ್ಷುಕರ ಕೋರ್ಟ್ನಲ್ಲಿ, ಅವರ ಹಣೆಬರಹ ನಿರ್ಧರಿಸಲು ಸಿದ್ಧರಾಗಿರುವ ನ್ಯಾಯಮೂರ್ತಿಗಳ ಎದುರು ಹಾಜರುಪಡಿಸಲಾಗುತ್ತದೆ. ನ್ಯಾಯಮೂರ್ತಿಗಳು ಎಂದಿನಂತೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಹಲವಾರು ವರ್ಷಗಳಿಂದ ಈ ಕೋರ್ಟ್ಗಳ ವಿಚಾರಣೆಗಳನ್ನು ಗಮನಿಸುತ್ತಾ ಬಂದಿರುವ ಯಾರಿಗಾದರೂ ಈ ಇಡೀ ಕಾನೂನಿನ ಪ್ರಕ್ರಿಯೆಯಲ್ಲಿ ಮೂಲಭೂತ ಅಂಶಗಳೇ ನಾಪಥ್ಯೆಯಾಗಿರುವುದು ಗಮನಕ್ಕೆ ಬರುತ್ತದೆ. ಒಬ್ಬ ವ್ಯಕ್ತಿಯ ಅಪರಾಧ ಕಾನೂನು ಪ್ರಕ್ರಿಯೆಗಳ ಮುಖೇನ ಸಾಬೀತಾಗದ ಹೊರತು ಅಂಥ ವ್ಯಕ್ತಿಯನ್ನು ನಿರಪರಾಧಿ ಎಂದೇ ಪರಿಗಣಿಸಬೇಕಾಗುತ್ತದೆ ಹಾಗೂ ಆತನ ವಿರುದ್ಧದ ಸಾಕ್ಷಿಗಳನ್ನು ಕೋರ್ಟ್ಗೆ ಒದಗಿಸುವ ಹೊಣೆಗಾರಿಕೆ ಸರ್ಕಾರದ್ದಾಗಿರುತ್ತದೆ. ಆದರೆ, ಇಲ್ಲಿನ ವಾಸ್ತವವೇ ಬೇರೆ. ಒಬ್ಬ ವ್ಯಕ್ತಿ ಭಿಕ್ಷೆ ಬೇಡುತ್ತಿದ್ದ “ಅಪರಾಧ”ಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಒದಗಿಸಿದ ನಿದರ್ಶನಗಳು ತೀರಾ ಕಡಿಮೆ ಅಥವಾ ಅಂಥ ನಿದರ್ಶನಗಳೇ ಇಲ್ಲ ಎಂದೂ ಹೇಳಬಹುದು. ಎಷ್ಟೋ ಪ್ರಕರಣಗಳಲ್ಲಿ, ಸಾಕ್ಷಿಗಳ ಗೊಡವೆಗೇ ಹೋಗದೆ “ಆರೋಪಿ” ಸ್ಥಾನದಲ್ಲಿ ನಿಂತ ವ್ಯಕ್ತಿಯ ಮಾಸಲು ಬಟ್ಟೆ ಹಾಗೂ ನಿರ್ಗತಿಕತನದ ಆಧಾರದ ಮೇಲೆಯೇ ನ್ಯಾಯ ನಿರ್ಣಯವಾದದ್ದಿದೆ.

ಪರಿಸ್ಥಿತಿ ಹೀಗಿದ್ದಾಗಲೂ ಇಂಥ ಕಾನೂನನ್ನು ಇನ್ನಷ್ಟು ವಿಸ್ತೃತವಾಗಿ ಜಾರಿಗೆ ತರಲು ಆಗ್ರಹಿಸಿ ದೆಹಲಿ ಹೈಕೋರ್ಟ್ಗೆ ಅರ್ಜಿ ಹಾಕಲಾಗಿತ್ತು. ಇದಕ್ಕೆ ಸ್ಪಂದಿಸಿದ ಹೈಕೋರ್ಟ್ ನ್ಯಾಯಪೀಠ ಈ ಕಾನೂನನ್ನು ಇನ್ನಷ್ಟು ವಿಸ್ತೃತ ನೆಲೆಯಲ್ಲಿ ಜಾರಿಗೆ ತರುವಂತೆ ಭಿಕ್ಷುಕರ ಸಂಚಾರಿ ಪೀಠಕ್ಕೆ ನಿರ್ದೇಶನ ನೀಡಿದೆ. ಆದರೆ, ಭಿಕ್ಷುಕರ ಕೋರ್ಟ್ನ ನ್ಯಾಯಮೂರ್ತಿಗಳು “ಆರೋಪಿ”ಗಳಿಗೆ ಸಂಬಂಧಿಸಿದಂತೆ ಮೃಧುಧೋರಣೆ ತಾಳಿದ್ದು, ಕಾನೂನು ಜಾರಿಯಲ್ಲಿ ಅನ್ಯಮನಸ್ಕತೆ ತೋರುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಕೋರ್ಟ್ಗೆ ದೂರು ಸಲ್ಲಿಸಿದ್ದರು. ಆದರೆ, ಎಲ್ಲಾ ಕಾಲದಲ್ಲೂ ಮಾನವೀಯ ಕಳಕಳಿಯುಳ್ಳ ಪ್ರತಿಭಟನೆಯ ದನಿ ಅಲ್ಲಲ್ಲಿ ಕ್ಷೀಣವಾಗಿ ಕೇಳುವುದುಂಟು. ಆ ತರದ “ಅಲ್ಪಸಂಖ್ಯಾತ” ದನಿಗಳಲ್ಲಿ ನ್ಯಾಯಮೂರ್ತಿ ಸರಿನ್ ಅವರದ್ದೂ ಒಂದು. ಭಿಕ್ಷುಕರನ್ನು ಬಂಧಿಸಿ, ಅವರನ್ನು ಶಿಕ್ಷಿಸುವುದು “ಅಮಾನವೀಯವಲ್ಲದೇ ಮತ್ತೇನೂ ಅಲ್ಲ. ಎಚ್ಚರಿಕೆ ಕೊಟ್ಟು ಕಳುಹಿಸಿದರೆ ಸಾಕು” ಎಂಬ ಅಭಿಪ್ರಾಯ ಸರಿನ್ ಅವರದ್ದು.

ನಿತ್ಯನಾರಕಿ ಬದುಕು

ಭಿಕ್ಷೆ ಬೇಡಿರುವ ಅಪರಾಧ ಸಾಬೀತಾದ ಬಳಿಕ ಅಂಥ ವ್ಯಕ್ತಿಗಳನ್ನು ಅಧಿಕೃತ ಬೆಗ್ಗರ್ಸ್ ಹೋಮ್ಗಳೆಂಬ ಸೆರೆಮನೆಯಲ್ಲಿಡಲಾಗುತ್ತದೆ. ಹತ್ತಾರು ನಗರಗಳಲ್ಲಿರುವ ಇಂಥ ಹಲವಾರು ಬೆಗ್ಗರ್ಸ್ ಹೋಮ್ಗಳಿಗೆ ನಾನು ಖುದ್ದಾಗಿ ಭೇಟಿ ನೀಡಿದ್ದೇನೆ. ಆದರೆ, ಅಲ್ಲಿನ ಸ್ಥಿತಿಯಂತೂ ಆ ದೇವರಿಗೇ ಪ್ರೀತಿ! ರಿಪೇರಿಯನ್ನೇ ಕಾಣದ, ಶುಚಿತ್ವದ ಸುಳಿವೇ ಇಲ್ಲದ ಇಂಥ ಬೆಗ್ಗರ್ಸ್ ಹೋಮ್ಗಳಿಗಿಂತ ಇನ್ನಿತರ ಗಂಭೀರ ಸ್ವರೂಪದ ಅಪರಾಧಗಳಲ್ಲಿ ಭಾಗಿಯಾದ ಕೈದಿಗಳನ್ನು ಇರಿಸುವ ಜೈಲುಗಳೇ ಸಾವಿರ ಪಾಲು ವಾಸಿ ಎನಿಸಿದ್ದಿದೆ. ಭಾರತೀಯ ಜೈಲುಗಳು ತಮ್ಮ ನರಕ ಸದೃಶ ಸ್ಥಿತಿಗಳಿಗೆ ಹೆಸರುವಾಸಿ. ಮನುಷ್ಯರೆನಿಸಿಕೊಂಡವರು ಅಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವಂಥ ಸ್ಥಿತಿಯಲ್ಲಿ ಅವಿರುತ್ತವೆ. ಅವೇ ಹಾಗಿರುತ್ತವೆ ಎಂದಾದರೆ, ಬಲಹೀನರಾದ, ಮೈ ತುಂಬಾ ಬಡತನವನ್ನೇ ಹೊದ್ದ, ಸಮಾಜದ ಕೊಳಕು ಎಂದೇ ಭಾವಿಸಲಾದ ಇಂಥ ಶಕ್ತಿಹೀನರಿಗೆ ಒದಗಿಸಲಾದ ಪುನರ್ವಸತಿಯ ಪರಿಸ್ಥಿತಿ ಹೇಗಿರಬಹುದು, ನೀವೇ ಊಹಿಸಿ. ಮಲಮೂತ್ರಗಳ ತಿಪ್ಪೆಗುಂಡಿಗಳಂತಿರುವ, ಗಾಳಿ, ಬೆಳಕಿಗೂ ಅವಕಾಶ ನೀಡದ ಕೋಣೆಗಳಿಂದ ಹೊರಗೆ ಕಾಲಿಡಲೂ ಆ ನತದೃಷ್ಟರಿಗೆ ಅವಕಾಶ ಮಾಡಿಕೊಡುವುದಿಲ್ಲ. ಅದೆಷ್ಟೋ ಮಂದಿ ತಮ್ಮ ಬದುಕಿನ ಒಂದು ಭಾಗವನ್ನೇ ಇಂಥ ದುರ್ಭರ ವಾತಾವರಣದಲ್ಲಿ ಕಳೆದು ಕಾಲರಾ, ಅಪೌಷ್ಠಿಕಾಂಶಗಳ ನೆಪದಿಂದ ಕೊನೆಯುಸಿರೆಳೆದಿದ್ದಾರೋ! ಇಂಥ ಭಿಕ್ಷುಕ ಕೇಂದ್ರಗಳ ಮುಖ್ಯ ಧ್ಯೇಯವೇ ಈ ಬಂಧಿತ ಅಬ್ಬೇಪಾರಿಗಳನ್ನು ಭಿಕ್ಷೆಗೆ ಹೊರತಾದ ಪರ್ಯಾಯ ಉದ್ಯೋಗಕ್ಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಣಿಗೊಳಿಸುವುದು. ಹಾಗೆಂದು, ಸರ್ಕಾರಿ ದಾಖಲಾತಿಗಳಲ್ಲಿ ಹೇಳಲಾಗುತ್ತದೆ. ಆದರೆ, ನಾನು ಇಲ್ಲಿಯವರೆಗೆ ಭೇಟಿ ನೀಡಿದ ಯಾವುದೇ ಭಿಕ್ಷುಕ ಕೇಂದ್ರಗಳಲ್ಲೂ ಇಂಥದ್ದೊಂದು ಘನ ಉದ್ದೇಶ ಪ್ರಾಯೋಗಿಕವಾಗಿ ಜಾರಿಯಾಗಿದ್ದು ಕಾಣೆ.

ನಾಗಾಲೋಟದಲ್ಲಿರುವ ನಮ್ಮ ನಗರಗಳ ಥಳುಕಿನ ಬಿಳಿ ಬಟ್ಟೆಯ ಮೇಲೆ ಮೂಡಿರುವ ಕಪ್ಪು ಕಲೆಯಂತೆ ಕಂಡುಬರುವ ಈ ಬಡಜನತೆ ಈಗ ಟ್ರಾಫಿಕ್ ಸಿಗ್ನಲ್ಗೆ ಅಡ್ಡಿಯುಂಟು ಮಾಡುವ ಹಾಗೂ ಸಾರ್ವಜನಿಕ ಮುಜುಗರದ ಸಂಗತಿಯಾಗಿ ಮಾತ್ರ ಉಳಿದಿಲ್ಲ. 2010ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ತಯಾರಿಯಲ್ಲಿರುವ ದೆಹಲಿ ಸರ್ಕಾರಕ್ಕೆ ಇವರು ಹೊಸ ತಲೆನೋವಾಗಿ ಪರಿಣಮಿಸಿದ್ದಾರೆ. ದೇಶ-ವಿದೇಶಗಳಿಂದ ಬಂದಿಳಿಯುವ ವಿದೇಶಿಯರ ಎದುರು “ಜಾಗತಿಕ ಮಟ್ಟದ” ನಗರ ಎಂದೆಲ್ಲಾ ಕರೆಯಿಸಿಕೊಳ್ಳುವ ದೆಹಲಿಯ ಮಾನ – ಮರ್ಯಾದೆ ಟ್ರಾಫಿಕ್ ಸಿಗ್ನಲ್ಗಳಲ್ಲಿ, ರಸ್ತೆಗಳ ಬದಿಯಲ್ಲಿ ಹರಾಜಾಗುತ್ತದಲ್ಲಾ ಎಂಬ ಆತಂಕ ಆಳುವವರದ್ದು. ಬೀದಿ ಬೀದಿಗಳಲ್ಲಿ ಕೊಳಕು ದೇಹವನ್ನು ಹೊತ್ತುಕೊಂಡು ಭಿಕ್ಷೆ ಬೇಡುವ ಈ ಮಂದಿ ಈ ದೇಶದ ಕುರಿತು ವಿದೇಶಿಯರಲ್ಲಿ ಇನ್ನೆಂಥ ಅಭಿಪ್ರಾಯ ಮೂಡಿಸಲು ಸಾಧ್ಯ? ಹಾಗಾದರೆ, ತನ್ನದೇ ಪ್ರಜೆಗಳನ್ನು ಅಪರಾಧಿಗಳನ್ನಾಗಿಸುವ, ಮೇಲ್ನೋಟದ ಥಳುಕಿಗಾಗಿ ಅವರನ್ನೆಲ್ಲಾ ಊರಿನಿಂದಲೇ ಬಹಿಷ್ಕರಿಸುವ, ಸೆರೆಯಲ್ಲಿಡುವಷ್ಟು ಭಾವಹೀನ ಮಹತ್ವಾಕಾಂಕ್ಷಿ ನಗರವೇ ದೆಹಲಿ? ಮಡಿಲಿಗೆ ಬಂದವರನ್ನು ಪೊರೆಯುವ ಕರುಣೆಗೂ ಬರ ಬಂತೇ ಈ ನಾಡಿಗೆ?

ಅನುವಾದಕ: ಅರುಣ್ ಕಾಸರಗುಪ್ಪೆ.
ಸೊರಬ ತಾಲೂಕಿನ ಕಾಸರಗುಪ್ಪೆ ಗ್ರಾಮದಲ್ಲಿ ಜನಿಸಿದ ಅರುಣ್ ತಮ್ಮ ಹೆಚ್ಚಿನ ಬಾಲ್ಯವನ್ನು ಕಳೆದದ್ದು ಸಾಗರದಲ್ಲಿ. ಕುವೆಂಪು ವಿವಿ, ಶಂಕರಘಟ್ಟದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ಬಳಿಕ ಬೆಂಗಳೂರಿನ “ದ ಸಂಡೆ ಇಂಡಿಯನ್” ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯಕ್ಕೆ, ಕಳೆದು ಎರಡು ವರ್ಷಗಳಿಂದ Google India ಕಂಪನಿಯಲ್ಲಿ ಭಾಷಾತಂತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲವೇ ಕೆಲವರ ಸುಖ, ಹಲವರ ದುಃಖದ ಮೂಲವಾಗಬಾರದು

-ಡಾ.ಎಸ್. ಜಿ. ಜೋಗುರ

ಸಂಪತ್ತಿನ ಅಸಮಾನ ಹಂಚಿಕೆ ಎನ್ನುವದು ಅನೇಕ ಬಗೆಯ ಅವಕಾಶಗಳಲ್ಲಿಯೂ ಅಂತರಗಳನ್ನು ಸೃಷ್ಟಿಸಿದೆ. ಬೇಕು ಅನಿಸುವುದನ್ನು ತಕ್ಷಣವೇ ಕೊಂಡು ಬಳಸುವ ಸಾಮರ್ಥ್ಯವಿದ್ದದ್ದು ಕೇವಲ 15 ಪ್ರತಿಶತ ಜನರಿಗೆ ಮಾತ್ರ. ಮಿಕ್ಕ 85 ಪ್ರತಿಶತ ಜನರು ತಮ್ಮ ದುಡಿಮೆಯನ್ನು ನಿರಂತರವಾಗಿ ಒತ್ತೆಯಿಟ್ಟರೂ ಬೇಕು ಅನಿಸಿರುವದನ್ನು ಕೊಂಡುಕೊಳ್ಳಲು ಅನೇಕ ಬಗೆಯ ಸಾಹಸಗಳನ್ನು ಮಾಡಬೇಕಾಗುತ್ತದೆ. ಏನೋ ಒಂದನ್ನು ಪಡೆಯಲು ಏನೋ ಒಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಸೂತ್ರ ಇವರ ಪಾಲಿಗೆ ಅಕ್ಷರಶಃ ಅನ್ವಯವಾಗುತ್ತದೆ. ಅನೇಕ ಬಾರಿ ಬೇಕು ಅನಿಸಿದ್ದು ಬರೀ ಕನಸಾಗಿ, ಕೈಗೆಟುಕದ ಪಾರಿಜಾತವಾಗಿ ಇಡೀ ಬದುಕಿನುದ್ದಕ್ಕೂ ಬಸವಳಿದರೂ ಅದು ದಕ್ಕುವದಿಲ್ಲ. ತನ್ನ ಕೈಲಿ ಆಗದಿದ್ದದ್ದು ತನ್ನ ಮಗ, ಮೊಮ್ಮಗನ ಕೈಯಿಂದಲಾದರೂ ಸಾಧ್ಯವಾಗಲಿ ಎನ್ನುವ ಆಶಯದೊಂದಿಗೆ ಆ ಜೀವ ಕಣ್ಣು ಮುಚ್ಚುವದಿದೆ.

ಬೇಸಿಗೆಯಲ್ಲಿ ನರಕ ಸದೃಶ ಬದುಕಿನ ಹತ್ತಿರದ ಪರಿಚಯವಾಗಬೇಕಿದ್ದರೆ ಉತ್ತರ ಕರ್ನಾಟಕದ ಬಯಲುಸೀಮೆಗಳಿಗೆ ಭೇಟಿ ನೀಡಿ. ಅವರ ಪ್ರತಿನಿತ್ಯದ ಚಡಪಡಿಕೆಗಳು ಯಾವುದೋ ಒಂದು ಸುಖಭೋಗದ ಭೌತಿಕ ವಸ್ತುವಿಗಾಗಿ ಇಲ್ಲ. ಬದಲಾಗಿ ಒಂದು ಕೊಡ ಕುಡಿಯುವ ನೀರಿಗಾಗಿ, ಒಂದಷ್ಟು ಹೊತ್ತಿನ ವಿದ್ಯುತ್

ಚಿತ್ರಕೃಪೆ: ಸೆಲ್ಕೋ ಫೌಂಡೇಷನ್

ಚಿತ್ರಕೃಪೆ: ಸೆಲ್ಕೋ ಫೌಂಡೇಷನ್

ಗಾಗಿ, ಕಚ್ಚಾ ರಸ್ತೆಗಾಗಿ, ತೀರಾ ಕನಿಷ್ಟ ವೈದ್ಯಕೀಯ ಸೌಲಭ್ಯಗಳಿಗಾಗಿದೆ. ಇವುಗಳ ನಡುವೆ ಅವರಿಗೆ ಪೌಷ್ಟಿಕ ಆಹಾರದ ಕೊರತೆ ಒಂದು ಸಮಸ್ಯೆಯೇ ಅಲ್ಲ. ಬರೀ ಒಂದು ತಂಬಿಗೆ ನೀರು ಕುಡಿದು ಒಂದು ದಿನ ಬದುಕುತ್ತೇವೆ ಎನ್ನುವ ಇಚ್ಚಾಶಕ್ತಿ ಇರುವ ಈ ಜನರಿಗೆ ಬದುಕು ಎನ್ನುವುದು ನಿತ್ಯದ ಹೋರಾಟ, ಬವಣೆ. ಅನೇಕ ಬಗೆಯ ಕೊರತೆಗಳ ನಡುವೆಯೂ ಇವರು ಬದುಕಿದ್ದಾರೆ. ಹೇಗೆಂದು ಮಾತ್ರ ಕೇಳಬೇಡಿ. ಈ ಜನಸಮುದಾಯದ ಅಸ್ಥಿತ್ವವೇ ನಗಣ್ಯ ಎನ್ನುವಂತೆ ಇವರು ಬದುಕಿರುವುದಿದೆ. ಇವರು ಪ್ರಜಾಸತ್ತೆಯ ಭಾಗವಾದರೂ ತಮ್ಮ ಹಕ್ಕುಗಳ ಬಗ್ಗೆ, ಅವಕಾಶಗಳ ಬಗ್ಗೆ ಒಟ್ಟ್ತಾರೆಯಾಗಿ ಯೋಚಿಸದವರು. ಯಾವುದರಲ್ಲಿಯೂ ಅಪಾರವಾದ ನಂಬುಗೆಯನ್ನು ಉಳಿಸಿಕೊಂಡಿರದ ಈ ಜನ, ಸಿನಿಕರಾಗಿ ತೀರಾ ಯಥಾರ್ಥವಾಗಿಯೇ ಬದುಕುತ್ತಾರೆ. ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವುದಂತೂ ದೂರ, ಇದ್ದ ಪರಿಸ್ಥಿತಿಗೆ ಹೊಂದಿಕೊಳ್ಳುವುದರಲ್ಲಿಯೇ ಹೈರಾಣಾಗಿ ಹೋಗಿರುತ್ತಾರೆ. ತಮ್ಮನ್ನು ಯಾರೋ ಉದ್ದರಿಸುತ್ತಾರೆ ಎನ್ನುವ ನಿರೀಕ್ಷೆ ಇವರಿಗಿಲ್ಲ. ವಾಸ್ತವದಲ್ಲಿ ಅವರಿಗಿರುವ ಎಲ್ಲ ಬಗೆಯ ಸಂದಿಗ್ದಗಳೇ ಅವರ ನಿಜವಾದ ಬದುಕಿನ ದಿನಚರಿ. ಅವರ ಮನೆಯ ಮಹಿಳೆಯರೊ, ಒಂದು ಕೊಡ ನೀರಿಗಾಗಿ ದೂರದ ದಾರಿಯನ್ನು ಕ್ರಮಿಸುವ, ಕಲಹ, ವೈಮನಸ್ಸುಗಳನ್ನು ಪ್ರದರ್ಶಿಸುವ  ಪರಿಪಾಠ ಸಾಮಾನ್ಯ ಎನ್ನುವ ಇಲ್ಲಿಯ ಬದುಕು ಅತ್ಯಂತ ಕಠೋರವಾದುದು. ಮಹತ್ವಾಕಾಂಕ್ಷೆ ಎನ್ನುವುದು ಇಲ್ಲಿ ಮಣ್ಣುಪಾಲಾಗಿದೆ. ಒಂದು ಕೊಡ ನೀರು ಆ ಕುಟುಂಬದ ಇಡೀ ದಿನದ ಕನವರಿಕೆಯಾಗಿರುವ ನೆಲಗಳಲ್ಲಿ ಅದು ಹೇಗೆ ಅವರಲ್ಲಿ ಮಹತ್ವಾಕಾಂಕ್ಷೆಯನ್ನು, ಹೋರಾಟದ ಹಾದಿಯನ್ನು ತೋರುವುದು..? ಹೀಗೆ ಒಂದು ಬೇಸಿಗೆಯ ನಿರ್ಗಮನವೆನ್ನುವುದು ಆ ಗ್ರಾಮದ ಜನತೆಯ ಒಟ್ಟು ಕಸುವನ್ನೆಲ್ಲಾ ಹಿಂಡಿ ಹಿಪ್ಪೆ ಮಾಡಿದ ಭೌಗೋಳಿಕ ಸ್ಥಿತಿ ಎನ್ನುವಂತಿರುತ್ತದೆ.
ಇನ್ನೊಂದು ಬದಿ ನಮ್ಮ ಕಣ್ಣೆದುರಲ್ಲಿಯೇ ಅಪಾರ ಪ್ರಮಾಣದ ನೀರು, ವಿಧ್ಯುತ್ ಪೋಲಾಗುತ್ತಿರುತ್ತದೆ. ಸಾರ್ವಜನಿಕ ನಲ್ಲಿಗೆ ಆರಂಭವಾಗುವುದು ಮಾತ್ರ ತಿಳಿದಿದೆ ಆದರೆ ಬಂದ್ ಆಗುವ ಕ್ರಿಯೆ ತಿಳಿದಿಲ್ಲ. ಹೀಗಾಗಿ ಧೋ..ಧೋ.. ಎಂದು ಸುರಿಯುವ ನಲ್ಲಿಯ ಟ್ಯಾಪ್ ನ್ನು ಬಂದ್ ಮಾಡಲು ಮನುಷ್ಯರಾದವರಿಗೆ ತಿಳಿಹೇಳಲು, ಮಂಗನ ಮೂಲಕ ಜಾಹೀರಾತನ್ನು ರೂಪಿಸಿ ತೋರಿಸಬೇಕಾಗುತ್ತದೆ. ಅವಶ್ಯವಿರುವಷ್ಟೇ ನೀರು, ವಿದ್ಯುತ್, ಆಹಾರ ಬಳಿಸುವ ತಿಳಿವಳಿಕೆ ಕಡ್ಡಾಯ ಹಾಗೂ ತೀರಾ ಸಾಮಾನ್ಯವಾದ ಬದುಕಿನ ಪಠ್ಯಕ್ರಮವಾಗಬೇಕು. ಮದುವೆಯ ಸಂದರ್ಭದಲ್ಲಿ ಬೇಕಾಬಿಟ್ಟಿ ನೀರು ಆಹಾರ ಹಾಳಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ. ಮದುವೆಯಾಗುವ ಹುಡುಗ-ಹುಡುಗಿಯ ತಂದೆ-ತಾಯಿಗಳ ಅತಿ ಮುಖ್ಯವಾದ ಹೊಣೆಗಾರಿಕೆಗಳಲ್ಲಿ ಅದು ಮೊದಲನೆಯದಾಗಬೇಕು. ಈಚೆಗೆ ಆಂಗ್ಲ ದಿನಪತ್ರಿಕೆಯೊಂದು ಮಹಾನಗರಗಳಲ್ಲಿಯ ಸ್ಟಾರ್ ಹೊಟೆಲುಗಳು ವ್ಯಯಿಸುವ ವಿದ್ತ್ಯುತ್, ನೀರು ಮುಂತಾದವುಗಳ ಬಗ್ಗೆ ಸಮಗ್ರ ಬೆಳಕು ಚೆಲ್ಲುವ ಮೂಲಕ ಒಂದು ಸ್ಟಾರ್ ಹೊಟೇಲ್ ಎಷ್ಟು ಸಾಮಾನ್ಯ ಕುಟುಂಬಗಳ ಮನೆಯ ಬೆಳಕನ್ನು, ನೀರನ್ನು ನಿಗಟುತ್ತಿರುತ್ತದೆ ಎನ್ನುವದನ್ನು ಅಂಕಿ ಅಂಶಗಳ ಮೂಲಕ ತೋರಿಸಿಕೊಟ್ಟಿರುವದಿದೆ.
ಒಂದು ಸಾವಿರ ಮನೆಗಳಿಗೆ ಸಾಕಾಗಬಹುದಾದ ನೀರನ್ನು ಕೇವಲ ಒಂದು ಹೊಟೆಲ್ ಅನುಭೋಗಿಸುವುದನ್ನು ಆ ಪತ್ರಿಕೆ ಹೊರಹಾಕಿದೆ. ದೆಹಲಿಯ ಸುಮಾರು 35 ಸ್ಟಾರ್ ಹೊಟೆಲ್ ಗಳು ಬಳಸುವ ನೀರಿನ ಪ್ರಮಾಣ ಪ್ರತಿನಿತ್ಯ ಸುಮಾರು 15 ಮಿಲಿಯನ ಲೀಟರ್. ಅಷ್ಟು ನೀರಲ್ಲಿ ಪ್ರತಿದಿನ ದೆಹಲಿಯ ಒಂದು ವಿಶಾಲ ಪ್ರದೇಶಕ್ಕೆ ನೀರನ್ನು ಒದಗಿಸಬಹುದಾಗಿದೆ. ಸುಮಾರು 600 ಮನೆಗಳಿಗೆ ಸಾಧ್ಯವಾಗಬಹುದಾದ ವಿಧ್ಯುತ್ ನ್ನು ಕೆವಲ ಒಂದು ಸ್ಟಾರ್ ಹೊಟೆಲ್ ಬಳಸುವ ಬಗ್ಗೆಯೂ ಅದು ಹೇಳಿರುವದಿದೆ. ಒಂದು ಅಂದಾಜಿನಂತೆ ಸ್ಟಾರ್ ಹೊಟೆಲೊಂದು 15 ಸಾವಿರ ಇಲೆಕ್ಟ್ರಿಕ್ ಪಾಯಿಂಟ್ ಗಳನ್ನು ಹೊಂದಿರುವದಿದೆ ಅದರಲ್ಲಿ 3 ಸಾವಿರ ಬಲ್ಬುಗಳು ಅನಾವಶ್ಯಕವಾಗಿದ್ದರೂ ನಿರಂತರವಾಗಿ ಉರಿಯುತ್ತಿರುತ್ತವೆ. ಸುಮಾರು 14 ರಷ್ಟು ಸ್ಟಾರ್ ಹೊಟೇಲುಗಳು ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೇ ಬರೀ ವಿದ್ಯುತ್ ನ್ನೇ ಅವಲಂಬಿಸಿವೆ. ಇದರ ಜೊತೆಗೆ ಅಪಾರ ಪ್ರಮಾಣದ ಕಸವನ್ನು ಹೊರಗೆಸೆಯುತ್ತವೆ. ಆ ಮೂಲಕ ನಗರ ಪ್ರದೇಶದ ಕೊಳಗೇರಿಗಳ ವಿಸ್ತಾರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತವೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿ ಹನಿ ನೀರು, ಪ್ರತಿ ತುತ್ತು ಅನ್ನ, ಪೆಟ್ರೋಲ್ ಮತ್ತು ವಿಧ್ಯುತ್ ತುಂಬಾ ಅಮೂಲ್ಯವಾದವುಗಳು. ಇವುಗಳನ್ನು ಬೇಕಾಬಿಟ್ಟಿಯಾಗಿ ಬಳಸುವ ಪರಿಣಾಮ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರತೆಯನ್ನು ಅನುಭವಿಸಬೇಕಾಗುತ್ತದೆ. ಇದು ಕೆವಲ ನಗರಪ್ರದೇಶದ ಹೊಟೆಲ್ ಗಳಿಗೆ ಮಾತ್ರ ಸಂಬಂಧಿಸಿರದೇ ನಾವು ನಿರ್ಮಿಸಿಕೊಳ್ಳುವ ಮನೆಗಳೂ ಈಗೀಗ ತೀರಾ ಐಷಾರಾಮಿಯಾಗಿರುತ್ತವೆ. ಅಲ್ಲಿಯೂ ಅಗತ್ಯಕ್ಕಿಂತಲೂ ಹೆಚ್ಚಿನ ಲೈಟ್ ಪಾಯಿಂಟ್ ಗಳಿರುತ್ತವೆ. ಮನೆಮಂದಿಯೆಲ್ಲಾ ಟಿ.ವಿ.ಯ ಎದುರಲ್ಲಿ ಕುಳಿತಿರುವಾಗಲೂ ಎಲ್ಲ ಕೋಣೆಗಳ ಲೈಟುಗಳು ಬಿಂದಾಸ್ ಆಗಿ ಉರಿಯುತ್ತಿರುತ್ತವೆ. ಹಾಗೆಯೇ ಮನೆ ಎದುರಿನ ನೀರಿನ ಟ್ಯಾಂಕ್ ತುಂಬಿ ಹೆಚ್ಚಾದ ನೀರು ಗಟಾರ್ ಸೇರುವ, ಇಲ್ಲವೇ ರಸ್ತೆಗೆ ಹರಿಯುವ ಕ್ರಿಯೆ ನಮ್ಮ ಕಣ್ಣ ಎದುರೇ ನಡೆದರೂ ನಾವು ಅಷ್ಟಾಗಿ ತಲೆ ಕೆಡಿಸಿಕೊಳ್ಳುವದಿಲ್ಲ. ನೀರು, ವಿದ್ಯುತ್, ಆಹಾರ ಇವೆಲ್ಲವೂ ಹಣ ಕೊಟ್ಟರೂ ಸಿಗದೇ ಇರುವ ಸಂಗತಿಗಳಾಗುವ ದಿನಗಳು ದೂರಿಲ್ಲ.
ದೇಶದ ಕೇವಲ 10 ಪ್ರತಿಶತ ಜನರ ಸುಖಕ್ಕಾಗಿ 90 ಪ್ರತಿಶತ ಜನರ ಅವಕಾಶಗಳನ್ನು, ಹಕ್ಕುಗಳನ್ನು ಕಸಿಯುವದು ಖಂಡಿತ ನ್ಯಾಯವಲ್ಲ. ಅಷ್ಟಕ್ಕೂ ಈ ಸ್ಟಾರ್ ಹೊಟೆಲುಗಳನ್ನು ನಂಬಿಕೊಂಡು ಒಂದು ದೇಶದ ಜನಸಮುದಾಯದ ಬದುಕನ್ನು ನಿರ್ಣಯಿಸುವಂತಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿ ನಾವು ಸಮಾನತೆಗೆ ಅವಕಾಶವನ್ನು ಕೊಡಬೇಕಿದೆ. ಆ ಮೂಲಕ ಮೂಲಭೂತ ಸೌಕರ್ಯಗಳು ಕೇವಲ ಉಳ್ಳವರ ಸ್ವತ್ತಾಗುವದನ್ನು ತಪ್ಪಿಸಬೇಕಿದೆ.

ಸಾತ್ವಿಕ ರಾಜಕಾರಣಿಯಯೊಬ್ಬನ ಸಿಟ್ಟು ಮತ್ತು ಪತನ

– ಡಾ. ಎನ್. ಜಗದಿಶ್ ಕೊಪ್ಪ

ಪ್ರಸಕ್ತ ರಾಜಕಾರಣ ಮತ್ತು ಚುನಾವಣೆಯ ಕುರಿತಂತೆ ಏನನ್ನೂ ಬರೆಯಬಾರದು ಮತ್ತು ಪ್ರತಿಕ್ರಿಯಸಬಾರದು ಎಂದು ನಾನೇ ಸ್ವತಃ ಹಾಕಿಕೊಂಡಿದ್ದ ಲಕ್ಷ್ಮಣ ರೇಖೆಯನ್ನು ದಾಟುತ್ತಿದ್ದೇನೆ. ಇದಕ್ಕೆ ಕಾರಣವಾದ ವಾದ ಅಂಶತವೆಂದರೆ, ನನ್ನ ಜಿಲ್ಲೆಯಾದ ಮಂಡ್ಯದ ಕೆ.ಆರ್, ಪೇಟೆ ಕೃಷ್ಣ ಅವರ ರಾಜಕೀಯ ನಿಲುವು ಮತ್ತು ಬಂಡಾಯ, ಪರೋಕ್ಷವಾಗಿ ಈ ಲೇಖನಕ್ಕೆ ಪ್ರೇರಣೆಯಾಗಿದೆ.

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಕೆ.ವಿ.ಶಂಕರಗೌಡ, ಜಿ.ಮಾದೇಗೌಡ ಇವರ ನಂತರ ನೈತಿಕತೆಯ ನೆಲೆಗಟ್ಟಿನಲ್ಲಿ ಪ್ರಾಮಾಣಿಕವಾದ ರಾಜಕೀಯ ಜೀವನ  ಮಾಡಿದವರಲ್ಲಿ  ಕೃಷ್ಣ ಕೂಡ ಒಬ್ಬರು. ವೃತ್ತಿಯಲ್ಲಿ ವಕೀಲರಾಗಿದ್ದ ಕೆ.ಆರ್. ಪೇಟೆ ಕೃಷ್ಣ, ತಮ್ಮ ಸುದೀರ್ಘ ಮೂರೂವರೆ ದಶಕದ ರಾಜಕಾರಣದಲ್ಲಿ ಎರಡು ಬಾರಿ ಲೋಕಸಭಾ ಚುನಾವಣೆ ಮತ್ತು ಆರು ವಿಧಾನಸಭಾ ಚುನಾವಣೆ ಎದುರಿಸಿದವರು. ಇದರಲ್ಲಿ ಒಂದು ಬಾರಿ ಸಂಸತ್ ಸದಸ್ಯರಾಗಿ ಮತ್ತು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರು. ಒಮ್ಮೆ ವಿಧಾನ ಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದವರು.

ಇಂತಹ ಸುಧೀರ್ಘ ಅನುಭವವುಳ್ಳ ಕೃಷ್ಣರವರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷ  ಟಿಕೇಟ್ ನಿರಾಕರಿಸಿದೆ. ಇದಕ್ಕೆ ಪ್ರಮುಖ ಕಾರಣ ಅವರ ಬಳಿ ಚುನಾವಣೆ ಎದುರಿಸಲು ಹಣವಿಲ್ಲ ಎಂಬುದು ಅವರ ಅನರ್ಹತೆಗೆ ಕಾರಣವಾಗಿದೆ. ಕೃಷ್ಣರವರ ಪಾಮ್ರಾಣಿಕವಾದ ಮತ್ತು  ಸರಳ ಬದುಕನ್ನು ಇಟ್ಟುಕೊಂಡು ಇಂದಿನ ರಾಜಕೀಯ ವಿದ್ಯಾಮಾನವನ್ನು ಗಮನಿಸಿದರೆ, ಒಂದರ್ಥದಲ್ಲಿ ಇಂತಹವರು ವರ್ತಮಾನದ ರಾಜಕಾರಣಕ್ಕೆ ಅಸಮರ್ಥರು ನಿಜ.

ಏಕೆಂದರೆ,  ಕೃಷ್ಣ ಲೋಕ ಸಭಾ ಸದಸ್ಯರಾಗಿದ್ದ  ಅವಧಿಯಲ್ಲಿ  ಸಂಸತ್ ಅಧಿವೇಶನ ಇಲ್ಲದ ದಿನಗಳಲ್ಲಿ  ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿದ್ದ ತಮ್ಮ ಕೊಠಡಿಯಲ್ಲಿ ಕುಳಿತು ಜನಸಾಮಾನ್ಯರ ಕಷ್ಟ ಸುಖಗಳನ್ನು ವಿಚಾರಿಸುತ್ತಿದ್ದರು. ಮಧ್ಯಾಹ್ನದ ವೇಳೆ ಯಾರಾದರೂ ಗೆಳೆಯರು ಕರೆದರೆ ಅವರ ಮನೆಗಳಿಗೆ ಹೋಗಿ ಊಟ ಮಾಡಿ ಬರುತ್ತಿದ್ದರು.  ಅವರ ಪತ್ನಿ ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಕಾರಣ ಪ್ರತಿ ದಿನ ಮೈಸೂರಿನಿಂದ ಮಂಡ್ಯ ನಗರಕ್ಕೆ ಸರ್ಕಾರಿ ಬK.r.pete.ಸ್ ನಲ್ಲಿ ಬಂದು ಹೋಗುತ್ತಿದ್ದರು. ಒಬ್ಬ ಸಂಸತ್ ಸದಸ್ಯ ಹೀಗೂ ಇರಬಹುದಾ? ಬದುಕಬಹುದಾ? ಎಂಬ ನನ್ನ ಜಿಜ್ಞಾಸೆಗೆ ಕಾರಣವಾದವರು ಕೃಷ್ಣ.

ಕಳೆದ ಐದು ವರ್ಷದ ವರೆಗೆ ನನ್ನ ಕುಟುಂಬ ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ವಾಸವಾಗಿದ್ದರಿಂದ ಅವರ ಬದುಕನ್ನು ಮತ್ತು ಕಾರ್ಯಚಟುವಟಿಕೆಯನ್ನು ತೀರಾ ಹತ್ತಿರದಿಂದ ನೋಡಲು ಸಾಧ್ಯವಾಯಿತು. ನನ್ನ ಮನೆಯ ಗೋಡೆಯ ಆಚೆಗಿನ ಬದಿಗಿನ ಮನೆಯಲ್ಲಿ ನನ್ನ ಸೋದರತ್ತೆಯ ಮಗ, ಬಾಲ್ಯದ ಸಹಪಾಠಿ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯನಾಗಿದ್ದ ಕೆ.ಟಿ.ಶ್ರೀಕಂಠೇಗೌಡ ವಾಸಿಸುತ್ತಿದ್ದರಿಂದ ಸಾಮಾನ್ಯವಾಗಿ ಮಧ್ಯಾಹ್ನದ ವೇಳೆಯಲ್ಲಿ ಊಟಕ್ಕೆ ಕಾಲ್ನಡಿಗೆಯಲ್ಲಿ ಅವನ ಮನೆಗೆ ಬರುತ್ತಿದ್ದರು.

ಇದೇ ಕೃಷ್ಣ ಕನರ್ಾಟಕ ವಿಧಾನಸಬೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳಲ್ಲಿ ತಮ್ಮ ಕುಟುಂಬ ಮೈಸೂರಿನಲ್ಲಿ ವಾಸವಾಗಿದ್ದ ಕಾರಣ, ಸ್ಪೀಕರ್ಗೆ ಮೀಸಲಿದ್ದ ಬಂಗಲೆಯನ್ನು ನಿರಾಕರಿಸಿ ಸಾಮಾನ್ಯ ಶಾಸಕನಂತೆ ಶಾಸಕರಭವನದ ಕೊಠಡಿಯಲ್ಲಿ ವಾಸವಾಗಿದ್ದರು. ಜನ ಸಾಮಾನರ್ಯ ಕಷ್ಟ ಸುಖಗಳಿಗೆ ಭಾಗಿಯಾಗುತ್ತಾ, ಎಂದೂ ಎಂಜಲು ಕಾಸಿಗೆ ಕೈಯೊಡ್ಡದೆ ಇವೋತ್ತಿಗೂ ಬಸ್ಸುಗಳಲ್ಲಿ ಓಡಾಡುವ ಕೃಷ್ಣರವರಿಗೆ ಚುನಾವಣೆ ಎದುರಿಸಲು ಹಣವಿಲ್ಲ ಎಂಬ ಏಕೈಕ ಕಾರಣಕ್ಕೆ ಕೆ.ಆರ್ ಪೇಟೆ ಕ್ಷೇತ್ರದಿಂದ ಜಾತ್ಯಾತಿತ ಜನತಾದಳ ಟಿಕೇಟ ನಿರಾಕರಿಸಲಾಗಿದೆ. ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಅಥವಾ ಜೀರ್ಣಿಸಿಕೊಳ್ಳಬೇಕು ತಿಳಿಯುತ್ತಿಲ್ಲ. ಒಬ್ಬ ಸಾಮಾನ್ಯ ಗ್ರಾಮ ಪಂಚಾಯಿತಿ ಸದಸ್ಯ ಈ ದಿನ ಕಾರಿನಲ್ಲಿ ಓಡಾಡುವಾಗ, ಕೃಷ್ಣರವರು ಒಂದರ್ಥದಲ್ಲಿ ವರ್ತಮಾನದ ರಾಜಕೀಯಕ್ಕೆ ಖಂಡಿತಾ ಅಸಮರ್ಥರು ಎಂದು ಸಮಾಧಾನಪಟ್ಟುಕೊಳ್ಳಬೇಕೆ? ತಿಳಿಯದು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೃಷ್ಣ, ಇಂದಿನ ಹಣ ಹೆಂಡದ ರಾಜಕೀಯದ ಹುಚ್ಚು ಹೊಳೆಯಲ್ಲಿ ಈಜಿ ಖಂಡಿತಾ ದಡ ಸೇರಲಾರರು. ಆದರೆ, ಅವರೊಳಗಿನ ಸಾತ್ವಿಕ ಸಿಟ್ಟನ್ನು ಮಾತ್ರ ನಾನು ಗೌರವಿಸದೆ ಇರಲಾರೆ.

ಕೊನೆಯ ಮಾತು- ಟಿಕೇಟ್ ನಿರಾಕರಿಸಿದ ಬಗ್ಗೆ ನಾನು ಜೆ.ಡಿ.ಎಸ್. ಪಕ್ಷದ ನಾಯಕರನ್ನು ವಿಚಾರಿಸಿದಾಗ, ಎಂಟು ಚುನಾವಣೆಯನ್ನು ಎದುರಿಸಿ, ಎಪ್ಪತ್ತು ವರ್ಷವಾದ ನಂತರವೂ ಕೃಷ್ಣರವರಿಗೆ  ಮತ್ತೇ ಟಿಕೇಟ್ ನೀಡಬೇಕೆ? ಎಂದು ಅವರು ಪ್ರಶ್ನಿಸಿದಾಗ ಈ ಪ್ರಶ್ನೆಗೂ ನನ್ನಲ್ಲಿ ಉತ್ತರವಿರಲಿಲ್ಲ.