Tag Archives: ಜೀವನದಿಗಳ ಸಾವಿನ ಕಥನ

ಜೀವನದಿಗಳ ಸಾವಿನ ಕಥನ – 18

ಡಾ.ಎನ್.ಜಗದೀಶ್ ಕೊಪ್ಪ

ಜಗತ್ತಿನಲ್ಲಿ ನಿರ್ಮಾಣಣವಾಗಿರುವ ಬಹುತೇಕ ಅಣೆಕಟ್ಟುಗಳು ನೀರಾವರಿ ಯೋಜನೆಗಳಿಗಾಗಿ ರೂಪುಗೊಂಡಿವೆ. ಜಲಾಶಯಗಳಲ್ಲಿ ಬಳಸಲಾಗುತ್ತಿರುವ ಮೂರನೇ ಎರಡು ಪ್ರಮಾಣದಷ್ಟು ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದೆ. ಅಮೇರಿಕಾದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಶೇ.80 ರಷ್ಟನ್ನು ಕೃಷಿಗೆ ಬಳಸುತಿದ್ದರೆ, ಭಾರತದಲ್ಲಿ ಶೇ.90 ರಷ್ಟು ನೀರನ್ನು ಕೃಷಿಗೆ ವಿನಿಯೋಗಿಸಲಾಗುತ್ತಿದೆ. ಜಗತ್ತಿನಾದ್ಯಂತ ಕೃಷಿ ಉತ್ಪಾದನೆ ಪೈಕಿ ಶೇ.60 ರಷ್ಟು ಭಾಗ ನೀರಾವರಿ ಪ್ರದೇಶದಿಂದ ಬರುತ್ತಿದೆ.

19ನೇ ಶತಮಾನದ ಪ್ರಾರಂಭದಿಂದ ದೇಶಿ ತಂತ್ರಜ್ಞಾನದ ಜೊತೆಗೆ ಅವಿಷ್ಕಾರಗೊಂಡ ನೂತನ ತಂತ್ರಜ್ಞಾನಗಳೊಂದಿಗೆ ಜಲಾಶಯದ ನೀರನ್ನು ಕೃಷಿ ಚಟುವಟಿಕೆಗೆ ಬಳಸಲು ಆರಂಭಿಸಲಾಯಿತು. ಭಾರತದ ಸಿಂಧೂ ಮತ್ತು ಗಂಗಾ ನದಿಯ ಪಾತ್ರದಲ್ಲಿ, ಈಜಿಪ್ಟ್‌ನ ನೈಲ್ ನದಿಯ ಪ್ರಾಂತ್ಯ, ಪಶ್ಚಿಮದ ಅಮೇರಿಕಾ, ಆಸ್ಷೇಲಿಯಾ ಮುಂತಾದ ದೇಶಗಳಲ್ಲಿ 1800 ರಿಂದ 1900 ರ ವೇಳೆಗೆ 44 ಮಿಲಿಯನ್ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿತ್ತು. ಮುಂದಿನ 50 ವರ್ಷಗಳಲ್ಲಿ ಅತಿ ದೊಡ್ಡ ಅಣೆಕಟ್ಟುಗಳು ನಿರ್ಮಾಣವಾದ ನಂತರ ನೀರಾವರಿ ಪ್ರದೇಶ ದ್ವಿಗುಣಗೊಂಡಿತು. ಇದರ ಜೊತೆಗೆ 1960 ರಲ್ಲಿ ಅವಿಷ್ಕಾರಗೊಂಡ ನೂತನ ತಳಿಗಳು, ವಿಶೇಷವಾಗಿ ಭತ್ತ ಮತ್ತು ಗೋಧಿಯ ತಳಿಗಳಿಂದಾಗಿ ಜಗತ್ತಿನೆಲ್ಲೆಡೆ ಹಸಿರುಕ್ರಾಂತಿಗೆ ಕಾರಣವಾಯ್ತು.

1970 ರ ನಂತರ ನೀರಾವರಿ ಪ್ರದೇಶದ ವಿಸ್ತೀರ್ಣದ ವೇಗ ನಾಟಕೀಯವಾಗಿ ಬೆಳೆಯತೊಡಗಿತು.ಅಂತರರಾಷ್ಟೀಯ ನೀರಾವರಿ ಮತ್ತು ಒಳಚರಂಡಿ ಸಮಿತಿಯ ಅಧ್ಯಯನದ ಪ್ರಕಾರ 1985 ರಲ್ಲಿ 310 ಮಿಲಿಯನ್ ಹೆಕ್ಟೇರ್ ನೀರಾವರಿ ಪ್ರದೇಶವಿದ್ದದ್ದು 2000 ದ ಅಂತ್ಯದ ವೇಳೆಗೆ 420 ಮಿಲಿಯನ್ ಹೆಟ್ಕೇರ್ ಪ್ರದೇಶಕ್ಕೆ ವಿಸ್ತೀರ್ಣಗೊಂಡಿತ್ತು. ನಂತರ ಈ ಬೆಳವಣಿಗೆ ಕುಂಠಿತಗೊಂಡಿತು. ಫಲವತ್ತಾದ ಭೂಮಿಯ ಕೊರತೆ, ನೀರಾವರಿಗೆ ಯೋಗ್ಯವಲ್ಲದ ಸ್ಥಳಗಳಲ್ಲಿ ಜಲಾಶಯಗಳ ನಿರ್ಮಾಣಣ, ಮುಂತಾದ ಅಂಶಗಳು ಇದಕ್ಕೆ ಕಾರಣವಾದವು.
ಹಸಿರು ಕ್ರಾಂತಿಯ ಫಲವಾಗಿ ಪ್ರಾರಂಭದಲ್ಲಿ ಅತ್ಯಧಿಕ ಇಳುವರಿ ಸಿಕ್ಕಿತಾದರೂ, ಹೈಬ್ರಿಡ್ ತಳಿಗಳು ಬೇಡುವ ಅತ್ಯಧಿಕ ನೀರು, ರಸಾನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಕೇವಲ ಹತ್ತು ವರ್ಷಗಳಲ್ಲಿ ಫಲವತ್ತಾದ ಭೂಮಿ ಬಂಜರು  ಭೂಮಿಯಾಗಿ ಮಾರ್ಪಟ್ಟಿತು. ಈ ಕುರಿತಂತೆ  ಜಗತ್ತಿನ ಕೃಷಿತಜ್ಞರ ನಡುವೆ ಮರುಚಿಂತನೆ ಆರಂಭವಾಯಿತು.

ಭೂಮಿಗೆ ನೀರುಣಿಸುವ ನೀರಾವರಿ ಯೋಜನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಕೃತಿಯ ಕೊಡುಗೆಯಾದ ಮಳೆ ನೀರನ್ನು ಆಶ್ರಯಿಸಿ ಬೇಸಾಯ ಮಾಡುತಿದ್ದ ನಮ್ಮ ಪೂರ್ವಿಕರು ತಮ್ಮ ಜಮೀನುಗಳ ಸಮೀಪ ಕೆರೆ, ಕಟ್ಟೆಗಳನ್ನು ನಿರ್ಮಿಸಿಕೊಂಡು ಕಿರು ಕಾಲುವೆಗಳ ಮುಖಾಂತರ ನೀರುಣಿಸಿ ಬೆಳೆ ಬೆಳೆಯುತಿದ್ದರು. ಇದಲ್ಲದೆ ಮಳೆಯಾಶ್ರಿತ ಬೆಳೆಗಳಿಗಾಗಿ ದೇಶಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತಿದ್ದರು. ಮಳೆಗಾಲ ಮುಗಿದ ನಂತರ, ಭೂಮಿಯ ತೇವಾಂಶ ಮತ್ತು ಚಳಿಗಾಲದ ಇಬ್ಬನಿಯಿಂದ ಕೂಡಿದ ಕಪ್ಪು ಎರೆಮಣ್ಣಿನಲ್ಲಿ ಮೆಣಸಿನಕಾಯಿ, ಹತ್ತಿ ಬೇಳೆಯುತಿದ್ದರು. ಈ ಪದ್ಧತಿಯನ್ನು ಈಗಲೂ ನಾವು ಉತ್ತರ ಕರ್ನಾಟಕದಲ್ಲಿ ಕಾಣಬಹುದು.

ಮಳೆಗಾಲದಲ್ಲಿ ಹರಿದು ಬರುತಿದ್ದ ನೀರನ್ನು ಕಟ್ಟೆಗಳಲ್ಲಿ ಸಂಗ್ರಹಿಸಿ, ಕಟ್ಟೆಯ ಕೆಳಭಾಗದ ಅಚ್ಚು ಕಟ್ಟು ಪ್ರದೇಶದಲ್ಲಿ ದೀರ್ಘಾವಧಿ ಬೆಳೆ ತೆಗೆಯುವುದರ ಜೊತೆಗೆ ತಮ್ಮ ಜಾನುವಾರುಗಳಿಗೂ ಇದೇ ನೀರನ್ನು ಬಳಕೆ ಮಾಡುತಿದ್ದರು. ಇದು ಜಗತ್ತಿನೆಲ್ಲೆಡೆ, ನಮ್ಮ ಪೂರ್ವಿಕರು ಅಳವಡಿಸಿಕೊಂಡಿದ್ದ ಒಂದು ದೇಶೀಯ ಜ್ಞಾನಶಿಸ್ತು.

ಆಧುನಿಕ ತಂತ್ರಜ್ಞಾನದ ನೀರಾವರಿಯಲ್ಲಿ ಎರಡು ವಿಧಾನಗಳಿವೆ. ಒಂದು ಏತ ನೀರಾವರಿ ಪದ್ಧತಿ, ಇನ್ನೊಂದು ಕಾಲುವೆಗಳ ಮೂಲಕ ಭೂಮಿಗೆ ನೀರುಣಿಸುವ ಪದ್ಧತಿ. ಏತ ನೀರಾವರಿಯಲ್ಲಿ ಬಾವಿ, ಕಟ್ಟೆ ಅಥವಾ ಕೆರೆಗಳಿಂದ ನೀರನ್ನು ಮೇಲಕ್ಕೆ ಎತ್ತಿ ಭೂಮಿಗೆ ಹರಿಸುವ ಕ್ರಮವಿದ್ದರೆ, ಜಲಾಶಯಗಳಿಂದ ನಾಲುವೆ ಮೂಲಕ ನೀರುಣಿಸುವ ಕ್ರಮ ಈಗ ಜನಪ್ರಿಯ ಪದ್ಧತಿಯಾಗಿದೆ.

ಆಫ್ರಿಕಾ ಖಂಡದ ಅನೇಕ  ಹಿಂದುಳಿದ ರಾಷ್ಟಗಳಲ್ಲಿ ಜಲಾಶಯಗಳ ಹಂಗಿಲ್ಲದೆ, ಮಳೆ ನೀರನ್ನು ಶೇಖರಿಸಿಟ್ಟುಕೊಂಡು ಅಲ್ಲಿ ರೈತರು ಬೇಸಾಯ ಮಾಡುವುದನ್ನು ವಿಶ್ವ ಕೃಷಿ ಮತ್ತು ಆಹಾರ ಸಂಘಟನೆ ಗುರುತಿಸಿದೆ. 1987 ರವರೆಗೆ ಅಲ್ಲಿ ರೈತರು ಕೃಷಿ ಬೂಮಿಯ ಶೇ.37ರಷ್ಟು ಅಂದರೆ, 50 ಲಕ್ಷ ಹೆಕ್ಟೇರ್ ಭೂಮಿಯನ್ನು ದೇಶಿ ತಂತ್ರಜ್ಞಾನದ ಬೇಸಾಯಕ್ಕೆ ಅಳವಡಿಸಿದ್ದರು.

ಇಂತಹದ್ದೇ ಮಾದರಿಯ ಕೃಷಿ ಪದ್ಧತಿ ಬಾರತ, ಈಜಿಪ್ಟ್, ಇಂಡೊನೇಷಿಯ ಮತ್ತು ಅಮೇರಿಕಾ ದೇಶಗಳಲ್ಲಿ ಜಾರಿಯಲ್ಲಿತ್ತು. ಅಮೇರಿಕಾದ ಮೂಲನಿವಾಸಿಗಳು ಮಳೆನೀರನ್ನು ಬಳಸಿ 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ, ಮೆಕ್ಕೆಜೋಳ ಬೆಳೆಯುತಿದ್ದದನ್ನು ವಿಜ್ಙಾನಿಗಳು ಗುರುತಿಸಿದ್ದಾರೆ.

ಭಾರತದಲ್ಲೂ ಸಹ ಅತ್ಯಧಿಕ ಸಣ್ಣ ಹಿಡುವಳಿದಾರರಿದ್ದು ಅವರೂ ಕೂಡ ದೇಶಿ ತಂತ್ರಜ್ಞಾನ ಬಳಸಿ ಬೇಸಾಯ ಮಾಡುತಿದ್ದಾರೆ. ಅವರುಗಳು ಗ್ರಾಮಾಂತರ ಪ್ರದೇಶದಲ್ಲಿ ಕೆರೆ, ಬಾವಿ ಉಪಯೋಗಿಸಿ ಕೃಷಿ ಚಟುವಟಿಕೆ ಮಾಡುತ್ತಿರುವ ಭೂಮಿಯ ಪ್ರಮಾಣ, ಜಲಾಶಯ ಮತ್ತು ಕಾಲುವೆಗಳ ಮೂಲಕ ನೀರು ಹರಿಸಿ ಮಾಡುತ್ತಿರುವ ಕೃಷಿ ಭೂಮಿಗಿಂತ ಎರಡು ಪಟ್ಟು ಅಧಿಕವಾಗಿದೆ.

ಕೃಷಿ ಉತ್ಪನ್ನ ಕುರಿತ ಇಂದಿನ ಅಂಕಿ ಅಂಶಗಳು ಜಲಾಶಯದ ಮೂಲಕ ಕೃಷಿ ಮಾಡುತ್ತಿರುವ ಭೂಮಿಯಲ್ಲಿ ಅಧಿಕ ಇಳುವರಿ ನೀಡಿರುವುದನ್ನು ಧೃಡಪಡಿಸಿವೆ ನಿಜ. ಇದಕ್ಕೆ ಕಾರಣವಾದ ಅಂಶಗಳೆಂದರೆ, ಹೈಬ್ರಿಡ್ ಬಿತ್ತನೆ ಬೀಜ, ರಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಸಮರ್ಪಕ ನೀರು ಪೂರೈಕೆ. ವರ್ಷಕ್ಕೆ ಒಂದೇ ಬೆಳೆ ಬೆಳೆಯುತಿದ್ದ ಭೂಮಿಯಲ್ಲಿ ಈಗ ಅಲ್ಪಾವಧಿ ಕಾಲದ ತಳಿಗಳನ್ನು ಸೃಷ್ಟಿಸಿ ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರ ನೇರ ಪರಿಣಾಮ ಭೂಮಿಯ ಮೇಲಾಗಿದೆ. ಫಲವತ್ತಾದ ಭೂಮಿಯಲ್ಲಿ ಸುಧೀರ್ಘ ಕಾಲ ಅತ್ಯಧಿಕ ಫಸಲನ್ನು ತೆಗೆಯಲು ಸಾದ್ಯವಾಗುವುದಿಲ್ಲ. ಏಕೆಂದರೆ, ನಿರಂತರವಾಗಿ ಬಳಸುವ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕದಿಂದ ಭೂಮಿಯಲ್ಲಿ ಕ್ಷಾರಕ ಅಂಶಗಳೂ ಹೆಚ್ಚಾಗಿ ಚೌಳು ಪ್ರದೇಶವಾಗಿ ಪರಿವರ್ತನೆ ಹೊಂದುತ್ತಿದೆ.

ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕ ಮಟ್ಟದಲ್ಲಿ ಫಲವತ್ತಾದ ಭೂಮಿ ಕಾಲುವೆ ಹಾಗೂ ನೀರು ಬಸಿದು ಹೋಗುವ ಚರಂಡಿಗಳಿಗೆ ಬಳಕೆಯಾಗುತಿದ್ದು ಇದರಿಂದಾಗಿ ನೀರಾವರಿ ಯೋಜನೆಗಳ ಮೂಲ ಉದ್ದೇಶಗಳಿಗೆ ಧಕ್ಕೆಯುಂಟಾಗಿದೆ. ಕೆಲವೆಡೆ ಯಾವ ಕಾರಣಕ್ಕಾಗಿ ಜಲಾಶಯ ನಿರ್ಮಾಣವಾಯಿತೊ, ಅದರ ಉದ್ದೇಶಕ್ಕೆ ಅನುಗುಣವಾಗಿ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಸಾದ್ಯವಾಗಿಲ್ಲ. ಇನ್ನೂ ಹಲವೆಡೆ ಉದ್ದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಒತ್ತಡಗಳಿಂದಾಗಿ ಭೂಮಿಯನ್ನು ನೀರಾವರಿಗೆ ಒಳಪಡಿಸಿ ನೀರುಣಿಸಲು ಸಾಧ್ಯವಾಗಿಲ್ಲ. ಜಗತ್ತಿನ ಹಲವಾರು ಅಣೆಕಟ್ಟುಗಳ ನಿರ್ಮಾಣದಿಂದ, ನೀರಾವರಿ ಕೃಷಿಗೆ ಒಳಪಟ್ಟ ಭೂಮಿಗಿಂತ ಎರಡು ಪಟ್ಟು ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾದ ಉದಾಹರಣೆಗಳಿವೆ.

ನೈಜೀರಿಯಾ ಸರ್ಕಾರ ತಾನು ನಿರ್ಮಿಸಿದ ಬಾಕಲೋರಿ ಅಣೆಕಟ್ಟಿನಿಂದ 44 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ಹೊಂದಿತ್ತು. ಜಲಾಶಯ ನಿರ್ಮಾಣದ ನಂತರ 12 ಸಾವಿರ ಹೆಕ್ಟೇರ್ ಪ್ರದೇಶ ಹಿನ್ನೀರಿನಲ್ಲಿ ಮುಳುಗಿದರೆ, ನದಿಯ ಕೆಳಗಿನ ಪಾತ್ರದ 11 ಸಾವಿರ ಹೆಕ್ಟೇರ್ ಪ್ರದೇಶ ನೀರಿಲ್ಲದೆ ಬಂಜರು ಭೂಮಿಯಾಯಿತು. ಇದೇ ನೈಜೀರಿಯಾದ ಉತ್ತರ ಭಾಗದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ನಿರ್ಮಿಸಿದ ಡಾಡಿನ್ಕೋವಾ ಅಣೆಕಟ್ಟಿನಿಂದಾಗಿ 35 ಸಾವಿರ ಹೆಕ್ಟೇರ್ ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾಯಿತು.

ವಿಶ್ವಬ್ಯಾಂಕ್‌ನ ಸಮೀಕ್ಷೆಯ ಪ್ರಕಾರ ಭಾರತದಲ್ಲೂ ಕೂಡ ಶೇ.5ರಿಂದ ಶೇ.13ರಷ್ಟು ಪ್ರಮಾಣದ ಫಲವತ್ತಾದ ಭೂಮಿ ಕಾಲುವೆಗಳ ನಿರ್ಮಾಣಕ್ಕಾಗಿ ಬಳಕೆಯಾಗಿದೆ. ಸೋಜಿಗದ ಸಂಗತಿಯೆಂದರೆ ಭಾರತದಲ್ಲಿ ಜಲಾಶಯಗಳ ಮೂಲಕ ನೀರಾವರಿಗೆ ಒಳಪಟ್ಟ ಪ್ರದೇಶದ ಬಗ್ಗೆ ನಿಖರವಾದ ಅಂಕಿ ಅಂಶಗಳೇ ಇಲ್ಲ. ಕೆಲವೆಡೆ ಜಲಾಶಯದಲ್ಲಿ ದೊರೆಯುವ ನೀರಿನ ಪ್ರಮಾಣಕ್ಕಿಂತ ಹೆಚ್ಚಾಗಿ ಒಣಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಪ್ರಯತ್ನಗಳು ನಡೆದು ವಿಫಲವಾಗಿರುವುದು ಕಂಡುಬಂದಿದೆ.

ನರ್ಮದಾ ನದಿಗೆ ನಿರ್ಮಿಸಲಾದ ಬಾಗ್ರಿ ಅಣೆಕಟ್ಟಿನಿಂದ 81 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುವುದೆಂದು ಸರ್ಕಾರ ಪ್ರಕಟಿಸಿತ್ತು. ಈ ಅಣೆಕಟ್ಟಿನಿಂದಾಗಿ 4 ಲಕ್ಷದ 40 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನೀರಿನಲ್ಲಿ ಮುಳುಗಡೆಯಾಯಿತು. 1986ರಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ ನೀರಾವರಿಗೆ ಒಳಪಟ್ಟ ಪ್ರದೇಶ ಕೇವಲ 12 ಸಾವಿರ ಹೆಕ್ಟೇರ್ ಮಾತ್ರ.

ಈಜಿಪ್ಟ್ ದೇಶದ ನೈಲ್ ನದಿಗೆ ನಿರ್ಮಿಸಲಾದ ಅಸ್ವಾನ್ ಅಣೆಕಟ್ಟಿನ ಮೂಲ ಗುರಿ 6 ಲಕ್ಷದ 80 ಸಾವಿರ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಿ ಹತ್ತಿ, ಕಬ್ಬು, ಗೋಧಿ ಬೆಳೆಯುವ ಯೋಜನೆಯಾಗಿ ರೂಪಿಸಲಾಗಿತ್ತು. ಈ ಜಲಾಶಯದಿಂದ ನೀರುಣಿಸಲು ಸಾಧ್ಯವಾಗಿದ್ದು ಕೇವಲ 2 ಲಕ್ಷದ 60 ಸಾವಿರ ಹೆಕ್ಟೇರ್ ಭೂಮಿಗೆ ಮಾತ್ರ. ಇತ್ತೀಚಿನ ದಿನಗಳಲ್ಲಿ ಮಿತಿ ಮೀರುತ್ತಿರುವ ಅಣೆಕಟ್ಟುಗಳ ನಿರ್ಮಾಣಣದ ವೆಚ್ಚವನ್ನು ಮರೆಮಾಚಲು ಹಲವಾರು ಸರಕಾರಗಳು ಸುಳ್ಳು ಅಂಕಿ ಅಂಶಗಳನ್ನು ಪ್ರಕಟಿಸುತ್ತಾ ಜನಸಾಮಾನ್ಯರನ್ನು ವಂಚಿಸುವುದು ವಾಡಿಕೆಯಾಗಿದೆ.

ಜಲಾಶಯದಲ್ಲಿ ಸಂಗ್ರಹವಾದ ನೀರಿನಿಂದ ಕೃಷಿ ಚಟುವಟಿಕೆಗೆ ಪರೋಕ್ಷವಾಗಿ ಧಕ್ಕೆಯಾಗುತ್ತಿರುವುದನ್ನು ಕೃಷಿ ವಿಜ್ಞಾನಿಗಳು ಇತ್ತೀಚೆಗಿನ ಅಧ್ಯಯನದಿಂದ ಧೃಡಪಡಿಸಿದ್ದಾರೆ. ನೀರಿನಲ್ಲಿರುವ ಲವಣ ಮತ್ತು ಕ್ಷಾರಕ ಅಂಶಗಳು ಭೂಮಿಯ ಫಲವತ್ತತೆಯನ್ನು ತಿಂದು ಹಾಕುತ್ತಿವೆ ಎಂದಿದ್ದಾರೆ. ಸೂರ್ಯನ ತಾಪದಿಂದ ಜಲಾಶಯದಲ್ಲಿನ ನೀರು ಆವಿಯಾಗುವುದರ ಜೊತೆಗೆ ನೀರಿನಲ್ಲಿ ಹೆಚ್ಚಿನ ಲವಣಾಂಶಗಳು ಉತ್ಪಾದನೆಯಾಗುತ್ತಿವೆ ಎಂದು ವಿಜ್ಙಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಆಸ್ಟ್ರೇಲಿಯಾದ ನ್ಯಾಷನಲ್ ಯೂನಿವರ್ಸಿಟಿಯ ಸೆಂಟರ್ ಫಾರ್ ರೀಸೋರ್ಸ್ ಅಂಡ್ ಎನ್ವಿರಾನ್ಮೆಂಟ್ ಸ್ಟಡೀಸ್ ಅಧ್ಯಯನ ಕೇಂದ್ರ ನಡೆಸಿರುವ ಅಧ್ಯಯನದಲ್ಲಿ ಜಗತ್ತಿನ 4 ಕೋಟಿ 54 ಲಕ್ಷ ಹೆಕ್ಟೇರ್ ಪ್ರದೇಶ ಲವಣಾಂಶಗಳಿಂದ ಕೂಡಿದ್ದು, ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ ಎಂದಿದೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ 20ರಿಂದ 30 ಲಕ್ಷ ಹೆಕ್ಟೇರ್ ಪ್ರದೇಶ ಕ್ಷಾರಕ ಅಂಶಗಳಿಂದಾಗಿ ಚೌಳು ಭೂಮಿಯಾಗಿ ಪರಿವರ್ತನೆ ಹೊಂದುತ್ತಿದೆ ಎಂದು ವಿಶ್ವಬ್ಯಾಂಕ್ ತಜ್ಞರ ತಂಡ ಕೂಡ ಅಭಿಪ್ರಾಯ ಪಟ್ಟಿದೆ.

(ಮುಂದುವರಿಯುವುದು)

Hope good sense dawn on all media men in 2012

Kariyappa Gudadahalli

The role of media began this year (2011) with exposing corruption of unimaginable magnitude and ended with attracting strong criticism from the present chairman of Press Council of India. Besides, a few powerful media people had embarrassing days for having friendship with Niira Radia, a PR person interested in setting up the cabinet as per the wishes of her clients.

‘Sensationalising’, ‘trivialising’, ‘ignoring’ and sometimes ‘glorifying’ are some of the charges generally levelled against media. Media’s role this year was no different. It sensationalised violence on its late evening crime bulletins, trivialised ‘news’ by giving undue importance to incidents worth ignoring. It also ignored the issues worth an in-depth coverage. On top of all these, the one thing which vast media never failed to perform was ‘glorifying’. No doubt, this is in reference to Anna movement in general and Anna Hazare in particular.

A group of five people claimed to have conducted consultations with crores of people over a draft bill consisting innumerable clauses and sub-clauses. And, the media believed it. Hardly made any attempts to question the process of consultation. Needless to state that Anna movement, despite many follies within, succeeded to evoke conscience of public against corruption. But the impact has not yet reached the grassroots. Nobody can state that earnings of a traffic police inspector or an RTO or a sub registrar in Revenue Department or a minister/MLA have come down following the Anna movement. There are no instances of the educated class, which rallied behind Anna, taking up a fight against corrupt officer on demanding bribe either.

Forget the government establishments, the media which gave the possible widest coverage to anti-corruption movement, has not been able to throw out the corrupt within. Journalists, better known as lobbyists, continue to enjoy good will of the management and get regular hikes and promotions.

A Kannada news channel, whose owner was actively identified with Anna movement, attracted attention of other media people by changing its approach in reporting charges of corruption, misuse of office faced by former Chief Minister B.S Yeddyurappa. Any layman regularly watching the channel could notice ‘the change’ within days of Yeddyurappa’s release from the central prison. The change was well displayed in his two-hour long interview with two anchors and a journalist. Anchors generally known for conducting media trial were on a different mission that day. Except the bloggers and websites, no media house raised a voice demanding an inquiry into reports of ‘top journalists’ receiving huge cash from Bellary brothers, accused of illegal mining.

In simple terms, media houses glorified Anna movement against corruption and ignored blatant corruption within. No editor has come forward to declare his assets voluntarily. But they ask their reporters to file a story if the new Lokayukta fails to do it soon after assuming his office. Let the veterans come out with sites, houses they own and declare whether the property they own is in proportionate to their known sources of income.

Nobody would dare to object to the comment that media have continued with their attempts to take society backwards this year too. They gave undue time and space for astrologers and soothsayers. Husbands of women named Lakshmi had a nightmarish experience when a Kannada news channel shamelessly aired a programme professing that whoever married women named Lakshmi had to face hardships throughout their life. The channel people seemed to have not understood the impact the programme had on innocent viewers, particularly girls named Lakshmi.

Going by the present trend one can’t be hopeful of a better year ahead. Of course, the same people continue to hold positions, continue with sermons on objectivity, honesty and many other virtues in their columns. Columns by a couple of senior journalists, committed to democratic principles and diversity are an exception. One can hope a better year in prompt efforts aimed at working out alternatives to mainstream media. Such efforts do not demand huge investment and need to compromise with values. Though their audience is limited it can expand through continuous effort.

Hope good sense prevail upon all media men and media houses in 2012.

ಜೀವನದಿಗಳ ಸಾವಿನ ಕಥನ – 17

ಡಾ.ಎನ್. ಜಗದೀಶ್ ಕೊಪ್ಪ

ಕುಡಿಯುವ ನೀರಿನ ಯೋಜನೆಯಡಿ ಗುಜರಾತ್ ರಾಜ್ಯದ ಜನತೆಯನ್ನು ವಂಚಿಸಿದ ಕರ್ಮಕಾಂಡ ಸರದಾರ್ ಸರೋವರ ಅಣೆಕಟ್ಟಿನ ಇತಿಹಾಸದಲ್ಲಿ ತಳಕು ಹಾಕಿಕೊಂಡಿದೆ. ಗುಜರಾತ್, ರಾಜಸ್ತಾನ,ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹರಿಯುವ ಈ ನದಿಯಿಂದ 1989 ರಲ್ಲಿ 3 ಕೋಟಿ 20 ಲಕ್ಷ ಜನತೆಗೆ ಕುಡಿಯುವ ನೀರು ಒದಗಿಸಲಾಗುವುದೆಂದು ಹೇಳಲಾಗಿತ್ತು. ನಂತರ 1992 ರಲ್ಲಿ 4 ಕೋಟಿ ಜನಕ್ಕೆ ಎಂದು ತಿಳಿಸಿ, ಮತ್ತೆ 1998ರಲ್ಲಿ 3 ಕೋಟಿ ಜನತೆಗೆ ಮಾತ್ರ ನೀರು ಒದಗಿಸಲಾಗುವುದೆಂದು ಹೇಳುವುದರ ಮೂಲಕ ಸುಳ್ಳುಗಳನ್ನು ಪುಖಾನುಪುಂಖವಾಗಿ ಹರಿಯಬಿಡಲಾಯಿತು. ಈ ನದಿಯ ನೀರಿನ ಯೋಜನೆ ಎಷ್ಟು ಗೊಂದಲದ ಗೂಡಾಗಿದೆಯೆಂದರೆ, 1992ರಲ್ಲಿ ಒಟ್ಟು 8236 ನಗರ, ಪಟ್ಟಣ, ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುವುದೆಂದು ಹೇಳಲಾದ ಪಟ್ಟಿಯಲ್ಲಿ 236 ಹಳ್ಳಿಗಳಲ್ಲಿ ಜನರೇ ವಾಸಿಸುತ್ತಿಲ್ಲ. ಈವತ್ತಿಗೂ ಈ ಯೋಜನೆಯ ಮೂಲ ಉದ್ದೇಶ ಏನೂ?, ಎಷ್ಟು ಹಣ ಖರ್ಚಾಗುತ್ತಿದೆ, ನೀರಾವರಿಗೆ ಒಳಪಡುವ ಪ್ರದೇಶದ ವ್ಯಾಪ್ತಿ ಎಷ್ಟೆಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.

2000 ದ ಇಸವಿ ವೇಳೆಗೆ ಜಗತ್ತಿನಾದ್ಯಂತ ಸಮೀಕ್ಷೆ ಪ್ರಕಾರ ಜಲಾಶಯಗಳಿಂದ ಬಳಕೆಯಾಗುತ್ತಿರುವ ನೀರಿನಲ್ಲಿ ಶೇ.70ರಷ್ಟು ಕುಡಿಯುವ ನೀರಿಗಾಗಿ, ಶೇ.24ರಷ್ಟು ಕೈಗಾರಿಕೆಗಳಿಗಾಗಿ ಬಳಕೆಯಾಗುತಿದ್ದು, ಶೇ.4ರಷ್ಟು ಆವಿಯಾಗತ್ತಿದೆ. ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಬಳಕೆಯಾಗುತ್ತಿರುವ ಶೇ65ರಷ್ಟು ಭಾಗದ ನೀರು ತೆರದ ಹಾಗೂ ಕೊಳವೆ ಬಾವಿಗಳ ಮೂಲದ್ದು.

ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದ ಫಲವಾಗಿ ಜಗತ್ತಿನ ಹಲವೆಡೆ ಅಸ್ತಿತ್ವದಲ್ಲಿ ಇದ್ದ ಜಲಸಾರಿಗೆಗೆ ದೊಡ್ಡಪೆಟ್ಟು ಬಿದ್ದಿತು. ಹಲವಾರು ದೇಶಗಳಲ್ಲಿ ಆಳವಾದ ಮತ್ತು ನಿಧಾನವಾಗಿ ಹರಿಯುವ ನದಿಗಳನ್ನು ಜಲಸಾರಿಗೆಗೆ ಬಳಸಲಾಗುತಿತ್ತು. ತೈಲ, ಕಲ್ಲಿದ್ದಲು, ಅದಿರು, ಮರದ ದಿಮ್ಮಿಗಳನ್ನು, ತೆರದ ಮಧ್ಯಮಗಾತ್ರದ (ಬಾರ್ಜ್) ಹಡಗುಗಳಲ್ಲಿ ಸಮುದ್ರ ತೀರದ ಬಂದರುಗಳಿಗೆ ಸಾಗಿಸುವುದು ರಸ್ತೆ ಸಾರಿಗೆಗಿಂತ ಕಡಿಮೆ ಖರ್ಚಿನದಾಗಿತ್ತು. ಜೊತೆಗೆ ಪ್ರಯಾಣಿಕರ ಅನೂಕೂಲಕ್ಕೆ ದೋಣಿಗಳು ಇದ್ದವು. ಈಗ ಜಲಸಾರಿಗೆ ಕೆಲವೆಡೆ ಮಾತ್ರ ಇನ್ನೂ ಅಸ್ತಿತ್ವದಲ್ಲಿದೆ.

ಇತ್ತೀಚಿಗೆ ಮತ್ತೆ ಜಲಸಾರಿಗೆಯನ್ನು ಪುನಶ್ಚೇತನಗೊಳಿಸಲು ಹಲವಾರು ದೇಶಗಳು ಶ್ರಮಿಸುತ್ತಿವೆ. ಅಣೆಕಟ್ಟು ಇರವ ಸ್ಥಳದಲ್ಲಿ ದೊಡ್ಡ ಲಿಪ್ಟ್‌ಗಳನ್ನು ಸ್ಥಾಪಿಸಿ ಅವುಗಳ ಮೂಲಕ ಹಡಗು ಮತ್ತು ದೋಣಿಗಳನ್ನು ಜಲಾಶಯದಿಂದ ಕೆಳಗಿನ ನದಿಗೆ ಬಿಡುವುದು, ಇಲ್ಲವೇ ಕೆಳಗಿನ ನದಿಯಿಂದ ಸಾಗಿಬಂದ ಹಡಗು, ದೋಣಿಗಳನ್ನು ಜಲಾಶಯದ ಮೇಲ್ಬಾಗದ ನದಿಗೆ ಎತ್ತಿ ಬಿಡುವ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಇದು ನಿರಿಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ‍. ನೈಜೀರಿಯದಲ್ಲಿ ಜಗತ್ತಿನ ಅತಿದೊಡ್ಡ ಅಂದರೆ, 10 ಸಾವಿರ ಟನ್ ಸಾಮರ್ಥದ ಲಿಪ್ಟ್ ಅಳವಡಿಸಲಾಯಿತು ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಚೀನಾದ ತ್ರೀ ಗಾರ್ಜಸ್ ಅಣೆಕಟ್ಟಿನ ಬಳಿ ಸಹ ಇಂತಹದೇ ಮಾದರಿ ಲಿಪ್ಟ್ ಅಳವಡಿಸಲಾಗಿದೆ. ಇಂತಹ ಜಲಸಾರಿಗೆಯ ಪರ್ಯಾಯ ಭವಿಷ್ಯದಲ್ಲಿ ಯಶಸ್ವಿಯಾಗದು ಎಂದು ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಜಲಾಶಯದ ಹಿನ್ನೀರಿನ ನದಿಯಲ್ಲಿ ಹೂಳು ಶೇಖರವಾಗುವುದರಿಂದ ಹಡಗು ಮತ್ತು ದೋಣಿಗಳ ಚಲನೆಗೆ ಅಡ್ಡಿಯಾಗುತ್ತದೆ ಎಂಬುದು ತಜ್ಙರ ನಿಲುವು.

ವಿಶ್ವಬ್ಯಾಂಕ್ ಸಮೀಕ್ಷೆಯಂತೆ 1960 ರಲ್ಲಿ ಜಗತ್ತಿನಾದ್ಯಂತ 1 ಲಕ್ಷ 70 ಸಾವಿರ ಕಿಲೋಮೀಟರ್ ಜಲಸಾರಿಗೆಯಿದ್ದದ್ದ್ದು, 2000 ದ ವೇಳೆಗೆ ಅದು ಕೇವಲ 79 ಸಾವಿರ ಕಿ.ಮೀ.ಗೆ ಕುಸಿದಿತ್ತು.

ಉತ್ತರ ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಇಂದಿಗೂ ಜಲಸಾರಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮೇರಿಕಾದ ಆರ್ಮಿ ಕೋರ್ಸ್ ಆಫ್ ಇಂಜಿನಿಯರ್ಸ್ ಸಂಸ್ಥೆ ಮಿಸಿಸಿಪ್ಪಿ ನದಿಯ ಮೇಲ್ಭಾಗದಲ್ಲಿ 1914 ರಿಮದ 1950 ರವರೆಗೆ ಅಣೆಕಟ್ಟುಗಳಿಗೆ 29 ಲಿಪ್ಟ್ ಅಳವಡಿಸಿ 800 ಕಿಲೋಮೀಟರ್ ಜಲಸಾರಿಗೆಯನ್ನು ಅಭಿವೃದ್ಧಿ ಪಡಿಸಿತ್ತು. 1990 ರಲ್ಲಿ ಅಮೇರಿಕಾ ಸರ್ಕಾರ ಜಲಸಾರಿಗೆ ನಿರ್ವಹಣೆಗಾಗಿ 12 ಶತಕೋಟಿ ಡಾಲರ್ ಹಣ ಖರ್ಚು ಮಾಡಿತ್ತು. ಅಲ್ಲಿ 12 ಬೃಹತ್ ವ್ಯಾಪಾರ ಸಂಸ್ಥೆಗಳು ಹಡಗುಗಳ ಮೂಲಕ ಅದಿರು, ತೈಲ, ಕಲ್ಲಿದ್ದಲು ಹಾಗು ಸರಕುಗಳನ್ನು ಸಾಗಿಸುತಿದ್ದು ಇದಕ್ಕಾಗಿ ಸರ್ಕಾರದಿಂದ ಹಲವಾರು ರಿಯಾಯತಿಗಳನ್ನು ಪಡೆದಿವೆ. ಆದರೆ ಲಿಪ್ಟ್ ಗಳ ದುರಸ್ತಿ ಮತ್ತು ನಿರ್ವಹಣೆ ಸಕಾರಕ್ಕೆ ಹೊರೆಯಾಗಿದೆ. ಇಲಿನಾಯ್ಸ್ ನದಿಗೆ ಕಟ್ಟಲಾಗಿರುವ ಅಣೆಕಟ್ಟಿನ ಲಿಪ್ಟ್ ಒಂದರ ಬದಲಾವಣೆಗಾಗಿ ಸರ್ಕಾರ 100 ಕೋಟಿ ಡಾಲರ್ ವ್ಯಯ ಮಾಡಿತು.

ಅಣೆಕಟ್ಟುಗಳ ನಿರ್ಮಾಪಕರು ಜಲಾಶಯಗಳಲ್ಲಿ ನಡೆಸಬಹುದಾದ ಮೀನುಗಾರಿಕೆ ಕೂಡ ಒಂದು ಲಾಭದಾಯಕ ಉಧ್ಯಮ ಎಂದು ಬಣ್ಣ ಬಣ್ಣದ ಕರಪತ್ರಗಳಲ್ಲಿ ಮುದ್ರಿಸಿ ಪ್ರಸಾರ ಮಾಡುತ್ತಿದೆ. ಆದರೆ, ಪರಿಸರ ತಜ್ಙರು ಲಾಭದಾಯಕವಲ್ಲ ಎಂದು ವಾದಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡುವುದರಿಂದ ನೀರಿನಲ್ಲಿರುವ, ಮೀನಿಗೆ ಬೇಕಾದ ಪೋಷಕಾಂಶಗಳು ಹರಿದು ಹೋಗುವುದನ್ನು  ತಜ್ಙರು ಗುರುತಿಸಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಕುಡಿಯುವ ನೀರು ಮತ್ತು ವಿದ್ಯುತ್ ಗಾಗಿ ನೀರು ಬಳಕೆಯಾಗುವುದನ್ನು ಗುರಿ ಮಾಡಿ ಇಂತಹ ಸ್ಥಿತಿಯಲ್ಲಿ ಮೀನು ಸಾಕಾಣಿಕೆ ಲಾಭ ತರುವುದಿಲ್ಲ ಎಂದು ಅವರು ವಾದಿಸಿದ್ದಾರೆ.

ಆಫ್ರಿಕಾದ ಕೈಂಜಿ ಅಣೆಕಟ್ಟಿನ ಜಲಾಶಯದಲ್ಲಿ 10 ಸಾವಿರ ಟನ್ ಮೀನು ಸಿಗಬಹುದೆಂದು ಅಂದಾಜಿಸಲಾಗಿತ್ತು 1970 ರಲ್ಲಿ ಎಲ್ಲರ ನಿರೀಕ್ಷೆ ಮೀರಿ 28 ಸಾವಿರ ಮೀನು ದೊರೆಯಿತು. ನಂತರದ ನಾಲ್ಕು ವರ್ಷಗಳಲ್ಲಿ ಅಂದರೆ, 1974 ರಲ್ಲಿ ಮೀನಿನ ಇಳುವರಿ ಕೇವಲ 4ಸಾವಿರದ 500 ಟನ್ಗೆ ಕುಸಿದಿತ್ತು.

ಜಗತ್ತಿನ ಅತಿ ದೊಡ್ಡ ವಿಶಾಲವಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಘಾನದ ವೊಲ್ಟಾ ನದಿಗೆ ಕಟ್ಟಿರುವ ಅಕೊಸೊಂಬೊ ಜಲಾಶಯದಿಂದ ಉಂಟಾಗಿರುವ ವೊಲ್ಟಾ ಸರೋವರದಲ್ಲಿ 60 ಸಾವಿರ ಟನ್ ಮೀನು ಉತ್ಪಾದನೆಯಾಗಿ 20 ಸಾವಿರ ಮೀನುಗಾರರಿಗೆ ಉದ್ಯೋಗ ದೊರಕಿಸಿತ್ತು. ಆದರೆ ಜಲಾಶಯ ನಿರ್ಮಾಣದಿಂದ ನೆಲೆ ಕಳೆದುಕೊಂಡ 80 ಸಾವಿರ ಮೀನುಗಾರರ ಪೈಕಿ ಉಳಿದ 60 ಸಾವಿರ ಮೀನುಗಾರರು ಅರಣ್ಯಗಳಲ್ಲಿ ಬೇಟೆಯಾಡುತ್ತಾ, ಗೆಡ್ಡೆ ಗೆಣಸು ತಿನ್ನುತ್ತಾ ಬದುಕು ದೂಡುವಂತಾಯಿತು.

ಉರುಗ್ವೆ ದೇಶದ ಮಿಲಿಟರಿ ಸರ್ಕಾರ ತಾನು ನಿರ್ಮಿಸಿದ್ದ ಸಾಲ್ವೋ ಗ್ರಾಂಡ್ ಜಲಾಶಯದಲ್ಲಿ ಅತ್ಯಾಧುನಿಕ ತಂತ್ರಜ್ಙಾನ ಬಳಸಿ ಮೀನುಗಾರಿಕೆಗೆ ಯೋಜನೆ ರೂಪಿಸಿತ್ತು. ಆದರೆ ಜರ್ಮನಿ ದೇಶದಿಂದ ಬರಬೇಕಾದ ಆರ್ಥಿಕ ನೆರವು ಬಾರದೆ ಇಡೀ ಯೋಜನೆ ವಿಫಲವಾಯಿತು.

ಇವತ್ತಿಗೂ ವಿಶ್ವ ಬ್ಯಾಂಕ್ ಅಣೆಕಟ್ಟುಗಳ ಮೂಲಕ ನಿರ್ಮಾಣವಾಗಿರುವ ಜಲಾಶಯಗಳಲ್ಲಿ ಮೀನು ಮತ್ತು ಸೀಗಡಿ ಸಾಕಾಣಿಕೆ ಒಂದು ಲಾಭದಾಯಕ ಉದ್ಯಮ ಎಂದು ನಂಬಿದೆ. ಅದರಂತೆ ಹಲವು ದೇಶಗಳಿಗೆ ಈ ಉದ್ಯಮಕ್ಕಾಗಿ ನೆರವು ನೀಡಿದೆ. ಚೀನಾ, ಇಂಡೊನೇಷಿಯಾ, ಜಾವ ದೇಶಗಳಲ್ಲಿ ಇದು ಯಶಸ್ವಿಯಾಗಿದೆ. ಆದರೆ ಅಧುನಿಕ ಹಾಗೂ ವೇಗವಾಗಿ ಬೆಳೆಯುವ ಮೀನಿನ ಸಂತತಿಯನ್ನು ಪರಿಚಯಿಸಿದ ಫಲವಾಗಿ ದೇಶೀಯ ತಳಿಗಳು ನಾಶವಾಗುತ್ತಿವೆ. ಈ ಸಂತತಿ ರೋಗವನ್ನು ತಾಳಿಕೊಳ್ಳು ಶಕ್ತಿ ಪಡೆದಿದ್ದವು.

ಇದನ್ನು ಅಭಿವೃದ್ಧಿಯ ವ್ಯಂಗ್ಯ ಎನ್ನಬೇಕೊ ಅಥವಾ ಶಾಪವೆನ್ನಬೇಕೊ ತಿಳಿಯುತ್ತಿಲ್ಲ. ಬಹುಉಪಯೋಗಿ ಅಣೆಕಟ್ಟು ಯೋಜನೆಗಳಲ್ಲಿ ಮನರಂಜನೆ ಒಂದು ಭಾಗವಾಗಿದ್ದು ಇದೀಗ ಅದು ಲಾಭದಾಯಕ ಉದ್ಯಮವಾಗಿ ಪರಿವರ್ತನೆಗೊಡಿದೆ.

ಅಮೇರಿಕಾದ ಹೂವರ್ ಅಣೆಕಟ್ಟಿನ ಜಲಾಶಯ ಇದೀಗ ಜಲಕ್ರೀಡೆ, ಸಾಹಸ ಕ್ರೀಡೆ, ದೋಣಿ ವಿಹಾರಕ್ಕೆ, ಮತ್ತು ಹವ್ಯಾಸಿ ಮೀನುಗಾರರಿಗೆ ಆಕರ್ಷಣೀಯ ಕೇಂದ್ರವಾಗಿದೆ. ಇದರ ಸಮೀಪದಲ್ಲೇ ಇರುವ ಜಗತ್ ಪ್ರಸಿದ್ಧ ಮೋಜಿನ ನಗರ ಹಾಗೂ ಜೂಜು ಮತ್ತು ವಿಲಾಸಕ್ಕೆ ಹೆಸರಾದ ಲಾಸ್ ವೆಗಾಸ್ ನಗರವಿದ್ದು ವಾರಾಂತ್ಯದಲ್ಲಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತಿದ್ದಾರೆ. ಇದೇ ನದಿಗೆ ಕಟ್ಟಲಾಗಿರುವ ಪೊವೆಲ್ ಮತ್ತು ಮೀಡ್ ಜಲಾಶಯಗಳು ಕೂಡ ಜಲಕ್ರೀಡೆಗಳಿಗೆ ಹೆಸರುವಾಸಿಯಾಗಿವೆ. ಈ ಪ್ರದೇಶಗಳ ಸುತ್ತ ಮುತ್ತ ಐಷಾರಾಮಿ ರೆಸಾರ್ಟ್‌ಗಳು, ಹೊಟೇಲ್‌ಗಳು, ಶ್ರೀಮಂತರ ವಿಶ್ರಾಂತಿಧಾಮಗಳು, ತಲೆಯೆತ್ತಿ ನಿಂತಿವೆ. ಈಗಾಗಲೇ ಜಲಾಶಯ ನಿರ್ಮಾಣದಿಂದ ಸಂತ್ರಸ್ತರಾಗಿದ್ದ ಮೂಲನಿವಾಸಿಗಳು ಮತ್ತೊಮ್ಮೆ ಉಳ್ಳವರ ವಿಲಾಸದ ಬದುಕಿಗೆ ತಾವು ವಾಸಿಸುತಿದ್ದ ಜಾಗಗಳನ್ನು ಬಿಟ್ಟುಕೊಟ್ಟು ಕಾಡು ಸೇರುತಿದ್ದಾರೆ.

ನಾವು ರೂಢಿಸಿಕೊಂಡ ಆಧುನಿಕತೆ ಎಲ್ಲರನ್ನೂ ಭ್ರಮೆಯ ಜಗತ್ತಿಗೆ ದೂಡಿದೆ. ಮಲೇಷಿಯಾದ ಜಲಾಶಯದ ಬಳಿ ಪ್ರಾರಂಭವಾದ ರೆಸಾರ್ಟ್ ಅನ್ನು ಉದ್ಘಾಟಿಸಿ ಮಾತನಾಡಿದ್ದ ಅಂದಿನ ಪ್ರಧಾನಿ ಡಾ. ಮಹತೀರ್ ಇದೊಂದು ಪರಿಸರ ಸ್ನೇಹಿ ಯೋಜನೆ ಎಂದು ಕರೆದಿದ್ದರು. ಆದರೆ ಇಂತಹ ಯೋಜನೆಗಳಿಗೆ ತಮ್ಮ ಆಸ್ತಿ ಹಾಗೂ ಬದುಕನ್ನು ಬಲಿ ಕೊಟ್ಟು ಮೂರಾ ಬಟ್ಟೆಯಾದ 10 ಸಾವಿರ ಸ್ಥಳೀಯ ನಿವಾಸಿಗಳ ಧಾರುಣ ಬದುಕು ಅವರ ನೆನಪಿಗೆ ಬಾರಲೇಇಲ್ಲ.

ಕೊಲಂಬಿಯಾದಲ್ಲಿ ಜಲಕ್ರೀಡೆಗಾಗಿ ನಿರ್ಮಾಣವಾದ ಕೊಲಿಮಾ ಐ ಡ್ಯಾಮ್ ಎಂಬ ಜಲಾಶಯಕ್ಕಾಗಿ 8 ಸಾವಿರ ಎಂಬೇರಾ ಮತ್ತು ಚಾಮಿ ಬುಡಕಟ್ಟು ನಿವಾಸಿಗಳು ಅತಂತ್ರರಾದರು.

ಇದೀಗ ಭಾರತದಲ್ಲಿ ಕೂಡ ಈ ಸಂಸ್ಕೃತಿ ಹರಡುತಿದ್ದು ಪಶ್ಚಿಮ ಘಟ್ಟದ ಕಾಳಿನದಿ, ಶರಾವತಿಯ ಹಿನ್ನೀರಿನ ಪ್ರದೇಶಗಳಲ್ಲಿ ಹುಟ್ಟಿಕೊಂಡಿರುವ ರೆಸಾರ್ಟ್‌ಗಳಲ್ಲಿ ಮೋಜು ಮತ್ತು ಉನ್ಮಾದದ ಪ್ರಪಂಚವೇ ಈಕೊ ಟೂರಿಸಂ ಹೆಸರಿನಲ್ಲಿ ತೆರೆದುಕೊಂಡಿದೆ.

(ಮುಂದುವರಿಯುವುದು)

Three Gorges Dam

ಜೀವನದಿಗಳ ಸಾವಿನ ಕಥನ – 16

-ಡಾ. ಎನ್. ಜಗದೀಶ್ ಕೊಪ್ಪ

ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಗಳ ಪ್ರವಾಹ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟಗಳು ಎದುರುಸುತ್ತಿರುವ ಅತಿ ದೊಡ್ಡ ನೈಸರ್ಗಿಕ ವಿಕೋಪ. ಇದಕ್ಕಾಗಿ ಪ್ರತಿ ವರ್ಷ ಕೊಟ್ಯಾಂತರ ರೂಪಾಯಿ ವ್ಯಯವಾಗುತ್ತಿದೆ.

ಭಾರತದ ಪೂರ್ವ ಭಾಗದ ಅಸ್ಸಾಂ, ಮೇಘಾಲಯ, ನಾಗಲ್ಯಾಂಡ್, ತ್ರಿಪುರ, ಮಿಜೋರಾಂ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬ್ರಹ್ಮಪುತ್ರ ಮತ್ತು ಗಂಗಾ ನದಿಗಳ ಪ್ರವಾಹದಿಂದ ಪ್ರತಿ ವರ್ಷ ಹಲವಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗುತ್ತಿದೆ.

ಇಂತಹ ದಯನೀಯ ಸ್ಥಿತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಜಗತ್ತಿನ ಎಲ್ಲೆಡೆ ನಿಯಮಿತವಾಗಿ ನಡೆಯುತ್ತಿರವ ನೈಸರ್ಗಿಕ ದುರಂತವಿದು.

ಅಮೇರಿಕಾ ದೇಶವೊಂದೇ ತನ್ನ ಆರ್ಮಿ ಕೋರ್‍ಸ್ ಇಂಜಿನಿಯರ್ಸ್ ಸಂಸ್ಥೆ ಮೂಲಕ ತನ್ನ ದೇಶದ 500 ಅಣೆಕಟ್ಟುಗಳನ್ನು ಪ್ರವಾಹದಿಂದ ಸಂರಕ್ಷಿಸಲು ಪ್ರತಿ ವರ್ಷ 25 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡುತ್ತಿದೆ. 1937 ರಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ವಿಶೇಷ ಮಸೂದೆಯನ್ನು ಜಾರಿಗೆ ತಂದ ಅಮೇರಿಕಾ ಸರ್ಕಾರ ಪ್ರತಿ ವರ್ಷ ತನ್ನ ವಾರ್ಷಿಕ ಬಜೆಟ್ಟಿನ್ನಲ್ಲಿ ಹಣವನ್ನು ಮೀಸಲಾಗಿಡುತ್ತಿದೆ. ಈ ವೆಚ್ಚ ಇತ್ತೀಚೆಗಿನ ವರ್ಷಗಳಲ್ಲಿ ದ್ವಿಗುಣಗೊಂಡಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಭಾರತ ಸರ್ಕಾರ ಕೂಡ 1953 ರಿಂದ 1980 ರವರೆಗೆ 40 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು, ಆನಂತರ ಕಳೆದ 25 ವರ್ಷಗಳಲ್ಲಿ ಈ ವೆಚ್ಚ ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ನದಿಗಳ ಪ್ರವಾಹಕ್ಕೆ ಮಳೆಯಷ್ಟೇ ಕಾರಣ ಎಂದು ನಾವು ನಂಬಿದ್ದೇವೆ, ಅದೇ ರೀತಿ ಸರ್ಕಾರಗಳೂ ಕೂಡ ನಮ್ಮನ್ನು ನಂಬಿಸಿಕೊಂಡು ಬಂದಿವೆ. ಜಾಗತಿಕ ತಾಪಮಾನದಿಂದ ಏರುತ್ತಿರುವ ಉಷ್ಣತೆ, ಇದರಿಂದಾಗಿ ಹಿಮಗೆಡ್ಡೆಗಳು ಕರಗುತ್ತಿರುವುದು, ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಹೀರುತಿದ್ದ ಹಳ್ಳ ಕೊಳ್ಳಗಳ ನಾಶ, ನಗರೀಕರಣದಿಂದ ಕಣ್ಮರೆಯಾಗುತ್ತಿರುವ ಅರಣ್ಯ, ಕೆರೆಗಳು ಇಂತಹ ಅಂಶಗಳು ನಮ್ಮ ಗಣನೆಗೆ ಬರುವುದೇ ಇಲ್ಲ. ಜೊತೆಗೆ, ಮಳೆಗಾಲದಲ್ಲಿ ನದಿಯ ಇಕ್ಕೆಲಗಳು ನೀರಿನಲ್ಲಿ ಕೊಚ್ಚಿ ಹೋಗುವ ಪರಿಣಾಮ ನದಿಗಳಲ್ಲಿ ಹೂಳು ಶೇಖರವಾಗತ್ತಾ ಹೋಗಿ ನದಿಯ ಆಳ ಕಡಿಮೆಯಾದಂತೆ ಪ್ರವಾಹದ ನೀರು ಸುತ್ತ ಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ.

ಅಣೆಕಟ್ಟುಗಳ ಮೂಲಕ ಮತ್ತು ನದಿಯ ದಿಬ್ಬಗಳನ್ನು ಎತ್ತರಿಸುವುದರ ಮೂಲಕ ಪ್ರವಾಹ ನಿಯಂತ್ರಣಕ್ಕೆ ಪ್ರಯತ್ನ ನಡೆದಿದ್ದರೂ ಕೂಡ ಕೆಲೆವೆಡೆ ಈ ಕಾರ್ಯ ಅವೈಜ್ಙಾನಿಕವಾಗಿದ್ದು ನದಿ ತೀರದ ಜನವಸತಿ ಪ್ರದೇಶದ ನಾಗರೀಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಜಗತ್ತಿನೆಲ್ಲೆಡೆ ನಿರ್ಮಿಸಲಾಗಿರುವ ಅಣೆಕಟ್ಟುಗಳು ಕುಡಿಯುವ ನೀರಿಗಾಗಿ ಇಲ್ಲವೇ ನೀರಾವರಿ ಯೋಜನೆಗಾಗಿ ನಿರ್ಮಿಸಿರುವುದರಿಂದ, ಪ್ರವಾಹ ನಿಯಂತ್ರಣಕ್ಕಾಗಿ ನಿರ್ಮಿಸಿದ ಅಣೆಕಟ್ಟುಗಳು ಬಹುತೇಕ ಕಡಿಮೆ ಎಂದು ಹೇಳಬಹುದು. ಕುಡಿಯುವ ನೀರು ಇಲ್ಲವೆ, ನೀರಾವರಿ ಅಥವಾ ಜಲವಿದ್ಯುತ್‌ಗಾಗಿ ಜಲಾಶಯಗಳಲ್ಲಿ ಯಾವಾಗಲೂ ನೀರನ್ನು ಶೇಖರಿಸಿ ಇಟ್ಟುಕೊಳ್ಳುವುದರಿಂದ ಪ್ರವಾಹದಲ್ಲಿ ಹರಿದು ಬಂದ ನೀರನ್ನು ಹಾಗೆಯೇ ಹೊರಬಿಡಲಾಗುತ್ತದೆ. ಇದರ ಪರಿಣಾಮವಾಗಿ ನದಿ ಕೆಳ ಪಾತ್ರದ ಜನಕ್ಕೆ ನದಿಗಳ ಪ್ರವಾಹವೆಂಬುದು ಶಾಪವಾಗಿದೆ.

ಒರಿಸ್ಸಾದ ಮಹಾನದಿಯ ಪ್ರವಾಹ ನಿಯಂತ್ರಣಕ್ಕಾಗಿ ಭಾರತದಲ್ಲಿ ಪ್ರಥಮವಾಗಿ ಹಿರಾಕುಡ್ ಅಣೆಕಟ್ಟನ್ನು ನಿರ್ಮಿಸಲಾಯಿತು ಆದರೆ, 1980 ರ ಪ್ರವಾಹವನ್ನು ನಿಯಂತ್ರಿಸಲಾಗದೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಇಂತಹದ್ದೇ ಇನ್ನೊಂದು ದುರಂತ 1978 ರಲ್ಲಿ ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟಿನಲ್ಲೂ ಸಂಭವಿಸಿ 65 ಸಾವಿರ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾದರು.

1986 ರಲ್ಲಿ ಅಮೇರಿಕಾದ ಕ್ಯಾಲಿಪೋರ್ನಿಯದ ರಾಜಧಾನಿ ಸಾಕ್ರೊಮೆಂಟೊ ನಗರದ 5 ಲಕ್ಷ ಜನತೆ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು. ಮಳೆಯಿಂದಾಗಿ ಅಲ್ಲಿನ ಪಾಲ್ ಸೋಮ್ ಜಲಾಶಯ ಇಂಜಿನೀಯರಗಳ ನಿರೀಕ್ಷೆಯನ್ನು ಮೀರಿ ವಾರಕ್ಕೆ ಬದಲಾಗಿ ಕೇವಲ 36 ಗಂಟೆಯ ಅವಧಿಯಲ್ಲಿ ತುಂಬಿ ಹೋಗಿತ್ತು.

ಚೀನಾ ದೇಶದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ರೂಪುಗೊಂಡ ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾದ ತ್ರೀ ಗಾರ್ಜಸ್ ಜಲಾಶಯದ ಸ್ಥಿತಿ ಕೂಡ ಇವುಗಳಿಗಿಂತ ಬೇರೆಯಾಗಿಲ್ಲ. ಪ್ರವಾಹದ ಸಂದರ್ಭದಲ್ಲಿ ಮತ್ತು ಜಲಾಶಯದ ಹಿನ್ನೀರಿನಿಂದಾಗಿ ಸುಮಾರು 10 ಲಕ್ಷ ಮಂದಿ ನಿರ್ವಸತಿಗರಾಗಿದ್ದಾರೆ. ಯಾಂಗ್ಟೇಜ್ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟಿನ ಕೆಳಭಾಗದ 5 ಲಕ್ಷ ಮಂದಿ ರೈತರು ಪ್ರವಾಹದ ಸಮಯದಲ್ಲಿ ತಮ್ಮ ಆಸ್ತಿ, ಮನೆಗಳನ್ನು ಕಳೆದುಕೊಂಡ ಪರಿಣಾಮ ಅವರ ಬದುಕು ಮೂರಾಬಟ್ಟೆಯಾಗಿದೆ.

ನಮ್ಮ ಅಭಿವೃದ್ಧಿಯ ವಾಖ್ಯಾನಗಳನ್ನು, ಚಿಂತನೆಗಳನ್ನು ಮರುಚಿಂತನೆಗೆ ಒಳಪಡಿಸಬೇಕಾದ ಅವಶ್ಯಕತೆ ಇದ್ದು, ನಮ್ಮ ನದಿಗಳ ಇತಿಹಾಸದ ಪುಟಗಳನ್ನು ತೆರೆದು ನೋಡಬೇಕಾಗಿದೆ. ನದಿಯ ಮೊದಲ ಪ್ರವಾಹದ ಮೂಲ ಹಿಡಿದು ಸಾಗಿದರೆ, ಸ್ವಚ್ಛಂದ ನದಿಯ ಹರಿಯುವಿಕೆಗೆ ನಮ್ಮ ಅಭಿವೃದ್ಧಿಯ ಕೆಲಸಗಳು ಎಲ್ಲೆಲ್ಲಿ ಅಡ್ಡಿಯಾಗಿವೆ ಎಂಬುದು ನಮ್ಮ ಅರಿವಿಗೆ ಬರುವ ಸಾಧ್ಯತೆಗಳಿವೆ. ಅದು ಅರಣ್ಯ ನಾಶವಿರಬಹುದು, ಕೆರೆ, ಹಳ್ಳ-ಕೊಳ್ಳಗಳ ನಾಶವಿರಬಹುದು ಅಥವಾ ನದಿಯಲ್ಲಿ ತುಂಬಿಕೊಂಡಿರುವ ಹೂಳಿನ ಪ್ರಮಾಣವಿರಬಹುದು, ಇವುಗಳನ್ನು ನೋಡುವ, ತಿಳಿಯುವ ಮನಸ್ಸುಗಳು ಬೇಕಷ್ಟೆ.

’ಕುಡಿಯುವ ನೀರಿಗಾಗಿ ಅಣೆಕಟ್ಟುಗಳ” ಎಂಬ ಯೋಜನೆಗಳು ಎಂಬುದು ಜಾಗತಿಕ ಮಟ್ಟದ ಅತಿ ದೊಡ್ಡ ಪ್ರಹಸನವೆಂದರೆ ತಪ್ಪಾಗಲಾರದು. ಚೀನಾದಲ್ಲಿ ವಿಶೇಷವಾಗಿ ಜನಪದರಲ್ಲಿ ಒಂದು ಗಾದೆ ಪ್ರಚಲಿತದಲ್ಲಿದೆ, ’ನೀರು ಕುಡಿಯುವಾಗ ಋತುಮಾನಗಳನ್ನು ನೆನಪಿಡು,’ಎಂದು . ಪ್ರಕೃತಿಯ ಕೊಡುಗೆಯಾದ ನೀರಿನ ಬಗ್ಗೆ ಇರುವ ಕಾಳಜಿ ಇದರಲ್ಲಿ ಎದ್ದು ಕಾಣುತ್ತದೆ. ನೀರು ಮಾರಾಟದ ಸರಕಾಗಿರುವಾಗ ಇಂತಹ ಆಲೋಚನೆಗಳು ಈಗ ಅಪ್ರಸ್ತುತವಾಗಿವೆ.

ದಶಕ ಹಿಂದೆ ಜಗತ್ತಿನಲ್ಲಿ ಇದ್ದ ದೊಡ್ಡ ಅಣೆಕಟ್ಟುಗಳು ಅಂದರೆ, 100 ಅಡಿ ಎತ್ತರದ 3602 ಅಣೆಕಟ್ಟುಗಳಲ್ಲಿ ಅಮೇರಿಕವನ್ನು ಹೊರತು ಪಡಿಸಿದರೆ, ಉಳಿದ ಅಣೆಕಟ್ಟುಗಳು ಕುಡಿಯುವ ನೀರಿಗಿಂತ ನೀರಾವರಿ ಯೋಜನೆಗಾಗಿ, ಮತ್ತು ಜಲವಿದ್ಯುತ್‌ಗಾಗಿ ರೂಪುಗೊಂಡಂತಹವು. ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ಭಾರತ, ಚೀನಾ, ಜಪಾನ್, ಅಮೇರಿಕ ದೇಶಗಳಲ್ಲಿ ಅಣೆಕಟ್ಟುಗಳು ಯಾವ ಉದ್ದೇಶಕ್ಕೆ ಬಳಕೆಯಾಗಿವೆ ಎಂಬ ವಿವರ ಈ ಕೆಳಗಿನಂತಿದೆ:

  1. ಭಾರತದಲ್ಲಿ 20 ನೇ ಶತಮಾನದ ಅಂತ್ಯಕ್ಕೆ ಇದ್ದ 324 ದೊಡ್ಡ ಅಣೆಕಟ್ಟುಗಳ ಪೈಕಿ ನೀರಾವರಿಗೆ 44, ಜಲವಿದ್ಯುತ್ಗಾಗಿ 22, ಪ್ರವಾಹ ನಿಯಂತ್ರಣಕ್ಕೆ 1, ಕುಡಿಯುವ ನೀರಿಗಾಗಿ 4 ಅಣೆಕಟ್ಟುಗಳಿದ್ದವು.
  2. ಚೀನಾದಲ್ಲಿರುವ 1336 ಅಣೆಕಟ್ಟುಗಳಲ್ಲಿ ನೀರಾವರಿಗೆ 84, ವಿದ್ಯುತ್ ಉತ್ಪಾದನೆಗೆ 44, ಪ್ರವಾಹ ನಿಯಂತ್ರಣಕ್ಕೆ 29, ಹಾಗೂ ಕುಡಿಯುವ ನೀರಿಗಾಗಿ 1 ಅಣೆಕಟ್ಟು ಬಳಕೆಯಾಗಿದೆ.
  3. ಜಪಾನ್ ದೇಶದಲ್ಲಿ ಇರುವ 800 ಅಣೆಕಟ್ಟುಗಳಲ್ಲಿ 43 ನೀರಾವರಿಗೆ, 45 ವಿದ್ಯುತ್ ಉತ್ಪಾದನೆಗೆ, 43 ಪ್ರವಾಹ ನಿಯಂತ್ರಣಕ್ಕೆ, ಮತ್ತು 25 ಕುಡಿಯುವ ನೀರಿಗೆ ಬಳಕೆ ಮಾಡಲಾಗಿದೆ.
  4. ಅಮೇರಿಕಾದಲ್ಲಿರುವ 1146 ಅಣೆಕಟ್ಟುಗಳಲ್ಲಿ ನೀರಾವರಿಗೆ 29, ವಿದ್ಯುತ್ ಉತ್ಪಾದನೆಗೆ 31, ಕುಡಿಯುವ ನೀರಿಗಾಗಿ 44 ಮತ್ತು ಮನರಂಜನೆ ಹಾಗೂ ಜಲಕ್ರೀಡೆಗಾಗಿ 4 ಅಣೆಕಟ್ಟುಗಳು ಬಳಕೆಯಾಗುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ 230 ಕೋಟಿಗೂ ಅಧಿಕ ಮಂದಿ ಕುಡಿಯುವ ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ. ಇವರಲ್ಲಿ 170 ಕೋಟಿ ಜನ ಗ್ರಾಮಾಂತರ ಪ್ರದೇಶದ ವಾಸಿಗಳಾಗಿದ್ದಾರೆ. ಇವರುಗಳಿಗೆ ಕುಡಿಯುವ ನೀರು ಕೊಡಲು ಜಗತ್ತಿನಾದ್ಯಂತ ಸರ್ಕಾರಗಳು ಇಂದಿಗೂ ಹೆಣಗಾಡುತ್ತಿವೆ.

ಅಸಹಜವಾಗಿ ಬೆಳೆಯುತ್ತಿರುವ ನಗರಗಳಿಂದಾಗಿ ಕುಡಿಯುವ ನೀರಿನ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಕೊಲ್ಕತ್ತಾ ನಗರದ ಜನಕ್ಕೆ ನೀರು ಒದಗಿಸಲು ಗಂಗಾ ನದಿಯ ನೀರನ್ನು ಫರಕ್ಕಾ ಜಲಾಶಯಕ್ಕೆ ತಿರುಗಿಸಿದ ಫಲವಾಗಿ ನದಿಯ ಕೆಳ ಪಾತ್ರದ ಬಂಗ್ಲಾದೇಶದ 80 ಲಕ್ಷ ಜನತೆ ಕುಡಿಯುವ ನೀರಿನಿಂದ ವಂಚಿತರಾದರು.

ಅಣೆಕಟ್ಟು ನಿರ್ಮಾಣವಾದ ನಂತರ ಕೆಳಗಿನ ಪ್ರದೇಶದಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಅಂತರ್ಜಲ ಮಟ್ಟ ಕೂಡ ಕುಸಿಯುತ್ತದೆ ಇದರಿಂದಾಗಿ ಎಲ್ಲರೂ ನದಿಯ ನೀರನ್ನೇ ಆಶ್ರಯಿಸಬೇಕು. ನದಿ ನೀರನ್ನು ಸಂಸ್ಕರಿಸದೆ ಬಳಸಲಾಗದು.  ನೀರನ್ನು ನೇರವಾಗಿ ಜನತೆಗೆ ಸರಬರಾಜು ಮಾಡಿದ ಪರಿಣಾಮ ಬ್ರೆಜಿಲ್ ದೇಶದ ಸಾವೊ ಪ್ರಾನ್ಸಿಸ್ಕೊ ಜಲಾಶಯದ ಸಮೀಪದ ಪಟ್ಟಣಗಳಲ್ಲಿ ಮತ್ತು ಈಜಿಪ್ತ್ ನ ಅಸ್ವಾನ್ ಜಲಾಶಯದ ನೀರು ಕುಡಿದ ಸಾವಿರಾರು ಮಂದಿ ವಾಂತಿ- ಬೇಧಿಯಿಂದ ಮೃತಪಟ್ಟ ದಾಖಲೆಗಳು ಇತಿಹಾಸದಲ್ಲಿ ದಾಖಲಾಗಿವೆ.

(ಮುಂದುವರಿಯುವುದು)

Three Gorges Dam

ಜೀವನದಿಗಳ ಸಾವಿನ ಕಥನ – 15

-ಡಾ.ಎನ್.ಜಗದೀಶ್ ಕೊಪ್ಪ

ಲಾಭ ಗಳಿಕೆಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು, ತೃತೀಯ ಜಗತ್ತಿನ ರಾಷ್ಟಗಳ ಮೂಗಿಗೆ ತುಪ್ಪ ಸವರತೊಡಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೀವ ನದಿಗಳ ನೈಜ ಹರಿವಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದನೆ ನೆಪದಲ್ಲಿ ಈ ಕಂಪನಿಗಳು ಸರಕಾರಗಳನ್ನು ದಿಕ್ಕು ತಪ್ಪಿಸಿ ಸಾಲದ ಸುಳಿಗೆ ಸಿಲುಕಿಸಿ ಕಾಲು ಕೀಳುತ್ತಿವೆ. ಇದರ ಅಂತಿಮ ಪರಿಣಾಮ ಜೀವ ನದಿಗಳ ಮಾರಣ ಹೋಮ.

ಎಷ್ಟೋ ಬಾರಿ ಪ್ರವಾಹ ನಿಯಂತ್ರಣಕ್ಕೆ ನಿರ್ಮಿಸಿದ ಅಣೆಕಟ್ಟುಗಳಲ್ಲಿ ಜಲವಿದ್ಯುತ್ ಉತ್ಪಾದನೆಗೆ ಪ್ರಯತ್ನಿಸಿ ಸೋತ ರಾಷ್ಟ್ರಗಳ ಉದಾಹರಣೆ ಜಗತ್ತಿನ ಎಲ್ಲೆಡೆ ದೊರೆಯುತ್ತವೆ. ಇದಕ್ಕೆ ಚೀನಾ ರಾಷ್ಟ್ರದ ಯಾಂಗ್ಟೇಜ್ ನದಿಗೆ ಕಟ್ಟಿದ ತ್ರೀ ಗಾರ್ಜಸ್ಎಂಬ ಅಣೆಕಟ್ಟು ಸಾಕ್ಷಿಯಾಗಿದೆ. ಚೀನಾ ಸರಕಾರ ಮೊದಲು ಪ್ರವಾಹ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಿ ನಂತರ ಇಡೀ ಯೋಜನೆಯನ್ನು

Three Gorges Dam

Three Gorges Dam

ಜಲ ವಿದ್ಯುತ್‌ಗಾಗಿ ಬದಲಿಸಿತು. ಈ ಕಾರಣಕ್ಕಗಿಯೇ ವಿಶ್ವ ಬಾಂಕ್ ತನ್ನ ವರದಿಯಲ್ಲಿ ಆಯಾ ರಾಷ್ಟ್ರಗಳ ಅಥವಾ ಸರಕಾರಗಳ ಮನಸ್ಥಿತಿಗೆ ತಕ್ಕಂತೆ ಅಣೆಕಟ್ಟುಗಳು ಅಥವಾ ಜಲಾಶಗಳು ಬದಲಾಗುತ್ತಿವೆ ಎಂದು ತಿಳಿಸಿದೆ.

ವೆನಿಜುವೇಲ ಗುರಿ ಎಂಬ ನದಿಗೆ ಕಟ್ಟಲಾದ ಇಟ್ಯವು ಅಣೆಕಟ್ಟು, ಸೈಬೀರಿಯಾದ ಗ್ರಾಂಡ್ ಕೌಲಿ ಅಣೆಕಟ್ಟು ಇವುಗಳಲ್ಲಿ ಕ್ರಮವಾಗಿ 12.600 ಮತ್ತು 10.300 ಮೆಗಾವ್ಯಾಟ್ ವಿದ್ಯುತ್ ಗುರಿ ಇರಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಸಾವಿರಾರು ಕೋಟಿ ಡಾಲರ್ ಹಣ ವಿನಿಯೋಗವಾದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗಲಿಲ್ಲ. ಇದರಲ್ಲಿ ಲಾಭವಾದದ್ದು ಬಹು ರಾಷ್ಟ್ರೀಯ ಕಂಪನಿಗಳಿಗೆ ಮತ್ತು ವಿಶ್ವ ಬ್ಯಾಂಕಿಗೆ ಮಾತ್ರ.

20 ನೇ ಶತಮಾನದ ಅಂತ್ಯದ ವೇಳೆಗೆ ಜಾಗತಿಕವಾಗಿ ಶೇ.22 ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದ ಉತ್ಪಾದಿಸಲಾಗುತ್ತಿತ್ತು. ಇದರಲ್ಲಿ ಶೇ,18 ಏಷ್ಯಾ ಖಂಡದಲ್ಲಿ, ಶೆ.60 ರಷ್ಟು ಮಧ್ಯ ಅಮೇರಿಕಾದಲ್ಲಿ ಉತ್ಪಾದಿಸಲಾಗುತ್ತಿತ್ತು. ಏಷ್ಯಾದ ನೇಪಾಳ, ಶ್ರೀಲಂಕಾ, ಸೇರಿದಂತೆ ಜಗತ್ತಿನ ಇತರೆಡೆಯ ನಾರ್ವೆ, ಅಲ್ಬೇನಿಯಾ, ಬ್ರೆಜಿಲ್, ಗ್ವಾಟೆಮಾಲ, ಘಾನ ಮುಂತಾದ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.90 ರಷ್ಟು ಜಲಮೂಲಗಳಿಂದ ಉತ್ಪಾದನೆಯಾಗುತ್ತಿದೆ.

1980ರ ದಶಕದಿಂದೀಚೆಗೆ ಜಾಗತಿಕವಾಗಿ ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾ ಪ್ರದೇಶಗಳಲ್ಲಿ ಬೇಡಿಕೆ ದ್ವಿಗುಣಗೊಂಡಿದೆ. ಅತ್ಯಂತ ಕಡಿಮೆ ಉತ್ಪಾದನಾ ವೆಚ್ಚವಿರುವ ಕಾರಣಕ್ಕಾಗಿ ಅಮೆರಿಕಾ, ಕೆನಡಾ ರಾಷ್ಟ್ರಗಳು ಸಹ ಶೇ.70ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದಲೇ ಉತ್ಪಾದಿಸುತ್ತಿವೆ.

ನದಿಗಳಿಗೆ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಇರುವ ಬಹುದೊಡ್ಡ ತೊಡಕೆಂದರೆ, ನದಿಯ ನೀರಿನ ಪ್ರಮಾಣ ಹಾಗೂ ವಿದ್ಯುತ್ ಬೇಡಿಕೆ ಕುರಿತಂತೆ ತಪ್ಪು ಅಂದಾಜು ವರದಿ ಸಿದ್ಧಗೊಳ್ಳುತ್ತಿದ್ದು, ಇದು ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ.

ಯಾವ ಯಾವ ಋತುಮಾನಗಳಲ್ಲಿ ಎಷ್ಟು ಪ್ರಮಾಣದ ನೀರು ನದಿಗಳಲ್ಲಿ ಹರಿಯುತ್ತದೆ ಎಂಬ ನಿಖರ ಮಾಹಿತಿಯನ್ನು ಯಾವ ಅಣೆಕಟ್ಟು ತಜ್ಞರೂ ಸುಸಂಬದ್ಧವಾಗಿ ಬಳಸಿಕೊಂಡಿಲ್ಲ. ಜೊತೆಗೆ ವಿದ್ಯುತ್‌ನ ಬೇಡಿಕೆಯ ಪ್ರಮಾಣವೆಷ್ಟು ಎಂಬುದನ್ನು ಕೂಡ ಯಾವ ರಾಷ್ಟ್ರಗಳು, ಸರಕಾರಗಳೂ ನಿಖರವಾಗಿ ತಿಳಿದುಕೊಂಡಿಲ್ಲ.

ಇದಕ್ಕೆ ಉದಾಹರಣೆಯೆಂದರೆ ಅರ್ಜೆಂಟೈನಾ ಸರಕಾರದ ಸ್ಥಿತಿ. ತನ್ನ ದೇಶದ ವಿದ್ಯುತ್ ಬೇಡಿಕೆ ಮುಂದಿನ 7 ವರ್ಷಗಳ ನಂತರ ಶೇ.7 ರಿಂದ 8ರವರೆಗೆ ಇರುತ್ತದೆ ಎಂದು ಅಂದಾಜಿಸಿತ್ತು. 1994ರಲ್ಲಿ 3,100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯಾಕ್ರಿಯೇಟಾ ಎಂಬ ಅಣೆಕಟ್ಟನ್ನು ನಿರ್ಮಿಸಿತು. ಇದಕ್ಕೆ ತಗುಲಿದ ವೆಚ್ಚ 11.5 ಶತಕೋಟಿ ಡಾಲರ್. ಅಣೆಕಟ್ಟು ನಿರ್ಮಾಣವಾದ ನಂತರ ಅಲ್ಲಿನ ವಿದ್ಯುತ್ ಬೇಡಿಕೆ ಶೇ. 2ರಷ್ಟು ಮಾತ್ರ.ಹೆಚ್ಚಾಗಿತ್ತು. ತಾನು ಸಾಲವಾಗಿ ಪಡೆದ ಹಣಕ್ಕೆ ನೀಡುತ್ತಿರುವ ಬಡ್ಡಿಯ ಪ್ರಮಾಣವನ್ನು ಲೆಕ್ಕ ಹಾಕಿದಾಗ, ವಿದ್ಯುತ್ ಉತ್ಪಾದನಾ ವೆಚ್ಚ ಶೇ. 30ರಷ್ಟು ದುಬಾರಿಯಾಯಿತು. ಇಂತಹದ್ದೇ ಸ್ಥಿತಿ ಜಗತ್ತಿನಾದ್ಯಂತ 12 ಅತಿ ದೊಡ್ಡ ಅಣೆಕಟ್ಟುಗಳೂ ಸೇರಿದಂತೆ 380 ಅಣೆಕಟ್ಟುಗಳದ್ದಾಗಿದೆ.

ಕೊಲಂಬಿಯಾ ರಾಷ್ಟ್ರ ಹಾಕಿಕೊಂಡ ಅನೇಕ ಜಲವಿದ್ಯುತ್ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೆ, ಆ ರಾಷ್ಟ್ರವನ್ನು ಆರ್ಥಿಕ ದುಸ್ಥಿತಿಗೆ ದೂಡಿವೆ. ಅಲ್ಲಿನ ಸರಕಾರದ ವಾರ್ಷಿಕ ಆಯ-ವ್ಯಯದಲ್ಲಿನ ಶೇ.60ರಷ್ಟು ಹಣ ಅಣೆಕಟ್ಟು ಯೋಜನೆಗಳಿಗಾಗಿ ತಂದ ಸಾಲದ ಮರು ಪಾವತಿ ಹಾಗೂ ಅದರ ಬಡ್ಡಿಗಾಗಿ ವಿನಿಯೋಗವಾಗುತ್ತಿದೆ.

ಮಧ್ಯ ಅಮೆರಿಕಾದ ಗ್ವಾಟೆಮಾಲದ ಚಿಕ್ಷೊಯ್ ಅಣೆಕಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗದೆ, ಯೋಜನೆ ವಿಪಲಗೊಂಡಿದ್ದರೆ, ಹಂಡೊರಾಸ್ ದೇಶದಲ್ಲಿ ಮಳೆಯೇ ಇಲ್ಲದೆ ನಿರಂತರ ಬರಗಾಲದಿಂದ ಎಲ್ಲಾ ನದಿಗಳು ಬತ್ತಿಹೋದ ಕಾರಣ ವಿದ್ಯುತ್ ಉತ್ಪಾದನಾ ಪ್ರಮಾಣ ಶೇ.30ಕ್ಕೆ ಕುಸಿದಿದೆ.

ಈ ಕೆಳಗಿನ ರಾಷ್ಟ್ರಗಳ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಗಮನಿಸಿದರೆ, ಇವರು ಅಣೆಕಟ್ಟು ಅಥವಾ ಜಲಾಶಯಗಳ ಮೂಲಕ ಜೀವ ನದಿಗಳನ್ನು ಕೊಲ್ಲುವ ಉದ್ದೇಶದಿಂದಲೇ ಮಾಡಿದ ಯೋಜನೆಗಳೆನೊ? ಎಂಬ ಸಂಶಯ ಮೂಡುತ್ತದೆ.

  1. 250 ಮೆಗಾವ್ಯಾಟ್ ವಿದ್ಯುತ್ ಗೆ ಬ್ರೆಜಿಲ್ ನಲ್ಲಿ ನಿರ್ಮಾಣವಾದ ಬಲ್ಬಿನಾ ಅಣೆಕಟ್ಟು ಸ್ಥಾವರದಲ್ಲಿ ಉತ್ಪಾದನೆಯಾದ ಪ್ರಮಾಣ ಕೇವಲ ಶೇ.44 ರಷ್ಟು.
  2. 150 ಮೆಗಾವ್ಯಾಟ್ ಯೋಜನೆಯ ಪನಾಮದ ಬಯಾನೊ ಅಣೆಕಟ್ಟಿನಿಂದ ಉತ್ಪಾದನೆಯಾದ ವಿದ್ಯುತ್ ಶೇ.40 ರಷ್ಟು.
  3. ಥಾಯ್ಲೆಂಡಿನ ಬೂಮಿ ಬೊಲ್ ಅಣೆಕಟ್ಟಿನ ಮೂಲ ಉದ್ದೇಶ ಇದ್ದದ್ದು, 540 ಮೆಗಾವ್ಯಾಟ್, ಆದರೆ ಉತ್ಪಾದನೆಯಾದದ್ದು,150 ಮೆಗಾವ್ಯಾಟ್.
  4. ಭಾರತದ ಸರದಾರ್ ಸರೋವರದ ಅಣಕಟ್ಟಿನಲ್ಲಿ ಉದ್ದೇಶಿತ ಗುರಿ 1.450 ಮೆಗಾವ್ಯಾಟ್ ವಿದ್ಯುತ್, ಉತ್ಪಾದನೆಯಾದದ್ದು ಶೇ. 28 ರಷ್ಟು ಮಾತ್ರ.
  5. ಶ್ರೀಲಂಕಾದ ವಿಕ್ಟೋರಿಯಾ ಅಣೆಕಟ್ಟುವಿನಿಂದ 210 ಮೆಗಾವ್ಯಾಟ್ ವಿದ್ಯುತ್‌ಗಾಗಿ ಗುರಿ ಹೊಂದಲಾಗಿತ್ತು. ಅಲ್ಲಿ ಉತ್ಪಾದನೆಯಾದದ್ದು ಶೇ.32 ರಷ್ಟು ಮಾತ್ರ.

ಹೀಗೆ ಜಗತ್ತಿನಾದ್ಯಂತ ನೂರಾರು ಅಣೆಕಟ್ಟುಗಳ ಇತಿಹಾಸದ ಪಟ್ಟಿಯನ್ನು ಗಮನಿಸಿದರೆ, ಇವರುಗಳ ಮೂಲ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಕಾಡತೊಡಗುತ್ತದೆ.

ಜಲವಿದ್ಯುತ್ ಯೋಜನೆಗಾಗಿ ರೂಪಿಸಿದ ಅಣೆಕಟ್ಟುಗಳಲ್ಲಿ ಜನಸಾಮಾನ್ಯರ ಅರಿವಿಗೆ ಬಾರದ ರೀತಿಯಲ್ಲಿ ಜಾಗತಿಕ ಪರಿಸರಕ್ಕೆ ಅಡ್ಡಿಯಾಗುತ್ತಿರುವ ಅಂಶಗಳನ್ನು ಪರಿಸರ ತಜ್ಙರು ಗುರುತಿಸಿದ್ದಾರೆ. ಈವರಗೆ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಘಟಕ, ಅನಿಲ ಆಧಾರಿತ ಘಟಕಗಳಿಂದ ಮಾತ್ರ ಪರಿಸರಕ್ಕೆ ಹಾನಿ ಎಂದು ನಂಬಲಾಗಿತ್ತು. ಈಗ ಜಲ ವಿದ್ಯುತ್ ಯೋಜನೆಯ ಜಲಾಶಗಳಿಂದಲೂ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದೆ.

ಜಲವಿದ್ಯುತ್ ಯೋಜನೆಗಳು ಪರಿಸರ ರಕ್ಷಣೆಗೆ ಪೂರಕವಾಗಿದ್ದು ಇವುಗಳಿಗೆ ಕೈಗಾರಿಕಾ ರಾಷ್ಟಗಳು ಉದಾರವಾಗಿ  ನೆರವು ನೀಡಬೇಕೆಂದು ಅಂತರಾಷ್ಟೀಯ ದೊಡ್ಡ ಅಣೆಕಟ್ಟುಗಳ ಸಮಿತಿ ಆಗ್ರಹಿಸಿತ್ತು.

20 ಮತ್ತು 21 ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿವ ಅಪಾಯಕಾರಿ ಸ್ಥಿತಿಯೆಂದರೆ, ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನ. ಇದು ಮನು ಕುಲಕ್ಕೆ ದೊಡ್ಡ ಸವಾಲಾಗಿದೆ. ಈ ಕಾರಣಕ್ಕಾಗಿ ನೂತನವಾಗಿ ಅವಿಷ್ಕಾರಗೊಳ್ಳುವ ಯಾವುದೇ ತಂತ್ರಜ್ಙಾನವಿರಲಿ, ಅದರಿಂದ ಪರಿಸರಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬುದು ಎಲ್ಲರ ನಿಲುವಾಗಿದೆ. ಈ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಙಾನಗಳಿಂದ ಕೂಡಿದ ಜಲವಿದ್ಯುತ್ ಘಟಕದಿಂದ ಯಾವುದೇ ಹಾನಿಯಾಗದಿದ್ದರೂ, ಜಲಾಶಗಳಲ್ಲಿ ಸಂಗ್ರಹವಾಗುತ್ತಿರುವ ನೀರಿನಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ.

ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶ, ಅಲ್ಲಿನ ಗಿಡ ಮರಗಳು, ಪ್ರಾಣಿಗಳು ಇವುಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗುತ್ತಿರುವ ಮಿಥೇನ್ ಅನಿಲ ಮತ್ತು ಕಾರ್ಬನ್ ಡೈ ಆಕ್ಸೈಡ್ (ಇಂಗಾಲಾಮ್ಲ) ಇವುಗಳಿಂದ ವಾತಾವರಣದ ಉಷ್ಣತೆ ಹೆಚ್ಚುತ್ತಿರುವುದನ್ನು ಪರಿಸರ ವಿಜ್ಷಾನಿಗಳು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಬ್ರೆಜಿಲ್‌ನ ರಾಷ್ಟೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಫಿಲಿಪ್ ಪೆರ್ನಸೈಡ್ ಎಂಬುವರು  ಆ ದೇಶದ ಎರಡು ಜಲಾಶಯಗಳಲ್ಲಿ ನಿರಂತರ ಇಪ್ಪತ್ತು ವರ್ಷ ಸಂಶೋಧನೆ ನಡೆಸಿ ವಿಷಯವನ್ನು ಧೃಡಪಡಿಸಿದ್ದಾರೆ.

ಜಲಾಶಯಗಳ ನೀರಿನಲ್ಲಿ ಬಿಡುಗಡೆಯಾಗುತ್ತಿರುವ ಈ ಅನಿಲಗಳ ಪ್ರಮಾಣ ಪ್ರಾದೇಶಿಕ ಹಾಗೂ ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಎಂದಿರುವ ಫಿಲಿಪ್, ಉಷ್ಣವಲಯದ ಆರಣ್ಯ ಪ್ರದೇಶದಲಿರುವ ಜಲಾಶಯಗಳು ಪರಿಸರಕ್ಕೆ ಹೆಚ್ಚು ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾನ್ಯವಾಗಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಆಮ್ಲಜನಕ ಬಿಡುಗಡೆಗೊಂಡು ಮಿಥೇನ್ ಅನಿಲದಿಂದ ಉತ್ಪತ್ತಿಯಾಗವ ಕೊಳೆಯುವಿಕೆಯ ಬ್ಯಾಕ್ಟೀರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. ಆದರೆ, ಪ್ರವಾಹ ಸಂದರ್ಭದಲ್ಲಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುವುದರಿಂದ, ಜೊತೆಗೆ ಹೂಳು, ಕಲ್ಮಶಗಳು ಶೇಖರವಾಗುವುದರಿಂದ ಈ ನಿಯಂತ್ರಣ ಏರು ಪೇರಾಗುತ್ತದೆ ಎಂದು ವಿಜ್ಙಾನಿಗಳು ವಿವರಿಸಿದ್ದಾರೆ

ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿರುವ ಹಸಿರು ಮನೆ ಅನಿಲಗಳೆಂದು ಕರೆಯುತ್ತಿರುವ ಇಂಗಾಲಾಮ್ಲ, ಮಿಥೇನ್, ಮತ್ತು ಕಾರ್ಬನ್ ಮೊನಾಕ್ಷೈಡ್ ಇವುಗಳ ಪರಿಣಮದ ಬಗ್ಗೆ ವಿಜ್ಙಾನಿಗಳಲ್ಲಿ ಗೊಂದಲವಿರುವುದು ನಿಜ. ಆದರೆ, ಪಿಲಿಪ್ ಪೆರ್ನಸೈಡ್ ಬ್ರೆಜಿಲ್ನ ಎರಡು ಅಣೆಕಟ್ಟುಗಳ ಅಧ್ಯಯನದಿಂದ, ಜಲಾಯಗಳು ಕಲ್ಲಿದ್ದಲು ವಿದ್ಯುತ್ ಘಟಕದ ಶೇ.50ರಷ್ಟು ಹಾಗೂ ಅನಿಲ ಆಧಾರಿತ ಘಟಕದ ಶೇ.26 ರಷ್ಡು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಸಾಮಾನ್ಯವಾಗಿ ನದಿಗೆ ಅಣೆಕಟ್ಟು ನಿರ್ಮಿಸುವ ಮುನ್ನ ಸ್ಥಳದ ಪರಿಶೀಲನೆ, ಅಣೆಕಟ್ಟಿನ ವಿನ್ಯಾಸ, ನದಿ ನೀರಿನ ಹರಿಯುವಿಕೆ ಪ್ರಮಾಣ, ಆ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ ಭೂಮಿಯ ಲಕ್ಷಣ ಇವೆಲ್ಲವನ್ನು ಪರಿಗಣಿಸುವುದು ವಾಡಿಕೆ. ಇದಕ್ಕಿಂತ ಹೆಚ್ಚಾಗಿ ಪ್ರವಾಹದ ಸಂದರ್ಭದಲ್ಲಿ ನದಿಯ ನೀರಿನ ಜೊತೆ ಜಲಾಶಯ ಸೇರುವ ಹೂಳಿನ ಪ್ರಮಾಣ ಮತ್ತು ಅದನ್ನು ತೂಬುಗಳ (ಗೇಟ್) ಮೂಲಕ ಹೊರ ಹಾಕುವ ಬಗ್ಗೆ ಗಣನೆಗೆ ತೆಗೆದುಕೊಳ್ಳಲಾಗುವುದು. ಇತ್ತೀಚಿಗಿನ ದಿನಗಳಲ್ಲಿ ಅಣೆಕಟ್ಟು ನಿರ್ಮಣವೇ ಒಂದು ಅಂತರಾಷ್ಟೀಯ ದಂಧೆಯಾಗಿರುವಾಗ ಯಾವ ಅಂಶಗಳನ್ನು ಗಮನಿಸುವ ತಾಳ್ಮೆ ಯಾರಿಗೂ ಇಲ್ಲ.

ಕಳೆದ ಎರಡು ದಶಕದಿಂದ ಜಗತ್ತಿನ ನದಿಗಳು, ಅಣೆಕಟ್ಟುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ವಿಜ್ಙಾನಿಗಳು ವಾತಾವರಣದಲ್ಲಾಗುವ ಸಣ್ಣ ಬದಲಾವಣೆಗಳು ಅನೇಕ ಅವಘಡಗಳಿಗೆ ಕಾರಣವಾಗಬಲ್ಲವು ಎಂದು ಎಚ್ಚರಿಸಿದ್ದಾರೆ. ಆಲಾಶಯಗಳಲ್ಲಿ ಹೂಳಿನ ಪ್ರಮಾಣ ನಿರಿಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟಾಗಿದ್ದು ಈಗಾಗಲೇ ಅಂದಾಜಿಸಿದ್ದ ಜಲಾಶಯಗಳ ಆಯಸ್ಸು ಅರ್ಧದಷ್ಟು ಕಡಿಮೆಯಾಗಿದೆ ಎಂದು ಅವುಗಳ ಹಣೆಬರಹವನ್ನು ನಿರ್ಧರಿಸಿದ್ದಾರೆ.

(ಮುಂದುವರಿಯುವುದು)