Author Archives: admin

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 3


– ಶ್ರೀಧರ್ ಪ್ರಭು


ತಳಸಮುದಾಯ ಮತ್ತು ಮಹಿಳಾ ಶಿಕ್ಷಣದಿಂದ ರಾಷ್ಟ್ರೀಯತೆ ಸಂಪೂರ್ಣ ನಾಶವಾಗುತ್ತದೆ ಎಂದು ಟಿಳಕರು ಬಲವಾಗಿ ನಂಬಿದ್ದರು. ಆದ್ದರಿಂದಲೇ ಅವರು ಫುಲೆ-ಅಂಬೇಡ್ಕರರ ಶೂದ್ರ-ದಲಿತ ಮತ್ತು ಮಹಿಳಾ ಪರ ಹೋರಾಟಗಳು ರಾಷ್ಟ್ರ ವಿರೋಧಿ ಎಂಬ ಖಚಿತ ಅಭಿಪ್ರಾಯಕ್ಕೆ ಬಂದಿದ್ದರು. ಒಂದಷ್ಟು ವರ್ಷಗಳ ಕಾಲ ರಾಜಕೀಯ ಅಧಿಕಾರ ಕಳೆದುಕೊಂಡ ವೈದಿಕ ವರ್ಗಗಳು ಮದ್ದು ಗುಂಡು ಸಹಿತ ಹೋರಾಟ ಮಾಡಿದ್ದನ್ನು ಸಮರ್ಥಿಸಿಕೊಂಡ ಟಿಳಕರಿಗೆ ಸಾವಿರಾರು ವರ್ಷಗಳಿಂದ ಪಶುಗಳಿಗಿಂತ ತುಚ್ಚ ಜೀವನ ನಡೆಸಿದ ಶೂದ್ರ-ದಲಿತರ ಸಾತ್ವಿಕ ಅಕ್ರೋಶದಲ್ಲಿ ಸತ್ವ ಕಾಣಿಸಲಿಲ್ಲ.

ಹೇಗೆ ಟಿಳಕರು ಸಾಮಾಜಿಕ ಕ್ರಾಂತಿಯನ್ನು ವಿರೋಧಿಸಿದರೋ ಹಾಗೆಯೇ ಕಾರ್ಮಿಕ ಚಳುವಳಿಗಳನ್ನೂ ವಿರೋಧಿಸಿದರು. ೧೯೦೮ ರ ಮುಂಬೈ ಗಿರಣಿ ಕಾರ್ಮಿಕರ ಹೋರಾಟ ಬಿಟ್ಟರೆ ೧೯೨೦ ರ ವರೆಗೂ ಯಾವ ಕಾರ್ಮಿಕ ಹೋರಾಟಗಳನ್ನೂ ಟಿಳಕರು ಸಂಘಟಿಸಲಿಲ್ಲ. ೧೯೦೯ ರಿಂದ ೧೯೨೦ ರ ವರೆಗೆ ಕಲ್ಲು ಎಸೆದರೆ ಹೋಗಿ ಬೀಳುವಷ್ಟು ದೂರದಲ್ಲಿದ್ದ ಮುಂಬೈಗೆ ಒಂದೆರಡು ಬಾರಿ ಮಾತ್ರ ಹೋಗಿದ್ದು ಬಿಟ್ಟರೆ, bal-gangadhar-tilakಕಾರ್ಮಿಕ ಸಂಘರ್ಷಗಳ ಕುಲುಮೆಯಾಗಿದ್ದ ಮುಂಬೈ ಕಾರ್ಖಾನೆಗಳು, ಕಾರ್ಮಿಕ ಬಸ್ತಿಗಳಿಗೆ ಟಿಳಕರು ಹೋಗಲೇ ಇಲ್ಲ. ನವೆಂಬರ್ ೧೯೧೯ ನವೆಂಬರ್ ನಲ್ಲಿ ಒಮ್ಮೆ ತೀರ ಮುಲಾಜಿಗೆ ಬಿದ್ದು ಮುಂಬೈ ಗಿರಣಿ ಕಾರ್ಮಿಕರ ಪ್ರತಿಭಟನಾ ಸಭೆಗೆ ಹೋದ ಟಿಳಕರು ಕಾರ್ಮಿಕರಿಗೆ ಉಪದೇಶ ನೀಡಿದ್ದೇನು ಗೊತ್ತೇ: ‘ಭಾರತದ ಬಂಡವಾಳಶಾಹಿಗಳ ಮೇಲೆ ಮುಷ್ಕರ ಮಾಡಬೇಡಿ. ಭಾರತದಲ್ಲಿ ಎಲ್ಲರೂ ಕಾರ್ಮಿಕರೆ, ಬ್ರಿಟಿಷರು ಮಾತ್ರ ಮಾಲೀಕರು’. ಹೀಗೆ ಕಾರ್ಮಿಕ ಚಳುವಳಿಗಳನ್ನು ಎಂದೂ ಅರ್ಥಿಕ ಸಮತೆಯ ಸಾಧನೆಗೆ ಟಿಳಕರು ಬಳಸಲೇ ಇಲ್ಲ.

ಇನ್ನು ಸ್ವತಃ ಲೆನಿನ್ ತಿಳಕರನ್ನು ಹೊಗಳಿದ್ದು ನೋಡಿದ್ದೇವೆ, ಆದರೆ ಟಿಳಕರು ೧೯೨೦ ರಲ್ಲಿ ಲೆನಿನ್ ಬಗ್ಗೆ ‘ ರಷ್ಯದ ಬೊಲ್ಶೆವಿಕ್ ಕ್ರಾಂತಿಯ ಹೆದರಿಕೆ’ ಎಂಬ ಅಗ್ರ ಭಾಷಣದಲ್ಲಿ ಏನು ಹೇಳಿದರು ಎಂಬುದನ್ನೂ (ಅವರ ಜೀವನ ಚರಿತ್ರೆ ಬರೆದ ಧನಂಜಯ ಕೀರ್ ಪುಸ್ತಕದಲ್ಲಿ ದಾಖಲಾದಂತೆ) ಕೇಳೋಣ:
“ರಷ್ಯದ ಬೊಲ್ಶೆವಿಕ್ ಕ್ರಾಂತಿಯ ಬಗ್ಗೆ ಭಾರತವೇನೂ ಹೆದರಬೇಕಿಲ್ಲ. ರಷ್ಯಾದ ಕ್ರಾಂತಿ ಸಮಾನತೆಗಾಗಿ ನಡೆದ ಸಮರ. ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಸಮಾನತೆ ನೆಲೆಸಿದೆ. ನಮ್ಮ ವೇದಾಂತದ ಪ್ರಕಾರ ಎಲ್ಲರೂ ಆತ್ಮ ಸ್ವರೂಪಿಗಳು. ಹಾಗಾಗಿ ನಮ್ಮ ದೇಶಕ್ಕೆ ಬೇಕಿರುವುದು ರಷ್ಯನ್ ಕ್ರಾಂತಿ ಸ್ಥಾಪಿಸುವ ಅರ್ಥಿಕ ಸಮಾನತೆಯಲ್ಲ ಅಧ್ಯಾತ್ಮಿಕ ಸಮಾನತೆ – ಅದು ನಮ್ಮ ವೇದಾಂತದಲ್ಲೇ ಇದೆ”

ತಿಳಕರ ಸಮಕಾಲೀನ ಆದರೆ ಅವರ ಪಟ್ಟ ಶಿಷ್ಯ ಜೋಸೆಫ್ ಬ್ಯಾಪ್ಟಿಸ್ಟ ಎಂಬ ಗೋವಾ ಮೂಲದ ಮುಂಬೈನ ಪ್ರಖ್ಯಾತ ವಕೀಲರು ಆಗ ಕೆಲಕಾಲ ಕಾರ್ಮಿಕರ ಅಗ್ರ ಸಂಘಟನೆಯ AITUC ನ ಆಗ್ರ ಮುಖಂಡರಾಗಿದ್ದರು. ಇವರ ಸಹಾಯದಿಂದ ಟಿಳಕರು ಭಾರತದ ಪ್ರತಿನಿಧಿಯಾಗಿ ಲಂಡನ್ ನ ಲೇಬರ್ ಪಾರ್ಟಿಗೆ ಭೇಟಿ ಇತ್ತು ತಾವೊಬ್ಬ ಮಹಾನ್ ಕಾರ್ಮಿಕ ಸಂಘಟಕ ಎಂದು ವಿದೇಶಗಳಲ್ಲಿ ಬಿಂಬಿಸಿಕೊಂಡ ಟಿಳಕರು ಸ್ವದೇಶದಲ್ಲಿ ಮಾತ್ರ ಕಾರ್ಮಿಕರಿಗೆ ಭಾರತದ ಬಂಡವಾಳಶಾಹಿಗಳ ವಿರುದ್ದ ಹೋರಾಟ ಮಾಡಬೇಡಿ ಎಂಬ ಹಿತವಚನ ನೀಡುತ್ತಾರೆ. ಇಷ್ಟಾದರೂ ನಮ್ಮ ದೇಶದ ಕಮ್ಯುನಿಸ್ಟ್ ಚಳುವಳಿಗಳು ತಿಲಕರನ್ನು ಒಬ್ಬ ಕ್ರಾಂತಿಕಾರಿ ಎಂದು ಬಿಂಬಿಸುತ್ತವೆ. ಇದೇ ನೈಜ ದುರಂತ.

ಇಲ್ಲೊಂದು ಮಾತು ಹೇಳಲೇ ಬೇಕು. ಬಾಬಾಸಾಹೇಬ್ ರನ್ನು ಕಮ್ಯುನಿಸ್ಟರು ಮತ್ತು ತಿಳಕರಂಥ ತಥಾಕಥಿತ ಕ್ರಾಂತಿಕಾರಿಗಳು lokmanya-tilakಸಮಾನವಾಗಿ ವಿರೋಧಿಸುತ್ತಿದ್ದರು. ಆದರೆ ಇವೆರಡೂ ವಿರೋಧಗಳಲ್ಲಿ ಒಂದು ಗಮನಾರ್ಹ ವ್ಯತ್ಯಾಸವಿದೆ. ಕಮ್ಯುನಿಸ್ಟರು ಸಮಗ್ರ ಪರಿವರ್ತನೆ ಬರಲು ಅರ್ಥಿಕ ಪರಿವರ್ತನೆ ಆಗಲೇ ಬೇಕು ಎಂದು ನಂಬಿ ಬೇರೆಲ್ಲ ಹೋರಾಟಗಳನ್ನು ವಿರೋಧಿಸಿದರು. ಇದು ಶೂದ್ರ ಅಥವಾ ದಲಿತರ ಮೇಲಿನ ದ್ವೇಷದಿಂದಲ್ಲ; ಬದಲಿಗೆ ಭಾರತದಲ್ಲಿ ಜಾತಿಯೇ ವರ್ಗ ಎಂದು ಗ್ರಹಿಸದೇ ಹೋದ ಬಹುದೊಡ್ಡ ಐತಿಹಾಸಿಕ ತಪ್ಪಿನಿಂದಾಗಿ. ಭಾರತದ ಮಟ್ಟಿಗೆ ದಲಿತರೇ ಸರ್ವಹರಾ (proletariat) ಎಂದು ಕಮ್ಯುನಿಸಂ ಒಪ್ಪಲಿಲ್ಲ.ಇದು ಅಧುನಿಕ ಭಾರತದ ದೊಡ್ಡ ದುರಂತ. ಆದರೆ ಮಾರ್ಕ್ಸ್ ವಾದಿ ಚಳುವಳಿಯಿಂದಾಗಿಯೇ ದಲಿತ ಶೂದ್ರರು ನಗರ ಪ್ರದೇಶಗಳಲ್ಲಿ ಅಷ್ಟಿಷ್ಟು ಅರ್ಥಿಕ ಸ್ವಾವಲಂಬನೆ ಸಾಧಿಸಿದರು ಮತ್ತು ಹಳ್ಳಿಗಳಲ್ಲಿ ಭೂಸುಧಾರಣೆಗಳಾದವು. ಆದರೆ ತಿಳಕರಂಥವರು ಅತ್ತ ಅರ್ಥಿಕ ಸಮಾನತೆಗೂ ವಿರೋಧಿ ಇತ್ತ ಸಾಮಾಜಿಕ ಸಮಾನತೆಗೂ ವೈರಿ. ಅತ್ತ ವೈದಿಕಶಾಹಿಗಳನ್ನೂ ಸಂಘಟಿಸಿದರು; ಇತ್ತ ಸ್ವದೇಶಿ ಚಾಕುವಿನಿಂದ ಘಾಸಿಗೊಂಡ ಕಾರ್ಮಿಕರನ್ನು ವೇದಾಂತದ ಕಾಲ್ಪನಿಕ ಮುಲಾಮು ಹಚ್ಚಿ ಮೆತ್ತಗೆ ಮಾಡಿದರು.

ಇನ್ನು ಈ ದೇಶದಲ್ಲಿ ದೇಶಭಕ್ತಿಯನ್ನು ಮೂರ್ತಿ ಪೂಜೆಗೆ ಸಮೀಕರಿಸಿ ಕಡೆಗೆ ಭಕ್ತಿಯ ಹೆಸರಿನಲ್ಲಿ ಕೋಮು ಉನ್ಮಾದಕ್ಕೇರಿಸಿದ ಖ್ಯಾತಿ ಸೇರಬೇಕಿರುವುದು ತಿಳಕರಿಗೆ. ಇದನ್ನು ನಂತರದಲ್ಲಿ ಗಾಂಧಿ ಮತ್ತು ಇನ್ನೂ ವಿಕೃತ ಸ್ವರೂಪದಲ್ಲಿ ಹಿಂದೂ ಕೋಮುವಾದಿಗಳು ಬಳಸಿಕೊಂಡರು. MKGandhiಸಾರ್ವಜನಿಕ ಮೂರ್ತಿಪೂಜೆ ದೇಶವೆಂದರೆ ಒಂದು ಧರ್ಮದ ಜಹಗೀರು ಎಂದು ಜನರ ತಲೆಯಲ್ಲಿ ಬಿತ್ತಿದ್ದು ಟಿಳಕರ ಸಾಧನೆ. ಇವರ ಸಾರ್ವಜನಿಕ ದೇಶಭಕ್ತಿಯನ್ನು ಒಂದು ಇಂದ ಮೂರ್ತಿಪೂಜೆಯನ್ನಾಗಿ ಪರಿವರ್ತಿಸಿದ್ದರಿಂದ ಇಡೀ ದೇಶದಲ್ಲಿ ಯೋಚಿಸಿ ರಾಜಕಾರಣ ಮಾಡುವ ಸಂಸ್ಕೃತಿಯೇ ನಾಶವಾಯಿತು. ಒಂದು ಕಡೆ ಪುರೋಹಿತ ಶಾಹಿಗಳಿಂದ ಇನ್ನೊಂದೆಡೆ ಬ್ರಿಟೀಷರಿಂದ ಬೆಂದು ಬಳಲಿದ್ದ ನಗರ ಪ್ರದೇಶಗಳ ಶೂದ್ರ-ದಲಿತ ಕಾರ್ಮಿಕರಿಗೆ ಸಮಗ್ರ ಕ್ರಾಂತಿಯ ಬದಲು ತಿಳಕರ ಮೂರ್ತಿಪೂಜೆಯ ಭ್ರಾಂತಿಯೇ ಹೆಚ್ಚು ರುಚಿಸಿತು. ಫುಲೆ-ಅಂಬೇಡ್ಕರ್, ಮಾರ್ಕ್ಸ್ – ಲೆನಿನ್ ರನ್ನು ಅನುಸರಿಸಬೇಕಾದರೆ ಅವರ ಚಿಂತನೆಯ ಅಧ್ಯಯನ ಅತ್ಯಗತ್ಯ. ಆದರೆ ಮೂರ್ತಿ ಪೂಜೆಗೆ ಇದೇನೂ ಬೇಡ; ಬರಿಯ ಉನ್ಮಾದವೇ ಸಾಕು. ಹೀಗೆ ರಾಜಕೀಯ ಮತ್ತು ಧರ್ಮವನ್ನು ಬೆರೆಸುವ ಕಲೆಯನ್ನು ಟಿಳಕರು ಕಲಿಸಿಕೊಟ್ಟರು.

ಶೂದ್ರ-ದಲಿತ-ರೈತ-ಕಾರ್ಮಿಕರ ಹೋರಾಟಗಳ ಹಾದಿ ತಪ್ಪಿಸಿದ ಟಿಳಕರು ಕಾಂಗ್ರೆಸ್ ನಲ್ಲಿ ಸಂಪೂರ್ಣ ಅರಿಶಿಣ ಕುಂಕುಮದ ಸಂಸ್ಕೃತಿ ಹರಡಿ ಬಿಟ್ಟರು.

ಕೊನೆಯದಾಗಿ ತಿಳಕರ ಸಂಪೂರ್ಣ ವ್ಯಕ್ತಿತ್ವವನ್ನು ಬಿಚ್ಚಿಡುವ ಇದೊಂದು ಘಟನೆಯನ್ನು ಹೇಳಲೇ ಬೇಕು. ೧೯೮೧ ರಲ್ಲಿ ಟಿಳಕರು ಒಂದು ಅತ್ಯಂತ ಘನಂದಾರಿ ಹೋರಾಟವನ್ನು ಸಂಘಟಿಸಿದರು. ಆ ವರ್ಷ ಬ್ರಿಟಿಷ್ ಸರಕಾರ ‘Age of Consent Act ಎಂಬ ಒಂದು ಕಾನೂನು ಜಾರಿಗೆ ತಂದಿತು. ಈ ಕಾನೂನಿನ ಪ್ರಕಾರ ಹನ್ನೆರಡು ವರ್ಷಕ್ಕೆ ಕಡಿಮೆಯಿರುವ ಯಾವ ಮಗುವಿನ ಮೇಲೆ ಜೊತೆ ಲೈಂಗಿಕ ಸಂಪರ್ಕ ಮಾಡಿದರೂ ಅದು ಬಲಾತ್ಕಾರಕ್ಕೆ ಸಮ ಮತ್ತು ಶಿಕ್ಷಾರ್ಹ ಅಪರಾದ ಎಂಬ ಕಾನೂನು ಜಾರಿಗೆ ತಂದಿತು.

ಈ ಕಾನೂನು ಬರಲು ಒಂದು ಬಲವಾದ ಕಾರಣವಿತ್ತು ೧೮೮೯ ರಲ್ಲಿ ಫುಲ್ ಮಣಿ ಎಂಬ ಹನ್ನೊಂದು ವರ್ಷದ ಹಸುಳೆಯ ಮೇಲೆ child-rapeಹರಿ ಮೋಹನ ಮೈತಿ ಎಂಬ ೩೫ ವರ್ಷದ ವ್ಯಕ್ತಿ ಲೈಂಗಿಕ ಸಂಪರ್ಕ ಮಾಡಿದ ಪರಿಣಾಮ ರಕ್ತಪಾತವಾಗಿ ಆ ಹೆಣ್ಣು ಮಗು ಸತ್ತು ಹೋಯಿತು. ಈ ಹರಿ ಮೋಹನನಿಗೆ ಅತ್ಯಾಚಾರ ಶಿಕ್ಷೆ ಆಗಲೇ ಇಲ್ಲ; ಏಕೆಂದರೆ ಈ ಮಗು ಅವನ ಪತ್ನಿ!

ಇದನ್ನು ಕಂಡ ವಿದೇಶಿ ಸರಕಾರ ಹೆಣ್ಣು ಮಗುವಿನ ಪ್ರಾಣ ರಕ್ಷಣೆ ಮಾಡುವ ಈ ಕಾನೂನು ತಂದರೆ ನಮ್ಮ ಸ್ವದೇಶೀ ಟಿಳಕರು ಇದರ ವಿರುದ್ಧ ಅತ್ಯಂತ ಭಯಂಕರ ಹೋರಾಟ ಸಂಘಟಿಸಿಬಿಟ್ಟರು. ಇದು ನಮ್ಮ ಹಿಂದೂ ಧಾರ್ಮಿಕ ವಿಚಾರಗಳಲ್ಲಿ ಮೂಗು ತೋರಿಸುವ ಪ್ರಯತ್ನ ಎಂದು ತಮ್ಮ ಪತ್ರಿಕೆಗಳಲ್ಲಿ ಗುಡುಗಿ ಸಂಪಾದಕೀಯ ಬರೆದದ್ದಲ್ಲದೇ, ಸಮಾನ ಮನಸ್ಕ ಧರ್ಮಭೀರುಗಳ ಜೊತೆ ದೇಶವ್ಯಾಪಿ ಬೀದಿ ಹೋರಾಟವನ್ನು ಸಂಘಟಿಸಿದರು.

ಹನ್ನೊಂದು ವರ್ಷದ ಹಸುಳೆಯ ಮೇಲಿನ ಅತ್ಯಾಚಾರವನ್ನು ಸಮರ್ಥಿಸಿ ಹೋರಾಟ ಮಾಡಿದ ಟಿಳಕರು ಒಬ್ಬ ಲೋಕಮಾನ್ಯ; ಆದರೆ ಮಹಿಳೆಯರ ಅಸ್ತಿ ಹಕ್ಕನ್ನು ಕಾಪಾಡಬೇಕು ಎಂದು ಸಂಪುಟಕ್ಕೆ ರಾಜಿನಾಮೆ ಇತ್ತ ಬಾಬಾಸಾಹೇಬ್ ಒಬ್ಬ ಬ್ರಿಟಿಷ್ ಏಜೆಂಟ್!

ಮೇರಾ ಭಾರತ್ ಮಹಾನ್!

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015″ರ ಫಲಿತಾಂಶ

ಆತ್ಮೀಯರೇ,

ಎಲ್ಲರಿಗೂ 2015ರ “ಗಾಂಧಿ ಜಯಂತಿ”ಯ ಶುಭಾಶಯಗಳು.

ವರ್ತಮಾನ ಬಳಗ ಆಯೋಜಿಸಿದ್ದ ಈ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಸುಮಾರು 25 ಕತೆಗಳು gandhi-katha-spardge-2015ಬಂದಿದ್ದವು; ಅದರಲ್ಲಿ ಒಂದೆರಡು ಕತೆಗಳು ಇಲ್ಲಿ ಫಲಿತಾಂಶ ಪ್ರಕಟಣೆಗೆ ಮೊದಲೇ ಬೇರೆ ಕಡೆ ಪ್ರಕಟವಾದದ್ದು ನಮ್ಮ ಗಮನಕ್ಕೆ ಬಂದಿದ್ದರಿಂದ ಅವನ್ನು ಪರಿಗಣಿಸಲಾಗಿಲ್ಲ. ಈ ಸಾರಿಯ ತೀರ್ಪುಗಾರರು ಕವಿ, ಲೇಖಕಿ, ಮತ್ತು ಪ್ರಾಧ್ಯಾಪಕಿ ಭಾರತೀದೇವಿ.ಪಿ. ಈ ಜವಾಬ್ದಾರಿಯನ್ನು ನಿಭಾಯಿಸಲು ಒಪ್ಪಿಕೊಂಡ ಅವರಿಗೆ ವರ್ತಮಾನ ಬಳಗ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಅವರು ಆಯ್ಕೆ ಮಾಡಿರುವ ಉತ್ತಮ ಕತೆಗಳು ಹೀಗಿವೆ:

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ಕಥಾ ಸ್ಪರ್ಧೆಗೆ ತಮ್ಮ ಕತೆಗಳನ್ನು ಆಸಕ್ತಿಯಿಂದ ಕಳುಹಿಸಿ, ಈ ಕಥಾಸ್ಪರ್ಧೆಯನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಇಷ್ಟರಲ್ಲಿಯೇ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್

ಹಂಪಿಯಲ್ಲಿ ಇದೇ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಆತ್ಮೀಯರೇ,

ನಮ್ಮ ವರ್ತಮಾನ.ಕಾಮ್ ಓದುಗರಿಗೆ “ನಾವು ನಮ್ಮಲ್ಲಿ” ಮತ್ತು ಅದರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ವರ್ತಮಾನ.ಕಾಮ್ ಆರಂಭವಾದಾಗಿನಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧವಿದೆ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಯುವ ತಲೆಮಾರಿನ ಸಮಾಜಮುಖಿ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹನ್ನೊಂದನೇ ಪ್ರಾಯ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 3-4, 2015) ದಂದು ಹಂಪಿಯ naavu-nammalli-2015-1 ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಡಿನ ಅನೇಕ ಚಿಂತಕರು ಮತ್ತು ಹೋರಾಟಗಾರರು “ಸಂವಿಧಾನ ಭಾರತ” ದ ಬಗ್ಗೆ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಪಾದ್ ಭಟ್, ಶ್ರೀಧರ್ ಪ್ರಭು ಸೇರಿದಂತೆ ವರ್ತಮಾನ ಬಳಗದ  ಹಲವಾರು ಮಿತ್ರರು ಅದರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ನಲ್ಲಿ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದ ವಿಜಯಕುಮಾರ್ ಸಿಗರನಹಳ್ಳಿಯವರ ಆ ಲೇಖನಗಳ ಸಂಗ್ರಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ’ನಾವು ನಮ್ಮಲ್ಲಿ’ ಸಹಯೋಗದಲ್ಲಿ ನಮ್ಮ ಬಳಗದ ಇನ್ನೊಬ್ಬರಾದ ಅಕ್ಷತಾ ಹುಂಚದಕಟ್ಟೆಯವರ ’ಅಹರ್ನಿಶಿ’ ಈ ಪುಸ್ತಕ ಪ್ರಕಟಿಸಿದೆ.

ಎಂದಿನಂತೆ ಈ ವಾರ್ಷಿಕ ಕಾರ್ಯಕ್ರಮಕ್ಕೆ ಹೋಗಲು ನಾನೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ವಿಶ್ವಾಸದಲ್ಲಿ…

ನಮಸ್ಕಾರ,
ರವಿ

naavu-nammalli-2015
naavu-nammalli-2015
naavu-nammalli-book

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 2


– ಶ್ರೀಧರ್ ಪ್ರಭು


 

‘ಸ್ವರಾಜ್ಯ’ ದಲ್ಲೇ ಶಾಹು ಮಹಾರಾಜರಿಗೆ ‘ಸತ್ಕಾರ’

೧೮೯೪ ರಲ್ಲಿ ಪಟ್ಟಾಭಿಷೇಕವಾಗಿ ರಾಜರ್ಷಿ ಶಾಹು ಮಹಾರಾಜರು ಕೊಲ್ಹಾಪುರದ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು. ೧೯೦೧ ರ ಶ್ರಾವಣ ಮಾಸದಲ್ಲಿ ಶಾಹು ಮಹಾರಾಜರು ಪಂಚಗಂಗಾ ನದಿ ಸ್ನಾನಕ್ಕೆ ಹೋದಾಗ ಒಂದು ಮಹತ್ತರ ಘಟನೆ ನಡೆಯಿತು. ರೂಢಿಯಂತೆ ಮಹಾರಾಜರು ಶ್ರಾವಣ ಮಾಸದಲ್ಲಿ ನದಿ ಸ್ನಾನ ಮಾಡುವಾಗ ಆಸ್ಥಾನ ಪುರೋಹಿತರು ಮಂತ್ರೋಚ್ಚಾರಣೆ ಮಾಡುತ್ತಾರೆ. ಹಾಗೆ ಕೊಲ್ಹಾಪುರದ ಆಸ್ಥಾನ ಪುರೋಹಿತ ನಾರಾಯಣ ರಾಜ್ಯೋಪಧ್ಯಾಯನಿಗೆ ಬುಲಾವು ಹೋಯಿತು. ಆ ಹೊತ್ತಿಗೆ ಈ ವೈದಿಕ ಮಹಾಶಯರು ತಮ್ಮ ವೇಶ್ಯೆಯ ಮನೆಯಲ್ಲಿದ್ದರಂತೆ. ಹಾಗಾಗಿ ಸ್ನಾನ ಸಂಧ್ಯಾವಂದನೆ ಏನೂ ಆಗಿರಲಿಲ್ಲ. ಅದರೂ ಈ ರಾಜ ಪುರೋಹಿತರು ಸೀದಾ ನದೀ ತೀರಕ್ಕೆ ಬಂದು ಮಂತ್ರೋಚ್ಚಾರಣೆ ಶುರು ಮಾಡಿದರು. ಅಷ್ಟು ಹೊತ್ತಿಗೆ ಅಲ್ಲಿದ್ದ ಇನ್ನೊಬ್ಬ ಪುರೋಹಿತ ರಾಜಾರಾಮ ಶಾಸ್ತ್ತ್ರಿ ಪುರೋಹಿತರು ಈ ಮಂತ್ರೋಚ್ಚಾರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ತಕರಾರು ತೆಗೆದರು. bal-gangadhar-tilakಆಗ ಈ ನಾರಾಯಣ ರಾಜ್ಯೋಪಾಧ್ಯಾಯ ಯಾವುದೇ ಅಂಜಿಕೆ ಅಳುಕಿಲ್ಲದೇ:

‘ನೋಡಿ ಸ್ವಾಮಿ, ನಿಮ್ಮ ಈ ಮಹಾರಾಜರು ಶೂದ್ರ ವರ್ಣಕ್ಕೆ ಸೇರಿದ ಕುಣಬಿ ಜಾತಿಯವರು. ಇಂತಹ ಕೀಳು ಜಾತಿಯ ಜನರ ಸಮ್ಮುಖದಲ್ಲಿ ಸ್ನಾನವನ್ನು ಮಾಡಿ ಹೇಳುವ ವೇದೋಕ್ತ ಮಂತ್ರಗಳನ್ನು ಪಠಿಸಬೇಕಿಲ್ಲ. ನಾನು ಪುರಾಣೊಕ್ತ ಮಂತ್ರಗಳನ್ನಷ್ಟೇ ಹೇಳಲು ಸಾಧ್ಯ. ನೀವು ಏನಾದರೂ ಮಾಡಿಕೊಳ್ಳಿ’ ಎಂದು ಮಹಾರಾಜರ ಸಮ್ಮುಖದಲ್ಲೇ ಧಮಕಿ ಹಾಕಿದ.

ಸಹಜವಾಗಿ ಮಹಾರಾಜರು ರಾಜನಿಂದೆಯ ಆರೋಪದ ಮೇಲೆ ಇವನನ್ನು ಗಲ್ಲಿಗೆರಿಸಬಹುದಿತ್ತು. ಆದರೆ ಶಾಹು ಮಹಾರಾಜರದ್ದು ರಾಜರ್ಷಿ ಸ್ವರೂಪದ ವ್ಯಕ್ತಿತ್ವ. ವಿಶೇಷವೆಂದರೆ ಮಹಾರಾಜರು ತಮ್ಮರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಸಂಘ ಗಳನ್ನು ಕಟ್ಟಿಕೊಳ್ಳಲು ಅನುಮತಿ ನೀಡಿದ್ದರಲ್ಲದೇ, ಅತ್ಯಂತ ಪ್ರಗತಿಪರ ಕಾರ್ಮಿಕ ಕಾನೂನುಗಳನ್ನೂ ಸಹ ಜಾರಿಮಾಡಿ ದ್ದರು. ಮಹಾರಾಜರಲ್ಲಿನ ಅಪಾರ ಅನುಕಂಪ ಜಾಗೃತವಾಗಿ, ಈ ‘ಪೊಂಗ’ ಪಂಡಿತನಿಗೆ ಮೂರು ತಿಂಗಳ ಸಮಯಾವಕಾಶ ನೀಡಿ ವೇದೋಕ್ತ ಮಂತ್ರೋಚ್ಚಾರಣೆ ಮಾಡುವ ರಾಜಾಜ್ಞೆ ಹೊರಡಿಸಿದರು. ಮೂರು ತಿಂಗಳು ಎಂದು ರಾಜಾಜ್ಞೆ ಇದ್ದರೂ ಮೂರು ತಿಂಗಳ ನಂತರವೂ ಮಹಾರಾಜರು ಈ ‘ಪಂಡಿತ’ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕೆಲಸದಿಂದ ವಜಾ ಕೂಡ ಮಾಡಲಿಲ್ಲ. ಒಂಭತ್ತು ತಿಂಗಳು ಕಳೆದವು, ಈ ಪುರೋಹಿತ ಬಗ್ಗಲಿಲ್ಲವೆಂದರೆ ಅವನ ದುರಹಂಕಾರ ಯಾವ ಮಟ್ಟದಲ್ಲಿತ್ತು ಗಮನಿಸಿ!

೭ ನವೆಂಬೆರ್, ೧೯೦೧, ೮ ನವೆಂಬರ್, ೧೯೦೧ ಮತ್ತು ಕೊನೆಯದಾಗಿ ೧ ಮೇ, ೨೦೦೨ ಹೀಗೆ ಮೂರು ಕಾರಣ ಕೇಳಿ ನೋಟಿಸು ಜಾರಿ ಮಾದಲಾದವು. ಈ ಪಂಡಿತ ಅವ್ಯಾವ ನೋಟಿಸುಗಳಿಗೂ ಜಗ್ಗಲಿಲ್ಲ. ಕೊನೆಗೆ ಕಾಟಾಚಾರಕ್ಕೆಂದು ಒಂದು ಉತ್ತರ ರವಾನಿಸಿದ “ನೀವು ಕ್ಷತ್ರಿಯರೇ ಅಲ್ಲ; ಆದ್ದರಿಂದ ನಿಮ್ಮ ಸಮ್ಮುಖದಲ್ಲಿ ನಾನು ವೇದಮಂತ್ರ ಗಳನ್ನ ಪಠಿಸಲಾರೆ.”

ಸಹಜವಾಗಿಯೇ ಎಲ್ಲ ಸ್ವಾಭಾವಿಕ ನ್ಯಾಯದ (natural justice) ನ ಪ್ರಕಾರ ಸುಧಾರಣೆಗೆ ಸಾಕಷ್ಟು ಅವಕಾಶ ಕೊಟ್ಟಿದ್ದರೂ ಸುಧಾರಿಸದೆ ಮತ್ತು ರಾಜರನ್ನೇ ಜಾತಿಯ ಹೆಸರಿನಲ್ಲಿ ಅಪಮಾನಿಸಿದ ಪಂಡಿತನಿಗೆ ಕೆಲಸದಿಂದ ವಜಾ ಆಯಿತು. ಲೆಕ್ಕಕ್ಕೆ ಸೆರೆಮನೆಗೆ ಕಳುಹಿಸಬೇಕಿತ್ತು. ಆದರೆ ಮಹಾರಾಜರು ತಮ್ಮ ಅಪಾರ ಅನುಕಂಪದ ಮೇರೆಗೆ ಇಂತಹ ಕ್ರಮ ಕೈಗೊಳ್ಳಲಿಲ್ಲ.

ಬ್ರಹ್ಮಾಂಡ ಅಸಂತುಷ್ಟಿಯ ಜನಕ

ಆಗ ಶುರುವಾಯಿತು ನೋಡಿ ಬ್ರಾಹ್ಮಣರ ಮುಕ್ತ ವಿದ್ರೋಹ!

ಈ ಮುಕ್ತ ವಿದ್ರೋಹಕ್ಕೆ ಕಿಚ್ಚು ಹಚ್ಚಿದ್ದು ತಿಲಕರು ಕೇಸರಿಯಲ್ಲಿ ೨೬ ನೇ ಅಕ್ಟೋಬರ್ ೧೯೦೨ ಮತ್ತು ೩೦ ನೆ ಅಕ್ಟೋಬರ್ ೧೯೦೨ ರಲ್ಲಿ ಬರೆದ ‘ವೇದೋಕ್ತ ಮತ್ತು ಮರಾಠಿಗರ ಕರ್ಮ’ ವೆಂಬ ಒಕ್ಕಣೆಯ ಸರಣಿ ಸಂಪಾದಕೀಯ ಲೇಖನಗಳು. ಈ ಸಂಪಾದಕೀಯಗಳಲ್ಲಿ ಟಿಳಕರು ಹೇಳುತ್ತಾರೆ: ‘ಅಂಗ್ಲ ಶಿಕ್ಷಣದಿಂದ ಪ್ರಭಾವದಿಂದ ಈ ಮರಾಠರ ತಲೆಗಳೆಲ್ಲ ಕೆಟ್ಟು ಹೋಗಿವೆ. ಈ ವೇದೋಕ್ತ ಮಂತ್ರಗಳು ಅಬ್ರಾಹ್ಮಣರ ಸಮಕ್ಷಮದಲ್ಲಿ ಉಚ್ಚರಿಸುವುದು ಅಕ್ಷಮ್ಯ ಅಪರಾಧ. lokmanya-tilakಈ ಶಿವಾಜಿ ಮಹಾರಾಜ ಗೋ-ಬ್ರಾಹ್ಮಣರ ಸೇವೆ ಮಾಡಿದಕ್ಕೋಸ್ಕರ ರಿಯಾಯತಿ ತೋರಿಸಿ ಬ್ರಾಹ್ಮಣರು ಮಂತ್ರೋಚ್ಚಾರ ಮಾಡಿದ್ದ ಮಾತ್ರಕ್ಕೆ ಇವರ ಜಾತಿ ಹೋಗುತ್ತದೆಯೇ? ಇನ್ನು ಬ್ರಾಹ್ಮಣರು ಶಿವಾಜಿಗೆ ಮಾಡಿದ ಉಪಕಾರವೇನು ಕಡಿಮೆಯೇ? ಶುದ್ರನಾದ ಶಿವಾಜಿಗೆ ಬ್ರಾಹ್ಮಣರು ಛತ್ರಪತಿ ಎಂದು ಪಟ್ಟ ಕಟ್ಟಿ ಕ್ಷತ್ರಿಯ ಪದವಿ ಕೊಡಿಸಿದರು. ಆದರೆ ಈಗಿನ ತಲೆ ತಿರುಗಿದ ಮರಾಠರು ಈ ಉಪಕಾರಕ್ಕೆಲ್ಲ ಅಪಾತ್ರರು’.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ತಿಲಕರು ಈ ಲೇಖನ ಬರೆದಾಗ ರಾಜ್ಯೋಪಾಧ್ಯಾಯ ವಜಾ ಆಗಿರಲಿಲ್ಲ (ಮೇಲಿನ ದಿನಾಂಕ ಗಳನ್ನು ಗಮನಿಸಿ). ಕೇವಲ ನೋಟಿಸು ಕೊಡಲಾಗಿತ್ತು. ಹೀಗಿದ್ದೂ ತಿಲಕರು ಶಿವಾಜಿಯ ವಂಶದವರನ್ನು ಮತ್ತು ಮಹಾರಾಜರನ್ನು ತಲೆ ಕೆಟ್ಟವರು ಎಂದು ಸಂಪಾದಕೀಯ ಬರೆದರು ಸಮಾಜದಲ್ಲಿ ಒಡಕು ಮೂಡಿಸಿದರು. ಈಗ ಹೇಳಿ ಯಾರು ಭಾರತದಲ್ಲಿ ಜಾತಿವಾದದ ಬೀಜ ನೆಟ್ಟಿದ್ದು?

ನೀವು ನಂಬಲಿಕ್ಕಿಲ್ಲ, ಈ ಪ್ರತಿಭಟನೆಯ ಕಾವು ಇಲ್ಲಿವರೆಗೂ ಇತ್ತೆಂದರೆ, ಶಾಹು ಮಹಾರಾಜರಿಗೆ ಕೊಲೆ ಬೆದರಿಕೆಗಳು ಬರತೊಡಗಿದವು!

ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್ ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ) ದ ಬಗ್ಗೆ ಚಾಡಿ ಚುಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್ ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನುಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್ ವರೆಗೂ ಹೊಗಿತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ ೧೯ ಫೆಬ್ರವರಿ ೧೯೦೩ ರಂದು ಅರ್ಜಿ ತಿರಸ್ಕರಿಸುತ್ತಾರೆ.

ಬ್ರಿಟಿಷರ ಚಾಡಿ ಸೇವೆ

ಟಿಳಕರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್ ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ) ದ ಬಗ್ಗೆ ಚಾಡಿ ಚುಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್ ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನುಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್ ವರೆಗೂ ಹೊಗಿತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ ೧೯ ಫೆಬ್ರವರಿ ೧೯೦೩ ರಂದು ಅರ್ಜಿ ತಿರಸ್ಕರಿಸುತ್ತಾರೆ.

ಅದರೂ ಸ್ವರಾಜ್ಯ ಸಾಧನೆಯ ದೇಶಭಕ್ತರ ಸಿಟ್ಟು ತಣಿಯಲಿಲ್ಲ!

೧೯೦೫ ರಲ್ಲಿ ಒಟ್ಟು ಮೂರು ಅರ್ಜಿಗಳನ್ನು ಬ್ರಿಟಿಷ್ ಪ್ರಭುತ್ವದ ಪರಮೋಚ್ಛ ಅಧಿಕಾರಿ ಲಾರ್ಡ್ ಕರ್ಜನ್ ಗೆ ಕಳುಹಿಸುತ್ತಾರೆ. ಅಲ್ಲೂ ೫ ಜನವರಿ ೧೯೦೫ ರಲ್ಲಿ ಕ.ಬು. ಸೇವೆ ಯಾದ ಮೇಲೆ ತಿಲಕರಿಗೆ ಅಭಾವ ವೈರಾಗ್ಯ ಬಂದು ಕೊನೆಗೆ ಟಿಳಕರು ಈ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಬೇಕು ಎಂದು ಅಪ್ಪಣೆ ಕೊಡಿಸುತ್ತಾರೆ. ನಂತರವೇ ಬ್ರಾಹ್ಮಣರು ಬೇರೆ ಗತ್ಯಂತರವಿಲ್ಲದೆ ಮಹಾರಾಜರ ಪಟ್ಟಾಭಿಷೇಕ ಮಾಡಲು ೧೯೦೫ ರಲ್ಲಿ ಅಣಿಯಾದರು. ಮಹಾರಾಜರು ಎಲ್ಲವನ್ನೂ ಕ್ಷಮಿಸಿ ಹೊಸ ಅಧ್ಯಾಯ ಬರೆಯಲು ತಯಾರಾದರು.

ಇಂದು ಇಂದಿಗೆ ನಾಳೆ ನಾಳೆಗೆ – ತ್ರಿಕಾಲ ಜ್ಞಾನಿ ತಿಲಕರು

ಆಗ ಮಹಾರಾಜರ ಆಸ್ಥಾನದಲ್ಲಿ ಒಬ್ಬ ಚತುರ ಅಧಿಕಾರಿ ಮತ್ತು ಸತ್ಯಶೋಧಕ ಸಮಾಜದ ನೇತಾರ ಭಾಸ್ಕರ ಜಾಧವರು ಈ ದೇಶದ ಶೂದ್ರ ಮತ್ತು ದಲಿತರ ಪರವಾಗಿ ಬ್ರಾಹ್ಮಣರ ಪರ ಕ್ರಾಂತಿಯ ಕಹಳೆ ಊದುತ್ತಿದ್ದ ರೂವಾರಿ ತಿಲಕರಿಗೆ ಒಂದು ಪ್ರಶ್ನೆ ಕೇಳಿದರು:

“ದೇಶದ ಅಂತಿಮ ಅಧಿಕಾರಿಯ ತೀರ್ಪು ಬಂದ ಮೇಲೆ ಮಹಾರಾಜರನ್ನು ಕ್ಷತ್ರಿಯರು ಎಂದು ಒಪ್ಪಿಕೊಳ್ಳುವುದರಲ್ಲಿ ಯಾರಿಗೂ ತಕರಾರು ಇರಲು ಸಾಧ್ಯವೇ ಇಲ್ಲ. ಶಾಹು ಮಹಾರಾಜರು ಕ್ಷತ್ರಿಯರು ಎಂದ ಮೇಲೆ ಮಹಾರಾಜರ ಸಹೋದರ ಬಾಪುಸಾಹೇಬ್ ಮಹಾರಾಜರನ್ನು ಕ್ಷತ್ರಿಯ ಎಂದು ನೀವು ಪರಿಗಣಿಸುತ್ತೀರಿ ತಾನೆ?’ ಎಂದು.

ಆಗ ಕೇಸರಿ ಪತ್ರಿಕೆಯ ತಮ್ಮ ಅಗ್ರ ಲೇಖನದಲ್ಲಿ ಮತ್ತೊಮ್ಮೆ ಬ್ರಹ್ಮ ಸಿಂಹ ತಿಲಕರು ಗುಡಿಗಿದರು: “ಮಹಾರಾಜರ ಸಹೋದರ ಬಾಪುಸಾಹೇಬ್ ಎಂದಿಗೂ ಶೂದ್ರನೆ! ಮಹಾರಾಜರನ್ನು ನಾವು ಕ್ಷತ್ರಿಯ ಎಂದು ಒಪ್ಪಿಕೊಂಡಿರುವುದು ಸಧ್ಯ ಅವರ ಪಟ್ಟಾಭಿಷೇಕ ನಡೆಯುತ್ತಿರುವ ಕಾರಣಕ್ಕಾಗಿ”

ಆಗ ಜಾಧವ್ ಒಂದು ಸರಳ ಪ್ರಶ್ನೆ ಕೇಳಿದರು ‘ ಸ್ವಾಮಿ ಲೊಕಮಾನ್ಯರೇ, ದೇಶ ಅಳುವವನು ಕ್ಷತ್ರಿಯ ಎಂದಾದರೆ, ನೂರಾರು ವರ್ಷ ನಮ್ಮ ದೇಶವನ್ನಾಳಿದ ಮುಸಲ್ಮಾನರು ಕ್ಷತ್ರಿಯರು ಎಂದು ನೀವು ಒಪ್ಪಿಕೊಳ್ಳುತ್ತೀರಾ? ಹಾಗೆಯೇ ಮುಂದೆ ಒಂದು ದಿನ ಒಬ್ಬ ಮುಸಲ್ಮಾನನಿಗೆ ಪಟ್ಟಾಭಿಷೇಕ ವಾದರೆ ಅವನೂ ನಿಮ್ಮ ಪ್ರಕಾರ ಕ್ಷತ್ರಿಯನೇ. ಆದರೆ ಬಾಪು ಸಾಹೇಬ್ ಮಹಾರಾಜ ಮಾತ್ರ ಕ್ಷತ್ರಿಯರಲ್ಲ, ಅಲ್ಲವೇ?”

ಆಗ ತ್ರಿಕಾಲ ಜ್ಞಾನಿ ತಿಲಕರು ಹೇಳುತ್ತಾರೆ: ‘ಹಿಂದಿನದು ಮುಗಿದ ಕಥೆ. ಅದನ್ನು ನೀವು ಅಂದು ಇದ್ದ ಬ್ರಾಹ್ಮಣರನ್ನು ಕೇಳಿ. ಮುಂದೆ ಎಂದಾದರು ಅಂಥಹ ಸಂದರ್ಭ ಬಂದರೆ ಆಗಿನ ಬ್ರಾಹ್ಮಣರು ಆಗ ಉತ್ತರ ನೀಡುತ್ತಾರೆ. ನಾವು ಇಂದಿನ ಪ್ರಶ್ನೆಗೆ ಮಾತ್ರ ಉತ್ತರಿಸಿದ್ದೇವೆ’

ನಂತರದ ದಿನಗಳಲ್ಲಿ ಕಾಂಗ್ರೆಸ್ ಅಧಿವೇಶನಗಳಲ್ಲಿ ಎಂದಿಗೂ ಅಸ್ಪ್ರುಶ್ಯತೆ ಬಗ್ಗೆ ಚರ್ಚಿಸಲು ತಿಲಕರು ಅವಕಾಶ ಮಾಡಿಕೊಡಲಿಲ್ಲ. ಸಾಮಾಜಿಕ ಪರಿವರ್ತನೆ ಪ್ರಶ್ನೆಯನ್ನು ಸಂಪೂರ್ಣವಾಗಿ ಕಾಂಗ್ರೆಸ್ ತ್ಯಾಗ ಮಾಡಿದ ಶ್ರೇಯ ತಿಳಕರಿಗೆ ಸಲ್ಲಬೇಕು. ಇಂಥಹ ಮಹಾಪುರುಷರ ಸಾರಥ್ಯದ ಕಾಂಗ್ರೆಸ್ ಒಂದು ಪಕ್ಕಾ ಅಗ್ರಹಾರವಾಗಿತ್ತು. ತಿಳಕರ ಕಲ್ಪನೆಯ ಸ್ವರಾಜ್ಯ ಕೇವಲ ಸವರ್ಣೀಯ ಹಿಂದೂಗಳ, ಅದರಲ್ಲೂ ವೈದಿಕರ ಸ್ವರಾಜ್ಯವಾಗಿತ್ತು. ಅದರಲ್ಲಿ ದಲಿತ ಶೂದ್ರರಿಗೆ ಸವರ್ಣೀಯರ ಸೇವೆಯೇ ಮುಕ್ತಿಯಾಗಿತ್ತು.

ತಂದೆಗೆ ‘ತಕ್ಕನಲ್ಲದ’ ಮಗ

ಒಂದು ಕೊನೆಯ ಮಾತು. ತಿಳಕರ ಮಗ ಶ್ರೀಧರ ತಿಲಕ್ ತಮ್ಮ ತಂದೆಯ ಹಾದಿ ಹಿಡಿಯಲಿಲ್ಲ. ಅವರು ಬಾಬಾ ಸಾಹೇಬರನ್ನು ತಮ್ಮ ಸ್ವಂತ ಸೋದರನಂತೆ ಕಂಡರು. ಬಾಬಾ ಸಾಹೇಬರನ್ನು ದಲಿತರೇ ಸಂಪೂರ್ಣವಾಗಿ ಒಪ್ಪಿಕೊಂಡು ಸಾಮಾಜಿಕ ಚಳುವಳಿಗೆ ಬರದಿದ್ದ ದಿನಗಳಲ್ಲಿ ಪುಣೆಯ ಸಂಪ್ರದಾಯಸ್ಥರ ವಿರೋಧ ಕಟ್ಟಿಕೊಂಡು ಶ್ರೀಧರ ತಿಲಕರು ಅಂಬೇಡ್ಕರ್ ಜೊತೆ ಗುರುತಿಸಿ ಕೊಂಡರು.

ಶ್ರೀಧರ ತಿಲಕ ಒಬ್ಬ ಅಪ್ಪಟ ಸಾಮಾಜಿಕ ಸಮಾನತೆಯ ಕಾಳಜಿ ಇದ್ದ ವ್ಯಕ್ತಿ ಯಾಗಿದ್ದರು. ಬಾಬಾ ಸಾಹೇಬರು ಸಮತಾ ಸೈನಿಕ ದಳ ವನ್ನು ಪ್ರಾರಂಭಿಸಲು ತಮ್ಮ ಸ್ವಂತ ಮನೆ ತಿಳಕ ವಾಡಾ ವನ್ನು ಈ ಶ್ರೀಧರ ತಿಲಕರು ಧಾರೆ ಎರೆದು ಅಂಬೇಡ್ಕರ್ ರಿಗೆ ಕೊಟ್ಟರು.

ವಯಕ್ತಿಕ ಕಾರಣಗಳಿಂದ ಶ್ರೀಧರ ತಿಲಕ್ ಆತ್ಮಹತ್ಯೆ ಮಾಡಿಕೊಂಡಾಗ ತಮ್ಮ ಆತ್ಮಹತ್ಯೆಯ ಚೀಟಿಯ ಒಂದು ಪ್ರತಿಯನ್ನು ಪುಣೆಯ ಜಿಲ್ಲಾಧಿಕಾರಿಗೆ ಕಳಿಸಿದ್ದರೆ ಇನ್ನೊಂದು ಪ್ರತಿಯನ್ನು ಶ್ರೀಧರ ತಿಲಕರು ಬಾಬಾ ಸಾಹೇಬರಿಗೆ ಕಳುಹಿಸಿ ಕೊಡುತ್ತಾರೆ. ತಿಳಕರ ಸಂಕುಚಿತತೆ ಮತ್ತು ಅವರ ಮಗನ ಉದಾತ್ತತೆ – ಎರಡನ್ನೂ ಇಂದು ಚರಿತ್ರೆ ಮರೆತು ಬಿಟ್ಟಿದೆ.

ಚಿತ್ರಾವತಿಗೆ ಮುನ್ನ

ಶಾಹು ಮಹಾರಾಜರನ್ನೇ ಕೋರ್ಟ್ ಕಚೇರಿಗೆ ಅಲೆಯಿಸಿದ ಬ್ರಹ್ಮ ಶಕ್ತಿ ಮತ್ತು ದೇಶ ಭಕ್ತಿ ಶಕ್ತಿ ಎಷ್ಟಿದ್ದೀತು ಲೆಕ್ಕ ಹಾಕಿ. ತಿಲಕರ ಬ್ರಿಟಿಷ್ ವಿರೋಧಕ್ಕೆ ಪ್ರಮುಖ ಕಾರಣ ಬ್ರಿಟಿಷರು ಸಾಮಾಜಿಕ ಸಮಾನತೆಗೆ ಒತ್ತು ಕೊಟ್ಟಿದ್ದೂ ಆಗಿತ್ತು.

ಅಂಬೇಡ್ಕರ್ ರನ್ನು ಬ್ರಿಟಿಷರ ಏಜೆಂಟ್ ಎಂದು ನಿಂದಿಸುವ ಶೌರಿ ತಿಲಕರ ಬಗ್ಗೆ ಏನನ್ನೂ ಹೇಳುವುದಿಲ್ಲ. ಅದಕ್ಕಿಂತ ಹೆಚ್ಚಿನ ಸಂಕಟವಾಗುವುದು ಇತರ ತಥಾಕಥಿತ ಎಡ ಮತ್ತು ಪ್ರಗತಿಪರ ಇತಿಹಾಸಕಾರರೂ ತಿಳಕರ ಇನ್ನೊಂದು ಮುಖದ ಬಗ್ಗೆ ಮಾತನಾಡುವುದಿಲ್ಲ. ತಿಳಕರ ಮಹಿಳಾ ವಿರೋಧಿ ನಿಲುವುಗಳ ಬಗ್ಗೆ ಸ್ವತಹ ಒಬ್ಬ ಮಹಿಳೆ ಮತ್ತು ಅಭೂತಪೂರ್ವ ಇತಿಹಾಸಜ್ಞೆ ರೋಮಿಲ ಥಾಪರ್ ಬರೆಯಬೇಕಿತ್ತು. ತಾಯಿ ಸಾವಿತ್ರಿಯನ್ನೇ ಮರೆತ ನಾವು ತಿಳಕರ ಪೂಜೆ ಮಾಡುವುದರಲ್ಲಿ ವಿಶೇಷವೆನಿಲ್ಲ. ಆದರೆ ಡಾ.ಪರಿಮಳಾ ರಾವ್ ಎಂಬ ಯುವ ಚಿಂತಕಿ ‘Tilak`s Approach to Women`s Education and Emancipation’ ಎಂಬ ಅದ್ಭುತ ಪುಸ್ತಕ ಬರೆದು ತಿಳಕರ ನೈಜ ‘ಸಾಮಾಜಿಕ’ ನಿಲುಮೆಗಳನ್ನು ಸಾಕ್ಷಿ ಸಮೇತ ಹೊರಹಾಕಿದ್ದಾರೆ.

ಒಟ್ಟಿನಲ್ಲಿ, ದಲಿತ ಬಹುಜನರ ತಟ್ಟೆಯಲ್ಲಿ ನೊಣ ಹಾಕಿ ಅನ್ನ ಕಸಿಯುವ ಶೌರಿಗಳು (ತಾವು ಚಿತ್ರಾವತಿ ಬಿಡುವ ಮುನ್ನ), ತಮ್ಮ ತಟ್ಟೆಯಲ್ಲಿ ದೊಡ್ಡದೇನೋ ಬಿದ್ದಿರುವದನ್ನು ನೋಡಿಕೊಂಡು ಎತ್ತಿ ಪಕ್ಕಕ್ಕಿಟ್ಟರೆ ದೇಶಕ್ಕೆ ಮಹದುಪಕಾರವಾದೀತು.

(ಮುಂದುವರೆಯುತ್ತದೆ…)

ಶೌಚಾಲಯ ಇರುವುದೇ ಮುಖ್ಯವಲ್ಲ..!


– ಡಾ.ಎಸ್.ಬಿ. ಜೋಗುರ


ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತದ ಅಡಿಯಲ್ಲಿ ಇಡೀ ದೇಶದಲ್ಲಿ ಆರೋಗ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಅನೇಕ ಬಗೆಯ ಸ್ವಚ್ಚತಾ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಿರುವ ವೇಗದಲ್ಲಿಯೇ ದೇಶದ ಜನರು ಪರಿವರ್ತನೆಗೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಯಾವಾಗಲೂ ಭೌತ ಸಂಸ್ಕೃತಿಯ ವೇಗದ ಸಮಸಮನಾಗಿ ಅಭೌತ ಸಂಸ್ಕೃತಿ ಬದಲಾವಣೆ ಹೊಂದುವುದು ಸಾಧ್ಯವಿಲ್ಲ ಅಲ್ಲೊಂದು ಅಂತರ ಇದ್ದೇ ಇರುತ್ತದೆ. ನೀವು ಕೊಂಡು ತಂದ ಹೊಸ ಮೊಬೈಲ್ ಒಂದಕ್ಕೆ ನೀವು ಸೆಟ್ ಆಗಲು ತೆಗೆದುಕೊಳ್ಳುವ ಸಮಯದಂತೆ. opendefecation_women_indiaಅದೂ ಅಲ್ಲದೇ ಬಯಲು ಶೌಚಾಲಯ ಎನ್ನುವುದು ನಮ್ಮಲ್ಲಿ ಅನೇಕ ವರ್ಷಗಳಿಂದಲೂ ಒಂದು ಸಂಪ್ರದಾಯವಾಗಿ, ನಮ್ಮ ಜೀವನ ವಿಧಾನದ ಭಾಗವಾಗಿ ಉಳಿದು ಬಂದಿರುವದಿದೆ. ಅಷ್ಟು ಮಾತ್ರವಲ್ಲದೇ ಮನೆಯಲ್ಲಿಯೇ ಇಲ್ಲವೇ ಮನೆಯ ಹತ್ತಿರ ಶೌಚಾಲಯಗಳನ್ನು ಕಟ್ಟಿ ಬಳಸುವ ಕ್ರಮವನ್ನು ಇಷ್ಟಪಡದಿರುವ ಒಂದು ತಲೆಮಾರು ಇನ್ನೂ ನಮ್ಮೊಂದಿಗಿದೆ. ಅವರು ಮನೆಯಲ್ಲಿಯ ಶೌಚಾಲಯದಲ್ಲಿ ಕುಳಿತು ಶೌಚ ಮಾಡುವುದನ್ನು ಅಸಹ್ಯ ಮತ್ತು ಅಹಿತಕರ ಎಂದೇ ಬಗೆಯುತ್ತಾರೆ. ಅಷ್ಟು ಮಾತ್ರವಲ್ಲ, ಎದ್ದು ತಿರುಗಾಡಲಾಗದವರು, ವಯಸ್ಸಾದವರಿಗೆ ಮಾತ್ರ ಈ ಬಗೆಯ ಶೌಚಾಲಯಗಳು ತಾವು ಏನಿದ್ದರೂ ಬಯಲು ಕಡೆಗೆ ಹೋಗುವವರು ಎನ್ನುವ ವಿಚಾರ ಅವರದು. ಛೇ.. ಛೇ..ಮನೆಯಲ್ಲಿ ತಮಗೆ ಸರಿ ಹೊಂದುವದಿಲ್ಲ ನಾವು ಯಾವಾಗಲೂ ಹೊರಗೇ ಹೋಗುವವರು. ಮನೆಯಲ್ಲಿ ಕುಳಿತು.. ಮಾಡುವುದೇ..? ನಮ್ಮ ಮನಸು ಒಪ್ಪುವದಿಲ್ಲ ಎನ್ನುವ ಮನ:ಸ್ಥಿತಿಯವರು ನಮ್ಮ ಗ್ರಾಮೀಣ ಭಾಗಗಳಲ್ಲಿ ಈಗಲೂ ಇದ್ದೇ ಇದ್ದಾರೆ ಹೀಗಾಗಿ ಪ್ರಧಾನಿಯವರು ನಿರೀಕ್ಷಿಸುವ ವೇಗದಲ್ಲಿಯೇ ಶೌಚಾಲಯದ ವಿಷಯವಾಗಿ ಪರಿವರ್ತನೆಯನ್ನು ತರಲಾಗುವದಿಲ್ಲ. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಪ್ರಜ್ಞೆ ಇಂದಿಗೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಗಾಂಧೀಜಿಯವರು ತಮ್ಮ ಸರ್ವೋದಯ ಸಮಾಜದ SwachhBharath_Modiಸ್ಥಾಪನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ, ರಸ್ತೆಗಳನ್ನು ನಿರ್ಮಿಸುವ ಕನಸು ಕಂಡಿದ್ದರು ಅದು ಕೂಡಾ ಸರ್ವೋದಯ ಸಮಾಜದ ಲಕ್ಷಣಗಳಲ್ಲಿ ಒಂದಾಗಿತ್ತು. ಆದರೆ ಆ ವಿಚಾರ ಕೇವಲ ಉಟೋಪಿಯಾ ಹಂತದಲ್ಲಿಯೇ ಉಳಿದದ್ದು ವಿಷಾದನೀಯ. ಈಗೀಗ ಸ್ವಚ್ಚ ಭಾರತದ ಅಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಶೌಚಾಲಯಕ್ಕೆ ಸಂಬಂಧಿಸಿ ಒಂದು ಅಭೂತಪೂರ್ವವಾದ ಕ್ರಾಂತಿ, ಬದಲಾವಣೆ ಸಾಧ್ಯವಾಗತೊಡಗಿದೆ. ಆ ದಿಸೆಯಲ್ಲಿ ಅದಾಗಲೇ ಸುಮಾರು 6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಸುಮಾರು 1.3 ಕೋಟಿ ಶೌಚಾಲಯಗಳು ಬಳಕೆಯಾಗದೇ ವ್ಯರ್ಥವಾಗಿ ಹಾಳಾಗುತ್ತಿವೆ. ಅದಕ್ಕೆ ಕಾರಣ ನಮ್ಮ ಜನತೆಯ ಮನಸ್ಥಿತಿ ಇನ್ನೂ ಸಾಕಷ್ಟು ಬದಲಾಗಿಲ್ಲ. ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವರಾದ ಬೀರೆಂದ್ರ ಸಿಂಗ್ ಚೌಧರಿ ಹೇಳುವ ಹಾಗೆ ಸ್ಚಚ್ಚ ಭಾರತದ ಅಡಿಯಲ್ಲಿ ರೂಪಿಸಲಾದ ಕಾರ್ಯಕ್ರಮಗಳ ಯಶಸ್ಸು ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಅವರ ಮನೋಭಾವಗಳಲ್ಲಿಯ ಬದಲಾವಣೆಯನ್ನು ಅವಲಂಬಿಸಿವೆ ಎನ್ನುತ್ತಾರೆ.

ನಮ್ಮ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಇನ್ನೂ ಪರಿಸ್ಥಿತಿ ಸಾಕಷ್ಟು ಪರಿವರ್ತನೆಯಾಗಿಲ್ಲ. ಬಯಲು ಶೌಚಾಲಯವೇ Women-cleaning-toilet-in-Indiaಅವರಿಗೆ ಹಿತಕರ ಎನ್ನುವ ಮನೋಭಾವವಿರುವವರು ಇನ್ನೂ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬೆಳಿಗ್ಗೆ ಎದ್ದದ್ದೇ ಕೈಯಲ್ಲಿ ತಂಬಿಗೆ ಹಿಡಿದು ತಮ್ಮ ಗದ್ದೆ ಕಡೆ ನಡೆಯುವದೇ ಒಂದು ಪರಿಪಾಠವಾಗಿರುವ ಪ್ರದೇಶಗಳಲ್ಲಿ ಹೀಗೆ ಸರಕಾರ ನಿರ್ಮಿಸಿದ ಶೌಚಾಲಯಗಳ ಬಳಕೆ ಹೆಚ್ಚೆಂದರೆ ಆ ಕುಟುಂಬದ ಮಹಿಳೆಯರು ಮತ್ತು ವಯಸ್ಸಾದವರಿಗೆ ಸೀಮಿತ ಎನ್ನುವಂಥಾ ಸ್ಥಿತಿ ನಿರ್ಮಾಣವಾದದ್ದು ವಿಪರ್ಯಾಸ. ಇಂಥಾ ಮನೋಭಾವದವರಿಂದಾಗಿಯೇ ಈ 1.3 ಕೋಟಿ ಶೌಚಾಲಯಗಳು ಬಳಕೆಯಾಗದೇ ಹಾಳಾಗುವ ಸ್ಥಿತಿಯನ್ನು ತಲುಪಬೇಕಾಯಿತು. ಬಯಲಲ್ಲಿ ಶೌಚ ಮಾಡುವದರ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುವ ಅವಶ್ಯಕತೆಯಿದೆ. 2019 ರಷ್ಟಿಗೆ ಇಡೀ ದೇಶದಲ್ಲಿ ಬಯಲು ಶೌಚಾಲಯ ಪದ್ಧತಿ ಇರದಂತೆ ಮಾಡುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿರುವದಿದೆ. ಅದರೊಂದಿಗೆ ದೇಶದ ಗ್ರಾಮೀಣ ಭಾಗಗಳಲ್ಲಿ ಕೊಳಚೆಯ ಸ್ಥಿತಿಯನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ಆಯಾ ಗ್ರಾಮೀಣ ಪ್ರದೇಶಗಳ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸುಮಾರು 7 ಲಕ್ಷ ರೂಪಾಯಿಯಿಂದ ಆರಂಭಿಸಿ 20 ಲಕ್ಷ ರೂಪಾಯಿಯವರೆಗೆ ಘನತ್ಯಾಜ್ಯ ನಿರ್ವಹಣೆಗಾಗಿಯೇ ಹಣಕಾಸಿನ ನೆರವನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಇಡೀ ದೇಶದಾದ್ಯಂತ 19800 ಕೋಟಿ ರೂ ಹಣವನ್ನು ಶೌಚಾಲಯಗಳ ನಿರ್ವಹಣೆಯಲ್ಲಿ ಖರ್ಚು ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ 10800 ಕೋಟಿ ರೂಪಾಯಿ ಹಣವನ್ನು ದೇಶದ ಈಶಾನ್ಯ ಭಾಗದ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗುವುದು. ನಮ್ಮ ದೇಶದ ಗ್ರಾಮೀಣ ಪರಿಸರದಲ್ಲಿ ಇನ್ನೂ ಸಾಕಷ್ಟು ಪರಿವರ್ತನೆಗಳಾಗಬೇಕಿದೆ. ಮುಖ್ಯವಾಗಿ ಜನರ ಮನೋಭಾವದಲ್ಲಿ ಬದಲಾಗಬೇಕು. ಕೇಂದ್ರ ಸರಕಾರ ಇಲ್ಲವೇ ರಾಜ್ಯ ಸರಕಾರದ ಯಾವುದೇ ಯೋಜನೆಗಳು ಅರ್ಥವತ್ತಾಗಿ ಜಾರಿಯಾಗಬೇಕಾದರೆ ಜನಜಾಗೃತಿ ಮತ್ತು ಅವರ ಮನೋಭಾವಗಳಲ್ಲಿ ಬದಲಾವಣೆ ಅಗತ್ಯ.

ಕೇವಲ ಶೌಚಾಲಯಗಳನ್ನು ಕಟ್ಟಿಸಿಕೊಡುವುದು ಮಾತ್ರ ಮುಖ್ಯವಾಗದೇ ಅದನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವ ಬಗ್ಗೆಯೂ ಹೇಳಿಕೊಡಬೇಕು. toilet-india-awarenessಚೈನಾದಂಥಾ ರಾಷ್ಟ್ರಗಳಲ್ಲಿ ಶೌಚಾಲಯಗಳನ್ನು ಹ್ಯಾಪಿ ಹೋಮ್ ಎಂದು ಕರೆಯಲಾಗುತ್ತದೆ. ಅದೇ ಮಟ್ಟದ ವಾತಾವರಣವನ್ನು ನಮ್ಮಲ್ಲೂ ಕಾಯ್ದುಕೊಳ್ಳುವ ಅಗತ್ಯವಿದೆ. ನಮ್ಮಲ್ಲಿ ಇಂದಿಗೂ ಐದು ಲಕ್ಷಕ್ಕಿಂತಲೂ ಹೆಚ್ಚು ಹಳ್ಳಿಗಳಿವೆ. ಅಲ್ಲಿಯ ಜನರು ಈ ಬಗೆಯ ಶೌಚಾಲಯಗಳನ್ನು ಬಳಸುವಾಗ ತಾವು ಬಯಲಿಗೆ ಹೋಗುವದಕ್ಕಿಂತಲೂ ಇದು ತುಂಬಾ ಹಿತಕರವಾಗಿದೆ ಎನ್ನುವ ಮನೋಭಾವ ಮೂಡಬೇಕು. ಹಾಗಾಗಬೇಕಾದರೆ ಶೌಚಾಲಯಗಳನ್ನು ಬಳಸುವ ಬಗ್ಗೆ ಮತ್ತು ಶುಚಿಯಾಗಿಡುವ ಬಗ್ಗೆ ಗ್ರಾಮೀಣ ಭಾಗದ ಜನತೆಗೆ ಸೂಕ್ತವಾದ ತಿಳುವಳಿಕೆ ಮತ್ತು ಮಾರ್ಗದರ್ಶನ ಮಾಡಬೇಕು.